SEARCH HERE

Friday 1 February 2019

ದೇವರ ದೀಪದ ವಿಚಾರಗಳು devara deepa lamp info



ದೀಪದ ಮಹತ್ವ – 1 

ದೀಪದ ವಿಚಾರಧಾರೆ 💓💚
.                  🔯🔱🔯

ದೇವರ ಮನೆಯಲ್ಲಿ ಯಾವಾಗಲೂ ದೀಪವಿರಬೇಕು ದೇವರನ್ನು ನಂದಾ ದೀಪದಲ್ಲೇ ನೋಡಬೇಕು..ಸದಾ ದೇವರ ಮನೆಯಲ್ಲಿ ವಿದ್ಯುತ್ ದೀಪ ಢಾಳಾಗಿ ಹಚ್ಚಿಡಬಾರದು ಅಶಾಂತಿ ಇರುತ್ತದೆ ಮನೆಯಲ್ಲಿ...
ನಂದಾದೀಪ" ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..ನಂದಾದೀಪ ದೇವರ ಮನೆಯಲ್ಲಿ ಇದ್ದರೆ ಅಲಕ್ಷ್ಮೀ ಕಾಲು ಹಾಕುವುದಿಲ್ಲ..ಸದಾ ದೇವರ ಮುಂದೆ ದೀಪ ಇರಬೇಕು ನಂದದಂತೆ ನೋಡಿಕೊಳ್ಳಬೇಕು ಅದೇ ನಂದಾದೀಪ ಇದರಲ್ಲಿ ಲಕ್ಷ್ಮೀ ನಾರಾಯಣ ಸನ್ನಿಧಾನ ವಿರುತ್ತದೆ.. ಮನೆಯಲ್ಲಿ ಲಕ್ಷ್ಮೀ ವಾಸ ವಿರುತ್ತದೆ....

"ನಂದಾದೀಪ"ಗಳು ಪೂರ್ವದಿಕ್ಕಿನಲ್ಲಿ ಹಚ್ಚಿದರೆ : ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರಯುವುದು, ಮಾಟ, ಮಂತ್ರ ದೋಷ, ವಾಸ್ತುದೋಷ ನಿವಾರಣೆಯಾಗುತ್ತದೆ..ಮಕ್ಕಳ ಅಭಿವೃದ್ಧಿ ಆಗುತ್ತದೆ... ಪೂರ್ವ ಅಭಿವೃದ್ಧಿಯ ಸಂಕೇತ

 #ಪಶ್ಚಿಮ" ದಿಕ್ಕಿಗೆ ದೀಪದ ಮುಖಮಾಡಿಹಚ್ಚಿದರೆ : ಕಲಹ ಹೆಚ್ಚು, ನೆಮ್ಮದಿ ಕಮ್ಮಿ, ಮನೆಯ ಯಜಮಾನರು , ಮಕ್ಕಳ ಅಭಿವೃದ್ಧಿ ಕುಂಠಿತವಾಗುತ್ತದೆ, ಸೋಮಾರಿಗಳಾಗುತ್ತಾರೆ.. ಪಶ್ಚಿಮ ಮುಳುಗುವ ದಿಕ್ಕು ಅಂತ ಹೇಳುತ್ತೇವೆ ಅಂದರೆ ಕತ್ತಲೆ 

#ದಕ್ಷಿಣ" ದಿಕ್ಕಿಗೆ  ದೀಪದ ಮುಖಮಾಡಿ ಹಚ್ಚಿದರೆ : ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತವೆ.. ಯಮನ ದಿಕ್ಕು  ಅಶ್ವಯುಜ ತ್ರಯೋದಶಿ ದಿವಸ ಮಾತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಚ್ಚಬೇಕು..

"#ಉತ್ತರದಿಕ್ಕಿಗೆ ದೀಪದ ಮುಖಮಾಡಿ  ಹಚ್ಚಿದರೆ : ಸ್ವಲ್ಪ ಈಶಾನ್ಯ ಮೂಲೆಗೆ ತಿರುಗಿಸಿ ಹಚ್ಚಿದರೆ :  ಶ್ರೀ ಲಕ್ಷ್ಮೀ ಕಟಾಕ್ಷವಾಗಿ ಸದಾ ನೆಮ್ಮದಿಯಿಂದ ಕೂಡಿರುತ್ತದೆ....ಕೆಲವು ವಾಸ್ತು ದೋಷಗಳು ಪರಿಹಾರವಾಗುತ್ತವೆ

ಶ್ರೀ ಲಕ್ಷ್ಮೀ ಅಭಿವೃದ್ಧಿಯಾಗಿ ಮನೆಯು ಅಭಿವೃದ್ಧಿ ಆಗುತ್ತದೆ..

ಶುಭಕಾರ್ಯಗಳು ಬೇಗ ನಡೆಯುತ್ತವೆ...
 #ದೇವರಮುಂದೆನಂದಾದೀಪಉರಿಯುತ್ತಿರಬೇಕೇ ?

         #ಹೌದುಸದಾಉರಿಯುತ್ತಿರಬೇಕು.

ದೀಪಮೂಲೇ ಸ್ಥಿತೋ ಗೌರೀ ದೀಪಮಧ್ಯೇ ಸರಸ್ವತೀ |
ದೀಪಾಗ್ರೇ ವಸತೇ ಲಕ್ಷ್ಮೀ ಪ್ರಾತ:/ಸಂಧ್ಯಾ ಜ್ಯೋತೀ ನಮೋಸ್ತುತೇ |
      ಇದು ದೇವರ ಮುಂದೆ ಧೀಪ ಹಚ್ಚಿ ಕೈ ಮುಗಿದು ಹೇಳಬೇಕಾದ ಮಂತ್ರ. 'ದೇವರ ಮುಂದೆ ಹಚ್ಚಿದ ನಂದಾದೀಪದ ಮೂಲದಲ್ಲಿ ಗೌರಿಯೂ, ಮಧ್ಯ ಬಾಗದಲ್ಲಿ ಸರಸ್ವತಿಯೂ, ಅಗ್ರಬಾಗದಲ್ಲಿ ಲಕ್ಷ್ಮಿಯೂ ನೆಲೆಸಿರುತ್ತಾರೆ. ಅಂತಹ ಪ್ರಾತ ಜ್ಯೋತಿ ಅಥವಾ ಸಂಧ್ಯಾಜ್ಯೋತಿಗೆ ಈ ಶ್ಲೋಕವನ್ನು ಹೇಳಿ ನಮಸ್ಕರಿಸಬೇಕು.

"ದೀಪಜ್ವಲಕಾ ಸರ್ವ ಪಾಪಂ ಜ್ವಲಯತಿ |"
ದೀಪದ ಜ್ವಾಲೆಯು ಎಲ್ಲ ಪಾಪವನ್ನು ಸುಟ್ಟುಹಾಕುತ್ತದೆ.
 #ನಂದಾದಿಪ  "ನಂದಾ" ಎಂದರೆ ಐಷ್ವರ್ಯ, ಸಂಪತ್ತು. |
"ದೀಪ" ಎಂದರೆ ಬೆಳಕು. |
"ನಂದಾದೀಪ" ಸಂಪತ್ತಿನ ಬೆಳಕು.|
      
"ದೇವನಿರ್ವಾಪಯೇದ್ದೀಪಂ ಕದಾಚಿದಪಿ ಯತ್ನತ: |
ಸತತಂ ಲಕ್ಷಣೋಪೇತಂ ದೇವಾರ್ಥಮುಪಕಲ್ಪಿತಂ ||"

        ಸತತವಾಗಿ ದೇವರುಗಳು ಲಕ್ಷಣವಾಗಿ ಕಾಣಲು ದೇವಸನ್ನಿದಿಯಲ್ಲಿ ಹಚ್ಚಿರುವ ದೀಪವನ್ನು ಪ್ರಯತ್ನಪೂರ್ವಕ ನಂದಿಸಬಾರದು.

       ದೀಪ ಹಚ್ಚಿಟ್ಟಾಗ ದೀಪಮೂಲ ಮತ್ತೂ ದೀಪಮಧ್ಯ ಸ್ಥಿರವಾಗಿದ್ದು ದೀಪಾಗ್ರ ಆಚೆ ಈಚೆ ಅಲುಗಾಡುತ್ತಿರುತ್ತದೆ. ಇದರರ್ಥ ಸರ್ವ ರಕ್ಷಕಿ ಗೌರಿ ಮತ್ತೂ ವಿದ್ಯಾಧಿಪತಿ ಸರಸ್ವತಿ ಆ ಮನೆಯಲ್ಲಿ ಸ್ಥಿರವಾಗಿದ್ದರೂ ಅಗ್ರಬಾಗದಲ್ಲಿರುವ ಲಕ್ಷ್ಮಿ ಚಂಚಲೆಯೋಗಿರುತ್ತಾಳೆ ಎಂದರ್ಥ. ಆದ್ದರಿಂದ ಮನೆಯಲ್ಲಿರುವ ದೇವರ ಕೋಣೆಯೊಳಗೆ ಗಾಳಿ, ಗಾಳಿಯೊಟ್ಟಿಗೆ ಅಲಕ್ಷ್ಮಿ (ಕೀಳು ದೇವತೆ) ಪ್ರವೇಶಿಸದಂತೇ ಭದ್ರಸ್ಥಾನದಲ್ಲಿರಬೇಕು. 

 "ಹಿತ್ತಾಳೆ" ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ..?

೧. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ವುತ್ತಾರೆಯೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಜಾಸ್ತಿಯಾಗುತ್ತದೆ, ಮನೆಗೆ ದೈವಬಲ ಬರುವುದು..

೨. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪ ಹಚ್ಚಿ ದೇವರನ್ನು ಪೂಜಿಸುತ್ತಾರೋ ಆ ಮನೆಯಲ್ಲಿ ರೋಗಭಾದೆಗಳು, ಅಪಮೃತ್ಯುಗಳು ಬರುವುದಿಲ್ಲ..!

೪. ಯಾರ ಮನೆಯಲ್ಲಿ ಸಂಕಲ್ಪ ಸಮೇತ ಹಿತ್ತಾಳೆ ದೀಪವನ್ನು ಹಚ್ಚಿ, ದೀಪಕ್ಕೆ ಪೂಜಿಸಿ, ದೇವರ ಪೂಜೆ ಮಾಡುತ್ತಾರೋ, ಆ ಮನೆಯಲ್ಲಿ ನ ಸರ್ವ ವಿವಾಹ ದೋಷ ನಿವಾರಣೆಯಾಗಿ, ವಿಘ್ನಗಳು ನಿವಾರಣೆಯಾಗಿ ವಿವಾಹ ಯೋಗವು ಬರುತ್ತದೆ..!

೬. ಮಂತ್ರಸಿದ್ಧಿ ಬೇಕೆನ್ನುವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು..!
(ದೇವರ ದೀಪಗಳು ಪುಸ್ತಕದಿಂದ ಸಂಗ್ರಹ)
ಶುಭವಾಗಲಿ..

#ಶುಭದೀಪದ_ಲಕ್ಷಣಗಳು..

೧. ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ..

೨. ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ, ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ..
ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತವೆ..
ಶತ್ರುಗಳು ಜಾಸ್ತಿ.

೩.ದೀಪದ ಸ್ತಂಭವು ಎರಡೂ ಒಂದೇ ಸಮನಾಗಿರಬೇಕು,
ಒಂದು ಚಿಕ್ಕದು, ಒಂದು ದೊಡ್ಡದು ಇರಬಾರದು, 
ಹೀಗೆ ಇದ್ದರೆ, ಆ ಮನೆಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಇರೋದಿಲ್ಲ..
ಮಕ್ಕಳು ದಾರಿ ತಪ್ಪುವರು..

೪. ದೀಪದ ಸ್ತಂಭ ಭಿನ್ನವಾಗಿದ್ದರೆ, ಒಡೆದಿದ್ದರೆ, - ಆ ಮನೆಯಲ್ಲಿ ಇರುವವರಿಗೆ
ಕೆಲಸ ಕಾರ್ಯಗಳಲ್ಲಿ ತೀವ್ರ ಅನಾನುಕೂಲವಾಗಿ, ನಿತ್ಯ ರೋಗ ಭಾದೆ ಜಾಸ್ತಿಯಾಗಿ, ವೈದ್ಯರಿಂದಲೂ ವಾಸಿ ಮಾಡಲಿಕ್ಕೆ ಆಗದ ಖಾಯಿಲೆಯಿಂದ ನರಳುತ್ತಾರೆ.., ಮನೆಯಲ್ಲಿ ಇರುವವರಿಗೆ ಶಾಂತಿ ನೆಮ್ಮದಿ ಇರುವುದಿಲ್ಲ ..

೫. ದೀಪದ ಸ್ತಂಭವು ಬೆಸುಗೆ ಮಾಡಿದ್ದರೆ, ಮನೆಯಲ್ಲಿ ಇರುವವರಿಗೆ ರಕ್ತಹೀನತೆ, B.P ಖಾಯಿಲೆಯು , ಚರ್ಮವ್ಯಾಧಿಗಳು ಜಾಸ್ತಿಯಾಗುತ್ತದೆ..

