ಶ್ರಾವಣ ಶುಕ್ರವಾರದ ಗೌರಿ ಪೂಜಾಪದ್ಧತಿ
🌺🌺🌺🌺🌺🌺🌺
ಶ್ರಾವಣ ಮಾಸದಲ್ಲಿ ಗೌರಿ ಪೂಜಾ ವಿಧಾನ ಸರಳವಾಗಿ
ಈ ಸಲ ಶ್ರಾವಣ ಮಾಸ ಕಾಲು ಹಾಕಿದ ಪ್ರಥಮ ಪೂಜೆ ಗೌರಿಗೆ ಮಂಗಳಗೌರಿಯ ಪೂಜೆಯೊಂದಿಗೆ ಶುರುವಾದ ಶ್ರಾವಣ ,ಈ ಸಲ ವಿಶೇಷ ಅಂದರೆ ಚೌತಿ ಶುಕ್ರವಾರ ಬಂದಿದೆ ಆದಿನ ಉಪವಾಸ ಮಾಡಬೇಕಾ ಬೇಡವೇ ಅನ್ನುವ ಚರ್ಚೆ ನಡೆದಿದೆ .ಇದನ್ನು ನಾನು ಏನೂ ಹೇಳಲ್ಲ ಯಾಕೆಂದರೆ ನಿಮ್ಮ ಪದ್ಧತಿಯ ಪ್ರಕಾರ ನಿಮ್ಮ ಗುರುಗಳು ಹೇಗೆ ಹೇಳುತ್ತಾರೆ ಹಾಗೆ ಮಾಡಿ . ನಿಮ್ಮ ಮನೆತನದ ಹೀರಿಯರನ್ನು ವಿಚಾರಿಸಿ .
ನಮ್ಮ ಉತ್ತರ ಕರ್ನಾಟಕದಲ್ಲಿ ಶ್ರಾವಣ ಶುಕ್ರವಾರವನ್ನು ಹೇಗೆ ಆಚರಿಸುತ್ತೇವೆ ಅಂತ ತಿಳಿಸುತ್ತೇನೆ .ಶ್ರಾವಣ ಮಾಸ ಅಂದರೆ ಶ್ರಾವಣ ಅಮಾವಾಸ್ಯೆ ಕ್ಕಿಂತ ಮುಂಚೆಯೇ ಶ್ರಾವಣ ಮಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ತಯಾರಿ ಮಾಡಿಟ್ಟು ಕೊಳ್ಳುತ್ತೇವೆ . ಗೌರಿ ಕುಳಿತಾಗ ನಾವು ಏನನ್ನು ಹುರಿಯಲ್ಲ ಅದಕ್ಕೆ ಪೂರ್ವಿಯಾಗಿ ಗೌರಿ ನೈವೇದ್ಯಕ್ಕೆ ಬೇಕಾಗುವ ಚಟ್ನೆಪುಡಿ , ಮ್ಮೆಂತೆಹಿಟ್ಟು , ತರಹ ತರಹದ ಮಸಾಲಪುಡಿ , ಅಳ್ಳಿಟ್ಟು ,ಅಳ್ಳು , ರವೆ, ಶಾವಿಗೆ ಎಲ್ಲವನ್ನು ಮಡಿಯಿಂದ ಮಾಡಿ ಎತ್ತಿಟ್ಟುಕೊಳ್ಳುತ್ತೇವೆ...
