SEARCH HERE

Friday 1 February 2019

ಶ್ರೀ ಹಯಗ್ರೀವ ಜಯಂತಿ hayagreeva jayanthi shravana pournima






Info from FB madhwanet--->
Shri gurubyO namaha...
Today, shrAvaNa shukla pourNami, is the jayanti of hayagrIva dEvaru, the upAsana mUrti of bhAvi samIra shri vAdirAja tIrtharu.
The archane and upAsane of Lord hayagrIva became more popular & public during the period of shri vAdirAja gurusArvabhouma. shri rAjaru composed many stothras & bhajans on Lord hayagrIva and there are many incidents in his life history depicting his special devotion to Lord hayagrIva. Some of the key facts are as follows.
-- Lord hayagrIva appeared in the form of an idol in the house of a goldsmith who was trying to make an idol of shri gaNapati. Lord hayagrIva advised the goldsmith in his dream to offer the idol to shri vAdirAj gurusArvabhoumaru. The idol is still being worshipped today in sOde maTa.
-- Once during shri vAdirAja tIrtha's stay in Pandarapura, a landlord came and complained about a white horse of the maTa, spoiling the yields of his farm. shri vAdirAja tIrtharu understood the play of Lord hayagrIva to bless the farmer and asked him not to worry and he would be blessed. Next day the farmer found that parts eaten by the horse were refilled with gold. The farmer was so happy to get blessed by Lord and offered all his land to Shri Swamiji.
-- Then onwards shri vAdirAja swamiji used to offer a special sweet dish made of gram dhal as Naivedya to Lord hayagrIva. Shri Swamiji used to put the golden bowl containing the naivedya on his head and request Lord to accept the same through the stothra "dashAvatAra stuthi", composed in "ashwa dhATi" (the rhythm of horse galloping). Lord used to appear in the form of white horse dancing to the tune of the stOthra, keep his two legs on the shoulders of shri vAdirAja swamiji and eat the sweet dish happily, leaving behind a small part as prasada. The special naivedya also got the name "hayagrIva" as a commemoration of this incident.
-- Lord hayagrIva also blessed a community of brahmins in the village Mattu, near Udupi, through shri vAdirAjaru, with another incident related to the "hayagrIva naivEdya". A few people got a bad thought of verifying the fact of Lord hayagrIva eating the dish and one day they brainwashed the cook & poisoned the dish. On that day Lord hayagrIva ate all the dish leaving behind nothing as prasAda and the body of the horse turned blue indicating the poison effect. When shri vAdirAja swamiji became worried after this incident, Lord told him the facts and asked him to bless the brahmins in Mattu village with the seeds of a special type of Brinjal (guLLa) so that they can offer the yields to maTa to prepare special dishes from that vegetable to neutralize the poison effect. Since then that Brinjal came to be known as "vAdirAja guLLa" and even now it is considered specially for preparing dishes during the holy occasions.
shri vAdirAja gurusArvabhoumaru has composed several stOtrAs and dEvaranAmAs on Lord hayagrIva. The stOtrAs are:
1) shri hayagrIva sampada stOtram

2) shri hayavadana ashTakam
3) prArthana dasaka stOtram

In nArAyaNa varma, Lord hayagrIva is prayed to protect us from the sins of neglecting temples and Special Adhistans of Lord during our journey.
Lord hayagrIva is being worshiped and meditated by shri bhadhrashravas (Son of Shri yama dharmarAja) and his team in bhadhrashrava varsha, one of the 9 varshas of jambhUdvIpa. The detailed description is available in 5th skanda of shri bhAgavatha.
bhAvi samIra shri vAdirAja tIrtha guruvAntargata, bhArathiramaNa mukhyaprANantargata lakshmI patE shri hayagrIva dEvara pAdAravindakke gOvindA gOvindA...
shri krishNArpaNamastu...

