SEARCH HERE

Friday 20 March 2020

ಘಂಟೆಯ ಮಹತ್ವದ ವಿಚಾರ bell


#ಘಂಟೆಯ #ಮಹತ್ವದ #ವಿಚಾರ



ಘಂಟೆಯನಾದ ಶುಭಪ್ರದವಾದದ್ದು , ಎಲ್ಲಿ ಘಂಟೆಯನಾದವಿರುತ್ತೊ ಅಲ್ಲಿ ಪ್ರೇತವಾಗಲಿ , ರಾಕ್ಷಸರಾಗಲಿ ವಾಸವಿರಲ್ಲ... ಅದಕ್ಕಾಗಿಯೇ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಾಗ ಘಂಟೆಗೆ ಪೂಜೆ ಮಾಡಿ  ನಂತರ ಪೂಜೆ ಶುರು ಮಾಡುತ್ತೇವೆ..... ಶುಭಕಾರ್ಯಗಳಿಗೆ ಘಂಟೆಬಾರಿಸುವ ನಾವು , ಶ್ರಾದ್ಧದ ದಿನ ಘಂಟೆಯನ್ನು ಬಾರಿಸಲ್ಲ  ಕಾರಣ ಪಿತೃಗಳು ಒಳಬರಲ್ಲ , ಶ್ರಾದ್ಧ ಮುಗಿದ ಮೇಲೆ ಸಂಜೆ  ದೇವರಿಗೆ ಘಂಟೆ ಬಾರಿಸಿ ಮಂಗಳಾರುತಿ ಮಾಡುತ್ತೇವೆ... ಅದಕ್ಕಾಗಿಯೇ ಘಂಟಾನಾದಕ್ಕೆ ಬಹಳ ಮಹತ್ವ..



 #ಶ್ಲೋಕ...ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ...

#ಅರ್ಥ ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾಧ್ವನಿಯನ್ನು ಮಾಡುತ್ತೇನೆ)


ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ ಮುಖದಲ್ಲಿ ಬ್ರಹ್ಮನೂ ಹೊಟ್ಟೆಯಲ್ಲಿ ರುದ್ರನೂ ದಂಡದಲ್ಲಿ ವಾಸುಕಿಯೂ ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲಸಿದ್ದಾರೆ. ಘಂಟಾಸ್ವನವನ್ನು ನಾದಬ್ರಹ್ಮವೆಂದು ಸಂಬೋಧಿಸಲಾಗಿದೆ.



 ಇವರನ್ನು ಪೂಜಿಸಿ ಬಳಿಕ ಗಂಟೆಯನ್ನು ಹೊಡೆಯಬೇಕು. ಉಪಯೋಗಿಸುವಾತ ತನ್ನ ನಾಭಿಯ ಕೆಳಗೆ ಬರುವಂತೆ ಗಂಟೆಯನ್ನು ಹಿಡಿದುಕೊಂಡು ಹೊಡೆಯಬಾರದು. ಗಂಟೆಯ ಧ್ವನಿಯಲ್ಲಿ ಒಡಕಾಗಲಿ ಮರ್ಮರ ಘರ್ಘರ ಶಬ್ದಗಳಾಗಲಿ ಇರಬಾರದು. 



ಗಂಟೆಯಮೇಲೆ ಹನುಮಂತ ಚಕ್ರ ಗರುಡ ವೃಷಭಶೂಲ ಕಮಲ ಇತ್ಯಾದಿ ಚಿಹ್ನೆಗಳಿರುವುದುಂಟು.

ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ. 


ಪದ್ಮಪುರಾಣದಲ್ಲಿ ಸರ್ವವಾದ್ಯಮಯಿ ಘಂಟಾವಾದ್ಯಭಾವೇ ನಿಯೋಜಯೇತ್ ಎಂದು ತಿಳಿಸಿರುವಂತೆ ಗಂಟೆ ಸರ್ವಮಂಗಳ ವಾದ್ಯಗಳ ಪ್ರತೀಕವಾಗಿದೆ. ಸ್ಕಾಂದ ಪುರಾಣದಲ್ಲಿ ಘಂಟಾನಾದೇನ ದೇವೇಶಃ ಪ್ರೀತೋಭವತಿ ಕೇಶವಃ. ಎಂದಿದೆ. 



