SEARCH HERE

Monday 1 April 2019

hanuman anjaneya with with wife suvarchala in khammam AP ಹನುಮಾನ್ ಆಂಜನೇಯ ಹೆಂಡತಿ ಸುವರ್ಚಲಾ


ಹೈದರಾಬಾದ್ನಿಂದ  ಸುಮಾರು 220 ಕಿ.ಮೀ. ದೂರದ ಖಮ್ಮಂನಲ್ಲಿರುವ ಶ್ರೀ ಆಂಜನೇಯಸ್ವಾಮಿ ಮತ್ತು ಅವರ ಹೆಂಡತಿ ಸುವರ್ಚಲಾ ದೇವಿಯವರ ಅತ್ಯಂತ ಅಪರೂಪದ ವಿಗ್ರಹ.

ಸೂರ್ಯ ದೇವನ ಮಗಳಾದ ಸುವರ್ಚಲಾ ದೇವಿಯು  ಹನುಮನೊಂದಿಗೆ  ವಿವಾಹವಾದ ತಕ್ಷಣವೇ ಜೇಷ್ಠ ಶುದ್ಧ ದಶಮಿಯಂದು ಜೇಷ್ಠಾ ದೇವಿ ಪೂಜೆಗೆ ಶರಣಾದಳು. ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ, ಎಲ್ಲಾ ರೀತಿಯ  ವೈವಾಹಿಕ ಸಮಸ್ಯೆಗಳು ಸುಲಭವಾಗಿ ಪರಿಹರಿಸಬಹುದು ಎಂಬುದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ. 

ಈ ಪುರಾಣದ ಪ್ರಕಾರ ಹನುಮಾನ್ ತಾಂತ್ರಿಕವಾಗಿ ಅವಿವಾಹಿತನಲ್ಲ. ಸೂರ್ಯನ ದೇವನಿಗೆ ಅಯೋನಿಜಾ  ಅಂದರೆ ಯೊನಿಯ ಪಾಲ್ಗೊಳ್ಳುವಿಕೆ ಇಲ್ಲದೆ ಜನನವಾದ ಮಗಳಾದ ಸುವರ್ಚಲಾ ದೇವಿ ಆಂಜನೇಯನ ಪತ್ನಿಯಾಗಿದ್ದಳು. 

ಆಜನ್ಮ ಬ್ರಹ್ಮಚಾರಿಗಳು ನವ ವ್ಯಾಕರಣ(9ವ್ಯಾಕರಣ ಪದ್ದತಿ) ಕಲಿಯಲು  ಅನರ್ಹರಾದ  ಕಾರಣ, ಸೂರ್ಯ ದೇವ ತನ್ನ ಮಗಳನ್ನು ಮದುವೆ ಮಾಡಿ ಕೊಟ್ಟು  ಪ್ರಜಪತ್ಯ ಬ್ರಾಹ್ಮಚಾರಿಯಾಗಿರುವಂತೆ ವರವನ್ನು ಕೊಡುತ್ತಾನೆ  ಈ ವರದ ಪ್ರಕಾರ,  ಮದುವೆಯಾದ ನಂತರವೂ ಅವರು ಸ್ನಾತಕೋತ್ತರ ಪದವಿಯನ್ನು ಗಳಿಸುತ್ತಾರೆ ಮತ್ತು ಬ್ರಹ್ಮಚರ್ಯವನ್ನೂ ಕಾಪಾಡಿಕೊಳ್ಳುತ್ತಾರೆ  ಎಂಬುದಾಗಿದೆ.
*******

