SEARCH HERE

Tuesday 1 January 2019

ಪರಿಹಾರ 2 parihara 2


please check with astrologer before you follow.  these are entirely at your belief

#ಒಂದುಸರಳಪರಿಹಾರ
ನಾವು ಎಷ್ಟೇ ದೇವರ ಪೂಜೆ ಪುನಸ್ಕಾರಗಳು ಮಾಡಿದಾಗಲೂ ಸಹ ನಮಗೆ ಕೆಲವು ಸಲ ನಮಗೆ ಹಣದ ಅಡಚನೆ , ದುಡ್ಡು ವಿನಾಕಾರಣ ಕಳೆದುಕೊಳ್ಳುವದು , ದುಃಖನೋವು ಬರುವದು ಸಹಜ ಅಲ್ಲವೇ ,  ಹೀಗಾದಾಗ ಮನಸ್ಸು ನೋವಿನಿಂದ ಕೂಡಿರುತ್ತದೆ...  ದುಃಖನೋವು ಕಡಿಮೆ ಮಾಡಲು ಸರಳ ಉಪಾಯ ಹೇಳುವೆ ಕೇಳಿ  
ಇಂದ್ರ ಮನಸ್ಸಿನ ಅಧಿ ದೇವತೆ , ಬೆಲ್ಲಕ್ಕೆ ಅಭಿಮಾನಿ ದೇವತೆ ಕೂಡ ,ತುಪ್ಪಕ್ಕೆ ಲಕ್ಷ್ಮೀ ಅಭಿಮಾನಿ ದೇವತೆ ., ಕಷ್ಟ ಪರಿಹಾರ..  ಜೊತೆಗೆ ಅವಲಕ್ಕಿ ಭಗವಂತನಿಗೆ ಪರಮಾನಂದ ..ನಿಮಗೆ ಕಷ್ಟ ಬಂದಾಗ..ಈ ಮೂರನ್ನು ಸೇರಿಸಿ  ಅವಲಕ್ಕಿ, ಬೆಲ್ಲ ಮತ್ತು ತುಪ್ಪ ಸೇರಿಸಿ  ಭಗವಂತನ ಮುಂದೆ ತುಪ್ಪದ ದೀಪ ಹಚ್ಚಿ  ಬೆಳ್ಳಿಬಟ್ಟಲಲ್ಲಿ. (ಹಿತ್ತಾಳೆ ಅಥವಾ ತಾಮ್ರದ) ನೈವೇದ್ಯ ಮಾಡಿ ನಂತರ ನಿಮ್ಮ ಕಷ್ಟಗಳ ಸರಮಾಲೆ  ದೂರ ವಾಗುತ್ತವೆ.. ಮನಸ್ಸು ಕೂಡ ನೀರಾಳವಾಗುತ್ತದೆ ,ಬೇಕಾದರೆ ಮಾಡಿ ನೋಡಿ ...ನಮಗೆ ಕಷ್ಟಗಳು ಬಂದಾಗ ದೊಡ್ಡ ದೊಡ್ಡ  ಪೂಜೆ ಮಾಡಿಯೇ ಪರಿಹರಿಕೊಳ್ಳಬೇಕೆಂದೆನೂ ಇಲ್ಲ ,ನಮ್ಮ ಪೂರ್ವಜರು ನಮಗಾಗಿ ಸಣ್ಣಸಣ್ಣ ಪರಿಹಾರಗಳನ್ನು ಸೂಚಿಸಿದ್ದಾರೆ ಅವು ಕೂಡ ಮಹತ್ವದ ಪರಿಣಾಮಕಾರಿ  ಫಲವನ್ನು ಕೊಡುತ್ತವೆ....
ವೀಣಾ
*********

ಕಷ್ಟದ ಕಾಲದಲ್ಲಿ ಈ ಮಂತ್ರಗಳನ್ನ ಹೇಳಿದ್ರೆ ಕಷ್ಟ ದೂರ

ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ.

ಗಣಪತಿ ಮಂತ್ರ
ಗಣೇಶ ಅಡೆತಡೆಗಳನ್ನು ಹೋಗಲಾಡಿಸುವವನು ಭಕ್ತರು ಸಂತೋಷದಿಂದಿರಲು ಕಷ್ಟ ಕಾಲದಲ್ಲಿ ಗಣೇಶನ ಪೂಜೆ ಮತ್ತು ಪಠಣ ಮಾಡಿದರೆ ಮನಸ್ಸಿನ ಸಮತೋಲನ ಸ್ಥಿತಿಯನ್ನು ಕಾಯ್ದು ಕೊಳ್ಳಬಹುದು , ಸುಲಭವಾಗಿ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಶಿವನ ಮಂತ್ರ
ಪರಮಾತ್ಮ ಶಿವನನ್ನು ಕಠಿಣ ಕಾಲದಲ್ಲಿ ನೆನೆದರೆ ಕಷ್ಟಗಳು ದೂರವಾಗುತ್ತವೆ , ಸ್ಪಷ್ಟ ಗ್ರಹಿಕೆ ಮತ್ತು ಎಲ್ಲಾ ತೊಂದರೆಗಳನ್ನು ಮುಕ್ತಗೊಳಿಸಲು ಜೀವನದ ತೊಂದರೆಗಳನ್ನು ನಿವಾರಿಸಲು ಕಠಿಣ ಕಾಲದಲ್ಲಿ ಕೆಳಗಿನ ಮಂತ್ರಗಳ ಪಠಣ ಮಾಡಬೇಕು.
ಪಂಚಾಕ್ಷರಿ ಮಂತ್ರ : ಓಂ ನಮಶಿವಾಯ —- 
ರುದ್ರ ಮಂತ್ರ : ಓಂ ನಮೋ ಭಗವತೇ ರುದ್ರಾಯ — 

ಶಿವ ಗಾಯತ್ರಿ : ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಹ್ ಪ್ರಚೋದಯಾತ್

*****



ಮನೆ ಮದ್ದು - ಹಲ್ಲು :    ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ‌ ಅದ್ದಿ ನೋವಿರುವ ಜಾಗಕ್ಕೆ ‌ಇಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ.

