SEARCH HERE

Friday 20 December 2019

ಭಾದ್ರಪದ ಮಾಸ ಮಹತ್ವ bhadrapada masa importance

ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು


ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ)
ಋಷಿ ಪಂಚಮಿ (ಶುಕ್ಲ ಪಂಚಮಿ)
ಶ್ರೀ ಸ್ವರ್ಣಗೌರಿ ಪೂಜೆ
ಪರಿವರ್ತಿನೀ ಏಕಾದಶಿ (ಶುಕ್ಲ ಏಕಾದಶಿ)
ಅನಂತಪದ್ಮನಾಭ ವ್ರತ (ಶುಕ್ಲ ಚತುರ್ದಶಿ)

ಹುಣ್ಣಿಮೆ
ಉಮಾಮಹೇಶ್ವರ ವ್ರತ (ಹುಣ್ಣಿಮೆ) ಪ್ರೋಷ್ಟಪದೀ ಶ್ರಾದ್ಧ, ಪ್ರೋಷ್ಟಪದೀ ಭಾಗವತ ಪ್ರವಚನ ಮಂಗಳ, ಅನ್ವಾಧಾನ,  ಉಮಾಮಹೇಶ್ವರ ವೃತ, ವಿಷ್ಣುಪಂಚಕ, ಅನಂತನ ಹುಣ್ಣಿಮೆ (ಜೋಕುಮಾರ ಹುಣ್ಣಿಮೆ), ಸನ್ಯಾಸಿಗಳ ಚಾತುರ್ಮಾಸ್ಯವ್ರತ ದೀಕ್ಷಾ ಸಮಾಪ್ತಿ, ಸೀಮೊಲ್ಲಂಘನ.

ಪಿತೃಪಕ್ಷ (ಕೃಷ್ಣಪಕ್ಷ)
ಮಹಾಭರಣೀ (ಕೃಷ್ಣ ಚೌತಿ)
ಮಧ್ಯಾಷ್ಟಮಿ (ಕೃಷ್ಣ ಅಷ್ಟಮಿ)
ಅವಿಧವಾ ನವಮಿ (ಕೃಷ್ಣ ನವಮಿ)
ಇಂದಿರಾ ಏಕಾದಶಿ (ಕೃಷ್ಣ ಏಕಾದಶಿ)
ಕಲಿಯುಗಾರಂಭ (ಕೃಷ್ಣ ತ್ರಯೋದಶಿ)
ಘಾತ ಚತುರ್ದಶಿ (ಕೃಷ್ಣ ಚತುರ್ದಶಿ)
ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ

#ಭಾದ್ರಪದ ಮಾಸದ ಆಚರಣೆಗಳು ಮತ್ತು ಮಹತ್ವ.!
ಭಾದ್ರಪದ ಮಾಸ ಶುರುವಾಗಿದೆ
ಭಾದ್ರಪದಮಾಸಕ್ಕೆ ಹೃಷಿಕೇಶರೂಪಿ ಪರಮಾತ್ಮನು ನಿಯಾಮಕ ಈ ಮಾಸವು ದೇವತೆಗಳಿಗೆ ಹಾಗೂ ಪಿತೃಗಳಿಗೆ ಪ್ರಿಯ ವಾಗಿದ್ದು ಹದಿನೈದು ದಿವಸ ದೇವತೆಗಳಿಗೆ ಹದಿನೈದು ದಿವಸ ಪಿತೃಗಳಿಗೆ ಪ್ರಿಯವಾಗಿದೆ .
ಭಾದ್ರಪದೇ ಮಾಸಿ ನಿತ್ಯಂ ಪ್ರಾತಃ ಸ್ನಾನಂ ಕರೋತಿ ಯಃ |
ನಿತ್ಯದಾನಂ ತಥಾ ಕಾರ್ಯಂ ಪುರಾಣ ಶ್ರವಣಂ ಚರೇತ್ |
ಶ್ರವಣೆನ ಭವೇತ್ ಜ್ಞಾನಾನ್ಮೋಕ್ಷಂ ಚ ವಿಂದತಿ |
ವ್ರತಾನಿ ನಿಯಾಮಾನ್ ಧೃತ್ವಾ ಶುಚಿಃ ಪ್ರಯತಮಾನಸಃ |
ದೇವತಾರ್ಚನವಿಧಿರತಃ ಪಿತೃಣಾಂ ಶ್ರಾದ್ಧಕರ್ಮಕೃತ್ |
ಸಯಾತಿ ಪರಮಂ ಸ್ಥಾನಂ ಪುನರಾವರ್ತಿವರ್ಜಿತಂ ||

ಭಾದ್ರಪದಮಾಸದಲ್ಲಿ ಪ್ರಾತಃಕಾಲದಲ್ಲಿ ಎಲ್ಲರೂ ಸ್ನಾನಮಾಡಿ ನಿತ್ಯವೂ ದಾನಕೊಡಬೇಕು ಭಾಗವತಾದಿ ಪುರಾಣಶ್ರವಣ ಮಾಡಬೇಕು ಪುರಾಣ ಶ್ರವಣ ದಿಂದ ಜ್ಞಾನವನ್ನು ಜ್ಞಾನದಿಂದ ಮೋಕ್ಷವನ್ನು ಹೊಂದುವರು ವ್ರತನಿಯಮಗಳನ್ನು ಧಾರಣಮಾಡಿ ಶುಚಿರ್ಭೂತರಾಗಿ ದೆವತಾಪೂಜಿಯನ್ನು ಮಾಡಿ ಮತ್ತು ಪಿತೃಗಳಶ್ರಾದ್ಧ ಕರ್ಮವನ್ನು ಮಾಡುವವರು ಪುನರಾವರ್ತಿ ರಹಿತವಾದ ಉತ್ತಮಸ್ಥಾನವನ್ನು ಅಂದರೆ ಮೋಕ್ಷವನ್ನು ಹೂಂದುವರು ಎಂದು ಭಾದ್ರಪದ ಮಾಸದ ಮಹತ್ವ.

#ಭಾದ್ರಪದಪ್ರಮುಖಆಚರಣೆಗಳು
#ಮಾಸದಪ್ರಮುಖಹಬ್ಬಗಳು
ಗೌರಿಪೂಜೆ ತದಿಗೆ ದಿನ
ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ)
#ಋಷಿ_ಪಂಚಮಿ (ಶುಕ್ಲ ಪಂಚಮಿ)
#ಶುಕ್ಲಸಪ್ತಮಿ .. ಜೇಷ್ಟಾಗೌರಿ ಆಹ್ವಾನ
#ಶುಕ್ಲ_ಎಳೆಅಷ್ಟಮಿ _ ಜೇಷ್ಟಾಗೌರಿ ಪೂಜೆ ನೈವೇದ್ಯ
#ನವಮಿ .. ಜೇಷ್ಣಾ ಗೌರಿ ವಿಸರ್ಜನೆ ಸೂರ್ಯಾಸ್ತದ ನಂತರ

#ಪರಿವರ್ತಿನೀ_ಏಕಾದಶಿ (ಶುಕ್ಲ ಏಕಾದಶಿ)
ಭಾದ್ರಪದದಲ್ಲಿ ಬರುವ ಶುಕ್ಲ ಏಕಾದಶಿ ಪರಿವರ್ತಿನಿ ಏಕಾದಶಿ ಈ ಏಕಾದಶಿ ಶ್ರದ್ಧೆಯಿಂದ ಉಪವಾಸ ಮಾಡಿ ಶ್ರೀವಿಷ್ಣು ವಿನನ್ನು ತುಳಸಿಯಿಂದ ಅರ್ಚನೆ ಮಾಡಿದಲ್ಲಿ ನಮ್ಮ ಮನಸ್ಪು , ನಮ್ಮ ಕಷ್ಟದಾರಿದ್ರ್ಯಗಳು ಹೋಗಿ ಜೀವನ ಪರಿವರ್ತನೆ ಹೊಂದುತ್ತದೆ.

#ಅನಂತ_ವ್ರತ (ಶುಕ್ಲ ಚತುರ್ದಶಿ)

ಅನಂತ ಫಲಗಳನ್ನು ಕೊಡುವದು ಅನಂತ ಶಯನ ವ್ರತ ಬಹಳ ಮಹತ್ವದ್ದು ಇದನ್ನು ವಿವರವಾಗಿ ಹೇಗೆ ಮಾಡುವದು ಹೇಳಿ ಕೊಡುತ್ತೇನೆ.
 