ನಂದಾದೀಪ
ದಿನವಿಡಿ ನoದಿ ಹೋಗದೆ ದೇವರನ್ನು ಬೆಳಗುವ ದೀಪವೇ ನoದಾದೀಪ.
“ನoದ” ಎಂದರೆ “ಭಗವಂತ” (ಅನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ)
ನಂದಯತಿ ಭಕ್ತಾನ್ ಇತಿನಂದಃ |
" ನಂದಾದೀಪ" ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..!
"ನಂದಾದೀಪ"ಗಳು ಪೂರ್ವದಿಕ್ಕಿನಲ್ಲಿ ಹಚ್ಚಿದರೆ : ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರಯುವುದು, ಮಾಟ, ಮಂತ್ರ ದೋಷ, ವಾಸ್ತುದೋಷ ನಿವಾರಣೆಯಾಗುತ್ತದೆ..!
" ಪಶ್ಚಿಮ" ದಿಕ್ಕಿನಲ್ಲಿ ಹಚ್ಚಿದರೆ : ಕಲಹ ಹೆಚ್ಚು, ನೆಮ್ಮದಿ ಕಮ್ಮಿ, ಮನೆಯ ಯಜಮಾನರು , ಮಕ್ಕಳ ಅಭಿವೃದ್ಧಿ ಕುಂಠಿತವಾಗುತ್ತದೆ, ಸೋಮಾರಿಗಳಾಗುತ್ತಾರೆ..
"ದಕ್ಷಿಣ" ದಿಕ್ಕಿನಲ್ಲಿ ಹಚ್ಚಿದರೆ : ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತವೆ..
"ಉತ್ತರ ದಿಕ್ಕಿನಲ್ಲಿ" ಹಚ್ಚಿದರೆ : ಸ್ವಲ್ಪ ಈಶಾನ್ಯ ಮೂಲೆಗೆ ತಿರುಗಿಸಿ ಹಚ್ಚಿದರೆ :  ಶ್ರೀ ಲಕ್ಷ್ಮೀ ಕಟಾಕ್ಷವಾಗಿ ಸದಾ ನೆಮ್ಮದಿಯಿಂದ ಕೂಡಿರುತ್ತದೆ. ಶ್ರೀ ಲಕ್ಷ್ಮೀ ಅಭಿವೃದ್ಧಿಯಾಗಿ ಮನೆಯು ಅಭಿವೃದ್ಧಿ ಆಗುತ್ತದೆ.  ಶುಭಕಾರ್ಯಗಳು ಬೇಗ ನಡೆಯುತ್ತವೆ.

ದೀಪದ ಅರ್ಥ

ದೀಪ್ಯತೇ ದೀಪಯತಿ  ವಾ ಸ್ವo ಪರಂ ಚೇತಿ ದೀಪಃ |
ಭಗವಂತನನ್ನು ತೋರಿಸುವ ವಸ್ತುವೇ ದೀಪ

ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್ |
ಯಸ್ಯ ತಿಷ್ಠತಿ ಗೃಹೇ ದೀಪಃ  ತಸ್ಯ ನಾಸ್ತಿ ದರಿದ್ರತಾ ||

ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುoದೆ 
ಮುoದಿನ ದಿನ ಸೂರ್ಯೋದಯವಾಗುವವರೆಗೂ
ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು.

ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿoದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು.

ಆತ ಏವ ಶಲಾಕಾಂ ತತ್ರ ಸ್ಥಪಯಂತಿ |

ದೀಪದಲ್ಲಿರುವ ದೇವತೆಗಳು

ಭೂದೇವಿಯರು ಪ್ರಣತಿಯೊಳಗೆ, ಲಕ್ಷ್ಮೀದೇವಿಯರು ಎಣ್ಣೆಯೊಳಗೆ ಶೇಷದೇವರು ಬತ್ತಿಯೊಳಗೆ, ವಾಯುದೇವರು  ಪ್ರಕಾಶದೊಳಗೆ, ರುದ್ರದೇವರು ಕಪ್ಪಿನೊಳಗೆ,
ಶಚಿಪತಿ ಇಂದ್ರದೇವರು ದೀಪಕ್ಕೆ  ಅಭಿಮಾನಿ.

ದೀಪ ಹಚ್ಚುವಾಗ ಹೇಳಬೇಕಾದ ಮಂತ್ರ

ದೀಪ ದೇವಿನಮಸ್ತುಭ್ಯಂ ಮಂಗಲೇ ಪಾಪನಾಶಿನೀ |
ಆಜ್ಞಾನಾಂಧಸ್ಯ ಮೇ ನಿತ್ಯಂ ಸುಜ್ಞಾನಂದೇಹಿ ಸುಪ್ರಭೆ ||


ದೀಪದಲ್ಲಿರಬೇಕಾದ ಬತ್ತಿಯ ಸಂಖ್ಯೆ


ದೀಪದಲ್ಲಿ ಎರಡು ಬತ್ತಿ ಗಳಿರಲೇಬೇಕು. ಒಂದು ಬತ್ತಿ ಇಂದ ದೀಪ ಹಚ್ಚಬಾರದು. ಹೊಬತ್ತಿಯನ್ನು ಎರಡು ಇಟ್ಟಿರಬೇಕು.


ದೀಪಕ್ಕೆ ಉಪಯೋಗಿಸುವ ಎಣ್ಣೆ


ಗವಾಜ್ಯಂ ತಿಲತೈಲಂ ಚ ಕುಸುಮೈಶ್ಚ  ಸುವಾಸಿತಮ್ |
ಸಂಯೋಜ್ಯ ವರ್ತಿನಾ ದೀಪಂ ಭಕ್ತ್ಯಾ  ವಿಷ್ಣೋರ್ನಿವೇದಯೇತ್ ||


ಶ್ರೀವಿಷ್ಣುವಿಗೆ ದೀಪವನ್ನು  ಹಚ್ಚುವಾಗ(ತುಪ್ಪ) ತಿಲತೈಲ (ಎಳ್ಳೆಣ್ಣೆ)ವಾಗಲಿ ಹೂವುಗಳಿಂದ ಸುವಾಸಿತಗೊಳಿಸಿ ನಂತರ ಬೆಳಗಬೇಕು ಎಂಬ ಪ್ರಮಾಣ ವಾಕ್ಯವು ಘೃತದೀಪ, ತೈಲದೀಪವು ವಿಷ್ಣುಲೋಕ ಪ್ರಾಪ್ತಿಗೆ ಕಾರಣವೆನ್ನಲಾಗಿದೆ.ದೀಪಕ್ಕಾಗಿ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರಉಪಯೋಗಿಸಬೇಕು. ಉಳಿದ ಎಣ್ಣೆಗಳು ವರ್ಜ್ಯ ಎಂದು 

‘ಅಗ್ನಿ ಪುರಾಣ’ ತಿಳಿಸಿದೆ.

ದೀಪಸ್ಥಂಭದಲ್ಲಿರುವ ದೇವತೆಗಳು

ದೀಪಸ್ಥoಭದಲ್ಲಿ 27 ನಕ್ಷತ್ರದೇವತೆಗಳು ಇದ್ದಾರೆ  ನಾಳದಲ್ಲಿ ವಾಸುಕಿ ದೇವತೆ, ಪಾದದಲ್ಲಿ ಚಂದ್ರಸೂರ್ಯರು, ದೂಪ ದೀಪ ಪಾತ್ರದಲ್ಲಿ ಅಗ್ನಿದೇವತೆ.

ದೀಪಪಾತ್ರಾದಿದೈವತ್ಯಂ ಮುಖೇ ಪಾವಕ ಮುಚ್ಯಂತೇ |
ದಂಡಮೀಶ್ವರದೈವತ್ಯಂ ಪಾದಂ ಪ್ರಜಾಪತಿಸ್ತಥಾ ||


ದೀಪಸ್ಥoಭಗಳಲ್ಲಿ ಅಗ್ರದಲ್ಲಿಯ ಅಗ್ನಿಯು, ದಂಡದಲ್ಲಿ ರುದ್ರನು, 

ಬುಡದಲ್ಲಿ ಬ್ರಹ್ಮದೇವನು ಇರುವರು.
******

ದೀಪದ ಮಹತ್ವ – 2 


ಸ್ತ್ರೀಯರು ದೀಪಹಚ್ಚುವಾಗ ಹೇಳಬೇಕಾದಸ್ತುತಿ 


ಆನಂತಾನಂತ ಗುಣಪೂರ್ಣನು ಆದಂತ,ಆನಂತೋತ್ತಮನು ಬ್ರಹ್ಮಾಂಡೋತ್ಪಾಕನೂ ಆದ ನೀನು ನಮ್ಮನ್ನು  ನಿಮ್ಮಿತ್ತಮಾತ್ರ ಇಟ್ಟಿದ್ದೀ ಪಾತ್ರೆಯಲ್ಲಿ ಬ್ರಹ್ಮದೇವರ ಸನ್ನಿಧಾನ , ತೈಲದಲ್ಲಿ ನಿಮ್ಮ ಕಾoತೇ ಲಕ್ಷ್ಮಿಯ ಸನ್ನಿಧಾನ, ಬತ್ತಿಯಲ್ಲಿ ವಾಸುದೇವ ಸಂಕರ್ಷಣನ ಸನ್ನಿಧಾನ, ಬಿಳುಪಿನಲ್ಲಿ ವಾಯುದೇವರ ಸನ್ನಿಧಾನ, ಕೆಂಪಿನಲ್ಲಿ ಇಂದ್ರದೇವರ ಸನ್ನಿಧಾನ, ಕಪ್ಪಿನಲ್ಲಿ ರುದ್ರದೇವರ ಸನ್ನಿಧಾನ, ಇಷ್ಟು ಮಂದಿ ತುಂಬಿರುವ, ಆಜ್ಞಾನ ನಾಶಮಾಡುವ ಈ ದೀಪ ನಿಮ್ಮ ಪಾದಕ್ಕೆ ಸಮರ್ಪಣೆ, ತೈಲಕ್ಕೂ ಕಾರ್ಯಕ್ಕೂ ಲಕ್ಷ್ಮೀದೇವೀ ಸನ್ನಿಧಾನ, ಬತ್ತಿಯಲ್ಲಿ ಶ್ರೀಕೃಷ್ಣ ಪರಮಾತ್ಮನಾದoಥ ಶ್ರೀಲಕ್ಷ್ಮೀನಾರಾಯಣನಸನ್ನಿಧಾನ. ಇಂಥ ಲಕ್ಷ್ಮೀನಾರಾಯಣನ ದೀಪಹಚ್ಚಿದರೆ ಬೆಳಕು,ಹಚ್ಚದಿದ್ದರೆ ಕತ್ತಲೆ ಎಂಬುವಂಥಾದ್ದು ಇಲ್ಲ. ನಿಮ್ಮ ಬೆಳಕೆ ಬೆಳಕು. ನಿಮ್ಮ ಪ್ರಕಾಶವೇ ಕೋಟಿ ಸೂರ್ಯಪ್ರಕಾಶ. ನಿಮ್ಮ ಕಾಂತಿಯೇ ಕಾಂತಿ. ಎನ್ನ ಹೃದಯದಲ್ಲಿ ಆಜ್ಞಾನ ಅಂಧಾಕಾರ ತುಂಬಿದ್ದೀರಿ.ಈ ಆಜ್ಞಾನ ಅಂಧಕಾರ ಬಿಡಿಸಿ ಜ್ಞಾನ ಭಕ್ತಿ ವೈರಾಗ್ಯ ಕೊಟ್ಟು  ರಕ್ಷಿಸಬೇಕೆಂದು ಹಚ್ಚುವಂತಹ ಈ ದೀಪ ”ಭೀಮೇಶ ವಿಠಲನಿಗೆ ಅರ್ಪಿತ”
********


ದೀಪದ ಮಹತ್ವ – 3


ದೀಪಹಚ್ಚುವ ಸ್ಥಳಗಳು


ಸ್ಥಂಭೇ ಚ ಶಿಖರೇ ದೀಪಾಃ ಪ್ರಾಂಗಣೆ ಚತ್ವರೇ ತಥಾ |

ವೃಂದಾವನೇ ಧರ್ಮಶಾಲಾವ್ಯಾಖ್ಯಾಧ್ಯಯನಸದ್ಮನಿ ||

ಮನೆಯ ದ್ವಾರಗಳಲ್ಲಿ, ದೇವಾಲಯ,ಕಂಭಗಳು, ದೇವಾಲಯದ ಶಿಖರ, ಮನೆಯ ಅಂಗಳ, ಚೌಕಗಳು, ತುಲಸೀ ವೃಂದವನ,ಪುರಾಣ ಪ್ರವಚನ ನಡೆಯುವ ಸ್ಥಳ, ಗೋಹಟ್ಟಿ, ವೇದಾಧ್ಯಯನ ನಡೆಯುವ ಸ್ಥಳ, ಅಶ್ವತ್ಥವನ, ಧಾತ್ರೀ(ನೆಲ್ಲಿ)ವನ, ಮಠಗಳಲ್ಲೀಯೂ  ದೀಪಗಳ ನೀಡಬಹುದು. ಈ ಸ್ಥಳಗಳಲ್ಲಿ ಲಕ್ಷ್ಮಿದೇವಿವಾಸವಾಗಿರುತ್ತಾಳೆ.