[1:00 AM, 11/11/2018] +91 95138 89553: ನಾಳೆ ಮೊದಲನೆ ಕಾರ್ತಿಕ ಸೋಮವಾರ

ಶಿವನನ್ನು ಒಲಿಸಿಕೊಳ್ಳುವ ಇಚ್ಛೆ ಇರುವಂತಹವರು ಉಪವಾಸ ಮಾಡಿ ಈ ಮಂತ್ರವನ್ನು ೧೦೦೦ ಸಲ ಜಪಿಸಿಕೊಳ್ಳಿ

    ಇದರಿಂದ ಒಳಗಿರುವ ಕಲ್ಮಶಗಳೆಲ್ಲಾ ನಾಶವಾಗಿ ಪರಿಶುಧ್ದ ಜ್ಞಾನ ಪ್ರಾಪ್ತಿಯಾಗುತ್ತದೆ.

    ನಾಲ್ಕೂ ಕಾರ್ತೀಕ ಸೋಮವಾರ ಶ್ರಧ್ದೆಯಿಂದ  ಸಾಧನೆ ಮಾಡಿದರೆ ನಿಮ್ಮೊಳಗಿನ ಶಿವತ್ವವನ್ನು ಅರಿಯಲು ಸಾಧ್ಯವಾಗುವುದು

ಓಂ ಪರಬ್ರಹ್ಮ ಪರಮಾತ್ಮ ಹ್ರೀಂ ಪರಮೇಶ್ವರಾ ನಮೋ ನಮಃ ಮಮ ಸರ್ವ ಶಕ್ತಿ ಜಾಗ್ರತ್  ಹರ ಹರ ಮಹಾದೇವಾ

🕉🕉🕉
[1:23 AM, 11/11/2018] +91 98450 02066: 🙏🙏🙏
[1:44 AM, 11/11/2018] +91 95138 89553: ಖರ್ಚು ಜಾಸ್ತಿಯಾಗ್ತಿದ್ದರೆ ಈ ಉಪಾಯ ಅನುಸರಿಸಿ

ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ. ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ.

ಯಾವಾಗ್ಲೂ ಕುದುರೆ ಸಂಖ್ಯೆ ಏಳಿಕ್ಕಿಂತ ಹೆಚ್ಚಿರಬಾರದು. ಇಂದ್ರಧನಸ್ಸಿನ ಸಂಖ್ಯೆ 7 ಇರುತ್ತದೆ. ಸಪ್ತ ಋಷಿ, ಸಪ್ತ ಪದಿ, ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.

ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು. ಜೋಡಿ ಕುದುರೆ ಚಿತ್ರ ಹಾಕುವುದು ಶ್ರೇಯಸ್ಕರ.

ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ 7 ಕುದುರೆಯ ಚಿತ್ರವನ್ನು ಹಾಕಬೇಕು. ಆಫೀಸ್ ಕಡೆಗೆ ಕುದುರೆ ಮುಖ ಮಾಡಿಕೊಂಡಿರಬೇಕು. ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು. ಇದ್ರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ.

ಏಳು ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ. ಮನೆಯಲ್ಲಿ ತಾಯಿ ಲಕ್ಷ್ಮಿ ವಾಸಿಸುತ್ತಾಳೆ. ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು.

ಸರಳ ಪರಿಹಾರ
ಶ್ರೀ ಸುಧಾಕರ
[2:06 AM, 11/11/2018] +91 95138 89553: ಗ್ರಹ ದೋಷ ನಿವಾರಣೆ ಮಾಡುತ್ತೆ ಹಾಲು

ಪ್ರತ್ಯೇಕ ಸಮಸ್ಯೆಯನ್ನು ದೂರ ಮಾಡಲು ಪ್ರತ್ಯೇಕ ಉಪಾಯಗಳನ್ನು ಪ್ರಾಚೀನ ಗ್ರಂಥಗಳು ಹೇಳಿವೆ.


ಆದರೆ ಇತಂಹ ಈ ಸರಳ ಮಾರ್ಗ ಪರಿಹಾರ ಕೆಲವು ಜೋತಿಷ್ಯ ರು ಹೇಳುವುದಿಲ್ಲ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಹಾಲಿಗೆ ಎಳ್ಳು ಸೇರಿಸಿ ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಎಲ್ಲ ಗ್ರಹ ದೋಷ ನಿವಾರಣೆಯಾಗುತ್ತದೆ. 

ಹಾಗೆ ಹಾವಿಗೆ ಹಾಲು ಹಾಕುವುದರಿಂದ ರಾಹುವಿನಿಂದ ತಪ್ಪಿಸಿಕೊಳ್ಳಬಹುದು. 

ದೃಷ್ಟಿ ಬಿದ್ದಿದೆ ಎನ್ನುವವರು ಈ ಉಪಾಯ ಮಾಡಿ ಯಶಸ್ಸು ಕಾಣಬಹುದಾಗಿದೆ. 

