SEARCH HERE

Friday 20 December 2019

krishna janmashtami ಕೃಷ್ಣ ಜನ್ಮಾಷ್ಟಮಿ shravana bahula ashtami





Observe closely

krishna janmashtami

very important exact dates of ramayana and mahabharata




customs to follow

ಶ್ರೀಕೃಷ್ಣನಿಗೆ ದೇವರ ಮನೆಯಲ್ಲಿಯೇ ಅರ್ಘ್ಯವನ್ನು ನೀಡಬೇಕು. ಅರ್ಘ್ಯದ ನೀರು ನೆಲದ ಮೇಲೆ ಬೀಳದಂತೆ ಒಂದು ಪಾತ್ರೆಯಲ್ಲಿ ಬೀಳುವಂತೆ ನೋಡಿಕೊಳ್ಳಬೇಕು.

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ I
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II

ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ I
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II

ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ I

ದುರುಳಕಂಸನನ್ನು ಕೊಲ್ಲಲಿಕ್ಕಾಗಿ, ಭೂಮಿಯ ಭಾರವನ್ನು ಇಳಿಸುವದಕ್ಕಾಗಿ, ಸಕಲದುಷ್ಟಗುಣಗಳಿಗೆ ಆಶ್ರಯರಾದ ಕೌರವರ ವಿನಾಶಕ್ಕಾಗಿ, ನಮ್ಮ ನಮ್ಮ ಮನಸ್ಸಿನಲ್ಲಿ ನೆಲೆನಿಂತ ದೈತ್ಯರ ಸಂಹಾರಕ್ಕಾಗಿ, ಪಾಂಡವರ ಹಿತಕ್ಕಾಗಿ, ಧರ್ಮಸಂಸ್ಥಾಪನೆಗಾಗಿ ಅವತರಿಸಿಬಂದ ಓ ಕೃಷ್ಣರೂಪದ ಪರಬ್ರಹ್ಮನೇ
ತಾಯಿ ದೇವಕಿಯ ಸಮೇತನಾಗಿ ಈ ಅರ್ಘ್ಯವನ್ನು ಸ್ವೀಕರಿಸು.

ಹೀಗೆ ಮೂರು ಬಾರಿ ಅರ್ಘ್ಯವನ್ನು ನೀಡಬೇಕು. ಆ ನಂತರ ಶಂಖವನ್ನು, ಹಾಲನ್ನು, ಮೇಲೆ ಹೇಳಿದ ಅರ್ಘ್ಯದ ಪದಾರ್ಥಗಳನ್ನು ಮನೆಯ ಅಂಗಳಕ್ಕೆ ತೆಗೆದುಕೊಂಡು ಬರಬೇಕು. ಅಲ್ಲಿ ಮೊದಲೇ ಮಾಡಿದ ರಂಗವಲ್ಲಿಯ ಮೇಲೆ ಅರ್ಘ್ಯದ ಪಾತ್ರೆಯನ್ನಿಟ್ಟು ಮೊಣಕಾಲೂರಿ ಕುಳಿತು

ಶಶಿನೇ ಚಂದ್ರದೇವಾಯ ಸೋಮದೇವಾಯ ಚೇಂದವೇ I
ಮೃಗಿಣೇ ಸಿತಬಿಂಬಾಯ ಲೋಕದೀಪಾಯ ದೀಪಿನೇ II
ರೋಹೀಣೀಸಕ್ತಚಿತ್ತಾಯ ಕನ್ಯಾದಾನಪ್ರದಾಯಿನೇ I
ಶೀತದೀಧಿತಿಬಿಂಬಾಯ ತಾರಕಾಪತಯೇ ನಮಃ II

ಶಶೀ, ಚಂದ್ರ, ಸೋಮ, ಇಂದು, ಮೃಗೀ, ಸಿತಬಿಂಬ, ಲೋಕದೀಪ, ದೀಪೀ, ರೋಹಿಣೀಸಕ್ತಚಿತ್ತ, ಕನ್ಯಾದಾನಪ್ರದಾಯೀ, ಶೀತದೀಧಿತಿಬಿಂಬ, ತಾರಕಾಪತಿ ಎಂಬ ಹನ್ನೆರಡು ಹೆಸರುಳ್ಳ ಚಂದ್ರನಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಸಲ್ಲಿಸಬೇಕು. ಆ ನಂತರ ಶಂಖದಲ್ಲಿ ಹಾಲನ್ನು ತುಂಬಿಸಿ, ಬಲಗೈಯಲ್ಲಿ ಎತ್ತಿಕೊಂಡು, ಬಟ್ಟೆಯಿರುವ ಎಡಗೈಯಲ್ಲಿ ಅದನ್ನು ಹಿಡಿದು, ಆಗತಾನೇ ಉದಯಿಸಿದ ಚಂದ್ರನನ್ನು ಪ್ರೀತಿಯಿಂದ ಕಾಣುತ್ತ

ಕ್ಷೀರೋದಾರ್ಣವಸಂಭೂತ ಅತ್ರಿನೇತ್ರಸಮುದ್ಭವ I
ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್ II

ರೋಹಿಣೀಸಹಿತಚಂದ್ರಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ I
***

version two

ಕೃಷ್ಣ ಜನ್ಮಾಷ್ಟಮಿ ವ್ರತ

ಶ್ರಾವಣ ಮಾಸ  ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು   ಮದ್ಯರಾತ್ರಿಯಲ್ಲಿ  ವಸುದೇವನ ಪತ್ನಿಯಾದ ದೇವಕಿಯು  ಶ್ರೀಕೃಷ್ಣನಿಗೆ ಜನ್ಮವಿತ್ತಳು.... ಸೂರ್ಯನು ಸಿಂಹ ರಾಶಿಯಲ್ಲಿರುವಾಗ  ಜನ್ಮೋತ್ಸವವನ್ನು  ವೈಭವದಿಂದ ಆಚರಿಸಬೇಕು. ..
ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸುವವರು  ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುವರು. ಕೃಷ್ಣ ಜನ್ಮಾಷ್ಟಮಿ ಉಪವಾಸ ಕೋಟಿ ಸಂಖ್ಯಾ ಏಕಾದಶಿಗೆ ಸಮಾನವಾಗಿದೆ.ಯಾರು ಕೃಷ್ಣ ಜನ್ಮಾಷ್ಟಮಿ ವ್ರತವನ್ನಾಚರಿಸುವವರೋ ಅವನಿಗೆ ಶುಭ ಫಲಗಳು ಲಭಿಸುವವು . ಪುತ್ರ ಸಂತಾನ ,ಆರೋಗ್ಯ ಮತ್ತು  ಆತುಲವಾದ ಸೌಭಾಗ್ಯದ ಪ್ರಾಪ್ತಿಯಾಗುವದು. 

ಆಚರಣೆ ವಿಧಾನ...ಕೃಷ್ಣ ಜನ್ಮಾಷ್ಟಮಿ ದಿನವನ್ನು ಸಂಪೂರ್ಣ ಉಪವಾಸ ದಿಂದಲೇ ಕಳೆಯಬೇಕು.
ಶುದ್ಧವಾದ ಒಂದು ಸ್ಥಳದಲ್ಲಿ  ದೇವಕೀ ದೇವಿಯ ಸಲುವಾಗಿ ಒಂದು ಸುಂದರವಾದ  ಹೆರಗೆ ಮನೆಯನ್ನು ಮಾಡಬೇಕು , ಗೋಕುಲವನ್ನು  ನಿರ್ಮಿಸಬೇಕು.  ಗೋಕುಲದ ಮದ್ಯದಲ್ಲಿ  ಷಷ್ಠಿದೇವಿಯೊಂದಿಗೆ  ಶ್ರೀಕೃಷ್ಣನ ಪ್ರತಿಮೆಯನ್ನು ಇಡಬೇಕು.  ಆ ಪ್ರತಿಮೆ ಯಥಾ ಶಕ್ತಿ ಬೆಳ್ಳಿ ,ತಾಮ್ರ ,ಹಿತ್ತಾಳೆ ,ಮೃತ್ತಿಕೆಯಿಂದಾಗಲಿ ಮಾಡಿದ್ದಿರಬೇಕು. ಕಟ್ಟಿಗೆಯಿಂದ ಮಾಡಿದ್ದರೂ ನಡೆಯುತ್ತೆ. ಮಂಚದ ಮೇಲೆ ತಾಯಿಯಸ್ತನ್ಯಪಾನ ಮಾಡುತ್ತಿರುವ  ಶ್ರೀಕೃಷ್ಣನ ಪ್ರತಿಮೆಯನ್ನೂ ಇಡಬೇಕು,  ಸೂತಿಕಾ ಗ್ರಹದ ಒಂದು ಸ್ಥಳದಲ್ಲಿ ಯಶೋದಾ  ದೇವಿಯ ಪ್ರತಿಮೆಯನ್ನು ಮಾಡಿ ಇಡಬೇಕು.   ಬಾಣಂತಿ ದೇವಕಿಯನ್ನು  ಕೃಷ್ಣನ ಬದಿಗಿರುವಂತೆ  ಇಡಬೇಕು.   ಬಲರಾಮ ,ಗೋಕುಲದಲ್ಲಿ ಕೈಮುಗಿದು ಕೊಂಡು ನಿಂತಿರುವ ದೇವತೆಗಳು , ಯಕ್ಷರು ವಿದ್ಯಾಧರರು  ಮುಂತಾದವರ ಪ್ರತಿಮೆಯನ್ನು ಮತ್ತು  ವಸುದೇವನ ಪ್ಪತಿಮೆಯನ್ನು ಮಾಡಿ ಇಡಬೇಕು.    ನಂತರ  ಮದ್ಯದಲ್ಲಿ ಇಟ್ಟಿರುವ ಕೃಷ್ಣ ನ ಪ್ರತಿಮೆಗೆ   ಆಹ್ವಾನ ಅರ್ಘ್ಯ ಪಾದ್ಯ ಕೊಟ್ಟು ಹೂವಿನಿಂದ ಸ್ನಾನ ಪ್ರೋಕ್ಷಣೆ ಮಾಡಿ ಗೆಜ್ಜೆ ವಸ್ತ್ರವನ್ನು ಎರಿಸಿ  ಗಂದ ಅಕ್ಷತೆ ನಾನಾ ಪರಿಮಳ ಪುಷ್ಪವನ್ನು ತುಳಸಿಮಾಲೆಯಿಂದ  ಅಲಂಕರಿಸಬೇಕು . ಕೃಷ್ಣ ಅಷ್ಟೋತ್ತರ ಹೇಳಿ ತುಳಸಿ ಪಾರಿಜಾತ ಪುಷ್ಪಳನ್ನು ಏರಿಸಿ. ವಸುದೇವ ,ದೇವಕಿಯುರ , ಶ್ರೀಕೃಷ್ಣನ ,ಬಲರಾಮ , ನಂದಯಶೋಧೆಯರ ,  ಒಂದೊಂದೇ ಹೇಸರು ಹೇಳುತ್ತಾ ಪೂಜಿಸಬೇಕು.  ಹಣ್ಣು ಹಾಲು ನೈವೇದ್ಯ ಮಾಡಬೇಕು.. ಮತ್ತು ನಿಮ್ಮ ಮನೆತನದಲ್ಲಿ ಯಾವರೀತಿ ಪದ್ದತಿ ಪ್ರಕಾರ ನೈವೇದ್ಯ ಮಾಡಿ... ಕೆಲವರು ಮದ್ಯರಾತ್ರಿಯಲ್ಲಿ ಅರ್ಘ್ಯ ಕೊಟ್ಟು ನಾನಾ ತರಹದ  ಚಕ್ಕುಲಿ , ಉಂಡಿ  ಫರಾಳವನ್ನು ನೈವೇದ್ಯ ಮಾಡುತ್ತಾರೆ  ,ಕೆಲವರು ಬೇಳಿಗ್ಗೆ ಪೂಜೆಮಾಡಿದ ಮೇಲೆ ನೈವೇದ್ಯ ಮಾಡುತ್ತಾರೆ ಅದು ನಿಮ್ಮ ಮನೆತನದ ಪದ್ಧತಿ ಪ್ರಕಾರ  ಮಾಡಿ..

ನಂತರ ಚಂದ್ರೋದಯವಾಗಲು ಶ್ರೀ ಹರಿಯನ್ನು  ನೆನೆಸುತ್ತಾ  ಶಶಾಂಕನಿಗೆ ಅರ್ಘ್ಯ ವನ್ನು ಕೊಡಬೇಕು. 

ಚಂದ್ರನಿಗೆ ಅರ್ಘ್ಯ ವನ್ನು ಕೊಡುವಾಗ ಹೇಳುವ ಮಂತ್ರ.. 
ಕನ್ನಡದಲ್ಲೇ ಹೇಳಿಕೊಡುತ್ತೇನೆ....
ಕ್ಷೀರಸಾಗರದಲ್ಲಿ ಹುಟ್ಟಿದ ,ಅತ್ರಿಗೋತ್ರ  ಸಮುದ್ಭೂತನಾದ , ರೋಹಿಣಿಪತಿಯಾದ ಚಂದ್ರನೇ ,ನಿನಗೆ ನಾನು ನಮಸ್ಕರಿಸುತ್ತೇನೆ. ನಾನು ಕೊಟ್ಟ ಅರ್ಘ್ಯ ವನ್ನು ಸ್ವೀಕರಿಸು ಅಂತ ಹೇಳಿ ಚಂದ್ರನಿಗೆ ಅರ್ಘ್ಯ ಕೊಟ್ಟು 
 
ನಂತರ  ಮದ್ಯರಾತ್ರಿಯಲ್ಲಿ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ತೂಗಿ  ಆರತಿ ನೈವೇದ್ಯ ಮಾಡಬೇಕು..‌

ನಂತರ ಶ್ರೀಕೃಷ್ಣನಿಗೆ  ಶುದ್ಧವಾದ  ಜಲವನ್ನು ಶಂಖದಲ್ಲಿ ಹಾಕಿ  ಪುಷ್ಪ ಫಲ ಚಂದನಗಳೊಂದಿಗೆ  ಅರ್ಘ್ಯ ವನ್ನು ಕೊಡಬೇಕು .  ಅರ್ಘವನ್ನು ಕೊಡುವಾಗ  ನೆಲದಮೇಲೆ ಮೊಳಕಾಲನ್ನು ಊರಿ  ತೆಂಗಿನಕಾಯಿ ಸಮರ್ಪಣೆಯೊಂದಿಗೆ  ಹೀಗೆ ಹೇಳಬೇಕು....

ಇದನ್ನು ನಿಮಗೆ ಕನ್ನಡದಲ್ಲಿ ಹೇಳಿಕೊಡುತ್ತೇನೆ..‌‌
* ಹೇ ಶ್ರೀಹರೇ  ಕಂಸನವಧೆ ಮಾಡುವದಕ್ಕಾಗಿ  ಮತ್ತು ಭೂಭಾರ ವನ್ನು  ಕಡಿಮೆ ಮಾಡುವದಕ್ಕಾಗಿ  ಈ ಭೂಮಿಯ ಮೇಲೆ ಅವತಾರ ಮಾಡಿರುವಿ  ದೇವಕ ದೇವಿಯಿಂದ ಸಹಿತನಾದ ನೀನು ನಾನು ಕೊಡುತ್ತಿರುವ   ಈ ಅರ್ಘ್ಯ ವನ್ನು ಸ್ವೀಕರಿಸು ಪ್ರಭೋ  ಅಂತ ಹೇಳಿ ಅರ್ಘ್ಯ ವನ್ನು ಕೊಟ್ಟು... 

 ನಂತರ ಕೈಮುಗಿದು 
ಹೇ ಜಗನ್ನಾಥ್ ದೇವಕಿಪುತ್ರ , ಪ್ರಭೋ, ವಸುದೇವಾತ್ಮಜಾ , ಅನಂತ  ನನ್ನನ್ನು ಈ ಭವಸಾಗರದಿಂದ ಉದ್ವರಿಸು  ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು...‌‌
ನಂತರ ಮಾರನೇಯ ದಿನ ಪಾರಣಿಮಾಡಿ ನಾನಾ ಭಕ್ಷ್ಯಗಳನ್ನು ಅಡುಗೆ ಮಾಡಿ ನೈವೇದ್ಯ ಆರತಿ ಮಾಡಬೇಕು....

ಕಥೆ

ಹಿಂದಕ್ಕೆ  ಅಂಗದೇಶದಲ್ಲಿ ಮಿತಜಿತ ಎಂಬ ಹೆಸರಿನ  ಒಬ್ಬರಾಜನಿದ್ದ  ಅವನಿಗೆ ಮಹಾಸೇನ ಅನ್ನುವ ಮಗನಿದ್ದ ಅವನು ಯಾವಾಗಲೂ ಸದಾಚಾರದಿಂದಲೇ ರಾಜ್ಯಭಾರ ಮಾಡುತ್ತಿದ್ದ  ಹೀಗೆ ಇರಬೇಕಾದರೆ ದೈವಯೋಗದಿಂದ ಪಾಕಂಡಿಗಳೊಂದಿಗೆ  ವಾಸ ಪ್ರಸಂಗ ಬಂದಿತು,ಅವರ ಸಹವಾಸದಿಂದ ರಾಜನು ಅಧರ್ಮ ಕಾರ್ಯ ನಿರತನಾದ  ವೇದಶಾಸ್ತ್ರ ಪುರಾಣಗಳನ್ನು ನಿಂದಿಸತೊಡಗಿದ.ನಂತರ ಅವನು ಗತಿಸಲು ಯಮದೂತರು ಪಾಶಗಳಿಂದ ಕಟ್ಟಿ  ಯಮಧರ್ಮನಿದ್ದಲ್ಲಿ  ಸೆಳೆದೊಯ್ದರು.
ನರಕದಲ್ಲಿ ಒಗೆಯಲ್ಪಟ ಅವನು ಬಹುವರುಷಗಳವರೆಗೆ ನರಕ ಯಾತನೆ ಅನುಭವಿಸಿ ದ ನಂತರ ಪಾಪಶೇಷದಿಂದ ಪಿಶಾಚಿಯೋನಿಯಲ್ಲಿ ಜನಿಸಿ  ಹಸಿವು ನೀರಡಿಕೆಗಳಿಂದ  ತಿರುಗಾಡುತ್ತಿರುವಾಗ 
ದೈವ ನೀಯೊಗದಿಂದ  ಋಷಿಮುನಿಗಳು ಮಾಡುತ್ತಿರುವ 
ಕೃಷ್ಣ ಜನ್ಮಾಷ್ಟಮಿ ವ್ರತ  ಪೂಜೆಯನ್ನು ಮತ್ತು ನಾಮ ಸಂಕಿರ್ತ್ಯನಾದಿಗಳಿಂದ  , ಶ್ರೀಹರಿಯ ನಾಮ ಕಥೆಯನ್ನು ಶ್ರವಣಮಾಡಿ,
ಇದರಿಂದ ತಕ್ಷಣವೇ ಪಾಪ ಮುಕ್ತನಾಗಿ ಶುದ್ಧನಾದನು.  ಪ್ರೇತ ದೇಹವನ್ನು ತ್ಯಜಿಸಿ ದಿವ್ಯ ವಿಮಾನದಲ್ಲಿ ಕುಳಿತು ವಿಷ್ಣುವಿನ ಸನ್ನಿಧಿ ಹೊಂದಿದನು......ಎಂಬಲ್ಲಿಗೆ ಶ್ರೀಕೃಷ್ಣ ಜನ್ಮಾಷ್ಟಮಿ  ವ್ರತ ಕಥೆ..‌ಸಂಪೂರ್ಣ
***

customs Another. by ಕೆ.ವಿ.ಲಕ್ಷ್ಮೀನಾರಾಯಣಚಾರ್ಯ,
ಆನೇಕಲ್.
.ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ|
ಪ್ರಣತಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ||

ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ|
ನಾಥಾಯ ರುಕ್ಮಿಣೇಶಾಯ ನಮೋ ವೇದಾಂತ ವೇದಿನೇ||

ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ|
ನಂದ ಗೋಪಕುಮಾರಾಯ ಗೋವಿಂದಾಯ ನಮೋ ನಮಃ||

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

. ಈ ದಿನವೇ ಶ್ರೀಕೃಷ್ಣ ಜನ್ಮಾಷ್ಟಮಿ. ಬೆಳಗ್ಗೆ ಎದ್ದು, ದೇವರ ಮನೆ ಬಳಿ ತೆರಳಿ ಪ್ರಾರ್ಥಿಸಬೇಕು. ನಂತರ ಸ್ನಾನ‌ಮುಗಿಸಿ ಶುಚಿರ್ಭೂತರಾಗಿ ವ್ರತ ಹಿಡಿಯಬೇಕು. ಶ್ರದ್ಧಾಳುಗಳು ದಿನವಿಡೀ ಉಪವಾಸ ಇರಬೇಕು. ದೇವರ ಮನೆಯ ಮೂರ್ತಿಗಳಿಗೆ ಹಿಂದಿನ ದಿನ ಅರ್ಪಿಸಿದ್ದ‌ ಪುಷ್ಪ(ನಿರ್ಮಾಲ್ಯ) ತೆಗೆಯಬೇಕು. ಶ್ರೀಕೃಷ್ಣ ಲೀಲಾವಳಿಯಾದ ಭಾಗವತ, ಭಗವದ್ಗೀತೆ, ಕೃಷ್ಣಾಷ್ಟಕ ಮತ್ತಿತರ ಸದ್ಗ್ರಂಥಗಳನ್ನು ಪಠಿಸಬೇಕು. 
 