ದೀಪದ ದಿಕ್ಕು

ಆಯುರ್ಧಃ ಪ್ರಾಙ್ಮಖೋ ದೀಪೋ ಧನದಃ ಸ್ಯಾದುದಙ್ಮುಖಃ |
ಪ್ರತ್ಯಙ್ಮಖೋ ದುಃಖ ದೋsಸೌ ಹಾನಿದೋ ದಕ್ಷಿಣಾಮುಖಃ ||

ದೀಪವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಅಭಿಮುಖವಾಗಿ ಉರಿಯುತ್ತಿರಬೇಕು. ದಕ್ಷಿಣ ಮುಖವೂ ಹಾನಿವುಂಟುಮಾಡುತ್ತದೆ. ಪೂರ್ವಾಭಿಮುಖವಾದ ದೀಪವು ಆಯುರಾಭಿ-ವೃದ್ಧಿಯನ್ನು, ಪಶ್ಚಿಮ ದಿಕ್ಕು ದುಃಖವನ್ನುನೀಡುತ್ತದೆ. ಉತ್ತಾರಾಭಿಮುಖವಾದದ್ದು ಸಂಪತ್ತನ್ನು ನೀಡುತ್ತದೆ. ಆದ್ದರಿಂದ ಪೂರ್ವ ಮತ್ತು ಉತ್ತರ ದಿಕ್ಕುಗಳು ದೀಪ ಬೆಳಗಲು ಶ್ರೇಷ್ಠವಾಗಿವೆ.

|| ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್ ||
|| ಶ್ರೀಕೃಷ್ಣಾರ್ಪಣಮಸ್ತು ||
*******


ಶುಭದೀಪದ ಲಕ್ಷಣಗಳು..


೧. ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ..
೨. ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ, ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ..
ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತವೆ..
ಶತ್ರುಗಳು ಜಾಸ್ತಿ.
೩.ದೀಪದ ಸ್ತಂಭವು ಎರಡೂ ಒಂದೇ ಸಮನಾಗಿರಬೇಕು,
ಒಂದು ಚಿಕ್ಕದು, ಒಂದು ದೊಡ್ಡದು ಇರಬಾರದು,
ಹೀಗೆ ಇದ್ದರೆ, ಆ ಮನೆಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಇರೋದಿಲ್ಲ..
ಮಕ್ಕಳು ದಾರಿ ತಪ್ಪುವರು..
೪. ದೀಪದ ಸ್ತಂಭ ಭಿನ್ನವಾಗಿದ್ದರೆ, ಒಡೆದಿದ್ದರೆ, - ಆ ಮನೆಯಲ್ಲಿ ಇರುವವರಿಗೆ
ಕೆಲಸ ಕಾರ್ಯಗಳಲ್ಲಿ ತೀವ್ರ ಅನಾನುಕೂಲವಾಗಿ, ನಿತ್ಯ ರೋಗ ಭಾದೆ ಜಾಸ್ತಿಯಾಗಿ, ವೈದ್ಯರಿಂದಲೂ ವಾಸಿ ಮಾಡಲಿಕ್ಕೆ ಆಗದ ಖಾಯಿಲೆಯಿಂದ ನರಳುತ್ತಾರೆ.., ಮನೆಯಲ್ಲಿ ಇರುವವರಿಗೆ ಶಾಂತಿ ನೆಮ್ಮದಿ ಇರುವುದಿಲ್ಲ ..
೫. ದೀಪದ ಸ್ತಂಭವು ಬೆಸುಗೆ ಮಾಡಿದ್ದರೆ, ಮನೆಯಲ್ಲಿ ಇರುವವರಿಗೆ ರಕ್ತಹೀನತೆ, B.P ಖಾಯಿಲೆಯು , ಚರ್ಮವ್ಯಾಧಿಗಳು ಜಾಸ್ತಿಯಾಗುತ್ತದೆ..

" ದೇವರ ದೀಪಕ್ಕೆ ಉಪಯೋಗಿಸುವ "ಎಣ್ಣೆ"ಯ ವಿಚಾರ...

೧. ದೀಪಕ್ಕೆ ಉಪಯೋಗಿಸುವ ಎಣ್ಣೆಯು ದಪ್ಪವಿದ್ದರೆ (ಹರಳೆಣ್ಣೆಯ ತರಹ) , ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಬಹಳ ನಿಧಾನವಾಗಿ ನಡೆಯುತ್ತದೆ..
೨. ದೀಪಕ್ಕೆ ಉಪಯೋಗಿಸುವ ಎಣ್ಣೆಯು ತೆಳುವಾಗಿದ್ದರೆ(ಕೊಬ್ಬರಿ ಎಣ್ಣೆ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ..
ಕಷ್ಟಗಳು ನಿವಾರಣೆಯಾಗುತ್ತದೆ ..
೩. ದೀಪಕ್ಕೆ ಉಪಯೋಗಿಸುವ ಎಣ್ಣೆಯು ಒಂದೇ ಎಣ್ಣೆಯಾಗಿದ್ದರೆ ಕೆಲಸ ಕಾರ್ಯಗಳು ಸುಸೂತ್ರವಾಗಿಯೂ, ಸುಗಮವಾಗಿಯೂ ನಡೆಯುತ್ತದೆ..
೪. ದೀಪಕ್ಕೆ ಬಳಸುವ ಎಣ್ಣೆಯು ಮಿಶ್ರವಾಗಿದ್ದರೆ , ಎಲ್ಲಾ ತರಹದ ಎಣ್ಣೆ ಮಿಶ್ರ ಆಗಿದ್ದರೆ , ಆರಂಭದಲ್ಲಿ ಶುಭಸೂಚನೆ ಕಂಡರೂ ಮಧ್ಯದಲ್ಲಿ ನಿಂತು ಹೋಗಿ, ಕೊನೆಯಲ್ಲಿ ಆದರೂ ಆಗಬಹುದು ಅಥವಾ ಆಗದೆಯೂ ಇರಬಹುದು, ಹೀಗೆ ಫಲ ಬರುವುದು..
೫ . ದೀಪದ ಎಣ್ಣೆಯು ಮಲಿನವಾಗಿದ್ದರೆ ಮನೆಯಲ್ಲಿ ಇರುವವರಿಗೆ ರೋಗಭಾದೆ ಬರುತ್ತದೆ..
೬. ದೀಪದ ಎಣ್ಣೆಯು ಕಪ್ಪಾಗಿದ್ದರೆ ಮನೆಯಲ್ಲಿ ಇರುವವರಿಗೆ ತೇಜಸ್ಸು ಕಡಿಮೆಯಾಗುತ್ತದೆ..
೭. ದೀಪದ ಎಣ್ಣೆಯು ಪರಿಮಳದ ವಾಸನೆಯಿಂದ ಕೂಡಿದ್ದರೆ ಮನೆಯಲ್ಲಿ ಅಷ್ಟೈಶ್ವರ್ಯ ಹಾಗೂ ನವನಿಧಿಗಳು ಪ್ರಾಪ್ತಿಯಾಗುತ್ತದೆ..
೮. ದೀಪದ ಎಣ್ಣೆಯನ್ನು ಕಿಲುಬಿರುವ, ಬೆಸುಗೆ ಹಾಕಿಸಿರುವ, ಭಿನ್ನವಾಗಿರುವ ದೀಪಸ್ತಂಭಕ್ಕೆ ಹಾಕಿದರೆ,
ಅನಾರೋಗ್ಯ ಸಮಸ್ಯೆ, B.P. ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ರಕ್ತದ ಖಾಯಿಲೆಗಳು ಜಾಸ್ತಿಯಾಗುತ್ತದೆ ..
೧೦. ದೀಪಕ್ಕೆ ಬಿಸಿಎಣ್ಣೆ ಅಥವಾ ಬಿಸಿತುಪ್ಪ ಹಾಕಿದರೆ, ಮನೆಯಲ್ಲಿ ಕೂಗಾಟ, ಕೋಪ ಹಠ ಜಾಸ್ತಿಯಾಗುತ್ತದೆ ..
೧೧. ದೀಪದ ಎಣ್ಣೆಯು ತಂಪಾಗಿದ್ದರೆ ಮನೆಯಲ್ಲಿ ಶಾಂತಿ ವಾತಾವರಣ, ಇದ್ದು ಸುಖ ಸಂತೋಷ ನೆಮ್ಮದಿ ಇರುತ್ತದೆ..
೧೨. ದೀಪದ ಎಣ್ಣೆಯು ಕಲ್ಮಶವಿಲ್ಲದೆ ಎಷ್ಟು ಶುದ್ಧಿಯಾಗಿರುವುದೋ ಅಷ್ಟೂ ಶುಭಫಲ ಉಂಟಾಗುತ್ತದೆ..
ಅಂತಾ ಎಣ್ಣೆಯಿಂದ ಮನೆಯಲ್ಲಿ ದೀಪ ಹಚ್ಚಿದರೆ, ಆ ಮನೆಗೆ ದೇವರ ಹಾಗೂ ಗುರುಗಳ ಅನುಗ್ರಹ ಉಂಟಾಗಿ, ಬಹಳ ಚೆನ್ನಾಗಿ ನಡೆಯುತ್ತದೆ..
ಯಾವುದೇ ತರಹದ ಗಲಾಟೆ, ಗಂಡಾಂತರಗಳು ಅಪಮೃತ್ಯುಗಳು ಬರುವುದಿಲ್ಲ...
ಮತ್ತೊಮ್ಮೆ ..

"ಕೊಬ್ಬರಿ ಎಣ್ಣೆ" ಯ ದೀಪದ ಮಹತ್ವಗಳು..

೧. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚುತ್ತಾರೋ , ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತವೆ..
೨. ಯಾರು ಕುಲದೇವತೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂದಾದೀಪ ಹಚ್ಚಿತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ..
೩. ಮದುವೆಯಾಗದ ಗಂಡು/ಹೆಣ್ಣು ಮಕ್ಕಳು ಕಾತ್ಯಾಯನೀ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ವಿದರೆ ಶೀಘ್ರದಲ್ಲಿಯೇ ವಿವಾಹ ನಿಶ್ಚಯವು ಆಗುತ್ತದೆ..
೪. ಮಂಗಳವಾರ ಶ್ರೀ ಸುಬ್ರಹ್ಮಣ್ಯ ಪೂಜಿಸುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ವಿದರೆ ಮಕ್ಕಳು ಇಲ್ಲದವರಿಗೆ ಸಂತಾನಭಾಗ್ಯವಾಗುತ್ತದೆ..
(ಸರಿಯಾದ ಪೂಜಾ ವಿಧಾನ ತಿಳಿದು ಮಾಡಬೇಕು)
೫. ಅಶ್ವಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ದಾಂಪತ್ಯ ಕಲಹ ನಿವಾರಣೆಯಾಗುತ್ತದೆ..
(ಅಷ್ಟೋತ್ತರ, ಸಂಕಲ್ಪ ಬೇರೆ ರೀತಿ ಇರುತ್ತದೆ)
೬. ಜಾತಕದಲ್ಲಿ ಕುಜದೋಷ ಜಾಸ್ತಿ ಇರುವವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡಿ "ಒಬ್ಬಟ್ಟು" ನೈವೇದ್ಯ ಮಾಡಿ, ಮೊರದ ಬಾಗಿನವನ್ನು ದಾನ ಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ..
(ಪ್ರಾಯಶ್ಚಿತ್ತ ಸಂಕಲ್ಪ , ತಾಂಬೂಲದ ದಾನ ಮಾಡಬೇಕು)
೭. ಹೋಮದ ಪೂರ್ಣಾಹುತಿಗೆ "ರೇಷ್ಮೆವಸ್ತ್ರ" ವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟನಿಧಿ, ನವನಿಧಿ ಪ್ರಾಪ್ತಿಯಾಗುತ್ತದೆ..
೮. ಪ್ರೀತಿಸಿ ಮದುವೆಯಾಗಲು ಬಯಸುವ ಹುಡುಗ/ಹುಡುಗಿಗೆ ವಿಶೇಷ ಫಲ, ಇಷ್ಟಾರ್ಥ ಸಿದ್ಧಿಯಾಗುತ್ತದೆ.
(ಪೂಜಾ ವಿಧಾನ ತಿಳಿಸಿಲ್ಲ,)
೯. ಪ್ರತೀ ಶನಿವಾರದ ದಿವಸ "ಶ್ರೀನಿವಾಸ" ದೇವರಿಗೆ ಮನೆಯಲ್ಲಿ ಯಾರು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ, ತುಳಸೀಹಾರ ಹಾಕಿ ಪೂಜಿಸುತ್ತಾರೋ ಅವರಿಗೆ ಜೀವಮಾನಪರ್ಯಂತ ಹಣದ ಸಮಸ್ಯೆ ಬರುವುದಿಲ್ಲ..
(ವಿಶೇಷ ಸ್ತೋತ್ರ, ಸಂಕಲ್ಪ, ನೈವೇದ್ಯ ಮುಖ್ಯ)
೧೦. ಹೆಣ್ಣು ಮಕ್ಕಳ ಮದುವೆಗೆ ಬೇಕಾದ ಹಣ ಒದಗಿ ಬರುತ್ತದೆ..
೧೧. ಪಿತೃಶ್ರಾದ್ಧದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು "ವಿಷ್ಣುಪಾದ" ದ ಮುಂದೆ ಹಚ್ಚಿಟ್ಟರೆ ಸಮಸ್ತ ಪಿತೃದೋಷ ನಿವಾರಣೆಯಾಗುತ್ತದೆ..
೧೨. ಸಾಲದ ಸಮಸ್ಯೆ ನಿವಾರಣೆ, ಹಣ ಕೊಡಬೇಕಾದವರು ತಾವಾಗಿಯೇ ಬಂದು ಕೊಡುತ್ತಾರೆ..
(ತಿಳಿದು ಮಾಡಿ).

