SEARCH HERE

Tuesday 1 January 2019

ವಾಮನ ಜಯಂತೀ vamana jayanthi onam bhadrapada shukla dwadashi




Vamana Jayanti is celebrated to worship the fifth incarnation (avatar) of Lord Vishnu as Lord Vamana. The festivities of Vamana Jayanti takes place on the twelfth day of Bhadrapada month in the Shukla Paksha as per the Hindu calendar. Vamana Jayanti falls either in August or September as per the Gregorian calendar.

Lord Vishnu incarnated as the son of sage Kashyapa and his wife Aditi and was popularly known as Vamana. As per the Hindu Scriptures, if a person worships Lord Vamana, the individual gets free from all kind of sufferings and sins and achieves salvation.

Vamana Jayanti Fast
Vamana Jayanti Vrat is observed with great joy and extreme devotion at various parts of India. As per the Hindu beliefs, the devotees who observe this fast are blessed by Lord Vishnu, the preserver of this Universe, and are granted forgiveness for all their past sins.

When is Vamana Jayanti Fast? To know date visit Hindu Calendar.

What is the Story of Vamana Jayanti?
As per the Hindu Mythology and Shastras, the one who will perform the 100 complete Yagnas will attain the power and competence to rule the Earth as well as the Heaven. King Mahabali, was the biggest devotee of Lord Vishnu but still was regarded as a huge threat for the deities or the devas. He started performing the 100 yajnas. Lord Indra approached deity Vishnu to seek his support as he was scared that King Mahabali could become the ultimate ruler. He requested Lord Vishnu to help in preventing him from completing the Yagna and becoming the ruler of the entire universe.

To the appeal of Lord Indra and various other deities, Lord Vishnu appeared in the form of Vamana, a dwarf Brahmin as his 5th incarnation. The King greeted the brahmin and told him that he will grant whatever he will wish for. In the form of Bhiksha (alms), Lord Vamana asked for 3 pieces of land measured by his feet. Listening to this, King Mahabali agreed to give this much space to the dwarf brahmin. To this, Vamana grew huge in size and took a gigantic form. With the placement of first feet, he covered the entire earth, with the second feet, he conquered all the heavenly places. There was no place left for placing the third feet by Lord Vamana. By realizing that the dwarf Brahmin is none other than Lord Vishnu, King Mahabali offered his own head so that Lord Vamana can place his third feet. Therefore, the King got defeated and was sent to the Patal Loka.

To know more about the muhurat and chogadhiya visit mPanchang.

What are the Rituals of Vamana Jayanti?
On the sacred day of Vamana Jayanti, the most ideal way to initiate the rituals is by donating curd, rice, and food to the Brahmins as it is regarded as highly auspicious on the day of Vamana Jayanti.
To please Lord Vishnu, devotees also observe a fast for the day as well as perform the puja and other rituals.
Vishnu Sahasranama and various other mantras are recited.
While reciting the name of Lord Vishnu for 108 times, devotees offer incense sticks, lamps, and flowers to the deity.
The devotees listen to the Vamana Katha in the evening and then after offering prayers and bhog to the deity, they distribute the prasad to the devotees.
*******

ವಾಮನ ಜಯಂತೀ vamana jayanthi

Vamana Avatar of Lord Vishnu

Vamana was born to Sage Kashyapa and his wife Aditi in the Treta Yuga. Lord Vishnu took the avatar of Vamana to retrieve the Swarga Loka or Deva Loka from Bali, and maintain a healthy balance.

Though Bali hailed from the family of the Asuras, he was a devotee of Lord Vishnu, like his grandfather, Prahlad. Once, when he performed the Ashwamedha Yagya, Vamana appeared before him to seek alms. 

Vamana had visited Bali's kingdom to trick him and test his devotion. Therefore, he wanted Bali to give him Bhiksha (alms). Bali, who at that time ruled the Deva Loka, the Prithvi Loka and the Patala Loka, wanted to showcase his generosity. So he agreed to give whatever Vamana asked for. And Vamana cleverly asked for the piece of land that he would cover in three steps with his tiny feet. 

Bali, who was amused by such a demand, was confident that he would have to part ways with only a small portion of his land as Vamana was a dwarf and would only occupy a minute part of the land with his feet. Incidentally, Bali's guru, Shukracharya, cautioned Bali against making any promises, but the latter wanted to show that he was generous enough to please his guest.

However, to his surprise, Vamana grew in size. With one step, Vamana covered the skies, and with the other, he covered the earth. Now, he wondered where he could lay his third step. Upon realising that Vamana was none other than Lord Vishnu, Bali offered his head and asked the Lord to place his foot on him. Thus, Bali proved that he was indeed a true devotee of Vishnu.
***
 
Why is Onam celebrated?

Vamana Jayanti and Onam festival: Vamana, the fifth avatar of Lord Vishnu was born in the Treta Yuga to sage Kashyapa and Aditi. Today, on the birth anniversary of Vamana, know how he is associated with Onam.
Know how Lord Vamana is associated with the Onam festival Know how Lord Vamana is associated with the Onam festival  KEY HIGHLIGHTSVamana is the fifth avatar of Lord VishnuHe was born in the Treta YugaAs Vamana, Lord Vishnu ended the rule of King Mahabali

Onam is not just a festival of harvest but an ancient tradition associated with the fifth avatar of Lord Vishnu. The story dates back to the Treta Yuga, when demon king Mahabali ruled the three worlds after defeating Indra, the king of Devas in a battle. It was during his reign that Lord Vishnu appeared as a dwarf, a Brahmin boy named Vamana. Today, on Vamana Jayanti (birth anniversary of Vamana), read on to know more about him and his association with the festival of Onam.

Though Bali was sent to the Patala Loka, he was given a boon that granted him a chance to visit his people once during the year. Therefore, it is believed that King Bali visits his kingdom to see if his subjects are happy and content. Hence, people decorate their homes with Pookolam and take part in group activities such as Vallam Kali, Puli Kali, Kai Kottu Kali and prepare the Onam Sadhya.
****

 Dadhi Vamana Jayanthi - by Narahari Sumadhwa

Bhadrapada Shukla Dwadashi


Vamanavatara is the fifth incarnation of Srihari. 

ವಾಮನ ವಾಮನ ಭಾಮನ ವಂದೇ |
 ವಾಮ – ಶತ್ರು; ಅಂದರೆ ಇಂದ್ರನ ಶತ್ರುವಾದ ಬಲೀಂದ್ರನನ್ನು,
 ನ – ಪಾತಾಳಕ್ಕೆ ಕೊಂಡೊಯ್ಯುವವನು
ಬಲಿಯಲ್ಲಿ ಹುದುಗಿದ್ದ ಸತ್ಯನಿಷ್ಟೆಯನ್ನು ವಮನ ಮಾಡಿಸಿದವನು ಆದ್ದರಿಂದ ವಾಮನ.

ಅಜಿನ ದಂಡ ಕಮಂಡಲ ಮೇಖಲ                                          ರುಚಿರ ಪಾವನ ವಾಮನ ಮೂರ್ತಯೇ |
ಮಿತ ಜಗತ್ರಿತಯಾಯ ಜಿತಾರಯೆ                                          ನಿಗಮ ವಾಕ್ಪಟವೇ ವಟವೇ ನಮ: |
अजिन दंड कमंडल मेखल रुचिर पावन वामन मूर्तये ।
मित जगत्रितयाय जितारयॆ निगम वाक्पटवे वटवे नम: ।

ವಾಮನ: ವಾಮಾನಿ ಸುಂದರವಸ್ತೂನಿ ನಯತೀತಿ |

वामन: वामानि सुंदरवस्तूनि नयतीति ।

Vishnu is called as “Vamana” as he brings and leads to beatiful objects. 

ವಾಮನ: ವಾಮಂ ಶತ್ರುಂ ತಮೋ ನಯತೀತಿ | वामन: वामं शत्रुं तमो नयतीति ।

Vishnu is called as “Vamana” because he sends the enemies to the tamas.

ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮ: ಅಂದರೆ ಇಷ್ಟಾರ್ಥ.  ಅದನ್ನು ತಂದು ಕೊಡುವವ ವಾಮನ |
ವಾಮನ: ಸೌಂದರ್ಯಂ ವಕ್ರತ್ವಂ ಚ ನಯತೀತಿ | वामन: सौंदर्यं वक्रत्वं च नयतीति 

Vishnu is called as “Vamana” as he brings beauty as well as the ugliness to the deserving persons

When was Vamanavataara happened ?                            Answer : During the present Vaivasvata manvantara – Bhadrapada Shuddha Dwadashi, when Sravana Nakshatra was there.

2. Where did Srihari incarnated as Vamana ?                       Answer : Near Narmada river.

3.  Who were his parents in Vamanavatara ?                        Answer :  Kashyapa and Aditi

4.  What was the background for Vamanavatara ?

Answer :  Balichakravarthi, the grand son of Prahladarajaru had taken the control of Indra loka and Devendra had lost his power.  He went to Srihari for restoring his powers to get it back from Bali Chakrivarthi.   At the same time, Aditi also did the tapassu to Srihari seeking the avatara of Srihari as her son.   She did the Payovratha to get Srihari as her son.  Pleased with her vratha, Srihari came in as Vamana.

5.  How Vamana went to Bali Chakravarthi ?

Answer : Bali Chakravarthi was doing Ashwamedha yaaga to get permanent Indra Power.  At that time Srihari came there as a Five year Brahmachaari, with Upaveeta, Uttareeya made of Krishnaanjina, with smiling face.

6.  Bali Chakravarthi snatched Devendra Padavi   Whether he is taamasa jeevi ?

Answer :  Even though Bali Chakravarthi is born in the daithya vamsha, he is a saatvika.  Acharya Madhwa has mentioned that there was Asuravesha in him,  and he had jeevadwavyaavesha, which made him to snatch Indra Padavi.  When Vamana came there he did the samarpana of entire thing of whatever he had.  Before that he expressed his Aham.

7.  Who tried to prevent  Bali from giving daana to Vaamana ?

Answer : Shukracharya, the Guru for asuraas, tried to prevent Bali from giving daana. 

8.  What happened when Vamana extended his Vishwaroopa ?

Answer :  When Vamana extended his paada, the Brahmaanda kaTaaha was broken.  Just with the touch of his feet Deva Gange flowed from the deva looka and it came down to bhooloka. 

9.  What made Srihari to incarnate himself as Vamana?

Balichakravarthi in his thirst for power of Devendra, was doing the 100th Ashwamedha yagna.  He had already completed 99 before that.  If he completes the 100th yagna, he would be eligible for the post of Devendra.  The present Indra is Purandara.   When Devataas lost their power to Balichakravarthi, Adithi, the mother of Devataas requested sage Kashyapa to get a son who can bring back the powers to Devataas from Daithyaas.

Kashyapa Rushi told Aditi to do Payovratha for one year, which she did successfully.  As a result of her Jnaana, bhakthi, vairagya, was born Vamana, on Bhadrapada Shudda Dwadashi in Shravana Nakshatra, and Abhijin Muhoortha.  This particular dwadashi is also called as Vijaya Tithi.  Due to the mahimaas of the vratha, Aditi Devi had the boon of Bhagavat darshana, and had the privilege of becoming the mother of Srihari.

ಕಾಠಕೋಪನಿಷತ್ ಭಾಷ್ಯಂ   काठकोपनिषत् भाष्यं
–  ನಮೋ ಭಗವತೇ ತಸ್ಮೈ ಸರ್ವತ: ಪರಮಾಯ ತೇ |

ಸರ್ವಪ್ರಾಣಿಹೃದಿಸ್ಥಾಯ ವಾಮನಾಯ ನಮೋ ನಮ:||

–  नमो भगवते तस्मै सर्वत: परमाय ते ।

सर्वप्राणिहृदिस्थाय वामनाय नमो नम:॥

We salute Vamana roopi paramathma who has all gunaas unlimited and as such he is sarvottama.  He is there in the hearts of all – सर्वप्राणिहृदिस्थाय and he is the devata for Kathakopanishad.

How Vamana appeared after his incarnation ?
At the time of birth itself, Vamana was having Chaturbhuja, Shanka, Chakra, Gada, Padma.  He was neelameghashyama and was having Srivatsa Lanchana.  It proves that he is sarvatantra swatantra, he does not have birth.
Vamana – after his incarnation – Aditi-Kashyaparu did the Jatakarma Samskara.  Surya did the Gayatri Mantropadesha.  Bruhaspatyacharyaru gave Yagnopaveeta, kashyaparu gave the “darbe Ududaara”,  Bhoodevi the Krishnajina, Chandra gave Muttugada Danda (palasha).  Aditi gave him koupeena.  Brahma gave Kamandalu, saptarshees gave darbe, saraswathi the aksharamale. , Kubera Bhikshapatre, annapoorne gave the first bhikshe.

Vamana after Upanayana, did the Agnikaarya and after this Vamana went to Balichakravarthi’ s Yagna Shaale in Brukukutsa kshetra, near Narmada River north bank.

Bali Chakravarthy on seeing the Baala Brahmachari Vamana, did the paadapooja of the brahmachari and asked him what he wanted? the land, Gold, Mrustanna? marriage, Elephants, Horses, Chariot, etc?

Vamana just asked him to give three steps of Vamana.   Bali was surprised for having asked that little daana.  Vamana was satisfied with three steps only.   Bali agreed.  Vamana in his first step occupied the entire bhoomandala, and in the second he occupied the sky.   No place was left to place the third.  Asked Bali where shall he keep the third?  Bali replied to put on his head.  That is how Vamana recovered for Devendra all the lost properties from Bali and gave it to Devategalu.

One must note that Bali Chakravarthi was well aware of the roopa of Vamana before granting daana.  His guru Shukracharya advised well in advance about the incarnation of Srihari as Vamana and that he is not an ordinary boy.  Bali is fully aware and fully conscious of the fact and offered the daana.

As per Pancharatragama – Nitya smarana Vidhanam says as follows :-
दधिमध्ये वामनं तु घृते कृष्णं तु संस्मरेत् ।
वाराहं मृत्तिकास्नाने ह्युपेंद्रं वस्त्रधारणे ।
ದಧಿಮಧ್ಯೇ ವಾಮನಂ ತು ಘೃತೇ ಕೃಷ್ಣಂ ತು ಸಂಸ್ಮರೇತ್ |
ವಾರಾಹಂ ಮೃತ್ತಿಕಾಸ್ನಾನೇ ಹ್ಯುಪೇಂದ್ರಂ ವಸ್ತ್ರಧಾರಣೇ |
While churning curd Vamana smarana to be done, while preparing Ghee Krishna smarana to be done; while doing mruttika snaana varaha smarana to be done; while wearing clothes do smarana of Upendra.

Mahima of Vamana and his avatara can be found in many puranaas, granthas, teekas, etc.

1. Sri Vamana Purana

2. Matsya Purana

3. Srimadbhagvatham – Ashtama Skanda – Adhyaya 14 – (Shlokaas 1 to 36)

.  Sumadhwa Vijaya – 7th Sarga
अपि वामनो ललितबाल्यवानयं  प्रतिभाबलेन कृतदैत्यकौतुक: ।उपधेरध: कृतबलींद्रशात्रव: स्वजनाय केवलमदात् परं पदं ।

ಅಪಿ ವಾಮನೋ ಲಲಿತಬಾಲ್ಯವಾನಯಂ ಪ್ರತಿಭಾಬಲೇನ ಕೃತದೈತ್ಯಕೌತುಕ: |ಉಪಧೇರಧ: ಕೃತಬಲೀಂದ್ರಶಾತ್ರವ: ಸ್ವಜನಾಯ ಕೇವಲಮದಾತ್ ಪರಂ ಪದಂ |

Srimannarayana took a beautiful roopa as “Vamana”.  By his intelligence, he created wonders for Bali and other daithyaas  By taking three steps as daana, he sent Bali to Rasatala looka and re-established Indra as the King of Swarga.
ಭಗವತ್ಯುದಿತೇ ಸಗೋವಿಲಾಸೇ ವಟುಭಾವಂ ತ್ಯಜತಿ ತ್ರಿವಿಕ್ರಮಾರ್ಯೆ|ಅಪಿ ಭಾನುಪುರ: ಸರಾ: ಸಮಸ್ತಾ: ಪ್ರಯಯು: ಕೀಟಮಣಿಪ್ರಭತ್ವಮಾಶು ||

भगवत्युदिते सगोविलासे वटुभावं त्यजति त्रिविक्रमार्यॆ।अपि भानुपुर: सरा: समस्ता: प्रययु: कीटमणिप्रभत्वमाशु ॥

This shloka brings the mahima of Vamana who was shining and glittering with the rays of sun doing seva to Srihari.  After Bali agreed for giving daana as three steps, Vamana who was in a tiny form took the huge roopa of Trivikrama.  He measured the Universe indicating all belongs to him only, whether it is sun, moon, devataas, and the entire world.

 
5.  Dwadasha Stotra by Acharya Madhwa :
वामन वामन भामन वंदे सामन सीमन शामन सानो ।
श्रीधर श्रीधर शंधर वंदे भूधर वार्धर कंदरधारीन् ॥
वामन वामन माणववेष दैत्यवरांतक कारण रूप ।
राम भ्रुगुद्वह सूर्जितदीप्ते क्षत्रकुलांतक शंभुवरेण्य ॥
बलिमुखदितिसुतविजयविनाशन जगदवनाजित भव मम शरणं ।
शुभतमकथाशय परमसदोदित जगदेककारण राम रमारमण ॥
ವಾಮನ ವಾಮನ ಭಾಮನ ವಂದೇ ಸಾಮನ ಸೀಮನ ಶಾಮನ ಸಾನೋ |
ಶ್ರೀಧರ ಶ್ರೀಧರ ಶಂಧರ ವಂದೇ ಭೂಧರ ವಾರ್ಧರ ಕಂದರಧಾರೀನ್ ||
ವಾಮನ ವಾಮನ ಮಾಣವವೇಷ ದೈತ್ಯವರಾಂತಕ ಕಾರಣ ರೂಪ |
ರಾಮ ಭ್ರುಗುದ್ವಹ ಸೂರ್ಜಿತದೀಪ್ತೇ ಕ್ಷತ್ರಕುಲಾಂತಕ ಶಂಭುವರೇಣ್ಯ ||
ಬಲಿಮುಖದಿತಿಸುತವಿಜಯವಿನಾಶನ ಜಗದವನಾಜಿತ ಭವ ಮಮ ಶರಣಂ |
ಶುಭತಮಕಥಾಶಯ ಪರಮಸದೋದಿತ ಜಗದೇಕಕಾರಣ ರಾಮ ರಮಾರಮಣ ||

Vamana is the bestower of jnana and he is the antaryami for all jeevas.   He is the establisher of all dharmas and the culture.  He only can give us jnaana, bhakti, vairagya.  With Koorma Roopa he lifted and supported the universe.  You also support the pralaya.  He is the the shelter for muktha jeevas.  You can only be attracted by pure devotion and bhakthi.  Through your brahmachari roopi you please with Prahlada, and Bali and took back all the wealth of supreme daithya Bali Chakravarthi.  Vamana took his avatara for fulfilling devakarya, pleased Devendra and other devatas.  Vamana roopi paramathma won over Daithya Bali and saved him and destroyed the victorious daithyas and protected the world.

One thing to be noted while calling Bali as daithya – There was a avesha of daithya in Bali.  Infact Bali is haribhaktha.  He has praised Srihari’s vamana roopa, but in the middle due to asuravesha, he did the dwesha of devataas.

6.  Bhagavatha Tatparya Nirnaya – 19th Adhyaya of the 8th Skandha
7.  Mahabharata Tatparya Nirnaya – Adhyaya 1 – Shloka No 66, 67; Adhyaya 3 – Shlokas 46 to 48; Adhyaya 4 – Shloka 14.

