SEARCH HERE

Saturday 14 September 2019

ಮಾಟ ಮಂತ್ರ ತಟ್ಟೋದಿಲ್ಲ


ಮಾಟ Mata maata

ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ಮಾಡಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣಕಾಸಿನ ಸಮಸ್ಯೆ, ಸಂಬಂಧದಲ್ಲಿ ಅಶಾಂತಿ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ನಿಮ್ಮ ಮೇಲೆ ಮಾಟಮಂತ್ರ ಪ್ರಯೋಗವಾಗಿದೆ ಎಂಬುದು ಖಚಿತವಾದರೆ ಚಿಂತಿಸಬೇಡಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ.

ನೈವೇದ್ಯ  ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು ಬಹಳ ಬೇಗ ನಿವಾರಣೆಯಾಗಿ ಸುಖವಾಗಿರುತ್ತೀರಿ.

ಸರಳ ಪರಿಹಾರ 🙏🙏🙏



ಇತ್ತೀಚಿನ ದಿನಗಳಲ್ಲಿ ಎಲ್ಲರೂ ವ್ಯಾಪಾರ ಮಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಆದರೆ ವ್ಯಾಪಾರ ಮಾಡುವವರೆಲ್ಲರೂ ಲಾಭ ಗಳಿಸಲು ಆಗುದಿಲ್ಲ. ಅಂತವರು ತಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಈ ರೀತಿ ಸರಳ ಪರಿಹಾರ ಮಾಡಿಕೊಳ್ಳಿ.

ಗೂಬೆ ಲಕ್ಷ್ಮೀದೇವಿಯ ವಾಹನ. ಅದು ಲಕ್ಷ್ಮೀದೇವಿಗೆ ಪ್ರಿಯವಾದುದ್ದು ಕೂಡ. ಆದ್ದರಿಂದ ಶುಕ್ರವಾರ ಅಥವಾ ಪೌರ್ಣಮಿಯ ದಿನ ಗೂಬೆಯ ಗೊಂಬೆ ಅಥವಾ ಅದರ ಪುಕ್ಕವನ್ನು ತಂದು ಗಂಗಾಜಲ ಅಥವಾ ಅರಶಿನದ ನೀರಿನಿಂದ ತೊಳೆದು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಮುಂದೆ ಇಟ್ಟು ಒಂದು ಹೊತ್ತು ಉಪವಾಸವಿದ್ದು ಅದನ್ನು ಪೂಜಿಸಬೇಕು. ನಂತರ ಅದನ್ನು ನೀವು ಕೆಲಸ ಮಾಡುವ ಸ್ಥಳ ಅಥವಾ ಕ್ಯಾಶ್ ಬಾಕ್ಸ್ ನಲ್ಲಿ ಇಡಬೇಕು. ಹಾಗೇ ಅದಕ್ಕೆ ಪ್ರತಿದಿನ ಧೂಪ ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವುದು ಖಚಿತ.

ಸರಳ ಪರಿಹಾರ 🙏🙏🙏
******


|

No comments:

Post a Comment