SEARCH HERE

Showing posts with label ಹಬ್ಬ ಗೌರೀ chaitra gowri chaitra shukla triteeya. Show all posts
Showing posts with label ಹಬ್ಬ ಗೌರೀ chaitra gowri chaitra shukla triteeya. Show all posts

Friday, 23 April 2021

ಚೈತ್ರ ಗೌರೀ chaitra gowri chaitra shukla triteeya

 .

#ಚೈತ್ರ #ಗೌರೀ #ಪೂಜೆ #ವಿಧಾನ

  🌺🌺🌺🌺🌺🌺

ಚೈತ್ರಮಾಸದಲ್ಲಿ ಶುಕ್ಲಪಕ್ಷ  ತದಿಗೆ ದಿನ ಗೌರಿಯನ್ನು ಕೂಡಿಸಬೇಕು . ಆ ದಿನ  ಅನಾನುಕೂಲವಾದಲ್ಲಿ  ಒಂದು ಶುಕ್ರವಾರ  ಅಥವಾ  ರಾಮನವಮಿ  ಅಥವಾ  ಎರಡನೇ ಬಹುಳ ಗೌರಿಯನ್ನು ಕೂಡಿಸಬಹುದು .

ಈ ಪೂಜೆಗೆ  ಚೈತ್ರಗೌರೀ  ಎನ್ನುತ್ತಾರೆ  . ತದಿಗೆ ಗೌರೀ ಎಂದೂ ಕರೆಯುವರು.  ಉಯ್ಯಾಲೆ ಗೌರೀ ಅನ್ನುವ ವಾಡಿಕೆ ಕೂಡಾ ಕೆಲವು ಕಡೆಯಲ್ಲಿ ಇದೆ. 

ಓಂದು ಚಿಕ್ಕ ತಟ್ಟೆಯಲ್ಲಿ ನದಿಯ ಮರಳು ಇಟ್ಟು  ಸ್ವಲ್ಪ ನೀರು ಹಾಕಿ ಮುದ್ದೆ ಮಾಡಿ . ಅದನ್ನ  6 ಭಾಗ ಮಾಡಿ . ಅಂದರೆ ಮುಂದೆ ಒಂದು ಭಾಗ. ಗಣೇಶ ಹಿಂದೆ  ನಾಲ್ಕು ಮಧ್ಯ ಒಂದು ( ಮಂಗಳ ಗೌರೀಯಲ್ಲಿ ಮಾಡುವಂತೆ) ಸರಿಯಾಗಿ ಗೋಪುರದ ಆಕಾರದಲ್ಲಿ ಮಾಡಿ ಅದಕ್ಕೆ ಅರಸಿಣ ಕುಂಕುಮ ಹಚ್ಚಿ,   2  ಬಳೆಗಳನ್ನ ಇಟ್ಟು  ಮಾಂಗಲ್ಯ ಇದ್ದರೆ ಹಾಕಿ .

ಪಕ್ಕದಲ್ಲಿ 5 ವಿಳ್ಳದೆಲೆಯ ಕಳಶ ಇಟ್ಟು ಅದರಲ್ಲಿ ಸ್ವಲ್ಪ ನೀರು ಅರಸಿಣ ಕುಂಕುಮ ಮಂತ್ರಾಕ್ಷತೆ ಹಾಕಿ ಇಡಿ ಮುಂದೆ ಪುಟ್ಟ ಕನ್ನಡಿ ಇಡಿ .ಜೊತೆಗೆ ಗಂಗಾಜಲವುಳ್ಳ ತಂಬಿಗೆ ಗಣೇಶನನ್ನೂ ಇಡಿ . 

ಇದೆಲ್ಲವನ್ನೂ ಒಂದು ಚಿಕ್ಕ ಮಣೆ ಮೇಲೆ ಇಟ್ಟು ಅದಕ್ಕೆ ಹುರಿ ಇಂದ ಎರಡು ಕಡೆ ( ಉಯ್ಯಾಲೆ ಥರ ಕಟ್ಟಿ ) ಎರಡೂ ಹುರಿಯನ್ನು ಸೇರಿಸಿ ಅಲ್ಲೇ ಗೋಡೆಗೆ  ಅಂಟಿಸಿ . ಉಯ್ಯಾಲೆಯಲ್ಲಿ ಗೌರಮ್ಮನನ್ನು ಕೂಡಿಸಿದ ಹಾಗೆ ಚೆನ್ನಾಗಿ ಇರುತ್ತದೆ .ಮಣೆಯ ಕೆಳಗೆ ಆಧಾರವಾಗಿ ಬೇಕಾದರೆ ಅಷ್ಟೇ ಎತ್ತರದ ಆಸನ ಇಲ್ಲವೇ  ಇಟ್ಟಿಗೆಗಳನ್ನು ಇಡಬಹುದು . ಅದೆಲ್ಲ ಬರಿಯಲು ಕಷ್ಟ . ಅಲಂಕಾರ ಚೆನ್ನಾಗಿ ಕಾಣಿಸುವ ಹಾಗೆ ಮಾಡಿ . 

