SEARCH HERE

Tuesday, 1 June 2021

dirty journalism

 ಇಸ್ರೇಲ್ ನಂತಹ ತಂತ್ರಜ್ಞಾನ ನಿಷ್ಣಾತ ರಾಷ್ಟ್ರ, ಭಾರತದ ಒಬ್ಬ ಸಾಮಾನ್ಯ ಪತ್ರಕರ್ತನ ವಿರುದ್ಧ ಬೇಹುಗಾರಿಕೆ ನಡೆಸುತ್ತೆ ಎಂದರೇ........!!!


The rules of fair play do not apply in love and war - John Lyly


ಜಾರಿ ನಿರ್ದೇಶನಾಲಯವು (Enforcement Directorate) ಜುಲೈ ಒಂದನೇ ತಾರೀಖು, ರಾಜೀವ್ ಶರ್ಮ ಎಂಬ ಪತ್ರಕರ್ತನನ್ನು ಬಂಧಿಸಿ, ಮರುದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಏಳು ದಿನಗಳ ಕಾಲ ತನ್ನ ಸುಪರ್ದಿಗೆ ಪಡೆದಿದೆ.


ಛೇ! ಎಂಥಾ ಅನ್ಯಾಯ!

ಹೌದು. ರಾಜೀವ್ ಶರ್ಮಾ ಓರ್ವ ಎಡಪಂಥೀಯ ವಿಚಾರಧಾರೆಯ ಪತ್ರಕರ್ತ. UPA ಸರ್ಕಾರವಿದ್ದಾಗ ಅದರ ಪರ ಪ್ರಚಾರ ನೀಡುವ ಸುದ್ಧಿಗಳನ್ನೂ, NDA ಸರ್ಕಾರ ಬಂದಾಗ ಅದನ್ನು ವಿರೋಧಿಸುವ ಲೇಖನ ಮತ್ತು ಸುದ್ಧಿಗಳನ್ನೂ ಬರೆದಿದ್ದಾತ. ಅವೆಲ್ಲಾ ಏನೇ ಇರಲಿ.

ಒಬ್ಬ ಪತ್ರಕರ್ತ ಕೇಂದ್ರ ಸರ್ಕಾರವನ್ನ ಮತ್ತು ಅದರ ನೀತಿ, ಸಿದ್ಧಾಂತಗಳನ್ನ ವಿರೋಧಿಸಿದ ಮಾತ್ರಕ್ಕೆ ಆತನನ್ನು ಬಗ್ಗುಬಡಿಯಲು ED, CBI, IT, Law Enforcement Agencyಗಳನ್ನು ಬಳಸಿ, ಆತನನ್ನು ಬಂಧಿಸುವುದು ನ್ಯಾಯವಾ ?


ಆತನನ್ನು ಸಲಹಿದ ಪ್ರಮುಖ ರಾಜಕೀಯ ಪಕ್ಷಗಳು, ವ್ಯಕ್ತಿಗಳು ಆತನ ಬಂಧನ ವಿರೋಧಿಸಿ ಇನ್ನೂ ಬೀದಿಗಿಳಿದಿಲ್ಲವೇಕೆ ?

ಕೇಂದ್ರಸರ್ಕಾರದ ಈ ಧಮನಕಾರಿ ನೀತಿಯ ವಿರುದ್ಧ, ಬುದ್ಧಿಜೀವಿಗಳು, ಎಡಪಂಥೀಯರು, ಅವಾರ್ಡ್ ವಾಪ್ಸಿ ಗ್ಯಾಂಗ್ನವರು, 'ಪ್ರಗ್ನಾ'ವಂತ ಸಿನೆಮಾ ತಾರೆಯರೂ ಸಿಡಿದೆದ್ದಿಲ್ಲವೇಕೆ ?

ಅರೇ.. ಯಾರು ಈ ರಾಜೀವ್ ಶರ್ಮಾ ?


ಯುದ್ಧದಲ್ಲಿ ಕುತಂತ್ರ ಬಳಕೆ ಇಂದು, ನಿನ್ನೆಯದಲ್ಲ.

