SEARCH HERE

Friday, 1 October 2021

ತದಿಗೆ ಗೌರಿ tadige gowri chaitra shukla chaitra bahula vaishakha shukla triteeya

 Tadige Gowri Vrata


#ತದಿಗೆ ಗೌರಿ

 ಪೂಜೆಯೂ  ಚೈತ್ರ ಶುದ್ಧ  #ತೃತೀಯ, ಚೈತ್ರ ಶುದ್ಧ   #ಬಹುಳ ಹಾಗು ವೈಶಾಖ  ಶುದ್ಧ  #ತೃತೀಯ  ದಂದು ಆಚರಣೆ ಮಾಡುವರು .

ಚೈತ್ರ ಗೌರಿ ಪೂಜೆ

ಚೈತ್ರ ಮಾಸದಲ್ಲಿ ಯುಗಾದಿ ಪಾಡ್ಯದ ನಂತರ ಬರುವ ತದಿಗೆ ದಿನ ಅಂದರೆ ಮೂರನೇ ದಿನ 'ಚೈತ್ರ ಗೌರಿ ಪೂಜೆ' ಮಾಡಬೇಕು. ಇದು ಮೂರು 'ತದಿಗೆ' ಅಂದರೆ ಯುಗಾದಿ ಪಾಡ್ಯ, ಹುಣ್ಣಿಮೆ ಆದ ನಂತರ ಬರುವ 'ತದಿಗೆ', ಹಾಗೂ ಮೂರನೆ ಮತ್ತು ಕೊನೆಯದು ಅಕ್ಷಯ 'ತದಿಗೆ'  ಹೀಗೆ ಮೂರು ತದಿಗೆ ಮಾಡುವ ಗೌರಿ ಪೂಜೆಯನ್ನು 'ಚೈತ್ರ ಗೌರಿ' ಪೂಜೆ ಅನ್ನುತ್ತಾರೆ. ಇದನ್ನು ಪ್ರತಿ ವರ್ಷವೂ ಮಾಡಬೇಕು. ಮಳೆ, ಚಳಿ, ಕಳೆದು  ಮಾವು ಚಿಗುರುವ ವಸಂತಕಾಲ, ಚೈತ್ರ ಮಾಸ, ಹೊಸ ಚಿಗರು, ಹಣ್ಣು, ಹೂವುಗಳು ಸಮೃದ್ಧಿ ಯಾಗಿದ್ದು ಕೋಗಿಲೆ ಸಂತಸದಿಂದ ಹಾಡುವಂಥ ಶುಭವನ್ನು ತರುವ ಮಂಗಳಕರ ಈ ಕಾಲದಲ್ಲಿ ಸಂತೋಷ, ಸೌಭಾಗ್ಯ ಸಂಪತ್ತು ಕೊಡಲೆಂದು ಗೌರಿಯನ್ನು ಭಕ್ತಿಯಿಂದ ಆರಾಧಿಸಿದರೆ, ಮನೆ ಯಲ್ಲಿ ಮಂಗಳಕಾರ್ಯಗಳು ನೆರವೇರುವುದು.

ಈ ಗೌರಿ ಪೂಜೆ ಹೆಚ್ಚಿನ ಮಡಿ ಮೈಲಿಗೆ ಗಳು ಇಲ್ಲ. ನಿತ್ಯ ಪೂಜೆ ಮಾಡುವಂತೆ ಸ್ನಾನ ಮಾಡಿ, ಒಗೆದ ಬಟ್ಟೆ ಧರಿಸಿ,  ದೇವರ ಮುಂದೆ ಸಾರಿಸಿ ರಂಗೋಲಿ ಹಾಕಿ ಗಣಪತಿ ಮಂಡಲ ಅಥವಾ ಪದ್ಮ ರಂಗೋಲಿ ಬರೆದು ಅದರ ಮೇಲೆ ಪುಟ್ಟ ಮಣೆ ಅಥವಾ  ಪುಟ್ಟ ಪೀಠ ಇಡಬೇಕು.  ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ಅಕ್ಷತೆ ಕಾಳು ಇಟ್ಟು ಅದರ ಮೇಲೆ ನಿಮ್ಮ ಮನೆಯಲ್ಲಿ ಇರುವ ಗೌರಿ, ಲಕ್ಷ್ಮಿ,  ಅನ್ನಪೂರ್ಣೇಶ್ವರಿ ಯಾವುದೇ ಪುಟ್ಟ ವಿಗ್ರಹವಿದ್ದರೆ, ಇಡಬಹುದು. ಅಥವಾ  ತಂಬಿಗೆಯಲ್ಲಿ ಅಕ್ಕಿ ತುಂಬಿಸಿ ಅದರಲ್ಲಿ ಅರಿಶಿನ ಕುಂಕುಮ ಅರಿಶಿಣ ಕೊಂಬು, ಎರಡು ಗೌರಿ ಬಳೆ, ಒಂದು ಕಾಯಿನ್ನ್, ಹಾಕಿ ಮೇಲೆ ಗೌರಿ ವಿಗ್ರಹ ಇಡಬೇಕು.( ಹಲವು  ಕಡೆ ಬೇರೆ ಬೇರೆ ಪೂಜಾ ಕ್ರಮ ಇದೆ ವಿಳ್ಯದೆಲೆ ಮೇಲೆ ಅರಿಶಿನದ ಗೌರಿ ಮಾಡಿ ಇಡುತ್ತಾರೆ, ಉಯ್ಯಾಲೆ ಗೌರಿ ಇಡುತ್ತಾರೆ.)  ಗೌರಿಯ ಮುಂಭಾಗದಲ್ಲಿ, ಒಂದು ಬೆಳ್ಳಿ, ಅಥವಾ ಹಿತ್ತಾಳೆ,  ಕಂಚು, ಪುಟ್ಟಗಿಂಡಿ ಅಥವಾ ಲೋಟದ ಕಂಠದ ಕೆಳಗೆ ಸುಣ್ಣದ ಎಳೆ ಸುತ್ತಲೂ ಎಳೆದು ಮಧ್ಯದಲ್ಲಿ ಅರಿಶಿನ ಕುಂಕುಮ ಹಚ್ಚಿ, ಗಿಂಡಿಗೆ  ನೀರು ತುಂಬಿಸಿ, ಆ ಕಡೆ ಈ ಕಡೆ ವಿಳ್ಳೆದೆಲೆ ಇಟ್ಟು, ಎರಡು ಅಡಿಕೆ ಒಂದು ನಾಣ್ಯ ಕ ಹಾಕಿ, ಎರಡು ವಿಳ್ಳೆದೆಲೆಗಳ ನಡುವೆ ಕೆಂಪು ಹೂ ಇಡಬೇಕು. 

