SEARCH HERE

Tuesday 1 January 2019

ಉಪಾಕರ್ಮ ಯಜ್ಞೋಪವೀತ ಜನಿವಾರ upakarma janivara yajnopaveeta shravana shukla shravana star



 a detailed info on yajnopaveeta



how to remove yajnopaveeta






click
  Yajnopaveeta Dharana Procedure Upakarma 


  or       YAJNOPAVEETA DHARANE

 OR


ಯಜ್ಞೋಪವೀತ(ಜನಿವಾರ)
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

What is Upakarma?


Upakarma, means “Beginning”  and it is historically, the day was considered auspicious for beginning the Vedic studies.   This is on this day one has to start study of Vedas after doing samarpana of what he has studied in the earlier years.  Without doing Utsarjana and Upakarma, one will not get punya even if he does veda parayana, japa, etc.


When is the day for upakarma?


Rigveda   – Shravana Hunnime with Shravana nakshatra

Yajurveda – Shravana Hunnime

Samaveda – Shravana Masa when Hasta Nakshatra falls

Rugveda Upakarma is done normally on Shravana Hunnime with Shravana Nakshatra.  But Yajurveda  Upakarma is done normally on Shravana Hunnime itself.

 

 

Who are all to do Upakarma and Utsarjana –

a.       All Brahmacharis, Gruhastas, Vanaprasthas to do upakarma and utsarjana.

b.      All Vedaas Rugvedees, Yajurvedees, Samavedees and Atharvana Vedees to do upakarma and utsarjana.

 

Necessity of Upakarma–

geetI, shIGrI, shira:kaMpi, tathaa liKitapaaThaka: |

anarthajnO,alpakaMThashcha paDEtE paaThakaadhamaa:||paaNinIshikShaa)

ಗೀತೀ, ಶೀಘ್ರೀ, ಶಿರ:ಕಂಪಿ, ತಥಾ ಲಿಖಿತಪಾಠಕ: |

ಅನರ್ಥಜ್ಞೋ, ಅಲ್ಪಕಂಠಶ್ಚ ಪಡೇತೇ ಪಾಠಕಾಧಮಾ:||ಪಾಣಿನೀಶಿಕ್ಷಾ)


While chanting Vedaas/ others, sometimes, a) we will chant in a wrong style, b) We will chant very urgently for some urgent work, c) We will unnecessarily shake our head while chanting Vedaas,  d) Some times, there will be mistake in the print of the Vedaas itself e) We will not be knowing the meaning of the Veda mantra, but chanting f) While chanting Vedaas, we will talk with others, do some jokes,  g) mantraheena, svara varna dosha, etc.


To overcome all these sins, upakarma is a must.


Importance of The Janivara or Yagnopaveeta, the sacred thread  –

i.        Three thread Janivara  symbolic of three debts one need to pay —to the teacher, to the Gods, and to the forefathers according to Taittareeya Samhita.

ii.       It also stands symbolically of Brahma Vishnu Maheshwara Sannidhana.

iii.      It also symbolizes the main Vedas Rug, Yajur and Samavedas.

iv.     It also symbolizes the three characters, the Gunaas – Sattva, Rajas and Tamo Guna.

It is said in Saamaveda Chandogya-sootra, that drawing one strand from each Veda, Brahma made a composite string of three strands. Vishnu multiplied it by three with knowledge, action and worship. Chanting the Gaayatri Mantra Shiva tied an eternal knot..      In this way Yagnopaveeta comprises of nine threads. Nine threads represent nine divinities. The first: Omkaara, the second: Agni, The third: naaga,  the fourth: Soma (Chandra), the fifth: pitrugalu (forefathers); the sixth: Prajaapati ; the seventh: Vaayu, the eighth: Surya,  and the ninth: Vishwedevategalu.


