SEARCH HERE

Tuesday 1 January 2019

30 ಮೂವತ್ತು ನಿಮಿಷಗಳಲ್ಲಿ ನಿತ್ಯ ದೇವರ ಪೂಜೆ devara pooja in 30 minutes puja




ನಿಮಗೂಗೊತ್ತಿರಲಿಅಂತ

ನಾವು ಪೂಜೆ ಮಾಡುವಾಗ ಸ್ತ್ರೀ ದೇವತೆಗೆ ತುದಿಯಲ್ಲಿ ದೀರ್ಘ ಸೇರಿಸಿ ಹೇಳ ಬೇಕು.
ಉದಾ : ಸರಸ್ವತೀ ; ಬನಶಂಕರೀ  ಗಾಯತ್ರೀ  ಅಂಬಿಕಾ - ಲಕ್ಷ್ಮೀ  ಈ ರೀತಿಯಾಗಿ  ಮತ್ತೆ ನಮಸ್ಕಾರ ಮಾಡುವಾಗ ಹೀಗೆ ; ನಮಃ ಹೇಳುವಾಗ - ಸರಸ್ವತ್ಯೈ (ತ್+ತ್+ಐ) ಅಂಬಿಕಾಯೈ ನಮಃ ; ಲಕ್ಷ್ಮೀ ದೇವ್ಯೈ ನಮಃ||  ಐ ,ಕಾರ ನನ್ನು ಸೇರಿಸಿ  ಹೇಳಬೇಕು .
      ಮತ್ತು ಪುರುಷ ದೇವತೆಗಳಿಗೆ  ನಮಸ್ಕರಿಸುವಾಗ  ಅ ಕಾರ  ಮತ್ತು  ಏ ಕಾರ ನನ್ನು ಸೇರಿಸಬೇಕು 
ಓಂ ಗುರವೇ ನಮಃ ; ಶ್ರೀವಿಷ್ಣುವೇ ನಮಃ || ಓಂ ಅಥವಾ ಶ್ರೀ ಸೇರಿಸಿ ಅಥವಾ ಎರಡನ್ನೂ ಸೇರಿಸಿ ಹೇಳಬಹುದು .. -  ಶಿವನಿಗೆ ಶಿವಾಯ ನಮಃ , 
ದೇವಾಯ ನಮಃ ಪುಲ್ಲಿಂಗ , ದೇವೈ ನಮಃ ಸ್ತ್ರೀ ಲಿಂಗ.
****

for sampradaya songs during deepavali read/click

DEVA PUJA 
Before commencing puja, keep ready some important things; what are they, please go through this write upread/click
ದೇವರ ಮನೆ ಪೂಜೆ ಸಂಕಲ್ಪ ದೇವರ ವಿಚಾರ ಪೂಜಾ ಸಾಮಗ್ರಿಗಳು devara mane vichara puja items sankalpa  


ನಿತ್ಯ ದೇವರ ಪೂಜೆ ಮಾಡ ಬಯಸುವವರು. ಹಾಗು ಕಾಲದ ಒತ್ತಡ ಇರುವವರು ಮೂವತ್ತು ನಿಮಿಷಗಳಲ್ಲಿ ಈ ಕೆಳಕಂಡಂತೆ ದೇವರ ಪೂಜೆಯನ್ನು ಮಾಡಬಹುದು. 

ಷೋಡಶೋಪಚಾರದಿಂದ ಪೂಜೆ. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ.  ಇವುಗಳ ವಿವರ ಕೆಳಗಿದೆ: 

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
********

To keep up our tradition without compromising quality and in this high level of time shortages, for youngsters, this may help

