SEARCH HERE

Thursday 8 April 2021

ಚರಕ ಸಂಹಿತ charaka samhita ayurvedist


 
Charaka was one of the principal contributors to Ayurveda, a system of medicine and lifestyle developed in Ancient India. He is known for authoring the medical treatise, the Charaka Samhita. Charaka was resident of Kapisthal, located between Iravati and Chandrabagha rivers in Panchanada

ಧರ್ಮ  ಲಹರಿ 
ಈ ಕರ್ಮಸಿದ್ಧಾಂತ ಒಂದರ ಮೇಲೆಯೇ ಇಡೀ ಜನ್ಮಜನ್ಮಾಂತರದ ಪ್ರಕ್ರಿಯೆಗಳು ಮತ್ತು ಎಲ್ಲ ಪ್ರಾಣಿ ಸಂಬಂಧಿ ಪ್ರಕ್ರಿಯೆಗಳು ನಡೆದುಕೊಂಡು ಹೋಗುತ್ತದೆ. ಇದನ್ನು ಬಿಟ್ಟು ಬೇರೆ ಯಾವುದೇ ಸಿದ್ಧಾಂತದ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಸರಿಯೇ?

ಈ ಶ್ಲೋಕ ಚರಕನದ್ದೇ ಆದರೂ ಅವನು ಹೇಳಿದ ಓಘ ಬೇರೆ. ಈ ರೀತಿ ಅರ್ಥ ಬರುವುದಿಲ್ಲ. ತಂತ್ರವಿಲ್ಲದೇ ಇದ್ದರೆ ಶಸ್ತ್ರಚಿಕಿತ್ಸೆ ಇತ್ಯಾದಿ ಇರುವ ಶಲ್ಯತಂತ್ರವನ್ನು ಬರೆಯುತ್ತಲೇ ಇರಲಿಲ್ಲ. ಅಂದರೆ ಈ ರೀತಿಯ ಚಿಕಿತ್ಸಾ ಪ್ರಕ್ರಿಯೆಗಳನ್ನೂ ತಂತ್ರಗಳೆಂದು ಕರೆದಿದ್ದಾನೆ. ಮನುಷ್ಯನು ಸಹಜವಾಗಿ ಬದುಕುವುದನ್ನು ಕಲಿತರೆ ಈ ರೀತಿಯ ತಂತ್ರಗಳ ಅಗತ್ಯತೆ ಇಲ್ಲ ಎಂಬ ಓಘದಲ್ಲಿ ಹೇಳಲಾಗಿದೆ. ಅದು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯಂತೆ ಇದೆ. ಆ ರೀತಿ ಆಗದೆ ಇದ್ದ ಸಂದರ್ಭದಲ್ಲಿ ಈ ಕರ್ಮಗಳ ಅಗತ್ಯತೆ ಬರುತ್ತದೆ ಎಂದನು. ದೇಹದಲ್ಲಿ ಒಂದು ಅಂಗ ಕ್ಷೀಣವಾದರೆ ದೇಹ ಉಳಿಸುವುದಕ್ಕಾಗಿ ತಂತ್ರ ಪ್ರಯೋಗಿಸಿಯಾದರೂ ಆ ಅಂಗವನ್ನು ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ. ಅಂದರೆ ಸುಮ್‍ಸುಮ್ನೆ ಆಪರೇಶನ್ ಮಾಡಬಾರದು. ಆಪರೇಶನ್ ಮಾಡುವಂತಹಾ ಅನಿವಾರ್ಯತೆ ಬರದ ಹಾಗೆ ಬದುಕಿದರೆ ಆಪರೇಶನ್ ಅಂತಹ ಅಪಾಯಕಾರೀ ತಂತ್ರಗಳ ಬಳಕೆ ಬೇಡ ಎಂದನು. ಆ ಕಾಲದಲ್ಲೇ ಶಲ್ಯತಂತ್ರವನ್ನು ಸಾರ್ವಜನಿಕ ಬಳಕೆಗೆ ತಂದವನು ಚರಕ. ಅವನು ತಯಾರಿಸಿ ನಮೂದಿಸಿರುವ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಬಿಟ್ಟು ಒಂದೇ ಒಂದು ಹೊಸ ಪರಿಕರವನ್ನು ಆಧುನಿಕರು ಕಂಡುಹಿಡಿದಿಲ್ಲ. ಎಲ್ಲವೂ ಆತನ ಪರಿಕರ ಮಾಧರಿಗಳನ್ನು ಅಭ್ಯಸಿಸಿ ಅರ್ಥೈಸಿದ್ದಾಗಿದೆ. 