Even though the main function of Upakarma is Yagnopaveetha Dharana, it involves many procedures.


a. Samarpana of what we have studied from previous Upakarma to this Upakarma to Vedavyasadevaru which is termed as “Utsarjana”. All Brahmins must study Vedaas and other Madhwa Shastraas.


b. The purohit or the Achar will teach us some of the Veda Mantras of all the Chaturvedaas, i.e, atleast one or two lines from each Vedas. Actually one is supposed to study all the Veda mantras.  As many of us will not have studied the vedas, we would be formally doing the samarpana with one or two lines from the vedas


c. The purohit also teaches one line of Brahmasootra, Sarvamoola granthas, etc as a mark of start of Study of Vedas and other Shastra granthas. We must continue to study further. But in majority of the cases, our study will stop on that day itself.


d. This auspicious day also happens to be the day when Srimannaaraayana took the incarnation of Hayagreeva devaru. Hayagreeva devaru is worshipped as the God of Knowledge and he is the upasya moorthy of Sri Vadirajaru. Hayagreeva, is one of the early incarnations. Lord Vishnu took to restore the Vedas and give them back to Brahma. Vedas were stolen and hidden at the bottom of the sea by the demon killed retrieved the Vedas and restored them to Brahma for the benefit of mankind. In this incarnation, the head is of a horse while the rest of the body is of a human, possessing four hands.


e. Nobody is entitled to perform any other Samskaara without having gone through the Yagnoopaveeta samskaara according to Manusmriti. Brahmins are well aware of the need of the Yagnopaveeta (sacred thread) perform the ceremony, and also adorn life-long, yagnopaveeta. One must undergo Yagnopaveeta Samskaara before the Vivaaha Samskaara (marriage ceremony). Similarly, Shraaddha karma is not valid unless the kartru had undergone the yagnopaveeta samskaara. Even when a person does not wear a yagnopaveeta regularly, priests insist upon it during specific periods, during rituals.


f. Tarpana – On this day, we (Tarpanaadhikarigalu) have to give Pitru Tarpana to forefathers, Gurugalu, and others. Apart from forefathers, everybody has to give tarpana to Rishis.


g. Everybody has to perform Upakarma – All brahmanas should perform upakarma homa invariably. Only for those who are having Soothaka or Vrudhi during the said period, they need not do Upakarma on that day. However, after the soothaka or vrudhi is completed, they must do the Upakarma homa and have the yagnopaveetha changed.


k. Why some people wear two or three or four janivaaras?–


First Janivaara – For Nitya Karmanustana Yogyata siddyartam – A Brahmachari must wear only one set


Second Janivaara – represents Gruhastashrama Yogyata siddyartham – for a Gruhastashrami


Third Janivaara – For uttareeyaartham (Those who are having Jeevan pitru or Jyesta Bratru need not wear uttareeya. They are the uttareeyam for him)

Fourth Janivaara – additional janivara for Daana to others in case of exigencies.


What is Utsarjana? – Samarpana of what we have studied from previous Upakarma to this Upakarma to Vedavyasadevaru which is termed as “Utsarjana”. All Brahmins must study Vedaas and other Madhwa Shastraas.


Rushees worshipped during Upakarma : –

Rugveda – All Sapta Rushees viz., Kashyapa, Atri, Bharadwaja, Viswamitra, Gautama, Jamadagni, (Arundhati Sahita) Vasista would be invited (avaahana) in darbe.


Yajurveda – Nava Rushees viz., Prajapathi, Soma, Agni, Vishwedevaas, saagamhitee, yaajnikee, varuni, brahmanag svayambhuva;

 

Panchagavya Prashana –

We must also do samarpana of the panchagavya and have the prashana on this day.  This panchagavya prashana for the removal of sins committed during the last one year.


Viraja homa –   Raja means – sin, viraja – means removing the sins.  On this day, Yajurvedees also are doing the Viraja homa apart from Panchagavya prashana.  For home they use ellu, rice flour, ghee mishrana.


Dashavidha snaana – During Upakarma, all must have dashavidha snaana –i.e., 

 i) Bhasma snaana  

ii) gomaya snaana, 

iii) mrudasnaana  

iv) doorvasnaana,  

v) tirthasnaana, 

vi) ksheerasnaana, 

vii) dadhisnaana, 

viii) grutasnaana, 

ix) kushodaka snaana,  

 x) doorva snaana

 

Source:

Sri Chaturvedi Vedavyasachar’s Rujveda Yajurveda Utsarjana Upakarma Prayoga book.

Sumadhwa Seva : 

Narahari Sumadhwa

***


Rigveda Upakarma
ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು 

                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .

