SEARCH HERE

Tuesday 1 January 2019

ಗಕಾರ ಗಣಪತಿ ಅಷ್ಟೋತ್ತರ gakara ganapati ashtottara


ಗಕಾರರೂಪೋ ಗಂಬೀಜೋ ಗಣೇಶೋ ಗಣವಂದಿತಃ |
ಗಣನೀಯೋ ಗಣೋಗಣ್ಯೋ ಗಣನಾತೀತ ಸದ್ಗುಣಃ || 1 ||
ಗಗನಾದಿಕಸೃದ್ಗಂಗಾಸುತೋಗಂಗಾಸುತಾರ್ಚಿತಃ |
ಗಂಗಾಧರಪ್ರೀತಿಕರೋಗವೀಶೇಡ್ಯೋಗದಾಪಹಃ || 2 ||
ಗದಾಧರನುತೋ ಗದ್ಯಪದ್ಯಾತ್ಮಕಕವಿತ್ವದಃ |
ಗಜಾಸ್ಯೋ ಗಜಲಕ್ಷ್ಮೀವಾನ್ ಗಜವಾಜಿರಥಪ್ರದಃ || 3 ||
ಗಂಜಾನಿರತ ಶಿಕ್ಷಾಕೃದ್ಗಣಿತಙ್ಞೋ ಗಣೋತ್ತಮಃ |
ಗಂಡದಾನಾಂಚಿತೋಗಂತಾ ಗಂಡೋಪಲ ಸಮಾಕೃತಿಃ || 4 ||
ಗಗನ ವ್ಯಾಪಕೋ ಗಮ್ಯೋ ಗಮಾನಾದಿ ವಿವರ್ಜಿತಃ |
ಗಂಡದೋಷಹರೋ ಗಂಡ ಭ್ರಮದ್ಭ್ರಮರ ಕುಂಡಲಃ || 5 ||
ಗತಾಗತಙ್ಞೋ ಗತಿದೋ ಗತಮೃತ್ಯುರ್ಗತೋದ್ಭವಃ |
ಗಂಧಪ್ರಿಯೋ ಗಂಧವಾಹೋ ಗಂಧಸಿಂಧುರಬೃಂದಗಃ || 6 ||
ಗಂಧಾದಿ ಪೂಜಿತೋ ಗವ್ಯಭೋಕ್ತಾ ಗರ್ಗಾದಿ ಸನ್ನುತಃ |
ಗರಿಷ್ಠೋಗರಭಿದ್ಗರ್ವಹರೋ ಗರಳಿಭೂಷಣಃ || 7 ||
ಗವಿಷ್ಠೋಗರ್ಜಿತಾರಾವೋ ಗಭೀರಹೃದಯೋ ಗದೀ |
ಗಲತ್ಕುಷ್ಠಹರೋ ಗರ್ಭಪ್ರದೋ ಗರ್ಭಾರ್ಭರಕ್ಷಕಃ || 8 ||
ಗರ್ಭಾಧಾರೋ ಗರ್ಭವಾಸಿ ಶಿಶುಙ್ಞಾನ ಪ್ರದಾಯಕಃ |
ಗರುತ್ಮತ್ತುಲ್ಯಜವನೋ ಗರುಡಧ್ವಜವಂದಿತಃ || 9 ||
ಗಯೇಡಿತೋ ಗಯಾಶ್ರಾದ್ಧಫಲದಶ್ಚ ಗಯಾಕೃತಿಃ |
ಗದಾಧರಾವತಾರೀಚ ಗಂಧರ್ವನಗರಾರ್ಚಿತಃ || 10 ||
ಗಂಧರ್ವಗಾನಸಂತುಷ್ಟೋ ಗರುಡಾಗ್ರಜವಂದಿತಃ |
ಗಣರಾತ್ರ ಸಮಾರಾಧ್ಯೋ ಗರ್ಹಣಸ್ತುತಿ ಸಾಮ್ಯಧೀಃ || 11 ||
ಗರ್ತಾಭನಾಭಿರ್ಗವ್ಯೂತಿಃ ದೀರ್ಘತುಂಡೋ ಗಭಸ್ತಿಮಾನ್ |
ಗರ್ಹಿತಾಚಾರ ದೂರಶ್ಚ ಗರುಡೋಪಲಭೂಷಿತಃ || 12 ||
