SEARCH HERE

Tuesday 1 January 2019

ಧನುರ್ಮಾಸ ಮಹಾತ್ಮೆ ಹುಗ್ಗಿ ರಂಗೋಲಿ dhanurmasa mahatme huggi rangoli ಆದಿ ರಂಗ ಮಧ್ಯರಂಗ ಅಂತ್ಯರಂಗ visit ranganatha



ಧನುರ್ಮಾಸ ರಂಗೋಲಿ 

Q: Sir, why do most of the people go to temple during Margazhi month and what is its importance? 

Ans: The Earth has North Pole and South Pole and is revolving around the Sun. 

While the Earth is revolving around the Sun, the North Pole will be towards the Sun for six months which is called as Uttarayana, and the South Pole will be towards the Sun for six months which is called as Dakshinayana. 

Uttarayana period is from 14th January to 17th July. And Dakshinayana period is from 18th July to 13th January. 

From the middle of June to middle of July is the peak time in Uttarayana. This is called as Ashada (Aadi) month. 

During this month, Sun reaches its most northerly declination of -23.5 degrees. In other words, when the South Pole is tilted furthest – 23.5 degrees – away from the Sun.

From the middle of December to middle of January is the peak time in Dakshinayana. This is called as Dhanur(Margazhi) month. 

During this month, Sun reaches its most southerly declination of -23.5 degrees. In other words, when the North Pole is tilted furthest – 23.5 degrees – away from the Sun.

As the human body has evolved from the Earth, it also has North Pole and South Pole. The Sahasrara (Thuriya) is the North Pole and the Mooladhar is the South Pole. 

Whatever changes happen in the earth will happen in our body too. 

So, if you want to raise the energy from Mooladhar to Sahasrara, you will get Nature's support as well during Ashada(Aadi) month. 

If you want to balance your energy at Mooladhar, you will get Nature's support during Dhanur (Margazhi) month. 

How much ever the peak you have reached, it's important to be balance. 

So, people go to temple during Margazhi month to gain the balance physically, mentally, financially, socially and spirituality.

***

ಧನುರ್ಮಾಸ


ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿಯ) "ಧನುರ್ಮಾಸ" ಎಂದು ಕರೆಯುತ್ತಾರೆ. ಈ ಮಾಸದಲ್ಲಿ ವಿಶೇಷವಾಗಿ ಚಳಿಚಳಿ ಇರುತ್ತದೆ

ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಹೆಸರು. 

ಧನುರ್ಮಾಸದಲ್ಲಿ ಯಾರು ಬ್ರಾಹ್ಮೀ ಮುಹುರ್ತದಲ್ಲಿ ಎದ್ದು ವಿಷ್ಣವಿನೊಡನೆ ಲಕ್ಷ್ಮೀಯನ್ನು ಪೂಜಿಸಿ ಹುಗ್ಗಿಅನ್ನವನ್ನು ನೈವೆದ್ಯ ಮಾಡುತ್ತಾರೋ ವಿಷೇಶ ಫಲ ಪ್ರಾಪ್ತಿಯಾಗುತ್ತದೆ..‌‌

ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ. ಒಮ್ಮೆ ಇಂದ್ರ ದೇವರು ರಾಜ್ಯ ಭ್ರಷ್ಟರಾದಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು, ಅದರ ಫಲವಾಗಿ ಇಂದ್ರ ದೇವರಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ.

ಧನುರ್ಮಾಸ ಪುಣ್ಯ ಪೂರ್ಣ ಮಾಸ; ಪರ್ವಪ್ರವರ ಪ್ರತಿಷ್ಠಿತ ಮಾಸ...... ಧನುರ್ಮಾಸದಲ್ಲಿ ಧನು ಮಂಡಲದ ರಂಗೋಲಿಯನ್ನು ಹಾಕುತ್ತೇವೆ

ದಾರಿದ್ರ್ಯ ಖಂಡಿತಾ ದೂರವಾಗುತ್ತೆ..‌.. ಲಕ್ಷೀ ದ್ವಾದಶ ನಾಮ ಚಿತ್ರ ಹಾಕಿದ್ದೇನೆ.. ದಿನಾಲೂ ಹೇಳಿ

ಹುಗ್ಗಿ ಮಾಡುವ ವಿಧಾನ ,... ಒಂದು ಲೋಟ ಅಕ್ಕಿಗೆ ಅಷ್ಟೇ ಪ್ರಮಾಣದ ಹೆಸರು ಬೇಳೆ ಕೂಡಿಸಿ ತೊಳೆದು ತುಪ್ಪದ ಒಗ್ಗರಣೆಯಲ್ಲಿ ಜೀರಿಗೆ , ಮೆಣಸು , ಒಣಖೊಬ್ಬರೆ ಚಕ್ಕೆ ಎಲ್ಲವನ್ನೂ ಕುಟ್ಟಿ ಪುಡಿಮಾಡಿ ಜೊತೆಗೆ ಇಂಗು ಒಗ್ಗರಣೆ ಯಲ್ಲಿ ಹಾಕಿ ಕರಿಬೇವು ಒಣಮೆಣಸಿನಕಾಯಿ ಹಾಕಿ ತೊಳೆದು ಇಟ್ಟುಕೊಂಡು ಅಕ್ಕಿ ಬೇಳೆಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ ತಕ್ಕಷ್ಟು ಉಪ್ಪು ನೀರು ಹಾಕಿ ಅನ್ನದ ರೀತಿಯಲ್ಲಿ ಬೇಯಿಸಿ , ಇದನ್ನ ಡೈರೆಕ್ಟಾಗೆ ಮಾಡಿ ,ಇಲ್ಲ ಕುಕ್ಕರಿನಲ್ಲಿ ಮಾಡಿ ನಿಮ್ಮ ಅನಕೂಲ..‌‌..‌... ಅದರ ಜೊತೆ ಹಣಸೆಹಣ್ಣು ಬೆಲ್ಲದ ಗೊಜ್ಜು ಒಳ್ಳೆಯದು..
***********
ಚೈತ್ರ, ವೈಶಾಖವೇ ಮೊದಲಾದ ಹನ್ನೆರಡು ಮಾಸಗಳಲ್ಲಿ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ವೈಶಿಷ್ಟ್ಯ ಇದೆ. 

ಹಿಂದು ಪಂಚಾಂಗದ ಹನ್ನೆರಡು ಮಾಸಗಳಲ್ಲಿ ಧನುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣನು ಕೂಡ ಭಗವದ್ಗೀತೆಯಲ್ಲಿ ‘ಮಾಸಾನಾಂ ಮಾರ್ಗಶೀಷೋಸ್ಮಿ’ ಎಂದಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳ ಅವಧಿ ಬೇಕಾಗುತ್ತದೆ. ಅಂತೆಯೇ ಧನುರಾಶಿಯನ್ನು ಪ್ರವೇಶಿಸಿ ಮಕರರಾಶಿಗೆ ಬರಲು ಒಂದು ತಿಂಗಳು ಬೇಕು. ಸೂರ್ಯನು ಧನುರಾಶಿಯಲ್ಲಿರುವ ಈ ಒಂದು ತಿಂಗಳ ಅವಧಿಯನ್ನೇ ‘ಧನುರ್ವಸ’ ಎಂದು ಕರೆಯಲಾಗುತ್ತದೆ.

ಈ ಮಾಸದ ಅವಧಿಯಲ್ಲಿ ಪ್ರತಿದಿನ ಬೆಳಗಿನ ಜಾವ ಮಹಾವಿಷ್ಣು ಪೂಜೆ, ಹುಗ್ಗಿಯ ನೈವೇದ್ಯ ಮಾಡುವ ಸಂಪ್ರದಾಯವಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಜತೆಗೆ ಮಹಾಲಕ್ಷ್ಮೀ ಯನ್ನು ಪೂಜಿಸಿದರೆ ಧನಸಮೃದ್ಧಿ ಉಂಟಾಗುವುದೆಂಬ ನಂಬಿಕೆ ಇದೆ. ಸ್ವರ್ಗಭ್ರಷ್ಟನಾದ ಇಂದ್ರನ ಪರವಾಗಿ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಲಕ್ಷಿ್ಮಯನ್ನು ಸ್ತುತಿಸಿದ್ದರಿಂದ ಇಂದ್ರನು ಮರಳಿ ಸ್ವರ್ಗಾಧಿಪತ್ಯವನ್ನು ಪಡೆದನೆಂಬ ಪುರಾಣಕಥೆಯೂ ಇದೆ.

ಪಾಂಚರಾತ್ರಾಗಮ, ಅಗ್ನಿಪುರಾಣ ಮತ್ತು ಸ್ಮೃತಿಮುಕ್ತಾವಳಿಗಳಲ್ಲಿ ಧನುರ್ಮಾಸ ಮಹಾತ್ಮೆಯನ್ನು ಹೇಳಲಾಗಿದೆ. ಪಾಂಚರಾತ್ರಾಗಮದಲ್ಲಿ ಧನುರ್ವಸದ ಮಹಾತ್ಮೆಯನ್ನು ನಾಲ್ಕು ಅಧ್ಯಾಯಗಳಲ್ಲಿ ಹಂಸ ಮತ್ತು ಚತುಮುಖ ಬ್ರಹ್ಮನ ಮಧ್ಯದ ಸಂವಾದದ ಮೂಲಕ ಹೇಳಲಾಗಿದೆ. ಮೊದಲ ಅಧ್ಯಾಯದಲ್ಲಿ ಸೂತಮಹರ್ಷಿಗಳು ಧನುರ್ವಸದ ಮಹತ್ವವನ್ನು ವಿವರಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ಭಕ್ತ ನಡೆದುಕೊಳ್ಳಬೇಕಾದ ರೀತಿನೀತಿಗಳಿವೆ.


ನಾಲ್ಕನೇ ಅಧ್ಯಾಯದಲ್ಲಿ ವಿಪ್ರರಿಗೆ ಭೋಜನ ನೀಡಿ ಸತ್ಕರಿಸುವ ಬಗ್ಗೆ ವಿವರಣೆಯಿದೆ. ಇನ್ನು ಮಹಾಭಾರತವನ್ನು ಅವಲೋಕಿಸಿದಾಗ ಒಮ್ಮೆ ಪಾಂಡವರು ಯಜ್ಞವನ್ನು ಮಾಡುವ ಕಾಲಕ್ಕೆ ವಿಪ್ರನೊಬ್ಬ ಅನ್ನಾರ್ಥಿಯಾಗಿ ಬರುತ್ತಾನೆ. ಸ್ವಯಂಪಾಕ ಮಾಡಿಕೊಳ್ಳುವ ದೀಕ್ಷೆ ಪಡೆದ ವಿಪ್ರನನ್ನು ಉದ್ದೇಶಿಸಿ ಧರ್ಮರಾಯ, ‘ಇಲ್ಲಿ ನೀವೇ ಅಡುಗೆ ಮಾಡಿಕೊಳ್ಳಲು ಸ್ಥಳವಿಲ್ಲ. ಹಾಗಾಗಿ ದ್ರೌಪದಿ ಅಡುಗೆ ಮಾಡುತ್ತಾಳೆ. ಭೀಮ ಬಡಿಸುತ್ತಾನೆ. ನಾನು ಆಪೋಶನ ಹಾಕುತ್ತೇನೆ. ನೀವು ನಿಸ್ಸಂಕೋಚವಾಗಿ ಊಟ ಮಾಡಬಹುದು’ ಎಂದು ನಿವೇದಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಭಗವಾನ್ ಕೃಷ್ಣ ಅಲ್ಲಿಗೆ ಬರುತ್ತಾನೆ. ಕೃಷ್ಣ, ‘ಅನ್ಯಾಯವಾಗಿ ವಿಪ್ರನ ವ್ರತ ನಿಯಮ ಮುರಿಯಬೇಡ. ಅವನಿಗೆ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶ ಮಾಡಿಕೊಡು’ ಎನ್ನುತ್ತಾನೆ. ಕೃಷ್ಣನ ಮಾತಿನಂತೆಯೇ ವಿಪ್ರನಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಅವನ ಜೊತೆ ಉಳಿದವರೂ ಭೋಜನ ಮಾಡುತ್ತಾರೆ. ಬೇರೆಲ್ಲ ಎಂಜಲ ಎಲೆಗಳನ್ನು ತೆಗೆದ ಧರ್ಮರಾಯ ವಿಪ್ರನ ಎಲೆಯನ್ನು ತೆಗೆಯಲು ಮರೆಯುತ್ತಾನೆ. ಕೃಷ್ಣ ನಸುನಕ್ಕು ಅದೊಂದು ಎಲೆಯನ್ನೇಕೆ ಬಿಟ್ಟೆ ಎಂದು ವ್ಯಂಗ್ಯವಾಡುತ್ತಾನೆ. ಕೃಷ್ಣನ ಮಾತಿನಿಂದ ಸಂಕೋಚಕ್ಕೆ ಈಡಾದ ಧರ್ಮರಾಯ ಎಲೆ ತೆಗೆಯಲು ಪ್ರಯತ್ನಿಸಿದಷ್ಟು ಹೊಸ ಎಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆ ಕಾಲ ಧನುರ್ವಸವಾಗಿರುತ್ತದೆ. ಹಾಗೆಂದೇ ಧನುರ್ವಸದಲ್ಲಿ ದೇವರಿಗೆ ನಿವೇದನೆ ಮಾಡಿ, ವಿಪ್ರರಿಗೆ ದಾನ ಮಾಡುವ ಪದ್ಧತಿ ಜಾರಿಗೆ ಬಂದಿತೆನ್ನುತ್ತಾರೆ.

ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ಆ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ. ಪುರಾಣಗಳ ಪ್ರಕಾರ, ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿ ಶ್ರೀಹರಿಯನ್ನು ಪೂಜಿಸುತ್ತಾಳೆ. ಅದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಮತ್ತೆ ಇಂದ್ರ ಪದವಿ ಪಡೆದುಕೊಂಡದ್ದು ಇದೇ ಧನುರ್ವಸದಲ್ಲಿ.


ಧನುರ್ವಸದಲ್ಲಿ ಉಷಃಕಾಲದಲ್ಲಿ ವಿಷ್ಣುಪೂಜೆ ಮಾಡದವನು ಏಳು ಜನ್ಮಗಳಲ್ಲಿ ಬಡವನೂ, ಮೂಢನೂ, ಕ್ಷಯರೋಗಿಯೂ ಆಗುವನು. ಆದುದರಿಂದ ಮಹಾಪುಣ್ಯಕರವಾದ ಧನುರ್ಮಾಸದಲ್ಲಿ ಪ್ರಾತಃಕಾಲದಲ್ಲಿ ಪರಮಾತ್ಮನನ್ನು ಪೂಜಿಸತಕ್ಕದ್ದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಮ್ಮ ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಎರಡು ಭಾಗಗಳನ್ನಾಗಿ ಮಾಡಿದ್ದೇವೆ. ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಬೆಳಗ್ಗೆ-ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ, ರಾತ್ರಿ ಮುಗಿಯುತ್ತಿರುವ ಸಮಯ. ನಾವು ಯಾವ ಸಮಯವನ್ನು ಬ್ರಾಹ್ಮಿಮುಹೂರ್ತವೆಂದು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ, ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ.


ಧನುರ್ವಸದಲ್ಲಿ ವಿಶೇಷವಾಗಿ ಪರಮಾತ್ಮನನ್ನು ಹುಗ್ಗಿ ಸಮರ್ಪಣೆ ಮಾಡಿ ಪೂಜಿಸುವುದರಿಂದ ವಿಶೇಷ ಫಲವಿದೆ ಎಂದು ಪುರಾಣಗಳು ಸಾರಿ ಹೇಳುತ್ತಿವೆ. ಆಗ್ನೇಯ ಪುರಾಣದಲ್ಲಿ; ಧನುರಾಶಿಯಲ್ಲಿ ಸೂರ್ಯನಿರುವಾಗ ಶ್ರೀಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆ ಮಾಡಿದ ಫಲವನ್ನು ಪಡೆಯುವನು ಎಂದಿದೆ. ಧನುರ್ವಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸುವುದರಿಂದ ಶ್ರೀಹರಿಯು ಸಂಪ್ರೀತನಾಗುವನು. ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಚಳಿಗಾಲದಲ್ಲಿ ದೇಹ ಎಣ್ಣೆ ಅಂಶ ಕಳೆದುಕೊಳ್ಳುವುದರಿಂದ ತುಪ್ಪವು ಅದನ್ನು ದೇಹಕ್ಕೆ ಒದಗಿಸುವುದು, ಮೆಣಸು, ಜೀರಿಗೆ ಇದು ಶೀತ ತಡೆಯುವುದು, ಕಫ, ವಾಂತಿ ಪಿತ್ತ ನಿವಾರಿಸಿ ದೇಹಕ್ಕೆ ಉಷ್ಣವನ್ನು ನೀಡುವುದು ಹಾಗೂ ಹಸಿ ಶುಂಠಿ ಜೀರ್ಣಕ್ರಿಯೆಗೆ ಶ್ರೇಷ್ಠವಾದುದು. ಇನ್ನು ಈ ಕಾಲದ ಧನುರ್ವ್ಯತೀಪಾತಯೋಗವು ಸಹಸ್ರ ಅಧೋದಯಕ್ಕೆ ಸಮಾನ. ಈ ದಿನ ಶ್ರಾದ್ಧ, ಪಿತೃತರ್ಪಣ ನೀಡಬೇಕು. ನೈವೇದ್ಯ ಮಾಡಿ ಭಗವಂತನಿಗೆ ಅರ್ಘ್ಯವನ್ನು ನೀಡಬೇಕು.

ಈ ಆಚರಣೆಯಲ್ಲಿ ಪಾರಮಾರ್ಥಿಕತೆ, ವೈಜ್ಞಾನಿಕತೆ, ಭಾವನಾತ್ಮಕ ಸಂಬಂಧವೆಲ್ಲ ಕೂಡಿಕೊಂಡು ಒಳ್ಳೆಯದನ್ನೇ ನೀಡುತ್ತದೆ. ದೇವರನ್ನು ಧ್ಯಾನಿಸಲು, ಪೂಜಿಸಲು ಧನುರ್ಮಾಸ ಅತಿ ಶ್ರೇಷ್ಠವಾದುದಾಗಿದೆ.

**********

ಮರಗಟ್ಟುವ ವಾತಾವರಣದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ ಇವು ಮಾರ್ಘಶಿರ ಮಾಸದ ಆಚರಣೆಯ ಸ್ಥೂಲ ಚಿತ್ರಣ.

ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೇ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಸಹ ಮಾಸಾನಾಮ್ ಮಾರ್ಗಶೀರ್ಷಃ ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ವರ್ಣಿಸಿದ್ದಾನೆ.

ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ವೇದ, ಆಗಮಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆಯಾದರೂ, ವಿವಾಹವೇ ಮೊದಲಾದ ಶುಭ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಇದು ಅತ್ಯಂತ ಶ್ರೇಷ್ಠವಾದ ಮಾಸ ಅಲ್ಲ. ಕೇವಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಈ ಮಾಸವನ್ನು ಮೀಸಲಿರಿಸಲಾಗಿದೆ ಆದ್ದರಿಂದ ಇದನ್ನು ಶೂನ್ಯ ಮಾಸ ಎಂದೂ ಹೇಳಲಾಗುತ್ತದೆ.

ಧನುರ್ಮಾಸದಲ್ಲಿಯೇ ಏಕೆ ಪೂಜೆಗಳಿಗೆ ವಿಶೇಷ ಫಲ? ಶುಭಕಾರ್ಯಗಳಿಗೆ ಶ್ರೇಶ್ಠವಲ್ಲ?

ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.

ಈ ಮಾಸದಲ್ಲಿ ಅವತಾರ ಪುರುಷರಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳಿವೆ. ಈ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ. ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ. ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪಾವಾಸವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ (ಸಫಲಾ) ಎಂದೂ ಕರೆಯುತ್ತಾರೆ, ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

***********

ಧನುರ್ಮಾಸ
 16.12.2020ರಿಂದ ಪ್ರಾರಂಭವಾಗಿದೆ.

ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಸಾಮಾನ್ಯವಾಗಿ ಒಂದು ತಿಂಗಳು.  . ಡಿಸೆಂಬರ್‌ 16/17ರಂದು ಸೂರ್ಯನು "ಧನು"ರಾಶಿಯನ್ನು  ಪ್ರವೇಶಿಸಿದ್ದು "ಮಕರ"  ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' ಎಂದು ಕರೆಯುತ್ತಾರೆ. ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. 

ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ಎದ್ದು, ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ಸೂಕ್ತಂ    ಪಠಣ ಮಾಡಲಾಗುತ್ತದೆ.   ಶ್ರೀ ಮನ್ ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಲಕ್ಷ್ಮಿ ದ್ವಾದಶಿ ನಾಮವನ್ನು ಪಾರಾಯಣ ಮಾಡುತ್ತಾರೆ.

ಧನುರ್ಮಾಸ ಆಚರಣೆಯಿಂದ ಪ್ರಾಪ್ತಿ : 

ದಧ್ಯಾರ್ದಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ಜ್ವಲಮ್ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯ: ಸಮರ್ಪಯೇತ್|
ದೃಷ್ಟ್ವಾ ತಚ್ಚುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲ: |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರ: |
ಧನುರ್ಮಾಸದಲ್ಲಿನ ಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಪಾತ್ರ ವಾದುದು,  ಇದರಿಂದ ಶತ್ರುಗಳು ನಶಿಸುವರು, ದೀರ್ಘಾಯಸ್ಸು ಪಡೆಯುವರು. ಧನಧಾನ್ಯ ಸಂಪತ್ತು ಭರಿತವಾಗುವುದು. ವೇದಶಾಸ್ತ್ರಾಭ್ಯಾಸ, ಎಲ್ಲಕ್ಕೂ ಸಾಧನವಾಗಿದೆ.  ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿಜನ್ಮದಲ್ಲೂ ವೈಷ್ಣವನಾಗಿಯೇ   ಜನಿಸುವ ಮಹಾಭಾಗ್ಯ.

ಧನುರ್ಮಾಸ ಪೂಜೆ ಮುದ್ಗಾನ್ನ (ಹುಗ್ಗಿ) ನೈವೇದ್ಯವನ್ನು ಸೂರ್ಯೋದಯಕ್ಕಿಂತ 96 ನಿಮಿಷ ಮುನ್ನವೇ ಮಾಡುವುದು ಶ್ರೇಷ್ಠ.

ಮುದ್ಗಾನ್ನ -. ಹುಗ್ಗಿಯನ್ನು ಅಕ್ಕಿ, ಹೆಸರುಬೇಳೆ, ಗೋಡಂಬಿ, ಶುಂಠಿ, ಮೆಣಸು, ಒಣ ಕೊಬ್ಬರಿ, ಅರಿಶಿನ ಮತ್ತು ಬೆಣ್ಣೆಯಿಂದ ತಯಾರಿಸುತ್ತಾರೆ.  ಹುಗ್ಗಿಯ ಜೊತೆಗೆ ಗೊಜ್ಜು ಮಾಡುತ್ತಾರೆ

  Mudganna is made up of Rice, Moong dall (hesaru bELe or green gram),  Godambi,  jinger, Pepper, and butter, dry coconut, turmeric,  etc.

ಧನುರ್ಮಾಸ ಕರ್ತವ್ಯಗಳು :.  
Chaapamaasa – means dhanurmaasa – We have to get up early in the morning. Do the pooja of Srihari.  Do the samarpana of Mudgaannna.    During Saadhana dwaadashi, we are minimizing other paaraayana, bhajana, etc.  Similarly during Dhanurmasa, we must restrict special paarayana to ensure that dhanurmaasa pooja is done in time.

ಧನುರ್ಮಾಸದಲ್ಲಿ ಭೋಜನ ಕೂಡ ಸೂರ್ಯೋದಯಕ್ಕಿಂತ ಮುನ್ನವೇ ಮಾಡಬೇಕೆ ?   -. ಇಲ್ಲ.   ಶ್ರೀ ಹರಿಗೆ ನೈವೇದ್ಯ ಮಾತ್ರ ಸೂರ್ಯೋದಯ ಮುನ್ನ ಮಾಡಬೇಕು.  ಎಂದೂ ಸೂರ್ಯೋದಯ ಮುನ್ನ ಭೋಜನ ಮಾಡಬಾರದು.

*ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು.

*ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.

ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು.

ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು, ಪಾರಾಯಣವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ.

ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು.  ಈ ರೀತಿ ಮಾಸ ಪೂರ್ತಿ ಮಾಡಬೇಕು.  ಒಂದು ದಿನ ಮಾಡಿ ಮಾಡಿ ಸುಮ್ಮನಾಗಬಾರದು.
********

ಶ್ರೀಂ ಶ್ರೀ ಕಂ ಕಪಿಲಾಯ ನಮಃ

 ಧನುರ್ಮಾಸದ ಆರಂಭ, ಪರಮಾತ್ಮ ಆಷಾಢಮಾಸದಲ್ಲಿ ನಿದ್ರೆ ಮಾಡಿದವನಂತೆ ನಟಿಸಿ, ಕಾರ್ತೀಕ ಮಾಸದಲ್ಲಿ ಎದ್ದೇಳುತ್ತಾನೆ. ಆವಾಗನಿಂತ ಎಲ್ಲಾ ದೇವತೆಗಳೂ ಸಹ ತಮ್ಮ ತಮ್ಮ ಕಾರ್ಯಗಳನ್ನು ಆರಂಭಮಾಡಿದರು , ಹಾಗೆಯೆ ಧನುರ್ಮಾಸದಲ್ಲಿ ದೇವತೆಗಳು ಪರಮಾತ್ಮನನ್ನು ಭಕ್ತಿಯಿಂದ ಪೂಜಿಸಿ ಹುಗ್ಗಿಯನ್ನು ಸಮರ್ಪಣೆ ಮಾಡಿ ಪರಮಾತ್ಮನ ಅನುಗ್ರಹ ಪಡೆದರು ಎಂದು ಶಾಸ್ತ್ರ.. ಈ ಧನುರ್ಮಾಸದಲ್ಲಿ ವಿಶೇಷ ಸೇವೆ, ಪಾರಾಯಣ ಇತ್ಯಾದಿಗಳನ್ನು ಪರಮಾತ್ಮ ನಮ್ಮಿಂದ ಮಾಡಿಸಲಿ ಎಂದು ಬೇಡಿಕೊಳ್ಳೋಣ.. 

ಮತ್ತೆ... 

ವಂದಾರು ಕಲ್ವತರವೇ ವಾದಿ ಕೈರವ ಭಾನವೇ/
ಶ್ರೀರಾಮಚಂದ್ರಗುರವೇ ನಮಃ ಕಾರುಣ್ಯಸಿಂಧವೇ//

ಶ್ರೀಮದ್ವ್ಯಾಸರಾಜ ಮಠದ 16ನೇ ಶತಮಾನದ  ಪರಮಶ್ರೇಷ್ಠ ಯತಿಗಳೂ, ಶ್ರೀ ವಿಜಯೀಂದ್ರತೀರ್ಥರ ವಿದ್ಯಾ ಶಿಷ್ಯರು, ಶ್ರೀ  ಶ್ರೀಪತಿತೀರ್ಥರಿಂದ ಆಶ್ರಮ ಸ್ವೀಕಾರ ಮಾಡಿದವರು, ಪೂರ್ವಾಶ್ರಮದಲ್ಲಿ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರಿಗೂ ವಿದ್ಯೆಯನ್ನು ಕಲಿಸಿದವರೂ ಆದ  ಶ್ರೀ ಕಂಬಾಲೂರು ರಾಮಚಂದ್ರತೀರ್ಥರ ಆರಾಧನಾ ಮಹೋತ್ಸವ ..... 

ವಿಶೇಷ - ಯತಿಗಳ ವೃಂದಾವನದ ಮೇಲೆ ಒಂದು ಕಲ್ಲು ಇರ್ತದೆ.. ಅದರ ಹಿನ್ನೆಲೆ...
ಒಮ್ಮೆ ದುರ್ವಾದಿಗಳು ಶ್ರೀ ರಾಮಚಂದ್ರತೀರ್ಥರು ನದೀತೀರದಲ್ಲಿ ಧ್ಯಾನಾಸಕ್ತರಾಗಿ ಕುಳಿತಿದ್ದಾಗ ಪ್ರಾಣಹರಣ ಮಾಡಲು ಬಂದಿದ್ದರು...  ಆಗ ದುರ್ವಾದಿಗಳು  ಒಂದು ಬಂಡೆಗಲ್ಲನ್ನು ಎತ್ತಿ ಯತಿಗಳ ಮೇಲೆ ಹಾಕಲು ಹೋದಾಗ ಶ್ರೀ ಯತಿಗಳು ಆ ಕಲ್ಲಿಗೆ ಅಂತರಾಲೇ ತಿಷ್ಠ (ಅಲ್ಲೇ ನಿಲ್ಲು) ಅಂತ ಆದೇಶ ಮಾಡಿದರಂತೆ.. ಆಗ ಆ ಕಲ್ಲು ಆಕಾಶದಲ್ಲಿ ಯಾವ ಆಧಾರವಿಲ್ಲದೇ ನಿಂತು ಹೋಗಿದೆ... ಅದು ಕಂಡ ಭಯಭೀತರಾದ ದುರ್ವಾದಿಗಳು ಹೋಗಿ ಸ್ವಾಮಿಗಳಿಗೆ  ಶರಣಾದರು... ಅದರ ಸಂಕೇತವಾಗಿಯೇ ಇವತ್ತಿಗೂ ಯತಿಗಳ ವೃಂದಾವನದ ಮೇಲೆ ಈ ಕಲ್ಲು ಇಟ್ಟಿರುವುದು ನಾವು ಕಾಣಬಹುದು...

ಅಂತಹಾ ಶ್ರೇಷ್ಠ ಸಾತ್ವಿಕ ಯತಿಗಳ ವೃಂದಾವನ ದರ್ಶನಮಾತ್ರೇಣಾ  ಪಾಪವಿನಾಶವಾಗ್ತದೆ ಎನ್ನುದರಲ್ಲಿ ಸಂದೇಹವಿಲ್ಲ..
ಶ್ರೀ * ರಾಮಚಂದ್ರತೀರ್ಥರ* ಅನುಗ್ರಹ ಸದಾ ಸಜ್ಜನವರ್ಗದಮೇಲೆ ಇರಲೆಂದು ಪ್ರಾರ್ಥನೆ ಮಾಡುತ್ತಾ....

ಶ್ರೀ ಗುರುಗಳ ಅನುಗ್ರಹ ಕಟಾಕ್ಷವೀಕ್ಷಣ ನಮ್ಮ ಎಲ್ಲರಮೇಲಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ...

ನಾದನೀರಾಜನದಿಂ ದಾಸಸುರಭಿ 🙏🏽
***
ಧನುರ್ಮಾಸದಲ್ಲಿ ಹುಗ್ಗಿಯಿಂದಲೇ ವೈಶ್ವದೇವ ಮಾಡಬಹುದು ಎಂದು ಹೇಳುತ್ತಾರೆ ಹುಗ್ಗಿಯಿಂದ ವೈಶ್ವದೇವ ಮಾಡುವುದು ಶಾಸ್ತ್ರ ಸಮ್ಮತವೆ

 ಅನ್ನಂ ಚ ವೈಶ್ವದೇವಂ ಚ ತಂಡುಲೇನ ಜಲೇನವಾ ಅಥವಾಮಂತ್ರತ:ಕುರ್ಯಾತ್ ವೈಶ್ವದೇವಂ  ಚತುರ್ವಿಧಂ ಎಂದು ಪರಾಶರಸ್ಮ್ರತಿ ವಾಕ್ಯ  ಮತ್ತೋಂದು ಪ್ರಮಾಣವಾಕ್ಯ ಅನ್ನೇನೈವ ತು ಕಾರ್ಯಾಣಿ ತಂಡುಲೇನ ಜಲೇನವಾ ತದಾಭಾವೇಪಿ ಮನಸಾ ವೈಶ್ವದೇವ: ಪ್ರಕೀರ್ತಿತ:.  ವೈಶ್ವದೇವ ವನ್ನು ಅನ್ನದಿಂದಲೇ ಮಾಡಬೇಕು ಅದಿಲ್ಲದಿದ್ದರೆ ಅಕ್ಕಿಯಿಂದಾಗಲಿ  ನೀರಿನಿಂದಾಗಲಿ ಅದೂ ಇಲ್ಲವಾದರೆ ಮನಸ್ಸಿನಿಂದಾಗಲಿ  ವೈಶ್ವದೇವ  ಮಾಡುವಂತೆ ಹೇಳಿದ್ದಾರೆಯೇ  ಹೊರತು (ಮುದ್ಗಾನ್ನ) ಹುಗ್ಗಿ ಯಿಂದ ವೈಶ್ವದೇವ ಮಾಡುವಂತೆ ತಿಳಿಸಿಲ್ಲಾ  ಪರಾಶರಸ್ಮ್ರತಿ ಯಲ್ಲಿ ಯೇ   ಸ್ವಗೃಹೇ ಅನ್ನಮಾಯಾತಿ  ಪರವೇಶ್ಮನಿ ತಂಡುಲಂ ಅತಿಮಾರ್ಗೆ ಜಲೈಕುರ್ಯಾತ್ ಅಂತಾ ವೈಶ್ವದೇವದ ಬಗ್ಗೆ ಹೇಳಿದವರು ಧನುರ್ಮಾಸದಲ್ಲಿ ಹುಗ್ಗಿ ಯಿಂದ ಮಾಡಬಹುದೆಂದು ತಿಳಿ ಸಿಲ್ಲಾ  ಮತ್ತು ಧರ್ಮ ಸಿಂಧುವಿನಲ್ಲಿ  ಬೇಳೆ   ಉಪ್ಪು ಒಗರಿನ ಪದಾರ್ಥ ಗಳನ್ನು ವೈಶ್ವದೇವಕ್ಕೆ ಬಳಸಬಾರದು ವರ್ಜ್ಯ ಎಂದು ತಿಳಿಸಿದ್ದಾರೆ. ಪಂಚರಾತ್ರಾಂತರ್ಗತ ಧನುರ್ಮಾಸ ಮಹಾತ್ಮೆಯಲ್ಲಾಗಲಿ ಅಗ್ನಿಪುರಾಣಾಂತರ್ಗತ ಧನುರ್ಮಾಸ ಮಹಾತ್ಮೆ ಯಲ್ಲಾಗಲಿ ಹುಗ್ಗಿ ಯಿಂದ ವೈಶ್ವದೇವ ಮಾಡಿ ಅಥವಾ ಮಾಡಬಹುದೆಂದು ತಿಳಿಸಿಲ್ಲಾ. ಭಗವದ್ಗೀತೆ 16 ನೇ ಅಧ್ಯಾಯ 23 ನೇ ಶ್ಲೋಕ ಯ: ಶಾಸ್ರ ವಿಧಿ ಮುತ್ಸ್ರಜ್ಯ ವರ್ತತೇ ಕಾಮಕಾರತ: ನ. ಸ ಸಿದ್ದಿಮವಾಪ್ನೋತಿ  ನ ಸುಖಂ ನ ಪರಾಗತಿಂ (ಯಾವ ಪುರಷನು ಶಾಸ್ರ ವಿಧಿಯನ್ನು ತ್ಯಜಿಸಿ ತನ್ನ ಇಚ್ಛೆಯಿಂದ  ಮನಬಂದಂತೆ ಆಚರಣೆ  ಮಾಡುತ್ತಾನೋ  ಅವನು ಸಿದ್ಧಿಯನ್ನು ಪಡೆಯುವುದಿಲ್ಲ ಪರಮಗತಿಯನ್ನು ಸುಖವನ್ನು  ಹೊಂದುವುದಿಲ್ಲ 24ನೇ ಶ್ಲೋಕ ತಸ್ಮಾಚ್ಛಾಸ್ರಂ  ಪ್ರಮಾಣಂ ತೇ ಕಾರ್ಯಾಕಾರ್ಯ ವ್ಯವಸ್ಥಿತೌ  ಜ್ಞಾತ್ವಾ ಶಾಸ್ರವಿಧಾನೋಕ್ತಂ  ಕರ್ಮಕರ್ತು ಮಿಹಾರ್ಹಸಿ  ಆದ್ದರಿಂದ ಈ ಕರ್ತವ್ಯಗಳ ವ್ಯವಸ್ಥೆಯಲ್ಲಿ ಶಾಸ್ರವೇ  ಪ್ರಮಾಣವಾಗಿರುತ್ತದೆ  ಅದನ್ನು ತಿಳಿದುಕೊಂಡು ಶಾಸ್ರ ವಿಧಿಯಿಂದ  ನಿಯತ ಕರ್ಮಗಳನ್ನು ಮಾಡಬೇಕು. ಹುಗ್ಗಿಯಿಂದ ವೈಶ್ವದೇವ ಮಾಡಬಾರದು  ಶ್ರೀ ಕರಿಗಿರೀಶಾಯನಮ :
***



ಧನುರ್ ಮಾಸದಲ್ಲಿ  
3 ರಂಗಗಳನ್ನು 24⌚ಗಂಟೆಯೊಳಗೆ ನೋಡಬೇಕೆಂಬ ಪ್ರತೀತಿ ಇದೆ. 
ಯಾರು  ನೋಡಿಲ್ಲವೋ ಅವರು 


ಆದಿ ರಂಗ, ಶ್ರೀರಂಗಪಟ್ಟಣ.


