SEARCH HERE

Monday 30 September 2019

vishweshwarayya sir mokhagundam ಸರ್ ಎಂ ವಿಶ್ವೇಶ್ವರಯ್ಯ








Can a man accomplish these many things in one life ??

 1. Krishnaraja Sagar Dam
 2. Establishment of Maharani College, Bangalore
 3. NIMHANS Hospital, Bangalore
 4. Minto Hospital, Bangalore
 5. K. R. Market, Bangalore
  6. Banaras Hindu College, co-founder
 7. Indian Institute of Science, Bangalore
 8. Shivanasamudra Hydroelectric Project
 9. Vanivilasa Dam, Chitradurga
 10. Establishment of State Bank of Mysore
 11. Establishment of Kannada Sahitya Parishad
12. Establishment of Mysore University
 13. Establishment of Bangalore University (UVCE)
 14. Yuvaraja College Mysore 
 15. Mysore State Railway
 16. Mysore Medical College
 17 Bangalore Town Hall
 18. Vanivilas Women's and Children's Hospital
 19. Mandya District Formation
 20. Installation of street lights in Bengaluru, first of it in the country
 21. Establishment of Vishweshwaraiah Iron and Steel Factory, Bhadravati
 22. Establishment of the Church of Saint Philomena
 23. Establishment of Lalitha Mahal Palace
 24. Establishment of Hirebhaskar Dam across Sharavati River
 25. Promotion of girl child education and scholarship for widowed girls
 26. Prohibition of child marriage
 27. Establishment of Vishweshwaraiah canal
 28. Establishment of Mysore Residential Agricultural School
 29. Establishment of Mysore Social Progress Association
 30. Establishment of Maharani Women's Science College, Mysore
 31. Wood Distillation Factory, Bhadravati Establishment
 32. Mysore Chrome and Tanning Factory
 33. Government Science College, Bangalore
 34. Establishment of Krishnarajanagar Town
 35. Establishment of Krishna Rajendra Hospital, Mysore
 36. Establishment of the Mysore Legislative Council to utilize the knowledge of the society for the benefit of the Government
 37. Establishment Mysore Boys Scouts , first of it's kind in the country
 38. Establishment of Government Sandalwood Oil Factory
 39. Chamber of Commerce, Mysore
40. Mysore sugar mills , Mandya
41. Mysore lamps , Bangalore
42. Mysore Paper Mills , Bhadravathi
43. Land for Raman Research Institute ( RRI )
44. Mysore Chemical & Fertilizers Factory
45. Glass & Porcelain factory , Bangalore 
46. City Improvement Trust Board - first of it's kind in India
47. Establishment of Mysore Paints & Varnishes Ltd 
 Etc ...

Yes ... 
🔹The great administrator in the history of Karnataka and India
 🔹the king of many firsts
🔹 the Maharaja who ascended the throne of the Mysore state in his 11th year
🔹 the 2nd richest king of the country at that time  


Remembering & Crores of salutes
**********


ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ಸಾಧನೆಗಳನ್ನೂ ಮಾಡಬಹುದಾ ??

1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
 6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು ,  ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ 
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ 
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್ 
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ  ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್
26. ಬಾಲ್ಯವಿವಾಹ ನಿಷೇಧ
27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ
28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ
29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ 
30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ
31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ
32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ
33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು
34. ಕೃಷ್ಣರಾಜನಗರ ಟೌನ್ ಸ್ಥಾಪನೆ
35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ
36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ
37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ
38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ
39.ಚೇಂಬರ್ ಆಫ್ ಕಾಮರ್ಸ್ , ಮೈಸೂರು
40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ
41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು
42. ಮೈಸೂರ್ ಪೇಪರ್ ಮಿಲ್ಸ್ , ಭದ್ರಾವತಿ
43. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ
44. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ
45. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ , ಬೆಂಗಳೂರು
46. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ - ದೇಶದಲ್ಲೇ ಮೊದಲು
47. ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ
ಮುಂತಾದವು ...