"ದೇವರ ದೀಪಕ್ಕೆ ವಿಶೇಷ ಎಣ್ಣೆಗಳು"
"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ..
ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ ..
ಗೃಹಕಲಹವು ನಿಂತುಹೋಗುತ್ತದೆ ..
ದೇವರ ಅನುಗ್ರಹ ಹಾಗೂ ಗುರುಗಳ ಅನುಗ್ರಹ ಎಂದೆಂದೂ ಇದ್ದು, ಶುಭಕಾರ್ಯಗಳು ಯಾವುದೇ ತೊಂದರೆ ಇರದೆ ಸುಸೂತ್ರವಾಗಿ ನಡೆಯುತ್ತದೆ..
ಈ ಎಣ್ಣೆಯ ಬೆಲೆ ಜಾಸ್ತಿ..
೨. "ಗಂಧದ ಎಣ್ಣೆ" ಯನ್ನು ದೀಪಕ್ಕೆ ಉಪಯೋಗಿಸಿದರೆ, ಸಾಲದ ಭಾದೆ ಇರುವುದಿಲ್ಲ, ಮನೆಯು ದಿನೇ ದಿನೇ ಅಭಿವೃದ್ಧಿ ಹೊಂದಿ ಧನ-ಕನಕ-ವಸ್ತು, ವಾಹನಗಳು ಹೆಚ್ಚಾಗುತ್ತವೆ..
ಮನೆಯಲ್ಲಿ ಹಿರಿಯರಿಗೆ ಗೌರವ ಜಾಸ್ತಿಯಾಗುತ್ತದೆ ..
ರೋಗಭಾದೆ, ಶತೃಭಾಧೆ ನಿವಾರಣೆಯಾಗುತ್ತದೆ ..
೩. ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದಿನಕ್ರಮೇಣ ಕಡಿಮೆಯಾಗುತ್ತದೆ ..
ದೇಹದ ಆರೋಗ್ಯವು ದಿನೇ ದಿನೇ ಸುಧಾರಿಸುತ್ತದೆ..
ಉದರ ವ್ಯಾಧಿಗಳು ನಿವಾರಣೆಯಾಗುತ್ತದೆ , ಕಣ್ಣಿಗೆ ಸಂಬಂಧಿಸಿದ ಖಾಯಿಲೆ ನಿವಾರಣೆಯಾಗುತ್ತದೆ ..
೪. ಕೋರ್ಟು ತಕರಾರು ಇದ್ದ ಪಕ್ಷದಲ್ಲಿ ಆ ದಿವಸ ದೇವರಿಗೆ "ಮೆರುದಾನಿ ಎಣ್ಣೆ "ಯಲ್ಲಿ ದೀಪ ಹಚ್ಚಿದರೆ, ವ್ಯಾಜ್ಯದಲ್ಲಿ ಜಯ ಸಿದ್ಧ..
ಸತ್ಯಕ್ಕೆ ಜಯವಾಗುತ್ತದೆ ..


"ದೀಪದ ಬತ್ತಿಯ ವಿಚಾರಗಳು"..


೧. ದೀಪದ ಬತ್ತಿಯು ಕೊಳೆಯಿಂದ ಕೂಡಿದ್ದರೆ, ಮನೆಯಲ್ಲಿ ಇರುವವರಿಗೆ ಜ್ಞಾಪಕಶಕ್ತಿ ಕಡಿಮೆ ಇದ್ದು, ತುಂಬಾ ಯೋಚನೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುತ್ತಾರೆ..
೨. ದೀಪದ ಬತ್ತಿಯು ಕಪ್ಪಾಗಿದ್ದರೆ, ಜೀವನದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ ..
೩. ದೀಪದ ಬತ್ತಿಯು ಹಾಲಿನಂತೆ ಬೆಳ್ಳಗೆ ಇದ್ದರೆ ಜೀವನದಲ್ಲಿ ಸಮಸ್ತ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತವೆ..
೪. ದೀಪದ ಬತ್ತಿಯು ತುಂಬಾ ಚಿಕ್ಕದಾಗಿದ್ದರೆ, ಜಿಪುಣತನ ಬರುತ್ತದೆ, ಮನೆಯಲ್ಲಿ ಕೋಪ ಜಗಳ ಜಾಸ್ತಿ ಇರುತ್ತದೆ..
೫. ದೀಪದ ಬತ್ತಿಯು ಕೃತಕ ಬಣ್ಣಗಳಿಂದ ಕೂಡಿದ್ದರೆ ದೇಹಕ್ಕೆ ಅಗೋಚರ ರೋಗಗಳು ಮತ್ತು ಚರ್ಮವ್ಯಾಧಿಗಳು ಬರುತ್ತವೆ..
೬. ದೀಪದ ಬತ್ತಿಯು ಬಹಳ ಗಟ್ಟಿಯಾಗಿದ್ದಾರೆ, ಸಂಸಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳುತ್ತಾರೆ.
೭. ಬತ್ತಿಯು ೨ ಕ್ಕಿಂತ ಜಾಸ್ತಿ ಇದ್ದರೆ, ದೇವರ, ಗುರುಗಳ ಅನುಗ್ರಹ ಎಂದೆಂದೂ ಇದ್ದು, ಗೆಳೆಯರ ಸಹಾಯ ದೊರೆಯುವುದಲ್ಲದೆ, ಸಕಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ..
೮. ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪಕ್ಕೆ ಹಚ್ಚಿದರೆ ಮನೆಯಲ್ಲಿ ಸುಖ ಸಂತೋಷ ಇರುತ್ತದೆ..
1+1=2 ಹಚ್ಚಿದರೆ ಸಂಸಾರದಲ್ಲಿ ಸುಖ ಶಾಂತಿ ಇರುತ್ತದೆ..
2+2=4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ..
ಮಕ್ಕಳು ವಿದ್ಯಾವಂತರಾಗುತ್ತಾರೆ..
3+3=6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತವೆ.., ಮಹಾಲಕ್ಷ್ಮಿಯ ಅನುಗ್ರಹ ಎಂದೆಂದೂ ಇದ್ದು, ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ ..
4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೆ ಎಲ್ಲರೂ ಆರೋಗ್ಯವಂತರಾಗಿ ಇರುತ್ತಾರೆ..
ಅಪಮೃತ್ಯು, ಅಪಘಾತ ಭಯ ದೂರವಾಗುತ್ತದೆ..
5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಗುರುಗಳ ಅನುಗ್ರಹ, ಆಶೀರ್ವಾದ ಎಂದೆಂದೂ ಇದ್ದು, ಸಕಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತವೆ..
ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಜಾತಕದ ಸರ್ವ ಶಾಪಗಳು ನಿವಾರಣೆಯಾಗುತ್ತದೆ ..
ಬೆಳ್ಳಿಯ ದೀಪಗಳ ವಿಶೇಷತೆಗಳು..
೧. ಯಾರ ಮನೆಯಲ್ಲಿ ದೇವರಿಗೆ ಬೆಳ್ಳಿಯ ದೀಪದಲ್ಲಿ ಹಸುವಿನ ತುಪ್ಪ, ಕೊಬ್ಬರೀ ಎಣ್ಣೆ, ಅಥವ ಸೂರ್ಯಕಾಂತಿ ಎಣ್ಣೆಯಿಂದ ಯಾರು ದೀಪವನ್ನು ಹಚ್ಚುತ್ತಾರೆಯೋ, ಅವರಿಗೂ ಮತ್ತು ಆ ಮನೆಯವರಿಗೂ ಅಷ್ಟನಿಧಿ ಹಾಗೂ ನವನಿಧಿ ಪ್ರಾಪ್ತಿಯಾಗುತ್ತದೆ..
ದೀಪ ದುರ್ಗಾ ದೇವಿ ಮತ್ತು ಮಹಾಲಕ್ಷ್ಮಿಯು ಅನುಗ್ರಹವಾಗಿ, ಉತ್ತಮ ಜೀವನ ನಡೆಸುತ್ತಾರೆ..
ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ..
೨. ಯಾರ ಮನೆಯಲ್ಲಿ ಶ್ರೀ ಬಲಮುರಿ ಗಣೇಶನ ಮುಂದೆ, ಶ್ರೀ ಚಕ್ರೇಶ್ವರೀ ದೇವಿ, ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ಲಲಿತಾ ತ್ರಿಪುರ ಸುಂದರೀ ದೇವಿ ಅಥವಾ ಶ್ರೀ ಲಕ್ಷ್ಮೀ ನಾರಾಯಣ, ಸಾಲಿಗ್ರಾಮ ದೇವರಿಗೇ ಆಗಲಿ , ಬಲಮುರಿ ಶಂಖದ ಮುಂದೆಯೇ ಆಗಲಿ ಹಚ್ಚಿದರೆ, ನೆನೆದ ಕಾರ್ಯಗಳು ಬಹಳ ಬೇಗ ಆಗುತ್ತವೆ..
ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಅಧಿಕ ಲಾಭವಾಗುತ್ತದೆ ...
ದೀಪದ ಮುಖಗಳು ಅಥವಾ ಬತ್ತಿಗಳು....
ಒಂದು ಮುಖ ಅಥವ ಬತ್ತಿಯಿಂದ : ಮಧ್ಯಮ ಲಾಭವಾಗುತ್ತದೆ ..,
ಎರಡು ಮುಖದಿಂದ : ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ..,
ತ್ರಿಮುಖದಿಂದ : ಸಂತಾನ ಭಾಗ್ಯ ಮತ್ತು ಉತ್ತಮ ಸಂತಾನವಾಗುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..!,
ಚತುರ್ಮುಖದಿಂದ : ಧನಸಂಪತ್ತು ಹಾಗೂ ಐಶ್ವರ್ಯ ಭಾಗ್ಯಗಳು ಲಭಿಸುತ್ತವೆ..
ಪಂಚಮುಖದಿಂದ : ಸಂಪತ್ತು ಮತ್ತು ಅಧಿಕ ಲಾಭವಾಗುತ್ತದೆ, ನೆಮ್ಮದಿ ..

ಬತ್ತಿಯ ಸಂಖ್ಯೆಗಳು ಮತ್ತು ಮಹತ್ವಗಳು......


ಒಂದೊಂದು ದೀಪಕ್ಕೆ ಒಂದರಂತೆ ಎರಡು ದೀಪ ಹಚ್ಚಿದರೆ

ಮನೆಯಲ್ಲಿ ಸುಖ ಸಂತೋಷ ಎಂದೆಂದೂ ಇರುತ್ತದೆ ..
2+2 =4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ..
3+3 =6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತಿರುತ್ತದೆ ..
4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೇ ಆರೋಗ್ಯವಂತರಾಗಿ ಆಗುತ್ತಾರೆ..
5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಮತ್ತು ಗುರುಗಳ ಅನುಗ್ರಹದಿಂದ ಸಕಲ ಕಾರ್ಯಗಳೂ ನಡೆದೂ ಮನೆಯಲ್ಲಿ ಸುಖ ಸಂತೋಷಗಳು ಸಿಗುತ್ತವೆ..
(ಸಂಗ್ರಹ : ದೇವರ ದೀಪಗಳು)
********

"ಹಿತ್ತಾಳೆ" ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ..?

೧. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ವುತ್ತಾರೆಯೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಜಾಸ್ತಿಯಾಗುತ್ತದೆ, ಮನೆಗೆ ದೈವಬಲ ಬರುವುದು..
೨. ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪ ಹಚ್ಚಿ ದೇವರನ್ನು ಪೂಜಿಸುತ್ತಾರೋ ಆ ಮನೆಯಲ್ಲಿ ರೋಗಭಾದೆಗಳು, ಅಪಮೃತ್ಯುಗಳು ಬರುವುದಿಲ್ಲ..!
೪. ಯಾರ ಮನೆಯಲ್ಲಿ ಸಂಕಲ್ಪ ಸಮೇತ ಹಿತ್ತಾಳೆ ದೀಪವನ್ನು ಹಚ್ಚಿ, ದೀಪಕ್ಕೆ ಪೂಜಿಸಿ, ದೇವರ ಪೂಜೆ ಮಾಡುತ್ತಾರೋ, ಆ ಮನೆಯಲ್ಲಿ ನ ಸರ್ವ ವಿವಾಹ ದೋಷ ನಿವಾರಣೆಯಾಗಿ, ವಿಘ್ನಗಳು ನಿವಾರಣೆಯಾಗಿ ವಿವಾಹ ಯೋಗವು ಬರುತ್ತದೆ..!
೬. ಮಂತ್ರಸಿದ್ಧಿ ಬೇಕೆನ್ನುವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು..!
ಕೃಷ್ಣಾರ್ಪಣಮಸ್ತು ಸರ್ವಜನ ಸುಖಿನೋಭವಂತು
****

ದೀಪ ಹಚ್ಚಿಡುವ ಪಾತ್ರೆಗಳು ಯಾವುದು ಮತ್ತು ಅದರ ಫಲವೇನು ?