ಶತ್ರುವು ಬಲಿಷ್ಠನಾಗಿದ್ದು, ತನ್ನ ಬಳಿಯಿರುವ ಸೇನಾ ಬಲ, ಬುದ್ಧಿ ಬಲ ಸಾಕಾಗದು ಎಂದೆನಿಸಿದಾಗ, 

ಈಗ Business ನಲ್ಲಿ SWOT analysis ಮಾಡುವಂತೆ, ಹಿಂದೆಯೂ ಎದುರಾಳಿಯ ಸಾಮರ್ಥ್ಯ, ದೌರ್ಬಲ್ಯಗಳ ಮಾಹಿತಿ ಕಲೆಹಾಕಲಾಗುತ್ತಿತ್ತು.


ಎದುರಾಳಿಗೆ ಹೆಣ್ಣಿನ ದೌರ್ಬಲ್ಯವಿದ್ದರೆ, ವಿಷಕನ್ಯೆಯನ್ನು ಕಳುಹಿಸಿ ಕೊಲ್ಲುತ್ತಿದ್ದರು ಅಥವಾ ಹೆಣ್ಣಿನ ಮೂಲಕ ಅವನ ಯುದ್ಧ ರಹಸ್ಯಗಳನ್ನು ತಿಳಿದುಕೊಳ್ಳುತ್ತಿದ್ದರು.

ಇದು ಫಲಕಾರಿಯಾಗದ ಪಕ್ಷದಲ್ಲಿ ಕೊನೆಯ ಅಸ್ತ್ರವಾಗಿ, ಎದುರಾಳಿಯ ಆಪ್ತ ಬಳಗವನ್ನು ಹಣ ಬಲ, ಆಮೀಷಗಳಿಂದ ಕೊಂಡುಕೊಂಡು, ತನ್ನವರಿಂದಲೇ ಎದುರಾಳಿ ಸರ್ವನಾಶವಾಗುವ ಹಾಗೆ ಮಾಡುತ್ತಿದ್ದರು.

ಇತಿಹಾಸ, ರಾಜಕಾರಣ ಗೊತ್ತಿಲ್ಲದಿದ್ದರೂ, ಹಳೇ ಕನ್ನಡ ಸಿನೆಮಾ ನೋಡಿದವರಿಗೂ ಈ ಟೆಕ್ನಿಕ್ ಗೊತ್ತಿರುತ್ತದೆ.


ಭಾರತ ಒಂದು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ.

ಧರ್ಮಾಧಾರಿತ ಮತ್ತು ಅಧಿಕಾರ ಕೇಂದ್ರಿತ ಒಳ ಜಗಳಗಳ ಪ್ರಮಾಣ ಕಡಿಮೆಯಾದರೆ, ಕೆಲವೇ ದಶಕಗಳಲ್ಲಿ, ಏಷಿಯಾ ಖಂಡದ ಸೂಪರ್ ಪವರ್ ಆಗುವುದನ್ನು ಯಾವ ರಾಷ್ಟ್ರವೂ ತಡೆಯಲಾಗದು.

ಇದೇ ವಿಷಯ, ನಮ್ಮ ಮಗ್ಗಲು ಮುಳ್ಳಿನಂತಿರುವ ಸರ್ವಾಧಿಕಾರಿ ಸಿದ್ಧಾಂತದ ಚೀನಾಕ್ಕೆ ತಲೆನೋವಾಗಿರುವುದು.

ಸದ್ಯಕ್ಕೆ, ಗಡಿ ವಿವಾದ ತೆಗೆದು ಭಾರತಕ್ಕೆ ತೊಂದರೆ ಕೊಡುವುದು ಮಾತ್ರ ಅದರ ಬಳಿಯಿರುವ ಯೋಜನೆ ಎಂದುಕೊಂಡಿದ್ದೀರಾ ?


ಈಗ ರಾಜೀವ್ ಶರ್ಮ ವಿಷಯಕ್ಕೆ ಬರೋಣ!