ಮಧ್ಯರಂಗ, ಶಿವನಸಮುದ್ರ. 


ಅಂತ್ಯರಂಗ, ಶ್ರೀರಂಗಂ. 


*****


ಧನುರ್ಮಾಸದ ಮಹತ್ವ -  by ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ  (ಹುಗ್ಗಿ )ಮುದ್ಗಾನ್ನ  ವನ್ನು ನಿವೇದಿಸುವರು

ಧನುರ್ಮಾಸ ದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ

ನೀವೇದಯನ್  ಮೇ  ಮುದ್ಗಾನ್ನo ಸ ವೈ ಭಾಗವತೋತ್ತಮಃ |
ಕೊದಂಡಸ್ಥೆ  ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ ||

ಧನುರ್ಮಾಸದಲ್ಲಿ ಯಾರು ಒಂದು ತಿoಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ  ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ.

ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ |
ಅಧಮಾ ಸೂರ್ಯಸಹಿತಾ ಮಧ್ಯಹ್ನೇ ನಿಷ್ಫಲಾ ಭವೇತ್ ||

ಧನುರ್ಮಾಸದ ಪೂಜಾ ಸಮಯ
ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ  ಆಚರಿಸುವುದು ಉತ್ತಮ ಪಕ್ಷವಾಗಿದೆ.
ನಕ್ಷತ್ರಗಳು ಕಾಣಿಸದ ಸ್ವಲ್ಪ ಮುಂಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್ದು.

ಆಯನಂ ದಕ್ಷಿಣಂ  ರಾತ್ರಿರುತ್ತರಂ ತು ದಿವಾ ಭವೇತ್ |
ದೈವಂ ತತ್ತದಹೋರಾತ್ರಕo ಚಾಪಮಾನಂ ವಿಧುರ್ಭುಧಾಃ ||

ಅರುಣೋದಯಕಾಲದ ಪ್ರಾಮುಖ್ಯತೇ

ದಕ್ಷಿಣಾಯನದ ಆರು ತಿoಗಳುಗಳಲ್ಲಿ ಎರಡೆರಡು ತಿಂಗಳಿಗೆ ಒಂದು ಯಾಮದಂತೆ ಯಾಮತ್ರಯ ಭಗವಂತನಿಗೆ ಅತ್ಯoತ ಪ್ರಿಯವಾಗಿದ್ದು  ಮೊದಲಿನ ಎರಡು ಯಾಮಗಳು ,ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ  ಆಷಾಢ ಏಕಾದಶಿಯಿಂದ ಪ್ರಾರಂಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ಭಗವಂತನು ಕಾರ್ತೀಕ ಮಾಸದ ಶುಕ್ಲ (ಉತ್ಥಾನ) ದ್ವಾದಶಿಯಂದು ಏಳುವನು.ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು  ನಂತರ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ .

ಕಾರ್ತೀಕಸ್ಯ ಸಿತೇ ಪಕ್ಷೇ ತದೇವ ದಿನಪಂಚಕಮ್ |
ವಿರೋಧಯಂತಿ ದೇವೇಶಂ  ಗತ್ವಾ ಸೇಂದ್ರಾ ದಿವೌಕಸಃ ||
ಹೀಗೆ ಎದ್ದಿರುವ ಭಗವಂತನಿಗೆ ದೇವತೆಗಳು ಅರುಣೋದಯ ಕಾಲವಾದ ಧನುರ್ಮಾಸದಲ್ಲಿ ಹುಗ್ಗಿಯನ್ನು ನಿವೇದಿಸುವರು. ಆದ್ದರಿಂದ ಪ್ರತಿಯೊಬ್ಬನೂ ಸೂರ್ಯನು ಧನುರಾಶಿಯಲ್ಲಿರುವವರೇಗು ಒಂದು ತಿಂಗಳು ಕಾಲ ಸೂರ್ಯೋದಯ ಮೊದಲು ತೊಂಬತ್ತಾರು ನಿಮಿಷ ಮೊದಲು ದೇವರಪೂಜೆಯನ್ನು ಮಾಡಿ ಮುದ್ಗಾನ್ನ(ಹುಗ್ಗಿವನ್ನು ಹಾಗೂ ಇತರ ಪಾಯಸಾದಿ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯ ಮಾಡಬೇಕು.ಸಂಧ್ಯಾವಂದನೆ ಮೊದಲಾದ ನಿತ್ಯಾಹ್ನಿಕವನ್ನು ಪೂಜಾ ನಂತರ ಮಾಡಿದರೂ ದೋಷವಿರುವುದಿಲ್ಲ .ಮೊದಲೂ ಭಗವಂತನಿಗೆ ಪೂಜೆ ಹಾಗೂ ಹುಗ್ಗಿಯನ್ನು ನಿವೇದಿಸಿ ನಂತರ ಆಹ್ನಿಕವನ್ನು ಮಾಡಬಹುದು .

ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇ sಲ್ಪದ್ವಾದಶಿ ದಿನೇ |
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾನ್ಯಾರ್ಚಯೇತ್ ||

ಉಷಃಕಾಲದಲ್ಲಿ ಎದ್ದು ಪೂಜೆ  ಹುಗ್ಗಿ  ನಿವೇದನೆಯನ್ನು ಮಾಡುತ್ತಿದ್ದರೆ ನಿತ್ಯ ಸಂಧ್ಯಾವಂದನಾದಿ ಲೋಪ ಬರುತ್ತದೆ ಎಂದು ಯಾರಾದರು ದೇವರ ಪೂಜಾದಿಗಳನ್ನು ಮಾಡದೆ ನಿತ್ಯಾಹ್ನಿಕ ದಲ್ಲೇ  ನಿರತನಾಗುವನೋ ಏಳು ಜನ್ಮ ನಿರ್ಧನನಾಗುವನು .

ಯಃ ಕರ್ಮಹಾನಿಮಾಶoಕ್ಯ ನಾರ್ಚಯೇದುಷನೀಶ್ವರಮ್ |
ವಿಷ್ಣವೇ ಕಾರ್ಮುಕೇ ಪಾತ್ರಃ
ಸಪ್ತ ಜನ್ಮಸು ನಿರ್ಧನಃ ||

ಅರುಣೋದಯ ಕಾಲದಲ್ಲಿ ಮೊದಲು ಷೋಡೋಶೋಪಾಚರ ಪೂಜೆ ,ನಂತರ  ಪಾಯಸ ಮುoತಾದ ಭಕ್ಷ್ಯ ಗಳ ಜೊತೆಗೆ ಹುಗ್ಗಿಯ ನೈವೇದ್ಯ ,ಆನಂತರ ನಿತ್ಯಾಹ್ನಿಕವನ್ನು  ಮಾಡಿ ಸೂರ್ಯೋದಯವಾದ ಮೇಲೆ ಬ್ರಾಹ್ಮಣರ ಭೋಜನವನ್ನು ಮಾಡಿಸಿ ತಾನು ಭುoಜಿಸಬೇಕು.

ಆರ್ಚಯಿತ್ವಾ ಹರಿಂ ಪಶ್ಚಾತ್  ಧನುರ್ಮಾಸೇಂ ತ್ಯಾಮಾಕಂ |
ಪಶ್ಚಾತ್ ಸಂಧ್ಯಾಮುಪಾಸೀತ ಧರ್ಮಲೋಪೋ ನ ವಿಧ್ಯತೇ ||
***********

ಧನುರ್ಮಾಸದಲ್ಲಿ ಮುದ್ಗಾನ್ನ ನೈವೇದ್ಯ ಮತ್ತು ಭದ್ರಲಕ್ಷ್ಮೀ ಸ್ತವದ ಮಹತ್ವ

ಇಂದ್ರದೇವರ ಪತ್ನಿಯಾದ ಶಚೀದೇವಿಯು ತನ್ನ ಪತಿಯಾದ ಇಂದ್ರದೇವರು ಇಂದ್ರಪದವಿಯನ್ನು ಕಳೆದು ಕೊoಡು ಪದವಿಯಿಂದ ಚ್ಯುತರಾದಾಗ ದುಃಖಗೊಂಡ ಶಚಿದೇವಿಯು ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು  ಸಮರ್ಪಿಸಿ ತನ್ನ ಪತಿಯನ್ನು ಹಾಗೂ ನಿತ್ಯೈಶ್ವರ್ಯವನ್ನು ಪಡೆದಳು.

ನೀವೇದಯಿತ್ವಾ ಮುದ್ಗಾನ್ನಾನ್ ಪುರೇಂದ್ರಾಣಿ ಸಹಾದ್ರಾಕಂ |
ವಿಷ್ಣವೇ ದುಃಖಿತಾ ಸಾದ್ವಿ  ನಿತೈಶ್ವರ್ಯಮವಾಪ ಸ ||

ಧನುರ್ಮಾಸದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ಲಕ್ಷ್ಮೀದೇವಿಯ ದ್ವಾದಶನಾಮಗಳಿಂದ ಹನ್ನೆರಡು ಬಾರಿ ಅರಿಷಿಣ ,ಕುಂಕುಮ,ಪುಷ್ಪಾದಿಗಳಿಂದ ಅರ್ಚಿಸಿ ಶ್ರೀಹರಿಗೆ ನಿವೇದಿತವಾದ ಮುದ್ಗಾನ್ನವನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.
ಧನುರ್ಮಾಸದಲ್ಲಿನ ಮುದ್ಗಾನ್ನ ನೀವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುಂಟು ಮಾಡುವುದು.ಶತೃಗಳು ನಶಿಸುವರು. ದೀರ್ಘವಾದ ಆಯುಸ್ಸನ್ನು ಪಡೆಯಬಹುದು.ಧನ,ಧಾನ್ಯ ಸಂಪತ್ತು,ಮುಂತಾದ ಸಕಲ ಭಾಗ್ಯವುಂಟಾಗುವುದು.ಜನ್ಮ ಜನ್ಮಗಳಲ್ಲಿಯೂ ವಿಷ್ಣುಭಕ್ತನಾಗಿ ಜನಿಸುವನು.

ಧನುರ್ಮಾಸ ದಲ್ಲಿ ಪ್ರತಿನಿತ್ಯ  ಪಠಿಸಬೇಕಾದ  ಭದ್ರಲಕ್ಷ್ಮೀಸ್ತವ

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಂ ಅಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || 1 ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || 2 ||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || 3 ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ |
ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ ||4 ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || 5 ||
ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |
 *************

ಮುದ್ಗಾನ್ನ(ಹುಗ್ಗಿ)ದಲ್ಲಿ  ಇರಬೇಕಾದ ಪದರ್ಥಗಳಮತ್ತು ಪ್ರಾಮಾಣ

ಅಕ್ಕಿಯ ಪ್ರಾಮಾಣದಷ್ಟೇ ಹೆಸರುಬೆಳೆಯನ್ನು ಹಾಕಿ ತಯಾರಿಸಿದ ಮುದ್ಗಾನ್ನವು ಉತ್ತಮವಾದದ್ದು .

ಮುದ್ಗo ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಚಯತೇ ||
ಅಕ್ಕಿಯ ಪ್ರಾಮಾಣದಲ್ಲಿ ಅರ್ಧದಷ್ಟು 
ಮಾತ್ರ ಹೆಸರುಬೇಳೆಯನ್ನು ಹಾಕಿ ತಯಾರಿಸಿದ ಹೂಗ್ಗಿಯು ಮಧ್ಯಮವಾದದ್ದು.ಅಕ್ಕಿಯ ಪ್ರಮಾಣದ ಕಾಲುಭಾಗ (1/4)ಹೆಸರುಬೆಳೆಯನ್ನು ಉಪಯೋಗಿಸಿ ತಯಾರಿಸಿದ ಹುಗ್ಗಿಯು ಅಧಮವೆನಿಸಿದೆ.ಈ ರೀತಿಯ ಉತ್ತಮೋತ್ತಮ ಹುಗ್ಗಿ ಯಿಂದ ಬರುವ ಫಲವು ಉತ್ತಮೋತ್ತಮ ಮಧ್ಯಮಾಧಮ ವಾಗಿರುತ್ತದೆ. ಅಕ್ಕಿಯು ಒಂದು ಸೇರು ಇದ್ದರೆ ,ಅದಕ್ಕೇ ಎರಡುಪಟ್ಟು ಎಂದರೆ ಎರಡು ಸೇರು ಹೆಸರು ಬೆಲೆಯನ್ನು ಸೇರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೇಷ್ಠವಾಗಿದೆ.

ಹುಗ್ಗಿಯಲ್ಲಿರಬೇಕಾದ ಪದಾರ್ಥಗಳು


ದಧ್ಯಾದ್ರಾಕಂ ಚ ಮುದ್ಗಾನ್ನಂ ದಧ್ಯಾಜ್ಯೈಲಾಗುಡೂಜ್ವಲಂ |

ಸಸುಖೊಷ್ಠಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್ ||
ಹೆಸರುಬೇಳೆ,ಅಕ್ಕಿ,ಬೆಲ್ಲ,ಶುoಠಿ,ಏಲಕ್ಕಿ,ತುಪ್ಪ ,ಮೊಸರು.ಇವುಗಳನ್ನು ಸೇರಿಸಿ ಮಾಡಿದ ಮುದ್ಗಾನ್ನ(ಹುಗ್ಗಿ)ಯನ್ನು ವಿಷ್ಣುವಿಗೆ ಅರ್ಪಿಸಬೇಕು .
ಯಸ್ತು ದಾರಿದ್ರ್ಯಬುಧ್ಯಾ ಮುದ್ಗಾನ್ನo ನ ನಿವೇದಯೇತ್ |
ವಿಷ್ಣವೇ ಕಾರ್ಮುಕೇ ಪ್ರಾತಃ ಸಪ್ತಜನ್ಮಸು ನಿರ್ಧನಃ||

ನಾನು ದರಿದ್ರನೆಂದು  ಮುದ್ಗಾನ್ನವನ್ನು ಭಗವಂತನಿಗೆ ಆರ್ಪಿಸದೆ ಇರಬಾರದು ಹುಗ್ಗಿಯನ್ನು ನಿವೇದಿಸದ ವ್ಯಕ್ತಿಯು ಏಳು ಜನ್ಮಗಳಲ್ಲಿ ದರಿದ್ರನಾಗುವನು..

ಆದ್ದರಿಂದ ಪ್ರತಿಯೊಬ್ಬರು ಧನುರ್ಮಾಸದಲ್ಲಿ ಮುದ್ಗಾನ್ನವನ್ನು ನೀವೇದಿಸಬೇಕು.
          || ಶ್ರೀಕೃಷ್ಣಾರ್ಪಣಮಸ್ತು ||
*********

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
ಧನುರ್ಮಾಸ ಮಹಾತ್ಮೆ -1 (ಸ್ಮೃತಿ ಮುಕ್ತಾವಳಿ)

ಆಗ್ನೇಯ ಪುರಾಣದ 52ನೇಅಧ್ಯಾಯದಲ್ಲಿ  ಧನುರ್ಮಾಸ ವಿಷಯದಲ್ಲಿ ಹೀಗೆ ಹೇಳಿದೆ

ಧನುರ್ಮಾಸೇ ಹರಿಃ ಪ್ರೀತ ಉಷಃಕಾಲಾರ್ಚನೇ ಧ್ರುವಮ್ |
ದದಾತ್ಯ ಭೀಷ್ಟಮಕ್ಷಯಂ ಸತ್ಯಮೇವ ಬ್ರವೀಮಿ ತೇ ||
ಉಷಃಕಾಲೇ ಧನುರ್ಮಾಸೇ ಸ್ನಾತ್ವ  ಸಮ್ಯಗ್ ಜನಾರ್ಧನಮ್ |
ಸಮಭ್ಯರ್ಚ ಚ ಮುದ್ಗಾನ್ನಂ ದಧ್ನಾ ಸಹ ನೀವೇದಯ ||
ಭೋಜಯ ದ್ವಿಜವರ್ಯಾಂಶ್ಚ ಪ್ರಾತಃಕಾಲೇ ಯಥಾಬಲಮ್ |
ಭುಕ್ಷ್ವೇಹ ಸಕಲಾನ್ ಭೋಗನ್ ಪ್ರಾಪ್ಸ್ಯ ಸೇ ವೈಷ್ಣವಂ ಪದಮ್ || 1 ||

ಧನುರ್ಮಾಸದಲ್ಲಿ ಉಷಃಕಾಲದಲ್ಲಿ ಶ್ರೀಹರಿಯನ್ನು ಆರ್ಚೀಸಿದರೆ ಅವನು ಸುಪ್ರೀತನಾಗಿ ಭಕ್ತರಿಗೆ ಅಕ್ಷಯವಾದ ಅಭೀಷ್ಟಗಳನ್ನು ಕೊಡುತ್ತಾನೆ .ಈ ವಿಷಯವು ಸತ್ಯ ಧನುರ್ಮಾಸದಲ್ಲಿ ಉಷಃಕಾಲದಲ್ಲಿ ಸ್ನಾನಮಾಡಬೇಕು .ಶ್ರೀಹರಿಯನ್ನು ಚೆನ್ನಾಗಿ ಪೂಜಿಸಬೇಕು .ಮೊಸರು ಮತ್ತು ಹೆಸರುಬೇಳೆ ಹುಗ್ಗಿಯನ್ನು ದೇವರಿಗೆ ಸಮರ್ಪಿಸಬೇಕು .ಯಥಾಶಕ್ತಿಯಾಗಿ ಪ್ರಾತಃಕಾಲ ಬ್ರಾಹ್ಮಣರಿಗೆ ಭೋಜನಮಾಡಿಸಬೇಕು .ಇದರಿಂದ ವಿಷ್ಣುಭಕ್ತರು ಇಹದಲ್ಲಿ ಸಕಲವನ್ನು. ಅನುಭವಿಸಿ ಅನಂತರ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಹೂಂದುವರು..

ಸ್ಮೃತಿ ಮುಕ್ತಾವಳಿ ಕಾಲನಿರ್ಣಯ ಪ್ರಕರಣ  (ಆಗ್ನೇಯಪುರಾಣ 52ನೇಅಧ್ಯಾಯ)
         

ಧನುರ್ಮಾಸ ಮಹಾತ್ಮೆ -2  (ಸ್ಮೃತಿ ಮುಕ್ತಾವಳಿ)

ಧನುರ್ಮಾಸ ಉಷಃಕಾಲೇ
ದಧ್ಯಾ ರ್ದಕ ಮನೋಹರಮ್ |
ಆಜ್ಯ್ಯೈಲಾಶರ್ಕರಾಯುಕ್ತಂ ಸಹಾಮಲಕಮೂಲಕಮ್ ||
ನಿವೇದಯಿತ್ವಾ ಹರಯೇ ಬ್ರಾಹ್ಮಾಣಾನ್ ಭೋಜಯೇತ್ ಸುಧೀಃ |
ಸ  ಸ್ಯಾದ್ ಯೋಗೀ ಸುಧೀಃ ಶ್ರೀಮಾನ್  ವೈಷ್ಣವೋ ಜನ್ಮನಿ ಜನ್ಮನಿ ||

ಧನುರ್ಮಾಸದಲ್ಲಿ ಉಷಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ಪರಮಾತ್ಮನನ್ನು ಪೂಜಿಸಿ ,ಮೊಸರು ,ಶುಂಠಿ ,ಇವುಯಾಲಕ್ಕಿ ,ಸಕ್ಕರೆಗಳಿಂದ ಸಹಿತವಾದ ನೆಲ್ಲಿಕಾಯಿ ,ಗಡ್ಡೆಗಳಿಂದ ಕೊಡಿದ (ಇವುಗಳಿಂದ. ಮಾಡಿದ ವ್ಯಂಜನ ಸಹಿತವಾದ )ಹುಗ್ಗಿ ಯನ್ನು ದೇವರಿಗೆ ನೀವೆದಿಸಬೇಕು .ಜ್ಞಾನಿಯಾದವನು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು . ಹೀಗೆ ಮಾಡಿದವನು ಯಾವ ಇಷ್ಟಾರ್ಥ ಗಳನ್ನು ಬಯಸುತ್ತಾನೋ ದುರ್ಲಭವಾಗಿದ್ದರೂ ಅದೆಲ್ಲವನ್ನೂ ಪಡೆಯುತ್ತಾನೆ .ಮುಂದೆ ಅವನು ಯೋಗಿಯಾಗಿ ಜ್ಞಾನಿಯಾಗಿ ಐಶ್ವರ್ಯವಂತನಾಗಿ ಜನ್ಮ ಜನ್ಮಂತರದಲ್ಲಿಯೂ ವೈಷ್ಣವನಾಗಿ ಹುಟ್ಟುತಾನೆ  ಎಂದು ಆಗ್ನೇರಪುರಾಣದ 52ನೇ ಅಧ್ಯಾಯದಲ್ಲಿ ಹೇಳಿದೆ.

ಸ್ಮೃತಿ ಮುಕ್ತಾವಳಿ ಕಾಲನಿರ್ಣಯ ಪ್ರಕರಣ  (ಆಗ್ನೇಯಪುರಾಣ 52ನೇಅಧ್ಯಾಯ)
         
ಧನುರ್ಮಾಸ ಮಹಾತ್ಮೆ -3 (ಸ್ಮೃತಿ ಮುಕ್ತಾವಳಿ)

ಉಷಃಪೂಜಾಂ ಧನುರ್ಮಾಸೇ ಯೋ ನ ಕುರ್ವೀತ ವೈಷ್ಣವೀಂ  | 
ಸಪ್ತ ಜನ್ಮಸು ರಿಕ್ತಃ ಸ್ಯಾತ್ ಕ್ಷಯರೋಗೀ ಚ ಮೂಡಧೀಃ ||

ಅದೇ ಪುರಾಣದಲ್ಲಿ ಪೂಜೆ ಮಾಡದಿದ್ದರೆ ದೋಷವನ್ನು ಹೇಳಿದ್ದಾರೆ .ಯಾವನು ಧನುರ್ಮಾಸದಲ್ಲಿ ಶ್ರೀಮನ್ನರಾಯಣನಿಗೆ ಉಷಃಕಾಲದ ಪೂಜೆಯನ್ನು ಮಾಡುವುದಿಲ್ಲವೋ ಆ ಮೂರ್ಖನು ಏಳು ಜನ್ಮಗಳಲ್ಲಿ ಬಡವನಾಗುತ್ತಾನೆ ಮತ್ತು ಕ್ಷಯರೋಗೀ ಯಾಗಿ ಹುಟ್ಟುತ್ತಾನೆ.

ಸ್ಮೃತಿ ಮುಕ್ತಾವಳಿ ಕಾಲನಿರ್ಣಯ ಪ್ರಕರಣ  (ಆಗ್ನೇಯಪುರಾಣ 52ನೇಅಧ್ಯಾಯ)


ಧನುರ್ಮಾಸ ಮಹಾತ್ಮೆ -4 (ಸ್ಮೃತಿ ಮುಕ್ತಾವಳಿ)

ಕೋದಂಡಸ್ಥೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷಿಕೀ ಪೂಜಾ ದಿನೇನೈಕೇನ ಸಿದ್ಧ್ಯತಿ ||

ಯಥಾ ತುಷ್ಯೇದ್ಧನುರ್ಮಾಸೇ ಮುದ್ಗಾನ್ನೇನ ರಮಾಪತಿಃ |
ನ ತಥಾ ವ್ರತದಾನಾದ್ಯ್ಯೈರ್ನ ತಪೋಭಿರ್ನ ಚಾದ್ವರೈಃ ||

ಕೋದಂಡಸ್ಥೇ ದಿವಾನಾಥೇ ಯೋ ಮುದ್ಗಾನ್ನಂ ಸಹಾರ್ದ್ರಕಮ್ |
ನಿವೇದಯೇದ್ಧರೇಃ ಸಮ್ಯಕ್ ಜಿತ್ವಾ ಶತ್ರೂನ್ ಕ್ಷಣೇನ ಸಃ ||

ಸದಧ್ಯಾರ್ದ್ರಕಮುದ್ಗಾನ್ನಂ ಯೋ ಧನುರ್ಮಾಸಿ ವಿಷ್ಣವೇ |
ಸಮರ್ಪಯೇತ್ ಸ ದೀರ್ಘಾಯುರ್ಧನಾಢ್ಯೋ ವೇದಪಾರಗಃ ||

ಸಹಾರ್ದಕಂ ಚ ಮುದ್ಗಾನ್ನಂ ಯೋಽಚ್ಯುತಾಯ ನಿವೇದಯೇತ್ |
ಕಿಂ ತಸ್ಯ ಗಂಗಾಸ್ನಾನಾದ್ಯೈಃ ಕಿಂ ಜಪೈಃ ಕಿಮಿಹಾದ್ವರೈಃ

ಆಯುರಾರೋಗ್ಯಮೈಶ್ವರ್ಯಂಯದಿಚ್ಛೇತ್ ಸದ್ಯ ಏವ ಹಿ ||

ಧನುರ್ಮಾಸದಲ್ಲಿ ಉಷಃಕಾಲಪೂಜೆಯನ್ನು ಮಾಡಿದರೆ ಬೇರೆ ಫಲವವನ್ನೂ ಅಲ್ಲಿಯೇ ಹೇಳಿದ್ದಾರೆ ಸೂರ್ಯನು ಧನುರಾಶಿಯಲ್ಲಿರುವಾಗ ಯಾವನು ಪರಮಾತ್ಮನನ್ನು ಪೂಜಿಸಿ ಅಂದರೆ. ಹುಗ್ಗಿಯನ್ನು  ನಿವೇದಿಸುತ್ತಾನೋ ಅವನ ಒಂದು ದಿವಸದ ಪೂಜೆಯಿಂದ ಒಂದು ಸಾವಿರ ವರ್ಷಗಳ ಪೂಜೆಯು ಸಿಧ್ಧಿಸುತ್ತದೆ. ಲಕ್ಷ್ಮೀಪತಿಯು  ಧನುರ್ಮಾಸದಲ್ಲಿ ಹುಗ್ಗಿಯನ್ನು ನೈವೇದ್ಯವನ್ನು ಮಾಡಿದರೆ ಸಂತೋಷ ಪಡುವಂತೆ ಇನ್ನಾವುದರಿಂದಲೂ ಸಂತೋಷ ಪಡುವುದಿಲ್ಲ ವ್ರತ ದಾನ ತಪ್ಪಸುಗಳು ಯಾಗಗಳು ಇತ್ಯಾದಿ ಯಾವುದರಿಂದಲೂ ಶ್ರೀಹರಿಗೆ ಮುದ್ಗಾನ್ನ ನೀವೇದನೆಯಿಂದ ಆಗೋಷ್ಟು ಪ್ರೀತಿಯುಂಟಾಗುವುದಿಲ್ಲ .

ಸೂರ್ಯನು ಧನುರಾಶಿಯಲ್ಲಿರುವಾಗ ಶುಂಠಿಸಹಿತವಾದ ಹುಗ್ಗಿಯನ್ನು ಶ್ರೀಹರಿಗೆ ನಿವೇದಿಸಬೇಕು . ಇಂತಹ ಭಕ್ತನು ಶತ್ರುಗಳನ್ನು ಒಂದು ಕ್ಷಣದಲ್ಲಿ ಜಯಿಸುತ್ತಾನೆ .

ಮೊಸರು ಶುಂಠಿ ಸಹಿತವಾದ ಹುಗ್ಗಿ ಯನ್ನು. ಯಾವನು ಧನುರ್ಮಾಸದಲ್ಲಿ ಶ್ರೀಹರಿಗೆ ಸಮರ್ಪಿಸುತ್ತಾನೋ ಅವನು ದೀರ್ಘಯುಷ್ಮಂತನೂ ಧನಾಡ್ಯನೂ ,ವೇದಪಾರಂಗತನೂ ಆಗುತ್ತಾನೆ



ಶುಂಠಿಸಹಿತವಾದ ಹುಗ್ಗಿಯನ್ನು ಅಚ್ಯುತನಿಗೆ ಸಮರ್ಪಿಸುವವನಿಗೆ .ಗಂಗಾಸ್ನಾನದಿಗಳಿಂದ ಇತರ ಯಾಗಗಳಿಂದ ಏನು. ಉಪಯೋಗವಿಲ್ಲ . ಅವನಿಗೆ ಆಯುಸ್ಸು ಆರೋಗ್ಯ, ಐಶ್ವರ್ಯ ಮುಂತಾದ ಬಯಸಿದ ವಸ್ತುಗಳು ಈ ಪೂಜೆಯಿಂದ ಲಭಿಸುತ್ತದೆ ಎಂದು. ಆಗ್ನೇಯಪುರಾಣದ 52ನೇ ಅಧ್ಯಾಯದಲ್ಲಿ ಹೇಳಿದೆ
         
ಧನುರ್ಮಾಸ ಮಹಾತ್ಮೆ -5 (ಸ್ಮೃತಿ ಮುಕ್ತಾವಳಿ)

ಪ್ರೀಣಯೇತ್ ಸ ಧನುರ್ಮಾಸೇ ಮುದ್ಗಾನ್ನೇನಾಂಬುಜೇಕ್ಷಣಂ |
ನೀವೇದಯಿತ್ವಾ ಮುದ್ಗಾನ್ನಂ ಪುರೇಂದ್ರಾಣೇ ಸಹಾರ್ದ್ರಕಮ್ ||

ವಿಷ್ಣವೇ ದುಃಖಿತಾ ಸಾದ್ವೀ ನಿತೈಶ್ವರ್ಯಮವಾಪ ಸಾ |
ಇದಂ ದ್ವಾದಶವಾರಂ ತು ಜಪನ್ ಲಕ್ಷ್ಮೀಂ  ಸಮರ್ಚಯ ||

ನೀವೇದ್ಯ ಗುಡಮುದ್ಗನ್ನಂ ಧನುರ್ಮಾಸೇರ್ಥsಸಿದ್ಧಯೇ  |
ಸದ್ಯ ಏವಾಪ್ನುಯಾ ಲ್ಲಕ್ಷ್ಮೀಕಟಾಕ್ಷೇಣಾಕ್ಷಯಂ ಭವಂ  ||

ವಿಷ್ಣುಭಕ್ತನು ಕಮಲಾಕ್ಷನಾದ 
ಶ್ರೀಹರಿಯನ್ನು ಧನುರ್ಮಾಸದಲ್ಲಿ ಹುಗ್ಗಿಯನ್ನು ಪೂಜಿಸಿ ಪ್ರಸನ್ನಗೊಳಿಸಬೇಕು .
ಹಿಂದೆ. ಇಂದ್ರನ ಪತ್ನಿಯಾದ ಪತಿವ್ರತೆಯಾದ ಶಚಿದೇವಿಯು ದುಃಖವನ್ನು ಪಡೆದಳು .ಅವಳ ಪತಿಯು ರಾಜ್ಯ ಭ್ರಂಶಾದಿಗಳನ್ನು ಹೂಂದಿದ್ದರಿಂದ ಅವಳಿಗೆ. ಅತೀವ ದುಃಖವುಂಟಾಯಿತು .ಆಗ ಅವಳು ಧನುರ್ಮಾಸದಲ್ಲಿ ಹಿಂದೆ ಹೇಳಿದಂತೆ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ನಿತ್ಯೈಶ್ವರ್ಯವನ್ನು  ಪಡೆದಳು. ಮುಂದೆ ಹೇಳತಕ್ಕಂತಹ ಲಕ್ಷ್ಮೀ ದೇವಿಯ ದ್ವಾದಶನಾಮವಳಿಯನ್ನು ಹನ್ನೆರಡು ಬಾರಿ ಜಪಿಸಿ ಧನುರ್ಮಾಸದಲ್ಲಿ ಬೆಲ್ಲ ಮತ್ತು ಮುದ್ಗಾನ್ನವನ್ನು ಶ್ರೀಹರಿಗೆ ಮತ್ತು ಲಕ್ಷ್ಮೀದೇವಿಗೆ ಸಮರ್ಪಿಸಬೇಕು . ಲಕ್ಷ್ಮೀಯನ್ನು ಪೂಜಿಸಬೇಕು ಧನುರ್ಮಾಸದಲ್ಲಿ ಅರ್ಥಪ್ರಾಪ್ತಿಗಾಗಿ ಈ ರೀತಿಯ ಪೂಜೆ ಮಾಡಿದರೆ ಕೊಡಲೇ ಲಕ್ಷ್ಮೀ ಕಟಾಕ್ಷದಿಂದ ಅಕ್ಷಯವಾದ ಧನವನ್ನು ಪಡೆಯುತ್ತಾರೆ .

ಧನುರ್ಮಾಸ ದಲ್ಲಿ ಪ್ರತಿನಿತ್ಯ  ಪಠಿಸಬೇಕಾದ  ಭದ್ರಲಕ್ಷ್ಮೀಸ್ತವ

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಂ ಅಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || 1 ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || 2 ||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || 3 ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ |
ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ ||4 ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || 5 ||
ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |

1 )ಶ್ರೀದೇವಿ
2)ಅಮೃತೋದ್ಭವಾ
3)ಕಮಲಾ
4)ಲೋಕಸುಂದರೀ
5)ವಿಷ್ಣುಪತ್ನೀ
6)ಶ್ರೀವೈಷ್ಣವೀ
7)ವರಾರೋಹ
8)ಹರಿವಲ್ಲಬಾ
9)ಶಾರ್ಜ್ಗಣೀ
10)ದೇವದೇವಿಕಾ
11)ಮಹಾಲಕ್ಷ್ಮೀ
12)ಲೋಕಸುಂದರೀ

ಇವೇ ಲಕ್ಷ್ಮಿಯ ದ್ವಾದಶನಾಮಗಳು ಹೀಗೇಯೇ

1)ಶ್ರೀ
2)ಪದ್ಮಾ
3)ಕಮಲಾ 
4)ಮುಕುಂದಮಹಿಷೀ
5)ಲಕ್ಷ್ಮೀ
6)ತ್ರಿಲೋಕೇಶ್ವರೀ
7)ಮಾ 
8)ಕ್ಷೀರಾಬ್ಧಿ ಸುತಾ
9)ಅರವಿಂದಜನನೀ
10)ವಿದ್ಯಾ
11)ಸರೋಜಾತ್ಮಿಕಾ
12)ಸರ್ವಾಭೀಷ್ಟಫಲಪ್ರದಾ

ಎಂಬ ಈ ಹನ್ನೆರಡು ಲಕ್ಷ್ಮೀ ನಾಮವಳಿಯನ್ನು ಪ್ರಾತಃಕಾಲ ಅತ್ಯಂತ ಶುದ್ಧರಾಗಿ ಯಾರು ಪಠಿಸುತ್ತಾರೋ ಅವರು ಎಲ್ಲ ಮಂಗಲಗಳನ್ನು ಪಡೆಯುತ್ತಾರೆ.
ಇದು ಭದ್ರಲಕ್ಷ್ಮೀ ಸ್ತೋತ್ರ ಇದು ಯಾವಾಗಲೂ ಪುಣ್ಯಪ್ರದವಾದುದು ಸಕಲ ಮಂಗಲಪ್ರದವಾದುದು ಎಂದು ಧರ್ಮರಾಜನನ್ನು ಕುರಿತು ನಾರದರವಚನವಿದೆ .
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )

ಧನುರ್ಮಾಸ ಮಹಾತ್ಮೆ -6 (ಸ್ಮೃತಿ ಮುಕ್ತಾವಳಿ)

ಧನುರ್ಮಾಸದಲ್ಲಿ  ಮುದ್ಗಾನ್ನ ನೈವೇದ್ಯದ ಮಹತ್ವ

ದಧ್ಯಾದ್ರರ್ಕಂ ಚ ಮುದ್ಗಾನ್ನಂ ದಧ್ಯಾಜ್ಯೈಲಾ ಗುಡೋಜ್ವಲಮ್ |
ಸುಸುಖೋಷ್ಣಂ ಕಂದಂಚ ವಿಷ್ಣವೇ ಯಃ ಸಮರ್ಪಯೇತ್ ||
ದೃಷ್ಟ್ವಾ ತಚ್ಚುಭಮುದ್ಗಾನ್ನಂ ಸಂತೋಷ್ಟೋ ಭಕ್ತವತ್ಸಲಃ |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರಃ ||

ಶುಂಠೀ ಸಹಿತವಾದ ಮೊಸರು ತುಪ್ಪ ಯಾಲಕ್ಕಿ ಬೆಲ್ಲಗಳಿಂದ ಕೊಡಿದ ಹುಗ್ಗಿ (ಮುದ್ಗಾನ್ನ) ಇವುಗಳನ್ನು ವಿಷ್ಣುವಿಗೆ ಸಮರ್ಪಿಸಬೇಕು .
ಇದು ಅತ್ಯಂತ ಹಿತಕರವಾದ ಬಿಸಿಯಿಂದ ಕೊಡಿರಬೇಕು .ಜೋತೆಗೆ ಗೆಡ್ಡೆಯ ಶಾಖಗಳನ್ನು ಸಮರ್ಪಿಸಬೇಕು..