                                  ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ  ಹುಣ್ಣಿಮೆಯೆಂದು  ( ನೂಲು ಹುಣ್ಣಿಮೆ) ,ಧನಿಷ್ಠ  ನಕ್ಷತ್ರದಂದು   ಹೋಮವನ್ನು  ಮಾಡಿ  ಮತ್ತು  ಹೊಸ  ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು  ರಕ್ಷಾ ಬಂಧನ  ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ  ರಕ್ಷೆಗಾಗಿ  ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ  ಪುಷ್ಪಗಳು,ಮಣಿಗಳು ,ಎಲೆಗಳು  ಹೀಗೆ  ಅತ್ಯಾಕರ್ಶವಾಗಿ ಕಾಣಿಸಲು  ಬೊಂಬೆಗಳು,ನವರತ್ನಗಳನ್ನು  ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ  ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ . 

ದಂತಕಥೆ :
               ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ  ಬಗ್ಗೆ ಜಂಭವಾಗಿ  ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ  ಎಂದು  ವಾದವನ್ನು ಮಂಡಿಸಿದ ಆಗ ಮಹಾವಿಷ್ಣು  ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ  ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು  ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .   

                                      ಆಗ   ಮಹಾವಿಷ್ಣು   ಹಯಗ್ರೀವನಾಗಿ ( ಕುದುರೆಯಾಗಿ)  ಅವತಾರ ತಾಳಿ ಮಧು  ಮತ್ತು ಕೈಠಭರಿಂದ  ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ  ಉಲ್ಲೇಖವಿದೆ . ಈ ದಿನವನ್ನು "ಹಯಗ್ರೀವ ಉತ್ಪತ್ತಿ " ಎಂದು ಆಚರಿಸುತ್ತಾರೆ . ಎಲ್ಲಾ  ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ "ಉಪಾಕರ್ಮ" ಹಬ್ಬವನ್ನು ಆಚರಿಸುವರು . 
**********


ಉಪಾಕರ್ಮ 
ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು.  ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.

ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ.

ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.

ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ

ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.


ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
*****




ಉಪಾಕರ್ಮ, ಉತ್ಸರ್ಜನ  - by narahari sumadhwa

ಉಪಾಕರ್ಮ*  ಅಂದರೆ  ಆರಂಭ ಎಂದು ಅರ್ಥ.   ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು ಕೂಡ ಕರೆಯುತ್ತಾರೆ. ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಸನಿಹದ ಶ್ರವಣ ನಕ್ಷತ್ರ ದಿನ ಋಗ್ವೆದಿಗಳೂ ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳೂ, ಸಾಮವೇದ ಉಪಾಕರ್ಮ ಭಾದ್ರಪದ ಮಾಸದ ಹಸ್ತಾ ನಕ್ಷತ್ರದ ದಿನವೂ ಆಚರಿಸುವ ಪರಿಪಾಠವಿದೆ.

ಉಪಾಕರ್ಮ ಎಂದರೇನು ?

ಉ: “ಉಪಾಕರ್ಮ” ಅಥವಾ ಉಪಕ್ರಮ ಎಂದರೆ ವೇದಾಧ್ಯಯನದ ಪ್ರಾರಂಭ.
.

ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

ಪ್ರಥಮೋಪಾಕರ್ಮ ಎಂದರೇನು?

ಉ:- ಉಪನಯನವಾದ ಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭ ಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದುವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

ಯಜ್ಞೋಪವೀತದ ಅಧಿಪತಿ ದೇವತೆಗಳು

ಕೆಲವರು ಜನಿವಾರ ಕಡಿದುಹೋದರೆ ಅಂಗಡಿಗೆ ಹೋಗಿ ಜನಿವಾರ ಕೊಂಡು ಧರಿಸುವರು. ಆದರೆ ಜನಿವಾರಕ್ಕೆ ಸಾನ್ನಿಧ್ಯ ಬರಬೇಕಾದರೆ ಅದರಲ್ಲಿ ಹಲವಾರು ಅಧಿದೇವತೆಗಳ ಸಾನ್ನಿಧ್ಯವನ್ನು ತರಬೇಕು.

ಓಂಕಾರೋಗ್ನಿಶ್ಚ ನಾಗಶ್ಚ |
ಸೋಮಃ ಪಿತೃಪ್ರಜಾಪತೀ ||
ವಾಯುಃ ಸೂರ್ಯೋ ವಿಶ್ವೇದೇವಾ |
ಇತ್ಯೇತಾ ಸ್ತಂತುದೇವತಾಃ ||

1. ಓಂಕಾರ; 2. ಅಗ್ನಿ; 3. ನಾಗ; 4. ಸೋಮ (ಚಂದ್ರ);       5. ಪಿತೃ ದೇವತೆಗಳು; 6. ಪ್ರಜಾಪತಿ; 7. ವಾಯು;                8. ಸೂರ್ಯ;  9. ವಿಶ್ವೇದೇವತೆಗಳು.