2008 ನೇ ಇಸವಿಯವರೆಗೂ UNI ನ್ಯೂಸ್ ಏಜೆನ್ಸಿಯೊಂದಿಗೆ ಗುರುತಿಸಿಕೊಂಡಿದ್ದ ರಾಜೀವ್, ಆ ನಂತರ Tribune ಮತ್ತು ಸಕಾಲ ಸುದ್ಧಿಪತ್ರಿಕೆಗಳಲ್ಲಿ ಪ್ರಮುಖವಾಗಿ ರಕ್ಷಣಾ ಇಲಾಖೆ ಮತ್ತು ವಿದೇಶಾಂಗ ನೀತಿಯ ಕುರಿತು ಲೇಖನಗಳನ್ನ ಬರೆಯುತ್ತಿದ್ದ.

ಆ ನಂತರ ತನ್ನನ್ನು ತಾನು Freelancer, Researcher, Columnist ಎಂದು ಗುರುತಿಸಿಕೊಂಡು ವಿದೇಶಿ ಮ್ಯಾಗ್ಜೈನ್ ಗಳಿಗೆ ಲೇಖನ ಬರೆಯುತ್ತಿದ್ದ.


2010 ರಲ್ಲಿ ಚೀನಾದ ಮುಖವಾಣಿ Global Times ಗೆ ಕಳೆದ ಹತ್ತು ವರ್ಷಗಳಿಂದಲೂ ಅಂಕಣಕಾರನಾಗಿದ್ದ.

ಅಲ್ಲಿ "ಪಾಕಿಸ್ತಾನ, ಚೀನಾ, ಮಾಲ್ಡೀವ್ಸ್, ಶ್ರೀಲಂಕಾ, ದಲಾಯಿ ಲಾಮ, ಭಾರತದ ವಿದೇಶಾಂಗ ನೀತಿಗಳು, ರಕ್ಷಣಾ ವ್ಯವಸ್ಥೆಯ ಮಾಹಿತಿ ಪೂರಕ ಲೇಖನಗಳನ್ನು ಬರೆಯುತ್ತಿದ್ದ. 

ಬರೆಯುತ್ತಿದ್ದ ಎನ್ನುವುದಕ್ಕಿಂತಲೂ, ಚೀನಾ ಅವನಿಂದ ಇದನ್ನೆಲ್ಲಾ ಬರೆಸುತ್ತಿತ್ತು. 

ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಭಾವಿಸಿದ್ದ ಆತನಿಗೆ, ಕಳೆದ ವರ್ಷ ಚೀನಾ, ಗುಪ್ತ ಮಾಹಿತಿಯೊಂದನ್ನು ನೀಡುತ್ತದೆ.

ಅದನ್ನು ಕೇಳಿ ಅಂಗಿಯೊಳಗೆ ಚೇಳು ಸೇರಿಕೊಂಡವನಂತೆ, ಮಾಧ್ಯಮಗಳ ಮುಂದೆ ಬಂದ ರಾಜೀವ್ "Pegasus Software ಮೂಲಕ ಇಸ್ರೇಲು, ತನ್ನ ಮೊಬೈಲ್, ಈಮೇಲ್, ವಾಟ್ಸಾಪ್ ಚಾಟ್ ಗಳನ್ನು ಕದ್ದು ನೋಡುತ್ತಿದೆ, ಹ್ಯಾಕ್ ಮಾಡುತ್ತಿದೆ ಮತ್ತು ಇದನ್ನು ಕೆನಡಾ ಮೂಲದ ಸಂಶೋಧಕ ಸಂಸ್ಥೆ ಖಚಿತ ಪಡಿಸಿದೆ" ಎಂದು ಬಟ್ಟೆ ಹರಿದುಕೊಂಡ.


ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಇಸ್ರೇಲ್ ನಂತಹ ನಿಷ್ಣಾತ ರಾಷ್ಟ್ರ ನಡೆಸುವ ಬೇಹುಗಾರಿಕೆ ಬಗ್ಗೆ ಮಾಹಿತಿ ದೊರಕುವುದು ಹೇಗೆ ?

ಮತ್ತು ಇಸ್ರೇಲ್ ಒಬ್ಬ ಭಾರತದ ಸಾಮಾನ್ಯ ಪತ್ರಕರ್ತನ ಬಗ್ಗೆ ಬೇಹುಗಾರಿಕೆ ನಡೆಸುತ್ತೆ ಎಂದರೆ, ಈತನ ಚಟುವಟಿಕೆಗಳು ಏನಾಗಿರಬಹುದು ???