ಗಜಾರಿ ವಿಕ್ರಮೋ ಗಂಧಮೂಷವಾಜೀ ಗತಶ್ರಮಃ |
ಗವೇಷಣೀಯೋ ಗಮನೋ ಗಹನಸ್ಥ ಮುನಿಸ್ತುತಃ || 13 ||
ಗವಯಚ್ಛಿದ್ಗಂಡಕಭಿದ್ಗಹ್ವರಾಪಥವಾರಣಃ |
ಗಜದಂತಾಯುಧೋ ಗರ್ಜದ್ರಿಪುಘ್ನೋ ಗಜಕರ್ಣಿಕಃ || 14 ||
ಗಜಚರ್ಮಾಮಯಚ್ಛೇತ್ತಾ ಗಣಾಧ್ಯಕ್ಷೋಗಣಾರ್ಚಿತಃ |
ಗಣಿಕಾನರ್ತನಪ್ರೀತೋಗಚ್ಛನ್ ಗಂಧಫಲೀ ಪ್ರಿಯಃ || 15 ||
ಗಂಧಕಾದಿ ರಸಾಧೀಶೋ ಗಣಕಾನಂದದಾಯಕಃ |
ಗರಭಾದಿಜನುರ್ಹರ್ತಾ ಗಂಡಕೀಗಾಹನೋತ್ಸುಕಃ || 16 ||
ಗಂಡೂಷೀಕೃತವಾರಾಶಿಃ ಗರಿಮಾಲಘಿಮಾದಿದಃ |
ಗವಾಕ್ಷವತ್ಸೌಧವಾಸೀಗರ್ಭಿತೋ ಗರ್ಭಿಣೀನುತಃ || 17 ||
ಗಂಧಮಾದನಶೈಲಾಭೋ ಗಂಡಭೇರುಂಡವಿಕ್ರಮಃ |
ಗದಿತೋ ಗದ್ಗದಾರಾವ ಸಂಸ್ತುತೋ ಗಹ್ವರೀಪತಿಃ || 18 ||
ಗಜೇಶಾಯ ಗರೀಯಸೇ ಗದ್ಯೇಡ್ಯೋಗತಭೀರ್ಗದಿತಾಗಮಃ |
ಗರ್ಹಣೀಯ ಗುಣಾಭಾವೋ ಗಂಗಾದಿಕ ಶುಚಿಪ್ರದಃ || 19 ||
ಗಣನಾತೀತ ವಿದ್ಯಾಶ್ರೀ ಬಲಾಯುಷ್ಯಾದಿದಾಯಕಃ |
ಏವಂ ಶ್ರೀಗಣನಾಥಸ್ಯ ನಾಮ್ನಾಮಷ್ಟೋತ್ತರಂ ಶತಮ್ || 20 ||
ಪಠನಾಚ್ಛ್ರವಣಾತ್ ಪುಂಸಾಂ ಶ್ರೇಯಃ ಪ್ರೇಮಪ್ರದಾಯಕಮ್ |
ಪೂಜಾಂತೇ ಯಃ ಪಠೇನ್ನಿತ್ಯಂ ಪ್ರೀತಸ್ಸನ್ ತಸ್ಯವಿಘ್ನರಾಟ್ || 21 ||
ಯಂ ಯಂ ಕಾಮಯತೇ ಕಾಮಂ ತಂ ತಂ ಶೀಘ್ರಂ ಪ್ರಯಚ್ಛತಿ |
ದೂರ್ವಯಾಭ್ಯರ್ಚಯನ್ ದೇವಮೇಕವಿಂಶತಿವಾಸರಾನ್ || 22 ||
ಏಕವಿಂಶತಿವಾರಂ ಯೋ ನಿತ್ಯಂ ಸ್ತೋತ್ರಂ ಪಠೇದ್ಯದಿ |
ತಸ್ಯ ಪ್ರಸನ್ನೋ ವಿಘ್ನೇಶಸ್ಸರ್ವಾನ್ ಕಾಮಾನ್ ಪ್ರಯಚ್ಛತಿ || 23 ||
|| ಇತಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಸ್ತೋತ್ರಮ್ ||
*****