ಮಣ್ಣಿನ ಪಾತ್ರೆ, ಕಬ್ಬಿಣದ ಪಾತ್ರೆ, ಕಂಚಿನ ಪಾತ್ರೆ, ತಾಮ್ರ , ಬೆಳ್ಳಿ ಹಾಗು ಬಂಗಾರದಿಂದ ಮಾಡಿದ ಪಾತ್ರಗಳು ಶಾಸ್ತ್ರ ಸಮ್ಮತ.
ಮೃಣ್ಮಯೆನ ತು ಪಾತ್ರೆಣ .... ಕೃಷ್ಣಾಚಾರ್ಯ ಸ್ಮೃತಿ
ಮಣ್ಣಿನ ಪಾತ್ರೆ : ಜ್ಞಾನ ಮತ್ತು ಸುಖ 
ಕಬ್ಬಿಣದ ಪಾತ್ರೆ : (ದೇವರಿಗೆ) ಒಂದು ನೂರು ದೀಪಗಳು ಹಚ್ಚಿದ ಫಲ 
ಕಂಚಿನ ಪಾತ್ರೆ : ತೇಜಸ್ಸು ಮತ್ತು ಸೌಭಾಗ್ಯ
ತಾಮ್ರದ ಪಾತ್ರೆ : (ದೇವರಿಗೆ) ಒಂದು ಸಾವಿರ ದೀಪ ಹಚ್ಚಿದ ಫಲ 
ಬೆಳ್ಳಿ ಪಾತ್ರೆ : (ದೇವರಿಗೆ) ಒಂದು ಲಕ್ಷ ದೀಪ ಹಚ್ಚಿದ ಫಲ 
ಬಂಗಾರದ ಪಾತ್ರೆ : (ದೇವರಿಗೆ) ಅನಂತ ದೀಪಗಳು ಹಚ್ಚಿದ ಫಲ ದೊರೆಯುತ್ತದೆ.
*****

ದೀಪಾವಳಿ ಆಚರಿಸುವರಿಗೊಂದು ಸೂಚನೆ
- ದೀಪವನ್ನು  ಬೆಂಕಿಪಟ್ಟನದಿಂದ ಹಚ್ಚಬೇಡಿ ಮೊದಲ ಅಗರಬತ್ತಿ ಗೆ ಹಚ್ಚಿ ಆ ಅಗರಬತ್ತಿ ಯಿಂದ ದೀಪ ಪ್ರಜ್ವಲಿಸಿ
- ದೀಪವನ್ನು ಹಾಗೆ ನೆಲದ ಮೇಲೆ ಇಡುವುದು ಮಾಹಾಪರಾದ ಅದರ ಕೆಳಗೆ ಸ್ವಲ್ಪ ಅಕ್ಷತೆ ಹಾಕಿ ಅದರ ಮೇಲೆ ದೀಪ ಇಡಬೇಕು
- ಮೆಣದಬತ್ತಿ ಅಥವಾ ವಿದ್ಯುತ್ ದೀಪ ಹಚ್ಚಬೇಡಿ ( ಅಶಾಸ್ತ್ರೀಯ ವಾದದ್ದು) 
- ಮೊದಲು ದೇವರ ಕೋಣೆಯಲ್ಲಿ ದೀಪ ಹಚ್ಚಿ ನಂತರ ಮನೆಯ ಎಲ್ಲಾ ಕಡೆ ದೀಪ ಹಚ್ಚಿ
- ಉತ್ತರ ಪೂರ್ವ ಕ್ಕೆ ದೀಪದ ಮುಖವಿಡಿ ಯಮದೀಪ ಬಿಟ್ಟು
--ಮಂಜುನಾಥ ಆರ್ ಸರಳ ಪರಿಹಾರ
*********


how to do pooja read-->  POOJA IN 30 MINUTES


" ನಂದಾದೀಪ" ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..!

"ನಂದಾದೀಪ"ಗಳು ಪೂರ್ವದಿಕ್ಕಿನಲ್ಲಿ ಹಚ್ಚಿದರೆ : ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರಯುವುದು, ಮಾಟ, ಮಂತ್ರ ದೋಷ, ವಾಸ್ತುದೋಷ ನಿವಾರಣೆಯಾಗುತ್ತದೆ..!

" ಪಶ್ಚಿಮ" ದಿಕ್ಕಿನಲ್ಲಿ ಹಚ್ಚಿದರೆ : ಕಲಹ ಹೆಚ್ಚು, ನೆಮ್ಮದಿ ಕಮ್ಮಿ, ಮನೆಯ ಯಜಮಾನರು , ಮಕ್ಕಳ ಅಭಿವೃದ್ಧಿ ಕುಂಠಿತವಾಗುತ್ತದೆ, ಸೋಮಾರಿಗಳಾಗುತ್ತಾರೆ..

"ದಕ್ಷಿಣ" ದಿಕ್ಕಿನಲ್ಲಿ ಹಚ್ಚಿದರೆ : ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತವೆ..

"ಉತ್ತರ ದಿಕ್ಕಿನಲ್ಲಿ" ಹಚ್ಚಿದರೆ : ಸ್ವಲ್ಪ ಈಶಾನ್ಯ ಮೂಲೆಗೆ ತಿರುಗಿಸಿ ಹಚ್ಚಿದರೆ :  ಶ್ರೀ ಲಕ್ಷ್ಮೀ ಕಟಾಕ್ಷವಾಗಿ ಸದಾ ನೆಮ್ಮದಿಯಿಂದ ಕೂಡಿರುತ್ತದೆ..

ಶ್ರೀ ಲಕ್ಷ್ಮೀ ಅಭಿವೃದ್ಧಿಯಾಗಿ ಮನೆಯು ಅಭಿವೃದ್ಧಿ ಆಗುತ್ತದೆ..

ಶುಭಕಾರ್ಯಗಳು ಬೇಗ ನಡೆಯುತ್ತವೆ..
(ದೇವರ ದೀಪಗಳು ಪುಸ್ತಕದಿಂದ ಸಂಗ್ರಹ)

