SEARCH HERE

Showing posts with label ಪರಿಹಾರ- ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರ get well through harikathamruta sara. Show all posts
Showing posts with label ಪರಿಹಾರ- ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರ get well through harikathamruta sara. Show all posts

Monday, 12 April 2021

ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರ get well through harikathamruta sara

 ರೋಗದ ಉಪಶಾಂತಿಗಾಗಿ ಶ್ರೀ ಹರಿಕಥಾಮೃತ ಸಾರದಲ್ಲಿ ಶ್ರೀ ದಾಸಾಯ೯ರು ನೀಡಿದ ಈ ಕೆಳಗಿನ ಪದಗಳು ನಿಯಮಿತವಾಗಿ ಪಾರಾಯಣ ಮಾಡಿದಲ್ಲಿ ಬಂದ, ಬರುವ ಆಪತ್ತಿನಿಂದ ಪಾರಾಗಬಹುದು.


1 ನೇ ಸಂಧಿಯ (4)ನೇಯ ನುಡಿ

7 ನೇ ಸಂಧಿಯ (15)ಮತ್ತು(16) ನೇ ನುಡಿ

32 ನೇ ಸಂಧಿಯ (41) ನೇಯ ನುಡಿಗಳನ್ನು ಶ್ರೀ ಧನ್ವಂತ್ರಿ ನಾಮಕ ಬಾಲಗೊಪಾವಿಠ್ಠಲನಲ್ಲಿ  ವಿಶ್ವಾಸವಿಟ್ಟು ಪಠಿಸಿರಿ  

ಶ್ರೀಮಧ್ವೇಶಾಪ೯ಣಮಸ್ತು


1ನೇ ಸಂಧಿ ಮಂಗಳಾಚರಣಸಂಧಿ 4ನೇ ಪದ

 ಆರುಮೂರೆರಡೊಂದು ಸಾವಿರ 

ಮೂರೆರಡು ಶತಶ್ವಾಸ ಜಪಗಳ

ಮೂರುವಿಧಜೀವರೊಳಗಬ್ಜಕಲ್ಪ ಪರಿಯಂತ l

ತಾ ರಚಿಸಿ ಸಾತ್ವರಿಗೆ ಸುಖ, ಸಂಸಾರ ಮಿಶ್ರರಿಗಧಮಜನರಿಗಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ ll



7ನೇ ಸಂಧಿ ಪಂಚತನ್ಮಾತ್ರ ಸಂಧಿ

15ನೇ ಪದ

ಮತ್ತೆ ಚಿದ್ದೇಹದ ಒಳಗೆ ಎಂಭತ್ತು ಸಾವಿರದೇಳುನೂರಿಪ್ಪತ್ತ ಐದು ನೃಸಿಂಹರೂಪದೊಳಿದ್ದು ಜೀವರಿಗೆ l

ನಿತ್ಯದಲಿ ಹಗಲಿರುಳು ಬಪ್ಪವ ಮೃತ್ಯುವಿಗೆ ಮೃತ್ಯುನೆನಿಸುವ ಭೃತ್ಯವತ್ಸಲ ಭಯನಾಶನ ಭಾಗ್ಯ ಸಂಪನ್ನ ll


16 ನೇ ಪದ

ಜ್ವರನೊಳಿಪ್ಪತ್ತೇಳು ಹರನೊಳಗಿರುವನಿಪ್ಪತ್ತೆಂಟು ರೂಪದಿ

ಎರಡುಸಾವಿರದೆಂಟುನೂರಿಪ್ಪತ್ತರೇಳೆನಿಪ l

ಜ್ವರಹರಾಹ್ವಯ ನಾರಸಿಂಹನ ಸ್ಮರಣೆಮಾತ್ರದಿ ದುರಿತರಾಶಿಗಳಿರದೆ ಪೋಪವು ತರಣಿಬಿಂಬವ ಕಂಡ ಹಿಮದಂತೆ ll


32 ನೇ ಸಂಧಿ

41ನೇ ಪದ

ಪಾಮರರನು ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ ನಾಮಗಳಿಗಭಿಮಾನಿಯಾದ ಉಷಾಖ್ಯಾದೇವಿಯರು l

ಭೂಮಿಯೊಳಗುಳ್ಳಖಿಳ ಸಜ್ಜನರಾಮಯಾದಿಗಳಳಿದು ಸಲಹಲಿ ಆ ಮರುತ್ತನ ಮನೆಯ ವೈದ್ಯರ ರಮಣಿ ಪ್ರತಿದಿನದಿ ll

******