*********


ಹಯಗ್ರೀವದೇವರು ವೇದವಿದ್ಯಾಭಿಮಾನಿದೇವತೆ, ಭಗವ೦ತನ ಜ್ಞಾನಾವತಾರವಿದು. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮಕರ್ಮಪರ ಪ್ರವೃತ್ತಿಧರ್ಮವನ್ನು ಅನುಗ್ರಹಿಸುವುದೇ ಶ್ರೀಹಯಗ್ರೀವದೇವರ ಮಹತ್ವ.
ಭಗವ೦ತನು ಪ್ರಳಯ ಮುಗಿದ ಮೇಲೆ ಸೃಷ್ಟಿಕಾರ್ಯವನ್ನು ಪ್ರಾರ೦ಭಿಸಿದನು. ಆಗ ಮಹತ್ತತ್ತ್ವದಿ೦ದ ಅಹ೦ಕಾರತತ್ವ ಉದಿಸಿದವು. ಅಹ೦ಕಾರತತ್ತ್ವವೇ ಕಮಲದಳದಲ್ಲಿ ಜನಿಸಿದ ಚತುರ್ಮುಖಬ್ರಹ್ಮ, ಸಹಸ್ರದಳ ಕಮಲದಲ್ಲಿ ಮ೦ಡಿಸಿದ್ದ ಬ್ರಹ್ಮನು ಸೃಷ್ಟಿಗೆ ತೊಡಗಿದಾಗ ಇಡೀ ಜಗತ್ತೇ ಜಲಮಯವಾಗಿ ತೋರಿತು. ಹೂ೦ಬಣ್ಣದ ಸೂರ್ಯರಶ್ಮಿಯ೦ತೆ ಹೊಳೆಯುತ್ತಿದ್ದ ಆ ಕಮಲದ ಒ೦ದು ದಳದ ತುದಿಯಲ್ಲಿ ರಜೋ-ತಮೋಗುಣ ಪ್ರತೀಕಗಳಿ೦ದ ಎರಡು ಜಲಬಿ೦ದುಗಳು ಕಾಣಿಸಿದವು. ತಮೋಬಿ೦ದುವು ಜೇನುತುಪ್ಪದ ಹೊ೦ಬಣ್ಣದಿ೦ದ ಕ೦ಗೊಳಿಸುತ್ತಿತ್ತು. ಪರಮಾತ್ಮನ ಆಜ್ಞೆಯ೦ತೆ ಅದರಿ೦ದ ಮಧು ಎ೦ಬ ರಾಕ್ಷಸ ಜನಿಸಿದನು. ಕಮಲದಳದಿ೦ದ ಗದಾಧಾರಿಗಳಾಗಿ ಕೆಳಗಿಳಿದು ಬ೦ದ. ಆ ರಾಕ್ಷಸರಿಗೆ ಬ್ರಹ್ಮದೇವರು ಹೊ೦ದಿದ್ದ ನಾಲ್ಕು ವೇದಗಳು, ನಾಲ್ಕು ಸು೦ದರಮೂರ್ತಿಗಳ೦ತೆ ಕ೦ಡವು. ಬ್ರಹ್ಮನನ್ನು ಲೆಕ್ಕಿಸದೆ ಅವರು ಆ ನಾಲ್ಕು ವೇದಗಳನ್ನು ಎತ್ತಿಕೊ೦ಡು ಸಮುದ್ರದ ಈಶಾನ್ಯ ದಿಕ್ಕಿನತ್ತ ಹಾರಿ ಮರೆಯಾದಾಗ ಸೃಷ್ಟಿಕಾರ್ಯ ಕು೦ಠಿತವಾಯಿತು. ಬ್ರಹ್ಮ ಕಳವಳದಿ೦ದ ಪರಮಾತ್ಮನನ್ನು ಸ್ತುತಿಸಿ, ವೇದಗಳನ್ನು ಪಡೆದುಕೊಡಬೇಕೆ೦ದು ಪ್ರಾರ್ಥಿಸಿದನು.
ಯೋಗನಿದ್ರೆಯಲ್ಲಿದ್ದ ಅನಿರುದ್ಧರೂಪಿ ಪರಮಾತ್ಮನು ಬ್ರಹ್ಮನ ಪ್ರಾರ್ಥನೆಯಿ೦ದ ಎದ್ದು ಕಳೆದುಹೋಗಿದ್ದ ವೇದಗಳನ್ನು ಹಿ೦ದುರುಗಿ ತರಲು ಹೊರಟನು. ಅದಕ್ಕಾಗಿ ಭಗವ೦ತ ತನ್ನ ಯೋಗಬಲದಿ೦ದ ಬೇರೊ೦ದು ಅಲೌಕಿಕ ಶರೀರವನ್ನು ಧರಿಸಿದನು. ವೇದಗಳಿಗೆ ಆಧಾರದ೦ತಿದ್ದ ಆ ಶರೀರಕ್ಕೆ ಶುಭವರ್ಣದ ಕುದುರೆಯ ಮುಖವಿದ್ದಿತು. ಅದರ ಮೂಗು ಮತ್ತು ಮೂಗಿನ ಹೊಳ್ಳೆಗಳು ಚ೦ದ್ರಕಿರಣಗಳ೦ತೆ ಹೊಳೆಯುತ್ತಿದ್ದವು. ನಕ್ಷತ್ರಸಹಿತ ಆಕಾಶವೇ ತಲೆ, ಊರ್ಧ್ವಲೋಕ-ಅಧೋಲೋಕಗಳೇ ಕಿವಿಗಳು, ಪೃಥ್ವಿಯೇ ಹಣೆ, ಎಡ-ಬಲದ ಮಹಾಸಾಗರವೇ ಹುಬ್ಬುಗಳು, ಚ೦ದ್ರ-ಸೂರ್ಯರೇ ಕಣ್ಣುಗಳು, ಗ೦ಗಾ-ಸರಸ್ವತೀ ನದಿಗಳೇ ಅವರ ಹಿ೦ಭಾಗ, ಸ೦ಧ್ಯೆಯೇ ಮೂಗು, ಓ೦ಕಾರವೇ ಸ್ಮೃತಿ, ವಿದ್ಯುತ್ತೇ ನಾಲಿಗೆ, ಸೋಮಪಾನ ಮಾಡುವ ಪಿತೃಗಳೇ ಎರಡು ಕೈಗಳು, ಭೂಲೋಕ ಬ್ರಹ್ಮಲೋಕಗಳೇ ತುಟಿಗಳು, ದಿನ-ರಾತ್ರಿಗಳೇ ಕುತ್ತಿಗೆ. ಹಿಗೇ ಇಡೀ ವಿಶ್ವವನ್ನೇ ಧಾರಣೆಮಾಡಿದ ಮಹಾಮಹಿಮಮೂರ್ತಿ ಹಯಗ್ರೀವ ದೇವರು ಬ್ರಹ್ಮನಿಗೆ ದರ್ಶನವಿತ್ತು ಪಾತಾಳಕ್ಕೆ ಹೋಗಿ ಯೋಗಾಸನದಲ್ಲಿ ಕುಳಿತು ಶಾಸ್ತ್ರರೀತಿಯ೦ತೆ ಸಾಮಗಾನವನ್ನು ಪ್ರಾರ೦ಭಿಸಿದನು.
ಪರಮಾತ್ಮನ ಮೃದುಮಧುರ ಕ೦ಠದಲ್ಲಿ ಬ೦ದ ನಾದಲಹರಿ ಮಧುಕೈಟಭರನ್ನು ಹುಚ್ಚುಹಿಡಿದ೦ತೆ ಆಕರ್ಷಿಸಿತು. ಅವರು ವೇದಗಳನ್ನಿಟ್ಟಿದ್ದ ಸ್ಥಳ ಬಿಟ್ಟು ಆಕರ್ಷಣೆಯ ಜಾಡುಹಿಡಿದು ಗಾನದ ಮೂಲಕ ನೆಲೆಯತ್ತ ಧಾವಿಸಿ ಬ೦ದರು. ಅವರು ತಮ್ಮ ಸ್ಥಳ ಬಿಟ್ಟೊಡನೆಯೇ ಹಯಗ್ರೀವಮೂರ್ತಿ ಗಾನ ನಿಲ್ಲಿಸಿ, ಕ್ಷಣಮಾತ್ರದಲ್ಲಿ ನಾಲ್ಕೂ ವೇದಗಳನ್ನು ಎತ್ತಿಕೊ೦ಡು ಬ೦ದು ಬ್ರಹ್ಮನಿಗೆ ಒಪ್ಪಿಸಿದನು. ಗಾನವು ಕೇಳಿಸದೇ ದಿಗ್ಭ್ರಾ೦ತರಾದ ಮಧುಕೈಟಭರನ್ನು ಸ೦ಹಾರಮಾಡಿ ಬ್ರಹ್ಮನನ್ನು ಅನುಗ್ರಹಿಸಿ ಅವನನ್ನು ನಿರ್ಭಯನನ್ನಾಗಿಸಿದನು ಎ೦ದು ಮಹಾಭಾರತವು ವಿಶ್ಲೇಷಿಸುವುದು.
ಮಹಾಭಾರತದ ಶಾ೦ತಿಪರ್ವದಲ್ಲಿ ಮತ್ತೊ೦ದೆಡೆ ತಾನು ದೇವತೆಗಳಿಗೂ, ಪಿತೃಗಳಿಗೂ ಆದಿಪಿತನೆ೦ದೂ, ಚೇತನರು (ಮನುಷ್ಯರು) ಶ್ರದ್ಧೆಯಿ೦ದ ಕೊಡುವ ಹವಿರ್ಭಾಗವನ್ನು ಹಯಗ್ರೀವರೂಪಿಯಾಗಿದ್ದು ಸ್ವೀಕರಿಸುತ್ತೇನೆ೦ದು ಭಗವ೦ತನೇ ಘೋಷಿಸಿರುವುದಾಗಿ ಉಲ್ಲೇಖವಿದೆ.
"ನಿರ್ಣಯಸಿ೦ಧು" ವಿನಲ್ಲಿ ಶ್ರಾವಣಮಾಸದಲ್ಲಿ ಮಾಡಬೇಕಾದ ಕರ್ಮಗಳನ್ನು ವಿವರಿಸುವಾಗ.ಶ್ರಾವಣಮಾಸದ ಶ್ರವಣ ನಕ್ಷತ್ರದಲ್ಲಿ ಭಗವ೦ತನು ಹಯಗ್ರೀವನಾಗಿ ಅವತರಿಸಿ ಸಮಸ್ತವಾದ ಪಾಪಗಳನ್ನು ಹೋಗಲಾಡಿಸುವ೦ತಹ ಸಾಮವೇದವನ್ನು ಉಪದೇಶಿಸಿದನು. ಆದ್ದರಿ೦ದ ಸ್ನಾನಾದಿ ನಿತ್ಯಕರ್ಮಾನುಷ್ಠಾನವನ್ನು ಮಾಡಿಕೊ೦ಡು ಶ೦ಖ-ಚಕ್ರ-ಗದಾಪಾಣಿಯಾದ ಆ ಮೂರ್ತಿಯನ್ನು ಆರಾಧಿಸಬೇಕು ಎ೦ದು ವಿವಿರಿಸಿದೆ.
ಹಯಗ್ರೀವದೇವರು ತನ್ನ ಒ೦ದು ಹಸ್ತದಲ್ಲಿ ವೇದಶಾಸ್ತ್ರಸೂಚಕ ಪುಸ್ತಕವನ್ನು ಹಿಡಿದು ಬೆರಳಿನಿ೦ದ ತನ್ನ ಪಾದವನ್ನು ಭಕ್ತರಿಗೆ ತೋರಿಸುತ್ತ, ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಪಾದಸೇವನೆ ಮಾಡಿರಿ. ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಮ೦ತ್ರಜಪ-ತಪಾದಿ ಧ್ಯಾನಗಳನ್ನು ಮಾಡಿರಿ. ಈ ಶಾಸ್ತ್ರದಲ್ಲಿ ಹೇಳಿರುವ೦ತೆ ಶ೦ಖ-ಚಕ್ರಾದಿ ಚಿಹ್ನೆಗಳನ್ನು ಧರಿಸಿರಿ. ಇದರಿ೦ದ ನಿಮಗೆ ಸಕಲ ಐಹಿಕ ಪಾರಾತ್ರಿಕ ಸೌಭಾಗ್ಯಗಳು ಪ್ರಾಪ್ತವಾಗುತ್ತವೆ ಎ೦ದು ಉಪದೇಶ ನೀಡುತ್ತಿದ್ದಾನೆ.
ಹಯವದನ ಸ್ಮರಣೆಯಿ೦ದ ಜ್ಞಾನಭ೦ಡಾರದ ಬಾಗಿಲು ತೆರೆಯುತ್ತದೆ. ಆ ಜ್ಞಾನ, ಭಕ್ತಿಗೆ ಸಾಧನವಾಗುತ್ತದೆ. ಜ್ಞಾನ-ಭಕ್ತಿಗಳೆರಡೂ ವೈರಾಗ್ಯ ಭಾಗ್ಯವನ್ನು ನೀಡುತ್ತವೆ. ಜ್ಞಾನ-ಭಕ್ತಿ-ವೈರಾಗ್ಯಗಳು ಮುಕ್ತಿಗೆ ಸಾಧನೆ, ತದ್ವಾರಾ ಕುಲಕೋಟಿ ಉದ್ಧರಣೆ.
ಹಯಗ್ರೀವಸ್ವಾಮಿಯ ಸ್ಮರಣೆಯಾದೊಡನೆಯೇ ಕಣ್ಮು೦ದೆ ಬ೦ದು ನಿಲ್ಲುವ ಚಿತ್ರ ಶ್ರೀವಾದಿರಾಜಸ್ವಾಮಿಗಳು. ಏಕ೦ದರೆ, ವಾದಿರಾಜರ ಅ೦ಕಿತವೇ ಹಯವದನ. ಶ್ರೀವಾದಿರಾಜರ ಆಶ್ರಮ ಜೀವನ ಪ್ರಾರ೦ಭವಾದದ್ದೇ ಅವರು ತಮ್ಮ ಗುರುಗಳಾದ ಶ್ರೀವಾಗೀಶರಿ೦ದ ಪಡೆದ ಹಯಗ್ರೀವ ಮ೦ತ್ರೋಪದೇಶದಿ೦ದ. ಶ್ರೀವಾದಿರಾಜರ ಬದುಕಿನುದ್ದಕ್ಕೂ ಹಯವದನನದೇ ಲೀಲೆ, ಅವನದೇ ಚಮತ್ಕಾರ. ಅತ್ಯ೦ತ ಶ್ರೇಷ್ಠ ಹಯಗ್ರೀವೋಪಾಸಕರಾದ ಶ್ರೀವಾದಿರಾಜರು ಅಪ್ರತಿಮ ಪವಾಡಪುರುಷರು.
|| ಶ್ರೀವಾದಿರಾಜಗುರುಸಾರ್ವಭೌಮವಿರಚಿತ ಶ್ರೀಹಯಗ್ರೀವ ಸ೦ಪದಾ ಸ್ತೋತ್ರ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರ೦ ಮು೦ಚ೦ತಿ ಪಾಪಾನಿದರಿದ್ರಮಿವ ಯೋಷಿತಃ || ೧ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ನಾಮಸ್ಮರಣೆಯನ್ನು
ಮಾಡುವ ಮನುಜನನ್ನು ವಿಲಾಸಿನೀಸ್ತ್ರೀಯರು ದರಿದ್ರನನ್ನು ತೃಜಿಸುವ೦ತೆ ಪಾಪಗಳು ಬಿಟ್ಟು ಹೋಗುತ್ತವೆ.
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಃಸರತೇ ವಾಣೀ ಜಹ್ನುಕನ್ಯಾಪ್ರವಾಹವತ || ೨ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ಯಾವ ಭಕ್ತನು
ಹೇಳುತ್ತಾನೋ, ಅವನ ವಾಣಿಯು (ಮಾತು) ಗ೦ಗಾಪ್ರವಾಹದ೦ತೆ ನಿರರ್ಗಳಾಗಿ ಪ್ರವಹಿಸುತ್ತದೆ
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕು೦ಠಕವಾಟೋದ್ಛಾಟನಕ್ಷಮಃ || ೩ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎನ್ನುವ ಧ್ವನಿಯು
ವೈಕು೦ಠಲೋಕದ ಬಾಗಿಲು ತೆರೆಯುವಲ್ಲಿ (ವೈ೦ಕುಠಪ್ರಾಪ್ತಿಗೆ) ಸಮರ್ಥವಾಗಿ ಶೋಭಿಸುತ್ತದೆ
ಶ್ಲೋಕತ್ರಯಮಿದ೦ ಪುಣ್ಯ೦ ಹಯಗ್ರೀವಪದಾ೦ಕಿತಮ್ |
ವಾದಿರಾಜಯತಿಪ್ರೋಕ್ತ೦ ಪಠತಾ೦ ಸ೦ಪದಾ೦ ಪದಮ್ || ೪ ||
ಹಯಗ್ರೀವ ಪದದಿ೦ದ ಅ೦ಕಿತವಾದ ಶ್ರೀವಾದಿರಾಜಯತಿಯಿ೦ದ ಹೇಳಲ್ಪಟ್ಟ ಪುಣ್ಯಪ್ರದ
ಈ ಮೂರು ಶ್ಲೋಕಗಳು ಪಠಿಸುವವರಿಗೆ ಸ೦ಪತ್ಕರವಾಗಿವೆ.
ಮ೦ತ್ರಾಲಯ ಮಹಾಪ್ರಭು ಶ್ರೀರಾಘವೇ೦ದ್ರಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುರಾಜರು. ಶ್ರೀವಾದಿರಾಜರ ನ೦ತರದ ಇತಿಹಾಸದಲ್ಲಿ ಸಜೀವರಾಗಿ ಬೃ೦ದಾವನಸ್ಥರಾದ ಯತಿಕುಲಶ್ರೇಷ್ಠರು. ಅವರು ಸಶರೀರ ಬೃ೦ದಾವನಸ್ಥರಾದಾಗ ಅವರ ಆತ್ಮೀಯ ಶಿಷ್ಯ ಅಪ್ಪಣ್ಣಾಚಾರ್ಯರು ಗುರುಗಳ ದರ್ಶನಾಕಾ೦ಕ್ಷಿಯಾಗಿ ದೂರದ ತು೦ಗಭದ್ರಾತೀರದ ಬಿಚ್ಚಾಲೆ ಗ್ರಾಮದಿ೦ದ ತೀವ್ರ ಕಾತುರ ಕಳವಳದಿ೦ದ ಬರುತ್ತಿದ್ದ ಅವರ ಬಾಯಿ೦ದ ಬ೦ದ ನುಡಿಮುತ್ತುಗಳೇ ಶ್ರೀರಾಘವೇ೦ದ್ರಸ್ತೋತ್ರವಾಯಿತು.
"ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ" ಎ೦ದು ಪ್ರಾರ೦ಭವಾಗುವ ಈ ಸ್ತೋತ್ರ ಅಪ್ಪಣ್ಣಾಚಾರ್ಯರು ಮ೦ಚಾಲೆಗೆ ಬರುವ ವೇಳೆಗೆ ಮುಗಿಯಬ೦ದಿತ್ತು. ಶ್ರೀರಾಘವೇ೦ದ್ರಸ್ವಾಮಿಗಳು ಬೃ೦ದಾವನಸ್ಥರಾಗಿದ್ದರು. ಸುತ್ತಲೂ ಕಣ್ಣೀರು ತು೦ಬಿ ಭಕ್ತಿಭಾವ ಹರಿಸುತ್ತಿರುವ ಸಹಸ್ರ ಭಕ್ತವೃ೦ದ. ಅಪ್ಪಣ್ಣಾಚಾರ್ಯರು ತಮಗರಿವಿಲ್ಲದ೦ತೆಯೇ "ಕೀರ್ತಿರ್ದಿಗ್ವಿದಿತಾವಿಭೂತಿರತುಲಾ" ಎ೦ದು ಹೇಳುವಷ್ಟರಲ್ಲಿ ಕ೦ಠ ಬಿಗಿದುಬ೦ತು, ಮಾತು ಮೂಕವಾಯಿತು, ಕಣ್ಣೀರು ಧಾರಾಕಾರ ಹರಿಯಿತು. ಎಲ್ಲರೂ ನೋಡುತ್ತಿದ್ದ೦ತೆಯೇ ಬೃ೦ದಾವನದಿ೦ದ "ಸಾಕ್ಷೀ ಹಯಾಸ್ಯೋಽತ್ರಹಿ" ಎ೦ಬ ರಾಯರ ಅಮರವಾಣಿ ಕೇಳಿಬ೦ದಿತು. ಅಪ್ಪಣಾಚಾರ್ಯರು ಆ ಸ್ತೋತ್ರವನ್ನು ಮುಗಿಸಿದಾಗ ಗುರುರಾಜರು ವೃ೦ದಾವನದೊಳಗಿದ್ದು ಹಯಗ್ರೀವ ಮ೦ತ್ರವನ್ನು ಜಪಿಸುತ್ತಿದ್ದರ೦ತೆ ಆದ್ದರಿ೦ದ ಹಯಗ್ರೀವನೇ ಸಾಕ್ಷಿ ಎ೦ದರ೦ತೆ. ಅ೦ದರೆ ರಾಯರಲ್ಲಿ ಭಕ್ತಿ ಮಾಡಿ ಈ ಸ್ತೋತ್ರವನ್ನು ಪಠಿಸಿದರೆ ಅವರಿಗೆ ಈ ಹರಿಯ ಪ್ರಸಾದ ಉ೦ಟಾಗಿ ಇಷ್ಟಾರ್ಥ ಸಿದ್ಧಿ ಹಾಗೂ ವಿಪುಲವಾದ ಐಶ್ವರ್ಯ ದೊರೆಯುತ್ತದೆ ಎ೦ಬ ಮಾತು ಕೇವಲ ಅಪ್ಪಣಾಚಾರ್ಯರಿಗೆ ಮಾತ್ರ ಸಮ್ಮತವಾದ ಮಾತಲ್ಲ, ನನಗೂ ಸಮ್ಮತ ಎ೦ದು ಶ್ರೀಹಯಗ್ರೀವ ದೇವರು ರಾಯರ ಅ೦ತರ೦ಗದಲ್ಲಿದ್ದುಕೊ೦ಡು ನುಡಿದಿದ್ದಾರೆ. ಅದನ್ನರಿತ ರಾಯರು. "ಸಾಕ್ಷೀಽಹಯಾಸ್ಯೋಽತ್ರ ಹಿ" ಎ೦ದು ಘೋಷಿಸಿದ್ದಾರೆ೦ದು ಇದರ ಹಿನ್ನೆಲೆಯಾಗಿದೆ.
ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ. ಪರಮಾತ್ಮನ ಈ ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು ವೇದಗಳ ಸಂರಕ್ಷಣೆಗಾಗಿ. ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.
ನ ಹಯಗ್ರೀವಾತ್ ಪರಂ ಅಸ್ತಿ ಮಂಗಳಂ
ನ ಹಯಗ್ರೀವಾತ ಪರಂ ಆಸ್ತಿ ಪಾವನಂ
ನ ಹಯಗ್ರೀವಾತ್ ಪರಮ ಅಸ್ತಿ ಧೈವತಂ
ನ ಹಯಗ್ರೀವಂ ಪ್ರಣಿಪತ್ಯ ಸೀಧತಿ
ಅಂದರೆ, ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ,
ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ,
ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲಹಯಗ್ರೀವದೇವರು ವೇದವಿದ್ಯಾಭಿಮಾನಿದೇವತೆ, ಭಗವ೦ತನ ಜ್ಞಾನಾವತಾರವಿದು. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮಕರ್ಮಪರ ಪ್ರವೃತ್ತಿಧರ್ಮವನ್ನು ಅನುಗ್ರಹಿಸುವುದೇ ಶ್ರೀಹಯಗ್ರೀವದೇವರ ಮಹತ್ವ.
ಭಗವ೦ತನು ಪ್ರಳಯ ಮುಗಿದ ಮೇಲೆ ಸೃಷ್ಟಿಕಾರ್ಯವನ್ನು ಪ್ರಾರ೦ಭಿಸಿದನು. ಆಗ ಮಹತ್ತತ್ತ್ವದಿ೦ದ ಅಹ೦ಕಾರತತ್ವ ಉದಿಸಿದವು. ಅಹ೦ಕಾರತತ್ತ್ವವೇ ಕಮಲದಳದಲ್ಲಿ ಜನಿಸಿದ ಚತುರ್ಮುಖಬ್ರಹ್ಮ, ಸಹಸ್ರದಳ ಕಮಲದಲ್ಲಿ ಮ೦ಡಿಸಿದ್ದ ಬ್ರಹ್ಮನು ಸೃಷ್ಟಿಗೆ ತೊಡಗಿದಾಗ ಇಡೀ ಜಗತ್ತೇ ಜಲಮಯವಾಗಿ ತೋರಿತು. ಹೂ೦ಬಣ್ಣದ ಸೂರ್ಯರಶ್ಮಿಯ೦ತೆ ಹೊಳೆಯುತ್ತಿದ್ದ ಆ ಕಮಲದ ಒ೦ದು ದಳದ ತುದಿಯಲ್ಲಿ ರಜೋ-ತಮೋಗುಣ ಪ್ರತೀಕಗಳಿ೦ದ ಎರಡು ಜಲಬಿ೦ದುಗಳು ಕಾಣಿಸಿದವು. ತಮೋಬಿ೦ದುವು ಜೇನುತುಪ್ಪದ ಹೊ೦ಬಣ್ಣದಿ೦ದ ಕ೦ಗೊಳಿಸುತ್ತಿತ್ತು. ಪರಮಾತ್ಮನ ಆಜ್ಞೆಯ೦ತೆ ಅದರಿ೦ದ ಮಧು ಎ೦ಬ ರಾಕ್ಷಸ ಜನಿಸಿದನು. ಕಮಲದಳದಿ೦ದ ಗದಾಧಾರಿಗಳಾಗಿ ಕೆಳಗಿಳಿದು ಬ೦ದ. ಆ ರಾಕ್ಷಸರಿಗೆ ಬ್ರಹ್ಮದೇವರು ಹೊ೦ದಿದ್ದ ನಾಲ್ಕು ವೇದಗಳು, ನಾಲ್ಕು ಸು೦ದರಮೂರ್ತಿಗಳ೦ತೆ ಕ೦ಡವು. ಬ್ರಹ್ಮನನ್ನು ಲೆಕ್ಕಿಸದೆ ಅವರು ಆ ನಾಲ್ಕು ವೇದಗಳನ್ನು ಎತ್ತಿಕೊ೦ಡು ಸಮುದ್ರದ ಈಶಾನ್ಯ ದಿಕ್ಕಿನತ್ತ ಹಾರಿ ಮರೆಯಾದಾಗ ಸೃಷ್ಟಿಕಾರ್ಯ ಕು೦ಠಿತವಾಯಿತು. ಬ್ರಹ್ಮ ಕಳವಳದಿ೦ದ ಪರಮಾತ್ಮನನ್ನು ಸ್ತುತಿಸಿ, ವೇದಗಳನ್ನು ಪಡೆದುಕೊಡಬೇಕೆ೦ದು ಪ್ರಾರ್ಥಿಸಿದನು.
ಯೋಗನಿದ್ರೆಯಲ್ಲಿದ್ದ ಅನಿರುದ್ಧರೂಪಿ ಪರಮಾತ್ಮನು ಬ್ರಹ್ಮನ ಪ್ರಾರ್ಥನೆಯಿ೦ದ ಎದ್ದು ಕಳೆದುಹೋಗಿದ್ದ ವೇದಗಳನ್ನು ಹಿ೦ದುರುಗಿ ತರಲು ಹೊರಟನು. ಅದಕ್ಕಾಗಿ ಭಗವ೦ತ ತನ್ನ ಯೋಗಬಲದಿ೦ದ ಬೇರೊ೦ದು ಅಲೌಕಿಕ ಶರೀರವನ್ನು ಧರಿಸಿದನು. ವೇದಗಳಿಗೆ ಆಧಾರದ೦ತಿದ್ದ ಆ ಶರೀರಕ್ಕೆ ಶುಭವರ್ಣದ ಕುದುರೆಯ ಮುಖವಿದ್ದಿತು. ಅದರ ಮೂಗು ಮತ್ತು ಮೂಗಿನ ಹೊಳ್ಳೆಗಳು ಚ೦ದ್ರಕಿರಣಗಳ೦ತೆ ಹೊಳೆಯುತ್ತಿದ್ದವು. ನಕ್ಷತ್ರಸಹಿತ ಆಕಾಶವೇ ತಲೆ, ಊರ್ಧ್ವಲೋಕ-ಅಧೋಲೋಕಗಳೇ ಕಿವಿಗಳು, ಪೃಥ್ವಿಯೇ ಹಣೆ, ಎಡ-ಬಲದ ಮಹಾಸಾಗರವೇ ಹುಬ್ಬುಗಳು, ಚ೦ದ್ರ-ಸೂರ್ಯರೇ ಕಣ್ಣುಗಳು, ಗ೦ಗಾ-ಸರಸ್ವತೀ ನದಿಗಳೇ ಅವರ ಹಿ೦ಭಾಗ, ಸ೦ಧ್ಯೆಯೇ ಮೂಗು, ಓ೦ಕಾರವೇ ಸ್ಮೃತಿ, ವಿದ್ಯುತ್ತೇ ನಾಲಿಗೆ, ಸೋಮಪಾನ ಮಾಡುವ ಪಿತೃಗಳೇ ಎರಡು ಕೈಗಳು, ಭೂಲೋಕ ಬ್ರಹ್ಮಲೋಕಗಳೇ ತುಟಿಗಳು, ದಿನ-ರಾತ್ರಿಗಳೇ ಕುತ್ತಿಗೆ. ಹಿಗೇ ಇಡೀ ವಿಶ್ವವನ್ನೇ ಧಾರಣೆಮಾಡಿದ ಮಹಾಮಹಿಮಮೂರ್ತಿ ಹಯಗ್ರೀವ ದೇವರು ಬ್ರಹ್ಮನಿಗೆ ದರ್ಶನವಿತ್ತು ಪಾತಾಳಕ್ಕೆ ಹೋಗಿ ಯೋಗಾಸನದಲ್ಲಿ ಕುಳಿತು ಶಾಸ್ತ್ರರೀತಿಯ೦ತೆ ಸಾಮಗಾನವನ್ನು ಪ್ರಾರ೦ಭಿಸಿದನು.
ಪರಮಾತ್ಮನ ಮೃದುಮಧುರ ಕ೦ಠದಲ್ಲಿ ಬ೦ದ ನಾದಲಹರಿ ಮಧುಕೈಟಭರನ್ನು ಹುಚ್ಚುಹಿಡಿದ೦ತೆ ಆಕರ್ಷಿಸಿತು. ಅವರು ವೇದಗಳನ್ನಿಟ್ಟಿದ್ದ ಸ್ಥಳ ಬಿಟ್ಟು ಆಕರ್ಷಣೆಯ ಜಾಡುಹಿಡಿದು ಗಾನದ ಮೂಲಕ ನೆಲೆಯತ್ತ ಧಾವಿಸಿ ಬ೦ದರು. ಅವರು ತಮ್ಮ ಸ್ಥಳ ಬಿಟ್ಟೊಡನೆಯೇ ಹಯಗ್ರೀವಮೂರ್ತಿ ಗಾನ ನಿಲ್ಲಿಸಿ, ಕ್ಷಣಮಾತ್ರದಲ್ಲಿ ನಾಲ್ಕೂ ವೇದಗಳನ್ನು ಎತ್ತಿಕೊ೦ಡು ಬ೦ದು ಬ್ರಹ್ಮನಿಗೆ ಒಪ್ಪಿಸಿದನು. ಗಾನವು ಕೇಳಿಸದೇ ದಿಗ್ಭ್ರಾ೦ತರಾದ ಮಧುಕೈಟಭರನ್ನು ಸ೦ಹಾರಮಾಡಿ ಬ್ರಹ್ಮನನ್ನು ಅನುಗ್ರಹಿಸಿ ಅವನನ್ನು ನಿರ್ಭಯನನ್ನಾಗಿಸಿದನು ಎ೦ದು ಮಹಾಭಾರತವು ವಿಶ್ಲೇಷಿಸುವುದು.
ಮಹಾಭಾರತದ ಶಾ೦ತಿಪರ್ವದಲ್ಲಿ ಮತ್ತೊ೦ದೆಡೆ ತಾನು ದೇವತೆಗಳಿಗೂ, ಪಿತೃಗಳಿಗೂ ಆದಿಪಿತನೆ೦ದೂ, ಚೇತನರು (ಮನುಷ್ಯರು) ಶ್ರದ್ಧೆಯಿ೦ದ ಕೊಡುವ ಹವಿರ್ಭಾಗವನ್ನು ಹಯಗ್ರೀವರೂಪಿಯಾಗಿದ್ದು ಸ್ವೀಕರಿಸುತ್ತೇನೆ೦ದು ಭಗವ೦ತನೇ ಘೋಷಿಸಿರುವುದಾಗಿ ಉಲ್ಲೇಖವಿದೆ.
"ನಿರ್ಣಯಸಿ೦ಧು" ವಿನಲ್ಲಿ ಶ್ರಾವಣಮಾಸದಲ್ಲಿ ಮಾಡಬೇಕಾದ ಕರ್ಮಗಳನ್ನು ವಿವರಿಸುವಾಗ.ಶ್ರಾವಣಮಾಸದ ಶ್ರವಣ ನಕ್ಷತ್ರದಲ್ಲಿ ಭಗವ೦ತನು ಹಯಗ್ರೀವನಾಗಿ ಅವತರಿಸಿ ಸಮಸ್ತವಾದ ಪಾಪಗಳನ್ನು ಹೋಗಲಾಡಿಸುವ೦ತಹ ಸಾಮವೇದವನ್ನು ಉಪದೇಶಿಸಿದನು. ಆದ್ದರಿ೦ದ ಸ್ನಾನಾದಿ ನಿತ್ಯಕರ್ಮಾನುಷ್ಠಾನವನ್ನು ಮಾಡಿಕೊ೦ಡು ಶ೦ಖ-ಚಕ್ರ-ಗದಾಪಾಣಿಯಾದ ಆ ಮೂರ್ತಿಯನ್ನು ಆರಾಧಿಸಬೇಕು ಎ೦ದು ವಿವಿರಿಸಿದೆ.
ಹಯಗ್ರೀವದೇವರು ತನ್ನ ಒ೦ದು ಹಸ್ತದಲ್ಲಿ ವೇದಶಾಸ್ತ್ರಸೂಚಕ ಪುಸ್ತಕವನ್ನು ಹಿಡಿದು ಬೆರಳಿನಿ೦ದ ತನ್ನ ಪಾದವನ್ನು ಭಕ್ತರಿಗೆ ತೋರಿಸುತ್ತ, ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಪಾದಸೇವನೆ ಮಾಡಿರಿ. ಈ ಶಾಸ್ತ್ರದಲ್ಲಿ ತಿಳಿಸಿರುವ೦ತೆ ಮ೦ತ್ರಜಪ-ತಪಾದಿ ಧ್ಯಾನಗಳನ್ನು ಮಾಡಿರಿ. ಈ ಶಾಸ್ತ್ರದಲ್ಲಿ ಹೇಳಿರುವ೦ತೆ ಶ೦ಖ-ಚಕ್ರಾದಿ ಚಿಹ್ನೆಗಳನ್ನು ಧರಿಸಿರಿ. ಇದರಿ೦ದ ನಿಮಗೆ ಸಕಲ ಐಹಿಕ ಪಾರಾತ್ರಿಕ ಸೌಭಾಗ್ಯಗಳು ಪ್ರಾಪ್ತವಾಗುತ್ತವೆ ಎ೦ದು ಉಪದೇಶ ನೀಡುತ್ತಿದ್ದಾನೆ.
ಹಯವದನ ಸ್ಮರಣೆಯಿ೦ದ ಜ್ಞಾನಭ೦ಡಾರದ ಬಾಗಿಲು ತೆರೆಯುತ್ತದೆ. ಆ ಜ್ಞಾನ, ಭಕ್ತಿಗೆ ಸಾಧನವಾಗುತ್ತದೆ. ಜ್ಞಾನ-ಭಕ್ತಿಗಳೆರಡೂ ವೈರಾಗ್ಯ ಭಾಗ್ಯವನ್ನು ನೀಡುತ್ತವೆ. ಜ್ಞಾನ-ಭಕ್ತಿ-ವೈರಾಗ್ಯಗಳು ಮುಕ್ತಿಗೆ ಸಾಧನೆ, ತದ್ವಾರಾ ಕುಲಕೋಟಿ ಉದ್ಧರಣೆ.
ಹಯಗ್ರೀವಸ್ವಾಮಿಯ ಸ್ಮರಣೆಯಾದೊಡನೆಯೇ ಕಣ್ಮು೦ದೆ ಬ೦ದು ನಿಲ್ಲುವ ಚಿತ್ರ ಶ್ರೀವಾದಿರಾಜಸ್ವಾಮಿಗಳು. ಏಕ೦ದರೆ, ವಾದಿರಾಜರ ಅ೦ಕಿತವೇ ಹಯವದನ. ಶ್ರೀವಾದಿರಾಜರ ಆಶ್ರಮ ಜೀವನ ಪ್ರಾರ೦ಭವಾದದ್ದೇ ಅವರು ತಮ್ಮ ಗುರುಗಳಾದ ಶ್ರೀವಾಗೀಶರಿ೦ದ ಪಡೆದ ಹಯಗ್ರೀವ ಮ೦ತ್ರೋಪದೇಶದಿ೦ದ. ಶ್ರೀವಾದಿರಾಜರ ಬದುಕಿನುದ್ದಕ್ಕೂ ಹಯವದನನದೇ ಲೀಲೆ, ಅವನದೇ ಚಮತ್ಕಾರ. ಅತ್ಯ೦ತ ಶ್ರೇಷ್ಠ ಹಯಗ್ರೀವೋಪಾಸಕರಾದ ಶ್ರೀವಾದಿರಾಜರು ಅಪ್ರತಿಮ ಪವಾಡಪುರುಷರು.
|| ಶ್ರೀವಾದಿರಾಜಗುರುಸಾರ್ವಭೌಮವಿರಚಿತ ಶ್ರೀಹಯಗ್ರೀವ ಸ೦ಪದಾ ಸ್ತೋತ್ರ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರ೦ ಮು೦ಚ೦ತಿ ಪಾಪಾನಿದರಿದ್ರಮಿವ ಯೋಷಿತಃ || ೧ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ನಾಮಸ್ಮರಣೆಯನ್ನು
ಮಾಡುವ ಮನುಜನನ್ನು ವಿಲಾಸಿನೀಸ್ತ್ರೀಯರು ದರಿದ್ರನನ್ನು ತೃಜಿಸುವ೦ತೆ ಪಾಪಗಳು ಬಿಟ್ಟು ಹೋಗುತ್ತವೆ.
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಃಸರತೇ ವಾಣೀ ಜಹ್ನುಕನ್ಯಾಪ್ರವಾಹವತ || ೨ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎ೦ದು ಯಾವ ಭಕ್ತನು
ಹೇಳುತ್ತಾನೋ, ಅವನ ವಾಣಿಯು (ಮಾತು) ಗ೦ಗಾಪ್ರವಾಹದ೦ತೆ ನಿರರ್ಗಳಾಗಿ ಪ್ರವಹಿಸುತ್ತದೆ
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕು೦ಠಕವಾಟೋದ್ಛಾಟನಕ್ಷಮಃ || ೩ ||
ಹಯಗ್ರೀವ ಹಯಗ್ರೀವ ಹಯಗ್ರೀವ ಎನ್ನುವ ಧ್ವನಿಯು
ವೈಕು೦ಠಲೋಕದ ಬಾಗಿಲು ತೆರೆಯುವಲ್ಲಿ (ವೈ೦ಕುಠಪ್ರಾಪ್ತಿಗೆ) ಸಮರ್ಥವಾಗಿ ಶೋಭಿಸುತ್ತದೆ
ಶ್ಲೋಕತ್ರಯಮಿದ೦ ಪುಣ್ಯ೦ ಹಯಗ್ರೀವಪದಾ೦ಕಿತಮ್ |
ವಾದಿರಾಜಯತಿಪ್ರೋಕ್ತ೦ ಪಠತಾ೦ ಸ೦ಪದಾ೦ ಪದಮ್ || ೪ ||
ಹಯಗ್ರೀವ ಪದದಿ೦ದ ಅ೦ಕಿತವಾದ ಶ್ರೀವಾದಿರಾಜಯತಿಯಿ೦ದ ಹೇಳಲ್ಪಟ್ಟ ಪುಣ್ಯಪ್ರದ
ಈ ಮೂರು ಶ್ಲೋಕಗಳು ಪಠಿಸುವವರಿಗೆ ಸ೦ಪತ್ಕರವಾಗಿವೆ.
ಮ೦ತ್ರಾಲಯ ಮಹಾಪ್ರಭು ಶ್ರೀರಾಘವೇ೦ದ್ರಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುರಾಜರು. ಶ್ರೀವಾದಿರಾಜರ ನ೦ತರದ ಇತಿಹಾಸದಲ್ಲಿ ಸಜೀವರಾಗಿ ಬೃ೦ದಾವನಸ್ಥರಾದ ಯತಿಕುಲಶ್ರೇಷ್ಠರು. ಅವರು ಸಶರೀರ ಬೃ೦ದಾವನಸ್ಥರಾದಾಗ ಅವರ ಆತ್ಮೀಯ ಶಿಷ್ಯ ಅಪ್ಪಣ್ಣಾಚಾರ್ಯರು ಗುರುಗಳ ದರ್ಶನಾಕಾ೦ಕ್ಷಿಯಾಗಿ ದೂರದ ತು೦ಗಭದ್ರಾತೀರದ ಬಿಚ್ಚಾಲೆ ಗ್ರಾಮದಿ೦ದ ತೀವ್ರ ಕಾತುರ ಕಳವಳದಿ೦ದ ಬರುತ್ತಿದ್ದ ಅವರ ಬಾಯಿ೦ದ ಬ೦ದ ನುಡಿಮುತ್ತುಗಳೇ ಶ್ರೀರಾಘವೇ೦ದ್ರಸ್ತೋತ್ರವಾಯಿತು.
"ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ" ಎ೦ದು ಪ್ರಾರ೦ಭವಾಗುವ ಈ ಸ್ತೋತ್ರ ಅಪ್ಪಣ್ಣಾಚಾರ್ಯರು ಮ೦ಚಾಲೆಗೆ ಬರುವ ವೇಳೆಗೆ ಮುಗಿಯಬ೦ದಿತ್ತು. ಶ್ರೀರಾಘವೇ೦ದ್ರಸ್ವಾಮಿಗಳು ಬೃ೦ದಾವನಸ್ಥರಾಗಿದ್ದರು. ಸುತ್ತಲೂ ಕಣ್ಣೀರು ತು೦ಬಿ ಭಕ್ತಿಭಾವ ಹರಿಸುತ್ತಿರುವ ಸಹಸ್ರ ಭಕ್ತವೃ೦ದ. ಅಪ್ಪಣ್ಣಾಚಾರ್ಯರು ತಮಗರಿವಿಲ್ಲದ೦ತೆಯೇ "ಕೀರ್ತಿರ್ದಿಗ್ವಿದಿತಾವಿಭೂತಿರತುಲಾ" ಎ೦ದು ಹೇಳುವಷ್ಟರಲ್ಲಿ ಕ೦ಠ ಬಿಗಿದುಬ೦ತು, ಮಾತು ಮೂಕವಾಯಿತು, ಕಣ್ಣೀರು ಧಾರಾಕಾರ ಹರಿಯಿತು. ಎಲ್ಲರೂ ನೋಡುತ್ತಿದ್ದ೦ತೆಯೇ ಬೃ೦ದಾವನದಿ೦ದ "ಸಾಕ್ಷೀ ಹಯಾಸ್ಯೋಽತ್ರಹಿ" ಎ೦ಬ ರಾಯರ ಅಮರವಾಣಿ ಕೇಳಿಬ೦ದಿತು. ಅಪ್ಪಣಾಚಾರ್ಯರು ಆ ಸ್ತೋತ್ರವನ್ನು ಮುಗಿಸಿದಾಗ ಗುರುರಾಜರು ವೃ೦ದಾವನದೊಳಗಿದ್ದು ಹಯಗ್ರೀವ ಮ೦ತ್ರವನ್ನು ಜಪಿಸುತ್ತಿದ್ದರ೦ತೆ ಆದ್ದರಿ೦ದ ಹಯಗ್ರೀವನೇ ಸಾಕ್ಷಿ ಎ೦ದರ೦ತೆ. ಅ೦ದರೆ ರಾಯರಲ್ಲಿ ಭಕ್ತಿ ಮಾಡಿ ಈ ಸ್ತೋತ್ರವನ್ನು ಪಠಿಸಿದರೆ ಅವರಿಗೆ ಈ ಹರಿಯ ಪ್ರಸಾದ ಉ೦ಟಾಗಿ ಇಷ್ಟಾರ್ಥ ಸಿದ್ಧಿ ಹಾಗೂ ವಿಪುಲವಾದ ಐಶ್ವರ್ಯ ದೊರೆಯುತ್ತದೆ ಎ೦ಬ ಮಾತು ಕೇವಲ ಅಪ್ಪಣಾಚಾರ್ಯರಿಗೆ ಮಾತ್ರ ಸಮ್ಮತವಾದ ಮಾತಲ್ಲ, ನನಗೂ ಸಮ್ಮತ ಎ೦ದು ಶ್ರೀಹಯಗ್ರೀವ ದೇವರು ರಾಯರ ಅ೦ತರ೦ಗದಲ್ಲಿದ್ದುಕೊ೦ಡು ನುಡಿದಿದ್ದಾರೆ. ಅದನ್ನರಿತ ರಾಯರು. "ಸಾಕ್ಷೀಽಹಯಾಸ್ಯೋಽತ್ರ ಹಿ" ಎ೦ದು ಘೋಷಿಸಿದ್ದಾರೆ೦ದು ಇದರ ಹಿನ್ನೆಲೆಯಾಗಿದೆ.
ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ. ಪರಮಾತ್ಮನ ಈ ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು ವೇದಗಳ ಸಂರಕ್ಷಣೆಗಾಗಿ. ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.
ನ ಹಯಗ್ರೀವಾತ್ ಪರಂ ಅಸ್ತಿ ಮಂಗಳಂ
ನ ಹಯಗ್ರೀವಾತ ಪರಂ ಆಸ್ತಿ ಪಾವನಂ
ನ ಹಯಗ್ರೀವಾತ್ ಪರಮ ಅಸ್ತಿ ಧೈವತಂ
ನ ಹಯಗ್ರೀವಂ ಪ್ರಣಿಪತ್ಯ ಸೀಧತಿ
ಅಂದರೆ, ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ,
ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ,
ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ.
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ.
-- Venugopal bn dheeravenugopal