ಚರಕನು ಜನ್ಮಾಂತರ ಪ್ರಾಪ್ತಿಯನ್ನು ೩ ಶಬ್ದಗಳಲ್ಲಿ ವಿವರಿಸಿದ್ದಾನೆ: ಕರ್ಮ: ಕಾಯಾ, ವಾಚಾ, ಮನಸಾ. ಅವುಗಳ ಬದ್ಧತೆ. ಇದನ್ನು ದೈವ ಎಂದು ಸಂಬೋಧಿಸಲಾಗಿದೆ. ಏಕೆಂದರೆ ಜನ್ಮಾಂತರದಲ್ಲಿ ಇವುಗಳಿಗೆ ಕಾರಕತ್ವ ಬರುತ್ತದೆ. ಇವುಗಳ ಸಂಪೂರ್ಣವಾದ ಪ್ರಭಾವದಿಂದಲೇ ಜೀವನ ಪ್ರಕ್ರಿಯೆ, ರೋಗಗಳಿಗೂ ಕಾರಣವಾಗುತ್ತದೆ ಎನ್ನಲಾಗಿದೆ. ಈ ದೈವವನ್ನು ಎದುರಿಸಲು ಪುರುಷಸ್ಕರ ಎಂಬ ಚಿಕಿತ್ಸಾ ವಿಭಾಗ, ಅದರೊಂದಿಗೆ ಕರ್ಮಸಿದ್ಧಾಂತ, ತಂತ್ರ ಎಲ್ಲ ಬರುತ್ತದೆ. ಈ ದೇಹಾಂತರ ಪ್ರಾಪ್ತಿ ಆಗಬೇಕಾದರೆ ಈ ಆತ್ಮನನ್ನು ಶರೀರದಿಂದ ಭಿನ್ನವಾಗಿ ನೋಡಬೇಕಾಗುತ್ತದೆ ಎಂಬಂತಹಾ ಪರಿಸ್ಥಿತಿ ಬರುತ್ತದೆ. ಅದು ಸೂಕ್ಷ್ಮ ಶರೀರ ರೂಪದಲ್ಲಿ ಹೊರ ಹೋಗುತ್ತದೆ. ಅದನ್ನು ತೆಗೆದುಕೊಂಡು ಹೋಗಲು ಕಾರಕವಾದದ್ದು ಮನಸ್ಸು. ಮನಸ್ಸು, ಹಿಂದಿನ ಜನ್ಮದಿಂದ ಮಾಡಿರತಕ್ಕಂತಹಾ ಕರ್ಮಸಂಬಂಧವಾದ ದೈವ ರೂಪವಾದದ್ದು, ಆತ್ಮ ಮತ್ತು ಸೂಕ್ಷ್ಮ ರೂಪವಾದ ೪ ಭೂತಗಳನ್ನು ಮಾತ್ರ ಹೇಳುತ್ತಾನೆ. ಅದರಲ್ಲಿ ಆಕಾಶ ತತ್ವವಿಲ್ಲ. 