ಈ ಹುಗ್ಗಿ ಎಂಬ ನೈವೇದ್ಯ  ಸಾಮಗ್ರಿಯನ್ನು ನೋಡಿಯೇ ಸಂತುಷ್ಟನಾದ ಭಕ್ತವತ್ಸಲನಾದ ಸಕಲ ಜಗತ್ ಸ್ವಾಮಿಯಾದ ನಾರಾಯಣನು ಎಲ್ಲಾ ವಿಧವಾದ ಭೋಗಗಳನ್ನು ಮೋಕ್ಷವನ್ನು ಕರುಣಿಸುತ್ತಾನೆ .
       ಆಗ್ನೇಯಪುರಾಣ 52ನೇ ಅಧ್ಯಾಯ
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )

ಧನುರ್ಮಾಸ ಮಹಾತ್ಮೆ - 7 (ಸ್ಮೃತಿ ಮುಕ್ತಾವಳಿ)

ಧನುರ್ಮಾಸದಲ್ಲಿ ವ್ಯತಿಪತದ ಮಹತ್ವ

ಯಃ ಸ್ನಾತ್ವೋಷಸಿ ಚಾಪಕ್ಷೇ ಭಾಸ್ಕರೇ  ಭಕ್ತಿಮಾನ್ನರಃ |
ನಿವೇದಯನ್ಮೇ ಮುದ್ಗಾನ್ನಂ ಸ ವೈ ಭಾಗವತೋತ್ತಮಃ ||

ಯಃ ಕಾರ್ಮುಕಾರ್ಕೇ ಮುದ್ಗಾನ್ನಂ ಬ್ರಾಹ್ಮಣೇಭ್ಯಃ ಪ್ರಯಚ್ಛತಿ |
ತಸ್ಯ ಮುಕ್ತಿಂ ಪ್ರಯಚ್ಛಾಮಿ ಕಿಂ ಪುನರ್ಭೋಗಸಂಪದಃ ||
ಅಗ್ನಿಷ್ಟೋಮ ಸಹಸ್ರಾಣಿ ವಾಜಪೇಯ ಶತಾನಿ ಚ |
ಮುದ್ಗಾನ್ನಸ್ಯ ವ್ಯತಿಪಾತೆ ಚಾಪೇನಾರ್ಹತಿ ತುಲ್ಯತಾಮ್ ||

ವೇದಭ್ರಷ್ಟೋ ವ್ರತಭ್ರಷ್ಟಃ ಕರ್ಮಭ್ರಷ್ಟಃ ಸುಹೃದ್ರಿಪುಃ |
ಚಾಪೇ ಪಾತೇ ಚ ಮುದ್ಗಾನ್ನಂ ದತ್ವಾ ವಿಪ್ರಾಯ ಶುಧ್ಯತಿ ||

ಆಗ್ನೇಯಪುರಾಣದಲ್ಲಿ ಧನುರ್ಮಾಸ ವ್ಯತಿಪಾತದ ವಿಷಯದಲ್ಲಿ ಈ ರೀತಿಯಾಗಿ ಹೇಳಿದ್ದಾರೆ .ಸೂರ್ಯನು ಧನುರಾಶಿಯಲ್ಲಿದ್ದಾಗ ಭಕ್ತಿಮಂತನಾದ  ಮಾನವನು ಉಷಃಕಾಲದಲ್ಲಿ ಎದ್ದು ಸ್ನಾನಮಾಡಿ ನನಗೆ ಹುಗ್ಗಿ ಯನ್ನು ಸಮರ್ಪಿಸಬೇಕು  ಹೀಗೆ ಮಾಡುವವನೇ ಭಾಗವತಶ್ರೇಷ್ಠನು.

ಯಾವನು ಸೂರ್ಯನು ಧನುರಾಶಿಯಲ್ಲಿರುವಾಗ ಬ್ರಾಹ್ಮಣರಿಗೆ ಹುಗ್ಗಿ ಯನ್ನು ದಾನ ಮಾಡುತ್ತಾನೋ ಅವನಿಗೆ ಮುಕ್ತಿಯನ್ನು ಕೊಡುತ್ತೇನೆ.. ಇತರ ಭೋಗಸಂಪ್ಪತ್ತುಗಳು  ಕೊಡುತ್ತೆನೆಂದು ಹೇಳಬೇಕಾಗಿಯೇ ಇಲ್ಲ .

ಸಾವಿರ ಅಗ್ನಿಷ್ಟೋಮ ಯಾಗಗಳು .ನೂರು. ವಾಜಪೇಯ  ಯಾಗಗಳು ಇವು ಯಾವುವು ಧನುರ್ಮಾಸ ದ ವ್ಯತಿಪಾತದಲ್ಲಿ ಮುದ್ಗಾನ್ನ ದಾನಮಾಡಿದರೆ ಉಂಟಾಗುವ ಪುಣ್ಯಕ್ಕೆ ಸಮವಾಗಲಾರವು .

ವೇದಭ್ರಷ್ಟನು ಕರ್ಮಭ್ರಷ್ಟನು ಮಿತ್ರದ್ರೋಹಿಯು ಇಂತಹ ಪಾಪಿಗಳು ಯಾರೆ ಆಗಿರಲಿ ಧನುರ್ಮಾಸದ ವ್ಯತಿಪಾತದಲ್ಲಿ ಹುಗ್ಗಿಯನ್ನು ದಾನಮಾಡಿದರೆ ಆಯಾಪಾಪದಿಂದ ಮುಕ್ತರಾಗುತ್ತಾರೆ .ದೇವತೆಗಳು ,ಋಷಿಗಳು ,ಪಿತೃಗಳು ,ಮಹೇಶ್ವರ ನೇ ಮೊದಲಾದ ಇತರ ಎಲ್ಲಾ ಮಹಾದೇವತೆಗಳು 
ಮಾರ್ಗಶಿರಮಾಸದ ವ್ಯತಿಪಾತದಲ್ಲಿ ಮುದ್ಗಾನ್ನದಾನವನ್ನು ಪ್ರಶಂಸಿಸುತ್ತಾರೆ.

ಧನುರ್ಮಾಸದ ಉಷಃಕಾಲದಲ್ಲಿ ವಿಷ್ಣುವಿಗೆ ಮುದ್ಗಾನ್ನ ನೈವೇದ್ಯವನ್ನು ಮಾಡಿ ಪಿತೃಗಳನ್ನು  ಉದ್ದೆಶಿಸಿ ಬ್ರಾಹ್ಮಣ ಭೋಜನ ಮಾಡಿಸಿದರೆ ಬರುವ ಪುಣ್ಯಫಲವನ್ನು ಹೇಳುತ್ತೆನೆ ಕೇಳು ಗಯಾ ಕ್ಷೇತ್ರದಲ್ಲಿಯೂ ರಾಮಸೇತುವಿನಲ್ಲಿಯೂ ಚೆನ್ನಾಗಿ ಹತ್ತು ಸಾವಿರ ಶ್ರಾದ್ಧಗಳನ್ನು ಮಾಡಿಸಿದರೆ ಎಷ್ಟು ಪುಣ್ಯ ಬರತ್ತದೋ ಅಷ್ಟು ಪುಣ್ಯವು ಇದೋಂದರಿಂದಲೇ ಬರುತ್ತದೆ . ಈರೀತಿ ಶ್ರೀಹರಿಗೆ ಮುದ್ಗಾನ್ನ ನೀವೇದನ ಮಾಡಿ ಬ್ರಾಹ್ಮಣ ಭೋಜನಮಾಡಿಸಿದರೆ ಹರಿಪದವನ್ನು  (ವೈಕುಂಠವನ್ನು ) ಪಡೆಯುತ್ತಾರೆ .
ಧನುರ್ಮಾಸದ ಉಷಃಕಾಲದಲ್ಲಿ ಸಕ್ಕರೆ , ತುಪ್ಪ ,ಹಣ್ಣುಗಳಿಂದ ಸಹಿತವಾದ ಹುಗ್ಗಿಯನ್ನು ಪರಮಾತ್ಮನಿಗೆ ಸಮರ್ಪಿಸಿ ಅನಂತರ ಬ್ರಾಹ್ಮಣರಿಗೆ ಆ ಮುದ್ಗಾನ್ನವನ್ನು ದಾನ ಮಾಡುವವನಿಗೆ ಕಾಯಕ್ಲೇಶಕರವಾದ ಅನೆಕ ತೀರ್ಥಸಂಚಾರ ಸ್ನಾನಗಳಿಂದ ಕೊಟಿಗಟ್ಟಲೇ ವ್ರತಗಳಿಂದ ಬರುವ ಪುಣ್ಯವೆಲ್ಲವೂ ಈ ಮುದ್ಗಾನ್ನದಾನದಿಂದಲೇ ಉಂಟಾಗುತ್ತದೆ .

ಯಾರುಧನುರ್ಮಾಸದ ಪ್ರಾತಃಕಾಲದಲ್ಲಿ ಹೊರಗಿನ ನೀರಿನಲ್ಲಿ ಸ್ನಾನ ಮಾಡಿ ಶ್ರೀಹರಿಪೂಜೆಯನ್ನು ಮಾಡುತ್ತಾರೋ ಇಂದ್ರಾದಿಗಳೂ ಕೂಡ ಅವರನ್ನು ಓಲೈಸುತ್ತಾರೆ . ಎಲ್ಲಾ ಪ್ರಾಣಿಗಳೂ ಅವನಿಗೆ ಹೆದರುತ್ತದೆ . ಆರೀತಿ ಧನುರ್ಮಾಸದಲ್ಲಿ ಪ್ರಾತಃಕಾಲ ಬಹಿರ್ಜಲದಲ್ಲಿ ಸ್ನಾನ ಮಾಡುವವನು ಕಾವೇರ್ಯಾದಿ ಸಮಸ್ತ ನದಿಗಳಲ್ಲಿಯೂ ಸ್ನಾನ ಮಾಡಿದಂತಾಗುತ್ತದೆ .

ಒಂದು ಸಾವಿರ ಅರ್ಧೋದಯ  ಪುಣ್ಯಕಾಲಗಳು ವಾಜಪೇಯಾದಿ ಯಾಗಗಳು ಇವು ಯಾವುವೂ ಮಾರ್ಗಶೀರ್ಷಮಾಸದ ವ್ಯತಿಪಾತದ ಹದಿನಾರನೆಯ ಒಂದು ಭಾಗಕ್ಕೂ ಸಮವಾಗಲಾರವು .

ವ್ಯತಿಪಾತದಲ್ಲಿ ಪಿತೃಗಳನ್ನು ಉದ್ದೇಶಿಸಿ ತರ್ಷಣ ಕೂಡಬೇಕು . ಶ್ರೀಹರಿಗೆ ಮೂಲಮಂತ್ರದಿಂದ ಅರ್ಘ್ಯ ಕೂಡಬೇಕು .
ಆಗ್ನೇಯಪುರಾಣ 52ನೇ ಅಧ್ಯಾಯ
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )

ಧನುರ್ಮಾಸ ಮಹಾತ್ಮೆ - 8 (ಸ್ಮೃತಿ ಮುಕ್ತಾವಳಿ)

ಅರ್ಚಯಿತ್ವಾ ಹರಿಂ ಪಶ್ಚಾತ್ ಧನುರ್ಮಾಸೇಂತ್ಯಯಾಮಕಮ್ |
ಪಶ್ಚಾತ್ ಸಂಧ್ಯಾಮುಪಾಸಿತ ಧರ್ಮಲೋಪೋ ನ ವಿದ್ಯತೇ ||

ಧನುರ್ಮಾಸದಲ್ಲಿ ಕೊನೆಯ ಯಾಮದಲ್ಲಿ (ಬೆಳಗಿನ ಜಾವ 4:30 ರಿಂದ 6:00 ಘಂಟೆ ಒಳಗೆ ) ಹರಿಪೂಜೆಯನ್ನು ಮಾಡಿ ಅನಂತರ ಸಂಧ್ಯಾವಂದನೆ. ಮಾಡಬೇಕು ಹೀಗೆ ಮಾಡಿದರೂ ಧರ್ಮಲೋಪ ಆಗುವುದಿಲ್ಲ..
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ ): 

ಧನುರ್ಮಾಸ ಮಹಾತ್ಮೆ -  9 (ಸ್ಮೃತಿ ಮುಕ್ತಾವಳಿ)

ಕೋದಂಡಸ್ಥೇ ಸವಿತರಿ ಪ್ರತ್ಯುಷಃ ಪೂಜನಾದ್ಧರೇಃ |
ಸಹಸ್ರಬ್ದಾರ್ಚನಫಲಂ ದಿನೇನೈಕೇನ ಲಭ್ಯತೇ ||

ಧನುರಾಶಿಯಲ್ಲಿ ಸೂರ್ಯನಿರುವಾಗ ಬೆಳಗಿನ ಜಾವದಲ್ಲಿ ಶ್ರೀಹರಿಯಪೂಜೆಯನ್ನು ಮಾಡಿದರೆ ಒಂದು ದಿನದ ಪೂಜೆಯಿಂದ ಒಂದು ಸಾವಿರ ವರ್ಷಗಳ ಪೂಜೆಯ ಫಲವು ಬರತ್ತದೆ ಎಂದು ಪಂಚರಾತ್ರ ಸಂಹಿತೆಯಲ್ಲಿ ಹೇಳಿದೆ.
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )

ಧನುರ್ಮಾಸ ಮಹಾತ್ಮೆ -  10 (ಸ್ಮೃತಿ ಮುಕ್ತಾವಳಿ)

ಧನುರ್ಮಾಸಂ ಗತೇ ಭಾನೌ ಪ್ರಾತರುತ್ಥಾಯ ಯೋ ದ್ವಿಜಃ |
ಹರೇಃ ಪೂಜಾಂ ಪ್ರಕುರ್ವಾಣೋ ಲಭತೇ ಹರಿಮಂದಿರಮ್ ||

ಸಂಗ್ರಹವೆಂಬ ಧರ್ಮಶಾಸ್ತ್ರ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ . ಸೂರ್ಯನು ಧನುರಾಶಿಗೆ ಬಂದಾಗ ಯಾವ ದ್ವಿಜನು ಪ್ರಾತಃಕಾಲದಲ್ಲಿ ಎದ್ದು ಹರಿಪೂಜೆ ಮಾಡುತ್ತಾನೋ ಅವನು ವೈಕುಂಠ ಲೋಕವನ್ನು ಪಡೆಯುತ್ತಾನೆ ಎಂದು ಸಂಗ್ರಹವೆಂಬ ಧರ್ಮಶಾಸ್ತ್ರದಲ್ಲಿ ಹೇಳಿದೆ.
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )
ಧನುರ್ಮಾಸ ಮಹಾತ್ಮೆ.ಮುಗಿಯಿತು
             ಶ್ರೀಕೃಷ್ಣಾರ್ಪಣಮಸ್ತು
ಶ್ರೀದಶಪ್ರಮತಿ ವ್ರತಾನುಷ್ಠಾನ. ಚಿಂತನ ಗ್ರೂಪ್
*************

ಧನುರ್ಮಾಸ ಡಿಸೆಂಬರ್ 16 ರಿಂದ ಜನೆವರಿ 14 ರವರೆಗೆ


ಧನುರ್ಮಾಸದ ವಿಶೇಷತೆ ಏನು? ಧನುರ್ಮಾಸದ ವಿಶೇಷತೆ

ಕೃಷ್ಣನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ "ಮಾಸಾನಾಂ ಮಾರ್ಗಶೀರ್ಷೋಸ್ಮಿ" ಎಂದು ಅಪ್ಪಣೆ ಕೊಡಿಸಿದ್ದಾನೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ. ಅದರಂತೆಯೇ ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿಯ) "ಧನುರ್ಮಾಸ" ಎಂದು ಕರೆಯುತ್ತಾರೆ. ಈ ಮಾಸದಲ್ಲಿ ವಿಶೇಷವಾಗಿ ಚಳಿಚಳಿ ಇರುತ್ತದೆ.

ಚಳಿಯೆಂದು ಬಹಳ ಹೊತ್ತು ಹಾಸಿಗೆ ಮೇಲೆ ಹೊದ್ದು ಮಲಗುವುದು ಅನಾರೋಗ್ಯ. ಏನು ತಿಂದರೂ ಭಸ್ಮ ಮಾಡಿಬಿಡುವಂತಹ ಉತ್ತಮವಾದ ಹವೆ. ಡಿಸೆಂಬರ್ ತಿಂಗಳೆಂದರೆ ಹೇಳಿಕೇಳಿ ಮೈಕೊರೆವ ಚಳಿಗಾಲ. ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಹೆಸರು. ಇಂತಹ ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಒಂದು ತಿಂಗಳು ಹುಗ್ಗಿಯನ್ನು ತಯಾರು ಮಾಡಿ ಧನುರ್ ನಾರಾಯಣನಿಗೆ ಸಮರ್ಪಿಸುವುದು ಹಿಂದೂ ಸಂಪ್ರದಾಯ.

ಮುದ್ಗಾನ್ನವೆಂದರೇನು ? ಮುದ್ಗಾನ್ನ ಎಂದರೆ ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಜಾಜಿಕಾಯಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಮುದ್ಗಾನ್ನ.

ಧನುರ್ಮಾಸದಲ್ಲಿ ದೇವರ ಪೂಜೆಗೆ, ನೈವೇದ್ಯ ಪ್ರಸಾದಕ್ಕೆ ಮುದ್ಗಾನ್ನವೇ ಏಕೆ? ಇದಕ್ಕೆ ನಾನಾ ಕಾರಣಗಳುಂಟು. ಮನುಷ್ಯ ಶುದ್ಧ ಸೋಮಾರಿ, ಶಾಸ್ತ್ರದ ಕಟ್ಟುಪಾಡುಗಳಿಲ್ಲವಾದರೆ ಮನುಷ್ಯ ಬಿಸಿಲು ಮೈಸೋಂಕುವರೆಗೂ ಹೊದ್ದ ಕಂಬಳಿಯ ಮುಸುಕನ್ನು ಸರಿಸುತ್ತಲೇ ಇರಲಿಲ್ಲ. ಆದರೆ ವಸ್ತುತಃ ಸೂರ್ಯೋದಯವಾದೊಡನೆ ಚಳಿ ಹೆಚ್ಚಾಗುತ್ತದೆ. ಆದ್ದರಿಂದಲೇ ಮೈಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಪವಿತ್ರ ಸಾತ್ವಿಕ ಆಹಾರ ಎಂದರೆ ಹುಗ್ಗಿ. ಚಳಿಗಾಲದಲ್ಲಿ ಚರ್ಮ ಒಡೆದು ರೂಪಗೊಳ್ಳುವುದರಿಂದ ಚರ್ಮವನ್ನು ಸ್ನಿಗ್ಧಗೊಳಿಸುವ ಆಹಾರದ ಸೇವನೆ ತೀರಾ ಅವಶ್ಯ. ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸಮಂಜಸ ಎಂಬುದು ನಿಮಗೆ ತಿಳಿದಿರಲಿ. ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ. ಒಮ್ಮೆ ಇಂದ್ರ ದೇವರು ರಾಜ್ಯ ಭ್ರಷ್ಟರಾದಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು, ಅದರ ಫಲವಾಗಿ ಇಂದ್ರ ದೇವರಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ.

ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ. ಅದರಂತೆ ಉತ್ತರಾಯಣವು ಹಗಲಿನ ಸಮಯ ಆದರೆ ಈ ಧನುರ್ಮಾಸವು ಹಗಲು ರಾತ್ರಿ ಎರಡು ಸೇರಿದ ಸಮಯವೆಂದು ಹೇಳಲಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಯಾರು ಎದ್ದು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವರ ಮನೋಭೀಷ್ಟಗಳು ಅಕ್ಷಯವಾಗಿ ನೆರವೇರುತ್ತದೆ. ನಕ್ಷತ್ರಗಳು ಕಾಣುವ ಸಮಯ ಉತ್ತಮ ಪೂಜಾಫಲ. ಅವು ಮರೆಯಾದರೆ ಮಧ್ಯಮ, ಮುಂಜಾನೆಯ ಹೊಂಬೆಳಕು ಮೂಡಿದರೆ ಅಧಮಕಾಲ. ಮಧ್ಯಾಹ್ನವಂತು ವ್ಯರ್ಥ.
ಭಾಗವತದಲ್ಲಿ ಗೋಪಿಯರ ಕಾತ್ಯಾಯನಿ ವ್ರತವನ್ನು ಕುರಿತು ಹೇಳಲಾಗಿದೆ. ಧನುರ್ಮಾಸದ ಮುಂಜಾವಿನಲ್ಲಿ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧವಾದ ಇಷ್ಟಾರ್ಥವನ್ನು ಕೊಡುತ್ತದೆ ಎಂಬುದನ್ನು ಸೂಚಿಸುವುದಕ್ಕಾಗಿಯೇ ಈ ವ್ರತದ ವಿಧಿಯನ್ನು ಗೋಪಿಯರ ಕೂಡಿ ನಂದಗೋಪನ ಮಗನಾದ ಶ್ರೀಕೃಷ್ಣ ಪರಮಾತ್ಮನನ್ನು ಪತಿಯಾಗಿ ವರಿಸಲು ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನ್ನೇ ದೊರಕಿಸಿಕೊಡುವುದು ಮಾಸವಾಗಿರುವುದರಿಂದ ಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ, ಎಲ್ಲರಿಗೂ ಎಲ್ಲ ದೇಗುಲಗಳಲ್ಲಿಯೂ ಧನುರ್ಮಾಸದ ಆಚರಣೆಗಳನ್ನು ನಡೆಸುತ್ತಾರೆ. ಧನುರ್ಮಾಸದ ಪೂಜಾ ನೈವೇದ್ಯ ನಿಯಮವನ್ನು ತಿಂಗಳುದ್ದಕ್ಕೂ ಪ್ರತಿದಿನ ನಡೆಸಬೇಕೆಂದು ವಿಧಿಸಲಾಗಿರುವುದಾದರೂ, ಆಪದ್ಧರ್ಮಿಗಳು ಒಂದೇ ಒಂದು ದಿನವಾದರೂ ಧನುರ್ಮಾಸ ವ್ರತವನ್ನು ನಡೆಯಿಸಿ ತೃಪ್ತಿಪಡೆಯುವುದುಂಟು. ಇದನ್ನೂ ಮಾಡಲಾರದವರು ಪೌಷ್ಯಮಾಸದಲ್ಲಿ ಬರುವ "ಮುಕ್ಕೋಟಿ ದ್ವಾದಶೀ"ಯಂದು ಧನುರ್ಮಾಸದ ಕೃತಾರ್ಥತೆಯ ಸಮಾಧಾನವನ್ನು ತಾಳುವರು. ತಿರುಪತಿಯ ತಿಮ್ಮಪ್ಪನಿಗೆ ಸಲ್ಲುವ ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಪೂಜಾ ಕೈಂಕರ್‍ಯಗಳು ವೈಶಿಷ್ಟ್ಯಪೂರ್ಣವಾದುದು. ಧನುರ್ಮಾಸ ಪುಣ್ಯ ಪೂರ್ಣ ಮಾಸ; ಪರ್ವಪ್ರವರ ಪ್ರತಿಷ್ಠಿತ ಮಾಸ.
***********

ಧನುರ್ಮಾಸದ ಮಹತ್ವ -1*

ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ (ಹುಗ್ಗಿ )ಮುದ್ಗಾನ್ನ ವನ್ನು ನಿವೇದಿಸುವರು

ಧನುರ್ಮಾಸ ದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ
ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ

ಕೊದoಡಸ್ಥೆ ಸವಿತರಿ ಮುದ್ಗಾನ್ನo ಯೋ ನಿವೇದಯೇತ್
ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ

ಧನುರ್ಮಾಸದಲ್ಲಿ ಯಾರು ಒಂದು ತಿoಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ.

ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ
ಅಧಮಾ ಸೂರ್ಯಸಹಿತಾ ಮಧ್ಯಹ್ನೇ ನಿಷ್ಫಲಾ ಭವೇತ್
********

ಧನುರ್ಮಾಸದ ಪೂಜಾ ಸಮಯ

ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ ಆಚರಿಸುವುದು ಉತ್ತಮ ಪಕ್ಷವಾಗಿದೆ.


ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್ದು.


ಆಯನo ದಕ್ಷಿಣo ರಾತ್ರಿರುತ್ತರo ತು ದಿವಾ ಭವೇತ್

ದೈವo ತತ್ತದಹೋರಾತ್ರಕo ಚಾಪಮಾನo ವಿಧುರ್ಭುಧಾಃ
ಅರುಣೋದಯಕಾಲದ ಪ್ರಾಮುಖ್ಯತೇ

ದಕ್ಷಿಣಾಯನದ ಆರು ತಿoಗಳುಗಳಲ್ಲಿ ಎರಡೆರಡು ತಿoಗಳಿಗೆ ಒಂದು ಯಾಮದಂತೆ ಯಾಮತ್ರಯ ಭಗವಂತನಿಗೆ ಅತ್ಯoತ ಪ್ರಿಯವಾಗಿದ್ದು ಮೊದಲಿನ ಎರಡು ಯಾಮಗಳು ,ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ ಆಷಾಢ ಏಕಾದಶಿಯಿoದ ಪ್ರಾರoಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ಭಗವಂತನು ಕಾರ್ತೀಕ ಮಾಸದ ಶುಕ್ಲ (ಉತ್ಥಾನ) ದ್ವಾದಶಿಯಂದು ಏಳುವನು.ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು ನಂತರ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ .


ಕಾರ್ತೀಕಸ್ಯ ಸಿತೇ ಪಕ್ಷೇ ತದೇವ ದಿನಪಂಚಕಮ್

ವಿರೋಧಯoತಿ ದೇವೇಶo ಗತ್ವಾ ಸೇoದ್ರಾ ದಿವೌಕಸಃ

ಹೀಗೆ ಎದ್ದಿರುವ ಭಗವಂತನಿಗೆ ದೇವತೆಗಳು ಅರುಣೋದಯ ಕಾಲವಾದ ಧನುರ್ಮಾಸದಲ್ಲಿ ಹುಗ್ಗಿಯನ್ನು ನಿವೇದಿಸುವರು. ಆದ್ದರಿoದ ಪ್ರತಿಯೊಬ್ಬನೂ ಸೂರ್ಯನು ಧನುರಾಶಿಯಲ್ಲಿರುವವರೇಗು ಒಂದು ತಿoಗಳು ಕಾಲ ಸೂರ್ಯೋದಯ ಮೊದಲು ತೊoಬತ್ತಾರು ನಿಮಿಷ ಮೊದಲು ದೇವರಪೂಜೆಯನ್ನು ಮಾಡಿ ಮುದ್ಗಾನ್ನ(ಹುಗ್ಗಿವನ್ನು ಹಾಗೂ ಇತರ ಪಾಯಸಾದಿ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯ ಮಾಡಬೇಕು.ಸಂಧ್ಯಾವಂಧನೆ ಮೊದಲಾದ ನಿತ್ಯಾಹ್ನಿಕವನ್ನು ಪೂಜಾ ನಂತರ ಮಾಡಿದರೂ ದೋಷವಿರುವುದಿಲ್ಲ .ಮೊದಲೂ ಭಗವಂತನಿಗೆ ಪೂಜೆ ಹಾಗೂ ಹುಗ್ಗಿಯನ್ನು ನಿವೇದಿಸಿ ನಂತರ ಆಹ್ನಿಕವನ್ನು ಮಾಡಬಹುದು .


ಯಥಾ ಸಂಕೋಚ್ಯ ಸತ್ಕರ್ಮ ಭುoಕ್ತೇ sಲ್ಪದ್ವಾದಶಿ ದಿನೇ

ತಥಾ ಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾನ್ಯಾರ್ಚಯೇತ್

ಉಷಃಕಾಲದಲ್ಲಿ ಎದ್ದು ಪೂಜೆ ಹುಗ್ಗಿ ನಿವೇದನೆಯನ್ನು ಮಾಡುತ್ತಿದ್ದರೆ ನಿತ್ಯ ಸಂಧ್ಯಾವಂದನಾದಿ ಲೋಪ ಬರುತ್ತದೆ ಎಂದು ಯಾರದರು ದೇವರ ಪೂಜಾದಿಗಳನ್ನು ಮಾಡದೆ ನಿತ್ಯಾಹ್ನಿಕ ದಲ್ಲೇ ನಿರತನಾಗುವನೋ ಏಳು ಜನ್ಮ ನಿರ್ಧನನಾಗುವನು.


ಯಃ ಕರ್ಮಹಾನಿಮಾಶoಕ್ಯ ನಾರ್ಚಯೇದುಷನೀಶ್ವರಮ್

ವಿಷ್ಣವೇ ಕಾರ್ಮುಕೇ ಪಾತ್ರಃ
ಸಪ್ತ ಜನ್ಮಸು ನಿರ್ಧನಃ

ಅರುಣೋದಯ ಕಾಲದಲ್ಲಿ ಮೊದಲು ಷೋಡೋಶೋಪಾಚರ ಪೂಜೆ ,ನಂತರ ಪಾಯಸ ಮುoತಾದ ಭಕ್ಷ್ಯ ಗಳ ಜೊತೆಗೆ ಹುಗ್ಗಿಯ ನೈವೇದ್ಯ ,ಆನಂತರ ನಿತ್ಯಾಹ್ನಿಕವನ್ನು ಮಾಡಿ ಸೂರ್ಯೋದಯವಾದ ಮೇಲೆ ಬ್ರಾಹ್ಮಣರ ಭೋಜನವನ್ನು ಮಾಡಿಸಿ ತಾನು ಭುoಜಿಸಬೇಕು.


ಆರ್ಚಯಿತ್ವಾ ಹರಿo ಪಶ್ಚಾತ್ ಧನುರ್ಮಾಸೇoತ್ಯಾಮಾಕo

ಪಶ್ಚಾತ್ ಸಂಧ್ಯಾಮುಪಾಸೀತ ಧರ್ಮಲೋಪೋ ನ ವಿಧ್ಯತೇ
*****************

ಧನುರ್ಮಾಸದ ಮಹತ್ವ -2

ಮುದ್ಗಾನ್ನ(ಹುಗ್ಗಿ)ದಲ್ಲಿ ಇರಬೇಕಾದ ಪದರ್ಥಗಳು ಮತ್ತು ಪ್ರಾಮಾಣ

ಅಕ್ಕಿಯ ಪ್ರಾಮಾಣದಷ್ಟೇ ಹೆಸರುಬೆಳೆಯನ್ನು ಹಾಕಿ ತಯಾರಿಸಿದ ಮುದ್ಗಾನ್ನವು ಉತ್ತಮವಾದದ್ದು .

ಮುದ್ಗo ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಚಯತೇ

ಅಕ್ಕಿಯ ಪ್ರಾಮಾಣದಲ್ಲಿ ಅರ್ಧದಷ್ಟು

ಮಾತ್ರ ಹೆಸರುಬೇಳೆಯನ್ನು ಹಾಕಿ ತಯಾರಿಸಿದ ಹೂಗ್ಗಿಯು ಮಧ್ಯಮವಾದದ್ದು.ಅಕ್ಕಿಯ ಪ್ರಮಾಣದ ಕಾಲುಭಾಗ (1/4)ಹೆಸರುಬೆಳೆಯನ್ನು ಉಪಯೋಗಿಸಿ ತಯಾರಿಸಿದ ಹುಗ್ಗಿಯು ಅಧಮವೆನಿಸಿದೆ.ಈ ರೀತಿಯ ಉತ್ತಮೋತ್ತಮ ಹುಗ್ಗಿ ಯಿoದ ಬರುವ ಫಲವು ಉತ್ತಮೋತ್ತಮ ಮಧ್ಯಮಾಧಮ ವಾಗಿರುತ್ತದೆ. ಅಕ್ಕಿಯು ಒಂದು ಸೇರು ಇದ್ದರೆ ,ಅದಕ್ಕೇ ಎರಡುಪಟ್ಟು ಎಂದರೆ ಎರಡು ಸೇರು ಹೆಸರು ಬೆಲೆಯನ್ನು ಸೇರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೇಷ್ಠವಾಗಿದೆ.

ಹುಗ್ಗಿಯಲ್ಲಿರಬೇಕಾದ ಪದಾರ್ಥಗಳು

ದಧ್ಯಾದ್ರಾಕಂ ಚ ಮುದ್ಗಾನ್ನo ದಧ್ಯಾಜ್ಯೈಲಾಗುಡೂಜ್ವಲಂ
ಸಸುಖೊಷ್ಠo ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್

ಹೆಸರುಬೇಳೆ,ಅಕ್ಕಿ,ಬೆಲ್ಲ,ಶುoಠಿ,ಏಲಕ್ಕಿ,ತುಪ್ಪ ,ಮೊಸರು.ಇವುಗಳನ್ನು ಸೇರಿಸಿ ಮಾಡಿದ ಮುದ್ಗಾನ್ನ(ಹುಗ್ಗಿ)ಯನ್ನು ವಿಷ್ಣುವಿಗೆ ಅರ್ಪಿಸಬೇಕು .

ಯಸ್ತು ದಾರಿದ್ರ್ಯಬುಧ್ಯಾ ಮುದ್ಗಾನ್ನo ನ ನಿವೇದಯೇತ್
ವಿಷ್ಣವೇ ಕಾರ್ಮುಕೇ ಪ್ರಾತಃ ಸಪ್ತಜನ್ಮಸು ನಿರ್ಧನಃ

ನಾನು ದರಿದ್ರನೆoದು ಮುದ್ಗಾನ್ನವನ್ನು ಭಗವಂತನಿಗೆ ಆರ್ಪಿಸದೆ ಇರಬಾರದು ಹುಗ್ಗಿಯನ್ನು ನಿವೇದಿಸದ ವ್ಯಕ್ತಿಯು ಏಳು ಜನ್ಮಗಳಲ್ಲಿ ದರಿದ್ರನಾಗುವನು..

ಆದ್ದರಿoದ ಪ್ರತಿಯೊಬ್ಬರು ಧನುರ್ಮಾಸದಲ್ಲಿ ಮುದ್ಗಾನ್ನವನ್ನು ನೀವೇದಿಸಬೇಕು.
ಶ್ರೀದಶಪ್ರಮತಿ ವ್ರತಾನುಶ್ಠಾನ ಚಿಂತನ ಗ್ರೂಪ್
********

ಧನುರ್ಮಾಸದ ಮಹತ್ವ -3*

ಧನುರ್ಮಾಸದಲ್ಲಿ ಮುದ್ಗಾನ್ನ ನೈವೇದ್ಯ ಮತ್ತು ಭದ್ರಲಕ್ಷ್ಮೀ ಸ್ತವದ ಮಹತ್ವ


ಇಂದ್ರದೇವರ ಪತ್ನಿಯಾದ ಶಚೀದೇವಿಯು ತನ್ನ ಪತಿಯಾದ ಇಂದ್ರದೇವರು ಇಂದ್ರಪದವಿಯನ್ನು ಕಳೆದು ಕೊoಡು ಪದವಿಯಿಂದ ಚ್ಯುತರಾದಾಗ ದುಃಖಗೊoಡ ಶಚಿದೇವಿಯು ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ತನ್ನ ಪತಿಯನ್ನು ಹಾಗೂ ನಿತ್ಯೈಶ್ವರ್ಯವನ್ನು ಪಡೆದಳು.


