ಶ್ರಾದ್ಧ ಪೂರ್ಣಿಮಾದ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ ಹೀಗಿದೆ..!
ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ಮಾಸದ ಹುಣ್ಣಿಮೆ 'ಶ್ರಾದ್ಧ ಪೂರ್ಣಿಮಾ' ಆಚರಿಸಲಾಗುವುದು. ಹುಣ್ಣಿಮೆಯಂದು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಶ್ರಾದ್ಧ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಶ್ರಾದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ. ಈ ದಿನ ಸ್ನಾನದ ಹೊರತಾಗಿ ಪೂರ್ವಜರಿಗೆ ಪೂಜೆ, ತರ್ಪಣ, ಶ್ರಾದ್ಧ, ದಾನ ವಿಧಿವಿಧಾನಗಳನ್ನು ಮಾಡಲಾಗುತ್ತದೆ. ಭಾದ್ರಪದ ಪೂರ್ಣಿಮೆಯ ಮುಹೂರ್ತ, ಮಹತ್ವವನ್ನು ಮತ್ತು ಪೂಜೆ ವಿಧಿ - ವಿಧಾನಗಳ ಬಗ್ಗೆ ನಾವಿಲ್ಲಿ ತಿಳಿಯೋಣ
ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ
ಭಾದ್ರಪದ ಪೂರ್ಣಿಮಾ ಶ್ರಾದ್ಧ ಮುಹೂರ್ತ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾದ್ರಪದ ಪೂರ್ಣಿಮಾ ಶ್ರಾದ್ಧವು ಪಿತೃ ಪಕ್ಷದ ಭಾಗವಲ್ಲ. ಯಾವ ವ್ಯಕ್ತಿ ಹುಣ್ಣಿಮೆ ದಿನದಂದು ಮರಣ ಹೊಂದಿರುತ್ತಾನೆಯೋ, ಅವರ ಶ್ರಾದ್ಧವನ್ನು ಸರ್ವಪಿತೃ ಅಮಾವಾಸ್ಯೆಯ ದಿನದಂದು ಮಾಡಲಾಗುತ್ತದೆ. ಈ ದಿನದಂದು ಯಾರಾದರೂ ಶ್ರಾದ್ಧವನ್ನು ಮಾಡಬೇಕೆಂದು ಬಯಸಿದರೆ, ನಂತರ ಐಮುಹೂರ್ತದ ಪ್ರಕಾರ ಮಾಡಬಹುದು.
ಭಾದ್ರಪದ ಪೂರ್ಣಿಮಾ ಶ್ರಾದ್ಧದ ಮಹತ್ವ:
ಹುಣ್ಣಿಮೆಯಂದು ಸತ್ಯನಾರಾಯಣನನ್ನು ಪೂಜಿಸುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಕಲಿಯುಗದಲ್ಲಿ ಸತ್ಯನಾರಾಯಣ ದೇವನನ್ನು ಆರಾಧಿಸುವುದರಿಂದ ವ್ಯಕ್ತಿಗೆ ಸಂಪತ್ತು ದೊರೆಯುತ್ತದೆ. ಪೂರ್ಣಿಮೆಯಂದು ಉಪವಾಸ ಮಾಡುವುದರಿಂದ, ಭಗವಾನ್ ಸತ್ಯನಾರಾಯಣನ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ, ಒಬ್ಬ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಆ ವ್ಯಕ್ತಿಯ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುವುದು. ಆತನ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಭಾದ್ರಪದ ಪೂರ್ಣಿಮೆಯಂದು ಉಮಾ-ಮಹೇಶ್ವರರ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಇದರಲ್ಲಿ ಶಂಕರ ಪಾರ್ವತಿಯನ್ನು ಪೂಜಿಸುವುದರಿಂದ ಹಿಂದಿನ ಜನ್ಮದ ಪಾಪಗಳು, ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.