#ಉಮಾಮಹೇಶ್ವರ_ವ್ರತ (ಹುಣ್ಣಿಮೆ)
ಹುಣ್ಣಿಮೆಯ ದಿನ ಉಮಾಮಹೇಶ್ವರ ವ್ರತ ಪುಣ್ಯಫಲ ಕೊಡುವಂತದ್ದು ಸುಖ ಸೌಭಾಗ್ಯ ಕ್ಕಾಗಿ ಈ ವ್ರತ ಮಾಡುವದರಿಂದ ದಾಂಪತ್ಯ ಫಲ ದೊರೆಯುತ್ತದೆ.

#ಪಿತೃಪಕ್ಷ (ಕೃಷ್ಣಪಕ್ಷ)

ನಮ್ಮನ್ನಗಲಿದ ಹಿರಿಯರಿಗೆ ಗೌರವ ಸಲ್ಲಿಸುವದೇ ಪಿತೃಪಕ್ಷ , ಪಕ್ಷ ಮಾಡಲೇ ಬೇಕು ಯಾವದೇ ಕಾರಣಕ್ಕೂ ಬಿಡಬಾರದು . ಈಗ ನೀವು ಮಾಡಿದ ಶ್ರಾದ್ಧ ಕೊಟ್ಟ ತರ್ಪಣ ಎಳು ತಲೆಮಾರಿನವರಿಗೂ ಮುಟ್ಟುತ್ತದೆ . ಪಿತೃ ಗಳು ನೀವು ಕೊಟ್ಟ ಅನ್ನ ನೀರಿನಿಂದ ಶಾಂತರಾಗಿರುತ್ತಾರೆ.. ನಿಮ್ಮ ಕುಲ ಕೂಡಾ ಉದ್ಧಾರ ವಾಗುತ್ತದೆ..

#ಮಹಾಭರಣೀ (ಕೃಷ್ಣ ಚೌತಿ)
ಮಹಾ ಭರಣಿ ಶ್ರಾದ್ಧ ಅಂದರೆ ಯಾರ ಮನೆಯಲ್ಲಿ ಪಿತೃಗಳು ತಿರುಗಿಕೊಂಡು ಒಂದು ವರುಷ ಆಗಿರಲ್ಲ , ವರ್ಷಾಂತಿಕ ಆಗದಿದ್ದವರು ಭರಣಿ ಶ್ರಾದ್ಧವನ್ನು ಪಕ್ಷಮಾಸದಲ್ಲಿ ಮಾಡಬೇಕು..

#ಅವಿಧವಾ_ನವಮಿ (ಕೃಷ್ಣ ನವಮಿ)

ಯಾರ ಮನೆಯಲ್ಲಿ ಮುತ್ತೈದೆಯರು ತಿರಿಕೊಂಡಿರುತ್ತಾರೊ ಅವರು ಅ _ವಿದವಾ ನವಮಿ ದಿನ ಶ್ರಾದ್ಧವನ್ನು ಮಾಡಿ ಹಬ್ಬದ ಅಡುಗೆ ಮಾಡಬೇಕು ಹೋಳಿಗೆ ಎಲ್ಲವನ್ನು ಮಾಡಿ ಮುತ್ತೈದೆಗೆ ಊಟಕ್ಕೆ ಹಾಕಿ ಉಡಿ ತುಂಬಬೇಕು

#ಇಂದಿರಾ_ಏಕಾದಶಿ (ಕೃಷ್ಣ ಏಕಾದಶಿ)
ಕೃಷ್ಣಪಕ್ಷದಲ್ಲಿ ಬರುವದು ಇಂದಿರಾ ಏಕಾದಶಿ

#ಸರ್ವಪಿತೃ_ಅಮಾವಾಸ್ಯೆ (ಅಮಾವಾಸ್ಯೆ) ಆ ದಿನ ಯಾರಿಗೆ ತಮ್ಮ ಪಿತೃಗಳು ತಿರಿಕೊಂಡ ತಿಥಿ ಗೊತ್ತಿಲ್ಲದವರು ಅಕಸ್ಮಾತ್ತಾಗಿ ಯಾರಿಗೆ ತಿಥಿಯಲ್ಲಿ ಪಿತೃ ಪಕ್ಷ ಮಾಡಲು ಆಗಿಲ್ಲದವರು ಸರ್ವ ಜಾತಿ ಮತ ಪಂತವಿಲ್ಲದೆ ಎಲ್ಲರೂ ತಮ್ಮತಮ್ಮ ಪಿತೃಗಳಿಗೆ ತರ್ಪಣ ಕೊಡುವದು ಶ್ರಾದ್ಧಮಾಡಬಹುದು.
******

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಇಂದಿನಿಂದ ಪ್ರೋಷ್ಟಪದಿಯ ಆರಂಭ
ಪ್ರೋಷ್ಠಪದ ಎನ್ನುವುದು  ಭಾದ್ರಪದ ಮಾಸದ ಹೆಸರು. ಅದರಲ್ಲಿಯೂ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಮತ್ಸ್ಯರೂಪೀ ಪರಮಾತ್ಮನ  ವಿಶೇಷ ಸನ್ನಿಧಾನವಿರುದರಿಂದ ಇದಕ್ಕೆ ಪ್ರೋಷ್ಠಪದ ಎಂದು ಹೆಸರು ಬಂದಿದೆ. ಪ್ರೋಷ್ಠ ಎಂದರೆ ಶ್ರೇಷ್ಠಜಾತಿಗೆ ಸೇರಿದ ಮೀನು ಎಂದರ್ಥ. ಪರಮಾತ್ಮನು ಮತ್ಸ್ಯಾವತಾರ ಮಾಡಿದ್ದು ಪ್ರೋಷ್ಠ ಜಾತಿಯ ಮೀನು ಆಗಿ. ಮತ್ತೆ  ಪದ ಅಂದರೆ ಆ ಭಗವಂತನ ಪಾದ..  ಪಾದ ಅಂದರೇ ಕೇವಲ ಪಾದ ಅಂತ ಅರ್ಥ ಅಲ್ಲ,  ಭಗವಂತನಿಗೂ ಆತನ ಅವಯವಗಳಿಗೂ ಭೇದವಿಲ್ಲವಾದ್ದರಿಂದ ಪ್ರೋಷ್ಠನಾಮಕ ಭಗವಂತನ ಸ್ವರೂಪ ಅಲ್ಲದೇ ಪರಮಾತ್ಮನ ಪದಗಳಲ್ಲಿ ಮೋಕ್ಷಸ್ಥಾನ ಆದ್ದರಿಂದ ಮೋಕ್ಷಪ್ರಾಪ್ತಿಯ ಕಾಲವೂ.... ಇಂತಹಾ ಪ್ರೋಷ್ಠ ನಾಮಕನಾದ ಭಗವಂತನ ಸ್ವರೂಪವನ್ನು ತಿಳಿಸಿಕೊಡುವ ಶ್ರೀಮದ್ಭಾಗವತವನ್ನು ಪ್ರೋಷ್ಠಪದ ಎಂದು ಕರೆಸಿಕೊಳ್ಳುವ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಹೇಳುವ, ಕೇಳುವ, ಅಧ್ಯಯನ ಮಾಡುವುದರಿಂದ ಪ್ರೋಷ್ಠವಾದ ಅರ್ಥಾತ್ ಶ್ರೇಷ್ಠವಾದ ತನ್ನ ಪಾದದ್ವಯದ ದರ್ಶನ ಭಾಗ್ಯವನ್ನು ಕರುಣಿಸುತ್ತಾನೆ ಪರಮಾತ್ಮ, ಅಂದರೆ ತನ್ನ ಪದಯುಗಗಳ ದರ್ಶನಕ್ಕೆ ಮಾಡಬೇಕಾದ ಸಾಧನೆಯನ್ನು ನಮ್ಮಿಂದ ಮಾಡಿಸಿ ತನ್ನ ಪ್ರಸಾದವನ್ನು ಕರುಣಿಸುತ್ತಾನೆ ಆದ್ದರಿಂದ ಪ್ರೋಷ್ಠಪದ ಕೇಳಬೇಕು. ಅಲ್ಲದೇ ಶುಕ್ಲಪಕ್ಷದ ಹದಿನೈದು ದಿವಸದ ಅವಧಿಗೆ ಪ್ರೋಷ್ಠಪದ ಎಂದು ಹೆಸರಿರುವದರಿಂದ ಆ ಅವಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಅವಶ್ಯವಾಗಿ ಮಾಡಲೇಬೇಕು , ಈ ವಿಷಯವನ್ನು ಸ್ವತಃ ಶ್ರೀಮದ್ ವೇದವ್ಯಾಸದೇವರೇ ಶ್ರೀಮದ್ಭಾಗವತದಲ್ಲಿ ಹೇಳಿರುವರಾದ್ದರಿಂದ ಇಂದಿನಿಂದ ಬಿಡದೆ ಶ್ರೀಮದ್ಭಾಗವತದ ಶ್ರವಣಾಸಕ್ತರಾಗೋಣ... 