8.  Sangraha Ramayana – Adhyaya 5 Shlokas 9 – 12
9.  “Sri Vyasakaravalambana stotram” by Sri Yadavaryaru – Shloka No 11
ದೇವೇಂದ್ರರಾಜ್ಯಹರದಾನವರಾಜಯಜ್ಞ-ಶಾಲಾರ್ಥಿರೂಪಧರ ವಜ್ರಧರಾರ್ಥಿಹಾರಿನ್ |

ಯಾಂಚಾಮಿಷಾದಸುರವಂಚಕ ವಾಮನೇಶ ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಂ |

देवेंद्रराज्यहरदानवराजयज्ञ-शालार्थिरूपधर वज्रधरार्थिहारिन् ।

यांचामिषादसुरवंचक वामनेश वासिष्ठ कृष्ण मम देहि करावलंबं ।

Yadavaryaru described about Vamanavatara as follows –
–   Srihari took the roopa of Vamana, as a brahmachari child and came to the yajnashala of Balichakravarthi, who had snatched the Devendra’s kingdom.  Vamana wears the “vajra” and he is the destroyer of power.    He is the “Asuravanchaka” – one who deceives the wicked asuras, by asking as daana three steps.  Vamana bestows all Mangala to all satwic souls and as he is vamanesha.   Here one must note that even though Vamana has deceived asuraas by asking the land – one must not forget that he has not told a lie.  The real roopa of Srihari was disclosed by Shukracharya, the guru of Bali, before he could give the daana of land.

10.Dashavatara Stuti by Sri Vadirajaru – वादिराजतीर्थ विरचित “दशावतारस्तुति”

10.Dashavatara Stuti by Sri Vadirajaru – वादिराजतीर्थ विरचित “दशावतारस्तुति”
ವಾದಿರಾಜತೀರ್ಥ ವಿರಚಿತ “ದಶಾವತಾರಸ್ತುತಿ” Shloka No 9 & 10 –
ಪಿಂಗಾಕ್ಷವಿಕ್ರಮತುರಂಗಾದಿ ಸೈನ್ಯ ಚತುರಂಗಾವಲಿಪ್ತದನುಜಾ-
ಸಾಂಗಾಧ್ವರಸ್ಥಬಲಿಸಾಂಗಾವಪಾತಹೃಷಿತಾಂಗಾಮರಾಲಿನುತ ತೇ |
ಶೃಂಗಾರಪಾದನಖತುಂಗಾಗ್ರಭಿನ್ನ ಕನಕಾಂಗಾಂಡ ಪಾತಿತಟಿನೀ-
ತುಂಗಾತಿಮಂಗಲ ತರಂಗಾಭಿಭೂತ ಭಜಕಾಂಗಾಂಘವಾಮನ ನಮ: | ೯ |
पिंगाक्षविक्रमतुरंगादि सैन्य चतुरंगावलिप्तदनुजा-
सांगाध्वरस्थबलिसांगावपातहृषितांगामरालिनुत ते ।
शृंगारपादनखतुंगाग्रभिन्न कनकांगांड पातितटिनी-
तुंगातिमंगल तरंगाभिभूत भजकांगांघवामन नम: । ९ ।
Srihari Vaamana is prayed by all the devataas, after he did the nigraha of Bali Chakravarthi
ಧ್ಯಾನಾರ್ಹ ವಾಮನತೋ ನಾಥ ಪಾಹಿ ಯಜಮಾನಾಸುರೇಶವಸುಧಾ-
ದಾನಾಯ ಯಾಚನಿಕ ಲೀನಾರ್ಥವಾಗ್ವಶಿತ ನಾನಾಸದಸ್ಯದನುಜ |
ಮೀನಾಂಕನಿರ್ಮಲ ನಿಶಾನಾಥಕೋಟಿ ಸಮಾನಾತ್ಮ ಮೌಂಜಿಗುಣಕೌ-
ಪೀನಾತ್ಮಸೂತ್ರಪದಯಾನಾತಪತ್ರ ಕರಕಾನಮ್ಯ ದಂಡವರ ಭೃತ್ | ೧೦ |
ध्यानार्ह वामनतो नाथ पाहि यजमानासुरेशवसुधा-
दानाय याचनिक लीनार्थवाग्वशित नानासदस्यदनुज ।
मीनांकनिर्मल निशानाथकोटि समानात्म मौंजिगुणकौ-
पीनात्मसूत्रपदयानातपत्र करकानम्य दंडवर भृत् । १०

11. Dadhivamana Stotram in Vamana Puranam  :
ಹೇಮಾದ್ರಿಶಿಖರಾಕಾರಂ ಶುದ್ಧ ಸ್ಫಟಿಕ ಸನ್ನಿಭಂ |
ಪೂರ್ಣಚಂದ್ರನಿಭಂ ದೇವಂ ದ್ವಿಭುಜಂ ವಾಮನಂ ಸ್ಮರೇತ್ |೧|
ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ ಮಧ್ಯಗಂ |
ಜ್ವಲತ್ಕಾಲಾನಲಪ್ರಖ್ಯಂ ತಡಿತ್ಕೋಟಿ ಸಮಪ್ರಭಂ | ೨ |
ಸೂರ್ಯಕೋಟಿ ಪ್ರತೀಕಾಶಂ ಚಂದ್ರಕೋಟಿ ಸುಶೀತಲಂ |
ಚಂದ್ರಮಂಡಲ ಮಧ್ಯಸ್ಥಂ ವಿಷ್ಣುಮವ್ಯಂ ಅಚ್ಯುತಂ | ೩ |
ಶ್ರೀವತ್ಸ ಕೌತ್ಸುಭೋರಸ್ಕಂ ದಿವ್ಯರತ್ನ ವಿಭೂಷಿತಂ |
ಪೀತಾಂಬರಂ ಉದಾರಾಂಗಂ ವನಮಾಲಾ ವಿಭೂಷಿತಂ | ೪ |
ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಂ |
ಷೋಡಶಸ್ತ್ರೀ ಪರಿವೃತ್ತಂ ಅಪ್ಸರೋಗಣಸೇವಿತಂ | ೫ |
ಋಗ್ಯಜು:ಸಾಮಾಥರ್ವಾದ್ಯೌರ್ಗೀಯಮಾನಂ ಜನಾರ್ದನಂ |
ಚತುರ್ಮುಖಾದ್ಯೈ ದೇವೇಶೈ: ಸ್ತೋತ್ರಾರಾಧನ ತತ್ಪರೈ: | ೬ |
ಸನಕಾದ್ಯೈರ್ಮುನಿಗಣೈ: ಸ್ತೂಯಮಾನಂ ಅಹರ್ನಿಶಂ |
ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ | ೭ |
ದಧಿಮಿಶ್ರಾನ್ನಕವಲಂ ರುಕ್ಮಪಾತ್ರಂ ಚ ದಕ್ಷಿಣೇ |
ಕರೇ ತು ಚಿಂತಯೇತ್ ವಾಮೇ ಪೀಯೂಷಂ ಅಮಲಂ ಸುಧೀ | ೮ |
ಸಾಧಕಾನಾಂ ಪ್ರಯಚ್ಛಂತಂ ಅನ್ನಪಾನಂ ಅನುತ್ತಮಂ |
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ ದೇವಂ ಅಧೋಕ್ಷಜಂ |೯ |
ಅತಿಸುವಿಮಲಗಾತ್ರಂ ರುಕ್ಮಪಾತ್ರಸ್ಥಮಲನ್ನಂ
ಸುಲಲಿತದಧಿಖಂಡಂ ಪಾಣಿನಾ ದಕ್ಷಿಣೇನ | ೧೦ |
ಕಲಶಂ ಅಮೃತಪೂರ್ಣಂ ವಾಮಹಸ್ತೇ ದಧಾನಂ
ತರತಿ ಸಕಲ ದು:ಖಾತ್ ವಾಮನಂ ಭಾವಯೇದ್ಯ: | ೧೧ |
ಕ್ಷೀರಂ ಅನ್ನಂ ಅನ್ನದಾತಾ ಲಭೇದನ್ನಾದ ಏವ ಚ |
ಪುರಸ್ತಾದನ್ನಂ ಆಪ್ನೋತಿ ಪುನರಾವೃತ್ತಿವರ್ಜಿತಂ | ೧೨ |
ಆಯುರಾರೋಗ್ಯಂ ಐಶ್ವರ್ಯಂ ಲಭತೇ ಚಾನ್ನಸಂಪದ: |
ಇದಂ ಸ್ತೋತ್ರಂ ಪಟೇದ್ಯಸ್ತು ಪ್ರಾತ:ಕಾಲೇ ದ್ವಿಜೋತ್ತಮ: |
ಅಕ್ಲೇಶಾದನ್ನ ಸಿದ್ಧ್ಯರ್ಥಂ ಜ್ಞಾನಾಸಿದ್ಧ್ಯರ್ಥಮೇವ ಚ | ೧೩ |
ಅಭ್ರಶ್ಯಾಮ: ಶುಭ್ರಯಜ್ಞೋಪವೀತೀ ಸತ್ಕೌಪೀನ: ಪೀತಕೃಷ್ಣಾಜಿನಶ್ರೀ: |
ಛತ್ರೀ ದಂಡೀ ಪುಂಡರೀಕಾಯತಾಕ್ಷ: ಪಾಯಾದ್ದೇವೋ ವಾಮನೋ ಬ್ರಹ್ಮಚಾರೀ | ೧೪ |
ಅಜಿನ ದಂಡ ಕಮಂಡಲ ಮೇಖಲ ರುಚಿರ ಪಾವನ ವಾಮನ ಮೂರ್ತಯೇ |
ಮಿತ ಜಗತ್ರಿತಯಾಯ ಜಿತಾರಯೆ ನಿಗಮ ವಾಕ್ಪಟವೇ ವಟವೇ ನಮ: | ೧೫ |
ಶ್ರೀಭೂಮಿಸಹಿತಂ ದಿವ್ಯಂ ಮುಕ್ತಾಮಣಿ ವಿಭೂಷಿತಂ |
ನಮಾಮಿ ವಾಮನಂ ವಿಷ್ಣುಂ ಭುಕ್ತಿಮುಕ್ತಿಫಲಪ್ರದಂ | ೧೬ |
ವಾಮನೋ ಬುದ್ಧಿದಾತಾ ಚ ದ್ರವ್ಯಸ್ಥೋ ವಾಮನ: ಸ್ಮೃತ:|
ವಾಮನಸ್ತಾರಕೋಭ್ಯಾಭ್ಯಾಂ ವಾಮನಾಯ ನಮೋ ನಮ: | ೧೭ |
|| ಇತಿ ವಾಮನಪುರಾಣೇ ದಧಿವಾಮನಸ್ತೋತ್ರಂ ಸಂಪೂರ್ಣಂ ||


 12. Dhyana shloka in Tantrasara :
ಧ್ಯಾಯೇತ್ ಸುಶುಕ್ಲಮರವಿಂದ ದಲಾಯತಾಕ್ಷಂ
ಸೌವರ್ಣಪಾತ್ರ ದಧಿ ಭೋಜ್ಯಮಥಾಮೃತಂ ಚ |
ದೋರ್ಭ್ಯಾಂ ದಧಾನಮಖಿಲೈಶ್ಚ ಸುರೈ: ಪರೀತಂ |
ಶೀತಾಂಶುಮಂಡಲಗತಂ ರಮಯಾ ಸಮೇತಂ |
ध्यायेत् सुशुक्लमरविंद दलायताक्षं सौवर्णपात्र दधि भोज्यमथामृतं च ।
दोर्भ्यां दधानमखिलैश्च सुरै: परीतं शीतांशुमंडलगतं रमया समेतं ।
ಬಂಗಾರದ ಬಟ್ಟಲಲ್ಲಿರುವ ಮೊಸರನ್ನವನ್ನೂ, ಅಮೃತವನ್ನೂ, ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವ, ತನ್ನ ಸಮಸ್ತ ದೇವತಾ ಪರಿವಾರದೊಡನೆ, ರಮಾದೇವಿಯೊಡನೆ, ಚಂದ್ರಮಂಡಲದಲ್ಲಿ ಕುಳಿತಿರುವ, ಕಮಲದಂತೆ ವಿಶಾಲವಾದ ಕಣ್ಣುಗಳಿಂದ  ಪ್ರಕಾಶಿಸುತ್ತಿರುವ   ವಾಮನನನ್ನು ಧ್ಯಾನಿಸಬೇಕು.
उद्यद्रविप्रभमरींद्रदरौ गदां च ज्ञानं च विभ्रतमजं प्रियया समेतं ।
विश्वावकाशमभित: प्रतिपूरयंतं भासा स्वया स्मरत विष्णुमजादिवंद्यं ।
ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ  ಜ್ಞಾನಂ ಚ ವಿಭ್ರತಮಜಂ ಪ್ರಿಯಯಾ ಸಮೇತಂ |
ವಿಶ್ವಾವಕಾಶಮಭಿತ: ಪ್ರತಿಪೂರಯಂತಂ ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಂ |
ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಬೆಳಗುವ ತನ್ನ ಚತುರ್ಭುಜಗಳಲ್ಲಿ ಚಕ್ರ ಶಂಖ ಗದಾ ಜ್ಞಾನಮುದ್ರೆಗಳನ್ನು ಧರಿಸಿರುವ, ತನ್ನ ಪ್ರಭೆಯಿಂದ ಜಗತ್ತನ್ನೆಲ್ಲ ವ್ಯಾಪಿಸುತ್ತಿರುವ, ಬ್ರಹ್ಮ ರುದ್ರಾದಿ ದೇವತೆಗಳಿಂದಲೂ ವಂದ್ಯನಾದ, ರಮಾದೇವಿ ಸಹಿತನಾದ ವಾಮನನನ್ನು ಧ್ಯಾನಿಸಬೇಕು.
13. Vamana Stotram by Aditi Devi in Padma Puranam
 14. Dashavatara harigaatha by Sri Vijayadhwaja Tirtharu – Shloka No 5

ತ್ರಿಪದವ್ಯಾಸ ಚತುರ್ದಶಭುವನಂ ವಾಮನರೂಪಂ |

ಕಮಲಾಕಾಂತಮಖಂಡಿತವಿಭವಾಬ್ಧಿ ಹರಿಮೀಡೆ ||

त्रिपदव्यास चतुर्दशभुवनं वामनरूपं । कमलाकांतमखंडितविभवाब्धि हरिमीडॆ ॥

 
15. Ashtavimshati Moorthi stuti by Sri Satyasandha Tirtharu – shloka no.6

पयोंऽबुवच्चेत्तत्रापीत्युक्तं साधयितुं पय: ।
दधि कुर्वंतमनिशं वंदे तं दधिवामनं ।

ಪಯೋಂಽಬುವಚ್ಚೇತ್ತತ್ರಾಪೀತ್ಯುಕ್ತಂ ಸಾಧಯಿತುಂ ಪಯ: |
ದಧಿ ಕುರ್ವಂತಮನಿಶಂ ವಂದೇ ತಂ ದಧಿವಾಮನಂ |

 
16. “Tathwasuvaali” – dashaavataara stuti –

vairOchaniya bhUmi mUru paadavu bEDi IraDiyoLagaLede bhUvyOma |

bhUvyOmavaLeda bhaagIrathiya janaka dayavaagO |

ವೈರೋಚನಿಯ ಭೂಮಿ ಮೂರು ಪಾದವು ಬೇಡಿ ಈರಡಿಯೊಳಗಳೆದೆ ಭೂವ್ಯೋಮ |
ಭೂವ್ಯೋಮವಳೆದ ಭಾಗೀರಥಿಯ ಜನಕ ದಯವಾಗೋ |

–  vairOchaniya – virOchana’s son Bali Chakravarti;     bhaagIrati janaka –  trivikrama;

bhUvyOmava – bhUloka & akaasha (antariksha, svarga)