ಬ್ರಹ್ಮಚಾರಿ ಹನುಮಂತ ದೇವನಿಗೆ ಹೆಂಡತಿ ಇದ್ದಾಳೆ ಗೊತ್ತಾ ? ಆಕೆಗೊಂದು ದೇವಸ್ಥಾನ ಕಟ್ಟಿಸಿ ಪೂಜೆ ಮಾಡ್ತಾರೆ ಎಲ್ಲಿದೆ ಆ ದೇವಸ್ಥಾನ* ಹನುಮಂತ ದೇವನ ಪತ್ನಿ ಸುವರ್ಚಲಾ ದೇವಿಯ ದೇವಸ್ಥಾನ ನಮ್ಮ ಭಾರತ ದೇಶದಲ್ಲಿ ಇದೆ ? ಎಲ್ಲಿದೆ ಎಂದು ನಿಮಗೆ ಗೊತ್ತಾ ?ಹನುಮಂತ ದೇವರು ಮದುವೆಯಾದರೂ ಸಹ ಹೇಗೆ ಬ್ರಹ್ಮಚಾರಿ ಎಂದು ಕೇಳುತ್ತಾರೆ. ಈ ಕಥೆಯನ್ನು ಕೇಳಿ ಹನುಮಂತ ದೇವರ ಬಗ್ಗೆ ಇನ್ನಷ್ಟು ಗೌರವ ಮತ್ತು ಭಕ್ತಿ ನಿಮಗೆ ಹೆಚ್ಚಾಗುತ್ತದೆ. ಇದೇನಿದು ವಿಚಿತ್ರ ಅನಿಸುತ್ತಿದೆಯೇ ? ಹೌದು, ಹನುಮಂತ ದೇವರಿಗೆ ಎಲ್ಲಾದರೂ ಮದುವೆ ಆಗಿದ್ದುಂಟೆ, ಅವನು ಆಜನ್ಮ ಬ್ರಹ್ಮಚಾರಿ ಅಲ್ಲವೇ ? ಎಂದು ಎಲ್ಲಾ ಕಡೆ ಹೇಳುವುದನ್ನು ಕೇಳಿದ್ದೇವೆ. ಲಂಕೆಯನ್ನು ಧ್ವಂಸ ಮಾಡಿ, ಲಂಕಾ ಸಾಗರದಲ್ಲಿ ಮಿಂದೆದ್ದ ಹನುಮಂತನ ಬೆವರು ನುಂಗಿ ಮೀನಾಗಿ ಹುಟ್ಟಿದ ಮಕರ ಧ್ವಜನ ಕಥೆಯನ್ನು ಆಗಾಗ ಕೇಳುತ್ತಿದ್ದೇವೆ. ಆದರೆ ಹನುಮಂತನಿಗೂ ಸಹ ಒಬ್ಬಳು ಹೆಂಡತಿ ಇದ್ದಳು. ಅವಳಿಗೆ ಒಂದು ದೇವಸ್ಥಾನ ಈಗಲೂ ಇದೆ. ಎಂದು ನಿಮಗೆ ಗೊತ್ತೇ ?ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.ಹನುಮಂತನ ಹೆಂಡತಿ ಸೂರ್ಯನ ಮಗಳು ಸುವರ್ಚಲಾ ದೇವಿ. ಪರಾಶರ ಸಂಹಿತೆಯಲ್ಲಿ ಪರಾಶರ ಮಹರ್ಷಿಗಳ ಪ್ರಕಾರ ಸೂರ್ಯದೇವ ಹನುಮಂತನ ಗುರು. ಎಲ್ಲಾ ವೇದಾಭ್ಯಾಸಗಳು ಮಾಡಿರುವ ಹನುಮಂತನಿಗೆ, ನವ ವ್ಯಾಕರಣ ಒಂದು ಓದುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಅದನ್ನು ಓದಬೇಕು ಎಂದರೆ ಅವನು ಸಂಸಾರಸ್ಥನಾಗಿರಬೇಕು, ಅಂದರೆ ಮದುವೆಯಾಗಲೇಬೇಕು. ಇನ್ನೂ ಲೋಕದ ಕಲ್ಯಾಣಕ್ಕಾಗಿ ಹನುಮಂತನು ಈ ಗ್ರಂಥವನ್ನು ಹೋದಲೇ ಬೇಕಿರುತ್ತದೆ. ಹಾಗಾಗಿ ತ್ರಿಮೂರ್ತಿಗಳು ಸೂರ್ಯ ದೇವನ ಬಳಿ ಮೊರೆ ಹೋಗುತ್ತಾರೆ.ಆಗ ಸೂರ್ಯ ದೇವನು ಒಂದು ಉಪಾಯವನ್ನು ಮಾಡಿ ಹನುಮಂತನ ಹೆಂಡತಿಯಾಗುವುದಕ್ಕೆ ಒಬ್ಬಳು ಸೌಂದರ್ಯದಿಂದ ಕೂಡಿದ ಸುಂದರವಾದ ಯುವತಿಯನ್ನು ತನ್ನ ರಶ್ಮಿಯಿಂದಲೇ (ಕಿರಣದಿಂದ) ಹುಟ್ಟಿಸುತ್ತಾನೆ. ಅವಳೇ ಸುವರ್ಚಲಾ ದೇವಿ. ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನು ಮದುವೆಯಾಗು ಎಂದು ಹನುಮಂತ ದೇವನನ್ನು ಕೇಳಿಕೊಳ್ಳುತ್ತಾನೆ.