ಹಾಗೆಯೇ....

 ನಮಾಮಿ ಧನ್ವಂತರಿಯಾದಿದೇವಂ
ಸುರಾಸುರೈರ್ವಂದಿತ ಪಾದಪದ್ಮಂ/
ಲೋಕೇಜೆರಾಋಗ್ವಯ ಮೃತ್ಯುನಾಶಂ
ದಾತಾರಮೀಶಂ ವಿವಿಧೌಷಧೀನಾಂ// 

ಧನ್ವಂ ಎಂದರೆ ರೋಗಗಳು ಅಂತರೀ ಎಂದರೆ ನಾಶ ಮಾಡುವವನು. ಸರ್ವ ರೋಗಗಳನ್ನು ಪರಿಹರಿಸುವ ಶ್ರೀ ಧನ್ವಂತರೀ ರೂಪೀ ಪರಮಾತ್ಮನು ಕ್ಷೀರಸಾಗರದಲ್ಲಿ ಹುಟ್ಟಿ ಬಂದದ್ದು ಈ ದಿನ ಅರ್ಥಾತ್ ಭಾದ್ರಪದ ಶುಕ್ಲ ದ್ವಿತೀಯಾ,  ನಂತರ ಕಾರ್ತೀಕ ಕೃಷ್ಣ ದ್ವಾದಶಿಯಂದು ದೀರ್ಘತಮ ಎಂಬುವನ ಮನೆಯಲ್ಲಿ ಮಗನಾಗಿ ಅವತರಿಸಿ ಬಂದು ಆಯುರ್ವೇದ ಶಾಸ್ತ್ರವನ್ನು ಉಪದೇಶಿಸಿರುವನು....

ಧನ್ವಂತರೀ ಜಯಂತಿಯ ಈ ಶುಭದಿನದಲ್ಲಿ ಪರಮಾತ್ಮನ ಕಾರುಣ್ಯದಿಂದ ಆರೋಗ್ಯ ಭಾಗ್ಯ ಸಿಗಲಿ, ಸಾಧನೆಗೆ ತಕ್ಕ ಶಕ್ತಿ ಸಂಪತ್ತು ನೀಡಲಿ, ಪ್ರಪಂಚಕ್ಕೆ ಹಿಂಸೆ ನೀಡುತ್ತಿರುವ ಮಹಮ್ಮಾರಿಯ ವಿನಾಶವಾಗಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡೋಣ...

ಹಾಗೆಯೆ ಪರಮಾತ್ಮನ ಪರಿಯಂಕವೇ ಅಣ್ಣನಾಗಿ ಹುಟ್ಟಿಬಂದು ಪರಮಾತ್ಮನ ಆಜ್ಞೆಯಂತೆ ದುಷ್ಟ ಶಿಕ್ಷಣೆಯಲ್ಲಿ ತನ್ನ ಸೇವೆಯನ್ನು ಸಹ ಸಲ್ಲಿಸಿದ ಬಲರಾಮ ದೇವರ ಜಯಂತಿಯ ಶುಭವಂದನೆಗಳು 

ಹಾಗೆಯೇ

ಚಿಂತಾಮಣಿಂ ಸ್ವಭಕ್ತಾನಾಮ್ ಕಲ್ಪವೃಕ್ಷಂ ಚ ಕಾಮದಂ/
ಸ್ವಾಮಿನಂ ತ್ವಾಂ ಶ್ರೀ ರಘುಪ್ರೇಮತೀರ್ಥಂ ವಂದೇಹ್ಯಭೀಷ್ಟದಂ//

ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಮಹಾನ್ ಯತಿಗಳು ಶ್ರೀ  ರಘುಪ್ರೇಮತೀರ್ಥರ ಆರಾಧನೆಯ ಮತ್ತೊಮ್ಮೆ ಶುಭವಂದನೆಗಳು... 

ಮತ್ತೆ...
ವಿಜಯಾರ್ಯಾ ಸುಪುತ್ರಂ
ಶಾಂತ ಸೌಮ್ಯ ಭೂಷಣಂ/
ಗಜರಾಜ ಪದ ಸದಾ ಸ್ಮರಂ
ಹಯಗ್ರೀವ ವಿಠಲ ದಾಸಂ ಭಜೇ//


ಶ್ರೀ ವಿಜಯದಾಸಾರ್ಯರ ಪ್ರೇಮದ ಪುತ್ರರು, ವಿಜಯ ಪ್ರಭುಗಳನ್ನು ಬಿಡದೆ ಸೇವೆ ಮಾಡಿದವರು, ಶ್ರೀ ವಿಜಯದಾಸಾರ್ಯರಿಂದ ಎರಡು ವರ್ಷಗಳ  ಆಯುಷ್ಯವನ್ನು ಪಡೆದವರು,  ಶ್ರೀ ವ್ಯಾಸವಿಠಲರಿಂದ ವಿಜಯ ಪ್ರಭುಗಳ ಬಲಭುಜ ಎಂದೇ ಕೊಂಡಾಡಿಸಿಕೊಂಡಂತಹ , ತಮ್ಮ ತಂದೆಯ ಕೃತಿಗಳು ದಾಖಲಿಸಿ ಇಡುವಂತಹ ಮೇರು ಸೇವೆಯನ್ನು ಮಾಡಿದವರಾದ, ಸಣ್ಣ ವಯಸ್ಸಿನಲ್ಲಿಯೇ ಪರಮಾತ್ಮನ ಪದಗಳನ್ನ ಸೇರಿದ ಶ್ರೀ ಹಯಗ್ರೀವವಿಠಲಾಂಕಿತಸ್ಥರಾದ ಶ್ರೀ ಶೇಷಗಿರಿದಾಸರ ಆರಾಧನಾ ಶುಭಸ್ಮರಣೆಗಳು..

ಶ್ರೀ ದಾಸಾರ್ಯರ,  ಶ್ರೀ ಯತಿಗಳ ಅಂತರ್ಗತ ಧನ್ವಂತರೀ ರೂಪೀ ಪರಮಾತ್ಮನ ಅನುಗ್ರಹ ಸದಾ ನಮಗೆ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ,...

ಆದಷ್ಟು ಹಾಡುಗಳು ಸಹ ಭಾಗವತ ಕಥೆಗೆ ಸಂಬಂಧಿತ ಈ ಹದಿನೈದು ದಿನಗಳಲ್ಲಿ ಹಾಡೋಣ... 