ಇದಕ್ಕೂ ಮೊದಲು,

ಭಾರತದಲ್ಲಿರಬಹುದಾದ ಸೂಕ್ತ ನಮಕ್ ಹರಾಮ್ ಗಳಿಗಾಗಿ ಗಾಳ ಹಾಕಿ ಕಾಯುತ್ತಿದ್ದ ಚೀನಾಕ್ಕೆ, 

ಭಾರತದ Defence and External Affairs ಇಲಾಖೆಗಳಲ್ಲಿ ತನ್ನ ಬೇರು ತೂರಿಸಿಕೊಂಡು ಮಾಹಿತಿ ಹೆಕ್ಕುತ್ತಾ ಕೂತಿದ್ದ, ಹಣದಾಹಿ ರಾಜೀವ ಕಣ್ಣಿಗೆ ಬೀಳುತ್ತಾನೆ.

ಚೀನಾದ ಏಜೆಂಟ್ ಮೈಕೆಲ್ ಎನ್ನುವವ, ರಾಜೀವನನ್ನು LINKEDIN ಮೂಲಕ ಸಂಪರ್ಕಿಸಿ, ತನ್ನದೇ ಖರ್ಚಿನಲ್ಲಿ ಚೀನಾಗೆ "Interview" ಗಾಗಿ ಕರೆಸಿಕೊಳ್ಳುತ್ತಾನೆ.

ಮೊದಲ ಭೇಟಿಯಲ್ಲಿ ಚೀನಾ ಮತ್ತು ಭಾರತದ ನಡುವಿನ ಸಂಬಂಧ, ಗಡಿ ನೀತಿ, ಗಡಿ ವಿವಾದಗಳ ಬಗ್ಗೆ ಪ್ರಶ್ನಿಸಿ, ತಾನು ಗಾಳ ಹಾಕಿರುವುದು ಸರಿಯಾದ ಮೀನಿಗೆ ಎಂದು ಖಚಿತ ಪಡಿಸಿಕೊಳ್ಳುತ್ತಾನೆ.


ಮೊದಲಿಗೆ ದಲಾಯಿಲಾಮ ಬಗ್ಗೆ ಕೊಡುವ ಒಂದು (ಮಾಹಿತಿ) ಲೇಖನಕ್ಕೆ 500 ಡಾಲರ್ ನಂತೆ ಒಪ್ಪಂದ ಮಾಡಿಕೊಂಡು,

ವಿಶ್ವಾಸ (!?) ಬೆಳೆದ ನಂತರ, Laos, Maldives ಗಳಲ್ಲಿ ಆಗಾಗ ಭೇಟಿ ಮಾಡುತ್ತಾ, ಭಾರತೀಯ ಸೇನೆಯ ಚಟುವಟಿಕೆ, ಸೇನಾ ನಿಯೋಜನೆ, ಭೂತಾನ್-ಸಿಕ್ಕಿಂ-ಚೀನಾ ಜಂಕ್ಷನ್, ಡೋಕ್ಲಾಮ್ ಕುರಿತಾದ ಭಾರತದ ನಿಲುವು ಮತ್ತು ಯೋಜನೆ, ಭಾರತ ಮತ್ತು ಮಯನ್ಮಾರ್ ಸೇನಾ ಸಹಕಾರ, ಚೀನಾ ಭಾರತ ಗಡಿ ವಿವಾದ, ಪಾಕಿಸ್ತಾನ ಗಡಿ ವಿವಾದ, ಶ್ರೀಲಂಕಾ ಬಂದರುಗಳ ಬಗ್ಗೆ ಭಾರತದ ಎಚ್ಚರಿಕೆಯ ಯೋಜನೆಗಳ ಬಗ್ಗೆ ವಿಸ್ತೃತ ವರದಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.


ಇಂತಹ ದೇಶದ್ರೋಹಿ ಕೆಲಸಕ್ಕೆ, ರಾಜೀವನ ಎತ್ತರಕ್ಕೆ ಸಮಾನವಾಗಿ ಹಣ ಫಿಕ್ಸ್ ಮಾಡಿದ್ದ ಚೀನಾ, ಆ ಎಂಜಲು ಹಣವನ್ನು ರಾಜೀವನಿಗೆ ತಲುಪಿಸಲು,

ದೆಹಲಿಯಲ್ಲಿ ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಕಂಪೆನಿಗಳನ್ನು ಬಳಸುತ್ತಿತ್ತು.


ಭಾರತದಲ್ಲಿ ಏನು ಸಾಧ್ಯವಿಲ್ಲ ಹೇಳಿ ?

Zhang Cheng (ಸೂರಜ್), Zhang Lixia (ಉಷಾ) Quing Shi ಮತ್ತು ನೇಪಾಳದ Sher Singh (ರಾಜ್ ಬೊಹರ) ಮುಂತಾದ ತನ್ನ ಏಜೆಂಟ್ಸ್ ಗಳ ಹೆಸರು ಬದಲಾಯಿಸಿ, MZ Pharmacy, MZ malls ಇತ್ಯಾದಿ ಹತ್ತಾರು ಟ್ರೇಡಿಂಗ್ ಕಂಪೆನಿಗಳನ್ನು ರಿಜಿಸ್ಟರ್ ಮಾಡಿಸಿಕೊಂಡು, ಅದರ ಮೂಲಕ ನಗದು ವ್ಯವಹಾರ ಮಾಡುತ್ತಾ ಸಿಕ್ಕಿಹಾಕೊಳ್ಳದಂತೆ ಭಾರತ ಮತ್ತು ಭಾರತೀಯರನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸುತ್ತಿತ್ತು.

"ನೀನ್ ಹೆಂಗಾದ್ರೂ ದುಡಿ ಗುರು, ನಂಗ್ 30% ಟ್ಯಾಕ್ಸ್ ಕಟ್ಟು ಸಾಕು" ಅನ್ನೋ ಪುರಾತನ ತೆರಿಗೆ ನೀತಿಯಲ್ಲೇ ಭಾರತವಿದೆ ಎಂದು ಭಾವಿಸಿ,

ರಾಜೀವ್ ಗೆ ಕೊನೆಯ ಒಂದು ವರ್ಷದ ಅಂತರದಲ್ಲಿ online transaction ಮೂಲಕ ನೀಡಿದ್ದ 30 ಲಕ್ಷ ರೂಪಾಯಿಯಿಂದ ಚೀನಾದ ಈ ನಕಲಿ ಕಂಪೆನಿಗಳು ಎಡವಟ್ಟು ಮಾಡಿಕೊಂಡವು.


ಸದ್ಯಕ್ಕೆ, ನಕಲಿ ಕಂಪೆನಿಯ ಡೈರೆಕ್ಟರ್ಸ್ ಸೇರಿದಂತೆ, ರಾಜೀವ್ ಶರ್ಮಾ, ಆತನ ಮೊಬೈಲ್, ಲ್ಯಾಪ್ಟಾಪ್, ಸೂಕ್ಷ್ಮ ಮಾಹಿತಿಗಳನ್ನೊಳಗೊಂಡ ಇನ್ನಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.


Forensic analysis ಮೂಲಕ ರಾಜೀವ್ ಹಂಚಿಕೊಂಡಿರುವ ಮಾಹಿತಿ, ಇಂತಹ ಕೆಲಸದಲ್ಲಿ ಭಾಗಿಯಾಗಿದ್ದ ಇತರ ಭಾರತೀಯರು ಮತ್ತು ವಿದೇಶಿಯರ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.

ಎಂಜಲು ಕಾಸಿಗೆ ತಮ್ಮನ್ನೂ, ತಮ್ಮ ತಾಯ್ನಾಡನ್ನೂ ಮಾರಿಕೊಳ್ಳುವ ಇಂತಹ ವಿದ್ಯಾವಂತ ಬೇವರ್ಸಿಗಳನ್ನು ಬೆಂಬಲಿಸುವ ಪಕ್ಷಗಳು, ಬುದ್ಧಿಜೀವಿಗಳು ಇನ್ನಷ್ಟೇ ಬೀದಿಗೆ ಬಿದ್ದು ಬಾಯಿ ಬಡಿದುಕೊಳ್ಳಬೇಕಿದೆ.


