SEARCH HERE

Wednesday 14 April 2021

swami samarth maharaj 1853


One Who Is Protected By God
Sri Swami Samarth during his incarnation period has saved a number of devotees from death and granted them new life.

Brahmin’s Son
Sri Swami Samarth Maharaj went to Pandharpur and then came to Mohol, both in Solapur District, Maharashtra State, during Hindu year Shake 1775 (1853 A. D.). He stayed in a cave of a hill. The son of an honest Brahmin of Mohol died unexpectedly. His mother started wailing loudly. The Brahmin and his wife cried and cried till they fell unconscious. Seeing their extreme sufferings people took pity on them. They all convinced the Brahmin saying, “A virtuous and lustrous ascetic has come to our village; offer your prayers to him for a remedy”. Therefore, the Brahmin went in search of Sri Swamiji and reached the cave. In an afflicted tone the Brahmin started earnestly calling upon Sri Swamiji for his kind help. Compassionate Sri Swamiji woke up from his deep meditation. He came out from the cave and spoke to the Brahmin “Revered Brahmin, get your son seated properly on a horse and send him across the sea”. The Brahmin did not understand the true meaning of the words of Sri Swamiji. However, a lady devotee explained him the true meaning “Your work is done. Go home”. The Brahmin returned home and found his son woken up and was sitting. Then the Brahmin got dressed his son and adorned him with ornaments. He then seated him on a horse and took him for Sri Swamiji’s ‘Darshan’. Then the Brahmin worshipped Sri Swamiji in a Shodshopchar way and then offered food as Naivedya unto him. The Brahmin and his family remained fully devoted to Sri Swamiji till the end.
Babasaheb Escaped From Death
In the then State of Akkalkot, there was a Chieftain named Babasaheb Jadhav. He was a great devotee of Sri Swamiji. Sri Swamiji always called him ‘potter’. Omniscient Sri Swamiji knew that Babasaheb’s death is very close by. Sri Swamiji said, “Potter, a letter has come in your name (i.e. Your death is nearby)”. Babasaheb became very nervous hearing this. He prostrated at the lotus feet of Sri Swamiji and entreated him earnestly “Maharaj, I still desire to render some more devotional service at your lotus feet”. The kind-hearted Sri Swamiji looked and perceived the imperceptible and told Babasaheb “Go near that bullock”. A miracle took place. The bullock standing in front, suddenly fell down dead and the death of Babasaheb was averted. Thus, by the kind grace of Sri Swamiji, Babasaheb got a new life.
Taken from biography of swami samarth, akkalkot, maharashtra.

*********


ಕ್ರಿ.ಶ. ೧೫೯೮ ರಲ್ಲಿ ಜನಿಸಿದ ಸ್ವಾಮಿ ಸಮರ್ಥ ರಾಮದಾಸರು ಗುರುಗಳಲ್ಲಿ ಮೇರುಪರ್ವತದೋಪಾಧಿಯಲ್ಲಿ ನಿಲ್ಲುತ್ತಾರೆ. ಮಹಾಮಹಿಮ ಆಂಜನೇಯನ ಅವತಾರವೇ ಶ್ರೀ ಸಮರ್ಥ ರಾಮದಾಸರಾಗಿದ್ದಾರೆ. ಹದಿನಾರನೆಯ ಶತಮಾನದಲ್ಲಿ , ಸಜ್ಜನರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಇವರ ಅವತಾರವಾಯಿತು. ಶ್ರೀ ಸಮರ್ಥ ರಾಮದಾಸರೆಂದರೆ, ಯವನರು ಸಂಪೂರ್ಣ ಭಾರತವನ್ನು ವಶಮಾಡಿಕೊಳ್ಳಲೋಸುಗ ದಬ್ಬಾಳಿಕೆಯನ್ನು ನಡೆಸುತ್ತಿದ್ದ ಕಾಲದಲ್ಲಿ, ಅವರನ್ನೆದುರಿಸಿ ಸ್ವರಾಜ್ಯ ಸ್ಥಾಪನೆ ಮಾಡಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜನ ಗುರುಗಳಾಗಿದ್ದಾರೆ. ಧರ್ಮ ರಕ್ಷಣೆಗಾಗಿ ಅವತರಿಸಿದ ಇವರು , ಪಟ್ಟಶಿಷ್ಯ ಶಿವಾಜಿ ಮಹಾರಾಜನಿಗೆ ಸೂಕ್ತ ಮಾರ್ಗದರ್ಶನ ಮಾಡಿ , ಆ ಮೂಲಕ ಧರ್ಮವುಳಿಯಲು ಕಾರಣರಾದವರು.

