ಕಾರ್ಯೆಷು ದಾಸಿ
ಕರಣೇಶು ಮಂತ್ರಿ
ಭೋಜನೇಶು ಮಾತಾ
ಶಯನೇಶು ರಂಭಾ
ರೂಪೇಶು ಲಕ್ಷ್ಮೀ
ಕ್ಷಮಯಾಧರಿತ್ರಿ
ಸತ್ಧರ್ಮ ಯುಕ್ತಾ
ಕುಲಧರ್ಮ ಪತ್ನೀ
ಈ ಶ್ಲೋಕವನ್ನು ನೀವೆಲ್ಲರೂ ಕೇಳಿರುತ್ತೀರಿ. ಆದರೆ ಪುರುಷ ಗುಣಗಾನದ ಒಂದು ಶ್ಲೋಕ ಇದೆ.
ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾರ್ಯೇಷು ಯೋಗೀ ಕರಣೇಷು ದಕ್ಷ:
ರೂಪೇ ಚ ಕೃಷ್ಣ: ಕ್ಷಮಯಾ ತು ರಾಮಃ:
ಭೋಜ್ಯೇಷು ತೃಪ್ತಃ: ಸುಖ ದುಃಖ ಮಿತ್ರಂ
ಷಟ್ಕರ್ಮಯುಕ್ತ: ಖಲು ಧರ್ಮನಾಥ:
1. ಕಾರ್ಯೇಷು ಯೋಗೀ
ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು
2.ಕರಣೇಷು ದಕ್ಷ:🏹
ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.
3. ರೂಪೇಚ ಕೃಷ್ಣ:
ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.
4. ಕ್ಷಮಯಾ ತು ರಾಮಃ
ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಂತೆಯೂ, ಮರ್ಯಾದಾ ಪುರುಷೋತ್ತಮನಾಗಿಯೂ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.
5. ಭೋಜ್ಯೇಷು ತೃಪ್ತಃ:
ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ,)
ಊಟ ಮಾಡಬೇಕು
6. ಸುಖ ದುಃಖ ಮಿತ್ರಂ
ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ , ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.
ಈ ಎಲ್ಲಾ ಗುಣಗಳುಳ್ಳವನು ಆದರ್ಶ ಪುರುಷನಾಗುತ್ತಾನೆ..
No comments:
Post a Comment