ಅಲ್ಲದೆ ಇನ್ನೂ ಕೆಲವು ಪದ್ಧತಿಗಳಿವೆ ನಮ್ಮ ಕಡೆ ಗೌರಿ ಕುಳಿತಾಗ ಕೈಯಿಂದ ಬಳೆ ತೆಗೆಯುವದಾಗಲಿ , ಹಾಕುವದಾಗಲಿ ಮಾಡಲ್ಲ ಬಳೆ ಹೆಚ್ಚಬಾರದು. ಇನ್ನು ಕೆಲವು ಪದ್ಧತಿಗಳಿವೆ. ಶ್ರಾವಣ ಅಂದರೆನೇ ಅಷ್ಟು ಸುಂದರ .. ಇನ್ನು ಗೌರಿ ಪೂಜೆ
ಮೊದಲು ನಾವು ಗೌರಿಯನ್ನು ಗಡಿಗೆ ಬರೆಯುತ್ತೇವೆ . ಈಗ ಗಡಿಗೆ ಸಿಗಲ್ಲ ಅದಕ್ಕೆ ತಾಮ್ರದ ತಂಬಿಗೆಯಲ್ಲಿ ಬರೆದು ಕೂಡಿಸುತ್ತೇವೆ ಚಿತ್ರದಲ್ಲಿ ಇದೆ ನೋಡಿ ಅದು ನಾನೆ ಬರೆದ ಗೌರಿ
ಈ ರೀತಿ ಬರೆದು ಶ್ರಾವಣ ಶುಕ್ರವಾರದ ದಿನ ಗೌರಿಯನ್ನು ಮನೆ ಬಾಗಿಲಿಗೆ ತಳಿರುತೋರಣಕಟ್ಟಿ ಗೌರಿ ಆಹ್ವಾಹನ ಮಾಡುತ್ತೇವೆ. ಗೌರಿಯನ್ನು ಒಂದು ಮಂಟಪದಲ್ಲಿ ಮಣೆಹಾಕಿ ಮಣೆ ಮೇಲೆ ಅಕ್ಕಿ ಹಾಕಿ ಕುಂಕುಮದಿಂದ ಪದ್ಮವನ್ನು ಬರೆದು ಗೌರಿಯ ಹೊಟ್ಟೆಯೊಳಗೆ ಅಂದರೆ ಗೌರಿ ತಂಬಿಗೆಯೊಳಗೆ ಧಾನ್ಯವನ್ನು ಐದು ಸಲ ಹಾಕುತ್ತೇವೆ , ಅದರೊಟ್ಟಿಗೆ ಪ್ರಥಮ ಅರಿಷಿಣ ಕುಂಕುಮ , ಮತ್ತು ದಕ್ಷಿಣೆ , ಉತ್ತತ್ತಿ ಅಡಿಕೆಬೆಟ್ಟ ಒಣಕೊಬ್ಬರಿ ತುಂಡು , ಬಳೆ , ಕಾಲುಂಗುರ ಪಿಲ್ಲೆ ಎಲ್ಲವನ್ನು ಒಂದೊಂದರಂತೆ ಅಕ್ಕಿಯೊಟ್ಟಿಗೆ ಹಾಕಿ ಗೌರಿ ಹೊಟ್ಟೆತುಂಬಿ ,ಮೇಲೆ ಮುಖ ಮುಚ್ಚಬೇಕು ಮಂಗಳಸೂತ್ರ ಕಟ್ಟಿ , ಗೌರಿಯನ್ನು ಕರೆದಹಾಡು ಹಾಡುತ್ತಾ ಗೌರಿ ಸ್ಥಾಪನೆ ಮಾಡಿ ನಂತರ ಪಾದ , ಅರ್ಘ್ಯ, ಆಚಮನ ಅಭಿಷೇಕ ಹೂವಿನಿಂದ , ಪಂಚಾಮೃತ ಅಭಿಷೇಕ ಇವೆಲ್ಲವೂ ಗೌರಿ ಪೂಜೆ ಹಾಡಿನಲ್ಲೇ ಬರುತ್ತವೆ ಅದನ್ನೇ ಹೇಳುತ್ತಾ ಗೌರಿಪೂಜೆ ಮಾಡಬೇಕು ಗೆಜ್ಜೆವಸ್ತ್ರ ಎರಿಸಿ , ಸ್ನೇಹಿತರೆ ಹೆಣ್ಣುದೇವರಿಗೆ ಯಾವಾಗಲೂ ಹದಿನೆಂಟು ಗೆಜ್ಜೆ ಇರುವ ವಸ್ತ್ರ ಏರಿಸಬೇಕು ಜೊತೆಗೆ ಎರಡು ವಸ್ತ್ರಕುಬುಸ ಅಂತ . ಯಾಕೆಂದರೆ ಹೆಣ್ಣುದೇವರಿಗೆ ಹದಿನೆಂಟು ಮೊಳದ ಸೀರೆ ಉಡಿಸಬೇಕು ಕಚ್ಚೆಸೀರೆನೇ ಶ್ರೇಷ್ಟ ನಾವು ಕೂಡಾ ಕಚ್ಚೆ ಸೀರೆ ಉಡಬೇಕು ದೇವರ ಪೂಜೆ , ತುಳಸಿ ಪೂಜೆ ಮಾಡುವಾಗ ಅಂಚು ,ಸೆರಗು ಇರಬೇಕು ನಾವು ಅಲಂಕಾರ ಮಾಡಿಕೊಂಡು ಪೂಜೆಗೆ ಕೂಡಬೇಕು ಹರಿದ್ರಾ ಕುಂಕುಮ ಹಚ್ಚಿಕೊಂಡು, ಬೆನ್ನಮೇಲೆ ಕೂದಲು ಇಳಿ ಬಿಡಬಾರದು ಮೇಲೆ ಎತ್ತಿಕಟ್ಟಿ ಮಾಲೆಹಾಕಿಕೊಂಡು ಆಭರಣಗಳನ್ನು ಧರಿಸಿ ನಾವು ಗೌರಿಗೆ ಅಲಂಕಾರ ಪೂಜೆ ಮಾಡಬೇಕು , ಹರಿದ ಸೀರೆ ಕೆದರಿದ ಕೂದಲು ಬರಿ ಹಣೆಯಲ್ಲಿ ಕೈಯಲ್ಲಿ ಬಳೆಯಿಲ್ಲದೆ ಪೂಜೆ ಮಾಡಬಾರದು . ದಾರಿದ್ರ್ಯ ಕ್ಕೆ ದಾರಿ ಮಾಡಿ ಕೊಟ್ಟಂತೆ ಹಾಗೆ ಮಾಡಿದರೆ.. ನಂತರ ನಾನಾ ತರಹದ ಹೂವು ಎಲ್ಲ ತರಹದ ಪತ್ರೆ ಗರಿಕೆ ತುಳಸಿ , ದವನ ಎಲ್ಲವನ್ನು ಗೌರಿ ಅಷ್ಟೋತ್ತರ ಹೇಳುತ್ತಾ ಎರಿಸಿ ನಂತರ ನಾನಾ ಫಲಗಳ ಉಡಿತುಂಬಿ ಅಡುಗೆ ನೈವೇದ್ಯ ನಮ್ಮ ಕಡೆ ಹಾಡಿನಲ್ಲಿ ಬರುವ ಹಾಗೆ ನಾನಾ ತರಹದ ಅಡುಗೆ ನೈವೇದ್ಯ ಮಾಡುತ್ತೇವೆ.. , ಆದರೆ ಪ್ರತಿವಾರ ಹೂರಣದ ಅಡುಗೆ ಹೂರಣದ ಆರತಿ ಕಡ್ಡಾಯವಾಗಿ ಮಾಡಲೇ ಬೇಕು. . ನೈವೇದ್ಯತಾಂಬೂಲ ದಕ್ಷಿಣೆ ಸಮರ್ಪಣ ಮಾಡಿ ಆರತಿ ಮಂಗಳಾರತಿ ಕರ್ಪೂರದಾರತಿ ಮಂತ್ರ ಪುಷ್ಪ ಹೇಳಿ .. ಪೂಜೆ ಸಮರ್ಪಣ ಮಾಡುತ್ತೇವೆ... ಮತ್ತೆ ಸಂಜೆಯ ಸಮಯದಲ್ಲಿ ಮುತ್ತೈದೆಯರಿಗೆ ಉಡಿತುಂಬಿ ಶುಕ್ರವಾರದ ಗೌರಿ ಹಾಡು ಹಾಡಿ ಹುರಿಗಡಲೆ ಸಕ್ಕರೆ ಕೊಬ್ಬರಿ ನೈವೇದ್ಯ ಮಾಡಿ ಆರತಿ ಮಾಡುತ್ತೇವೆ..ನಾವು ಐದು ಶುಕ್ರವಾರ ಅದೇ ಗೌರಿಯನ್ನು ಪೂಜಿಸುತ್ತೇವೆ ...ಇದನ್ನು ನಾವು ಜೀವಂತೀಕಾ ಪೂಜೆ ಅಂತ ಕೂಡಾ ಹೇಳುತ್ತೇವೆ ಈ ಪೂಜೆ ಮಾಡುವದರಿಂದ ಮನೆಮಕ್ಕಳು ಅಭ್ಯುದಯವಾಗುತ್ತದೆ... ಯಾರ ಮನೆಯಲ್ಲಿ ಗೌರಿ ಕೂಡಿಸುವ ಪದ್ಧತಿ ಇಲ್ಲವೊ ಅವರು ಕಳಶವನ್ನಿಟ್ಟು ಈ ರೀತಿಯಲ್ಲಿ ಪೂಜೆ ಮಾಡಬಹುದು ಯಾರ ಬೇಕಾದರೂ ಮಾಡಬಹುದು ಜಾತಿಮತ ಎನೂ ಇಲ್ಲ...