ಸಮರ್ಥರು ಆರ್ಥರಾಗಿ ತಮ್ಮ ಬಳಿ ಬಂದು, ಭಕ್ತಿಯಿಂದ ಪ್ರಾರ್ಥನೆ ಮಾಡಿದಂತಹ ಜನರೆಲ್ಲರಿಗೂ ಅವರ ಮನೋಕಾಮನೆ ಪೂರ್ತಿಯಾಗುವಂತೆ ವರ ನೀಡಬಲ್ಲಂತ ಮಹಾಮಹಿಮರು ಎಂಬುದು ಲೋಕವಿದಿತ. ಅವರ ಬಾಲ್ಯದಿಂದಲೂ ಅವರ ಈ ಗುಣವನ್ನು ನೋಡಿದ ಭಕ್ತರು ಅವರನ್ನು ಕೊಂಡಾಡುತ್ತಾರೆ. "ರಾಮದಾಸಃ ಕಲೌಯುಗೇ" ಎಂಬ ಭವಿಷ್ಯತ್ ಪುರಾಣ ಮುಂತಾದ ಪ್ರಮಾಣಗಳಿಂದ , ಶ್ರೀಸಮರ್ಥರು ಆಂಜನೇಯನ ಅವತಾರವೇ ಆಗಿದ್ದಾರೆ ಎಂದು ಪ್ರಸಿದ್ದವಿದೆ. ಮೂರ್ತಿಭಂಜಕರೂ , ಕ್ರೂರಿಗಳೂ, ಪರಧರ್ಮಪೀಡಕರೂ ಆದ ಯವನರ ದಬ್ಬಾಳಿಕೆ ಮೇರೆ ಮೀರಿದಂತಹ ಸಮಯದಲ್ಲಿ, ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಶಿವಾಜಿ ಮಹಾರಾಜರಿಗೆ ಶಕ್ತಿ ನೀಡಿದವರೇ ಈ ಸಮರ್ಥ ರಾಮದಾಸರು. ಯೋಜನಗಳ ದೂರದವರೆಗಿನ ಸಾಮ್ರಾಜ್ಯ ಕಟ್ಟಿ ಅದನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಲು, ಶಿವಾಜಿ ಮಹಾರಾಜನಿಗೆ ರಾಮದಾಸರ ಕೃಪೆಯಿಂದಾಗಿ ಸಾಧ್ಯವಾಯಿತು.

ಭಾಗ್ಯವಂತರಾದ ಸಮರ್ಥರ  ತಂದೆತಾಯಿಗಳ ನಾಮವು ಶ್ರೀ ಸೂರ್ಯಾಜಿಪಂತ ಹಾಗೂ ಸೌ.ರಾಣುಬಾಯಿ ಎಂದಾಗಿತ್ತು. ಆಶ್ವಲಾಯನ ಸೂತ್ರದ ಋಗ್ವೇದೀ ಬ್ರಾಹ್ಮಣರ " ಠೋಸರ " ಎಂಬ ಕುಲದಲ್ಲಿ ಶಕೆ. ೧೫೩೦ ರಲ್ಲಿ , ರಾಮನವಮಿಯ ಶುಭದಿನವೇ , ಶ್ರೀಕ್ಷೇತ್ರ ಜಾಂಬದಲ್ಲಿ ಇವರ ಅವತಾರವಾಯಿತು.  ಧರ್ಮಸ್ಥಾಪನೆಗೆ ವೀರಮಾರುತಿಯ ಅಂಶದಿಂದಲೇ ಇವರ ಜನನವಾಯಿತು ಎಂಬುದು ಲೋಕಪ್ರಸಿದ್ದವಾಗಿದೆ. ಬಾಲ್ಯದಿಂದಲೂ ಮಹಾವಿರಕ್ತರಾದ ಇವರು ಮದುವೆಯ ಪ್ರಸ್ತಾಪ ಬಂದಾಗೆಲ್ಲ ತಪ್ಪಿಸಿಕೊಂಡು ಓಡುತ್ತಿದ್ದರು. ಇವರಿಗೆ ಲಗ್ನಮಾಡಬೇಕು ಎಂಬ ಆಸೆಯಿಂದ ತಾಯಿಯು " ಲಗ್ನಮಂಟಪದಲ್ಲಿ ತೆರೆ ಹಿಡಿಯುವವರೆಗೆ ನೀನು ನನ್ನ ಮಾತು ಕೇಳಬೇಕು " ಎಂಬುದಾಗಿ ಮಾತು ತೆಗೆದುಕೊಂಡಿದ್ದಳು. ಅದರಂತೆ ಇವರ ದ್ವಾದಶ ವಯದಲ್ಲಿ ಲಗ್ನನಿಶ್ಚಯವಾಯಿತು.

