SEARCH HERE

Showing posts with label ವಿಶ್ವಾಸ- ದೇವಾಲಯಗಳಲ್ಲಿ ಕಾಣಬರುವ ಅತಿಶಯಗಳು. Show all posts
Showing posts with label ವಿಶ್ವಾಸ- ದೇವಾಲಯಗಳಲ್ಲಿ ಕಾಣಬರುವ ಅತಿಶಯಗಳು. Show all posts

Friday, 1 October 2021

ದೇವಾಲಯಗಳಲ್ಲಿ ಕಾಣಬರುವ ಅತಿಶಯಗಳು

ಕೆಲವು ದೇವಾಲಯಗಳಲ್ಲಿ ಕಾಣಬರುವ ಅತಿಶಯಗಳು.

🙏🏻🙏🏻🙏🏻


೧. ಮದುರೆ ಮೀನಾಕ್ಷಿಯಮ್ಮನ ತೀರ್ಥಕೊಳದಲ್ಲಿ ಮೀನು ಬದುಕುವುದಿಲ್ಲ.


೨.ತಿರುವಣ್ಣಾಮಲೈ ಶ್ರೀ ಅಣ್ಣಾಮಲೈ ರಾಜಗೋಪುರದಿಂದ ಹೊರಗೆ ಬರದೇ ಪಕ್ಕದಲ್ಲಿರುವ ಬಾಗಿಲಿಂದ ಬರುತ್ತಾರೆ.


೩.ಎಲ್ಲ ವಿಷ್ಣು ವಿಗ್ರಹಗಳಲ್ಲಿ ಮಹಾವಿಷ್ಣುವಿನ ಎಡದಕೈಯಲ್ಲಿ ಶಂಖವಿದ್ದರೆ ತಮಿಳ್ನಾಡಿನ ತಿರುಕೊವಿಲ್ನಲ್ಲಿ ಮಾತ್ರ ಬಲದ ಕೈಯಲ್ಲಿ ಇದೆ ಶಂಖ.


೪. ಚಿದಂಬರದೇವಾಲದಲ್ಲಿ ಶ್ರೀ ಗೋವಿಂದರಾಜ ಸ್ವಾಮಿ ಮತ್ತು ಶ್ರೀ ನಟರಾಜರನ್ನುಒಟ್ಟಿಗೆ  ಕಾಣಬಹುದು.


೫.ಮದುರೆ ಮೀನಾಕ್ಷಿಯಮ್ಮನ ದೇವಾಲಯದಲ್ಲಿ ಒಟ್ಟಿಗೆ 14 ಗೋಪುರಗಳಿವೆ .


೬.ಕುಂಭಕೋಣದ ಹತ್ತಿರದ ತಿರುನಾಗೇಶ್ವರ ದೇವಾಲಯದಲ್ಲಿ ಉಪ್ಪುಳಿಯಪ್ಪನ ನೈವೇದ್ಯಕ್ಕೆ ಉಪ್ಪು ಹಾಕುವುದೇ ಇಲ್ಲ.


೭.ರಾಮೇಶ್ವರದ ಶ್ರೀ ರಮಾನಾಥ ದೇವಾಲಯದಲ್ಲಿ ಪೆರುಮಾಳ್ ದೇವಾಲಯದಲ್ಲಿ ಕೊಡುವಂತೆ ತೀರ್ಥವನ್ನು ಕೊಡುತ್ತಾರೆ.


೮.ಆಲ್ವರ್ಕುರುಚಿ ನಟರಾಜರ ಮೂರ್ತಿ ಒಂದೇಕಲ್ಲಿನಲ್ಲಿ ಮಾಡಿದ್ದೂ ಅದನ್ನು ತಟ್ಟಿದರೆ ಶಬ್ದಬರುತ್ತದೆ.


೯.ರತ್ನಗಿರಿಯಲ್ಲಿರುವ ಮುರುಗನಿಗೆ ಹಾಲು ಅಭಿಷೇಕಮಾಡಿದರೆ ಅದು ಮೊಸರಾಗಿ ಪರಿವರ್ತನೆ ಆಗುತ್ತದೆ.


೧೦. ಮೂಲವಿಗ್ರಹವೇ ಉತ್ಸವ ಮೂರ್ತಿಯಾಗಿ ಬರುವುದು ಚಿದಂಬರಂ ನಟರಾಜರು ಮಾತ್ರ.