 ಶಾಸ್ತ್ರ ಪ್ರಕಾರ ಈ ದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ‌ಸ್ನಾನ ಮಾಡಬೇಕು. ರಾತ್ರಿ ಹತ್ತುಗಂಟೆ ಸಮೀಪಿಸುತ್ತಿದ್ದಂತೆ ಶುದ್ದ ಸ್ನಾನ ಮಾಡಿ, ದೇವರ ಪೂಜೆ ಆರಂಭಿಸಬೇಕು. ಬೇರೆ ದಿನಗಳಲ್ಲಿ ಈ ಅವೇಳೆ ಪೂಜೆ ನಿಷಿದ್ಧ, ಆದರೆ‌ ಶ್ರೀಕೃಷ್ಣ ಪರಮಾತ್ಮ ಜನಿಸಿದ ಸಮಯವಾದ್ದರಿಂದ ಅವಶ್ಯ ಷೋಡಶೋಪಚಾರ ಪೂಜೆ ಮಾಡಬೇಕು. ಹಾಲು, ಮೊಸರಿನ‌ ಬದಲಿಗೆ ಬೆಣ್ಣೆ ತೆಗೆದ ಮಜ್ಜಿಗೆ, ತುಪ್ಪ, ಜೇನು, ಸಕ್ಕರೆ, ಎಳನೀರಿನಿಂದ ಪಂಚಾಮೃತ‌ ಅಭಿಷೇಕ ಮಾಡಬೇಕು. ಗಂಧೋದಕದಿಂದ ಸ್ನಾನ ಮಾಡಿಸಿ, ತುಲಸಿ, ಪುಷ್ಪಗಳಿಂದ ಅರ್ಚಿಸಬೇಕು. ನಂತರ ನೈವೇದ್ಯ ಸಮರ್ಪಿಸಬೇಕು. ಬಾಲಕೃಷ್ಣನಿಗೆ ಪ್ರಿಯವಾದ ಲಡ್ಡುಗೆ, ಚಕ್ಕುಲಿ, ಅತಿರಸ‌ ಮತ್ತಿತರ ಪದಾರ್ಥಗಳನ್ನು ನಿವೇದಿಸಬೇಕು. ಪೂಜೆಯ ನಂತರ ಚಂದ್ರೋದಯದ ವೇಳೆಗೆ ಸರಿಯಾಗಿ‌ ದೇವಕಿ ಸಹಿತ ಶ್ರೀಕೃಷ್ಣ ದೇವರಿಗೆ ಹಾಗೂ ಚಂದ್ರನಿಗೆ ಅರ್ಘ್ಯ ನೀಡಬೇಕು. ನಂತರ ತೀರ್ಥ‌ಸ್ವೀಕರಿಸಿ ಮಲಗಿ ನಿದ್ರಿಸಬೇಕು. ಮರುದಿನ ಪಾರಣೆ, ದೇವರ ಪೂಜೆ ನಡೆಸಿ ತೀರ್ಥ ಸ್ವೀಕರಿಸಿ ಪ್ರಸಾದ(ಭೋಜನ) ಸ್ವೀಕರಿಸಬೇಕು.

ಅರ್ಘ್ಯ ವಿಧಾನ:

ಶ್ರೀಕೃಷ್ಣ ದೇವರಿಗೆ ನೀರಿನಿಂದ ದೇವರ ಮನೆಯಲ್ಲಿ ಹಾಗೂ ಚಂದ್ರನಿಗೆ ಹಾಲಿನಿಂದ ಮನೆಯ ಹೊರಗಡೆ ಅರ್ಘ್ಯ ಪ್ರದಾನ ಮಾಡಬೇಕು.

ಶಂಖದಲ್ಲಿ ಗಂಧೋದಕ ಅಥವಾ ಶುದ್ಧೋದಕ ತುಂಬಬೇಕು. ನಂತರ ಎಡಗೈಯ್ಯಲ್ಲಿ ಒಂದು‌ವಸ್ತ್ರ ತೆಗೆದುಕೊಂಡು ಅದರಲ್ಲಿ ಶಂಖವನ್ನು ಹಿಡಿದುಕೊಳ್ಳಬೇಕು. ಬಲಗೈಯ್ಯಲ್ಲಿ ಬಂಗಾರ ಅಥವಾ ಬೆಳ್ಳಿಯ ನಾಣ್ಯ, ತೆಂಗಿನ ಕಾಯಿ ಹೋಳು ಹಾಗೂ ಪೂಜೆಗೆ ಬಳಸದ ಪುಷ್ಪಗಳನ್ನು ಹಿಡಿದು ಶಂಖುವಿನಲ್ಲಿನ ನೀರನ್ನು ಬಲಗೈಗೆ ಹಾಕಿಕೊಂಡು ಬಂಗಾರ, ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅರ್ಘ್ಯ ನೀಡಬೇಕು. ಇದೇ ರೀತಿ ಮನೆಯ ಹೊರಗಡೆ ಸಾರಿಸಿ ರಂಗವಲ್ಲಿ ಹಾಕಿದ ಸ್ಥಳದಲ್ಲಿ ನೀರಿನ ಬದಲು ಹಾಲಿನಿಂದ ಚಂದ್ರನಿಗೆ ಅರ್ಘ್ಯ ಕೊಡಬೇಕು.

ಶ್ರೀಕೃಷ್ಣಾರ್ಘ್ಯ ಮಂತ್ರ:

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ|
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ||

ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ|
ಗೃಹಾಣರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ||

ದೇವಕಿ ಸಹಿತ ಶ್ರೀಕೃಷ್ಣಯಾ ಇದಮರ್ಘ್ಯಂ ಸಮರ್ಪಯಾಮಿ.

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವಸಂಭೂತ ಅತ್ರಿನೇತ್ರ ಸಮುದ್ಭವ|
ಗರಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾಸಹಿತಃ ಶಶಿನ್||
ರೋಹಿಣೀಸಹಿತಚಂದ್ರಾಯ ನಮಃ|
ಇದಮರ್ಘ್ಯಂ ಸಮರ್ಪಯಾಮಿ|
***


What is Krishna Astami  & what is Krishna Jayanti?-
As per sampradaya, the Sri Krishna Janmashtami is observed on the day when the ashtami tithi occurs at midnight. If the ashtami tithi AND the Rohini nakshatra occur on the same day, then the observance is considered to be doubly sacred; otherwise the observance is held on the day on which the ashtami prevails at midnight. 
 
Tithi – Shravana Krishna paksha Astami  it is Krishnastami.
If on that day if there is Rohini Nakshatra it is termed as Sri Krishna Jayanti.  It is the sacred day for all as it is on this day that Sri Krishna, who is not having the Praktuta shareera,  was born as a child of Devaki.

Krishna – Damodara –  Krishna is popularly called as Damodara – ದಾಮ + ಉದರ = ದಾಮೋದರ – ದಾಮ =ಹಗ್ಗ (rope) ಉದರ = ಸೊಂಟ  (waist). Krishna was a very naughty boy.  He used to lot of mischievous things in front of her mother and other Gopika strees.  Unable to control him, Yashoda tied Krishna to a grinding stone (ಒರಳುಕಲ್ಲು).  Initially she tried to tie him with the rope, which was shorter by two inches.   Again she added some more ropes, still it was short.  She went on joining ropes to the rope but each it was shorter by two inches.  Then she realised that Krishna, the paramathma can’t be bound by anyone.  Then Krishna allowed her to tie him to the grinder stone.    Then Krishna started moving in and around, the grinder also followed him as he was tied to it.  Krishna pulled and drags it through the two trees, which were standing close by in Vrundavana.   The two trees were Nalakuvara and Manigriva who were cursed (as they were taking bath without vastra) by Narada  Maharshi to become trees . They got Moksha when Krishna pulled the two trees down using the grinding stone.

KrishnArgya mantra –
ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ|
ದೇವಕೀ ಸಹಿತ ಶ್ರೀ ಕೃಷ್ಣಾಯ ನಮ: |
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ |
(ಮೂರು ಸಾರಿ ಅರ್ಘ್ಯ ಕೊಡಬೇಕು)

जात: कंसवधार्थाय भूभारोत्तारणाय च ।
कौरवाणां विनाशाय दैत्यानां निधनाय च ।
पांडवानां हितार्थाय धर्मसंस्थापनाय च ।
गृहाणार्घ्यं मया दत्तं देवक्या सहितो हरे।
देवकी सहित श्री कृष्णाय नम: ।
इदमर्घ्यं इदमर्घ्यं इदमर्घ्यं समर्पयामि ।

jaata: kaMsavadhaarthaaya bhUbhaarOttaaraNaaya cha
kouravaaNaaM vinaashaaya daityaanaaM nidhanaaya cha |
paaMDavaanaaM hitaarthaaya dharmasaMsthaapanaaya cha |
gRuhaaNaarGyaM mayaa dattaM dEvakyaa sahitO harE|
dEvakI sahita shrI kRuShNaaya nama: |
idamarGyaM idamarGyaM idamarGyaM samarpayaami |

 

Chandraargya  Mantra :
ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ |
ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: |
ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |
क्षीरोदार्णव संबूत अत्रिनेत्र समुद्भव ।
गृहाणार्घ्यं मया दत्त रोहिणी सहिताय शशिने नम: ।
रोहिणीसहिताय चंद्रमसे इदमर्घ्यं इदमर्घ्यं इदमर्घ्यं ।
kSheerOdaarNava saMboota atrinEtra samudbhava |
gRuhaaNaarGyaM mayaa datta rOhiNI sahitaaya shashinE nama: |
rOhiNIsahitaaya chaMdramasE idamarGyaM idamarGyaM idamarGyaM |
***



Introduction:

The auspicious day of the appearance of Lord Krishna is celebrated all over the world as  "Sri Krishna Janmashtami ". It is celebrated on the eighth day of the Krishna Paksha  of the month of Shraavana. Krishna, who is the Supreme Personality of Godhead, appeared in Mathura as son of    Vrishni dynasty King Vasudeva  and  princess Devaki.



“As stated in he Bhagavad-gita, the Lord says that his appearance, birth, and activities, are all transcendental, and one who understands them factually becomes immediately eligible to be transferred to the spiritual world.

Lord Krishna Himself in Bhagavad gita, Chapter 4 text 8 describes the reason of His appearance as follows:

ParitranaayA Sadhunam

vinAshaaya cha dushkrutaam
dharma-samsthapanaarthaaya
sambhavaami yuge yuge

To deliver the pious and annihilate the miscreants, as well also reestablish the principles of religion, I Myself appear millennium after millennium.


Birth
                                                                            Krishna was the 8th son of princess  Devaki and Vasudeva, King of Vrishni Dynasty. Acording to astrological calculations the date of Krishna's birth, known as Janmashtami, is 19th  July 3228 BCE and departed on 3102 BCE. Krishna belonged to the Vrishni clan of Yadavas from Mathura, and was the eighth son born to the princess Devaki, and her husband Vasudeva.

                  
Mathura (in present day Mathura district, Uttar Pradesh) was the capital of the Yadavas, to which Krishna's parents Vasudeva and Devaki belonged. King Kansa, Devaki's brother,had ascended the throne by imprisoning his father, King Ugrasena. Afraid of a prophecy that predicted his death at the hands of Devaki's eighth son, Kansa had the couple locked into a prison cell. After Kansa killed the first six children, and Devaki's apparent miscarriage of the seventh (which was actually a secret transfer of the infant to Rohini ( second wife of Vasudeva) as Balarama), Krishna was born.
                                               
After his birth Vishnu ordered Vasudeva to take Krishna to Gokul to Nanda ( brother of Vasudeva) and Yashoda where he can live safely,away from his evil Uncle Kansa. So Vasudeva took Krishna with him and crossed Yamuna to reach Gokul .There everyone was asleep,so he quietly kept him there and returned with Yashoda's daughter.Kansa,thinking her to be Devaki's eight child,threw her on a stone.But she rose in air and transformed into Yogmaya(who is  Krishna's sister according to Bhagavata Purana), an incarnation of Lord Krishna and warned Kansa about his death that devaki's son is alive and he will kill you. Then she vanished after predicting Kansa's death. Krishna grew up in Gokul with his brother Balarama. Then he
 returned to Mathura and killed Kansa with the help of his brother,Balrama.

According to legend princess Devaki feeding Balagopala (Krishna) should be worshipped.To worship lord Krishna keep ready Tulsi ,Parijatha flowers and red flowers,as Krishna will be pleased .He likes Laddoos prepared with ghee, Milk, butter, yogurt, Chaklis, etc., So prepare all these dishes and do naivedyam after offering arghyam, Mangalaarati, Aarathi and serve prasadam.
*******

Info from madhwasaints.wordpress.com-->
Fasting
Irrespective of caste, fasting should be done on krishna janmashtami day. Fasting is observed 24-hour before the birth of Lord Krishna, which had taken place during the midnight. By once fasting during Krishnaashtami, a person becomes free from the sins of seven births. Merits of giving a thousand cows in charity, Merits of giving many millions of jewels in charity, Merits of building many temples, Merits of devotedly serving parents and Guru are easily achieved in this fasting. Goddess Lakshmi always stays among those great souls who observe the vow of Krishnaashtami. There’s nothing in the Vedas or the Puranas equal to or better than the vow of Shri Krishna-Janmashtami. The descendants one who fast will be righteous. He attains health and peerless good fortune. He becomes devoted to truth and religion, and when he dies, he goes to Vaikuntha. He becomes the home of many virtues. One who does not fast jumps over the rules of religion. Even a person who accidentally observes the vow of Krishnaashtami will go to the spiritual world of Lord Vishnu. Of this, there is no doubt. A person, who, on this day, worships Sri Vishnu washes away his sins, either great or small, or performed in childhood, youth, or maturity, in seven births. He attains the results of homas, yajnas, and charity multiplied a hundred times. He attains whatever his heart desires. A person who fasts on this day becomes freed from the greatest sins. When they are done to please Sri Vishnu, bathing, charity, homa, Ved study, japa, and austerity are multiplied a hundred times when performed on Krishnaashtami. Spending the time with talks of the scripture Bhagavad-gita, one should keep an all-night vigil. To Lord Krishna, one should offer incense, lamps, food, and betelnuts. In the Skanda Purana, Brahma tells Narada: “O brahmana, when one observes such an all-night vigil, all his sins from the time of his birth are at once destroyed.” NOTE: All the description above (the glories of the Shri Krishna-Janmashtami vow) are very confidential and hidden in all the scriptures. By once hearing this description, a person becomes free from all his sins. At the end of his body , he goes to the world of Lord Krishna. ****

No one remembers  the girl baby born on the same day who was interchanged with Krishna, a boy baby, to save his life. The boy's life was precious but the girl was born to sacrifice her life. Today is not only the birthday of Krishna but also of Yogamaya.

It is said that Yogmaya flew off to Heavens freeing herself from the clutches of Kansa while announcing to Kansa that your killer has been born. Scriptures do not clearly  mention that she too got killed like other siblings of Krishna. However more knowledgeable are requested to throw light on it.

Yogmaya was also an incarnation of Shakti who came to be born along with the incarnation of Lord Vishnu to keep some old promise. When Kansa caught her by her feet and hurled her to the ground, she flew towards the heaven, saying “Kansa, your killer has already taken birth. I could have also killed you but since you caught me by my feet, I take it as your expression of humility and am pardoning you”.

 Krishna was born in the darkness of the night, into the locked confines of a jail.

However, at the moment of his birth, all the guards fell asleep, the chains were broken and the barred doors gently opened.

Similarly, as soon as Krishna ( Chetna, Awareness ) takes birth in our hearts, all darkness ( Negativity ) fades.

All chains ( Ego, I, Me, Myself ) are broken.

And all prison doors we keep ourselves in (Caste, Religion, Profession, Relations etc) are opened. 

And that is the real  Message And Essence of Janmashtmi.
***

#ಕೃಷ್ಣ #ಜನ್ಮಾಷ್ಟಮಿ
🌸🌸🌸🌸🌸🌸🌸

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

#ಪುರಾಣ #ಹಿನ್ನೆಲೆ*
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.[ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.
ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು.
ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ]]) ಯಾದವ ಕುಲದ ರಾಜಧಾನಿಯಾಗಿತ್ತು.

ಕಂಸ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು.ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.
ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು.
ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

#ಜನನ, #ಜೀವನ*
ದೇವಕಿ ಮತ್ತು ವಸುದೇವರು ಸೆರೆಮನೆಯಲ್ಲಿ ಇರುವಾಗ ಕೃಷ್ಣನ ಜನನವಾಗುತ್ತದೆ. ತಂದೆ ವಸುದೇವ, ತಾಯಿ ದೇವಕಿ. ಸಾಕು ತಂದೆ ನಂದರಾಜ, ಸಾಕುತಾಯಿ ಯಶೋದೆ. ಉಗ್ರಸೇನ ಮಹಾರಾಜ ಕೃಷ್ಣನ ತಾತ. ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ.

#ಭಾಗವತ*
ಭಾಗವತದಲ್ಲಿ ಶ್ರೀಕೃಷ್ಣನ ಕತೆಗಳಿವೆ.

ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು "ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ" ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ವೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.
ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.
ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಕೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀವೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.
ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.

#ಮಹಾಭಾರತದಲ್ಲಿ*

ಮಹಾಭಾರತದಲ್ಲಿ ಶ್ರೀವೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀವೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಮತ್ತು ಪಾಂಡವರ ಗುರುತು ಹಿಡಿದು ಬಲರಾಮನಿಗೆ ತೋರಿಸುತ್ತಾನೆ. ನಂತರ ಅವನು ಯಾದವರೊಡನೆ ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಭಾಗವಹಿಸುವನು. ಜೂಜಿನಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ.
ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀವೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.
ವೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಡುತ್ತಾನೆ.
ರಾಮಾಯಣದ ಜಾಂಬವಂತನನ್ನು ಎದುರಿಸಿ ಶ್ಯಮಂತಕ ಮಣಿಯನ್ನೂ, ಜಾಂಬವಂತನ ಮಗಳು ಜಾಂಬವತಿಯನ್ನೂ ಗೆಲ್ಲುವ ವೃಷ್ಣ, ಜಾಂಬವಂತನಿಗೆ ರಾಮಾಯಣದ ಶ್ರೀರಾಮಚಂದ್ರನ ರೂಪದಲ್ಲಿ ದರ್ಶನ ನೀಡುತ್ತಾನೆ.
ರಾಮಾಯಣದಲ್ಲಿ ರಾಮನಾಗಿ ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ಮಾತು ನೀಡಿರುತ್ತ್ತಾನೆ. ಅದರಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ವೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನಿಯಾಮಕ ಶ್ರೀ ವೃಷ್ಣ ಅಸು ನೀಗಿ ತನ್ನ ಅವತಾರವನ್ನು ಮುಗಿಸುತ್ತಾನೆ.[

#ಕೃಷ್ಣನ ಇತರ #ಹೆಸರುಗಳು

ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು.
ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು.
ವಾಸುದೇವ : ವಸುದೇವನ ಮಗ
ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು
ಕಾಲದೇವ: ಯಮನನ್ನು ಮೀರಿಸಿದವ.
ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ
ಕೊಲ್ಲ: ಎಮ್ಮೆಗಳನ್ನು ಪಾಲಿಸಿ, ಕಾಪಾಡುವವನು.
ವೇಣುಗೋಪಾಲ : ಕೊಳಲನ್ನು ನುಡಿಸುವವನು.
ಕೊಲ್ಲ: ಎಮ್ಮೆಗಳನ್ನು ರಕ್ಷಿಸುವವನು
ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು
ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು
ಜಗನ್ನಾಥ: ಜಗತ್ತಿಗೆ ನಾಯಕನಾದವನು
ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
ಪತಿತ ಪಾವನ: (?) ಪಾಪಿಗಳನ್ನು ಉದ್ದರಿಸುವವನು
ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು)
ಪಾರ್ಥ ಸಾರಥಿ: ಅರ್ಜುನನ ಸಾರಥಿ
ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು.
ಮಾಧವ: ವಸಂತ ಋತು ತರುವವ, ಮಾ =ಲಕ್ಷ್ಮಿ -ಧವ =ಒಡೆಯ (?)
ಮುಕುಂದ: ಮುಕ್ತಿಯನ್ನು ಕೊಡುವವನು
ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು
ಶ್ಯಾಮಸುಂದರ: ಕಪ್ಪು ವರ್ಣದವನು
ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು
ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
ನವನೀತ : ತಾಜಾ ಬೆಣ್ಣೆಯನ್ನು ತಿಂದವನು
ಸುದರ್ಶನ : ಸುದರ್ಶನ ಚಕ್ರ ಹೊಂದಿದವ
ಮುರಳಿ : ಕೊಳಲನ್ನು ಹೊಂದಿದವ
ಜನಾರ್ಧನ :
ಮುರಾರಿ :
ಘನಶ್ಯಾಮ: ವೃಷ್ಣನ ಮೈಬಣ್ಣ ಮೋಡದಂತೆ ಕಪ್ಪು
ದಾಮೋದರ:
ಪಾಂಡುರಂಗ:
ಕೇಶವ:
ವಿಠಲ:
ಶ್ರೀರಂಗನಾಥ:

ಕೃಪೆ :Whatsapp
***

ಕೃಷ್ಣಾವತಾರ ಚಿಂತನೆ - by ನರಹರಿ ಸುಮಧ್ವ


ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಚಕ್ರಗದಾದ್ಯುದಾಯುಧಂ !

ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ       ಪೀತಾಂಬರಂ ಸಾಂದ್ರಪಯೋದಸೌಭಗಂ ||

(ಭಾಗವತ)

ಶ್ರೀಹರಿ ಕೃಷ್ಣಾವತಾರದ ರೂಪದಲ್ಲೇ ಸೂಕ್ಷ್ಮವಾಗಿ ತನ್ನ ವಿಶ್ವರೂಪವನ್ನು ತೋರಿಸಿದ್ದಾನೆ.   ಕೃಷ್ಣ ಅವತರಿಸಿದಾಗ ಪ್ರಾಕೃತ ಶಿಶುವಿನ ಯಾವುದೇ ಲಕ್ಷಣವೂ ಇರಲಿಲ್ಲ.   ಅಪ್ರಾಕೃತ ಶರೀರಿಯಾದ ಅವನು ಹುಟ್ಟಿನಲ್ಲೇ ಚತುರ್ಭುಜ, ಶಂಖಚಕ್ರಾದಿ ಆಯುಧಗಳು, ಎದೆಯಲ್ಲಿ ಶ್ರೀವತ್ಸ ಲಾಂಛನ, ಕಂಠದಲ್ಲಿ ಕೌಸ್ತುಭ, ಪೀತಾಂಬರಧರ,  ವಜ್ರ ವೈಢೂರ್ಯಾದಿ ನವರತ್ನ ಖಚಿತ ಕಿರೀಟ ಕುಂಡಲಿಗಳು, ಸರ್ವಾಯವಗಳಲ್ಲೂ ಆಭರಣಗಳು. ಇವೆಲ್ಲವ ಧರಿಸಿ ಜನಿಸಿದ ಕೃಷ್ಣ ತಾನು ಯಾರ ಮಗನೂ ಅಲ್ಲ ಎಂದು ನಿರೂಪಿಸಿದ.

ಜನಿಸಿದ ಮಗುವಿಗೆ ಶಂಖಚಕ್ರಾದಿ ಆಯುಧಗಳು, ಶ್ರೀವತ್ಸ , ಪೀತಾಂಬರ ಇದೆಲ್ಲ ತಂದೆಯ ರೇತತ್ಸಿನಿಂದ ಬರಲು ಸಾಧ್ಯವೇ.  ಶ್ರೀಕೃಷ್ಣನದ್ದು ಹುಟ್ಟಲ್ಲ ಪ್ರಾದುರ್ಭಾವವೆಂದು ಇದರಿಂದಲೇ ತಿಳಿಯುತ್ತದೆ.   ದೇವಕಿಯೇ ಹೇಳುತ್ತಾಳೆ “ನೀನು ನನ್ನ ಮಗನಲ್ಲ. ನೀನು ಅವ್ಯಕ್ತ, ಆದ್ಯ, ಜ್ಞಾನಸ್ವರೂಪ, ಪ್ರಾಕೃತ ಗುಣರಹಿತ, ನಿರ್ವಿಕಾರ,  ಸಾಕ್ಷಾತ್ ವಿಷ್ಣುವೇ ಆಗಿರುವಿ”.