ಲಗ್ನಮಂಟಪದಲ್ಲಿ ಎದುರಿಗೆ ಸುಂದರ ಕನ್ಯೆ ನಿಂತರೆ ಇವನ ವಿರಕ್ತಿ ಹಾರಿಹೋಗುವುದೆಂದು ತಾಯಿಯ ಉಪಾಯವಾಗಿತ್ತು. ಆದರೆ ತಾಯಿಗೆ ಕೊಟ್ಟ ಮಾತಿನಂತೆ ಲಗ್ನ ಮಂಟಪದ ತೆರೆಹಿಡಿಯುವವರೆಗೆ ನಿಂತ ಸಮರ್ಥರು, ತೆರೆ ಕೆಳಗಿಳಿಸುವುದರ ಒಳಗೆ ಅಲ್ಲಿಂದ ಓಡಿನಡೆದರು. ನಂತರ ಹನ್ನೆರಡು ವರ್ಷ ಉಗ್ರತಪಸ್ಸು ಮಾಡಿ , ಶಕೆ . ೧೫೫೪ರಲ್ಲಿ ತಪವನ್ನು ಮುಗಿಸಿದರು. ನಂತರ ಹನ್ನೆರಡು ವರ್ಷಗಳ ಕಾಲ ಎಲ್ಲಾ ತೀರ್ಥಕ್ಷೇತ್ರಗಳನ್ನೂ ಕಾಲುನಡಿಗೆಯಿಂದಲೇ ದರ್ಶನಮಾಡಿ ಅಪಾರ ಶಿಷ್ಯಶಾಖೆಯನ್ನು ಬೆಳೆಸಿದರು. ಲೋಕಜಾಗೃತಿ, ಗ್ರಂಥರಚನೆಯನ್ನು ಮಾಡುತ್ತಾ , ಧರ್ಮಕಾರ್ಯಕ್ಕಾಗಿ ಎಲ್ಲಾ ಸಂಪ್ರದಾಯದ ಪಂಗಡಗಳನ್ನೂ ಪ್ರೋತ್ಸಾಹಿಸಿದರು. ಚಾಫಳದಲ್ಲಿ ಮಠವನ್ನು ಕಟ್ಟಿ ಅಲ್ಲಿ ನೆಲೆಸಿದರು. ಶಿವಾಜಿಯ ಕಾರ್ಯಗಳಿಗೆ ನಿರ್ವಿಘ್ನತೆಯನ್ನು ಮಾಡಿದರು.
ತಮ್ಮ ತಪೋಬಲದಿಂದ ಶ್ರೀಶಿವಾಜಿ ಮಹಾರಾಜನ ಎಲ್ಲ ಗೆಲುವುಗಳಿಗೆ ಕೃಪೆಮಾಡಿ ಸ್ವರಾಜ್ಯವನ್ನು ದೊರಕಿಸಿಕೊಟ್ಟರು. ನಂತರ ಸಜ್ಜನಗಡದಲ್ಲಿ ವಾಸ ಮಾಡುತ್ತಾ , ಅನೇಕ ಶಿಷ್ಯರ ಸಾಮರ್ಥ್ಯವೃದ್ಧಿಗೆ ಕಾರಣರಾದರು. ಆ ಕಾಲಘಟ್ಟದಲ್ಲಿ ಸಮರ್ಥರ ಅವತಾರವಾಗದಿದ್ದಲ್ಲಿ ಧರ್ಮವೆಂಬುದೇ ಉಳಿಯುತ್ತಿರಲಿಲ್ಲ ಎಂಬುದು ಇತಿಹಾಸದಅ ಅವಲೋಕನದಿಂದ ಸ್ಪಷ್ಟವಾಗುತ್ತದೆ. ಇಂದಿಗೂ ಸಹ ಸಮರ್ಥ ವಾಸಸ್ಥಾನವಾದ ಸಜ್ಜನಗಡದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಮನೋಕಾಮನೆಗಳೂ ಪೂರ್ತಿಯಾಗುವುದು ಎಂಬ ನಂಬಿಗೆ ಇದೆ.