ನಾಗಾರಿ ಚಿಹ್ನಿತಾ ಘಂಟಾ ರಥಾಂಗೇನಾ ಸಮನ್ವಿತಾ ವಾದನಾತ್ ಕುರುತೇನಾಶಂ ಜನ್ಮಮೃತ್ಯು ಭಯಾ ನಿ ಚ ಎಂಬ ಆರ್ಯೋಕ್ತಿಯೂ ಇದೆ. ಇದರಂತೆ ಭಗವಂತನ ನಿತ್ಯ ಕಿಂಕರನಾದ ಗರುಡ ಇಲ್ಲವೆ ಚಕ್ರದಿಂದ ಅಂಕಿತವಾದ ಗಂಟೆಯ ನಾದದಿಂದ ಭಗವಂತ ಪ್ರೀತನಾಗುತ್ತಾನಾಗಿ ಜನ್ಮಮೃತ್ಯು ಭಯಗಳು ತಪ್ಪುತ್ತವೆ. 



ದೇವೀ ಮಹಾತ್ಮ್ಯದಲ್ಲಿ ಹಿನಸ್ತಿ ದೈತ್ಯತೇಜಾಂಸಿ ಸ್ವನೇನಾಪೂರ್ಯ ಯಾ ಜಗತ್ ಸಾ ಘಂಟಾಪಾತುನೋ ದೇವೀ ಪಾಪೇಭ್ಯೋಃ ಸುತಾನಿವ ಎಂದಿದೆ. ಇದರಂತೆ ಘಂಟಾನಾದದಿಂದ ಮನಸ್ಸಿನಲ್ಲಿರುವ ರಾಕ್ಷಸೀಭಾವನೆಗಳು ದೂರೀಕೃತವಾಗಿ ದೈವೀಭಾವನೆಗಳು ಅವಿರ್ಭವಿಸುತ್ತವೆ. 



ಓಂಕಾರನಾದ ಸಹಿತ ಘಂಟಾಧ್ವನಿರೂಪ ವರ್ಣಶಕ್ತಿಯಿಂದ ವರ್ಣಘಟಕಮಂತ್ರಗಳೂ ತನ್ನಿಷ್ಟ ದೇವತೆಗಳು ಎಚ್ಚರಗೊಳ್ಳುವುದರಿಂದ ದೇವಪೂಜಾರಂಭಕಾಲದಲ್ಲಿ ಗಂಟೆಯನ್ನು ಪೂಜಿಸಿ ಬಳಿಕ ಧ್ವನಿ ಮಾಡಬೇಕು. ಈ ಕಾರಣದಿಂದ ಗಂಟೆಯನ್ನು ಮಂತ್ರಮಾತಾ ಎಂದು ಕರೆಯುತ್ತಾರೆ. 



ಸಚ್ಚಿದಾನಂದ ಸಾಕ್ಷಾತ್ಕಾರಕ್ಕೆ ಮೂಲವಾದ ನಾದ ತತ್ತ್ವದ ಬಾಹ್ಯಪ್ರಯೋಗವಾಗಿ ಗಂಟೆ ಬಳಕೆಗೆ ಬಂದಿತೆಂದೂ ಕ್ರಮೇಣ ದೇವತಾಲಾಂಛನವೆಂಬ ಗೌರವವನ್ನು ಹೊಂದಿ ಪೂಜಾರ್ಹವಾಯಿತೆಂದೂ ಹೇಳಲಾಗಿದೆ. ಘಂಟನಾದವಿಲ್ಲದ ಪೂಜೆ ಇಲ್ಲ. ಪೂಜಾಕಾಲವನ್ನು ಬಿಟ್ಟು ಇತರ ಕಾಲಗಳಲ್ಲಿ ಘಂಟಾನಾದವಿಲ್ಲ.



ದೇವಾರ್ಚನೆ ಅವಾಹನೆ ಧೂಪ ದೀಪ ಅಘ್ರ್ಯ ನೈವೇದ್ಯ ಜಪ ಸ್ತುತ್ಯವಸಾನ ಪೂರ್ಣಾಹುತಿ ವಿಷ್ವಕ್ಸೇನಾರ್ಚನೆ ಗಣಪತಿ ಪೂಜೆ ಬಲಿಪ್ರದಾನ-ಈ ಕಾಲಗಳಲ್ಲಿ ಘಂಟಾನಾದ ಮಾಡಬೇಕು. ಗಂಟಾನಾದ ಎಚ್ಚರಿಸುವುದು ಮಾತ್ರವಲ್ಲದೆ ಸರ್ವವಿಘ್ನಗಳನ್ನೂ ನಾಶಪಡಿಸಿ ಮಂಗಳವನ್ನುಂಟುಮಾಡುತ್ತದೆ.