 

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾದರೆ, ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ.
ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ.

ಯಜ್ಞೋಪವೀತ ಸಂಸೃತ ಪದ.  : ಯಜ್ಞ + ಉಪವೀತ.  ಯಜ್ಞೋಪವೀತ ಧಾರಣೆಯು ಬ್ರಾಹ್ಮಣತ್ವ ದೀಕ್ಷೆಯ ಸಂಕೇತ.

 

ಜನಿವಾರ ಧಾರಣೆ ಸಂಖ್ಯೆ :
ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಮಾತ್ರಾ ಧರಿಸಬೇಕು.
ಗ್ರಹಸ್ಥರು / ವಿವಾಹಿತರು ಕನಿಷ್ಟ ಎರಡು ಜನಿವಾರ ಹಾಕಿಕೊಳ್ಳಬೇಕು; ಒಂದು ತನ್ನದು ಮತ್ತೊಂದು ದ್ವಿಜತ್ವದ ಸೂಚಕ

ಕೆಲವರು ಮೂರು ಜನಿವಾರ ಧರಿಸುತ್ತಾರೆ. ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ , ಹಿರಿಯರಿಗೆ ವಂದನೆ ಮಾಡುವಾಗ , ಹೆಗಲ ಮೇಲೆ ಉತ್ತರೀಯ(ಶಾಲು) ಇರಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ; ಆದ್ದರಿಂದ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬರದಂತೆ ಉತ್ತರೀಯದ ಬದಲಾಗಿ ಒಂದು ಹೆಚ್ಚನ ಜನಿವಾರ ಧರಿಸುತ್ತಾರೆ. ಆದರೆ ತಂದೆಯಿದ್ದವರು ಅಥವಾ ಜ್ಯೇಷ್ಠ ಭ್ರಾತಾ ಇದ್ದವರು ಮೂರನೇ ಜನಿವಾರ ಧರಿಸುವ ಅವಶ್ಯಕತೆ ಇಲ್ಲ,

ಕೆಲವು ಗೃಹಸ್ತರು ನಾಲ್ಕು ಜನಿವಾರ ಧರಿಸುವುದೂ ಉಂಟು. ಜನಿವಾರ ಹರಿದರೆ ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಹರಿದರೆ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ; ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಆದ್ದರಿಂದ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು.

ಉಪಾಕರ್ಮದ ದಿನ ಎಲ್ಲರೂ ಯಮ ತರ್ಪಣ ಕೊಡಬೇಕು,  ಮತ್ತು  ತರ್ಪಣಾದಿಕಾರಿಗಳು ದ್ವಾದಶ ಪಿತೃಗಳಿಗೆ ತರ್ಪಣ ಕೊಡತಕ್ಕದ್ದು

ಜನಿವಾರ ಹಳೆಯದಾದರೆ, ಅಥವಾ ಹರಿದರೆ ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸಬೇಕು.

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ | ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗೂ ಪೂರ್ವದಲ್ಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ಒತ್ತು ನೀಡಲಾಗಿದೆ.

ಯಜ್ಞೋಪವೀತದ ನಿಯಮಗಳು* :– ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಳ್ಳಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿಕೊಳ್ಳಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ. ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸಬೇಕು. ತುಂಡಾಗಿರುವ ಜನಿವಾರವನ್ನು ಧರಿಸಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸಬೇಕು. ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸಬೇಕು. ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು. ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ

ಉಪಾಕರ್ಮದ ಸತ್ವದ ಹಿಟ್ಟು

ಉಪಾಕರ್ಮದ ದಿನ ಸಿದ್ಧಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಅದನ್ನು “ಓಂ” ಎಂದು ಹೇಳುತ್ತಾ ಹಲ್ಲಿಗೆ ಸ್ಪರ್ಶವಾಗದಂತೆ ನುಂಗಬೇಕು.