ಪೂಜೆ ಮಾಡಲು ಹಣ್ಣು, ಹೂವು, ವೀಳ್ಯದೆಲೆ, ಅಡಿಕೆ, ಅರಿಶಿಣ ಕುಂಕುಮ ಗಂಧ, ಅಕ್ಷತೆ, ಎರಡು ಗೆಜ್ಜೆ ವಸ್ತ್ರ ಗಂಗೆಗೆ ಮತ್ತು ಗೌರಿಗೆ, ನೈವೇದ್ಯಕ್ಕೆ ಪಾನಕ ಕೋಸಂಬರಿ, ಊದಿನ ಕಡ್ಡಿ ,ಕರ್ಪೂರ, ಆರತಿಗೆ ಎಣ್ಣೆ ಅಥವಾ ತುಪ್ಪದ ಲ್ಲಿ ನೆನೆಸಿದ ಹೂಬತ್ತಿ ಇಟ್ಟು ಸೊಡಲಾರತಿ. ಸಂಕಲ್ಪ ಮಾಡಿಕೊಂಡು, ಗಣಪತಿಗೆ ಅರಿಶಿನ ಕುಂಕುಮ ಅಕ್ಷತೆ ಕಾಳು ಹಾಕಿ, ವಕ್ರತುಂಡ ಮಹಾಕಾಯ ಸ್ತೋತ್ರ ಹೇಳಿ ಬೆಲ್ಲ ನೈವೇದ್ಯ ಕರ್ಪೂರ ದಾರತಿ ಮಾಡಿ, ನಂತರ ಗೌರಿಗೆ, ಆಸನಂ ಸಮರ್ಪಯಾಮಿ ಎಂದು ಅಕ್ಷತೆ ಹೂವು ಹಾಕಿ ಕೈಮುಗಿದು, ಅಭಿಷೇಕ, (ಹೂವಿನಿಂದ ನೀರು ಪ್ರೊಕ್ಷಣೆ) ಮಾಡಿ, ಶುದ್ಧೋದಕ ಸ್ನಾನ ನಂತರ, ವಸ್ತ್ರ, ಅರಿಶಿನ, ಕುಂಕುಮ, ಹೂ, ಗಂಧ, ಬಳೆ, ಕರಿಮಣಿ, ಅರ್ಪಿಸಬೇಕು. ತದಿಗೆ ಗೌರಿ ಪೂಜೆಗೆ ಮಲ್ಲಿಗೆ,ಸಂಪಿಗೆ,ಜಾಜಿ ಹೂಗಳ ಜೊತೆ  'ಕಣಗಲ ಹೂವು'  ಚೈತ್ರ ಮಾಸದ ತದಿಗೆ ಗೌರಿ ಪೂಜೆಗೆ ಶ್ರೇಷ್ಠ. ನಸು ಹಳದಿ ಬಿಳಿ  ಬಣ್ಣದ ದಳಗಳಿರುವ  ಕಣಗಲ ಹೂವು. ಅಷ್ಟೋತ್ತರ ಹೇಳಿ  ಕುಂಕುಮಾರ್ಚನೆ ಮಾಡಬೇಕು. ಊದಿನ ಕಡ್ಡಿ ಕರ್ಪೂರ, ನೈವೇದ್ಯ, ನಂತರ ಆರತಿ ಮಾಡು ವಾಗ ಒಂದು ನುಡಿ ಯಾದರೂ ಹಾಡು ಹೇಳಿ ಆರತಿ ಮಾಡಬೇಕು. ಪ್ರಾರ್ಥಿಸಿ, ನಮಸ್ಕರಿಸಿದ
ನಂತರ  ಒಬ್ಬ ಮುತ್ತೈದೆ ಕರೆದು, ಅರಿಶಿಣ -ಕುಂಕುಮ ಹೂ ಕೊಟ್ಟು, ವೀಳ್ಯದೆಲೆ ಅಡಿಕೆ, ಹಣ್ಣು ತೆಂಗಿನಕಾಯಿ ದಕ್ಷಿಣೆ ಇಟ್ಟು  ತಟ್ಟೆಯಲ್ಲಿ ಜೋಡಿಸಿ ಬಾಗಿನ ಮತ್ತು ಕೋಸಂಬರಿ, ಪಾನಕ ಕೊಡಬೇಕು. ಮೂರು ತದಿಗೆ ಇದೇ ರೀತಿ ಪೂಜೆ ಮಾಡಬೇಕು. ಸತ್ಸಂಗದವರನ್ನು ಕರೆಸಿ ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ, ಹೇಳಿಸ ಬಹುದು. ಅಕ್ಷಯ ತದಿಗೆಯಂದು, ವಿಶೇಷ  ಪೂಜೆ ಮಾಡಿ, ಗೌರಿಗೆ ಮಡಿಲು ತುಂಬಬೇಕು. 
ತದಿಗೆ ದಿನ, ಅನ್ನ ,ಸಾರು, ಪಲ್ಯ ಪಾಯಸ ಕೋಸಂಬರಿ, ಮಾವಿನ ಕಾಯಿ ಚಿತ್ರಾನ್ನ, ಮಾಡಿ  ದೇವಿ ಮುಂದೆ ಇಟ್ಟು ಕೈಮುಗಿದು ಗೋವಿಗೆ  ಗೋಗ್ರಾಸ ಕೊಟ್ಟರೆ ಒಳ್ಳೆಯದು. ಈ ರೀತಿ ಮಾಡಿದರೆ ಅನ್ನಪೂರ್ಣೇಶ್ವರಿ, ಶಾಖಾಂಬರಿ,  ಪಾರ್ವತಿ, ಲಲಿತಾ  ದೇವಿ ತೃಪ್ತಳಾಗುತ್ತಾಳೆ. 