***********

ದೀಪ
ದೀಪವನ್ನು ಎರಡು ರೀತಿಯಲ್ಲಿ ಹಚ್ಚುವ ಪದ್ಧತಿ ಇದೆ.
1.ನಂದಾದೀಪ. 2 ತಾತ್ಕಾಲಿಕ ದೀಪ.
1.ನಂದಾದೀಪ.
ದಿನವಿಡಿ ನoದಿ ಹೋಗದೆ ದೇವರನ್ನು ಬೆಳಗುವ ದೀಪವೇ ನoದಾದೀಪ.“ನoದ” ಎಂದರೆ “ಭಗವಂತ” (ಆನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ)
ನಂದಯತಿ ಭಕ್ತಾನ್ ಇತಿನಂದಃ | 
" ನಂದಾದೀಪ" ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..!
2. ತಾತ್ಕಾಲಿಕ ದೀಪ.
ಒಮ್ಮೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಉರಿಯುವಸ್ಟು ಕಾಲ ಇಡುವ ದೀಪ.
ದೀಪದ ಅರ್ಥ
ದೀಪ್ಯತೇ ದೀಪಯತಿ  ವಾ ಸ್ವo ಪರಂ ಚೇತಿ ದೀಪಃ |
ಭಗವಂತನನ್ನು ತೋರಿಸುವ ವಸ್ತುವೇ ದೀಪ
ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್ |
ಯಸ್ಯ ತಿಷ್ಠತಿ ಗೃಹೇ ದೀಪಃ  ತಸ್ಯ ನಾಸ್ತಿ ದರಿದ್ರತಾ ||
ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುoದೆ ಮಾರನೇ ದಿನ ಸೂರ್ಯೋದಯವಾಗುವವರೆಗೂ
ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು.
ಆಯುರ್ದಃ ಪ್ರಾಙ್ಮುಖೋ ದೀಪೋ ಧನದಃ ಸ್ಯಾದುದಙ್ಮುಖಃ|
ಪ್ರತ್ಯಙ್ಮುಖೋ ದುಃಖದೋ$ಸೌ ಹಾನಿದೋ ದಕ್ಷಿಣಾಮುಖಃ||
ಪೂರ್ವಾಭಿಮುಖವಾಗಿ ದೀಪ ಹಚ್ಚುವುದು ಆಯುಃ ಪ್ರದ.ಉತ್ತರಾಭಿಮುಖವಾಗಿ ಹಚ್ಚಿದರೆ ಧನ ಪ್ರಾಪ್ತಿ.ಪಶ್ಚಿಮಾಭಿಮುಖವಾಗಿ ಹಚ್ಚಿದರೆ ದುಃಖ ಪ್ರಾಪ್ತಿ. ದಕ್ಷಿಣಾಭಿಮುಖವಾಗಿ ಹಚ್ಚಿದರೆ ಹಾನಿ ಉಂಟಾಗುತ್ತದೆ..
ದಕ್ಷಿಣಾಭಿಮುಖಂ ದೀಪಂ ಸ್ಥಾಪಯೇನ್ನ ಕದಾಚನ|
ಪ್ರತ್ಯಙ್ಮುಖಂ ತಥಾ ನೈವ ದೋಷಃ ಸ್ಯಾದೇಕದೀಪಕೇ||
ದಕ್ಷಿಣಾಭಿಮುಖವಾಗಿ ಎಂದಿಗೂ ದೀಪವನ್ನು ಹಚ್ಚಬಾರದು..ಅದೇ ರೀತಿ ಹಲವು ದೀಪಗಳನ್ನು ಪಶ್ಚಿಮಾಭಿಮುಖವಾಗಿ ಯೂ ಹಚ್ಚ ಬಾರದು. ಒಂದೇ ದೀಪ ಹಚ್ಚುವುದು ದೋಷಪ್ರದವಲ್ಲ.
ಘೃತ ದೀಪೋ ಭವೇದ್ದಕ್ಷೇ ತೈಲ ದೀಪಸ್ತು ವಾಮತಃ||
ತುಪ್ಪದ ದೀಪವನ್ನು ದೇವರ ಬಲಗಡೆಗೂ.ಎಣ್ಣೆಯ ದೀಪವನ್ನು ದೇವರ ಎಡಭಾಗಕ್ಕೆ ಹಚ್ಚ ಬೇಕು...ಇದು ಒಂದೇ ದೀಪ ಹಚ್ಚುವಾಗ.. ಹಲವು ದೀಪ ಹಚ್ಚುವಾಗ ಎಲ್ಲಾ ಕಡೆ ಹಚ್ಚ ಬಹುದು. ಇದು ಎಲ್ಲಾ ದೇವರಿಗೂ ಅನ್ವಯಿಸುತ್ತದೆ.
 ದೀಪೇನ ದೀಪಂ ಪ್ರಜ್ವಾಲ್ಯ ದರಿದ್ರೀ ವ್ಯಾಧಿಮಾನ್ ಭವೇತ್||
ಒಂದು ದೀಪದಿಂದಲೇ ಇನ್ನೊಂದು ದೀಪವನ್ನು ಹಚ್ಚಿದರೆ ದರಿದ್ರನು,ರೋಗಿಯು ಆಗುವನು.
ದೀಪೇ ಶಲಾಕಾಂ ಪ್ರಜ್ವಾಲ್ಯ ತೇನ ದೀಪಪ್ರಜ್ವಾಲನಂ ಕಾರ್ಯಂ ನ ತು ಸಾಕ್ಷಾದ್ದೀಪೇ||
ಒಂದು ದೀಪದಿಂದ ಬೇರೆ ಬತ್ತಿ ಅಥವಾ  ತುಳಸಿಯ ಕಡ್ಡಿ ಇಂದ ಜ್ವಾಲೆ ಹೊತ್ತಿಸಿ ಬೇರೆ ದೀಪ ಬೆಳಗಬೇಕು.
ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿoದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು.
"ಆತ ಏವ ಶಲಾಕಾಂ ತತ್ರ ಸ್ಥಪಯಂತಿ "|
ದೀಪಪಾತ್ರಾದಿದೈವತ್ಯಂ ಮುಖೇ ಪಾವಕ ಮುಚ್ಯಂತೇ |
ದಂಡಮೀಶ್ವರದೈವತ್ಯಂ ಪಾದಂ ಪ್ರಜಾಪತಿಸ್ತಥಾ ||
ದೀಪಸ್ಥoಭಗಳಲ್ಲಿ ಅಗ್ರದಲ್ಲಿ ಅಗ್ನಿಯು, ದಂಡದಲ್ಲಿ ರುದ್ರನು, ಬುಡದಲ್ಲಿ ಬ್ರಹ್ಮದೇವನು ಇರುವರು.
 ದೀಪವನ್ನು ಯಾವ ಯಾವ ಪಾತ್ರೆಯಲ್ಲಿ ಹಚ್ಚಬೇಕು.
"ಮೃಣ್ಮಯೇನ ತು ಪಾತ್ರೆಣ ಗೋಘ್ರುತೇನ ಸುರಾಧಿಪ|
 ದೀಪಂ ದದಾತಿ ಯೋ ಭಕ್ತ್ಯಾ ಜ್ಞಾನೀ ಯೋಗೀ ಸುಖೀ ಭವೇತ್|
ಅಯೋಮಯೇನ ಪಾತ್ರೇಣ ದೀಪಮರ್ಪಯತೇ ಹರೇಃ।
ಸ ತು ದೀಪಶತೇನೈವ ಫಲಮಾಪ್ನೋತಿ ಪದ್ಮಜ ||
 ಕಾಂಸ್ಯಪಾತ್ರೇಣ ದೀಪೇನ ಪೂಜಾಂ ಯಃ ಕುರುತೇ ನರಃ|
 ತಸ್ಯ ತೇಜಃಸುಸೌಭಾಗ್ಯಂ ವರ್ಧತೇ ಪದ್ಮಸಂಭವ || ” 
“ಯಸ್ತು ತಾಮ್ರಮಯೇ ಪಾತ್ರೆ ದೀಪಂ ದದ್ಯಾಚ್ಚ ಭಕ್ತಿತಃ| 
ಸತು ದೀಪ ಸಹಸ್ರೆಣ ಫಲ ಮಾಪ್ನೋತಿ ಶೋಭನಮ್.
ಬ್ರಹ್ಮನ್ ರಜತಪಾತ್ರೆಷು ಯೋ ದದಾತಿ ಚ ದೀಪಿಕಾಮ್| 
ಸತು ಲಕ್ಷ್ಯಗುಣೋ ಭೂತ್ವಾ ಮಾಂ ಸಮಾಯಾತಿ ನಿತ್ಯದಾ || 
ಯೋ ವೈ ಸ್ವರ್ಣಮಯೇ ಪಾತ್ರೆ ದೀಪಂ ದಾಸ್ಯತಿ ವಿಷ್ಣವೇ ।
 ಅನಂತಗುಣಿತೋ ಭೂತ್ವಾ ಯಾತಿ ಮಾಂ ನಾತ್ರ ಸಂಶಯಃ | 
* ಮಣ್ಣಿನ ಪಾತ್ರೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿದರೆ ದೀಪವನ್ನು ಹಚ್ಚಿದ ವ್ಯಕ್ತಿಯು ಜ್ಞಾನಿಯು , ಯೋಗಿಯು ಹಾಗು ಸುಖವಂತನು ಆಗುತ್ತಾನೆ . 
*ಕಬ್ಬಿಣದ ಪತ್ರೆಯಲ್ಲಿ ದೀಪವನ್ನು ಹಚ್ಚುವವನಿಗೆ ಅಂತಹ ಒಂದು ನೂರು ದೀಪಗಳನ್ನು ಹಚ್ಚಿದರೆ ಮಾತ್ರ ಫಲ ಸಿದ್ಧಿಯಾಗುತ್ತದೆ . 
*ಕಂಚಿನ ಪಾತ್ರೆಯಲ್ಲಿ ದೀಪವನ್ನು ಹಚ್ಚಿದರೆ ತೇಜಸ್ಸು ಮತ್ತು ಉತ್ತಮವಾದ ಸೌಭಾಗ್ಯ ಹೆಚ್ಚುತ್ತದೆ . 
*ತಾಮ್ರದ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚುತ್ತಾನೋ ಅವನು ಒಂದು ಸಾವಿರ ದೀಪಗಳನ್ನು ಹಚ್ಚಿ ಭಗವಂತನಿಗೆ ಸಮರ್ಪಿಸಿದರೆ ಉತ್ತಮವಾದ ಫಲವನ್ನು ಪಡೆಯುತ್ತಾನೆ .
* ಬೆಳ್ಳಿಯ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚುತ್ತಾನೋ ಅವನ ಪುಣ್ಯವು ಲಕ್ಷಪಾಲು ಹೆಚ್ಚುತ್ತದೆ . 
*ಬಂಗಾರದ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚಿ ಶ್ರೀಹರಿಗೆ ಸಮರ್ಪಿಸುತ್ತಾನೋ ಅವನಿಗೆ ಅನಂತ ಫಲವು ಉಂಟಾಗುತ್ತದೆ . ಮತ್ತು ಅವನು ಶ್ರೀಹರಿಯನ್ನೇ ಹೊಂದುತ್ತಾನೆ . ಆದ್ದರಿಂದ ಒಟ್ಟಿನಲ್ಲಿ ಮಣ್ಣಿನ ಕಬ್ಬಿಣದ ಕಂಚಿನ- ತಾಮ್ರದ - ಬೆಳ್ಳಿಯ - ಹಾಗೂ ಬಂಗಾರದ ಪಾತ್ರೆಗಳಲ್ಲಿ ಭಗವಂತನಿಗೆ ದೀಪವನ್ನು ಹಚ್ಚಬಹುದು .
ದೀಪದ ಪಾತ್ರೆಯು ಆರು ವಿಧವಾಗಿದೆ.
 ಸುವರ್ಣನಿರ್ಮಿತಪಾತ್ರೆ , ಮರದಿಂದ ನಿರ್ಮಿತ , ಲೋಹದಿಂದ ನಿರ್ಮಿತ ಮಣ್ಣಿನಿಂದ ನಿರ್ಮಿತ , ತೆಂಗಿನ ಚಿಪ್ಪಿನಿಂದ ನಿರ್ಮಿತ ತಾಳೆಯ ಚಿಪ್ಪಿನಿಂದ | ನಿರ್ಮಿತವಾದದ್ದು ಹೀಗೆ . 
ತೈಜಸಂ ದಾರವಂ ಹಮಾರ್ತಿಕ್ಯಂ ನಾರಿಕೇಲಜಮ್ | ತೃಣಧ್ವಜೋದ್ಭವಂ ವಾಪಿ ದೀಪಪಾತ್ರಂ ಪ್ರಶಸ್ಯತೇ ॥ 
ದೀಪವನ್ನು ಹಚ್ಚುವಾಗ ಘಂಟಾನಾದ ಪೂರ್ವಕವಾಗಿಯೇ ಹಚ್ಚಬೇಕು . ದೀಪಮಾತ್ರವಲ್ಲದೆ ಸ್ನಾನ ( ಅಭಿಷೇಕ ) ಧೂಪಾರತಿ , ನೈವೇದ್ಯ ಭೂಷಣ ಮತ್ತು ನೀರಾಜನ ಕಾಲದಲ್ಲಿ ಘಂಟಾನಾದ ಆವಶ್ಯಕ .
ಸ್ನಾನೇ ಧೂಪೇ ತಥಾ ದೀಪೇ ನೈವೇದ್ಯ ಭೂಷಣೇ ತಥಾ | 
ಘಂಟಾನಾದಂ ಪ್ರಕುರ್ವಿತ ತಥಾ ನೀರಾಜನೆಂಪಿ ಚ ||
ದೇವರ ದೀಪಕ್ಕೆ ಯಾವ ವಸ್ತು ಉತ್ತಮ.
ಕರ್ಪೂರಂ ಗೋಘ್ರೃತಂ ತೈಲಂ ಕೋಸುಂಭಂ ನಾರಿಕೇರಜಮ್। 
ಆಜ್ಯಂ ಘೃತಂ ವಾ ಸಂಪಾದ್ಯ ಪುಮಾನೇವಂ ಸ್ವಶಕ್ತಿತಃ|| 
ಗೋಘೃತೇನ ತು ಸರ್ವೆಷ್ಟಫಲಸಿದ್ಧಿಂ ಲಭೇನ್ನರಃ |
 ಅಮಂಗಲ್ಯಹರಂ ತೈಲಂ ಕೌಸುಂಭಂ ಕೀರ್ತಿವರ್ಧನಮ್ | 
ನಾರಿಕೇರಂ ಸೌಖ್ಯದಂ ಚ ಹ್ಯಾಜ್ಯಂ ಭೋಗೈಕಸಾಧನಮ್ | 
ಏರಂಡಂ ಮಾಹಿಷಮೃತಂ ಸರ್ವಥಾ ವರ್ಜಯೇದ್ಭುಧಃ || 
 ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ಸಮಸ್ತ ಇಷ್ಟ ಪ್ರಾಪ್ತಿಯಾಗುತ್ತದೆ . 
ಎಳ್ಳೆಣ್ಣೆಯಿಂದ ದೀಪ ಹಚ್ಚಿದರೆ ಅಮಂಗಲ ಪರಿಹಾರವಾಗುತ್ತದೆ . 
ಕುಸುಬೆಎಣ್ಣೆಯಿಂದ ದೀಪ ಹಚ್ಚಿದರೆ ಕೀರ್ತಿಯು ಹೆಚ್ಚುತ್ತದೆ . 
ಕೊಬ್ಬರೆಣ್ಣೆಯಿಂದ ದೀಪ ಹಚ್ಚಿದರೆ ಸೌಖ್ಯವು ಹೆಚ್ಚುತ್ತದೆ.
ಆಡಿನ ತುಪ್ಪದಿಂದ ದೀಪ ಹಚ್ಚುವುದು ಭೋಗಕ್ಕೆ ( ಸುಖಾನುಭವಕ್ಕೆ ) ಉತ್ತಮವಾದ ಸಾಧನವು . ಅಂದರೆ ಆಡಿನ ತುಪ್ಪದಿಂದ ದೇವರ ದೀಪ ಹಚ್ಚಿದರೆ ಸುಖವು ಸಿಗುತ್ತದೆ . 
ಆದರೆ ಹರಳೆಣ್ಣೆ ಮತ್ತು ಎಮ್ಮಿಯ ತುಪ್ಪವನ್ನು ದೇವರ ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು . ಆದ್ದರಿಂದ ಒಟ್ಟಿನಲ್ಲಿ ಹಸುವಿನ ತುಪ್ಪ ಎಳ್ಳೆಣ್ಣೆ ಕೊಬ್ಬರೆಣ್ಣೆ , ಆಡಿನ ತುಪ್ಪ ಇವುಗಳಿಂದ ದೇವರ ದೀಪವನ್ನು ಹಚ್ಚಬಹುದು .
ದೀಪ ಹಚ್ಚುವ ಸ್ಥಳ.
ಸ್ಥಂಭೇ ಚ ಶಿಖರೇ ದೀಪಾಃ ಪ್ರಾಂಗಣೆ ಚತ್ವರೇ ತಥಾ |
ವೃಂದಾವನೇ ಧರ್ಮಶಾಲಾವ್ಯಾಖ್ಯಾಧ್ಯಯನಸದ್ಮನಿ ||
ಮನೆಯ ದ್ವಾರಗಳಲ್ಲಿ, ದೇವರ ಮನೆ, ದೇವಾಲಯ,ಕಂಭಗಳು, ದೇವಾಲಯದ ಶಿಖರ, ಮನೆಯ ಅಂಗಳ, ಚೌಕಗಳು, ತುಲಸೀ ವೃಂದಾವನ,ಪುರಾಣ ಪ್ರವಚನ ನಡೆಯುವ ಸ್ಥಳ, ಗೋಹಟ್ಟಿ, ವೇದಾಧ್ಯಯನ ನಡೆಯುವ ಸ್ಥಳ, ಅಶ್ವತ್ಥವನ, ಧಾತ್ರೀ(ನೆಲ್ಲಿ)ವನ, ಮಠಗಳಲ್ಲೀಯೂ  ದೀಪಗಳ ನೀಡಬಹುದು. ಈ ಸ್ಥಳಗಳಲ್ಲಿ ಲಕ್ಷ್ಮಿದೇವಿವಾಸವಾಗಿರುತ್ತಾಳೆ.
ದೀಪದ ಬತ್ತಿಯು ಐದು ವಿಧವೆಂದು ಹೇಳಿದ್ದಾರೆ :
ಪದ್ಮಸೂತ್ರಭವಾದರ್ಭಗರ್ಭಸೂತ್ರಸಮುದ್ಭವಾ | ಶಾಣಜಾ ಬಾದರೀ ವಾಪೀ ಫಲಕೊಶೋದ್ಭವಾಥವಾ ವರ್ತಿಕಾ ದೀಪಕೃತ್ಯೇಷು ಸದಾ ಪಂಚವಿಧಾ ಸೃತಾ ||
ಪದ್ಮಸೂತ್ರದಬತ್ತಿ ,ದರ್ಭಸೂತ್ರಬತ್ತಿ , ಸೆಣಬಿನ ಸೂತ್ರಬತ್ತಿ, ತೆಂಗು ಮೊದಲಾದ ಕಾಯಿಯ ಸಿಪ್ಪೆಯ ಬತ್ತಿ ಮತ್ತು ಹತ್ತಿ ಕಾಯಿಯ ಬತ್ತಿ ಹೀಗೆ  ಇವುಗಳನ್ನು ಬಳಸಿ ದೀಪ ಹಚ್ಚ ಬಹುದು.
ಯಾವ ಬತ್ತಿಯಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ.
ಪಾದ್ಮೇನ ಜ್ವಲಿತಾ ದೀಪ್ತಿಃ ಸಾರ್ವಭೌಮಪ್ರದಾಯಿನೀ।
 ಸರ್ವಷ್ಟದಾಯಿನೀ ನಿತ್ಯಂ ಸರ್ವಾಭೀಷ್ಟಾರ್ಥಸಿದ್ದಿದಾ||
 ಕ್ಷೌಮೇಣ ಜ್ವಲಿತಾ ದೀಪ್ತಿಃ ಷಡೂರ್ಮಿ ಪರಿಹಾರಿಣೀ|
 ನಿತ್ಯಯೌವನದಾತ್ರೀ ಸ್ಯಾತ್ ಸರ್ವಾಭೀಷ್ಟಪ್ರದಾಯಿನೀ|| 
ದಶಾ ನಿರ್ಮಿತಯಾ ವರ್ತ್ಯಾ ಜ್ವಲಿತಾ ದೀಪಿಕಾ ಪರಾ|
ಭವೇತ್ಪಾ ಪಕ್ಷಯಸ್ತಸ್ಯ ಜ್ಞಾನಸೌಭಾಗ್ಯ ಸಂಪದಃ||
ಕಾರ್ಪಾಸ ವರ್ತಿದೀಪೇನ ಪುಣ್ಯಂ ಪಾಪಕ್ಷಯೋ ಭವೇತ್|
ಏತಾನ್ಸಂಭೂಯ ಯೋ ಮಹ್ಯಂ ದೀಪಂ ಯಚ್ಛತಿ ಮಾನವಃ|
ಮದ್ಭಕ್ತಿಫಲಭಾಕ್ ನಿತ್ಯಂ ಸೋ$ಶ್ವಮೇಧಫಲಂ ಲಭೇತ್||
ತಾವರೆ ದಂಟಿನ ನಾರಿನಿಂದ ಬತ್ತಿ ಮಾಡಿ ಉರಿಸಿದರೆ ಸಾರ್ವಭೌಮತ್ವ ಪ್ರಾಪ್ತಿ, ಸಕಲ ಇಷ್ಟಾರ್ಥ ಪ್ರಾಪ್ತಿ.
ಅಗಸೆ ನಾರಿನ ಬತ್ತಿಯ ದೀಪದಿಂದ ಹಸಿವೆ,ನೀರಡಿಕೆ,ಮುಪ್ಪು,ಮೃತ್ಯು,ಶೋಕ,ಮೋಹ ಎಂಬ ಆರು ಧರ್ಮದಿಂದ ಪರಿಹಾರ ಸಿಗುವುದರ ಜೊತೆ ನಿತ್ಯದಲ್ಲೂ ಯೌವ್ವನ ಪ್ರಾಪ್ತಿ.
ನಾರಿನ ಬತ್ತಿಯಿಂದ ಪಾಪ ನಾಶ ಆಗುತ್ತದೆ ಜ್ಞಾನ ಸಿಗುತ್ತದೆ.
ಹತ್ತಿ ಬತ್ತಿಯಿಂದ ಪಾಪ ನಾಶ ಪುಣ್ಯ ಪ್ರಾಪ್ತಿ ಆಗುತ್ತದೆ.
ಇಷ್ಟೊಂದು ಮಹತ್ವವನ್ನು ಹೊಂದಿರುವ ದೀಪವನ್ನು ರಾತ್ರಿಯ ವೇಳೆ ಹಚ್ಚಿಡ ಬಾರದು ಎನ್ನುವುದು ಎಷ್ಟು ಉಚಿತ....?      ಸಾಧ್ಯವಿದ್ದರೆ 24 ಗಂಟೆಯೂ ಹಚ್ಚಿಡಿ. ಸಾಧ್ಯ ಆಗದಿದ್ದರೆ ಎಸ್ಟು ಸಾಧ್ಯವೋ ಅಷ್ಟು ಕಾಲ ದೀಪವನ್ನು ಹಚ್ಚಿ...
🙏 ಸರ್ವೇ ಜನಾಃ ಸುಖಿನೋ ಭವಂತು 🙏
******