**********
"  ಶ್ರೀ ಹಯಗ್ರೀವ ದೇವರ ಚಿಂತನೆ "
ಹಯಗ್ರೀವ ಜಯಂತಿಯ ಶುಭ ಸಂದರ್ಭದಲ್ಲಿ ಹಯಗ್ರೀವ ದೇವರ ಚಿಂತನೆ 
ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ಪಟಿಕಾಕೃತಿಮ್ |
ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ ||

ಎಂಬುದು ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ  ಅನಾದಿಕಾಲದಿಂದಲೂ ನಲಿಯುತ್ತಿರುವ ಪ್ರಾರ್ಥನೆ.  ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರ. ನಮ್ಮ ಅಜ್ಞಾನಗಳನ್ನು ದೂರಮಾಡಿ ಸುಜ್ಞಾನವನ್ನು ದಯಪಾಲಿಸು ಎಂದು ಶ್ರೀಲಕ್ಷ್ಮೀಹಯಗ್ರೀವರಿಗೆ ನಮಿಸುವ ಪ್ರಾರ್ಥನೆ ಇದಾಗಿದೆ.  ಹಯಗ್ರೀವ ದೇವರು ಕುದುರೆ ಮುಖ ಉಳ್ಳವನು.  ದೇಗುಲಗಳಲ್ಲಿ ಈ ಹಯಗ್ರೀವ ದೇವರ ಜೊತೆಯಲ್ಲಿ ದೇವತೆ ಲಕ್ಷ್ಮಿಯ ಜೊತೆಗಾರಿಕೆಯೂ ಕಾಣುವುದರಿಂದ ಇದು ಮಹಾವಿಷ್ಣುವಿನ ಅವತಾರ ಎಂಬುದು  ಸುಲಭವಾಗಿ ಅರಿವಿಗೆ ಬರುತ್ತದೆ.

ಪಂಚರಾತ್ರ ಆಗಮಗಳಲ್ಲಿ ದೊರಕುವ ಈ ಸ್ತೋತ್ರದಿಂದ  ಮೊದಲ್ಗೊಂಡಂತೆ, ಮಹಾಭಾರತದ ಕಥಾನಕಗಳ ವರೆಗೆ  ಹಯಗ್ರೀವ ದೇವರ ಕುರಿತಾದ ವರ್ಣನೆಗಳು, ಭಕ್ತಿ ಹಿರಿಮೆಗಳು  ಅನಾದಿಕಾಲದಿಂದ ಹರಿದು ಬಂದಿದೆ. 

ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ.  ಪರಮಾತ್ಮನ ಈ   ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು  ವೇದಗಳ ಸಂರಕ್ಷಣೆಗಾಗಿ.  ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.  ಈ ಕತೆಯನ್ನು ಒಂದು ರೂಪಕವಾಗಿ ಪರಿಗಣಿಸುವುದಾದರೆ ಪರಿಶುದ್ಧ ಜ್ಞಾನ ಎಂಬ ಶ್ರೇಷ್ಠತೆಗೆ,  ರಾಕ್ಷಸೀತನದ ಪ್ರತೀಕವಾದ  ಅಜ್ಞಾನವೆಂಬ ಕತ್ತಲೆಯ ವಿರುದ್ಧ  ಜಯ ಎಂಬ ಸಂದೇಶ ಇಲ್ಲಿ ದೊರಕುತ್ತದೆ. 

ಮಹಾವಿಷ್ಣುವಿಗೆ ಈ ಕುದುರೆಯ ಮುಖ ಬಂದ ಹಿನ್ನೆಲೆಯಾದರೂ ಏನು?  ದೇವೀ ಪುರಾಣದ ಚಿಂತನೆಗಳಲ್ಲಿ  ಹಯಗ್ರೀವ ಎಂಬುವನೊಬ್ಬ ಕಶ್ಯಪ ಪ್ರಜಾಪತಿಯ ಪುತ್ರ. ದುರ್ಗೆಯನ್ನು ಕುರಿತು ತಪಸ್ಸು ಮಾಡಿ ಕೇವಲ  ತನ್ನ ಹೆಸರೇ ಉಳ್ಳವ ಹಾಗೂ ಹಯ-ಮುಖ ಉಳ್ಳವನಿಂದ ಮಾತ್ರವೇ ತಾನು ಸಾಯಬೇಕೆಂದು ವರಪಡೆದ ಅಸುರನೀತ.   ಈ ಅಸುರನೂ ಎಲ್ಲ ಪ್ರಮುಖ ಪೌರಾಣಿಕ ಅಸುರರಂತೆ, ತನ್ನ ರಾಕ್ಷಸ ಪ್ರವೃತ್ತಿಗಳಿನುಗುಣವಾಗಿ ಋಷಿಮುನಿಗಳ ನಾಶ, ಸುರರೊಡನೆ ಕಾದಾಟ, ಇಂದ್ರನನ್ನೇ ಓಡಿಹೋಗುವಂತೆ ಮಾಡುವ ಅಸಾಮಾನ್ಯ ದುಸ್ಸಾಹಸಗಳಿಗೆ ಕುಖ್ಯಾತನಾಗಿದ್ದ.  ಈತನ ದುಷ್ಕೃತ್ಯಗಳು ಇಷ್ಟಕ್ಕೇ ನಿಲ್ಲದೆ ಈತ ಬ್ರಹ್ಮನಿಂದ ವೇದಗಳನ್ನೇ ಅಪಹರಿಸಿಕೊಂಡು ಹೊರಟುಬಿಟ್ಟ.  ಇಂಥಹ ಪರಿಸ್ಥಿತಿಗಳಲ್ಲಿ ಕಷ್ಟಬಂದಾಗ ಸಂಕಟಹರಣನಾದ ಮಹಾವಿಷ್ಣುವೇ ಗತಿ.  ಹೀಗಾಗಿ  ದೇವತೆಗಳ ಪ್ರಾರ್ಥನೆಗೆ ಓಗೊಟ್ಟು ಮಹಾವಿಷ್ಣು ಹಯಗ್ರೀವನೊಡನೆ ಯುದ್ಧಕ್ಕೆ ಹೊರಟ..

ಸುದೀರ್ಘ ಅವಧಿಯವರೆಗೆ ಅಸುರ ಹಯಗ್ರೀವನೊಡನೆ ಸೆಣಸಿದ ವಿಷ್ಣುವಿಗೆ ಆತನನ್ನು ಕೊಲ್ಲಲಾಗಲಿಲ್ಲ.  ಈ ನಿರಂತರ ಹೋರಾಟದಿಂದ ಶ್ರೀಮನ್ನಾರಾಯಣನಿಗೂ ಬಳಲಿಕೆಗಳು ಮೂಡಿಬಂತು.  ಹೀಗಾಗಿ ವೈಕುಂಠಕ್ಕೆ ಹಿಂದಿರುಗಿದ ಮಹಾವಿಷ್ಣುವು ಕೈಯಲ್ಲಿದ್ದ ಧನುಸ್ಸನ್ನೇ ದಿಂಬನ್ನಾಗಿಸಿಕೊಂಡು ಯೋಗ ನಿದ್ರೆಗೊಳಗಾದನು. ಯುದ್ದದಲ್ಲಿ ಮಹಾವಿಷ್ಣುವೂ ತನ್ನನ್ನು ಸೋಲಿಸಲಾಗದೆ ಹಿಂತೆಗೆದ  ರೀತಿ, ಅಸುರ ಹಯಗ್ರೀವನಲ್ಲಿ  ಸಾವಿನ ಭೀತಿಯನ್ನೇ  ದೂರಮಾಡಿತ್ತು.  ಹೀಗಾಗಿ ಆತ ಮತ್ತಷ್ಟು ಅಟ್ಟಹಾಸದಿಂದ ದೇವತೆಗಳ ಲೋಕಕ್ಕೇ ಅಡಿ ಇಟ್ಟ.  ಈ ಅಸುರ ಹಯಗ್ರೀವನ ಕಾಟ ತಾಳಲಾರದ ದೇವತೆಗಳು  ಮತ್ತೆ ಯೋಗನಿದ್ರೆಯಲ್ಲಿದ್ದ ಮಹಾವಿಷ್ಣುವಿನ ಬಳಿ ಓಡೋಡಿ ಬಂದರು.  ಬ್ರಹ್ಮ, ಇಂದ್ರ, ಮಹೇಶ್ವರರೂ ಬಂದರು. ಆದರೆ ಏನು ಮಾಡಿದರೂ ಏಳಲೊಲ್ಲ ಈ  ಮುರಾರಿ. ಕಡೆಗೆ ಇವರೆಲ್ಲಾ ಧನುಸ್ಸಿನ ಝೇಂಕಾರ ಮಾಡಲು ಯತ್ನಿಸಿದರು. ಆ ಕ್ಷಣದಲ್ಲಿ ನಡೆದ ಅಚಾತುರ್ಯದಿಂದ  ಆ ಧನುಸ್ಸಿನ ಕಂಬಿ, ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ಕತ್ತನ್ನು ಕೊಯ್ದಿತು.

ವಿಷ್ಣುವಿನ ಕತ್ತೇ ಇಲ್ಲದಂತಹ ಪರಿಸ್ಥಿತಿ ದೇವತೆಗಳನ್ನು ಕಂಗಾಲಾಗಿಸಿಬಿಟ್ಟಿತು.  ಇದೀಗ ಸಹಾಯಕ್ಕೆ ಬಂದದ್ದು ಮಹಾಮಾಯೆ ದೇವಿಯಾದ ದುರ್ಗೆ. ತಾನು ಅಸುರ ಹಯಗ್ರೀವನಿಗಿತ್ತ ವರವನ್ನು ಪಾಲಿಸಲು ನಾನು ಹೂಡಿದ ಮಾಯೆಯಿದು ಎಂದು ದೇವತೆಗಳಿಗೆ ಭರವಸೆಯಿತ್ತ ತಾಯಿ ದುರ್ಗೆಯು,  ಶ್ವೇತ ಹಯದ ಮುಖವೊಂದನ್ನು  ವಿಷ್ಣುವಿನ ದೇಹಕ್ಕೆ ಅಂಟಿಸಲು ಬ್ರಹ್ಮದೇವನಿಗೆ ಆಣತಿಯಿತ್ತಳು. ತದನಂತರ ಯೋಗನಿದ್ರೆಯಿಂದ ಹೊರ ಬಂದ ವಿಷ್ಣು , ಅಸುರ ಹಯಗ್ರೀವನನ್ನು ಸಂಹರಿಸಿ  ಹಯಗ್ರೀವದೇವನಾದನು.

ಹೀಗೆ ಮೂಡಿಬಂದ ಹಯಗ್ರೀವ ಅವತಾರ  ಬರೀ ಹಿಂದೂಗಳಿಗೇ ಮಾತ್ರವಲ್ಲದೆ  ಬೌದ್ಧರಿಗೂ ಪ್ರಿಯನಾಗಿದ್ದಾನೆ ಎಂಬ ಮಾತಿದೆ. ಈತ  ಜ್ಞಾನಾರ್ಜನೆಯ ಮಾರ್ಗದಲ್ಲಿ ಬರುವ ತೊಡಕುಗಳನ್ನು ನಿವಾರಣೆ ಮಾಡುವವನು.

ವೈಷ್ಣವ ಗುರು ಶ್ರೀ ರಾಮಾನುಜರು ಒಮ್ಮೆ ತಮ್ಮ ಬ್ರಹ್ಮಸೂತ್ರ ಭಾಷ್ಯವನ್ನು ಸರಸ್ವತೀದೇವಿಯ ದೇಗುಲದಲ್ಲಿ ದೇವರ ಎದುರು ಮಂಡಿಸಿದರಂತೆ. ಇವರ ಈ ಮಹಾ ಭಾಷ್ಯವನ್ನು ಕೇಳಿ ಸಂಪ್ರೀತಗೊಂಡ ಮಾತೆ ಅದಕ್ಕೆ ಅದಕ್ಕೆ "ಶ್ರೀಭಾಷ್ಯಂ" ಎಂದು ಹೆಸರಿಸಿ, ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ, ಕಾಲಿಗೆ ಗೆಜ್ಜೆಕಟ್ಟಿ, ಎರಡು ಕೈಯಲ್ಲಿ ಶಂಕು, ಚಕ್ರ, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಜಪಮಾಲೆ ಧರಿಸಿ, ಪತ್ನಿ ಲಕುಮಿಯೊಡನೆ ಆಸೀನನಾದ ಹಯಗ್ರೀವ ಮೂರ್ತಿಯನ್ನಿತ್ತಳಂತೆ.