NARAHARI SUMADHWA
***

ವಾಮನ ಜಯಂತಿ - ಭಾದ್ರಪದ ಶುದ್ಧ ದ್ವಾದಶಿ
|| ಅಜಿನ ದಂಡ ಕಮಂಡಲ ಮೇಖಲ, ರುಚಿರ ಪಾವನ  ವಾಮನ ಮೂರ್ತಯೇ|
ಮಿತ ಜಗತ್ರಿತಯಾಯ ಜಿತಾರಯೇ , ನಿಗಮ ವಾಕ್ಪಟವೇ ವಟವೇ ನಮಃ||
ಪರಮಾತ್ಮನ ದಶವಾತರಾಗಳಲ್ಲಿ ಅತ್ಯಂತ ವಿಶಿಷ್ಟವಾದ ಅವತಾರ ಅದುವೇ ವಾಮನ ಅವತಾರ. ಒಂದೇ ಅವತಾರಗದಲ್ಲಿ ಎರಡು ರೂಪ ತೋರಿಸಿದ ಅವತಾರ ಅದುವೇ ವಾಮನಾವತಾರ. ಈ ವಾಮನ ಅವತಾರ ಎರಡನೇ ಮಹಾಯುಗ ಅಥವಾ ತ್ರೇತಾಯುಗದ ಪೂರ್ವಭಾಗದಲ್ಲಿ ಆದ ಅವತಾರ ಎಂದು ಪುರಾಣಗಳಲ್ಲಿ ನೋಡಬಹುದು.
ಪರಮಾತ್ಮನ ಅನಂತ ಅವತಾರಗಳಲ್ಲಿ ದಶಾವತಾರಗಳು ಪ್ರಮುಖ ಅದರಲ್ಲೂ ಮತ್ಸ್ಯ ಕೂರ್ಮ ವರಾಹ ನರಸಿಂಹ ನಂತರದ ಮಾನವ ರೂಪದ ಪೂರ್ಣಾವತಾರ ವಾಮಾನವತಾರ. ಪರಮಾತ್ಮ ಬಾಲ ವಟುವಾಗಿ ಬಂದು ಮೂರಡಿ ಪಾದದಷ್ಟು ಭೂಮಿ ಬೇಡಿ ಕಡೆಗೆ ಮೂರುಲೋಕವನ್ನೇ ಅಳೆದು ಕಡೆಗೆ ತನ್ನ ದಿವ್ಯವಾದ ಲೀಲೆಯನ್ನೇ ತೋರಿದ ಅವತಾರ ವಾಮಾನವಾತಾರ.
ವಾಮನವತಾರದ ಹಿನ್ನೆಲೆ
ಶ್ರೀಮದ್ಭಾಗವತ ಮತ್ತು ವಾಮನಪುರಾಣದಲ್ಲಿ ಆಧಾರವಾಗಿ ನಾವು ತಿಳಿಯುವಂತೆ
ಬಲಿ ರಾಜನು ಅದ್ಭುತವಾದ ಏಕಾಗ್ರತೆ, ಗುರು ಭಕ್ತಿ ಹಾಗೂ ಗುರುಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದನು. ಗುರುವಿನ ಮೇಲೆ ಇರುವ ಶ್ರದ್ಧಾ ಭಕ್ತಿಯನ್ನು ಮೆಚ್ಚಿದ ಶುಕ್ರಾಚಾರ್ಯರು ಬಲಿ ರಾಜನಿಗೆ ಸದಾಕಾಲ ಹೂಬಿಡುವಂತಹ ಹಾರ ಹಾಗೂ ಶಂಖವನ್ನು ಉಡುಗೊರೆಯನ್ನಾಗಿ ನೀಡಿದರು. ಶುಕ್ರಾಚಾರ್ಯರ ಆಶೀರ್ವಾದದಿಂದ ಅದ್ಭುತ ಶಕ್ತಿಯನ್ನು ಪಡೆದುಕೊಂಡನು. ಈ ಹಿಂದೆ ಸಮುದ್ರ ಮಂಥನದಲ್ಲಿ ಅಮೃತವನ್ನು ಪಡೆದ ದೇವತೆಗಳು, ಅಮೃತವನ್ನು ಕುಡಿದು ಅಮರರಾಗಿದ್ದರು. ನಂತರ ಅಮರರಾದ ದೇವತೆಗಳು ಅಸುರರ ರಾಜನಾದ ವಿರೋಚನ ಸೈನ್ಯದ ಮೇಲೆ ದಾಳಿ ಮಾಡಿದರು. ನಂತರ ಇಂದ್ರ ದೇವನು ವಿರೋಚನನ್ನು ಕೊಂದಿದ್ದನು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ ಬಲಿ ರಾಜನು ದೇವತೆಗಳ ವಿರುದ್ಧ ಹೋರಾಡಿದನು. ಆಗ ದೇವತೆಗಳನ್ನು ಬಲಿ ರಾಜನು ಸುಲಭವಾಗಿ ಸೋಲಿಸಿ, ಸ್ವರ್ಗವನ್ನು ಗೆದ್ದುಕೊಂಡನು. ಇಂದ್ರನು ಆಚಾರ್ಯ ಬಹಸ್ಪತಿಯ ಸಹಾಯದಿಂದ ಯುದ್ಧಭೂಮಿಯನ್ನು ಬಿಟ್ಟು ಓಡಿಹೋದನು. ಶುಕ್ರಾಚಾರ್ಯರು ಬಲಿ ರಾಜನಿಗೆ ಅಶ್ವಮೇಧ  ಯಜ್ಞಮಾಡಲು ಆದೇಶಿಸಿದ್ದರು. ಆ ಯಾಗ ಮಾಡುವಾಗ ಬ್ರಾಹ್ಮಣರಿಗೆ ನಿಯಮಿತವಾಗಿ ದೇಣಿಗೆ ನೀಡಬೇಕು, ಎಂದಿಗೂ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಹೇಳಿದ್ದರು. ಹಾಗೊಮ್ಮೆ ಬರಿಗೈಯಲ್ಲಿ ಕಳುಹಿಸಿದರೆ ಹಿಂದೆ ಪಡೆದ ಶಕ್ತಿಗಳೆಲ್ಲವೂ ನಾಶವಾಗುವುದು ಎಂದು ಹೇಳಿದ್ದರು.
ಬಲಿ ರಾಜನ ಉದಾರ ಬುದ್ಧಿ, ಗುರು ಭಕ್ತಿ ಹಾಗೂ ದಾನಗುಣದಿಂದಾಗಿ ಪ್ರಪಂಚದಾದ್ಯಂತ ಪ್ರಶಂಸೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದನು. ಮಹಾನ್ ಶಕ್ತಿ ಹಾಗೂ ಆಶೀರ್ವಾದವನ್ನು ಪಡೆದ ಬಲಿಯನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ವಿಷ್ಣು ದೇವನು ಸಹ ತಿಳಿದಿದ್ದನು. ಬಲಿ ರಾಜನು ಯಾವುದೇ ಅನ್ಯಾಯದ ತಪ್ಪುಗಳನ್ನು ಮಾಡಿರಲಿಲ್ಲ. ದೇವರ ವಿರುದ್ಧ ಹೋರಾಡಿದಾಗಲೂ ತಮ್ಮ ನ್ಯಾಯಯುತ ಪಾಲನ್ನು ಮಾತ್ರ ಪಡೆದುಕೊಂಡಿದ್ದನು. ಬಲಿಯು ಬ್ರಾಹ್ಮಣರು ಏನೇ ಕೇಳಿದರೂ ತಿರಸ್ಕರಿಸದೆ ದಾನ ಮಾಡುತ್ತಾನೆ ಎನ್ನುವುದು ವಿಷ್ಣು ದೇವರಿಗೆ ತಿಳಿದಿತ್ತು. ಇದು ಬಲಿರಾಜನ 99 ನೇ ಯಜ್ಞ ಮತ್ತು 100 ಯಜ್ಞಗಳು ಪೂರೈಸಿದರೆ ಪುರಂದರ (ಈಗಿನ ಇಂದ್ರನ) ಸ್ಥಾನ ಬಳಿಗೆ ಕೊಡಬೇಕಾಗಿತ್ತು.
ವಾಮನವಾತಾರ
ಇತ್ತ ನರ್ಮದಾ ನದಿ ತೀರದಲ್ಲಿ ಅದಿತಿ ಮತ್ತು ಕಶ್ಯಪರು ತಾವು ಪರಮಾತ್ಮನಲ್ಲಿ ತಪಸ್ಸನ್ನು ಆಚರಿಸಿ ಪರಮಾತ್ಮನನ್ನ ಹೋಲುವ ಅಂದರೆ ಸಾಕ್ಷಾತ್ ಪರಮಾತ್ಮನನ್ನೇ ಪುತ್ರನನ್ನಾಗಿ ಪಡೆಯುವ ವರವನ್ನು ಕೇಳಿದರು. ಇವರಿಗೆ ಸಾಕ್ಷಾತ್ ಪರಮಾತ್ಮ ಮೂಲರೂಪದಿಂದ ಬಂದು ಇವರ ಮುಂದೆ 5 ವರ್ಷದ ಹುಡುಗನಾಗಿ ನಿಂತನು, ಸ್ವತಹ ತಾನೇ ನನಗೆ ಉಪನಯನ ಮಾಡಿಯೆಂದು ಕೇಳಿದನು. ಅದಿತಿ ಕಶ್ಯಪರು ಸಂತಸದಿಂದ ಉಪನಯನ ಮಾಡಿದರು ಆ ಸಮಯದಲ್ಲಿ ಬೃಹಸ್ಪತ್ಯಚಾರ್ಯರು ಉಪವೀತ (ಜನಿವಾರ) ವನ್ನು ತಂದು ಕೊಟ್ಟರು. ಎಲ್ಲರ ಗಂಟನ್ನು ಬಿಡಿಸುವ ಪರಮಾತ್ಮ ಈ ಸಂಸಾರದ ಗಂಟನ್ನು ಬಿಡಿಸು, ಹಾಗೆ ಬ್ರಹ್ಮ ದೇವರು ತಾಳೆಯ ಗರಿಯ ಛತ್ರಿಯನ್ನು ಕೊಟ್ಟರು. ಹಾಗೆ ರುದ್ರಾದಿಗಳು ಕಮಂಡಲವನ್ನು ಕೊಟ್ಟರು. ಇಂದ್ರಾದಿ ದೇವತೆಗಳು ಪಾದುಕೆಗಳನ್ನು ಕೊಟ್ಟರು, ಇವೆಲ್ಲವನ್ನೂ ಧರಿಸಿದ ಪರಮಾತ್ಮ ಸಾಕ್ಷಾತ್ ಮನ್ಮಥನಿಗೂ ಮನ್ಮಥನಂತೆ ಕಂಗೊಳಿಸಿದನು.
ವಾಮಂ ಕಲ್ಯಾಣಂ ನಯತಿ ಭಕ್ತಾನಿತಿ ವಾಮನ: |
ವಾಮನ ಎಂದರೆ  ಸುಂದರ, ಕಲ್ಯಾಣ  
ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮ ಎಂದರೆ ಇಷ್ಟಾರ್ಥ ಅದನ್ನು ತಂದು ಕೊಡುವವನು ವಾಮನ
ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮನ ಎಂದರೆ ಶತ್ರುಗಳನ್ನು ತಮೋಲೋಕಕ್ಕೆ ಕಳುಹಿಸಿ ಕೊಡುವವನು.
ಹೀಗೆ ವಟು ರೂಪದಿಂದ ವಾಮನದೇವರು ಬಲಿರಾಜ ಮಾಡುತಿದ್ದ ಯಜ್ನ್ಯಕ್ಕೆ ಹೋದನು. ಆಗ ಬಲಿರಾಜನು ಅವನನ್ನು ಸ್ವಾಗತಿಸಿದನು. ತನಗಾಗಿ ಒಂದು ಸಹಾಯ ಮಾಡಬೇಕು ಎಂದು ಬಲಿರಾಜನಲ್ಲಿ ವಾಮನನು ಕೇಳಿದನು. ಬ್ರಾಹ್ಮಣನ ಮಾತನ್ನು ಮೀರದ ಬಲಿರಾಜ ಏನು ಬೇಕೆಂದು ಕೇಳಿದನು. ಆಗ ವಾಮನನು ತನ್ನ ಮೂರು ಅಡಿಯಷ್ಟು ಜಾಗವನ್ನು ದಾನ ಮಾಡಬೇಕು ಎಂದು ಕೇಳಿದನು. ಅದನ್ನು ಕೇಳಿದ ಬಲಿ ರಾಜನು ಅತ್ಯಂತ ಸಂತೋಷದಿಂದ ದಾನ ಮಾಡುವುದಾಗಿ ಒಪ್ಪಿಕೊಂಡನು.
ತ್ರಿವಿಕ್ರಮವಾತರ
ವಾಮನನಿಗೆ ನಿನಗೆ ಬೇಕಾದ ಮೂರು ಅಡಿಯನ್ನು ತೆಗೆದುಕೊಳ್ಳಲು ಅನುಮತಿ ನೀಡುತ್ತಿದ್ದಂತೆ, ವಾಮನು ಆಕಾಶದ ಎತ್ತರಕ್ಕೆ ಬೆಳೆದನು. ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಟ್ಟನು. ನಂತರ ಇನ್ನೊಂದು ಹೆಜ್ಜೆಯನ್ನು ದೇವಲೋಕದಲ್ಲಿ ಇಡಲು ಹೇಳಿದನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು ಎಂದು ವಾಮನ ಕೇಳಿದನು. ಆಗ ಬಲಿ ರಾಜನು ಶುಕ್ರಾಚಾರ್ಯರು ಹೇಳಿದ ಮಾತುಗಳನ್ನು ನೆನೆಸಿಕೊಂಡನು. ನಂತರ ವಾಮನನ ಮುಂದೆ ಕುಳಿತು ಕೈಗಳನ್ನು ಮುಗಿದು ತನ್ನ ತಲೆಯ ಮೇಲೆ ಇನ್ನೊಂದು ಹೆಜ್ಜೆ ಇಡುವಂತೆ ಹೇಳಿದನು. ಆಗ ವಾಮನನು ಬಲಿರಾಜನ ತಲೆಯ ಮೇಲೆ ಕಾಲನ್ನು ಇಡುತ್ತಿದ್ದಂತೆಯೇ ಪಾತಾಳಕ್ಕೆ ಹೋದನು. ಹೀಗೆ ವಾಮನ ತ್ರಿವಿಕ್ರಮನಾದನು. ಬಲಿ ರಾಜನ ಶ್ರದ್ಧೆ ಹಾಗೂ ಭಕ್ತಿಯನ್ನು ಮೆಚ್ಚಿದ ವಿಷ್ಣು ದೇವರು ಬಲಿ ರಾಜನು ಪಾತಾಳ ಲೋಕದ ಆಡಳಿತ ಮಾಡಲು ಆಶೀರ್ವದಿಸಿದನು. ನಂತರ ದೇವತೆಗಳಿಗೆ ಸ್ವರ್ಗದ ಆಡಳಿತ ಮಾಡಲು ಹೇಳಿದನು. ವಾಮನ ಅವತಾರವನ್ನು ಉಪೇಂದ್ರ ಹಾಗೂ ತ್ರಿವಿಕ್ರಮ ಎಂದು ಸಹ ಕರೆಯಲಾಗುತ್ತದೆ. ಭೂಮಿ, ಪಾತಾಳ ಹಾಗೂ ಸ್ವರ್ಗ ಲೋಕವನ್ನು ಆಳುವವನು ಎಂದು ಹೇಳಲಾಗುವುದು.
ಹೀಗೆ ವಾಮನದೇವರ ಮಹಿಮೆ ಅತ್ಯಂತ ಶುಭಕರ ಮತ್ತು ಮಂಗಳ ಮಯವಾದದ್ದು. ಪುರಾಣಗಳು ಮತ್ತು ನಮಗೆ ಉಪಲಬ್ಧವಿರುವ ಗ್ರಂಥಗಳಲ್ಲಿ ವಾಮನ ದೇವರ ಚಿಂತನೆ
ದಧಿಮಧ್ಯೇ ವಾಮನಂ ತು ಘೃತೇ ಕೃಷ್ಣಂ ತು ಸಂಸ್ಮರೇತ್ |
ವಾರಾಹಂ ಮೃತ್ತಿಕಾಸ್ನಾನೇ ಹ್ಯುಪೇಂದ್ರಂ ವಸ್ತ್ರಧಾರಣೇ |
ದದಿವಾಮನ ಎಂದೇ ಪ್ರಸಿದ್ಧ ನಾದ ವಾಮನ ದೇವರಿಗೆ ಪ್ರಿಯವಾದ ವಸ್ತು ಎಂದರೇ ಮೊಸರು, ಮೊಸರಿನಿಂದ ಮಾಡಿದ ರಸಗಳು ಮತ್ತು ಭಕ್ಷಗಳು ಪ್ರಿಯವಾದದ್ದು. ಹೇಗೆ ಕೃಷ್ಣನಿಗೆ ನವನೀತ, ವರಹಾದೇವರಿಗೆ ಮೃತ್ತಿಕಸ್ನಾನ ಮತ್ತು ಉಪೇಂದ್ರನಾಮಕ ವಿಷ್ಣು ಅಥವಾ ನಾರಾಯಣನಿಗೆ ವಸ್ತ್ರಾಲಂಕಾರ ಹೇಗೆ ಪ್ರಿಯವೋ ಹಾಗೆ ವಾಮನನಿಗೆ ಮೊಸರು ತುಂಬಾ ಇಷ್ಟ. ಮೊಸರನ್ನು ಕಡೆಯುವಾಗ ವಾಮನನ ಸ್ಮರಣೆ ಅವಶ್ಯಮಾಡಲೇ ಬೇಕು.
ಸುಮಧ್ವವಿಜಯದಲ್ಲಿ ವಾಮನದೇವರ ಚಿಂತನೆಯನ್ನು ಶ್ರೀನಾರಾಯಣ ಪಂಡಿತಾಚಾರ್ಯರು ಹೀಗೆ ಹೇಳುತ್ತಾರೆ.
ಅಪಿ ವಾಮನೋ ಲಲಿತಬಾಲ್ಯವಾನಯಂ ಪ್ರತಿಭಾಬಲೇನ ಕೃತದೈತ್ಯಕೌತುಕ: |
ಉಪಧೇರಧ: ಕೃತಬಲೀಂದ್ರಶಾತ್ರವ: ಸ್ವಜನಾಯ ಕೇವಲಮದಾತ್ ಪರಂ ಪದಂ |
ನಾರಾಯಣ ಅತಿಸುಂದರನಾದ ವಾಮನ ರೂಪಧರಿಸಿ ಮತ್ತು ಅತಿಬುದ್ದಿವಂತಿಕೆಯಿಂದ ರಸಾತಳ ಲೋಕಕ್ಕೆ ತಳ್ಳಿ ಪುನಃ ಇಂದ್ರನಿಗೆ ಅಮರವತಿಯನ್ನು ಕೊಟ್ಟು ಸ್ವರ್ಗಾಧಿಪತ್ಯವನ್ನು ಕೊಟ್ಟವನು.
ಇನ್ನು ದ್ವಾದಶ ಸ್ತೋತ್ರಗಳಲ್ಲಿ ಆಚಾರ್ಯರು ಹೀಗೆ ವರ್ಣಿಸುತ್ತಾರೆ.
ವಾಮನ ವಾಮನ ಭಾಮನ ವಂದೇ ಸಾಮನ ಸೀಮನ ಶಾಮನ ಸಾನೋ |
ಶ್ರೀಧರ ಶ್ರೀಧರ ಶಂಧರ ವಂದೇ ಭೂಧರ ವಾರ್ಧರ ಕಂದರಧಾರೀನ್ ||
ವಾಮನ ವಾಮನ ಮಾಣವವೇಷ ದೈತ್ಯವರಾಂತಕ ಕಾರಣ ರೂಪ |
ಬಲಿಮುಖದಿತಿಸುತವಿಜಯವಿನಾಶನ ಜಗದವನಾಜಿತ ಭವ ಮಮ ಶರಣಂ |
ಶುಭತಮಕಥಾಶಯ ಪರಮಸದೋದಿತ ಜಗದೇಕಕಾರಣ ರಾಮ ರಮಾರಮಣ ||
ಯಾದವಾರ್ಯರು ತಮ್ಮ ಕರಾವಲಂಭನಾ ಸ್ತೋತ್ರದಲ್ಲಿ ಹೀಗೆ ಚಿಂತಿಸುತ್ತಾರೆ.
ದೇವೇಂದ್ರರಾಜ್ಯಹರದಾನವರಾಜಯಜ್ಞ-ಶಾಲಾರ್ಥಿರೂಪಧರ ವಜ್ರಧರಾರ್ಥಿಹಾರಿನ್ |
ಯಾಂಚಾಮಿಷಾದಸುರವಂಚಕ ವಾಮನೇಶ ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಂ |
ಶ್ರೀವಾದಿರಾಜ ತೀರ್ಥರು ದಶಾವತಾರ ಸ್ತುತಿಯಲ್ಲಿ ಹೀಗೆ ಚಿಂತಿಸುತ್ತಾರೆ
ಪಿಂಗಾಕ್ಷವಿಕ್ರಮತುರಂಗಾದಿ ಸೈನ್ಯ ಚತುರಂಗಾವಲಿಪ್ತದನುಜಾ-
ಸಾಂಗಾಧ್ವರಸ್ಥಬಲಿಸಾಂಗಾವಪಾತಹೃಷಿತಾಂಗಾಮರಾಲಿನುತ ತೇ |
ಶೃಂಗಾರಪಾದನಖತುಂಗಾಗ್ರಭಿನ್ನ ಕನಕಾಂಗಾಂಡ ಪಾತಿತಟಿನೀ-
ತುಂಗಾತಿಮಂಗಲ ತರಂಗಾಭಿಭೂತ ಭಜಕಾಂಗಾಂಘವಾಮನ ನಮ:
ಶ್ರೀ ಆಚಾರ್ಯ ಮಧ್ವರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಕೊಟ್ಟಿರುವ ವಾಮನ ದೇವರ ಧ್ಯಾನ ಶ್ಲೋಕ
ಧ್ಯಾಯೇತ್ ಸುಶುಕ್ಲಮರವಿಂದ ದಲಾಯತಾಕ್ಷಂ
ಸೌವರ್ಣಪಾತ್ರ ದಧಿ ಭೋಜ್ಯಮಥಾಮೃತಂ ಚ |
ದೋರ್ಭ್ಯಾಂ ದಧಾನಮಖಿಲೈಶ್ಚ ಸುರೈ: ಪರೀತಂ |
ಶೀತಾಂಶುಮಂಡಲಗತಂ ರಮಯಾ ಸಮೇತಂ |
ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ  ಜ್ಞಾನಂ ಚ ವಿಭ್ರತಮಜಂ ಪ್ರಿಯಯಾ ಸಮೇತಂ |
ವಿಶ್ವಾವಕಾಶಮಭಿತ: ಪ್ರತಿಪೂರಯಂತಂ ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಂ |
ಬಂಗಾರದ ಬಟ್ಟಲಲ್ಲಿರುವ ಮೊಸರನ್ನವನ್ನೂ, ಅಮೃತವನ್ನೂ, ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವ, ತನ್ನ ಸಮಸ್ತ ದೇವತಾ ಪರಿವಾರದೊಡನೆ, ರಮಾದೇವಿಯೊಡನೆ, ಚಂದ್ರಮಂಡಲದಲ್ಲಿ ಕುಳಿತಿರುವ, ಕಮಲದಂತೆ ವಿಶಾಲವಾದ ಕಣ್ಣುಗಳಿಂದ  ಪ್ರಕಾಶಿಸುತ್ತಿರುವ   ವಾಮನನನ್ನು ಧ್ಯಾನಿಸಬೇಕು
ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಬೆಳಗುವ ತನ್ನ ಚತುರ್ಭುಜಗಳಲ್ಲಿ ಚಕ್ರ ಶಂಖ ಗದಾ ಜ್ಞಾನಮುದ್ರೆಗಳನ್ನು ಧರಿಸಿರುವ, ತನ್ನ ಪ್ರಭೆಯಿಂದ ಜಗತ್ತನ್ನೆಲ್ಲ ವ್ಯಾಪಿಸುತ್ತಿರುವ, ಬ್ರಹ್ಮ ರುದ್ರಾದಿ ದೇವತೆಗಳಿಂದಲೂ ವಂದ್ಯನಾದ, ರಮಾದೇವಿ ಸಹಿತನಾದ ವಾಮನನನ್ನು ಧ್ಯಾನಿಸಬೇಕು.
ಪ್ರೀತೋಸ್ತು ಕೃಷ್ಣ ಪ್ರಭೋ
ಶ್ರೀಶ ಸಮೀರ ದಾಸ
ಫಣೀಂದ್ರ ಕೆ
***