ದೇವರಿಗೆ ತುಪ್ಪದ ದೀಪ ಹಚ್ಚುವುದೇಕೆ?

ಹಿಂದೂ ಧರ್ಮದಲ್ಲಿ ತುಪ್ಪದ ದೀಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಪೂಜೆ ಸಮಯದಲ್ಲಿ ಹಲವು ಜನರು ತುಪ್ಪದ ದೀಪ ಹಚ್ಚುವುದನ್ನು ನೋಡಿದ್ದೇವೆ.. ತುಪ್ಪದ ದೀಪ ಹಚ್ಚುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ದೇವರಿಗೆ ತುಪ್ಪದ ದೀಪ ಯಾಕೆ ಶ್ರೇಷ್ಠ.. ವಿಸ್ತಾರವಾಗಿ ಇಲ್ಲಿದೆ ಮಾಹಿತಿ
ದೇವರಿಗೆ, ತುಪ್ಪದ ದೀಪ , 

ಪ್ರಯೋಜನಗಳು, 

ಹಿಂದೂ ಧರ್ಮ ಹಾಗೂ ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಪ್ರತಿ ಹಿಂದೂ ಕುಟುಂಬದಲ್ಲಿ ಬೆಳಿಗ್ಗೆ, ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವತೆಗಳು ಸಂತೋಷವಾಗುತ್ತಾರೆ ಎಂದು ಹೇಳಲಾಗಿದೆ. ಆದ್ರೆ ಶಿವ ಪುರಾಣದ ಪ್ರಕಾರ, ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ದಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. 

ತುಪ್ಪದ ದೀಪ ಹಚ್ಚುವುದು ಏಕೆ..!

ದೇವರಿಗೆ ತುಪ್ಪ ದೀಪ ಹಚ್ಚುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ತುಪ್ಪದ ಆರತಿ ಬೆಳಗುವುದು, ತುಪ್ಪದ ದೀಪ ಹಚ್ಚುವುದು, ಹೋಮ ಹವನಗಳಲ್ಲಿ  ಅಗ್ನಿಗೆ ತುಪ್ಪ ಸುರಿಯುವುದು , ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಇದು ರೂಢಿಯಲ್ಲಿದೆ. ಈಗಲೂ ಪ್ರತಿ ದಿನ ದೇವರಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ಇದೆ
ದೇವರಿಗೆ, ತುಪ್ಪದ ದೀಪ , ಪ್ರಯೋಜನಗಳು, 
ಇನ್ನು ಪ್ರತಿಯೊಬ್ಬರು ದೇವರ ಮುಂದೆ ದೀಪ ಹಚ್ಚುತ್ತಾರೆ. ಈ ಮೂಲಕ ಆರಾಧನೆ ಮಾಡಿ, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪ ಹಚ್ಚುತ್ತಾರೆ. ಈ ರೀತಿ ದೀಪ ಹಚ್ಚುವುದರಿಂದ ಮನೆಯಲ್ಲಿ ಇರುವ ಅಂಧಕಾರ ಹೋಗಿ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. 

ತುಪ್ಪ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ..!

ತುಪ್ಪ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಚರ್ಮದ ಕೋಶಗಳನ್ನು ಸಕ್ರೀಯಗೊಳಿಸುತ್ತದೆ. ಇದು ಡರ್ಮಟೈಟಿಸ್ ನಂತಹ ಕಾಯಿಲೆಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಪ್ರತಿ ದಿನ ತುಪ್ಪದ ದೀಪ ಹಚ್ಚುವುದರಿಂದ ಮನೆಯ ವಾತಾವರಣದಲ್ಲಿರುವ ಇರುವ ಮಾಲಿನ್ಯವು ನಿವಾರಣೆಯಾಗುತ್ತದೆ. 

ಇನ್ನು ತುಪ್ಪದ ದೀಪ ಹೊರಸೂಸುವ ಹೊಗೆ ಗಾಳಿಯ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮನೆಯ ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಹ ನಾಶಪಡಿಸುತ್ತದೆ. ತುಪ್ಪದ ದೀಪದ ಸುವಾಹಸೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. 

ತುಪ್ಪದ ದೀಪ ಹಚ್ಚಲು ಧಾರ್ಮಿಕ ಕಾರಣಗಳೇನು..?

ಹಿಂದೂ ಧರ್ಮದಲ್ಲಿ, ಬೆಂಕಿಯನ್ನು ದೇವತೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿ ಪೂಜೆಯನ್ನು ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ತಾಯಿ ಲಕ್ಷ್ಮೀ ದೇವಿ ಕೂಡಾ ಸಂತೋಷದಿಂದ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಎಂದು ಹೇಳಲಾಗುತ್ತದೆ. 

ದೀಪವನ್ನು ಬೆಳಗಿಸುವ ಸರಿಯಾದ ನಿಯಮಗಳೇನು..?

ದೀಪವನ್ನು ಹಚ್ಚುವುರದರಿಂದ ನೀವು ದೀಪದ ಜ್ವಾಲೆಯನ್ನು ಪೂರ್ವಕ್ಕೆ ಇಟ್ಟುಕೊಂಡರೆ, ಅದು ನಿಮ್ಮ ಜೀವತಾವಧಿಯನ್ನು ಹೆಚ್ಚಿಸುತ್ತದೆ. 

ತುಪ್ಪದ ತುಪ್ಪದ ದೀಪವನ್ನು ಬೆಳಗಿಸುವಾಗ, ಅದರ ಜ್ವಾಲೆಯು ಪಶ್ಚಿಮಕ್ಕೆ ಹೋಗಲು ಬಿಡಬೇಡಿ, ಇಲ್ಲದಿದ್ದರೆ ಅದು ನಿಮ್ಮ ಮನೆಯಲ್ಲಿ ದುಃಖವನ್ನು ಹೆಚ್ಚಿಸುತ್ತದೆ.

ತುಪ್ಪದ ದೀಪದ ಜ್ವಾಲೆಯನ್ನು ನೀವು ಉತ್ತರ ದಿಕ್ಕಿನ ಕಡೆಗೆ ಇಟ್ಟುಕೊಂಡರೆ, ಇದರಿಂದ ನೀವು ಪ್ರಯೋಜನ ಪಡೆಯುತ್ ದೀಪವನ್ನು ಯಾವಾಗಲೂ ಬೆಳಗಿಸುವಾಗ, ತುಪ್ಪದ ದೀಪದ ಸುವಾಸನೆ ಇದು ಮನೆಯಲ್ಲಿ ಶಾಂತಿಯ, ವಾತಾವರಣವನ್ನು ಸೃಷ್ಟಿಸುತ್ತದೆ. 

ದೇವರಿಗೆ, ತುಪ್ಪದ ದೀಪ , ಪ್ರಯೋಜನಗಳು, 
ಪೂಜೆ ಮಾಡುವಾಗ ಎಂದಿಗೂ ತುಪ್ಪದ ದೀಪದಿಂದ ಅಗರಬತ್ತಿ ಹಚ್ಚಬೇಡಿ. ಇದ್ರಿಂದ ಬಡತನ ಹೆಚ್ಚಾಗುತ್ತದೆ. ಒಂದು ದೀಪವನ್ನು ಮತ್ತೊಂದು ದೀಪಕ್ಕೆ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. 

ಅಂತೆಯೇ, ದೀಪದೊಂದಿಗೆ ದೀಪವನ್ನು ಎಂದಿಗೂ ಬೆಳಗಿಸಬೇಡಿ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.ಅದೇ ರೀತಿ ದೀಪ ಹಚ್ಚುವಾಗ ಬೆಂಕಿ ಕಡ್ಡಿ ಬಳಸುತ್ತೀರಿ. ಆಗ ಬಾಯಿಂದ ಬೆಂಕಿ ಕಡ್ಡಿ ಆರಿಸಬೇಡಿ. ಕೈಯಿಂದ ನಂದಿಸಿ, ನೀವು ಬಾಯಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೆ ಲಕ್ಷ್ಮೀ ಅಲ್ಲಿಂದ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.

ಪೂಜೆ ವೇಳೆ ಪ್ರಮುಖ ವಿಷಯವೆಂದರೆ, ಪೂಜೆಯ ಸಮಯದಲ್ಲಿ ಮತ್ತು ನಂತರದ ಹಲವು ಗಂಟೆಗಳ ಕಾಲ ದೀಪವನ್ನು ಬೆಳಗಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. 

ಎಣ್ಣೆಗಿಂತ ತುಪ್ಪ ಮುಖ್ಯ…

ಧರ್ಮಗ್ರಂಥಗಳಲ್ಲಿ ಎಣ್ಣೆಗಿಂತ ಹೆಚ್ಚು ತುಪ್ಪದ ದೀಪವನ್ನು ಬೆಳಗಿಸುವುದು ಹೆಚ್ಚು ಮುಖ್ಯ ಎಂದು ಹೇಳಲಾಗುತ್ತದೆ. ಎಣ್ಣೆ ಅಥವಾ ತುಪ್ಪದಿಂದ ದೀಪವನ್ನು ಹಚ್ಚಬೇಕು. ಅದರಲ್ಲೂ ತುಪ್ಪದ ದೀಪ ಹೆಚ್ಚು ಶ್ರೇಷ್ಠ .
***
ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು ಏಕೆ?

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಎಲ್ಲಾ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ?