ನಿತ್ಯ ದೇವರ ಸಂಕ್ಷಿಪ್ತ ಪೂಜೆ ಮಾಡುವ ಕ್ರಮ
[ನಿತ್ಯ ದೇವರ ಪೂಜೆಯನ್ನು ಸಂಕ್ಷಿಪ್ತವಾಗಿ ಮಾಡ ಬಯಸುವವರು ಮೂವತ್ತು ನಿಮಿಷಗಳಲ್ಲಿ ದೇವರ ಪೂಜೆಯನ್ನು ಈ ಕೆಳಕಂಡಂತೆ ಮಾಡಬಹುದು]
ಶ್ರೀ ಗುರುಭ್ಯೋ ನಮಃ|| ಹರಿಃ ಓಂ ||  
                                                       ಓಂ, ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
[ದೇವರ ಸ್ಮರಣೆ ಮಾಡುತ್ತಾ ಶಿರಸ್ಸಿಗೆ ನೀರು ಪ್ರೊಕ್ಷಣೆ ಮಾಡಿಕೊಳ್ಳಬೇಕು] 
ದೀಪ ಪ್ರಜ್ಯಾಲಯಾಮ್:   
[ದೀಪವನ್ನು ಹಚ್ಚಿ ನಮಸ್ಕರಿಸುವುದು]                            ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ| ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪ ಪ್ರಜ್ಯಾಲಯಾಮ್ಯಾಹಂ||
ಆಚಮನ  [ದ್ವಿರಾಚಮ್ಯ]
ಪ್ರಾರ್ಥನಂ:
ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ || ಶ್ರೀ ಕುಲದೇವತಾಭ್ಯೋ ನಮಃ | ಇಷ್ಟದೇವತಾಭ್ಯೋ ನಮಃ |  ಗ್ರಾಮದೇವತಾಭ್ಯೋ ನಮಃ | ಸ್ಥಾನದೇವತಾಭ್ಯೋ ನಮಃ | ಆದಿತ್ಯಾದಿನವಗ್ರಹ ದೇವತಾಭ್ಯೋ ನಮಃ |     ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮಃ | ಏತತ್ಕರ್ಮಪ್ರಧಾನದೇವತಾಭ್ಯೋ ನಮಃ |
(ಇಲ್ಲಿ ಕುಲದೇವತಾ, ಇಷ್ಟದೇವತಾ ಎಂದಕಡೆಯಲ್ಲಾ ನಿಮ್ಮ ಮನೆ ದೇವರ, ನಿಮ್ಮ ಇಷ್ಟ ದೇವರ ಹೆಸರನ್ನು ಹೇಳಬಹುದು)
ಘಂಟಾನಾದನಂ:  [ಘಂಟೆಗೆ ಹೂವು ಅಕ್ಷತೆ ಏರಿಸಿ ಗಂಟೆ ಬಾರಿಸುವುದು] 
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ || ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ ||     ಇತಿ ಘಂಟಾನಾದಂ ಕೃತ್ವಾ ||
|| ನಿರ್ವಿಘ್ನಮಸ್ತು ||                 
ಶ್ರೀ ಮಹಾಗಣಪತಯೇ ನಮಃ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ || 
ಭೂತೋಚ್ಚಾಟನಂ:
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ || ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ || ಅಪಕ್ರಾಮಂತು ಭೂತಾದ್ಯಾಃ ಸರ್ವೇತೇ ಭೂಮಿ ಭಾರಕಾಃ || ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇತ್ ||
ಆಸನಶುದ್ದಿಃ  
[ಶುಚಿಗೊಳಿಸಿದ ಪೀಠವನ್ನು ಮುಟ್ಟುವುದು, ಪೀಠದ ಮೇಲೆ ನಾಲ್ಕು ದಿಕ್ಕಿಗೂ ಹೂವು ಇಡುವುದು]  
ಪೃಥಿವೀತಿ ಮಂತ್ರಸ್ಯ ಮೇರುಪೃಷ್ಠ ಋಷಿಃ | ಕೂರ್ಮೋ ದೇವತಾ ಸುತಲಂ ಛಂದಃ ಆಸನೇ ವಿನಿಯೋಗಃ |                                                                                                                                              ಅನಂತಾಸನಾಯ ನಮಃ || ಕೂರ್ಮಾಸನಾಯ ನಮಃ ||                      ಪೃಥ್ವಿ ತ್ವಯಾ ಧೃತಾ ಲೋಕ ದೇವಿತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವಿ ಪವಿತ್ರಮ್ ಕುರುಚಾಸನಮ್ ||
ಆಚಮನ,  ಪ್ರಾಣಾಯಾಮ ಮಾಡುವುದು.
ಸಂಕಲ್ಪಃ      
[ ಕೈಯಲ್ಲಿ ಹೂವು ಅಕ್ಷತೆ ತೆಗೆದುಕೊಂಡು ಎಡಕೈಯಲ್ಲಿ ಹಾಕಿ ಬಲಗೈಯನ್ನು ಮುಚ್ಚಿ , ಬಲ ತೊಡೆಯ ಮೇಲೆ ಇಟ್ಟುಕೊಂಡು ಹೇಳಬೇಕು ] 
ಶುಭಾಭ್ಯಂ ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ  ವ್ಯೆವಸ್ವತ ಮನ್ವಂತರೇ  ಕಲಿಯುಗೇ ಪ್ರಥಮ ಪಾದೇ  ಜಂಬೂದ್ವೀಪೇ  ಭರತವರ್ಷೆ ಭರತ ಖಂಡೇ  ದಂಡಕಾರಣ್ಯೇ  ಗೋದಾವರ್ಯಾಃ  ದಕ್ಷಿಣೇ ತೀರೇ  ಶಾಲಿವಾಹನ ಶಕೆ  ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ _ಆಯನೇ _ಋತೌ_ಮಾಸೇ _ಪಕ್ಷೇ _ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ  ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ,  ಮಮ ಉಪಾತ್ತ     ಸಮಸ್ತ ದುರಿತಕ್ಷಯದ್ವಾರ | ಶ್ರೀ ಪರಮೇಶ್ವರ ಪ್ರೀತ್ಯರ್ಥಂ | ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ |                  ಯಥಾಶಕ್ತಿ,  ಯಥಾ ಜ್ಞಾನ,  ಧ್ಯಾನ-ಆವಾಹನಾದಿ  ಷೋಡಶೋಪಚಾರ  ಪೂಜಾಂ  ಕರಿಷ್ಯೇ || 
[ ಎಡಗೈಯಲ್ಲಿ ಇರುವ ಹೂ ಅಕ್ಷತವನ್ನು ಬಲಗೈಗೆ ಹಾಕಿ ಎಡಗೈಯಿಂದ ಒಂದು ಸೌಟು ನೀರು ಹಾಕಿ ಹರಿವಾಣಕ್ಕೆ ಬಿಡಬೇಕು ]
ತದಂಗತ್ವೇನ  ಕಲಶಾರ್ಚನಂ, ಶಂಖಾರ್ಚನಂ ಚ ಕರಿಷ್ಯೇ |                                                                              [  "ಕರಿಷ್ಯೇ" ಎಂದಾಗಲೆಲ್ಲಾ ಬಲಹಸ್ತದಿಂದ ನಾಲ್ಕು ಬೆರಳ ತುದಿಯಿಂದ ಹರಿವಾಣಕ್ಕೆ ಒಂದು ಸೌಟು ನೀರು ಬಿಡಬೇಕು ]
ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪ್ರಾರ್ಥನಂ ಚ ಕರಿಷ್ಯೇ ||   
ಓಂ, ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ || ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ | ದ್ವಾದಶೈತಾನಿ ನಾಮಾನಿ ಯಃ ಪಠೇತ್ ಶೃಣುಯಾದಪಿ |  ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ ||
|| ಅಥ ಕಲಶ ಪೂಜಾಂ ||                             [ನೀರು ತುಂಬಿದ ಕಲಶವನ್ನು ದೇವರ ಬಲ/ಎದುರು/ನಮ್ಮ ಬಲ ಭಾಗದಲ್ಲಿ, ನೀರಿನಲ್ಲಿ ನೆಲದ ಮೇಲೆ ಚತುರಶ್ರ ಮಂಡಲಹಾಕಿ ಅದರ ಮೇಲಿಟ್ಟು, ಅದಕ್ಕೆ ಹೂವು,ದೂರ್ವೆ, ತುಲಸಿ ಕುಡಿ ಹಾಕಿ, ಅದರ ಮೇಲೆ (ಎರಡು) ಕೈ ಇಟ್ಟುಕೊಂಡು ಅಭಿಮಂತ್ರಿಸುವುದು]    
ಕಲಶಸ್ಯ ಮುಖೇ ವಿಷ್ಣುಃ | ಕಂಠೇ ರುದ್ರಃ ಸಮಾಶ್ರಿತಃ | ಮೂಲೇ ತತ್ರ ಸ್ಥಿತೋ ಬ್ರಹ್ಮಾ | ಮಧ್ಯೇ ಮಾತೃಗಣಾಃ ಸ್ಮೃತಾಃ ||     ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುಂಧರಾ | ಋಗ್ವೇದೋSಥ ಯಜುರ್ವೇದಃ ಸಾಮವೇದೋ-ಹ್ಯಥರ್ವಣಃ ||   
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಓಂ ಭೂರ್ಭುವಸ್ಸುವಃ ||  ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ || 
ಕಲಶಾಧಿ ದೇವತಾಭ್ಯೋ ನಮಃ || ಗಂಧ ಪುಷ್ಪಾ ಅಕ್ಷತಾನ್ ಸಮರ್ಪಯಾಮಿ | ಇತಿ ಕಲಶಾರ್ಚನಂ ||     
(ಗಂಧ ಮುಟ್ಟಸಿದ ಹೂವು, ದೂರ್ವೆ, ತುಳಸಿ ಹಾಕಿ ನಮಸ್ಕರಿಸುವುದು)
|| ಅಥ ಶಂಖ ಪೂಜಾಂ ||                             [ಶಂಖವನ್ನು ಕೈಯಲ್ಲಿ ತೆಗೆದುಕೊಂಡು ಓಂಕಾರ ಹೇಳಿ, ನೀರು ತುಂಬಿಸಿ, ಗಂಧ ಪುಷ್ಪಾದಿಗಳನ್ನು ಅದಕ್ಕೆ ಏರಿಸಿ, ಪುನಃ ಅದರ ಸ್ಥಾನದಲ್ಲಿಡುವುದು] 
ಶಂಖಂ ಚಂದ್ರಾರ್ಕ ದೈವತ್ಯಂ ಮಧ್ಯೇ ವರುಣ ದೇವತಾಃ | ಪೃಷ್ಟೇ ಪ್ರಜಾಪತಿಸ್ತತ್ರ ಅಗ್ರೇ ಗಂಗಾ ಸರಸ್ವತಿ || ಪಾಂಚಜನ್ಯಾಯ ವಿದ್ಮಹೇ ಪದ್ಮ ಗರ್ಭಾಯ ಧೀಮಹಿ | ತನ್ನಃ ಶಂಖ ಪ್ರಚೋದಯಾತ್ ||                               
ಇತಿ ಶಂಖಾರ್ಚನಂ ||   
[ಶಂಖ ಜಲವನ್ನು ಸ್ವಲ್ಪ ಕಳಶಕ್ಕೆ ಹಾಕಿ, ತುಳಸೀ ಕುಡಿಯಿಂದ ತನಗೂ, ಉಪಕರಣಗಳಿಗೂ, ಚಮಕಿಸಿ ಉಳಿದುದನ್ನು ಬರಿದುಮಾಡಿ, ಪುನಃ ಓಂಕಾರದಿಂದ ಕಲಶದ ನೀರನ್ನು ತುಂಬಿ ಯಥಾಸ್ಥಾನದಲ್ಲಿ- ಮಂಟಪದಲ್ಲಿ ದೇವರ ಬಲಕ್ಕೆ ಚಿಕ್ಕ ಬಟ್ಟಲಲ್ಲಿ ಇಡುವದು]
|| ಅಥ ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪೂಜಾಂ ಚ ಕರಿಷ್ಯೇ ||                                                                         [ ಹೂವು ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದುಕೊಂಡು, ನಿತ್ಯಪೂಜೆಯನ್ನು ನಿರ್ವಿಘ್ನದಿಂದ ನಡೆಸಿಕೊಡುವಂತೆ ಗಣಪತಿಯನ್ನು ಪ್ರಾರ್ಥಿಸಿಕೊಂಡು ನಂತರ ಷೋಡಶೋಪಚಾರ ಪೂಜೆಯನ್ನು ಮಾಡುವುದು. ನಿತ್ಯ ಪೂಜೆಯಲ್ಲಿ ಗಣಪತಿಯ ಸ್ಮರಣೆ ಮತ್ತು ಶ್ಲೋಕಗಳನ್ನು ಪಠಿಸಿದರೆ ಸಾಕು ]
ಓಂ ಶ್ರೀ ಮಹಾಗಣಪತಯೇ ನಮಃ || ಧ್ಯಾಯಾಮಿ || 
ಓಂ ಗಣಾನಾಂ” ತ್ವಾ ಗಣಪ’ತಿಂ ಹವಾಮಹೇ | ಕವಿಂ ಕ’ವೀನಾಮ್-ಉಪಮಶ್ರ’ವಸ್ತಮಂ | 
ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಸ್ಪತ | ಆ ನಃ’ ಶೃಣ್ವನ್ನೊತಿಭಿ’ಸ್ಸೀದ ಸಾದ’ನಂ ||  
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ |
ಶ್ರೀ ಮಹಾಗಣಪತಯೇ ನಮಃ | ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ || ಸಮಸ್ಕಾರಾನ್ ಸಮರ್ಪಯಾಮಿ ||
ಮನಸಾಭೀಷ್ಟ ಪ್ರಾರ್ಥನಾನ್ ಸಮರ್ಪಯಾಮಿ ||  [ ಕೈ ಮುಗಿದು ಪ್ರಾರ್ಥಿಸುವುದು]
ಅನಯಾ ಪೂಜಯಾ ಮಹಾಗಣಪತಿಃ  ಸುಪ್ರೀತಃ  ಸುಪ್ರಸನ್ನೋ  ವರದೋ ಭವತು | ಮಮ  ಇಷ್ಟಾರ್ಥ ಸಿದ್ಧಿರಸ್ತು  ||
[ ನಿತ್ಯ ಪೂಜೆಯಲ್ಲಿ ಗಣಪತಿಯ ಪೂಜೆ ಇಷ್ಟೇ ಸಾಕು ]
__________
|| ತತ್ವಾರ್ಥ ಧ್ಯಾನಂ ||  [ ಆತ್ಮಾರಾಧನೆ ]                                                                                                                      
ದೇಹೋ ದೇವಾಲಯಃ  ಪ್ರೋಕ್ತೋ   ಜೀವೋ ದೇವಃ ಸದಾಶಿವಃ | ತ್ಯಜೇದ್ ಅಜ್ಞಾನ ನಿರ್ಮಾಲ್ಯಂ   ಸೋಹಂ ಭಾವೇನ ಪೂಜಯೇತ್ ||   [ದೇಹವನ್ನು ದೇವಾಲಯವೆಂದೂ, ಜೀವನು ಪರಮಾತ್ಮನಾದ ಸದಾಶಿವನೆಂದು ಭಾವಿಸಿ ಅಜ್ಞಾನ ತೊರೆದು ಪೂಜಿಸಬೇಕು.]
|| ಅಥ ಧ್ಯಾನಂ ||             
ಶಾಂತಂ ಪದ್ಮಾಸನಸ್ಥಂ ಶಶಿಧರ-ಮಕುಟಂ ಪಂಚವಕ್ತ್ರಂ ತ್ರಿನೇತ್ರಂ | ಶೂಲಂ ವಜ್ರಂ ಚ ಖಡ್ಗಂ ಪರಶು-ಮಭಯದಂ ದಕ್ಷಭಾಗೇ ವಹಂತಂ | ನಾಗಂ ಪಾಶಂ ಚ ಘಂಟಾಂ ಪ್ರಳಯ-ಹುತವಹಂ ಸಾಂಕುಶಂ ವಾಮಭಾಗೇ | ನಾನಾಲಂಕಾರಯುಕ್ತಂ ಸ್ಪಟಿಕ-ಮಣಿ-ನಿಭಂ ಪಾರ್ವತೀಶಂ ನಮಾಮಿ || 
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ | ವಿಶ್ವಾಧಾರಂ ಗಗನ-ಸದೃಶಂ ಮೇಘವರ್ಣಂ ಶುಭಾಂಗಂ | 
ಲಕ್ಷೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ | ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ||
ll ಷೋಡಶೋಪಚಾರ ಪೂಜಾಂ ||    
ಶ್ರೀ ಮಹಾಗಣಪತಯೇ ನಮಃ || 
ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ ||  ಸರ್ವೇಭ್ಯೋ ದೇವೇಭ್ಯೋ ನಮಃ ||
ಆವಾಹಯಾಮಿ | ಆಸನಂ ಸಮರ್ಪಯಾಮಿ |
ಪಾದಾರವಿಂದಯೋಃ  ಪಾದ್ಯಂ-ಪಾದ್ಯಂ ಸಮರ್ಪಯಾಮಿ |       
ಹಸ್ತಯೋಃ  ಅಘ್ರ್ಯಮಘ್ರ್ಯಂ ಸಮರ್ಪಯಾಮಿ | 
ಮುಖೇ ಆಚಮನೀಯಂ ಸಮರ್ಪಯಾಮಿ |
ಅಥ ಮಲಾಪಕರ್ಷಣ ಸ್ನಾನಂ ಕರಿಷ್ಯೇ ||  [ಸಾಲಿಗ್ರಾಮಾದಿ ಶಿಲೆಗಳನ್ನು, ದೇವರ ಮೂರ್ತಿಗಳನ್ನು ನೀರಿನಿಂದ ಅಭಿಷೇಕ ಮಾಡಬೇಕು]   
ಓಂ,  ಆಪೋಹಿಷ್ಠಾ ಮಯೋ ಭುವಃ | ತಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ | ಯೋವಃ  ಶಿವತಮೋರಸಃ | ತಸ್ಯ ಭಾಜಯತೇ ಹನಃ | ಉಶತೀರಿವ ಮಾತರಃ | ತಸ್ಮಾ ಅರಂಗ ಮಾಮವಃ | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ || 
ಮಲಾಪಕರ್ಷಣ ಸ್ನಾನಂ ಸಮರ್ಪಯಾಮಿ ||   ತದನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ ||                 
[ಸೂಚನೆ: ಸಮಯಾವಕಾಶವಿದ್ದಲ್ಲಿ -  ಶ್ರೀರುದ್ರ,  ಚಮಕ, ಪುರಷಸೂಕ್ತ, ನಾರಾಯಣಸೂಕ್ತ, ಆದಿತ್ಯ, ಗಣಪತಿಸೂಕ್ತಗಳನ್ನು ಪಠಿಸಿ ಅಭಿಷೇಕ ಮಾಡಬಹುದು. ಶುದ್ಧೋದಕ ಸ್ನಾನದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಒರೆಸುವಾಗ ಶ್ರೀಸೂಕ್ತವನ್ನು ಹೇಳವುದು ರೂಡಿಯಲ್ಲಿದೆ]
ಪಂಚಾಮೃತ ಸ್ನಾನಂ ಕರಿಷ್ಯೇ ||  [ವಿಶೇಷ ದಿನಗಳಲ್ಲಿ ಮಾತ್ರ ಪಂಚಾಮೃತ ಅಭಿಷೇಕ ]                                                    
ಅಥ ಪಂಚಾಮೃತ ಸ್ನಾನಂ ||  [ಸಾಮೂಹಿಕ]
ಕ್ಷೀರೋದಧಿ ಘೃತಂ ಚೈವ ಮಧುಶರ್ಕರ ಸಂಯುತಂ | ಫಲೋದಕಂ ಮಹಾದೇವ  ಪ್ರೋಕ್ಷಯಾಮಿ ಮಹೇಶ್ವರ ||
ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ | ಶ್ರೀ........ ದೇವತಾಭ್ಯೋ ನಮಃ | ಸರ್ವಾಭ್ಯೋ ದೇವತಾಭ್ಯೋ ನಮಃ | ಪಂಚಾಮೃತಸ್ನಾನಂ ಸಮರ್ಪಯಾಮಿ. [ಸೂಚನೆ: ಸಮಯಾವಕಾಶವಿದ್ದಲ್ಲಿ ಪಂಚಾಮೃತದಿಂದ ಪ್ರತ್ಯೇಕವಾಗಿ ಅಭಿಷೇಕ ಮಾಡಬಹುದು]
ಪಂಚಾಮೃತ ಸ್ನಾನಾನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ | ತದನಂತರೇ ಆಚಮನೀಯಂ ಸಮರ್ಪಯಾಮಿ || 
ಪೀಠೇ ಪ್ರತಿಷ್ಠಾಪ್ಯ ||   
[ಅಭಿಷೇಕ ಮಾಡಿದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಒರಸಿ, ಗಂಧ-ಅಕ್ಷತೆ ಹಚ್ಚಿ, ಪೂಜಾ ಸಂಪುಟ/ಮಂಟಪದಲ್ಲಿ ಇಟ್ಟು ಪೂಜೆಯನ್ನು ಮುಂದುವರೆಸಬೇಕು]                        
ವಸ್ತ್ರಯುಗ್ಮಂ ಸಮರ್ಪಯಾಮಿ ||
ಉಪವೀತಂ ಸಮರ್ಪಯಾಮಿ ||
ಆಭರಣಂ ಸಮರ್ಪಯಾಮಿ ||
ಗಂಧಾನ್,  ಅಕ್ಷತಾನ್ ಸಮರ್ಪಯಾಮಿ ||
ಪತ್ರಂ ಸಮರ್ಪಯಾಮಿ ||
ಪರಿಮಳ ಪುಷ್ಪಾಣಿ ಸಮರ್ಪಯಾಮಿ ||      
ಧೂಪಂ ಆಘ್ರಾಪಯಾಮಿ ||   
ದೀಪಂ ದರ್ಶಯಾಮಿ ||    
ದೀಪಾನಂತರೇ  ನೈವೇದ್ಯಂ  ನಿವೇದಯಾಮಿ ||
ಅಥ ನೈವೇದ್ಯಂ ||        
[ಚತುರಸ್ರ ಮಂಡಲ ಬರೆದು ಅದರಮೇಲೆ ಅನ್ನವನ್ನೂ ಇತರ ಉಪಸ್ಕರಗಳನ್ನೂ ನೈವೇದ್ಯಕ್ಕೆ ಇಡುವುದು. ತುಪ್ಪದಿಂದ ಅಭಿಗಾರ ಮಾಡಿ, ತುಲಸೀದಲ ಹಾಕಿ, ಗಾಯತ್ರೀ ಮಂತ್ರದಿಂದ ಪ್ರೋಕ್ಷಣೆ ಮಾಡುವುದು] 
" ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ " 
ಸತ್ಯಂತ್-ವರ್ತೇನ ಪರಿಷಿಂಚಾಮಿ [ನೀರಿನಿಂದ ಸುತ್ತು ಕಟ್ಟಬೇಕು]  
|| ಶ್ರೀ ಅನ್ನಪೂರ್ಣೆಶ್ವರೈ ನಮಃ ||            
ಅಮೃತಂ ಅಸ್ತು | ಅಮೃತೋಪಸ್ತರಣಮಸಿ ಸ್ವಾಹಾ  || (ನೈವೇದ್ಯ ಪದಾರ್ಥಗಳ ಮೇಲೆ ಒಂದು ಉದ್ದರಣೆ ನೀರನ್ನು ಹಾಕಬೇಕು) 
ಓಂ ಪ್ರಾಣಾಯ ಸ್ವಾಹಾ |  
ಓಂ ಅಪಾನಾಯ ಸ್ವಾಹಾ |  
ಓಂ ವ್ಯಾನಾಯ ಸ್ವಾಹಾ |   
ಓಂ ಉದಾನಾಯ ಸ್ವಾಹಾ |   
ಓಂ ಸಮಾನಾಯ ಸ್ವಾಹಾ |  
ಓಂ ಬ್ರಹ್ಮಣೇ ಸ್ವಾಹಾ |                      
[ನೈವೇದ್ಯ ಪದಾರ್ಥಗಳನ್ನಿಟ್ಟಿರುವ ದಿಕ್ಕಿನಿಂದ ದೇವರಿರುವ ದಿಕ್ಕಿಗೆ ಕೈ ತೋರಿಸುತ್ತಾ, ದೇವರು ನೈವೇದ್ಯವನ್ನು ಸ್ವೀಕರಿಸಿದಂತೆ ಗ್ರಹಿಸಬೇಕು]
|| ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ ||  ಸರ್ವೇಭ್ಯೋ ದೇವೇಭ್ಯೋ ನಮಃ || 
ಭಕ್ಷ್ಯ ಭೋಜ್ಯ ಸಹಿತ ಮಹಾನೇವೇದ್ಯಂ ನಿವೇದಯಾಮಿ ||  
ನಾರಿಕೇಲಾದಿ ನಾನಾವಿಧ ಫಲಂ ನಿವೇದಯಾಮಿ |
ಮಧ್ಯೇ-ಮಧ್ಯೇ ಅಮೃತ ಪಾನೀಯಂ ಸಮರ್ಪಯಾಮಿ | ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಕಿಂಚಜ್ಜಲ ಸಮರ್ಪಯೇತ್ |  ಉತ್ತರಾಪೋಷನಂ - ಹಸ್ತ ಪ್ರಕ್ಷಾಲನಂ - ಮುಖ ಪ್ರಕ್ಷಾಲನಂ - ಪಾದ ಪ್ರಕ್ಷಾಲನಂ - ಪುನರಾಚಮನಂ  ಸಮರ್ಪಯಾಮಿ ||
[ಪ್ರತಿ(5) ಸಾರಿಯೂ ಉದ್ಧರಣೆಯಿಂದ ನೀರನ್ನು ತೆಗೆದು ಅಘ್ರ್ಯಪಾತ್ರೆಯಲ್ಲಿ ಬಿಡಬೇಕು]
ತಾಂಬೂಲಂ ಸಮರ್ಪಯಾಮಿ ||   
ದಕ್ಷಿಣಾಂ ಸಮರ್ಪಯಾಮಿ || 
ಮಂಗಲ-ಆರ್ತಿಕ್ಯ ದೀಪಂ ದರ್ಶಯಾಮಿ ||
[ಘಂಟೆ, ಜಾಗಟೆ, ಶಂಖ ಇತ್ಯಾದಿ ಮಂಗಳವಾದ್ಯಗಳನ್ನು ಬಾರಿಸುತ್ತಾ ತುಪ್ಪದ ಬತ್ತಿ ಅಥವಾ ಕರ್ಪೂರವನ್ನು ಹಚ್ಚಿ, ಹಲಗಾರತಿಯ / ತಟ್ಟೆಯಲ್ಲಿ ಹೂವು, ಪತ್ರೆ, ಅಕ್ಷತೆಯನ್ನು ಇಟ್ಟುಕೊಂಡು ಆರತಿ ಮಾಡಬೇಕು. ನಂತರ ಗಂಟೆಯನ್ನು ಕೆಳಗಿಟ್ಟು, ಅದಕ್ಕೆ ಹೂವು ಅಕ್ಷತೆ ಹಾಕಿ, ಆರತಿ ಎತ್ತಿ, ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ ವಿಸರ್ಜಿಸುವುದು. ಹಲಗಾರತಿ/ತಟ್ಟೆಯಲ್ಲಿರುವ ಪತ್ರ, ಪುಷ್ಪವನ್ನು ಉರಿಯುತ್ತಿರುವ ಆರತಿಗೆ ತೋರಿಸಿ, ಅದನ್ನು ದೇವರಿಗೆ ಸಮರ್ಪಿಸಬೇಕು]
ಮಂಗಲ-ಆರ್ತಿಕ್ಯ ದೀಪಾನಂತರೇ  ಆಚಮನೀಯಂ ಸಮರ್ಪಯಾಮಿ ||  [ಒಂದು ಉದ್ಧರಣೆ ನೀರನ್ನು ಅಘ್ರ್ಯ ಪಾತ್ರೆಯಲ್ಲಿ ಬಿಡುವುದು]
ಅಥ ಮಂತ್ರ ಪುಷ್ಪಂII     
[ಕೈಯಲ್ಲಿ ಪುಷ್ಪವನ್ನು ಹಿಡಿದುಕೊಂಡು] 
ಓಂ ಗಣಾನಾಮ್ ತ್ವಾ ಗಣಪತಿಗ್‍ಮ್ ಹವಾಮಹೇ ಕವಿಂ ಕವೀನಾಮ್ ಉಪಮಶ್ರವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಮ್ ||
ಶ್ರೀ ವಿಘ್ನೇಶ್ವರಾಯ ನಮ:
ಪ್ರಣೋದೇವೀ ಸರಸ್ವತೀ | ವಾಜೇಭಿರ್ ವಾಜಿನೀವತೀ | ಧೀನಾಮವಿತ್ರ್ಯವತು ||
ಓಂ ರಾ॒ಜಾ॒ಧಿ॒ರಾ॒ಜಾಯ ಪ್ರಸಹ್ಯ ಸಾ॒ಹಿನೇ.........   ..........
(ವಿಶೇಷ ದಿನದ ಪೂಜೆಯಲ್ಲಿ
ಯೋஉಪಾಂ ಪುಷ್ಪಂ ವೇದ ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ | ಚಂದ್ರಮಾ ವಾ ಅಪಾಂ ಪುಷ್ಪಮ್....)
ಶ್ರೀ ಗಣಪತ್ಯಂಬಿಕಾ ಶಿವವಿಷ್ಣುಆದಿತ್ಯಾದಿದೇವತಾಭ್ಯೋ ನಮಃ ||  ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ ||
ಯಥಾಶಕ್ತಿ  ಪ್ರದಕ್ಷಿಣ,  ಸಮಸ್ಕಾರಾನ್ ಸಮರ್ಪಯಾಮಿ ||  
ಯಾನಿ-ಕಾನಿ ಚ ಪಾಪಾನಿ ಜನ್ಮಾಂತರ  ಕೃತಾನಿ ಚ | ತಾನಿ-ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ-ಪದೇ |           ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವ | ತ್ರಾಹಿ-ಮಾಂ ಕೃಪಾಯ ದೇವ ಶರಣಾಗತ ವತ್ಸಲ |      ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್-ಕಾರುಣ್ಯ ಭಾವೇನ ರಕ್ಷ-ರಕ್ಷ ಮಹೇಶ್ವರಃ |                     
[ಹೀಗೆ ಹೇಳುತ್ತಾ 3  ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮತ್ತೆ ನೀವು ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಳ್ಳಬೇಕು]
|| ಪ್ರಸನ್ನಾರ್ಘ್ಯಂ ಕರಿಷ್ಯೆ ||
ಓಂ ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||                            
ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ ||                                 ಓಂ ಕಾತ್ಯಾಯನಾಯ ವಿದ್ಮಹೇ | ಕನ್ಯಾಕುಮಾರಿ ಧೀಮಹಿ | ತನ್ನೋ ದುರ್ಗೀ ಪ್ರಚೋದಯಾತ್ ||
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್ ||                                   
ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ ಪ್ರಚೋದಯಾತ್ ||
ಓಂ ಭಾಸ್ಕರಾಯ ವಿದ್ಮಹೇ | ಮಹಾದ್ಯುತಿಕಾರಾಯ ಧೀಮಹಿ | ತನ್ನೋ ಆದಿತ್ಯಃ ಪ್ರಚೋದಯಾತ್ ||
ಇತಿ ಪ್ರಸನ್ನಾರ್ಘ್ಯಂ ಸಮರ್ಪಯಾಮಿ || 
(ಪ್ರಸನ್ನಾರ್ಘ್ಯವನ್ನು ಕೊಡುವಾಗ ತುಲಸಿ, ದೂರ್ವೆ, ಹೂ, ಗಂಧ ಮತ್ತು ಅಕ್ಷತೆ ಗಳನ್ನು ಅಂಗೈಯಲ್ಲಿ ಇಟ್ಟುಕೊಂಡು , ಅಂಗೈ ಮೇಲೆ ನೀರು ಹಾಕಿ ಬೆರಳ ತುದಿಗಳಿಂದ ನೀರು ಬಿಡಬೇಕು. ಐದೂ ಅರ್ಘ್ಯಗಳು ಆದಮೇಲೆ ತುಲಸಿ, ದೂರ್ವೆ, ಹೂ ಮತ್ತು ಅಕ್ಷತೆಗಳನ್ನು ಮಂಟಪದಲ್ಲಿ ದೇವರ ಪಾದತಲಕ್ಕೆ ಇಡಬೇಕು) 
ಸ್ವಸ್ತಿವಾಚನಂ :
ಸ್ವಸ್ತಿಪ್ರಜಾಭ್ಯ: ಪರಿಪಾಲಯಂತಾಂ | ನ್ಯಾಯೇನ-ಮಾರ್ಗೇಣ ಮಹೀಂ ಮಹೀಶಃ |
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ | ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಸಮಸ್ತ ಸನ್ಮಂಗಳಾನಿ ಭವಂತು || 
|| ಸಮರ್ಪಣಂ ||                                                                                                                                      ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ತಪೋ ಪೂಜಾ ಕ್ರಿಯಾದಿಷು| ನ್ಯೂನಂ ಸಂಪುರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರಹೀನಂ ಕ್ರೀಯಾ ಹೀನಂ ಭಕ್ತಿ ಹೀನಂ ಜನಾರ್ಧನ | ಯತ್-ಕೃತಂತು ಮಯಾ ದೇವ ಪರಿಪೂರ್ಣಂ ತದಸ್ತು ಮೇ ||  ಅನಯಾ ಪೂಜಯಾ ಶ್ರೀ ಕುಲದೇವತಾ, ಇಷ್ಟದೇವತಾ ಸುಪ್ರೀತಃ  ಸುಪ್ರಸನ್ನೋ  ವರದೋ ಭವತು | ಮಮ  ಇಷ್ಟಾರ್ಥ ಸಿದ್ಧಿರಸ್ತು ||
ಪೂಜಾಕಾಲೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಧ್ಯಾನ ನಿಯಮ ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ |
ಓಂ ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ [3 ಬಾರಿ] 
ಆಚಮನ [ದ್ವಿರಾಚಮ್ಯ]
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇ ಸ್ವಭಾವಾತ್ | 
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ ||    
|| ತತ್ಸತ್ ಬ್ರಹ್ಮಾರ್ಪಣಮಸ್ತು ||
ತಿಲಕ ಧಾರಣಂ :  [ತಾನು ಕುಳಿತು ಪೂಜೆ ಮಾಡಿದ ಆಸನದ ಕೆಳಗಿನ ಭೂಮಿಯನ್ನು ಪ್ರೋಕ್ಷಿಸಿ, ಬೆರಳಿನಿಂದ ಸ್ಪರ್ಶಿಸುತ್ತಾ ತಿಲಕಧಾರಣೆ ಮಾಡಬೇಕು] 
|| ತೀರ್ಥ ಸ್ವೀಕಾರ || 
ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ | ದೇವಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಂ ||
-ಈ ಮಂತ್ರ ಹೇಳಿ ತೀರ್ಥ ಸ್ವೀಕಾರ ಮಾಡುವುದು.  
ಪ್ರಸಾದಂ ಗೃಹೀತ್ವಾ -ಪ್ರಸಾದ ಸ್ವೀಕರಿಸುವುದು.
(ಸಂಗ್ರಹಿತ)
***