ಯೆಸ್ ... 
🔸ಕರ್ನಾಟಕ ಹಾಗೂ ಭಾರತ ಕಂಡ ಅದ್ಭುತ ಆಡಳಿತಗಾರ 
🔸 ಹಲವಾರು ಪ್ರಪ್ರಥಮಗಳ ಸರದಾರ 
🔸 ತನ್ನ 11ನೇ ವರ್ಷದಲ್ಲಿ ಮೈಸೂರು ರಾಜ್ಯದ ಸಿಂಹಾಸನ ಏರಿದ ಮಹಾರಾಜ
🔸ದೇಶದ ಆಗಿನ ಸಮಯದ 2ನೇ ಶ್ರೀಮಂತ ರಾಜ 
ಶ್ರೀ #ನಾಲ್ವಡಿಕೃಷ್ಣರಾಜಒಡೆಯರ್ ಅವರ ಜನ್ಮದಿನದಂದು ಅವರ ಸ್ಮರಣೆ ಹಾಗೂ ಕೋಟಿ ಕೋಟಿ ನಮನಗಳು. 
ಮೈಸೂರು  ನಾಲ್ವಡಿ  ಕೃಷ್ಣರಾಜ ಒಡೆಯರ್  ಹೆಮ್ಮೆಯ  ಅಭಿಮಾನಿಗಳು 
********