ನಾದನೀರಾಜನದಿಂ ದಾಸಸುರಭಿ 🙏🏽
*****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

    ಭಾದ್ರಪದ ಶುಕ್ಲ ಪ್ರತಿಪದಾ

ಪ್ರೋಷ್ಟಪದಿಯ ಆರಂಭ

ಪ್ರೋಷ್ಠಪದ ಎನ್ನುವುದು  ಭಾದ್ರಪದ ಮಾಸದ ಹೆಸರು. ಅದರಲ್ಲಿಯೂ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಮತ್ಸ್ಯರೂಪೀ ಪರಮಾತ್ಮನ  ವಿಶೇಷ ಸನ್ನಿಧಾನವಿರುದರಿಂದ ಇದಕ್ಕೆ ಪ್ರೋಷ್ಠಪದ ಎಂದು ಹೆಸರು ಬಂದಿದೆ. ಪ್ರೋಷ್ಠ ಎಂದರೆ ಶ್ರೇಷ್ಠಜಾತಿಗೆ ಸೇರಿದ ಮೀನು ಎಂದರ್ಥ. ಪರಮಾತ್ಮನು ಮತ್ಸ್ಯಾವತಾರ ಮಾಡಿದ್ದು ಪ್ರೋಷ್ಠ ಜಾತಿಯ ಮೀನು ಆಗಿ. ಮತ್ತೆ  ಪದ ಅಂದರೆ ಆ ಭಗವಂತನ ಪಾದ..  ಪಾದ ಅಂದರೇ ಕೇವಲ ಪಾದ ಅಂತ ಅರ್ಥ ಅಲ್ಲ,  ಭಗವಂತನಿಗೂ ಆತನ ಅವಯವಗಳಿಗೂ ಭೇದವಿಲ್ಲವಾದ್ದರಿಂದ ಪ್ರೋಷ್ಠನಾಮಕ ಭಗವಂತನ ಸ್ವರೂಪ ಅಲ್ಲದೇ ಪರಮಾತ್ಮನ ಪದಗಳಲ್ಲಿ ಮೋಕ್ಷಸ್ಥಾನ ಆದ್ದರಿಂದ ಮೋಕ್ಷಪ್ರಾಪ್ತಿಯ ಕಾಲವೂ.... ಇಂತಹಾ ಪ್ರೋಷ್ಠ ನಾಮಕನಾದ ಭಗವಂತನ ಸ್ವರೂಪವನ್ನು ತಿಳಿಸಿಕೊಡುವ ಶ್ರೀಮದ್ಭಾಗವತವನ್ನು ಪ್ರೋಷ್ಠಪದ ಎಂದು ಕರೆಸಿಕೊಳ್ಳುವ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಹೇಳುವ, ಕೇಳುವ, ಅಧ್ಯಯನ ಮಾಡುವುದರಿಂದ ಪ್ರೋಷ್ಠವಾದ ಅರ್ಥಾತ್ ಶ್ರೇಷ್ಠವಾದ ತನ್ನ ಪಾದದ್ವಯದ ದರ್ಶನ ಭಾಗ್ಯವನ್ನು ಕರುಣಿಸುತ್ತಾನೆ ಪರಮಾತ್ಮ, ಅಂದರೆ ತನ್ನ ಪದಯುಗಗಳ ದರ್ಶನಕ್ಕೆ ಮಾಡಬೇಕಾದ ಸಾಧನೆಯನ್ನು ನಮ್ಮಿಂದ ಮಾಡಿಸಿ ತನ್ನ ಪ್ರಸಾದವನ್ನು ಕರುಣಿಸುತ್ತಾನೆ ಆದ್ದರಿಂದ ಪ್ರೋಷ್ಠಪದ ಕೇಳಬೇಕು. ಅಲ್ಲದೇ ಶುಕ್ಲಪಕ್ಷದ ಹದಿನೈದು ದಿವಸದ ಅವಧಿಗೆ ಪ್ರೋಷ್ಠಪದ ಎಂದು ಹೆಸರಿರುವದರಿಂದ ಆ ಅವಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಅವಶ್ಯವಾಗಿ ಮಾಡಲೇಬೇಕು , ಈ ವಿಷಯವನ್ನು ಸ್ವತಃ ಶ್ರೀಮದ್ ವೇದವ್ಯಾಸದೇವರೇ ಶ್ರೀಮದ್ಭಾಗವತದಲ್ಲಿ ಹೇಳಿರುವರಾದ್ದರಿಂದ ಇಂದಿನಿಂದ ಬಿಡದೆ ಶ್ರೀಮದ್ಭಾಗವತದ ಶ್ರವಣಾಸಕ್ತರಾಗೋಣ... 

ಹಾಗೆಯೇ....
 
ಚಿಂತಾಮಣಿಂ ಸ್ವಭಕ್ತಾನಾಮ್ ಕಲ್ಪವೃಕ್ಷಂ ಚ ಕಾಮದಂ /
ಸ್ವಾಮಿನಂ ತ್ವಾಂ ಶ್ರೀ ರಘುಪ್ರೇಮತೀರ್ಥಂ ವಂದೇಹ್ಯಭೀಷ್ಟದಂ//

ಅಪರೋಕ್ಷ ಜ್ಞಾನಿಗಳು, ಕೂಡ್ಲಿ ಮಠದ ಯತಿಗಳು, ಪರಮ ವೈರಾಗ್ಯಶೀಲರಾದ ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯರ ಶಿಷ್ಯರು, ರಾಯರ ಪರಮ ಭಕ್ತರು, ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಪರಮಾಪ್ತರೂ, ಮಹಾನ್ ಮಹಿಮಾ ಸಂಪನ್ನರೂ ಆದ ಶ್ರೀ ರಘುಪ್ರೇಮತೀರ್ಥರ ಆರಾಧನಾ ಮಹೋತ್ಸವ  ಆದವಾನಿಯಲ್ಲಿ.. 

ಶ್ರೀ ಯತಿವರೇಣ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರ್ಯಣರ ಅನುಗ್ರಹ ಸದಾ ನಮ್ಮ ಎಲ್ಲರಮೇಲಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

ಭಾಗವತದ ರಸಪಾನವನ್ನು ಬಿಡದೆ ಮಾಡೋಣ

ನಾದನೀರಾಜನದಿಂ ದಾಸಸುರಭಿ 🙏🏽
*****

ಸುವರ್ಣಾನದಿ Suvarna river

 ಮುಕ್ತಿಗೆ ಸಾಧನವಾಗಲೆಂದೇ ಶ್ರೀಹರಿಯ ತದ್ದಾಸರಾದ ದೇವತೆಗಳ & ಋಷಿಗಳ ಸಾನ್ನಿಧ್ಯದ ಕ್ಷೇತ್ರಗಳೂ  ಶ್ರೀಹರಿಯಚರಣೋಧ್ಭವಗಳಾದ ಅನೇಕ ತೀರ್ಥಗಳೂ ಈ ಭಾರತಭೂಮಿಯಲ್ಲಿ ಇವೆ.  ಇಂತಹಾ ಅನೇಕ ತೀರ್ಥಕ್ಷೇತ್ರ ಯಾತ್ರೆ ಮುಮುಕ್ಷುವಿನ ಕರ್ತವ್ಯಗಳಲ್ಲಿ ಮುಖ್ಯವಾದುದು.
ಇಂತಹಾ ಅನೇಕ ತೀರ್ಥಗಳು ಗಂಗೆಯಿಂದಾರಂಭಿಸಿ ಅನೇಕ ನದಿಗಳೂ,  ಸ್ವಾಮಿಪುಷ್ಕರಣಿಯಿಂದಾರಂಭಿಸಿ ಅನೇಕ ಸರೋವರಗಳೂ. ಭಗವದ್ಭಕ್ತರಿಗೆ ಮುಕ್ತಿ ಸೋಪಾನವಾಗಿವೆ.

ಅವುಗಳಲ್ಲಿ ವಿಶಿಷ್ಟವಾದ ಒಂದು ನದಿಯ ಬಗ್ಗೆ ಹೇಳಲೇಬೇಕು..

ಅದೇ ನಮ್ಮ ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರವಾದ ದ್ವೈತಮತಪ್ರವರ್ತಕರಾದ ಶ್ರೀಮಧ್ವಾಚಾರ್ಯರು ಅವತರಿಸಿದ ಪುಣ್ಯಭೂಮಿಯನ್ನೊಳಗೊಂಡ  ರಜತಪೀಠಪುರ (ಉಡುಪಿ)ಯ ಜೀವನಾಡಿ  
ಶುದ್ಧಜಲದನೆಲೆ ಪುಣ್ಯದಭಾಂಡಾಗಾರ  ಸಮೃದ್ಧಧಾನ್ಯವರ್ಧಿನೀ..ಪಾಪೌಘವಿಧ್ವಂಸಿನೀ.. ಶ್ರೀಹರಿಯ ಚರಣಜಲದಿಂದ ಯುಕ್ತಳಾದ...
ಸುವರ್ಣಾ ನದೀ.