ಸಂಕ್ಷಿಪ್ತ ದೇವ ಪೂಜಾ ಕ್ರಮ VIDEO

VIDEO--> ದೇವಪೂಜಾ ಕಲಿಯುವರಿಗಾಗಿ ಅತಿ ಸಂಕ್ಷಿಪ್ತವಾದ ಪೂಜಾ ವಿಧಿ ವಿಧಾನ.
********

ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು. 
ಮೂರು ಬಾರಿ ತೀರ್ಥ ಸೇವನೆ ಮಾಡಬೇಕು. ಬಲಗೈ ಅಂಗೈಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಸೇವಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾಗಳ ತುದಿಗಳನ್ನು ಅಂಗೈಗೆ ತಗಲಿಸಿ ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಅನಂತರ ಆ ಬೆರಳುಗಳನ್ನು ಹಣೆಯ ಮೇಲಿನಿಂದ ನೇರವಾಗಿ ತಲೆಯ ಮೇಲೆ ಸವರಬೇಕು.
***


Another Version



ಪೂಜಾ ವಿಧಿ 

1. ಪ್ರಾರ್ಥನೆ


ಅಪವಿತ್ರ: ಪವಿತ್ರೊ ವಾ ಸರ್ವಾವಸ್ಥಾಂ ಗತೊಪಿ ವಾ |
ಯ: ಸ್ಮರೆತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ-ಸುಚಿ: ||

2. ದೀಪವನ್ನು ಹಚ್ಚುವುದು ನಂತರ ಆಚಮನ ಮಾಡುವುದು. ಕೇಶವಾದಿ ನಾಮಗಳನ್ನು ಹೇಳಿ ಪ್ರಾಣಾಯಾಮ ಮಾಡುವುದು
ಓಂ ಅಗ್ನಿನಾಗ್ನಿಃ ಸನಿಧ್ಯತೇ ಕವಿರ್ಗೃಹ ಪತಿರ್ಯುವಾ ಹವ್ಯವಾಡ್ ಜುಹ್ವಾಸ್ಯಃ
3 ಸಂಕಲ್ಪ
ಓಂ ಶ್ರಿಮದ್ ಭಗವಥೊ ಮಹ ಪುರುಶಸ್ಯ ವಿಶ್ಣೊರಾಜ್ಞಾಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೆ ಶ್ರೀ ಶ್ವೆತವರಾಹ ಕಲ್ಪೆ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೊದಾವರ್ಯಾಃ ದಕ್ಶಿಣೆ ಪಾರ್ಶ್ವೆ ಶಾಲೀವಾಹನಶಕೆ ಭೌದ್ಧಾವತಾರೆ ರಾಮಕ್ಷೆತ್ರೆ ಅಸ್ಮಿನ್ ವರ್ತಮಾನೇನ ಚಾಂದ್ರಮಾನೇನ ಅಸ್ಯ ಶ್ರೀ……. ನಾಮ ಸಂವತ್ಸರೇ ……ಆಯನೇ ………ಋತೌ ……ಮಾಸೇ ……ಪಕ್ಷೇ…….ತಿಥೌ ……ವಾಸರೇ ……ನಕ್ಷತ್ರೇ ಶುಭಯೊಗ ಶುಭಕರಣ ಎವಂಗುಣ ವಿಶೇಶಣ ವಿಶಿಷ್ಟಾಯಾಂ ಶುಭತಿಥೌ ಅಸ್ಮದ್ಗುರೂಣಾಂ ಶ್ರೀಮನ್ಮಧ್ವಾಚಾರ್ಯಾಣಾಂ ಹೃತ್ಕಮಲ ಮಧ್ಯನಿವಾಸೀ ಶ್ರೀ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಶ್ಮೀ ನಾರಾಯಣ ಪ್ರೇರಣಯಾ ಶ್ರೀ ಲಕ್ಶ್ಮೀನಾರಾಯಣ ಪ್ರೀತ್ಯರ್ಥಂ ಯತಾ ಶಕ್ತಿ ದಾನಾ ಅವಾಹನಾದಿ ಷೊಡೋಷ ಫೂಜಾಂ ಕರಿಷ್ಯೆ
4. ಕಲಶ ಪೂಜೆ
ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ
ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ
ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ
ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||
ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:
ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:
ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ

5. ಶಂಖಪೂಜೆ ಮಾಡಿ ನಿರ್ಮಾಲ್ಯವನ್ನು ತೆಗೆಯುವುದು.
ಪಾಂಚಜನ್ಯಯ ವಿದ್ಮಹೇ ಪಾವಮಾನಾಯ ಥೀಮಹೀ, ತನೌ: ಶಂಕ: ಪ್ರಚೋದಯಾತ್
6. ನಂತರ ಸಾಲಿಗ್ರಾಮ, ದೇವರ ವಿಗ್ರಹಗಳನ್ನು ಅಭಿಷೇಖದ ತಟ್ಟೆಯಲ್ಲಿಟ್ಟು ಅಭ್ಭೃಣೀ ಸೂಕ್ತವನ್ನು ಹೇಳುವುದು ಕಲಶದ ನೀರಿನಿಂದ ಅಭಿಷೇಖ ಮಾಡುವುದು.
ಹರಿ: ಓಂ ||
ಅಹಂ ರುದ್ರೇಭೀರ್ವಸುಬಿಶ್ಚರಾಮ್ಯಹಮಾದಿತೈರುತ ವಿಶ್ವದೇವೈ:
ಅಹಂ ಮಿತ್ರಾ ವರುಣೋಭಾಬಿ ಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ||
ಅಹಂ ಸೋಮಮಾ ಹನಸಂ ಭಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್|
ಅಹಂ ದಧಮಿ ದ್ರವಿಣಂ ಹವಿಷ್ಮ ತೇ ಸುಪ್ರಾವ್ಯೇ ಯೆ ಯೆ ಯಜಮಾನಾಯ ಸುನ್ಚತೇ|
ಅಹಂ ರಷ್ಟ್ರೀಸಂಗಮನೀ ವಸುನಾಂ ಚೀಕಿತುಷೀ ಪ್ರಥಮಾ ಯಜ್ಞೀಯಾನಾಂ|
ತಾಂ ಮಾ ದೇವಾ ವ್ಯದಧು: ಪುರುತ್ರ‍ಾಭೂರಿಸ್ಧಾತ್ರಾಂ ಭೂರ್ಯಾವೇಶಯಂತಿಮ್||
ಮಯಾಸೋ ಅನ್ನಮತ್ತಿಯೋವಿಪಶ್ಯತಿ ಯ: ಪ್ರಾಣಿತಿಯ ಈಂಶೃಣೋತ್ಯುಕ್ತಮ್|
ಅಮಂತವೋಮಾಂತ ಉಪಕ್ಷೀಯಂತಿ ಶೄಧಿ ಶ್ರುದ್ದಿವಂತೇ ವದಾಮಿ||
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿ:|
ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ || ೧||
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೆ ಶರವೇ ಹಂತವಾ ಉ|
ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾ ಪೃಥಿವೀ ಅವಿವೇಶ|
ಅಹಂ ಸ್ಯ್ವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಮ್ತ: ಸಮುದ್ರೇ|
ತತೋ ವಿತಿಷ್ಠೇಭುವನಾನು ವಿಶ್ವೋ ತಾಮೂಂಧ್ಯಾಂವರ್ಷ್ಮಣೋಪಸ್ಪೃಶಾಮಿ||
ಅಹಮೇವ ವಾತ ಇವ ಪ್ರವಾಮ್ಯಾರಭಮಾನಾ ಭುವನಾನಿ ವಿಶ್ವಾ|
ಪರೋ ದಿವಾ ಪರ ಏನಾ ಪೃಥಿವೈ ತಾವತೀ ಮಹಿನಾ ಸಂಬಭೂವ|| ೨ ||
ಇತ್ಯಂಭೃಣೀಸೂಕ್ತಂ ಸಂಪೂರ್ಣಮ್