ಆಕಾಶವು ಯಾವುದೇ ಕಲ್ಪನೆಗೆ ಸಿಕ್ಕದ್ದೆಂದು ಆ ಕಾಲದಲ್ಲೇ ಬಹಳ ಸ್ಪಷ್ಟತೆ ಇತ್ತು. ಈಗ ಮಾತ್ರ ಬಹಳವಾಗಿ ಬರೆದು ಬಿಟ್ಟಿದ್ದಾರೆ. ಈಗ ಯಾರಿಗೂ ಗೊತ್ತಿಲ್ಲ, ಏನು ಹೇಳಿದರೂ ನಡೆಯುತ್ತದೆ ಎಂಬ ಢಂಬತನ ತಾಂಡವವಾಡುತ್ತಿದೆ. ಆಕಾಶವು ಸರ್ವವ್ಯಾಪಕವಲ್ಲವೇ ಎಂದು ಪ್ರಶ್ನಿಸಬಹುದು. ಆದರೆ ಆಕಾಶದ ಕಲ್ಪನೆಯು ಅಪ್ರಬುದ್ಧವೆಂದು ಆಗಿನ ಕಾಲದ ಜಿಜ್ಞಾಸುಗಳಿಗೆ ಸ್ಪಷ್ಟವಿತ್ತು. ಆಕಾಶದ ಕಲ್ಪನೆಯು ಪ್ರಬುದ್ಧವಾಗಬೇಕಾದರೆ ಈ ಬ್ರಹ್ಮನ ಕಾಲವು ಮುಗಿಯಬೇಕು. ಈಗಿನ ಹಿರಣ್ಯಗರ್ಭ ಬ್ರಹ್ಮನಿಗೆ ನಾಲ್ಕೇ ತಲೆ. ಐದನೇಯದು ಗೊತ್ತು ಎಂದು ಮತ್ತೊಂದು ತಲೆ ಇಟ್ಟುಕೊಂಡಾಗ ಅದನ್ನು ಈಶ್ವರ ಕತ್ತರಿಸಿದ. ಐದನೆಯ ತಲೆಯ ಬ್ರಹ್ಮ ಬರಬೇಕು, ಆಗ ಐದನೆಯ ಭೂತವು ಪ್ರಕಟವಾಗುತ್ತದೆ. ಅಲ್ಲಿಯವರೆಗೂ ಪೂರ್ಣ ಪ್ರಕಟ ಆಗುವುದೇ ಇಲ್ಲ. ಅದೇ ಸತ್ಯ. ಇದರ ಕಲ್ಪನೆಯು ಚರಕನ ಕಾಲದವರಿಗೆ ಇತ್ತು. ನಂತರದಲ್ಲಿ ಏನೇನೋ ವ್ಯಾಖ್ಯಾನ ಮಾಡಿದ್ದಾರೆ. 