 ಭಾನುವಾರ ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲನ್ನು ತಲೆಯ ಬದಿಯಲ್ಲಿಟ್ಟು ಮಲಗಿ. ಹಾಲು ಚೆಲ್ಲದಂತೆ ನೋಡಿಕೊಳ್ಳಿ. ಬೆಳಿಗ್ಗೆ ನಿತ್ಯಕರ್ಮದ ನಂತ್ರ ಹಾಲನ್ನು ಅಕೆಶಿಯಾ ಗಿಡದ ಬುಡಕ್ಕೆ ಹಾಕಿ. ಹೀಗೆ ಮಾಡುವುದರಿಂದ ಎಲ್ಲ ಕಾರ್ಯದಲ್ಲಿಯೂ ಯಶ ಸಿಕ್ಕಿ, ಧನ ಲಾಭವಾಗುತ್ತದೆ,

ಪದೇ ಪದೇ ಅಪಘಾತವಾಗ್ತಿದ್ದರೂ ಅದರಿಂದ ತಪ್ಪಿಸಿಕೊಳ್ಳಲು ಹಾಲನ್ನು ಬಳಸಬಹುದಾಗಿದೆ. ಶುಕ್ಲ ಪಕ್ಷದ ಮೊದಲ ಮಂಗಳವಾರ ಹಾಲಿಗೆ ಅಕ್ಕಿ ಬೆರೆಸಿ ಹರಿವ ನೀರಿನಲ್ಲಿ ಬಿಡಿ. 7 ಮಂಗಳವಾರಗಳ ಕಾಲ ಹೀಗೆ ಮಾಡ್ತಾ ಬನ್ನಿ.

ಗ್ರಹದೋಷ ಕಂಡುಬಂದಲ್ಲಿ ಸೋಮವಾರ ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗಿ ಶಿವನಿಗೆ ಹಾಲು ಅರ್ಪಿಸಿ. ಸತತ 7 ಸೋಮವಾರ ಹೀಗೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ.

ಸೋಮವಾರ ಶಿವಲಿಂಗಕ್ಕೆ ಹಾಲಿನ ಜೊತೆ ನೀರು ಸೇರಿಸಿ ಅಭಿಷೇಕ ಮಾಡುವ ಜೊತೆಗೆ ರುದ್ರಾಕ್ಷಿಯನ್ನು ಧರಿಸಿ ‘ಓಂ ಸೋಮೇಶ್ವರಾಯ ನಮಃ’ ಎಂದು ಪ್ರಾರ್ಥನೆ ಮಾಡಿ. 108 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರ್ತಾಳೆ.

ಸರಳ ಪರಿಹಾರ  20
ಶ್ರೀ ಸುಧಾಕರ
ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಈ ಲೇಖನವನ್ನು ಬೇರೆಯವರಿಗೆ ತಲುಪಿಸಿ
[2:15 AM, 11/11/2018] +91 95138 89553: ಜ್ಞಾಪಕ ಶಕ್ತಿ ವೃದ್ಧಿಸುತ್ತೆ ಈ ರುದ್ರಾಕ್ಷಿ

ಗಣೇಶ ರುದ್ರಾಕ್ಷಿ ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಬೇಕಾದ್ರೆ ಬುಧ ಗ್ರಹ ಬಲವಾಗಿರಬೇಕು. ಬುಧ ಗ್ರಹ ಬಲವಾಗಿದ್ದರೆ ಸಾಮಾನ್ಯ ಪ್ರಯತ್ನದಿಂದಲೂ ಹೆಚ್ಚಿನ ಫಲಿತಾಂಶ ಪಡೆಯಬಹುದು. ಆದ್ರೆ ಬುಧ ದುರ್ಬಲನಾಗಿದ್ದರೆ ಎಷ್ಟು ಕಷ್ಟಪಟ್ಟರೂ ಯಶಸ್ಸು ಲಭಿಸುವುದಿಲ್ಲ. 

ಗಣೇಶ ರುದ್ರಾಕ್ಷಿ ಧರಿಸುವುದ್ರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಏಕಾಗ್ರತೆ ವೃದ್ಧಿಯಾಗುವ ಜೊತೆಗೆ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಬರವಣಿಗೆ ಶಕ್ತಿಯಲ್ಲಿಯೂ ವೃದ್ಧಿಯಾಗುತ್ತದೆ. ಈ ಹಿಂದೆ ಕಡಿಮೆ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಗಳು ಗಣೇಶ ರುದ್ರಾಕ್ಷಿ ಧರಿಸಿದ ನಂತ್ರ ಹೆಚ್ಚಿನ ಅಂಕ ಪಡೆಯುತ್ತಾರೆ. 

ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲಿನಲ್ಲಿ ತೊಳೆದು ಪೂಜೆ ಮಾಡಬೇಕು. ಹಸಿರು ದಾರದಲ್ಲಿ ಗಣೇಶ ರುದ್ರಾಕ್ಷಿಯನ್ನು ಧರಿಸಬೇಕು.

ಸರಳ ಪರಿಹಾರ  21
ಶ್ರೀ ಸುಧಾಕರ
ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಈ ಲೇಖನವನ್ನು ಬೇರೆಯವರಿಗೆ ತಲುಪಿಸಿ
[2:31 AM, 11/11/2018] +91 95138 89553: ಮುಂದಿನ ಸರಳ ಪರಿಹಾರ ಲೇಖನ ಗಳು
1. ನವಿಲು ಗರಿಯಿಂದ ಪರಿಹಾರ
2. ತಣ್ಣ ನೆ ನೀರು ಅತಿಥಿಗೆ ನೀಡುವುದರಿಂದ ...
3. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳಿಸಲು ಹೀಗೆ ಮಾಡಿ

ಶ್ರೀ ಸುಧಾಕರ..



[3:26 AM, 11/11/2018] +91 95138 89553: ರ ✍✍✍

[5:53 AM, 11/11/2018] +91 93418 61008: ನಿಮಗೊಂದೆ ಹೆಳುವೆ ಕೇಳಿ ಶುಕ್ರಸಂಹಿತೆಯಲ್ಲಿ ಉಪವಾಸವನ್ನು ೨ ರೀತಿಯಿಂದ ವಿಂಗಡಿಸಲಾಗಿದೆ 
1) ನಿರಂಕಾರ ಮತ್ತು 2) ಪವಿತ್ರಾಹಾರ
ನಿರಂಕಾರದಲ್ಲಿ ನೀರನ್ನು ಕೂಡ ಸ್ವೀಕರಿಸುವಹಾಗಿಲ್ಲ
ಪವಿತ್ರಾಹಾರ ಅಂದರೆ ಹಾಲು,ಮೋಸರು,ಬೆಣ್ಣೆ,ತುಪ್ಪ, ಮತ್ತು ಫಲಗಳನ್ನು ಸ್ವೀಕರಿಸಬಹುದು

ಉಪವಾಸದಲ್ಲಿ ಇವುಗಳನ್ನು ಮಾಡದಿರಿ

ತಲೆಗೆ ಎಣ್ಣೆ ಹಚ್ಚುವುದು.
ಕೂದಲು,ಉಗುರುಗಳನ್ನು ಕತ್ತರಿಸುವುದು.
ಅಶೌಚವಾಗಿರುವದು.
ಸಂಧ್ಯಾ ಮಾಡದಿರುವುದು ( ಬ್ರಾಹ್ಮಣ ರಿಗೆ ಮಾತ್ರ).
ಸುಗಂಧ ದ್ರವ್ಯ ಲೇಪನ.
ಉಪ್ಪು ಸೇವಿಸುವುದು.
ಹಸಿ ಮೆಣಸಿನಕಾಯಿ ಅಥವಾ ಮಸಾಲೆಗಳನ್ನು ತಿನ್ನುವುದು.
ಮೈಥುನ ಮುಂತಾದವುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ 
✍✍✍✍
ಮಂಜುನಾಥ ಆರ್

ಸರಳ ಪರಿಹಾರ

ವಾಸ್ತು ಲೇಖನ 14


ಗರ್ಭಿಣಿಯರು ಈಶಾನ್ಯ ಭಾಗದಲ್ಲಿರುವ ಕೊಠಡಿಯನ್ನು ಮಲಗಲು ಉಪಯೋಗಿಸದಿರುವುದು ಒಳ್ಳೆಯದು, ಇದರಿಂದಾಗಿ ಗರ್ಭ ಸ್ರಾವ, ಗರ್ಭಛಿದ್ರ ಮೊದಲಾದ ಅಪಾಯಗಳಿಂದ ರಕ್ಷಣೆಯನ್ನು ಪಡೆಯಬಹುದು.


ಸರಳ ವಾಸ್ತು ಸಲಹೆ


ಶ್ರೀ ಸುಧಾಕರ


ವಿದ್ಯಾ ಪ್ರಾಪ್ತಿ ಗಾಗಿ


       ವಿದ್ಯಾ ಸಮಸ್ತಾಸ್ತವ ದೇವಿ ಭೇದಾಃ

       ಸ್ತ್ರಿಯಃ ಸಮಸ್ತಾಃ ಸಕಲಾ ಜಗತ್ಸು ।
       ತ್ವೈಕಯಾ ಪೂರಿತಮಮ್ಬಯೈತತ್ ।
       ಕಾ ತೇ ಸ್ತುತಿಃ ಸ್ತವ್ಯಪರಾ ಪರೋಕ್ತ್ತಿಃ ॥

*ಸರಳ ಪರಿಹಾರ .. 

ಶ್ರೀದುರ್ಗಾ-ಸಪ್ತಶತೀ ಸಿದ್ದ ಮಂತ್ರ 01
ಶ್ರೀ ಸುಧಾಕರ

******
ಪಿತೃದೋಷ

ಪಿತೃದೋಷ ನಿಮ್ಮನ್ನು ಪೀಡಿಸುತ್ತಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ.‌

ಮನೆಯಲ್ಲಿ ಶುಭ ಕಾರ್ಯ ನಡೆಯದೇ ಇರುವುದು, ಸಾಲಬಾಧೆ, ಅಂದುಕೊಂಡ ಕೆಲಸ ಮುಂದೂಡುವುದು, ಆಸ್ತಿಗಳು ವ್ಯಾಜ್ಯದಲ್ಲಿ ಸಿಲುಕುವುದು ಹೀಗೆ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಪಿತೃದೋಷಕ್ಕೆ ಸರಳ ಪರಿಹಾರ


ಪ್ರತಿ ಸೋಮವಾರ 21 ಎಕ್ಕದ ಹೂವಿನಿಂದ ಶಿವನನ್ನು ಪೂಜಿಸಿ, 21 ಎಕ್ಕದ ಹೂವನ್ನು ಶಿವನ ದೇವಾಲಯಕ್ಕೆ ಕೊಟ್ಟು ಬರಬೇಕು. ಹೀಗೆ ಮಾಡಿದರೆ ಕಾಲಕ್ರಮೇಣ ಪಿತೃ ದೋಷ ನಿವಾರಣೆಯಾಗುತ್ತದೆ.

******
ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ

ಅನಾರೋಗ್ಯವನ್ನು ನೀವು ದೂರವಿಡಿ

ರೋಗವನ್ನು ದೂರವಿಡಬೇಕಾದರೆ ಅಥವಾ ನೀವು ದೀರ್ಘಕಾಲದಿಂದ ಬಳಲುತ್ತಿರುವ ರೋಗದಿಂದ ಮುಕ್ತಿ ಪಡೆಯಬೇಕು ಎಂದು ಆಗಿದ್ದರೆ ಆಗ ನೀವು ಪ್ರತಿ ನಿತ್ಯವು ಸೂರ್ಯ ದೇವರ ಫೋಟೊದ ಮುಂದೆ ದೀಪ ಹಚ್ಚಬೇಕು.