ಶ್ರೀ ಗಕಾರ ಗಣಪತಿ ಅಷ್ಟೋತ್ತರದ ಮಹತ್ವಗಳು..”
https://chat.whatsapp.com/9iSIhgNdl43Ano6gdm2gEa

ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಮಯ ಸಂಧರ್ಭಗಳು ತುಂಬಾ ತೊಂದರೆ ಕೊಡುತ್ತವೆ.. ತಮ್ಮ ಕೆಲಸಗಳು ಯಾವುದೂ ನಡೆಯುವುದಿಲ್ಲ , ಎಲ್ಲಾ ಕಡೆಯೂ ನಷ್ಟ, ಅವಮಾನಗಳೇ ಜಾಸ್ತಿಯಾಗಿರುತ್ತವೆ.. ಇಂತಹ ಸಂಧರ್ಭದಲ್ಲಿ ಮನುಷ್ಯ ದೇವರ ಮೊರೆಹೋಗುತ್ತಾನೆ..

ಇಂತಹ ಸಂದರ್ಭಗಳಲ್ಲಿ ” ಶ್ರೀ ವಿನಾಯಕ”ನನ್ನು ಪೂಜಿಸಿ “ಗಕಾರ ಗಣಪತಿ” ಅಷ್ಟೋತ್ತರ ಓದಿದರೆ ಸಕಲ ಕಷ್ಟಗಳೂ ಗಣಪತಿ ದೇವರ ದಯೆಯಿಂದ ನಿವಾರಣೆಯಾಗಿ, ಶುಭವಾಗುತ್ತದೆ..
“ಶ್ರೀ ಗಣಪತಿ ಅಷ್ಟೋತ್ತರದಲ್ಲಿ ಬಹಳ ತರಹ ಇದೆ.. ಅದರಲ್ಲಿ ” ಗಕಾರ ಗಣಪತಿ ಅಷ್ಟೋತ್ತರ ಬಲು ವಿಶೇಷವಾದುದು ಮತ್ತು ಶಕ್ತಿಯುತವಾದುದು..”!

ಇದನ್ನು ಯಾರು ಬೇಕಾದರೂ ಪೂಜಾಕಾಲದಲ್ಲಿ ಓದಬಹುದು..

“ಶ್ರೀ ಗಕಾರ ಗಣಪತಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು..”!

” ಶ್ರೀ ಗಕಾರ ಗಣಪತಿ ” ಅಷ್ಟೋತ್ತರವನ್ನು

ಭಾನುವಾರ ಓದಿದರೆ “ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುತ್ತದೆ..”!

ಸೋಮವಾರ ಓದಿದರೆ ಮಾನಸಿಕ ನೆಮ್ಮದಿ ದೊರೆತು ನೆಮ್ಮದಿಯಿಂದ ಇರುತ್ತಾರೆ..
ಜೀವನದಲ್ಲಿನ ಜಿಗುಪ್ಸೆ ದೂರವಾಗುತ್ತದೆ..

ಮಂಗಳವಾರ ಓದಿದರೆ ” ಗೃಹಕಲಹ”, ದಾಂಪತ್ಯ ಕಲಹ, ಅನುಮಾನಗಳು ನಿವಾರಣೆಯಾಗುತ್ತದೆ..

ಬುಧವಾರ ಓದಿದರೆ “ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ, ವಿದ್ಯಾಭ್ಯಾಸದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ..

ಗುರುವಾರ ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನಡೆಯುತ್ತವೆ.., ಶುಭ ಕಾರ್ಯಗಳು ನಡೆಯುತ್ತವೆ..

ಶುಕ್ರವಾರ ಓದಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಮನೆಯು ಅಭಿವೃದ್ಧಿಯಾಗುತ್ತದೆ..

ಶನಿವಾರ ಓದಿದರೆ ಸಮಸ್ತ ಸಾಲದ ಬಾಧೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಬರಬೇಕಾದ ಹಣ ಬಹಳ ಬೇಗ ಬರುವುದು..

ವಿದ್ಯಾರ್ಥಿಗಳು ಓದಿ, ಜಪಮಾಡಿದರೆ ಬಹಳ ವಿದ್ಯಾವಂತರಾಗುತ್ತಾರೆ, ಉತ್ತಮವಾದ ಯಶಸ್ಸು ದೊರೆಯುತ್ತದೆ..

ಸಂತಾನವಿಲ್ಲದವರು ಓದಿದರೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ..

“ವಿವಾಹಪೇಕ್ಷೆ” ಇದ್ದವರು ಓದಿದರೆ ವಿವಾಹವಾಗಿ ಜೀವನ ಚೆನ್ನಾಗಿರುತ್ತದೆ..
*****


No comments:

Post a Comment