ನೀವೇದಯಿತ್ವಾ ಮುದ್ಗಾನ್ನಾನ್ ಪುರೇoದ್ರಾಣಿ ಸಹಾದ್ರಾಕಂ

ವಿಷ್ಣವೇ ದುಃಖಿತಾ ಸಾದ್ವಿ ನಿತೈಶ್ವರ್ಯಮವಾಪ ಸ

ಧನುರ್ ಮಾಸದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ಲಕ್ಷ್ಮೀದೇವಿಯ ದ್ವಾದಶನಾಮಗಳಿoದ ಹನ್ನೆರಡು ಬಾರಿ ಅರಿಷಿಣ ,ಕುಂಕುಮ,ಪುಷ್ಪಾದಿಗಳಿoದ ಅರ್ಚಿಸಿ ಹರಿಗೆ ನಿವೇದಿತವಾದ ಮುದ್ಗಾನ್ನವನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.


ಧನುರ್ಮಾಸದಲ್ಲಿನ ಮುದ್ಗಾನ್ನ ನೀವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುoಟು ಮಾಡುವುದು.ಶತೃಗಳು ನಶಿಸುವರು. ದೀರ್ಘವಾದ ಆಯುಸ್ಸನ್ನು ಪಡೆಯಬಹುದು.ಧನ,ಧಾನ್ಯ ಸಂಪತ್ತು,ಮುoತಾದ ಸಕಲ ಭಾಗ್ಯವುoಟಾಗುವುದು.ಜನ್ಮ ಜನ್ಮಗಳಲ್ಲಿಯೂ ವಿಷ್ಣುಭಕ್ತನಾಗಿ ಜನಿಸುವನು.


ಧನುರ್ಮಾಸದಲ್ಲಿ ಪ್ರತಿನಿತ್ಯ ಪಠಿಸಬೇಕಾದ ಭಧ್ರಲಕ್ಷ್ಮೀಸ್ತವ


ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |

ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |

ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |

ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || ೩ ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಕೋಣೇಶ್ವರೀ |

ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |

ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || ೫ ||

ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |

ಕಾಲೇ ಸ್ನಾತ್ವಾಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||

ಧನುರ್ಮಾಸದ ಮಹತ್ವ -4

ಧನುರ್ವ್ಯತಿಪಾತದ ಮಹತ್ವ

ವ್ಯತಿಪಾತಯೆoಬುದು ಒಂದು ಯೋಗ ವಿಶೇಷವಾಗಿದೆ. ಚಂದ್ರ ಹಾಗೂ ಸೂರ್ಯರು ಪರಸ್ಪರವಾಗಿ ಒಬ್ಬರ ಮೇಲೊಬ್ಬರ ದೃಷ್ಟಿ ಬಿದ್ದ ಪರಿಣಾಮವಾಗಿ ಕೋಪದ ಸಂಪಾತದಿoದ ಒಬ್ಬ ಭಯoಕರ ಪ್ರಲಯ ಕಾಲದ ಅಗ್ನಿಗೆ ಸದೃಶನ ವ್ಯಕ್ತಿಯು ಜನಿಸಿದನು .ಸೂರ್ಯನ ದೃಷ್ಟಿಪಾತ ,ಹಾಗೂ ಚಂದ್ರನ ದೃಷ್ಟಿಪಾತ ಹೀಗೆ ವಿಭಿನ್ನವಾದ ದೃಷ್ಟಿ ಜನಿಸಿದ ಇವನು ವ್ಯತಿಪಾತ ಎಂದೆನಿಸಿದನು.

ಚಂದ್ರಾರ್ಕಯೋಃ ನಯನವೀಕ್ಷಣ ಜಾತ ಮೂರ್ತಿಃ |
ಕಾಲನಲದ್ಯುತಿನಿಭಃ ಪುರುಷೋsತಿರೌದ್ರಃ ||

ವ್ಯತಿಪಾತ ಎಂದರೇನು ?

ರವಿವಾರದಿoದ ಕೊಡಿದ ಅಮಾವಾಸ್ಯೆಯಲ್ಲಿ ಶ್ರವಣ ,ಆಶ್ವಿನಿ ,ಧನಿಷ್ಠಾ ,ನಾಗದೇವತ, ಆರ್ದ್ರಾ,ಮೃಗಶಿರಾ ನಕ್ಷತ್ರಗಳಿದ್ದರೆ ವ್ಯತಿಪಾತಯೋಗ ಎಂದು ಕರೆಯುತ್ತಾರೆ.

ಶ್ರವಣಾಶ್ಚಿ ಧನಿಷ್ಠಾರ್ದ್ರ ನಾಗದೇವತ ಮಸ್ತಕೈಃ |
ಯದ್ಯಮಾ ರವಿವಾರೇಣ ವ್ಯತಿಪಾತಃ ಸ ಉಚ್ಯತೇ ||

ಮೇಷದಲ್ಲಿ ರವಿಯಿದ್ದು ,ಸಿoಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು ,ದ್ವಾದಶಿಯಲ್ಲಿ(ಶುಕ್ಲ ಪಕ್ಷ)

ಹಸ್ತನಕ್ಷತ್ರವಿದ್ದರೂ ವ್ಯತಿಪಾತಯೋಗವೇನಿಸುವುದು.

ವ್ಯತಿಪಾತಯೋಗದಲ್ಲಿ ಪಿತೃತರ್ಪಣವು ಅತ್ಯಂತ ಶ್ರೇಷ್ಠವಾಗಿದ್ದು ಪಿತೃಗಳನ್ನು ಉತ್ತಮಲೋಕಕ್ಕೆ ಒಯ್ಯುವುದು.

ಸೂರ್ಯಚಂದ್ರಾದಿಗಳು 27 ಯೋಗಗಳಲ್ಲಿ ಹದಿನೇಳನೇ ಅಧಿಪತಿಯನ್ನಾಗಿ ಮಾಡಿ ,ನಿನ್ನ ದಿವಸಗಳಲ್ಲಿ ಯಾರು

ಸ್ನಾನ -ದಾನಾ ದಿಗಳನ್ನು ಮಾಡುವರೋ ಅವರ ದಾನಾದಿಗಳು ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು.ಅಮಾವಾಸ್ಯೆಯಲ್ಲಿ ಮಾಡಿದ ದಾನಾದಿಗಳು ನೂರು ಪಟ್ಟು ಫಲವಾದಾರೆ ,ಸಂಕ್ರಾoತಿಯಲ್ಲಿ ಅಮಾವಾಸ್ಯೆಗಿoತ ನೂರು ಪಟ್ಟು ಸೋಮ -ಸೂರ್ಯಾದಿ ಗ್ರಹಣಗಳಲ್ಲಿ ಸಾವಿರ ಪಟ್ಟು ವ್ಯತಿಪಾತದಲ್ಲಿ ಲೆಕ್ಕವಿಲ್ಲದಷ್ಟು ಪಟ್ಟು ಪುಣ್ಯವು ವೃದ್ಧಿಸುತ್ತದೆ.
ಅಸoಖ್ಯೆಯಂ ವ್ಯತಿಪಾತೇ ದಾನo ವೇದವಿದೋ ವಿಧುಃ ||
***********

ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಒಂದು ತಿಂಗಳು ಹುಗ್ಗಿಯನ್ನು ತಯಾರು ಮಾಡಿ ಧನುರ್ ನಾರಾಯಣನಿಗೆ ಸಮರ್ಪಿಸುವುದು ಹಿಂದೂ ಸಂಪ್ರದಾಯ.
ಮುದ್ಗಾನ್ನವೆಂದರೇನು ? ಮುದ್ಗಾನ್ನ ಎಂದರೆ ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಜಾಜಿಕಾಯಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಮುದ್ಗಾನ್ನ.
ಧನುರ್ಮಾಸದಲ್ಲಿ ದೇವರ ಪೂಜೆಗೆ, ನೈವೇದ್ಯ ಪ್ರಸಾದಕ್ಕೆ ಮುದ್ಗಾನ್ನವೇ ಏಕೆ? ಇದಕ್ಕೆ ನಾನಾ ಕಾರಣಗಳುಂಟು. ಮನುಷ್ಯ ಶುದ್ಧ ಸೋಮಾರಿ, ಶಾಸ್ತ್ರದ ಕಟ್ಟುಪಾಡುಗಳಿಲ್ಲವಾದರೆ ಮನುಷ್ಯ ಬಿಸಿಲು ಮೈಸೋಂಕುವರೆಗೂ ಹೊದ್ದ ಕಂಬಳಿಯ ಮುಸುಕನ್ನು ಸರಿಸುತ್ತಲೇ ಇರಲಿಲ್ಲ. ಆದರೆ ವಸ್ತುತಃ ಸೂರ್ಯೋದಯವಾದೊಡನೆ ಚಳಿ ಹೆಚ್ಚಾಗುತ್ತದೆ. ಆದ್ದರಿಂದಲೇ ಮೈಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಪವಿತ್ರ ಸಾತ್ವಿಕ ಆಹಾರ ಎಂದರೆ ಹುಗ್ಗಿ.
ಚಳಿಗಾಲದಲ್ಲಿ ಚರ್ಮ ಒಡೆದು ರೂಪಗೊಳ್ಳುವುದರಿಂದ ಚರ್ಮವನ್ನು ಸ್ನಿಗ್ಧಗೊಳಿಸುವ ಆಹಾರದ ಸೇವನೆ ತೀರಾ ಅವಶ್ಯ. ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸಮಂಜಸ ಎಂಬುದು ನಿಮಗೆ ತಿಳಿದಿರಲಿ.
******

ಧನುರ್ಮಾಸ ಮಹಾತ್ಮೆ (ಸ್ಮೃತಿ ಮುಕ್ತಾವಳಿ)

ಧನುರ್ಮಾಸದಲ್ಲಿ ವ್ಯತಿಪತದ ಮಹತ್ವ

ಯಃ ಸ್ನಾತ್ವೋಷಸಿ ಚಾಪಕ್ಷೇ ಭಾಸ್ಕರೇ  ಭಕ್ತಿಮಾನ್ನರಃ |

ನಿವೇದಯನ್ಮೇ ಮುದ್ಗಾನ್ನಂ ಸ ವೈ ಭಾಗವತೋತ್ತಮಃ ||

ಯಃ ಕಾರ್ಮುಕಾರ್ಕೇ ಮುದ್ಗಾನ್ನಂ ಬ್ರಾಹ್ಮಣೇಭ್ಯಃ ಪ್ರಯಚ್ಛತಿ |

ತಸ್ಯ ಮುಕ್ತಿಂ ಪ್ರಯಚ್ಛಾಮಿ ಕಿಂ ಪುನರ್ಭೋಗಸಂಪದಃ ||

ಅಗ್ನಿಷ್ಟೋಮ ಸಹಸ್ರಾಣಿ ವಾಜಪೇಯ ಶತಾನಿ ಚ |

ಮುದ್ಗಾನ್ನಸ್ಯ ವ್ಯತಿಪಾತೆ ಚಾಪೇನಾರ್ಹತಿ ತುಲ್ಯತಾಮ್ ||

ವೇದಭ್ರಷ್ಟೋ ವ್ರತಭ್ರಷ್ಟಃ ಕರ್ಮಭ್ರಷ್ಟಃ ಸುಹೃದ್ರಿಪುಃ |

ಚಾಪೇ ಪಾತೇ ಚ ಮುದ್ಗಾನ್ನಂ ದತ್ವಾ ವಿಪ್ರಾಯ ಶುಧ್ಯತಿ ||

ಆಗ್ನೇಯಪುರಾಣದಲ್ಲಿ ಧನುರ್ಮಾಸ ವ್ಯತಿಪಾತದ ವಿಷಯದಲ್ಲಿ ಈ ರೀತಿಯಾಗಿ ಹೇಳಿದ್ದಾರೆ .ಸೂರ್ಯನು ಧನುರಾಶಿಯಲ್ಲಿದ್ದಾಗ ಭಕ್ತಿಮಂತನಾದ  ಮಾನವನು ಉಷಃಕಾಲದಲ್ಲಿ ಎದ್ದು ಸ್ನಾನಮಾಡಿ ನನಗೆ ಹುಗ್ಗಿ ಯನ್ನು ಸಮರ್ಪಿಸಬೇಕು  ಹೀಗೆ ಮಾಡುವವನೇ ಭಾಗವತಶ್ರೇಷ್ಠನು.


ಯಾವನು ಸೂರ್ಯನು ಧನುರಾಶಿಯಲ್ಲಿರುವಾಗ ಬ್ರಾಹ್ಮಣರಿಗೆ ಹುಗ್ಗಿ ಯನ್ನು ದಾನ ಮಾಡುತ್ತಾನೋ ಅವನಿಗೆ ಮುಕ್ತಿಯನ್ನು ಕೊಡುತ್ತೇನೆ.. ಇತರ ಭೋಗಸಂಪ್ಪತ್ತುಗಳು  ಕೊಡುತ್ತೆನೆಂದು ಹೇಳಬೇಕಾಗಿಯೇ ಇಲ್ಲ .


ಸಾವಿರ ಅಗ್ನಿಷ್ಟೋಮ ಯಾಗಗಳು .ನೂರು. ವಾಜಪೇಯ  ಯಾಗಗಳು ಇವು ಯಾವುವು ಧನುರ್ಮಾಸ ದ ವ್ಯತಿಪಾತದಲ್ಲಿ ಮುದ್ಗಾನ್ನ ದಾನಮಾಡಿದರೆ ಉಂಟಾಗುವ ಪುಣ್ಯಕ್ಕೆ ಸಮವಾಗಲಾರವು .


ವೇದಭ್ರಷ್ಟನು ಕರ್ಮಭ್ರಷ್ಟನು ಮಿತ್ರದ್ರೋಹಿಯು ಇಂತಹ ಪಾಪಿಗಳು ಯಾರೆ ಆಗಿರಲಿ ಧನುರ್ಮಾಸದ ವ್ಯತಿಪಾತದಲ್ಲಿ ಹುಗ್ಗಿಯನ್ನು ದಾನಮಾಡಿದರೆ ಆಯಾಪಾಪದಿಂದ ಮುಕ್ತರಾಗುತ್ತಾರೆ .ದೇವತೆಗಳು ,ಋಷಿಗಳು ,ಪಿತೃಗಳು ,ಮಹೇಶ್ವರ ನೇ ಮೊದಲಾದ ಇತರ ಎಲ್ಲಾ ಮಹಾದೇವತೆಗಳು


ಮಾರ್ಗಶಿರಮಾಸದ ವ್ಯತಿಪಾತದಲ್ಲಿ ಮುದ್ಗಾನ್ನದಾನವನ್ನು ಪ್ರಶಂಸಿಸುತ್ತಾರೆ.


ಧನುರ್ಮಾಸದ ಉಷಃಕಾಲದಲ್ಲಿ ವಿಷ್ಣುವಿಗೆ ಮುದ್ಗಾನ್ನ ನೈವೇದ್ಯವನ್ನು ಮಾಡಿ ಪಿತೃಗಳನ್ನು  ಉದ್ದೆಶಿಸಿ ಬ್ರಾಹ್ಮಣ ಭೋಜನ ಮಾಡಿಸಿದರೆ ಬರುವ ಪುಣ್ಯಫಲವನ್ನು ಹೇಳುತ್ತೆನೆ ಕೇಳು ಗಯಾ ಕ್ಷೇತ್ರದಲ್ಲಿಯೂ ರಾಮಸೇತುವಿನಲ್ಲಿಯೂ ಚೆನ್ನಾಗಿ ಹತ್ತು ಸಾವಿರ ಶ್ರಾದ್ಧಗಳನ್ನು ಮಾಡಿಸಿದರೆ ಎಷ್ಟು ಪುಣ್ಯ ಬರತ್ತದೋ ಅಷ್ಟು ಪುಣ್ಯವು ಇದೋಂದರಿಂದಲೇ ಬರುತ್ತದೆ . ಈರೀತಿ ಶ್ರೀಹರಿಗೆ ಮುದ್ಗಾನ್ನ ನೀವೇದನ ಮಾಡಿ ಬ್ರಾಹ್ಮಣ ಭೋಜನಮಾಡಿಸಿದರೆ ಹರಿಪದವನ್ನು  (ವೈಕುಂಠವನ್ನು ) ಪಡೆಯುತ್ತಾರೆ .


ಧನುರ್ಮಾಸದ ಉಷಃಕಾಲದಲ್ಲಿ ಸಕ್ಕರೆ , ತುಪ್ಪ ,ಹಣ್ಣುಗಳಿಂದ ಸಹಿತವಾದ ಹುಗ್ಗಿಯನ್ನು ಪರಮಾತ್ಮನಿಗೆ ಸಮರ್ಪಿಸಿ ಅನಂತರ ಬ್ರಾಹ್ಮಣರಿಗೆ ಆ ಮುದ್ಗಾನ್ನವನ್ನು ದಾನ ಮಾಡುವವನಿಗೆ ಕಾಯಕ್ಲೇಶಕರವಾದ ಅನೆಕ ತೀರ್ಥಸಂಚಾರ ಸ್ನಾನಗಳಿಂದ ಕೊಟಿಗಟ್ಟಲೇ ವ್ರತಗಳಿಂದ ಬರುವ ಪುಣ್ಯವೆಲ್ಲವೂ ಈ ಮುದ್ಗಾನ್ನದಾನದಿಂದಲೇ ಉಂಟಾಗುತ್ತದೆ .

ಯಾರುಧನುರ್ಮಾಸದ ಪ್ರಾತಃಕಾಲದಲ್ಲಿ ಹೊರಗಿನ ನೀರಿನಲ್ಲಿ ಸ್ನಾನ ಮಾಡಿ ಶ್ರೀಹರಿಪೂಜೆಯನ್ನು ಮಾಡುತ್ತಾರೋ ಇಂದ್ರಾದಿಗಳೂ ಕೂಡ ಅವರನ್ನು ಓಲೈಸುತ್ತಾರೆ . ಎಲ್ಲಾ ಪ್ರಾಣಿಗಳೂ ಅವನಿಗೆ ಹೆದರುತ್ತದೆ . ಆರೀತಿ ಧನುರ್ಮಾಸದಲ್ಲಿ ಪ್ರಾತಃಕಾಲ ಬಹಿರ್ಜಲದಲ್ಲಿ ಸ್ನಾನ ಮಾಡುವವನು ಕಾವೇರ್ಯಾದಿ ಸಮಸ್ತ ನದಿಗಳಲ್ಲಿಯೂ ಸ್ನಾನ ಮಾಡಿದಂತಾಗುತ್ತದೆ .


ಒಂದು ಸಾವಿರ ಅರ್ಧೋದಯ  ಪುಣ್ಯಕಾಲಗಳು ವಾಜಪೇಯಾದಿ ಯಾಗಗಳು ಇವು ಯಾವುವೂ ಮಾರ್ಗಶೀರ್ಷಮಾಸದ ವ್ಯತಿಪಾತದ ಹದಿನಾರನೆಯ ಒಂದು ಭಾಗಕ್ಕೂ ಸಮವಾಗಲಾರವು .


ವ್ಯತಿಪಾತದಲ್ಲಿ ಪಿತೃಗಳನ್ನು ಉದ್ದೇಶಿಸಿ ತರ್ಷಣ ಕೂಡಬೇಕು . ಶ್ರೀಹರಿಗೆ ಮೂಲಮಂತ್ರದಿಂದ ಅರ್ಘ್ಯ ಕೂಡಬೇಕು .

ಆಗ್ನೇಯಪುರಾಣ 52ನೇ ಅಧ್ಯಾಯ
( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )
***********

ಧನುರ್ಮಾಸ

ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿಯ) "ಧನುರ್ಮಾಸ" ಎಂದು ಕರೆಯುತ್ತಾರೆ. ಈ ಮಾಸದಲ್ಲಿ ವಿಶೇಷವಾಗಿ ಚಳಿಚಳಿ ಇರುತ್ತದೆ

ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಹೆಸರು. 

ಧನುರ್ಮಾಸದಲ್ಲಿ ಯಾರು ಬ್ರಾಹ್ಮೀ ಮುಹುರ್ತದಲ್ಲಿ ಎದ್ದು ವಿಷ್ಣವಿನೊಡನೆ ಲಕ್ಷ್ಮೀಯನ್ನು ಪೂಜಿಸಿ ಹುಗ್ಗಿಅನ್ನವನ್ನು ನೈವೆದ್ಯ ಮಾಡುತ್ತಾರೋ ವಿಷೇಶ ಫಲ ಪ್ರಾಪ್ತಿಯಾಗುತ್ತದೆ..‌‌

ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ. ಒಮ್ಮೆ ಇಂದ್ರ ದೇವರು ರಾಜ್ಯ ಭ್ರಷ್ಟರಾದಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು, ಅದರ ಫಲವಾಗಿ ಇಂದ್ರ ದೇವರಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ.

ಧನುರ್ಮಾಸ ಪುಣ್ಯ ಪೂರ್ಣ ಮಾಸ; ಪರ್ವಪ್ರವರ ಪ್ರತಿಷ್ಠಿತ ಮಾಸ...... ಧನುರ್ಮಾಸದಲ್ಲಿ ಧನು ಮಂಡಲದ ರಂಗೋಲಿಯನ್ನು ಹಾಕುತ್ತೇವೆ

ದಾರಿದ್ರ್ಯ ಖಂಡಿತಾ ದೂರವಾಗುತ್ತೆ..‌.. ಲಕ್ಷೀ ದ್ವಾದಶ ನಾಮ ಚಿತ್ರ ಹಾಕಿದ್ದೇನೆ.. ದಿನಾಲೂ ಹೇಳಿ

ಹುಗ್ಗಿ ಮಾಡುವ ವಿಧಾನ ,... ಒಂದು ಲೋಟ ಅಕ್ಕಿಗೆ ಅಷ್ಟೇ ಪ್ರಮಾಣದ ಹೆಸರು ಬೇಳೆ ಕೂಡಿಸಿ ತೊಳೆದು ತುಪ್ಪದ ಒಗ್ಗರಣೆಯಲ್ಲಿ ಜೀರಿಗೆ , ಮೆಣಸು , ಒಣಖೊಬ್ಬರೆ ಚಕ್ಕೆ ಎಲ್ಲವನ್ನೂ ಕುಟ್ಟಿ ಪುಡಿಮಾಡಿ ಜೊತೆಗೆ ಇಂಗು ಒಗ್ಗರಣೆ ಯಲ್ಲಿ ಹಾಕಿ ಕರಿಬೇವು ಒಣಮೆಣಸಿನಕಾಯಿ ಹಾಕಿ ತೊಳೆದು ಇಟ್ಟುಕೊಂಡು ಅಕ್ಕಿ ಬೇಳೆಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ ತಕ್ಕಷ್ಟು ಉಪ್ಪು ನೀರು ಹಾಕಿ ಅನ್ನದ ರೀತಿಯಲ್ಲಿ ಬೇಯಿಸಿ , ಇದನ್ನ ಡೈರೆಕ್ಟಾಗೆ ಮಾಡಿ ,ಇಲ್ಲ ಕುಕ್ಕರಿನಲ್ಲಿ ಮಾಡಿ ನಿಮ್ಮ ಅನಕೂಲ..‌‌..‌... ಅದರ ಜೊತೆ ಹಣಸೆಹಣ್ಣು ಬೆಲ್ಲದ ಗೊಜ್ಜು ಒಳ್ಳೆಯದು..

*************

ಧನುರ್ವ್ಯತಿಪಾತದ ಮಹತ್ವ

ವ್ಯತಿಪಾತಯೆಂಬುದು ಒಂದು ಯೋಗ ವಿಶೇಷವಾಗಿದೆ. ಚಂದ್ರ ಹಾಗೂ ಸೂರ್ಯರು ಪರಸ್ಪರವಾಗಿ ಒಬ್ಬರ ಮೇಲೊಬ್ಬರ ದೃಷ್ಟಿ ಬಿದ್ದ ಪರಿಣಾಮವಾಗಿ ಕೋಪದ ಸಂಪಾತದಿoದ ಒಬ್ಬ ಭಯಂಕರ ಪ್ರಲಯ ಕಾಲದ ಅಗ್ನಿಗೆ ಸದೃಶನ ವ್ಯಕ್ತಿಯು ಜನಿಸಿದನು .ಸೂರ್ಯನ ದೃಷ್ಟಿಪಾತ ,ಹಾಗೂ ಚಂದ್ರನ ದೃಷ್ಟಿಪಾತ ಹೀಗೆ ವಿಭಿನ್ನವಾದ ದೃಷ್ಟಿ ಜನಿಸಿದ ಇವನು ವ್ಯತಿಪಾತ ಎಂದೆನಿಸಿದನು.

ಚಂದ್ರಾರ್ಕಯೋಃ  ನಯನವೀಕ್ಷಣ ಜಾತ ಮೂರ್ತಿಃ |
ಕಾಲನಲದ್ಯುತಿನಿಭಃ ಪುರುಷೋsತಿರೌದ್ರಃ ||

ವ್ಯತಿಪಾತ ಎಂದರೇನು ?

ರವಿವಾರದಿಂದ ಕೊಡಿದ  ಅಮಾವಾಸ್ಯೆಯಲ್ಲಿ ಶ್ರವಣ ,ಆಶ್ವಿನಿ ,ಧನಿಷ್ಠಾ ,ನಾಗದೇವತ, ಆರ್ದ್ರಾ,ಮೃಗಶಿರಾ ನಕ್ಷತ್ರಗಳಿದ್ದರೆ ವ್ಯತಿಪಾತಯೋಗ ಎಂದು ಕರೆಯುತ್ತಾರೆ.

ಶ್ರವಣಾಶ್ಚಿ ಧನಿಷ್ಠಾರ್ದ್ರ ನಾಗದೇವತ ಮಸ್ತಕೈಃ |
ಯದ್ಯಮಾ ರವಿವಾರೇಣ ವ್ಯತಿಪಾತಃ ಸ ಉಚ್ಯತೇ ||

ಮೇಷದಲ್ಲಿ ರವಿಯಿದ್ದು ,ಸಿoಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು ,ದ್ವಾದಶಿಯಲ್ಲಿ (ಶುಕ್ಲ ಪಕ್ಷ) ಹಸ್ತನಕ್ಷತ್ರವಿದ್ದರೂ ವ್ಯತಿಪಾತ ಯೋಗವೇನಿಸುವುದು.

ವ್ಯತಿಪಾತಯೋಗದಲ್ಲಿ ಪಿತೃತರ್ಪಣವು ಅತ್ಯಂತ ಶ್ರೇಷ್ಠವಾಗಿದ್ದು ಪಿತೃಗಳನ್ನು ಉತ್ತಮಲೋಕಕ್ಕೆ ಒಯ್ಯುವುದು.

ಸೂರ್ಯಚಂದ್ರಾದಿಗಳು 27 ಯೋಗಗಳಲ್ಲಿ ಹದಿನೇಳನೇ ಅಧಿಪತಿಯನ್ನಾಗಿ  ಮಾಡಿ ,ನಿನ್ನ ದಿವಸಗಳಲ್ಲಿ ಯಾರು  ಸ್ನಾನ -ದಾನಾ ದಿಗಳನ್ನು ಮಾಡುವರೋ ಅವರ ದಾನಾದಿಗಳು ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು.ಅಮಾವಾಸ್ಯೆಯಲ್ಲಿ ಮಾಡಿದ ದಾನಾದಿಗಳು ನೂರು ಪಟ್ಟು ಫಲವಾದಾರೆ ,ಸಂಕ್ರಾಂತಿಯಲ್ಲಿ ಅಮಾವಾಸ್ಯೆಗಿಂತ ನೂರು ಪಟ್ಟು ಸೋಮ -ಸೂರ್ಯಾದಿ ಗ್ರಹಣಗಳಲ್ಲಿ ಸಾವಿರ ಪಟ್ಟು ವ್ಯತಿಪಾತದಲ್ಲಿ ಲೆಕ್ಕವಿಲ್ಲದಷ್ಟು  ಪಟ್ಟು ಪುಣ್ಯವು ವೃದ್ಧಿಸುತ್ತದೆ.

ಅಸoಖ್ಯೆಯಂ ವ್ಯತಿಪಾತೇ ದಾನo ವೇದವಿದೋ ವಿಧುಃ ||
**********

ಧನುರ್ಮಾಸ 
ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್‌ ಮಾಸ ಎಲ್ಲ ಕೆಲಸಗಳಿಗೂ ಬಹಳ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಮಾರ್ಗಶೀರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್‌ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್‌ ಮಾಸವೆಂದು ಹೆಸರಿಸಲಾಗಿದೆ.
ಮಾರ್ಗಶೀರ್ಷ ಮಾಸದ ವಿಶೇಷತೆ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಶ್ರೇಷ್ಠವಾದ, ತನಗಿಷ್ಟವಾದ ಎಲ್ಲ ವಿಚಾರಗಳನ್ನು ಅರ್ಜುನನಿಗೆ ತಿಳಿಸುವಾಗ ಮಾರ್ಗಶೀರ್ಷ ಮಾಸದ ಬಗ್ಗೆಯೂ ಹೇಳಿದ್ದಾನೆ.
ಬೃಹತ್‌ ಸಾಮ ತಥಾ ಸಾಮ್ನಾಂ
ಗಾಯತ್ರೀ ಛಂದಸಾಮಹಮ್‌ |
ಮಾಸಾನಾಂ ಮಾರ್ಗಶೀರ್ಷೋಹಂ
ಋತೂನಾಂ ಕುಸುಮಾಕರಃ ||
ಸಾಮಗಳಲ್ಲಿ ಪ್ರಧಾನವಾದ ಬೃಹತ್‌ ಸಾಮವು ನಾನು. ಛಂದಸ್ಸುಗಳಲ್ಲಿ ಅತಿ ವಿಶಿಷ್ಠವಾದ ಗಾಯತ್ರಿ ಛಂದಸ್ಸು (ಗಾಯತ್ರಿ ಮಂತ್ರ) ನಾನು. ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ, ಹೂ ಬಿಡುವ ಋತು ವಸಂತವೂ ನಾನೇ ಆಗಿದ್ದೇನೆ.
ಶ್ರೀಕೃಷ್ಣನಿಗೆ ಪ್ರಿಯವಾದ ಮಾಸ
ಕೃಷ್ಣನ ಪರಮ ಭಕ್ತರಿಗೆ ಇದು ತುಂಬಾ ಪ್ರಿಯವಾದ ಮಾಸ. ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ-ಅಂಡಾಳ, ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ “ಮೂವತ್ತು ಕವಿತೆಗಳು’ ಎಂಬ ಪ್ರೀತಿ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀ ವೈಷ್ಣವರು ನಾಲಾಯಿರಂತಿರುಪ್ಪಾವೈ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ. ವೆಂಕಟೇಶನ ಯಾವುದೇ ದೇವಸ್ಥಾನಕ್ಕೆ ಹೋದರೂ, ತಿರುಮಲ ದೇವಸ್ಥಾನದಲ್ಲೂ, ಅಂಡಾಳ್‌ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿಯೇ ದೇವರನ್ನು ಎಬ್ಬಿಸುವುದು. ಹಾಗೇ ಅಂಡಾಳ್‌ ವೆಂಕಟೇಶನಿಗಾಗಿ ರಚಿಸಿರುವ ಲಾಲಿ ಹಾಡು ಹಾಡಿಯೇ ಅವನನ್ನು ಮಲಗಿಸುವುದು.
ಪರಮಾತ್ಮನನ್ನು ಪ್ರೀತಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಭೂದೇವಿ-ಅಂಡಾಳ್‌ ರೂಪದಲ್ಲಿ ಪ್ರತಿ ದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ದೇವರನ್ನು ಖುಷಿ ಪಡಿಸುತ್ತಿದ್ದಳು. ಅವಳು ವೆಂಕಟೇಶನನ್ನು ಪ್ರೀತಿಸಿದ ಮಾಸ ಮಾರ್ಗಶೀರ್ಷ. ಅದೇ ಮಾಸದಲ್ಲಿ ವೆಂಕಟೇಶ/ಶ್ರೀನಿವಾಸ ಅಂಡಾಳ್‌ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಮದುವೆಯಾದ. ಹಾಗಾಗಿ ಇದು ದೇವರಿಗೆ ಪ್ರಿಯವಾದ ಮಾಸ.
ದೇವತೆಗಳ ಬ್ರಾಹ್ಮಿ ಮುಹೂರ್ತ
ನಾವು ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಿದ್ದೇವೆ- ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ. ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಹಗಲು, ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ, ರಾತ್ರಿ ಮುಗಿಯುತ್ತಿರುವ ಸಮಯ. ನಾವು ಬ್ರಾಹ್ಮಿà ಮುಹೂರ್ತವೆಂದು ಯಾವ ಸಮಯವನ್ನು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ದೇವತೆಗಳಿಗೆ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮ ಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫ‌ಲಿಸುತ್ತವೆ. ಹಾಗಂತ ಈ ಸಮಯದಲ್ಲಿ ಬೇರೆ ಒಳ್ಳೆಯ ಕೆಲಸ ಮಾಡಬಾರದೂ ಅಂತಲ್ಲ. ಕೆಲವರು ಮದುವೆ, ನಾಮಕರಣ, ಬ್ರಹ್ಮೋಪದೇಶ ಅಷ್ಟೇ ಯಾಕೆ ಮನೆ-ಸೈಟು ಖರೀದಿಸುವವರು ಸಹ ಈ ಮಾಸವನ್ನು ಶೂನ್ಯ ಮಾಸವೆಂದು ಪರಿಗಣಿಸಿ ಎಲ್ಲವನ್ನೂ ಮುಂದೂಡುತ್ತಾರೆ. ಖಂಡಿತ ಹಾಗೆ ಮಾಡಬೇಕಿಲ್ಲ. 
ಶೂನ್ಯ ಮಾಸ ಯಾವುದು?
ಪುಷ್ಯಾ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ, ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫ‌ಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ.
ಶೂನ್ಯಮಾಸ ಸಾಮಾನ್ಯವಾಗಿ ಜೂನ್‌, ಜುಲೈ, ಆಗಸ್ಟ್‌ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ. ಆಷಾಢದಿಂದ ಉತ್ತರಾಯಣ ಪುಣ್ಯಕಾಲ ಮುಗಿದು ದಕ್ಷಿಣಾಯನ ಪುಣ್ಯ ಕಾಲಕ್ಕೆ ಕಾಲಿಡುತ್ತೇವೆ. 
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು
******
 

ಧನುರ್ಮಾಸ ಶ್ರೇಯಸ್ಕರ ಪುಣ್ಯಕಾಲ 

ಒಂದು ಸಂವತ್ಸರವನ್ನು ಚೈತ್ರ ವೈಶಾಖ ಇತ್ಯಾದಿ ಹನ್ನೆರಡು ಮಾಸಗಳಾಗಿ ವಿಂಗಡಿಸಲಾಗಿದೆಯಷ್ಟೆ . ಇವುಗಳಲ್ಲಿ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ಧನುರ್ಮಾಸದ ಪರಿಚಯಾತ್ಮಕ ಬರಹ ಇಲ್ಲಿದೆ.

ಹಿಂದುಧರ್ಮದ ಮೂಲಬೇರಾದ ವೇದ ಪುರಾಣ ಶಾಸ್ತ್ರಗಳ ಅವಲೋಕನ ಮಾಡಿದಾಗ ಧನುರ್ಮಾಸ ಧಾರ್ಮಿಕ ಕಾರ್ಯಕ್ಕೆಂದು ಮೀಸಲಿಟ್ಟ ಮಹಾಪುಣ್ಯ ಮಾಸ. ದೇವರನ್ನು ಧ್ಯಾನಿಸಲು ಪೂಜಿಸಲು ಪ್ರೀತಿಸಲು ಒಳ್ಳೆಯ ಕೆಲಸದಾರಂಭಕ್ಕೆ ಅತೀ ಶ್ರೇಷ್ಠ ಮಾಸ. ಸಂಪ್ರದಾಯದ ಪ್ರಕಾರ ಈ ಮಾಸದ ಬ್ರಾಹ್ಮೀ ಮುಹೂರ್ತದಲ್ಲಿ ದೇವಾನುದೇವತೆಗಳು, ಋಷಿಮುನಿಗಳು ಶ್ರೀಮನ್ನಾನಾರಾಯಣನನ್ನು ಪ್ರಾರ್ಥಿಸುವ ಪುಣ್ಯಕಾಲ. ಇನ್ನು ಶ್ರೀಕೃಷ್ಣ ಮಹಾಭಾರತದಲ್ಲಿ ತಿಳಿಸಿದಂತೆ ; 

ಬೃಹತ್ ಸಾಮ ತಥಾ ಸಾಮ್ಮಾಂ ಗಾಯತ್ರಿ ಛಂದಸಾಮಹಂ |
ಮಾಸಾನಾಂ ಮಾರ್ಗಶೀರ್ಷೋಹಂ ಋತುನಾಂ ಕುಸುಮಾಕರಃ ||

ಅಂದರೆ ' ಸಾಮಗಳಲ್ಲಿ ಪ್ರಧಾನವಾದ ಬೃಹತ್ ಸಾಮವು ನಾನು. ಛಂದಸ್ಸುಗಳಲ್ಲಿ ಅತಿ ವಿಶಿಷ್ಟವಾದ ಗಾಯತ್ರಿಛಂದಸ್ಸು ನಾನು. ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ, ಹೂಬಿಡುವ ಋತು ವಸಂತವೂ ನಾನೇ ಆಗಿದ್ದೇನೆ. ಶ್ರೀಕೃಷ್ಣನಿಗೆ ಪ್ರಿಯವಾದ ಮಾಸ ಇದಾಗಿದೆ. ಸೂರ್ಯನು ಧನುರಾಶಿಯನ್ನು ಪ್ರವೇಶಿಸುವ ದಿನದಿಂದ ಆರಂಭಿಸಿ ಮಕರರಾಶಿಯವರಿಗೆ ಬರುವ ಒಂದು ತಿಂಗಳ ಕಾಲವೇ ಧನುರ್ಮಾಸ. ಡಿಸೆಂಬರ್ 16/17ರಿಂದ ಈ ಮಹಾ ಪುಣ್ಯಕಾಲ ಪ್ರಾರಂಭವಾಗಲಿದೆ.