ಭಾದ್ರಪದ ಶುದ್ಧ ದ್ವಾದಶೀ ಶ್ರೀ ವಾಮನ ಜಯಂತೀ / ಶ್ರೀ ವಾಮನ ಪ್ರಾದುರ್ಭಾವ
"ಭಾದ್ರಪದ ಶುದ್ಧ ದ್ವಾದಶೀ ಶ್ರೀ ವಾಮನ ಜಯಂತೀ / ಶ್ರೀ ವಾಮನ ಪ್ರಾದುರ್ಭಾವ "
" ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಕಣ್ಣಲ್ಲಿ ಶ್ರೀ ತ್ರಿವಿಕ್ರಮದೇವರು "
" ತತ್ತ್ವಸುವ್ವಾಲಿಯಲ್ಲಿ - ದಶಾವತಾರ ಸ್ತುತಿ "
ವೈರೋಚನಿಯ ಭೂಮಿ ಮೂರು ಪಾದವು ಬೇಡಿ ।
ಈರಡಿಯೊಳಗಳೆದೆ ಭೂ ವ್ಯೋಮ ।
ಭೂ ವ್ಯೋಮವಳೆದ । ಭಾ ।
ಗೀರಥಿಯ ಜನಕ ದಯವಾಗೋ ।।
ವೈರೋಚನಿಯ = ವಿರೋಚನನ ಮಗ ಬಲಿಯನ್ನು
ಭೂಮಿ = ರಾಜ್ಯವನ್ನು
ಮೂರು ಪಾದವು ಬೇಡಿ = ಮೂರು ಪಾದದ ಅಳತೆಯಷ್ಟನ್ನು ಯಾಚಿಸಿ ಪಡೆದು
ಈರಡಿಯೊಳಗೆ = ಎರಡು ಪಾದಗಳಲ್ಲಿ
ಭೂ ವ್ಯೋಮವ = ಭೂ ಲೋಕ ಮತ್ತು ಆಕಾಶಗತ ಎರಡು ಲೋಕಗಳನ್ನು
ಅಳೆದ = ತೆಗೆದುಕೊಂಡ
ಭಾಗೀರಥಿಯ ಜನಕ = ಗಂಗಾ ಜನಕನಾದ ಹೇ ಶ್ರೀ ವಾಮನ ರೂಪಿ ಶ್ರೀ ಶ್ರೀನಿವಾಸಾ
ದಯವಾಗೋ = ಕೃಪೆದೋರೋ!!
" ಶ್ರೀ ವಾಮನ ಪ್ರಾದುರ್ಭಾವ "
( ಶ್ರೀಮದ್ಭಾಗವತ ಅಷ್ಟಮಸ್ಕಂದದಿಂದ ಉಧೃತ )
ಮುಕ್ತಾಶ್ರಯನಾದ ಶ್ರೀಮನ್ನಾರಾಯಣನು ಶ್ರೀ ಬ್ರಹ್ಮದೇವರ ಪ್ರಾರ್ಥನೆಯಂತೆ ಅದಿತಿಯಲ್ಲಿ ಅವತರಿಸಿದನು.
ಚತುರ್ಭುಜನೂ, ಶಂಖ ಚಕ್ರ ಪದ್ಮ ಗದಾಧರನೂ, ಪೀತಾಂಬರನೂ, ಶ್ಯಾಮ ವರ್ಣನಾದ ಶ್ರೀ ಹರಿಯು ನಲಿನ ವಿಶಾಲ ನೇತ್ರಗಳಿಂದ ಕರುಣಾಕಟಾಕ್ಷವನ್ನು ಬೀರುತ್ತಿದ್ದನು.
ಮಕರಕುಂಡಲಗಳ ಕಾಂತಿಯಿಂದ ಮುಖ ಪಂಕಜವು, ಶ್ರೀವತ್ಸದಿಂದ ವಕ್ಷಸ್ಥಳವು, ವಲಯಾಂಗದಗಳಿಂದ ಬಾಹುಲತೆಗಳು, ಕಾಂಚೀ ನೂಪುರಗಳಿಂದ ಪಾದಾರವಿಂದಗಳಿಂದ ಶೋಭಿಸಿದವು.
ಮಧುಕರ ಝ೦ಕಾರ ವಿಲಸಿತ ದಿವ್ಯ ವನಮಾಲೆಯನ್ನೂ, ಶ್ರೀ ಕೌಸ್ತುಭ ಮಣಿಯನ್ನು ಧರಿಸಿದ ಶ್ರೀಶನು ತನ್ನ ದಿವ್ಯ ಕಾಂತಿಯಿಂದ ಶ್ರೀ ಕಶ್ಯಪರ ಮನೆಯ ಕತ್ತಲನ್ನೂ, ಹೃದಯದ ಕತ್ತಲನ್ನೂ ಕೂಡಾ ನಾಶ ಪಡಿಸಿ ಬೆಳಗಿದನು.
ಆಗ ದಿಕ್ಕುಗಳು ಪ್ರಸನ್ನವಾದವು. ನದೀ ಜಲಗಳೂ ಸರೋವರ ನಿರ್ಮಲವಾಗಿ ಪ್ರಕಾಶಿಸಿದವು. ಪ್ರಜೆಗಳ ಹೃದಯವು ಆನಂದ ಭರಿತವಾಯಿತು. ಭೂಮ್ಯಾ೦ತರಿಕ್ಷ ದೇವ ಲೋಕದ ಜನರು, ವಿಪ್ರರು, ಗೋವುಗಳು ಮನಃಶಾಂತಿ ಸಮಾಧಾನಗಳನ್ನು ಪೊಂದಿದರು.
ಭಾದ್ರಪದ ಶುಕ್ಲ ದ್ವಾದಶೀ ಮಧ್ಯಾಹ್ನ ಸಮಯದಲ್ಲಿ ಅಭಿಜಿನ್ಮುಹೂರ್ತದ ಶುಭ ಸಮಯದಲ್ಲಿ ವಿಜಯಾ ಯೋಗದಲ್ಲಿ ಶ್ರೀ ವಾಮನನು ಪ್ರಾದುರ್ಭವಿಸಿದನು.
ಆಗ ಗ್ರಹಗಳು ಶುಭ ಸ್ಥಾನದಲ್ಲಿದ್ದವು. ದೇವತೆಗಳು ಮೃದಂಗ ಮೊದಲಾದ ವಾದ್ಯಗಳನ್ನು ಬಾರಿಸಿದರು. ಗಂಧರ್ವರು ಹಾಡಲು, ಅಪ್ಸರಯರು ನೃತ್ಯ ಮಾಡಿದರು. ದೇವ - ಮನು - ಪಿತೃ - ವಹ್ನಿ - ಸಿದ್ಧ - ವಿದ್ಯಾಧರಾದಿಗಳು ಸ್ತುತಿಸಿದರು. ಗಾನ ಮಾಡಿ ಪೊಗಳುತ್ತಾ ಆದಿತ್ಯರು ಆಶ್ರಮ ಸ್ಥಲದಿ ಕುಸುಮ ವರ್ಷವನ್ನು ಸುರಿಸಿದರು.
ಅದಿತಿಯು ತನ್ನ ಗರ್ಭ ಸಂಭೂತನಾದ ಪರಮ ಪುರುಷೋತ್ತಮನನ್ನು ನೋಡಿ, ಆಶ್ಚರ್ಯಾನಂದ ಸಂಭ್ರಮಗಳಿಂದ ನಿಂತಿರಲು, ಶ್ರೀ ಕಶ್ಯಪರು ಸ್ವೇಚ್ಛೆಯಿಂದ ಅವತರಿಸಿ ಬಂದ ಶ್ರೀ ಹರಿಯನ್ನು ನೋಡಿ ಜಯ ಜಯಕಾರವನ್ನು ಮಾಡಿ ನಮಿಸಿದರು.
ಸ್ವಭಾವದಿಂದ ಅವ್ಯಕ್ತನಾದರೂ ಭಕ್ತಾನುಕಂಪಾವಶನಾಗಿ, ದಿವ್ಯ ಚತುರ್ಬಾಹು ಸುಂದರ ರೂಪವಾಗಿ ತೋರಿದ ಸ್ವಾಮಿಯು ಅವರು ನೋಡುತ್ತಿರುವಂತೆಯೇ " ವಟು ವಾಮನ " ನಾಗಿ ನಿಂತನು. ಅವನನ್ನು ನೋಡಿ ಮುದಿತ ಮಾನಸರಾಗಿ, ಮುನಿಗಳು ಶ್ರೀ ಕಶ್ಯಪರಿಂದ ಅವನಿಗೆ ಸಕಲ ಜಾತಕರ್ಮಾದಿಗಳನ್ನು ಮಾಡಿಸಿದರು.
ಉಪನಯನ ಸಿದ್ಧನಾದ ಆ ಬಾಲಕನಿಗೆ...
ಶ್ರೀ ಸೂರ್ಯನು ಗಾಯತ್ರೀಮಂತ್ರವನ್ನು ಹೇಳಿಕೊಟ್ಟನು.
ಶ್ರೀ ಬೃಹಸ್ಪತಿಯು ಉಪವೀತವನ್ನೂ,
ಶ್ರೀ ಕಶ್ಯಪರು ಮೇಖಲೆಯನ್ನೂ,
ಶ್ರೀ ಭೂದೇವಿ ಕೃಷ್ಣಾಜಿನವನ್ನೂ,
ಶ್ರೀ ಸೋಮನು ದಂಡವನ್ನೂ,
ಶ್ರೀ ಅದಿತಿ ಕೌಪೀನವನ್ನೂ,
ಶ್ರೀ ಭಾರತೀದೇವಿ ಛತ್ರವನ್ನೂ,
ಶ್ರೀ ಬ್ರಹ್ಮದೇವರು ಕಮಂಡಲವನ್ನೂ,
ಶ್ರೀ ಸಪ್ತರ್ಷಿಗಳು ಕಳಶವನ್ನೂ,
ಶ್ರೀ ಸರಸ್ವತೀದೇವಿಯರು ಅಕ್ಷಮಾಲೆಯನ್ನೂ ಕೊಟ್ಟು ಸತ್ಕರಿಸಿದರು.
ಯಕ್ಷರಾಜನಾಗ ಭಿಕ್ಷಾ ಪಾತ್ರವನ್ನು ಕೊಡಲು ಸಾಕ್ಷಾದಂಬಿಕೆ ಭಿಕ್ಷೆಯನ್ನು ನೀಡಿದಳು.
ಬ್ರಹ್ಮ ವರ್ಚಸ್ಸೇ ಮೂರ್ತೀಭವಿಸಿದಂತೆ ಸಭೆಯಲ್ಲಿ ನಿಂತು, ಬ್ರಹ್ಮರ್ಷಿಗಣ ಮಧ್ಯದಲ್ಲಿ ಚಂದ್ರನು ತಾರಾಗಣ ಮಧ್ಯದಲ್ಲಿ ಇದ್ದಂತೆ ಪ್ರಕಾಶಿಸಿದನು. ಸಮಿದ್ಧಾಗ್ನಿಯನ್ನು ಪರಿಸಮೂಹನ ಪರಿಸ್ತರಣ ಸುಮುಖನನ್ನಾಗಿಸಿ ಸಮಿಧಗಳನ್ನು ಹೋಮಿಸಿ ವಾಮನನು ತನಗೆ ಭಿಕ್ಷೆಯನ್ನಿತ್ತು ಸಂತೈಸುವ ದಾತನಾರೆಂದು ವಿಚಾರಿಸಿದನು.
ಭೃಗು ಪುತ್ರರಿಂದ ನಡೆಸಲ್ಪಡುವ ಅಶ್ವಮೇಧಗಳ ಯಜಮಾನನಾದ ಬಲಿ ಚಕ್ರವರ್ತಿಯು ನಿಜವಾದ ದಾನಶೂರನೆಂದು ತಿಳಿದು ಶ್ರೀ ವಾಮನನು ಅಶ್ವಮೇಧ ವಾಟವನ್ನು ಕುರಿತು ಹೊರಟನು.
ವಾಮನನ ಪಾದಪದ್ಮ ಸಮಲಂಕೃತಳಾಗಿ ನಮಿಸುವಳೆಂಬಂತೆ ಭೂಮಿಯು ಆ ಬ್ರಹ್ಮಾಂಡೋದರನು ಕಾಲಿಟ್ಟಲ್ಲಿ ಬಾಗಿ ಬಗ್ಗುತ್ತಿತ್ತು. ಮುಕ್ತಿ ಮರ್ಮದೆಯು, ಸುಜನ ಶರ್ಮದೆಯು ಆದ ನರ್ಮದೆಯ ಉತ್ತರ ತಟದಲ್ಲಿ " ಭೃಗುವತ್ಸ " ವೆಂಬ ಆಶ್ರಮದಲ್ಲಿ ಅಶ್ವಮೇಧ ಯಜ್ಞವನ್ನು ಬಲಿರಾಜನಿಂದ ಮಾಡಿಸುತ್ತಿದ್ದ ಶುಕ್ರಾದಿ ವಿಪ್ರರು ಬರುವ ವಟುವನ್ನು ಕಂಡು ಅವನ ತೇಜದಿಂದ ಕಣ್ಣು ಕುಕ್ಕಿದಂತಾಗಿ ಇಂತು ವಿಚಾರಿಸಿದರು.....
ಸೂರ್ಯನೇ ಬಂದನೋ? ಅಥವಾ ಅಗ್ನಿಯೋ?
ಈ ಯಜ್ಞವನ್ನು ನೋಡಲು ಬಂದ ಸನತ್ಕುಮಾರನೋ??
ಎಂದಾಶ್ಚರ್ಯ ಪಡುವ ಋತ್ವಿಜರ ಸಭೆಯಲ್ಲಿ ವಾಮನನು ಪ್ರವೇಶಿಸಿದನು. ದಂಡ ಛತ್ರಗಳನ್ನೂ, ಜಲ ಕಮಂಡಲವನ್ನು ಪಿಡಿದು ಮೇಖಲಾಮೌಂಜೀಯುತನಾಗಿ ಉಪವೀತವನ್ನು ಧರಿಸಿ ಜಟಾಧಾರಿಯಾದ ವಟು ವಾಮನನ್ನು ನೋಡಿ ಶ್ರೀ ಶುಕ್ರಾಚಾರ್ಯರು ಅಗ್ನಿಗಳನ್ನು ಸಮಿತ್ತುಗಳಲ್ಲಿಟ್ಟು ಪಿಡಿದು ದಿನಕರನ ಕಿರಣ ಸಹಿತ ನಕ್ಷತ್ರಗಳಂತೆ ನಿಸ್ತೇಜಸ್ಕರಾಗಿ ನೋಡುವ ಶಿಷ್ಯರ ಸಹಿತವಾಗಿ ಎದ್ದು ನಿಂತರು.
ಬಲಿರಾಜನು ದರ್ಶನೀಯವಾದ ವಾಮನನ ಮನೋಹರ ರೂಪವನ್ನೂ, ಅಂಗ ಸೌಷ್ಠವವನ್ನೂ ನೋಡಿ ಸ್ವಾಗತವನ್ನಿತ್ತು ಸಿಂಹಾಸನದಲ್ಲಿ ಕೂಡಿಸಿದನು. ಮುಕ್ತ ಜನ ಪೂಜಿತವೂ, ಜ್ಞಾನಾನಂದ ಭ್ರಾಜಿತವೂ, ಮನೋಹರವೂ, ಸೌಂದರ್ಯಧಾಮವೂ ಆದ ವಾಮನನ ಪಾದವನ್ನು ತೊಳೆದು ಪೂಜಿಸಿದನು.
ದೇವದೇವನಾದ ಚಂದ್ರಶೇಖರನು ಭಕ್ತಿಯಿಂದ ಶಿರದಿ ಧರಿಸಿದ ಭಗವತ್ಪಾದಾರವಿಂದ ಮಂಗಲ ಜಲವನ್ನು ಸಕಲ ಕಲ್ಮಷ ಹರವೆಂದರಿತು ಬಲಿಯು ಶಿರದಲ್ಲಿ ಧರಿಸಿ ಇಂತೆಂದನು....
ಬ್ರಹ್ಮನ್! ನಿನಗೆ ಸ್ವಾಗತವು! ಬ್ರಹ್ಮರ್ಷಿಗಳ ತಪವೆಲ್ಲ ಒಟ್ಟು ಗೂಡಿ ಮೂರ್ತೀಭವಿಸಿ ನಿಂತಂತಿರುವ ನಿನಗೆ ನಮಸ್ಕಾರವು.
ಇಂದಿನ ದಿನವೇ ಸುದಿನವು. ನೀನು ಬಂದೆಯಾದ್ದರಿಂದ ಇಂದು ಈ ಯಜ್ಞವು ಸಂಪೂರ್ಣವೆನಿಸಿತು.
**********

ವಾಮನಶಬ್ದಾರ್ಥ ಚಿಂತನ

(ವಾಮಂ-ಕಾಮಂನಯತಿ ಪ್ರಣಯತಿ ಫ್ರೇರಯತಿ ಇತಿ ವಾಮನಃ) 
ಕಾಮ ಎಂದರೆ ಬಯಕೆಯೂಁ ಹೌದು  .ಕಾಮನೆಗಳನ್ನು ಹುಟ್ಟಿಸುವವನೂ ನೀನೇ .ನಿನ್ನ ನಾಮ ಪ್ರೇಮದಿಂದ ಪಾಡುವಂಥ  ಕಾಮನೆಯನ್ನು ನನ್ನಲ್ಲಿ ಹುಟ್ಟಿಸು.

ಕಾಮನನ್ನು  ಮೂರನೆ ಕಣ್ಣಿನಿಂದ ದಹಿಸಿದ  ಶಿವನೂ ನಿನ್ನ ಮೋಹಿನೀ ರೂಪವನ್ನು  ಕಾಣಬೇಕೆoದು ಬಯಸಿದನಂತೆ ! ಅಂದಮೇಲೆ ನೀನು ಕಾಮಜನಕ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನೀದೆ? ಶಿವನನ್ನು ಸುoದರಿಯಾದ ನಿನ್ನ ಮೋಹಿನಿರೂಪದೆಡೆಗೆ ಫ್ರೇರಿಸಿದುದರಿಂದಲೂ ನೀನು 

(ವಾಮಂ ಶಿವಂ ವಾಮಾಂ ಸುಂದರೀಂ ಪ್ರತಿ ನಯತಿ -ಫ್ರೇರಯತೀತಿ ವಾಮನಃ)ವಾಮನ .

ತಾನೆ ಇಂದ್ರನಾಗಬೇಕೆoಬ ಬಲಿಯ ಬಯಕೆಯನ್ನು  ಈಡೇರದಂತೆ ಮಾಡಿದ ವಾಮನ ನೀನು .

(ವಾಮಂ ಇಂದ್ರ ಪ್ರತೀಪಂ ಬಲಿಂ ಪಾತಲಂ ಪ್ರತಿನಯತೀತಿ ವಾಮನಃ)

ನಿನ್ನ  ಸಂಕಲ್ಪಕ್ಕೆ ವಿರುದ್ಧವಾದ ನಮ್ಮ ಬಯಕೆಯನ್ನು ಬಲಿ ಹಾಕು .