ಪ್ರಾತಃಸ್ಮರಣೀಯರೀ ಸರ್.ಎಂ.ವಿಶ್ವೇಶ್ವರಯ್ಯ  ಇಂದು ಕನ್ನಡನಾಡಿನ ಹೆಮ್ಮೆಯ ಪುತ್ರ ಸರ್.ಎಂ.ವಿ. ಜನ್ಮ ದಿನ, ಅವರನ್ನು ಸ್ಮರಿಸುವುದು ನಮ್ಮ ಸೌಭಾಗ್ಯವೇ ಸರಿ...
*ಟಿ.ಎಂ. ಸತೀಶ್
ಇಂದಿಗೂ ಯಾರನ್ನಾದರೂ ಜಗತ್ತಿನ ಶ್ರೇಷ್ಠ ಎಂಜಿನಿಯರ್ ಯಾರು ಎಂದು ಕೇಳಿದರೆ ಮೊದಲು ಹೇಳುವ ಹೆಸರೇ ಸರ್.ಎಂ. ವಿಶ್ವೇಶ್ವರಯ್ಯ (ಮೋಕ್ಷಗುಂಡಂ ವಿಶ್ವೇಶ್ವರಾಯ) ಅವರದು. ಇಂದು ದೇಶಾದ್ಯಂತ ಕೋಟ್ಯಂತರ ಎಂಜಿನಿಯರುಗಳಿದ್ದಾರೆ, ಆದರೂ ವಿಶ್ವೇಶ್ವರಯ್ಯ ಅವರ ಹೆಸರನ್ನೇ ನಾವು ಹೇಳುತ್ತೇವೆ ಎಂದರೆ ಅವರು ಮೂಡಿಸಿರುವ ಅದ್ಬುತ ಛಾಪು ಎಂಥಹದ್ದು ಎಂಬುದು ವೇದ್ಯವಾಗುತ್ತದೆ.
ಯುಗಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಆಧುನಿಕ ಬದಲಾವಣೆಗಳಿಗೆ ನೇರವಾಗಿ ಸ್ಪಂದಿಸುತ್ತಿದ್ದ ವಿಶ್ವೇಶ್ವರಯ್ಯನವರು ನವಭಾರತದ ಶಿಲ್ಪಿ ಎಂದೇ ಖ್ಯಾತರಾಗಿದ್ದಾರೆ. ಭಾರತದ ಉನ್ನತಿಗಾಗಿ ಅನವರತ ದುಡಿದ ವಿಶ್ವೇಶ್ವರಯ್ಯನವರನ್ನು ನಾವೆಲ್ಲಾ ನಿತ್ಯ ನೆನೆಯಲೇ ಬೇಕು. ಸರ್‌ಎಂವಿ ಪ್ರಾತಃಸ್ಮರಣೀಯ ವ್ಯಕ್ತಿ. ಅವರು ಪ್ರಾತಃಸ್ಮರಣೀಯರಷ್ಟೇ ಅಲ್ಲ. ಸಂಧ್ಯಾ ಸ್ಮರಣೀಯರು ಕೂಡ.
ಇಂದು ನಮ್ಮ ಮನೆಗಳಲ್ಲಿ ವಿದ್ಯುತ್ ದೀಪ ಬೆಳಗುತ್ತಿದ್ದರೆ ಅದರ ಹಿಂದೆ ಸರ್.ಎಂ.ವಿ. ಅವರ ಕೊಡುಗೆ ಇದೆ. ಇಂದು ಕೈಗಾರಿಕೆಗಳ ಗಾಲಿ ವಿದ್ಯುಚ್ಛಕ್ತಿಯಿಂದ ಉರುಳುತ್ತಿದ್ದರೆ ಅದಕ್ಕೆ ಕಾರಣ ಸರ್‌ಎಂವಿ ಅವರೇ. 
ಇದು ಒಂದು ಶತಮಾನದಷ್ಟು ಹಿಂದಿನ ಮಾತು. ಇಂದು ಕೋಟ್ಯಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ವಿಶ್ವವಿಖ್ಯಾತ ಜೋಗ ಜಲಪಾತ, ಆಗ ಆನೆಬೈಲು ಎಂದು ಹೆಸರಾಗಿತ್ತು. ಅದೊಂದು ದುರ್ಗಮ ಅರಣ್ಯ ಪ್ರದೇಶ. ಇಲ್ಲಿ ಎತ್ತರದಿಂದ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿತ್ತು. ಈ ಪ್ರದೇಶಕ್ಕೆ ಒಮ್ಮೆ ನವ ಕರ್ನಾಟಕದ ಶಿಲ್ಪಿ ವಿಶ್ವೇಶ್ವರಯ್ಯ ಭೇಟಿಕೊಟ್ಟಿದ್ದರು. ಆನೆ ಬೈಲಿನ ಮನಮೋಹಕ ಪ್ರಕೃತಿ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡ ಅವರು, ಅಯ್ಯೋ... ಎಷ್ಟೊಂದು ವ್ಯರ್ಥ. ನ್ಯಾಷನಲ್ ವೇಸ್ಟ್ ಎಂದು ಮರುಗಿದರಂತೆ.