ಇವರ ಶಿಷ್ಯಂದಿರು ಕೂಡಾ ತಮ್ಮತಮ್ಮ ವಿಭಾಗಗಳಲ್ಲಿ ಅದ್ವಿತೀಯರಾಗಿದ್ದಾರೆ. ಅದು ಶಿವಾಜಿ ಮಹಾರಾಜನೇ ಇರಲಿ, ಕಲ್ಯಾಣಸ್ವಾಮಿಯೇ ಇರಲಿ ಅಥವಾ ಪರಮಗುರು ಶ್ರೀಧರಸ್ವಾಮಿಗಳೇ ಇರಲಿ , ಇವರು ತಮ್ಮ ಸಾಧನೆಯಿಂದ ಗುರುಗಳ ನಾಮವನ್ನು ಸಹ ಉಜ್ವಲಗೊಳಿಸಿದ್ದಾರೆ.

ಯೌವನಾವಸ್ಥೆಯಲ್ಲಿ ಲೌಕಿಕ ವಿದ್ಯೆಯ ನಿರರ್ಥಕತೆಯನ್ನು ಮನಗಂಡು ತಪಸ್ಸಿಗೆ ಹೋಗುವ ಯೋಚನೆ ದಿನದಿನಕ್ಕೂ ಬಲಿಯುತ್ತಿರಲು, ಸರಿಯಾಗಿ ಶ್ರೀ ದಾಮೋದರ ಪಳನಿಟ್ಕರ್ ಎಂಬ ನೈಷ್ಠಿಕ ಬ್ರಹ್ಮಚಾರಿಗಳ ಪ್ರೋತ್ಸಾಹ ಶ್ರೀಧರರಿಗೆ ಒದಗಿಬಂತು. ಶ್ರೀ ಪಳನಿಟ್ಕರರು ಧರ್ಮದ ಮೇಲೆ ಉಜ್ವಲ ಅಭಿಮಾನವುಳ್ಳ ಆಚಾರನಿಷ್ಠರಾಗಿದ್ದು, ಪಾರಮಾರ್ಥದಲ್ಲಿಯೂ ಅಭಿರುಚಿಯುಳ್ಳವರಾಗಿದ್ದರು. ಇವರು ಶ್ರೀಧರರಿಗೆ "ತಪಸ್ಸಿಗೆ ಹೋಗಲು ಬೇಕಾದಷ್ಟು ಸ್ಥಳಗಳಿವೆ, ಅವುಗಳಲ್ಲಿ ಶ್ರೀಸಮರ್ಥರ ಸನ್ನಿಧಿಯಾದ ಸಜ್ಜನಗಡ ಉತ್ಕೃಷ್ಟವಾಗಿದೆ. ನೀವು ತಪಸ್ಸಿಗೆ ಹೊರಡುವುದೇ ಆದರೆ ಈಗಲೇ ಹೊರಡಿ, ಈ ಲೌಕಿಕ ವಿಧ್ಯಾಭ್ಯಾಸದ ಪರೀಕ್ಷೆಯನ್ನು ಕಟ್ಟಿಕೊಂಡು ನಿಮಗೇನಾಗಬೇಕಿದೆ. ನಿಮ್ಮ ಭೂಮಿಕೆಗೆ ತಕ್ಕ ಗುರುಗಳೆಂದರೆ ಶ್ರೀ ಸಮರ್ಥ ರಾಮದಾಸರು ಮಾತ್ರ " ಎಂದು ಆಗ್ರಹಿಸಿದರು. ಒಳ್ಳೆಯ ಗುರುವು ದೊರೆಯುವುದು ಬಹಳ ದುರ್ಲಭ, ಎಲ್ಲಾ ಕಾರ್ಯಕ್ಕೂ ಗುರುವಿನ ಅನುಗ್ರಹ ಬೇಕೇಬೇಕು ಎಂಬುದಾಗಿ ಉಳಿದ ಕೆಲವು ಮಿತ್ರರೂ ತಿಳಿಸುತ್ತ , ಶ್ರೀಧರರ ಸಜ್ಜನಗಡ ಯಾತ್ರೆಯನ್ನು ಅನುಮೋದಿಸಿದರು.