ಶ್ರಾವಣಗೌರಿಕಥೆಕೂಡಪ್ರಾಂತ್ಯದಿಂದಪ್ರಾಂತ್ಯಕ್ಕೆಬೇರೆಆದರೂಸಾರಾಂಶ_ಒಂದೇ
ಪಾಂಡ್ಯ ವಂಶದಲ್ಲಿ ಸುಶೀಲನೆಂಬ ರಾಜನಿದ್ದ ಸರ್ವಗುಣ ಸಂಪನ್ನೆಯಾಗಿದ್ದ ಸುಖೇಶಿ ಅವನ ಅವನ ಹೆಂಡತಿಯಾಗಿದ್ದಳು . ಅವರಿಗೆ ಎಷ್ಟೋ ವರ್ಷ ಆದರೂ ಮಕ್ಕಳ ಭಾಗ್ಯ ದೊರಕಲಿಲ್ಲ . ಆಗ ವಿದಿ ಇಲ್ಲದೆ ಎರಡನೇ ಮದುವೆಗೆ ಹೊರಟ ಇದನ್ನರಿತ ರಾಣಿ ಸಖಿಯ ಹತ್ತಿರ ರಾಣಿ ತನಗ ಮೂರು ತಿಂಗಳು ಆಗಿದೆ . ಬಯಕೆ ಶುರುವಾಗಿದೆ ಅಂತ ಸುಳ್ಳು ಹೇಳಿ ಕಳುಹಿಸುತ್ತಾಳೆ ಹೇಳಿದ್ದು ಕೇಳಿ ಬಂದ ದಿಬ್ಬಣವನ್ನು ಹಿಂದಕ್ಕೆ ಕಳಿಸಿ ರಾಜ ಸಂತೋಷ ದಿಂದ ಮನೆಗೆ ಬರುತ್ತಾನೆ. ರಾಣಿಗೆ ಚಿಂತೆ ಶುರು ಆಗುತ್ತೆ ಸೂಲಗಿತ್ತಿಯ ಕರೆದು ಹೇಳುತ್ತಾಳೆ .ಎಲ್ಲ ವಿಷಯ ಅದನ್ನರಿತ ಅವಳು ನಿಮ್ಮ ಮನೆಯಲ್ಲಿ ಆಗುವ ಉತ್ಸವವನ್ನು ಸಂಭ್ರದಿಂದ ನಡೆಸಿ ನಾನು ನೋಡಿಕೊಳ್ಳುತ್ತೇನೆ ಅಂತ ಸೂಲಗಿತ್ತಿ ಹೊನ್ನಿಗೆ ಆಸೆ ಮಾಡಿ ಮಾತುಕೊಡುತ್ತಾಳೆ. ನಂತರೆ ಕೇರಿಕೇರಿ ಪೊಕ್ಕು ನೋಡಿದಾಗ ಬಡಬ್ರಾಹ್ಮಣ ಮಡದಿಗೆ ಮೂರು ತಿಂಗಳು ಅವಳನ್ನು ಆದರದಿಂದ ಮಾತನಾಡಿಸಿ ಸೂಲಗಿತ್ತಿ ತನ್ನ ಕೆಲಸ ಆಯಿತೆಂದು ಸಂತೋಷ ಪಡುತ್ತಾಳೆ. ಇತ್ತ ರಾಣಿಗೆ ಪುಂಸವನ ವನ್ನೂ , ಶ್ರೀಮಂತೋತ್ಸವವನ್ನು ಮಾಡಿದನು. ಬ್ರಾಹ್ಮಣ ನ ಮಡದಿ ಪ್ರಸವಿಸುತ್ತಿರುವದು ತಿಳಿದು ರಾಜ ಪತ್ನಿ ಸಹ ನೋವು ಬಂದ ಹಾಗೆ ನಟಿಸ ತೊಡಗಿದಳು. ಎನೂ ಅರಿಯದ ಪುರೋಹಿತ ಪತ್ನಿ ಸೂಲಗಿತ್ತಿಯನ್ನು ನಂಬಿದಳು ಅವಳದು ಮೊದಲ ಹೆರಿಗೆ ಸೂಲಗಿತ್ತಿ ಪುರೋಹಿತನ ಹೆಂಡತಿಯ ಕಣ್ಣು ಕಟ್ಟಿ ದಳು. ಅವಳು ಪ್ರಸವಿಸಿದ ಗಂಡು ಕೂಸನ್ನು ಸೂಲಗಿತ್ತಿ ರಹಸ್ಯವಾಗಿ ಒಬ್ಬರ ಕೈಯಿಂದ ಯಾರಿಗೂ ಗೊತ್ತಾಗದ ಹಾಗೆ ರಾಜ ಪತ್ನಿ ಕಡೆಗೆ ಕಳುಹಿಸಿದಳು . ರಾಣಿ ಆ ಕುಸನ್ನು ಮಗ್ಗಲಲ್ಲಿಟ್ಟುಕೊಂಡು ತಾನು ಗಂಡು ಕುಸನ್ನು ಪ್ರಸವಿಸಿರುವದಾಗಿ ಘೋಷಿಸಿದಳು. ಸೂಲಗಿತ್ತಿಯು ತಾನು ಮೊದಲೇ ತಂದಿದ್ದ ಮಾಂಸದ ಪಿಂಡವನ್ನು ತೋರಿಸಿ ಆಘಾತ ವ್ಯಕ್ತ ಪಡಿಸಿದಳು. ಆದರೆ ಆ ಬ್ರಾಹ್ಮಣನ ಮಡದಿಗೆ ಸೂಲಗಿತ್ತಿಯ ಮಾತಿನಲ್ಲಿ ವಿಶ್ವಾಸ ಬರಲಿಲ್ಲ . ಎಲ್ಲಿಯಾದರೂ ಇರಲಿ ನನ್ನ ಮಗ ತಾನು ಮಾಡುತ್ತಿದ್ದ ಜೀವಂತಿಕಾ ದೇವಿಗೆ ನನ್ನ ಮಗ ದೀರ್ಘಾಯುಷಿಯಾಗಲಿ ಎಂದು ಬೇಡಿಕೊಂಡಳು.
ಇತ್ತ ಆ ಕುಸಿಗೆ ರಾಜ ವೈಭವ ನಡೆಯಿತು .ನಂತರ ವಿದ್ಯಾಬ್ಯಾಸ ಜಾವಳ ಮುಂಜಿವೆ ವೈಭವ ನಡೆಯಿತು. ನಂತರ ಸುಶೀಲ್ ರಾಜನು ಕಾಲ ವಶವಾದ ರಾಜ ಕುಮಾರನಿಗೆ ಪಟ್ಟಾಬಿಷೇಕ ಆಯಿತು. ನಂತರ ಪಿತೃ ಋಣ ತಿರಿಸಲು ಗಯಾಕ್ಕೆ ಹೊರಟ ಮಾರ್ಗ ಮದ್ಯದಲ್ಲಿ ಒಬ್ಬ ಗ್ರಹಸ್ಥನ ಮನೆಯಲ್ಲಿ ತಂಗಲು ಅವಕಾಶ ಬೇಡಿದ ಅವನ ಹೆಂಡತಿ ಪ್ರಸವಿಸಿದ್ದಳು. ಅವನ ಮನೆಯಲ್ಲಿ ಈ ಪೂರ್ವ ಹುಟ್ಟಿದ ಐದು ಗಂಡು ಕುಸುಗಳನ್ನು ಐದನೇಯ ದಿನ ಷಷ್ಠಿದೇವಿ ಬಂದು ಕೊಂದು ಹಾಕುತ್ತಿದ್ದಳು. ಆ ದಿನ ಐದನೇಯ ದಿನವಾಗಿತ್ತು ಷಷ್ಠಿ ದೇವಿ ಒಳ ಬರುವಷ್ಟರಲ್ಲಿ ರಾಜ ಮಲಗಿದ್ದ ಆಗ ಒಳಗಿಂದ ಲಕ್ಷೀದೇವಿ ನನ್ನ ಪುತ್ರನ ದಾಟಲು