ಅಭಿಷೇಖ ಮಾಡಿದ ನೀರನ್ನು ಬೇರೆ ತೆಗೆದಿಡುವುದು ಇದು ನಿರ್ಮಾಲ್ಯ ತೀರ್ಥ.
7. ಅಭಿಷೇಖ - ಕಲಶದ ನೀರನ್ನು ಶಂಖದಿಂದ ತಟ್ಟೆಯಲ್ಲಿರುವ ವಿಗ್ರಹಗಳು ಮತ್ತು ಸಾಲಿಗ್ರಾಮಕ್ಕೆ
ಪುರುಷ ಸೂಕ್ತದಿಂದ
ಹರಿಃ ಓಂ
ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|
ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ
ಸ್ವಸ್ತಿರ್ಮಾನುಷೇಭ್ಯಃ
ಊರ್ಧ್ವಂ ಜಿಗಾತು ಬೇಷಜಮ್|
ಶಂ ನೋ ಅಸ್ತುದ್ವಿಪದೇ|
ಶಂ ಚತುಷ್ಪದೇ|
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಸಹಸ್ರಾ ಶೀರ್ಷ ಪುರುಷಃ ಸಹಸ್ರಾಕ್ಷಃ ಸಹಸ್ರಪತ್
ಸ ಭೂಮಿಂ ವಿಶ್ವತೋ ವ್ರುತ್ವಾ ಅತ್ಯತಿಷ್ಟದ್ದಷಂಗುಲಮ್|
ಪುರುಷ ಏವೇದಂ ಸರ್ವಮ್ ಯದ್ಭೂತಂ ಯಚ್ಚಭವ್ಯಮ್
ಉತಾಮೃತತ್ವಸ್ಯೇಶಾನ್ಯೋಯಧನ್ನೆನಾತಿರೋಹತಿ|
ಏತವಾನಸ್ಯ ಮಹಿಮಾ ಅತೋಜ್ಯಾಯಾಂಗ್ ಶ್ಚಒಪೂರುಷ:
ಪಾದೋಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾಭವಾತ್ಪುನಃ
ತತೋ ವಿಶ್ವಜ್ವ್ಯ್ಕ್ರಾಮತ್ಸಾಶನಾನಶನೇ ಅಭಿ|
ತಸ್ಮಾದ್ವಿರಾಡಜಾಯತ ವಿರಜೋ ಅಧಿ ಪುರುಷಃ
ಸ ಜತೋ ಅತ್ಯರಿಚ್ಯತಪಶ್ಚಾದ್ಭೂಮಿಮಥೋ ಪುರಃ|
ಯತ್ಪುರುಷೇಣಹವಿಷಾದೇವಯಜ್ಙ್ನ್ಮಾತನ್ವತ
ವಸಂತೋಅಸ್ಯಸೀದಾಜ್ಯಂಗ್ರೀಷ್ಮ ಇಧ್ಮಃ ಶರದ್ಧವಿಃ|
ತಂಯ್ಯಜ್ಞ್ಂಬರ್ಹಿಷಿಪ್ರೋಕ್ಷನ್ ಪುರುಷ್ಂಜಾತಮಗ್ರತಃ
ತೇನದೆವಾಆಯಜಂತಸಾಧ್ಯಾಋಷಯಶ್ಚಯೇ|
ತಸ್ಮಾದ್ಯಜ್ಞಾತ್ಸರ್ವಹುತಃಸಂಪ್ರ‍ಷದಾಜ್ಯಮ್
ಪಷೋನ್ತಾಂಶ್ಚಕ್ರೇವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚಯೇ|
ತಸ್ಮಾದ್ಯಜ್ಞ್ನಾತ್ ಸರ್ವಹುತಋಚಃಸಾಮಾನಿಜಜ್ಞಿರೇ
ಛಂದಾಂಸಿಜಜ್ಞರೇತಸ್ಮಾದ್ಯಜುಸ್ತಸ್ಮಾದಜಾಯತ|
ತಸ್ಮಾದಶ್ವಾಅಜಾಯಂತಯೇಕೇಚೋಭಯಾದತಃ
ಗಾವೋಹಜಜ್ಞಿರೇತಸ್ಮಾತ್ತಸ್ಮಾಜ್ಜಾತಾಅಜಾವಯಃ|
ಯತ್ಪುರುಷ್ಂವ್ಯದಧುಃಕತಿಧಾವ್ಯಕಲ್ಪಯನ್
ಮುಖಂಕಿಮಸ್ಯಕೋಬಾಹೂಕಾಊರೂಪಾದಾಉಚ್ಯೇತೇ|
ಬ್ರಾಹ್ಮಣೋಸ್ಯಮುಖಮಾಸೀದ್ಬಾಹೂರಾಜನ್ಯಃಕೃತಃ
ಊರೂತದಸ್ಯದ್ವೈಶ್ವಃಬದ್ಬ್ಯಾಂಶೂದ್ರೋಅಜಾಯತ|
ಚಂದ್ರಮಾಮನಸೋಜಾಶ್ಚಕ್ಷೊಃಸುರ್ಯಾಅಜಾಯತ
ಮುಖಾದಿಂದ್ರಶ್ಚಾಗ್ನಿಶ್ಚಪ್ರಣಾದ್ವಾಯುರಜಯತ|
ನಾಭ್ಯಾಅಸೀದಂತರಿಕ್ಷಂಶೀರ್ಷ್ನೋದ್ಯೋಃಸಮವರ್ತತ
ಪದ್ಭ್ಯಾಂಭೂಮಿರ್ದಿಶಃಶ್ರೋತ್ರ‍ತ್ತಥಾಲೋಕಾಂಅಕಲ್ಪಯನ್|
ಸಪ್ತಾಸ್ಯಾಸನ್ಪರಿಧಯಸ್ತ್ರಿಃಸಪ್ತಹಮಿಧಃಕೃತಾಃ
ದೇವಾಯದ್ಯಜ್ಞಂತನ್ವಾನಾಅಬಧ್ನನ್ ಪುರುಷಂಪಶುಮ್|
ಯಜ್ಞೇನಯಜ್ಞಮಯಜಂತದೇವಾಸ್ತಾನಿಧರ್ಮಾಣಿಪ್ರಥಮಾನ್ಯಾಸನ್
ತೇಹನಾಕಂಮಹಿಮಾನಃಸಚಂತಯತ್ರಪೂರ್ವೇಸಾಧ್ಯಾಃಸಂತಿದೇವಾಃ
ಓಂ
ಓಂ
ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|
ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ
ಸ್ವಸ್ತಿರ್ಮಾನುಷೇಭ್ಯಃ
ಊರ್ಧ್ವಂ ಜಿಗಾತು ಬೇಷಜಮ್|
ಶಂ ನೋ ಅಸ್ತುದ್ವಿಪದೇ|
ಶಂ ಚತುಷ್ಪದೇ|
ಓಂ ಶಾಂತಿಃ ಶಾಂತಿಃ ಶಾಂತಿಃ

ಈ ನೀರನ್ನು ತೆಗೆದು ಬೇರೆ ಇಡಿ ಇದು ತೀರ್ಥ.
8. ಅಲಂಕಾರ 

ಅಲಂಕಾರ ಮಾಡುವಾಗ ಹೂಗಳು, ಅಕ್ಷತೆ ತುಳಸಿಯಿಂದ, ಕೇಶವ ನಾಮಗಳನ್ನು ಹೇಳುತ್ತಾ ಹಾಕಬೇಕು. ಸಮಯವಿದ್ದರೆ ವಿಷ್ಣು ಸಹಸ್ರನಾಮ, ಕೃಷ್ಣಾಷ್ಟಕ, ದ್ವಾದಶ ಸ್ತೋತ್ರ ಹೇಳಬಹುದು.

9. ಧೂಪ
ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಊತ್ತಮ|
ಅಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ||

10. ದೀಪ ದೀಪವನ್ನು ಹಚ್ಚುವುದು.
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೊಜಿತಂ ಮಯಾ|
ದೀಪಂ ಗ್ರುಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹ||

11. ನೈವೇದ್ಯ 

ದೇವರ ಮುಂದೆ ಚೌಕಾಕಾರ ಮಂಡಲವನ್ನು ಮಾಡಿ ಅದರ ಮಧ್ಯದಲ್ಲಿ ಓಂ ಶ್ರೀ ಎಂದು ಬರೆದು ಅದರಮೇಲೆ ನೈವೇದ್ಯವನ್ನು (ತಟ್ಟೆ ಅಥವಾ ತಟ್ಟೆಯಲ್ಲಿ ಬಾಳೆ ಎಲೆಯಮೇಲೆ ) ಇಡಬೇಕು.
ಶ್ರೀ ವಾಸುದೇವನು ಅನ್ನದಲ್ಲಿ, ಸಂಕರ್ಷಣನು ಇತರ ಭಕ್ಷಗಳಲ್ಲಿ , ಪ್ರದ್ಯುಮ್ನನು ಪಾಯಸದಲ್ಲಿ, ಅನಿರುದ್ಧನೂ ತುಪ್ಪದಲ್ಲಿ, ನಾರಾಯನು ಎಲ್ಲದರಲ್ಲಿ ಇದ್ದಾನೆಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು.

12. ಪರಿಶಿಂಚಾಮಿ 

ನೈವೇದ್ಯದಮೇಲೆ ಕಳಸದ ನೀರನ್ನು ಉದ್ಧರಣೆಯಿಂದ ಹಾಕಿಕೊಂಡು. ಪ್ರತಿಭಾರಿ.
ಓಂ ಸತ್ಯಂತ್ವರ್ತೇನ ಪರಿಶೀಚಾಮಿ. 
ಓಂ ಅಮೃತಾಪಿ ಸ್ತರಣಮಸಿಶ್ಚಾಹ 
ಓಂ ಪ್ರಾಣಾಯಾಸ್ವಾಹ ಶ್ರೀ ಅನಿರುದ್ಧಾಯ ಇದಂ ನಮಮ 
ಓಂ ಅಪಾನಾಯಸ್ವಾಹ ಶ್ರೀ ಪ್ರದ್ಯುಮ್ನಅಯ ಇದಂ ನಮಮ 
ಓಂ ವ್ಯಾನಾಯಸ್ವಾಹಾ ಶ್ರೀ ಸಂಕರ್ಷಣಾಯ ಇದಂ ನಮಮ 
ಓಂ ಉದಾನಾಯಸ್ವಾಹ ಶ್ರೀ ವಾಸುದೇವ ಇದಂ ನಮಮ 
ಓಂ ಸಮಾನಾಯಸ್ವಾಹ ಶ್ರೀ ನಾರಾಯಣ ಇದಂ ನಮಮ

ಓಂ ಅಮೃತಾಪಿ ದಾನಮಪಿ ಸ್ವಾಹಾ 
ಉತ್ತರಾಪೋಶಮ್ ಸಮರ್ಪಯಾಮಿ 
ಹಸ್ತಪ್ರಕ್ಷಾಲನಂ ಸಮರ್ಪಯಾಮಿ 
ಅಚಮನೀಯನಮ್ ಸಮರ್ಪಯಾಮಿ 
ತಾಂಬೂಲಮ್ ಸಮರ್ಪಯಾಮಿ 
ಹಿರಣ್ಯಂ ಸಮರ್ಪಯಾಮಿ 
ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|
ಶ್ರೀ ಕೃಷ್ಣಾರ್ಪಣಮಸ್ತು|

13. ರಾಮಾ ನೈವೇದ್ಯ. 

ತಟ್ಟೆಯಲ್ಲಿ ದೇವರಿಗೆ ಅರ್ಪಿಸಿದ ಭಕ್ಷಗಳನ್ನು. ಇನ್ದಡೋದರಲ್ಲಿ ಹಾಕಿ. ಇದನ್ನು ಹೇಳಿ
ರಮಾ ಬ್ರಹ್ಮಾದಯೋ ದೇವಃ ಸನಕಾದ್ಯ ಶುಕಾದಯಃ |
ಶ್ರೀ ನೃಸಿಂಹಃ ಪ್ರಸದೋಯಂ ಸರ್ವೇ ಗ್ರುಹ್ಣಂತುವೈಷ್ಣವಾಃ ||

14. ಮಂಗಳಾರತಿ
ವೆಂಕಟೆಶೋ ವಾಸುದೇವಃಪ್ರದ್ಯುಮ್ನೋಮಿತ ವಿಕ್ರಮಃ|
ಸಂಕರ್ಷ್ಣೋನಿರುದ್ಧಶ್ಚ ಶೆಷಾದ್ರಿ ಪತಿರೇವಚ||
ಜನಾರ್ಧ್ನಃ ಪದ್ಮನಾಭೋ ವೆಂಕಟಾಚಲವಾಸನಃ|
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ||
ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|
ಶ್ರೀ ಮದ್ವೇಂಕಟನಥಾಯ ಶ್ರೀನಿವಾಸಾಯತೇ ನಮಃ||
ಓಂ ನಮೋ ನಾರಾಯಣಾಯ ಮಂಗಳಂ ನೀರಾಜನಂ ಸಮರ್ಪಯಾಮಿ||
ಭಗವತೆ ಇಧಮ್ ನಮಮ

15. ಸಮರ್ಪಣಾ 

ತುಳಸೀ ದಳ , ಅಕ್ಷತೆ, ಹೂವನ್ನು ಕೈಯಲ್ಲಿ ಹಿಡಿದು ಮಂತ್ರವನ್ನು ಹೇಳಿ ಪಾದಕ್ಕೆ ಹಾಕುವುದು.
ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೇಪೂಜಾಕ್ರಿಯಾದಿಷು ನ್ಯೂನಂ ಸಂಪೂರ್ಣ ತಾಂಯಾತಿ ಸದ್ಯೋವಂದೇ ತಮಚ್ಯುತಂ ಮಂತ್ರಹೀನಂ ಕ್ರಿಯಾಹಿನಂ ಭಕ್ತಿಹಿನಂ ರಮಾಪತೇ| ಯತ್ಕೃತಂತು ಮಯಾದೇವ ಪರಿಪೂರ್ಣಂ ತದಸ್ತುಮೆ||

ಕಾಯೇನವಾಚಾ ಮನಸೇಂದ್ರಿಯ್ಯೆರ್ವಾ ಬುಧ್ಯಾತ್ಮನಾವಾ ಪ್ರಕೃತೇಃ ಸ್ವಭವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿಸಮರ್ಪಯಾಮಿ||

ಅನಯಾ ಪೂಜಯಾ ಶ್ರೀ ಭರತೀರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀವೆಂಕಟೇಶಾತ್ಮಕ ಶ್ರೀ ನರಸಿಂಹಾತ್ಮಕ ಶ್ರೀ ಲಕ್ಷ್ಮಿನಾರಾಯಣಃ ಪ್ರೀಯ ತಾಂ ಪ್ರಿತೋಭವತು
ಶ್ರೀಕೃಶ್ಣರ್ಪಣ್ಮಸ್ತು.||

ತೀರ್ಥ, ತುಳಸಿ , ಗಂಧ, ಅಕ್ಷತೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸಬಕು.