ಗಂಟೆಯನ್ನು ಆಗಮೋಕ್ತಪ್ರಕಾರದಲ್ಲಿ ಪ್ರತಿಷ್ಠೆ ಮಾಡಿ ಬಳಿಕ ಉಪಯೋಗಿಸಬೇಕು. ಅಸಂಸ್ಕøತ ಗಂಟೆಯನ್ನು ಬಾರಿಸುವುದರಿಂದ ಪೂಜೆ ನಿಷ್ಫಲವಾಗುತ್ತದೆ. ಗಂಟೆಯನ್ನು ಬಾರಿಸುವುದಕ್ಕೆ ಮೊದಲು 


ಶ್ಲೋಕ...ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ...



ಎಂದು ಹೇಳಿ ಬಳಿಕ ಘಂಟಾನಾದ ಮಾಡುವುದು ಇಂದಿಗೂ ರೂಢಿಯಲ್ಲಿದೆ.



#ಘಂಟೆಯ ತುದಿಯಲ್ಲಿ #ಬ್ರಹ್ಮನೂ, ಘಂಟೆಯಲ್ಲಿರುವ ಕಮಲದ #ಮೊಗ್ಗಿನಲ್ಲಿ #ರುದ್ರನೂ, ದಂಡದಲ್ಲಿ #ವಾಸುಕಿಯೂ, ಸ್ವರದಲ್ಲಿ #ಸರಸ್ವತಿಯೂ, ನಾದದಲ್ಲಿ #ಪ್ರಜಾಪತಿಯೂ ಅಭಿಮಾನಿದೇವತೆಗಳಾಗಿರುವರು. ಪೂಜಾ ಸಮಯದಲ್ಲಿ ಬ್ರಹ್ಮಣೇ ನಮಃ, ಮಹಾನಾಗಾಯ ನಮಃ, ಸರಸ್ವತ್ಯೈ ನಮಃ ಹಾಗೂ ಪ್ರಜಾಪತಯೇ ನಮಃ ಎಂಬ ಮಂತ್ರಗಳಿಂದ ಪ್ರತ್ಯೇಕವಾಗಿ ಒಂದೊಂದು #ಪುಷ್ಪಗಳನ್ನು ಸಮರ್ಪಿಸಬೇಕು ಘಂಟೆಗೆ ಸಮರ್ಪಿಸಬೇಕು.



ಘಂಟಾಗ್ರೇ ಬ್ರಹ್ಮದೈವತ್ಯಂ ಮುಕುಲೇ ರುದ್ರದೈವತಂ |

ಸೂತ್ರಾಣಾಂ ಚ ಮಹಾನಾಗಂ ಸ್ವರಂ ಚೈವ ಸರಸ್ವತೀಂ ||
ನಾದಂ ಪ್ರಜಾಪತಿಂ ವಿದ್ಯಾತ್ ಘಂಟಾನಾಮಧಿದೇವತಾಃ || (#ಪರಮಪುರುಷ_ಸಂಹಿತಾ)


 ವೈಷ್ಣವ ದೇವಾಲಯಗಳಲ್ಲಿ ಮಹಾನಿವೇದನ ಕಾಲದಲ್ಲಿ ಬಾರಿಸುವುದಕ್ಕಾಗಿಯೇ ಪ್ರತ್ಯೇಕವಾದ ಒಂದು ದೊಡ್ಡ ಗಂಟೆ ಇರುತ್ತದೆ. ಕೆಲವಡೆ ದೇವಮಂದಿರದ ಬಾಗಿಲಿಗೆ ಚಿಕ್ಕ ಚಿಕ್ಕ ಗಂಟೆಗಳನ್ನು ಜೋಡಿಸಿರುವುದುಂಟು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ಒಂದು ದೊಡ್ಡ ಗಂಟೆ ಇರುತ್ತದೆ. ಪ್ರಾರ್ಥನೆಗೆ ಮೊದಲು ಎಲ್ಲರೂ ಮಂದಿರಕ್ಕೆ ಬಂದು ಸೇರಲು ಅನುಕೂಲಿಸುವಂತೆ ಈ ಗಂಟೆಯನ್ನು ಬಾರಿಸುತ್ತಾರೆ. ಹಿಂದೂ ದೇವಾಲಯಗಳಲ್ಲೂ ದೇವರ ಮುಂಭಾಗದಲ್ಲಿ ದೊಡ್ಡ ಗಂಟೆಗಳನ್ನು ಕಟ್ಟಿರುತ್ತಾರೆ. ಭಕ್ತರು ದೇವರ ದರ್ಶನಕ್ಕೆ ಹೋದಾಗ ಗಂಟೆ ಬಾರಿಸಿ ಬಳಿಕ ನಮಸ್ಕರಿಸುತ್ತಾರೆ.

**********

No comments:

Post a Comment