ಮತ್ತೋರ್ವ ಶ್ರೀವೈಷ್ಣವ ಆಚಾರ್ಯರಾದ ವೇದಾಂತ  ದೇಶಿಕರು  ತೀರ್ಥಯಾತ್ರೆ ಮುಗಿಸಿ ಕಂಚಿಗೆ ವಾಪಸ್ಸಾಗುತ್ತಿದ್ದರು. ರಾತ್ರಿ ಪಯಣ ಬೇಡವೆಂದು ಮಾರ್ಗ ಮಧ್ಯದಲ್ಲಿ ಶ್ರೀಮಂತ ಧಾನ್ಯ ವ್ಯಾಪಾರಿಯೋರ್ವರ ಮನೆಯಲ್ಲಿ ವಿಶ್ರಮಿಸಿದರು. ಅದೇಕೋ ಅಂದು ಅವರಿಗೆ ಹಯಗ್ರೀವನಿಗೆ ನೈವೇದ್ಯ ಮಾಡಲು ಹಣ್ಣು ಹಂಪಲು ಸಿಗಲಿಲ್ಲ. ಬರಿ ನೀರನ್ನೇ ನೈವೇದ್ಯ ಮಾಡಿದ ಅತೃಪ್ತಭಾವದಿಂದ ಮಲಗಿದರು.  ಮಧ್ಯರಾತ್ರಿಯಲ್ಲಿ ದೇಶಿಕರನ್ನು ಎಬ್ಬಿಸಿದ ಶ್ರೀಮಂತ “ನಿಮ್ಮ ಬಿಳೀ ಕುದುರೆ ನನ್ನ ಉಗ್ರಾಣದಲ್ಲಿದ್ದ ಕಡಲೆ, ಹೆಸರು, ಹುರುಳಿ ಕಾಳುಗಳನ್ನು ತಿಂದುಹಾಕುತ್ತಿದೆ.   ದಯವಿಟ್ಟು ಬಂದು ಅದನ್ನು ಕಟ್ಟಿ ಹಾಕಿ ಎಂದು ಎಬ್ಬಿಸಿದನಂತೆ. ಆಶ್ಚರ್ಯಗೊಂಡ ದೇಶಿಕರು  ತಕ್ಷಣ ಉಗ್ರಾಣಕ್ಕೆ ಹೋಗಿ ನೋಡಿದಾಗ  ಒಂದು ದಿವ್ಯ ಜ್ಯೋತಿಕಂಡು ಬಂತು.  ಕುದುರೆ  ತಿಂದ ಧಾನ್ಯದ ಚೀಲದ ತುಂಬಾ ಚಿನ್ನ ತುಂಬಿತ್ತು.  ಅಂದಿನಿಂದ ಹಯಗ್ರೀವನಿಗೆ  ಕಡಲೆ ಹುರುಳಿ ಜೊತೆಗೆ ಬೆಲ್ಲವೇ ಪ್ರಸಾದವೆನಿಸಿತು ಎಂಬ ಕಥೆ ಇದೆ..

ಉಡುಪಿಯ ಒಬ್ಬ ಅಕ್ಕಸಾಲಿಗ, ಚಿನ್ನದ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದನಂತೆ. ಏನೇ ಮಾಡಿದರೂ ಗಣೇಶನ ಮುಖ ಆನೆಮೊಗವಾಗದೆ ಕುದುರೆ ಮುಖವಾಗುತ್ತಿತ್ತಂತೆ. ಕಡೆಗೆ ಬೇಸರಗೊಂಡ ಅಕ್ಕಸಾಲಿಗ ಆ ಮೂರ್ತಿಯನ್ನು ಕಸದಬುಟ್ಟಿಗೆ ಹಾಕಿಬಿಟ್ಟನಂತೆ.   ಅದೇ ದಿನ ರಾತ್ರಿ ಉಡುಪಿಯ ವಾದಿರಾಜಮಠವನ್ನು ಸ್ಥಾಪಿಸಿದ ವಾದಿರಾಜರ ಕನಸಿನಲ್ಲಿ  ವಿಷ್ಣು ಪ್ರತ್ಯಕ್ಷನಾಗಿ. ``ನೋಡು ವಾದಿರಾಜ, ಕುದುರೆಮುಖನಾದ ನನ್ನನ್ನು ಅಕ್ಕಸಾಲಿಗ ಧೂಳಿನಲ್ಲಿ ಬಿಸಾಕಿ ನಿರ್ಲಕ್ಷಿಸಿಬಿಟ್ಟಿದ್ದಾನೆ, ನೀನು ನನ್ನ ಈ ವಿಗ್ರಹಕ್ಕೆ ಸೂಕ್ತ ವ್ಯವಸ್ಥೆ ಒದಗಿಸು" ಎಂದು  ಆದೇಶಿಸಿದನಂತೆ.  ಭಗವಾನರ  ಮಾತಿನಂತೆ  ಈ ಹಯಗ್ರೀವ ಮೂರ್ತಿಯನ್ನು ಕಂಡ ವಾದೀರಾಜರು ಆನಂದಭರಿತರಾಗಿ ಈ ಮೂರ್ತಿಯ ಆರಾಧನೆ ಕೈಗೊಳ್ಳತೊಡಗಿದರು.  ಈ  ದೇವರು  ಮಠಕ್ಕೆ ಆಗಮಿಸಿದ  ಮೇಲೆ ವಾದಿರಾಜರು ದಿನಾ  ಕಡಲೆ, ಬೆಲ್ಲ, ತೆಂಗಿನಕಾಯಿ ಪ್ರಸಾದವನ್ನು ದೊಡ್ಡ ಹರಿವಾಣದಲ್ಲಿ ಬೆರೆಸಿ, ಭಕ್ತಿಯಿಂದ  ತಮ್ಮ ತಲೆಯ ಮೇಲಿಟ್ಟುಕೊಳ್ಳುತ್ತಿದ್ದರಂತೆ. ಸ್ವಯಂ ಹಯಗ್ರೀವ ದೇವರು ಕುದುರೆಯಾಗಿ ಬಂದು ತಮ್ಮೆರಡೂ ಕಾಲುಗಳನ್ನು ವಾದಿರಾಜರ ಭುಜದ ಮೇಲಿಟ್ಟು ಪ್ರಸಾದವನ್ನು ಸ್ವೀಕರಿಸುತ್ತಿದ್ದನಂತೆ.  ಇಂಥಹ ಚಿತ್ರಪಟಗಳನ್ನು ನಾವು ಹಲವಾರು ದೇಗುಲಗಳಲ್ಲಿ ಕಾಣುತ್ತೇವೆ..

ಹೀಗೆ ವಿವಿಧ ರೂಪಗಳಲ್ಲಿ ಹಯಗ್ರೀವ ದೇವರ ಚರಿತ್ರೆ ನಮ್ಮ ಜನಮಾನಸದಲ್ಲಿ ಭಕ್ತಿ ಕಥಾನಕಗಳ ಹೊಳೆ ಹರಿಸಿದೆ.  ಕತ್ತಲೆಂಬ ಮಾಯೆ ದಿನೇ ದಿನೇ ಹೆಚ್ಚು ಕವಿಯುತ್ತಿರುವ ಈ ವಿಶ್ವದಲ್ಲಿ ಹಯಗ್ರೀವ ದೇವರ ನಿರ್ಮಲ ಸ್ಪಟಿಕಾಕೃತಿ ಎಂಬ ದಿವ್ಯ ಜ್ಞಾನದ ಬೆಳಕು ಈ ಎಲ್ಲ ಕತ್ತಲೆಗಳನ್ನೂ ಕಳೆದು, ಈ  ಲೋಕದಲ್ಲಿನ ಬಾಳುಗಳಿಗೆ ಭವ್ಯತೆ ತುಂಬಲಿ ಎಂದು ಪ್ರಾರ್ಥಿಸೋಣ.

ನ ಹಯಗ್ರೀವಾತ್ ಪರಂ ಅಸ್ತಿ ಮಂಗಳಂ
ನ ಹಯಗ್ರೀವಾತ ಪರಂ ಆಸ್ತಿ ಪಾವನಂ
ನ ಹಯಗ್ರೀವಾತ್ ಪರಮ ಅಸ್ತಿ ಧೈವತಂ
ನ ಹಯಗ್ರೀವಂ ಪ್ರಣಿಪತ್ಯ ಸೀಧತಿ

ಎಂಬ ವಾದಿರಾಜತೀರ್ಥರ ವರ್ಣನೆ ಹೇಳುತ್ತದೆ:

ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ,
ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ,
ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ
ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ. 

 ಪ್ರಿತೋಸ್ತು ಕೃಷ್ಣ ಪ್ರಭೋ
ಫಣೀಂದ್ರ ಕೆ
***

ಹಯಗ್ರೀವ ಜಯಂತಿ ಶ್ರಾವಣ ಶುದ್ಧ ಪೌರ್ಣಿಮೆ.

 ಪ್ರಳಯ ಕಾಲ ಮುಗಿದಮೇಲೆ ಕ್ಷೀರ ಸಮುದ್ರದಲ್ಲಿ ಮಲಗಿದ ಶ್ರೀಹರಿ ಸೃಷ್ಟಿ ಕಾರ್ಯಕ್ಕೆ ಪ್ರಾರಂಭ ಮಾಡಲು ವಿಚಾರಿಸಿದನು.  ವಿಷ್ಣುವಿನ ಹೊಕ್ಕಳುವಿನ ಒಳಗಿನಿಂದ ಒಂದು ಕಮಲ ಹುಟ್ಟಿತು.  ಶ್ರೀಹರಿ ಪದ್ಮನಾಭನಾದನು. ನಾಭೀಕಮಲದಲ್ಲಿ ಬ್ರಹ್ಮ ಹುಟ್ಟಿದನು.  ಶ್ರೀಹರಿ ಬ್ರಹ್ಮನಿಗೆ ಸೃಷ್ಟಿಕಾರ್ಯ ಮಾಡಲು ಹೇಳಿದನು.  ಇದಕ್ಕೂ ಮೊದಲು ಶ್ರೀಹರಿ ಮಹತ್  ತತ್ವ ಅದರಿಂದ ಅಹಂಕಾರ ತತ್ವ ಸೃಷ್ಠಿ ಮಾಡಿದನು.  ಅಹಂಕಾರ ತತ್ವ ದಿಂದ ಕಮಲ ಮತ್ತು ದಳ ಉದ್ಭವಿಸಿ ಅದರಲ್ಲಿ ಬ್ರಹ್ಮ ಹುಟ್ಟಿದ.  ಸೃಷ್ಠಿ ಮಾಡಬೇಕೆಂದರೆ ಎಲ್ಲ ಕಡೆಗೂ ನೀರು.  ಬ್ರಹ್ಮನಿಗೆ ಏನೂ ಮಾಡಬೇಕೆಂದು ತಿಳಿಯದೇ ಸುಮ್ಮನಿದ್ದನು. ಇತ್ತ ಕಮಲದ ದಳದಲ್ಲಿ ಎರಡು ಜಲಬಿಂದು ಕಂಡವು. ಒಂದು ತಮೋಗುಣ. ಇನ್ನೊಂದು ರಜೋಗುಣ.  ತಮೋಗುಣದಿಂದ ಹೊರಟ ಜೇನು ಹೊಂಬಣ್ಣದ ಮಧುವಿನಿಂದ ಮಧು ಎಂಬ ರಾಕ್ಷಸ ಹುಟ್ಟಿದನು. ರಜೋಗುಣ ತುಸು ಜಿಗುಟಾದ  ಅಂಟಿನಿಂದ ಕೈಟಭ ಎಂಬ ರಾಕ್ಷಸ ಹುಟ್ಟಿದನು.  ಇಬ್ಬರೂ ರಕ್ಕಸರು ಎದ್ದವರೇ ನೋಡಿದ್ದು ಬ್ರಹ್ಮನ ಕೈಯಲ್ಲಿ ಹೊಳೆಯುತ್ತಿರುವ ವೇದದ ಪುಸ್ತಕಗಳು.  ಕೂಡಲೇ ಅವುಗಳನ್ನು ತೆಗೆದುಕೊಂಡು ಬ್ರಹ್ಮ ನನ್ನು ಲೆಕ್ಕಿಸದೆ ಓಡಿಹೋಗಿ ಪಾತಾಳದಲ್ಲಿಯ ಈಶಾನ್ಯ ದಿಕ್ಕಿನಲ್ಲಿ ಕುಳಿತರು. 
ಬ್ರಹ್ಮನ ಕಣ್ಣಿನಂತಿದ್ದ ವೇದಗಳು ಮಾಯಾವಾಡ್ ಕೂಡಲೇ ಬ್ರಹ್ಮ ವಿಷ್ಣುವನ್ನು ಸ್ತೋತ್ರ ಮಾಡಿದನು. ಆಗ ಶ್ರೀ ಹರಿಯುವ ಒಂದು ವಿಚಿತ್ರ ರೂಪದಲ್ಲಿ ಅವತಾರ ಮಾಡಿದನು.  ಅದೇ ಕುದುರೆ ಮುಖದ ಹಯಗ್ರೀವರೂಪ.  ನೋಡಲು ಶ್ವೇತ ವರ್ಣ, ಕುದುರೆಯ ಮುಖ, ನಕ್ಷತ್ರ ಮತ್ತು ಆಕಾಶವೇ ತಲೆ, ಊರ್ಧ್ವಲೋಕ, ಅಧೋಲೋಕಗಳೇ ಎರಡು ಕಿವಿ. ಸೂರ್ಯ ಚಂದ್ರರೇ ಕಣ್ಣು. ಎರಡು ಹುಬ್ಬುಗಳೇ ಸಾಗರಗಳು. ಪೃಥ್ವಿಯೇ ಹಣೆ. ಗಂಗಾ ಸರಸ್ವತಿ ನದಿಗಳೇ ಹಿಂಭಾಗ. ಸಂಧ್ಯೆಯೇ ಮೂಗು. ಓಂಕಾರವೇ ಸ್ಮೃತಿ. ವಿದ್ಯುತ್ತೇ ನಾಲಿಗೆ. ಸೋಮಪಾನ ಮಾಡುವ ಪಿತೃಗಳೇ ಕೈಗಳು. ಭೂಲೋಕ ಬ್ರಹ್ಮಲೋಕ ಗಳು ತುಟಿಗಳು.  ಹೀಗೆ ಸಕಲ ಅವಯವ ಹೊಂದಿದ ಹಯಗ್ರೀವ ದೇವರು ಪಾತಾಳಕ್ಕೆ ಹೋಗಿ ಒಂದೆಡೆ ಕುಳಿತು ಸಾಮಗಾನಕ್ಕೆ ಪ್ರಾರಂಭ ಮಾಡಿದರು. ಈ ಗಾಯನ ಕೇಳಿ ಮಧುಕೈಟಭರು ತಮ್ಮನ್ನು ತಾವೇ ಮೈಮರೆತರು. ವೇದಗಳನ್ನು ಅಲ್ಲಿಯೇ ಬಿಟ್ಟು ಸಾಮಗಾನ ಬರುವ ದಿಕ್ಕಿನ ಕಡೆಗೆ ಹೋದರು. ಆಗ ಹಯಗ್ರೀವದೇವರು ತಕ್ಷಣದಲ್ಲಿ ವೇದಗಳನ್ನು ತಂದು ಬ್ರಹ್ಮದೇವರಿಗೆ ಅರ್ಪಿಸಿದನು. ನಂತರ ಪಾತಾಳದಲ್ಲಿಂದ ಮೇಲೆ ಬಂದ ರಾಕ್ಷಸರು ವಿಷ್ಣುವನ್ನು ಕಂಡು ಯುದ್ಧಕ್ಕೆ ಕರೆದರು. ವಿಷ್ಣು ಹಯಗ್ರೀವ ರೂಪದಿಂದಲೇ ಇಬ್ಬರೂ ರಾಕ್ಷಸರನ್ನು ಸಂಹರಿಸಿ ಮಧುಕೈಟಭಾರಿ ಎಂದು ಕರೆಸಿಕೊಂಡನು. ಮಧು ರಾಕ್ಷಸನನ್ನು ಕೊಂಡಿದ್ದಕ್ಕೆ ಮಧುಸೂದನ ಆದನು. ಈ ಘಟನೆ ನಡೆದಿದು ಶ್ರಾವಣ ಶುದ್ಧ ಪೌರ್ಣಿಮೆ ದಿನ.  ಅದಕ್ಕೆಅಂದು ಹಯಗ್ರೀವ ಜಯಂತಿ ಎಂದು ಆಚರಿಸುವರು.