೧೧.ಕುಳಿತಲ್ಲೇ ಮನಪಾರುಮಾಲೆಯಲ್ಲಿ ಐವರುಮಲೆಯ ರತ್ನಗಿರಿ ಮಲೆಯ ಮೇಲೆ ಕಾಗೆಗಳು ಹಾರಾಡುವುದಿಲ್ಲ.


೧೨.ಕನ್ಯಾಕುಮಾರಿಯಹತ್ತಿರದ ತಕ್ಕಲೆಯ ಕೇರಳಾಪುರದಲ್ಲಿ ಶಿವನ ದೇವಲಯವಿದೆ ಅಲ್ಲಿ ಅಶ್ವತ್ಥ ಮರದಡಿಯಲ್ಲಿ ವಿನಾಯಕರ ಮೂರ್ತಿ ಇದೆ ಅದು ವರುಷದಲ್ಲಿ ಆರುತಿಂಗಳು ಬೆಳ್ಳಗಾಗಿಯೂ ಮತ್ತಾರು ತಿಂಗಳು ಕಪ್ಪಾಗಿಯೂ ಕಾಣುತ್ತದೆ . ಅದು ಚಂದ್ರಕಾಂತ ಶಿಲೆಯಲ್ಲಿ ಮಾಡಲ್ಪಟ್ಟಿದ್ದು.


೧೩.ಶೈವರ ತಿರುವಾದರೆ ಮತ್ತು ವೈಷ್ಣವರ ವೈಕುಂಠ ಏಕಾದಶಿಯು ಒಂದೇ ತಿಂಗಳಲ್ಲಿ ಆಚರಿಸಲ್ಪಡುವ ಒಂದೇ ದೇವಸ್ಥಾನ ಚಿದಂಬರದ ನಟರಾಜ ದೇವಸ್ಥಾನ .


೧೪.ಬದರಿನಾಥ್ ದೇವಸ್ಥಾನವು ಮೇ ತಿಂಗಳ ಮೊದಲವಾರದಲ್ಲಿ ತೆರೆದು ನವೆಂಬರ್ ಮೊದಲವಾರದಲ್ಲಿ ಮುಚ್ಚುವಾಗ ಇಟ್ಟ ದೀಪ 6 ತಿಂಗಳ ಬಳಿಕ ತೆರೆಯುವಾಗ ಉರಿಯುತ್ತಿರುತ್ತದೆ .


೧೫.ಕಾಶಿಯ 45 ಮೇಲಿನ ಉದ್ದಗಲದಲ್ಲಿ ಗರುಡ ಹರಡುವುದಿಲ್ಲ.


೧೬.ತಮಿಳ್ನಾಡಿನ ಸಮಯಪುರದಲ್ಲಿರುವ ಮಾರಿಯಮ್ಮನ ವಿಗ್ರಹದಷ್ಟು ದೊಡ್ಡ ವಿಗ್ರಹ ಬೇರೆಲ್ಲಿಯೂ ಇಲ್ಲ. ಈ ವಿಗ್ರಹ ಗಿಡಮೂಲಿಕೆಗಳಿಂದ ಮಾಡಲ್ಪಟ್ಟದ್ದು.


೧೭ತೇನಿಯ ಹತ್ತಿರದ ಕಂಬಮ್ ಬಳಿಯ ಸುರುಳಿಮಲೆ ಗುಹೆಯಲ್ಲಿ ವಿಭೂತಿ ಉತ್ಪತ್ತಿಯಾಗುತ್ತಲೇ ಇರುತ್ತದೆ ಇದಕ್ಕೆ ಹೆಸರು ತಿರುನೀರ್ ಗುಹೆ.


೧೮. ಚೆನ್ನಿಮಲೆಯ ಮುರುಗ ನಿಗೆ ಅಭಿಷೇಕಮಾಡಿದ ಮೊಸರು ಹುಳಿಯಾಗುವುದೇ ಇಲ್ಲ.


19. ಉಡುಪಿ ಕೃಷ್ಣ ಮಂದಿರದ ವರ್ಷಾವಧಿ ರಥೋತ್ಸವ ದಂದು, ಮಧ್ಯಾಹ್ನ ಚರರ್ಣೋತ್ಸವ ಇರುತ್ತದೆ, ಈದಿನ  ತೇರನೆಳೆಯುವ ಸಂದರ್ಭದಲ್ಲಿ ರಥ ದ ಸುತ್ತ ಗರುಡ ಪ್ರದಕ್ಷಿಣೆ ಬರುತ್ತದೆ.  ಬೇರೆ ಯಾವ ದಿನವೂ ಗರುಡ ಕಾಣಸಿಗುವುದಿಲ್ಲ..

***