ಸಾಧಕಂ ಭಕ್ತಿ ಜ್ಞಾನಾದಿದಾನದ್ವಾರ ವಾಮನಂ ಸ್ವರೂಪತಃ ಅತಿಸುಂದರಂ ನಯತೀತಿ ವಾಮನಃ 
ಸಾಧಕನನ್ನು ಭಕ್ತಿ ಜ್ಞಾನಾದಿಗಳನ್ನು ವುದರಮೂಲಕ ಸ್ವರೂಪತಃ ಅತಿಸುಂದರನಾಗುವಂತೆ ಮಾಡುವವನು.

ನಾಲಿಗೆಗೆ ಭೂಷಣ ನಾರಾಯಣನ ನಾಮ ಎಂದು ಶ್ರೀಪಾದರಾಜರು ಹೇಳಿದಂತೆ ನನ್ನ  ನಾಲಿಗೆ ನಿನ್ನ ನಾಮೋಚ್ಚರಣೆ ಎಂಬ ಸೌಂದರ್ಯವನ್ನು ಸವಿವಂತೆ ಮಾಡು .ಸೌoದರ್ಯಕ್ಕೆ ಫ್ರೇರಕನಾದುದರಿಂದಲೆ ತಾನೆ ನೀನು ವಾಮನ
 (ವಾಮಂ ಸೌಂದರ್ಯಂ ತನ್ನೇತಾ -ವಾಮನಃ)

                    || ಶ್ರೀಕೃಷ್ಣಾರ್ಪಣಮಸ್ತು ||
****


🌹ವಾಮನಾವತಾರ🌹
ಒಂದು ಚಿಂತನ...
by ✍️..ಶ್ರೀಸುಗುಣವಿಠಲ.
🌹🙏🌹🙏🌹🙏
ದ್ರವ್ಯಂ ಕರ್ಮ ಚ ಕಾಲಶ್ಟ ಸ್ವಭಾವೋ ಜೀವ ಏವಚ|ಯದನುಗ್ರಹಾತ್ ಸಂತಿ ನ ಸಂತಿ ಯದುಪೇಕ್ಷಯಾ {||ಭಾಗವತ೨-೧೧-೧೨||}
ಎಂಬ ಭಾಗವತದ ವಾಣಿಯಂತೆ..ಪ್ರಕೃತಿಯೇ ಮೊದಲಾದ ದ್ರವ್ಯ, ಪುಣ್ಯ, ಪಾಪಾದಿ ಕರ್ಮ,&ಕಾಲ ,ಚೇತನಾಚೇತನಾಭಿವ್ಯಕ್ತಗಳು, ಸ್ವಭಾವ ಗುಣಕರ್ಮಾದಿಗಳು, .ಒಟ್ಟಾರೆಯಾಗಿ ಸಮಸ್ತವೂ ಭಗವಂತನ ಆಸ್ತಿ.ಇವಕ್ಕೆಲ್ಲಾ ಅವನೇ ಒಡೆಯ.ಅವುಗಳ ಅಸ್ತಿತ್ವವೂ ಪರಮಾತ್ಮನ ಇಚ್ಛೆ. ನಮಗೆ ಭಗವಂತ  ಕೊಟ್ಟರೆ ಉಂಟು ಇಲ್ಲದಿದ್ದರೇ ಇಲ್ಲಾ..!! .ಈ ಮಹಾನ್ ಭಗವತ್ ತತ್ವದ ಅನುಸಂಧಾನದ ಪ್ರತಿರೂಪ ಪ್ರಾದುರ್ಭಾವವೇ ..ಭಗವಂತನ ವಾಮನಾವತಾರ . ಭಾಗವತದ ಅಷ್ಟಮಸ್ಕಂದದಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟ ಈ ಕಥಾನಕವು ನಮಗೆ ಈ ಮೇಲಿನ ಭಗವಂತನ ಗುಣತತ್ವವನ್ನು ಅರಿಯುವಂತೆ ಮಾಡುತ್ತದೆ.
ಸರ್ವಭೂತಗುಹಾವಾಸಂ ವಾಸುದೇವಂ ಭಜಸ್ವ....ಎಂದು ಕಶ್ಯಪರು ..ವಿಪ್ರ ತೇಜಸ್ ನ ವಿಶೇಷಾನುಗ್ರಹದಿಂದ ತ್ರಿಲೋಕಗಳನ್ನಾಕ್ರಮಿಸಿದ ಬಲಿಚಕ್ರವರ್ತಿಯ ಪ್ರಾಭಲ್ಯದಿಂದ ಸ್ಥಾನಭ್ರಷ್ಟರಾದ ತನ್ನ ಮಕ್ಕಳ  ಗತಿಗಾಗಿ ಚಿಂತೆಯಲ್ಲಿದ್ದ ತಮ್ಮ ಪತ್ನಿ “ಅದಿತಿ” ಗೆ‌ ಹೇಳಿದ ಉಪದೇಶದ ಮಾತಿದು. ಇದು ಅವಳಿಗಷ್ಟೇ ಹೇಳಿದ ಮಾತಲ್ಲಾ..ಬದಲಾಗಿ ನಮ್ಮ ಜೀವನದ ಮುಗಿಯದ ಅನೇಕ ಸಮಸ್ಯೆಗಳಿಗೂಇದೊಂದೇ ಉಪಾಯವೂ ಹೌದು.
ಅದೇ..
ಸರ್ವಭೂತಗುಹಾವಾಸಂ ವಾಸುದೇವಂ ಜಗಧ್ಗುರುಮ್|ಸ ವಿಧಾಸ್ಯತಿ ತೇ ಕಾಮಾನ್ ಹರಿರ್ದೀನಾನುಕಂಪನಃ||
ಪತಿಯಾಜ್ಞೆಯಂತೆಅದಿತೇಯರ ಉದ್ಧಾರಕ್ಕಾಗಿ ಅದಿತಿ  ಮಾಡಿದ “ಪಯೋವ್ರತ” ದ‌ ಸೇವೆಗೆ ಭಗವಂತ ಅದಿತಿ-ಕಶ್ಯಪರ ಮಗನಾಗಿ ಭಾದ್ರಪದ ಶುಕ್ಲ ದ್ವಾದಶಿಯಂದು ಮದ್ಯಾಹ್ನ 
ವಾಮನನಾಗಿ ಅವತಾರ ಮಾಡಿದನು.ಜಗನ್ಮೋಹನಾಕಾರದ ಸುಂದರ ಪುಟ್ಟ ವಟುವಾಗಿ  ದೇವಾನುದೇವತೆಗಳಿಂದೊಡಗೂಡಿ ಉಪನೀತನೂ ಆಗಿ ಬ್ರಹ್ಮತೇಜಸ್ವಿಯಾಗಿ ದಂಡಕಮಂಡಲಧಾರಿಯಾಗಿ..ಯಾಗಮಾಡುತ್ತಿದ್ದ ಬಲಿಚಕ್ರವರ್ತಿಯ ಯಜ್ಞಮಂಟಪಕ್ಕೆ ದಾನಬೇಡಲು ಬಂದನು.ಅಲ್ಲಿಯ ಕಥಾನಕವನ್ನು ನಾವು ಶ್ರೀವಾದಿರಾಜರ  ವಾಣಿಯಲ್ಲಿ ಕೇಳುವುದಾದರೇ..
ಪಿಂಗಾಕ್ಷವಿಕ್ರಮ ತುರಂಗಾದಿಸೈನ್ಯಚತುರಂಗಾವಲಿಪ್ತದನುಜಾ...{ದಶಾವತಾರ ಸ್ತುತಿ..||೯||}..
“ಸಿಂಹವಿಕ್ರಮವುಳ್ಳ ತುರಗ-ಗಜಾದಿಚತುರಂಗಬಲಯುಕ್ತರಾಗಿ ಗರ್ವಿಷ್ಠರಾದ ದನುಜರ ಮಧ್ಯೇ ಅಪೂರ್ಣಯಾಗ ಕಾರ್ಯದಲ್ಲಿ ದೀಕ್ಷಿತನಾಗಿ ತ್ರಿಪಾದ ಭೂಮಿಯ ದಾನ ಬೇಡಿ ತ್ರಿವಿಕ್ರಮನಾಗಿ ಬೆಳೆದು..ಬಲಿಯ ಸಮಸ್ತವನ್ನೂ ಅಳೆದು ಪಡೆದು ..ದೇವತೆಗಳಿಗೆ ಸ್ಥಾನವನ್ನು ಕೊಟ್ಟು ಬಲಿಯನ್ನು ರಸಾತಲಕ್ಕೆ ಅನುಗ್ರಹರೂಪದಲ್ಲಿ ಕಳಿಸಿ, ಅದಿತಿಗೆ ಆನಂದವನಿತ್ತು,ಬ್ರಹ್ಮಾಂಡಕಟಾಹ ಒಡೆದೂ ಗಂಗಾಜನಕನಾಗಿ ಬ್ರಹ್ಮೇಂದ್ರಾದಿಗಳಿಂದ ವಂದಿತನಾಗಿ..ಭೃತ್ಯನಾದ ಪ್ರಹ್ಲಾದರಿಗೆ ನೀಡಿದ ಮಾತನ್ನು ಸತ್ಯಮಾಡಿ  ಭಾಗೀರಥಿಯನ್ನು ಕರೆತಂದು ಆಕೆಯ ಮಂಗಳ ತರಂಗಗಳಿಂದ ಸೇವಕರಾದ ವಿಷ್ಣುಭಕ್ತರ ಎಲ್ಲಾ ಪಾಪಗಳನ್ನು ನಾಶಪಡಿಸಿದ ಕೃಪಾಳು ...ಈ ವಾಮನರೂಪಿ ಭಗವಂತ  !.
ಇಂಥ ಭಗವಂತನ ಅವತಾರಕಾಲದಲ್ಲಿ ಶ್ರೀಲಕುಮಿಯು “ಸುಖಾ”(ವೃಷಾಉಪಿ)ಯಾಗಿ ವಾಮನರೂಪಿ ಭಗವಂತನ ಜೊತೆಯಾಗಿ ಸದಾ ಇರುವಳು.
ಈ ಅವತಾರದ ಬಗ್ಗೆ 
೧..ಶ್ರೀಮಧ್ ಭಾಗವತ..ಜ್ಯಾಯಾನ್ ಗುಣೈರವರಜೋಽಪ್ಯದಿತೇಃ ಸುತಾನಾಂ...{೨-೭-೧೭},
೨..ಶ್ರೀಮನ್ ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ..ಸವಾಮನಾತ್ಮಾಽಸುರ ಭೂಭೃತೋಽಧ್ವರಂ..*.{೩-೪೬},
೩..ರುಕ್ಷ್ಮೀಣೀಶವಿಜಯ ಕಾವ್ಯದಲ್ಲಿ...
ಬಲಹೃದಾರ್ತಿಹರೋಽನುಜನಿಃಪ್ರಭಃ...{೧೭-೧೯},
೪..ಶ್ರೀಸುಮಧ್ವವಿಜಯ ಕಾವ್ಯದಲ್ಲಿ..
ಅಪಿವಾಮನೋ ಲಲಿತಬಾಲ್ಯವಾನಯಂ.....{೮-೧೭}..
 ಹೀಗೆ ಸಾಕಷ್ಟು ಕಡೆಗಳಲ್ಲಿ ಈ ಅವತಾರಗಳ ವರ್ಣಣೆಗಳನ್ನು ಕಾಣಬಹುದು.
ಇನ್ನೂ ದಾಸವರೇಣ್ಯರಂತೂ..ಮನದುಂಬಿ ಹಾಡಿ ನಲಿದಿದ್ದಾರೆ..
*~ಕನಕದಾಸರು*.....ಕೇಶಮ ನಾಮದಲ್ಲಿ “ಕಾಮಜನಕ ನಿನ್ನ ನಾಮ ನೇಮದಿಂದ ಪಾಡುವಂಥ ನೇಮ ವೆನೆಗೆ ಪಾಲಿಸಯ್ಯ ಸ್ವಾಮಿ ವಾಮನ..ಎಂದು ಮೊರೆಹೊಕ್ಕಿದ್ದಾರೆ.
~ಶ್ರೀವೇಂಕಟಟೇಶವಿಠಲರು*..
..ಲಾಲಿ ಹಾಡನ್ನು ಹಾಡುತ್ತಾ..ಮುತ್ತಿನ ಮುಡಿಗಳ ಕೆತ್ತಿಸಿದಂಥ...ಬಲಿಯದಾನವ ಬೇಡಿದ್ಯೆಲ್ಲೋ..ವಾಮನ ಲಾಲಿ..ಎಂದು ಲಾಲಿಸಿದ್ದಾರೆ.
~ಗೋಪಾಲದಾಸರು..ನೀನೇ ಎನೋ ವಿಠಲಾ....ನೀನೇ ಏನೋ ವಿಠಲ ವಟುರೂಪತಾಳಿದವನೂ..ಎಂದು ತಮ್ಮ ಸುಳಾದಿಯಲ್ಲಿ ಪ್ರಶ್ನಿಸಿದ್ದಾರೆ..
~ಶ್ರೀಪಾದರಾಜರು...”ಭಾಮಾಮಣಿಯರೆಲ್ಲರೂ ಯದುವಂಶ ಸೋಮನಿವನೆಂದುಪೊಗಳಿ ನೇಮದಿಂದಲಿ ಪಾಡಿತೂಗಿದರು ವಾಮನಾವತಾರಿ ಹರಿಯಾ..ಎಂದು ತಮ್ಮ “ದಶಾವತಾರದಲಾಲಿ” ಯಲ್ಲಿ ಪಾಡಿದ್ದಾರೆ.
~ಶ್ರೀಪುರಂದರದಾಸರು .. ‌...ತಮ್ಮ ಗಧ್ಯ, ಪದ್ಯಪದ ಸುಳಾದಿಗಳಲ್ಲಿ  ಸಾಕಷ್ಟು ಬಗೆಯಲ್ಲಿ ಬಣ್ಣಿಸಿದ್ದಾರೆ.
ಅಷ್ಟೇ ಅಲ್ಲದೇ ಕರ್ಮಭೂಮಿ ಯ ಸಾಧಕ ಸಜ್ಜನರ ಪಾವಿತ್ರ್ಯ ದರ್ಶನಾದಿಗಳಿಗಾಗಿ..ತ್ರಿವಿಕ್ರಮರೂಪಿ..ದೇವಾಲಯಗಳು 
~ಶ್ರೀಕ್ಷೇತ್ರ..ತಿರುಕೊಯ್ಲೂರ್” & ಸೋಂದಾ ಕ್ಷೇತ್ರದಲ್ಲಿ ಭಗವಂತ ತನ್ನ ದರ್ಶನವನ್ನಿತ್ತಿದ್ದಾನೆ
.∆ಅನುಸಂಧಾನ&ಚಿಂತನ:👇
ತೇ ನರಾಃ ಪಶವೋ ಲೋಕೇ ಕಿಂ ತೇಷಾಂ ಜೀವನೇ ಫಲಮ್|ಯೈರ್ನ ಲಬ್ದಾ ಹರೇರ್ದೀಕ್ಷಾ ನಾರ್ಚಿತೋ ವಾ ಜನಾರ್ದನಃ||{ಕೃಷ್ಣಾಮೃತ ಮಹಾರ್ಣವ}
ಪ್ರಕಾರ ಹೇಳುವಂತೆ ಯಾರು ಬದುಕಿನಲ್ಲಿ ಹರಿಯ ದೀಕ್ಷೆ ತೊಡಲಿಲ್ಲವೋ ದೇವನನ್ನು ಜಪತಪಾದಿಗಳಿಂದ ಪೂಜಿಸಲಿಲ್ಲವೋ ಅವರು ಪಶುಸಮಾನರು. ಅವರ ಬದುಕಿಗೆ ಫಲವಾದರೂ ಏನು..?  ದೇವನು ಮಾತ್ರವೇ ನಮಗೆ ಬೇಕಾದ್ದನ್ನು ನೀಡುವನು ಅನಿಷ್ಟವನ್ನೂ ದುರಿತಗಳನ್ನು ದೂರಮಾಡುವವನು. ಎಂಬ  ದೃಢ ವಿಶ್ವಾಸದಿಂದ ನಾವುಗಳು ಕಶ್ಯಪರ ಉಪದೇಶದಂತೆ ಅದಿತಿಯು ತನ್ನ ಮಕ್ಕಳಾದ ದೇವತೆಗಳಿಗೆ ಪುನಃ ಅಧಿಕಾರ ಪದವಿಯನ್ನು ಕೊಡಿಸಲು ಪಯೋವ್ರತಾದಿಗಳನ್ನು ಮಾಡಿ ಭಗವಂತನನ್ನೇ ಮಗನಾಗಿ ಪಡೆದು ತನ್ನ ಆಕಾಂಕ್ಷೆ ಈಡೇರಿಸಿಕೊಳ್ಳುವಲ್ಲಿ ಅನುಗ್ರಹಪಡೆದ ರೀತಿಯಲ್ಲಿ.. ನಾವುಗಳು ಜೀವನದಲ್ಲಿ ಬರುವ ಸಮಸ್ಯೆಗಳೇ ಅಂತಿಮವಲ್ಲಾ..! ಎಲ್ಲವಕ್ಕೂ ಪರಿಹಾರವಿದೆ..ಸರಿಯಾದ ಮಾರ್ಗದಲ್ಲಿ ಭಗವಂತನ ಸೇವೆ ಮಾಡಿದಲ್ಲಿ ಜೀವನದಲ್ಲಿ ಉದ್ಧಾರಮಾರ್ಗವನ್ನು ಹೊಂದಬಹುದು. ಎಂಬುದನ್ನು ಅನಸಂಧಾನಿಸಬೇಕು
~.ಇನ್ನು ಎರಡನೇದಾಗಿ..ನಾವು ಏಷ್ಟೇ ಸಜ್ಜನರಾಗಿದ್ದರೂ, ಭಗವಂತನ ಭಕ್ತರಾಗಿದ್ದರೂ ನಮ್ಮ ಆಕಾಂಕ್ಷೆಗಳು ಭಗವಂತನ ಇಚ್ಛೆಗನುಗುಣವಾಗಿರಬೇಕೂ.. ಇತಿಮಿತಿಯಲ್ಲಿರಬೇಕು..ಇಲ್ಲದಿದ್ದರೇ  ಬಲಿಯು ಭಕ್ತನಾಗಿದ್ದರೂ..ತ್ರಿಲೋಕಾಂಕ್ಷೆ ಯ ಅಧಿಕಾರದ ದೋಷದಿಂದ. ಪ್ರವೃತ್ತನಾಗಿ ಇಂದ್ರಾದಿಗಳ ಅಧಿಕಾರಗಳನ್ನೇ ಕಬಳಿಸುವಂತಾದಾಗ...ಭಗವಂತ  ವಾಮನನಾಗಿ ಬಂದು ತನ್ನ ಪುಟ್ಟ ಪಾದಗಳಿಂದಲೇ.. ಮೂರೂ ಲೋಕಗಳನ್ನೂ  ಅವನ ಸಮಸ್ತವನ್ನೂ ಅಪಹರಿಸಿದನು....ನಂತರ ಬಲಿಯ  ಭಕ್ತಿಗನುಗ್ರಹೋನ್ಮುಖನಾಗಿ ..ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಯನ್ನಿತ್ತು..ತನ್ನನ್ನೇ ಅವನಿಗೆ ನೀಡಿದ‌..! ಅರ್ಥಾತ್ ಸುತಲೋಕದಲ್ಲಿ ಸುದರ್ಶನಧಾರಿಯಾಗಿ ಸದಾ ಬಲಿ ಮನೆ ಕಾಯುವಷ್ಟು ಭಕ್ತಕಾರುಣ್ಯವನ್ನು ತೋರಿದ.ಭಗವಂತ!!  ಇನ್ನು *~ಮೂರನೇದಾಗಿ.ಭಗವಂತ ಯಾರನ್ನು ಅನುಗ್ರಹಿಸುತ್ತಾನೋ ಅವರ ಎಲ್ಲವನ್ನೂ ಅಪಹರಿಸುತ್ತಾನೆ.ಎಂಬುದು ಈ ಅವತಾರದಿಂದ ತಿಳಿದು ಬರುತ್ತದೆ.ಅರ್ಥಾತ್
.ಭಗವಂತ ಸಜ್ಜನರಿಗೆ ನೀಡುವ ದುರಿತಗಳು ದಂಖಾದಿಗಳನ್ನು ನಾವು ಒಂದು ತಪಸ್ಸೆಂದು ಇದೂ ಒಂದು ಹರಿದೀಕ್ಷೆಯೆಂದರಿತು..ಅದಿತಿಯಂತೆ ಜಪ ತಪ ವ್ರತ ನೇಮಾದಿಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಿ  ಅನುಸಂಧಾನಿಸಿ ಭಗವಂತನಿಗೆ ಅರ್ಪಿಸಿದಾಗ..ಪರಮಾತ್ಮನ ಸಂಪೂರ್ಣ ಅನುಗ್ರಹವಾಗುತ್ತದೆ. ಈ ದಿಸೆಯಲ್ಲಿ ಆಚಾರ್ಯ ಮಧ್ವರ ಜನನವೂ ಮಧ್ಯಗೇಹಭಟ್ಟ ದಂಪತಿಗಳ ಅಖಂಡವಾದ ವ್ರತ ಸೇವಾ ಜಪ ತಪಾಚರಣೆಗಳ ದೀಕ್ಷೆಯೇ  ಅಂಥ  ಪೂರ್ಣಪ್ರಜ್ಞರೆನಿಸಿದ  ಜಗಧ್ಗುರುಗಳ  ಅವತಾರಕ್ಕೆ ಕಾರಣವಾದವು.ಎಂಬುದು ಸ್ಮರಿಸಬೇಕಾದ ಸಂಗತಿ.! 
ಕರ್ಮವೇ ತಾರಕವು ಜೀವರಿಗೆಲ್ಲಾ..ಕರ್ಮವೇ ತಾರಕ ಕೇಳು ನಿರ್ಣಯ ಈ ಮಾತು..
..ಶ್ರೀಗುರುಗೋಪಾಲವಿಠಲರ..ಈ ದಾಸವಾಕ್ಕಿನಂತೆ..ನಮ್ಮ ದೇಹದಲ್ಲಿ ನಾವು ಮಾಡುವ ಕರ್ಮಗಳಲ್ಲಿ ಸದಾ ಭಗವಂತನ ಸಾನ್ನಿಧ್ಯವನ್ನು ಅರಿತು ಉಪಾಸಿಸಿದಲ್ಲಿ...ಭಗವಂತನ ದಶಾವತಾರಗಳನ್ನೂ ನಮ್ಮ ದೇಹದಲ್ಲೇ ಚಿಂತಿಸಬಹುದಾಗಿದೆ..
~..ನಮ್ಮ ಕಣ್ಣಿನಲ್ಲಿ &ಘ್ರಾಣೇಂದ್ರಿಯದಲ್ಲಿ ಅಶ್ವಿನಿದೇವತಾಂತರ್ಗತ “ವಾಮನರೂಪಿ” ಭಗವಂತನಿದ್ದಾನೆ.. 
ಇಂಥ ತದ್ರೂಪಗಳ ಸತ್ ಚಿಂತನೆಗಳಿಂದ ಪ್ರತಿ ಕ್ಷಣವೂ ಸಾಧನೆಯ ಸೋಪಾನಗಳಾಗುತ್ತವೆ. ಈ ದಿಸೆಯಲ್ಲಿ ನಾವು ಸಾಗಿದಾಗ..ಜೀವನೇ ಒಂದು ಪಯೋವ್ರತವಾಗಿ   ಅದಿತಿ ಪಡೆದ ವಾಮನನಂತೆ ನಮ್ಮ ಹೃಧ್ಗುಹವಾಸಿಯಾದ ಬಿಂಬನ ಅಪರೋಕ್ಷ ಜ್ಞಾನವಾಗಿ ಅಲ್ಲಿ  ಶ್ರೀಪಾದರಾಜರ  ವಾಣಿಯಂತೇ..ಧ್ಯಾನಗೋಚರನಾಗಿ ಕಣ್ಣಿಗೆ ಕಾಣಿಸುವೆ ರಂಗವಿಠಲ” ..*ಎಂಬಂತೆ ಭಗವಂತನ ದರ್ಶನವಾಗುತ್ತದೆ.ಈ ದಿಸೆಯಲ್ಲಿ ವಾಮನ ದೇವನು ನಮ್ಮನ್ನೆಲ್ಲಾ ಅನುಗ್ರಹಿಸಲಿ ಎಂಬ ಚಿಂತನೆಯೊಂದಿಗೆ ಶ್ರೀಸುಗುಣವಿಠಲಾರ್ಪಣಮಸ್ತು.
end
***
ಶ್ರೀ ವಿಠ್ಠಲ ಪ್ರಸೀದ
ಸಮೂಹದ ಎಲ್ಲಾ ಸದಸ್ಯರಿಗೂ ಶುಭದಿನದ  ಶುಭ ಹಾರೈಕೆಗಳು.