ಮಧ್ವಮತಸೇನಾಧಿಪತಿಗಳಾದ ಅಭಿನವ ಆನಂದತೀರ್ಥರೆಂದೇ  ಪ್ರಸಿದ್ಧರಾದ 
ಶ್ರೀಮದ್ವಾದಿರಾಜಗುರಸಾರ್ವಭೌಮರು...  ತಮ್ಮ ತೀರ್ಥಪ್ರಬಂಧವೆಂಬ ಪರಮಪವಿತ್ರವಾದ ಅತ್ಯದ್ಭುತ ತೀರ್ಥಕ್ಷೇತ್ರಯಾತ್ರಾಕೈಪಿಡಿಯಂತಿರುವ ಕೃತಿಯಲ್ಲಿ ಸುವರ್ಣೆಯ ಮಾಹಾತ್ಮ್ಯವನ್ನು  ಪಶ್ಚಿಮಪ್ರಬಂಧದಲ್ಲಿ ಹೀಗೆ ವರ್ಣಿಸಿದ್ದಾರೆ

ವೇದಾಚಲಹೃದುದ್ಭೂತಾಂ 
ಸುವರ್ಣಾಂ ಕೋ$ನುವರ್ಣಯೇತ್|
ಅಂಹಸೋ ದಹ್ಯಮಾನಸ್ಯ
ಶ್ರಾವಯಂತೀಂ ಸ್ವನಂ ಜನಾನ್||46||
                               
ಅರ್ಥ:-
ಯಾವಳು  ತನ್ನಲ್ಲಿ ಮೀಯುವ ಭಕ್ತರಿಗೆ ಪಾಪಗಳು ಸುಡುವ ಶಬ್ದವನ್ನು ಕೇಳಿಸುತ್ತಾಳೋ ಅಂತಹಾ  ವೇದಾಚಲದಲ್ಲಿ ಹುಟ್ಟುವ ಈ 'ಸುವರ್ಣೆ'ಯನ್ನು ಯಾರು ತಾನೇ ವರ್ಣಿಸಬಲ್ಲ.!!!!

 ಶ್ರೀವಾದಿರಾಜಗುರುಸಾರ್ವಭೌಮರು ಇಲ್ಲಿ  
ನದಿಯು ಮಾಹಾತ್ಮ್ಯ ತಿಳಿಸಿದ್ದಾರೆ.

ಕೃಷ್ಣಪಕ್ಷ ಮಂಗಳವಾರ (ಅಂಗಾರಕ=ಮಂಗಳವಾರ)ಚತುರ್ದಶಿಯ 
ಎಂದು ಬರುವುದೋ...  ಅಂತಹಾ
ಕೃಷ್ಣಾಂಗಾರಚತುರ್ದಶಿಯ ಪರ್ವಕಾಲದಲ್ಲಿ
ಯಾರೇ ಬಂದು ಈ ಸುವರ್ಣಾನದಿಯಲ್ಲಿ ಸ್ನಾನಮಾಡುತ್ತಾರೋ ಅವರ ಪಾಪಗಳು ಕುದಿವ ಎಣ್ಣೆಯಲ್ಲಿ ಹಾಕಿದ ಎಳ್ಳು  ಚಟ ಪಟ ಚಟ ಪಟ  ಎಂದು ಶಬ್ದಮಾಡುತ್ತಾ  ಸಿಡಿಯುವಂತೆ...ಸಿಡಿದು ಸುಟ್ಟುಹೋಗುತ್ತದೆ...ಇದು ಇಂದಿಗೂ ನಿವು ನೋಡಬಹುದು..ಕಿವಿಯಾರೆ ಕೇಳಿ ಸಾಕ್ಷಿಯಾಗಬಹುದು.  ಅದೂ ಅಲ್ಲದೆ. ನದಿಯ ಒಂದು ಘಟ್ಟದಲ್ಲಿ ಸುಮಾರು ಮುಕ್ಕಾಲು ಕಿಲೋಮೀಟರ್ ವರೆಗಿನ ಘಟ್ಟದಲ್ಲಿ ಮಾತ್ರ ಈ ಧ್ವನಿಯನ್ನು ಕೇಳಬಹುದು.

ನಾಸ್ತಿಕರಾದವರು ಪುಣ್ಯಪಾಗಳನ್ನೊಪ್ಪದವರು. ಈ ನದಿಯಲ್ಲಿ ಕೃಷ್ಣಾಂಗಾರಚತುರ್ದಶಿಯ ಈ ಪರ್ವಕಾಲದಲ್ಲಿ ಮಿಂದರೆ ಅವರಿಗೂ ಕಿವಿಗಡಚಿಕ್ಕುವ ಚಟಪಟ ಧ್ವನಿ  ಸ್ಪಷ್ಟವಾಗಿ ಕರ್ಣರಂಧ್ರದಲ್ಲಿ ಬೀಳುವುದು.
 
ಪಾಪಗಳನ್ನು ಕಳೆಯಬಲ್ಲ ಅನೇಕ ನದಿಗಳು  ಇವೆ...ಆದರೆ ಪಾಪಗಳು ಸುಡುವುದನ್ನು ಪ್ರತ್ಯಕ್ಷವಾಗಿ ಕೇಳಿ ಅನುಭವಿಸುವಂತೆ ಮಾಡಿ ನಾಸ್ತಿಕನನ್ನೂ ಆಸ್ತಿಕನನ್ನಾಗಿಸಬಲ್ಲ  ಜಗತ್ತಿನ ಏಕೈಕ ನದಿ ಸುವರ್ಣಾನದಿ.
ಇಂತಹಾ ನದಿಯನ್ನು ಹೆಚ್ಚು ಏನೆಂದು ತಾನೇ ವರ್ಣಿಸಬಲ್ಲೆವು.

ಯಾವುದೋ ವೈಜ್ಞಾನಿಕ ಕಾರಣವನ್ನು ಹುಡುಕಿಹೊಂದಿಸಲು ವಿಜ್ಞಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಹೊಂದಿಸಲಾಗಿದ ಕೇವಲ ಶ್ರೀಹರಿಯ ಮಹಿಮಾತಿಶಯವನ್ನು ಹೊರಸೂಸುವ ಈನದಿ ಶ್ರೀ ಕೃಷ್ಣನ ಪರಮಕರುಣ್ಯಯಲ್ಲದೆ ಮತ್ತೇನು.

ಇಂದಿಗೂ ಅನೇಕರು ವಿಶೇಷವಾಗಿ ಮಾಧ್ವರು  ಮಾಧ್ವಯತಿಗಳು ಈ ಕೃಷ್ಣಾಂಗಾರಚತುರಾದಶಿಯಂದು ಇಲ್ಲಿಗೆ ಆಗಮಿಸಿ   ಭಕ್ತಿಯಿಂದ ಸ್ನಾನವನ್ನು ಮಾಡಿ ಪಾಪ ಸುಡುವ ಫಟ್ ಫಟ್ ಎಂಬ ಧ್ವನಿಯನ್ನೂ ಕೇಳಿ..ಪಾಪಪ್ರಧ್ವಂಸಿನಿಯಾದ ಸುವರ್ಣೆಯನ್ನು ಮನದುಂಬಿ ನಮಸ್ಕರಿಸಿ ಕೃತಾರ್ಥರಾಗುತ್ತಾರೆ.

ಈ ನದಿಯ ದಡದಲ್ಲಿ  ವಿಘ್ನನಿವಾರಕನಾದ
 ಶ್ರೀಹರಿಯ ಪ್ರೀತಿಯ ಮರಿಮೊಮ್ಮಗ ಶ್ರೀಸಿದ್ಧಿವಿನಾಯಕನ ದೇವಸ್ಥಾನವೂ ಇದ್ದು..ಮಾಧ್ವರು ಇಲ್ಲಿ ಪೂಜೆಯನ್ನು ವೈಭವದಿಂದ ನಡೆಸುತ್ತಿದ್ದಾರೆ.

ಸೋದೆಮಠದ ಆಡಳಿತಕ್ಕೊಳಪಟ್ಟ ಈ ನದಿ ಉಡುಪಿಯಿಂದ 7 ಕಿ.ಮೀ ದೂರದಲ್ಲಿಯೇ ಇದೆ
 ಆಟೋ ವ್ಯವಸ್ಥೆಗಳು ಇವೆ.ಸ್ವಂತ ವಾಹನದಿಂದಲೂ  ತಲುಪಬಹುದು.
***

ಕಡೆಗೊಂದು ಮಾತು ಶ್ರೀಮಧ್ವಾಚಾರ್ಯರು ದ್ವಾದಶಸ್ತೋತ್ರದಲ್ಲಿ   ತಿಳಿಸುವಂತೆ...