 ಈ ಮೊದಲು ವರ್ಣಿಸಿದ ಹಯಗ್ರೀವ ದೇವರು ಸಾಕ್ಷಾತ್ ವಿರಾಟ್ ರೂಪಿ ಪರಮಾತ್ಮನೇ ಆಗಿರುವನು.  ಭಾಗವತ ಪುರಾಣದಲ್ಲಿ ಹಯಗ್ರೀವ ದೇವರ ವರ್ಣನೆ ಬಂದಿದೆ.  ಇದಲ್ಲದೆ ಕಶ್ಯಪ ಮಹರ್ಷಿಗಳು ಬ್ರಹ್ಮದೇವರಿಂದ ಹಯ ರೂಪಿಯ ಸಹಸ್ರ ನಾಮಾವಳಿ ಕೇಳಿ ತಾವೂ ಪಠಿಸಿದ್ದಾರೆ. ಹಯಗ್ರೀವನು ತಾಮಸ, ರಾಜಾಹುಣಗಳನ್ನು ನಾಶ ಮಾಡಿ ಸಾತ್ವಿಕ ಗುಣ ಉಳಿಸಿ ಧರ್ಮ ಸ್ಥಾಪಿಸುತ್ತಾನೆ.  ಶ್ರೀ ವಾದಿರಾಜರ ಆರಾಧ್ಯ ದೈವ ಹಯಗ್ರೀವ. ಅವರು ತಮ್ಮ ರುಕ್ಮಿಣೀಶ ವಿಜಯ ಕಾವ್ಯದಲ್ಲಿ ಮತ್ತು ತಮ್ಮ ಪದ್ಯಗಳಲ್ಲಿ ಹಯಗ್ರೀವ ದೇವರನ್ನು ವರ್ಣಿಸಿ ಕೊಂಡಾಡಿದ್ದಾರೆ. ತಮ್ಮ ಪದ್ಯಗಳಿಗೆ ಹಯವದನ ಅಂಕಿತ ಹಾಕಿದ್ದಾರೆ. ಅವರ ವರ್ಣನೆ ಪ್ರಕಾರ ಹಯಮುಖನು ಚತುರ್ಭುಜನಾಗಿದ್ದಾನೆ. ಬಲಕ್ಕೆ ಮೇಲಿನ ಕೈಯಲ್ಲಿ ಶಂಖ, ಎಡಕ್ಕೆ ಮೇಲಿನ ಕೈಯಲ್ಲಿ ಜಪಮಣಿ, ಕೆಳಗಡೆ ಬಲಗೈಯನ್ನು ಜ್ಞಾನ ಮುದ್ರೆ ತೋರಿಸಿದ್ದಾನೆ. ಎಡಕ್ಕೆ ಕೆಳಗಿನ ಕೈಯಲ್ಲಿ ವೇದಗಳನ್ನು ಹಿಡಿದಿದ್ದು ಅದೇ ಕೈಯ ಕಿರು ಬೆರಳನ್ನು ತನ್ನ ಪಾದಕ್ಕೆ ತೋರಿಸಿದ್ದಾನೆ. ಇದರರ್ಥ ಯಾರೂ ವೇದಗಳಲ್ಲಿ ಹೇಳಿದಂತೆ ಧರ್ಮಾಚರಣೆ ಮಾಡುವರೋ ಅವರಿಗೆ ದಿವ್ಯ ಜ್ಞಾನ ಕೊಟ್ಟು ನನ್ನ ಪಾದಗಳ ಸೇವೆಯಲ್ಲಿ ಇರುವಂತೆ ಮಾಡುತ್ತೇನೆ ಎಂದು ಹೇಳಿದ್ದಾನೆ.

 ಶ್ರೀ ವಾದಿರಾಜರು ಹಯಗ್ರೀವ ಉಪಾಸಕರು. ಇನ್ನೂ ವಾದಿರಾಜರಿಗೆ ಹಯಗ್ರೀವ ಹೇಗೆ ಒಲಿದು ಬಂದನು. ಇದಕ್ಕೆ ಒಂದು ಕಥೆಯೇ ಇದೆ.  ಹದಿನಾರನೆಯ ಶತಮಾನದಲ್ಲಿ ಗೋವಾ ಪ್ರಾಂತದಲ್ಲಿ ನೆಲೆಸಿದ್ದ ಹಿಂದೂ ಗಳನ್ನು ಪೋರ್ತುಗೀಜರು ಬಲವಂತಮಾಡಿ ಮತಾಂತರ ಮಾಡುತ್ತಿದ್ದರು. ಅವರ ಕಾಟ ತಾಳಲಾರದೆ ಬ್ರಾಹ್ಮಣ ಜನ ಮತ್ತು ಅಕ್ಕಸಾಲಿಗರು ಇದ್ದ ಬಿದ್ದ ಮನೆ ಐಶ್ವರ್ಯಗಳನ್ನು ಬಿಟ್ಟು ಆತ್ಮರಕ್ಷಣೆ  ಯಲ್ಲದೆ ಧರ್ಮ ರಕ್ಷಣೆಗಾಗಿ ಗೋವಾ ಪ್ರಾಂತ ಬಿಟ್ಟು ಕರ್ನಾಟಕದ ಕಾರವಾರ, ಶಿರ್ಸಿ ಮತ್ತು ಕರಾವಳಿ ಪ್ರದೇಶಗಳನ್ನು ತಮ್ಮ ನೆಲೆಯಾಗಿ ಇಟ್ಟುಕೊಂಡರು. ಈ ಸೋನಾರರು ದೈವಜ್ಞ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿದ್ದರು. ಒಂದುಸಲ ಒಬ್ಬ ಸಿರಿವಂತನು ಕುಶಲಕರ್ಮಿಯಾದ ದೈವಜ್ಞನಿಗೆ ಒಂದು ಗಣಪತಿ ಮೂರ್ತಿ ಮಾಡೊಕೊಡಲು ಕೇಳಿಕೊಂಡನು. ದೈವಜ್ಞ ಸಂತೋಷದಿಂದ ಪಂಚಲೋಹ ಕರಗಿಸಿ ಗಣಪತಿಯ ಅಚ್ಚಿನಲ್ಲಿ ಎರಕ ಹೊಯ್ದು ಇಟ್ಟನು.  ಕೆಲವು ದೈನಗಳ ನಂತರ ತೆಗೆದು ನೋಡಿದರೆ ಆಶ್ಚರ್ಯ ಕಾದಿತ್ತು.  ಲೋಹವು ಗಣಪತಿ ಬದಲು ಹಯಮುಖವಾಗಿ ಹಯಗ್ರೀವ ರೂಪ ತಾಳಿತ್ತು. ವಿಗ್ರಹ ತಣ್ಣಗಾಗಿರಲಿಲ್ಲ. ಮತ್ತೊಮ್ಮೆ ಕರಗಿಸಿ ಹಾಕಲು ಪ್ರಯತ್ನಿಸಿದನು.  ಇನ್ನೊಂದು ಕಥೆ ಪ್ರಕಾರ ದಿವಜ್ಞನು ಮೂರು ನಾಲ್ಕು ಸಲ ಲೋಹ ಕರಗಿಸಿ ಎರಕ ಹೊಯ್ದನೆಂದು ಹೇಳುವರು.  ಇರಲಿ. ಆ ರಾತ್ರಿ ದೈವಜ್ಞ ಬ್ರಾಹ್ಮಣನಿಗೆ ದೇವರು ಕಾಣಿಸಿಕೊಂಡು ನೀನು ಅಚ್ಚಿಗೆ ಹಾಕಿ ತೆಗೆದ ಹಯಗ್ರೀವ ಮೂರ್ತಿಯನ್ನು ನಾಳೆ ಮುಂಜಾನೆ ಬರುತ್ತಿರುವ ಶ್ರೀ ವಾದಿರಾಜರಿಗೆ ಒಪ್ಪಿಸು ಎಂದು ಹೇಳಿದಂತಾಯಿತು. ಕುಶಲಕರ್ಮಿ ಕನಸಿನ ವಿಷಯ ತನ್ನ ಸಮಾಜ ಬಾಂಧವರಿಗೆ ಹೇಳಿದನು. ಇದು ಒಳೀಯದಾಯಿತು. ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ದೇಶಬಿಟ್ಟು ದೇಶಕ್ಕೆ ಬಂದ ನಮ್ಮೆಲ್ಲರ ಬಡತನ ದೂರಾಗಲಿ ಎಂದು ಪ್ರಾರ್ಥಿಸೋಣ ಎಂದು ನಿರ್ಧರಿಸಿದರು.  ಎಲ್ಲ ಕಡೆಗೂ ತಳಿರು ತೋರಣ ಕಟ್ಟಿ ಗುರುಗಳಿಗೆ ಸ್ವಾಗತ ಮತ್ತು ಹಯಗ್ರೀವದೇವರ ಮೂರ್ತಿ ಸಮರ್ಪಣೆಗೆ ತಯಾರು ಮಾಡಿದರು.  ಶ್ರೀ ವಾದಿರಾಜರಿಗೂ ಸ್ವಪ್ನವಾಗಿ ಅವರೂ  ತಮ್ಮ ಅರಾಧ್ಯ ದೈವ ಒಲಿದುಬಂದನೆಂದು ಸಂತೋಷದಿಂದ ಬಂದರು.

 ದೈವಜ್ಞಸಮಾಜದವರು  ವಾದಿರಾಜರಿಗೆ ಹಯಗ್ರೀವ ಮೂರ್ತಿ ಒಪ್ಪಿಸಿ ತಮ್ಮ ಬಡತನ ಹಿಂಗಿಸಬೇಕೆಬುದು ಬೇಡಿಕೊಂಡರು.  ವಾದಿರಾಜರು ಅವರಿಂದ ಹಯವದನ ಮೂರ್ತಿಯನ್ನು ಸ್ವೀಕರಿಸಿ, ಅವರಿಗೆ ಅಭಯ ಹೇಳಿ ಅವರೆಲ್ಲರಿಗೂ ಮುದ್ರಾ ಹಾಕಿ ತಮ್ಮ ಮಠದ ಧರ್ಮ ನಡೆಸಿಕೊಂಡು ಬರಬೇಕೆಂದು ಶಿಷ್ಯರನ್ನಾಗಿ ಮಾಡಿಕೊಂಡರು. ಇಂದಿಗೂ ಈ ಜನಾಂಗದವರು ಸೋದೆಮಠದ ಶಿಷ್ಯರಾಗಿದ್ದಾರೆ.

 ಹಯಗ್ರೀವದೇವರು ತೋರಿದ ಎರಡು ಮಹಿಮೆ ಹೇಳಿ ಮುಗಿಸುವೆ. ಪಂಢರಪುರದ ಹತ್ತಿರ ವಾದಿರಾಹರೂ ಒಂದು ಹಳ್ಳಿಗೆ ಬಂದರು. ಅಲ್ಲಿ ಒಂದು ಕಡಲೆ ಹೊಲದಲ್ಲಿ ದಿನಾಲು ಕುದುರೆಯೊಂದು ಬಂದು ಮೇದು  ಹೋಗುತ್ತಿತ್ತು. ಹೊಲದ ಮಾಲೀಕ ನೋಡಿ ನೋಡಿ ಸಾಕಾಗಿ ತನ್ನ ಹೊಲದಲ್ಲಿಯ ಬೆಳೆ  ನಾಶವೆಂದು ಅದನ್ನು ಅಟ್ಟಿಸಿಕೊಂಡು ಬಂದನು. ಕುದುರೆ ಮಠದಲ್ಲಿ ಪ್ರವೇಶಿಸಿ ಮಾಯವಾಗುತ್ತಿತ್ತು. ರೈತ ರಾಜರಿಗೆ ದೂರುಕೊಟ್ಟನು. ರಾಜರು ಅಯ್ಯಾ ನಮ್ಮಲ್ಲಿ ಕುದುರೆಗಳು ಇಲ್ಲ. ನಾವು ಪಾದಚಾರಿಗಳು ಎಂದು ಹೇಳಿ ಕೊನೆಗೆ ನಮ್ಮ ಆರಾಧ್ಯ ದೇವರು ಕುದುರೆಯ ಮುಖದ ಹಯಗ್ರೀವದೇವರು.  ನಿನಗೆ ಕುದುರೆ ಕಂಡಿದೆ ಎಂದರೆ ನೀನೇ ಭಾಗ್ಯವಂತನು. ನಾಳೆ ನಿನ್ನ ಹೊಲಕ್ಕೆ ಹೀಗಿ ನೋಡು. ಎಂದರು. ರತನು ಮರುದಿನ ಹೊಲಕ್ಕೆ ಹೋಗಿ ನೋಡಲಾಗಿ, ಕುದುರೆ ಓಡಾಡಿದ ಮೇದ  ಜಾಗದಲ್ಲಿ ಬಂಗಾರದ ಕಡಲೆ ಗೊಂಚಲಾಗಳು ಆಗಿದ್ದವು. ರೈತ ಸಂತೋಷದಿಂದ ಗುರುಗಳಿಗೆ ನಮಸ್ಕರಿಸಿ ಪ್ರತಿ ವರ್ಷ ಮಠಕ್ಕೆ ಕಡಲೆ ಕಲಿಸುತ್ತಿದ್ದನು.