ಅವ ಮಾಡಿದ ಕೆಲಸ ಮರೆಮಾಚಿ "ಸರ್ಕಾರವನ್ನ ವಿರೋಧಿಸಿದ್ದಕ್ಕೆ ಅರೆಸ್ಟ್ ಮಾಡಿಸಿದ್ದಾರೆ" ಅಂತಲೇ ದೇಶಾದ್ಯಂತ ಪ್ರಚಾರ ಮಾಡಲಿದ್ದಾರೆ.

Toolkit ಗಾಗಿಯೇ ಕಾಯುತ್ತಾ ಕುಳಿತಿರುವ ಇನ್ನೊಂದಷ್ಟು ಜನ, ಕಾ..ಕಾ.. ಅಂತ ತಳಸ್ಪರ್ಶಿ ಕವನಗಳನ್ನೂ, ಅಸಹಿಷ್ಣುತೆಯ ಲೇಖನಗಳನ್ನೂ ಬರೆದು ದೊಂಬರ ಕುಣಿತ ಶುರು ಮಾಡಲಿದ್ದಾರೆ.


ಇನ್ನು ಈ ಕಡೆ," ಮೋದಿ ಬಂದ್ಮೇಲೆ ಇಂಥವರನ್ನೆಲ್ಲಾ ಹೆಂಗ್ ಹಿಡಿದಾಕ್ತಿದ್ದಾನೆ ನೋಡು" ಅನ್ನುವವರ ಗಮನಕ್ಕೆ:

ಮೋದಿ ಅಡಿಯಲ್ಲೇ ಕುಳಿತು ಇಂತಹ ಸಾವಿರಾರು ಎಂಜಲು ನಾಯಿಗಳು  ಶತ್ರು ದೇಶಕ್ಕಾಗಿ ಕೆಲಸ ಮಾಡುತ್ತಿವೆ. ಅದನ್ನ ಕಂಡುಹಿಡಿಯುವುದು, ನಿಗ್ರಹಿಸುವುದು ಮೋದಿಗೂ ಸಾಧ್ಯವಾಗ್ತಿಲ್ಲ.


ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಹಕ್ಕುಗಳನ್ನೇ ಬಳಸಿಕೊಂಡು ಹೇಗೆ ದೇಶದ್ರೋಹ ಎಸಗಬಹುದು ಎಂದು ರಾಜೀವ ತೋರಿಸಿಕೊಟ್ಟರೆ,

ಎದುರಾಳಿ ದೇಶದ ಮೂಲಭೂತ ಹಕ್ಕು, ಪ್ರಜಾ ಸ್ವಾತಂತ್ರ್ಯ, ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಹೇಗೆ ಶತ್ರುವನ್ನು ಹಣಿಯಬಹುದು ಎನ್ನುವುದನ್ನ ಚೀನಾ ತೋರಿಸಿಕೊಟ್ಟಿದೆ.


ಜಾತಿ ಜಗಳ, ಧರ್ಮ ಜಗಳ, ಅಧಿಕಾರಕ್ಕಾಗಿ ಜಗಳ, ಓಲೈಕೆ ರಾಜಕಾರಣದಂತಹ ದರಿದ್ರ ನೀತಿ ಪಾಲಿಸುವವರೆಗೂ, ಶ್ರೀ ಕೃಷ್ಣನೇ ಅವತಾರ ಎತ್ತಿ ಬಂದರೂ ಭಾರತದ ಪರಿಸ್ಥಿತಿ ಸುಧಾರಿಸುವುದಿಲ್ಲ.


ಅದೆಲ್ಲಾ ಇರ್ಲಿ,

ಕರ್ನಾಟಕದ ಮೂರನೇ ಒಂದು ಭಾಗದಷ್ಟಿದ್ದು, ಅದೆಲ್ಲೋ ಕೂತ ಈ ಇಸ್ರೇಲ್, ರಾಜೀವ್ ನಂತಹ ಅತಿ ಸಣ್ಣ ರಕ್ತಪಿಪಾಸು ಸೊಳ್ಳೆಗಳ ಮೇಲೂ ಕಣ್ಣಿಟ್ಟಿರುತ್ತೆ ಅಂದ್ರೆ, ಅದರ ತಾಕತ್ತು ಎಂಥದ್ದು ?


- ತತ್ವ ಸಹಿಷ್ಣು

****

No comments:

Post a Comment