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಶ್ರೀ ಕೃಷ್ಣ ಪರಮಾತ್ಮ ಜನಿಸಿದ್ದು ಭೂದೇವಿಯ ಪ್ರಾರ್ಥನೆಯಂತೆ.  ತನ್ನ ಮೇಲೆ ದೈತ್ಯರು, ರಾಕ್ಷಸರು, ವಂಚಕರು ಎಲ್ಲಾ ಸೇರಿ ಭೂಭಾರ ವಾಗಿರುವುದನ್ನು ಸಹಿಸಲಾರದೆ ಭೂದೇವಿಯು ಎಲ್ಲಾ ದೇವತೆ ಗಳೊಂದಿಗೆ ಪರಮಾತ್ಮನ ಕೋರಿದ್ದಾಗ ಅವರ ಸಂಕಷ್ಟಕ್ಕೆ ಓಗೊಟ್ಟು ಅವತರಿಸಿದ ರೂಪವೇ “ಕೃಷ್ಣಾವತಾರ”.
ಅವನ ಅವತಾರದ ಕೆಲವು ಕಾರಣಗಳು :-
ಅ. ದುಷ್ಟ ಕಂಸ ಮತ್ತವನ ಪರಿವಾರದ ವಧೆ.
ಆ. ಭೂಭಾರಹರಣ
ಇ.  ಕೌರವರ ವಿನಾಶ
ಈ. ಪಾಂಡವರ ಹಿತರಕ್ಷಣಾ
ಉ. ಧರ್ಮಸಂಸ್ಥಾಪನ 
ಊ. ದೈತ್ಯ ಸಂಹಾರ 
 

ಕೃಷ್ಣ ಅವತಾರ ಮಾಡಲು ಆಯ್ದುಕೊಂಡಿದ್ದು ರಾತ್ರಿ ಕಾಲ.  ಆ ಹೊತ್ತಿನಲ್ಲಿ ನಿಶಾಚರರು ಅಂದರೆ ರಾಕ್ಷಸರ ವ್ಯವಹಾರ ಕಾಲ. ಸದಾ ಅಲ್ಲಿ ಕಾವಲಿರುತ್ತಿದ್ದ ಕಂಸನ ಭೃತ್ಯರು ಆಗ ನಿದ್ರಾವಶರಾದರು.  ಸೆರೆಮನೆಯ ಬಾಗಿಲುಗಳೆಲ್ಲವೂ ಬೀಗವಿದ್ದರೂ ಇದ್ದಕ್ಕಿದ್ದಂತೆ ತೆರೆದವು.

ಕೃಷ್ಣ ಪ್ರಾದುರ್ಭಾವವಾದ ಸ್ವಲ್ಪ ಸಮಯದ ನಂತರ ವಸುದೇವನಿಗೆ ಹೇಳುತ್ತಾನೆ ” ನೀನು ನನ್ನನ್ನು ನಂದಗೋಕುಲಕ್ಕೆ ಕರೆದುಕೊಂಡು ಹೋಗಿ, ಅಲ್ಲೇ ನನ್ನನ್ನು ಬಿಟ್ಟು ಅಲ್ಲಿ ಯಶೋದೆಯಲ್ಲಿ ಜನಿಸಿರುವ ದುರ್ಗೆಯನ್ನು ಇಲ್ಲಿಗೆ ಕರೆದುತಾ”

ಅದರಂತೆ ವಸುದೇವನು ಬಾಲಕೃಷ್ಣನನ್ನು ಕರೆದುಕೊಂಡು ಹೊರಟಾಗ ಕಂಸನ ದ್ವಾರಪಾಲಕರು ಬಾಹ್ಯಪ್ರಜ್ಞೆಯೇ ಇಲ್ಲದೆ ನಿದ್ರಾಪರವಶರಾಗಿರಲು, ಕಬ್ಬಿಣದ ಸರಪಳಿಗಳು ಕಳಚಿ, ಬಾಗಿಲುಗಳೆಲ್ಲ ತಮ್ಮಷ್ಟಕ್ಕೆ ತಾವೇ ತೆರೆಯಲು, ಮಳೆಯಲ್ಲಿ ಆದಿಶೇಷನು ತನ್ನ ಹೆಡೆಗಳಿಂದ ಛತ್ರಿಯಂತೆ ಬರಲು, ಯಮುನೆಯು ದಾರಿಮಾಡಿಕೊಡಲು, ನಂದಗೋಕುಲ ತಲುಪಿ  ಶ್ರೀ ಕೃಷ್ಣನ ಅಲ್ಲಿ  ಯಶೋದೆಯ ಬಳಿ ಮಲಗಿಸಿ, ಅಲ್ಲಿ ಅವತರಿಸಿದ್ದ ದುರ್ಗೆಯನ್ನು ಎತ್ತಿಕೊಂಡು ಪುನಃ: ಮಥುರೆಗೆ ಬಂದು ಕಾರಾಗೃಹಕ್ಕೆ ತಲುಪಿ ದೇವಕಿಯ ಕೈಲಿ ಆ ಹೆಣ್ಣು ಮಗುವನ್ನು ಒಪ್ಪಿಸಿದನು.

ಇಲ್ಲಿ ಕಂಸನಿಗೆ ಹೆದರಿ ಕೃಷ್ಣ ನಂದಗೋಕುಲಕ್ಕೆ ಹೊರಟನೇ ?  ವಾದಿರಾಜರು ತಮ್ಮ ರುಕ್ಮಿಣೀ ವಿಜಯದಲ್ಲಿ ನಿರೂಪಿಸುತ್ತಾರೆ.    ಕೃಷ್ಣ ಅವತರಿಸಿದ ವಿಷಯ ಕಂಸನಿಗೆ ತಲುಪಿದಾಗ ಅವನು ಕೃಷ್ಣನನ್ನು ಕೊಲ್ಲಲು ಬಂದು ತಾನೇ ಹತನಾಗುವನು.  ಆದರೆ ಕೃಷ್ಣಾವತಾರದ ಹಿನ್ನೆಲೆ ಕೇವಲ ಕಂಸಸಂಹಾರಕ್ಕಷ್ಟೇ ಸೀಮಿತವಲ್ಲ.   “ವಿನಾಶಾಯ ಚ ದುಷ್ಕೃತಾಂ” ಎಂಬಂತೆ ಎಲ್ಲಾ ದುಷ್ಟರ ಸಂಹಾರ.  ಕಂಸನ ಭೃತ್ಯ ದುಷ್ಟರೆಲ್ಲರ ಸಂಹಾರ.  ಇದರಿಂದ ಕಂಸನಿಗೂ ತನ್ನ ಬಂಧು ಬಾಂಧವರ ಸಾವನ್ನು ನೋಡುವ ಅವಕಾಶ.  ಮತ್ತು ಅಲ್ಲಿ ಅವತರಿಸಿರುವ ದುರ್ಗೆಯನ್ನು ನೋಡಲು ಹೊರಟನು.

ಪೂತನಾ ಜೀವಿತಾಹಾರೀ – ಶ್ರೀಕೃಷ್ಣ ಮೊದಲು ಸಂಹರಿಸಿದ್ದು ಹೆಣ್ಣನ್ನೇ.  ರಾಮಾವತಾರದಲ್ಲೂ ಮೊದಲು ಸಂಹರಿಸಿದ್ದು ಹೆಣ್ಣನ್ನೇ.

ಕಂಸನಿಂದ ಪ್ರೇರಿತಳಾದ ಪೂತನೆ ತನ್ನ ರಾಕ್ಷಸೀ ರೂಪವ ಮರೆಸಿ ಸುಂದರವಾದ ಸ್ತ್ರೀ ರೂಪ ಮಾಯೆಯಿಂದ ಧರಿಸಿ  ಎಲ್ಲಾ ಮಕ್ಕಳನ್ನೂ ಸಂಹರಿಸುತ್ತಾ , ನಂದಗೋಪನ ಮನೆಯಲ್ಲಿ ತೊಟ್ಟಿಲಲ್ಲಿರುವ ಕೃಷ್ಣನ ಎತ್ತಿಕೊಂಡು ವಿಷಪೂರಿತ ಸ್ತನ್ಯಪಾನ ಮಾಡಿಸಲು ಕೃಷ್ಣನು ಎರಡೂ ಕೈಗಳಿಂದ ಗಟ್ಟಿಯಾಗಿ ಅವಳ ಸ್ತನಗಳನ್ನು ಹಿಡಿದುಕೊಂಡು ಪಾನಮಾಡಿ ಅವಳ ಪ್ರಾಣವನ್ನೇ ತೆಗೆಯಲು, ಆ ಪೂತನಿಯು ತನ್ನ ನಿಜರೂಪದಿ ಸಾಯಲು, ಆ ದೇಹ ಬಿದ್ದ ರಭಸಕ್ಕೆ ಹನ್ನೆರಡು ಮೈಲಿ ದೂರವಿರುವ ಮರಗಳೆಲ್ಲ ಮುರಿದವು.  ಅವಳ ದೇಹದ ಕೋರೆ ಹಲ್ಲುಗಳು ರಥದ ಮರದಂತೆಯೂ, ಅವಳ ಮೂಗಿನ ದ್ವಾರಗಳು ಪರ್ವತದ ಗುಹೆಯಂತೂ, ಅವಳೆರಡೂ ಸ್ತನಗಳೂ ಬಂಡೆಕಲ್ಲಿನಂತೂ,  ಹೀಗೇ ಅತಿ ಕ್ರೂರವಾಗಿ ಕಂಡಳು.
ಪೂತನಿಯಲ್ಲಿ ಜೀವದ್ವಯಾವೇಷವಿದ್ದು , ಅವಳಲ್ಲಿದ್ದ ಊರ್ವಶಿಗೆ ಸ್ವರ್ಗವಾಗಿದ್ದು, ತಾಟಕಿಗೆ ತಮಸ್ಸಾಯಿತು.
ಶಕಟಾಸುರ ಭಂಜನ :–
ಪೂತನಿಯ ಅಂತ್ಯವಾದ ನಂತರ ಕಂಸನು ತನ್ನ ಇನ್ನೊಬ್ಬ ಭೃತ್ಯ ಶಕಟನನ್ನು ಕಳಿಸಿದನು.
ಕೃಷ್ಣನಿಗೆ ನಾಲ್ಕು ತಿಂಗಳು, ಅಂದು ಕೃಷ್ಣನ ಜನ್ಮನಕ್ಷತ್ರ.  ಬಹಿನಿಷ್ಕ್ರಮಣೋತ್ಸವಕ್ಕೆ ಸಿದ್ಧವಾಗಿದೆ.  ಯಶೋದೆಯು ಮಗುವಿಗೆ ಮಂಗಳಸ್ನಾನ ಮಾಡಿಸಿ, ಬಂದುಬಾಂಧವರ ಉಪಚಾರದಲ್ಲಿ ಮಗ್ನಳಾಗಿ, ಮಗುವನ್ನು ಒಂದು ಬಂಡಿಯ ಕೆಳಗೆ ಮಲಗಿಸಿದಳು.  ಕೃಷ್ಣನಾದರೋ ಸ್ತನ್ಯಪಾನ ಬೇಕೆಂದು ಕೇಳಿದಾಗ, ಜನಗಳ ನಡುವೆಯಿದ್ದ ಯಶೋದೆಗೆ ಅದು ಕೇಳಿಸದಿದ್ದಾಗ, ಕೃಷ್ಣ ತನ್ನ ಕಾಲನ್ನು ಎತ್ತಿ ಆಡಿಸಲು, ಚಕ್ರವು ಮುರಿದು   ಬಂಡೀ ರೂಪದಲ್ಲಿದ್ದ ಶಕಟಾಸುರನು ಸತ್ತನು.

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ !!
ವಸುದೇವನ ಮಗನಾಗಿಯೂ, ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ  ಪರಮಾನಂದವನ್ನೂ ನೀಡುವ, ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಜಗದ್ಗುರುವೂ  ಆಗಿರುವ ಕೃಷ್ಣನಿಗೆ ವಂದಿಸುತ್ತೇನೆ..
ಶ್ರೀಕೃಷ್ಣನು ತನ್ನ ಗುರುವಾಗಿ ಸಾಂದೀಪಿನಾಚಾರ್ಯರನ್ನು ಆರಿಸಿಕೊಂಡು 64 ಕಲೆಗಳಲ್ಲಿ ಪ್ರವೀಣನಾಗಿದ್ದನು,  ಅವನಿಗೆ 16108 ಪತ್ನಿಯರಿದ್ದರು ಮತ್ತು ಅವರಿಂದ ಕೃಷ್ಣನಿಗೆ   161080 ಗಂಡು ಮಕ್ಕಳಿದ್ದರು ಅರ್ಥಾತ್ ಆ ಎಲ್ಲಾ ಗಂಡುಮಕ್ಕಳಿಗೂ ತಲಾ ಹತ್ತು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದಳು. ಅಷ್ಟೂ ಜನ ಪತ್ನಿಯರೊಂದಿಗೂ ಬೇರೆ ಬೇರೆ ರೂಪ ಪಡೆದು ಕೃಷ್ಣ ಇದ್ದ.    ಒಮ್ಮೆ ನಾರದರಿಗೆ ಕೃಷ್ಣನಿಗೆ ಇಷ್ಟು ಜನ ಪತ್ನಿಯೊಂದಿಗೆ ಹೇಗೆ ರಮಣ ಮಾಡುತ್ತಾನೆಂಬ ಕುತೂಹಲ.  ತನ್ನ ಅಷ್ಟೂ  ಪತ್ನಿಯರಿಗೂ ಪ್ರತ್ಯೇಕ ಪ್ರತ್ಯೇಕ ಅರಮನೆ ಕಟ್ಟಿಸಿದ್ಧ.   ಪರೀಕ್ಷಾ  ಮಾಡಲು  ಬಂದರು.  ಒಂದು ಮನೆಯಲ್ಲಿ ಕೃಷ್ಣ ಪತ್ನಿಯೊಡನೆ ಸರಸಸಲ್ಲಾಪದಲ್ಲಿದ್ದ.  ಇನ್ನೊಂದೆಡೆ ಮಕ್ಕಳೊಂದಿಗೆ ಆಟವಾಡುತ್ತಿದ್ದ, ಮತ್ತೊಂದೆಡೆ ದೇವರ ಪೂಜೆ ಮಾಡುತ್ತಿದ್ದ.
ಕೃಷ್ಣಾರ್ಪಣಮಸ್ತು

by ನರಹರಿ ಸುಮಧ್ವ
***

ಕೃಷ್ಣಾವತಾರ ಕಥೆ by ನರಹರಿ ಸುಮಧ್ವ

ಕೃಷ್ಣಂ ವಂದೇ ಜಗದ್ಗುರುಂ


ಶ್ರಾವಣ ಬಹುಳ ಅಷ್ಟಮಿ ರೋಹಿಣಿ ನಕ್ಷತ್ರದಲ್ಲಿ  ಕೃಷ್ಣ ಜನ್ಮಾಷ್ಟಮಿ. ಕೃಷ್ಣ ಪರಮಾತ್ಮ ಅವತಾರ ಮಾಡಿದ ದಿನ.

ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ – ರಾಘವೇಂದ್ರ ಸ್ವಾಮಿಗಳ ಪ್ರಸಿದ್ಧ ಕೃತಿ. ಕೃಷ್ಣ ಪರಮಾತ್ಮನ ಸಂಪೂರ್ಣ ಚರಿತ್ರೆಯನ್ನು ರಾಯರು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ

ಭೂಭಾರಹರಣಕ್ಕಾಗಿ ಭೂದೇವಿಯಿಂದ ಪ್ರಾರ್ಥಿತನಾಗಿ ದೇವಕಿ ವಸುದೇವ ದಂಪತಿಗಳ ಗರ್ಭಸಂಜಾತನಾಗಿ ಜನಿಸಿ, ದೇವಕಿ ನಂದನ , ವಾಸುದೇವ ಎನಿಸಿ,  ನಂದಗೋಕುಲದಲ್ಲಿ ಬೆಳೆದು, ಯಶೋಧೆಗೆ ಬಾಲಲೀಲೆಗಳ ತೋರಿಸಿ, ಸ್ತನ್ಯಪಾನದಲ್ಲಿ ವಿಷ ಉಣಿಸಲು ಬಂದ ಪೂತನಿಯ ಕೊಂದು, ಪೂತನಾ ಜೀವಿತ ಹರ ಬಂಡಿರೂಪದಿ ಬಂದ ಶಕಟಾಸುರನ ತನ್ನ ಪುಟ್ಟ ಪಾದಸ್ಪರ್ಶದಿಂದಲೇ ಸಂಹರಿಸಿ ಶಕಟಾಸುರ ಮುಂಜಾನೆ ಎನಿಸಿ, ಗಾಳಿ ರೂಪದಿ ಬಂದ ತೃಣಾವರ್ತನ ನಭೋಮಂಡಲ ದಿಂದ ಬೀಳಿಸಿ ಕೊಂದನು. ಕೃಷ್ಣ ಮಣ್ಣು ತಿಂದ ಎಂಬ ಆರೋಪಕ್ಕೆ ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದನು. ಕರ್ಷತೀತಿ ಕೃಷ್ಣ: ಎಂಬಂತೆ ಎಲ್ಲರನ್ನೂ ಆಕರ್ಷಿಸುತ್ತಿದ್ದರಿಂದ ಕೃಷ್ಣ ಎಂಬ ನಾಮಧೇಯ ಗರ್ಗ್ಯಾಚಾರ್ಯರ ಪೌರೋಹಿತ್ಯದಲ್ಲಿ ಪಡೆದನು.

ಕರುವಿನ ರೂಪದಿ ಬಂದ ವತ್ಸಾಸುರನ, ಬಕ ರೂಪದಿ ಬಂದ ಬಕಾಸುರನ, ಕತ್ತೆ ರೂಪದಿ ಬಂದ ಧೇನುಕಾಸುರನನ್ನೂ,. ಕೊಂದು, ಯಮುನೆಯಲ್ಲಿ ತನ್ನ ವಿಷದಿಂದ ಕಲುಷಿತಗೊಳಿಸಿದ್ದ ಕಾಳಿಂಗನ ಹೆಡೆಯೇರಿ ಮದಿಸಿ, ಅವನನ್ನು ರಮಣಕದ್ವೀಪಕ್ಕೆ ಕಳುಹಿದ.‌

ದುರ್ಗಾರಣ್ಯ ಪ್ರವೇಶಿಸಿ, ದಾವಾಗ್ನಿ ಪಾನಮಾಡಿ, ಗೋವುಗಳ ಸಂರಕ್ಷಿಸಿ, ವೇಣುಗಾನ ಮಾಡಿ ಗೋಪಿಕೆಯರ ಆನಂದಗೊಳಿಸಿದನು.

ವಸ್ತ್ರ ರಹಿತರಾಗಿ ಸ್ನಾನಗೈಯುತ್ತಿದ್ದ ಗೋಪಿಕೆಯರ ವಸ್ತ್ರ ಅಪಹರಿಸಿ, ಯಾರೂ ವಸ್ತ್ರರಹಿತ ಸ್ನಾನ ಮಾಡಬಾರದೆಂದು ನೀತಿ ತಿಳಿಸಿದ. ದೇವೇಂದ್ರನ ಪೂಜೆ ಮಾಡದೆ ಗೋವರ್ಧನ ಗಿರಿ ಪೂಜಿಸಿದರಿಂದ ಕೋಪಗೊಂಡ ಸ್ವರ್ಗಾಧಿಪ ಸುರಿಸಿದ ಭಾರೀ ಮಳೆಯಿಂದ ಜನ, ಗೋವುಗಳ ಸಂರಕ್ಷಿಸಲು ಗೋವರ್ಧನಗಿರಿ ಎತ್ತಿದ.  ಪಶ್ಚಾತ್ತಪ್ತ ದೇವೇಂದ್ರ ಕೃಷ್ಣನನ್ನುಗೋವಿಂದ ಎಂದ.

ಕಂಸನಿಂದ ಪ್ರೇರಿತನಾಗಿ ಬಂದ ಕೇಶೀ ನಾಮಕ ದೈತ್ಯನ ಕೊಂದು ಕೇಶವ ಎನಿಸಿದ. ಕಂಸನ ಬಿಲ್ಲು ಹಬ್ಬಕ್ಕೆ ಆಗಮಿಸುವಾಗ ದಾರಿಯಲ್ಲಿ ಸುಗಂಧವ ನೀಡಿದ ತ್ರಿವಕ್ರೆಯ ಸುಂದರಿಯಾಗಿಸಿದ. ಅವಳಿಂದ ವಿಶೋಕ ಎಂಬ ಪುತ್ರನ ಪಡೆದು ಅವನು ಮುಂದೆ ಭೀಮಸೇನನ ಸಾರಥಿಯಾದನು.

ಕುವಲಯಾಪೀಡವೆಂಬ ದುಷ್ಟ ಗಜವನ್ನೂ ಅದರ ಮಾವುತನನ್ನೂ ಕೊಂದು, ಕಂಸನ ಭೃತ್ಯರು ಮುಷ್ಟಿಕಾಸುರ ಚಾಣೂರರ ಮದಿಸಿದನು. ಶಿವಧನಸ್ಸನ್ನು ತುಂಡರಿಸಿ, ಕಂಸನೊಂದಿಗೆ ಮಲ್ಲಯುದ್ಧವ ಮಾಡಿ ಮಾವನ ಕೊಂದವ ಮತ್ತು ಕಂಸಾರಿ ಎನಿಸಿದ. 

ಗರ್ಗಾಚಾರ್ಯರಿಂದ ಉಪನಯನ ಸಂಸ್ಕಾರ ಪಡೆದು , ಸಾಂದೀಪಿನಾಚಾರ್ಯರಲ್ಲಿ 64 ದಿನಗಳಲ್ಲಿ 64 ವಿದ್ಯೆ ಲೋಕರೀತ್ಯಾ ಕಲಿತನು. ಗುರುದಕ್ಷಿಣೆ ರೂಪದಲ್ಲಿ ಶಂಖ ದೈತ್ಯನ ಅವನು ಅಪಹರಿಸಿದ್ದ ಗುರುಪುತ್ರನನ್ನು ತಂದೊಪ್ಪಿಸಿ, ಆ ಪಾಂಜನ್ಯ ಶಂಖವನ್ನೇ ಧರಿಸಿದನು.

ಕರವೀರಪುರದ ಸೃಗಾಲ ವಾಸುದೇವನ ಕೊಂದು, ಇಚ್ಛೆ ಮಾತ್ರದಲ್ಲಿ ಜಲಮಧ್ಯದಲ್ಲಿ ದ್ವಾರಕಾನಗರ ನಿರ್ಮಿಸಿ, ಸಮಸ್ತ ಯಾದವರನ್ನೂ ದ್ವಾರಕಾನಗರಕ್ಕೆ ಸೇರಿಸಿದನು. 23 ಬಾರಿ ಧಾಳಿ ಮಾಡಿದ ಜರಾಸಂಧನ ಅಷ್ಟೂ ಬಾರಿ ಸೋಲಿಸಿ, ಕೃಷ್ಣನ ಕೊಲ್ಲಲೆಂದು ಬಂದ ಕಾಲಯವನನ್ನು ಮುಚುಕುಂದನ ಮೂಲಕ ದಹಿಸಿದನು.