ಜೀವನ ಸಂಗಾತಿಗಾಗಿ 

ನೀವು ಮದುವೆಯಾಗಲು ಬಯಸುತ್ತಲಿದ್ದರೆ ಅಥವಾ ವೈವಾಹಿಕ ಜೀವನದ ಸಂಬಂಧವನ್ನು ಸುಧಾರಣೆ ಮಾಡಬೇಕು ಎಂದು ಬಯಸಿದ್ದರೆ ಆಗ ನೀವು ಪ್ರತೀ ದಿನ ಸಂಜೆ ವೇಳೆ ರಾಧಾ ಮತ್ತು ಕೃಷ್ಣ ದೇವರ ಫೋಟೊದ ಮುಂದೆ ದೀಪ ಹಚ್ಚಿ.

ದುಸ್ವಪ್ನಗಳ ದೂರ ಮಾಡಲು 

ನಿಮಗೆ ಪದೇ ಪದೇ ದುಸ್ವಪ್ನಗಳು ಕಾಡುತ್ತಲಿದ್ದರೆ ಆಗ ನೀವು ಪಂಚಮುಖಿ ಹನುಮಂತ ದೇವರ ಫೋಟೊದ ಮುಂದೆ ದೀಪ ಹಚ್ಚಿ. ಇದರಿಂದ ನೀವು ರಾತ್ರಿ ಒಳ್ಳೆಯ ಮತ್ತು ಭೀತಿಯಿಲ್ಲದೆ ನಿದ್ರೆ ಮಾಡಬಹುದು.

ಆರ್ಥಿಕತೆ ಸುಧಾರಣೆಗೆ

ನೀವು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದರೆ ಆಗ ನೀವು ಮನೆಯ ಉತ್ತರ ಭಾಗದಲ್ಲಿ ಕುಬೇರ ದೇವರ ಫೋಟೊವನ್ನು ಇಟ್ಟು ಅಲ್ಲಿ ಪ್ರತಿನಿತ್ಯ ದೀಪ ಹಚ್ಚಬೇಕು. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುವುದು. ಆರ್ಥಿಕ ಪರಿಸ್ಥಿತಿಯು ಸುಧಾರಣೆ ಆಗುವ ತನಕ ಹೀಗೆ ಮಾಡಿ.

ಉದ್ಯೋಗದ ಕಡೆಗೆ 

ನಿಮ್ಮ ಮನೆ ಹಾಗೂ ಉದ್ಯೋಗದ ಕಡೆಯಲ್ಲಿ ಗಣಪತಿ ದೇವರ ವಿಗ್ರಹವನ್ನು ಇಟ್ಟುಬಿಡಿ. ನೀವು ಪ್ರತಿನಿತ್ಯ ಉದ್ಯೋಗದ ಕಡೆ ತೆರಳಿದಾಗ ಮತ್ತು ಮನೆಗೆ ಬಂದಾಗ ಗಣಪತಿ ಮೂರ್ತಿ ಮುಂದೆ ಒಂದು ದೀಪ ಹಚ್ಚಿಬಿಡಿ. ಇದರಿಂದ ಮನೆ ಹಾಗೂ ಕಚೇರಿಯಲ್ಲಿ ಶಾಂತಿ ಹಾಗೂ ಸಮೃದ್ಧಿಯು ಉಂಟಾಗುವುದು.

ಮನೆಯಲ್ಲಿನ ಕಲಹ ನಿವಾರಣೆಗೆ 

ಮನೆಯಲ್ಲಿ ನಿಮಗೆ ಹೆಚ್ಚಿನ ಶಾಂತಿ ಬೇಕಿದ್ದರೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದ್ದರೆ ಆಗ ನೀವು ಪ್ರತಿನಿತ್ಯವು ರಾಮ ದರ್ಬಾರ್ ಫೋಟೊ(ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಇರುವ ಫೋಟೊ) ಮುಂದೆ ದೀಪ ಹಚ್ಚಿಬಿಡಿ. ದೀಪ ಹಚ್ಚುವ ವೇಳೆ ನೀವು ಮಾಡಬೇಕಾದ ಮತ್ತು ಮಾಡಲೇಬಾರದ ಕೆಲವು ವಿಚಾರಗಳು

ಬತ್ತಿಗಳು 

ನೀವು ದೀಪ ಹಚ್ಚುವ ವೇಳೆ ಒಂದು ಬತ್ತಿ ಬಳಸಬೇಡಿ. ಯಾವಾಗಲೂ ಎರಡು ಅಥವಾ ಗರಿಷ್ಠ ಮೂರು ಬತ್ತಿಗಳನ್ನು ಬಳಸಿಕೊಳ್ಳಿ. ಮೂರು ಬತ್ತಿಯು ದೇವಿ ದುರ್ಗೆ, ಲಕ್ಷ್ಮೀ ಮತ್ತು ಸರಸ್ವತಿಯ ಪ್ರತೀಕವಾಗಿದೆ.

ಸೂರ್ಯನಿಗೆ ನೀರನ್ನು ಅರ್ಪಿಸುವುದರ ಪ್ರಯೋಜನಗಳು 

ಸೂರ್ಯನಿಗೆ ನೀರು ಅಥವಾ ಅರ್ಗ್ಯವನ್ನು ಅರ್ಪಿಸುವ ಮೂಲಕ ಮಾನಸಿಕ ಶಾಂತಿ, ದೈಹಿಕ ಶಕ್ತಿ ಹಾಗೂ ದಿನದ ಕೆಲಸಗಳಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಎದುರಿಸಲು ಪ್ರಾಯೋಗಿಕ ಸಹಿಷ್ಣುತೆ ಲಭಿಸುತ್ತದೆ. ಅಷ್ಟೇ ಅಲ್ಲ, ಸೂರ್ಯದೇವನ ರಕ್ಷಣೆ ಇರುವ ಭಾವನೆಯೊಂದೇ ವ್ಯಕ್ತಿಗೆ ಅಪಾರವಾದ ಆತ್ಮವಿಶ್ವಾಸವನ್ನೂ ನಿರ್ಭಿಡತೆಯನ್ನೂ ನೀಡುತ್ತದೆ. 