ಕೆಳಗೆ ಗೌರಿ ಪೂಜೆಯ ಹಾಡು ಬರೆದಿದ್ದೇನೆ. ಇದರಲ್ಲಿ ಸಂಕಲ್ಪ ,ಮಂತ್ರ, ಅಲಂಕಾರ, ಎಲ್ಲವೂ ಬರುತ್ತದೆ. ದೇವರಿಗೆ ಅರಿಶಿನ ಕುಂಕುಮ ವಸ್ತ್ರ, ಹೂವು ಅಲಂಕಾರ ಮಾಡುವಾಗ ಒಂದೊಂದು ನುಡಿಯನ್ನು ಹೇಳಿಕೊಳ್ಳುತ್ತಾ ಗಂಧ ಸಹಿತ ಎಲ್ಲ ವನ್ನು ಏರಿಸಬಹುದು. ಅಥವಾ ಅಲಂಕಾರ ಮುಗಿಸಿ ಒಂದೆಡೆ ಕುಳಿತು  ಈ ಹಾಡು ಹೇಳಿ ಕೊಳ್ಳುತ್ತಾ ಮಾನಸ ಪೂಜೆ ಮಾಡಬಹುದು. ಶಕ್ತಿ ಸ್ವರೂಪಿಣಿ  ಗೌರಿ ಪೂಜೆಯನ್ನು ಈ ಹಾಡಿನ  ಕ್ರಮದಂತೆ  ಮಾಡಿದರೆ, ಸಂಪೂರ್ಣವಾದ  ಪೂಜೆ  ಆಗುತ್ತದೆ. ಮನಸ್ಸಿಗೂ ತೃಪ್ತಿಯಾಗುತ್ತದೆ.

ಲಲಿತಾ ದೇವಿ ಹಾಡು:-  
ಮಂಗಳ ಶ್ಲೋಕ:- ಶ್ರೀ ಗುರುವಿನಡಿಗೆರಗಿ ಗಣಪತಿಗೆ ತಲೆಬಾಗಿ ಶಾರದೆಗೆ ಸೆರೆಗೊಡ್ಡಿ ಬೇಡುತೀಗ, ಸಾಗರಾವೃತ ಭೂಮಿಗಾಧಾರ ಶಕ್ತಿ ಸಂಪನ್ನೆ ದೇವಿಯ ಪೂಜೆ ಮಾಳ್ಪೆನೀಗಾ !! 

ಧ್ಯಾನ:-  ಶ್ರೀ ಲಲಿತ ಶುಭ ಗಾತ್ರ ಸರಸಿ ಜೋಪಮ ನೇತ್ರೆ ಕೋಟಿ ಸೂರ್ಯ ಪ್ರಭೆಯ ದೇವಿ ನೀನು, ಲಾಲಿಸುತಾ ಪೊರೆಯಮ್ಮ ಲೋಕ ಮೂರರ ಮಾತೆ ಎಂದು ಧ್ಯಾನಿಸುತಿರುವೆನೀಗ ನಾನು !! 

ಆವಾಹನ:- ವಿಶ್ವವಂದಿತ  ದೇವಿ ಸಕಲಕಲಾಧಾರೆ ನೀ ನೆಂದು ನಮಿಸುವೆ ನಿನ್ನ ಚರಣ ಯುಗವ, ವಿಶ್ವತೋಮುಖ ರೂಪೇ ಗಾವಾಹನೆಯ ಮಾಳ್ಪ ಧೈರ್ಯವಂ ಕ್ಷಮಿಸೆಂದು ಬೇಡುತಿರುವೆ ! 

ಆಸನ :- ನಿನ್ನ ಸೂತ್ರದೊಳಿಹುದು ಲೋಕ ನಾಟಕವೆಲ್ಲ ನೀನಿರುವೆ ವಿಶ್ವಕಾಧಾರವಾಗಿ, ಸನ್ನುತಂಗಿಯೆ ನಿನಗೆ ಆಸನವನೆಂತಿಡಲಿ  ಪೇಳೆ ಪಾಲಿಪುದೆನ್ನ ಲೋಕಮಾತೆ ! 