ಶ್ರೀಧರರ ತಂದೆತಾಯಿಗಳೂ ಕೂಡಾ ಶ್ರೀಸಮರ್ಥ ಸಂಪ್ರದಾಯದವರೇ ಆಗಿದ್ದು, ಆ ಸಂಪ್ರದಾಯವು ಶ್ರೀಧರರಿಗೆ ಜನ್ಮಜಾತವಾಗಿತ್ತೆಂದರೂ ತಪ್ಪಾಗಲಾರದು. ಶ್ರೀ ಸಜ್ಜನಗಡವು ಬಹಳ ಜಾಗ್ರತ ಸ್ಥಳವಾಗಿದೆ. ಇದರ ಪೂರ್ವದ ಹೆಸರು 'ಅಸ್ವಲಗಡ ' ಎಂದಿತ್ತು. ಸಮರ್ಥರ ವಾಸ್ತವ್ಯದ ನಂತರ ಇಲ್ಲಿ ಸಜ್ಜನರ ಕೂಟವು ಸೇರತೊಡಗಿದುದರಿಂದ ಶ್ರೀ ಶಿವಾಜಿ ಮಹಾರಾಜನು ಇದನ್ನು ಸಜ್ಜನಗಡ ಎಂಬುದಾಗಿ ಕರೆಯತೊಡಗಿದನು. ಇಂತಹ ದೈವೀತಾಣಕ್ಕೆ, ತಪಶ್ಚರ್ಯಕ್ಕಾಗಿ, ಸಮರ್ಥ ರಾಮದಾಸ ಸ್ವಾಮಿಗಳ ಸೇವೆಗಾಗಿ, ರಾಮದಾಸರಿಗೆ ದಾಸಾನುದಾಸರಾಗಲು ಶ್ರೀಧರರು ಹೊರಟು ನಿಂತರು.

ಯೋಗ್ಯ ಗುರುವನ್ನು ಹುಡುಕುತ್ತ ಇದ್ದ ಶ್ರೀ ಶ್ರೀಧರ ಸ್ವಾಮಿಗಳು ಬಂದು ತಲುಪಿದ್ದು ಸಜ್ಜನಗಡದಲ್ಲಿ ನೆಲೆನಿಂತ ಶ್ರೀ ಸಮರ್ಥರ ಪದತಲಕ್ಕೆ. ಇಂತಹ ಮಹಾನ್ ಶಿಷ್ಯನನ್ನು ಅನುಗ್ರಹಿಸಿ, ಲೋಕಕಲ್ಯಾಣಕ್ಕೆ ಕಾರಣರಾದವರು ಅವರೇ ಆಗಿದ್ದಾರೆ. ಗುರುಪೂರ್ಣಿಮೆಯ ಶುಭದಿನದಂದು ಆ ಮಹಾನ್ ಸದ್ಗುರುಗಳಿಗೆ ನುಡಿನಮನ. 
*******



No comments:

Post a Comment