ಬಹುಚಿತ್ರಜಗದ್ಬಹುಧಾಕರಣಾತ್ ಪರಶಕ್ತಿರನಂತಗುಣ: ಪರಮ:/

 ಈ ಜಗತ್ತು ಚೇತನ& ಅಚೇತನ ಅದರಲ್ಲೂ  ಅಚೇತನವಾದ ನದೀ ಪರ್ವತ ಮುಂತಾದ ಅನೇಕ ವಿಧಗಳನ್ನೊಳಗೊಂಡದ್ದರಿಂದ  ಈ ಜಗತ್ತು ತುಂಬಾ ವೈಚಿತ್ರ್ಯಪೂರ್ಣ& ವೈಶಿಷ್ಟ್ಯಗಳಿಂದ ಕೂಡಿದೆ.
ಇಂತಹಾ ಅದ್ಭುತವಾದ ಜಗತ್ತನ್ನು  ನಿರ್ಮಿಸಿದ ಜಗಜ್ಜನ್ಮಾದಿಕಾರಣನಾದ ಶ್ರೀಹರಿ ಅನಂತಗುಣಪರಿಪೂರ್ಣನಲ್ಲವೇ ..ಸರ್ವೋತ್ತನಲ್ಲವೇ.
ಎಂಬ ಈ ಮಾತಿನಂತೆ
 ತ್ರೈಲೋಕ್ಯಾಚಾರ್ಯರಾದ 
ಶ್ರೀಮಧ್ವಾಚಾರ್ಯರು ತಿಳಿಸಿದಂತೆಯೇ ಇಂತಹ  ಪುಣ್ಯಕ್ಷೇತ್ರನದ್ಯಾದಿಗಳ ಮಹಿಮೆಗಳ ಮೂಲಕ
ಜಗತ್ಸತ್ಯತ್ವವನ್ನೂ ಶ್ರಿಹರಿಯ ಮಹಿಮೆಯನ್ನೂ ಅವನ ಅನಂತಗುಣಪರಿಪೂರ್ಣತ್ವನ್ನೂ  ಸರ್ವೋತ್ತಮತ್ವವನ್ನೂ ತಿಳಿದೆವೆಂದರೆ ನಮ್ಮ ತೀರ್ಥಕ್ಷೇತ್ರಯಾತ್ರೆ  ಸಂದರ್ಶನ...ನಿಜವಾಗಿ ಸಾರ್ಥಕ.

✍️ಅನಿಲ ಜೋಷಿ

•|| मध्वो देदीप्यतेसौ जगति विजयते सत्सभामङ्गलाय ||•
***

year 2021
    ಭಾದ್ರಪದ ಕೃಷ್ಣ ಚತುರ್ದಶಿ

  ಕೃಷ್ಣಾಂಗಾರ ಚತುರ್ದಶಿಯ ಪರ್ವಕಾಲವಿಂದು 

ಕೃಷ್ಣಾಂಗಾರ ಚತುರ್ದಶಿ ಸುವರ್ಣಾನದೀ ಸ್ನಾನ ಪರ್ವಕಾಲ.
05.10.2021. 
ಉಡುಪಿಯ ಜೀವನದಿಯಾದ ಸುವರ್ಣಾನದೀ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಮಹಾಮಹಿಮರಾದ ಶ್ರೀವಾದಿರಾಜಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. 
ವೇದಾಚಲಸಮುದ್ಭೂತಾಂ ಸುವರ್ಣಾಂ ಕೋ ನು ವರ್ಣಯೇತ್./  
ಅಂಹಸೋ ದಹ್ಯಮಾನಸ್ಯ ಶ್ರಾವಯಂತೀಂ ಸ್ವನಂ ಜನಾನ್ //. ಎಂದು.
ವೇದಾಚಲ ಪರ್ವತದಿಂದ ಹುಟ್ಟುವ ನದಿ, ವೇದಗಳ ಸಾನ್ನಿಧ್ಯವನ್ನು ಸಹಜವಾಗಿಯೇ ಹೊಂದಿದೆ.  ಆದ್ದರಿಂದಲೇ ಸು - ವರ್ಣಗಳನ್ನು (ವೇದಗಳು) ಪಡೆದಿದ್ದರಿಂದ ಸುವರ್ಣಾ ಎಂದು ಅನ್ವರ್ಥವಾಗಿದೆ. ಈ ನದಿಯಲ್ಲಿ  ಮುಳುಗಿ ಸ್ನಾನ ಮಾಡುವಾಗ 
ನಮ್ಮಲ್ಲಿರುವ ಪಾಪಗಳು ನಾಶವಾಗುತ್ತದೆ. ಅದರ ಶಬ್ದಗಳು ಕೇಳಿಸುತ್ತವೆ ಎಂದಿದ್ದಾರೆ ಶ್ರೀ ವಾದಿರಾಜರು. 
ಇಂಥಹ ನದಿಯಲ್ಲಿ ಸ್ನಾನ ಮಾಡಲು ವಿಶೇಷ ಪರ್ವಕಾಲವೂ ಇದೆ. ಕೃಷ್ಣಪಕ್ಷದ ಚತುರ್ದಶಿ ತಿಥಿಗೆ ಮಂಗಳವಾರದ ಯೋಗ ಬಂದರೆ ಅದನ್ನು ಕೃಷ್ಣಾಂಗಾರ ಚತುರ್ದಶಿ ಎನ್ನುವರು. ಈ ಯೋಗವು ಈ ಬಾರಿ ದಿನಾಂಕ - 05.10.2021 ರಂದು ಬಂದಿದೆ. ಮಹಾಲಯದ ಚತುರ್ದಶಿಯಂದು ಬಂದಿರುವುದರಿಂದ ಸ್ನಾನದ ಜೊತೆಯಲ್ಲಿ ನದಿಯ ಸನ್ನಿಧಿಯಲ್ಲಿ ಶ್ರಾದ್ಧ-ತರ್ಪಣಾದಿಗಳನ್ನು ಮಾಡಿ ಪಿತೃಗಳನ್ನು ಸಂತೃಪ್ತಿಗೊಳಸಲು ಇದೊಂದು ಸುಯೋಗ.
ಸ್ನಾನದ ಸ್ಥಳಗಳು-- ಮಣಿಪಾಲದ ಸನಿಹದ ನದೀ ಸ್ಥಳ. ಹಿರಿಯಡ್ಕ ಸನಿಹದ ಶ್ರೀ ಪುತ್ತಿಗೆ ಮೂಲ ಮಠ. ಹಿರಿಯಡ್ಕ ಸನಿಹದ ಶ್ರೀ ಶೀರೂರು ಮಠ. 
(ಕೃಪೆ : ಶ್ರೀ ಪ್ರಭಂಜನಾಚಾರ್ಯ,  ಬಳ್ಳಾರಿ)
***


 ಶ್ರೀ ರಾಯರ ಮಠದಲ್ಲಿ ಪ್ರೋಷ್ಠಪದಿ "

" ದಿನಾಂಕ : 08.09.2021 ಬುಧವಾರದಿಂದ 20.09.2021 ಸೋಮವಾರದ ವರೆಗೆ "

" ಭಾದ್ರಪದ ಮಾಸ " ಎಂದರೆ ಹಬ್ಬಗಳ ಮಾಸವೆಂದೂ - ಅಲ್ಲದೆ ಭಾದ್ರಪದ ಮಾಸಕ್ಕೆ " ಪ್ರೋಷ್ಠಪದ ಮಾಸ " ವೆಂತಲೂ ಶಾಸ್ತ್ರಕಾರರು ಹೇಳುವುದುಂಟು.

ಕಾರಣ ನಮ್ಮ ಶಬ್ದಗಳು ಭದ್ರವಾಗಿ ಇರುವಂತೆ ಸುಭದ್ರವಾದ ಮೋಕ್ಷವನ್ನು ಕರುಣಿಸುವಂಥಾ ಸಕಲ ಶಬ್ದವಾಚ್ಯನಾದ ಭಗವಂತನ ಮತ್ತೂ ಭಗವದ್ಭಕ್ತರ ಕಥೆಗಳನ್ನೊಳಗೊಂಡ ಶ್ರೀಮದ್ಭಾಗವತದ ಪದಗಳು ನಮ್ಮ ನಾಲಿಗೆಯಲ್ಲಿ ಸದಾ ಕಾಲ ಸುಭದ್ರವಾಗಿ - ಸುಲಲಿತವಾಗಿ ಗಂಗಾ ಪ್ರವಾಹದಂತೆ ಹರಿಯುವಂತೆ ಮಾಡಿ ಮೋಕ್ಷ ಪಥವನ್ನು ತೋರಿಸುವ ಮಾಸ ಭಾದ್ರಪದ ಮಾಸ ಅಥವಾ ಪ್ರೋಷ್ಠಪದ ಮಾಸ ಎಂದು ಹೆಸರು.