ಪಾದ್ಯ :- ಪಂಕಜೋದ್ಭವೆ  ದೇವಿ ವಾಗ್ದೇವಿ ಗಿರಿಜಾತೆ ಪಾಕಶಾಸನವಂದ್ಯ ಪಾದಪದ್ಮೆ , ಬಿಂಕವೆಲ್ಲವ ಬಿಟ್ಟು ಪಾದ್ಯವನ್ನರ್ಪಿಸುವೆ  ಸರ್ವಮಂಗಳೇ ನಿನ್ನ ಚರಣಕೀಗ ! 

ಅರ್ಘ್ಯ:- ಅಭಯ ಹಸ್ತವ ನೀಡು ಕಮಲಾಕ್ಷಿ ದೇವಿ ನೀನುರುತರದ ಪ್ರೇಮದಿಂ ಪೊರೆಯುತೆನ್ನ , ಸಭಯಭಕ್ತಿಯೊಳೀಗಳರ್ಪಿಸುವ ಅರ್ಘ್ಯವಂ
ಸ್ವೀಕರಿಸಿ ಪೊರೆಯಮ್ಮ ಲೋಕಮಾತೆ! 

ಆಚಮನ:- ವಿಮಲ ಗಂಗಾದೇವಿ ಪಾಪನಾಶಕತೇಜೆ  ಸರ್ವಪಾವನರೂಪೇ ಪುಣ್ಯಜನನಿ, ಕಮಲಾಕ್ಷಿ ದೇವಿ ನಾನಾ ಚಮನವನರ್ಪಿಸುವೆ ಪಾಪ ಪುಣ್ಯವ ಮರೆಸಿ ಪೊರೆಯೆ ತಾಯಿ! 

ಸ್ನಾನ:-  ಪಂಚ ತತ್ವದ ದೇಹವಿಂದು ನಿನಗರ್ಪಿಸುವೆ ವಂಚನೆ ಇಲ್ಲದೆ ನಿನ್ನ ಪಾದದೆಡೆಗೆ ಸಂಚಿತ ಪ್ರಾರಬ್ಧ- ವೆಂಬ ಪಂಚಾಮೃತವನಂತರಂಗದ  ಭಾವ ಶುದ್ದಿಯಿಂದ!
ಶುದ್ಧಸತ್ವಳು ನೀನು ಬದ್ಧ ಸತ್ವಳು ನಾನು ಬುದ್ಧಿಹೀನಳ ಸಲಹು 
ಪರಮಮಾತೆ, ಸದ್ಧರ್ಮ ಸಾಮ್ರಾಜ್ಯ ಪದವಿಯೊಳು ನಿಲಿಸೆಂದು ಸ್ನಾನ ಮಾಡಿಸುತಿರುವೆ  ದೇವಿ ನಿನಗೆ ! 

ವಸ್ತ್ರ:- ಜಗದಂಬೆ ಲಲಿತಾಂಬೆ ದೇವದೇವನ ಬೊಂಬೆ 
ಮೂಲೋಕವಾವರಿಸಿದಂಬರಾಖ್ಯೆ,  ಮುಗುಳುನಗೆಯೊಳಗೆನ್ನ 
ವಸ್ತ್ರಸೇವೆಯನೊಪ್ಪಿ ಸೌಭಾಗ್ಯ ಸುಖವಿತ್ತು ಪೊರೆಯ ತಾಯೆ! 

ಕಂಚುಕ:- ಮಾನ ಮರ್ಯಾದೆಗಳ ರೀತಿನೀತಿಗಳೆಲ್ಲ ಮಾನವರ ನಾಟಕದೊಳಂಗವೆಂಬ ಮಾನ ಸೋನ್ನತಿಯಿತ್ತು  ಪೊರೆಯಬೇಕೆಂದೇನುತ ಕಂಚುಕವನರ್ಪಿಸುವೆ ತಾಯಿ ನಿನಗೆ! 

ಮಂಗಳದ್ರವ್ಯ:- ಪರಮ ಮಂಗಳೆ ನೀನು ಶಿವಶಕ್ತಿ ಪರಿಪೂರ್ಣ ಸೌಭಾಗ್ಯ ಸಂಪದ ನೀಡೆನುತಲಿ. 

ಅರಿಶಿನ - ಕುಂಕುಮ:- ಅರಿಶಿಣವ ಕುಂಕುಮವ ನೀಡುತಿಂದು ಪೂಜಿಸುವೆ ದಾರಿದ್ರ್ಯ ನಾಶಿನಿಯೆ ಲೋಕಮಾತೆ. 

ಚಂದ್ರ:- ಸಿಂಧುಸಂಭವೇ ದೇವಿ ಪರಮ ಕರುಣಾ ಸಿಂಧು ಸಿಂಧುಶಯನನ ಪಟ್ಟದರಸಿಯೆಂದು ,ಸಿಂಧೂರವನ್ನಿಡುವೆ ಪಾಪ ಸಿಂಧುವಿನಿಂದಲೆನ್ನ ನೀ ಕೈ ಹಿಡಿದೆತ್ತಿ ಪೊರೆಯೆ ತಾಯೆ! 