ನಿನ್ನ ಶಿರವು ಸಹಸ್ರ ಹೋಳಾಗುವದು ಅಂತ ಹೇಳಿದ್ದು ಕೇಳಿ ಷಷ್ಠಿದೇವಿ ಹಿಂತಿರುಗಿ ಹೋಗುತ್ತಾಳೆ ... ಬೇಳಗಾಗೆದ್ದು ನೋಡುವಷ್ಟರಲ್ಲಿ ಶಿಶುವು ಬದುಕಿದ್ದನ್ನು ನೋಡಿ ಗ್ರಹಸ್ಥನಿಗೆ ಮತ್ತು ಹೆಂಡತಿಗೆ ಬಹಳ ಸಂತೋಷವಾಯಿತು ನಿನ್ನ ಪುಣ್ಯದಿಂದ ನನ್ನ ಮಗುವು ಬದುಕಿತೆಂದು... ನಂತರ ಗಯಾಕ್ಕೆ ಹೋಗಿ ಪಿಂಡ ಹಾಕುತ್ತಿರುವಾಗ ಎರಡು ಕೈಗಳು ಎದ್ದು ಬಂದವು ನಂತರ ರಾಜನು ವಿಷ್ಣು ಪಾದದಲ್ಲಿ ಪಿಂಡವನ್ನಿಟ್ಟು ಬಂದು ಬಂದು ಜ್ಞಾನಿಗಳನ್ನು ಕೇಳಿದ ಯಾಕೆ ಎರಡು ಕೈಗಳು ಅಂತ ಅದಕ್ಕೆ ಜ್ಞಾನಿಗಳು ನಿನಗೆ ಸಾಕಿದವರು ಹಡೆದವರು ಇಬ್ಬರುಂಟು ಎಂದು ಹೇಳಿದರು... ನಿಮ್ಮ ತಾಯಿಯನ್ನು ವಿಚಾರಿಸಿ ಅಂದಾಗ . . ರಾಜನು ಯಾತ್ರೆ ಯನು ಮುಗಿಸಿ ಹಿಂತಿರುಗಿ ಬರುವಾಗ ಮತ್ತದೆ ಗ್ರಹಸ್ಥನ ಮನೆಗೆ ಬಂದ ಮತ್ತೆ ಗ್ರಹಸ್ಥನ ಹೆಂಡತಿ ಪ್ರಸವಿಸಿರುತ್ತಾಳೆ , ಐದನೇಯ ದಿನ ಮತ್ತೆ ಷಷ್ಠಿದೇವಿ ಮಗುವನ್ನು ಬಲಿತೆಗೆದು ಕೊಳ್ಳಲು ಬಂದು ರಾಜ ಮಲಗಿದ್ದು ಕಂಡು ನಿಲ್ಲುತ್ತಾಳೆ .ಮತ್ ಜೀವಂತಿಕಾ ದೇವಿ ಅವನ ದಾಟಿ ಬರಬೇಡ ಅಂತ ಕೂಗಿದ್ದನ್ನು ರಾಜನು ಕೇಳಿ . ಮಲಗಿದ ಹಾಗೆ ನಟಿಸುತ್ತಾನೆ ಅವರಿಬ್ಬರ ಮಾತು ಆಲಿಸುತ್ತಾ ಷಷ್ಠಿದೇವಿ ಕೇಳುತ್ತಾಳೆ ನಿನೇಕೆ ಈ ರಾಜನನ್ನು ಕಾಪಾಡುತ್ತಿರುವೆ. ಆಗ ಜೀವಂತಿಕಾ ದೇವಿ ಇವನ ತಾಯಿ ನನ್ನ ವ್ರತವನ್ನು ಭಕ್ತಿಯಿಂದ ಮಾಡಿ ನೇಮ ನಿತ್ಯಗಳನ್ನೇಲ್ಲ ಪಾಲಿಸಿದ್ದಾಳೆ .