ಧನುರ್ಮಾಸ ವಿಶೇಷ 


ಪಾಂಚರಾತ್ರಾಗಮ, ಅಗ್ನಿಪುರಾಣ ಮತ್ತು ಸ್ಮೃತಿಮುಕ್ತಾವಳಿಗಳಲ್ಲಿ ಧನುರ್ಮಾಸ ಮಹಾತ್ಮೆಯನ್ನು ಹೇಳಳಾಗಿದೆ. ಪಾಂಚರಾತ್ರಾಗಮದಲ್ಲಿ ಧನುರ್ಮಾಸದ ಮಹಾತ್ಮೆಯನ್ನು ನಾಲ್ಕು ಅಧ್ಯಾಯಗಳಲ್ಲಿ ಹಂಸ ಮತ್ತು ಚತುರ್ಮುಖ ಬ್ರಹ್ಮನ ಮಧ್ಯದ ಸಂವಾದದ ಮೂಲಕ ಹೇಳಳಾಗಿದೆ.ಮೊದಲ ಅಧ್ಯಾಯದಲ್ಲಿ ಸೂತಮಹರ್ಷಿಗಳು ಧನುರ್ಮಾಸದ ಮಹತ್ವವನ್ನು ವಿವರಿಸುತ್ತಾರೆ. ಎರಡನೇ, ಮೂರನೇ ಅಧ್ಯಾಯದಲ್ಲಿ ಭಕ್ತ ನಡೆದುಕೊಳ್ಳಬೇಕಾದ ರೀತಿನೀತಿಗಳಿವೆ.ನಾಲ್ಕನೇ ಅಧ್ಯಾಯದಲ್ಲಿ ವಿಪ್ರರಿಗೆ ಭೋಜನ ನೀಡಿ ಸತ್ಕರಿಸುವ ಬಗ್ಗೆ ವಿವರಣೆಯಿದೆ.
***********


ಧನುರ್ಮಾಸದಲ್ಲಿ ಮಹಾಲಕ್ಷ್ಮೀಯನ್ನು ಪ್ರಾತಃಕಾಲದಲ್ಲಿ ಕುಂಕುಮಾದಿಗಳಿಂದ ಪೂಜಿಸಿ, ಗುಡ-ಮುದ್ಗಾನ್ನ(ಸಿಹಿ ಪೊಂಗಲ್) ನಿವೇದಿಸಿ ಭದ್ರಲಕ್ಷ್ಮೀ ಸ್ತೋತ್ರ ಪಠಿಸುವುದರಿಂದ ಸ್ಥಿರಲಕ್ಷ್ಮೀ ಪ್ರಾಪ್ತಿ ಇತ್ಯಾದಿ ಫಲಗಳನ್ನು ಹೇಳಲಾಗಿದೆ.

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||

ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || ೩ ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಕೋಣೇಶ್ವರೀ |
ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || ೫ ||

ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |

ಕಾಲೇ ಸ್ನಾತ್ವಾಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||
*********





********


ಧನುರ್ಮಾಸದ ಸೇವೆ

ಉಪಯುಕ್ತ ವಿಷಯಗಳ ಚಿಂತನೆ -2

ನಿನ್ನೆಯ ಭಾಗದಲ್ಲಿ ಪ್ರಮೇಯಸಾರದ ಅಂಗವಾಗಿ ಸರ್ವೋತ್ತಮನು, ಸ್ವತಂತ್ರ್ಯನು, ಆನಾದಿಯಾದವನೂ ಆದ ಪರಮಾತ್ಮನ , ತಾಯಿ ಲಕ್ಷ್ಮೀ ದೇವಿಯರ ಗುಣಗಳನ್ನು ತಿಳಿದು, ಜೀವರ ಲಕ್ಷಣಗಳನ್ನು, ಪ್ರಭೇದಗಳನ್ನು ತಿಳಿದೆವು. ಇಂದು ಮತ್ತಷ್ಟು ಮಾಹಿತಿಯನ್ನು ಹರಿವಾಯುಗುರುಗಳ ಅನುಗ್ರಹದಿಂದ ತಿಳಿಯಲು ಪ್ರಯತ್ನ ಮಾಡುತ್ತಾ...

ಅವ್ಯಾಕೃತ ಆಕಾಶದ ಲಕ್ಷಣ - ಇದಕ್ಕೆ ಲಕ್ಷ್ಮೀ ದೇವಿಯರು ಅಭಿಮಾನಿನಿಯಾದವರು, ಇದು ಸೃಷ್ಟಿ- ಪ್ರಳಯ ಕಾಲಗಳಲ್ಲಿ ವಿಕಾರಶೂನ್ಯವಾದದ್ದು ಅರ್ಥಾತ್ ಯಾವ ಪರಿಣಾಮ ಇಲ್ಲದೇ ಇರುವುದು, ಇದು ಭೂತಾಕಾಶದಿಂದ ಭಿನ್ನವಾಗಿ, ಏಕವಾದದ್ದು, ನಿತ್ಯವಾದದ್ದು, ವ್ಯಾಪ್ತವಾದದ್ದು, ಪ್ರಾಚ್ಯಾದಿ ಸ್ವಾಭಾವಿಕವಾದ ಅವಯವದಿಂದ ಯುಕ್ತವಾದದ್ದು. 

ಜಡಪ್ರಕೃತಿಯ ಲಕ್ಷಣ - ಇದಕ್ಕೂ ಸಹ ಲಕ್ಷ್ಮೀ ದೇವಿಯರು ಅಭಿಮಾನಿನಿಯಾದವರು. ಇದು ಸಾಕ್ಷಾತ್ ಪರಂಪರೆಯ ವಿಶ್ವೋಪಾದಾನ ಕಾರಣವಾದದ್ದು. ಈ ಜಡ ಪ್ರಕೃತಿಯ ರೂಪವೂ ಸಹ ನಿತ್ಯವಾದದ್ದು, ವ್ಯಾಪ್ತವಾದದ್ದು, 

ಲಕ್ಷ್ಮೀ ದೇವಿಯರು ಮೂರು ರೂಪಗಳಿಂದ ಅಭಿಮಾನಿನಿಯಾಗಿರ್ತಾರೆ.

ರಜೋಗುಣದಿಂದ ಸೃಷ್ಟಿಯಾಗುವುದು - ರಜೋಗುಣಾಭಿಮಾನಿನಿ ಭೂ ರೂಪದ ಲಕ್ಷ್ಮೀ ದೇವಿಯರು.

ಸತ್ವಗುಣದಿಂದ ಸ್ಥಿತಿ- ಸತ್ವಗುಣಾಭಿಮಾನಿನಿ ಶ್ರೀ ರೂಪದ ಲಕ್ಷ್ಮೀ ದೇವಿಯರು.

ತಮೋಗುಣದಿಂದ ನಾಶವಾಗುವುದು - ತಮೋಗುಣದ ಅಭಿಮಾನಿನಿ ದುರ್ಗಾ ರೂಪದ ಲಕ್ಷ್ಮೀ ದೇವಿಯರು.

ಪರಮಾತ್ಮ ಪ್ರಳಯದನಂತರ ಸೃಷ್ಟಿ ಕಾರ್ಯವನ್ನು ಆರಂಭ ಮಾಡುತ್ತಾನೆ. ಯಾರು ಮೋಕ್ಷಕ್ಕೆ ಯೋಗ್ಯರೋ ಅವರೇ  ಅಧಿಕಾರಿಗಳು  ಈ ಅಧಿಕಾರಿಗೆ ಮೋಕ್ಷವಾಗಬೇಕು ಅಂದರೆ ಮೊದಲಿಗೆ ಅಪರೋಕ್ಷಜ್ಞಾನವಾಗಬೇಕು. ಅಪರೋಕ್ಷಜ್ಞಾನವಾಗಬೇಕು ಅಂದರೆ ಸಾಧನೆಯ ಮಾರ್ಗದಲಿ ನಡಿಯಬೇಕು, ಸಾಧನೆ ಏನನ್ನೋದು ತುಂಬಾ ಸಲ ಚರ್ಚೆ ಮಾಡಿದ್ದೆವೆ ನಾವು ಅಲ್ವಾ?  ಆ ಮಾರ್ಗದಲಿ ಮೊದಲಿಗೆ ಸಜ್ಜನರ ಸಂಗಮಾಡಬೇಕು, ಉತ್ತಮವಾದ ಗುರುಗಳು ಸಿಗಬೇಕು. ಇವು ಆಗಬೇಕು ಅಂದರೆ ವಿಧವಿಧವಾದ ಸಾಂಸಾರಿಕ ದುಃಖಗಳು ಅನುಭವಿಸಿ, ಆ ದುಃಖದ ಜ್ಞಾನವಾಗಬೇಕು. ಅದರಿಂದ ಪೂರ್ತಿ ವೈರಾಗ್ಯವನ್ನು ಹೊಂದಬೇಕು. ಸರಿ.. ಈ ವೈರಾಗ್ಯ ಅಂದರೇ ಏನು? 

ಭೂಲೋಕಕ್ಕೆ ಬಂದ ಸಜ್ಜನನಾದ ಜೀವ ಭೂಲೋಕದಲ್ಲಿ ಅನುಭವಿಸತಕ್ಕಂತಹಾ ಭೋಗಸಾಧನೆಗಳನ್ನು ಅರ್ಥಾತ್,  ಹಣ,ಮನೆ,ಹೆಣ್ಣು, ವಸ್ತ್ರ, ಆಭರಣ ಇತ್ಯಾದಿಗಳನ್ನು ಭೋಗಿಸಿದರೂ ಭೋಗಿಸದೇ ಇದ್ದರೂ ಸಹ ಅಂದರೆ ಸಂಸಾರದಲ್ಲಿ ಪೂರ್ಣ ಮುಳುಗಿದ್ದರೂ ಆಯಾ ಭೋಗಗಳನ್ನು ಪರಮಾತ್ಮನ ಅನುಗ್ರಹ ಅಂತ ತಿಳಿದು,  ಹೆಂಡತಿ ಮತ್ತು ಮಕ್ಕಳು, ಹಣ (ದಾನಾದಿಗಳನ್ನು ಮಾಡಲು) ಇವೆಲ್ಲವೂ ಕರ್ತವ್ಯದ ಜೊತೆಗೆ ಸಾಧನೆಗೆ ಬೇಕಾದ ಸಾಧನಗಳು ಅಂತ ತಿಳಿದು, ಅವೆಲ್ಲವನ್ನು ತಮ್ಮ ಜ್ಞಾನೇಂದ್ರಿಯಗಳಿಂದಲೂ , ಕರ್ಮೇಂದ್ರಿಯಗಳಿಂದಲೂ ಸ್ವೀಕಾರ ಮಾಡದೇ ಇರುವುದೇ ವೈರಾಗ್ಯ. 

ಶಮ,ದಮ,ಅಧ್ಯಯನ,ಗುರುಗಳ ಸೇವೆ,ಗುರುಕುಲದಲ್ಲಿ ವಾಸ, ಗುರುಗಳಿಂದ ಉಪದೇಶ ನಂತರ ಗುರುಗಳಿಂದ ಸಚ್ಛಾಸ್ತ್ರಗಳ ಶ್ರವಣ,  ಮನನ, ನಿಧಿಧ್ಯಾಸನಗಳಿಂದ ಸಾಧನೆ ಮಾಡಿದರೆ ಪರಮಾತ್ಮನ ಅನುಗ್ರಹದಿಂದ ಜಾಗ್ರತೆಯಾಗಿ ಅಪರೋಕ್ಷಜ್ಞಾನವಾಗುತ್ತದೆ. 
ಹೀಗಾಗಿ ಇದಕ್ಕೆ ಮುಖ್ಯವೇನು ಅಂದರೆ ಗುರುಗಳಲ್ಲಿ , ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿ ಇರಲೇಬೇಕು..

ಮತ್ತೆ ಈ ಅಧಿಕಾರಿಯ ನಡೆತೆ ಹೇಗಿರಬೇಕು? - 

ಈ ಮೋಕ್ಷಕ್ಕೆ ಅಧಿಕಾರಿಯಾದವರು ಉತ್ತಮರಾದ ಸಜ್ಜನರಲ್ಲಿ, ಗುರುಗಳಲ್ಲಿ, ಹಿರಿಯರಲ್ಲಿ ಸದಾ ಭಕ್ತಿ ಗೌರವಗಳನ್ನು ತೋರಿಸುತ್ತಾ, ತಮ್ಮ ಸಮಾನರಾದವರ ಜೊತೆ ಸ್ನೇಹ ಭಾವದಿಂದ ನಡೆದುಕೊಳ್ಳುತ್ತಾ, ತಮಗಿಂತ ಅಧಮರಲ್ಲಿ ಸದಾ ದಯಾಪರನಾಗಿರಬೇಕು. ನಿಷೇಧ ಕರ್ಮಗಳನ್ನು ಪೂರ್ತಿ ತ್ಯಾಗಮಾಡುತ್ತ, ಸರ್ವ ಸಮರ್ಪಣಾ ಜ್ಞಾನವನ್ನು ಅರಿತು ನಡೆಯಬೇಕು. ಮತ್ತೆ ತಾರತಮ್ಯ ಜ್ಞಾನವನ್ನು, ಪಂಚಭೇದದ ಜ್ಞಾನವನ್ನು ತಿಳಿದವನಾಗಿರಬೇಕು. 

ಗುರುಗಳು ಅಂದರೆ ಯಾರು - 
ಗುರುಗಳಲ್ಲಿ 2 ಪ್ರಕಾರ - 

1. ನೀತ ಗುರುಗಳು- ಇವರು ಶಿಷ್ಯರ ಸ್ವರೂಪವನ್ನು ಚನ್ನಾಗಿ ತಿಳಿದು ಅದರಿಂದ ಯೋಗ,ಗುಣ,ವಿಶಿಷ್ಟ ಭಗವದ್ರೂಪ ವಿಶೇಷ ವಿಷಯಗಳ ಸಂಬಂಧಿತ ವಿದ್ಯೆಯ ಉಪದೇಶ ಮಾಡಿ ಅವರನ್ನು ಸದಾ ಪರಮಾತ್ಮನ ಕುರಿತಾದ ಭಕ್ತಿಯ ಹಾದಿಯಲ್ಲಿ ನಡೆಸುವವರೇ ನೀತಗುರುಗಳು.. 

ಮನುಷ್ಯೋತ್ತಮರಿಗೆ ಋಷಿಗಳು ನೀತಗುರುಗಳು...

2. ಅನೀತಗುರುಗಳು-  ಭಗವಂತನ ಕುರಿತಾದ ತತ್ವೋಪದೇಶವನ್ನು ಮಾಡುವವರು ಅನೀತಗುರುಗಳು. 

ಮುಂದೆ ಉಪಾಸನೆ, ಶಾಸ್ತ್ರ ಶ್ರವಣದ ಫಲ ಇತ್ಯಾದಿ ವಿಷಯಗಳ ಕುರಿತು ಎಲ್ಲಾ ದಾಸರ, ಅಭಿಮಾನಿ ದೇವತೆಗಳ, ಮುಖ್ಯಪ್ರಾಣಾಂತರ್ಗತ  ಪರಮಾತ್ಮನ ಅನುಗ್ರಹದಿಂದ ತಿಳಿಯಲು ಪ್ರಯತ್ನ ಮಾಡೋಣ ಎಂದು ಪರಮಾತ್ಮನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

ಜೈ ವಿಜಯರಾಯ 
ಶ್ರೀ ಬ್ರಹ್ಮಣ್ಯತೀರ್ಥ ಗುರುಭ್ಯೋನಮಃ 

ನಾದನೀರಾಜನದಿಂ ದಾಸಸುರಭಿ 
***

ಧನುರ್ಮಾಸದ ವಿಶೇಷ...

ನಮ್ಮ ಸನಾತನ ಸಂಸ್ಕೃತಿಯಲ್ಲಿ ಪ್ರತಿಯೊಂದು ತಿಂಗಳು ಕೂಡ ಬಹಳ ವಿಶೇಷವೇ..ಆದರೆ ಅದರಲ್ಲಿಯೂ ಈ ಧನುರ್ಮಾಸದಲ್ಲಿ ವಿಶೇಷ ಆಚರಣೆ, ವ್ರತ,ಅನುಷ್ಠಾನ,ಭಕ್ತಿ ಇದೆಲ್ಲಕ್ಕೂ ಅತ್ಯಂತ ಮಹತ್ವವನ್ನು ನೀಡಲಾಗಿದೆ.. ಕಾರಣ ಹಲವಾರು..
 ಮೊದಲಿಗೆ ಧನುರ್ಮಾಸ ಎಂದರೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು.
 ಮಾರ್ಗಶಿರ ಮಾಸದ ಸಂಕ್ರಮಣದ ದಿನ ಸೂರ್ಯನು ವೃಶ್ಚಿಕ ರಾಶಿಯಿಂದ ಕ್ರಮಿಸಿ,ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಒಂದು ತಿಂಗಳ ಕಾಲ ಅಂದರೆ, 30° ಒಂದು ರಾಶಿಗೆ ಪರಿಮಿತಿ. ಆ ಒಂದು ತಿಂಗಳು ಧನುರ್ ರಾಶಿಯಲ್ಲಿ 30 ಡಿಗ್ರಿಯಲ್ಲಿ ಕ್ರಮಿಸುವುದರಿಂದ ಈ ಮಾಸಕ್ಕೆ ಧನುರ್ಮಾಸ ಎಂದು ಹೆಸರು.

 ಈ ಮಾಸಕ್ಕೆ ಮಾರ್ಗಶಿರ ಮಾಸ ಎಂದು ಹೆಸರು ಕಾರಣ ಚಂದ್ರನು ಪೌರ್ಣಮಿಯoದು ಮೃಗಶಿರ ನಕ್ಷತ್ರದಲ್ಲಿ ಇರುವುದರಿಂದಲೇ ಮಾರ್ಗಶಿರ ಮಾಸ ಎಂದು ಕರೆಯಲಾಗುತ್ತದೆ.

 ಇನ್ನೊಂದು ಕಾರಣವೂ ಕೂಡ. ಹೇಮಂತ ಋತುವಿದು. ಬಹಳ ಚಳಿ. ಈ ಚಳಿಗೆ ಮನುಷ್ಯನ ದೇಹವು ಬಿಲ್ಲಿನಂತೆ ಬಗ್ಗಿಬಿಡುತ್ತದೆ,ಆದ್ದರಿಂದ ಧನುರ್ಮಾಸ ಎಂದು ಕೂಡ ಹೆಸರು.

 ಧನುರ್ಮಾಸದ ಮಹತ್ವವಾದರೂ ಏನು..

 ಏಕೆಂದರೆ ಭಗವದ್ಗೀತೆಯಲ್ಲಿ ಸಾಕ್ಷಾತ್ ಭಗವಂತನು ಮಾಸಾನಂ ಮಾರ್ಗಶಿಷೋಸ್ಮಿ ಎಂದಿದ್ದಾನೆ. ಅಂದರೆ ಮಾಸಗಳಲ್ಲಿಯೇ ಮಾರ್ಗಶಿರ ಮಾಸ ನಾನಾಗಿದ್ದೇನೆ ಎನ್ನುತ್ತಾನೆ. ಅದಕ್ಕಿಂತ ಇನ್ನೇನು ಮಹತ್ವ ಬೇಕು!. ಸಾಕ್ಷಾತ್ ಅವನೇ ಈ ಮಾಸದಲ್ಲಿರುವಾಗ ಅಲ್ಲವೇ. ಆದ್ದರಿಂದ ಈ ಮಾಸದಲ್ಲಿ ಯಾವುದೇ ರೀತಿಯಾದಂತಹ ವ್ರತವನ್ನು ಆಚರಿಸಿದರೂ, ಪೂಜೆಯನ್ನು ನೆರವೇರಿಸಿದರೂ  ಅಥವಾ ಇಷ್ಟಾರ್ಥಗಳನ್ನು ನೆನೆದು ನಾವು ಭಗವಂತನನ್ನು ಧ್ಯಾನಿಸಿದರೂ, ಅದು ನೇರವಾಗಿ ಭಗವಂತನಿಗೆ ತಲುಪುತ್ತದೆ ಎಂಬುವುದು ಸತ್ಯವಾದ ವಿಚಾರವಾಗಿದೆ.

 ಧನುರ್ಮಾಸದಲ್ಲಿ ಪೂಜಾ ವಿಧಾನಗಳಾದರೂ  ಹೇಗೆ..
 ಧನುರ್ಮಾಸ ಎಲ್ಲೆಡೆ ಶೂನ್ಯ ಮಾಸ ಎಂದು ಅರ್ಥೈಸಿ ಬಿಟ್ಟಿದ್ದಾರೆ.ಆದರೆ ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದಿದ್ದಾರೆ.. ಸೂರ್ಯನು ಧನುರ್ ರಾಶಿಯಲ್ಲಿ ಸಂಚಾರ ಮಾಡುವ ಕಾಲಕ್ಕೆ, ಚಾಂದ್ರಮಾನ ರೀತಿಯಲ್ಲಿ ಪುಷ್ಯ ಮಾಸವಿದ್ದರೆ ಶೂನ್ಯ ಮಾಸವಾಗುತ್ತದೆ ಎಂದು ಜ್ಯೋತಿಷಿಗಳ ಪ್ರಕಾರವಾಗಿ ಹೇಳಲಾಗುತ್ತದೆ.

 ಆದರೆ ಎಲ್ಲ ಮಾಸಗಳಲ್ಲಿಯೂ ನಮ್ಮ ಸನಾತನ ಸಂಪ್ರದಾಯದಲ್ಲಿ ಅನೇಕ ವಿಶೇಷಗಳಿ ತರುತ್ತದೆಯೋ ಹಾಗೆಯೇ ಈ ಮಾಸವು ಕೂಡ ಪೂಜಾ ವ್ರತಗಳಿಗೆ, ದೇವಸ್ಥಾನದಲ್ಲಿ ಭಗವತ್ ದರ್ಶನಗಳಿಗೆ,ಆರೋಗ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕೆಂದಿದ್ದಾರೆ.
 ಧನುರ್ಮಾಸದಲ್ಲಿ ಮಾಡುವ ವ್ರತಕ್ಕೆ ಹೆಚ್ಚಿನ ಮಹತ್ವವಿದೆ.
 ಮೊದಲಿಗೆ ವ್ರತ ಎಂದರೇನು ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಅರೀಷ್ಠ ಗಳನ್ನು ಹೋಗಲಾಡಿಸಲು ಅಂದರೆ, ಕಷ್ಟ ನಿವಾರಣೆಗಾಗಿ ಮಾಡುವ ಅನುಷ್ಠಾನಕ್ಕೆ ವ್ರತ ಎಂದು ಹೆಸರು..

  ವ್ರತಗಳಲ್ಲಿ ಮೂರು ವಿಧ.ಒಂದು ನಿತ್ಯ ವ್ರತ,  ನೈಮಿತ್ತಿಕ ವೃತ,,, ಕಾಮ್ಯ ವ್ರತ..

 ನಿತ್ಯವ್ರತ  ಪ್ರತಿನಿತ್ಯ ನಾವು ಏನು ಪೂಜೆ ಮಾಡುತ್ತೇವೆಯೋ  ಅದು ನಿತ್ಯವ್ರತ. ನೈಮಿತಿಕ ವ್ರತ ವರ್ಷಕ್ಕೊಂದು ಸಲ, ಅಥವಾ ಒಂದು ತಿಂಗಳು ಅಥವಾ ಒಂದೆರಡು ತಿಂಗಳು ಈ ರೀತಿ ಮಾಡುವಂತ ವ್ರತ ಗಳಿಗೆ ನೈಮಿತ್ತಿಕವ್ರತ ಎಂದು  ಹೆಸರು.

 ಕಾಮ್ಯ ವ್ರತ,ಹೋಮಗಳು ಯಜ್ಞಗಳು ಅಂತಹುದು.
 ಈ ಧನುರ್ಮಾಸದ ವ್ರತವೂ  ನೈತಿಕ ವ್ರತವೇ,
 ಹೇಗೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇವೆಯೋ, ಹಾಗೆಯೇ  ಧನುರ್ಮಾಸದಲ್ಲಿಯೂ ಕೂಡ ಗುರುವಾರ ಲಕ್ಷ್ಮಿ ಪೂಜೆಯವ ವ್ರತವನ್ನು ಆಚರಿಸುವುದು ಕೂಡ ರೂಢಿಯಲ್ಲಿದೆ.ಪ್ರತಿದಿನ 30 ದಿನವೂ ಕೂಡ ಧನುರ್ಮಾಸದಲ್ಲಿ ಲಕ್ಷ್ಮಿ ಪೂಜೆಯನ್ನು ಅಥವಾ ಪಾರ್ವತಿ ಪೂಜೆಯನ್ನು,ಅಥವಾ ಶ್ರೀ ಕೃಷ್ಣನ ಪೂಜೆಯನ್ನು,ವಿಷ್ಣು ಪೂಜೆಯನ್ನು,,  ಯಾವ ದೇವರ ಪೂಜೆಯನ್ನಾದರೂ ಸರಿ ಈ ತಿಂಗಳುಗಳಲ್ಲಿ ಮಾಡುವುದು ಶ್ರೇಯಸ್ಕರ ಎಂಬುವುದು.

ಧನುರ್ಮಾಸದಲ್ಲಿದೇವಸ್ಥಾನಗಳಲ್ಲಿ ಸೂರ್ಯೋದಯಕ್ಕೆ ಐದು ಗಳಿಗೆಗಳ ಮುಂಚೆಯೇಬ್ರಾಹ್ಮಿ ಮುಹೂರ್ತದಲ್ಲಿ,,  (ನ ಕ್ಷತ್ರಇರುವಾಗಲೇ) ಪೂಜೆಯನ್ನು ಮಾಡಬೇಕು ಎಂದು ಶಾಸ್ತ್ರಗಳು ಉಲ್ಲೇಖವು ಕೂಡ..

 ಸ್ನಾನ,ವ್ರತ,ಅನುಷ್ಠಾನ, ದೇವತಾ ದರ್ಶನ ಶ್ರೀ ಕೃಷ್ಣನ ವಿಷ್ಣು ದೇವಾಲಯಗಳ ದರ್ಶನ ಅಥವಾ ಇಷ್ಟದೇವತಾ ದರ್ಶನ, ಕುಲದೇವತಾ ದರ್ಶನ ಪಾರ್ವತಿ ಶಿವ.. ನವಗ್ರಹ ಪೂಜೆಗಳು, ಅಶ್ವತ ಪ್ರದಕ್ಷಿಣೆ.. ವಸ್ತ್ರ ನಿಯಮ, ಆಹಾರ ನಿಯಮ ಇದೆಲ್ಲವೂ  ಈ ತಿಂಗಳು ಸೂರ್ಯೋದಯಕ್ಕೆ ಮುಂಚೆಯೇ ಮಾಡಬೇಕು ಎಂದು ಕೂಡ ಪೂಜಾ ನಿಯಮವಿದೆ.
 ಶುಭ್ರ ವಸ್ತ್ರ, ಹತ್ತಿ ಬಟ್ಟೆ, ಉಣ್ಣೆ ಬಟ್ಟೆಗಳು ಹೆಚ್ಚು ಪ್ರಾಶ ಸ್ತ್ಯಏಕೆಂದರೆ ಚಳಿ ಇರುವುದರಿಂದಲೂ ಕೂಡ..

 ಶ್ರೀ ವೈಷ್ಣವ ದೇವಾಲಯಗಳಲ್ಲಿ ಧನುರ್ಮಾಸದಲ್ಲಿ  ಸ್ವಲ್ಪ ಹೆಚ್ಚಿನ ಆರಾಧನೆಗೆ ಮಹತ್ವವನ್ನು ನೀಡಲಾಗಿದೆ.
 ಸಾಕ್ಷಾತ್ ಹಾಲಕ್ಷ್ಮಿಯ ಅವತಾರವೇ ಆದಂತಹ ಗೋದಾದೇವಿಯು ಶ್ರೀ ಕೃಷ್ಣ ಪರಮಾತ್ಮನನ್ನು ಒಲಿಸಿಕೊಳ್ಳಲು,ಬೆಳಗಿನ ಸೂರ್ಯೋದಯಕ್ಕೂ ಮುಂಚೆಯೇ ಎದ್ದು ತನ್ನ ಸಖಿಯರನ್ನಲ್ಲ ಎಬ್ಬಿಸಿ, ಪರಮಾತ್ಮನ ಸಂಕೀರ್ತನೆಗಳನ್ನು,ಭಗವದ್ಭಕ್ತಿಯನ್ನು ಹೇಗೆಲ್ಲಾ ಪಡೆಯಬಹುದು ಎಂದು ತಿಳಿಸಿಕೊಟ್ಟಿದ್ದಾಳೆ.

 ಅದಕ್ಕಾಗಿ ಇಂದಿಗೂ ಕೂಡ ನಾಲ್ಕು ಸಾವಿರದಿವ್ಯಪ್ರಭಂದ  ಪದ್ಯಗಳಲ್ಲಿ ಗೋದಾದೇವಿ ಹಾಡಿದಂತಹ    ಎಂಟು ಸಾಲುಗಳ 30 ಪದ್ಯಗಳುಭಕ್ತಿ ಸಾಹಿತ್ಯಕ್ಕೆ ಮೇರು ಕೃತಿಯಾಗಿದೆ. ಇದರಲ್ಲಿ ತ ಭಗವಂತನನ್ನು ವರ್ಣಿಸಿ, ಹೇಗೆ ದೇವರ ಆರಾಧಿಸಿ,ತನು ಮನ ಧನ ಗಳಿಂದ,ಚಿತ್ತ ಶುದ್ದಿಯಿಂದ ಹೇಗೆಲ್ಲಾ ಪೂಜಿಸಬೇಕು ಎಂದು ಮಹಾನ್ ಗೀತ ಪ್ರಬಂಧವನ್ನು ನೀಡಿದಂತಹ ಗೋದಾದೇವಿ "ತಿರುಪ್ಪಾವೈ" ಎಂಬ ಭಕ್ತಿ ಸಾಹಿತ್ಯಕ್ಕೆ  ಅಪಾರವಾದಂತಹ ಕೊಡುಗೆಯನ್ನು ನೀಡಿದ್ದಾಳೆ.
ತಿರು ಎಂದರೆ ಸಂಪತ್ ಭರಿತ ವಾದಂತಹ,ಮೋಕ್ಷ ಎಂದು ಕೂಡ ಹೆಸರು,ಪ್ಪಾವೈ  ಎಂದರೆ ವ್ರತ. ಭಗವಂತ ಪರಮ ಪುರುಷನ ದಿವ್ಯ ಸಾನಿಧ್ಯವನ್ನು ಪಡೆಯಲು ಇಂತಹಮೇರು ಸಾಹಿತ್ಯದ ಗೀತ ಕಾವ್ಯ ವನ್ನು ಪ್ರತಿಪಾದಿಸಿದಂತಹ ಪರಮ ಭಕ್ತಳು ಈ ಗೋದಾದೇವಿ. ಶ್ರೀವೈಷ್ಣವ 12 ಆಳ್ವಾರಗಳಲ್ಲಿ ಏಕಮಾತ್ರ ಸ್ತ್ರೀ ಭಕ್ತ ಶಿರೋಮಣಿ ಆಂಡಾಳ್ ತಾಯಿ. ಗೋಧಾ ದೇವಿಗೆ ಆಂಡಾಳ್  ಎಂದು ಕೂಡ ಹೆಸರು.

 ಈ ಗೊಧಾದೇವಿ ಯಾದರೂ ಯಾರು.
 ತಮಿಳುನಾಡಿನ ಶ್ರೀವಲ್ಲಿ ಪುತ್ತೂರು ನಲ್ಲಿ ವಿಷ್ಣು ಚಿತ್ತರ್  ಎಂಬುವವರು ಮಹಾನ್ ಭಕ್ತರು 12 ಆಳ್ವಾರಗಳಲ್ಲಿ ಅವರಿಗೆ ಪೆರಿಯಾಳ್ ವಾರ್ ಎಂದು ಕೂಡ ಹೆಸರು. ಮಹಾನ್ ಭಕ್ತ ಶಿರೋಮಣಿ. ಸಾಕ್ಷಾತ್ ಭಗವಂತನೇ ಅವರಿಗೆ ದರ್ಶನ್ ನೀಡಿ ತಮ್ಮ ಬಳಿಯೇ ಅವರಿಗೆ ಕೈoಕರ್ಯ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ.
 ಪ್ರತಿದಿನ ಭಗವಂತನಿಗೆ ತಾವು ಬೆಳೆದ ಹೂವುಗಳನ್ನು ತುಳಸಿಗಳನ್ನು,ಸಂಗ್ರಹಿಸಿ ಮಾಲೆಯನ್ನಾಗಿ ಪೋಣಿಸಿ ಭಗವಂತನಿಗೆ ಸಮರ್ಪಿಸುವ ನಿತ್ಯ ಕೈoಕರ್ಯ ಅವರದಾಗಿರುತ್ತದೆ. ಅವರ ತುಳಸಿವನದಲ್ಲಿ ಸಾಕ್ಷಾತ್ ಭಗವತಿ ಲಕ್ಷ್ಮಿ ದೇವಿಯು ಅಯೋನಿಜೆಯಾಗಿ ಅವತಾರವೆತ್ತುತ್ತಾಳೆ..