*****



ಮಾಹಿತಿಗಳು ನೆನಪಿನಲ್ಲಿಡಬೇಕಾದ್ದವುಗಳು 
ಪೂಜಾ ವಿಧಾನ
ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ. ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ, ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು.
16 ತರಹದ ಕ್ರಿಯೆಗೆ ಷೋಡಶ ಉಪಚಾರ ಪೂಜೆ ಎಂದು ಕರೆಯುತ್ತಾರೆ. ಧ್ಯಾನ, ಆವಾಹನ, ಆಸನ, ಪಾದ್ಯ , ಅರ್ಘ್ಯ, ಆಚಮನ, ಸ್ನಾನ, ವಸ್ತ್ರ ಯಜ್ನೋಪವೀತ, ಗಂಧ, ಪುಷ್ಪ , ಧೂಪ, ದೀಪ, ನೈವೇದ್ಯ, ತಾಂಬೂಲ, ನೀರಾರ್ಜನ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ. ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.
ಪೂಜಾ ಸಂಕಲ್ಪ ಮಂತ್ರ,
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.
******

Understand....


ಸಂಧ್ಯಾವಂದನೆಯ ಆರಂಭದಲ್ಲಿ ದೇಹದ ಅಂತರ ಪಾವಿತ್ರ್ಯದಲ್ಲಿ ನಿರ್ಮಾಲ್ಯ ತೀರ್ಥಪ್ರಾಶನ ಮಹತ್ವಪೂರ್ಣವಾದ ಸ್ಥಾನವನ್ನು ಪಡೆದಿದೆ..ತುಳಸಿಯನ್ನು ಮಾತ್ರ ಹಾಕಿದ,ಗಂಧಪುಷ್ಪಪತ್ರಗಳನ್ನೆಲ್ಲ ಹಾಕಿರದ ತೀರ್ಥವಿದು..ಪ್ರಾಶನಗೈದರೆ ನೀರು ಕುಡಿದಂತೆ ಎನಿಸುವುದಿಲ್ಲ..ಜಪಾನುಷ್ಠಾನಕ್ಕೆ ಭಂಗ ಬರುವುದಿಲ್ಲ..ಹನ್ನೆರಡು ವರ್ಷ ಉಪವಾಸದ ಫಲವನ್ನೇ ಕೊಡಲಿದೆ..ಎಂದು ಸ್ಕಾಂದಪುರಾಣ ಹೇಳಿದೆ..

"ವಿಷ್ಣುಪಾದೋದಕಂ ಪುಣ್ಯಂ ಪ್ರಾಶಯೇದ್ಯೋ ದಿನೇದಿನೇ..ದ್ವಾದಶಾಬ್ದೋಪವಾಸಸ್ಯ ಫಲಂ ಪ್ರಾಪ್ನೋತ್ಯಸಂಶಯಃ"

ತೀರ್ಥಮಾಡಿಕೊಳ್ಳುವಲ್ಲಿ ಪ್ರತಿಮೆಯ ಜೊತೆ ಮುಖ್ಯವಾಗಿ ಸಾಳಗ್ರಾಮ ಇದ್ದಿರಲೇಬೇಕು..ಚಕ್ರಾಣಿಕೆ ಮತ್ತು ವಿಷ್ಣುಪಾದವೂ ಇರಬೇಕು.ದೇವರ ಮೇಲೆ ಮೂಲಮಂತ್ರದಿಂದ ತುಳಸಿಯನ್ನಿಟ್ಟು ಪುರುಷಸೂಕ್ತ ಹೇಳುತ್ತಿ ಶಂಖದಿಂದ ಘಂಟಾಮಣಿಯ ನಾದದೊಡನೆ ಅಭಿಷೇಕಗೈಯಬೇಕು ಎಂದು ವಾರಾಹದ ನುಡಿ

"ಸಾಳಗ್ರಾಮೋದ್ಭವೋ ದೇವೋ ದೇವೋ ದ್ವಾರವತೀಭವಃ..ತುಳಸೀ ಶಂಖತೋಯಂ ಚ ಪು಼ಂಸೂಕ್ತೇನ ಚ ಮಂತ್ರತಃ..ಏತಾನಿ ಪಂಚತೀರ್ಥಾನಿ ಪಂಚಪಾತಕನಾಶನೇ

ಈ ತೀರ್ಥವನ್ನು ತಲೆಗೂ ಪ್ರೋಕ್ಷಿಸಿಕೊಳ್ಳಬೇಕು..ಇದರಿಂದ ಜಪ ಮಾಡುವವನು ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡಿದಂತೆ..ಎಲ್ಲ ಮಂತ್ರಗಳ ಜಪಕ್ಕೂ ದೀಕ್ಷೆ ಪಡೆದಂತೆ...

"ಸ ಸ್ನಾತಃ ಸರ್ವತೀರ್ಥೇಷು      ಸರ್ವಯಜ್ಞೇಷು ದೀಕ್ಷಿತಃ..ಯೋ ವಹೇಚ್ಛಿರಸಾ ನಿತ್ಯಂ ಸಾಳಗ್ರಾಮಶಿಲಾಜಲಮ್(ವೃದ್ಧಹಾರೀತ ಸ್ಮೃತಿ)

ಸಾಳಗ್ರಾಮಶಿಲಾವಾರಿ ಶಿರಸಾ ಧಾರಯೇತ್ತತಃ(ವಾಯುಪುರಾಣ)

ಜಪದಲ್ಲಿ ಆಗುವ ಮಂತ್ರಗಳ ಉಚ್ಚಾರಣೆಯಲ್ಲಿನ ದೋಷಗಳು ತೀರ್ಥಪ್ರೋಕ್ಷಣೆಯಿಂದ  ನಾಶಗೊಳ್ಳುವವು..ತೀರ್ಥವನ್ನು ಕಣ್ಣುಗಳೆರಡಕ್ಕೂ ಸ್ಪರ್ಶಿಸಿಕೊಳ್ಳಬೇಕು.ಬಾಹ್ಯಶುದ್ಧಿಗೆ ಪ್ರೋಕ್ಷಣೆ,ಅಂತರ ಶುದ್ಧಿಗೆ ಪ್ರಾಶನ-

"ವಿಷ್ಣುಪಾದೋದಕಂ ಪುಣ್ಯಂ ಪೀತ್ವಾ ಯಸ್ತು ಸ್ವಮಸ್ತಕೇ..ಪ್ರಕ್ಷೇಪಣಂ ಪ್ರಕುರ್ವೀತ ಬ್ರಹ್ಮಹತ್ಯಾಂ ವ್ಯಪೋಹತಿ..ವಿಷ್ಣೋಃ ಪಾದೋದಕಂ ಪೂರ್ವಂ ಆಸಿಚ್ಯ ಚ ಶಿರೋಮುಖೇ..ನೇತ್ರೇ ಚ ತ್ರಿಃ ಪಿಬೇತ್ ಪಶ್ಚಾತ್ ತಾಪತ್ರಯನಿವಾರಣಮ್..

ಮೊದಲು ತೀರ್ಥಪ್ರಾಶನಗೈದು ಮತ್ತೆ ತಲೆಗೆ ತೀರ್ಥವನ್ನು ಹಾಕಿಕೊಳ್ಳಬೇಕು..ಇದು ವೈಷ್ಣವತ್ವದ ಸಿದ್ಧಿಗೆ ಪೋಷಕ..ಅಂದರೆ ಇದೊಂದು ವೈಷ್ಣವ ದೀಕ್ಷೆ ಎನ್ನುವುದಾಗಿ "ಕೃಷ್ಣಾಮೃತಮಹಾರ್ಣವ"ದ ಮಾತು..

"ಸ್ನಾನಂ ಪಾದೋದಕಂ ವಿಷ್ಣೋಃ ಪಿಬನ್ ಶಿರಸಿ ಧಾರಯೇತ್..ಸರ್ವಪಾಪವಿನಿರ್ಮುಕ್ತೋ ವೈಷ್ಣವೀಂ ಸಿದ್ಧಿಮಾಪ್ನುಯಾತ್"

ಏಕಾದಶಿಯಂದು ಮತ್ತೆ ದ್ವಾದಶಿಯಂದು(ಬೆಳಗ್ಗೆ) ಒಂದು ಬಾರಿ ನಿರ್ಮಾಲ್ಯತೀರ್ಥವನ್ನು ಸ್ವೀಕರಿಸಬೇಕು..ಉಳಿದ ದಿನ ಜಪಾರಂಭಕ್ಕಿಂತ ಮೊದಲು ಮೂರು ಬಾರಿ ಸ್ವೀಕರಿಸಬೇಕು..ಮೂರು ಬಾರಿ ಸ್ವೀಕರಿಸಿದರ ಫಲವನ್ನು ಪದ್ಮಪುರಾಣ ಹೇಳಿದೆ

"ಆದ್ಯಂ ಕಾಯಸ್ಯ ಶುಧ್ಯರ್ಥಂ  ದ್ವಿತೀಯಂ ಧರ್ಮಸಾಧನಮ್..ತೃತೀಯಂ ಮೋಕ್ಷದಂ ಪ್ರೋಕ್ತಂ ಏವಂ ತೀರ್ಥಂ ತ್ರಿಧಾ ಪಿಬೇತ್"

ಪ್ರತಿನಿತ್ಯ ಜಪಪೂಜಾನಂತರದಲ್ಲಿ ದೇವರಿಗೆ ಅಭಿಷೇಕಗೈದ ಗಂಧಪುಷ್ಪಾದಿಗಳನ್ನು ಹಾಕಿದ್ದ ತೀರ್ಥವನ್ನೂ ನಿರ್ಮಾಲ್ಯತುಳಸಿಯೊಡನೆ ಮೂರು ಬಾರಿ ಸ್ವೀಕರಿಸಬೇಕು..ಏಕಾದಶಿಯಂದು ಜಪಪೂಜೆಯ ಬಳಿಕ ಗಂಧಪುಷ್ಪಾದಿಗಳನ್ನು ಹಾಕಿರದ  ತೀರ್ಥವನ್ನು ಒಂದೇ ಬಾರಿ ಸ್ವೀಕರಿಸಬೇಕು..ಇದರೊಡನೆ ನಿರ್ಮಾಲ್ಯತುಳಸಿಯನ್ನು ತಿನ್ನಬಾರದು ಎಂದು ಪದ್ಮಪುರಾಣ

"ತುಳಸೀಮಿಶ್ರಿತಂ ತೋಯಂ ಏಕಾದಶ್ಯಾಂ ಕದಾಚನ..ನ ಗ್ರಾಹ್ಯಂ ವಿಷ್ಣುಭಕ್ತೈಶ್ಚ ವ್ರತಂ ನಶ್ಯೇಚ್ಚ ಪಾರ್ವತಿ"

ನಾರಾಯಣನ ತೀರ್ಥವನ್ನಲ್ಲದೆ ಬೇರೆ ಯಾವ ದೇವತೆಗಳ ತೀರ್ಥವನ್ನಿಲ್ಲಿ ಉಪಯೋಗಿಸುವಂತಿಲ್ಲ..ಹಾಗೆ ತಪ್ಪೆಸಗಿದರೆ ದೇವರ ನಾಶಕ್ಕೆ ಭಾಗಿಯಾದಾನು!

ಹರೇಃ ಪಾದೋದಕೇಷ್ವನ್ಯದೇವಪಾದೋದಕೇ ತಥಾ..ಕರೋತಿ ಸಮತಾಂ ಯೋ ಹಿ ಬ್ರಹ್ಮಹತ್ಯಾಂ ಲಭೇತ್ತು ಸಃ(ಬ್ರಹ್ಮವೈವರ್ತ)

ನಾರಾಯಣನ ಪಾದೋದಕವೆಂದರೆ ಅಲ್ಲಿ ಗಂಗೆಯ ಸನ್ನಿಧಾನ ನಿತ್ಯ.ಗಂಗೆಯಿರುವಲ್ಲಿ ಮೋಕ್ಷಸಾಧನೆಗೆ ಕಾರಣಗಳಾದ ಎಲ್ಲ ನದೀತೀರ್ಥಗಳು ಮೇಳೈಸಿರುವವು..ಗಂಗೆ ಬರಬೇಕಾದಲ್ಲಿ ದೇವರ ನಿತ್ಯ ಸನ್ನಿಧಾನವಿರುವ ಸಾಳಗ್ರಾಮ ಬೇಕೇಬೇಕು..