ಆ ಉದ್ಘಾರವೇ ಜೋಗದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಕಾರಣವಾಯಿತು. ಅಂದು ವಿಶ್ವೇಶ್ವರಯ್ಯನವರು ಆನೆಬೈಲಿಗೆ ಹೋಗದಿದ್ದಿದ್ದರೆ, ಇಂದು ಜೋಗ ವಿಶ್ವಖ್ಯಾತಿಯನ್ನೂ ಪಡೆಯುತ್ತಿರಲಿಲ್ಲ. ಕರ್ನಾಟಕ ವಿದ್ಯುತ್ ಸಮಸ್ಯೆಯಿಂದ ಮುಕ್ತವೂ ಆಗುತ್ತಿರಲಿಲ್ಲ. ಹೀಗಾಗೆ ನಾವು ನಿತ್ಯ ಸಂಜೆ ದೀಪ ಹಚ್ಚುವಾಗ ವಿಶ್ವೇಶ್ವರಯ್ಯನವರನ್ನು ಸ್ಮರಿಸಲೇಬೇಕಲ್ಲವೇ.
ವಿಶ್ವೇಶ್ವರಯ್ಯನವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. 1861ರ ಸೆಪ್ಟೆಂಬರ್ 15ರಂದು. (27-08-1860 ಎಂದೂ ಕೆಲವು ಕಡೆ ಉಲ್ಲೇಖವಿದೆ) ಇವರ ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಾಯ. ತಂದೆ ಶ್ರೀನಿವಾಸಶಾಸ್ತ್ರೀ, ಘನ ವಿದ್ವಾಂಸರು, ಸಂಸ್ಕೃತ ಪಂಡಿತರು. ತಾಯಿ ವೆಂಕಚ್ಚಮ್ಮ (ವೆಂಕಟಲಕ್ಷ್ಮಮ್ಮ)
ಗುಣಶ್ರೀಮಂತಿಕೆಯ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ವಿಶ್ವೇಶ್ವರಯ್ಯನವರು ಓದಿದ್ದೆಲ್ಲಾ ಬೀದಿ ದೀಪದ ಕೆಳಗೆ. ವೆಸ್ಲಿಯನ್ ಕಾಲೇಜ್, ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ. ಕಾಲೇಜಿನ ಫೀಸ್, ಪುಸ್ತಕಕ್ಕಾಗಿ ಶ್ರೀಮಂತರ ಮನೆ ಮಕ್ಕಳಿಗೆ ಪಾಠ ಹೇಳುತ್ತಿದ್ದ ವಿಶ್ವೇಶ್ವರಯ್ಯನವರು ಅರ್ನ್ ವೈಲ್ ಯು ಲರ್ನ್ ಸಂದೇಶವನ್ನು ಯುವಕರಿಗೆ ಕಲಿಸಿಕೊಟ್ಟರು. 1880ರಲ್ಲಿ ಪದವಿ ಪಡೆದು, ಪುಣೆಯಲ್ಲಿ ಎಂಜಿನಿಯರಿಂಗ್ ಕಲಿತ ಅವರು ಮುಂಬಯಿ ಸರ್ಕಾರದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಇವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿದ ಲಂಡನ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಎಂಜಿನಿಯರ್ಸ್ ಸಂಸ್ಥೆ ಇವರಿಗೆ ಗೌರವ ಸದಸ್ಯತ್ವವನ್ನೂ ನೀಡಿತು. 
ವಿಶ್ವೇಶ್ವರಯ್ಯನವರು ಆವಿಷ್ಕರಿಸಿದ ಜಲ ನಿಯಂತ್ರಕ ಬಾಗಿಲುಗಳು ವಿಶ್ವದ ಗಮನ ಸೆಳೆದವು. ಏಡನ್ ನಗರಕ್ಕೆ ನೀರು ಪೂರೈಸಲು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆ ಸಂಪೂರ್ಣ ಯಶಸ್ವಿಯಾಯಿತು. ಆಂಧ್ರಪ್ರದೇಶದ ಮೂಸಿ ಮತ್ತು ಇಯಾಸಿ ನದಿಗಳಿಂದ ಎದುರಿಸುತ್ತಿದ್ದ ಪ್ರವಾಹದ ಸಮಸ್ಯೆಗೂ ಸರ್‌ಎಂವಿ ಪರಿಹಾರ ಸೂಚಿಸಿದರು. 
