SEARCH HERE

Sunday 29 March 2020

ಮಜ್ಜಿಗೆ ಅಮೃತವೂ ಮತ್ತು ವಿಷವೂ ಆಗಬಲ್ಲ butter milk drink fresh


ಅಮೃತವೂ ಮತ್ತು ವಿಷವೂ ಆಗಬಲ್ಲ ಮಜ್ಜಿಗೆ

.........ತಕ್ರಂ ಶಕ್ರಸ್ಯ ದುರ್ಲಭಮ್|
(ಶಕ್ರ=ದೇವೇಂದ್ರ)

ದೇವೇಂದ್ರನಿಗೂ ದುರ್ಲಭವಾದ "ಮಜ್ಜಿಗೆಯನ್ನು ಭೂಲೋಕದ ಅಮೃತ!" ಎನ್ನುತ್ತಾರೆ ಏಕೆ?

ನಮ್ಮ ಶರೀರ ಆರೋಗ್ಯದಿಂದ ಇರಲು- ಆಹಾರ ಪಚನವಾಗಬೇಕು ಮತ್ತು ಹೀರಿಕೊಳ್ಳಬೇಕು. ಎರಡರಲ್ಲಿ ಒಂದರ ಕೊರತೆಯಾದರೂ ಕಾಲಕ್ರಮದಲ್ಲಿ ನೂರಾರು ರೋಗಗಳು ಬರುತ್ತವೆ.

ಮಜ್ಜಿಗೆಯು ಈ ಎರಡೂ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತದೆ, ಆದ್ದರಿಂದ ಇದು ಅಮೃತ.

ತಾಜಾ ಮೊಸರಿನಿಂದ ಆಗತಾನೇ ತಯಾರಾದ ಹುಳಿ ಇಲ್ಲದ ಮಜ್ಜೆಗೆಗೆ ಸೈಂಧವ ಲವಣ(ಶ್ರೇಷ್ಠ ಉಪ್ಪು) ಸೇರಿಸಿ ಸೇವಿಸಿದರೆ ಮಾತ್ರ ಅದು ಅಮೃತ.

ಆದರೆ ಉಪ್ಪನ್ನು ಸೇರಿಸದೇ ಕುಡಿದ ಮಜ್ಜಿಗೆಯು ಆಹಾರ ಪಚನವಾಗುವ ಮೆದಲೇ ಶೀಘ್ರವಾಗಿ ಹೀರುವ ಪ್ರಯತ್ನದಲ್ಲಿ ಪೋರ್ಟಲ್ ಸಿಸ್ಟಂ ಗೆ ಒತ್ತಡ ಹಾಕಿ ಮೂಲವ್ಯಾಧಿಯನ್ನು ತರುತ್ತದೆ!! 

ಉಪ್ಪನ್ನು ಸೇರಿಸಿದರೆ ಮಾತ್ರ ಮೂಲವ್ಯಾಧಿಯನ್ನು ಬುಡ ಸಮೇತ ನಿವಾರಿಸುತ್ತದೆ!!

ಹುಳಿ ಮಜ್ಜಿಗೆ ರಕ್ತದಲ್ಲಿ ಪಿತ್ತವನ್ನು ವರ್ಧಿಸಿ ರಕ್ತಪಿತ್ತವನ್ನುಂಟುಮಾಡುತ್ತದೆ. ಒಮ್ಮೆ ರಕ್ತಪಿತ್ತ ಬಂತೆಂದರೆ ಈ ಶರೀರ ನೂರಾರು ರೋಗಗಳಿಗೆ ಆಶ್ರಯತಾಣವಾಗುತ್ತದೆ.

ತಯಾರಾಗಿ 48 ನಿಮಿಷಗಳ ಒಳಗೇ ಸೈಂದವ ಉಪ್ಪು ಸೇರಿಸಿ ಸೇವಿಸಿದ ಮಜ್ಜೆಗೆಯು ರಕ್ತಪಿತ್ತ ನಾಶಕ, ಅದರ ನಂತರದ್ದು ರಕ್ತಪಿತ್ತವನ್ನು ಉಂಟುಮಾಡುತ್ತದೆ!!

ನಮ್ಮ ದುರದೃಷ್ಟ ಎಂದರೆ, ಫ್ರಿಜ್ ನಲ್ಲಿಟ್ಟು, ಎರೆಡು ಮೂರು ದಿನ ಹಿಂದೆ ತಯಾರಾದ ಪ್ಯಾಕ್ಡ್ ಮಜ್ಜಿಗೆಯನ್ನು ತಂಪಾಗಲೆಂದು ಕುಡಿದು ಶರೀರವನ್ನು ಸುಟ್ಟುಕೊಳ್ಳುತ್ತಿದ್ದೇವೆ!!
**********

No comments:

Post a Comment