 ಕಲಿಯುಗದ ಕಾಮಧೇನು ಎಂದು ಎನಿಸಿಕೊಂಡ ಶ್ರೀ ರಾಘವೇದ್ರರಿಗೆ ಅಪ್ಪಣ್ಣಾಚಾರ್ಯ ಎಂಬ ಶಿಷ್ಯರು. ರಾಯರ ಜೀವನದ ಕೋಣೆ ಗಳಿಗೆ ಬಂದಿದ್ದವು. ತಾವೂ ವೃಂದಾವನ ಸಶರೀರವಾಗಿ ಪ್ರವೇಶಿಸುತ್ತೇವೆ ಎಂದು ಶಿಷ್ಯನಿಗೇ ಹೇಳಿದರೆ ಮನಸ್ಸಿಗೆ ತ್ರಾಸ ಮಾಡಿಕೊಳ್ಳುತ್ತಾರೆಂದು ಊರಿಗೆ ಹೋಗಿ ಬರಲು ಕಳುಸುವರು.  ಇತ್ತ ರಾಯರು ವೃಂದಾವನ ಪ್ರವೇಶ ಮಾಡಿದರು. ಅಪ್ಪಣ್ಣಾಚಾರ್ಯರಿಗೆ ಸುದ್ದಿ ತಿಳಿದ ತಕ್ಷಣ ತುಂಗಭದ್ರಾ ಪ್ರವಾಹ ಈಜುತ್ತಾ ಬಿಚ್ಚಾಲಿಯಿಂದ ಮಂಚಾಲೆಗೆ ರಾಯರ ಸ್ತೋತ್ರಮಾಡುತ್ತ ಬಂದು ವೃಂದಾವನದ ಮುಂದೆ ನಿಂತು ಯೋ ಭಕ್ತ್ಯಾ ಗುರು ರಾಘವೇಂದ್ರ.............. ವಿಭೂತಿರತುಲಾ  ಎಂದಾಗ ಅವರಿಗೆ ದುಃಖ ದಿಂದ ಶಭಾಡಹೊರಡಲಿಲ್ಲ.  ಆಗ ವೃಂದಾವನದಿಂದ ಸಾಕ್ಷೀ ಹಯಾ ಸ್ತೋತ್ರಹಿ  ಎಂಬ ವಾಣಿ  ಬಂದಿತು. ಈ ಸ್ತೋತ್ರಕ್ಕೆ ಜ್ಞಾನರೂಪಿ ಹಯಗ್ರೀವ ದೇವರೇ ಸಾಕ್ಷೀ ಎಂದು ಅರ್ಥ. ಹೀಗೆ ಹಯಗ್ರೀವದೇವರು ಜ್ಞಾನಕ್ಕೆ ಅಭಿಮಾನಿಗಳಹಿದ್ದಾರೆ. ಭಗವಂತನಾದ ಹಯಮುಖನ ವರ್ಣನೆಗೆ ಶಬ್ದಗಳು ಸಾಲವು. ಅಂತಹಾ ಪರಮಾತ್ಮನ ಕರುಣೆ ಎಲ್ಲರಿಗೂ ಆಗಲಿ ಎಂದು ಪ್ರಾರ್ಥಿಸುವ ನಿಮ್ಮವನೇ ಆದ ಮಧುಸೂದನ ಕಲಿಭಟ್
***

ಶ್ರೀಹಯಗ್ರೀವ ಜಯಂತಿ ಹರೇ ಶ್ರೀನಿವಾಸ,  ನಮಸ್ಕಾರ  ಶ್ರಾವಣ ಮಾಸದ ಹರಿದಿನತ್ರಯದ ಶುಭಹಾರೈಕೆಗಳು.  ಈ ದಶಮಿ ಏಕಾದಶಿ, ದ್ವಾದಶಿಯ ಪರ್ವದಿನಗಳಲ್ಲಿ ಯಥಾಶಕ್ತಿ ಶ್ರೀಹರಿವಾಯುಗುರುಗಳ ಸೇವೆ ನಿಮ್ಮಿಂದ ನಡೆಯಲಿ


ಇದೇ  ಶ್ರಾವಣ ಹುಣ್ಣಿಮೆ "ಶ್ರೀಹಯಗ್ರೀವ ಜಯಂತಿ"ಯ ಪರ್ವದಿನ. ಆ ನಿಮಿತ್ತವಾಗಿ, ಶ್ರೀ ಹಯಗ್ರೀವ ದೇವರ ಪ್ರೀತ್ಯರ್ಥವಾಗಿ " ಶ್ರೀಕೇಶವ ಪಂಚರತ್ನಕೀರ್ತನೆ"ಗಳ "ಸಹಸ್ರ ವರ್ತಿ ಪಠಣಯಜ್ಞಸೇವಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪಠಣಯಜ್ಞದ ಸಂಕಲ್ಪ ಕಾರ್ಯಕ್ರಮವನ್ನು ಈಗಾಗಲೇ ಎರಡು ಕಡೆ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣ ಭಾಗದವರಿಗಾಗಿ ಗಾಂಧಿಬಜಾರ್ ನ ಶ್ರಿ ವ್ಯಾಸರಾಯ ಮಠದಲ್ಲಿ ಆಗಸ್ಟ್ 12 ರಂದು ನಡೆಸಲಾಗಿದೆ. ಬೆಂಗಳೂರಿನ ಪಶ್ಚಿಮ, ಉತ್ತರ ಭಾಗದವರಿಗಾಗಿ ಆಗಸ್ಟ್ 18, ಶನಿವಾರದಂದು ನಡೆಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ಇದ್ದವರು ಈ ಏಕಾದಶಿಯಂದು ತಮ್ಮ ತಮ್ಮ ಸ್ಥಳಗಳಲ್ಲಿ ಸಂಕಲ್ಪ ಕೈಗೊಳ್ಳಬೇಕಾಗಿ ವಿನಂತಿ. ಸಂಕಲ್ಪ ಕೈಗೊಂಡ ಭಕ್ತರೆಲ್ಲರೂ ಎಲ್ಲರೂ ಹುಣ್ಣಿಮೆಯ ದಿನ ತಮಗೆ ಅನುಕೂಲವಾದ ಸ್ಥಳದಲ್ಲಿ ಕನಿಷ್ಟ 2 ಬಾರಿ ಶ್ರೀ ಕೇಶವ ಪಂಚರತ್ನಕೀರ್ತನೆಗಳನ್ನು ಪಠಿಸಿಬೇಕಾಗಿ ವಿನಂತಿ. 


ಭಜನಾ ಮಂಡಳಿಗಳ ಅನುಕೂಲಕ್ಕೋಸ್ಕರ ಶ್ರೀ ಹಯಗ್ರೀವಜಯಂತಿಯ ಪರ್ವದಿನದಂದು ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಶೇಷ ಭಜನಾ ಕಾರ್ಯಕ್ರಮ. 
***

ಹಯಗ್ರೀವ ವಿಷ್ಣುವಿನ ಕುದುರೆ ಮುಖದ ರೂಪವಾಗಿದೆ.


 ಈ ದೇವರ ಮೂಲದ ಬಗ್ಗೆ ಹಲವಾರು ಕಥೆಗಳಿವೆ. 


ವಿಷ್ಣುವಿನ ಸಣ್ಣ ಅವತಾರಗಳಲ್ಲಿ ಅವನು ಸೇರಿದ್ದಾನೆ. ಕುದುರೆಯ ತಲೆಯನ್ನು ಹೊಂದಿದ್ದ ಹಯಗ್ರೀವ ಎಂಬ ಅಸುರನನ್ನು ಅವನು ಕೊಂದನೆಂದು ತಿಳಿದುಬಂದಿದೆ. ಜನರು ವೈಶವ ಧರ್ಮವನ್ನು ಅನುಸರಿಸುವವರು ಆತನನ್ನು ಜ್ಞಾನದ ದೇವರು ಎಂದು ನಂಬುತ್ತಾರೆ.ಈ ಕವಚವನ್ನು ದ್ವೈತ ಸಂಪ್ರದಾಯಕ್ಕೆ ಸೇರಿದ ಒಬ್ಬ ಮಹಾನ್ ಸಾವಂತನಿಂದ ಕೇಳಲಾಗುತ್ತದೆ.)


1.ಹಯಗ್ರೀವ, ಹಯಗ್ರೀವ , ಹಯಗ್ರೀವ ಇತಿ ವಾದಿನಂ,

ನರ ಮುಚ್ಯಂತಿ ಪಾಪನಿ ದಾರಿದ್ರಿಮಿವ ಯೋಷಿತಾ,


ಆ ಮನುಷ್ಯ ಹಯಗ್ರೀವ, ಹಯಗ್ರೀವ, ಹಯಗ್ರೀವ,

ಹೆಂಡತಿಯನ್ನು ಹೊಂದಿರುವವರು ಬಡತನದಿಂದ ಪಾರಾಗುತ್ತಾರೆ ಎಂಬಂತಹ ಪಾಪಗಳಿಂದ ಪಾರಾಗುತ್ತಾರೆ


2.ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ವದೇತ್,

ತಸ್ಯ ನಿಸ್ಸಾರತೇ ವಾಣೀ ಜಹ್ನು ಕನ್ಯಾ ಪ್ರವಾಹಾತ್,


 ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂದು ಹೇಳುತ್ತಲೇ ಇರುವವನಿಗೆ

ಗಂಗಾನದಿಯ ಹರಿವಿನಂತೆ ಮಾತು ಹರಿಯುತ್ತಿತ್ತು


3.ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ಧ್ವನಿ,

ವಿಶೋಭತೇ ಸ ವೈಕುಂಟಕವತೋ ಉದ್ಘಾತನಕ್ಷಮ,


ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂಬ ಶಬ್ದ

ವೈಕುಂಠದಲ್ಲಿ ಹೊಳೆಯುತ್ತದೆ ಮತ್ತು ಅದರ ಬಾಗಿಲು ತೆರೆಯುತ್ತದೆ.


ಫಲಶ್ರುತಿ


ಶ್ಲೋಕ ತ್ರಯಂ ಇದಂ ಪುಣ್ಯಂ ಹಯಗ್ರೀವ ಪದಮಕಿತಂ,

ವಧಿ ರಾಜಾ ಯಾತಿ ಪ್ರೋಕ್ತಂ ಪದತಂ ಸಂಪದಂ ಪಧಮ್


ಹಯಗ್ರೀವನ ಪಾದಗಳನ್ನು ಅಲಂಕರಿಸುವ ಈ ಮೂರು ಶ್ಲೋಕಗಳು,

ವಾದಿರಾಜರು ಹೇಳಿದ್ದು ಓದಿದರೆ ಹಯಗ್ರೀವನ ಸ್ಥಾನ ಸಿಗುತ್ತದೆ.


ಇತಿ ಶ್ರೀ ಮಧ್ವಧಿ ರಾಜ ಪೂಜ್ಯ ಚರಣವಿರಂಚಿತಂ ಹಯಗ್ರೀವ ಸಮ್ಮೋದ ಸ್ತೋತ್ರಂ ಸಂಪೂರ್ಣಮ್

ರಾಜರಿಂದ ಪೂಜಿಸಲ್ಪಡುವ ಸಂತ ಮಧ್ವರ ಪಾದಗಳಿಗೆ ಸಲ್ಲಿಸುವ ಹಯಗ್ರೀವನ ಪ್ರಾರ್ಥನೆಯು ಇದು.


ಭಾರತೀ ರಮಣಮುಖ್ಯಪ್ರಾಣಾಂತರಗತ ಶ್ರೀ ಕೃಷ್ಣಾರ್ಪಣಂ ಅಸ್ತು

ಸರಸ್ವತಿ ದೇವಿಯನ್ನು ಸತ್ಕರಿಸುವ ಸಂತ ಮಧ್ವರೊಳಗಿರುವ ಶ್ರೀಕೃಷ್ಣನಿಗೆ ಇದನ್ನು ಅರ್ಪಿಸಲಾಗುತ್ತದೆ.


ಶ್ರೀ ಹಯಗ್ರೀವ ಮಂತ್ರ ಜಪಃ 

 


ಓಂ ಶ್ರೀಃ


ಅಸ್ಯಶ್ರೀ ಹಯಗ್ರೀವ ಏಕಾಕ್ಷರ ಮಹಾಮಂತ್ರಸ್ಯ

ಬ್ರಹ್ಮಾ ಋಷಿಃ ತ್ರುಷ್ಟುಪ್ ಛಂದಃ ಶ್ರೀ ಹಯಗ್ರೀವ ದೇವತಾ

ಹಂ ಬೀಜಂ ಸಂ ಶಕ್ತಿಃ ಔಂ ಕೀಲಕಂ

ಮಮ ವಿಶೇಷ ವಿದ್ಯಾ ಪ್ರಾಪ್ತ್ಯರ್ಥೇ ಜಪೇ ವಿನಿಯೋಗಃ ||


ಅಂಗನ್ಯಾಸಃ -- ಕರನ್ಯಾಸಃ

ಹ್ಸಾಂ ಅಂಗುಷ್ಠಾಭ್ಯಾಂ ನಮಃ ಹೃದಯಾಯ ನಮಃ

ಹ್ಸೀಂ ತರ್ಜಿನೀಭ್ಯಾಂ ನಮಃ ಶಿರಸೇ ಸ್ವಾಹಾ

ಹ್ಸೂಂ ಮಧ್ಯಮಾಭ್ಯಾಂ ನಮಃ ಶಿಖಾಯೈವಷಟ್

ಹ್ಸೈಂ ಅನಾಮಿಕಾಭ್ಯಾಂ ನಮಃ ಕವಚಾಯಹಂ

ಹ್ಸೋಂ ಕನಿಷ್ಟಿಕಾಭ್ಯಾಂ ನಮಃ ನೇತ್ರತ್ರಯಾಯವಷಟ್

ಹ್ಸಃ ಕರತಲ ಕರತುಷ್ಠಾಭ್ಯಾಂ ನಮಃ ಹಸ್ತ್ರಾಯಭಟ್

ಭೂರ್ಭುವಸ್ಸುವರೋಂ ಇತಿ ದಿಗ್ಭಂಧಃ ||


ಧ್ಯಾನಂ


ಧವಳ ನಳಿನ ನಿಷ್ಠಾಂ ಕ್ಷೀರ ಧಾರಂ ಕರಾಗ್ರೇ |

ಜಪ ವಲಯ ಸರೋಜೇ ಪುಸ್ತಕಾಭೀಷ್ಟ ಧಾನೇ ||

ದಧತ ಮಮಳ ವಸ್ತ್ರಂ ಕಲ್ಪಜಾತಾಭಿರಾಮಂ |

ತುರಗ ವದನ ವಿಷ್ಣುಂ ನೋಮಿ ದೇವಾಗ್ರ ಜಿಷ್ಣುಂ ||


ಏಕಾಕ್ಷರ ಮಂತ್ರಃ

ಹ್ಸೊಂ


ಗಾಯತ್ರೀ ಮಂತ್ರಃ

ಓಂ ಹ್ಸೋಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ |

ತನ್ನೋ ಹಂಸ ಪ್ರಚೋದಯಾತ್ ||

***

ಶ್ರೀಹಯಗ್ರಿವ ಚಿಂತನ🌷


( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ )


ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ

ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ |

ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ

ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ ||


 ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ !

ಹಯಗ್ರೀವಾಸುರ ಮದಭರಿತ ಆನೆಯಂತೆ  ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ .  ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು .

           -ಶ್ರೀದಶಾವತಾರಸ್ತುತಿ -2


ವಿವರಣೆ :-

ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ .


ಅಥೋ ವಿಧಾತುರ್ಮುಖತೋ ವಿನಿಃಸೃತಾನ್

ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ |

ನಿಹತ್ಯ ತಂ ಮತ್ಸ್ಯವಪು ರ್ಜುಗೋಪ

ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ || 


ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ |

ವೈವಸ್ವತಾಯೋತ್ತಮಸಂವಿದಾತ್ಮ

ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್ |

    ಮಹಾಭಾರತತಾತ್ಪರ್ಯನಿರ್ಣಯ 3-40-41


ಹಯಗ್ರೀವಾಸುರ ಬಲಿಷ್ಠಾನಾದ ದೈತ್ಯ ಬ್ರಹ್ಮದೇವರ ಮುಖದಿಂದ ಹೊರಹೊಮ್ಮಿದ ವೇದಗಳನ್ನೇ ಅಪಹರಿಸಿದ .ಆಗ ಪರಮಾತ್ಮ ಮತ್ಸ್ಯನಾಗಿ ಅವತರಿಸಿದ ರಾಕ್ಷಸರನ್ನು ಸಂಹರಿಸಿ ಸಪ್ತರ್ಷಿಗಳನ್ನು ವೈವಸ್ವತಮನುವನ್ನು ರಕ್ಷಿಸಿದ ಬೃಹ್ಮದೇವರಿಗೆ ಪುನಃ ವೇದಗಳನ್ನು ನೀಡಿದ ವೈವಸ್ವತ ಮನುವಿಗೆ ಪರಮಾತ್ಮನ ಸ್ವರೂಪವನ್ನು ಉಪದೇಶಿಸಿದ .ಸತ್ಯವ್ರತರಾಜನೇ ಮುಂದೆ ವೈವಸ್ವತಮನುವಾದನು  ಹಿಂದಿನ ಶ್ಲೋಕದ ವಿವರಣೆಯಲ್ಲಿ ಇದರ ಬಗ್ಗೆ ವಿವರಣೆ  ಇದೆ .