ಇವರ ಖ್ಯಾತಿ ವಿಶ್ವವ್ಯಾಪಿಯಾದಾಗ, ಕರುನಾಡ ಮಣ್ಣಿನ ಮಗ ಅನ್ಯ ರಾಷ್ಟ್ರದಲ್ಲಿ ಇರುವುದು ಸೂಕ್ತವಲ್ಲ. ಇಂಥ ಮಹಾನ್ ಪ್ರತಿಭೆಯ ಪ್ರಯೋಜನ ರಾಜ್ಯಕ್ಕೆ ಸಿಗಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರು ಅವರನ್ನು ತವರಿಗೆ ಬರಮಾಡಿಕೊಂಡು ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಆಗಿ ನೇಮಿಸಿದರು. 1912ರಲ್ಲಿ ಅವರನ್ನು ಮೈಸೂರು ಸಂಸ್ಥಾನದ ದಿವಾನರನ್ನಾಗಿ ನೇಮಿಸಿದರು. 
ವಿಶ್ವೇಶ್ವರಯ್ಯನವರು ಕೇವಲ ಎಂಜಿನಿಯರ್ ಅಷ್ಟೇ ಅಲ್ಲ ಉತ್ತಮ ಆಡಳಿತಗಾರರು, ವಿಜ್ಞಾನಿ, ಕೈಗಾರಿಕೋದ್ಯಮಿ, ಶಿಕ್ಷಣ ತಜ್ಞ., ಅರ್ಥಶಾಸ್ತ್ರಜ್ಞ... ಸರ್‌ ಎಂವಿ ವಿವಿಧ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನುಪಮ. ಸರ್‌ ಎಂವಿ ಕಾಲಾವಧಿಯಲ್ಲಿ ಸಿಮೆಂಟ್ ಕಾರ್ಖಾನೆ, ಕಾಗದದ ಕಾರ್ಖಾನೆ, ಗಂಧದೆಣ್ಣೆಯ ಕಾರ್ಖಾನೆ, ಸೋಪು ಮತ್ತು ಮಾರ್ಜಕ ಕಾರ್ಖಾನೆ, ಪಾಲಿಟೆಕ್ನಿಕ್, ಎಣ್ಣೆ ಗಿರಣಿ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ನೂರಾರು ಕಾರ್ಖಾನೆಗಳು ಕರ್ನಾಟಕದಲ್ಲಿ ತಲೆ ಎತ್ತಿದವು. ಸಹಸ್ರಾರು ಜನರಿಗೆ ಉದ್ಯೋಗ ಕಲ್ಪಿಸಿದವು. ರಾಜ್ಯದ ಆರ್ಥಿಕ ನಕ್ಷೆಯೇ ಇವರ ಕಾಲದಲ್ಲಿ ಸಂಪೂರ್ಣ ಬದಲಾಯ್ತು. ಮೈಸೂರು ಸಂಸ್ಥಾನ ಮಾದರಿ ದೇಶ ಎಂಬ ಹೆಸರೂ ಪಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿದ್ದೂ ಇವರ ಕಾಲದಲ್ಲೇ. ಎಲ್ಲಕ್ಕಿಂತ ಮಿಗಿಲಾಗಿ ವ್ಯರ್ಥವಾಗಿ ಹರಿಯುತ್ತಿದ್ದ ಕರುನಾಡ ಜೀವನದಿ ಕಾವೇರಿಗೆ ಕನ್ನಂಬಾಡಿ ಕಟ್ಟೆ ಕಟ್ಟಿಸದಿದ್ದರೆ ಮಂಡ್ಯ ಬಂಗಾರ (ಕಬ್ಬು)ಬೆಳೆವ ನಾಡೇ ಆಗುತ್ತಿರಲಿಲ್ಲ. ಬೆಂಗಳೂರು ನಗರವಾಸಿಗಳಿಗೆ ಕುಡಿಯಲೂ ನೀರು ಸಿಗುತ್ತಿರಲಿಲ್ಲ . 
ಮಹಾನ್ ಕನ್ನಡಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1913ರಲ್ಲಿಯೇ ಕನ್ನಡವನ್ನು ಆಡಳಿತ ಭಾಷೆ ಎಂದು ಘೋಷಿಸಿದ್ದರು. ಅವರ ಆಡಳಿತಾತ್ಮಕ ವಿಚಾರಧಾರೆ ನಿಜಕ್ಕೂ ಮೆಚ್ಚುವಂಥದ್ದು. 14.4.1962ರವರೆಗೆ ನೂರು ವರ್ಷಗಳ ತುಂಬು ಜೀವನ ನಡೆಸಿದ ವಿಶ್ವೇಶ್ವರಯ್ಯನವರು ಕನ್ನಡ ನಾಡಿನ ಹೆಮ್ಮೆ.