ಆಚಾರ್ಯ ನಾಗರಾಜು ಹಾವೇರಿ....

ಗೋವ್ಗಳ ಕಾಯ್ದ ಗೋವಿಂದಾ ।

ಪವನನಯ್ಯನೆ -

ಶ್ರೀ ಕೃಷ್ಣಯ್ಯಾ ।। ಪಲ್ಲವಿ ।।

ಪರಮ ಪುರುಷನೇ 

ಅನಾಥ ಬಂಧೋ ।

ನರಹರಿ ಕರುಣಾದಿ 

ನೆಲೆಸೆನ್ನ ಹೃನ್ಮಂದಿರದಿ ।। ಚರಣ ।।

ಪ್ರಹ್ಲಾದ ವರದನೇ ಕಾಯಯ್ಯಾ ।

ಬಾಹ್ಲೀಕ ಪ್ರಿಯನೇ -

ಶ್ರೀ ಕೃಷ್ಣಯ್ಯಾ ।। ಚರಣ ।।

ವ್ಯಾಸದೇವ ನಿರ್ಮಿತ 

ಭಾಗವತವನ್ನೂ ।

ವ್ಯಾಸಮುನಿಯು ಕನ್ನಡದೀ 

ರಚಿಸಿದ ಮುದದಿ ।। ಚರಣ ।।

ಪ್ರೋಷ್ಠಪದಿ ಮಾಸದಲ್ಲಿ 

ಶ್ರೀ ವೇಂಕಟನಾಥನ 

ಕಥೆಯು ಸಡಗರದಿ ।

ಶ್ರೇಷ್ಟಯತಿ ಶ್ರೀ ರಾಯರ 

ಮನೆಯಲ್ಲಿ ನಡೆಯುವುದಯ್ಯಾ ।। ಚರಣ ।।

" ಶ್ರೀ ಮದ್ಭಾಗವತ ಅವತರಣಿಕೆ "

ಶ್ರೀ ಪರಮಾತ್ಮನ ಉಪದೇಶ ಪರಂಪರೆಯಿಂದ ಬಂದ ಮುಕ್ತಿ ಮಾರ್ಗವಾದ ತತ್ತ್ವಜ್ಞಾನವು ಕಲಿ ಪ್ರಭಾವದಿಂದ ಭೂಲೋಕದಲ್ಲಿ ಮರೆಯಾಗಿ ನಾನಾ ವಿಧ ಸಾಂಸಾರಿಕ ಕ್ಲೇಶದಲ್ಲಿ ಸಿಕ್ಕಿ ನರಳುತ್ತಿದ್ದ ಸಜ್ಜನರನ್ನು ಉದ್ಧರಿಸಬೇಕೆಂದು ದಯಾಳುಗಳಾದ ಶ್ರೀ ಚತುರ್ಮುಖ ಬ್ರಹ್ಮ ರುದ್ರೇ೦ದ್ರಾದಿಗಳ ಪ್ರಾರ್ಥನೆಯನ್ನು ಲಾಲಿಸಿ -  ಶ್ರೀಮನ್ನಾರಾಯಣನು ಬಹು ಕಾಲ ತಪಸ್ಸನ್ನು ಮಾಡಿ ಶುದ್ಧಳಾದ ಸತ್ಯವತೀದೇವಿಯಲ್ಲಿ ಶ್ರೀ ಪರಾಶರರಿಂದ ಆವಿರ್ಭವಿಸಿದ " ಶ್ರೀ ವ್ಯಾಸ " ನೆಂದು ಪ್ರಸಿದ್ಧನಾದ ಮುರ ಧ್ವಂಸಿ ಶ್ರೀಮನ್ನಾರಾಯಣನು ಶಾಪದಿಂದ ಹಾಳಾಗಿದ್ದ " ವೇದ " ವೆಂಬ " ಕಲ್ಪವೃಕ್ಷ " ವನ್ನು ಮತ್ತೆ ಉದ್ಧಾರ ಮಾಡಿ, ಮಂದಮತಿಗಳಾದ ಜನರಲ್ಲಿ ಕನಿಕರದಿಂದ ವೇದವನ್ನು ಶಾಖೆಗಳನ್ನಾಗಿಯೂ - ಉಪ ಶಾಖೆಗಳನ್ನಾಗಿಯೂ ವಿಂಗಡಿಸಿದವನಾಗಿ ಆ ವೇದಗಳ ಅರ್ಥಗಳನ್ನು ನಿರ್ಣಯಿಸುವ ಇಚ್ಛೆಯಿಂದ " ಬ್ರಹ್ಮಸೂತ್ರ " ಗಳನ್ನು ರಚಿಸಿದನು!

ಆ ವೇದಗಳಲ್ಲಿ ಅಧಿಕಾರಿಗಳಲ್ಲದ ಸ್ತ್ರೀ - ಶೂದ್ರರೇ ಮೊದಲಾದ ಜನರಿಗೂ ಮೋಕ್ಷವಾಗಲೆಂದು 18 ಪುರಾಣಗಳನ್ನು ರಚಿಸಿ ಅವುಗಳಲ್ಲಿ ಪ್ರಸಿದ್ಧವೂ - ಬ್ರಹ್ಮಸೂತ್ರಗಳ ಅರ್ಥವನ್ನೇ ಪ್ರಕಾಶ ಪಡಿಸುವುದೂ - 12 ಸ್ಕಂಧಗಳೆಂದು ವಿಭಾಗಿಸಲ್ಪಟ್ಟದ್ದೂ -18 ಸಾವಿರ ಗ್ರಂಥಗಳನ್ನುಳ್ಳದ್ದೂ ಆದ ಶ್ರೀಮದ್ಭಾಗವತವೆಂಬ ಪುರಾಣ ಸಂಹಿತೆಯನ್ನು ಬರೆಯಲು ಇಷ್ಟವುಳ್ಳವರಾಗಿ ಆದಿಯಲ್ಲಿ ಸಕಲರಿಗೂ ಇಷ್ಟ ದೇವತೆಯಾದ ಶ್ರೀಮನ್ನಾರಾಯಣನ ಧ್ಯಾನ ರೂಪ ಮಂಗಲವನ್ನು ಮಾಡಿದ್ದಾರೆ. 

ಈ ರೀತಿ ಮಾಡುವ ಮಂಗಳಕ್ಕೆ ತಾವು ರಚಿಸಬೇಕೆಂದಿರುವ ಗ್ರಂಥವು ನಿರ್ವಿಘ್ನವಾಗಿ ಸಮಾಪ್ತಿಯಾಗುವುದೇ ಪ್ರಯೋಜನ.

ಪ್ರಕೃತ ಶ್ರೀಮದ್ಭಾಗವ ಕರ್ತೃಗಳಾದ ಶ್ರೀಮನ್ವೇದವ್ಯಾಸರು ಸಾಕ್ಷಾನ್ನಾರಾಯಣನ ಅವತಾರರಾದ್ದರಿಂದ ಅವರ ಕಾರ್ಯಕ್ಕೆ ವಿಘ್ನ ಪ್ರಸಕ್ತಿಯೇ ಇಲ್ಲವಾದ ಕಾರಣ ನಿರ್ವಿಘ್ನ ಪರಿಸಮಾಪ್ತಿಯ ಉದ್ಧೇಶದಿಂದ ಮಂಗಳ ಮಾಡಿರುವುದು ಹೇಗೆ ಯುಕ್ತವಾದೀತು? 

ಎಂದು ಶಂಕಿಸಬಹುದು!

ಆದರೆ ಮಂಗಳ ಮಾಡುವುದಕ್ಕೆ ನಿರ್ವಿಘ್ನ ಪರಿಸಮಾಪ್ತಿಯೊಂದೇ ಪ್ರಯೋಜನವಲ್ಲ - ಅನೇಕ ಪ್ರಯೋಜನಗಳಿವೆ.