ಗಂಧ:- ವಾಸನಾಕ್ಷಯ ರೂಪೇ ಅಪವರ್ಗಸುಖದಾತೆ ಸಚ್ಚಿತ್ಸುಖಾನಂದ ಪೂರ್ಣರೂಪೆ ವಾಸನಾದ್ರವ್ಯವನ್ನಿಡುವೆ ನಿರ್ವಾಸನೆಯ ಸುಖವನ್ನು ಕೊಡು
ಎಂದು ದೇವಿ ನಿನಗೆ! 

ಅಕ್ಷತೆ:- ಅಕ್ಷತೆಯನರ್ಪಿಸುವೆನಂಬುಜಾಕ್ಷಿಯೇ ದೇವಿ ಕಂಜನಾಭನ ರಮಣಿ ಪೂರ್ಣ ಪ್ರಜ್ಞೆ ,ಅಕ್ಷಯದ ಸುಖವಿತ್ತು ಸುಕ್ಷೇಮದಿಂದೆಮ್ಮ ರಕ್ಷಣೆಯ ಮಾಡಮ್ಮ ದೇವಿ ಸುಭಗೆ ! 

ಪುಷ್ಪ:- ಪುಷ್ಪ ದೊಳಗಡಗಿರ್ಪ ಪರಿಮಳದ ಸೌಗಂಧ ಶಕ್ತಿ ರೂಪಳೆ ನಿನಗೆ ವಂದಿಸುತಲಿ ಭಾಷ್ಪಲೋಚನಾಳಾಗಿ ಪ್ರೇಮಪೂರಿತ ಹೃದಯ 
ಪುಷ್ಪವನ್ನರ್ಪಿಸುವೆ ದೇವಿ ನಿನಗೆ ! 

ಧೂಪ :- ಸತ್ಕರ್ಮ ಸದ್ಧರ್ಮ ಸೌಗಂಧಯುಕ್ತದಾ ಶ್ರದ್ಧೆ-  ಭಕ್ತಿಯೊಳಿಟ್ಟ ಮನಸಿನಿಂದ ಸತ್ಕರಿಸಿ ಕೊಡುತಿರುವೆ ಪಾಪ ಪುಣ್ಯವ ನಿನಗೆ 
ಧೂಪರೂಪದೊಳಿಂದು ಪೊರೆಯೆ ತಾಯೆ ! 

ದೀಪ:- ಕೋಟಿ ಸೂರ್ಯ ಪ್ರಭೆಯ  ಚಿಚ್ಛಕ್ತಿರೂಪಿನೀ ಪರಬೊಮ್ಮನಾಧಾರವಲ್ತೆ ದೇವಿ, ಸಾಟಿಯಲ್ಲವು ನಿನಗೆ ನಾನೆಡುವ 
ದೀಪದಾ ಮಂಕು ಬೆಳಕಿದ ನೋಡಿ ನಗುವೆ ತಾಯೆ! 

ನೈವೇದ್ಯ:- ಅನ್ನಪೂರ್ಣ ದೇವಿ ವಾತ್ಸಲ್ಯ ಪರಿಪೂರ್ಣೆ 
ಜೀವಮಾತ್ರರಿಗನ್ನವಿಡುವ ತಾಯೆ, ಅನ್ನವನು ಮುಂದಿಟ್ಟು ಮಗಳೆ ಕೊಂಡೊಯ್ಯುತಿಹ  ನೈವೇದ್ಯ ನಗೆಗೇಡಿದಲ್ತೆ ? ಪೇಳೌ! 

ತಾಂಬೂಲ:- ಸೌಂದರ್ಯ ಗುಣರೂಪೆ ಸತ್ಕಾಮ ಪರಿಪೋಷೆ 
ಸೌಂದರ್ಯದಧಿದೇವಿ ಮದನಮಾತೆ, ಸೌಂದರ್ಯ ಸೌಭಾಗ್ಯ 
ವೃದ್ಧಿಮಾಳ್ಪಾ  ಪಚ್ಚ ಕರ್ಪೂರ ವೀಳ್ಯವನ್ನರ್ಪಿಸುವೆನು! 

ನೀರಾಜನ :- ಪಂಚ ವಿಷಯಗಳಿಂದ ಕೂಡಿದಿಂದ್ರಿಯಚಯವ 
ನುರಿಸುತ್ತಲಿಂದು  ಜ್ಞಾನಾಗ್ನಿಯೋಳಗೆ, ಪಂಚಾರತಿಯ ಮಾಡಿ 
ಬೇಡಿಕೊಂಬುವೆ ದೇವಿ ಭವತಾಪಪರಿಹಾರೆ ಭಕ್ತವರದೆ!
ಪುಷ್ಪಾಂಜಲಿ:- ಜನ್ಮಜನ್ಮಾಂತರದಿ ನಾಗೈದ  ಪಾಪ ಸಂಚಯವೆಲ್ಲ
ನಿನ್ನಡಿಯೊಳಿಡುತಲೀಗ,  ಜನ್ಮಮರಣದ  ನಾಶಗೈವ ನಿನ್ನುಡಿಯಲ್ಲಿ ಅರ್ಪಿಸುವೆ ಪುಷ್ಪದಂಜಲಿಯ ನಾನು! 

ಪ್ರದಕ್ಷಿಣೆ:- ಎಲ್ಲ ಕಡೆಯಲಿ ನೀನೇ ಎಡದಿ ಬಲದಿ ನೀನೆ ನಿನ್ನ ಸುತ್ತಲು ತಿರುಗಲೆಂತಟಹುದು, ಎಲ್ಲ ರೂಪದ ನಿನ್ನ ಸುತ್ತ ಮರೆಯದೆ ನಾನು ನನ್ನ ಸುತ್ತಲೂ ತಿರುಗುತಿಹೆನು! 