ಉಪಾಕರ್ಮ ದಿವಸ ಹಿಂದೆ ಕಲಿತ ವಿದ್ಯೆಯನ್ನು ವೇದವ್ಯಾಸ ದೇವರಿಗೆ ಸಮರ್ಪಿಸಿ, ಮುಂದೆ ವಿಧಿವತ್ತಾಗಿ ವೇದವನ್ನು ಅಧ್ಯಯನ ಮಾಡಲು ಪ್ರಾರಂಭಿಸುವುದು. ಉಪನಯನ ನಂತರದಲ್ಲಿ ಮೊಟ್ಟ ಮೊದಲು ವೇದಾಧ್ಯಯನಕ್ಕೆ ಪ್ರಾರಂಭಿಸುವುದು


ಪ್ರಥಮೋಪಾಕರ್ಮ - ಉಪನಯನ ನಂತರ ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಅಗ್ನಿಕಾರ್ಯ ಹೋಮ  ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಆರಂಭಿಸಬೇಕು. ಇದನ್ನೇ ಪ್ರಥಮೋಪಾಕರ್ಮ  ಎನ್ನುತ್ತಾರೆ.  ಅದೇ ರೀತಿ ಮದುವೆಯಾದ ಮೊದಲ ವರ್ಷ  ಅವನ ಅತ್ತೆ ಮಾವಂದಿರು ಅಳಿಯನಿಗೆ ವೈಶ್ವದೇವ ಅಧಿಕಾರ ಬಂದ ಕುರುಹಾಗಿ ಮನೆಗೆ ಕರೆದು ಉಡುಗೊರೆ ಕೊಡುವ ಸಂಪ್ರದಾಯವಿದೆ.

ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದಿಗಳೂ, ಮತ್ತು ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಋಗ್ವೇದಿಗಳೂ ಉಪಾಕರ್ಮ ಮಾಡಿಕೊಳ್ಳುವ ಸಂಪ್ರದಾಯ ಇದೆ
by ನರಹರಿ ಸುಮಧ್ವ
******

#ಉಪಾಕರ್ಮ #ಮಾಡಲೇ #ಬೇಕಾದ #ಕರ್ತವ್ಯ 

ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪ ಯೋಗಿ ವಸ್ತುಗಳು, ವಾಹನ ಇತ್ಯಾದಿ ಗಳನ್ನು ಹೊಸದರೊಂದಿಗೆ ಬದಲಾಯಿಸು ತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯ ವಿದೆ. ಹಾಗೆ ಜನಿವಾರವನ್ನು ಬದಲಾಯಿ ಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಅಂದು ನಾವು ಕಲಿತ ವೇದ ಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ. ಯಜ್ಞೋಪ ವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ...  ಯಜ್ಞ ನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ.ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋ ಪವೀತವು ದೇವ , ಋಣ, ಋಷಿ‌ಋಣ ಮತ್ತು ಪಿತೃ‌ಋಣ ವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದ ವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ. ಉಪಾಕರ್ಮ ಅಂದರೆ (ಸಂಸ್ಕೃತ उपाकर्म), ಅಂದಿನಿಂದ  ಶುರು ಎಂದು ಅರ್ಥ.ಈ  ಹಬ್ಬದ ಉಗಮ ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ ಆಚರಿಸಲ್ಪಟ್ಟಿದೆ . ಉಪಾಕರ್ಮವನ್ನು ಶ್ರಾವಣ ಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು, ಯಜುರ್ವೇದಿ ಗಳು ಉಪಾ ಕರ್ಮವನ್ನು ಮಾಡಿಕೊಳ್ಳ ಬೇಕು.  ಉಪಾಕರ್ಮ ಎಂದರೆ ಉಪಾವೀತರಾದ ವರು ವೇದಾಧ್ಯಯನ ವನ್ನು ಪ್ರಾರಂಭಿಸಲು ಮಾಡುವ ಒಂದು ವಿಶೇಷ ಸಂಸ್ಕಾರ.  ಈ ದಿನ ಪೂಜೆ ಮಾಡಿ ಜನಿವಾರವನ್ನು ಧರಿಸಲಾಗು ವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಬ್ರಹ್ಮಚಾರಿ ಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸು ತ್ತದೆ. ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ಸಪ್ತ ಋಷಿಗಳ ಆಹ್ವಾಹನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪ ಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರ ಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರ ವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನು ಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿ ಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ ದಾರಣ ಮಂತ್ರ ಹೇಳಿ ಧರಿಸಲಾ ಗುವುದು.