ಸೂರ್ಯನ ಆರಾಧನೆಯನ್ನು ನಿತ್ಯದ ಅಭ್ಯಾಸವಾಗಿಸುವವರಿಗೆ ಅಪಾರ ಸ್ಥೈರ್ಯ, ತಮ್ಮ ಮಾತಿನ ಮೇಲೆ ಹಿಡಿತ ಹಾಗೂ ಬುದ್ದಿವಂತಿಕೆಗಳು ಲಭಿಸುತ್ತವೆ. ಒಂದು ವೇಳೆ ನೀವು ನಿತ್ಯವೂ ಸೂರ್ಯನನ್ನು ಆರಾಧಿಸುವವರಾದರೆ ಇದರಿಂದ ನಿಮ್ಮ ಮನದಿಂದ ಸ್ವಾರ್ಥ, ಕ್ರೋಧ, ಲಾಲಸೆ, ದುರಾಸೆ ಮೊದಲಾದ ಋಣಾತ್ಮಕ ಚಿಂತನೆಗಳು ಇಲ್ಲವಾಗುತ್ತವೆ ಹಾಗೂ ಈ ಸ್ಥಾನದಲ್ಲಿ ಮಾನಸಿಕ ಶಾಂತಿ ತುಂಬುತ್ತದೆ.

***************


ಅಧಿಕ ಮಾಸ ನಿತ್ಯ ಪಠನೀಯ ಸ್ತೋತ್ರ :


ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ ! ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯ !!

Adhikamasa” Nitya pataneeya stotra :

” govardhana dharam vande, gopalam gopa rupinam !

gokulutsava me isanam, govindam gopika priyam !! ”
*************

please check with astrologer before you follow.  these are entirely at your belief

ಇದು ಶ್ರೀ ಧನಲಕ್ಷ್ಮಿ ಮಂತ್ರ 07-11-2018 ಬುಧವಾರ ಸಾಯಂಕಾಲ ಮಂತ್ರವನ್ನು ಏಕಾಗ್ರತೆಯಿಂದ ಕನಿಷ್ಟ ೧೦೦೮ ಬಾರಿ ಜಪಿಸಬೇಕು.

ಓಮ್ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಧನ ಮಹಾಲಕ್ಷ್ಮಿ ಮಮ ಗೃಹೇ ಧನ ಕನಕ ಐಶ್ವರ್ಯಾಭಿವೃದ್ಧಿಂ ಕುರು ಕುರು ಸ್ವಾಹಾ ||



by  +91 95138 89553: ಸರಳ ಪರಿಹಾರ ಶ್ರೀ ಸುಧಾಕರ

***


ನಿಂಬೆ ಹಣ್ಣು ನಿಂದ ಕೆಟ್ಟ ದೃಷ್ಟಿಯಿಂದ ಪರಿಹಾರ

ಪ್ರತಿದಿನ ನಿಂಬೆ ಹಣ್ಣನ್ನ ಎರಡು ಭಾಗವಾಗಿ ಕಟ್ ಮಾಡಿ, ಮದ್ಯದಲ್ಲಿ ಕುಂಕುಮ ಹಚ್ಚಿ, ಬೆಳಗಿನ ಹೊತ್ತಿನಲ್ಲಿ ಅಥವಾ ಸಾಯಂಕಾಲ ಮನೆಯ ಬಾಗಿಲ ಎರಡು ಬದಿಯಲ್ಲಿ ಇಟ್ಟರೆ ನಿಮ್ಮ ಮನೆಗೆ ಯಾರ ಕಣ್ಣು ಬೀಳುವುದಿಲ್ಲ, ಎಲ್ಲಾ ಕೆಟ್ಟ ದೃಷ್ಟಿಗಳನ್ನ ಈ ನಿಂಬೆ ಹಣ್ಣುಗಳು ಆಕರ್ಷಿಸುತ್ತದೆ. ನಿಮಗೆ ಪ್ರತಿದಿನ ಹೀಗೆ ಮಾಡಲು ಸಾಧ್ಯವಾಗದಿದ್ದರೂ ಮಂಗಳವಾರ ಮತ್ತು ಶುಕ್ರವಾರ ಹೀಗೆ ಮಾಡಿದರೆ ಸಾಕು.

ಸರಳ ಪರಿಹಾರ
ಶ್ರೀ ಸುಧಾಕರ  ✍✍✍


ಅಗ್ನಿಮೂಲೆಯ ಮಹತ್ವ

ಅಗ್ನಿಗೆ ಎಲ್ಲವನ್ನೂ ಸುಟ್ಟೊಗೆಯುವ ಶಕ್ತಿ ಇದೆ. 