ಭೀಷ್ಮಕನ ಪುತ್ರಿ ರುಕ್ಮಿಣಿಯನ್ನು ಅಪಹರಿಸಿ ವಿವಾಹವಾಗಿ, ಸತ್ರಾಜಿತನ ಸ್ಯಮಂತಕಮಣಿಯನ್ನು ಹುಡುಕಲು ಹೋಗಿ ಜಾಂಭವಂತನ ಸೋಲಿಸಿ ಜಾಂಭವತಿಯನ್ನು ವಿವಾಹವಾಗಿ, ನಂತರ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ವಿವಾಹವಾಗಿ, ಕಾಳಿಂದೀ, ನೀಲಾ, ಮಿತ್ರವೃಂದಾ, ಭದ್ರೆ, ಲಕ್ಷಣಾದೇವಿಯನ್ನೂ ವಿವಾಹವಾಗಿ ಅಷ್ಟಮಹಿಷಿಯರ ಪತಿಯೆನಿಸಿದನು.

ನರಕಾಸುರನ ಕೊಂದು ಅವನ ಬಳಿಯಿದ್ದ 16100 ಕನ್ಯೆಯರನ್ನೂ ವರಿಸಿದನು. ಅವನ‌ ಅಷ್ಟೂ ಪತ್ನಿಯರಲ್ಲೂ ತಲಾ ಹತ್ತು ಗಂಡು ಒಂದು ಹೆಣ್ಣು ಮಗು ಪಡೆದನು.

ಪಾಂಡವರ ರಾಜಸೂಯ ಯಾಗದಲ್ಲಿ ಅಗ್ರಸ್ಥಾನವನ್ನು ಇತ್ತಾಗ ಶತಾಪರಾಧ ಮಾಡಿದ ಶಿಶುಪಾಲನ ಕೊಂದು, ಪಾಪಿಷ್ಟ ದುರ್ಯೋಧನ ದ್ರೌಪದಿಯ ಸೀರೆಯ ಸೆಳೆಯ ಹೋದಾಗ ಸೀರೆಯನಿತ್ತು ಸಂರಕ್ಷಿಸಿದ. ದುರ್ಯೋಧನನ ಮನೆಗೆ ಶ್ರೀಕೃಷ್ಣ ಸಂಧಾನಕ್ಕೆ ಹೋಗಿ, ಅವನು ಒಪ್ಪದಿರಲು ಮಹಾಭಾರತ ಯುದ್ಧದಲ್ಲಿ ತಾನು ಶಸ್ತ್ರವನೆತ್ತುವುದಿಲ್ಲ ಎಂದು ಶಪಥಗೈದು, ಅರ್ಜುನನ ಸಾರಥಿಯಾಗಿ ರಥವ ನಡೆಸಿ ಪಾರ್ಥಸಾರಥಿ ಎನಿಸಿ, ಅರ್ಜುನನಿಗೆ ಗೀತೋಪದೇಶ ನೀಡಿ ಗೀತಾಚಾರ್ಯ ಎನಿಸಿ, ವಿಶ್ವರೂಪ ತೋರಿಸಿ, ಅತಿರಥಮಹಾರಥರ ನಡುವೆ ಪಾಂಡವರ ಜೊತೆಗೆ ಆಯುಧವನ್ನು ಧರಿಸದೆ ನಿಂತು,  ಸಹಾಯ ಹಸ್ತ ಯಾಚಿಸಿದ ದುರ್ಯೋಧನನಿಗೆ ತನ್ನ ಎಂಟಕ್ಷೌಹಿಣಿ ಸೈನ್ಯವಿತ್ತರೂ, ಪಾಂಡವರ  ಗೆಲುವಿಗೆ ಮುಖ್ಯ ಕಾರಣನಾದನು.

ತನ್ನ ಅವತಾರ ಸಮಾಪ್ತಿಯನ್ನು ಮಾಡಲು ನಿರ್ಧರಿಸಿ, ಗಾಂಧಾರಿಯಿಂದ ಶಾಪ ಸ್ವೀಕರಿಸಿ, ಯಾದವೀಕಲಹದಲ್ಲಿ ಸಮಸ್ತ ಯಾದವರೂ ನಾಶವಾಗುವಂತೆ ಮಾಡಿದನು. ಇಡೀ ಮಹಾಭಾರತ ಯುದ್ಧದಲ್ಲಿ ಬಿದ್ದ ಯಾವುದೇ ಬಾಣಗಳಿಂದಲೂ ಏನೂ ಆಗಲಿಲ್ಲ,  ಆದರೆ, ಒಬ್ಬ ಬೇಡನ ಬಾಣಕ್ಕೆ ತನ್ನ ಅವತಾರ ಕಾರ್ಯ ಸಮಾಪ್ತಿ ಮಾಡಿದನು.

by ನರಹರಿ ಸುಮಧ್ವ
****

ಶ್ರೀ ಕೃಷ್ಣ ಪರಮಾತ್ಮನ ಅಷ್ಟಮಹಿಷಿಯರು by ನರಹರಿ ಸುಮಧ್ವ
ಶ್ರೀ ಕೃಷ್ಣ ಪರಮಾತ್ಮನ ಎಲ್ಲಾ ಮದುವೆಯೂ ಹೋರಾಟ ಮತ್ತು ರೋಚಕಮಯವಾಗಿದೆ. ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರಕ್ಕೂ ಹೆಚ್ಚು ಪತ್ನಿಯರಿದ್ದರು. ಅದರಲ್ಲಿ ಅಷ್ಟ ಮಹಾಮಹಿಷಿಯರು ರುಕ್ಮಿಣೀ, ಸತ್ಯಭಾಮ, ನೀಲ, ಮಿತ್ರವೃಂದ, ಜಾಂಬವತಿ, ಭದ್ರ, ಲಕ್ಷ್ಮಣ, ಕಾಲಿಂದೀ ಸೇರಿದ್ದಾರೆ. ರುಕ್ಮಿಣೀ ಸತ್ಯಭಾಮ ದೇವಿಯರು ಸಾಕ್ಷಾತ್ ಲಕ್ಷ್ಮೀದೇವಿಯ “ಶ್ರೀ ” ಮತ್ತು “ಭೂ” ರೂಪಗಳು. ಉಳಿದ ಆರು ಕೃಷ್ಣಪತ್ನಿಯರು ಗರುಡ ಶೇಷ ರುದ್ರರಿಗಿಂತ ಕಡಿಮೆ ಕಕ್ಷೆಯಲ್ಲಿ ಬರುವವರು. ರುಕ್ಮಿಣಿ ವಿವಾಹ – ಕೃಷ್ಣನ ಅಷ್ಟಮಹಿಷಿಯರಲ್ಲಿ ಹಿರಿಯ ಮಡದಿ. ರುಕ್ಮಿಣಿ ವಿದರ್ಭದ ರಾಜ ಭೀಷ್ಮಕನ ಪುತ್ರಿ . ರುಕ್ಮಿಣಿಯ ಸಹೋದರ ರುಕ್ಮಿ ತನ್ನ ಸಹೋದರಿಯನ್ನು ಶಿಶುಪಾಲನಿಗೆ ಕೊಡಬೇಕೆಂದು ತೀರ್ಮಾನ ಮಾಡುತ್ತಾನೆ. ಆದರೆ ರುಕ್ಮಿಣಿಯ ಮನಸ್ಸು ದ್ವಾರಕಾಧೀಶ ಕೃಷ್ಣನಲ್ಲಿ. ರುಕ್ಮಿಣಿ ಒಬ್ಬ ಬ್ರಾಹ್ಮಣನ ಮೂಲಕ ಕೃಷ್ಣನಿಗೆ ಪತ್ರ ಬರೆದು ತನ್ನನ್ನು ಕರೆದೊಯ್ಯಲು ಹೇಳುತ್ತಾಳೆ. ಕೃಷ್ಣ ಅದರಂತೆ ಅಗ್ರಜ ಬಲರಾಮನೊಂದಿಗೆ ವಿದರ್ಭ ಪ್ರವೇಶಿಸಿ ರುಕ್ಮಿಯನ್ನು ಸೋಲಿಸಿ, ರುಕ್ಮಿಣಿಯನ್ನು ಅಪಹರಿಸಿ ವಿವಾಹವಾದನು. ಜಾಂಬವತೀದೇವಿ – ಇವಳ ನಿಜವಾದ ಹೆಸರು “ರೋಹಿಣಿ”. ಜಾಂಬವಂತನ ಮಗಳಾದ್ದರಿಂದ “ಜಾಂಬವತಿ”. ಸ್ಯಮಂತಕಮಣಿಯ ಅರಸಿ ಬಂದ ಕೃಷ್ಣನು ಜಾಂಬವಂತನೊಂದಿಗೆ ಹದಿನೆಂಟು ದಿನ ಯುದ್ಧ ಮಾಡಿ, ಅವನ ಪರಾಕ್ರಮವನ್ನು ಜಗತ್ತಿಗೆ ತೋರಿಸಿ, ನಂತರ ತನ್ನ ರಾಮರೂಪವನ್ನು ತೋರಿಸಿ, ಸಂತಸಗೊಂಡ ಜಾಂಭವಂತ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡಿದನು. ಜಾಂಬವತಿಯು ಉಳಿದ ಷಣ್ಮಹಿಷಿಯರಿಗಿಂತ ಶ್ರೇಷ್ಟಳು. ಎಲ್ಲಾ ಷಣ್ಮಹಿಷಿಯರಲ್ಲಿ ರಮಾದೇವಿಯರ ಸನ್ನಿಧಾನ ಇರುವ ಸಂದರ್ಭದಲ್ಲಿ ಮಾತ್ರ ಕೃಷ್ಣನು ಅವರನ್ನು ಸೇರುವನು ಸತ್ಯಭಾಮಾ ವಿವಾಹ -. ರುಕ್ಮಿಣಿ ಲಕ್ಷ್ಮಿ ದೇವಿಯ ಶ್ರೀ ರೂಪವಾದರೆ, ಸತ್ಯಭಾಮಾ ಭೂ ರೂಪದ ಅವತಾರ. ಸತ್ರಾಜಿತ ರಾಜ ಸೂರ್ಯನ ತಪಸ್ಸು ಮಾಡಿ ಶ್ಯಮಂತಕ ಮಣಿ ಪಡೆದಿರುತ್ತಾನೆ. ಅದನ್ನು ಸತ್ರಾಜಿತನ ತಮ್ಮನ ವಧಿಸಿದ ಸಿಂಹ ತೆಗೆದುಕೊಂಡು ಹೋಗಿರುತ್ತದೆ. ಆ ಸಿಂಹವನ್ನು ಕರಡಿ ಜಾಂಬವಂತ ಕೊಂದು ಅಪಹರಿಸಿರುತ್ತಾನೆ. ಕೃಷ್ಣ ಕದ್ದಿರಬಹುದೆಂದು ಸತ್ರಾಜಿತ ಅನುಮಾನಿಸಿದಾಗ, ಕೃಷ್ಣ ಜಾಂಬವಂತನ ಸೋಲಿಸಿ ಅವನಿಂದ ಪಡೆದ ಆ ಸ್ಯಮಂತಕಮಣಿಯನ್ನು ಸತ್ರಾಜಿತನಿಗೆ ಒಪ್ಪಿಸಿದಾಗ ತನ್ನ ಅನುಮಾನದ ತಪ್ಪಿಗಾಗಿ ಕ್ಷಮೆ ಕೋರಿ ತನ್ನ ಮಗಳು ಸತ್ಯಭಾಮಾಳನ್ನು ಕೃಷ್ಣನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ನೀಲಾದೇವಿ – ಯಶೋದೆಯ ಅಣ್ಣನಾದ ಕುಂಭಕ ಎಂಬ ಹೆಸರುಳ್ಳ ಗೋಪಾಲನ ಮಗಳಾಗಿ “ನೀಲಾ” ಎಂಬ ನಾಮಧೇಯದಿಂದ ಹುಟ್ಟಿದ್ದಳು. ಅವಳು ಹಿಂದಿನ ಜನ್ಮದಲ್ಲೇ ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಿರುಪತಿಯಲ್ಲಿ ಕಪಿಲತೀರ್ಥದಲ್ಲಿ , ಪಾಪನಾಶಿನಿಯ ಸ್ನಾನಗೈದು , ನಾರಾಯಣ ದೇವರನ್ನು ಕುರಿತು ತಪಗೈದಳು. ನಾನು ನಿನ್ನ ಪತ್ನಿಯಾಗಬೇಕೆಂದು ಕೋರಿದಳು. ಕೃಷ್ಣನು ತನ್ನ ಉಪನಯನ ಪೂರ್ವದಲ್ಲೇ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾಳನ್ನು ವಿವಾಹವಾದನು. ಆ ಕುಂಭಕನೇ ನಗ್ನಜಿತ್ ರಾಜನಾಗಿ ಜನಿಸಿದನು. ಅ ಕನ್ಯೆಯೇ ಮತ್ತೊಮ್ಮೆ ನೀಲಾದೇವಿಯೆಂಬ ಹೆಸರಿನಲ್ಲಿ ಇನ್ನೊಂದು ರೂಪದಲ್ಲಿ ಹುಟ್ಟಿದಳು. ಆ ನೀಲಾದೇವಿಯ ಸ್ವಯಂವರದಲ್ಲಿ ಮತ್ತೊಮ್ಮೆ ರುದ್ರದೇವರ ವರಬಲದಿಂದ ಹುಟ್ಟಿದ್ದ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾದೇವಿಯನ್ನು ವಿವಾಹವಾದನು. ಆಗ ಕುಂಭಕನ ಮಗಳಾದ ನೀಲಾದೇವಿಯೂ ರಾಜಪುತ್ರಿಯಾದ ನೀಲಾದೇವಿಯಲ್ಲಿ ಪ್ರವೇಶಿಸಿ ಒಂದೇ ರೂಪವುಳ್ಳವಳಾದಳು . ಭದ್ರಾದೇವಿ – ಇವಳು ಹಿಂದಿನ ಜನ್ಮದಲ್ಲಿ ನಳನ ಮಗಳಾಗಿದ್ದಳು. ಅವಳೂ ಭಗವಂತನೇ ತನ್ನ ಪತ್ನಿಯಾಗಬೇಕೆಂದು ಕೋರಿದ್ದಳು. ಅವಳು ಭಗವಂತನ ನಾಮಸ್ಮರಣೆ ಮಾಡಿ ಪ್ರಾಣ ಬಿಟ್ಟಳು. ಅವಳು ಮುಂದಿನ ಜನ್ಮದಲ್ಲಿ ವಸುದೇವನ ತಂಗಿಯಾದ ಕೈಕೇಯಿಯಲ್ಲಿ “ಭದ್ರಾ” ಎಂಬ ಹೆಸರಿಂದ ಹುಟ್ಟಿದಳು. ಮತ್ತು ಶ್ರೀ ಕೃಷ್ಣನನ್ನು ವಿವಾಹವಾದಳು. ಮಿತ್ರವಿಂದಾದೇವಿ – ಮಿತ್ರವಿಂದೆಯು ಹಿಂದಿನ ಜನ್ಮದಲ್ಲಿ ಅಗ್ನಿಷ್ಪಾತ್ತ ಎಂಬ ಪಿತೃದೇವತೆಯ ಮಗಳಾಗಿ ಜನಿಸಿ, “ಮಿತ್ರ” ಎಂಬ ಹೆಸರಿನ ಭಗವಂತನ ಹೊಂದಲು ಸಾತ್ವಿಕ ಪುರಾಣಗಳನ್ನು ಅನವರತ ಕೇಳಿ ಭಗವತ್ಕಥಾಶ್ರವಣದ ಫಲವಾಗಿ ಮುಂದೆ ವಸುದೇವನ ತಂಗಿಯಾದ ಸುಮಿತ್ರೆಯ ಮಗಳಾಗಿ “ಮಿತ್ರವಿಂದೆ” ಎಂಬ ಹೆಸರಿನಿಂದ ಜನಿಸಿ, ಸ್ವಯಂವರದಲ್ಲಿ ಕೃಷ್ಣನ ಕೊರಳಲ್ಲಿ ಮಾಲೆಯನ್ನು ಹಾಕಿ ವಿವಾಹವಾದಳು. ಕಾಳಿಂದೀದೇವಿ – ಇವಳು ಸೂರ್ಯ ಪುತ್ರಿ, ಯಮುನೆಯ ತಂಗಿ. ಇವಳೂ ಕೃಷ್ಣನನ್ನೇ ವಿವಾಹವಾಗಬಯಸಿ ಯಮುನೆಯ ತೀರದಲ್ಲಿ ತಪಸ್ಸು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಕೃಷ್ಣಾರ್ಜುನರು ಬೇಟೆಗಾಗಿ ಯಮುನಾತೀರಕ್ಕೆ ಬಂದರು. ಅಲ್ಲಿ ತಪಸ್ಸು ಮಾಡುತ್ತಿದ್ದ ಅ ಕನ್ಯೆಯನ್ನು ಅರ್ಜುನನು ಏಕೆ ತಪಸ್ಸು ಮಾಡುತ್ತಿರುವೆ ಎನ್ನಲು ಅವಳು ಕೃಷ್ಣನ ವಿವಾಹವಾಗುವ ಬಯಕೆಯನ್ನು ಹೇಳಿದಳು. ಅವಳ ಅನುಗ್ರಹಿಸಲು ಕೃಷ್ಣನು ಕಾಲಿಂದಿಯನ್ನು ವಿವಾಹವಾದನು. ಲಕ್ಷಣಾದೇವಿ – ಮದ್ರದೇಶದ ರಾಜನ ಮಗಳಾಗಿ ಜನಿಸಿ, ಅವಳ ಸ್ವಯಂವರದಲ್ಲಿ ಕೃಷ್ಣನು ಮತ್ಸ್ಯಯಂತ್ರವನ್ನು ಭೇದಿಸಿ, ಯುದ್ಧಕ್ಕೆ ಬಂದ ಎಲ್ಲಾ ರಾಜರುಗಳನ್ನೂ ಗೆದ್ದು ಲಕ್ಷಣಾದೇವಿಯನ್ನು ವಿವಾಹವಾಗಿ ದ್ವಾರಕಾ ಪಟ್ಟಣಕ್ಕೆ ಕರೆದುಕೊಂಡು ಹೋದನು. ಲೇಖನ - ನರಹರಿ ಸುಮಧ್ವ
***






the dates are simply not true, they are pegged for the convience of western social engineers.

A couple of years ago in a off shore exploration off the coast of Gujarat nat Geo has assertained that Krishna's  two cities were submerged around 38000 years ago, and this is in sync with our Sanathana Dharma books and literature which also dates the time frame of Krishna's end on earth approx 38000 to 40000 years.

So the data being circulated is hoax,


We should be careful and should not fall pray to such social engineering.


ನಂದೇನದೋ ಸ್ವಾಮಿ
ನಿಂದೇ ಇದೆಲ್ಲವು..
🙏🙏🙏
ಸೂರ್ಯದೇವನ ಭಕ್ತನಾಗಿದ್ದ ಸತ್ರಾಜಿತ  ಸೂರ್ಯದೇವನ ಉಪಾಸನೆ ಮಾಡಿ ಸ್ಯಮಂತಕ ಮಣಿಯನ್ನು ಪಡೆಯುವನು.
ಧರಿಸಿಕೊಂಡು ಶ್ರೀ ಕೃಷ್ಣನ ಅರಮನೆ ಕಡೆ ಬರುತ್ತಿರುವಾಗ ಜನರೆಲ್ಲಾ ಆ ಮಣಿಯ ಪ್ರಭೆಯನ್ನು ಕಂಡು ಸೂರ್ಯನೇ ಬಂದನೇನು ಭೂಲೋಕಕ್ಕೆ ಎಂದು ಭಾವಿಸಿ ಶ್ರೀ ಕೃಷ್ಣ ನ ಬಳಿ ಹೋಗಿ ಹೇಳುತ್ತಾರೆ. ಅದಕ್ಕೆ ಪರಮಾತ್ಮನು ಅವರ ಮುಗ್ದತೆಯನ್ನು ನೋಡಿ ನಸುನಕ್ಕು "ಅರಮನೆ ಕಡೆ ಬರುವವ ಸೂರ್ಯನಲ್ಲ .ಸೂರ್ಯ ಕೊಟ್ಟ ಸ್ಯಮಂತಕ ಮಣಿಯನ್ನು ಧರಿಸಿದ ಸತ್ರಾಜಿತ.ಬಹಳ ವಿಶೇಷ  ಆ ಮಣಿ ಎಂದು ಅದರ ಮಹಿಮೆ ತಿಳಿಸಿ ಅದನ್ನು ತನ್ನ ಕೋಶಾಗಾರದಲ್ಲಿ ಇಡಲು ಮತ್ತು ರಾಜನಾದ ಉಗ್ರಸೇನಗೋಸ್ಕರವಾಗಿ ಮಣಿಯನ್ನು ಕೊಡು ಎಂದು ಕೇಳಿದರು ಸಹ ಸತ್ರಾಜಿತ ಕೊಡಲಿಲ್ಲ. ಹಾಗೇ ಮನೆಗೆ ಬಂದನು.
ಮುಂದೆ ಆ ಮಣಿಯನ್ನು ಅವನ ತಮ್ಮ ಧರಿಸಿ ಬೇಟೆಗೆ ಹೊರಟ.ಸಿಂಹವೊಂದು ಅವನ ಸಂಹಾರಮಾಡಿತು.ನಂತರ ದಲ್ಲಿ ಜಾಂಬವಂತ ಅದನ್ನು ಸಂಹರಿಸಿ ಆ ಮಣಿಯನ್ನು ತನ್ನ ಮನೆಗೆ ತೆಗೆದು ಕೊಂಡು ಹೋದ.ಇತ್ತ ಶ್ರೀ ಕೃಷ್ಣನೇ ಮಣಿಗೋಸ್ಕರವಾಗಿ ಪ್ರಸೇನನನ್ನು ಕೊಂದು ಹಾಕಿದ್ದಾನೆ ಎಂದು ಸತ್ರಾಜಿತ ಅಪವಾದ ಹೊರಿಸಿದ.
ಆಗ ಶ್ರೀ ಕೃಷ್ಣ ಮಣಿಯನ್ನು ಹುಡುಕುತ್ತ ಅಡವಿಗೆ ನಡೆದ.ಸಕಲರಿಗು ಪ್ರಸೇನ ಹತವಾಗಿದ್ದು ಸಿಂಹದಿಂದ ಎಂದು ತೋರಿಸಿ,ಆ ಸಿಂಹವನ್ನು ಸಂಹಾರ ಮಾಡಿದ ಜಾಂಬವಂತನ ಗುಹೆಗೆ ಹೋಗಿ ಅವನೊಡನೆ ಯುದ್ಧ ಮಾಡಿ ಜಾಂಬವತಿ ಸಮೇತವಾಗಿ ಮಣಿಯೊಡನೆ ಹಿಂತಿರುಗಿ ದ್ವಾರಕಾ ಪಟ್ಟಣಕ್ಕೆ ಬಂದ.
ಮತ್ತೆ ಮಣಿಯನ್ನು ಸತ್ರಾಜಿತ ನಿಗೆ ಕೊಟ್ಟ. ತದನಂತರ ಅವನಿಗೆ ಪಶ್ಚಾತ್ತಾಪ ವಾಗಿ ಮಣಿಯ ಸಮೇತ ಸತ್ಯಭಾಮೆ ಯನ್ನು ಶ್ರೀ ಕೃಷ್ಣ ನಿಗೆ ಕೊಟ್ಟು ವಿವಾಹ ಮಾಡಿದ ಕತೆ ನಮಗೆಲ್ಲ ಗೊತ್ತು.
ಈ ಕತೆ ಭಾದ್ರಪದ ಮಾಸದಲ್ಲಿ ಒಮ್ಮೆ ಮಾತ್ರ ಓದುವದಲ್ಲ.
ನಿತ್ಯವು ನಮ್ಮದೇ ಕತೆ.