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ  ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪನದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||
ಶ್ರೀ ಕೃಷ್ಣಾರ್ಪಣಮಸ್ತು   
***

🪔🌼"ದೇವರಿಗೆ ದೀಪ ಹಚ್ಚುವ ಪದ್ಧತಿ"🌼🪔

🌸ದೇವರಿಗೆ ದೀಪ ಹಚ್ಚುವ ಪದ್ಧತಿ ಬಹಳ ಹಿಂದಿನಿಂದಲೂ ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದಿದೆ. ಕೆಲವು ಮನೆಗಳಲ್ಲಿ ದೇವರಿಗೆ ಮುಂಜಾನೆ ದೀಪ ಹಚ್ಚಿದರೆ, ಕೆಲವು ಮನೆಗಳಲ್ಲಿ ಮುಸ್ಸಂಜೆ ವೇಳೆ ದೀಪವನ್ನು ಹಚ್ಚುತ್ತಾರೆ. ಇನ್ನೂ ಕೆಲವು ಮನೆಗಳಲ್ಲಿ ಮುಂಜಾನೆ ಮತ್ತು ಸಂಜೆ ಎರಡೂ ಸಮಯದಲ್ಲಿ ದೀಪವನ್ನು ಹಚ್ಚುತ್ತಾರೆ. ದೇವರಿಗೆ ವಿವಿಧ ರೀತಿಯ ಎಣ್ಣೆಯಿಂದ ದೀಪವನ್ನು ಹಚ್ಚುತ್ತಾರೆ🌸

🌸 ದೇವರಿಗೆ ತುಪ್ಪದ ದೀಪವನ್ನು ಯಾಕೆ ಹಚ್ಚಬೇಕು..? ಎಣ್ಣೆ ಮತ್ತು ತುಪ್ಪದ ದೀಪಕ್ಕಿಂತ ಯಾವ ದೀಪ ಹಚ್ಚುವುದು ಹೆಚ್ಚು ಮಂಗಳಕರ🌸

🌸 ದೇವಿಯ ಬಲಭಾಗದಲ್ಲಿ ತುಪ್ಪದ ದೀಪವನ್ನು ಅಥವಾ ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಬೆಳಗಿಸುವುದು ಮಂಗಳಕರವೆನ್ನುವ ನಂಬಿಕೆಯಿದೆ. ದೇವಿಯನ್ನು ಪೂಜಿಸುವಾಗ ಆಕೆಯ ಎಡಭಾಗದಲ್ಲಿ ತುಪ್ಪದ ದೀಪವನ್ನು ಬೆಳಗಬಾರದು🌸

🌸 ತುಪ್ಪದ ದೀಪವನ್ನು ಯಾವಾಗಲೂ ಹೂವಿನಾಕಾರದ ದೀಪದಲ್ಲಿ ಬಿಳಿ ಲಂಬ ಬೆಳಕಿನಿಂದ ಬೆಳಗಿಸಲಾಗುತ್ತದೆ ಮತ್ತು ಎಣ್ಣೆ ದೀಪವನ್ನು ಉದ್ದವಾದ ದೀಪದಿಂದ ಬೆಳಗಿಸಲಾಗುತ್ತದೆ. ಆದರೆ, ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿದರೆ ಅದರಲ್ಲಿ ಕೆಂಪು ಅಥವಾ ಹಳದಿ ದೀಪವನ್ನು ಬಳಸಬೇಕು🌸

🌸 ತುಪ್ಪದ ದೀಪವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ🌸

🌸 ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ದೇವರುಗಳು ಮತ್ತು ದೇವತೆಗಳು ಸಂತೋಷಪಡುತ್ತಾರೆ🌸

🌸ಶನಿ ದೋಷ ನಿವಾರಣೆಗೆ ಅಥವಾ ಶನಿಯು ನೀಡುವ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು ಉತ್ತಮ🌸

🌸ಹನುಮಂತನನ್ನು ಮೆಚ್ಚಿಸಲು ಬಯಸಿದರೆ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಸಂಕಟಹರಣ ಹನುಮಂತನ ಆರಾಧನೆಗಾಗಿ ಮತ್ತು ಅವನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲು ಬಯಸಿದರೆ ಇದಕ್ಕಾಗಿ ಮೂರು ಮೂಲೆಗಳ ದೀಪವನ್ನು ಬೆಳಗಿಸಬೇಕು🌸

🌸 ಶತ್ರುಗಳನ್ನು ತಪ್ಪಿಸಲು ಭೈರವ ದೇವನ ಸ್ಥಳದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಸೂರ್ಯ ದೇವರನ್ನು ಮೆಚ್ಚಿಸಲು, ಸಾಸಿವೆ ದೀಪವನ್ನು ಸಹ ಬೆಳಗಿಸಲಾಗುತ್ತದೆ🌸

🌸ಗಂಡನ ದೀರ್ಘಾಯುಷ್ಯದ ಆಸೆಯನ್ನು ಪೂರೈಸಲು, ಮನೆಯ ದೇವಸ್ಥಾನದಲ್ಲಿ ಮಹುವಾ ಎಣ್ಣೆಯ ದೀಪವನ್ನು ಬೆಳಗಿಸಬೇಕು🌸

🌸 ರಾಹು ಮತ್ತು ಕೇತು ಗ್ರಹಗಳ ಸ್ಥಿತಿಯನ್ನು ಶಾಂತಗೊಳಿಸಲು, ಅಗಸೆ ಬೀಜದ ಎಣ್ಣೆ ದೀಪವನ್ನು ಬೆಳಗಿಸಬೇಕು🌸

🌸ಮನೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ನೋವನ್ನು ನಾಶಪಡಿಸುತ್ತದೆ🌸

🌸ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ🌸

🌸 ತುಪ್ಪದ ದೀಪವನ್ನು ಹಚ್ಚುವುದರಿಂದ ಗಾಳಿಯು ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳನ್ನು ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಸುವಾಸನೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ🌸

🌸ತುಪ್ಪವು ಚರ್ಮದ ರಕ್ತ ಕಣಗಳನ್ನು ಸಕ್ರಿಯಗೊಳಿಸುವ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಯಾವುದೇ ಚರ್ಮ ರೋಗಗಳು ಬರುವುದಿಲ್ಲ🌸
***

devara peetha

 c


Aajadideepadevarige samarpane








Bramhandadeepa nakshtra Deepa devarige samarpane

30.11.2020
ವ್ಯಾಸ ಪೂಜಾ, ಗೌರಿ ಹುಣ್ಣಿಮೆ (ದೊಡ್ಡ ಗೌರಿ ಹುಣ್ಣಿಮೆ, ದೀಪೋತ್ಸವ ಪೂರ್ಣಿಮ, ವ್ಯಾಸ ಪೂರ್ಣಿಮಾ), ಕಾರ್ತಿಕ ಸ್ನಾನ ಸಮಾಪ್ತಿ, ದಕ್ಷಸಾವರ್ಣಿ ಮನ್ವಾದಿ, ಭೀಷ್ಮ ಪಂಚಕ ವೃತ ಸಮಾಪ್ತಿ, ವಿಷ್ಣುಪಂಚಕ, ಅನ್ವಾಧಾನ, ಕಾಮ್ಯಾವೃಷೋತ್ಸರ್ಗ, ಲಕ್ಷದೀಪೋತ್ಸವ, ಮಹಾಕಾರ್ತಿಕ, ಬಸಲದೊಡ್ಡಿ ಮುಖ್ಯಪ್ರಾಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಸಮಾಪ್ತಿ, ಶ್ರೀಜಯಧ್ವಜತೀರ್ಥರ ಪು (ಯರಗೋಳ).
***

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಹಾಗು ಅದರ ಮಹತ್ವ
ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ.
ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು,ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆ ಯಾಗುತ್ತಿದ್ದರೆ, ಶತೃಗಳ ಕಾಟ ಹೆಚ್ಚಿದ್ದರೆ, ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.
* ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.* ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗೆ 11.00ರಿಂದ 12.30 ವರೆಗೆ ಹಚ್ಚಬಹುದು.
,* ನಿಂಬೆದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.
* ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ನಂತರ ದೇವಿಗೆ ಅಷ್ಟೋತ್ತರ ಮತ್ತು ಪೂಜೆಯನ್ನು ಮಾಡಿಸಬೇಕು.
* ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.
,*ಯಾರಿಗೆ ಸಮಸ್ಸೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರುಬೇಕಾದರು ದೀಪವನ್ನು ಹಚ್ಚಬಹುದು ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.
ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕು ಆರೋಗ್ಯ ಸರಿಇಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು.
ಮಕ್ಕಳ ಹುಟ್ಟುಹಬ್ಬ, ಮದುವೆಯಾದದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.
ಒಂದು ದೀಪ ಹಚ್ಚುವುದರಿಂದ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು.
***

ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು' ನಾವು ದೇವರಿಗೆ ದೀಪ ಯಾಕೆ ಇಡಬೇಕು?' ಅದೊಂದು ದಿನ ನಮ್ಮನ್ನು ಕೇಳಿಯೇ ಬಿಡುತ್ತವೆ. ನೀವು ತಬ್ಬಿಬ್ಬುಗೊಳ್ಳುತ್ತಿರಿ. 'ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು' ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಿರಿ. ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!. ಆದರೆ ಸತ್ಯ ಅದಲ್ಲ. ನೀವು ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿದೀಪ ಅನ್ನುವುದು ಬರೇ ಬೆಳಕಿಗಾಗಿ ಇಡುವುದಲ್ಲ. ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಗನ್ನು ದೇವರಿಗೆ ತಲುಪಿಸುವ ವಾಹಕ. ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ. ನಾವು ಮಾಡುವ ಯಾಗದ ಹವಿಸನ್ನು ಹೇಗೆ ಅಗ್ನಿಯು ಆಯ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ. ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ. ದೀಪವಿಲ್ಲದೆ ನಿಮ್ಮ ಪ್ರಾರ್ಥನೆ ತಲುಪಬೇಕಾದ ಜಾಗವನ್ನು ತಲುಪುವುದಿಲ್ಲ. ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು.ಯಾಕೆಂದರೆ ನಿಮ್ಮ ಪ್ರಾರ್ಥನೆ ಭಗವಂತನನ್ನು ತಲುಪಲಿಲ್ಲ ಅನ್ನುವುದೇ ಅದರ ತಾತ್ಪರ್ಯ.ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು.ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ಧೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ. ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ. ಪ್ರಾರ್ಥನೆಗಳು ಫಲಿಸುತ್ತವೆ. ದೇವರಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ.ಕಾರಣಿಕಗಳು ಮಾತಾಡುತ್ತವೆಇನ್ನು ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚರವಾಗಿದೆ. ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ.ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಆರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ....
                         ✍🏼  ಸಂಗ್ರಹಿತ
***


ದೇವರಪೂಜೆಯ ನಂತರ ದೇವರಿಗೆ ಧೂಪ ತೋರಿಸುವ ಪದ್ಧತಿಯಿದೆ. ಧೂಪ ತೋರಿಸಿದರೆ ವಾಸ್ತುವಿನ ಶುದ್ಧಿಯಾಗುತ್ತದೆ. ದೇವರಿಗೆ ಸುಗಂಧಿತ ಧೂಪವು ಪ್ರಿಯವಾದ್ದರಿಂದ ಧೂಪ ತೋರಿಸಿದಾಗ ದೇವರು ಪ್ರಸನ್ನರಾಗುತ್ತಾರೆ. ಪ್ರಾತಃಕಾಲದಲ್ಲಿ ಧೂಪ ತೋರಿಸುವುದು ಸಾಧ್ಯವಾಗದಿದ್ದಲ್ಲಿ, ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದ ನಂತರವೂ ಧೂಪ ತೋರಿಸಬಹುದು.

ಧೂಪಕ್ಕಾಗಿ ಬೇಕಾಗುವ ಸಾಮಗ್ರಿಗಳು

ಇದ್ದಿಲು (೮-೧೦), ಅಥವಾ ಹಸುವಿನ ಬೆರಣಿ (೨ ತುಂಡುಗಳು), ಧೂಪ ಪಾತ್ರೆ, ಇದ್ದಿಲನ್ನು ಉರಿಸಲು ಕರ್ಪೂರ ಅಥವಾ ತುಪ್ಪ, ಬೆಂಕಿಪೆಟ್ಟಿಗೆ, ಧೂಪ ಮತ್ತು ಬೀಸಣಿಗೆ ಅಥವಾ ಕಾರ್ಡ್ ಬೋರ್ಡ್.

ಪ್ರತ್ಯಕ್ಷ ಕೃತಿ

ಧೂಪದ ಪಾತ್ರೆಯಲ್ಲಿ ಇದ್ದಿಲು ಅಥವಾ ಬೆರಣಿಯನ್ನು ಇಡಿರಿ. ಕರ್ಪೂರ ಉಪಯೋಗಿಸಿ ಅದನ್ನು ಉರಿಸಿರಿ. ಪ್ರಜ್ವಲಿತ ಬೆಂಕಿಯ ಮೇಲೆ ಧೂಪ ಹಾಕಿರಿ. ಈಗ ಧೂಪದ ಪಾತ್ರೆಯನ್ನು ವಾಸ್ತುವಿನ ಎಲ್ಲ ಕಕ್ಷೆಗಳಿಗೆ ತೆಗೆದುಕೊಂಡು ಹೋಗಿ. ಆದರೆ ಗಮನದಲ್ಲಿಡಿರಿ, ಧೂಪವನ್ನು ಕೈಯಿಂದ ಹರಡಲೇಬೇಡಿ.

ಕೋಣೆಯಲ್ಲಿ ಧೂಪ ತೋರಿಸುವುದು

೧. ಧೂಪದ ಪಾತ್ರೆಯನ್ನು ಎಡಗೈಯಲ್ಲಿ ಹಿಡಿದುಕೊಳ್ಳಿರಿ.
೨. ಬಲಗೈಯಲ್ಲಿ ಬೀಸಣಿಕೆ ಹಿಡಿದು ಹೊರ ದಿಕ್ಕಿಗೆ ಬೀಸುತ್ತಾ ಹೊಗೆ ಹರಡಿರಿ.

ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ; ಆದರೆ ಪ್ರತಿದಿನ ಧೂಪ ತೋರಿಸುವುದು ಸಾಧ್ಯವಾಗದಿದ್ದರೆ ವಾರದಲ್ಲಿ ಒಮ್ಮೆಯಾದರೂ ಅವಶ್ಯವಾಗಿ ಧೂಪ ತೋರಿಸಿರಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)
***


No comments:

Post a Comment