 ಎಲ್ಲಾ ಜೀವಿಗಳ ಏಳು ಬೀಳುಗಳು ಹರಿಯ ಸಂಕಲ್ಪವಲ್ಲದೆ ಬೇರಿಲ್ಲ.
ಆ ಕುರಿತು ಹರಿದಿನದ ಪ್ರಯುಕ್ತ  ಕಿಂಚಿತ್  ಶ್ರೀಮದ್ಭಾಗವತ  ಸ್ಮರಣೆ.
ಪರೀಕ್ಷಿತ್ ರಾಜ  ಪರಮ ಜ್ಞಾನಿಗಳಾದ  ರುದ್ರಾಂಶ  ಸಂಭೂತರಾದ  ಶುಕಾಚಾರ್ಯರಲ್ಲಿ
ಮನುಗಳ ಕರ್ತವ್ಯಗಳನ್ನು, ಇಂದ್ರಾದಿಗಳು  ಹೇಗೆ ನಡೆಯಬೇಕು
ಎಂದು ಪ್ರಶ್ನಿಸಿದಾಗ, ಶುಕಾಚಾರ್ಯರು, ಶ್ರೀ ಹರಿಕೊಟ್ಟ   ತ್ರಿಲೋಕ ರಾಜ್ಯವನ್ನು ಆಳುತ್ತಾ ಮಳೆ ಬೆಳೆಗಳನ್ನು ಕೊಟ್ಟು ರಕ್ಷಿಸುವನು. ಶ್ರೀ ಹರಿ ಆಯಾಯ  ಯುಗಗಳಿಗೆ ತಕ್ಕಂತೆ ಧರ್ಮ ಸಂರಕ್ಷಕನ್ನಾಗಿ, ಸಿದ್ದ ರೂಪದಿಂದ  ಜ್ಞಾನ, ಋಷಿರೂಪದಿಂದ ಕರ್ಮವನ್ನು, ಯೋಗೇಶ ರೂಪದಿಂದ ಯೋಗ ಉಪದೇಶಿಸುವನು. ಪ್ರಜಾಪತಿಗಳಲ್ಲಿದ್ದು ಸೃಷ್ಟಿ ಹೆಚ್ಚಿಸುವನು.. ಕ್ಷತ್ರಿಯರಲ್ಲಿ ಇಂದ್ರರೂಪನಾಗಿದ್ದು ಕಳ್ಳಕಾಕರನ್ನು ಶಿಕ್ಷಿಸುತ್ತಾನೆ, ಕೊನೆಗೆ ತಮೋ ಗುಣ ಪ್ರವರ್ತಕನಾಗಿ ಎಲ್ಲರನ್ನೂ ಸಂಹರಿಸುವನು.  ಎಂದು  ಹೇಳಿದ ಶುಕಾಚಾರ್ಯರನ್ನು   ಪರೀಕ್ಷಿತ್, ಭಗವಂಂತನು  ಬಲಿಯನ್ನು ಯಾಚಿಸಲು ಕಾರಣವೇನು  ಎಂದು ಕೇಳುತ್ತಾನೆ. ಹಾಗೂ ಒಂದು ಅನುಮಾನ ವ್ಯಕ್ತಪಡಿಸುತ್ತಾನೆ, ಕೇಳಿದ ದಾನವನ್ನು ಕೊಟ್ಟಮೇಲೂ ಅವನನ್ನು ಕಟ್ಟಿದ್ದೇಕೆ. ಹೋಗಲಿ , ಹರಿ ಪರಿ ಪೂರ್ಣನು  ಅವನು ಬಲಿಯನ್ನು ಬೇಡಿದುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ ವಿವರವಾಗಿ ಹೇಳಿ ಎನ್ನುತ್ತಾನೆ.
ಅದಕ್ಕೆ ಶುಕಾಚಾರ್ಯರು, ಬಲಿ  ಯುದ್ಧದಲ್ಲಿ ಸೋತು ಓಡಿಬಂದು ಅಸುರ ಗುರು ಶುಕ್ಲಾಚಾರ್ಯರಿಗೆ ಶರಣಾದನು. ಅವರು ಬಲಿಯನ್ನು ಬಲಿಷ್ಠನ್ನಾಗಿ ಮಾಡಿದರು. ಆ ಉಪಕಾರಕ್ಕೆ ಗುರುವಿಗೆಸರ್ವಸ್ವವನ್ನೂ ಕೊಟ್ಟ.
ಶುಕ್ರಾಚಾರ್ಯರು  ಪ್ರೀತರಾಗಿ ವಿಶ್ವಜಿತ್ ಯಾಗ ಮಾಡಿಸಿದರು.  ಯಜ್ಞದ ಆರಂಭದಿಂದ , ಅವಭ್ರುತದವರೆವಿಗೂ  ತುಂಬು ಹೃದಯದಿಂದ ಬಲಿಗೆ ಹರಸಿದರು.
ಗುರು ಕರುಣೆಯಿಂದ, ಅಗ್ನಿಕುಂಡದಿಂದ ಬಂಗಾರದರಥ, ಅದಕ್ಕೆ ಧಿವ್ಯ ಅಶ್ವಗಳು, ಧನುಸ್ಸು ಅಭೇದ್ಯವಾದ ಕವಚಗಳು  ಬಂದವು ಅವುಗಳನ್ನು ಧರಿಸಿ  ಬಲಿ ತನ್ನಗುರುಗಳಿಗೂ ತಾತನಾದ ಪ್ರಹ್ಲಾದರಾಜರಿಗೂ, ನಮಸ್ಕರಿಸಿದನು. ಇನ್ನು ಕೇಳಬೇಕೇ  ಬಲಿಷ್ಠನಾದ ಬಲಿ ಇಂದ್ರಲೋಕವನ್ನು ಆಕ್ರಮಣ ಮಾಡಿದ. ಇಂದ್ರಲೋಕ ವೈಭವ ನೋಡಿ ಬಲಿ ಧಿಗ್ಭ್ರಮೆಗೊಂಡ.
ದೇವತೆಗಳಿಗೆ? ಮಾತ್ರ ಪ್ರವೇಶವಿರುವ ಇಂದ್ರಲೋಕ ಶುಕಾಚಾರ್ಯರ ಅನುಗ್ರಹದಿಂದ ಸ್ವರ್ಗದ್ವಾರದಲ್ಲಿ ನಿಂತು ಶಂಖ ನಾದ ಮಾಡಿದ. ದೇವೇಂದ್ರ ಭಯಭೀತನಾದ.  ದೇವ ಗುರುವಿನ ಮೊರೆಹೋದ. ಅವರು ಗುರುಗಳಾದ ಶುಕ್ರಚಾರ್ಯರಿಂದ ಅನುಗ್ರಹಿತನಾಗಿ ಬೀಗುತ್ತಿದ್ದಾನೆ, ಅವನನ್ನು ಎದುರಿಸಲು ಶ್ರೀಹರಿಯಿಂದ ಮಾತ್ರ ಸಾಧ್ಯ. ಶ್ರೀಹರಿಯ ಅನುಗ್ರಹವಾಗುವವರಿಗೂ  ಕಾಲವನ್ನು ಕಲಿ . ಮುಂದೆ ಗುರುದ್ರೋಹದಿಂದ ಕುಗ್ಗುವನು  ಅಲ್ಲಿಯವರೆವಿಗೂ ಕಾಯಿ ಎಂದು ಎಲ್ಲಾ ದೇವತೆಗಳನ್ನೂ ಒಳಗೊಂಡಂತೆ ಇಂದ್ರನಿಗೆ ಹೇಳಿದರು.
 ಮುಂದೆ ಗುರುಗಳ ಆಜ್ಞಾನುಸಾರವಾಗಿ ದೇವತೆಗಳು ಸ್ವರ್ಗ ತೊರೆದು ಕಾಮರೂಪಿಗಳಾಗಿ ಸಂಚರಿಸುತ್ತಿದ್ಸರು. ಶುಕ್ರಚಾರ್ಯರು ಕೂಡ ಶಿಷ್ಯನಿಗೆ ಸಹಕಾರಿಯಾಗಿದ್ದು ಅವನಿಂದ ಅಶ್ವಮೇಧಯಾಗ ಮಾಡಿಸಿದರು. ಲೋಕದಲ್ಲಿ ಕೀರ್ತಿ ಐಶ್ವರ್ಯಾದಿಗಳು ಬಲಿಯನ್ನು ಅರಸಿಬಂದವು. ಸ್ವರ್ಗಲೋಕದ ಸಿರಿಯೇ ಅವನಿಗೆ ಒಲಿದು ಬಂದಿತು.
 ದೇವತೆಗಳ ತಾಯಿ ಅದಿತಿ ಚಿಂತೆಯಿಂದ  ತನ್ನ ಮಕ್ಕಳ ಅವಸ್ಥೆಗೆ ಸೊರಗಿದಳು. ಪತಿ ಕಶ್ಯಪರಲ್ಲಿ, ತನ್ನ ದುಃಖ ಹೇಳುಕೊಂಡಳು. ದೈತ್ಯರಿಗೆ ಸೋತು ಸ್ಥಾನ ಭ್ರಷ್ಟ ರಾಗಿರುವ ತನ್ನ ಮಕ್ಕಳು  ಪುನಃ  ಅವರ ವೈಭವಗಳು ಅವರಿಗೆ ಎಂದು ಸಿಗುವುದು ದಯಮಾಡಿ ಹೇಳಿ ಎಂದಳು. ಅದಕ್ಕೆ ಕಶ್ಯಪರು ನಕ್ಕು ಶ್ರೀಹರಿಯಲೀಲೆ ಅಪಾರವಾದದ್ದು ಅವನನ್ನು ಕುರಿತು ಧ್ಯಾನಿಸು. ಇತರ ದೇವತೆಗಳ ಪೂಜೆ ವ್ಯರ್ಥ ವಾಗಬಹುದು, ಆದರೆ ಶ್ರೀಹರಿಯಪೂಜೆ ಎಂದಿಗೂವ್ಯರ್ಥವಾಗುವುದಿಲ್ಲ. ಎಂದರು.
ಅದಿತಿ ದೇವಿ ಗೆ ಕಶ್ಯಪರು ಪಯೋವ್ರತವನ್ನುಉಪದೇಶಿಸಿದರು
ಪಾಲ್ಗುಣ ಮಾಸದ 12 ದಿವಸ ಈ ಪಾಯೋವ್ರತ ಮಾಡಬೇಕು. ಎಂದು ಅದರ ವಿಧಿ ವಿಧಾನಗಳನ್ನು  ಉಪದೇಶಿಸಿದರು. ಅದಿತಿ ಶ್ರದ್ದೆಯಿಂದ ವ್ರತಮಾಡಿದಳು. ಶ್ರೀಮದ್ಭಾಗವತ  ಯಾರನ್ನೂ ಕುರಿತು ವ್ರತಮಾಡಿದಳು ಎನ್ನುವುದಕ್ಕೆ, ಸರ್ವೇಂದ್ರ ನಿಯಾಮಾಕ ನಾದ ಸರ್ವತ್ರ ವ್ಯಾಪ್ತನೂ ಆದ ಶ್ರೀಹರಿಯನ್ನು ಭಕ್ತಿಯಿಂದ ಅದಿತಿದೇವಿ ವ್ರತಗಳ ರಾಜ ಪಯೋವ್ರತವನ್ನು ಮಾಡಿದಳು. ಸರ್ವಾಲಂಕಾರದಿಂದ  ಸ್ವಾಮಿ ಪ್ರತ್ಯಕ್ಷನಾದ.
ಅದಿತಿ ವಿಧವಿಧವಾಗಿ ಭಗವಂತನನ್ನು ಸ್ತುತಿಸಿದಳು.
ಭಗವಂತ ಪ್ರತ್ಯಕ್ಷನಾದ. ಅದಿತಿಯ ಮನದಿಂಗಿತ ಅರಿತ ಅವಳನ್ನು ಕೇಳಿದ "ನಿನಗೆ ನಿನ್ನ ಮಕ್ಕಳು ಪುನಃ ರಾಜ್ಯ  ಹೊಂದಬೇಕೆ, ಅದು ಅಷ್ಟು ಸುಲಭ ಅಲ್ಲ. ದೈತ್ಯರು ಅವರ ಗುರು ಅನುಗ್ರಹದಿಂದ ಬಲಿಷ್ಠ ರಾಗಿದ್ದಾರೆ.
ಆದರೂ ನಿನ್ನ ಪ್ರಾರ್ಥನೆ,ನಿನ್ನ ವ್ರತ ಎಂದಿಗೂ ವ್ಯರ್ಥವಾಗುವುದಿಲ್ಲ, ಆದರೂ ರಣರಂಗದಲ್ಲಿ  ನಿನ್ನ ಮಕ್ಕಳು ದೈತ್ಯರನ್ನು ಗೆಲ್ಲಲು ಸಾಧ್ಯವಿಲ್ಲ. ನಿನ್ನ ಪತಿಯನ್ನು ಚೆನ್ನಾಗಿ ಸೇವಿಸು, ಅವನ ತಪೋಬಲದಿಂದ ನಿನ್ನ ಹೃದಯ ಪ್ರವೇಶ ಮಾಡುವೆನು,ನನ್ನನ್ನೂ ಚಿಂತಿಸು. ಆದರೇ ನಾನೇ ಅವತರಿಸುವೇನೆಂದು ಯಾರಿಗೂ ಹೇಳಬೇಡ, ಇದು ದೇವ ರಹಸ್ಯ.
ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತಾನೆ ಭಗವಂತ, ನಾನೇ ನಿನ್ನ ಮಗನಾಗಿ ಅವತರಿಸಿ, ಭಿಕ್ಷೆ ಬೇಡಿಯಾದರೂ ನಿನ್ನ ಮಕ್ಕಳನ್ನು ಪೊರೆಯುವೆ ಎಂದು ಅವತಾರದ ಸೂಚನೆ ಕೊಡುತ್ತಾನೆ.
ಎಂದಿನಂತೆ ಬ್ರಹ್ಮದೇವರು, ತಪೋನಿಧಿಯಾದ, ಅಮೋಘವಾದ ಜ್ಞಾನ ಸಂಪತ್ತನ್ನು ಹೊಂದಿರುವ ಕಶ್ಯಪ ಅದಿತಿ ಪುತ್ರನಾಗಿ ಸನಾತನನು ಅವತರಿಸಲಿರುವ ಎಂದು ಅರಿತು , ಸಮುದ್ರದಲ್ಲಿ ಮುಳುಗುವಂತಿರುವ ನೌಕೆಯಂತೆ ಸ್ವರ್ಗ ಭ್ರಷ್ಟರಾಗಿರುವ ದೇವತೆಗಳಿಗೆ ನೀನೇ ರಕ್ಷಕನಾಗು ಎಂದು ಪ್ರಾರ್ಥಿಸಿದರು.
ಶ್ರೀ ಶುಕಾಚಾರ್ಯರು, ಮುಕ್ತಾಶ್ರಯ ನಾದ ನಾರಾಯಣ ಬ್ರಹ್ಮನ ಪ್ರಾರ್ಥನೆಯಂತೆ ಅದಿತಿಯಲ್ಲಿ ಭಾದ್ರಪದ  ಶುಕ್ಲ ದ್ವಾದಶಿ ಮಧ್ಯಾನ್ಹ ಸಮಯದಲ್ಲಿ ಅಭಿಜಿನ್ ಮುಹೂರ್ತದಲ್ಲಿ ವಿಜಯಾ ಯೋಗದಲ್ಲಿ ಪರಮ ಪುರುಷ ವಾಮನ ಅವತರಿಸಿದನು ಎಂದು  ವಿವರಿಸುತ್ತಾರೆ.
ಈ ಕಾಮದ ಏಕಾದಶಿಯಲ್ಲಿ ಭಗವಂತ ಅವರವರ ಸಾತ್ವಿಕ ಇಷ್ಟಾರ್ಥ ಪೂರೈಸಿ  ಸಂತೈಸುತ್ತಾನೆ.
ಅಹಂಕಾರದಿಂದ ಮೆರೆದರೆ ದೇವತೆಗಳ ಒಡೆಯ ಇಂದ್ರನಾದರೂ ಸರಿ  ಪ್ರಹ್ಲಾದಾನ ಮೊಮ್ಮಗ ದೈತ್ಯರಾಜ ಬಲಿಯಾದರೂ ಸರಿ
ತಕ್ಕ ಶಾಸ್ತಿ  ಮಾಡುತ್ತಾನೆ ಎಂದು ವಾಮನಾವತಾರದ ಸಂದೇಶ.
ಜೀವಗಳಲ್ಲಿ ಇದ್ದು ತನ್ನ ಸೇವೆಯನ್ನು ಭಗವಂತ ತಾನೇ ಮಾಡಿಸಿಕೊಂಡು ಜೀವಿಗಳಿಗೆ ಹರ್ಷೋಲ್ಲಾಸ ಕೊಡುವ ದೇವದೇವನಿಗೆ ಅನಂತ ನಮನಗಳು.
            ನಾಹಂ ಕರ್ತಾ ಹರಿಃ ಕರ್ತಾ
         ಶ್ರೀ ಕೃಷ್ಣಾರ್ಪಣಮಸ್ತು
****