ಹೇಗೆಂದರೆ
 ಸಾಕ್ಷಾತ್ ಭಗವಂತನೇ ಮಣಿಯನ್ನು ಕೇಳಿದಾಗ ಸತ್ರಾಜಿತ ಕೊಡಲಿಲ್ಲ.
ಭಗವಂತನ ದಯೆಯಿಂದ ನಮಗೆ ಉದ್ಯೋಗ ವ್ಯವಹಾರಗಳಲ್ಲಿ ಕಿಂಚಿತ್ತೂ ಸಂಪತ್ತು  ಬಂದಿರುತ್ತದೆ.ಬಂದ ಸಂಪತ್ತು ಬೇರೆ ಬೇರೆ ಸೇವೆ ಮಾಡುವ ಅವಕಾಶಗಳು ಸಿಕ್ಕಾಗ ಅಂದರೆ ಶ್ರೀ ಕೃಷ್ಣ ಜನ್ಮಾಷ್ಟಮಿ,ಮಧ್ವ ನವಮಿ, ಗುರುಗಳ ಮತ್ತು ಹರಿದಾಸರ ಆರಾಧನ ದಿನಗಳು,ಬಡವರಿಗೆ ಕಿಂಚಿತ್ತೂ ಸಹಾಯ ಮಾಡುವುದು..
ಹೀಗೆ ಅವಕಾಶ ಬಂದಾಗ ತನ್ನ ಭಕ್ತರ ಮೂಲಕ ಭಗವಂತ ಕೇಳಿದಾಗ ಲೋಭ ಮತ್ತು ಮೋಹ ಬುದ್ದಿಯಿಂದ ಕೊಡದೇ ಅವರನ್ನು ನಿಂದಿಸಿ ಅಥವಾ ವ್ಯಂಗ್ಯ ಮಾಡಿ ಕಳುಹಿಸಿ ಕೊಡುತ್ತೇವೆ.

ಭಗವಂತನಿಗೆ ಕೊಡದ ಮಣಿಯನ್ನು ಪ್ರಸೇನನಿಗೆ ಹಿಂದು ಮುಂದೆ ಯೋಚನೆ ಮಾಡದೇ ಸತ್ರಾಜಿತ ಕೊಟ್ಟ. ಧರಿಸಿದ ಅವನು ಅಶುಚಿಯಾಗಿದ್ದ ಕಾರಣ ಸಿಂಹ ನಿಂದ ಹತನಾದ ಅಡವಿಯಲ್ಲಿ. 
ನಾವು ಅಷ್ಟೇ. 
"ದೇವರಿಗೆ ಮತ್ತು ಅವನ ಭಕ್ತರಿಗೆ, ಹಣವನ್ನು ಕೊಡಲು ಹಿಂದೆ ಮುಂದೆ ಹತ್ತಾರು ಬಾರಿ ಯೋಚನೆ ಮಾಡುವ ನಾವು ಯಾರಿಗೋ ಅನರ್ಹರಿಗೆ ಅಧಿಕ ಬಡ್ಡಿಯ ಲಾಭದ ಆಸೆಯಿಂದ ಕೊಡುತ್ತೇವೆ.ಅಥವಾ ಯಾವುದೇ ತಿಳಿಯದೇ ಇರುವ ಕಂಪನಿ ಗೆ ಹಣವನ್ನು ಹಾಕುತ್ತೇವೆ."
ಅವರು ಅದನ್ನು ನಷ್ಟ ಮಾಡಿ,ನಮ್ಮ ಸಂಪತ್ತು ನಾಶ ಮಾಡಿ ಊರು ಬಿಟ್ಟು ಹೋಗುತ್ತಾರೆ.

ಪ್ರಸೇನ ಹತನಾದಾಗ ಶ್ರೀಕೃಷ್ಣ ಕೊಂದ ಎಂದು ಸತ್ರಾಜಿತ ಅಪವಾದ ಮತ್ತು ಆರೋಪ ಹೊರಿಸಿದ.ಅದರಂತೆ ನಾವು ಸಹ ಹಣ ಕಳೆದುಕೊಂಡ ಸಮಯದಲ್ಲಿ ದೇವರು ನಾಶ ಮಾಡಿದ ಎಂದು ನಮ್ಮ ನಾಲಿಗೆಯನ್ನು ಉದ್ದ ಮಾಡುತ್ತೇವೆ.

ಮಣಿ ತಂದು ಕೊಡಲು ಭಗವಂತ ಹೇಗೆ ಬಂದನು "ಅದೇ ರೀತಿಯಲ್ಲಿ ನಮ್ಮ ಸಂಪತ್ತನ್ನು ವಾಪಾಸು ಕೊಡಲು ನಾವು ಅವನಿಗೆ ಪ್ರಾರ್ಥನೆ ಮಾಡಬೇಕು ಮತ್ತು ಅವನೇ ಅನುಗ್ರಹ ಮಾಡಬೇಕು".
🙏ಶ್ರೀ ಕೃಷ್ಣಾರ್ಪಣಮಸ್ತು🙏
ಮುಂದಿನಭಾಗ ನಂತರ.
ಕೆರೆಯ ನೀರನು ಕೆರೆಗೆ ಚೆಲ್ಲಿ|
ವರವ ಪಡೆದವರಂತೆ ಕಾಣಿರೋ||
🙏ಅ.ವಿಜಯವಿಠ್ಠಲ🙏

ನಂದೇನದೋ ಸ್ವಾಮಿ ನಿಂದೇ ಇದೆಲ್ಲವು...
🙏🙏🙏ಭಾಗ೨
✍ಹಿಂದಿನ ಸಂಚಿಕೆಯಲ್ಲಿ ಸ್ಯಮಂತಕ ಮಣಿಯನ್ನು
 ಭಗವಂತನು ಕೇಳಿದರು ಸಹ  ಸತ್ರಾಜಿತ ಅದನ್ನು ಕೊಡದೇ ಇರುವುದು. ಮತ್ತು ಅವನು ಮಾಡಿದ ಈ ತಪ್ಪು. ಅದರಿಂದ ಆದ ಅನಾಹುತ ಇವುಗಳ ಬಗ್ಗೆ ತಿಳಿದೆವು.

ಸ್ಯಮಂತಕ ಮಣಿಯನ್ನು ಕಳೆದುಕೊಂಡ ಸತ್ರಾಜಿತ ನಿಗೆ ಮತ್ತೆ ಶ್ರೀ ಕೃಷ್ಣ ಅದನ್ನು ಹುಡುಕಿ ತಂದುಕೊಟ್ಟ.
ಅದೇ ರೀತಿಯಲ್ಲಿ 
ನಮಗೆ ಸಂಪತ್ತು ಯಾವುದೇ ಇರಲಿ ಅದನ್ನು ಕಳೆದುಕೊಂಡಾಗ ಅವನೇ ನಮಗೆ ಅನುಗ್ರಹ ಮಾಡಿ ಕೊಡಬೇಕು.
ಕಳೆದುಕೊಂಡ ಅಂದರೆ ನಮ್ಮ ಬಳಿ ಇರಲಾರದ್ದು. ಅದು ಜ್ಞಾನ, ಧನ, ಯಾವುದಾದರು ಸರಿಯೇ ಇವುಗಳನ್ನು ನಮಗೆ ಕೊಡಲು ಶ್ರೀ ಕೃಷ್ಣ ಪರಮಾತ್ಮನು ಬರಬೇಕು ಮತ್ತು ಅವನ ಅನುಗ್ರಹ ಇರಬೇಕು. ಅವನ ವಿನಃ  ಬೇರೆ ಯಾರು ನಮಗೆ ಯಾವುದೇ ಸಂಪತ್ತು ಕೊಡಲು ಸಾಧ್ಯವಿಲ್ಲ.

ಶ್ರೀ ಕೃಷ್ಣ ಪರಮಾತ್ಮನನಿಗೆ ಕೊಡದ ಸ್ಯಮಂತಕ ಮಣಿಯನ್ನು  ಮನೆಯಲ್ಲಿಇಟ್ಟ ಸತ್ರಾಜಿತ. ಅವನ ತಮ್ಮ ಪ್ರಸೇನ ಅದನ್ನು ಧರಿಸಿಕೊಂಡು ಅಡವಿಗೆ ಬೇಟೆಯಾಡಲು ಹೋದ.ಅಶುಚಿಯಾದ ಕಾರಣದಿಂದಾಗಿ ಅವನು ಸಿಂಹ ದಿಂದ ಹತನಾದ.
ಭಗವಂತನಿಗೆ ಕೊಡುವುದಿಲ್ಲ ಎಂದು ಹೇಳಿದ್ದರ ಪರಿಣಾಮ,ಅವನ ಸಂಪತ್ತನ್ನು ಅವನಿಗೆ ಹಿಂತಿರುಗಿ ಕೊಡದೇ ದ್ರೋಹ ಮಾಡಿದ ಪರಿಣಾಮ ಸತ್ರಾಜಿತ ನಿಗೆ ಆದ ದುಷ್ಟ ಪರಿಣಾಮವೇ ಪ್ರಸೇನನ ಸಾವು.
ಸ್ಯಮಂತಕ ಮಣಿಯನ್ನು ಧರಿಸಿದ್ದರು ಅವನಿಗೆ ಅಪಾಯದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ.
ದೇವರಿಗೆ ಕೊಡದ ಸಂಪತ್ತು ಎಂದಿಗೂ ನಮ್ಮ ಬಳಿ ಉಳಿಯಲು ಸಾಧ್ಯವಿಲ್ಲ ಎನ್ನುವ ಘಟನೆ ಮೇಲೆ ನಾವು ನೋಡಬಹುದು.
ಮೇಲಾಗಿ ಅವನು ಅಶುಚಿಯಾಗಿ ಇದ್ದ.
ಅಶುಚಿ ಎಂದರೆ ಶುಚಿಯಾಗಿ ಇರದವನು.

ಸ್ಯಮಂತಕ ಮಣಿಯನ್ನು ತಂದು ಶ್ರೀ ಕೃಷ್ಣ ಸತ್ರಾಜಿತನಿಗೆ ಹಿಂತಿರುಗಿ ಕೊಡುವನು.
ಸತ್ರಾಜಿತನಿಗೆ ಮಾಡಿದ ತಪ್ಪಿನ ಅರಿವಾಗಿ ತನ್ನ ಮಗಳಾದ ಸತ್ಯಭಾಮೆ ದೇವಿಯನ್ನು ಆ ಮಣಿಯೊಂದಿಗೆ ಶ್ರೀ ಕೃಷ್ಣ ಪರಮಾತ್ಮನಿಗೆ ಕೊಟ್ಟು ವಿವಾಹ ಮಾಡುತ್ತಾನೆ.
ದೇವರಿಗೆ ಅಥವಾ ಧರ್ಮಕಾರ್ಯಗಳಿಗೆ ನಮ್ಮಬಳಿ ಸಂಪತ್ತು ಇದ್ದರು ಸಹ, ಯಾರಾದರೂ ಸಹಾಯ ಕೇಳಿದಾಗ , ಮಾಡದೇ  ಹಾಗೇ ಇದ್ದರೆ ಅಥವಾ,ನಮ್ಮ ಸಂಪತ್ತು ಒಂದು ವೇಳೆ ಕಳೆದುಕೊಂಡಾಗ,ಹಿಂತಿರುಗಿ ಸಂಪತ್ತು ಬಂದಾಗ ಹಿಂದೆ ಮಾಡಿದ ಭಗವಂತನಿಗೆ ಕೊಡದ  ಅಪರಾಧದ ಪಾಪವನ್ನು ನಾವು ಮತ್ತೆ ತಪ್ಪು ಕಾಣಿಕೆಗಳನ್ನು ಕೊಟ್ಟು ಪರಿಹಾರ ಮಾಡಿಕೊಳ್ಳಲು ಬೇಕು.

ಶ್ರೀ ಕೃಷ್ಣನಿಗೆ ಸತ್ರಾಜಿತಕೊಟ್ಟ ಮಣಿಯನ್ನು ಮತ್ತೆ ಭಗವಂತ ಹಿಂತಿರುಗಿ ಅವನಿಗೆ ಕೊಡುತ್ತಾನೆ.
ಮೊದಲು ಅವನು ಅದೇ ಕೆಲಸ ಮಾಡಿದ್ದರು ಸಹ ಸ್ವಾಮಿ ಹಿಂತಿರುಗಿ ಕೊಡುತ್ತಾ ಇದ್ದ.
ಅವನ ಲೋಭತನವನ್ನು ಜಗತ್ತಿಗೆ ತೋರಿಸಲೋಸುಗ ಭಗವಂತ ಮಾಡಿದ ಲೀಲೆಗಳಲ್ಲಿ ಇದು ಒಂದು.

ನಾವು ಭಗವಂತನಿಗೆ ಅಥವಾ ಮಠಕ್ಕೆ ಅಥವಾ ಅವನ ಭಕ್ತರಿಗೆ ಏನಾದರು ಕಿಂಚಿತ್ತೂ ಕೊಟ್ಟರೇ ಅಯ್ಯೋ!! ಇಷ್ಟು ಖರ್ಚಾಯಿತೇ?? ಖರ್ಚಾಗುತ್ತದೆ ಅಂತ ಗೊತ್ತಿದ್ದರೆ ಇಲ್ಲಿ ಬರುತ್ತಾ ಇರಲಿಲ್ಲ ಎಂದು ಹಲವಾರು ಬಾರಿ ಪೇಚಾಡುತ್ತೇವೆ.
ನಿಸ್ವಾರ್ಥ ದಿಂದ ಮಾಡಿದ ದಾನ,ಸಹಾಯ ಇವುಗಳನ್ನು ಭಗವಂತ ಸ್ವೀಕರಿಸಿ ನಮಗೆ ಅದರ ಎರಡು ಪಟ್ಟು ಸಂಪತ್ತು ಕೊಡುವ.
ಶ್ರೀ ಜಗನ್ನಾಥ ದಾಸರು ಹೇಳಿದಂತೆ ಕೊಟ್ಟುದದು ಅನಂತ ಮಡಿ ಮಾಡಿಕೊಡುವವ ಅವನೊಬ್ಬನೇ ಈ ಜಗತ್ತಿನ ಒಳಗೆ.

ಕೊನೆಯಲ್ಲಿ ಭಗವಂತನಿಗೆ ನಮ್ಮ ಈ ಸಂಪತ್ತು ಗಳಿಂದ ಅವನಿಗೆ ಏನು ಆಗಬೇಕಾದದ್ದು ಇಲ್ಲ.
ಇಡೀ ಜಗತ್ತು ಅವನದ್ದು.ಇಡೀ ಸಂಪತ್ತು ಅವನದ್ದು.
ಸಂಪತ್ತಿನ(ಅದು ಧನ ಅಥವಾ ಜ್ಞಾನ ) ಅಧಿದೇವತೆಯಾದ ಆ ಶ್ರೀ ಲಕ್ಷ್ಮಿ ದೇವಿಯು ಅವನ ಚರಣದಾಸಿ.ಅಂತಹ ಶ್ರೀಲಕ್ಷ್ಮಿ ಪತಿಯ ಅನುಗ್ರಹ ಪಡೆಯಲು ಕಿಂಚಿತ್ತೂ ಪ್ರಯತ್ನ ಪಡೋಣ.
ಅವನು ಕೊಟ್ಟ ಸಂಪತ್ತು ಅದು ಧನ ಅಥವಾ ಜ್ಞಾನ ಯಾವುದೇ ಆಗಿರಲಿ ಅದು ಅವನಿಗೆ ಮೀಸಲಾಗಿರಬೇಕು ಹೊರತಾಗಿ ನಮ್ಮ ಸ್ವಂತಕ್ಕೆ ಸ್ವಾರ್ಥ ಕಾರ್ಯಗಳಿಗೆ ಅಲ್ಲ.
ಸತ್ರಾಜಿತನ ಕತೆ ನಮಗೆ ಒಂದು ಪಾಠ.
ಇದು ಬಲ್ಲವರಿಂದ ಕೇಳಿದ್ದು.
ಯಥಾವತ್ತಾಗಿ ಇಲ್ಲಿ ಬರೆದು ಹಾಕುವ ಪುಟ್ಟ ಪ್ರಯತ್ನ .
ಇಷ್ಟು  ಕಿಂಚಿತ್ತು ಜ್ಞಾನ ಕೊಟ್ಟ ಭಗವಂತನಿಗೆ ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
ಕೆರೆಯ ನೀರನು ಕೆರೆಗೆ ಚೆಲ್ಲಿ|
ವರವ ಪಡೆದವರಂತೆ ಕಾಣಿರೋ||

🙏ಅ.ವಿಜಯವಿಠ್ಠಲ🙏
*********************




ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ - ಕೃಷ್ಣಾರ್ಜುನರ ಮಹಾರಥ !
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ, ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ, ಹೋಗುತ್ತಿತ್ತು.
ಪ್ರತಿಬಾರಿ ಕರ್ಣನ ಬಾಣ ತಾಗಿ, ಅರ್ಜುನನ ರಥವು ಏಳು ಅಡಿ, ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - " ಎಷ್ಟು ವೀರಾಶಾಲಿಯಾಗಿದ್ದಾನೆ ಕರ್ಣ...!
"ಅರ್ಜುನನ ಬಾಣ ತಾಗಿ, ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ, ಸುಮ್ಮನೆ ಇರುತ್ತಿದ್ದ.
ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ತಿಕ್ಷ್ಣವಾಗಿ, ಕೃಷ್ಣನಿಗೆ ಹೇಳುತ್ತಾನೆ -ಓ ವಾಸುದೇವ ಕೃಷ್ಣ ಪರಮಾತ್ಮ ತಾವು ಎಂತಹ ಪಕ್ಷಬೇದ ಮಾಡುತ್ತಿದ್ದೀರಾ?
ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ,ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು "ಮಹಾವೀರ ಕರ್ಣ" ಅಂತ ಹೊಗುಳುತ್ತಿರುವುದೇಕೆ?
ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - " ಏಯ್ ಪಾರ್ಥಾ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ, ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಆದರೆ, ನಾವು ಇರದಿದ್ದರೆ, ನಿನ್ನ ರಥವು ಇಲ್ಲದಾಗುತ್ತಿತ್ತು. "
ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ. ಆದರೆ ತನ್ನ ಪ್ರತಿಭೆಯಲ್ಲಿ, ತುಂಬಾ ವಿಶ್ವಾಸ ಇಟ್ಟಿದ್ದ. ಅರ್ಜುನನಿಗೆ ಯುದ್ಧದ ಕೊನೆಯ ದಿನ ಶ್ರೀ ಕೃಷ್ಣ ನಿಂದ ಒಂದು ಸತ್ಯದ ಅರಿವಾಯಿತು.
ಸಾಧಾರಣವಾಗಿ, ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ.
ಆದರೆ , ಯುದ್ದದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ, ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ.
ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಬಸ್ಮವಾಯಿತು.
ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ. ಕೃಷ್ಣ ಹೇಳುತ್ತಾನೆ - " ಅರ್ಜುನಾ ನಿನ್ನ ರಥವು ಭೀಷ್ಮ , ಕೃಪಾಚಾರ್ಯ, ದ್ರೋಣ, ಕರ್ಣ ಮೊದಲಾದ ಅತಿರಥರುಗಳ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ಮಹಾರಥವನ್ನು ಸೃಷ್ಟಿಸಿದೆ. ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ, ಹೋಗುವ ಹಾಗೇ, ಅನಿಸಿತು.
ನಾನು ಎಂಬ" ಅಹಂ" ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ.
ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು.
ಭಗವಂತನ ಯೋಗಶಕ್ತಿಯ "ಶ್ರೀರಕ್ಷೆ "ಇಲ್ಲದಿದ್ದರೆ ಕರ್ಣನ ಅತಿರಥದ ಮುಂದೆ, ಅರ್ಜುನನ ರಥ ಸೋಲುತಿತ್ತು. ಕೃಷ್ಣನ ಕೃಪಾಕಟಾಕ್ಷದಿಂದ ಅರ್ಜುನನ ರಥ ಮಹಾರಥವಾಯಿತು.
ಸಂಜೀವಿನಿ ಕುಡಿದವನು ಸಾಯಲಾರ ಹಾಗೆಯೇ, ನಾನು ಎಂಬ ಆಹಂಕಾರವಿದ್ದವನು ಎಂದು ಗೆಲ್ಲಲಾರ.
ಕೃಷ್ಣನ ತಂತ್ರ, ವಿಧುರನ ನೀತಿ, ಕರ್ಣನ ಧಾನ, ಭೀಮನ ಬಲ,ದುರ್ಯೋಧನನ ಛಲ, ಶಕುನಿಯ ಕುತಂತ್ರ, ಈ ಎಲ್ಲ ಕಲೆಗಳನ್ನು ಕಲಿತು ಜೀವನದ ಸಂದಿಗ್ದ ಪರಿಸ್ಥಿತಿಯಲ್ಲಿ, ಬಳಸಿಕೊಂಡವನು ಮಾತ್ರ ನಿಜವಾಗಿಯೂ ಎಲ್ಲವನ್ನು ಗೆಲ್ಲಬಲ್ಲ ಮಹಾರಥನಾಗುತ್ತಾನೆ.