ಯಜ್ಞೋಪವೀತ ಧಾರಣ ಮಂತ್ರ

ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||

ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿ ಗಿಂತಲೂ ಮೊದಲೇ ಉತ್ಪನ್ನ ಗೊಂಡಿದ್ದು, ಆಯುಷ್ಯ ವನ್ನು ಹೆಚ್ಚಿಸು ವಂತದ್ದು, ಮನುಷ್ಯ ನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸು ವಂತದ್ದು.

ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಲ್ಯ) ಇರಲೇ ಬೇಕೆಂಬುದು ಒಂದು ರೂಢಿ ಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯ ವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆಚ್ಚಿನ ಅಂದರೆ ಮೂರನೇ ಜನಿವಾರ ವನ್ನು ಧರಿಸುವುದು ರೂಢಿ ಯಲ್ಲಿದೆ. ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರ ಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನ ದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿ ಕೊಳ್ಳುವ ಅವಸರ ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕನೇ ಜನಿವಾರವನ್ನು ಹಾಕಿಕೊಳ್ಳುವರು. ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ನೆಲದ ಮೇಲೆ ಕುಳಿತು ಊಟ ಮಾಡಲಾಗದೇ ಟೇಬಲ್ ಮೇಲೆ ಕುಳಿತು ಊಟ ಮಾಡುವುದು ಸಹಜವಾಗಿದೆ. ಈ ಲೋಪದ ಪರಿಹಾರಾರ್ಥ ವಾಗಿ ಕೆಲವು ಶ್ರೋತ್ರೀಯರು ಐದನೇ ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ. ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣ ಗೊಳ್ಳುತ್ತದೆ.ಹಳೆಯ ಜನಿವಾರ ವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.
***


ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:
ಲೇಖನ- ಶ್ರೀ ನಾಗರಾಜಶಾಸ್ತ್ರಿ
ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ: ಉಪಾಕರ್ಮ ಎಂದರೇನು ?

ಉ: "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: - ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "

ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.

ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.

ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.

ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.
ಹರಿಃ ಓಂ ತತ್ ಸತ್ ||
****

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

"ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:-

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ.

ಯಜ್ಞೋಪವೀತದ ನಿಯಮಗಳು:-

* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.

* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.

* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.

* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

ಯಜ್ಞೋಪವೀತದ ವೈಜ್ಞಾನಿಕ ಮಹತ್ವ:-

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.

* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.

* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.

* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.

* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.

* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.

* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.

ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.
#ಯಜ್ಞೋಪವೀತ #ಜನಿವಾರ
***********