ಆಯೋ ನಿಜೆಯಾಗಿ ಹುಟ್ಟಿದ ಸುವರ್ಚಲಾ ದೇವಿಯ ಮದುವೆ ಅಷ್ಟು ಸುಲಭವಾಗಿ ಆಗಿರಲಿಲ್ಲ ,ಅವಳ ವರ್ಚಸ್ಸು ತಂದೆ ಸೂರ್ಯನಿಂದ ಬಂದಿದ್ದು.ಆ ವರ್ಚಸ್ಸನ್ನು ತಡೆದುಕೊಳ್ಳುವ ಶಕ್ತಿ ಇದ್ದದ್ದು ಜೀವನ ಪರ್ಯಂತ ಬ್ರಹ್ಮಚಾರ್ಯ ಪಾಲಿಸಿ ಬಂದ ಹನುಮಂತನಿಗೆ ಮಾತ್ರ. ಎಲ್ಲರೂ ಹನುಮಂತನನ್ನು ಮದುವೆಗೆ ಒಪ್ಪಿಸುವುದಕ್ಕೆ ಹರ ಸಾಹಸ ಪಡಬೇಕಾಯಿತು.ಯಾರು ಎಷ್ಟೇ ಹೇಳಿದರೂ ಹನುಮಂತನು ಒಪ್ಪದೇ ಇದ್ದಾಗ , ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನೇ ಮದುವೆಯಾಗು ಎಂದು ಕೇಳಿಕೊಳ್ಳುತ್ತಾನೆ. ಆಗ ಹನುಮಂತನು ಹಿಂಜರಿಯುತ್ತಾನೆ. ಮದುವೆಯಾದ ಮೇಲೂ ಹನುಮಂತ ಬ್ರಹ್ಮಚಾರಿಯಾಗಿಯೇ ಉಳಿಯುವ ಹಾಗೆ ಸೂರ್ಯದೇವ ವರವನ್ನು ಕೊಡುತ್ತಾನೆ.
ಲೋಕ ಕಲ್ಯಾಣಕ್ಕೋಸ್ಕರ ನಿನ್ನ ಈ ಮದುವೆ ಅಷ್ಟೇ. ಮುಂದೆ ನೀನು ಬ್ರಹ್ಮನಾದಾಗ ನಿನ್ನ “ವಾಣಿ” ಯಾಗುತ್ತಾಳೆ . ನನ್ನ ಮಗಳು ಅಂತ ಹೇಳುತ್ತಾನೆ. ಸೂರ್ಯದೇವ ಅದಕ್ಕೆ ಹನುಮಂತನು ಒಪ್ಪಿಕೊಳ್ಳುತ್ತಾನೆ. ಮದುವೆಯಾದ ಮರುಕ್ಷಣವೇ ಸುವರ್ಚಲಾ ದೇವಿ ತಪಸ್ಸಿಗೆ ಹೊರಟು ಹೋಗುತ್ತಾಳೆ.ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲಾ ದೇವಿ ಮತ್ತು ಹನುಮಂತನ ಮದುವೆ ಆಗುತ್ತದೆ. ಇಂದಿಗೂ ದಕ್ಷಿಣ ಭಾರತದಲ್ಲಿ ಈಕೆಯನ್ನು ಪೂಜೆ ಮಾಡುತ್ತಾರೆ. ತೆಲಂಗಾಣದ ಹೈದರಾಬಾದಿನಲ್ಲಿ ಸುವರ್ಚಲಾ ದೇವಿಯ ದೇವಸ್ಥಾನ ನೆಲೆಸಿದೆ.ಹೈದರಾಬಾದಿನಿಂದ ಇನ್ನೂರ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುವರ್ಚಲಾ ದೇವಿಯ ದೇವಸ್ಥಾನವಿದೆ. ಈ ದೇವಿ ಮತ್ತು ಹನುಮಂತನನ್ನು ಈ ರೂಪದಲ್ಲಿ ಪೂಜೆ ಮಾಡಿದರೆ ಯಾವತ್ತೂ ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಬರದೇ ಜೀವನ ಪೂರ್ತಿ ಸಂಸಾರದಲ್ಲಿ ಖುಷಿಯಾಗಿ ಇರುತ್ತಾರಂತೆ. ಹೀಗಿದೆ ಹನುಮಂತನು ಮದುವೆಯಾದ ಸುವರ್ಚಲಾ ದೇವಿಯ ಕಥೆ ಮತ್ತು ಮಹಿಮೆ ಕೇಳಿ. ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ಮತ್ತು ಸುಖವಾದ ಸಂಸಾರ ಜೀವನಕ್ಕೆ ಈ ದೇವಿಯ ದರ್ಶನವನ್ನು ಅವಶ್ಯವಾಗಿ ಮಾಡಿ.
*******