 ಕೃಷ್ಣಾರ್ಪಣಮಸ್ತು
****************

ಶ್ರೀ ಕೃಷ್ಣ ಲೀಲೆಗಳು
ಬಾಯಿಯಲ್ಲಿ ಬ್ರಹ್ಮಾಂಡ ಕಂಡವಳು.
ಭಾಗ 1

ಜಗವ ಆತ ಆಡಿಸುತ್ತಾನೆ. 
ಆತನನ್ನು ಈಕೆ ಆಡಿಸುತ್ತಾಳೆ. 
ಎತ್ತಿ ಮುದ್ದಾಡುತ್ತಾಳೆ. 
ಜಗದ ತಾಯಿ ಆತ.  
ಆತನ ತಾಯಿ ಈ ಯಶೋಧೆ.
ಇದನ್ನೆಲ್ಲ ಕಂಡ ದಾಸರು ಬೆರಾಗಾಗುತ್ತಾರೆ.
ಬಾಯ ತೆರೆದು ಉದ್ಗರಿಸುತ್ತಾರೆ.
'ಏನು ಪುಣ್ಯವ ಮಾಡಿದಳು ಈ ಯಶೋಧೆ!
ಜಗದೋದ್ಧಾರನ ಆಡಿಸುತ್ತಾಳೆ!'
ಊರಿಗೆ ದೊರೆ. ತಾಯಿಗೆ ಮಗ.
ಬ್ರಹ್ಮಾಂಡದ ಒಡೆಯ. 
ಯಶೋಧೆಯ ಸುತ.
ಬಾಲಲೀಲೆಗಳ ನೋಡುವ ಭಾಗ್ಯ ಬಾಲೆಯದು.
ಅಂದು ಒಂದು ಶುಭದಿನ. 
ಯಶೋಧೆಯ ಪುಣ್ಯದ ಹಾಲು ಹೆಪ್ಪಾಗಿತ್ತು.  ಕೆನಗಟ್ಟಿತ್ತು.  
ಪಕ್ವ ಕಾಲ.   ಭಗವದಿಚ್ಛೆ ಬಲ.
ಬಾಲರೆಲ್ಲ ಬಯಲಿಗೆ ಬಂದಿದ್ದರು. 
ಮೋಜಿನ ಆಟಗಳು. 
ರಾಮ,ದಾಮ, ಗೋಪ, ಕೃಷ್ಣ ಎಲ್ಲ ಗೋಪಬಾಲರು ಮೈದಾನದಲ್ಲಿ.
ಬ್ರಹ್ಮಾಂಡದ ಹೊರಗೆ ನಿಲ್ಲುತ್ತಾನೆ. 
ಬ್ರಹ್ಮಾಂಡ ಸೃಷ್ಟಿಸುತ್ತಾನೆ.
ಚರಾಚರ ವಸ್ತು, ಚೇತನರಿಂದ ಬ್ರಹ್ಮಾಂಡ ತುಂಬಿಸುತ್ತಾನೆ. 
ಲೀಲಯಾ ಬ್ರಹ್ಮಾಂಡದ ಜೊತೆ ಆಟವಾಡುತ್ತಾನೆ.  
ಇಂಥ ನಮ್ಮ ಸ್ವಾಮಿ! 
ಇದಾದರೋ ಸೀಮಿತ. 
ಮೈದಾನ. 
ಅದೆಂತು ಆಟ ಆಡುವ? 
ದೇವತೆಗಳಿಗೆ ಕೌತುಕ! 
ನೋಡ ಬಯಸಿದರು.
ಪತ್ನಿ ಸಹಿತ ರಥದಲ್ಲಿ ಬಂದರು.
ಗಗನದಲ್ಲಿ ಕಿಕ್ಕಿರಿದು ನೆರೆದರು.
ತಮ್ಮ ತಂದೆಯ, ಮಕ್ಕಳಾಟ ನೋಡಲು! 
ಅತ್ತ ತಾಯಿ ಯಶೋಧೆ ಅಡುಗೆ ಮನೆಯಲ್ಲಿ. 
ಮಗ ಬಾಲಕೃಷ್ಣನ ಲೀಲೆಗಳ ಇಂಪಾಗಿ ಹಾಡುತ್ತಿದ್ದಳು. 
ಮನದ ತುಂಬ ಕೃಷ್ಣ. 
ಮನೆಕೆಲಸದಲ್ಲಿ ಮೈ ಮರೆತಿದ್ದಳು.
ಇತ್ತ ಮಕ್ಕಳೆಲ್ಲ ಆಟದಲ್ಲಿ ಮಗ್ನ.
ಕೃಷ್ಣ ಮಧ್ಯೆ. ಬಾಲರೆಲ್ಲ ಅವನ ಸುತ್ತ.
ಎಲ್ಲಿ ಹೋದರೂ ಅಷ್ಟೇ! ದೇವಲೋಕದಲ್ಲೂ ಹಾಗೇ.
ಪರಮಾತ್ಮ ಕೇಂದ್ರ. 
ದೇವತೆಗಳೆಲ್ಲ ಪರಿಧಿ.
ಆಟದ ಮಧ್ಯೆ, ಅದ್ಭುತ ಘಟಿಸಿತು. 
ಗೆಳೆಯರೆಲ್ಲ ನೋಡುತ್ತಿದ್ದರು.
ಬಾಲಕೃಷ್ಣ ಬಗ್ಗಿದ. ನೆಲ ಮುಟ್ಟಿದ.
ಮುಷ್ಟಿ ಮಣ್ಣು ತೆಗೆದ.
ಕಣ್ಣು ಮುಚ್ಚಿದ. ಬಾಯಿ ತೆರೆದ.
ಮಣ್ಣು ಬಾಯಿಯಲ್ಲಿ ಹಾಕಿ ಕೊಂಡ.
ಬಾಯಿ ಮುಚ್ಚಿದ. ಕಣ್ಣು ತೆರೆದ.
ಸುತ್ತ ನೋಡಿದ. 
ಸಖರೆಲ್ಲ ಒಳಗೆ ಓಡಿದ್ದಾರೆ.
ಯಶೋಧೆ ಬಳಿ ಬಂದಿದ್ದಾರೆ. 
ಸುತ್ತಗಟ್ಟಿ ನಿಂತಿದ್ದಾರೆ. ತನ್ನ ಮೇಲೆ ತಾಯಿಗೆ ತಕರಾರಿನ ಸುರಿಮಳೆ.
'ಕೃಷ್ಣೋ ಮೃದಂ ಭಕ್ಷಿತವಾನ್' - ಭಾಗವತ. 
' ಅಮ್ಮ, ಈ ಕೃಷ್ಣ ಮಣ್ಣು ತಿಂದ ' 
ಬಲರಾಮ ಹೇಳಿದ.
ಉಳಿದವರು ಬೆಳೆಸಿದರು.
'ಮತ್ತೆ ಮತ್ತೆ ತಿಂದ'
ಮತ್ತೊಬ್ಬ ಹೇಳಿದ .
ಬೇಡವೆಂದರೂ ಕೃಷ್ಣ ಮಣ್ಣು ತಿಂದ. - ಮಗದೊಬ್ಬನ ಮಾತು.
'ಮಣ್ಣು ತಿನ್ನುವ ಚಟ ಕೃಷ್ಣನಿಗೆ.' 
ಇನ್ನೊಬ್ಬ ಹೇಳಿದ.
ಎಲ್ಲ ಕೇಳಿದಳು. ಕೃಷ್ಣನ ಮೇಲೆ ದೂರು ಕೇಳಿ ಕೇಳಿ ಅಭ್ಯಾಸ ಅವಳಿಗೆ. 
ದೂರು ಪ್ರತಿದಿನದ. ದಿನಚರಿ. 
ಮೂಡುವ ಸೂರ್ಯನ ಜೊತೆ
ಗೋಪಿಯರ ಆಗಮನ.
ಕೃಷ್ಣನ ಮೇಲೆ ಆರೋಪಗಳ  ಧಾರೆ.
ಯಾಕಾದರೂ ಬೆಳಗಾಯಿತೋ ಎನ್ನುತ್ತಿದ್ದಳು ಯಶೋಧೆ.
ಮಗನನ್ನು ನೋಡಿದಳು.
ಬಂದ ಕೋಪ ಮಾಯ. 
ಉಕ್ಕೇರಿದ ಮಮತೆ. 
ಯಾವಾಗಲೂ ಅಷ್ಟೇ.
ಬೆಣ್ಣೆ ಜೊತೆ ಕೋಪ, ಮತ್ಸರಾದಿ 
ಷಡ್ ವೈರಿಗಳನ್ನೂ ಕದಿಯುವ ಜಗದೇಕ ಕಳ್ಳ - ಕೃಷ್ಣ.
             
ಭಾಗ 2
ಮುದ್ದು ಕೃಷ್ಣ. ಮುಂಗುರುಳು ಹಣೆಯನ್ನು ಮುತ್ತಿಕ್ಕುತ್ತಿದೆ.  ನೀಲಮೇಘಶ್ಯಾಮ. 
ಅರಳಿದ ತಾವರೆ ಕಣ್ಣುಗಳು. ನೀಳ ನಾಸಿಕ.
ಪುಟ್ಟ ಬಾಯಿ. ಕೆಂದುಟಿಗಳು. ಮಾಸದ ಮುಗುಳು ನಗೆ.
ಮುಖದಲ್ಲಿ ತೇಜಸ್ಸು. ಕಾಂತಿ ತುಂಬಿ ಉಕ್ಕುತ್ತಿದೆ. ತಾನೇ ಉಡಿಸಿದ ಪುಟ್ಟ ದಟ್ಟ ಪೀತಾಂಬರ. ತಲೆಯ ಮೇಲೆ ಸಿಗಿಸಿದ ನವಿಲುಗರಿ.
ಓಡಿ ಬಂದಿದ್ದಕ್ಕೆ ಜಾರಿ ಹೋದ ಶಲ್ಯೆ.
ಯಾರೇ ಕೃಷ್ಣನನ್ನು ನೋಡಲಿ. 
ಪ್ರೀತಿ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಎತ್ತಿ ಮುದ್ದಾಡದೇ ಇರುವದಿಲ್ಲ.
ಅಂಥ ಸೂಜಿಗಲ್ಲು ಬಾಲಕೃಷ್ಣ. 
ಜಗವ ಮೋಹಿಸುವ ಮಾಯಾವಿ. 
ಅದ್ಭುತ ಆಕರ್ಷಣೆ.
ಮಣ್ಣು ತಿನ್ನಲು ಸಹಾಯ ಮಾಡಿತ್ತು
ಕೃಷ್ಣನ ಕೈ. 
ಅದನ್ನೇ ಹಿಡಿದಳು ಯಶೋಧೆ. 
ಇಲ್ಲದ ಸಿಟ್ಟು ಮಖದ ಮೇಲೆ ತಂದುಕೊಂಡಳು. 
ತನ್ನ ಕೈ ಮೇಲೆತ್ತಿದಳು. 
'ಮಣ್ಣು ತಿಂದೆಯಾ ಕೃಷ್ಣ?'
ತಾಯಿಯ ಪ್ರಶ್ನೆ.
ಬೆದರಿದ ಕೃಷ್ಣ. 
ಹಣೆಯ ಮೇಲೆ ಬೆವರಿನ ಹನಿ. 
ತಾಯಿಯ ಭಯ. 
ಕಣ್ಣಂಚಿನಲ್ಲಿ ಕಣ್ಣೀರು. 
ಕಣ್ಣೀರಿನಿಂದ, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗಿದೆ.  
ಜಾರಿ ತುಂಬು ಕೆನ್ನೆ ಮೇಲೆ ಇಳಿದಿದೆ.
'ಎಂಥ ಕಪಟ ನಾಟಕ.
ಸ್ಮರಿಸಿದವರ ಭಯ ನಿವಾರಕ. ಈತನಿಗೆಲ್ಲಿಯ ಭಯ ' ಎಂದರು ಆಕಾಶದಲ್ಲಿದ್ದ ದೇವತೆಗಳು.
'ನಾ ಅಹಂ ಭಕ್ಷಿತವಾನ್ ಅಂಬ'
'ತಾಯೇ ನಾನು ಮಣ್ಣು ತಿಂದಿಲ್ಲ'
ಕೃಷ್ಣನ ಉತ್ತರ.
'ಮತ್ತೆ ಎಲ್ಲರೂ ಹೇಳುತ್ತಿದ್ದಾರಲ್ಲ ಮಗೂ'
ತಾಯಿಯ ಮಾತು.
'ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ'
ಮಗನ ಉತ್ತರ.
ಸೂರ್ಯ,ಚಂದ್ರ,ವಾಯು ಆದಿ ಎಲ್ಲ ದೇವತೆಗಳು ದಿಗ್ಭ್ರಾಂತರಾದರು. 
ತಾವೇ ಸಾಕ್ಷಿ. ಸ್ವತಃ ನೋಡಿದ್ದೇವೆ.
ಮಣ್ಣು ತಿಂದು ಇಲ್ಲ ಎನ್ನುತ್ತಿದ್ದಾನೆ.
ಸುಳ್ಳು ಹೇಳುವವನಲ್ಲ. ಸತ್ಯ ಸಂಕಲ್ಪನೀತ.
ಏನಿದು ಕೃಷ್ಣನ ವರಸೆ.
ವಿಚಾರಿಸಿದರು. ಚಿಂತಿಸಿದರು.
ಎರಡು ಉತ್ತರ.
'ನಾ ಅಹಂ ಭಕ್ಷಿತವಾನ್' 
ನಾ ಎಂದರೆ ನಾರಾಯಣ.
ನಾರಾಯಣನ ಅವತಾರವೇ ಕೃಷ್ಣ.
ಪರಮಪರುಷ ನಾರಾಯಣನಾದ ನಾನು ಮಣ್ಣು ತಿಂದಿದ್ದೇನೆ.
ಸತ್ಯವಾಗಿದೆ. ಎಂದರು ದೇವತೆಗಳು.
ಮತ್ತೆ -
ಮಣ್ಣು ಪಂಚಭೂತಗಳ ಸಂಕೇತ.
ಪಂಚಭೂತಗಳಿಂದಾದದ್ದು ಬ್ರಹ್ಮಾಂಡ.
ಬ್ರಹ್ಮಾಂಡ ಇರುವದೇ ಪರಮಾತ್ಮನ ಉದರದಲ್ಲಿ.
ಮಣ್ಣು ಎಲ್ಲಿರಬೇಕೋ ಅಲ್ಲಿದೆ.
ಕೃಷ್ಣನ ಮಾತು ಸತ್ಯ.
ಉಳಿದವರು ಮಾತು ಮಿಥ್ಯ.
'ಹಾಗಾದರೆ ಬಾಯಿ ತೆಗೆ. ತೋರಿಸು'
ಮಾತೆಯ ಮಾತು.
'ಸರಿ. ಅವರಿವರ ಮಾತಿನ ಮಾತೇಕೆ? ನಾನಿರುವೆ. ನೀನಿರುವಿ
ನಾನು ಬಾಯಿ ತರೆವೆ. ನೀನೇ ನೋಡು.'
ಬಾಲಕೃಷ್ಣ ಪುಟ್ಟ ಬಾಯಿ ಅಷ್ಟು ತೆಗೆದ.
ದಿಟ್ಟಿಸಿ ನೋಡಿದಳು ಯಶೋಧೆ.
ಅದ್ಭುತ! ಅತ್ಯದ್ಭುತ. ವಿಸ್ಮಯ! 
' ಸಾ ತತ್ರ ದದೃಶೇ ವಿಶ್ವಂ ಜಗತ್ ಸ್ಥಾಸ್ನು ಚ ಖಂ ದಿಶಃ'
ಮೂರ್ಜಗನೊಡೆಯನ ಮುಖದಲ್ಲಿ 
ತ್ರಿಜಗವ ಕಂಡಳು.
ಜಗನ್ನಾಥನ ಕಂಡಳು.
ವಿಶ್ವೇಶನ ಬಾಯಲ್ಲಿ ವಿಶ್ವವ ಕಂಡಳು.
ವಿಶ್ವಂಭರನ ವಿರಾಟ್ ರೂಪವ ಕಂಡಳು.
ಪುಟ್ಟ ಬಾಯಲ್ಲಿ ದಿಟ್ಟ ಬ್ರಹ್ಮಾಂಡ ಕಂಡಳು.
ಪೊಳ್ಳು ಬಿಡದೇ ಎಲ್ಲ ಠಾವಿನಲ್ಲಿ ವ್ಯಾಪ್ತನಾದ ಲಕ್ಷ್ಮೀ ನಲ್ಲನ ಕಂಡಳು.
ಜಗದುದರನ ಅತಿ ವಿಮಲ ಗುಣ ರೂಪಗಳ
ಕಂಡಳು.
ಪರಬ್ರಹ್ಮನ ಅನಂತ ಅವತಾರಗಳ ಕಂಡಳು.
ಅನೇಕ ಅವಸ್ಥೆಯ ಅನಂತ ಜೀವಿಗಳ ಕಂಡಳು.
ಅಷ್ಟದಿಕ್ಕುಗಳ ಕಂಡಳು. 
ಚತುರ್ದಶ ಲೋಕಗಳ ಕಂಡಳು. 
 ಮೇಲೆ ಸ್ವರ್ಗಾದಿ ಸತ್ಯ ಲೋಕಗಳು.
ಅಂತರಿಕ್ಷ, ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಜ್ಯೋತಿರ್ಮಂಡಲಗಳು ಸಕಲವ ಕಂಡಳು.
ಮಧ್ಯೆ ಭೂಲೋಕ.
ಕೆಳಗೆ ಅತಳದಿಂದ ಪಾತಾಳ. 
ಭೂಲೋಕದಲ್ಲಿ ಜಂಬೂ, ಪುಷ್ಕರಾದಿ  ಸಪ್ತ ದ್ವೀಪಗಳು. ಲವಣ, ಕ್ಷೀರಾದಿ ಸಪ್ತಸಮುದ್ರಗಳು.
ಮಧ್ಯೆ ಬಂಗಾರದ ಮೇರು ಪರ್ವತ. 
ಸುತ್ತಲು ಸುತ್ತಿರುವ ಸಾಲು ಸಾಲು ಪರ್ವತಗಳು. ಗಂಗಾದಿ ಸಕಲ ನದಿಗಳು.
ಮತ್ತೆ ಅಲ್ಲಿ ಭರತಖಂಡ.
ಅದರಲ್ಲಿ ಭಾರತದೇಶ.
ಮತ್ತೆ ಯಮುನಾ ನದಿ ತೀರ.
ತೀರದಲ್ಲಿ ತಮ್ಮ ಗೋಕುಲ, ಬೃಂದಾವನ.
ಅಲ್ಲಿ ತನ್ನ ಮುದ್ದುಕೃಷ್ಣ. 
ತೆರೆದ ಬಾಯಿ. 
ಒಳಗೆ ಇಣುಕಿ ನೋಡುತ್ರಿರುವ ತಾನು.
ಎಲ್ಲ ನೋಡಿದಳು.
ದಿಗ್ಭ್ರಾಂತಳಾದಳು. ವಿಸ್ಮಿತಳಾದಳು. ಏನೂ ತಿಳಿಯದಾಯಿತು. ಗರ ಬಡಿದಂತಾಯಿತು ಯಶೋಧೆಗೆ.
ಕನಸೋ ನನಸೋ ಒಂದೂ ತಿಳಿಯದು.
ಭಯಭೀತಳಾಗಿ ನಡುಗಿದಳು. ಬೆವರಿದಳು.
ಸಾಕಿನ್ನು ಈ ಚಿತ್ರ! ವಿಚಿತ್ರ!
ಕಣ್ಣು ಮುಚ್ಚಿದಳು.
'ಮಣ್ಣು ಕಂಡಿತಾ?' ಮುದ್ದು ಕೃಷ್ಣನ ಪ್ರಶ್ನೆ.
ಕಣ್ಣು ತೆರೆದಳು.
ಎದುರಿಗೆ ಕೇವಲ ಮುಗುಳುನಗೆಯ ಬಾಲಕೃಷ್ಣ.
ಕಾಣಲಾರದ್ದೆಲ್ಲ ಕಂಡಿತ್ತು
ಕಂಡಿದ್ದೆಲ್ಲ ಈಗ ಮಾಯವಾಗಿತ್ತು.
ಏನಿದು? ತನ್ನ ಭ್ರಮೆಯ ಬುದ್ಧಿಯೋ,
ಮಗ ಕೃಷ್ಣನ ಸಿದ್ಧಿಯೋ!
ಈತ ಸಾಮಾನ್ಯ ಮಗನಲ್ಲ. ವಾಸ್ತವಿಕವಾಗಿ ಈತ ನಮ್ಮ ಮಗನೇ ಅಲ್ಲ.
ನಾವು ಅವನ ತಂದೆ ತಾಯಿಗಳೂ ಅಲ್ಲ. 
ಈತ ಪರಬ್ರಹ್ಮ. 
ನಿಶ್ಚಿತವಾಯಿತು ಯಶೋಧೆಗೆ.
ಯಾವ ಜನುಮಗಳ ಪುಣ್ಯವೋ!
ಈಗ ಫಲಿಸಿದೆ. 
ಮಗನಾಗಿ ಬಂದಿದ್ದಾನೆ. 
ಎಂದುಕೊಂಡಳು ಯಶೋಧೆ.
ಸರ್ವಜ್ಞ ಶ್ರೀ ಕೃಷ್ಣ. ಎಲ್ಲ ಗಮನಿಸಿದ.
ಇನ್ನು ಸಾಕು ಎಂದ. 
ಯಶೋಧೆಯ ನೋಡಿದ. 
ಮಾಯಾ ಜಾಲ ಹಿಂತೆಗೆದ.
ಬ್ರಹ್ಮಾಂಡ, ವಿಶ್ವ ರೂಪ ಎಲ ಮಾಯ.
ತಾನು ಮಗ, ಆಕೆ ತಾಯಿ
ತನ್ನ ಮಾಯೆವ ಆವರಿಸಿದ.
ಈ ಪ್ರಜ್ಞೆ ಮುಂದುವರಿಸಿದ
ಯಶೋಧೆಗೆ ನಡೆದಿದ್ದಿಲ್ಲ ಮರೆಸಿದ.
'ಕೃಷ್ಣ ಮಣ್ಣು ತಿಂದಿಲ್ಲ' 
ಎಂದಳು ಯಶೋಧೆ. ಒಳಗೆ ಹೋದಳು.
ಕೃಷ್ಣನಿಗೆ ಪ್ರಿಯ ಬೆಣ್ಣೆ ತಂದಳು.
ಎಲ್ಲ ಮಕ್ಕಳಿಗೆ ಹಂಚಿದಳು.
ಮಕ್ಕಳೆಲ್ಲ ಬೆಣ್ಣೆ ತಿಂದರು. 
ಮತ್ತೆ ಆಡಲು ಹೋದರು.
ಯಶೋಧೆಯೂ ಒಳಗೆ ಹೋದಳು.
ಮನೆ ಕೆಲಸದಲ್ಲಿ ಮೈ ಮರೆತಳು.
ಮತ್ತೆ ಎಲ್ಲವೂ ನಿತ್ಯದಂತೆ!
ಅಘಟಿತ ಘಟಿಸಿತ್ತು ಎಂಬುದೇ
ಜಗ ಮರೆಯಿತು.
'ಇದು ಕೃಷ್ಣ ಲೀಲೆ.
ಇದು ಹೆದ್ದೈವನ ಹಿರಿದಾದ ಲೀಲೆ'
ಎಂದು ಕೊಂಡರು ದೇವತೆಗಳು.
ಶ್ರೀ ಕೃಷ್ಣನಿಗೆ ಮನಸಾರೆ ನಮಿಸಿದರು. ಮರಳಿದರು.
ನಾವೂ ಯದುಕುಲತಿಲಕನಿಗೆ ಸಹಸ್ರ ಸಹಸ್ರ ನಮಿಸೋಣ. ಅವನ 
ಅನುಗ್ರಹ. ಪ್ರಾರ್ಥಿಸೋಣ. 
🙏🙏🙏🙏🙏

     ಶ್ರೀ ಕೃಷ್ಣಾರ್ಪಣಮಸ್ತುn
****************

ಶ್ರೀ ಕೃಷ್ಣ ಪರಮಾತ್ಮನಿಗೆ  ಹದಿನಾರು ಸಾವಿರಕ್ಕೂ ಹೆಚ್ಚು ಪತ್ನಿಯರಿದ್ದರು.  ಅದರಲ್ಲಿ ಅಷ್ಟ ಮಹಾಮಹಿಷಿಯರು ರುಕ್ಮಿಣೀ, ಸತ್ಯಭಾಮ, ನೀಲ, ಮಿತ್ರವೃಂದ, ಜಾಂಬವತಿ, ಭದ್ರ, ಲಕ್ಷ್ಮಣ, ಕಾಲಿಂದೀ ಸೇರಿದ್ದಾರೆ. 