ಶ್ರೀವಾಮನಾವತಾರ ಸ್ತೋತ್ರ 🙏

ಒಂದು ಚರಣ ಬೊಮ್ಮಾಂಡ ಖರ್ಪರದಲ್ಲಿ!
ಒಂದು ಚರಣ ಪಾತಾಳ ಲೋಕದಲ್ಲಿ!
ಸಂದೇಹವಿಲ್ಲದೆ ವ್ಯಾಪಿಸಿದವು ಮ!
ತ್ತೊಂದು ಪಾದಕೆ ಭೂಮಿ ಸಾಲ‌ದಾಯಿತೆಂದು!
ಇಂದ್ರಸೇನೆಗೆ ವಾಮನದೇವ ನುಡಿಯಿಂದ!
ಬಂಧಿಸಿ ಸಮಯಬದ್ಧ ಮಾಡಲು ಬಲಿ!
ಇಂದಿರಾಪತಿ ಈತನೆಂದು ತಿಳಿದು ವೇಗ!
ವಂದಿಸಿ ತನ್ನಯ ಶಿರವನು ನೀಡಲು!
ಅಂದು ಗೋವಿಂದನು ಅರಸನ ತಲೆಮೆಟ್ಟಿ!
ಒಂದು ಚರಣದಲ್ಲಿ ಪಾತಾಳ ಕಟ್ಟಿದ!
ಮುಂದೆ ನಖದಿಂದ ಬೊಮ್ಮಾಂಡ ಭೇದಿಸಿ!
ಮಂದಾಕಿನಿ ಪೆತ್ತಾ ನಿರುತ ನಿರ್ಭೀತಾ!
ಇಂದ್ರವಂದಿತ ಸಿರಿವಿಜಯವಿಠ್ಠಲ ಕೃಪಾ-!
ಸಿಂಧು ಸಿಂಧುರಪಾಲಾ ಸಿಂಧು ತನುಜೆ ಪತಿ!!

ಇಂದ್ರಂಗೆ ಸುರ ಪದವಿ ಕೊಡಿಸಿ ಬಲಿಗೆ ಒಲಿದಾ!
ಕಂದರ್ಪಪಿತ ನಮ್ಮ ವಿಜಯವಿಠ್ಠಲ ವಟು!!

ವ್ಯೋಮ ಗಂಗೆಯನ್ನು ಪೆತ್ತ ವಾಮನನೇ
ತ್ರಿವಿಕ್ರಮ ಮೂರ್ತಿಯೇ
ನನ್ನ ನಾನಾ ಬಗೆಯ ವಿಷಯವಾಸನೆಗಳನ್ನು ಕೆಳಗೊತ್ತಿ ಅರ್ಥಾತ್ ವಿಷಯಗಳೇ ತಲೆಯಲ್ಲಿ ಸುಳಿಯದಂತೆ, ಸ್ವತಂತ್ರಕರ್ತೃತ್ವ ಬುದ್ಧಿಯು ಸರ್ವಥಾ ಸರ್ವದಾ ಸಾರ್ವಕಾಲಿಕ ಅಪ್ಪಿತಪ್ಪಿ ಕೂಡ
ಬಾರದಂತೆ ಪಾರತಂತ್ರ್ಯ ಬುದ್ಧಿಯಿಂದ ಗುರುದ್ವಾರಾ ಶ್ರವಣ ಜನ್ಯವಾದ ಜ್ಞಾನಾದಿಗಳಿಂದ 
ಯಾವತ್ತೂ ವಿಧಿ ನಿಷೇಧಗಳಿಗನುಗುಣವಾಗಿ ನಿಷ್ಕಾಮ ಕರ್ಮಗಳನ್ನೇ 
ಅರ್ಥಾತ್ ನಿವೃತ್ತ ಕರ್ಮಗಳನ್ನು ಮಾಡುವಂತೆ, ಮಾಡಿದ ಕರ್ಮಗಳನ್ನು ಭಗವಂತನಿಗೆ ಸಮರ್ಪಣ ಮಾಡುವ ಬುದ್ಧಿಯನ್ನು ಕರುಣಿಸಿ 
ಇನ್ನಾವ ಜನ್ಮಗಳಲ್ಲಿಯೂ  
ವಿಷಯವಾಸನೆಗಳು ತಲೆಯೆತ್ತದಂತೆ ಮಾಡಿ ಕಾಪಾಡು
ಅನವರತ ರಕ್ಷಿಸು ಎಂಬುದಾಗಿ
ವಾಮನರೂಪಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡೋಣ
ನಮಿಸೋಣ ಧನ್ಯರಾಗೋಣ
-prasadacharya
****

ವಾಮನಸ್ತೋತ್ರ
              
ದೇವೇಂದ್ರ ರಾಜ್ಯ ಹರದಾನವ ರಾಜಯಜ್ಞ ಶಾಲಾಥಿ೯ರೂಪಧರ ವಜ್ರಧರಾತಿ೯ಹಾರಿನ್ |
ಯಾಂಚಾಮಿಷಾದ ಸುರವಂಚಕ  ವಾಮನೇಶ ವಾಸಿಷ್ಟಕೃಷ್ಣ ಮಮ ದೇಹಿ ಕರಾವಲಂಬಮ್ ||

        ದೇವೇಂದ್ರನ ಮೂಜಗದ ಒಡೆತನವನ್ನು ಕಸಿದ ಬಲಿಚಕ್ರವತಿ೯ಯ ಯಜ್ಞಶಾಲೆಗೆ ಬೇಡುವವನಾಗಿ ಆಗಮಿಸಿದವನೇ,ಮೂರು ಪಾದ ಭೂಮಿಯನ್ನು ಬೇಡುವ ನೆಪದಿಂದ ಮೂಲೋ೯ಕವನ್ನು ಪಡೆದು ಇಂದ್ರನಿಗಿತ್ತು ಸಂಕಟ ಪರಿಹರಿಸಿದ, ವಾಮನ ರೂಪಿಯಾದ ಓ ವಾಸಿಷ್ಟಕೃಷ್ಣನೇ!ನನಗೆ ಕರಾವಲಂಬನ ಕರುಣಿಸು.
***

ಓಂ ಶ್ರೀ ಗುರುಭ್ಯೋ ನಮಃ
॥ ವಕಾರಾದಿ ಶ್ರೀವಾಮನಾಷ್ಟೋತ್ತರಶತನಾಮಾವಲಿಃ ॥


ಓಂ ವಾಮನಾಯ ನಮಃ ।
ಓಂ ವಾರಿಜಾತಾಕ್ಷಾಯ ನಮಃ ।
ಓಂ ವರ್ಣಿನೇ ನಮಃ ।
ಓಂ ವಾಸವಸೋದರಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ವಾವದೂಕಾಯ ನಮಃ ।
ಓಂ ವಾಲಖಿಲ್ಯಸಮಾಯ ನಮಃ ।
ಓಂ ವರಾಯ ನಮಃ ।
ಓಂ ವೇದವಾದಿನೇ ನಮಃ ।
ಓಂ ವಿದ್ಯುದಾಭಾಯ ನಮಃ ॥ 10 ॥

ಓಂ ವೃತದಂಡಾಯ ನಮಃ ।
ಓಂ ವೃಷಾಕಪಯೇ ನಮಃ ।
ಓಂ ವಾರಿವಾಹಸಿತಚ್ಛತ್ರಾಯ ನಮಃ ।
ಓಂ ವಾರಿಪೂರ್ಣಕಮಂಡಲವೇ ನಮಃ ।
ಓಂ ವಲಕ್ಷಯಜ್ಞೋಪವೀತಾಯ ನಮಃ ।
ಓಂ ವರಕೌಪೀನಧಾರಕಾಯ ನಮಃ ।
ಓಂ ವಿಶುದ್ಧಮೌಂಜೀರಶನಾಯ ನಮಃ ।
ಓಂ ವಿಧೃತಸ್ಫಾಟಿಕಸ್ರಜಾಯ ನಮಃ ।
ಓಂ ವೃತಕೃಷ್ಣಾಜಿನಕುಶಾಯ ನಮಃ ।
ಓಂ ವಿಭೂತಿಚ್ಛನ್ನವಿಗ್ರಹಾಯ ನಮಃ ॥ 20 ॥

ಓಂ ವರಭಿಕ್ಷಾಪಾತ್ರಕಕ್ಷಾಯ ನಮಃ ।
ಓಂ ವಾರಿಜಾರಿಮುಖಾಯ ನಮಃ ।
ಓಂ ವಶಿನೇ ನಮಃ ।
ಓಂ ವಾರಿಜಾಂಘ್ರಯೇ ನಮಃ ।
ಓಂ ವೃದ್ಧಸೇವಿನೇ ನಮಃ ।
ಓಂ ವದನಸ್ಮಿತಚನ್ದ್ರಿಕಾಯ ನಮಃ ।
ಓಂ ವಲ್ಗುಭಾಷಿಣೇ ನಮಃ ।
ಓಂ ವಿಶ್ವಚಿತ್ತಧನಸ್ತೇಯಿನೇ ನಮಃ ।
ಓಂ ವಿಶಿಷ್ಟಧಿಯೇ ನಮಃ ।
ಓಂ ವಸನ್ತಸದೃಶಾಯ ನಮಃ ॥ 30 ॥

ಓಂ ವಹ್ನಿಶುದ್ಧಾಂಗಾಯ ನಮಃ ।
ಓಂ ವಿಪುಲಪ್ರಭಾಯ ನಮಃ ।
ಓಂ ವಿಶಾರದಾಯ ನಮಃ ।
ಓಂ ವೇದಮಯಾಯ ನಮಃ ।
ಓಂ ವಿದ್ವದರ್ಧಿಜನಾವೃತಾಯ ನಮಃ ।
ಓಂ ವಿತಾನಪಾವನಾಯ ನಮಃ ।
ಓಂ ವಿಶ್ವವಿಸ್ಮಯಾಯ ನಮಃ ।
ಓಂ ವಿನಯಾನ್ವಿತಾಯ ನಮಃ ।
ಓಂ ವನ್ದಾರುಜನಮನ್ದಾರಾಯ ನಮಃ ।
ಓಂ ವೈಷ್ಣವರ್ಕ್ಷವಿಭೂಷಣಾಯ ನಮಃ ॥ 40 ॥

ಓಂ ವಾಮಾಕ್ಷಿಮದನಾಯ ನಮಃ ।
ಓಂ ವಿದ್ವನ್ನಯನಾಮ್ಬುಜ ಭಾಸ್ಕರಾಯ ನಮಃ ।
ಓಂ ವಾರಿಜಾಸನಗೌರೀಶವಯಸ್ಯಾಯ ನಮಃ ।
ಓಂ ವಾಸವಪ್ರಿಯಾಯ ನಮಃ ।
ಓಂ ವೈರೋಚನಿಮಖಾಲಂಕೃತೇ ನಮಃ ।
ಓಂ ವೈರೋಚನಿವನೀಪಕಾಯ ನಮಃ ।
ಓಂ ವೈರೋಚನಿಯಶಸ್ಸಿನ್ಧುಚನ್ದ್ರಮಸೇ ನಮಃ ।
ಓಂ ವೈರಿಬಾಡಬಾಯ ನಮಃ ।
ಓಂ ವಾಸವಾರ್ಥಸ್ವೀಕೃತಾರ್ಥಿಭಾವಾಯ ನಮಃ ।
ಓಂ ವಾಸಿತಕೈತವಾಯ ನಮಃ ॥ 50 ॥

ಓಂ ವೈರೋಚನಿಕರಾಮ್ಭೋಜರಸಸಿಕ್ತಪದಾಮ್ಬುಜಾಯ ನಮಃ ।
ಓಂ ವೈರೋಚನಿಕರಾಬ್ಧಾರಾಪೂರಿತಾಂಜಲಿಪಂಕಜಾಯ ನಮಃ ।
ಓಂ ವಿಯತ್ಪತಿತಮನ್ದಾರಾಯ ನಮಃ ।
ಓಂ ವಿನ್ಧ್ಯಾವಲಿಕೃತೋತ್ಸವಾಯ ನಮಃ ।
ಓಂ ವೈಷಮ್ಯನೈರ್ಘೃಣ್ಯಹೀನಾಯ ನಮಃ ।
ಓಂ ವೈರೋಚನಿಕೃತಪ್ರಿಯಾಯ ನಮಃ ।
ಓಂ ವಿದಾರಿತೈಕಕಾವ್ಯಾಕ್ಷಾಯ ನಮಃ ।
ಓಂ ವಾಂಛಿತಾಜ್ಂಘ್ರಿತ್ರಯಕ್ಷಿತಯೇ ನಮಃ ।
ಓಂ ವೈರೋಚನಿಮಹಾಭಾಗ್ಯ ಪರಿಣಾಮಾಯ ನಮಃ ।
ಓಂ ವಿಷಾದಹೃತೇ ನಮಃ ॥ 60 ॥

ಓಂ ವಿಯದ್ದುನ್ದುಭಿನಿರ್ಘೃಷ್ಟಬಲಿವಾಕ್ಯಪ್ರಹರ್ಷಿತಾಯ ನಮಃ ।
ಓಂ ವೈರೋಚನಿಮಹಾಪುಣ್ಯಾಹಾರ್ಯತುಲ್ಯವಿವರ್ಧನಾಯ ನಮಃ ।
ಓಂ ವಿಬುಧದ್ವೇಷಿಸನ್ತ್ರಾಸತುಲ್ಯವೃದ್ಧವಪುಷೇ ನಮಃ ।
ಓಂ ವಿಭವೇ ನಮಃ ।
ಓಂ ವಿಶ್ವಾತ್ಮನೇ ನಮಃ ।
ಓಂ ವಿಕ್ರಮಕ್ರಾನ್ತಲೋಕಾಯ ನಮಃ ।
ಓಂ ವಿಬುಧರಂಜನಾಯ ನಮಃ ।
ಓಂ ವಸುಧಾಮಂಡಲವ್ಯಾಪಿ ದಿವ್ಯೈಕಚರಣಾಮ್ಬುಜಾಯ ನಮಃ ।
ಓಂ ವಿಧಾತ್ರಂಡವಿನಿರ್ಭೇದಿದ್ವಿತೀಯಚರಣಾಮ್ಬುಜಾಯ ನಮಃ ।
ಓಂ ವಿಗ್ರಹಸ್ಥಿತಲೋಕೌಘಾಯ ನಮಃ ॥ 70 ॥

ಓಂ ವಿಯದ್ಗಂಗೋದಯಾಂಘ್ರಿಕಾಯ ನಮಃ ।
ಓಂ ವರಾಯುಧಧರಾಯ ನಮಃ ।
ಓಂ ವನ್ದ್ಯಾಯ ನಮಃ ।
ಓಂ ವಿಲಸದ್ಭೂರಿಭೂಷಣಾಯ ನಮಃ ।
ಓಂ ವಿಷ್ವಕ್ಸೇನಾದ್ಯುಪವೃತಾಯ ನಮಃ ।
ಓಂ ವಿಶ್ವಮೋಹಾಬ್ಜನಿಸ್ಸ್ವನಾಯ ನಮಃ ।
ಓಂ ವಾಸ್ತೋಷ್ಪತ್ಯಾದಿದಿಕ್ಪಾಲಬಾಹವೇ ನಮಃ ।
ಓಂ ವಿಧುಮಯಾಶಯಾಯ ನಮಃ ।
ಓಂ ವಿರೋಚನಾಕ್ಷಾಯ ನಮಃ ।
ಓಂ ವಹ್ನ್ಯಾಸ್ಯಾಯ ನಮಃ ॥ 80 ॥

ಓಂ ವಿಶ್ವಹೇತ್ವರ್ಷಿಗುಹ್ಯಕಾಯ ನಮಃ ।
ಓಂ ವಾರ್ಧಿಕುಕ್ಷಯೇ ನಮಃ ।
ಓಂ ವರಿವಾಹಕೇಶಾಯ ನಮಃ ।
ಓಂ ವಕ್ಷಸ್ಥ್ಸಲೇನ್ದಿರಾಯ ನಮಃ ।
ಓಂ ವಾಯುನಾಸಾಯ ನಮಃ ।
ಓಂ ವೇದಕಂಠಾಯ ನಮಃ ।
ಓಂ ವಾಕ್ಛನ್ದಸೇ ನಮಃ ।
ಓಂ ವಿಧಿಚೇತನಾಯ ನಮಃ ।
ಓಂ ವರುಣಸ್ಥಾನರಸನಾಯ ನಮಃ ।
ಓಂ ವಿಗ್ರಹಸ್ಥಚರಾಚರಾಯ ನಮಃ ॥ 90 ॥

ಓಂ ವಿಬುಧರ್ಷಿಗಣಪ್ರಾಣಾಯ ನಮಃ ।
ಓಂ ವಿಬುಧಾರಿಕಟಿಸ್ಥಲಾಯ ನಮಃ ।
ಓಂ ವಿಧಿರುದ್ರಾದಿವಿನುತಾಯ ನಮಃ ।
ಓಂ ವಿರೋಚನಸುತಾನನ್ದಾಯ ನಮಃ ।
ಓಂ ವಾರಿತಾಸುರಸನ್ದೋಹಾಯ ನಮಃ ।
ಓಂ ವಾರ್ಧಿಗಮ್ಭೀರಮಾನಸಾಯ ನಮಃ ।
ಓಂ ವಿರೋಚನಪಿತೃಸ್ತೋತ್ರ ಕೃತಶಾನ್ತಯೇ ನಮಃ ।
ಓಂ ವೃಷಪ್ರಿಯಾಯ ನಮಃ ।
ಓಂ ವಿನ್ಧ್ಯಾವಲಿಪ್ರಾಣನಾಧ ಭಿಕ್ಷಾದಾಯನೇ ನಮಃ ।
ಓಂ ವರಪ್ರದಾಯ ನಮಃ ॥ 100 ॥