"ಗಂಗಾ ಗೋದಾವರೀ ರೇವಾ ನದ್ಯೋ ಮುಕ್ತಿಪ್ರದಾಶ್ಚ ಯಾಃ..ನಿವಸಂತಿ ಸತೀರ್ಥಾಸ್ತಾಃ ಸಾಳಗ್ರಾಮಶಿಲಾಜಲೇ"

ಶುದ್ಧಿಗೆ ಪಂಚಗವ್ಯಪ್ರಾಶನ ಮುಖ್ಯ..ಹೀಗೆಂದು ಅಶೌಚ ಶುದ್ಧಿಯ ಸಂದರ್ಭಗಳಲ್ಲಿ ಶುದ್ಧಿಯ ದಿನದಂದು ಜಪಹೋಮಾದಿಗಳ ಮೊದಲು ಪಂಚಗವ್ಯ ಸ್ವೀಕರಿಸುವ ಮಂದಿ ಇದ್ದಾರೆ..ನಿಜವಾಗಿಯೂ ಸಾವಿರಾರು ಪಂಚಗವ್ಯ ಪ್ರಾಶನಗಳಿಗಿಂತ ಮಿಗಿಲಾಗಿ ಶುದ್ಧಿಪ್ರದವಾದ ಸಂಗತಿ ಯೋಗ್ಯರೀತಿಯಿಂದ ತಯಾರಿಸಿದ ಸಾಳಗ್ರಾಮಶಿಲೆಯ ತೀರ್ಥಪ್ರಾಶನ-ನಿರ್ಮಾಲ್ಯತೀರ್ಥ ಸ್ವೀಕಾರ

"ಯೇ ಪಿಬಂತಿ ಸದಾ ನಿತ್ಯಂ ಸಾಳಗ್ರಾಮಶಿಲಾಜಲಮ್..ಪಂಚಗವ್ಯಸಹಸ್ರೈಸ್ತು ಪ್ರಾಶಿತೈಃ ಕಿಂ ಪ್ರಯೋಜನಮ್"(ಪದ್ಮಪುರಾಣ)

ಧರ್ಮಶಾಸ್ತ್ರಕಾರರು ಶುದ್ಧಿಗಾಗಿ,ಪ್ರಾಯಶ್ಚಿತ್ತವಾಗಿ ಹೇಳುವ ಎಲ್ಲ ಬಗೆಯ ಕೃಚ್ಛ್ರಾಚರಣೆಗಿಂತ ಮಿಗಿಲು ತೀರ್ಥಪ್ರಾಶನ

"ತಪ್ತಕೃಚ್ಛ್ರಾನ್ಮಹಾಕೃಚ್ಛ್ರಾತ್ ಪಂಚಗವ್ಯಾದ್ವಿಶಿಷ್ಯತೇ..ಚಾಂದ್ರಾಯಣಾತ್ಸರ್ವಕೃಚ್ಛ್ರಾತ್ ಪರಾಕಾದಪಿ ಸುವ್ರತೇ"(ನಾರದೀಯಪುರಾಣ)

ದಿನನಿತ್ಯ ನಡೆಸುವ ತೀರ್ಥಪ್ರಾಶನದಿಂದ ಅಂತರಂಗವನ್ನು ಶುದ್ಧಿಪಡಿಸಿಕೊಂಡ ಸಾಧಕ ಜ್ಞಾನ ಸಂಪಾದನೆಯ ಮೂಲಕ ದೇವರ ಪ್ರೀತಿಯನ್ನು ಸಂಪಾದಿಸಿ ಕೃಷ್ಣನೆಡೆಗೆ ಸಾಗುವನು..

"ಸಾಳಗ್ರಾಮಜಲಂ ಭಕ್ತ್ಯಾ ನಿತ್ಯಮಶ್ನಾತಿ ಯೋ ನರಃ..ಜೀವನ್ಮುಕ್ತಃ ಸ ಚ ಭವೇತ್ ಯಾತ್ಯಂತೇ ಕೃಷ್ಣಮಂದಿರಮ್"(ಬ್ರಹ್ಮವೈವರ್ತ)

ಹೀಗೆ ಸಾಳಗ್ರಾಮತೀರ್ಥದ ಮಹಿಮೆಯನ್ನು ವೇದವ್ಯಾಸರು ಉದ್ದೇಶಪೂರ್ವಕವಾಗಿಯೇ ಪುರಾಣಗಳಲ್ಲಲ್ಲಿ ಚೆಲ್ಲಿರುವರು..ಚೆಲ್ಲಲ್ಪಟ್ಟ ಈ ಅಮೃತದ ಹನಿಗಳನ್ನು ಉಡುಪಿ ಶ್ರೀ ರಾಮನಾಥ ಆಚಾರ್ಯರು ಸಂಧ್ಯಾಸಮೀಕ್ಷೆಯಲ್ಲಿ ಒಂದೆಡೆ ಸಂಗ್ರಹಿಸಿ ನೀಡಿರುವರು... 

 ಎಲ್ಲೆಲೋ ಅಡಗಿ ಕೂತ  ಮಾತುಗಳನ್ನು ಸೆರೆಹಿಡಿದು ಸಾಧನೆಯ ದಾರಿ ಸುಗಮವಾಗುವಂತೆ ಮಾಡಿದ ಆಚಾರ್ಯರಿಗೆ ಧನ್ಯವಾದಗಳು...🙏🙏
        ಕೃಷ್ಣಸಖ,ಮುದರಂಗಡಿ
*******
ಸಂಕ್ಷಿಪ್ತ ದೇವರ ಪೂಜಾ ಪದ್ದತಿಃ

ಸ್ನಾನ ಮಾಡಿ ಮಡಿಬಟ್ಟೆಯನ್ನುಟ್ಟು ನಾಮ ಮುದ್ರಾಧಾರಣೆ ಹಾಗೂ ಸಂದ್ಯಾವಂದನೆಯನ್ನು ಮಾಡಿ ದೇವರ ಪೂಜೆಯನ್ನು ಮಾಡಬೇಕು 

ಸಂಕಲ್ಪ:- ಆಚಮ್ಯ, ಪ್ರಾಣಾನಾಯಮ್ಯ ದೇಶಕೌಲೌ ಸಂಕೀರ್ತ್ಯ, ಗೋವಿಂದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು  ಪ್ರೀತ್ಯರ್ಥಂ ದೇವತಾಪೂಜಾಂಕರಿ ಷ್ಯೇ|| 

ವಂದೇ ವಿಷ್ಣು ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾ ಯೂ ಚ ವಂದೇ|
ಗಾಯತ್ರೀಂ ಭಾರತೀಂ ತಾಮಪಿ ಗರುಮನಂತಂ ಭಜೇ ರುದ್ರದೇವಂ || 

ದೇವಿ ವಂದೇ ಸುಪರ್ಣಿಮಹಿಪತಿದ ಯಿತಾಂ ವಾರುಣೀಮಪ್ಯುಮಾಂತಾಂ |
ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ || 

ದ್ವಾರದೇವತಾಭ್ಯೋನಮಃ||
ಸರ್ವಾರಿಷ್ಟನಿರಶನಮಸ್ತು||

ದೀಪ ಪ್ರಜ್ಚಾಲನ ಮಾಡಿ ಘಂಟೆ ಯನ್ನು ಬಾರಿಸಬೇಕು. 

ಶಾಲಿಗ್ರಾಮ ೧ 
ಶಂಖ ೧ 
ಪ್ರಾಣದೇವರು೧ 
ಗರುಡಶೇಷ
ಗುರುಗಳು ಇವುಗಳನ್ನು ಬೇರೆ ಬೇರೆ ತಟ್ಟೆಯಲ್ಲಿ ಇಡಬೇಕು. 

ನಿರ್ಮಾಲ್ಯವಿಸರ್ಜನೆ :- {ದೇವರಿಗೆ ಏರಿಸಿದ ಹೂ ತುಳಸಿಗಳ ನ್ನು ತೆಗೆಯುವುದು}

ಓಂ ಹಂ ರುದ್ರೇ  {ಈ ಮಂತ್ರದಿಂದ} 

ನಿರ್ಮಾಲ್ಯಾಭಿಷೇಕ {ಶಾಲಿಗ್ರಾಮಕ್ಕೆ} 

ಓಂ ಸಹಸ್ರ ಶೀರ್ಷಾಪುರುಷಃ {ಈ ಮಂತ್ರದಿಂದ} 
ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು

ಶಂಖಾಭಿಷೇಕ:-
ಹಿರಣ್ಯವರ್ಣಾಂ ಹರೀಣಿಂ {ಈ ಮಂತ್ರದಿಂದ} 

ಪ್ರಾಣದೇವರ ಅಭಿಷೇಕ:-

ಮಾತರ್ಮೇ ಮಾತರಿಶ್ವನ್ ಪಿತರ ತುಲಗುರೋಭ್ರಾತರಿಷ್ಟಾಪ್ತಬಂಧೋ|
ಸ್ವಾಮಿನ್ ಸರ್ವಾಂತರಾತ್ಮನ್ನ ಜರಜರಯಿತರ್ಜುನ್ಮಮೃತ್ಯಾಮಯಾನಾಂ||
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂನಿರ್ನಿಮಿತ್ತಾಂ |
ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣಬೃಹತೀಂಶಾಶ್ವತೀಮಾ ಶುದೇವಾ||

ಗರುಡ ಶೇಷಾಭಿಷೇಕ:-

ಗರುಡಾಯನಮಃ ಶೇಷಾಯನಮಃ

ಗುರುಗಳ ಅಭಿಷೇಕ;-

ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂಶ್ರಿಯಃಪತಿಃ|
ಆಚಾರ್ಯಃ ಶ್ರೀಮದಾಚಾರ್ಯಸ್ಸಂತು ಮೇ ಜನ್ಮಜನ್ಮನಿ||

ದೇವರ ನಿರ್ಮಾಲ್ಯತೀರ್ಥವನ್ನು ಶಂಖ, ಪ್ರಾಣದೇವರು, ಗರುಡಶೇಷರು ಗುರುಗಳು ಎಲ್ಲರಿ ಗೂ ಮೂರು ಸಲ ಕೊಡಬೇಕು. ಆಮೇಲೆ ಶಂಖಾದಿಗಳನ್ನು ಒರಿಸಿ ಇಡಬೇಕು. { ನಂತರ ಗಂಧ, ಸ್ವಾದೋದಕ, ಅಕ್ಷತೆಗಳನ್ನು ಸಿದ್ದ ಮಾಡಬೇಕು.} 

ಕಲಶ ಪೂಜಾ:- {ಕಲಶದಲ್ಲಿ ನೀರು ತುಂಬಿ, ತುಳಸಿಯನ್ನು ಹಾಕಿ ಗಂಧ ಅಕ್ಷತೆ ಹಚ್ಚಿ ಅಭಿಮಂತ್ರಣ ಮಾಡಬೇಕು} 

ಕಲಶದೇವತಾಭ್ಯೋನಮಃ ಅಜಾದಿದೇವತಾಭ್ಯೋನಮಃ

{ಓಂ ನಾರಾಯಣಾಯ ಓಂ ೮ಸಲ ಅನ್ನಬೇಕು}

ಶುದ್ಧಾಭಿಷೇಕ:- 

ಸಹಸ್ರಶೀರ್ಷಾ....... ಈ ಮಂತ್ರವನ್ನು ಹೇಳುತ್ತಾ ಕಲಶದಲ್ಲಿರುವ ನೀರನ್ನು ತೆಗೆದು ಕೊಂಡು ಶಂಖದಿಂದ ಅಭಿಷೇಕ ಮಾಡಬೇಕು. ಸ್ವಾದೋದಕದಿಂದ ಲೂ ಅಭಿಷೇಕ ಮಾಡಬೇಕು. ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು. 

ಅರ್ಚನೆ ಕೇಶವಾಯನಮಃ 

ನಮೋಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರ ಪಾದಕ್ಷಿಶಿರೋರು ಬಾಹುವೇ|
ಸಹಸ್ರನಾಮ್ನೇಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ||

ಈ ಮಂತ್ರವನ್ನು ಹೇಳುತ್ತಾ ಗಂಧ ತುಳಸೀ, ಪುಷ್ಪಗಳನ್ನು ದೇವರಿಗೆ ಸಮರ್ಪಿಸಿಬೇಕು. 

ಧೂಪದೀಪ{ಕೆಂಡದ ಮೇಲೆ ದಶಾಂಗವನ್ನು ಹಾಕಿ ಧೂಪಾರತಿ ಯನ್ನು ಮಾಡಬೇಕು .ಧೂಪಂ ಸಮರ್ಪಯಾಮಿ || ೩ಎಳಿ ಬತ್ತಿಗಳಿಂದ ಏಕಾರತಿಯನ್ನು ಮಾಡಬೇಕು . ದೀಪಂ ಸಮರ್ಪಯಾಮಿ||

ನೇವೇದ್ಯ:- ನೀರಿನಿಂದ ಚತುಸ್ರಮಂಡಲ ಮಾಡಿ ಅದರ ಮೇಲೆ ನೈವೇದ್ಯವನ್ನು ಇಟ್ಟು ಅಭಿಘಾರಮಾಡಿ, ಗಾಯತ್ರೀ ಮಂತ್ರ ಹೇಳಿ, ಪ್ರೋಕ್ಷಣೆ ಮಾಡಿ ತುಳಸೀದಳಹಾಕಿ ಪರಿಷೇಚನೆ ಮಾಡಬೇಕು ಆಮೇಲೆ ಆಮೇಲೆ ಶಂಖ ಚಕ್ರ ಧೇನು ತಾರ್ಕ್ಷ್ಯ, ಮೇರು ಚಂದ್ರ, ಈ ಮುದ್ರೆಗಳನ್ನು ತೋರಿಸಬೇಕು.

ಆಮೇಲೆ ಓಂ ಓಂ ನಮೋ ನಾರಾಯಣಾಯ ಓಂ ಈ ಮಂತ್ರವನ್ನು ೧೨, ಅಥವಾ ೧೦೮, ಯಥಾಶಕ್ತಿ ಪಠಿಸಬೇಕು, ಅನ್ನದಲ್ಲಿ ರುವ ದೇವರು ಪ್ರತಿಮೆಯಲ್ಲಿರುವ ದೇವರು ತನ್ನಲ್ಲಿರುವದೇವರು ಒಂದೇ ಎಂದು ಸ್ಮರಿಸಬೇಕು. 

ಆಪೋಶನಂ ಸಮರ್ಪಯಾಮಿ|| ಅಮೃತೋಪಸ್ತರಣ ಮಸಿಸ್ವಾಹಾ|
ಪ್ರಾಣಾಯಸ್ವಾಹಾ|| ಅಪಾನಾಯಸ್ವಾಹಾ|| ವ್ಯಾನಾಯ ಸ್ವಾಹಾ||
ಉದಾನಾಯಸ್ವಾಹಾ|| ಸಮನಾಯಸ್ವಾಹಾ||
ಉತ್ತರಾಪೋಶನಂ ಸಮರ್ಪಯಾಮಿ| ಅಮೃತಾಪಿಧಾನಮಸಿ ಸ್ವಾಹಾ||

ಈ ಮಂತ್ರಗಳಿಂದ ಶುದ್ದವಾದ ನೀರನ್ನು ಶಂಖದಿಂದ ಪಾತ್ರೆಯಲ್ಲಿ ಬಿಡಬೇಕು. 