 ಪೆರಿಯಾಳವಾರರು ಆ ಮಗುವನ್ನು ತಮ್ಮ ಸ್ವಂತ ಮಗಳಂತೆ ಸಾಕಿ ಬೆಳಸಿ ಸಂಸ್ಕಾರಯುತವಾಗಿ ಬೆಳೆಸುತ್ತಾರೆ.ಗೋಧೆಯಾದರೂ ಚಿಕ್ಕಂದಿನಲ್ಲಿಯೇ ಕೃಷ್ಣನ ಭಕ್ತಿ ಪ್ರೇಮಿ, ತನ್ನ ಉಸಿರೇ ಶ್ರೀ ಕೃಷ್ಣನು ಈ ಜೀವವಿರುವುದೇ ಕೃಷ್ಣನಿಗಾಗಿ ಎಂಬಂತೆ ಪ್ರತಿಕ್ಷಣವೂ ಕೃಷ್ಣನ ನಾಮಸ್ಮರಣೆಯಲ್ಲಿಯೇ ಇರುತ್ತಾಳೆ.
 ಅವನ ಸ್ಮರಣೆ ಇಲ್ಲದಿದ್ದರೆ ಈ ದೇಹವು ಬೇಡ ಎನ್ನುವಷ್ಟು ಭಕ್ತಿ ಅವಳಲ್ಲಿ..
 ಪ್ರತಿದಿನ ತಂದೆಯು ಭಗವಂತನಗಾಗಿ ಕೊಂಡೊಯ್ಯುತ್ತಿದ್ದಂತಹ ಹೂವಿನ ಮಾಲೆಗಳನ್ನೆಲ್ಲ ಈಕೆ ಮೊದಲೇ ಧರಿಸಿ ಆನಂತರ ಭಗವಂತನಿಗೆ ಸಮರ್ಪಿಸುತ್ತಾ ಇರುತ್ತಾಳೆ. ಕೃಷ್ಣನೇ ತನ್ನ ಪತಿ ಎಂದು ಕೂಡ ಅವಳ ಭಾವ ಸಮರ್ಪಣೆ.
 ಅಂತಹ ಗೋದಾದೇವಿಯು ಭಗವಂತನ ಸಾನಿಧ್ಯವನ್ನು ಪಡೆಯಲು ಈ ವ್ರತವನ್ನು ಆಚರಿಸುತ್ತಾಳೆ. ತಾನೇ ಗೋಪಿಕೆಯಂತೆ,  ಸಖಿಯ ರೇಲ್ಲರೂ ಗೋಪಿಕಾ ಸ್ತ್ರೀಯಂತೆ, ಶ್ರೀ ವಲ್ಲಿ ಪುತ್ತೂರು  ಆಕೆಗೆ ಗೋಕುಲದಂತೆ,,  ಕೃಷ್ಣನ ಜನ್ಮವನ್ನು ಕೃಷ್ಣನ ಲೀಲೆಗಳನ್ನು ಸಾಕ್ಷಾತ್ ಗೋಕುಲದಲ್ಲಿ ಇರುವಂತೆಯೇ ಭಾವಿಸಿ ಈ ವ್ರತವನ್ನು,ಕೇವಲ ತನಗಾಗಿ ಮಾತ್ರ ಆಕೆ ಈ ವ್ರತವನ್ನು ಆಚರಿಸಲಿಲ್ಲ, ಸಾಮಾಜಿಕವಾಗಿಯೂ ಕೂಡ ಎಲ್ಲರ ಒಳಿತಿಗಾಗಿಯೂದೇಶವು ಸಂಪತ್ಭರಿತವಾಗಲಿ, ರೈತರು ಹೆಚ್ಚು ಬೆಳೆಯನ್ನು ಬೆಳೆಯಲಿ,ಎಲ್ಲರ ಮನಸ್ಸಿನಲ್ಲಿಯೂ ಆಧ್ಯಾತ್ಮಿಕತೆಯು ಎಂದುಪ್ರತಿಯೊಬ್ಬರ ರನ್ನು ಭಕ್ತಿಯಲ್ಲಿ ಎಳೆದೊಯ್ಯುವಲ್ಲಿ ಗೋಧಾದೇವಿಯ ಪಾತ್ರ ಮಹತ್ವದ್ದು. ಈ ಧನುರ್ಮಾಸದಲ್ಲಿ ಪ್ರತಿದಿನ ಬೆಳಗಿನ ಜಾವದಲ್ಲಿಯೇ ತನ್ನೆಲ್ಲ ಸಖಿಯರನ್ನೆಲ್ಲ ಕರೆದು ಭಗವಂತನ ದರ್ಶನಕ್ಕಾಗಿ ಎಲ್ಲರನ್ನೂ ಕರೆದೊಯ್ಯುವ ಪ್ರಕ್ರಿಯೆ,, ಒಂದೊಂದು ದಿನಕ್ಕೂ ಒಂದು ಭಗವಂತನಮೇಲೆ ಪಾಶುರ.. ಅಂದರೆ ಪದ್ಯ,,, ಭಗವಂತನ ವರ್ಣನೆಗಳು,, ನಾವು  ಹೇಗೆಲ್ಲಾ ಇರಬೇಕು,ಏನೆಲ್ಲಾ ಮಾಡಬೇಕು, ಹೇಗಿದ್ದರೆ ಮೋಕ್ಷ ಎಂಬುದನ್ನೆಲ್ಲ ತನ್ನ ತಿರುಪ್ಪಾವೈ ನಲ್ಲಿ ಹಾಡಿ ಹೊಗಳಿದ್ದಾಳೆ.
 ಹೇಗೆ ಗೋಕುಲದಲ್ಲಿ ಗೋಪಿಯರೆಲ್ಲರೂ ಸಾಕ್ಷಾತ್ ಕೃಷ್ಣನಂತಹ ಪತಿಯೇ ತಮಗೆ ಸಿಗಲಿ ಎಂದು ಹೇಗೆ ಕಾತ್ಯಾಯಿನಿ ವ್ರತವನ್ನು ಆಚರಿಸಿದರೋ,, ಹಾಗೇ ಇಲ್ಲೂ ಗೊಧಾ ದೇವಿಯೂ ಈ ವ್ರತವನ್ನು ಆಚರಿಸುತ್ತಾಳೆ.
ಗೋಕುಲದಲ್ಲಿ ಕಾತ್ಯಾಯಿನಿ ಪಾರ್ವತಿ ದೇವಿಯನ್ನು ಗೋಪಿಕಾ ಸ್ತ್ರೀಯರೆಲ್ಲರೂ ಸೇರಿ ತಮಗೂ ಕೃಷ್ಣನಂತಹ ವರನೇ  ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಹೇಗೆ???
 ಹೇಮಂತಋತು.. ಬಹಳ ಚಳಿ,ಯಮುನಾ ನದಿಯಲ್ಲಿ ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ,ವ್ರತ  ಅನುಷ್ಠಾನವನ್ನುಮಾಡಲು  ತೊಡಗುತ್ತಾರೆ. ಯಮುನಾ ನದಿಯ ದಡದಲ್ಲಿರುವಂತಹ ಮರಳಿನಲ್ಲಿ,ತಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಂತಹ ಪಾರ್ವತಿ ಕಾತ್ಯಾಯಿನಿ ಮೂರ್ತಿಯನ್ನು ಆ ಮರಳಿನಿಂದ ಮಾಡಿ,, "ಕಾತ್ಯಾಯಿನಿ ಮಹಾಮಾಯೇ ಮಹಾಯೋಗಿನ್ಯಾಧೀಶ್ವರಿ ನಂದಗೋಪ ಸುತಂ  ದೇವಿ ಪತಿo ಮೇ ಕುರುತೆ ನಮ: ಎಂದು ಮಂತ್ರವನ್ನು ಜಪಿಸಿ,ಆ ದೇವಿಗೆ ಗಂದ ಪುಷ್ಪ ಪತ್ರಗಳು ಎಲ್ಲದ ರಿಂದ ಅರ್ಜಿಸಿ. ಭಗೆ ಭಗೆಯ ನೈವೇದ್ಯವನ್ನು ಮಾಡಿ ತಮ್ಮ ವ್ರತವನ್ನು ಹೇಗೆ 30 ದಿನಗಳ ಕಾಲ ಮುಗಿಸಿಕೊಳ್ಳುತ್ತಾರೆಯೋ.. ಅದೇ ರೀತಿ ಈ ಶ್ರೀವಲ್ಲಿ ಪುತ್ತೂರಿನಲ್ಲಿಯೂ ಕೂಡ ಗೋದಾದೇವಿಯು ಈ ಧನುರ್ಮಾಸದ ವ್ರತವನ್ನು ಆಚರಿಸುತ್ತಾಳೆ.

 ಇಂದಿಗೂ ಕೂಡ ಕಾತ್ಯಾಯಿನಿ ವ್ರತವನ್ನು ಯಾರು ಮದುವೆಯಾಗದವರು ಮಾಡುತ್ತಾರೆಯೋ ಅವರಿಗೆ ನಿಶ್ಚಯವಾಗಿ ಮದುವೆಯಾಗುತ್ತದೆ ಎಂಬುದು ಕೂಡ ನಿಜ..
 ಮುತ್ತೈದೆಯರು ಸೌಮಂಗಲ್ಯ ಪ್ರಾಪ್ತಿಗಾಗಿಯೂ. ಕನ್ಯೆಯರು ಉತ್ತಮ ಪತಿ ಸಿಗಲಿ ಎಂಬ ಕಾರಣಕ್ಕಾಗಿಯೂ ಈ ವ್ರತವನ್ನುಮಾಡಬಹುದು.
 ಎಲ್ಲರೂ ತಮ್ಮ ತಮ್ಮ ಅರಿಷ್ಟ ನಿವಾರಣೆಗಾಗಿ ತಮಗೆ ಇಷ್ಟಾರ್ಥ ನೆರವೇರಲು ಈ ಧನುರ್ಮಾಸದ ಪೂಜೆಯನ್ನು ಮಾಡಬೇಕು..

 ದೇವರಿಗೆ ಈ ವ್ರತದ ಕೊನೆಯ ಪರಿಸಮಾಪ್ತಿಯಲ್ಲಿ ಸುಮಂಗಲಿಯರು ವ್ರತವನ್ನು  ಆಚರಿಸಿದರೆ ಕೊನೆಯ ದಿನ ಸುಮಂಗಲಿಯರಿಗೆ ತಾಂಬೂಲದ ಜೊತೆ ಸಕ್ಕರೆ ಪೊಂಗಲ್, ಹುಗ್ಗಿ, ಅಥವಾ ಕಾರ ಪೊಂಗಲ್  ದಕ್ಷಿಣೆ  ನೀಡಿ ವ್ರತ ಸಮಾಪ್ತಿಯನ್ನು ಮಾಡಬೇಕು.

 ಈ ಧನುರ್ಮಾಸದಲ್ಲಿ ಎಂತಹ ಆಹಾರವನ್ನು ಸೇವಿಸಬೇಕು ಎಂಬುವುದು ಕೂಡ ಬಹಳ ವಿಶೇಷವೇ.
 ಚಳಿಗಾಲ ಶರೀರಕ್ಕೆ ಕೊಬ್ಬಿನ ಅಂಶ ಬೇಕು. ಆಹಾರ  ಹೆಚ್ಚು ಶಾಖ ನೀಡುವಂತಿರಬೇಕು,ಕೊಬ್ಬಿನ ಅಂಶವಿರುವಂತಹ ತುಪ್ಪ, ಕೊಬ್ಬರಿ,ತೆಂಗು,ಹೆಚ್ಚು ಬಳಸಬೇಕು, ಕಫ ನಿವಾರಣೆಗಾಗಿ ಕಟು ಅಂದರೆ ಮೆಣಸು ಜೀರಿಗೆ ಹೆಚ್ಚು ಉಪಯೋಗಿಸಬೇಕು.. ಈ ತಿಂಗಳಿನಲ್ಲಿ ನಮಗೆ ಹೆಚ್ಚು ಪ್ರೋಟೀನ್ ಅವಶ್ಯಕತೆ ಇರುವುದು,,ಅದಕ್ಕೆ ಹೆಸರುಬೇಳೆ ಹೆಚ್ಚಾಗಿ ಉಪಯೋಗಿಸಬೇಕು ಎಂಬುದು ಕೂಡ ಅದಕ್ಕಾಗಿ ಹೆಚ್ಚು ಪೊಂಗಲ್ ಮಾಡುವುದು ಇದೇ ತಿಂಗಳಿನಲ್ಲಿ..
 ಮೂರು ಭಾಗ ಅಕ್ಕಿ ಒಂದು ಭಾಗ ಹೆಸರು ಬೇಳೆ, ಕೊಬ್ಬರಿ ಶುಂಠಿ ಅರಿಶಿನ ಗೋಡಂಬಿ, ತುಪ್ಪ ಇದೆಲ್ಲವನ್ನು ಹಾಕಿ ಮಾಡಿದಂತಹ ಈ ಪೊಂಗಲ್ ನಾವು ಬೆಳಗ್ಗೆಯೇ ಸೇವಿಸುವುದು ಕೂಡ ಆರೋಗ್ಯದ ದೃಷ್ಟಿಯಿಂದಲೇ.. ಈ ಸೀಸನ್ ನಲ್ಲಿ ಸಿಗುವಂತಹ ಅವರೆಕಾಳು ಶುಂಠಿ ತೆಂಗು ಇಂಗು ಹೆಚ್ಚಾಗಿ ಬಳಸಬೇಕು..
ಪ್ರಪಂಚದ ಯಾವಮೂಲೆಯಲ್ಲಿವಿಷ್ಣುದೇವಾಲಯಗಳಿದ್ದರೂ ಅಲ್ಲಿ ಕೂಡ ಈ ಧನುರ್ಮಾಸದಲ್ಲಿಬೆಳಗಿನಜಾವದ ಪೂಜೆಗಳು ನಡೆಯುತ್ತಿರುವುದು ಮತ್ತು ಇಂದಿಗೂ ಗೋದೆ ಹಾಡಿದಂತಹ ತಿರುಪ್ಪಾವೈ ಯನ್ನು ಪಠಿಸುವುದು ನಾವು ಕಾಣಬಹುದು.. ತಿರುಪ್ಪಾವೈ ಕೇವಲ ತಮಿಳುನಾಡಿಗೆ ಸೀಮಿತವಾಗಿರದೆ, ನಮ್ಮ ಸಂಸ್ಕೃತಿ ಆಚರಣೆ ಧಾರ್ಮಿಕ ಪದ್ಧತಿಗಳನ್ನು ಎತ್ತಿಹಿಡಿಯುವಲ್ಲಿ ಸಹಕಾರಿಯಾಗಿದೆ ಎಂದರೆ ಸುಳ್ಳಲ್ಲ.
ಆoಡಾಳ್ ತಿರುವಡಿಗಳೇ ಶರಣಂ 🙇‍♀️.🙏🙏🙏✍️ಯಶುಪ್ರಸಾದ್
***
ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿ, ಒಂದು ತಿಂಗಳು ಕಾಲ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಹಾಗಾಗಿ ಈ ತಿಂಗಳನ್ನು ಧನುರ್ಮಾಸ ಎನ್ನಲಾಗುತ್ತದೆ. 

  ಇದರ ಜತೆ ಗಡಗುಟ್ಟಿಸುವ ಚಳಿ‌ಮನುಷ್ಯನನ್ನು ಬಾಧಿಸುತ್ತದೆ. ಚಳಿಗೆ ಮನುಷ್ಯ ಬಿಲ್ಲಿ(ಧನಸ್ಸು)ನಂತೆ ಬಾಗಿ ಮುದುಡಿ ಮಲಗುತ್ತಾನೆ. ಇದರಿಂದಲೂ ಧನುರ್ಮಾಸ ಎಂದು ವ್ಯಾಖ್ಯಾನಿಸಬಹುದು.

    ದೇವತೆಗಳಿಗೆ ಉತ್ತರಾಯಣ ಕಾಲ ಹಗಲಾಗಿದ್ದು, ದಕ್ಷಿಣಾಯನ ಕಾಲ ರಾತ್ರಿಯಾಗಿದೆ. ದಕ್ಷಿಣಾಯನ ಪುಣ್ಯಕಾಲ(ಕಟಕ ಸಂಕ್ರಮಣದ) ನಂತರ ಬರುವ ಆಷಾಢ ಮಾಸದ ಪ್ರಥಮ ಏಕಾದಶಿಯಂದು ಶ್ರೀಹರಿ ಯೋಗನಿದ್ರೆಗೆ ಜಾರುತ್ತಾನೆ. ನಾಲ್ಕು ತಿಂಗಳ ಕಾಲ ಯೋಗನಿದ್ರೆಯಲ್ಲಿದ್ದು, ಕಾರ್ತೀಕ ಮಾಸದ ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಮೇಲೇಳುತ್ತಾನೆ. 
  ಹಾಗೆಯೇ ಧನುರ್ಮಾಸದ ನಂತರ ಮಕರ‌ಸಂಕ್ರಮಣ ನಡೆಯಲಿದ್ದು, ಅಂದಿನಿಂದ ಉತ್ತರಾಯಣ ಆರಂಭವಾಗುತ್ತದೆ.
  ಈ ಕಾಲ ದೇವತೆಗಳಿಗೆ ಹಗಲು, ಆದ ಕಾರಣ, ಧನುರ್ಮಾಸ ದೇವತೆಗಳಿಗೆ ಅರುಣೋದಯ ಕಾಲವಾಗಿದೆ.. ಈ ಸಮಯದಲ್ಲಿ ಶ್ರೀಹರಿಯನ್ನು ಪೂಜಿಸಲು ಪ್ರಶಸ್ತ ಕಾಲ ಎನಿಸಿದೆ.
   ಈ ಒಂದು ತಿಂಗಳ ಕಾಲ ಮುಂಜಾನೆ ಎದ್ದು,                                                                                               ಸ್ನಾನ‌ ಮಾಡಿ ಶುಚಿರ್ಭೂತರಾಗಿ ದೇವರ ಪೂಜೆ ಮಾಡಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ ಎನಿಸುತ್ತದೆ. 
 ಶಾಸ್ತ್ರಕಾರರ ಪ್ರಕಾರ ಸೂರ್ಯೋದಯದ ನಂತರದ ಪೂಜೆ ನಿಷ್ಫಲ‌ ಎನ್ನಲಾಗಿದೆ. ಹಾಗಾಗಿ ಈ ತಿಂಗಳಲ್ಲಿ ಭೂಮಿಪೂಜೆ, ಗೃಹಪ್ರವೇಶ, ಮದುವೆ ಮತ್ತಿತರ ಶುಭಕಾರ್ಯ ನಡೆಸುವಂತಿಲ್ಲ. ಹಾಗೆಂದು ಈ ತಿಂಗಳು ಅಶುಭ ಮಾಸ ವಲ್ಲ ಎನ್ನುವುದು ನೆನಪಿರಲಿ.

 ಈ ತಿಂಗಳಲ್ಕಿ ಪ್ರತಿನಿತ್ಯ ದೇವರಿಗೆ ಮುದ್ಗಾನ್ನ (ಹೆಸರು ಬೇಳೆ ಹುಗ್ಗಿ) ನೈವೇದ್ಯ ಸಮರ್ಪಿಸಬೇಕು. 
 ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಬೇಯಿಸಿ, ಇದರ ಜತೆ ಸ್ವಲ್ಪ ಬೆಲ್ಲ, ಶುಂಠಿ, ತುಪ್ಪ, ಮೆಣಸು ಸೇರಿಸಿ ಹುಗ್ಗಿ ತಯಾರಿಸಬೇಕು. ಕೆಲವರು ಜೀರಿಗೆ, ತುಪ್ಪ ಅಥವಾ ಬೆಣ್ಣೆಯಲ್ಲಿ ಹುರಿದ ಗೇರುಬೀಜ(ಗೋಡಂಬಿ) ಮಿಶ್ರಣ ಮಾಡುತ್ತಾರೆ. ಬೆಣ್ಣೆ ಸೇರಿಸಿ ಮಾಡುವ ಈ ಹುಗ್ಗಿಯನ್ನು ತಮಿಳುನಾಡಿನಲ್ಲಿ ವೆಣ್ ಪೊಂಗಲ್ ಎನ್ನುತ್ತಾರೆ. 
  ಈ ಹುಗ್ಗಿಯ ಜೊತೆಗೆ ಹುಣಿಸೆ ಗೊಜ್ಜು ಸೇರಿಸಿ ಸವಿದರೆ ಆಹ್ಹಾ, ರುಚಿಯೋ ರುಚಿ.
 
 ಹುಗ್ಗಿ ಸೇವಿಸಲು ಕೆಲ ವೈಜ್ಞಾನಿಕ ಕಾರಣಗಳಿವೆ. ಧನುರ್ಮಾಸ ಹೇಮಂತ ಋತುವಿನ ತಿಂಗಳು, ಅತಿ ತೀಕ್ಷ್ಣವಾದ ಚಳಿಗಾಲ. ಈ ವೇಳೆ ಬೀಳುವ ಇಬ್ಬನಿ ನಮ್ಮ ದೇಹದ ಸ್ವೇದಬಿಂದುಗಳ ಮೂಲಕ ಒಳ ಸೇರುವಷ್ಟು ಪ್ರಭಾವಶಾಲಿ. ಈ ತಿಂಗಳಲ್ಲಿ ಸುರಿವ ಹಿಮದಿಂದ ಮುಂಜಾನೆ ಎದ್ದು ಧಾರ್ಮಿಕ ಕಾರ್ಯದಲ್ಲಿ ತೊಡಗುವ ಜನರ ಜತೆ  ಉಳಿದವರ ಕೈ, ಕಾಲು ಮುಖ ಒಡೆಯುವ ಸಾಧ್ಯತೆ ಹೆಚ್ಚು. ಅದರಲ್ಲೂ ನಮ್ಮ ದಕ್ಷಿಣ ಭಾರತದ ಸಾಕಷ್ಟು ಮಂದಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು‌ ಉಷಃಕಾಲದಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಅಶ್ವತ್ಥಕಟ್ಟೆಯನ್ನು ಪ್ರದಕ್ಷಿಣೆ ಮಾಡುವುದು ವಾಡಿಕೆ. ಇವರ ಚರ್ಮ ಸುಕ್ಕಾಗುವುದು ಸಾಮಾನ್ಯ. ಇದಲ್ಲದೇ ಚಳಿ ಈ ಮಾಸದಲ್ಲಿ ಎಲ್ಲರ ದೇಹವನ್ನು ಬಿಲ್ಲಿನಂತೆ ಮುದುಡಿಸುತ್ತದೆ. ಹಾಗಾಗಿ ಈ ಎರಡೂ ಸಮಸ್ಯೆಗಳಿಂದ ಮುಕ್ತಿ ಕಾಣಲು ದೇಹಕ್ಕೆ ಹದವಾದ ಬಿಸಿ ಅಗತ್ಯವಿದೆ. 
  ಕೆಲ ಪದಾರ್ಥಗಳಲ್ಲಿ ಬಿಸಿಲು ಕಾಲದಲ್ಲಿ ತಂಪು ನೀಡುವ ಹಾಗೇಯೇ ಶೀತದಲ್ಲಿ ಉಷ್ಣತೆ ಒದಗಿಸುವ ಗುಣವಿದೆ. ಹೆಸರುಬೇಳೆಯಲ್ಲಿ‌ ಇಂತಹ ಗುಣವಿದೆ. ಇದರ ಜತೆ ದೇಹ ಮತ್ತಷ್ಟು ಬಿಸಿ ಹಾಗೂ ಹುರುಪು ಬರಲು, ಮುಖದಲ್ಲಿ ಕಾಂತಿ ಹೆಚ್ಚಿಸುವುದರೊಂದಿಗೆ ಅಜೀರ್ಣ ತಡೆಯಲು ಉಳಿದ ಪದಾರ್ಥಗಳು ನೆರವಾಗುತ್ತವೆ. ಹಾಗಾಗಿ ಹುಗ್ಗಿ ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ.
ಒಟ್ಟಿನಲ್ಲಿ ಬೇಸಿಗೆಕಾಲದ ಬಿಸಿಲಲ್ಲಿ ಬೆಂಗಾಡಿನ ಅನುಭವ, ಮಳೆಗಾಲದ ಮಳೆಯಲ್ಲಿ  ವನಸಿರಿಯ ಸಂಪತ್ತಿನ ಸೊಬಗು ಹಾಗೂ ಚಳಿಗಾಲದ ಚಳಿಯಲ್ಲಿ ಮುಂಜಾನೆ ಸುರಿವ ಮಂಜಿನ ಸಿಂಚನ. ಈ ಮೂರುಕಾಲಗಳಲ್ಲಿ ಕಾಣುವ ಪ್ರಕೃತಿ ಸೌಂದರ್ಯವನ್ನು ಮಾನವ ಅನುಭವಿಸಬೇಕು ಎಂಬುದು ಹಿರಿಯರ ಅಭಿಮತ. ಈ ಮೂರು ಕಾಲಗಳಲ್ಲಿ ಸೊಬಗು ಸವಿಯುವುದರ ಜತೆ ಸಕಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಹಾಗೂ ಆಹಾರ ಪದ್ಧತಿಯನ್ನು ಸೂಚಿಸಿದ್ದಾರೆ. 

ಹಾಗಾಗಿ,
 ಒಂದು ತಿಂಗಳು ಧನುರ್ಮಾಸ ವ್ರತವನ್ನು ಮಾಡಿ, ದೇಹದ ಜಾಡ್ಯವನ್ನು ತೊಲಗಿಸಿ. ಹುಗ್ಗಿ ಆಹಾರ ಸೇವಿಸಿ, ಸದೃಢ ಆರೋಗ್ಯ ಪಡೆಯಿರಿ. ಶ್ರೀಉಪೇಂದ್ರನಾಮಕ ಶ್ರೀಹರಿಯ ಅನುಗ್ರಹ ಪಡೆಯಿರಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್
***

ಧನುರ್ಮಾಸವನ್ನು ಆಚರಿಸುವ ಮುನ್ನ...

ಸಂವತ್ಸರಗಳಲ್ಲಿ 2 ವಿಧವಿದೆ‌. ಒಂದು ಸೌರಮಾನ ಸಂವತ್ಸರ- ಮೇಷದಿಂದ ವೃಷಭಕ್ಕೆ ಬರೋದು ಮೇಷಮಾಸ, ನಂತರ ವೃಷಭ ಹೀಗೇ ಹನ್ನೆರಡು ತಿಂಗಳು ಮುಗಿದಮೇಲೆ ಮತ್ತೆ ಸೂರ್ಯ ಮೇಷಕ್ಕೆ ಬಂದಾಗ ಇನ್ನೊಂದು ಸಂವತ್ಸರ ಪ್ರಾರಂಭವಾಗುತ್ತದೆ. ಈ ಲೆಕ್ಕಾಚಾರವೆಲ್ಲಾ ಸೌರಮಾನದ್ದು.
ಅದರೊಟ್ಟಿಗೇ ಚಾಂದ್ರಮಾನಮಾಸವೂ ಪ್ರಾರಂಭವಾಗುತ್ತದೆ. ಚೈತ್ರಮಾಸದ ಪ್ರತಿಪತ್ ನಿಂದ ಅಂದರೆ ಯುಗಾದಿಯಿಂದ ಪ್ರಾರಂಭವಾಗುವುದು ಚಾಂದ್ರಮಾನ ಸಂವತ್ಸರ. ( ಮೇಷ ಸಂಕ್ರಮಣದಲ್ಲಿ ಸಂಭವಿಸುವ ತಮಿಳು ಯುಗಾದಿ ಸೌರಮಾನದಲ್ಲೇ). ಚಾಂದ್ರಮಾನದಲ್ಲೇ ಪೌರ್ಣಿಮಾಂತ್ಯ ಪದ್ದತಿ ಮತ್ತು ಅಮಾವಾಸ್ಯಾಂತ ಪದ್ದತಿಗಳಿವೆ. (ಒಂದು ತಿಂಗಳು ಚೈತ್ರಮಾಸ ಅಂದರೆ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಇರುವುದು ಮತ್ತು ಚೈತ್ರಮಾಸದ ಪೌರ್ಣಿಮೆಯ ದಿನವೇ ಅಂತ್ಯವಾಗುತ್ತದೆ. )
ಭಾರಹಸ್ಪತ್ಯ ಸಂವತ್ಸರ ಎಂತಲೂ ಒಂದಿದೆ. ಗುರುಗ್ರಹವು ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾಗುವುದನ್ನೂ ಸಂವತ್ಸರ ಅಂತಲೇ ಕರೆಯುವ ಪದ್ದತಿಯೂ ಇದೆ.
ಈ ರೀತಿಯ ವಿಭಿನ್ನ ಲೆಕ್ಕಾಚಾರಗಳಲ್ಲಿ ಚಾಂದ್ರಮಾನ ಸಂವತ್ಸರದಲ್ಲಿ ಚೈತ್ರ-ವೈಶಾಖಾದಿ ಮಾಸಗಳಿವೆಯಲ್ಲ, ಹಾಗೆ ಮುಂದುವರೆದು ಬಂದಾಗ ಮಾರ್ಗಶಿರ ಮಾಸವೂ, ಸೌರಮಾನ  ಸಂವತ್ಸರ ರೀತ್ಯಾ  'ಧನುರ್ಮಾಸ' ವೂ ಇರುತ್ತದೆ. 
ಶೂನ್ಯ ಮಾಸ ಯಾವಾಗ ಬರುತ್ತದೆ ? 
ಒಂದು ವರ್ಷಕ್ಕೆ ನಾಲ್ಕು ಬಾರಿ ಶೂನ್ಯಮಾಸ ಬರುತ್ತದೆ.
ಮೀನ-ಚೈತ್ರ : ರವಿಯು ಸೌರಮಾಸ ರೀತ್ಯಾ ಮೀನಮಾಸದಲ್ಲಿದ್ದಾಗ, ಚಾಂದ್ರಮಾನ ಮಾಸದ ಚೈತ್ರವೂ ಕೂಡಿದಾಗ ಅದು ಶೂನ್ಯಮಾಸವಾಗಿರುತ್ತದೆ.
2.ಮಿಥುನ-ಆಷಾಢ:  ರವಿಯು ಸೌರಮಾನ ರೀತ್ಯಾ ಮಿಥುನಮಾಸ ದಲ್ಲಿದ್ದಾಗ, ಚಾಂದ್ರಮಾನ ಮಾಸದ ಆಷಾಢವು ಸೇರಿದರೆ ಶೂನ್ಯಮಾಸವಾಗುತ್ತದೆ.
ಕನ್ಯಾ-ಭಾದ್ರಪದ : ರವಿಯು ಸೌರಮಾನಮಾಸ ರೀತ್ಯಾ ಕನ್ಯಾಮಾಸದಲ್ಲಿದ್ದಾಗ ಚಾಂದ್ರಮಾನ ಮಾಸದ ಭಾದ್ರಪದ ಮಾಸ ಬಂದರೆ ಶೂನ್ಯಮಾಸವಾಗುತ್ತದೆ.
ಧನುರ್-ಪುಷ್ಯ : ರವಿಯು ಧನುರ್ ಮಾಸದಲ್ಲಿದ್ದಾಗ ಚಾಂದ್ರಮಾನ ಮಾಸದ ಪುಷ್ಯಮಾಸ ಬಂದರೆ ಅದು ಶೂನ್ಯಮಾಸವಾಗುತ್ತದೆ.
"ಮೀನ- ಚೈತ್ರ ಮಿಥುನ-ಆಷಾಡ, ಕನ್ಯಾ-ಭಾದ್ರಪದ ಧನುರ್ ಪುಷ್ಯೇತಿ ಶೂನ್ಯಂ" ಎಂದು ಜ್ಯೋತಿರ್ಶ್ಯಾಸ್ತ್ರವು ಹೇಳುತ್ತದೆ.
ಹಾಗಾಗಿ ಧನುರ್ ಮಾಸವೇ ಶೂನ್ಯವಲ್ಲ. ಧನುರ್ ಪುಷ್ಯ ಮಾಸಗಳ ಮಿಲನವಾದರೆ ಮಾತ್ರ ಶೂನ್ಯ ಮಾಸವಾಗುತ್ತದೆ.