ಓಂ ವಾಸವತ್ರಾಕೃತಸ್ವರ್ಗಾಯ ನಮಃ ।
ಓಂ ವೈರೋಚನಿಕೃತಾತಲಾಯ ನಮಃ ।
ಓಂ ವಾಸವಶ್ರೀಲತೋಪಘ್ನಾಯ ನಮಃ ।
ಓಂ ವೈರೋಚನಿಕೃತಾದರಾಯ ನಮಃ ।
ಓಂ ವಿಬುಧದ್ರುಸುಮಾಪಾಂಗವಾರಿತಾಶ್ರಿತಕಶ್ಮಲಾಯ ನಮಃ ।
ಓಂ ವಾರಿವಾಹೋಪಮಾಯ ನಮಃ ।
ಓಂ ವಾಣೀಭೂಷಣಾಯ ನಮಃ ।
ಓಂ ವಾಕ್ಪತಯೇನಮಃ । 108 ।


॥ ಇತಿ ವಕಾರಾದಿ ಶ್ರೀ ವಾಮನಾಷ್ಟೋತ್ತರಶತನಾಮಾವಲಿ ರಿಯಂ ಪರಾಭವ
ಶ್ರಾವಣ ಬಹುಲ ಪ್ರತಿಪದಿ ಲಿಖಿತಾ ರಾಮೇಣ ದತ್ತಾ ಚ
ಶ್ರೀ ಹಯಗ್ರೀವಾರ್ಪಣಮಸ್ತು ॥
***

ಶ್ರೀ ವಾಮನ ಸ್ತೋತ್ರಂ  

ಅದಿತಿರುವಾಚ –
ಯಜ್ಞೇಶ ಯಜ್ಞಪುರುಷಾಚ್ಯುತ ತೀರ್ಥಪಾದ
ತೀರ್ಥಶ್ರವಶ್ಶ್ರವಣ ಮಂಗಳನಾಮಧೇಯ |
ಆಪನ್ನಲೋಕವೃಜಿನೋಪಶಮೋದಾಽಽದ್ಯ ಶಂ ನಃ
ಕೃಧೀಶ ಭಗವನ್ನಸಿ ದೀನನಾಥಃ || ೧ ||

ವಿಶ್ವಾಯ ವಿಶ್ವಭವನಸ್ಥಿತಿ ಸಂಯಮಾಯ
ಸ್ವೈರಂ ಗೃಹೀತಪುರುಶಕ್ತಿಗುಣಾಯ ಭೂಮ್ನೇ |
ಸ್ವಸ್ಥಾಯ ಶಶ್ವದುಪಬೃಂಹಿತವೂರ್ಣಬೋಧ-
ವ್ಯಾಪಾದಿತಾತ್ಮತಮಸೇ ಹರಯೇ ನಮಸ್ತೇ || ೨ ||

ಆಯುಃ ಪರಂ ವಪುರಭೀಷ್ಟಮತುಲ್ಯಲಕ್ಷ್ಮೀ-
ರ್ದ್ಯೌಭೂರಸಾಸ್ಸಕಲಯೋಗಗುಣಾಸ್ತ್ರಿವರ್ಗಃ |
ಜ್ಞಾನಂ ಚ ಕೇವಲಮನಂತ ಭವಂತಿ ತುಷ್ಟಾ-
ತ್ತ್ವತ್ತೋ ನೃಣಾಂ ಕಿಮು ಸಪತ್ನಜಯಾದಿರಾಶೀಃ || ೩ ||

ಇತಿ ಶ್ರೀಮದ್ಭಾಗವತೇ ಶ್ರೀವಾಮನ ಸ್ತೋತ್ರಂ |
***

ಓಣಂ ಸೊಗಸು

ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬ ಕೇರಳೀಯರ ಓಣಂ. ಅದಕ್ಕೂ ಕಾರಣವಿದೆ ಉಳಿದೆಲ್ಲ ಹಬ್ಬಗಳು ಧರ್ಮಕ್ಕೆ ಅನುಸಾರವಾಗಿ ಆಚರಿಸಿದರೆ, ಇದನ್ನು ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಸಾಮರಸ್ಯದಿಂದ ಆಚರಿಸುತ್ತಾರೆ.

ಮಹಾದಾನಿಯಾಗಿರುವ ಮಹಾಬಲಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರವಣ ನಕ್ಷತ್ರದಂದು (ತಿರುವೋಣಂ) ಭೂಲೋಕಕ್ಕೆ ಬರುತ್ತಾನೆಂಬುದು ಕೇರಳೀಯರ ಅಚಲ ನಂಬಿಕೆ. ಹಸ್ತಾ ನಕ್ಷತ್ರದಿಂದ (ಅತ್ತಾ ಪತ್ತೋಣಂ) ಮೊದಲ್ಗೊಂಡು ಶ್ರವಣ ನಕ್ಷತ್ರದ ತನಕ 10 ದಿನಗಳ ಕಾಲ ಮಲೆಯಾಳಿಗರು ಓಣಂ ಹಬ್ಬವನ್ನು ಆಚರಿಸುತ್ತಾರೆ. ಪ್ರತಿ ಮನೆಯ ಅಂಗಳದಲ್ಲೂ ಹೆಂಗಳೆಯರು ನಾನಾ ಬಗೆಯ ಹೂಗಳಿಂದ ಪೂಕ್ಕಳಂ(ಹೂವಿನ ರಂಗೋಲಿ) ಬಿಡಿಸಿ ಬಲಿ ಚಕ್ರವರ್ತಿ (ಮಾವೇಲಿ)ಯನ್ನು ಸ್ವಾಗತಿಸುತ್ತಾರೆ.

ಓಣಂ ಹಬ್ಬದಾಚರಣೆಯಲ್ಲಿ ಕೊನೆಯ ಮೂರು ದಿನಗಳನ್ನು ಒನ್ನಾ ಓಣಂ(ಒಂದನೇ ಓಣಂ), ತಿರುಓಣಂ(ಪ್ರಧಾನ ಅಥವಾ ನಡು ಓಣಂ), ಮೂನ್ನಾಂ ಓಣಂ(ಕೊನೆಯ ಓಣಂ) ಎಂದು ಆಚರಿಸಲಾಗುತ್ತಿದೆ. ಕೇರಳದಲ್ಲಿ ಪೂಕ್ಕಳಂ ಒಂದು ವಿಶಿಷ್ಟ ಸಂಪ್ರದಾಯ ಕಲೆಯಾಗಿದ್ದು, ಅದಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಓಣಂ ಭೋಜನ(ಓಣಂ ಸದ್ಯ)ಕ್ಕೆ ವಿಶೇಷವಾದ ಮಹತ್ವವಿದೆ. ಅಂದಿನ ಊಟದೊಂದಿಗೆ ಅನೇಕ ಬಗೆಯ ಭಕ್ಷ್ಯ-ಪದಾರ್ಥಗಳನ್ನು ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ನೆಲದಲ್ಲಿ ಕುಳಿತು ಸಂತಸದಿಂದ ಸವಿಯುವುದು ವಾಡಿಕೆ. ಓಣಂ ಹಬ್ಬದಂದು ಶುಭ್ರವಾದ ಹೊಸ ಉಡುಪು, ಆಭರಣಗಳನ್ನು ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಸನಾತನ ಸಂಸ್ಕೃತಿಯ ದ್ಯೋತಕವಾಗಿದೆ. ಮನೆಯ ಹಿರಿಯರು ಕಿರಿಯರಿಗೆ ಹಾಗೂ ಬಡ ಬಗ್ಗರಿಗೆ ಹಣ (ಕೈ ನೀಟಂ) ಕೊಡುವರು. ಅಲ್ಲದೆ ಮನರಂಜನೆಗಾಗಿ ಉಯ್ಯಾಲೆ, ಸಿಡಿ ಮದ್ದು ಪ್ರದರ್ಶನ, ದೋಣಿ ವಿಹಾರ, ಪೆಟ್ಟಾಟ (ಓಣ ತಲ್ಲ್), ತಿರುವಾದಿರ ನೃತ್ಯ, ಕಥಕ್ಕಳಿ, ಆನೆಯಂಬಾರಿ, ನೃತ್ಯ, ಸಂಗೀತ ಮೊದಲಾದವುಗಳನ್ನು ಆಯೋಜಿಸಲಾಗುತ್ತದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹವನಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಕೇರಳದಲ್ಲಿ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ಇನ್ನೊಂದು ಅಂಶವೆಂದರೆ ಈ ಹತ್ತು ದಿನಗಳ ಕಾಲ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಭೂಮಿಯ ಮೇಲಿರುತ್ತಾರೆಂಬುದು ಜನರ ನಂಬಿಕೆ. ಅಲ್ಲದೆ ಈ ದಿನಗಳಲ್ಲಿ ದವಸ ಧಾನ್ಯಗಳನ್ನು ಕಟಾವುಗೈದು ಮನೆಗಳನ್ನು ತುಂಬಿಸಲಾಗುತ್ತದೆ.

ಕೊಲ್ಲಂ ಜಿಲ್ಲೆಯ ತ್ಯಕ್ಕಾಕರ ಎಂಬಲ್ಲಿನ ಪ್ರಸಿದ್ಧ ದೇವಾಯಲದಲ್ಲಿ ಮಹಾಬಲಿಯನ್ನು ಪಾತಾಳಕ್ಕೆ ತಳ್ಳಲಾಗಿದೆ ಎಂಬ ಐತಿಹ್ಯದೊಂದಿಗೆ ಇಲ್ಲಿ ವಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಪೂಜೆ ನೆರವೇರಿಸಲಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದಲ್ಲೂ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಓಣಂ ಉತ್ಸವಾಚರಣೆಯನ್ನು ಜಾತಿ, ಮತ, ಬಡವ, ಬಲ್ಲಿದ ಎಂಬ ತಾರತಮ್ಯವನ್ನು ಮರೆತು ಎಲ್ಲರೂ ಒಂದಾಗಿ ಸಂತಸದಿಂದ ಆಚರಿಸುತ್ತಾರೆ.

ಕೇರಳದಲ್ಲಿ ಓಣಂ ಹಬ್ಬದ ಮೂಲಕ ಬಲಿ ಚಕ್ರವರ್ತಿಯನ್ನು ಭಜಿಸಿದರೆ, ಕರ್ನಾಟಕದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಮಹಾಬಲಿಯನ್ನು ಪೂಜಿಸಲಾಗುತ್ತಿದೆ.

ಈ ಹಬ್ಬದ ಆಚರಣೆಯಲ್ಲಿರುವ ಸುಂದರತೆಯನ್ನು ಅಭಿಮಾನಿಸುತ್ತಾ, ಈ ಹಬ್ಬವನ್ನು ಸಂತಸ, ಸಾಂಸ್ಕೃತಿಕ ಶ್ರದ್ಧೆ ಮತ್ತು ಪಾರಂಪರಿಕ ಭಕ್ತಿಗಳಿಂದ ಆಚರಿಸುತ್ತಿರುವ ಸಕಲರಿಗೂ ಶುಭ ಹಾರೈಕೆಗಳನ್ನು ಸಲ್ಲಿಸೋಣ. 
***

ಇನ್ನು ಈ ಓಣಂ ಹಬ್ಬದ ಮಹತ್ವದ ಬಗ್ಗೆ.  ನನ್ನ ಮಲಯಾಳಿ ಆತ್ಮೀಯ ಗೆಳೆಯರೊಬ್ಬರು ಈ ಕುರಿತು ಅತ್ಯಂತ ಸರಳ ಸುಂದರವಾದ ಒಂದೆರಡು ಮಾತು ಹೇಳಿದ್ದು ಇಲ್ಲಿ ನೆನಪಾಗುತ್ತದೆ.  

ಕೇರಳಿಗರು ತಮ್ಮ ಪ್ರೀತಿಯ ಬಲಿ ಚಕ್ರವರ್ತಿಯನ್ನು ಮಾಬಲಿ ಎನ್ನುತ್ತಾರೆ.  ವಿಷ್ಣು ವಾಮನಾವತಾರದ ಮೂಲಕ ಬಲಿಯನ್ನು ಪಾತಾಳಲೋಕಕ್ಕೆ ಕಳುಹಿಸಿದಾಗ ಆತನ ಸಾಮ್ರಾಜ್ಯದಲ್ಲಿದ್ದ ಪ್ರೀತಿಪಾತ್ರ ಪ್ರಜೆಗಳಿಗೆ ಇದರಿಂದ ತುಂಬಾ ದುಃಖವಾಯಿತು.  ಭಗವಂತನಲ್ಲಿ ಈ ಕುರಿತು ಮೊರೆಯಿಟ್ಟರು (ಸ್ಟ್ರೈಕ್ ಅಥವಾ ಪ್ರೊಟೆಸ್ಟ್ ಮಾಡಿರಬಹುದು ಎಂದು ನನ್ನ ಅನಿಸಿಕೆ).  ಭಗವಂತ ಈ ಜನರನ್ನು ಸಮಾಧಾನಪಡಿಸಿ ನುಡಿದ:  “ಪ್ರತೀವರ್ಷದಲ್ಲಿ ಒಂದು ವಾರ ‘ಬಲಿ’ ಭೂಲೋಕದಲ್ಲಿ ಬಂದು ನಿಮ್ಮೊಡನಿರುತ್ತಾನೆ” ಎಂದು.  ಇದೇ ಓಣಂ ಹಬ್ಬ.  ಜನ ತಮ್ಮ ಪ್ರೀತಿಯ ಮಹಾರಾಜ ಮಾಬಲಿಯನ್ನು ಅತ್ಯಂತ ಸಡಗರ ಪ್ರೀತಿ ಉತ್ಸಾಹಗಳಿಂದ ಈ ಹಬ್ಬದಲ್ಲಿ ನೋಡಿಕೊಳ್ಳುತ್ತಾರೆ.  ಈ ಸಂದರ್ಭದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರೂ ಭೂಮಿಯಲ್ಲಿ ಬಂದಿರುತ್ತಾರೆ ಎಂಬ ನಂಬಿಕೆ ಅವರದು. ನಾಳೆ ಓಣಂ ಹಬ್ಬವನ್ನು ಸಂಭ್ರಮಿಸುವ ಬಗ್ಗೆ ಚಿಂತಿಸೋಣ.
***
ಈ ಹತ್ತು ದಿನಗಳು ಆಚರಣೆ
ಮಾಡುವ ಓಣಂ 

ಅಥಂ: ಇದು ಓಣಂ ನ ಮೊದಲನೇ ದಿನ. ಅಥಂನ ದಿನ ಜನರು ತಮ್ಮ ಮನೆಯನ್ನು ಹಳದಿ ಹೂವುಗಳಿಂದ ಅಲಂಕಾರ ಮಾಡುತ್ತಾರೆ.  ಈ ಹೂವುಗಳನ್ನು ಪೂಕಾಲಂ ಎಂದು ಕರೆಯಲಾಗುತ್ತದೆ.

ಚಿತಿರಾ:  ಇದು ಹಬ್ಬದ ಎರಡನೇ ದಿನ. ಈ ದಿನದಂದು ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗುತ್ತದೆ.  ಈ ದಿನ ಹಳದಿ ಹೂವಿನ ಜೊತೆ ಇನ್ನೊಂದು ಹೂವನ್ನು ಸೇರಿಸಿ ರಂಗೋಲಿ ಹಾಕಲಾಗುತ್ತದೆ.

ಚೋಡಿ:  ಹಬ್ಬದ ಮೂರನೇ ದಿನವನ್ನು ಚೋಡಿ ಎಂದು ಕರೆಯುತ್ತಾರೆ. ಈ ದಿನದಂದು ಕುಟುಂಬ ಸದಸ್ಯರು ತಮ್ಮ ಹತ್ತಿರದವರನ್ನು ಮತ್ತು ಆತ್ಮೀಯರನ್ನು ಭೇಟಿ ಮಾಡಿ ಉಡುಗೊರೆಗಳನ್ನು ಮತ್ತು ಆಭರಣಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡುತ್ತಾರೆ.

ವಿಷಾಖಂ: ಈ ದಿನ ಹಬ್ಬದ ಪ್ರಮುಖ ದಿನಗಳಲ್ಲಿ ಒಂದು. ವಿಷಾಖಂ ದಿನದಂದು ಜನರು ಓಣಂ ಸಧ್ಯಕ್ಕೆ ತಯಾರಿ ನಡೆಸುತ್ತಾರೆ. ಅನಿಝಮ್: ಈ ದಿನದಂದು, ಹಾವು ದೋಣಿ ಓಟದ ಸ್ಪರ್ಧೆಯಾದ ವಲ್ಲಂ ಕಾಳಿ ಆರಂಭವಾಗುತ್ತದೆ ಮತ್ತು ಜನರು ಕೇರಳದ ಅತ್ಯಂತ ಹಳೆಯ ನದಿ ದೋಣಿ ಉತ್ಸವವಾದ ಆರನ್ಮುಲಾ ಉತ್ರತ್ತತಿ ವಲ್ಲಂಕಾಳಿಯಲ್ಲಿ ಓಟಕ್ಕೆ ತಯಾರಿ ಸಹ  ನಡೆಸುತ್ತಾರೆ.

ತ್ರಿಕೆಟ್ಟ: ಕೇರಳದಲ್ಲಿ, ಈ ದಿನ ಶಾಲೆಗಳು ಮುಚ್ಚಲಾಗುತ್ತದೆ ಮತ್ತು ಮಕ್ಕಳು  ಹಬ್ಬದ ಪ್ರಾರ್ಥನೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ.
ಮೂಲಂ: ಓಣಂ ಸಧ್ಯ ಈ ದಿನ ಆರಂಭವಾಗುತ್ತದೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸಲು ಜನರು ನೃತ್ಯ ಪ್ರದರ್ಶನಗಳನ್ನು  ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.

ಪೂರದಂ: ಈ ದಿನ ರಾಜ ಮಹಾಬಲಿ ಮತ್ತು ವಾಮನ ಮೂರ್ತಿಗಳನ್ನು ಭಕ್ತರು ಸ್ವಚ್ಛಗೊಳಿಸಿ ಹಬ್ಬದ ಆಚರಣೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಉತ್ತರಾಡಂ: ಇದು ಹಬ್ಬದ ಕೊನೆಯ ದಿನದ ಹಿಂದಿನ ದಿನ. ಈ ದಿನ ತರಕಾರಿ ಮತ್ತು ಹಣ್ಣುಗಳಿಂದ ಆಹಾರ ಪದಾರ್ಥವನ್ನು ಸಿದ್ಧ ಮಾಡಿ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.

ತಿರುವೋಣಂ: ಇದು ಹಬ್ಬದ ಪ್ರಮುಖ ದಿನ ಮತ್ತು ಬಹಳ ಪವಿತ್ರವಾದ ದಿನ ಕೂಡ ಹೌದು, ಅಲ್ಲದೇ ಇದು ಹಬ್ಬದ ಕೊನೆಯ ದಿನ ಕೂಡ. ಈ ದಿನ ಜನರು ಹೆಚ್ಚು ವಿಶೇಷತೆಯಿಂದ ಹಬ್ಬವನ್ನು ಆಚರಿಸುತ್ತಾರೆ.

ನಿಮಗೆಲ್ಲರಿಗೂ ತಿರುಓಣಂ ಹಬ್ಬವು ಸಮ್ಮಂಗಳವನ್ನುಂಟು ಮಾಡಲಿ
***





No comments:

Post a Comment