ಭಾದ್ರಪದ ಪೂರ್ಣಿಮಾ ಪೂಜೆ ವಿಧಾನ:
- ಈ ಪುಣ್ಯದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಬಹಳ ಮಹತ್ವವನ್ನು ಹೊಂದಿದೆ. ಸ್ನಾನದ ನೀರಿಗೆ ಗಂಗಾಜಲವನ್ನು ಸೇರಿಸಿ ಸ್ನಾನವನ್ನೂ ಮಾಡಬಹುದು. ಸ್ನಾನ ಮಾಡುವಾಗ, ಎಲ್ಲಾ ಪವಿತ್ರ ನದಿಗಳನ್ನು ಧ್ಯಾನಿಸಬೇಕು.
- ಸ್ನಾನದ ನಂತರ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ.
- ಸಾಧ್ಯವಾದರೆ ಈ ದಿನವೂ ಉಪವಾಸ ವ್ರತವನ್ನು ಮಾಡಬಹುದು.
- ಗಂಗಾಜಲದಿಂದ ಎಲ್ಲಾ ದೇವತೆಗಳಿಗೆ ಅಭಿಷೇಕವನ್ನು ಮಾಡಿ.
- ಪೂರ್ಣಿಮಾದ ಪವಿತ್ರ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯು ವಿಶೇಷ ಮಹತ್ವವನ್ನು ಹೊಂದಿದೆ.
- ಈ ದಿನ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಿ.
- ಭಗವಾನ್ ವಿಷ್ಣುವಿಗೆ ನೈವೇದ್ಯಗಳನ್ನು ಅರ್ಪಿಸಿ. ವಿಷ್ಣುವಿನ ಭೋಗದಲ್ಲಿ ತುಳಸಿಯನ್ನೂ ಮರೆಯದೆ ಸೇರಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ತುಳಸಿ ಇಲ್ಲದೆ ಭೋಗವನ್ನು ಸ್ವೀಕರಿಸುವುದಿಲ್ಲ. ಸಾತ್ವಿಕ ವಸ್ತುಗಳನ್ನು ಮಾತ್ರ ಭಗವಂತನಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
- ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಆರತಿ ಮಾಡಿ.
- ಈ ಪವಿತ್ರ ದಿನದಂದು, ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಧ್ಯಾನವನ್ನು ಮಾಡಿ.
- ಪೂರ್ಣಿಮಾ ದಿನದಂದು ಚಂದ್ರನ ಪೂಜೆಗೆ ವಿಶೇಷ ಮಹತ್ವವಿದೆ.
- ಚಂದ್ರೋದಯದ ನಂತರ ಚಂದ್ರನನ್ನು ಪೂಜಿಸಬೇಕು.
- ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ದೋಷಗಳಿಂದ ಮುಕ್ತಿ ದೊರೆಯುತ್ತದೆ.
- ಈ ದಿನದಂದು ನಿರ್ಗತಿಕರಿಗೆ ಸಹಾಯ ಮಾಡಿ.
- ನಿಮ್ಮ ಮನೆಯ ಸುತ್ತ ಹಸು ಇದ್ದರೆ ಖಂಡಿತವಾಗಿ ಹಸುವಿಗೆ ಆಹಾರ ನೀಡಿ. ಹಸುವಿಗೆ ಆಹಾರ ನೀಡುವುದರಿಂದ ಅನೇಕ ರೀತಿಯ ದೋಷಗಳು ದೂರವಾಗುತ್ತವೆ.
ಸಾಮಾನ್ಯವಾಗಿ ಹುಣ್ಣಿಮೆಯ ದಿನದಂದು ಭಗವಾನ್ ವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆದರೆ, ಭಾದ್ರಪದ ಹುಣ್ಣಿಮೆಯ ದಿನದಂದು ಶಿವ ಮತ್ತು ಪಾರ್ವತಿಯನ್ನೂ ಪೂಜಿಸಲಾಗುತ್ತದೆ. ಈ ದಿನ ಶಿವ ಪಾರ್ವತಿಯನ್ನು ಪೂಜಿಸುವುದರಿಂದ ಜನ್ಮ ಜನ್ಮಗಳ ಪಾಪವು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ.
***
No comments:
Post a Comment