ರುಕ್ಮಿಣೀ ಸತ್ಯಭಾಮ ದೇವಿಯರು ಸಾಕ್ಷಾತ್ ಲಕ್ಷ್ಮೀದೇವಿಯ “ಶ್ರೀ ” ಮತ್ತು “ಭೂ” ರೂಪಗಳು.  ಉಳಿದ ಆರು ಕೃಷ್ಣಪತ್ನಿಯರು ಗರುಡ ಶೇಷ ರುದ್ರರಿಗಿಂತ ಕಡಿಮೆ ಕಕ್ಷೆಯಲ್ಲಿ ಬರುವವರು.
ನೀಲಾದೇವಿ –  ಯಶೋದೆಯ ಅಣ್ಣನಾದ ಕುಂಭಕ ಎಂಬ ಹೆಸರುಳ್ಳ ಗೋಪಾಲನ ಮಗಳಾಗಿ “ನೀಲಾ” ಎಂಬ ನಾಮಧೇಯದಿಂದ ಹುಟ್ಟಿದ್ದಳು.  ಅವಳು ಹಿಂದಿನ ಜನ್ಮದಲ್ಲೇ ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಿರುಪತಿಯಲ್ಲಿ ಕಪಿಲತೀರ್ಥದಲ್ಲಿ , ಪಾಪನಾಶಿನಿಯ ಸ್ನಾನಗೈದು ,  ನಾರಾಯಣ ದೇವರನ್ನು ಕುರಿತು ತಪಗೈದಳು.   ನಾನು ನಿನ್ನ ಪತ್ನಿಯಾಗಬೇಕೆಂದು  ಕೋರಿದಳು.  ಕೃಷ್ಣನು ತನ್ನ ಉಪನಯನ ಪೂರ್ವದಲ್ಲೇ  ಏಳು ದೈತ್ಯ  ವೃಷಭಗಳನ್ನು ಕೊಂದು ನೀಲಾಳನ್ನು ವಿವಾಹವಾದನು.  ಆ ಕುಂಭಕನೇ ನಗ್ನಜಿತ್ ರಾಜನಾಗಿ ಜನಿಸಿದನು.  ಅ ಕನ್ಯೆಯೇ ಮತ್ತೊಮ್ಮೆ ನೀಲಾದೇವಿಯೆಂಬ ಹೆಸರಿನಲ್ಲಿ ಇನ್ನೊಂದು ರೂಪದಲ್ಲಿ ಹುಟ್ಟಿದಳು.    ಆ ನೀಲಾದೇವಿಯ ಸ್ವಯಂವರದಲ್ಲಿ ಮತ್ತೊಮ್ಮೆ ರುದ್ರದೇವರ ವರಬಲದಿಂದ ಹುಟ್ಟಿದ್ದ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾದೇವಿಯನ್ನು ವಿವಾಹವಾದನು.  ಆಗ ಕುಂಭಕನ ಮಗಳಾದ ನೀಲಾದೇವಿಯೂ ರಾಜಪುತ್ರಿಯಾದ ನೀಲಾದೇವಿಯಲ್ಲಿ ಪ್ರವೇಶಿಸಿ ಒಂದೇ ರೂಪವುಳ್ಳವಳಾದಳು .

ಭದ್ರಾದೇವಿ –  ಇವಳು ಹಿಂದಿನ ಜನ್ಮದಲ್ಲಿ ನಳನ ಮಗಳಾಗಿದ್ದಳು. ಅವಳೂ ಭಗವಂತನೇ ತನ್ನ ಪತ್ನಿಯಾಗಬೇಕೆಂದು ಕೋರಿದ್ದಳು.  ಅವಳು ಭಗವಂತನ ನಾಮಸ್ಮರಣೆ ಮಾಡಿ ಪ್ರಾಣ ಬಿಟ್ಟಳು.  ಅವಳು ಮುಂದಿನ ಜನ್ಮದಲ್ಲಿ ವಸುದೇವನ ತಂಗಿಯಾದ ಕೈಕೇಯಿಯಲ್ಲಿ “ಭದ್ರಾ” ಎಂಬ ಹೆಸರಿಂದ ಹುಟ್ಟಿದಳು.   ಮತ್ತು ಶ್ರೀ ಕೃಷ್ಣನನ್ನು ವಿವಾಹವಾದಳು.

ಮಿತ್ರವಿಂದಾದೇವಿ –   ಮಿತ್ರವಿಂದೆಯು ಹಿಂದಿನ ಜನ್ಮದಲ್ಲಿ ಅಗ್ನಿಷ್ಪಾತ್ತ ಎಂಬ ಪಿತೃದೇವತೆಯ ಮಗಳಾಗಿ ಜನಿಸಿ, “ಮಿತ್ರ” ಎಂಬ ಹೆಸರಿನ ಭಗವಂತನ ಹೊಂದಲು ಸಾತ್ವಿಕ ಪುರಾಣಗಳನ್ನು ಅನವರತ ಕೇಳಿ ಭಗವತ್ಕಥಾಶ್ರವಣದ ಫಲವಾಗಿ ಮುಂದೆ ವಸುದೇವನ ತಂಗಿಯಾದ ಸುಮಿತ್ರೆಯ ಮಗಳಾಗಿ “ಮಿತ್ರವಿಂದೆ” ಎಂಬ ಹೆಸರಿನಿಂದ ಜನಿಸಿ, ಸ್ವಯಂವರದಲ್ಲಿ ಕೃಷ್ಣನ ಕೊರಳಲ್ಲಿ ಮಾಲೆಯನ್ನು ಹಾಕಿ ವಿವಾಹವಾದಳು.

ಕಾಳಿಂದೀದೇವಿ –  ಇವಳು ಸೂರ್ಯ ಪುತ್ರಿ, ಯಮುನೆಯ ತಂಗಿ. ಇವಳೂ ಕೃಷ್ಣನನ್ನೇ ವಿವಾಹವಾಗಬಯಸಿ ಯಮುನೆಯ ತೀರದಲ್ಲಿ ತಪಸ್ಸು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಕೃಷ್ಣಾರ್ಜುನರು ಬೇಟೆಗಾಗಿ ಯಮುನಾತೀರಕ್ಕೆ ಬಂದರು. ಅಲ್ಲಿ ತಪಸ್ಸು ಮಾಡುತ್ತಿದ್ದ ಅ ಕನ್ಯೆಯನ್ನು ಅರ್ಜುನನು ಏಕೆ ತಪಸ್ಸು ಮಾಡುತ್ತಿರುವೆ ಎನ್ನಲು ಅವಳು ಕೃಷ್ಣನ ವಿವಾಹವಾಗುವ ಬಯಕೆಯನ್ನು ಹೇಳಿದಳು.  ಅವಳ ಅನುಗ್ರಹಿಸಲು ಕೃಷ್ಣನು ಕಾಲಿಂದಿಯನ್ನು ವಿವಾಹವಾದಳು.

ಲಕ್ಷಣಾದೇವಿ –  ಮದ್ರದೇಶದ ರಾಜನ ಮಗಳಾಗಿ ಜನಿಸಿ, ಅವಳ ಸ್ವಯಂವರದಲ್ಲಿ ಕೃಷ್ಣನು ಮತ್ಸ್ಯಯಂತ್ರವನ್ನು ಭೇದಿಸಿ, ಯುದ್ಧಕ್ಕೆ ಬಂದ ಎಲ್ಲಾ ರಾಜರುಗಳನ್ನೂ ಗೆದ್ದು ಲಕ್ಷಣಾದೇವಿಯನ್ನು ವಿವಾಹವಾಗಿ ದ್ವಾರಕಾ ಪಟ್ಟಣಕ್ಕೆ ಕರೆದುಕೊಂಡು ಹೋದನು.

ಜಾಂಬವತೀದೇವಿ –  ಇವಳ ನಿಜವಾದ ಹೆಸರು “ರೋಹಿಣಿ”.  ಜಾಂಬವಂತನ ಮಗಳಾದ್ದರಿಂದ “ಜಾಂಬವತಿ”.  ಸ್ಯಮಂತಕಮಣಿಯ  ಅರಸಿ ಬಂದ ಕೃಷ್ಣನು ಜಾಂಬವಂತನೊಂದಿಗೆ ಹದಿನೆಂಟು ದಿನ ಯುದ್ಧ ಮಾಡಿ, ಅವನ ಪರಾಕ್ರಮವನ್ನು ಜಗತ್ತಿಗೆ ತೋರಿಸಿ, ನಂತರ ತನ್ನ ರಾಮರೂಪವನ್ನು ತೋರಿಸಿ, ಸಂತಸಗೊಂಡ ಜಾಂಭವಂತ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡಿದನು.

ಜಾಂಬವತಿಯು ಉಳಿದ ಷಣ್ಮಹಿಷಿಯರಿಗಿಂತ ಶ್ರೇಷ್ಟಳು. ಎಲ್ಲಾ ಷಣ್ಮಹಿಷಿಯರಲ್ಲಿ ರಮಾದೇವಿಯರ ಸನ್ನಿಧಾನ ಇರುವ ಸಂದರ್ಭದಲ್ಲಿ ಮಾತ್ರ ಕೃಷ್ಣನು ಅವರನ್ನು ಸೇರುವನು. 

ನರಹರಿ ಸುಮಧ್ವ.
**************



#ದಾರಿದ್ರ್ಯ ಬದಲಾಗಿ  ಭಾಗ್ಯ#
------------------------------------------

              ಒಂದು ದಿನ ಕೃಷ್ಣ ಹಾಗೂ ಅರ್ಜುನ, ಇಬ್ಬರೂ ವಾಯುವಿಹಾರ ಮಾಡುತ್ತಿರುವಾಗ, ಒಬ್ಬ ಬಡ ಬ್ರಾಹ್ಮಣ ಭಿಕ್ಷೆ ಬೇಡುತ್ತಿರುವದು ಕಾಣಿಸಿತು, ಅದನ್ನು ನೋಡಿ ಅರ್ಜುನನಿಗೆ ಕನಿಕರ ಬಂದು, ಒಂದೇ ಸಲಕ್ಕೆ ಅವನ ದಾರಿದ್ರ್ಯ ನಿವಾರಣೆ ಮಾಡಬೇಕೆಂದು, ಅವನಿಗೆ ಸ್ವರ್ಣ ಮುದ್ರೆಗಳು ತುಂಬಿದ ಚೀಲವನ್ನು ದಾನ ಮಾಡುತ್ತಾನೆ. ಅಷ್ಟೊಂದು ಸ್ವರ್ಣ ಮುದ್ರೆಗಳನ್ನು ಪಡೆದ ಬ್ರಾಹ್ಮಣ ಬಹು ಸಂತೋಷದಿಂದ ಅವರಿಗೆ ವಂದಿಸಿ, ಇನ್ನು ತನ್ನ ದಾರಿದ್ರ್ಯವೆಲ್ಲ ಪರಿಹಾರವಾಯಿತು ಎಂದು ತನ್ನ ಮನೆಯ ಕಡೆಗೆ ನಡೆಯತೊಡಗಿದ. 
ಕಾಡಿನ ಸ್ವಲ್ಪ ಪ್ರದೇಶ ದಾಟಿಕೊಂಡು ಹರಿಯುವ ನದಿ ಪಕ್ಕದಲ್ಲಿ ಬ್ರಾಹ್ಮಣನ ಗುಡಿಸಲು ಮನೆ ಇತ್ತು, ಬೇಗ ಬೇಗ ಮನೆ ಸೇರಬೇಕೆಂದು ಹಣದ ಚೀಲದೊಂದಿಗೆ ಬ್ರಾಹ್ಮಣ ಸಾಗುತ್ತಿದ್ದಾಗ, ಅವನ ಎದಿರು ಕಳ್ಳನೊಬ್ಬ ಧುತ್ತೆಂದು ಪ್ರತ್ಯಕ್ಷನಾಗಿ, ಅವನನ್ನು ಬೆದರಿಸಿ ಅವನ ಬಳಿ ಇರುವ ಹಣದ ಚೀಲವನ್ನು ಕಿತ್ತುಕೊಂಡು ಓಡಿಹೋಗುತ್ತಾನೆ. ಬಯಸದೆ ಬಂದ ಭಾಗ್ಯ ದೂರವಾಗಿ ಮತ್ತೆ ದಾರಿದ್ರ್ಯ ಬ್ರಾಹ್ಮಣನಿಗೆ ಅಂಟಿಕೊಂಡಿತ್ತು. 

ಮರುದಿನ ಮತ್ತೆ  ಬ್ರಾಹ್ಮಣ ಭಿಕ್ಷೆ ಬೇಡುತ್ತಾ ಅಲೆದಾಡುತ್ತಿದ್ದ, ಪ್ರತಿ ದಿನದಂತೆ ಅಂದೂ ಕೂಡಾ ಕೃಷ್ಣ ಅರ್ಜುನ ಇಬ್ಬರೂ ವಾಯು ವಿಹಾರಕ್ಕೆ ಬಂದಾಗ, ಭಿಕ್ಷೆ ಬೇಡುತ್ತಿದ್ದ ಅದೇ ಬ್ರಾಹ್ಮಣನನ್ನು ನೋಡಿ, ಅರ್ಜುನನಿಗೆ ಆಶ್ಚರ್ಯವಾಗುತ್ತದೆ, " ನಿನ್ನೆ ತಾನೇ ಅಷ್ಟೊಂದು ಸ್ವರ್ಣ ಮುದ್ರಿಕೆಗಳನ್ನು ಕೊಟ್ಟಿದ್ದೇನೆ, ಆದರೂ ಕೂಡಾ ಭಿಕ್ಷೆ ಬೇಡುತ್ತಿದ್ದಾನಲ್ಲ " ಎಂದು ಪರಮಾತ್ಮನಿಗೆ ಕೇಳಿದಾಗ, ಕೃಷ್ಣ ಹೇಳುತ್ತಾನೆ " ಅವನ ಭಾಗ್ಯದ ಬಾಗಿಲು ಇನ್ನೂ ತೆರೆದಿಲ್ಲ, ಅದಕ್ಕೆ ಕಾಲ ಕೂಡಿ ಬರಬೇಕಾಗಿದೆ ", ಇದನ್ನು ಕೇಳಿದ ಅರ್ಜುನ, " ಅವನ ಭಾಗ್ಯದ ಬಾಗಿಲನ್ನು ಇವತ್ತು ನಾನೇ ತೆರೆಯುತ್ತೇನೆ ನೋಡು " ಎಂದು ಕೃಷ್ಣ ನಿಗೆ ಹೇಳಿ, ಬ್ರಾಹ್ಮಣನನ್ನು ಕರೆದು ಅತೀ ಬೆಲೆ ಬಾಳುವ ಮಾಣಿಕ್ಯವನ್ನು ನೀಡುತ್ತಾನೆ, ಒಂದು ಮಾಣಿಕ್ಯ ಲಕ್ಷಾಂತರ ಸ್ವರ್ಣ ಮುದ್ರಿಕೆಗಳಿಗೆ ಸಮನಾಗಿರುತ್ತದೆ, ಅತ್ಯಂತ ಆನಂದದಿಂದ ಇಬ್ಬರಿಗೂ ನಮಸ್ಕರಿಸಿದ ಬ್ರಾಹ್ಮಣ ಮಾಣಿಕ್ಯದೊಂದಿಗೆ  ಗುಡಿಸಲಿಗೆ ಬರುತ್ತಾನೆ, ಮರುದಿನ ಶ್ರೇಷ್ಠಿ ಗೆ ಭೇಟಿಯಾಗಿ ಮಾಣಿಕ್ಯವನ್ನು ಮಾರಿ, ಅದರಿಂದ ಬರುವ ಹಣದಿಂದ ಜೀವನ ಪೂರ್ತಿ ಸುಖವಾಗಿ ಬಾಳಬಹುದು ಎಂದುಕೊಂಡು, ಗುಡಿಸಲಲ್ಲಿ ಅದನ್ನು ಅಡಗಿಸಿ ಇಡಲು ಆಚೆ ಈಚೆ ನೋಡಿದಾಗ, ಅವನಿಗೆ ಹಳೆಯ ಬಿಂದಿಗೆ ಕಾಣುತ್ತದೆ, ಬಿಂದಿಗೆಯಲ್ಲಿ ಮಾಣಿಕ್ಯವನ್ನು ಅಡಗಿಸಿ ಇಟ್ಟು, ತನ್ನ ಪತ್ನಿಗೆ ಈ ವಿಷಯವನ್ನು ತಿಳಿಸಲು ಪತ್ನಿಯನ್ನು ಹುಡುಕುತ್ತಾ ಹೊರಗೆ ಹೋಗುತ್ತಾನೆ, ಅದೇ ಸಮಯದಲ್ಲಿ ನೀರು ತರಲು ನದಿಗೆ ಹೋಗಿ  ಮರಳಿ ಬರುತ್ತಿದ್ದ ಬ್ರಾಹ್ಮಣನ ಪತ್ನಿಯ ಕೈಯಿಂದ ಆಕಸ್ಮಿಕವಾಗಿ ಮಣ್ಣಿನ ಬಿಂದಿಗೆ ಜಾರಿ ಬಿದ್ದು ಒಡೆದು ಹೋಗುತ್ತದೆ, ಅವಳು ಮರಳಿ ಮನೆಗೆ ಬಂದು ಇನ್ನೊಂದು ಬಿಂದಿಗೆಗಾಗಿ ಹುಡುಕಾಡುವಾಗ, ಮಣ್ಣಿನ ಬಿಂದಿಗೆ ಯಾವುದು ಇಲ್ಲದ ಕಾರಣ, ಕೈಗೆ ಸಿಕ್ಕ ಅದೇ ಹಳೆಯ ಬಿಂದಿಗೆಯನ್ನು ಎತ್ತಿಕೊಂಡು ನೀರು ತರಲು ಮತ್ತೆ ನದಿಯ ಕಡೆಗೆ ಬಂದು, ಬಿಂದಿಗೆಯನ್ನು ನೀರಲ್ಲಿ ಮುಳುಗಿಸಿ ತುಂಬುವಾಗ, ಅದರಲ್ಲಿದ್ದ ಮಾಣಿಕ್ಯ ಅವಳಿಗೆ ಗೊತ್ತಾಗದಂತೆ ನೀರಲ್ಲಿ ಮುಳುಗಿಹೋಗುತ್ತದೆ, ಇತ್ತ ಪತ್ನಿಯನ್ನು ಕಾಣದೆ ಮನೆಗೆ ಬಂದ ಬ್ರಾಹ್ಮಣ, ಮನೆಯಲ್ಲಿ ಹಳೆಯ ಬಿಂದಿಗೆ ಇಲ್ಲದಿರುವದನ್ನು ನೋಡಿ ಕಂಗಾಲಾಗುತ್ತಾನೆ, ಅಷ್ಟರಲ್ಲಿ ನೀರು ತುಂಬಿಕೊಂಡು ಅದೇ ಬಿಂದಿಗೆಯೊಂದಿಗೆ ಮನೆಗೆ ಬಂದ ಪತ್ನಿಯನ್ನು ನೋಡಿ ಸಮಾಧಾನವಾದರೂ , ಬಿಂದಿಗೆಯಲ್ಲಿ ಮಾಣಿಕ್ಯ ಇಲ್ಲದಿರುವುದು ನೋಡಿ , ಅವನಿಗೆ ಗೊತ್ತಾಗಿಹೋಗುತ್ತದೆ ಮಾಣಿಕ್ಯ ನದಿಯಲ್ಲಿ ನೀರು ತುಂಬುವಾಗ ಬಿದ್ದು ಹೋಗಿದೆ ಎಂದು,  ಬಯಸದೆ ಬಂದ ಭಾಗ್ಯ ದೂರವಾಗಿ ಮತ್ತೆ ದಾರಿದ್ರ್ಯ ಬ್ರಾಹ್ಮಣನಿಗೆ ಅಂಟಿಕೊಂಡಿತ್ತು.