ಶೂನ್ಯಮಾಸದಲ್ಲಿ ಯಾಕೆ ಒಳ್ಳೆಯ ಕೆಲಸ ಮಾಡುವಂತಿಲ್ಲ ? 
ಹೆಸರೇ ಸೂಚಿಸುವಂತೆ ಕಾಲ‌ನಿರ್ಧಾರಕ್ಕಾಗಿ ಲೆಕ್ಕವೇ ಸಿಗುವುದಿಲ್ಲ‌. ಚಾಂದ್ರಮಾನ ರೀತ್ಯಾ ಸಂವತ್ಸರ ಶುರುವಾಗಿ ಬಿಟ್ಟಿರತ್ತೆ, ಸೌರಮಾನ ಮಾಸ ಶುರುವಾಗಿರೋದಿಲ್ಲ. ಈ ಮಧ್ಯದ ಖಾಲಿ ಅವಧಿಯೇ ಶೂನ್ಯವೆನಿಸುತ್ತದೆ. 
ಪುರಾಣಗಳಲ್ಲಿ ಈ ಮಾರ್ಗಶಿರ ಪುಷ್ಯ ಮಾಸಗಳ ಬಗೆಗೆ ಏನು ಹೇಳಿದೆ ?
ವಿಷ್ಣುವು ಧಾತ್ರಿ ವೃಕ್ಷದಲ್ಲಿ ಪ್ರಥಮ ಏಕಾದಶಿಯಂದು ಮಲಗಿ ಉತ್ಥಾನದ್ವಾದಶಿಯ ದಿನ ಶಯನದಿಂದ ಏಳುತ್ತಾನೆ. ಎದ್ದು ನೇರವಾಗಿ ವೈಕುಂಠಕ್ಕೆ ಹೋಗುವುದಿಲ್ಲ. ಉತ್ತರಾಯಣದಲ್ಲಿ ಅವನು ವೈಕುಂಠಕ್ಕೆ ಹೋದಾಗ ವೈಕುಂಠದ ಬಾಗಿಲು ತೆಗೆಯುವುದು. ಅಲ್ಲಿಯವರೆಗೆ ಏನು ಮಾಡುತ್ತಾನೆ ವಿಷ್ಣು? ಅವನನ್ನು ಕಾಣಲು ಭುವಿಗೆ ಬರುವ ಇತರ ದೇವತೆಗಳ ಜೊತೆ ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡಿಕೊಂಡು ಬರುತ್ತಾನೆ ಅನ್ನೋ ನಂಬಿಕೆಯಿದೆ. ಹೀಗೆ ದಿನವೂ ದೇವತೆಗಳು ಸ್ನಾನ ಮಾಡುವುದು ದೈವದ ಕಾಲ ಬ್ರಾಹ್ಮೀ ಮುಹೂರ್ತದಲ್ಲಿ.  ಹಾಗಾಗಿ ಆ ಸಮಯದಲ್ಲಿ ದೇವರು ಓಡಾಡುತ್ತಿರುವುದರಿಂದ ಧನುರ್ಮಾಸದ ಪೂಜೆಯನ್ನು ಆ ಹೊತ್ತಿನಲ್ಲೇ ನೆರವೇರಿಸುತ್ತಾರೆ.
ಈ ರಥೋತ್ಸವಗಳು ಮತ್ತು ಇತರೆ ಉತ್ಸವಗಳೆಲ್ಲಾ ಯಾವಾಗ ಪ್ರಾರಂಭವಾಗುತ್ತದೆ ಎಂದರೆ ವಿಷ್ಣು ತನ್ನ ರಥವನ್ನು ಏರಿ ವೈಕುಂಠಕ್ಕೆ ಹೊರಟ ಮೇಲೆ ಮಿಕ್ಕೆಲ್ಲಾ ದೇವತೆಗಳ ರಥೋತ್ಸವಗಳು ಪ್ರಾರಂಭವಾಗುತ್ತವೆ. ಸಾಕ್ಷಾತ್ ವಿಷ್ಣುವಿನೊಂದಿಗೆ ಮಾತನಾಡಲು ಸಕಲ ದೇವಾನುದೇವತೆಗಳು ಬಂದಿರುವ ಸಂದರ್ಭದಲ್ಲಿ, ಎಲ್ಲಾ ದೇವರನ್ನು ಹೊತ್ತು ಮೆರೆಸುವ ಕಾಯಕಲ್ಪ ಅದು ಅನ್ನೊದು ಜನಪದೀಯ ವಾಡಿಕೆ. 
ಮಾಘ ಮಾಸದಲ್ಲಿ ದೇವರು ಬೆಳಗ್ಗಿನ ಜಾವ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯನದಿಗಳಲ್ಲಿ ಸ್ನಾನಮಾಡಿರುತ್ತಾರೆ ಎಂಬ ಪ್ರತೀತಿ ಇರುವುದರಿಂದ ಆ ಹೊತ್ತಿನ ಸ್ನಾನ ಜನಸಾಮಾನ್ಯರಿಗೂ ಪುಣ್ಯಕರವೆನಿಸಿದೆ. ದೇವಾನುದೇವತೆಗಳು ಮಿಂದ ತೀರ್ಥಜಲದಿಂದ ನಾವು ಸ್ನಾನ ಮಾಡುವುದರಿಂದ ನಮಗೆ ಪುಣ್ಯ ಲಭಿಸುವುದೆಂಬ ನಂಬಿಕೆಯದು. 
ಸೂರ್ಯ ಹುಟ್ಟುವುದಕ್ಕೂ ಮೊದಲೇ ಬಾಹ್ಯಶುದ್ಧಿಯಾಗಬೇಕೆಂಬ ಸಂಕಲ್ಪ. ಬ್ರಾಹ್ಮೀ ಮುಹೂರ್ತದಲ್ಲಿಯೇ ಅಭಿಷೇಕಗಳು ಶ್ರೇಷ್ಟವೆನಿಸುವುದು ಈ ಕಾರಣಕ್ಕಾಗಿಯೇ. 
ಚಳಿ ಎಂದು ಸೋಮಶರೀತನವನ್ನೇ ಹೊದ್ದು ಮಲಗುವ ನಾವು ನಮ್ಮ ಜಡತ್ವವನ್ನು ಬಿಡಿಸಿಕೊಳ್ಳಲು, ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು, ಮನೋಲ್ಲಾಸ ಪಡೆದುಕೊಳ್ಳುವದುಕ್ಕಾಗಿ ಸೂರ್ಯೋದಯದ ಮೊದಲೇ ಸ್ನಾನ ಮಾಡಬೇಕು ಎನ್ನುವುದು ಇದರ ಉದ್ದೇಶ. ಆಗ ಬೀಳಲ್ಪಡುವ ಹಿಮದಲ್ಲಿ ಓಜೋನ್ ನ ಪ್ರಮಾಣ ಕಡಿಮೆಯಿದ್ದು, ಆಮ್ಲಜನಕ(Oxygen) ಪ್ರಮಾಣವು ಹೆಚ್ಚಿರುತ್ತದೆ. 
ಧನುರ್ಮಾಸದಲ್ಲಿ ಚಳಿ ಹೆಚ್ಚಾಗುವುದು ಸೂರ್ಯೋದಯ ಸಮೀಪವಾಗುವ ಹೊತ್ತಿನಲ್ಲಿ. ಅದನ್ನು ಉಪಶಮನ ಮಾಡಲು, ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಈ ದಿನಮಾನಗಳಲ್ಲಿ ಬೆಳಕು ಹರಿಯುವ ಮುನ್ನವೇ ಸ್ನಾನ ಮಾಡುವುದು ಮುಖ್ಯವಾಗಿರುತ್ತದೆ. 
ಆ ಇಡೀ ತಿಂಗಳು ಎಲ್ಲಾ ದೇವಾಲಯಗಳಲ್ಲೂ ಪೊಂಗಲ್ (ಹೆಸರುಬೇಳೆಯಿಂದ ತಯಾರಿಸುವ ಖಾದ್ಯ) ನೈವೇದ್ಯ ಮಾಡುವ ಉದ್ದೇಶವೇನೆಂದರೆ ಎಲ್ಲಾ ಬೇಳೆ-ಕಾಳುಗಳಿಗಿಂತ ಹೆಚ್ಚು ಪ್ರೋಟೀನ್ ಹೊಂದಿದ್ದು, ಚಳಿಗಾಲದಲ್ಲಿ ಬೇಗ ಜೀರ್ಣವಾಗುತ್ತದೆ. ಶೀತದ ವಾತಾವರಣವಿರುವುದರಿಂದ ಪೊಂಗಲ್ ಗೆ ಮೆಣಸು, ಜೀರಿಗೆ, ಶುಂಠಿಯನ್ನು ಬಳಸಿ ದೇಹವನ್ನು ಬೆಚ್ಚಗಿಡುತ್ತದೆ. ಮಕರ ಸಂಕ್ರಾಂತಿಗೆ ಎಳ್ಳು-ಬೆಲ್ಲವನ್ನು ಹಂಚುವುದೂ ಇದೇ ಕಾರಣಕ್ಕಾಗಿ. 
ಸೂರ್ಯ ತಾನು ತುಲಾರಾಶಿಗೆ ಬಂದಾಗ ನಿಶ್ಶಕ್ತನಾಗುತ್ತಾನೆ ಎನ್ನುವ ಮಾತಿದೆ. ಸತತವಾಗಿ ತುಲಾ-ಧನಸ್ಸು-ಮಕರ ಮಾಸಗಳಲ್ಲಿ ಸೂರ್ಯನ ಪ್ರಭಾವ ಕಡಿಮೆಯಿರುವುದರಿಂದ ಚಳಿ ಹೆಚ್ಚಾಗಿರುತ್ತದೆ. ನಿಶ್ಶಕ್ತತೆ  ನಿವಾರಣೆಯಾಗುವುದು ಅವನು ಮಕರ ಮಾಸಕ್ಕೆ ಬಂದಾಗ. ಸೂರ್ಯ ಮಕರಕ್ಕೆ ಪ್ರವೇಶವಾಗುವ ಹೊತ್ತಿನಲ್ಲಿ ಅತ್ಯಂತ ಪರಾಕ್ರಮಿಯಾಗಿರುತ್ತಾನೆ. ಆ ಕಾರಣಕ್ಕಾಗಿಯೇ ಸಂಕ್ರಾಂತಿ ನಂತರವೇ ಚಳಿ ಕಡಿಮೆಯಾಗುತ್ತದೆ. 
ದೇವರು ನಮಗೆ ಶಕ್ತಿ ತುಂಬುವ ಹಾಗೆ, ನಾವು ಅವನನ್ನು ಪೂಜಿಸಿ ಅವನಿಗೂ ಶಕ್ತಿಯನ್ನು ತುಂಬುವ ಪ್ರಕ್ರಿಯೆ ಈ ಧನುರ್ಮಾಸದ ಪೂಜಾ ವಿಧಾನಗಳು.
ಧನುರ್ಮಾಸವೆಂದರೆ ಮಾರ್ಗಶಿರ-ಪುಷ್ಯ ಮಾಸವಲ್ಲವೇ. “ಮಾಸಾನಾಂ ಮಾರ್ಗಶಿರೋಸ್ಮಿ” ಎಂದು ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ನಾನೇ ಮಾರ್ಗಶಿರ ಮಾಸವಾಗಿರುತ್ತೇನೆ ಎಂದು ಕೃಷ್ಣ ಪರಮಾತ್ಮನೇ ಹೇಳುತ್ತಾನೆ. ಮಾರ್ಗಶಿರ ಮಾಸ ಎಲ್ಲರಿಗೂ ಫಲಭರಿತವಾದದ್ದು. ಇಡೀ ಭೂಮಿಯಲ್ಲಿ ಎಲ್ಲಾ ಕಡೆ ಫಸಲು ಬಂದಿರುತ್ತದೆ. ಕೊಯ್ಲಿನ ಸಮಯದಲ್ಲಿ ಜನರು ದೇವರ ಸ್ಮರಣೆ ಮಾಡಬೇಕೆಂಬ ಉದ್ದೇಶದಿಂದ ಹಗಲೆಲ್ಲಾ ಕಾಲಕಳೆಯುವುದು ಸರಿಯಲ್ಲವೆಂದು, ಸೂರ್ಯೋದಯಕ್ಕೆ ಮುಂಚೆಯೇ ಪೂಜೆ-ಪುನಸ್ಕಾರಗಳನ್ನು, ದೈವಕಾರ್ಯಗಳನ್ನು ಮುಗಿಸಿ ದೈನಂದಿನ ಕೆಲಸಕ್ಕೆ ತೆರಳುವುದು ವಾಡಿಕೆ.
ಭೂಮಿಯ ಮೇಲೆ ದೇವರ ಸಂಚಾರವಾಗುವುದರಿಂದ ದೀಪ ಬೆಳಗಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿರುತ್ತದೆ. ಆದರೆ ಅದಕ್ಕೆ ಕಾರಣ ತಿಳಿದುಕೊಂಡಿರುವುದಿಲ್ಲ. ಧನುರ್ಮಾಸದ ಹಗಲಿನಲ್ಲಿ ಬೆಳಕಿನ ಅವಧಿ ಕಡಿಮೆಯಿರುತ್ತದೆ, ನಿಧಾನವಾಗಿ ಬೆಳಕಾಗುತ್ತದೆ. ಆ ಕಾರಣಕ್ಕಾಗಿ, ದೇವರ ಸಂಚಾರಕ್ಕೆ ಪೂರಕವಾಗಿರಲಿ ಎಂಬ ಕಾರಣಕ್ಕಾಗಿ ದೀಪವನ್ನು ಹಚ್ಚುತ್ತೇವೆ. 
ಮೋಡ ಗರ್ಭಕಟ್ಟುವ ಕಾಲ ಇದಾಗಿರುತ್ತದೆ. ಈ ಸಮಯದಲ್ಲಿ ಔಷಧಯುಕ್ತವಾದ ತೈಲಗಳಿಂದಲೇ ನಾವು ದೀಪಗಳನ್ನು ಹಚ್ಚಬೇಕು. ದೀಪವನ್ನು ಉಫ್ ಎಂದು ಊದಿದರೂ ಅದು ಮೋಡಕ್ಕೆ ಸೇರುತ್ತದೆ. ಹಾಗಾಗಿ ಈ ಆರೋಗ್ಯಭರಿತ ಔಷಧಯುಕ್ತವಾದ ತೈಲವು ಆವಿಯಾಗಿ ಮೋಡದೊಂದಿಗೆ ಸೇರಿಕೊಳ್ಳುತ್ತದೆ. 
“ಪರ್ಜನ್ಯೋ ಔಷಧಯಃ” ಮಳೆಯ ನೀರು ನಮಗೆ ಔಷಧ ರೂಪದಲ್ಲಿ ಸಿಗಬೇಕಲ್ಲವೇ. ಹಾಗಾಗಿ ಶುದ್ಧ ತೈಲವಿರುವ ದೀಪದ ಮೂಲಕ   ಆವಿಯಾಗಿ ಹೋಗುವುದೊಂದು ಕಾರಣವಿರುತ್ತದೆ. 
ಈ ಕಾಲದಲ್ಲಿ ಪಕ್ಷಿ ಸಂಕುಲವು ಬಹಳ ಚಳಿಯನ್ನು ಅನುಭವಿಸುತ್ತದೆ. ಅಲ್ಲದೆ ಅವುಗಳಿಗೆ ಆಹಾರದ ಸಮಸ್ಯೆಯೂ ಇರುತ್ತದೆ . ನಸುಕಿನ ಜಾವದಲ್ಲಿ ದೇವರ ಪೂಜೆಗೆ ನೈವೇದ್ಯ ಮಾಡಿ, ಬಲಿಹರಣದ ನೆಪದಲ್ಲಿ ಪಕ್ಷಿ ಸಂಕುಲಕ್ಕೆ ಆಹಾರವನ್ನು ಒದಗಿಸಲಾಗುತ್ತದೆ.
ಇನ್ನೂ ಹತ್ತು ಹಲವು ವಿಶೇಷವುಳ್ಳ ಧನುರ್ಮಾಸವನ್ನು ಕೇವಲ ಶೂನ್ಯ ಮಾಸವೆಂದು ಕರೆದು ಗಪ್ಪಾಗದೇ ಅರ್ಥಪೂರ್ಣ ಆಚರಣೆಗಳು ಮೈಗೂಡಲಿ. 

🖊ಕೌಸ್ತುಭಾ ಭಾರತೀಪುರಂ
***

*ಧನುರ್ಮಾಸ ಆರಂಭ 16-12-2019 ರಿಂದ ಮಕರಸಂಕ್ರಾಂತಿಯವರೆಗೆ ಧನುರ್ ಮಾಸದಲ್ಲಿ
3 ರಂಗಗಳನ್ನು 24ಗಂಟೆಯೊಳಗೆ ನೋಡಬೇಕೆಂಬ ಪ್ರತೀತಿ ಇದೆ.
ಆದಿ ರಂಗ, ಶ್ರೀರಂಗಪಟ್ಟಣ.
ಮಧ್ಯರಂಗ, ಶಿವನಸಮುದ್ರ.
ಅಂತ್ಯರಂಗ, ಶ್ರೀರಂಗಂ.
ಮೂರು ರಂಗ ದರ್ಶನಕ್ಕೆಪ್ರಶಸ್ತ ಸಮಯ ದರ್ಶನ ಮಾಡಿ ಅನುಗ್ರಹ ಪಡೆಯಬಹುದು.* 🕉

ಅದಿ ರಂಗನಾಥ, ಮಧ್ಯ ರಂಗನಾಥ
ಅಂತ್ಯ ರಂಗನಾಥ
ತ್ರಿರಂಗ ದರ್ಶನಂ - TRI RANGA DARSHANAM
ಒಂದೇ ದಿನದಲ್ಲಿ ಮೂರು ಕಡೆ
ಕಾವೇರಿ ನದಿಯ ದಡದಲ್ಲಿರುವ ದೇವಸ್ಥಾನಗಳು.

ತ್ರಿರಂಗ ದರ್ಶನದ ದೇವಾಲಯಗಳು

ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿವೆ ರಂಗನಾಥನ ತ್ರಿರಂಗ ಕ್ಷೇತ್ರಗಳು. ರಂಗನಾಥನ ಈ ತ್ರಿರಂಗ ಕ್ಷೇತ್ರಗಳು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಲೇಖನವು ಆ ಮೂರು ರಂಗ ಕ್ಷೇತ್ರಗಳು ಯಾವುವು ಹಾಗೂ ಅವೆಲ್ಲೆಲ್ಲಿವೆ ಎಂಬುದರ ಕುರಿತು ತಿಳಿಸುತ್ತದೆ.

ಮೊದಲ ಅದಿ ರಂಗ ಶ್ರೀರಂಗಪಟ್ಟಣದ ಕರ್ನಾಟಕ ,

ಶ್ರೀರಂಗಪಟ್ಟಣ: ಮೂರು ರಂಗಗಳ ಪೈಕಿ ಮೊದಲನೇಯ ಆದಿ ರಂಗವೆ ಈ ಕ್ಷೇತ್ರ.

ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.

ಶ್ರೀರಂಗಪಟ್ಟಣ: ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ.

ವಿಶೇಷ ಸೂಚನೆ : ಧನುರ್ಮಾಸದಲ್ಲಿ ಬೆಳಿಗ್ಗೆ 5 ಗಂಟೆಗೆ ದರ್ಶನ ವ್ಯವಸ್ಥೆ ಇರುವುದು.

ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.

ಎರಡನೆಯ ಮದ್ಯ ರಂಗ ಶಿವನಸಮುದ್ರ ಕರ್ನಾಟಕ.

ಶಿವನಸಮುದ್ರಂ: ತ್ರಿರಂಗ ಕ್ಷೇತ್ರಗಳ ಎರಡನೇಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ.

ಶ್ರೀರಂಗಪಟ್ಟಣದಿಂದ ಮಳುವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವನ್ನು ತಲುಪಬಹುದು.

ಸಾಂಕೇತಿಕವಾಗಿ ಇದು ವಿಷ್ಣುವಿನ ಯವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ.

ಕೊನೆಯ ಮೂರನೆ ಅಂತ್ಯ ರಂಗ ಶ್ರೀರಂಗಂ ತಮಿಳುನಾಡು ,

ಶ್ರೀರಂಗಂ: ತ್ರಿರಂಗಗಳ ಪೈಕಿ ಕೊನೆಯ ಅಥವಾ ಅಂತ್ಯ ರಂಗವು ತಮಿಳು ನಾಡಿನ ಶ್ರೀರಂಗಂನಲ್ಲಿದೆ. ತಿರುಚ್ಚಿಯಿಂದ ಶ್ರೀರಂಗಂಗೆ ಬಸ್ ಸೌಲಭ್ಯವಿದೆ.

ಚೆನ್ನೈ, ಕನ್ಯಾಕುಮಾರಿ, ಹೈದರಾಬಾದ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಮಂಗಳುರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಮ್, ತೂತುಕುಡಿ, ಕೊಲ್ಲಮ್, ತೆಂಕಸಿ ಮತ್ತು ತಿರುಪತಿಯಿಂದ ಬಸ್ ಸೌಕರ್ಯಗಳು ತಿರುಚ್ಚಿಗೆ ಇವೆ. ಶ್ರೀರಂಗಂನಲ್ಲಿರುವ ಈ ದೇವಾಲಯವು ತ್ರಿರಂಗಗಳ ಪೈಕಿ ಅತಿ ದೊಡ್ಡ ದೇವಾಲಯವಾಗಿರುವುದೂ ಅಲ್ಲದೆ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.

ಧನುರ್ಮಾಸದ ಸಮಯದಲ್ಲಿ ದೇವಾಲಯ ಬೆಳಿಗ್ಗೆ 5ಗಂಟೆಗೆ ದರ್ಶನದ ವ್ಯವಸ್ಥೆಯ ಕಾರಣ ಒಂದೇ ದಿನದಲ್ಲಿ ಮೂರು ರಂಗನಾಥ ಸ್ವಾಮಿ ದರ್ಶನ ಪಡೆಯಬಹುದು.
ವೈಕುಂಠ ಏಕದಶಿಯ ದರ್ಶನ ವಿಶೇಷ.

ಒಂದೇ ದಿನದಲ್ಲಿ ಮೂರು ಕಡೆ ಬೆಳಿಗ್ಗೆ ಯಿಂದ ಸಂಜೆ ಸೂರ್ಯ ಹಸ್ತದ ಒಳಗೆ
ಎರಡು ದಾರಿಯಲ್ಲಿ ದರ್ಶನ ಪಡೆಯಬಹುದು.

ಒಂದನೆಯ ದಾರಿ.

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL
ಯಳಂದೂರು - YALANDUR
ಚಾಮರಾಜನಗರ - C.R.NAGAR
ಬೆನಕನಹಳ್ಳಿ - BINAKANAHALLI
ಡಿಂಬಮ್ - DIMBAM
ಬನ್ನಾರಿ - BANNARI
ಸತ್ಯಮಂಗಲ - SATYAMANGALA
ಗೋಪಿಚೆಟ್ಟಿಪಾಳ್ಯ - GOPICHETTIPALAYAM
ಈರೋಡ್ - ERODE
ನಾಮಕಲ್ - NAMAKHAL
ತೂಟ್ಟಯಮ್ - THOTTAYAM
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM
ತಿರುಚ್ಚಿ ಶ್ರೀರಂಗಂ - TIRCHY SRIRANGAM
ಅಂತ್ಯರಂಗ - ANTHYA RANGAM

ಎರಡನೆಯ ದಾರಿ.

ಆಧಿರಂಗ ಶ್ರೀರಂಗಪಟ್ಟಣದಿಂದ
ADI RANGA - SRIRANGPATTNA
ಬನೂರು - BAHNUR
ಮಳವಳ್ಳಿ - MALAVALI
ಶಿವನ ಸಮುದ್ರ - SHIVANASAMUDRAM
ಮಧ್ಯರಂಗ - MADYARANGA
ಕೊಳ್ಳೇಗಾಲ - KOLLEGAL
ಮಹದೇಶ್ವರಬೆಟ್ಟ - M M HILLS
ಪಾಲರ್ - PALAR
ಮೆಟ್ಟೂರು - METTUR
ಸೇಲಂ - SELAM
ನಾಮಕಲ್ - NAMAKHAL
ತೂಟ್ಟಯಮ್ - THOTTAYAM
ಮುಸಿರಿ - MUSIRI
ಗುಣಶ್ರೀಲಮ್ - GUNASHEELAM
ತಿರುಚ್ಚಿ ಶ್ರೀರಂಗಂ - TIRCHY SRIRANGAM
ಅಂತ್ಯರಂಗ - ANTHYA RANGAM

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
***

ಧನುರ್ಮಾಸ - by narahari sumadhwa
ಸೂರ್ಯನು ಧನುರಾಶಿಗೆ ಪ್ರವೇಶಿಸುವ ಕಾಲವನ್ನು ಧನುರ್ಮಾಸ ಎನ್ನುತ್ತಾರೆ.  

 ಒಟ್ಟು ರಾಶಿಗಳ ಸಂಖ್ಯೆ 12.  ಧನುರಾಶಿಯು 9ನೇಯದು. 

 ಸೂರ್ಯನು ಧನುರಾಶಿಯನ್ನು ಪ್ರವೇಶಿಸಿ, ಅಲ್ಲಿದ  ಮಕರ ರಾಶಿಯನ್ನು ಸೇರುವವರೆಗೂ ಧನುರ್ಮಾಸ ಆಚರಿಸಲಾಗುತ್ತದೆ.  ಯಾವ ಸಮಯದಲ್ಲಿ ಸೂರ್ಯನು ಧನುರಾಶಿಯನ್ನು ಪ್ರವೇಶಿಸುತ್ತಾನೋ ನಂತರವೇ  ಧನುರ್ಮಾಸ ಆಚರಣೆ ಮಾಡಬೇಕಾಗುತ್ತದೆ.  ಉದಾಹರಣೆಗೆ ಸೂರ್ಯನು ಬೆಳಿಗ್ಗೆಯಿಂದಲೇ ಧನುರಾಶಿಯನ್ನು ಪ್ರವೇಶಿಸಿದರೆ, ಅಂದೇ ಧನುರ್ಮಾಸ ಆರಂಭವಾಗುತ್ತದೆ.  ಆದರೆ ಕೆಲವು ಸಮಯ ಸೂರ್ಯನು ಮಧ್ಯಾಹ್ನದ ನಂತರ ಪ್ರವೇಶಿಸುತ್ತಾನೆ ಅಂತಹ ಸಂದರ್ಭದಲ್ಲಿ ಮಾರನೇ ದಿನ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ಕಾಲವು ಡಿಸೆಂಬರ್ ಮಾಹೆಯ 16 ಅಥವ 17ರಂದು ಕಂಡು ಜನವರಿ ಮಾಹೆಯ 14 ಅಥವಾ 15ರಂದು ಉತ್ತರಾಯಣ ಆರಂಭದೊಂದಿಗೆ ಸಮಾಪ್ತವಾಗುತ್ತದೆ.

ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ. ಉತ್ತರಾಯಣವು ಹಗಲಾಗಿದೆ.    ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವೆನಿಸಿದೆ.  ಶ್ರೀಹರಿಯ ಪೂಜೆಗೆ ವಿಶೇಷ ಕಾಲವೆನಿಸಿದೆ.

ಧನುರ್ಮಾಸದ ನಿಯಮಗಳು :

ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೆ ದಿನೆ |
ಉಷ:ಕಲೆ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ಧನಂ|
ಉಪಚಾರೈ: ಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀದಿನೇ |
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತಾ ವ ಕರ್ಮಾಣ್ಯರ್ಚಯೇಚ್ಚಮಾಂ |
 
ಅ. ಉಷ:ಕಾಲದಲ್ಲೇ ಏಳಬೇಕು.
ಆ. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು.  ಆಕಾಶದಲ್ಲಿ ನಕ್ಷತ್ರ ಕಾಣಿಸುವ ಹೊತ್ತಿಗೆ ಮಾಡಿದ ಪೂಜೆ ಶ್ರೇಷ್ಠ.  
ನಂತರ ಮಧ್ಯಮ. ಸೂರ್ಯೋದಯಾನಂತರ ಅಧಮ, ನಿಷ್ಫಲ. (ಕೃಷ್ಣಾಚಾರ್ಯ ಸ್ಮೃತಿಮುಕ್ತಾವಲಿ)
ಇ. ಪ್ರತಿನಿತ್ಯ ದೇವರಿಗೆ ಮುದ್ಗಾನ್ನ ನೈವೇದ್ಯ ಸಮರ್ಪಿಸಬೇಕು.
ಈ. ಪಾರಾಯಣಾದಿಗಳನ್ನು ನೈವೇದ್ಯ ನಂತರ ಮಾಡಬಹುದು.
ಉ. ಶ್ರಾದ್ಧಾದಿಗಳನ್ನು ಮಾಡುವವರು ಸೂರ್ಯೋದಯಕ್ಕಿಂತ ಮುಂಚಿತವಾಗಿ ಮಾಡುವುದು ಉತ್ತಮ
ಊ. ಸಂಧ್ಯಾವಂದನ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ದೋಷವಿಲ್ಲ


ಧನುರ್ಮಾಸದಲ್ಲಿ ಬ್ರಹ್ಮಯಜ್ಞ, ಶ್ರಾದ್ಧಾದಿ ಪಿತೃಕಾರ್ಯಗಳನ್ನೂ ಸೂರ್ಯೋದಯ ನಂತರ ಕೂಡ ಪೂರೈಸಬಹುದು.

ಧನುರ್ಮಾಸ ಆಚರಣೆಯಿಂದ ಪ್ರಾಪ್ತಿ : 

ಧನುರ್ಮಾಸದಲ್ಲಿನ ಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಪಾತ್ರವಾದುದು,  ಇದರಿಂದ ಶತ್ರುಗಳು ನಶಿಸುವರು
 ದೀರ್ಘಾಯಸ್ಸು ಪಡೆಯುವರು. 
ಧನಧಾನ್ಯ ಸಂಪತ್ತು ಭರಿತವಾಗುವುದು. ವೇದಶಾಸ್ತ್ರಾಭ್ಯಾಸ, ಎಲ್ಲಕ್ಕೂ ಸಾಧನವಾಗಿದೆ.  

ಸೂರ್ಯೋದಯಕ್ಕಿಂತ ಮುಂಚಿ ಮುದ್ಗಾನ್ನ ನಿವೇದಿಸಬೇಕು.  ಆದರೆ ನಾವು ಭೋಜನವನ್ನು ಸೂರ್ಯೋದಯ ನಂತರವೇ ಮಾಡಬೇಕು.  ಯಾವುದೇ ಸಂದರ್ಭದಲ್ಲೂ ಸೂರ್ಯೋದಯಕ್ಕಿಂತ ಮುಂಚಿತ ಭೋಜನ ಕೂಡದು.

ನಿಷೇಧ – ಉಪನಯನ, ಗೃಹಪ್ರವೇಶ, ಮದುವೆ ಮುಂತಾದವು ಧನುರ್ಮಾಸ ಕಾಲದಲ್ಲಿ ನಿಷೇಧ.  

ಧನುರ್ಮಾಸ ಆಚರಿಸದಿದ್ದರೆ ಹಾನಿ :  ದಾರಿದ್ರ್ಯಬುದ್ಧಿಯಿಂದಾಗಿ ಅವನಿಗೆ ಮುಂದಿನ ಏಳು ಜನುಮಗಳಲ್ಲೂ ದಾರಿದ್ರ್ಯ, ಕ್ಷಯರೋಗಗಳೂ ಮಂದಬುದ್ಧಿಯೂ ಬರುತ್ತದೆ.  (ಆಗ್ನೇಯ ಪುರಾಣ ವಾಕ್ಯ)


ಮುದ್ಗಾನ್ನದಲ್ಲಿ ಅಕ್ಕಿ ಹೆಸರುಬೇಳೆಗಳ ಪ್ರಮಾಣ –  

ಅಕ್ಕಿ ಮತ್ತು ಹೆಸರುಬೇಳೆ ಸಮ ಪ್ರಮಾಣದಲ್ಲಿ ಸೇರಿಸಿ ಮಾಡುವುದು ಅತ್ಯುತ್ತಮ.
ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರು ಬೇಳೆ ಸೇರಿಸಿ ಮಾಡುವುದು ಮಧ್ಯಮ.
ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹೆಸರುಬೇಳೆ ಸೇರಿಸಿ ಮಾಡುವುದು ಅಧಮ.
 
ಹುಗ್ಗಿಯಲ್ಲಿ ಉಪಯೋಗಿಸಬೇಕಾದ ವಸ್ತುಗಳು –
ಹೆಸರುಬೇಳೆ, ಅಕ್ಕಿ, ಬೆಲ್ಲ, ಶುಂಠಿ, ಏಲಕ್ಕಿ, ತುಪ್ಪ, 
 
ಹುಗ್ಗಿಯ ಜೊತೆಗೆ ಹುಣಿಸೇ ಗೊಜ್ಜು, ಬೆಲ್ಲ, ಸಕ್ಕರೆ, ಬೆಣ್ಣೆ ಉಪಯೋಗಿಸುವ ಸಂಪ್ರದಾಯವಿದೆ.

ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ , ಲಕ್ಷ್ಮೀ ಸ್ತೋತ್ರ , ಲಕ್ಷ್ಮೀ ಶೋಭಾನೆ, ವಾಯುಸ್ತುತಿ ಪಾರಾಯಣ,   ಮಾಡಲಾಗುತ್ತದೆ.   

 ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.   ಈ ಪಾರಾಯಣಕ್ಕಿಂತ ಮುಖ್ಯ ಮುದ್ಗಾನ್ನ ನೈವೇದ್ಯ.  ನಂತರ 
ಪಾರಾಯಣಾದಿ‌ ಮಾಡಬಹುದು.

ಧನುರ್ವ್ಯತೀಪಾತ ಯೋಗ – ವ್ಯತೀಪಾತವೆಂಬುದು ಒಂದು ವಿಶೇಷ ಯೋಗವಾಗಿದ್ದು, ಚಂದ್ರ ಸೂರ್ಯರು ಪರಸ್ಪರ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದ ಪರಿಣಾಮ ಕೋಪದ ಸಂಪಾತದಿಂದ ಒಬ್ಬ ಭಯಂಕರವಾದ ಪ್ರಲಯಾಗ್ನಿ ಸದೃಶನಾದ ಒಬ್ಬ ವ್ಯಕ್ತಿ ಜನಿಸಿದನು – ಅವನೇ “ವ್ಯತೀಪಾತ”.


ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ.  ಈ ದಿನ  ಪಿತೃ ತರ್ಪಣವನ್ನು ಕೊಡಬೇಕು.    ಮೇಷದಲ್ಲಿ ರವಿಯಿದ್ದು, ಸಿಂಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು. ಹಾಗೂ ಶುಕ್ಲಪಕ್ಷ ದ್ವಾದಶಿಯಲ್ಲಿ ಹಸ್ತಾ ನಕ್ಷತ್ರವಿದ್ದರೂ ವ್ಯತೀಪಾತ ಯೋಗವೆನಿಸುವುದು.

ವ್ಯತೀಪಾತ ಎನ್ನುವವನು 17ನೇ ಅಧಿಪತಿ.  ಸೂರ್ಯಚಂದ್ರರ ಅನುಗ್ರಹದಿಂದ ಈ ದಿನ ಅಂದರೆ ಈ ಯೋಗವಿದ್ದಾಗ ವಿಶೇಷ ಫಲವಿದೆ.  ಯಾರು ಸ್ನಾನ-ದಾನಾದಿಗಳನ್ನು ಈ ದಿನ ಮಾಡುವರು ಬೇರೆ ಎಲ್ಲದಕ್ಕಿಂತ ಹೆಚ್ಚು ಫಲಕಾರಿ.  ಸೂರ್ಯಚಂದ್ರಾದಿಗಳು  ವ್ಯತೀಪಾತ ಯೋಗವನ್ನು ಇಪ್ಪತ್ತೇಳು ಯೋಗಗಳಲ್ಲಿ   ಹದಿನೇಳನೇ ಅಧಿಪತಿಯನ್ನಾಗಿ ಮಾಡಿ, ನಿನ್ನ ದಿನದಲ್ಲಿ ಯಾರು ಸ್ನಾನ ದಾನಾದಿಗಳನ್ನು ಮಾಡುವರೋ ಅವರ ದಾನಾದಿಗಳೆಲ್ಲ ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು.  “ಅಸಂಖ್ಯೇಯಂ ವ್ಯತಿಪಾತೇ ದಾನಂ ವೇದವಿದೋ ವಿದುಃ “


ಲಕ್ಷ್ಮೀ ದ್ವಾದಶ ನಾಮ ಸ್ತೊತ್ರಂ :

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಸರ್ವಸುಂದರೀ | ೧ |
ಪಂಚಮಂ ದೇವಗರ್ಭಾ ಚ ಷಷ್ಟಂ ಚ ಮಧುಸೂದನೀ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ | ೨ |
ನವಮಂ ಶಾಂರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವತಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ |೩ |
ಏತದ್ವಾದಶ ನಾಮಾನಿ ತ್ರಿಸಂಧ್ಯಂ ಯ: ಪಠೇನ್ನರ: |
ಆಯುರಾರೋಗ್ಯಮೈಶ್ವರ್ಯಮತಿಪುಣ್ಯಫಲಪ್ರದಂ | ೪ |
ದ್ವಿಮಾಸಂ ಸರ್ವಕಾರ್ಯಾಣಿ ಷಣ್ಮಾಸಾದ್ರಾಜ್ಯಮೇವ ಚ |
ಸಂವತ್ಸರಂ ತು ಪೂಜಾಯಾ: ಶ್ರೀಲಕ್ಷ್ಮ್ಯಾಯ: ಪೂಜ್ಯ ಏವ ಚ| ೫ |
ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ |
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಂ |೬ |
ಶ್ರೀಮನ್ಮಂದಕಟಾಕ್ಷಲಬ್ಧವಿಭವ ಬ್ರಹ್ಮೇಂದ್ರಗಂಗಾಧರಾಂ
ತಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ|೭|
|| ಇತಿ ಯುಧಿಷ್ಟಿರಂ ಪ್ರತಿ ನಾರದವಚನಂ (ಸ್ಮೃತಿಮುಕ್ತಾವಲಿ) ||

लक्ष्मी द्वादश नाम स्तॊत्रं :

श्रीदेवी प्रथमं नाम द्वितीयमृतोद्भवा ।
तृतीयं कमला प्रोक्ता चतुर्थं सर्वसुंदरी । १ ।
पंचमं देवगर्भा च षष्टं च मधुसूदनी ।
सप्तमं तु वरारोहा अष्टमं हरिवल्लभा । २ ।
नवमं शांघनी प्रोक्ता दशमं देवदेवता ।
एकादशं तु लक्ष्मी: स्यात् द्वादशं त्विंदिरा भवेत्।३ ।
एतद्वादश नामानि त्रिसंध्यं य: पठेन्नर: ।
आयुरारोग्यमैश्वर्यमतिपुण्यफलप्रदं । ४ ।
द्विमासं सर्वकार्याणि षण्मासाद्राज्यमेव च ।
संवत्सरं तु पूजाया: श्रीलक्ष्म्याय: पूज्य एव च। ५ ।
लक्ष्मीं क्षीरसमुद्रराजतनयां श्रीरंगधामेश्वरीं ।
दासीभूतसमस्तदेववनितां लोकैकदीपांकुरं ।६ ।
श्रीमन्मंदकटाक्षलब्धविभव ब्रह्मेंद्रगंगाधरां
तां त्रैलोक्यकुटुंबिनीं सरसिजां वंदे मुकुंदप्रियां।७।
॥ इति युधिष्टिरं प्रति नारदवचनं (स्मृतिमुक्तावलि) ॥

lakShmI dwaadasha naama stotraM :

shrIdEvI prathamaM naama dvitIyamRutOdbhavaa |
tRutIyaM kamalaa prOktaa chaturthaM sarvasuMdarI | 1 |
paMchamaM dEvagarbhaa cha ShaShTaM cha madhusUdanI |
saptamaM tu varaarOhaa aShTamaM harivallabhaa | 2 |
navamaM shaaMGanI prOktaa dashamaM dEvadEvataa |
EkaadashaM tu lakShmI: syaat dvaadashaM tviMdiraa bhavEt|3 |
Etadvaadasha naamaani trisaMdhyaM ya: paThEnnara: |
AyuraarOgyamaishvaryamatipuNyaphalapradaM | 4 |
dvimaasaM sarvakaaryaaNi
ShaNmaasaadraajyamEva cha |
saMvatsaraM tu pUjaayaa: shrIlakShmyaaya: pUjya Eva cha| 5 |
lakShmIM kShIrasamudraraajatanayaaM shrIraMgadhaamEshvarIM |
daasIbhUtasamastadEvavanitaaM lOkaikadIpaaMkuraM |6 |
shrImanmaMdakaTaakShalabdhavibhava brahmEMdragaMgaadharaaM
taaM trailOkyakuTuMbinIM sarasijaaM vaMdE mukuMdapriyaaM|7|
|| iti yudhiShTiraM prati naaradavachanaM (smRutimuktaavali) ||

 

ಶ್ರೀ ಲಕ್ಷ್ಮೀದ್ವಾದಶನಾಮಾವಳೀ –      

ಶ್ರೀ ದೇವ್ಯೈ ನಮ: | ಅಮೃತೋದ್ಭವಾಯೈ ನಮ: |  ಕಮಲಾಯೈ ನಮ: | ಲೋಕಸುಂದರ್ಯೈ ನಮ: |

ವಿಷ್ಣುಪತ್ನೈ ನಮ: | ಶ್ರೀ ವೈಷ್ಣವೈ ನಮ: | ವರಾರೋಹಾಯೈ ನಮ: | ಹರಿವಲ್ಲಭಾಯೈ ನಮ: |

ಶಾಂರ್ಙ್ಗಣ್ಯೈ ನಮ: |  ಮಹಾಲಕ್ಷ್ಮೈ ನಮ: | ತ್ರಿಲೋಕಸುಂದರ್ಯೈ ನಮ:| ದೇವಗರ್ಭಾಯೈ ನಮ: |

 

ಭದ್ರಲಕ್ಷ್ಮೀ ಸ್ತೋತ್ರ :

ಶ್ರೀ – ಪದ್ಮಾ – ಕಮಲಾ – ಮುಕುಂದಮಹಿಷೀ -ಲಕ್ಷ್ಮೀ: ತ್ರಿಲೋಕೇಶ್ವರಿ |
ಮಾ- ಕ್ಷೀರಾಬ್ಧಿಸುತಾರವಿಂದಜನನೀ, ವಿದ್ಯಾ – ಸರೋಜಾತ್ಮಿಕಾ |
ಸರ್ವಾಭೀಷ್ಟ ಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತ: ಶುದ್ಭತರಾ: ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ ||
 

.  
ಧನುರ್ವ್ಯತೀಪಾತ / ಧನುರ್ವೈಧೃತಿ ಸಂಕಲ್ಪ :