ಎಲ್ಲಾ ಪೂಜೆ ಸಾಮಾನುಗಳಿಂದ ಪೂಜೆ ಮಾಡಿ . ಒಂದು ತಿಂಗಳು ಕದಲಿಸಬಾರದು. ನಿತ್ಯಪೂಜೆ ಮಾಡಲು ಹಿಂದಿನ ದಿನದ  ನಿರ್ಮಾಲ್ಯದ ಹೂವು ಮಾತ್ರ ತೆಗೆಯಿರಿ. ದಿನಾ ಏರಿಸುವ ಗೆಜ್ಜೆ ವಸ್ತ್ರ ತೆಗೆಯಬೇಡಿ . ಪೂಜೆಗೆ  ದವನ   ಮಲ್ಲಿಗೆ ಶ್ರೇಷ್ಠ . ಶುಕ್ರವಾರ  ಮಂಗಳವಾರ ಮುತ್ತೈದೆಗೆ  ಅರಸಿಣ ಕುಂಕುಮ  ಕೋಸಂಬ್ರಿ ಮಜ್ಜಿಗೆ  ಪಾನಕ ದಕ್ಷಿಣೆ ಸಮೇತ ಕೊಡಿ . ಅಕ್ಷಯ ತದಿಗೆವರೆಗೂ ಪೂಜೆ ಮಾಡಿ ಕದಲಿಸಬೇಕು . ಅಷ್ಟರ ಒಳಗೆ  ಒಂದು ದಿನವಾದರೂ  ಹೂವೀಳ್ಯ (  ಮುತ್ತೈದೆಯರನ್ನು ಕರೆದು ಅರಸಿಣ ಕುಂಕುಮ  ಮಜ್ಜಿಗೆ ಪಾನಕ ಕೋಸಂಬ್ರಿ ದಕ್ಷಿಣೆ ವಿಳ್ಳದೆಲೆ 4  ಅಡಿಕೆ ಕೊಟ್ಟು ನಮಸ್ಕಾರ ಮಾಡಿ . 

ಅಕ್ಷಯತದಿಗೆ ಆದ ಮೇಲೆ ಒಂದು ಒಳ್ಳೆಯ ದಿನ ಗೌರಿಯನ್ನು ಕದಲಿಸಿ  ಗಿಡದ ಕೆಳಗಡೆ ಬಿಡಿ . 

ಪ್ರತಿ ಶುಕ್ರವಾರ  ಕಳಶದ ವಿಳ್ಳದೆಲೆ ಬೇರೆ ಇಟ್ಟು ಕಳಶದಲ್ಲಿ ಸ್ವಲ್ಪ ನೀರು ಅರಸಿಣ ಕುಂಕುಮ ಮಂತ್ರಾಕ್ಷತೆ ಹಾಕಿ . ಆದರೆ ಕಳಶ ತೆಗೆದು ತೊಳೆದು ಇಡುವ ಕೆಲಸ ಮಾಡಬೇಡಿ . ಇದ್ದ ಜಾಗದಲ್ಲೇ ವಿಳ್ಯದೆಲೆ ಬದಲಿಸಿ ಅಷ್ಟೇ .

ಶುಕ್ರವಾರ ತದಿಗೆ  ಹುಣ್ಣಿಮೆಯ ದಿನ ಒಬ್ಬ ಮುತ್ತೈದೆಗೆ ಉಡಿ ತುಂಬಿ . 

 ಅನುಕೂಲ ಇದ್ದವರು ಹಬ್ಬದ ಅಡಿಗೆ ಮಾಡಿ ಬಡಿಸಬಹುದು .

ಒಂದು ಶುಕ್ರವಾರ  ಅಥವಾ ಹುಣ್ಣಿಮೆ ದಿನ ಮರದ ಬಾಗಿನ ಅನುಕೂಲ ಇದ್ದವರು ಕೊಡಬಹುದು . 

ಮುಖ್ಯವಾಗಿ ಭಕ್ತಿಯಿಂದ ಪೂಜೆ ಮಾಡುವುದು ಶ್ರೇಷ್ಠ .

ಶ್ರೀಮಧ್ವೇಶಾರ್ಪಣಮಸ್ತು

***