ಮಹಾಮಂಗಳಾರತಿ:-

ಜಯತಿ ಹರಿಚಿಂತ್ಯಃ ಸರ್ವದೇವೈ ಕವಂದ್ಯಃ|
ಪರಮ ಗುರುಭೀಷ್ಟಾವಾಪ್ತಿದಃ ಸಜ್ಜನಾನಾಂ||
ನಿಖಿಲಗುಣಾಗಣಾರ್ಣೋ ನಿತ್ಯನಿರ್ಮುಕ್ತದೋಷಃ||
ಸರಸಿಜನಯನೋಸೌ ಶ್ರೀಪತಿರ್ಮಾನದೋನಃ||

ರಮಾದಿಪೂಜೆ:- ಶಂಖಾದಿಗಳಿ ಗೆ ತೀರ್ಥ, {೩ಸಲ ನಿರ್ಮಾಲ್ಯ ಗಂಧ ತುಳಸೀ ಪುಷ್ಪಗಳನ್ನು ಸಮರ್ಪಿಸಿ, ನೈವೇದ್ಯವನ್ನು ಮಾಡಬೇಕು  {ಒಂದು ತಟ್ಟೆಯಲ್ಲಿ ವೈಶ್ವದೇವಕ್ಕೆ ಅನ್ನವನ್ನು ಇಟ್ಟುಕೊಂಡು ಗರುಡಶೇಷರಿಗೆ ಬೇರೆ ಬೇರೆ ಅನ್ನವನ್ನು ತೆಗೆದು ಇಡಬೇಕು. }

ರಮಾಬ್ರಹ್ಮಾದಯೋದೇವಾಃ ಸನಕಾಧ್ಯಾಃ ಶುಕಾದಯಾಃ|
ಶ್ರೀನೃಸಿಂಹಪ್ರಸಾದೋsಯಂ ಸರ್ವೇಗೃಹ್ಣಂತು ವೈಷ್ಣವಾಃ||

ಈ ಮಂತ್ರದಿಂದ ನೈವೇದ್ಯಮಾಡಿ ಮಂಗಳಾರತಿಯನ್ನು ಮಾಡಬೇಕು‌

ಬ್ರಹ್ಮಾಂತಾಗುರುವಃ....... ಈ ಮಂತ್ರದಿಂದ ಹಸ್ತೋದಕ ಮಾಡಬೇಕು ನಂತರ ದೇವರನ್ನು ಭುಜಂಗಿಸಬೇಕು.

ಯಸ್ಯಸ್ಮೃತ್ಯಾಚನಾಮೋಕ್ತ್ಯಾತಪಃ ಪೂಜಾಕ್ರಿಯಾದಿಷು|
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ||
ಯತ್ಕೃತಂತು ಮಯಾದೇವ ಪರಿಪೂರ್ಣಂ ತದುಸ್ತುಮೇ||

ಅನೇನ ದೇವ ಪೂಜನೇನ ಭಾರತೀರಮಣಮುಖ್ಯಪ್ರಾಣಂತರ್ಗತ ಲಕ್ಷ್ಮೀನಾರಾಯಣಃ ಪ್ರಿಯತಾಂ ಪ್ರೀತೋಭವತು||
||ಶ್ರೀಕೃಷ್ಣಾರ್ಪಣಮಸ್ತು||

ಸೂಚನೆ:- ಏಕಾದಶಿ ದಿವಸಾ ಶಂಖಾದಿಗಳಿಗೆ ಒಂದು ಸಲ ತೀರ್ಥ ಕೊಡಬೇಕು. ಮತ್ತು ಗಂಧ ನೈವೇದ್ಯ ಸಮರ್ಪಣೆ ಇರುವುದಿಲ್ಲಾ ದೇವರಿಗೂ ಸ್ವಾದೋಕದಿಂದ ಅಭಿಷೇಕ ಮತ್ತು ಅನ್ನಾದಿಗಳ ನೈವೇದ್ಯ ಇರುವುದಿಲ್ಲ. ಕೇವಲ ಫಲ ಸಮರ್ಪಣೆ ಮಾಡಬೇಕು 

ಸಂಗ್ರಹ ಲೇಖನ 
...........ಅನಂತಾರ್ಯದಾಸ.......
ಪಂ.ಮುಕುಂದಾಚಾರ್ಯ.ಧ್ರು.ಜೋಶಿ
ಶ್ರೀ ಗೋಪಾಲ ಸಂಸ್ಕ್ರತ ಪಾಠಶಾಲಾ 
             ಸತ್ಯನಾಥಕಾಲೋನಿ
                    ರಾಯಚೂರ
******

ಸರ್ವಜ್ಞರಾದ ಶ್ರೀ ವಾದಿರಾಜಭಗವತ್ಪಾದರು ವಿರಚಿಸಿದ ಪುಟ್ಟದಾದ ದೇವತಾಹ್ವಾನ ದೇವಪೂಜಾ ಕಾಲದಲ್ಲಿ ಅತ್ಯಂತ ಉಪಯೋಗವಾಗುವುದು.


॥ಸರ್ವಕರ್ಮಕಾರಯಿತೃಭಾರತೀರಮಣಮುಖ್ಯಪ್ರಾಣಾಂತರ್ಗತ- ಅನಂತಗುಣಗಣಪರಿಪೂರ್ಣ- ಅನಂತಾವತಾರಾತ್ಮಕ-ಅನಂತಜೀವಾಂತರ್ಯಾಮಿ ಬಿಂಬನಾಮಕ ಪರಮಾತ್ಮನ್, ಮಯಾ ಪ್ರತಿಕ್ಷಣೇ ಮನೋವಾಕ್ಕಾಯಕರ್ಮಭಿಃ ಕ್ರಿಯಮಾಣಾನ್ ಅನಂತಾಪರಾಧಾನಗಣಯ್ಯ ಮದರ್ಥಮಸ್ಮದ್ಗುರ್ವಂತರ್ಗತಭಾರತೀರಮಣಮುಖ್ಯಪ್ರಾಣೇನಾನಂತವೇದೋಕ್ತಪ್ರಕಾರೇಣ ಕ್ರಿಯಮಾಣಪ್ರಾರ್ಥನೋಪರಿ ದೃಷ್ಟಿಂ ದತ್ವಾ ಮದ್ಧಸ್ತೇನ ಪೂಜಾಂ ಕಾರಯಿತ್ವಾ ಪಾಲಯಿತುಂ ತ್ವತ್ಸಾಕ್ಷಾತ್ಪ್ರತಿಬಿಂಬಭೂತೇನ ಭಾರತೀರಮಣ ಮುಖ್ಯಪ್ರಾಣದ್ವಾರಾ  ಮದ್ ಜ್ಞಾನೇಂದ್ರಿಯಕರ್ಮೇಂದ್ರಿಯಾಭಿಮಾನಿದೇವಾನುದ್ಬೋಧಯಿತ್ವಾ ತದ್ದ್ವಾರಾ ಮಾಂ ಚ ಬೋಧಯಿತ್ವಾ ಮದ್ಧೃತಕಮಲಾಕರಸ್ಥಿತತುಲಸೀದಲದ್ವಾರಾ ತ್ವತ್ಪರಿವಾರಭೂತ ರಮಾಬ್ರಹ್ಮಾದಿಭಿಃ ಸಹ ವಾಯುವಾಹನೋ ಭೂತ್ವಾ ವಾಮನಾಸಾಪುಟೇನ ಬಹಿರಾಗತ್ಯ ತತ್ತತ್ಪ್ರತಿಮಾಭಿಮಾನಿದೇವತಾತ್ಮಕತೇಜೋಮಯಮುಖ್ಯಪ್ರಾಣ ಗೋಲಕಾನ್ತರ್ಗತನಿತ್ಯಮುಕ್ತ ರಮಾಗೋಲಕಾಂತರ್ಗತಸ್ವಸ್ವರೂಪಗೋಲಕೇ ಸ್ಥಿತ್ವಾ ಪೂಜಾಂ ಗೃಹೀತ್ವಾ ಮಾಂ ಪಾಲಯ . .. ಇತಿ ಶ್ರೀವಾದಿರಾಜತೀರ್ಥಶ್ರೀಚರಣಕೃತಃ ದೇವತಾಹ್ವಾನಪ್ರಕಾರಃ

***

-one more-

ನಿತ್ಯ ದೇವರ ಪೂಜೆ ಮಾಡ ಬಯಸುವವರು. ಹಾಗು ಕಾಲದ ಒತ್ತಡ ಇರುವವರು ಮೂವತ್ತು ನಿಮಿಷಗಳಲ್ಲಿ ಈ ಕೆಳಕಂಡಂತೆ ದೇವರ ಪೂಜೆಯನ್ನು ಮಾಡಬಹುದು. (ಸಂಗ್ರಹ)


1. ಪ್ರಾರ್ಥನೆ


ಅಪವಿತ್ರ: ಪವಿತ್ರೊ ವಾ ಸರ್ವಾವಸ್ಥಾಂ ಗತೊಪಿ ವಾ |

ಯ: ಸ್ಮರೆತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ-ಸುಚಿ: ||


2. ದೀಪವನ್ನು ಹಚ್ಚುವುದು ನಂತರ ಆಚಮನ ಮಾಡುವುದು. ಕೇಶವಾದಿ ನಾಮಗಳನ್ನು ಹೇಳಿ ಪ್ರಾಣಾಯಾಮ ಮಾಡುವುದು


ಓಂ ಅಗ್ನಿನಾಗ್ನಿಃ ಸನಿಧ್ಯತೇ ಕವಿರ್ಗೃಹ ಪತಿರ್ಯುವಾ ಹವ್ಯವಾಡ್ ಜುಹ್ವಾಸ್ಯಃ


3 ಸಂಕಲ್ಪ


ಓಂ ಶ್ರಿಮದ್ ಭಗವಥೊ ಮಹ ಪುರುಶಸ್ಯ ವಿಶ್ಣೊರಾಜ್ಞಾಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ

ದ್ವಿತೀಯ ಪರಾರ್ಧೆ ಶ್ರೀ ಶ್ವೆತವರಾಹ ಕಲ್ಪೆ ವೈವಸ್ವತ ಮನ್ವಂತರೇ

ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ

ಭರತಖಂಡೇ ದಂಡಕಾರಣ್ಯೇ ಗೊದಾವರ್ಯಾಃ ದಕ್ಶಿಣೆ ಪಾರ್ಶ್ವೆ ಶಾಲೀವಾಹನಶಕೆ

ಭೌದ್ಧಾವತಾರೆ ರಾಮಕ್ಷೆತ್ರೆ ಅಸ್ಮಿನ್ ವರ್ತಮಾನೇನ ಚಾಂದ್ರಮಾನೇನ ಅಸ್ಯ ಶ್ರೀ

……. ನಾಮ ಸಂವತ್ಸರೇ ……ಆಯನೇ ………ಋತೌ ……ಮಾಸೇ ……ಪಕ್ಷೇ

…….ತಿಥೌ ……ವಾಸರೇ ……ನಕ್ಷತ್ರೇ ಶುಭಯೊಗ ಶುಭಕರಣ ಎವಂಗುಣ

ವಿಶೇಶಣ ವಿಶಿಷ್ಟಾಯಾಂ ಶುಭತಿಥೌ

ಅಸ್ಮದ್ಗುರೂಣಾಂ ಶ್ರೀಮನ್ಮಧ್ವಾಚಾರ್ಯಾಣಾಂ ಹೃತ್ಕಮಲಮಧ್ಯನಿವಾಸೀ

ಶ್ರೀ ಭಾರತೀರಮಣಮುಖ್ಯಪ್ರಾಣಾಂತರ್ಗತ

ಶ್ರೀ ಲಕ್ಶ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಶ್ಮೀನಾರಾಯಣ ಪ್ರೀತ್ಯರ್ಥಂ

ಯತಾ ಶಕ್ತಿ ದಾನಾ ಅವಾಹನಾದಿ ಷೊಡೋಷ ಫೂಜಾಂ ಕರಿಷ್ಯೆ


4. ಕಲಶ ಪೂಜೆ


ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ

ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ

ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ

ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||

ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:

ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:

ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ


5. ಶಂಖಪೂಜೆ ಮಾಡಿ ನಿರ್ಮಾಲ್ಯವನ್ನು ತೆಗೆಯುವುದು.


ಪಾಂಚಜನ್ಯಯ ವಿದ್ಮಹೇ ಪಾವಮಾನಾಯ ಥೀಮಹೀ, ತನೌ: ಶಂಕ: ಪ್ರಚೋದಯಾತ್


6. ನಂತರ ಸಾಲಿಗ್ರಾಮ, ದೇವರ ವಿಗ್ರಹಗಳನ್ನು ಅಭಿಷೇಖದ ತಟ್ಟೆಯಲ್ಲಿಟ್ಟು ಅಭ್ಭೃಣೀ ಸೂಕ್ತವನ್ನು ಹೇಳುವುದು ಕಲಶದ ನೀರಿನಿಂದ ಅಭಿಷೇಖ ಮಾಡುವುದು.


ಹರಿ: ಓಂ ||

ಅಹಂ ರುದ್ರೇಭೀರ್ವಸುಬಿಶ್ಚರಾಮ್ಯಹಮಾದಿತೈರುತ ವಿಶ್ವದೇವೈ:

ಅಹಂ ಮಿತ್ರಾ ವರುಣೋಭಾಬಿ ಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ||

ಅಹಂ ಸೋಮಮಾ ಹನಸಂ ಭಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್|

ಅಹಂ ದಧಮಿ ದ್ರವಿಣಂ ಹವಿಷ್ಮ ತೇ ಸುಪ್ರಾವ್ಯೇ ಯೆ ಯೆ ಯಜಮಾನಾಯ ಸುನ್ಚತೇ|

ಅಹಂ ರಷ್ಟ್ರೀಸಂಗಮನೀ ವಸುನಾಂ ಚೀಕಿತುಷೀ ಪ್ರಥಮಾ ಯಜ್ಞೀಯಾನಾಂ|

ತಾಂ ಮಾ ದೇವಾ ವ್ಯದಧು: ಪುರುತ್ರ‍ಾಭೂರಿಸ್ಧಾತ್ರಾಂ ಭೂರ್ಯಾವೇಶಯಂತಿಮ್||

ಮಯಾಸೋ ಅನ್ನಮತ್ತಿಯೋವಿಪಶ್ಯತಿ ಯ: ಪ್ರಾಣಿತಿಯ ಈಂಶೃಣೋತ್ಯುಕ್ತಮ್|

ಅಮಂತವೋಮಾಂತ ಉಪಕ್ಷೀಯಂತಿ ಶೄಧಿ ಶ್ರುದ್ದಿವಂತೇ ವದಾಮಿ||

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿ:|

ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ || ೧||

ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೆ ಶರವೇ ಹಂತವಾ ಉ|

ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾ ಪೃಥಿವೀ ಅವಿವೇಶ|

ಅಹಂ ಸ್ಯ್ವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಮ್ತ: ಸಮುದ್ರೇ|

ತತೋ ವಿತಿಷ್ಠೇಭುವನಾನು ವಿಶ್ವೋ ತಾಮೂಂಧ್ಯಾಂವರ್ಷ್ಮಣೋಪಸ್ಪೃಶಾಮಿ||

ಅಹಮೇವ ವಾತ ಇವ ಪ್ರವಾಮ್ಯಾರಭಮಾನಾ ಭುವನಾನಿ ವಿಶ್ವಾ|

ಪರೋ ದಿವಾ ಪರ ಏನಾ ಪೃಥಿವೈ ತಾವತೀ ಮಹಿನಾ ಸಂಬಭೂವ|| ೨ ||

ಇತ್ಯಂಭೃಣೀಸೂಕ್ತಂ ಸಂಪೂರ್ಣಮ್


ಅಭಿಷೇಖ ಮಾಡಿದ ನೀರನ್ನು ಬೇರೆ ತೆಗೆದಿಡುವುದು ಇದು ನಿರ್ಮಾಲ್ಯ ತೀರ್ಥ.