ಯಜ್ಞೋಪವೀತಂ ಪರಮಂ ಪವಿತ್ರಂ. ಇದು ದಾರವಷ್ಟೇ ಎಂದು ಭಾವಿಸದಿರಿ, ಯಾವ ವಯಸ್ಸಿಗೆ ಮನುಷ್ಯ ತನ್ನ ಬಲಗೈಯನ್ನು ತಲೆಯ ಮೇಲೆ ಹಾದು ಹೋಗಿಸಿ ಎಡಗಿವಿಯನ್ನು ಮುಟ್ಟುವನೋ ಆ ವಯಸ್ಸಿಗೆ ಆತ ಅಥವ ಆಕೆ ಯಜ್ಞೋಪವೀತ ಧರಿಸಲು ಅರ್ಹರು. ಈ ಉಪವೀತವನ್ನು ಮಾನವದೇಹದ ತಾಳಮಾನಕ್ಕನುಸಾರವಾಗಿ ಮಾಡಲಾಗುತ್ತಿತ್ತು. ಸತ್ಯ ನುಡಿ, ಸತ್ಯಕಾಯಕ ಮತ್ತು ಸತ್ಯಾಲೋಚನೆ ಎಂಬ ಮೂರೆಳೆಯ ಸೂತ್ರದಾರವನ್ನು ಅದು ಗಿಡದಿಂದಾಗಲಿ, ಲೋಹಗಳಾದ ತಾಮ್ರ, ಬೆಳ್ಳಿ, ಬಂಗಾರದಿಂದಾಗಲೀ ಮಾಡಿ ಆಯಾ ವಟುವಿನ ಪೂರ್ಣ ಎತ್ತರದ ಮಾಪನ ಮಾಡಿ ಆ ಸೂತ್ರದ ಕೊನೆಗಳನ್ನು ಸೇರಿಸಿ ಬ್ರಹ್ಮಗಂಟು ಹಾಕುತ್ತಾರೆ, ಆಗ ಅದು ಆ ವಟುವಿನ ಎತ್ತರದ ಅರ್ದದಷ್ಟು ಆಗುತ್ತದೆ. ಅಂದರೆ ಆರು ಅಡಿಯ ಮಾನವನ ಯಜ್ಣೋಪವೀತ ಮೂರು ಅಡಿಯದ್ದಾಗಿರುತ್ತದೆ. ಈ ರೀತಿ ಪ್ರತಿ ವಟುವಿಗೂ ಪ್ರತ್ಯೇಕ ಮಾಪನದಿಂದ ಉಪವೀತ ಮಾಡುವ ತಂತ್ರಕ್ಕೆ ಮಾತ್ರಮಾಪನ ಎನ್ನುತ್ತಾರೆ. ಹಾಗಲ್ಲದೆ ಎಲ್ಲರಿಗೂ ಒಂದೆ ಅಳತೆ ಮಾಡುವ ವಿಧಾನಕ್ಕೆ ಮಾನಮಾಪನ ಎನ್ನುತ್ತಾರೆ. ಹಾಗೆ ಮಾಡಿದ ಉಪವೀತವು ಆಯಾ ವಟುವಿನ ಸೊಂಟದ ಸುತ್ತಳತೆಯಾದಾಗ ಆ ವಟುವಿನ ಆರೋಗ್ಯ ಅತ್ಯಂತ ಸದೃಡವಾಗಿದೆ ಎಂದು ಮತ್ತು ಆ ಸುತ್ತಿನ ನಂತರ ದಾರ ಉಳಿದರೆ ಆತನ ಕಫ ಅಂದರೆ ಮಣ್ಣು ಮತ್ತು ನೀರಿನ ಅಂಶ ಹೆಚ್ಚಾಗಿ ಕ್ಷಯವಾಗುತ್ತಿದ್ದಾನೆಂದೂ, ಆ ಸೂತ್ರದ ಅಳತೆಗಿಂತ ಹೊಟ್ಟೆ ಹೆಚ್ಚಾಗಿದ್ದಲ್ಲಿ ಆ ವಟುವಿನ ವಾತ ಅಂದರೆ ವಾಯು ಹೆಚ್ಚಾಗಿ ಮಧುಮೇಹ ಮತ್ತು ರಕ್ತದೊತ್ತಡ ಹೆಚ್ಚಾಗಿ ಅನೇಕ ರೋಗಗಳಿಗೆ ತೆರೆದ ಬಾಗಿಲಾಗಿದ್ದಾನೆಂದೂ ತಿಳಿಯಬೇಕು. ಹಾಗಾಗಿ ಈ ಉಪವೀತವನ್ನು ಆರೋಗ್ಯದ ಅಳತೆಗೋಲಾಗಿ ಬಳಸಬಹುದು. ಈ ಸೂತ್ರಕ್ಕೆ ಕುಲಮತಗಳಿಲ್ಲ ಕಣ್ರಿ, ಹಾವು ಕಡಿತಕ್ಕೆ ಕಟ್ಟಲೂ ಬಳಸಬಹುದು. ರಾಣಿ ಚಿನ್ನಾದೇವಿಯ ಬಿನ್ನಪದ ಮೇರೆಗೆ ಆಕೆಯೊಡನೆ ಹಂಪಿಯ ಉದ್ಯಾನ ವನದಲ್ಲಿ ಕುಳಿತಿದ್ದ ಕೃಷ್ಣದೇವರಾಯ ಅಲ್ಲಿಯೇ ಕಮಲಮಹಲ್ ನಿರ್ಮಿಸಲೆಂದು ಕೃಷ್ಣಭಟ್ಟರನ್ನು ಕರೆಸಿದಾಗ ತನ್ನ ಯಜ್ಞೋಪವೀತವನ್ನು ಅಳತೆಗೋಲಾಗಿ ಬಳಸಿ ಅಂದೆ ನಿರ್ಮಾಣ ಮಾಡಲು ಆರಂಭಿಸಿ ಸುಂದರ ಕಮಲಮಹಲ್ ಸಿದ್ಧ ನಾಡಿ ಕೊಟ್ಟ. ಅದರ ಅಳತೆಯ ಕುಶಲತೆಗೆ ಬ್ರಿಟೀಷರು ಬೆರಗಾದರಂತೆ.
****
Year 2021 
 Date of Upakarma 21-8-2021
  Week- Saturday Samvatsara- Plava Nama  Rutu- VarshaMasa- Shraavana Paksha- Shukla Titi- Chaturdashi Nakshatra -  Shravana Star  Rahu Kala- 9 AM to 10-30 AM   ( performance before 9AM)
Upakarma procedure 
 Sri Gurubhyo Namaha 
The following procedure to perform Upakarma, has been in practice in Uttaradi mutts. 