ಇದರಿಂದ ಈ ಬ್ರಾಹ್ಮಣ ಮಗುವನ್ನು ರಕ್ಷಿಸುತ್ತಿದ್ದೇನೆ . ಇದನ್ನೇಲ್ಲ ಕೇಳಿದ ರಾಜ , ಬೇಳಿಗ್ಗೆದ್ದವನ ತನ್ನೂರಿಗೆ ಹೊರಟು ಬಂದ , ಬಂದವನೇ ತಾಯಿಯನ್ನು ಅಮ್ಮ ನೀನು ಜೀವಂತಿಕಾ ವ್ರತ ಮಾಡಿದ್ದೀಯಾ ಅಂತ ಕೇಳುತ್ತಾನೆ. ಅದು ನನಗೆ ತಿಳಿಯದು ಆಗ ಸತ್ಯವೇನು ಹೇಳಬೇಕೆನ್ನಲು ರಾಣಿ ತನ್ನೇಲ್ಲ ವೃತ್ತಾಂತ ವೆಲ್ಲ ಹೇಳಿ ನೀನಾರ ಮಗನೊ ನಾನರಿಯೆ , ನಂತರ ಸೂಲಗಿತ್ತಿಯನ್ನು ಕೇಳಲಾಗಿ ಹೊನ್ನಿನ ಆಸೆಗೆ ಬ್ರಾಹ್ಮಣ ಮಗುವನ್ನು ನಿನ್ನಮ್ಮನ ಮಡಿಲಿಗೆ ಹಾಕಿದೆ , ಆಗ ತಂದೆ ತಾಯಿಯರನ್ನು ಕರೆಯಸಿ ಅವರಿಗೆ ಸಂಪತ್ತು ಐಶ್ವರ್ಯ ಕೊಟ್ಟು ನಮಿಸಿದನು... ಜೀವಂತಿಕ ವ್ರತ ಮಾಡುವದರಿಂದ ಸ್ಥಿರವಾಗಿ ಲಕ್ಷೀ ಮನೆಯಲ್ಲಿ ನೆಲೆಸುತ್ತಾಳೆ ,ಮತ್ತು ಸಂತಾನವನ್ನು ಕಾಪಾಡುವ ಈ ವ್ರತ ಶ್ರಾವಣದಲ್ಲಿ ಬರುವ ನಾಲ್ಕು ಅಥವಾ ಐದು ಶುಕ್ರವಾರ ಮಾಡಬೇಕು... ಗೌರಿಯನ್ನು ಬರೆದು ಕೂಡಿಸಿ ಷೋಡಶೋಪಚಾರ ಪೂಜಿಸಿ ಭಕ್ಷ್ಯ ಭೊಜ್ಯಗಳಿಂದ ಅಡುಗೆ ನೈವೇದ್ಯ ಮಾಡಿ ಆರತಿ ಬೇಳಗಬೇಕು , ಸುವಾಸಿನಿಯರಿ ಉಡಿತುಂಬಿ ಸಂತಸದಿಂದ ಲಕ್ಷೀ ಹಾಡಹೇಳಿದ್ದಲ್ಲಿ ಅಂತವರ ಮನೆಯಲ್ಲಿ ಸ್ಥಿರವಾಗಿ ನಿಂತ ಅವರ ಅಭಿಷ್ಟ ಪುರೈಸುವೆ ಅಂತ ದೇವಿಯ ವಚನವಿದೆ ,ಅದಕ್ಕಾಗಿ ತಪ್ಪದೇ ಶುಕ್ರವಾರ ಶ್ರೀ ಮಹಾಲಕ್ಷ್ಮಿ ಪೂಜೆ ಮಾಡಿ ಆಕೆಯ ಅನುಗ್ರಹ ಪಡೆಯಿರಿ ....ಸಂಜೆ ಗೌರಿ ಹಾಡು ಹಾಡಿ ಮತ್ತೆಆರತಿ ಮಾಡಿ
✍️✍️✍️ವೀಣಾಜೋಶಿ
***
***
No comments:
Post a Comment