ದೇಹಾಂತರ ಕರ್ಮಪ್ರಾಪ್ತಿಯ ಬಗ್ಗೆ ಹಲವು ಸಿದ್ಧಾಂತಗಳಿವೆ. ಚರಕರು ಕಪಿಲರ ಮತವನ್ನು ಮಂಡಿಸಿದಂತೆ ಕಂಡುಬರುತ್ತದೆ. ಅಲ್ಲಿ ಆತ್ಮ ಪ್ರತ್ಯೇಕವಾಗಿರುತ್ತದೆ. ಅದನ್ನು ಮನಸ್ಸು ಆವರಿಸಿರುತ್ತದೆ. ಅದು ಆ ಜನ್ಮದಲ್ಲಿ ವ್ಯವಹರಿಸಿದಂತಹಾ ಪಾಪ-ಪುಣ್ಯಗಳನ್ನು ಶೇಷ ಸಹಿತವಾಗಿ ಇನ್ನೊಂದು ಜನ್ಮಕ್ಕೆ ಹೋಗುತ್ತದೆ ಎಂದರು. ಬೇರೆ ಬೇರೆ ಆತ್ಮ ಸಿದ್ಧಾಂತಗಳಲ್ಲೂ ಇದರ ಹತ್ತಿರದ ಓಘದಲ್ಲಿಯೇ ಹೇಳಲಾಗಿದೆ. ವೈದಿಕದಲ್ಲೂ ಇದ್ದಕ್ಕೆ ಹತ್ತಿರವಿದ್ದಾಗ್ಯೂ ಇದಕ್ಕಿಂತ ಹೆಚ್ಚು ಸ್ಪಷ್ಟತೆ ಸಿಗುತ್ತದೆ. ಚರಕರ ರೀತಿ ಆತ್ಮವು ಕರ್ಮವನ್ನು ಕೊಂಡು ಹೋದರೆ ಇಲ್ಲಿ ಏನೂ ಉಳಿಯುವುದಿಲ್ಲ! ಹಾಗಿದ್ದಾಗ ಪಿತೃಶ್ರಾದ್ಧ ಮಾಡುವುದು ಬೇಡವೆಂದಾಗುತ್ತದೆ. ಆದರೆ ವೈದಿಕದಲ್ಲಿ ಹಾಗೆ ಹೇಳುವುದಿಲ್ಲ. ಆತ್ಮಕ್ಕೆ ಉಂಟಾದ ತಾಪಗಳು ೩ ರೀತಿ ಇರುತ್ತದೆ- ಭೌತಿಕ, ದೈವಿಕ ಮತ್ತು ಆತ್ಮಿಕ. ಅದು ಆ ತಾಪಗಳನ್ನು ಆಧರಿಸಿ ತೆಗೆದುಕೊಂಡು ಹೋಗುತ್ತದೆ. ಆದರೆ ಅದರ ದೈವೀಕತೆ ಇಲ್ಲೇ ಉಳಿಯುತ್ತದೆ. ಅದಕ್ಕೆ ಉತ್ತರಕ್ರಿಯಾದಿಗಳನ್ನು ಮಾಡಿಕೊಂಡು ಆ ದೈವಿಕವನ್ನು ನಾವು ಪಿತೃಗಳ ರೂಪದಲ್ಲಿ ಪೋಷಿಸಿಕೊಂಡು ಬರುವುದು. ಅದಕ್ಕಾಗಿಯೇ ಅಂಗುಷ್ಠ ಪ್ರಮಾಣದ ದೇಹ ಸೃಷ್ಟಿ ಮಾಡಿಕೊಳ್ಳುವುದು. ಅದು ಹೋಗುವುದಿಲ್ಲ, ಅದು ಅವರ ವಂಶದಲ್ಲಿ ಹಾಗೇ ಉಳಿದಿರುತ್ತದೆ. ಮೂರನೇ ತಲೆಮಾರಾದ ಮೇಲೆ ಬಿಟ್ಟು ಹೋಗುತ್ತದೆ. ಆತ್ಮದ ದೈವಿಕ ಸಂಪರ್ಕವು ತಪ್ಪುವುದಿಲ್ಲ ಎಂದು ವೈದಿಕಶಾಸ್ತ್ರ ಹೇಳುತ್ತದೆ. ಭೌತಿಕವಾಗಿ ಜೀವನ ಮಾಡಿದಾಗ ಏನು ಪಾಪ-ಸಂಚಯನ ಮಾಡಿದೆಯೊ ಅದನ್ನು ತೆಗೆದುಕೊಂಡು ಆತ್ಮವು ಬೇರೆ ಕಡೆ ಹೊರಟು ಹೋಗುತ್ತದೆ. ಹೀಗೆ ಕರ್ಮವು ಆತ್ಮದೊಂದಿಗೆ ಹೋಗಿ ದೇಹಾಂತರ ಪ್ರಾಪ್ತಿ ಪಡೆಯುತ್ತದೆ. ಆದರೆ ತಂದೆ(ಪಿತೃ) ಎನ್ನುವ ದೈವಿಕ ಭಾಗವು ವಂಶದಲ್ಲೇ ಇರುತ್ತದೆ. ಹಾಗಾಗಿ ಪಿತೃ ಭಾಗ ಉಳಿಸಿಕೊಂಡು, ಪ್ರೇತ ಭಾಗವನ್ನು ಕಳುಹಿಸಿಕೊಡಲಾಗುತ್ತದೆ. ಪ್ರೇತ ಎಂದರೆ ಪ್ರತ್ಯೇಕಿಸಲ್ಪಟ್ಟದ್ದು ಎಂದರ್ಥ. ವೈದಿಕದಲ್ಲಿ ಸೂಕ್ಷ್ಮಶರೀರ ಎಂದರೆ ಔರ್ಧ್ವದೈಹಿಕ ಕ್ರಿಯಾಕರ್ಮಕ್ಕಾಗಿ ತಂದೆಗೊಂದು ದೇಹವನ್ನು ಸೃಷ್ಟಿ ಮಾಡಿಕೊಡುವುದು, ಅದು ಪ್ರೇತವಲ್ಲ. ಅದರ ಭೌತಿಕತೆ ಏನಿರುವುದೋ ಅದು ಆತ್ಮದ ಜೊತೆಯಲ್ಲಿ ಸೇರಿ ಪ್ರೇತವಾಗಿ ಹೊರಟು ಹೋಗುತ್ತದೆ. 


No comments:

Post a Comment