ನಮಸ್ಕಾರ:- ಜ್ಞಾನರೂಪಳೆ ಜಯತು ಜಯತು ಜ್ಞಾನಬೋಧೆ  ಭಕ್ತವತ್ಸಲೆ ದೇವಿ ಜಯತು ಜಯತು, ಜ್ಞಾನಕರ್ಮವು ಭಕ್ತಿಯೆಂಬ ದಾರಿಗಳೊಳಗೆ ನೈಜ ಜ್ಞಾನವನೀಡು ತಾಯಿ ಜಯತು! 

ನಾನು ಏನನು ಅರಿಯೆ ನೀನು ಎಲ್ಲವನರಿವೆ ನಾನು ನನ್ನದಿದೆಂಬ ಭಾವ ಮರೆಸಿ ನೀನೀಗಲೆನ್ನ ನಿನ್ನಡಿಯಲ್ಲಿ ಹಾಕಿಕೊಂಡಭಿಮಾನ ಬಿಡುವಂತೆ ಮಾಡು ತಾಯೆ! 

ಜಯತು ಕರುಣಾಸಾಂದ್ರೆ ಜಯತು ಮಂಗಳ ರೂಪೆ ಜಯತು ಜಯ ಮಹದಾದಿ ಮಾಯೆ ಜಯತು ಜಯತು ದೇವರ ದೇವಿ ಶ್ರೀ ಚಿದಂಬರ ರೂಪೇ ನೀಡು ನೀನೆನಗೀಗ ಸಕಲ ಸುಖವ! 

ಉಪಸಂಹಾರ:- ತಪ್ಪು ನೆಪ್ಪುಗಳೆಲ್ಲ ಕಾಪಾಡು ತಾಯಿ ನೀ
ಕ್ಷಮಿಸುತೆನ್ನಪರಾಧ ಸಂಚಯವನು, ತಪ್ಪು ಮಾಡದ ಬುದ್ಧಿ- ಪಾಲಿಸುತ್ತಲಿ ಎನ್ನ ಪೊರೆ ಕರುಣದಾ ಮಾತೆ ದಾತೆ! 

ಕಪ್ಪಿಟ್ಟದ್ದು:-
ಕಪ್ಪು ದುಃಖವು ಸುಖವಿದೆಂಬ ಭಾವವು ಕಪ್ಪು ಜನ್ಮ ಜನ್ಮಾಂತರದ ಪಾಪ ಕಪ್ಪು , ಕಪ್ಪು ಬಾಲ್ಯದ ಬ್ರಾಂತಿ ಯೌವ್ವನದ ಸುಖದಿಚ್ಚೆಯಿಂದ ಕೂಡಿದ 
ಮನವದದುವೆ ಕಪ್ಪು!
ಕಪ್ಪೆ ಚಿಪ್ಪನು ಬೆಳ್ಳಿ ಎಂದು ತಿಳಿವುದೇ ಕಪ್ಪು, ಕತ್ತಲೆಯು ಬೆಳಕೆಂಬ ಭ್ರಾಂತಿ ಕಪ್ಪು ಕಪ್ಪು ಹಗ್ಗದೊಳಿರ್ಪ ಸರ್ಪ ರಾಜನ ಭ್ರಾಂತಿ  ಜಗದಿ ದೇವನ ಕಾಣದಿಹುದೆ ಕಪ್ಪು! 
ಹರಿಯು, ಹರನೆಂತೆಂಬ ಭೇದ ಭಾವದಿ ಲೋಕಕೀಶದೇವನ ಮರೆವುದದುವೆ 
ಕಪ್ಪು ಗುರುದೇವನಂಘ್ರಿ ಪಂಕಜದ ಭಜನೆಯ ಮರೆತು ವಾದ ಮಾಡುವ ಬುದ್ಧಿಯದುವೆ  ಕಪ್ಪು!
ನೀರಿನಿಂದಲೇ ಬೇರೆಯಾಗಿ ತೋರುವ ಗುಳ್ಳೆ ರೂಪಬೇಧದಿ ನಿಜವ ಮರೆಸುವಂತೆ  ತೋರಿ ಭ್ರಾಂತಿಯನೀವ  ಜಗವೆ ನೀನೆಂತೆಂಬ ನಿಜವ ಮರೆಸುವುದದುವೆ  ದೊಡ್ಡ ಕಪ್ಪು!
ಕಪ್ಪುದೊಂದೆ ಜಗದಿ ನಾಟ್ಯವಾಡುತ  ನರನ ಕೋತಿಯಂದದಿ ಕುಣಿಸುತಲಿರುತಲಿಹುದು, ಕಪ್ಪು ಕಣ್ಣನು ಮುಚ್ಚುತೆನ್ನ ಮನವನು ಶತ್ರು ದುರ್ಗ ಮಧ್ಯದಿ  ಬಂಧಿಸಿಹುದು ತಾಯೆ! 

ಇಂತು ತೋರುತಲೆನ್ನ ಮನವ ಮೋಹಿಪ ಕಪ್ಪಿನೊಳಗೆ ಬೆರೆಸುತಲೀಗ ಜ್ಞಾನರಸವ ,ಸಂತಸದಿ ಕಾಡಿಗೆಯ ಮಾಡಿ ನಾನರ್ಪಿಸುವೆ 
ಕಂಜಲೊಚನೆ ನಿನ್ನ ನೇತ್ರಯುಗಕೆ!! 