ಮಂಗಳ ಪೂರ್ವಕವಾದ ಗ್ರಂಥವೇ ಅಧ್ಯಯನ - ಅಧ್ಯಾಪನೆ ಮಾಡುವವರಿಗೆ ಶ್ರೇಯಃಪ್ರದವೂ - ಪ್ರಸಿದ್ಧಿಯೂ ಆಗುವ ಕಾರಣ ಈ ಗ್ರಂಥಾಧ್ಯಯನ ಮಾಡುವವರಿಗೆ ಶ್ರೇಯಸ್ಸಾಗಲೀ - ಅಸನ್ನಿಹಿತರಾದ ಶಿಷ್ಯರು ಮಂಗಳಾನುಷ್ಠಾನ ಪೂರ್ವಕ ಗ್ರಂಥ ರಚನೆ ಮಾಡಬೇಕೆಂಬ ಸಂಪ್ರದಾಯವನ್ನು ತಿಳಿಯಲಿ ಮುಂತಾಗಿ ಅನೇಕ ಪರಪ್ರಯೋಜನಗಳಿಗಾಗಿ ಶ್ರೀ ವೇದವ್ಯಾಸರು ಸಿರಿ ವಿಧಿ ಮೊದಲಾದ ಸರ್ವ ದೇವತೆಗಳಿಗೂ ಅತ್ಯಂತ ಇಷ್ಟ ದೇವತೆಯಾದ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾರೆ.

ಜನ್ಮಾದ್ಯಸ್ಯಯತೋsನ್ವಯಾದಿ-

ತರತಶ್ಚಾರ್ಥೇಷ್ವಭಿಜ್ಞ: ಸ್ವರಾಟ್

ತೇನೇ ಬ್ರಹ್ಮ ಹೃದಾಯ ಆದಿ -

ಕವಯೇ ಮುಹ್ಯಂತಿ ಯಂ ಸೂರಯಃ ।

ತೇಜೋವಾರಿ ಮೃದಾಂ ಯಥಾ -

ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ

ಧಾಮ್ನಾಸ್ವೇನ ಸದಾ ನಿರಸ್ತ -

ಕುಹಕಂ ಸತ್ಯಂ ಪರ೦ ಧೀಮಹಿ ।।

1. ಶ್ರೀಮನ್ನಾರಾಯಣನೇ ಚೇತನಾಚೇತನ ಜಗತ್ತಿನ ಸೃಷ್ಟಿ ಮೊದಲಾದುವುಗಳ ಕರ್ತನು.

2. ಉಪಕ್ರಮಾದಿ ಸಾಧನಗಳಿಂದ ಶ್ರುತಿ - ಸ್ಮೃತಿಗಳನ್ನು ವಿಚಾರ ಮಾಡಿದಾಗ ಅವುಗಳ ತಾತ್ಪರ್ಯ ಹರಿಯೇ ಜಗತ್ಸೃಷ್ಟ್ಯಾದಿ ಕರ್ತನೆಂಬುದು ವಿಷಾದವಾಗುವುದು.

3. ವೇದಗಳಿಗೆ ಅನುಕೂಲಗಳಾದ ತರ್ಕಗಳಿಂದಲೂ ಈ ಸಿದ್ಧಾಂತವೇ ನಿರ್ಣಯಿಸಲ್ಪಡುವುದು.

4. ಶ್ರೀ ಹರಿಯೇ ಸರ್ವೋತ್ತಮನು ( ಅಭಿಜ್ಞನು )

5. ಇನ್ನೊಬ್ಬ ಅಧಿಪತಿ ತನಗಿಲ್ಲದವನು. ಸ್ವತಂತ್ರ ಕರ್ತನು.

6. ಜ್ಞಾನದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರಿಗೇ ವೇದೋಪದೇಶಕನಾದ ಜಗದ್ಗುರು. ( ಕೃಷ್ಣ೦ ವಂದೇ ಜಗದ್ಗುರುಮ್ ).

7. ಶ್ರೀ ಹರಿಯ ಅನುಗ್ರಹವಿಲ್ಲದೆ ಅವನನ್ನು ಯಾರೂ ತಿಳಿಯಲಾರರು.

8. ಪೂರ್ಣನಾದ್ದರಿಂದ ರಾಮ ಕೃಷ್ಣಾದಿ ರೂಪಗಳಿಂದ ಅವತಾರ ಮಾಡುವುದರಿಂದಲೂ - ಜೀವರಿಗೆ ಜಡ ದೇಹಗಳನ್ನು ಕೊಟ್ಟು ಸೃಷ್ಟಿ ಮಾಡುವುದರಿಂದಲೂ - ಪ್ರಕೃತಿಯಿಂದ ತತ್ತ್ವಾದಿಗಳನ್ನು ಸೃಷ್ಟಿಸುವುದರಿಂದಲೂ ಯಾವ ಪ್ರಯೋಜನವನ್ನೂ ಹೊಂದುವುದಿಲ್ಲ. ಅವನ ( ಶ್ರೀ ಹರಿಯ ) ಸ್ವಭಾವವೇ ಹೀಗೆ.

9. ಹಾವಾಡಿಗರವನಂತೆ ಇಂದ್ರಜಾಲ ಮೊದಲಾದ ವಂಚನೆಯಿಲ್ಲದವನು.

10. ನಿರ್ದೋಷ ಜ್ಞಾನಾನಂದಮೂರ್ತಿಯಾದ್ದರಿಂದ ಸತ್ಯನಾಮಕನು.

11. ಪೂರ್ಣನೂ, ಸರ್ವೋತ್ತಮನೂ, ಸಕಲ ರಕ್ಷಕನೂ ಆದವನು.

ಇಂಥಾ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತೇನೆ.

ಹರಿವಂಶದಲ್ಲಿ ಶ್ರೀದುರ್ವಾಸ ಮುನಿಗಳು...

ಯದೇತತ್ಪರಮಂ ಬ್ರಹ್ಮ 

ವೇದವಾದೇಷು ಪಠ್ಯತೇ ।

ಸದೇವ ಪುಂಡರೀಕಾಕ್ಷ: 

ಸ್ವಯಂ ನಾರಾಯಣಃ ಪರಃ ।।

ಶ್ರೀ ವರದ ವ್ಯಾಸ ವಿಠಲರು...

ಶ್ರೀ ರಮಣ ಪರಮೇಷ್ಠಿ ಶಂಕರ ।

ಐರಾವತವರೂಢ ಮನಸಿಜ ।

ಸರ ಅಬ್ಜ ಅಮರ ಕಿನ್ನರ ಕಿಂಪುರುಷರಾ ।।

ಚಾರು ಚರಣ ಕಮಲಕೆ ಆರಾಧಿಸವೆ ।

ಪರಮ ಕರುಣದಿ ಭಾರಿಭಾರಿಗೆ ।

ಎಮಗೆ ಶುಭವನು ಪಾಲಿಸುವದಯ್ಯಾ ।।

- ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

****


POOJA VIDHANAS BY RASHMI ADISH

MYSORE


Here is the links below of all Pooja vidhanams narrated 

By   Rashmi Adish Mysore


Just click on the link to listen pooja


🌟 Mangala gowri Pooja vidhanam

https://youtu.be/1Sx5WMD5Ep0

🌸 mangala gowri song 

https://youtu.be/HpJeHRwNCkY


 🌟 Garuda panchmi Pooja vidhanam

https://youtu.be/5AM0YkAUKP4


🌸 Garuda panchmi katha song

https://youtu.be/xGr03NP4ZUA

🐍naga Aarti song

https://youtu.be/NwCStt2Wx08


🌟Sri vara maha Lakshmi vratam

https://youtu.be/Wwq13QM7804

🌸Aarati song

https://youtu.be/sJgc1i1E1wQ


🌟Sri Krishna Janmashtami Pooja

https://youtu.be/ipH-StORX8g


🌟Phalagowri

https://youtu.be/ex01EwzHGaI


🌟Gowri Pooja vidhanam (Swarna gowri vratam)

https://youtu.be/wy-oLZGxbH4


🌟 Ganesha vratham(varasiddivinayaka vratham

https://youtu.be/VyOITGGFMeM


🌟Sri Anathapadmanabha Swamy vratham

https://youtu.be/JYfNV59mCkY

***


No comments:

Post a Comment