ಪ್ರಾಮಾಣಿಕತೆಯ ಪ್ರತೀಕ...
ಪ್ರಾಮಾಣಿಕತೆ, ಕರ್ತವ್ಯ ಪರತೆ, ಅಪರಿಮಿತ ಜ್ಞಾನ, ಜನಪರ ಕಾಳಜಿ, ನಿಷ್ಠೆ, ಬದ್ಧತೆಗಳು ವಿಶ್ವೇಶ್ವರಯ್ಯ ಅವರನ್ನು ಪ್ರಾತಃಸ್ಮರಣೀಯರನ್ನಾಗಿ ಮಾಡಿದೆ. ವಿಶ್ವೇಶ್ವರಯ್ಯನವರ ಬದುಕಿನ ಕೆಲವು ಘಟನೆಗಳು ಅವರ ದೊಡ್ಡತನವನ್ನು ಸಾರಿ ಸಾರಿ ಹೇಳುತ್ತವೆ. ನಾನು ಬಾಲ್ಯದಲ್ಲಿ ಓದಿದ, ಹಿರಿಯರಿಂದ ಕೇಳಿದ ಕೆಲವೊಂದು ಅಂಥ ಅಪರೂಪದ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
ಒಮ್ಮೆ ವಿಶ್ವೇಶ್ವರಯ್ಯನವರು ಕರ್ತವ್ಯದ ನಿಮಿತ್ತ ಮೈಸೂರಿನಿಂದ ಬೇರೆ ಊರಿಗೆ ಹೋಗಿದ್ದರಂತೆ. ಅಲ್ಲಿ ಒಂದು ಮನೆಯಲ್ಲಿ ಬೀಡು ಬಿಟ್ಟಿದ್ದರು. ರಾತ್ರಿ ಮೇಣದ ಬತ್ತಿಯ ಬೆಳಕಲ್ಲಿ ಕಾಗದ ಪತ್ರ ನೋಡುತ್ತಿದ್ದರಂತೆ. ಅದೇ ಸಮಯದಲ್ಲಿ ಅವರ ಬಂಧುವೊಬ್ಬರು ವಿಶ್ವೇಶ್ವರಯ್ಯ ಅವರನ್ನು ಕಾಣಲು ಬಂದರಂತೆ. ಆಗ ಸರ್. ಎಂ.ವಿ. ಸ್ವಲ್ಪ ಹೊತ್ತು ಕುಳಿತುಕೊಳ್ಳಿ.. ನಾನು ಆಸ್ಥಾನದ ಕಾಗದ ಪತ್ರ ನೋಡುತ್ತಿದ್ದೇನೆ. ಆ ಕೆಲಸ ಮುಗಿದ ಬಳಿಕ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದರಂತೆ. ಸರಿ ಅವರ ಬಂಧು ಕಾಯುತ್ತಾ ಕುಳಿತರು.
ಸ್ವಲ್ಪ ಸಮಯದ ಬಳಿಕ ವಿಶ್ವೇಶ್ವರಯ್ಯನವರು ತಮ್ಮ ಕೋಟಿನ ಜೇಬಿನಿಂದ ಮತ್ಮೊಂದು ಮೇಣದಬತ್ತಿ ತೆಗೆದು ಅದನ್ನು ಮೊದಲೇ ಉರಿಯುತ್ತಿದ್ದ ಮೇಣದ ಬತ್ತಿಯಿಂದ ಹೊತ್ತಿಸಿ, ಮೊದಲು ಉರಿಯುತ್ತಿದ್ದ ಮೇಣದ ಬತ್ತಿ ಆರಿಸಿ, ಜೇಬಿಗೆ ಇಟ್ಟುಕೊಂಡರಂತೆ. ವಿಶ್ವೇಶ್ವರಯ್ಯನವರ ಈ ವರ್ತನೆ ಬಂಧುವಿಗೆ ವಿಚಿತ್ರವಾಗಿ ಕಾಣಿಸಿತು. ಧೈರ್ಯಮಾಡಿ ಕೇಳಿಯೇ ಬಿಟ್ಟರಂತೆ.