ಈ ದಿಕ್ಕಿನಲ್ಲಿ ಟಾಯ್ಲೆಟ್‌ಗಳು, ಸ್ನಾನಗೃಹಗಳು ಮನೆಯ ತ್ಯಾಜ್ಯಗಳು ಸಾಗುವ ಕೊಳವೆಗಳು ದೇವರ ಪೀಠ ಮಂಟಪ, ಗೂಡುಗಳು ಬರಲೇ ಬಾರದು. ಇವುಗಳ ಸಂಯೋಜನೆಗಳು ಇರಬಾರದು. ಊಟ ಮಾಡುವ ಟೇಬಲ್‌ ಅಡಿಗೆ ಮನೆಯ ಸಮೀಪಕ್ಕೇ ಇರಬೇಕು. ಮಲಗುವ ಕೋಣೆಗಳು ಕೂಡಾ ಇಲ್ಲಿ ಸಮಾವೇಶವಾಗಕೂಡದು. ಕೈತೊಳೆಯುವ, ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಅಗ್ನಿಮೂಲೆಯಲ್ಲಿ ನೀರಿನ ಮೂಲ ಸಂಗ್ರಹ ಸಂಪು, ಬಾವಿ, ಬೋರ್‌ ವೆಲ್‌ ಇರಲೇಬಾರದು. ಕೈ ತೊಳೆಯುವುದು ಕೂಡಾ ಕೈಯ ಎಂಜಲನ್ನು ತೊಳೆಯುವುದಕ್ಕೆ ಉಪಯೋಗವಾಗುವ ರೀತಿ ಇರಬಾರದು. ಹೀಗೆ ಮಾಡುವುದರಿಂದ ದೇವತೆಗಳಲ್ಲೇ ಪರಮ ಪವಿತ್ರವಾದ ಅಗ್ನಿಗೆ ಸಂಪನ್ನತೆ ಒದಗಿ ಮನೆಯ ಆರೋಗ್ಯವೂ ಲವಲವಿಕೆಗಳು ಒಗ್ಗೂಡಿದ ಹರ್ಷದಲೆಗಳು ಮನೆಯ ಜನರ ಸಂತೋಷಕ್ಕೆ ಉತ್ತಮವಾದ ನಿರ್ಮಿಕೆ ಸಾಧ್ಯವಾಗುತ್ತದೆ.



ಈ 8 ಮುದ್ರೆಗಳನ್ನು ಅಭ್ಯಾಸ ಮಾಡಿ ಹಾಗು ರೋಗ ಮುಕ್ತರಾಗಿ.

೧.ಜ್ಞಾನ ಮುದ್ರೆ
ಇದು ಜ್ಞಾನಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಈ ಮುದ್ರೆ ಅಭ್ಯಾಸ ಮಾಡುವುದರಿಂದ ನಿಮ್ಮ ಜ್ಞಾನ ವೃದ್ಧಿಯಾಗಿ, ನೆನಪಿನಶಕ್ತಿ ಮತ್ತು ಏಕಾಗ್ರತೆ ಹೆಚ್ಚಗಾಗುತ್ತದೆ.

೨.ವಾಯು ಮುದ್ರೆ
ಇದು ಗಾಳಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಹೆಚ್ಚಿನ ಹಾಗು ಕೆಟ್ಟ ವಾಯುವನ್ನು ಬಿಡುಗಡೆಮಾಡಲು ಸಹಾಯಮಾಡುತ್ತದೆ.

೩.ಪ್ರಿಥ್ವಿ ಮುದ್ರೆ
ಇದು ಭೂಮಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ, ನಿಶಕ್ತಿಯನ್ನು ದೂರ ಮಾಡಿ ಸದಾ ಚಟುವಟಿಗೆಯಿಂದಿರಲು ಸಹಾಯ ಮಾಡುತ್ತದೆ.

೪.ಅಗ್ನಿ ಮುದ್ರೆ
ಇದು ಅಗ್ನಿ ಅಥವಾ ಬೆಂಕಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ಥೈರಾಯ್ಡ್ ಗ್ರಂಥಿ ಚೆನ್ನಾಗಿ ಕೆಲಸಮಾಡಲು, ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುವುದಲ್ಲದೆ ನಿಮ್ಮ ಆತಂಕವನ್ನು ದೂರಮಾಡುತ್ತದೆ.

೫.ವರುಣ ಮುದ್ರೆ
ಇದು ನೀರಿಗೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸಿ ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬ ಸಹಾಯಮಾಡುತ್ತದೆ.

೬.ಶೂನ್ಯ ಮುದ್ರೆ
ಈ ಮುದ್ರೆ ಅಭ್ಯಾಸ ಮಾಡುವುದರಿಂದ ವಿಶೇಷವಾಗಿ ನಿಮ್ಮ ಕೇಳುವ ಶಕ್ತಿ ವೃದ್ಧಿಸುತ್ತದೆ. ಈ ಮುದ್ರೆ ಕಿವುಡುತನದಿಂದ ಬಳಲುತ್ತಿರುವವರಿಗೆ ತುಂಬ ಸಹಕಾರಿ.

೭.ಪ್ರಾಣ ಮುದ್ರೆ
ಇದು ಜೀವಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದಣಿವಾರಿಸಿ ದೇಹದಲ್ಲಿರುವ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ.

೮.ಅಪನು ವ್ಯ ಮುದ್ರೆ
ಇದು ಹೃದಯಕ್ಕೆ ಸಂಭಂದಿಸಿದ ಮುದ್ರೆಯಾಗಿದೆ, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಹೃದಯವನ್ನು ಸದೃಢ ಗೊಳಿಸುತ್ತದೆ. ಈ ಮುದ್ರೆ ವಿಶೇಷವಾಗಿ ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಹಕಾರಿಯಾಗುತ್ತದೆ.

ಸರಳ ಮುದ್ರೆ ಪರಿಹಾರ

ಶ್ರೀ ಸುಧಾಕರ



[4:00 AM, 11/8/2018] +91 95138 89553:
 ನೆಲದ ಮೇಲೆ ಊಟಕ್ಕೆ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ಸಹ ವಿಶ್ರಾಂತಿಯನ್ನು ಪಡೆಯುತ್ತದೆ.