  First think of Parents, Grand Parents, Gurugalu, Oora Devate. 
1.  Have mudre on the body 
2. Do achamana  ( Keshava)
3. Pranayama 
4. Sankalpa
5. Arghya to surya. 
( 3 times)
 6. Bhuta ucchatane. 
7.  Digbandana-- 10 Gayathri+ 33 om namo narayanaya (or 
     multiples) to old janivara. 
8. Give Tarpana to all the relatives not with us today by black yellu. 
(If parents are alive do not do the above )
 Give Arghya withwhite wet rice to all with us. Meaning of Arghya is to return favour. 
 9. Important-
     Holding old brahmagantu transfer all good things done 
in the previous year. Wear NEW janivara by chanting 
    Yagnopaveetam ( 3times). 
      ಯಜ್ಞ ಉಪವೀತಂ ಪರಮಂ ಪವಿತ್ರಮ್ ಪ್ರಜಾಪತೇರ್ಯಸಹಜಾಮ್ ಪುರಸ್ತಾದ್ಆಯುಷ್ಯಮಾಗ್ರ್ಯಾಂಪ್ರತಿಮಂಚಶುಬ್ರಮ್ ಯಜ್ಞ ಉಪವೀತಂ ಬಲಮಸ್ತು ತೇಜ: 
New janivara is empty of any radiations.
Do 10 Gayathri +33 Om Namo Narayanaya ) holding both old and new brahma gantu. 
This is First 10 Gayathri for new one. 
10.   Remove old one from the bottom without touching the 
feet. Chant Upaveetam 
   (one time).
ಉಪವೀತಂ   ಹ್ಯಾತಿ ಭಿನ್ನತಂತುಂ| 
ವೇದಾಂತ ವೇದ್ಯಂ ಪರಮಾತ್ಮ ರೂಪಂ 
ಆಯುಷ್ಯ ಮಾರ್ಗ್ಯಾಂ ಪ್ರತಿಮುಂಚ ಶುಭ್ಯಂ | ಜೀರ್ಣೋಪವೀತಂ ವಿಸರ್ಜನಿ ಭೊತ್ಯಯಿ ||
   **
    ಉಪವೀತಂ ಭಿನ್ನತಂತುಂ 
    ಜೀರ್ಣಮ್ ಕಶ್ಮಲದೂಷಿತಮ್  |
    ವಿಸೃಜಾಮಿ ಪರಬ್ರಹ್ಮನ ವರ್ಚೊ 
  ದೀರ್ಗಾಯುರಸ್ತು ಮೇ ||
  “ಸಮುದ್ರಂ ಗಚ್ಛ ಸ್ವಾಹಾ ”  
    ಇತ್ಯುಕ್ತ್ವಾ ವಿಸೃಜೇತ್  |
   ಪುನರಾಚಮನಂ ಕರಿಷ್ಯೆ 
11. Do 108 Gayathri +324 Om Namo Narayanaya ) holding new Janivara brahma gantu. 
12. Continue Sandhyavandana
13. Namaskara with Pravara (3 times ). 
14.  Kayena vacha. 
15.  Achamana and Krishna arpanamastu. 
     || Shubhamastu ||
Compiled by Dr. Gururaja Yeri  8095227503
Astrology counsellor Mysore.
****


by ಅಹೋರಾತ್ರ - you see him in this video


ಜನಿವಾರಕ್ಕೆ ಬ್ರಹ್ಮಗಂಟು ಹಾಕುವ ರೀತಿ ವಿಡಿಯೋದಲ್ಲಿ ತೋರಿಸಲಗಿದೆ


**********


No comments:

Post a Comment