ಆಚಮನ, ಕೇಶವಾಯ ಸ್ವಾಹಾ…………  ಪ್ರಣವಸ್ಯ…………………. ಧನುರ್ಮಾಸ ನಿಮಾಯಕ ಸಂಕರ್ಷಣ ಪ್ರೇರಣಯಾ ಸಂಕರ್ಷಣ ಪ್ರೀತ್ಯರ್ಥಂ ಧನುರ್ವ್ಯತೀಪಾತ  (ಧನುರ್ವೈಧೃತಿ) ಪರ್ವಕಾಲೇ ಪಿತೃತರ್ಪಣಾಖ್ಯಂ ಕರ್ಮ ಕರ್ತುಂ ಆದೌ ವ್ಯತೀಪಾತಾರ್ಘ್ಯ ದಾನಂ ಕರಿಷ್ಯೇ | ವ್ಯತೀಪಾತ (ವೈಧೃತಿ) ಮಹಾಸತ್ವ ಸರ್ವಪಾಪಪ್ರಣಾಶನ |ಸಹಸ್ರಬಾಹೋ ವಿಶ್ವಾತ್ಮನ್ ಗೃಹಾಣಾರ್ಘ್ಯಂ ನಮೋಽಸ್ತು ತೇ | ವ್ಯತೀಪಾತ ನಮಸ್ತೇಽಸ್ತು ನಮಸ್ತೇ ವಿಶ್ವಮಂಗಲ | ವಿಷ್ಣುಚಕ್ರ ಸ್ವರೂಪಾಯ ನಮಸ್ತೇ ದಿವ್ಯತೇಜಸೇ |


ಆಧಾರ ಲೇಖನಗಳು :
ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯರು
ಶ್ರೀ ಚತುರ್ವೇದಿ  ವೇದವ್ಯಾಸಾಚಾರ್ಯರು
☘️☘️☘️☘️☘️
ನರಹರಿ ಸುಮಧ್ವ 
***

by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಧನುರ್ಮಾಸ - 1 "
 " ಧನುರ್ಮಾಸ - ಒಂದು ಚಿಂತನೆ "
" ದಿನಾಂಕ :16.12.2020 ಬುಧವಾರದಿಂದ 14.01.2021 ಗುರುವಾರದ ವರೆಗೆ ಧನುರ್ಮಾಸ "
ಧನುರ್ಮಾಸದ ವಿಷಯದಲ್ಲಿ....
" ಆಗ್ನೇಯ ಪುರಾಣ " ದ 52ನೆಯ ಅಧ್ಯಾಯದಲ್ಲಿ ಹೀಗೆ ಹೇಳಿದೆ......
ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯನ್ನು ಅರ್ಚಿಸಿದರೆ ಅವನು ಸಂಪ್ರೀತನಾದ ಭಕ್ತರಿಗೆ ಅಕ್ಷಯವಾದ ಅಭೀಷ್ಟಗಳನ್ನು ಕೊಡುತ್ತಾನೆ ಈ ವಿಷಯವು ಸತ್ಯ. 
" ಆಗ್ನೇಯ ಪುರಾಣೇ ದ್ವಿಪಂಚಾಶದಧ್ಯಾಯೇ "... 
ತಥಾ ತತ್ರೈವ ಧನುರ್ಮಾಸ 
ವಿಷಯೇ ದ್ವಿಪಂಚಾಶದಧ್ಯಾಯೇ.. 
ಧನುರ್ಮಾಸೇ ಹರಿಃ ಪ್ರೀತ 
ಉಷಃ ಕಾಲಾರ್ಚನೇ ಧ್ರುವಮ್ ।
ದದಾತ್ಯಾಭೀಷ್ಟಮಕ್ಷಯಂ 
ಸತ್ಯಮೇವ ಬ್ರವೀಮಿ ತೇ ।।
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು. 
ಶ್ರೀ ಹರಿಯನ್ನು ಚೆನ್ನಾಗಿ ಪೂಜಿಸಬೇಕು. 
ಮೊಸರು ಮತ್ತು ಹೆಸರು ಬೇಳೆಯ ಹುಗ್ಗಿಯನ್ನು ಶ್ರೀ ಜನಾರ್ದನನಿಗೆ ಸಮರ್ಪಿಸಬೇಕು.
ಉಷಃ ಕಾಲೇ ಧನುರ್ಮಾಸೇ 
ಸ್ನಾತ್ವಾ ಸಮ್ಯಗ್ ಜನಾರ್ದನಮ್ ।   
ಸಮಭ್ಯರ್ಚ್ಯ ಚ ಮುದ್ಗಾನ್ನಂ
ದಧ್ನಾ ಸಹ ನಿವೇದಯ ।।
ಯಥಾ ಶಕ್ತಿ ಪ್ರಾತಃ ಕಾಲದಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. 
ಇದರಿಂದ ಭಕ್ತನು ಇಹದಲ್ಲಿ ಸಕಲ ಭೋಗಗಳನ್ನು ಅನುಭವಿಸಿ ಅನಂತರ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಹೊಂದುವನು. 
ಭೋಜ್ಯ ದ್ವಿಜವರ್ಯಾಂಶ್ಚ 
ಪ್ರಾತಃ ಕಾಲೇ ಯಥಾ ಬಲಮ್ ।
ಭುಕ್ತ್ವೇಹ ಸಕಲಾನ್ ಭೋಗಾನ್ 
ಪ್ರಾಪ್ಸ್ಯೆಸೇ ವೈಷ್ಣವಂ ಪದಮ್ ।।
" ಧನುರ್ಮಾಸದ ವೈಶಿಷ್ಟ್ಯ "
ಧನುರ್ಮಾಸದಲ್ಲಿ ಉಷಃ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ; ಪರಮಾತ್ಮನನ್ನು ಪೂಜಿಸಿ; ಮೊಸರು - ಶು೦ಠಿ ಇವುಗಳಿಂದ ಮನೋಹರವಾದ; ತುಪ್ಪ - ಸಕ್ಕರೆ - ಯಾಲಕ್ಕಿಗಳಿಂದ ಯುಕ್ತವಾದ; ನೆಲ್ಲೀಕಾಯಿ - ಗಡ್ಡೆಗಳಿಂದ ಕೂಡಿದ ಹುಗ್ಗಿಯನ್ನು ದೇವರಿಗೆ ಸಮರ್ಪಿಸಬೇಕು. 
ಜ್ಞಾನಿಯಾದವನು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. 
ಹೀಗೆ ಮಾಡಿದವನು ಯಾವ ಇಷ್ಟಾರ್ಥಗಳನ್ನು ಬಯಸುತ್ತಾನೋ ದುರ್ಲಭವಾಗಿದ್ದರೂ ಅವೆಲ್ಲವನ್ನೂ ಪಡೆಯುತ್ತಾನೆ. 
ಮುಂದೆ ಅವನು ಯೋಗಿಯಾಗಿ; ಜ್ಞಾನಿಯಾಗಿ; ಐಶ್ವರ್ಯವಂತನಾಗಿ ಜನ್ಮ ಜನ್ಮಾಂತರಗಳಲ್ಲಿಯೂ ವೈಷ್ಣವನಾಗಿ ಹುಟ್ಟುತ್ತಾನೆ. 
" ಆಗ್ನೇಯ ಪುರಾಣದಲ್ಲಿ ಧನುರ್ಮಾಸ ಪೂಜೆ ಮಾಡದಿದ್ದರೆ ದೋಷ " ಹೇಳಿದ್ದಾರೆ. 
ಆಕರಣೇ ಪ್ರತ್ಯವಾಯ ಉಕ್ತಃ ತತ್ರೈವ -
ಉಷಃ ಪೂಜಾಂ ಧನುರ್ಮಾಸೇ 
ಯೋ ನ ಕುರ್ವೀತ ವೈಷ್ಣವೀಮ್ ।
ಸಪ್ತ ಜನ್ಮ ಸು ರಿಕ್ತಃ ಸ್ಯಾತ್ 
ಕ್ಷಯ ರೋಗೀ ಚ ಮೂಢಧೀಃ ।।
ಯಾವನು ಧನುರ್ಮಾಸದಲ್ಲಿ ಶ್ರೀಮನ್ನಾರಾಯಣನಿಗೆ ಉಷಃ ಕಾಲದ ಪೂಜೆಯನ್ನು ಮಾಡುವುದಿಲ್ಲವೋ ಆ ಮೂರ್ಖನು ಏಳು ಜನ್ಮಗಳಲ್ಲಿ ಬಡವನಾಗುತ್ತನೆ ಮತ್ತು ಕ್ಷಯ ರೋಗಿಯಾಗಿಯೂ ಹುಟ್ಟುತ್ತಾನೆ.
***
" ಧನುರ್ಮಾಸ - 2 "
" ಶುಭ ಫಲ "
ಸೂರ್ಯನು ಧನು ರಾಶಿಯಲ್ಲಿರುವಾಗ ಯಾವನು ಪರಮಾತ್ಮನನ್ನು ಪೂಜಿಸಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ನಿವೇದಿಸುತ್ತಾನೋ; ಅವನ ಒಂದು ದಿನದ ಪೂಜೆಯಿಂದ 1000 ವರ್ಷಗಳ ಪೂಜೆಯು ಸಿದ್ಧಿಸುತ್ತದೆ. 
ಲಕ್ಸ್ಮೀಪತಿಯು ಧನುರ್ಮಾಸದಲ್ಲಿ ಹುಗ್ಗಿಯ ನೈವೇದ್ಯವನ್ನು ಮಾಡಿದರೆ ಸಂತೋಷ ಪಡುವಂತೆ ಇನ್ನಾವುದರಿಂದಲೂ ಸಂತೋಷ ಪಡುವುದಿಲ್ಲ. 
ವ್ರತ, ತಪಸ್ಸು, ದಾನ ಇತ್ಯಾದಿ ಯಾವುದರಿಂದಲೂ ಶ್ರೀಹರಿಗೆ ಮುದ್ಗಾನ ನಿವೇದನೆಯಿಂದ ಆಗುವಷ್ಟು ಪ್ರೀತಿಯು ಉಂಟಾಗುವುದಿಲ್ಲ. 
ಸೂರ್ಯನು ದನು ರಾಶಿಯಲ್ಲಿದ್ದಾಗ ಶು೦ಠಿ ಸಹಿತವಾದ ಹುಗ್ಗಿಯನ್ನು ಶ್ರೀ ಹರಿಗೆ ಸಮರ್ಪಿಸಬೇಕು. 
ಇಂಥಹಾ ಭಕ್ತನು ಶತ್ರುಗಳನ್ನು ಕ್ಷಣದಲ್ಲಿ ಜಯಿಸುತ್ತಾನೆ. 
ಮೊಸರು - ಶು೦ಠಿ ಸಹಿತವಾದ ಹುಗ್ಗಿಯನ್ನು ಯಾವನು ಧನುರ್ಮಾಸದಲ್ಲಿ ಶ್ರೀ ಹರಿಗೆ ಸಮರ್ಪಿಸುತ್ತಾನೋ ಅವನು ದೀರ್ಘಾಯುಷ್ಮಂತನೋ, ಧನಾಢ್ಯನೂ, ವೇದ ಪಾರಂಗತನೂ ಆಗುತ್ತಾನೆ. 
ಶು೦ಠಿ ಸಹಿತವಾದ ಹುಗ್ಗಿಯನ್ನು ಅಚ್ಯುತನಿಗೆ ಸಮರ್ಪಿಸುವವನಿಗೆ ಗಂಗಾ ಸ್ನಾನಾದಿಗಳಿಂದ, ಇತರ ಜಪಗಳಿಂದ; ಯಾಗಗಳಿಂದ ಏನೂ ಉಪಯೋಗವಿಲ್ಲ. 
ಅವನಿಗೆ ಆಯುಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಬಯಸಿದ ವಸ್ತುಗಳು ಈ ಧನುರ್ಮಾಸ ಪೂಜೆಯಿಂದ ಕೂಡಲೇ ಸಿದ್ಧಿಸುತ್ತವೆ. 
ಹಿಂದೆ ಶ್ರೀ ಇಂದ್ರ ಪತ್ನಿಯಾದ ಪತಿವ್ರತೆಯಾದ ಶಚಿಯು ದುಃಖವನ್ನು ಪಡೆದಳು. 
ಅವಳ ಪತಿಯು ರಾಜ್ಯ ಭ್ರಂಶಾದಿಗಳನ್ನು ಹೊಂದಿದ್ದರಿಂದ ಅವಳಿಗೆ ಅತೀವ ದುಃಖ ಉಂಟಾಯಿತು. 
ಆಗ ಶಚಿಯು ಧನುರ್ಮಾಸದಲ್ಲಿ ಹಿಂದೆ ಹೇಳಿದಂತೆ ಶ್ರೀ ಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ನಿತ್ಯೈಶ್ವರ್ಯವನ್ನು ಪಡೆದಳು.
ಮುಂದೆ ಹೇಳತಕ್ಕಂತಹಾ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಾವಳಿಯನ್ನು 12 ಭಾರಿ ಜಪಿಸಿ ದನುರ್ಮಾಸದಲ್ಲಿ ಬೆಲ್ಲ ಮತ್ತು ಮುದ್ಗಾನ್ನವನ್ನು ಶ್ರೀ ಲಕ್ಷ್ಮೀ ನಾರಾಯಣರಿಗೆ ಸಮರ್ಪಿಸಬೇಕು. ಶ್ರೀ ಮಹಾಲಕ್ಷ್ಮೀಯನ್ನು ಪೂಜಿಸಬೇಕು. 
ಧನುರ್ಮಾಸದಲ್ಲಿ ಅರ್ಥ ಪ್ರಾಪ್ತಿಗಾಗಿ ಈ ರೀತಿಯ ಪೂಜೆ ಮಾಡಿದರೆ ಕೂಡಲೇ ಶ್ರೀ ಮಹಾಲಕ್ಷ್ಮೀಯ ಕೃಪಾ ಕಟಾಕ್ಷದಿಂದ ಅಕ್ಷಯವಾದ ಧನವನ್ನು ಪಡೆಯುತ್ತಾನೆ. 
ಶ್ರೀದೇವಿ - ಅಮೃತೋದ್ಭವ - ಕಮಲಾ - ಲೋಕಸುಂದರೀ - ವಿಷ್ಣುಪತ್ನೀ - ಶ್ರೀ ವೈಷ್ಣವೀ - ವರಾರೋಹ - ಹರಿವಲ್ಲಭೆ - ಶಾಜ್ಞ್ಗಣಿ - ದೇವದೇವಿಕಾ - ಮಹಾಲಕ್ಷ್ಮೀ - ಭಾರ್ಗವೀ. ಇವೇ ಮೊದಲಾದ ಶ್ರೀ ಮಹಾಲಕ್ಷ್ಮೀಯ ದ್ವಾದಶ ನಾಮಗಳು. 
ಶ್ರೀ - ಪದ್ಮಾ - ಕಮಲಾ - ಮುಕುಂದ ಮಹಿಷೀ - ಲಕ್ಷ್ಮೀ - ತ್ರಿಲೋಕೇಶ್ವರೀ - ಮಾ - ಕ್ಷೀರಾಬ್ಧಿಸುತೆ - ಅರವಿಂದ ಜನನೀ - ವಿದ್ಯಾ - ಸರೋಜಾತ್ಮಿಕಾ - ಸರ್ವಾಭೀಷ್ಟ ಫಲಪ್ರದಾ ಎಂಬ ಈ ಹನ್ನೆರಡು ಶ್ರೀ ಲಕ್ಷ್ಮೀ ನಾಮಾವಳಿಯನ್ನು ಅತ್ಯಂತ ಶುದ್ಧರಾಗಿ ಯಾರು ಪಠಿಸುತ್ತಾರೋ ಅವರು ಎಲ್ಲಾ ಮಂಗಳವನ್ನು ಪಡೆಯುತ್ತಾರೆ. 
ಇದು ಭದ್ರ ಲಕ್ಷ್ಮೀ ಸ್ತೋತ್ರ. 
ಇದು ಯಾವಗಾಲೂ ಪುಣ್ಯಪ್ರದವಾದುದು ಮತ್ತು ಸಕಲ ಮಂಗಲಪ್ರದವಾದುದು. ತುಲಾ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿ ಅನಂತರ ಶ್ರೀ ವೃಕ್ಷ ( ಬಿಲ್ವ ) ಸನ್ನಿಧಿಯಲ್ಲಿ ಈ ಸ್ತೋತ್ರವನ್ನು ಜಪಿಸಬೇಕೆಂದು ಶ್ರೀ ನಾರದ ಮಹರ್ಷಿಗಳು ಧರ್ಮರಾಜನಿಗೆ ಹೇಳಿದ್ದಾರೆ.
***
" ಧನುರ್ಮಾಸ - 3 "
ಧನುರ್ಮಾಸ ಕುರಿತು ಉಪಯುಕ್ತ ಮಾಹಿತಿ "
ಆಗ್ನೇಯ ಪುರಾಣದಲ್ಲಿ ಧನುರ್ಮಾಸ ವ್ಯತಿಪಾತದ ವಿಷಯದಲ್ಲಿ ಈ ರೀತಿಯಾಗಿ ಹೇಳಿದ್ದಾರೆ. 
ಸೂರ್ಯನು ಧನು ರಾಶಿಯಲ್ಲಿದ್ದಾಗ ಭಕ್ತಿಮಂತನಾದ ಮಾನವನು ಉಷಃ ಕಾಲದಲ್ಲೆದ್ದು ಸ್ನಾನ ಮಾಡಿ ಶ್ರೀ ಹರಿಯನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸಬೇಕು. 
ಹೀಗೆ ಮಾಡುವವನೇ ಭಾಗವತ ಶ್ರೇಷ್ಠನು. 
ಯಾವನು ಸೂರ್ಯನು ಧನು ರಾಶಿಯಲ್ಲಿದ್ದಾಗ ಬ್ರಾಹ್ಮಣರಿಗೆ ಹುಗ್ಗಿಯನ್ನು ದಾನ ಕೊಡುತ್ತಾನೋ ಅವನಿಗೆ ಮುಕ್ತಿಯು ಶತಃಸ್ಸಿದ್ಧ. 
ಸಾವಿತ ಅಗ್ನಿಷ್ಟೊಮಗಳೂ, ನೂರು ವಾಜಿಪೇಯಗಳೂ ಇವು ಯಾವುದೂ ಧನುರ್ಮಾಸದ ವ್ಯತಿಪಾತದಲ್ಲಿ ಮುದ್ಗಾನ್ನ ದಾನ ಮಾಡಿದರೆ ಉಂಟಾಗುವ ಪುಣ್ಯಕ್ಕೆ ಸಮಾನವಾಗಲಾರವು. 
ವೇದ ಭ್ರಷ್ಟನೂ, ಕರ್ಮ ಭ್ರಷ್ಟನೂ, ವ್ರತ ಭ್ರಷ್ಟನೂ ಮತ್ತು ಮಿತ್ರ ದ್ರೋಹಿಯು ಇಂಥಹಾ ಪಾಪಿಗಳು ಯಾರೇ ಆಗಿರಲಿ ಧನುರ್ಮಾಸದ ವ್ಯತಿಪಾತದಲ್ಲಿ ಬ್ರಾಹ್ಮಣನಿಗೆ ಹುಗ್ಗಿ ದಾನ ಮಾಡಿದರೆ ಆಯಾ ಪಾಪದಿಂದ ಮುಕ್ತರಾಗುತ್ತಾರೆ. 
ದೇವತೆಗಳೂ - ಋಷಿಗಳೂ - ಪಿತೃಗಳೂ ಇವರೆಲ್ಲರೂ, ಮಹೇಶ್ವರನೇ ಮೊದಲಾದ ಎಲ್ಲಾ ಮಹಾ ದೇವತೆಗಳೂ ಮಾರ್ಗಶಿರ ಮಾಸದ ವ್ಯತಿಪಾತದಲ್ಲಿ ಮುದ್ಗಾನ್ನ ದಾನವನ್ನು ಪ್ರಶಂಸಿಸುತ್ತಾರೆ. 
ಧನುರ್ಮಾಸದ ಉಷಃ ಕಾಲದಲ್ಲಿ ವಿಷ್ಣುವಿಗೆ ಮುದ್ಗಾನ ನೈವೇದ್ಯ ಮಾಡಿ; ಪಿತೃಗಳನ್ನು ಉದ್ಧೇಶಿಸಿ ಬ್ರಾಹ್ಮಣ ಭೋಜನ ಮಾಡಿಸಿದರೆ ಬರುವ ಫಲ ಈ ರೀತಿ ಇದೆ.. 
ಗಯಾ ಕ್ಷೇತ್ರದಲ್ಲೂ, ರಾಮ ಸೇತುವಿನಲ್ಲಿಯೂ ಚೆನ್ನಾಗಿ 10000 ಸಾವಿರ ಶ್ರಾದ್ಧಗಳನ್ನು ಮಾಡಿಸಿದರೆ ಎಷ್ಟು ಪುಣ್ಯ ಬರುತ್ತದೆಯೋ ಅಷ್ಟು ಪುಣ್ಯವು ಮುದ್ಗಾನ ನೈವೇದ್ಯದಿಂದ ಬರುತ್ತದೆ. 
ಈ ರೀತಿ ಶ್ರೀ ಹರಿಗೆ ಮುದ್ಗಾನ್ನ ನಿವೇದನೆ ಮಾಡಿ ಬ್ರಾಹ್ಮಣ ಭೋಜನ ಮಾಡಿಸುವವನ ವಂಶದ ಪಿತೃಗಳೆಲ್ಲರೂ ವೈಕುಂಠವನ್ನು ಪಡೆಯುತ್ತಾರೆ. 
1000  ಅರ್ಧೋದಯ ಪುಣ್ಯ ಕಾಲಗಳೂ, ವಾಜಪೇಯಾದಿ ಯಾಗಗಳೂ ಇವು ಯಾವುವೂ ಮಾರ್ಗಶೀರ್ಷ ವ್ಯತಿಪಾತದ 16ನೇ ಒಂದು ಭಾಗಕ್ಕೂ ಸಮಾನವಾಗಲಾರದು.
***
" ಧನುರ್ಮಾಸ - 4 "
" ಶ್ರೀ ಮಹಾ ವಿಷ್ಣು ಮತ್ತು ಶ್ರೀ ಇಂದ್ರ ಪತ್ನಿ ಶಚೀ ಸಂವಾದ "
ಆಗ್ನೇಯ ಪುರಾಣದಲ್ಲಿ ಶ್ರೀ ಮಹಾ ವಿಷ್ಣು ಮತ್ತು ಶಚೀ ಸಂವಾದದಲ್ಲಿ ವಿಶೇಶತೆಯನ್ನು ಹೇಳಲಾಗಿದೆ. 
ಆದುದರಿಂದ ಧನುರ್ಮಾಸದಲ್ಲಿ ಅರುಣೋದಯದಲ್ಲಿ ಎದ್ದು ಬೇರೇ ಎಲ್ಲಾ ಕಾರ್ಯಗಳನ್ನೂ ಬಿಟ್ಟು ಯಾವನು ಮುದ್ಗಾನ್ನದಿಂದ ನಿನ್ನ ಪೂಜೆಯನ್ನು ಮಾಡುತ್ತಾನೋ ಅವನಿಗೆ ಮುಕ್ತಿ ಕೊಡುವವನಾಗು!
ಮಧ್ಯಾಹ್ನದಲ್ಲಿ ಧನುರ್ಮಾಸ ಪೂಜೆಯನ್ನು ಮಾಡಿದರೆ ನಿಷ್ಫಲವಾಗುತ್ತದೆ. 
ಅರುಣೋದಯ ಕಾಲದಲ್ಲಿ ಮಾಡುವ ಪೂಜೆಯೇ ಮುಖ್ಯವೂ ಉತ್ತಮ ಕಲ್ಪಕ್ಕೆ ಸೇರಿದುದು. 
ನಕ್ಷತ್ರಗಳು ಕಾಣಿಸದೇ ಇದ್ದಾಗ ಮಾಡುವು ಧನುರ್ಮಾಸ ಪೂಜೆಯು ಮಧ್ಯಮವು. 
ಸೂರ್ಯನು ಉದಯವಾದ ಮೇಲೆ ಸೂರ್ಯನು ಕಾಣಿಸುವಾಗ ಮಾಡುವ ಧನುರ್ಮಾಸ ಪೂಜೆಯು ಅಧಮವು.
ಮಧ್ಯಾಹ್ನದಲ್ಲಿ ಮಾಡುವ ಧನುರ್ಮಾಸದ ಪೂಜೆಯು ನಿಷ್ಫಲವೆಂದು ತಿಳಿಯತಕ್ಕದ್ದು. 
ಇನ್ನು ಮುದ್ಗಾನ್ನವೆಂದರೆ... 
ಹೆಸರುಬೇಳೆಯ ಹುಗ್ಗಿಗೆ ಸೇರಿಸಬೇಕಾದ ಹೆಸರುಬೇಳೆಯ ಪರಿಮಾಣವನ್ನು ಹೇಳುತ್ತಾರೆ. 
ಅಕ್ಕಿ ಎಷ್ಟು ಇದೆಯೋ ಹೆಸರುಬೇಳೆಯೂ ಅಷ್ಟೇ ಇರಬೇಕು. 
ಉದಾಹರಣೆಗೆ.. 
ಅಕ್ಕಿಯ ಅರ್ಧದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಮಧ್ಯಮವು. 
ಅಕ್ಕಿಯ ಕಾಲು ಭಾಗದಷ್ಟು ಹೆಸರುಬೇಳೆಯ ಸೇರಿಸಿ ಹುಗ್ಗಿ ಮಾಡಿದರೆ ಅದು ಅಧಮವು.
ಧರ್ಮ ಶಾಸ್ತ್ರ ಪ್ರವರ್ತಕರಾದ ಮುನಿಶ್ರೇಷ್ಠರು ಅಕ್ಕಿಯ ಎರಡು ಪಾಲು ಹೆಸರುಬೇಳೆ ಸೇರಿಸಿ ಮಾಡುವ ಹುಗ್ಗಿಯೇ ಉತ್ತಮೋತ್ತಮ ಎಂದು ಹೇಳುತ್ತಾರೆ. 
ಅಂದರೆ ಒಂದು ಪಾವು ಅಕ್ಕಿಗೆ ಎರಡು ಪಾವು ಹೆಸರುಬೇಳೆ ಸೇರಿಸಿ ಹುಗ್ಗಿ ಮಾಡಬೇಕೆಂದು ಅಭಿಪ್ರಾಯ. 
ಈ ಪಕ್ಷದಲ್ಲಿ ತನ್ನ ಶಕ್ತ್ಯಾನುಸಾರವಾಗಿ ಹೆಸರುಬೇಳೆಯನ್ನು ಸೇರಿಸಿ ಹುಗ್ಗಿಯನ್ನು ಮಾಡಬೇಕು. 
ಆದರೆ ಅಕ್ಕಿಯ ಅರ್ಧ ಪರಿಮಾಣಕ್ಕಿಂತ ಹೆಸರು ಬೇಳೆ ಕಡಿಮೆ ಮಾಡಬಾರದು. 
ನಾನು ಬಡವ, ಧನುರ್ಮಾಸದ ಧರ್ಮ ನಡೆಸಲಾರೆ ಅಥವಾ ಈ ರೀತಿ ಮುದ್ಗಾನ್ನ ನೈವೇದ್ಯ ಮಾಡಿದರೆ ನಾನು ದರಿದ್ರನಾಗುತ್ತೇನೆ ಎಂದೋ ದುರ್ಬುದ್ಧಿಯಿಂದ ಧನುರ್ಮಾಸದಲ್ಲಿ ಶ್ರೀ ಹರಿಗೆ ಯಾರು ಹುಗ್ಗಿಯನ್ನು ಸಮರ್ಪಿಸುವುದಿಲ್ಲವೋ ಅವನು ಮುಂದಿನ ಏಳು ಜನ್ಮಗಳಲ್ಲಿ ಬಡವನಾಗುತ್ತಾನೆ. 
ಆದ್ದರಿಂದ ಧನುರ್ಮಾಸದಲ್ಲಿ ಕರ್ಮ ಸಂಕೋಚ ಮಾಡಿ ಮುದ್ಗಾನ್ನ ಸಹಿತವಾಗಿ ಶ್ರೀ ಹರಿಯನ್ನು ಪೂಜಿಸಬೇಕು. 
ಇದರಿಂದ ಮಹತ್ತರವಾದ ಫಲವಿದೆ.
***
" ಧನುರ್ಮಾಸ - 5 "
" ಭಾಸ್ಕರೀಯ ಜ್ಯೋತಿಶ್ಶ್ಯಾಸ್ತ್ರದಲ್ಲಿ ".... 
ದಕ್ಷಿಣಾಯಣ ರಾತ್ರಿಯೂ, ಉತ್ತರಾಯಣ ದೇವತೆಗಳಿಗೆ ಹಗಲು. 
ಆದರೆ ಧನುರ್ಮಾಸವು ದೇವತೆಗಳಿಗೆ ಹಗಲೂ - ರಾತ್ರಿಯೂ ಆಗಿದೆ.
ಆದ್ದರಿಂದ ಸರ್ವ ಪ್ರಯತ್ನದಿಂದಲೇ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃ ಕಾಲದಲ್ಲೆದ್ದು, ಸ್ನಾದಿಗಳನ್ನು ಮಾಡಿ ಷೋಡಶೋಪಚಾರಗಳಿಂದ ಶ್ರೀ ಹರಿ ಪೂಜೆ ಮಾಡಿ ಮುದ್ಗಾನ್ನ ನೈವೇದ್ಯ ಮಾಡಬೇಕು. 
" ಆದಿತ್ಯ ಪುರಾಣದಲ್ಲಿ "... 
ಸೂರ್ಯನು ಧನು ರಾಶಿಯಲ್ಲಿದ್ದಾಗ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು. 
ಸೂರ್ಯೋದಯದ ಮೊದಲು ಜಗನ್ನಾಥನಾದ ಶ್ರೀ ಹರಿಯನ್ನು ಮುದ್ಗಾನ್ನ ನೈವೇದ್ಯದೊಂದಿಗೆ ಪೂಜಿಸಬೇಕು. 
ಅನಂತರ ಪ್ರಾತಃ ಕಾಲದಲ್ಲಿ ಸೂರ್ಯಾರ್ಘ್ಯವನ್ನು ಕೊಟ್ಟು ಗಾಯತ್ರೀ ಜಪ  ಮಾಡಿ ಸೂರ್ಯೋಪಸ್ಥಾನವನ್ನು ಮಾಡಬೇಕು. 
" ಸ್ಮೃತ್ಯರ್ಥ ಸಾರದಲ್ಲಿ.. "
ಧನುರ್ಮಾಸದ ಕೊನೆಯ ಯಾಮದಲ್ಲಿ ( ಬೆಳಗಿನ ಜಾವ 4.30 - 6.00 ಘಂಟೆಯ ಒಳಗೆ ) ಶ್ರೀ ಹರಿಯನ್ನು ಪೂಜಿಸಿ ಮುದ್ಗಾನ್ನ ನೈವೇದ್ಯ ಮಾಡಿ ಅನಂತರ ಸಂಧ್ಯಾವಂದನೆ ಮಾಡಬೇಕು. 
ಹೀಗೆ ಮಾಡಿದರೂ ಕರ್ಮ ಲೋಪವಾಗುವುದಿಲ್ಲ. 
" ಪಂಚರಾತ್ರ ಸಂಹಿತೆಯಲ್ಲಿ.. "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವದಲ್ಲಿ ಶ್ರೀ ಹರಿಗೆ ಮುದ್ಗಾನ್ನ ಸಮರ್ಪಿಸಿ ಪೂಜೆ ಮಾಡಿದರೆ ಒಂದು ದಿನದ ಪೂಜೆಯಿಂದ 1000ವರ್ಷದ ಪೂಜೆಯ ಫಲವು ಬರುತ್ತದೆ. 
" ಪಾರಮೇಷ್ಟ್ಯ ಸಂಹಿತೆಯಲ್ಲಿ... "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವ ಮಹಾಭಿಷೇಕ ವಿಧಾನದಿಂದಲೂ, ವೇದ ಪಾರಾಯಣಾದಿಗಳಿಂದಲೂ ಶ್ರೀ ಹರಿಯನ್ನು ಪೂಜಿಸಬೇಕು. 
" ಮತ್ಸ್ಯ ಪುರಾಣದ ದಾನಖಂಡದಲ್ಲಿ.. "
ಎಲೈ ಮಹಾ ಪುರುಷ ಶ್ರೇಷ್ಠನೇ! 
ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯ ಪೂಜೆ, ಹುಗ್ಗಿ ಸಮರ್ಪಣೆ, ಬ್ರಾಹ್ಮಣ ಭೋಜನ, ನಾನಾ ದಾನಗಳು ಮಾಡಿದವನು ತನ್ನ ಪಿತೃಗಳೊಂದಿಗೆ ಶಾಶ್ವತವಾಗಿ ವಿಷ್ಣು ಲೋಕವನ್ನು ಹೊಂದುತ್ತಾನೆ ಎಂದು ಹೇಳಿದೆ. 
" ಸಂಗ್ರಹವೆಂಬ ಧರ್ಮ ಶಾಸ್ತ್ರದಲ್ಲಿ "
ಸೂರ್ಯನು ಧನು ರಾಶಿಗೆ ಬಂದಾಗ ಯಾವ ದ್ವಿಜನು ಪ್ರಾತಃ ಕಾಲದಲ್ಲಿ ಶ್ರೀ ಹರಿಯ ಪೂಜೆಯನ್ನೂ, ಮುದ್ಗಾನ್ನವನ್ನೂ ಸಮರ್ಪಿಸುತ್ತಾನೋ ಸತ್ಯವಾಗಿಯೂ ಅವನು ವೈಕುಂಠವನ್ನೇ ಹೊಂದುತ್ತಾನೆ. 
ಧನುರ್ಮಾಸದ ಉಷಃ ಕಾಲದಲ್ಲಿ ಯಾವನು ಶ್ರೀ ಹರಿಯ ಪ್ರೀತಿಗಾಗಿ ಬೆಲ್ಲ ಸಹಿತವಾದ ಹುಗ್ಗಿಯನ್ನು ನೆವೇದನೆ ಮಾಡುತ್ತಾನೋ ಅವನು ಶ್ರೀ ಮಹಾ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಪಡೆಯುತ್ತಾನೆ. 
ಧನುರ್ಮಾಸದ ಪೂಜೆ ಅದಕ್ಕೆ ಸಾಧನವಾದ ದ್ರವ್ಯಗಳೂ ಮತ್ತು ಕಾಲ ವಿಶೇಷಗಳನ್ನೂ ತಿಳಿಸುವ ಪ್ರಮಾಣ ವಾಕ್ಯಗಳು ಸ್ಪಷ್ಟ ಪಡಿಸಿವೆ. 
ಆದ್ದರಿಂದ ಎಲ್ಲರೂ ಈ ಧನುರ್ಮಾಸದಲ್ಲಿ ಪ್ರಾತಃ ಕಾಲದಲ್ಲೆದ್ದು ಸ್ನಾನಾದಿಗಳನ್ನು ಮಾಡಿ ಶ್ರೀ ಹರಿಗೆ ಭಕ್ತಿಯಿಂದ ಮುದ್ಗಾನ್ನ ( ಹುಗ್ಗಿ ) ವನ್ನು ಸಮರ್ಪಿಸಿ ಪೂಜಿಸಿ ಜಗತ್ ಸ್ವಾಮಿಯಾದ ಶ್ರೀ ಲಕ್ಷ್ಮೀ ನಾರಾಯಣರ ಪರಮಾನುಗ್ರಹಕ್ಕೆ ಪಾತ್ರರಾಗೋಣ....
" ವಿಶೇಷ ವಿಚಾರ "
12ನೇ ಕಕ್ಷಾ ಸಂಪನ್ನರೂ - ಶ್ರೀ ಕೃಷ್ಣ ಪರಮಾತ್ಮನ ವಿಭೂತಿಯಿಂದೊಪ್ಪುವ ಶ್ರೀ ಯಮಧರ್ಮರಾಜರ ಅಂಶ ಸಂಭೂತರಾದ ಶ್ರೀ ಕನಕದಾಸರ ಅಮೃತ ಹಸ್ತಗಳಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಮುಖ್ಯಪ್ರಾಣದೇವರು. 
by ಆಚಾರ್ಯ ನಾಗರಾಜು ಹಾವೇರಿ 
    ಗುರು ವಿಜಯ ಪ್ರತಿಷ್ಠಾನ
******

No comments:

Post a Comment