Very Very Very Rare Photo of Shree Hanuman and His wife Suvarchala Devi.

You won't see this kind of Murthi anywhere. The temple is @khammam, 220Km from Hyderabad.

Suvarchala Devi is Daughter of Lord Surya and Lord Hanuman Married her and Immediately she went for Japa on Jeystha Shuddha Dashami... By conducting Jeystha Devi Pooja, significance and belief is that, any Matrimonial issues easily get resolved here by visiting this temple.... 🙏🙏🙏

Hanuman is technically not a bachelor (Brahmachari). His wife was Suvarchala who was the daughter of Surya (the Sun god). According to Surya, Suvarchala was an ayonija (born without [the participation] of the yoni).

Because he wanted to learn Nava Vyakarnas (the 9 Grammar Rules), he has to marry, and being an Aajanma Brahmachari (life-long bachelor), Hanuman was not eligible to study it. Surya grants him a boon that he will still be a bachelor even after marriage as a Prajapatya Brahmachari and will maintain his celibacy.
*******

ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ,
ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ,
ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ,
ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ...

ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ #ಅಂಜನಾದ್ರಿ_ಬೆಟ್ಟ ಮತ್ತು ಆಂಜನೇಯ  ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ 
ಸೂರ್ಯಪುರಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಅಂಜನಾದ್ರಿ ಬೆಟ್ಟ ಮತ್ತು ಸೂರ್ಯಪುರಕ್ಕೆ ಬರಬೇಕು.
ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಈ ಸ್ಥಳದ ಬಗ್ಗೆ ಗೊತ್ತಿಲ್ಲ, ಆಂಜನೇಯನ ಜನ್ಮಸ್ಥಳ  ಮತ್ತು ವಿದ್ಯೆ ಕಲಿತ ಸ್ಥಳ ಎಲ್ಲರಿಗೂ ತಿಳಿಯುವಂತಹ ಕೆಲಸ ಆಗಬೇಕು, ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಸ್ವಲ್ಪ ಇದರ ಬಗ್ಗೆ ಗಮನಹರಿಸಬೇಕು. ದೇಶದೆಲ್ಲೆಡೆಯಿಂದ ಭಕ್ತರು ಬರುವಂತಾಗಲಿ.
ಜೈ ಆಂಜನೇಯ,ಜೈ ಸೂರ್ಯಾಂಜನೇಯ..  ಪ್ರತಿ ವರ್ಷ ಸೂರ್ಯ ಹುಟ್ಟಿದ ದಿನವನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ರಥಸಪ್ತಮಿ ದಿನ  ಸೂರ್ಯಪುರದಲ್ಲಿ ರಥೋತ್ಸವ ಜರುಗುತ್ತದೆ ಅಂದು ಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ  ಬರುತ್ತಾರೆ. ಸುಂದರ ಪ್ರಕೃತಿಯ ನಿಸರ್ಗದ ತಾಣ  ಸೂರ್ಯಪುರ ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ. ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ.ಮದುವೆ ಮುಂತಾದ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ. ಭಕ್ತರಿಗೆ ಪ್ರತಿದಿನ  ಟ್ರಸ್ಟ್ ವತಿಯಿಂದ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು,ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.
ಸೂರ್ಯಪುರ ಇಲ್ಲಿಗೆ ಬರುವ ಭಕ್ತರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ವೀಕ್ಷಿಸಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura mutt
ಸೂರ್ಯಪುರ ಮಠ 
ಇದು ತುಮಕೂರು ಇಲ್ಲಿಂದ 24. ಕಿ.ಮೀ ಮತ್ತು ಬೆಂಗಳೂರು ಇಲ್ಲಿಂದ 60 ಕಿ.ಮೀ.ದೂರದಲ್ಲಿ ಇದೆ. ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ  ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ. ಎಲ್ಲಾ ಹಿಂದೂಗಳು ಸೂರ್ಯಾಂಜನೇಯ ಸ್ವಾಮಿ ದರ್ಶನ ಪಡೆದು,ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಪಡೆಯಿರಿ. ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮದ ಮೊಬೈಲ್ ಸಂಖ್ಯೆ 9448270327 ಮತ್ತು 9008335288. ಸಂಪರ್ಕಿಸಬಹುದು.ಪ್ರತಿಯೊಬ್ಬ ಹಿಂದುವಿಗೂ ತಲುಪುವಂತೆ ಶೇರ್ ಮಾಡಿ.

No comments:

Post a Comment