ಪ್ರಸಾದ ಕೇಳುವುದು:- ಪ್ರೇಮ ಪುಷ್ಪವ ನೀಡು ಜಗದಂಬೆ ಎನಗೀಗ
ಅಕ್ಷಯದ ಸೌಖ್ಯವನ್ನು ಬೇಡುತಿಹೆನು ನೇಮದೊಳು ನಿನ್ನಲ್ಲಿ ಖಂಡವಿಲ್ಲದ ಭಕ್ತಿ ವೈರಾಗ ವಿಷಯದೊಳು ಪುಟ್ಟಿಸಮ್ಮ! 

ಆರೋಗ್ಯವೈಶ್ವರ್ಯದಧಿಕಾರ ಸಂಪತ್ತು ಪಾಪ ಪುಣ್ಯ ವಿಚಾರ
ಬುದ್ಧಿ - ಯೊಡನೆ ನಾರಾಯಣಾಂಘ್ರಿ ಪದ್ಮದೊಳಿಟ್ಟ ಮನವ 
ನೀನಿಂದು ಕರುಣಿಸುತೆನ್ನ ಪತಿಯ ಪೊರೆಯೆ! 

ಪತಿಯ ಪುತ್ರರನೆಲ್ಲ ನಿನ್ನ ರೂಪದಿ ಕಂಡು ನಾನು ನನ್ನದಿದೆಂಬ ಭಾವ 
ಮರೆದು  ನುತಿಸಿ ನಿನ್ನಡಿಗಳನು ಪೂಜಿಸುವ ಪರಮಾರ್ಥ ಬೋಧೆಯನು ಪಡೆವಂತೆ ಹರಸು  ತಾಯಿ ! 

ಈಗಿರುವ ಜನ್ಮದೊಳಗನುಭವಿಪ ಸುಖ ದುಃಖ ಭಾವದೊಳಗಡಗಿರ್ಪ ಚಂಚಲತೆಯ ನೀಗಿ ನಿನ್ನಡಿಯೊಳೆನ್ನನರ್ಪಿಪ ಪರಮ ಶಾಂತಿ ಮೋಕ್ಷದ
ಪದವ ನೀಡು ತಾಯೆ! 

ಆರತಿ ಹಾಡು:- ಜಯ ಸಚ್ಚಿತ್ಸುಖರೊಪೇ   ಪರಬ್ರಹ್ಮಸರಸಿ
ಜಯ ಜಗನ್ಮಯ ದೇವಿ ಜಗದಾದಿ ಮಾಯೆ !ಪ ! 

ನಿನ್ನ ಲೀಲೆ ಯೊಳಡಗಿಹುದೀ ಬ್ರಹ್ಮಾಂಡ
ನಿನ್ನ ಚೈತನ್ಯದೊಳಂಶ ಈ ಪಿಂಡ 
ನಿನ್ನ ಹೊರತು ಮತ್ತಿನ್ನೇನನು ಅರಿಯೆ
ಸನ್ನುತಾಂಗಿಯೇ ಕೃಪೆ ಮಾಡಮ್ಮ ತಾಯೆ !೧! 

ಮೂರು ಮೂರ್ತಿಯ ಶಕ್ತಿಯೊಡನೆ ನೀ ಕೂಡಿ
ಮೂರು ಗುಣಗಳಿಂದಲೇ ಜಗವ ಮಾಡಿ
ಮೂರು ಮೂರಾಗಿ ಮತ್ತೇಣಿಕೆಯಿಲ್ಲದ ರೀತಿ
ಪಾರವಿಲ್ಲದ ನಾಮರೂಪಭೇದದಿ ಮೆರೆವೆ ! ೨! 

ಜಯತು ದೇವರ ದೇವಿ ಜಯತು ಮಂಗಳ ರೂಪೆ
ಜಯತು ಸರ್ವಾಧಾರೆ ಲಲಿತಾಂಬೆ ಜಯತು
ಜಯತು ಮೋಹನ ಮೂರ್ತಿ ಜಯತು ಕರುಣಾಸಾಂದ್ರೆ
ಜಯತು ಶ್ರೀ ಚಿದಂಬರ ಸದ್ಗುರು ರೂಪೆ !೩!
***
 

ಹಿಂದೂ ಪಂಚಾಂಗ ದ ಪ್ರಕಾರ ತದಿಗೆ (3ನೇ ದಿನ ತಿಥಿ ಎಂದರ್ಥ)
ಈ ಹಬ್ಬವನ್ನು ತಾಯಿ ಗೌರಿ ಅಥವಾ ದೇವಿ ಪಾರ್ವತಿ ಮುಖ್ಯವಾಗಿ ಸ್ತ್ರೀ ದೈವಿಕ ಶಕ್ತಿಗೆ  ಸಮರ್ಪಿಸಲಾಗಿದೆ.ಈ ವ್ರತವನ್ನು ''#ಸೌಭಾಗ್ಯ #ಗೌರಿ ವ್ರತ "ಎಂದೂ ಕರೆಯಲಾಗುತ್ತದೆ. ಜನರು ತಮ್ಮ ಸಂಪ್ರದಾಯ ಮತ್ತು ಪ್ರದೇಶಗಳ ಪ್ರಕಾರ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ.
ಉಗಾದಿ ಚೈತ್ರ ಮಾಸದ ಮೊದಲ ದಿನದಂದು #ಪಾಡ್ಯ (ಮೊದಲ ದಿನ - ಯುಗಾದಿ) ಎರಡನೆಯದಿನ (ವರ್ಷ- ತೊಡಕು) ಮೂರನೆಯ ದಿನ -ತೃತೀಯಾ ಅದುವೇ '" ತದಿಗೆ''. ಅಂದಿನ ದಿನ ತದಿಗೆ ಗೌರಿ ಯನ್ನು ಸ್ಥಾಪಿಸಿ .ಅಕ್ಷಯ ತೃತೀಯ ವರೆಗೂ ಇರಿಸಲಾಗುವುದು .

ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು ಮೇಲೆ ಸ್ಥಾಪಿಸಿ ಜೊತೆಗೆ ಎರಡುಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )
                            

ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿಭಕ್ಷ್ಯಗಳು,ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು.
**********


ತದಿಗೆ ಗೌರಿ ಪೂಜೆಯೂ  ಚೈತ್ರ ಶುದ್ಧ  ತೃತೀಯ, ಚೈತ್ರ ಶುದ್ಧ   ಬಹುಳ ಹಾಗು ವೈಶಾಖ  ಶುದ್ಧ  ತೃತೀಯ  ದಂದು ಆಚರಣೆ ಮಾಡುವರು .  ತಾರೀಖುಗಳು  ಆ ಆ  ಪ್ರಾಂತ್ಯದ ಪಂಚಾಂಗವನ್ನು ಆಧರಿಸಿ ಆಚರಣೆ ಮಾಡಬೇಕು. ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು  ಮೇಲೆ ಸ್ಥಾಪಿಸಿ ಜೊತೆಗೆ ಎರಡು ಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )

ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು .
****

ಗೌರಿ ತೃತೀಯ 


ಚೈತ್ರಮಾಸದ ಶುದ್ಧ ತೃತೀಯ, ಸೌಮಾಂಗಲ್ಯಭಿವೃದ್ಧಿಗಾಗಿ ಮಹಾರುದ್ರದೇವರ ಪತ್ನಿಯಾದ ಶ್ರೀ ಪಾರ್ವತಿ ಅಥವಾ ಗೌರಿದೇವಿಯನ್ನು ಆರಾಧಿಸುವ ಸುಧಿನ. ಪರಮೇಶ್ವರನ ಸಹಿತವಾಗಿ ಗೌರಿಯನ್ನು ಪೂಜಿಸಬೇಕು.  ಈ ವ್ರತಮಾಡುವುದರಿಂದ ವಿವಾಹಭಾಗ್ಯ ಮತ್ತು ಸೌಮಾಂಗಾಲ್ಯಾಭಿವೃದ್ದಿ ವಿಶೇಷವಾಗಿ ಆಗುತ್ತದೆ ಎಂಬ ನಂಬಿಕೆ ಇದೆ.
****
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು.

Haldi Packet

Kumkum Packet
Gejje vastra
Hoovu Bathi
Adike – Betel Nuts
Jaggery
Sugar
Rice
All dals
Salt
Silk or any other texture Saree
Blouse Piece
Bangles
Small Mirror, Comb
Kobbari Battilu
Rava
Tamarind

೧. ಅರಿಸಿನ: ಗೌರಿದೇವೀ.
೨. ಕುಂಕುಮ:ಮಹಾಲಕ್ಷ್ಮೀ
೩. ಸಿಂಧೂರ: ಸರಸ್ವತೀ
೪. ಕನ್ನಡಿ: ರೂಪಲಕ್ಷ್ಮೀ.
೫. ಬಾಚಣಿಗೆ:ಶೃಂಗಾರಲಕ್ಷ್ಮೀ.
೬. ಕಾಡಿಗೆ:ಲಜ್ಜಾಲಕ್ಷ್ಮೀ.
೭. ಅಕ್ಕಿ:ಶ್ರೀ ಲಕ್ಷ್ಮೀ.
೮. ತೊಗರಿಬೇಳೆ :ವರಲಕ್ಷ್ಮೀ
೯. ಉದ್ದಿನಬೇಳೆ:ಸಿದ್ದಲಕ್ಷ್ಮೀ
೧೦ ತೆಂಗಿನಕಾಯಿ:ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ:ಧನಲಕ್ಷ್ಮೀ
೧೨. ಅಡಿಕೆ:ಇಷ್ಟಲಕ್ಷ್ಮೀ
೧೩. ಫಲ(ಹಣ್ಣು): ಜ್ಞಾನಲಕ್ಷ್ಮೀ
೧೪. ಬೆಲ್ಲ:ರಸಲಕ್ಷ್ಮೀ
೧೫. ವಸ್ತ್ರ:ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ: ವಿದ್ಯಾಲಕ್ಷ್ಮೀ
*******

ದಾನಗಳು ಮತ್ತು ಫಲಗಳು

೧. ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ:
ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) :
ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ :
ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ :
ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ :
ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ :
ಇಷ್ಟಾರ್ಥಸಿದ್ಧಿಯಾಗುತ್ತದೆ.. ,
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ :
ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ :
ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ :
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.
ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) :
ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..
ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. "ವಸ್ತ್ರಲಕ್ಷ್ಮೀ" :
ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. "ಹೆಸರುಬೇಳೆ" : ವಿದ್ಯಾಲಕ್ಷ್ಮೀ -
ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ.
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌
Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..

***

No comments:

Post a Comment