[4:18 AM, 11/8/2018] +91 95138 89553: ಅರಿಶಿನದ ಗಣೇಶ


ಅರಿಶಿನದಿಂದ ತಯಾರಿಸಿದ ಗಣೇಶನನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಹೆಚ್ಚು ಪರಿಶ್ರಮ ಪಡದೆಯೇ ಕಷ್ಟಗಳು ದೂರವಾಗುವುದು. ಅಲ್ಲದೆ ಮನೆಗೆ ಮಂಗಳಕರವಾದದ್ದು






ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ ಏಕೆ?

ವೈಜ್ಞಾನಿಕ ಕಾರಣಗಳು

ನಿಂಬೆ ಕ್ಷಾರೀಯ ಗುಣವನ್ನು ಹೊಂದಿದ್ದು ಮನೆಯಲ್ಲಿ ಆಮ್ಲೀಯತೆ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಹಾಗಾಗಿ ನಿಂಬೆಯ ಕ್ಷಾರೀಯ ಗುಣಗಳು ಮತ್ತು ನೀರು ಪ್ರಕೃತಿಯ ಆಮ್ಲಿಯ ಗುಣಗಳನ್ನು ಸೆರೆ ಹಿಡಿಯುವ ಶಕ್ತಿಯನ್ನು ಹೊಂದಿದ್ದು ಮನೆಯನ್ನು ಹಾಗು ಮನೆಯ ಮಂದಿಯನ್ನು ರಕ್ಷಣೆ ಮಾಡುತ್ತದೆ.

ನಿಂಬೆ ಪರಿಸರದಿಂದ ನಕಾರಾತ್ಮಕ ತರಂಗಗಳನ್ನು ಹೀರಿಕೊಳ್ಳುವ ಮತ್ತು ತಟಸ್ಥಗೊಳಿಸಲು ಗುಣವನ್ನು ಹೊಂದಿದೆ.

ಮಾಟ ಮಂತ್ರ ದುಷ್ಟ ಗ್ರಹ ಗಳ ಶಕ್ತಿಯನ್ನು ಕುಂದಿಸಲು ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ

ನೀರಿನ ಬಣ್ಣ ಬದಲಾದರೆ ಅಥವಾ ನಿಂಬೆ ಕೊಳೆತರೆ ಹೊಸದಾಗಿ ನಿಂಬೆಹಣ್ಣನ್ನು ಇಡುವುದು.

ಸರಳ ಪರಿಹಾರ
ಶ್ರೀ ಸುಧಾಕರ


[9:05 AM, 11/24/2018] +91 95138 89553: ಓಂ   ನಮಃ ಶಿವಾಯ  ಮಂತ್ರ ಮಹತ್ವ

ಮಂತ್ರದ ಶಕ್ತಿ

'ಓಂ ನಮಃ ಶಿವಾಯ' ಮಂತ್ರವು ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯುತವಾದ ಮಂತ್ರ ಎಂದು ಹೇಳಲಾಗುತ್ತದೆ. ಈ ಮಂತ್ರವನ್ನು ನಾವು ಮನಸ್ಸಿನಲ್ಲಿ ನಿರಂತರವಾಗಿ ಹೇಳುತ್ತಿದ್ದರೆ ಯಾವುದೇ ಧಾರ್ಮಿಕ ಆಚರಣೆಯನ್ನು ಮಾಡಬೇಕೆಂದಿಲ್ಲ. ಈ ಮಂತ್ರವನ್ನು ಹೇಳಲು ಯಾರಿಗೂ ನಿರ್ಬಂಧವಿಲ್ಲ. ಯಾರೂ ಬೇಕಾದರೂ ಹೇಳಬಹುದು ಅಥವಾ ಜಪವನ್ನು ಮಾಡಬಹುದು. 

ಐದು ಗುಣಲಕ್ಷಣದ ಮಹತ್ವ

ಈ ಮಂತ್ರವು ಪ್ರಮುಖವಾಗಿ 5 ಉಚ್ಚಾರಾಂಶಗಳನ್ನು ಒಳಗೊಂಡಿದೆ. 'ನಾ, ಮಾ, ಶಿ, ವಾ, ಯಾ' ಎನ್ನುವುದು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಸ್ಥಳ ಎಂದಾಗುತ್ತಾದೆ. ಈ ಪಂಚ ಭೂತಗಳಲ್ಲಿಯೂ ಶಿವನು ಇರುತ್ತಾನೆ ಎಂದು ಹೇಳಲಾಗುತ್ತದೆ.

ಸೌಂಡ್ ಥೆರಪಿ

ಋಷಿಮುನಿಗಳು ಈ ಮಂತ್ರವನ್ನು ನಿರಂತರವಾಗಿ ಹೇಳುವುದರಿಂದ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೆ ಆತ್ಮಕ್ಕೆ ಶಾಂತಿ ಲಭಿಸುವುದು. ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಸಂತೋಷವು ನೆಲೆಸುವುದು. ಜೊತೆಗೆ ಗೊಂದಲವನ್ನು ನಿವಾರಿಸುವಂತಹ ಶಕ್ತಿಯನ್ನು ತುಂಬುವುದು.


[9:19 AM, 11/24/2018] ಅಮವಾಸ್ಯೆಯ ದಿನ

ಅಮವಾಸ್ಯೆಯ ದಿನ ಹನುಮಾನ್ ಚಾಲೀಸ ಹೇಳಿಕೊಂಡು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ಜೀವನದಲ್ಲಿ ಬರುವ ಹಲವಾರು ರೀತಿಯ ಸಂಕಷ್ಟಗಳು ದೂರವಾಗುವುದು ಮತ್ತು  ಅಶ್ವತ್ಥ ಮರದ ಕೆಳಗೆ ಪ್ರತೀದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ತುಂಬಾ ಒಳ್ಳೆಯದು.

ಸರಳ ಪರಿಹಾರ

ಶ್ರೀ ಸುಧಾಕರ
****

No comments:

Post a Comment