ಅಲ್ಲ, ಮೊದಲೇ ಉರಿಯುತ್ತಿದ್ದ ಮೇಣದ ಬತ್ತಿಯಲ್ಲಿ ಮತ್ತೊಂದು ಮೇಣದ ಬತ್ತಿ ಬೆಳಗಿಸಿದಿರಿ, ಅದನ್ನು ನಂದಿಸಿ, ಜೇಬಿಗಿಟ್ಟಿರಿ. ಏನಿದು ನಿಮ್ಮ ವರ್ತನೆ ಇಷ್ಟು ವಿಚಿತ್ರವಾಗಿದೆ. ಆ ಮೇಣದ ಬತ್ತಿಯೂ ಬೆಳಕು ಕೊಡುತ್ತಿತ್ತಲ್ಲ ಎಂದರಂತೆ. ಆಗ ವಿಶ್ವೇಶ್ವರಯ್ಯನವರು, ನೋಡಪ್ಪ, ನಾನು ಇಷ್ಟು ಹೊತ್ತು ಸರ್ಕಾರದ ಅಂದರೆ ಆಸ್ಥಾನದ ಕಾರ್ಯ ಮಾಡುತ್ತಿದ್ದೆ. ಅದಕ್ಕಾಗಿ ಆಸ್ಥಾನ ನನಗೆ ಕೊಟ್ಟಿದ್ದ ಮೇಣದ ಬತ್ತಿ ಹಚ್ಚಿ ಅದರ ಬೆಳಕಲ್ಲಿ ಕೆಲಸ ಮಾಡುತ್ತಿದ್ದೆ. ನೀವು ನನ್ನ ಬಂಧು ವೈಯಕ್ತಿಕವಾಗಿ ನನ್ನನ್ನು ನೋಡಲು ಬಂದಿದ್ದೀರಿ. ಇದು ನನ್ನ ಸ್ವಂತ ಕೆಲಸಕ್ಕೆ ಸಂಸ್ಥಾನದ ಹಣದಲ್ಲಿ ಖರೀದಿಸಿದ ಮೇಣದ ಬತ್ತಿಯನ್ನು ಬಳಸುವುದು ಧರ್ಮವಲ್ಲ ಎಂದರಂತೆ. ಇದಲ್ಲವೇ ಪ್ರಾಮಾಣಿಕತೆ. ಇದು ಎಲ್ಲರಿಗೂ ಆದರ್ಶ ಅಲ್ಲವೇ. 
ಮೈಸೂರು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ಮನೆಯ ಪಡಸಾಲೆಯಲ್ಲೊಂದು ಗಾಜಿನ ಕಪಾಟು ಇಟ್ಟಿದ್ದರಂತೆ. ಕಪಾಟಿನ ತುಂಬಾ ಮಹಾಭಾರತ, ರಾಮಾಯಣ, ಕುಮಾರವ್ಯಾಸ ಭಾರತ, ವಿಜ್ಞಾನ, ಜ್ಯೋತಿಷ್ಯ, ಇತಿಹಾಸ, ಭಾಷಾಶಾಸ್ತ್ರ, ವಾಸ್ತುಶಾಸ್ತ್ರ, ಲಕ್ಷಣ ಗ್ರಂಥಗಳ ಅಮೂಲ್ಯ ಸಂಗ್ರಹವೇ ಇತ್ತಂತೆ.
ಒಮ್ಮೆ ಸರ್‌ ಎಂವಿ ಅವರ ಮನೆಗೆ ಬಂದ ಆತ್ಮೀಯ ಗೆಳೆಯರೊಬ್ಬರು ವಿಶ್ವೇಶ್ವರಯ್ಯನವರನ್ನು ಕೇಳಿದರಂತೆ. ‘ಅಲ್ಲಾ... ನೀವು ಈ ಮೈಸೂರು ಸಂಸ್ಥಾನದ ದಿವಾನರು, ಕೈತುಂಬಾ ಕೆಲಸ, ಸದಾ ದೇಶದ ಬಗ್ಗೆ - ಅಭಿವೃದ್ಧಿಯ ಬಗ್ಗೆ ಚಿಂತಿಸುವ ನಿಮಗೆ ಕಾರ್ಯಭಾರಗಳ ನಡುವೆ ಇಷ್ಟೆಲ್ಲಾ ಪುಸ್ತಕ ಓದಲು ಸಮಯವೆಲ್ಲಿ ಸಿಗುತ್ತದೆ’. 
ವಿಶ್ವೇಶ್ವರಯ್ಯನವರು ಹೇಳಿದರಂತೆ ‘ಸಮಯ ಸಿಗುವ ವಸ್ತುವಲ್ಲ. ನಾವೇ ಇರುವ ಕಾಲದಲ್ಲಿ ಪುಸ್ತಕ ಓದಿಗೆ ಒಂದಿಷ್ಟು ಕಾಲಾವಕಾಶ ಮಾಡಿಕೊಳ್ಳಬೇಕು. ಪುಸ್ತಕ ಓದುವ ಆಸಕ್ತಿ ಇದ್ದರೆ ಸಮಯಮಾಡಿಕೊಳ್ಳುವುದು ಖಂಡಿತಾ ಕಷ್ಟವೇನಲ್ಲ. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ, ಅದು ನಾವು ತಲೆ ಎತ್ತಿ ಬದುಕುವಂತೆ ಮಾಡುತ್ತದೆ’