7. ಅಭಿಷೇಖ - ಕಲಶದ ನೀರನ್ನು ಶಂಖದಿಂದ ತಟ್ಟೆಯಲ್ಲಿರುವ ವಿಗ್ರಹಗಳು ಮತ್ತು ಸಾಲಿಗ್ರಾಮಕ್ಕೆ


ಪುರುಷ ಸೂಕ್ತದಿಂದ


ಹರಿಃ ಓಂ

ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|

ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ

ಸ್ವಸ್ತಿರ್ಮಾನುಷೇಭ್ಯಃ

ಊರ್ಧ್ವಂ ಜಿಗಾತು ಬೇಷಜಮ್|

ಶಂ ನೋ ಅಸ್ತುದ್ವಿಪದೇ|

ಶಂ ಚತುಷ್ಪದೇ|

ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸಹಸ್ರಾ ಶೀರ್ಷ ಪುರುಷಃ ಸಹಸ್ರಾಕ್ಷಃ ಸಹಸ್ರಪತ್

ಸ ಭೂಮಿಂ ವಿಶ್ವತೋ ವ್ರುತ್ವಾ ಅತ್ಯತಿಷ್ಟದ್ದಷಂಗುಲಮ್|

ಪುರುಷ ಏವೇದಂ ಸರ್ವಮ್ ಯದ್ಭೂತಂ ಯಚ್ಚಭವ್ಯಮ್

ಉತಾಮೃತತ್ವಸ್ಯೇಶಾನ್ಯೋಯಧನ್ನೆನಾತಿರೋಹತಿ|

ಏತವಾನಸ್ಯ ಮಹಿಮಾ ಅತೋಜ್ಯಾಯಾಂಗ್ ಶ್ಚಒಪೂರುಷ:

ಪಾದೋಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ|

ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾಭವಾತ್ಪುನಃ

ತತೋ ವಿಶ್ವಜ್ವ್ಯ್ಕ್ರಾಮತ್ಸಾಶನಾನಶನೇ ಅಭಿ|

ತಸ್ಮಾದ್ವಿರಾಡಜಾಯತ ವಿರಜೋ ಅಧಿ ಪುರುಷಃ

ಸ ಜತೋ ಅತ್ಯರಿಚ್ಯತಪಶ್ಚಾದ್ಭೂಮಿಮಥೋ ಪುರಃ|

ಯತ್ಪುರುಷೇಣಹವಿಷಾದೇವಯಜ್ಙ್ನ್ಮಾತನ್ವತ

ವಸಂತೋಅಸ್ಯಸೀದಾಜ್ಯಂಗ್ರೀಷ್ಮ ಇಧ್ಮಃ ಶರದ್ಧವಿಃ|

ತಂಯ್ಯಜ್ಞ್ಂಬರ್ಹಿಷಿಪ್ರೋಕ್ಷನ್ ಪುರುಷ್ಂಜಾತಮಗ್ರತಃ

ತೇನದೆವಾಆಯಜಂತಸಾಧ್ಯಾಋಷಯಶ್ಚಯೇ|

ತಸ್ಮಾದ್ಯಜ್ಞಾತ್ಸರ್ವಹುತಃಸಂಪ್ರ‍ಷದಾಜ್ಯಮ್

ಪಷೋನ್ತಾಂಶ್ಚಕ್ರೇವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚಯೇ|

ತಸ್ಮಾದ್ಯಜ್ಞ್ನಾತ್ ಸರ್ವಹುತಋಚಃಸಾಮಾನಿಜಜ್ಞಿರೇ

ಛಂದಾಂಸಿಜಜ್ಞರೇತಸ್ಮಾದ್ಯಜುಸ್ತಸ್ಮಾದಜಾಯತ|

ತಸ್ಮಾದಶ್ವಾಅಜಾಯಂತಯೇಕೇಚೋಭಯಾದತಃ

ಗಾವೋಹಜಜ್ಞಿರೇತಸ್ಮಾತ್ತಸ್ಮಾಜ್ಜಾತಾಅಜಾವಯಃ|

ಯತ್ಪುರುಷ್ಂವ್ಯದಧುಃಕತಿಧಾವ್ಯಕಲ್ಪಯನ್

ಮುಖಂಕಿಮಸ್ಯಕೋಬಾಹೂಕಾಊರೂಪಾದಾಉಚ್ಯೇತೇ|

ಬ್ರಾಹ್ಮಣೋಸ್ಯಮುಖಮಾಸೀದ್ಬಾಹೂರಾಜನ್ಯಃಕೃತಃ

ಊರೂತದಸ್ಯದ್ವೈಶ್ವಃಬದ್ಬ್ಯಾಂಶೂದ್ರೋಅಜಾಯತ|

ಚಂದ್ರಮಾಮನಸೋಜಾಶ್ಚಕ್ಷೊಃಸುರ್ಯಾಅಜಾಯತ

ಮುಖಾದಿಂದ್ರಶ್ಚಾಗ್ನಿಶ್ಚಪ್ರಣಾದ್ವಾಯುರಜಯತ|

ನಾಭ್ಯಾಅಸೀದಂತರಿಕ್ಷಂಶೀರ್ಷ್ನೋದ್ಯೋಃಸಮವರ್ತತ

ಪದ್ಭ್ಯಾಂಭೂಮಿರ್ದಿಶಃಶ್ರೋತ್ರ‍ತ್ತಥಾಲೋಕಾಂಅಕಲ್ಪಯನ್|

ಸಪ್ತಾಸ್ಯಾಸನ್ಪರಿಧಯಸ್ತ್ರಿಃಸಪ್ತಹಮಿಧಃಕೃತಾಃ

ದೇವಾಯದ್ಯಜ್ಞಂತನ್ವಾನಾಅಬಧ್ನನ್ ಪುರುಷಂಪಶುಮ್|

ಯಜ್ಞೇನಯಜ್ಞಮಯಜಂತದೇವಾಸ್ತಾನಿಧರ್ಮಾಣಿಪ್ರಥಮಾನ್ಯಾಸನ್

ತೇಹನಾಕಂಮಹಿಮಾನಃಸಚಂತಯತ್ರಪೂರ್ವೇಸಾಧ್ಯಾಃಸಂತಿದೇವಾಃ

ಓಂ

ಓಂ

ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|

ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ

ಸ್ವಸ್ತಿರ್ಮಾನುಷೇಭ್ಯಃ

ಊರ್ಧ್ವಂ ಜಿಗಾತು ಬೇಷಜಮ್|

ಶಂ ನೋ ಅಸ್ತುದ್ವಿಪದೇ|

ಶಂ ಚತುಷ್ಪದೇ|

ಓಂ ಶಾಂತಿಃ ಶಾಂತಿಃ ಶಾಂತಿಃ


ಈ ನೀರನ್ನು ತೆಗೆದು ಬೇರೆ ಇಡಿ ಇದು ತೀರ್ಥ.


8. ಅಲಂಕಾರ ಅಲಂಕಾರ ಮಾಡುವಾಗ ಹೂಗಳು, ಅಕ್ಷತೆ ತುಳಸಿಯಿಂದ, ಕೇಶವ ನಾಮಗಳನ್ನು ಹೇಳುತ್ತಾ ಹಾಕಬೇಕು. ಸಮಯವಿದ್ದರೆ ವಿಷ್ಣು ಸಹಸ್ರನಾಮ, ಕೃಷ್ಣಾಷ್ಟಕ, ದ್ವಾದಶ ಸ್ತೋತ್ರ ಹೇಳಬಹುದು.


9. ಧೂಪ


ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಊತ್ತಮ|

ಅಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ||


10. ದೀಪ ದೀಪವನ್ನು ಹಚ್ಚುವುದು.


ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೊಜಿತಂ ಮಯಾ|

ದೀಪಂ ಗ್ರುಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹ||


11. ನೈವೇದ್ಯ ದೇವರ ಮುಂದೆ ಚೌಕಾಕಾರ ಮಂಡಲವನ್ನು ಮಾಡಿ ಅದರ ಮಧ್ಯದಲ್ಲಿ ಓಂ ಶ್ರೀ ಎಂದು ಬರೆದು ಅದರಮೇಲೆ ನೈವೇದ್ಯವನ್ನು (ತಟ್ಟೆ ಅಥವಾ ತಟ್ಟೆಯಲ್ಲಿ ಬಾಳೆ ಎಲೆಯಮೇಲೆ ) ಇಡಬೇಕು.


ಶ್ರೀ ವಾಸುದೇವನು ಅನ್ನದಲ್ಲಿ, ಸಂಕರ್ಷಣನು ಇತರ ಭಕ್ಷಗಳಲ್ಲಿ , ಪ್ರದ್ಯುಮ್ನನು ಪಾಯಸದಲ್ಲಿ, ಅನಿರುದ್ಧನೂ ತುಪ್ಪದಲ್ಲಿ, ನಾರಾಯನು ಎಲ್ಲದರಲ್ಲಿ ಇದ್ದಾನೆಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು.


12. ಪರಿಶಿಂಚಾಮಿ ನೈವೇದ್ಯದಮೇಲೆ ಕಳಸದ ನೀರನ್ನು ಉದ್ಧರಣೆಯಿಂದ ಹಾಕಿಕೊಂಡು. ಪ್ರತಿಭಾರಿ.


ಓಂ ಸತ್ಯಂತ್ವರ್ತೇನ ಪರಿಶೀಚಾಮಿ. 

ಓಂ ಅಮೃತಾಪಿ ಸ್ತರಣಮಸಿಶ್ಚಾಹ 

ಓಂ ಪ್ರಾಣಾಯಾಸ್ವಾಹ ಶ್ರೀ ಅನಿರುದ್ಧಾಯ ಇದಂ ನಮಮ 

ಓಂ ಅಪಾನಾಯಸ್ವಾಹ ಶ್ರೀ ಪ್ರದ್ಯುಮ್ನಅಯ ಇದಂ ನಮಮ 

ಓಂ ವ್ಯಾನಾಯಸ್ವಾಹಾ ಶ್ರೀ ಸಂಕರ್ಷಣಾಯ ಇದಂ ನಮಮ 

ಓಂ ಉದಾನಾಯಸ್ವಾಹ ಶ್ರೀ ವಾಸುದೇವ ಇದಂ ನಮಮ 

ಓಂ ಸಮಾನಾಯಸ್ವಾಹ ಶ್ರೀ ನಾರಾಯಣ ಇದಂ ನಮಮ


ಓಂ ಅಮೃತಾಪಿ ದಾನಮಪಿ ಸ್ವಾಹಾ 

ಉತ್ತರಾಪೋಶಮ್ ಸಮರ್ಪಯಾಮಿ 

ಹಸ್ತಪ್ರಕ್ಷಾಲನಂ ಸಮರ್ಪಯಾಮಿ 

ಅಚಮನೀಯನಮ್ ಸಮರ್ಪಯಾಮಿ 

ತಾಂಬೂಲಮ್ ಸಮರ್ಪಯಾಮಿ 

ಹಿರಣ್ಯಂ ಸಮರ್ಪಯಾಮಿ 

ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|

ಶ್ರೀ ಕೃಷ್ಣಾರ್ಪಣಮಸ್ತು|


13. ರಾಮಾ ನೈವೇದ್ಯ. ತಟ್ಟೆಯಲ್ಲಿ ದೇವರಿಗೆ ಅರ್ಪಿಸಿದ ಭಕ್ಷಗಳನ್ನು. ಇನ್ದಡೋದರಲ್ಲಿ ಹಾಕಿ. ಇದನ್ನು ಹೇಳಿ


ರಮಾ ಬ್ರಹ್ಮಾದಯೋ ದೇವಃ ಸನಕಾದ್ಯ ಶುಕಾದಯಃ |

ಶ್ರೀ ನೃಸಿಂಹಃ ಪ್ರಸದೋಯಂ ಸರ್ವೇ ಗ್ರುಹ್ಣಂತುವೈಷ್ಣವಾಃ ||


14. ಮಂಗಳಾರತಿ


ವೆಂಕಟೆಶೋ ವಾಸುದೇವಃಪ್ರದ್ಯುಮ್ನೋಮಿತ ವಿಕ್ರಮಃ|

ಸಂಕರ್ಷ್ಣೋನಿರುದ್ಧಶ್ಚ ಶೆಷಾದ್ರಿ ಪತಿರೇವಚ||

ಜನಾರ್ಧ್ನಃ ಪದ್ಮನಾಭೋ ವೆಂಕಟಾಚಲವಾಸನಃ|

ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ||

ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|

ಶ್ರೀ ಮದ್ವೇಂಕಟನಥಾಯ ಶ್ರೀನಿವಾಸಾಯತೇ ನಮಃ||

ಓಂ ನಮೋ ನಾರಾಯಣಾಯ ಮಂಗಳಂ ನೀರಾಜನಂ ಸಮರ್ಪಯಾಮಿ||

ಭಗವತೆ ಇಧಮ್ ನಮಮ


15. ಸಮರ್ಪಣಾ ತುಳಸೀ ದಳ , ಅಕ್ಷತೆ, ಹೂವನ್ನು ಕೈಯಲ್ಲಿ ಹಿಡಿದು ಮಂತ್ರವನ್ನು ಹೇಳಿ ಪಾದಕ್ಕೆ ಹಾಕುವುದು.


ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೇಪೂಜಾಕ್ರಿಯಾದಿಷು ನ್ಯೂನಂ ಸಂಪೂರ್ಣ

ತಾಂಯಾತಿ ಸದ್ಯೋವಂದೇ ತಮಚ್ಯುತಂ ಮಂತ್ರಹೀನಂ ಕ್ರಿಯಾಹಿನಂ ಭಕ್ತಿಹಿನಂ ರಮಾಪತೇ|

ಯತ್ಕೃತಂತು ಮಯಾದೇವ ಪರಿಪೂರ್ಣಂ ತದಸ್ತುಮೆ||

ಕಾಯೇನವಾಚಾ ಮನಸೇಂದ್ರಿಯ್ಯೆರ್ವಾ ಬುಧ್ಯಾತ್ಮನಾವಾ ಪ್ರಕೃತೇಃ ಸ್ವಭವಾತ್

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿಸಮರ್ಪಯಾಮಿ||

ಅನಯಾ ಪೂಜಯಾ ಶ್ರೀ ಭರತೀರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀವೆಂಕಟೇಶಾತ್ಮಕ ಶ್ರೀ ನರಸಿಂಹಾತ್ಮಕ ಶ್ರೀ ಲಕ್ಷ್ಮಿನಾರಾಯಣಃ ಪ್ರೀಯ ತಾಂ ಪ್ರಿತೋಭವತು

ಶ್ರೀಕೃಶ್ಣರ್ಪಣ್ಮಸ್ತು.||


ತೀರ್ಥ, ತುಳಸಿ , ಗಂಧ, ಅಕ್ಷತೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸಬಕು.

ವಿ.ಸೂ : 16 ತರಹದ ಕ್ರಿಯೆಗೆ ಷೋಡಶ ಉಪಚಾರ ಪೂಜೆ ಎಂದು ಕರೆಯುತ್ತಾರೆ. ಧ್ಯಾನ, ಆವಾಹನ, ಆಸನ, ಪಾದ್ಯ , ಅರ್ಘ್ಯ, ಆಚಮನ, ಸ್ನಾನ, ವಸ್ತ್ರ ಯಜ್ನೋಪವೀತ, ಗಂಧ, ಪುಷ್ಪ , ಧೂಪ, ದೀಪ, ನೈವೇದ್ಯ, ತಾಂಬೂಲ, ನೀರಾರ್ಜನ.

*** 







No comments:

Post a Comment