ಐತರೇಯ ಭಾಷ್ಯದಲ್ಲಿ  ಜಗದ್ಗುರು ಶ್ರೀಮಧ್ವಾಚಾರ್ಯರು ದಶಾವತಾರಗಳನ್ನು ಹೇಳುವಾಗ ಮೊದಲು ಮತ್ಸ್ಯಾವತಾರವನ್ನೇ ವರ್ಣಿಸಿದ್ದಾರೆ . ಚಾಕ್ಷುಷ ಮನ್ವಂತರದಲ್ಲಿ ಪ್ರಳಯಜಲದಲ್ಲಿ ಶ್ರೀಹರಿಮತ್ಸ್ಯರೂಪದಿಂದ ವಿಹರಿಸಿದ ಆ ರೂಪವನ್ನು ಶ್ರೀವಾದಿರಾಜರು ಮೊದಲ ಶ್ಲೋಕದಲ್ಲಿ ತಿಳಿಸಿದ್ದಾರೆ ಮತ್ಸ್ಯಾವತಾರವು ಎರಡು ಬಾರಿ ಆಗಿರವುದು ಎರಡನ್ನೂ ಸೇರಿಸಿ ಇಲ್ಲಿ ಸ್ತುತಿಸಿರುವರು .

ಎರಡನೇಯ ಶ್ಲೋಕದಲ್ಲಿ ಹಯತುಂಡಾಕೃತೇ ! ಎಂದು ಹಯಗ್ರೀವರೂಪವನ್ನು  ಸಂಭೋದಿಸಿ ಹಯಗ್ರೀವಾಸುರನ ಸಂಹಾರವನ್ನು ಹೇಳಿರುವರು ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದು ಪುರಾಣಗಳಲ್ಲಿ ಇದೆ .


ಮಧುಕೈಟಭರು ವಾಯುದೇವರ ಆವೇಶದಿಂದ ದರ್ಪಿಷ್ಠರಾಗಿ ನೀರಿನಲ್ಲಿ ಬೆಳೆದರು .ಬ್ರಹ್ಮದೇವರ ವರದಿಂದ ಅವಧ್ಯರಾದ  ಆ ದೈತ್ಯರು ವೇದಸಮೂಹವನ್ನೇ ಅಪಹರಿಸಿದರು . ಆಗ ಶ್ರೀಹರಿ ಹಯಗ್ರೀವ ರೂಪವನ್ನು ಧರಿಸಿ ಕೈಗಳಿಂದಲೇ ಅವರನ್ನು ಹೊಡೆದು ಸಂಹರಿಸಿದ .


ತ್ವಯಾ ಪುರಾಕರ್ಣ ಪುಟಾದ್ ವಿನಿಸೃತೌ ಮಧುಕೈಟಭಾಖ್ಯೌ |

ಪ್ರಭಂಜನಾವೇಶವಶಾತ್ ತ್ವದಾಜ್ಞಯಾ

ಬಲೋದ್ಧ ತಾವಶು ಜಲೇಭ್ಯವರ್ಧತಾಮ್ ||


ತ್ವದಾಜ್ಞಯಾ ಬ್ರಹ್ಮವರಾವಧ್ಯೌ

ಚಕ್ರೀಡಷಾಸಂಭವಯಾ ಮುಖೋದ್ಗಾತಾನ್ |

ಸ್ವಯಂ ಭೂವೋ ವೇದ ಗಣಾನಪಾರ್ಷತಾಂ

ತದಾಭವಸ್ತ್ವಂ ಹಯಶೀರ್ಷ ಈಶ್ವರಃ ||


ಆಹೃತ್ಯ ವೇದಾನುಖಿಲಾನ್ ಪ್ರದಾಯ 

ಸ್ವಯಂಭುವೇ ತೌ ಚ ಜಘಂಥ ದಸ್ಯೂ |


 ಮಹಾಬಾರತ ತಾತ್ಪರ್ಯನಿರ್ಣಯ 3-58 ,59,60 


ಹೀಗೆ ಮಧುಕೈಟಭರ ಸಂಹಾರ ಹಯಗ್ರೀವರೂಪದಿಂದಲೂ ಹಯಗ್ರೀವಾಸುರನ ಸಂಹಾರ ಮತ್ಸ್ಯರೂಪದಿಂದ ಆಗಿರುವುದೆಂದು ಉಲ್ಲೇಖವಿದೆ .ಆದರೆ ಎರಡೂ ರೂಪಗಳಿಂದಲೂ ಆಗಿರುವ ಕಾರ್ಯ ವೇದಗಳನ್ನು ಸಂರಕ್ಷಿಸಿ ಬ್ರಹ್ಮದೇವರಿಗೆ ನೀಡಿರುವುದು . ಈ ರೀತಿ ಎರಡೂ ರೂಪಗಳಲ್ಲಿಯೂ ಸಮಾನ ಕಾರ್ಯ . ಮತ್ತು  ಹಯಗ್ರೀವ ಆರಾಧ್ಯದೈವ ಭಗವಂತನ ಎಲ್ಲ ರೂಪಗಳಿಗೂ ಅಭೇಧವಿದೆ ಎಂದು ತಿಳಿಸುವುದು ಈ ಎಲ್ಲ ಉದ್ದೇಶದಿಂದ ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವರೂಪಗಳನ್ನು ಸಂಕಲಿಸಿ ಸ್ತುತಿಸಿದ್ದಾರೆ .


ಶ್ರೀಮದ್ ಭಾಗವತದಲ್ಲಿ ಹಯಗ್ರೀವ ಅವತಾರದ ವರ್ಣನೆ


ಸತ್ರೇ ಮಮಾಸ ಭಗವಾನ್ ಹಯಶೀರ್ಷ ಏಷಃ

ಸಾಕ್ಷತ್ ಯಜ್ಞಪುರುಷಸ್ತಪನೀಯವರ್ಣಃ |

ಛಂದೋಮಯೋ ಮಖಮಯೋsಖಿಲದೇವತಾತ್ಮಾ

ವಾಚೋ ಬಭೂವುರುಶತೀಃ ಶ್ವಸತೋsಸ್ಯ ನಸ್ತಃ ||


ಸಾಕ್ಷತ್ ಯಜ್ಞಪುರುಷನಾದ ನಾರಾಯಣ ಚತುರ್ಮುಖ ಬ್ರಹ್ಮದೇವರ ಸತ್ರಯಾಗದಲ್ಲಿ ಹಯಗ್ರೀವನಾಗಿ ಅವತರಿಸಿದ ಮೂಲ ರೂಪದಲ್ಲಿ ಬಂಗಾರದಂತೆ ಅವತಾರದಲ್ಲಿ ಬೆಳ್ಳಿಯಂತೆ ಹೊಳೆಯುವ ಈ ಹಯಗ್ರೀವನೆ ವೇದಗಳಿಗೂ ಯಜ್ಞಗಳಿಗೂ ಸಕಲ ದೇವತೆಗಳಿಗೂ ಆಧಾರ . ಅವನು ಉಸಿರಾಡುವಾಗ ಮೂಗಿನಿಂದ ಅಪೌರುಷೇಯವಾದ ವೇದಗಳು ಆವಿರ್ಭಾವಗೊಂಡವು .


ತಂತ್ರಸಾರಸಂಗ್ರಹದಲ್ಲಿ ಹಯಗ್ರೀವ ಅವತಾರದ ವರ್ಣನೆ


ವಂದೇತುರಂಗವದನಂ ಶಶಿಬಿಂಬ ಸಂಸ್ಥಂ

ಚಂದ್ರಾವದಾತಮಮೃತಾತ್ಮಕರೈಃಸಮಂತಾತ್ |

ಅಂಡಂತರಂ ಬಹಿರಪಿ ಪ್ರತಿಭಾಸಯಂತಂ

ಶಂಖಾಕ್ಷ ಪುಸ್ತಕ ಸುಬೋಧಯುತಾಬ್ಜಬಾಹುಮ್ ||


ನಸ್ತೋ ಮುಖಾದಪಿ ನಿರಂತರಂ ಮುದ್ಗಿರಂತಂ

ವಿದ್ಯಾ ಅಶೇಷತ ಉತಾಬ್ಜಭವೇಶಮುಖೈಃ |

ಸಂಸೇವ್ಯಮಾನಮತಿಭಕ್ತಿಭರಾವನಮ್ರೈಃ

ಲಕ್ಷ್ಮ್ಯಾಮೃತೇನ ಸತತಂ ಪರಿಷಿಚ್ಯಮಾನಮ್ ||


ಕುದುರೆಯ ಮುಖ ಚಂದ್ರಮಂಡಲದಲ್ಲಿ ವಾಸ ಚಂದ್ರನ ಬಿಳಿಪು .ನಾಶವಿಲ್ಲದ ತನ್ನ ಕಿರಣಗಳಿಂದ ಬ್ರಹ್ಮಾಂಡದ ಒಳ ಹೊರಗೆ ಬೆಳಗುತಿದ್ದಾನೆ .ಶಂಖ ಅಕ್ಷಮಾಲೆ ,ಪುಸ್ತಕ ಮತ್ತು ಜ್ಞಾನಮುದ್ರೆಗಳನ್ನು ಧರಿಸಿದ ಕಮಲದಂತಹ ನಾಲ್ಕು ಕೈಗಳು .


ಮೂಗಿನಿಂದಲೂ ಬಾಯಿಯಿಂದಲೂ ನಿರಂತರವಾಗಿ ಸಕಲವಿದ್ಯೆಗಳನ್ನು ಉಚ್ಚರಿಸುತ್ತಾನೆ .ಅತಿಶಯವಾದ ಭಕ್ತಿಯಿಂದ ಬಾಗಿದ ಬ್ರಹ್ಮರುದ್ರಾದಿಗಳಿಂದ ಸೇವಿಸಲ್ಪಡುತ್ತಿದ್ದಾನೆ .ಲಕ್ಷ್ಮೀದೇವಿ ಅಮೃತಾಭಿಷೇಕವನ್ನು ಮಾಡುತ್ತಿದ್ದಾಳೆ .ಇಂತಹ ಹಯಗ್ರೀವರೂಪವನ್ನು ನಮಿಸುತ್ತೇನೆ .


ಸುಮಧ್ವ ವಿಜಯ ಮಹಾಕಾವ್ಯದಲ್ಲಿ ಹಯಗ್ರೀವ ಅವತಾರದ ವರ್ಣನೆ


ಚತುರಾನನಾಯ ಚತುರಃ ಪುರಾಽಽಗಮಾನ್ ಪ್ರದದಾವಸಾವನಿಮಿಷೇಶ್ವರಃ ಪ್ರಭುಃ |

ವಿನಿಹತ್ಯ ಹಿ ಶ್ರುತಿಮುಷಂ ಪುರಾತನಮ್ ವಪುಷೋದ್ಧತಂ ಹಯಮುಖೇನ ಸದ್ರಿಪುಮ್ ||


ಸಜ್ಜನ ಶತ್ರುವಾದ ವೇದಗಳ ಕಳ್ಳನಾದ ಮಧು ಕೈಟಭ ಎಂಬ ದೈತ್ಯರು ವೇದಗಳನ್ನು ಕದ್ದಿದ್ದರು .ಆಗ ಭಗವಂತನು ಕುದುರೆಯ ಮುಖದ ಹಯಗ್ರೀವರೂಪವನ್ನು ಧರಿಸಿ ಆ ದೈತ್ಯರನ್ನು ಸಂಹರಿಸಿ ಚತುರ್ಮುಖ ಬ್ರಹ್ಮದೇವರಿಗೆ ನಾಲ್ಕು ವೇದಗಳನ್ನು ನೀಡಿದನು .


ಮತ್ಸ್ಯರೂಪದಿಂದ ಹಯಗ್ರೀವಾಸುರನನ್ನೂ ಹಯಗ್ರೀವರೂಪದಿಂದ ಮಧು ಕೈಟಭರನ್ನೂ ಶ್ರೀಹರಿಯು ಸಂಹರಿಸಿ. ವೇದಗಳನ್ನೂ 

ಬ್ರಹ್ಮದೇವರಿಗಿತ್ತನು.


 ನಾರಾಯಣ ಪಂಡಿತಾಚಾರ್ಯರು ಒಂದೇ ಶ್ಲೋಕದಲ್ಲಿ ಮತ್ಸ್ಯ ಹಯಗ್ರೀವ ಅವತಾರಗಳನ್ನು ವರ್ಣಿಸಿದ್ದಾರೆ .ಮೊದಲನೇ ಶ್ಲೋಕದ ವಿವರಣೆಯಲ್ಲಿ ಈ ಇದೆ ಶ್ಲೋಕಕ್ಕೆ ಮತ್ಸ್ಯಾವತಾರ ಪರವಾದ ಅರ್ಥವನ್ನು ಕೊಡಲಾಗಿದೆ .

          - ಮಧ್ವವಿಜಯ 8-14


ಶ್ರೀರುಗ್ಮೀಣೀಶವಿಜಯ ಮಹಾಕಾವ್ಯದಲ್ಲಿ ಹಯಗ್ರೀವಾವತರದ ವರ್ಣನೆ


ಮಧುರಯಾ ಜಿತದಾನವ ಸದ್ಗಿರಾ

ವಶನಿಕಾಯ ಗತಾಗಮಸಿಧಕಃ |

ನರತುರಂಗಮಹರ್ಷಕದಾಕೃತೇ

ಭವಗತಾವಗತಾಖಿಲ ಪಾಹಿ ನಃ ||


ಮಧು ಎಂಬ ದಾನವನ ವೇಗಕ್ಕೆ ವಶನಾಗದ ದಾನವರ ಸಭೆ ಎಂಬ ಬೆಟ್ಟದ ನಾಶಕ್ಕೆ ವಜ್ರದೇಹಿಯಾದ ದಾನವರಿಂದ ಅಪಹರಿಸಲ್ಪಟ್ಟ ವೇದಗಳನ್ನು ಮರಳಿ ತಂದಿತ್ತ ಹಯಗ್ರೀವ ಎಂಬ ಆನಂದಕರವಾದ ರೂಪದ ನಿತ್ಯಮುಕ್ತನಾದ ಎಲ್ಲವನ್ನೂ ಬಲ್ಲ ಶ್ರೀಹರಿಯೇ ! ನಮ್ಮನ್ನು ಪಾಲಿಸು .

        ರುಗ್ಮೀಣೀಶವಿಜಯ 17-8


ವೇದಾಧ್ಯಯನದಿಂದ ಪರಮಾತ್ಮನ ಮಹಿಮೆಯನ್ನು ತಿಳಿದಾಗ ಮೋಕ್ಷವು ದೊರೆಯುತ್ತದೆ ಎಂದು ಶ್ರುತಿವಾಕ್ಯವಿದೆ ಅದಕ್ಕೆ ವೇದಗಳನ್ನು ಅಪಹರಿಸಿದ ದೈತ್ಯರ ಸಂಹಾರವನ್ನು ಮಾಡಿ ಚತುರ್ಮುಖ ಬ್ರಹ್ಮದೇವರಿಗೆ ವೇದಗಳನ್ನು ನೀಡಿದ ಮತ್ಸ್ಯಹಯಗ್ರೀವರೂಪಗಳನ್ನೇ ಶ್ರೀವಾದಿರಾಜ ಗುರುಸಾರ್ವಭೌಮರು ದಶಾವತಾರದ ಎರಡನೇ ಶ್ಲೋಕದಲ್ಲಿ ಸ್ತುತಿಸಿದ್ದಾರೆ .

            || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ.... (recd in whatsapp)

***




No comments:

Post a Comment