ಮಿಗಿಲಾಗಿ, ನಿತ್ಯ ನನ್ನನ್ನು ಕಾಣಲು ನೂರಾರು ಜನ ಬರುತ್ತಾರೆ. ನಾನು ಒಬ್ಬರೊಂದಿಗೆ ಮಾತನಾಡುತ್ತಿದ್ದಾಗ, ಉಳಿದವರು ಕಾಯುವುದು ಅನಿವಾರ್ಯ ಹೀಗೆ ನನ್ನನ್ನು ಕಾಣಲು ಬರುವ ಮಂದಿ ವ್ಯರ್ಥ ಕಾಲಹರಣ ಮಾಡದೆ, ಈ ಕಾಯುವ ಸಮಯದಲ್ಲಿ ಗ್ರಂಥ ಸಂಗ್ರಹದತ್ತ ಕಣ್ಣು ಹಾಯಿಸಿ, ಕನ್ನಡದಲ್ಲಿ ಎಷ್ಟೊಂದು ಅಮೂಲ್ಯ ಕೃತಿಗಳಿವೆ ಎಂಬ ವಿಚಾರ ತಿಳಿಯಲಿ, ಸಾಧ್ಯವಾದರೆ ಒಂದು ಅಧ್ಯಾಯವನ್ನಾದರೂ ಓದಲಿ ಎಂದೇ ಈ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದರಂತೆ. ಯಾರೊಬ್ಬರ ಸಮಯವೂ ವ್ಯರ್ಥವಾಗಬಾರದು ಅದು ಸದುಪಯೋಗವಾಗಬೇಕು ಎಂಬ ಅವರ ನಿಲುವು ಅನುಕರಣೀಯ ಅಲ್ಲವೇ.? (ಗೆಳೆಯರೊಬ್ಬರ ಮನೆಯಲ್ಲಿ ಕಂಡ ಈ ಅಪರೂಪದ ಫೋಟೋವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಂಗ್ರಹಿಸಿಲಾಗಿದೆ)


***



4 ಜೂನ್… ಇವತ್ತು ನಾಲ್ವಡಿ ಕೃಷ್ಣರಾಜರ ಜನ್ಮದಿನ. ಹನ್ನೊಂದನೇ ವಯಸ್ಸಿನಲ್ಲಿ ಗದ್ದುಗೆ ಏರಿದ ಇವರು ತಮ್ಮ ನಲವತ್ತಾರು ವರ್ಷಗಳ ಆಡಳಿತದಲ್ಲಿ ಸಾಧಿಸಿದ ಹಲವಾರು ಮೈಲುಗಲ್ಲುಗಳ ಪಟ್ಟಿ ಹೀಗಿದೆ.

1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು ,  ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ 
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ 
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್ 
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ  ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25.

No comments:

Post a Comment