         ಮರುದಿನ ಮತ್ತೆ  ಬ್ರಾಹ್ಮಣ ಭಿಕ್ಷೆ ಬೇಡುತ್ತಾ  ಅಡ್ಡಾಡುತ್ತಿದ್ದ , ಪ್ರತಿ ದಿನದಂತೆ ಅಂದೂ ಕೂಡಾ ಕೃಷ್ಣ ಅರ್ಜುನ ಇಬ್ಬರೂ ವಾಯು ವಿಹಾರಕ್ಕೆ ಬಂದಾಗ, ಭಿಕ್ಷೆ ಬೇಡುತ್ತಿದ್ದ ಅದೇ ಬ್ರಾಹ್ಮಣನನ್ನು ನೋಡಿ,ಅರ್ಜುನನಿಗೆ ಇನ್ನೂ  ಆಶ್ಚರ್ಯವಾಗುತ್ತದೆ, " ಕೃಷ್ಣಾ  ಇದೇನಿದು ಇವನಿಗೆ ನಿನ್ನೆ ತಾನೇ ಅಮೂಲ್ಯವಾದ ಮಾಣಿಕ್ಯ ಕೊಟ್ಟಿದ್ದೆ, ಆದರೂ ಭಿಕ್ಷೆ ಬೇಡುತ್ತಿದ್ದಾನಲ್ಲ " ಅದಕ್ಕೆ ಕೃಷ್ಣ ಹೇಳುತ್ತಾನೆ " ನಾನು ಮೊದಲೇ ಹೇಳಿದ್ದೇನೆ  ಕರ್ಮದ ಫಲಗಳು ಅಷ್ಟು ಬೇಗನೆ ಎಲ್ಲರಿಗೂ ಸಿಗುವದಿಲ್ಲ, ಕರ್ಮವನ್ನು ಯಾವ ಉದ್ದೇಶಕ್ಕೆ ಮಾಡುತ್ತಿರೋ ಅದರ ಆಧಾರದ ಮೇಲೆ ಮನುಷ್ಯನಿಗೆ ಫಲಗಳು ಸಿಗುತ್ತವೆ, ಕರ್ಮ ಮಾಡಿದರೆ ಇನ್ನೊಬ್ಬರಿಗೆ ಒಳಿತು ಆಗಬೇಕು,ಹಾಗೆ ಕರ್ಮ ಮಾಡಬೇಕು,  ಇವನು ಭಿಕ್ಷೆ ಬೇಡಿ ಕರ್ಮ ಮಾಡುತ್ತಿದ್ದಾನೆ, ಅದರಿಂದ ಇನ್ನೊಬ್ಬರಿಗೆ ಒಳಿತು ಹೇಗೆ ಆಗುತ್ತದೆ, ಅದಕ್ಕೆ ಕಾಲ ಕೂಡಿ ಬರಬೇಕು " ಎಂದು ಹೇಳಿ, ಕೃಷ್ಣ ಆ ಬ್ರಾಹ್ಮಣನನ್ನು ಕರೆದು ಅವನಿಗೆ ಎರಡು ತಾಮ್ರದ ನಾಣ್ಯಗಳನ್ನು ಭಿಕ್ಷೆಯ ರೂಪದಲ್ಲಿ ನೀಡುತ್ತಾನೆ, ಜಗತ್ತನ್ನೇ ಕಾಯುವ ಪರಮಾತ್ಮ ಕೇವಲ ಎರಡು ನಾಣ್ಯಗಳನ್ನು ನೀಡಿದ್ದು ಅರ್ಜುನನಿಗೆ ಸರಿ ಬರಲಿಲ್ಲ, ಬ್ರಾಹ್ಮಣನೂ ನಿರಾಸೆಯಿಂದ ಪರಮಾತ್ಮ ನೀಡಿದ ಆ ಎರಡು ದುಡ್ಡನ್ನು ತೆಗೆದುಕೊಂಡು, ತನ್ನ ದಾರಿದ್ರ್ಯವನ್ನು ಹಳಿಯುತ್ತಾ, ಬಂದ ದುಡ್ಡಿನಲ್ಲಿ ಸ್ವಲ್ಪ ಅಕ್ಕಿಯನ್ನು ಖರೀದಿಸಿ ಮನೆಯ ಕಡೆಗೆ ನಡೆಯತೊಡಗಿದ. 

       ಕೃಷ್ಣ, ಅರ್ಜುನನ್ನು ಕರೆದುಕೊಂಡು ಬ್ರಾಹ್ಮಣನಿಗೆ ಗೊತ್ತಾಗದಂತೆ ಅವನನ್ನು ಹಿಂಬಾಲಿಸತೊಡಗಿದ, ಮನೆಯ ಕಡೆಗೆ ಹೊರಟ ಬ್ರಾಹ್ಮಣನಿಗೆ ಮನದಲ್ಲಿ ಸಾಕಷ್ಟು ನೋವು ಚಿಂತೆ ಆವರಿಸಿಕೊಂಡು ಬಿಟ್ಟಿತ್ತು, "ಪರಮಾತ್ಮನೂ ಕೂಡಾ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿಲ್ಲ, ಇನ್ನು ಬದುಕಿ ಪ್ರಯೋಜನವಿಲ್ಲ " ಎಂದುಕೊಂಡು ನದಿ ತೀರದ ಕಡೆಗೆ ನಡೆಯತೊಡಗಿದ, ನದಿಯ ದಂಡೆಗೆ ತುಸು ದೂರದಲ್ಲಿ ಮೀನಿನ ಬಲೆಯಲ್ಲಿ ಮೀನೊಂದು ಸಿಲುಕಿ ಒದ್ದಾಡುತ್ತಿತ್ತು, ಅಲ್ಲಿ ಯಾರೂ ಇರಲಿಲ್ಲ, ಬ್ರಾಹ್ಮಣನಿಗೆ ಸಾಯುವ ಮುಂಚೆ ಆ ಮೀನನ್ನು ಬದುಕಿಸಬೇಕೆಂಬ ಹಂಬಲವುಂಟಾಗಿ, ಅಲ್ಲಿಯೇ ಸಿಕ್ಕ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು, ತಾನು ತಂದ ಅಕ್ಕಿಯನ್ನು ಅದರಲ್ಲಿ ಹಾಕಿ, ನಿಧಾನವಾಗಿ ಮೀನನ್ನು ಬಲೆಯಿಂದ ಬಿಡಿಸಿ, ಪಾತ್ರೆಯಲ್ಲಿ ತೇಲಿಬಿಟ್ಟು ನದಿಯಲ್ಲಿ ಮೀನನ್ನು ತೇಲಿಬಿಡುವಷ್ಟರಲ್ಲಿ, ಆ ಮೀನು ಬುಳಕ್ಕನೆ ತನ್ನ ಬಾಯಿಯಿಂದ ಮಾಣಿಕ್ಯವನ್ನು ಪಾತ್ರೆಯಲ್ಲಿ ಬೀಳಿಸಿ, ನದಿಯಲ್ಲಿ ಕಣ್ಮರೆಯಾಯಿತು, ಬ್ರಾಹ್ಮಣನ ಪತ್ನಿ ಬಿಂದಿಗೆಯನ್ನು ಬಾಗಿಸಿ ನೀರು ತುಂಬುವಾಗ, ಇದೇ ಮೀನು ಮಾಣಿಕ್ಯವನ್ನು ನುಂಗಿತ್ತು. ಪಾತ್ರೆಯಲ್ಲಿ ಸಿಕ್ಕ ಮಾಣಿಕ್ಯವನ್ನು ನೋಡುತ್ತಲೇ ಬ್ರಾಹ್ಮಣನಿಗೆ ನಿಧಿ ಸಿಕ್ಕಷ್ಟು ಆನಂದವಾಗಿ, ಮಾಣಿಕ್ಯವನ್ನು ತಗೆದುಕೊಂಡು ಪಾತ್ರೆಯನ್ನು ನೀರಿನಲ್ಲಿ ತೇಲಿಬಿಟ್ಟ, ಅದರಲ್ಲಿನ ಅಕ್ಕಿಯನ್ನು ನೂರಾರು ಮೀನುಗಳು ತಿನ್ನತೊಡಗಿದವು, ಕೈಯಲ್ಲಿ ಮಾಣಿಕ್ಯವನ್ನು ಹಿಡಿದುಕೊಂಡು ಅತೀವ ಸಂತೋಷದಿಂದ " ಸಿಕ್ಕಿತು ಸಿಕ್ಕಿತು " ಎಂದು ಬ್ರಾಹ್ಮಣ ಜೋರಾಗಿ ಕೂಗತೊಡಗಿದ, ಆಗ ಅಲ್ಲಿಯೇ ಬೇರೊಬ್ಬರನ್ನು ದೋಚಿಕೊಂಡು  ಸಾಕಷ್ಟು ಹಣದ ಚೀಲಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಕಳ್ಳನಿಗೆ, ಈ ಬ್ರಾಹ್ಮಣ ಜೋರಾಗಿ ಕೂಗುವದು ಕೇಳಿಸುತ್ತದೆ ಹಾಗೆಯೇ ಇವನ ಹಿಂದೆ ಬರುತ್ತಿದ್ದ ಕೃಷ್ಣ, ಅರ್ಜುನರು ಕಾಣಿಸುತ್ತಾರೆ, ಆದರೆ ಕಳ್ಳನಿಗೆ  ಅವರಿಬ್ಬರು  ಯಾರೋ ರಾಜಭಟರಂತೆ ಕಾಣುತ್ತಾರೆ, ತನ್ನನ್ನು ಹಿಡಿಯುವದಕ್ಕಾಗಿ  ಬ್ರಾಹ್ಮಣ ಇವರನ್ನು ಕರೆದುಕೊಂಡು ಬಂದಿದ್ದಾನೆ ಅದಕ್ಕಾಗಿ " ಸಿಕ್ಕಿತು ಸಿಕ್ಕಿತು " ಎಂದು ಕೂಗುತ್ತಿದ್ದಾನೆ, ಎಂದು ತಿಳಿದುಕೊಂಡ ಕಳ್ಳ, ಬ್ರಾಹ್ಮಣನ ಬಳಿ ಓಡುತ್ತಾ ಬಂದು ತನ್ನಲ್ಲಿದ್ದ ಎಲ್ಲ ಹಣದ ಚೀಲಗಳನ್ನು ಅವನಿಗೆ ಒಪ್ಪಿಸಿ, ' ಈ ಹಿಂದೆ ನಿಮ್ಮ ಹಣದ ಚೀಲ ಕದ್ದಿದ್ದೇ ಈಗ ಇವೆಲ್ಲ ಹಣದ ಚೀಲಗಳನ್ನು ಒಪ್ಪಿಸಿಕೊಳ್ಳಿ, ನನ್ನನ್ನು ರಾಜಭಟರಿಗೆ ಹಿಡಿದು ಕೊಡಬೇಡಿ" ಎಂದು ಬೇಡಿಕೊಂಡು ಅಲ್ಲಿಂದ ಓಡಿಹೋಗುತ್ತಾನೆ. 

            ಬ್ರಾಹ್ಮಣನ ಭಾಗ್ಯದ ಬಾಗಿಲು ತೆರೆದಿರುತ್ತದೆ, "ಪರಮಾತ್ಮಾ ನಿನ್ನ ಲೀಲೆ ಎಷ್ಟು ಕೊಂಡಾಡಿದರೂ ಸಾಲದು, ನನ್ನ ದಾರಿದ್ರ್ಯ ನಿವಾರಣೆ ಮಾಡಿದೆ " ಎನ್ನುತ್ತಾ ಬ್ರಾಹ್ಮಣ ಹಣದ ಚೀಲಗಳನ್ನು ಮಾಣಿಕ್ಯವನ್ನು ಹಿಡಿದುಕೊಂಡು ಮನೆಯ ಕಡೆಗೆ ನಡೆಯತೊಡಗಿದ. 
ಇದೆಲ್ಲವನ್ನು ನೋಡುತ್ತಾ ನಿಂತ ಅರ್ಜುನ ಕೃಷ್ಣನಿಗೆ ಕೇಳುತ್ತಾನೆ "ಕೃಷ್ಣಾ ಏನಿದು ನಿನ್ನ ಲೀಲೆ," ಆಗ ಕೃಷ್ಣ ಹೇಳುತ್ತಾನೆ, 
" ನಾನು ಮೊದಲೇ ಹೇಳಿದ್ದೇನೆ, ಬ್ರಾಹ್ಮಣ ಬರಿ ತನ್ನ ತುತ್ತಿಗಾಗಿ ಭಿಕ್ಷೆಯ ಕರ್ಮ ಮಾಡುತ್ತಿದ್ದ, ಅದರಲ್ಲಿ ಸ್ವಲ್ಪ ಭಾಗವಾದರೂ ಇನ್ನೊಬ್ಬರ ಸಹಾಯಾರ್ಥವಾಗಿ ಬಳಸಿಕೊಂಡಿದ್ದಿಲ್ಲ, ಕೊನೆಗೆ ಸಾಯಲು ನಿರ್ಧರಿಸಿದಾಗ ಒಂದು ಜೀವವನ್ನು ಉಳಿಸಿದ, ನೂರಾರು ಜೀವಿಗಳಿಗೆ ಅನ್ನ ಹಾಕಿದ, ಅದರ ಫಲವಾಗಿ ಅವನ ಕರ್ಮ ಇಂದು ಅವನನ್ನು ಕಾಪಾಡಿತು, ದಾರಿದ್ರ್ಯ ಬದಲಾಗಿ ಭಾಗ್ಯ ಬಂದಿತು ".


( ಕೀರ್ತನೆಯಲ್ಲಿ ಕೇಳಿದ್ದು ).
****

ಕೃಷ್ಣನ 50 ವಿಶೇಷ ನಾಮಗಳು ಮತ್ತು ಅವುಗಳ ಅರ್ಥಗಳನ್ನು ಕೆಳಗಡೆ ಕೊಡಲಾಗಿದೆ.

ಕೃಷ್ಣ, ಗಿರಿಧರ, ಮುರಳೀಧರ, ಪಿತಾಂಬರ...
1. ಕೃಷ್ಣ : ಎಲ್ಲರನ್ನೂ ತನ್ನ ಕಡೆ ಆರ್ಕಷಿತ ಮಾಡಿಕೊಳ್ಳುವವನು.
2. ಗಿರಿಧರ: ಪರ್ವತವನ್ನು ಎತ್ತಿ ಹಿಡಿದವನು.
3. ಮುರಳಿಧರ : ಮುರಳಿಯನ್ನು ನುಡಿಸುವವನು.
4. ಪಿತಾಂಬರಧಾರಿ : ಹಳದಿ ವಸ್ತ್ರವನ್ನು ಧರಿಸಿದವನು.
5. ಮಧುಸೂದನ : ಮಧು ಎಂಬ ದೈತ್ಯನನ್ನು ಸಂಹಾರ ಮಾಡಿದವನು.
6. ಯಶೋದ ದೇವಕಿ ನಂದನ : ಯಶೋದ ಹಾಗೂ ದೇವಕಿಯರಿಗೆ ಸಂತೋಷವನ್ನು ನೀಡುವ ಪ್ರಿಯ ಪುತ್ರ.
7. ಗೋಪಾಲ : ಗೋವುಗಳು ಅಥವಾ ಪೃಥ್ವಿಯ ಪಾಲನೆ ಮಾಡುವವನು.
8. ಗೋವಿಂದ : ಹಸುಗಳ ರಕ್ಷಕ.
9. ಶ್ರೀನಾಥ : ಲಕ್ಷ್ಮಿಗೆ ಆನಂದ ಕೊಡುವವನು.
10. ಕುಂಜ ವಿಹಾರಿ : ಕುಂಜ ಎಂಬ ಹೂದೋಟದಲ್ಲಿ ವಿಹಾರ ಮಾಡುವವನು.
ಚಕ್ರಧಾರಿ, ಶ್ಯಾಮ, ಮಾಧವ...
11. ಚಕ್ರಧಾರಿ: ಸುದರ್ಶನ ಚಕ್ರ, ಜ್ಷಾನ ಚಕ್ರ, ಶಕ್ತಿ ಚಕ್ರ ಧರಿಸುವವನು.
12. ಶ್ಯಾಮ : ಕಪ್ಪು ವರ್ಣದವನು.
13. ಮಾಧವ : ಮಾಯಾಪತಿ.
14. ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು.
15. ಅಸುರಾರಿ : ಅಸುರರನ್ನು ಸೋಲಿಸಿದವನು.
16. ಬನವಾರಿ : ಹೂದೋಟಗಳಲ್ಲಿ ವಿಹರಿಸುವವನು.
17. ಮುಕುಂದ : ನಿಧಿಗಳನ್ನು ಇಟ್ಟುಕೊಂಡಿರವವನು.
18. ಯೋಗೀಶ್ವರ : ಯೋಗಿಗಳ ಈಶ್ವರ.
19. ಗೊಪೇಶ : ಗೋಪಿಗಳ ಈಶ.
20. ಹರಿ : ದು:ಖವನ್ನು ದೂರಮಾಡುವವನು.
ಮದನ, ಮನೋಹರ, ಮೋಹನ...

21. ಮದನ : ಸುಂದರ.
22. ಮನೋಹರ : ಮನಸ್ಸನ್ನು ಆಕರ್ಷಿಸುವವನು.
23. ಮೋಹನ : ಸಮ್ಮೋಹನ ಮಾಡುವವನು.
24. ಜಗದೀಶ : ಜಗತ್ತಿನ ಮಾಲೀಕ.
25. ಪಾಲನಹಾರ : ಸರ್ವರ ಲಾಲನೆ ಪಾಲನೆ ಮಾಡುವವನು.
26. ಕಂಸಾರಿ : ಕಂಸನನ್ನು ಸಂಹರಿಸಿದವನು.
27. ರುಕ್ಮಿಣಿ ವಲ್ಲಭ : ರುಕ್ಮಿಣಿಯ ಪತಿ.
28. ಕೇಶವ : ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು. ನೀರಿನ ಮೇಲೆ ವಾಸ ಮಾಡುವವನು.
29. ವಾಸುದೇವ : ವಸುದೇವನ ಪುತ್ರ.
30. ರಣಛೋರ : ರುದ್ರಭೂಮಿಯಲ್ಲಿ ಇರುವವನು.

ಗುಢಾಕೇಶ, ಋಷಿಕೇಶ, ಸಾರಥಿ...
31. ಗುಢಾಕೇಶ : ನಿದ್ರೆಯ ಮೇಲೆ ವಿಜಯಿಯಾದವನು.
32. ಋಷಿಕೇಶ : ಇಂದ್ರಿಯಗಳನ್ನು ಜಯಿಸಿದವನು.
33. ಸಾರಥಿ : ಅರ್ಜುನನ ರಥದ ಸಾರಥಿ.
34. ಪೂರ್ಣಪ್ರರಬ್ರಹ್ಮ : ದೇವತೆಗಳಿಗೂ ಮಾಲೀಕ.
35. ದೇವೇಶ : ದೇವಗಳ ಈಶ.
36. ನಾಗ ನಥಿಯ : ಕಲಿನಾಗವನ್ನು ಕೊಂದವನು.
37. ವೃಷ್ಣಿಪತಿ : ಆ ಕುಲದಲ್ಲಿ ಹುಟ್ಟಿದವನು.
38. ಯದುಪತಿ : ಯಾದವರ ಮಾಲೀಕ.
39. ಯದುವಂಶಿ : ಯದು ವಂಶದ ಅವತಾರ.
40. ದ್ವಾರಕಾಧೀಶ : ದ್ವಾರಕೆಯ ಮಾಲೀಕ.

ನಾಗರ, ಛಲೀಯ, ವಲ್ಲಭ...
41. ನಾಗರ : ಸುಂದರ.
42. ಛಲೀಯ : ಛಲ (ಹಠ) ಮಾಡುವವನು.
43. ಮಥುರಾ ಗೋಕುಲವಾಸಿ : ಈ ಸ್ಥಳಗಳ ನಿವಾಸಿ.
44. ವಲ್ಲಭ : ಸದಾ ಆನಂದದಲ್ಲಿ ಇರುವವನು.
45. ದಾಮೋದರ : ಹೊಟ್ಟೆಗೆ ಹಗ್ಗ ಕಟ್ಟಿಸಿಕೊಂಡವವನು.
46. ಅಘಹಾರಿ : ಪಾಪಗಳನ್ನು ಹರಿಸುವವನು.
47. ಸಖ : ಅರ್ಜುನ ಮತ್ತು ಸುದಾಮನ ಮಿತ್ರ.
48. ರಾಸರಚಯ್ಯ : ರಾಸ(ಒಂದು ಪ್ರಕಾರದ ನೃತ್ಯ) ರಚಿಸಿದವನು.
49. ಅಚ್ಯುತ : ಅವನ ಧಾಮದಿಂದ ಮರಳಿ ಹೋಗಲು ಸಾಧ್ಯವಿಲ್ಲ.
50. ನಂದಲಾಲ : ನಂದನ ಪುತ್ರ.

**********

ಕಥೆ ಮತ್ತು ನಂಬಿಕೆ

ಓರ್ವ ಬ್ರಾಹ್ಮಣ, ಪಾಠ ಪ್ರವಚನ ಹರಿಕಥೆಗಳನ್ನು ನಡೆಸಿಕೊಡುತ್ತಾ ದೇವರ ಲೀಲೆಗಳನ್ನು ಹಾಡುಗಳ ಮೂಲಕ ಇತರರಿಗೆ ತಿಳಿಸಿಕೊಡುತ್ತಾ ಜೀವನಯಾಪನೆ ಮಾಡುವವರು; ಒಬ್ಬ ಧನಿಕನ ಮನೆಯಲ್ಲಿ ಶ್ರೀಮದ್ಭಾಗವತದ ಉಪನ್ಯಾಸ ಮಾಡುತ್ತಿದ್ದರು.

ಅದೇ ಸಮಯದಲ್ಲಿ ಕಳ್ಳನೊಬ್ಬ ಆ ಧನಿಕನ ಮನೆಗೆ ನುಗ್ಗಿದ, ಒಂದು ಮೂಲೆಯಲ್ಲಿ ಅಡಗಿ ಕುಳಿತ. ಸಹಜವಾಗಿ ಶ್ರೀಮದ್ಭಾಗವತದ ಕತೆಯು ಕಳ್ಳನ ಕಿವಿಗೆ ಬೀಳುತ್ತಿತ್ತು.

ಶ್ರೀಮದ್ಭಾಗವತವೆಂದರೆ ಶ್ರೀಕೃಷ್ಣನ ಅಪಾರ ಮಹಿಮೆಯ ಅದ್ಬುತ ಕಥೆಗಳ ಸಂಗ್ರಹ. 

ಆ ಬ್ರಾಹ್ಮಣರು ಬಾಲಕೃಷ್ಣನು ಧರಿಸಿದ ಸುಂದರ ಆಭರಣಗಳನ್ನು ವರ್ಣಿಸುತ್ತಿದ್ದರು. 
ತಾಯಿ ಯಶೋದೆ ಪುಟ್ಟ ಕೃಷ್ಣನನ್ನು ಯಾವ ರೀತಿ ಶೃಂಗಾರ ಮಾಡಿ ಗೋವುಗಳೊಂದಿಗೆ ಕಳುಹಿಸುತ್ತಿದ್ದಳು ಎಂಬುದನ್ನು ಮನಮುಟ್ಟುವಂತೆ ವರ್ಣಿಸುತ್ತಿದ್ದರು. 

ಇದನ್ನೆಲ್ಲಾ ವಿಸ್ಮಿತನಾಗಿ ಕೇಳುತ್ತಿದ್ದ ಕಳ್ಳ, ಹೇಗಾದರೂ ಆ ಹುಡುಗನನ್ನು ಹುಡುಕಿ ಅವನು ಧರಿಸಿರುವ ಆಭರಣಗಳನ್ನೆಲ್ಲಾ ಸೆಳೆದು ನನ್ನದಾಗಿಸಿಕೊಂಡರೆ ಪ್ರತಿನಿತ್ಯ ಸಣ್ಣಪುಟ್ಟ ಕಳ್ಳತನ ಮಾಡುವ ಕಷ್ಟ ತಪ್ಪುವುದು ಎಂದು ಯೋಚಿಸಿದ. 

ಶ್ರೀಮದ್ಭಾಗವತ ಪ್ರವಚನ ಮುಗಿಯುವತನಕ ಅಲ್ಲಿಯೇ ಇದ್ದು ನಂತರ ಅಲ್ಲಿಂದ ತೆರಳಿದ.

ಆ ಪುಟ್ಟ ಹುಡುಗ ಎಲ್ಲಿರುತ್ತಾನೆ ಎಂಬುದನ್ನು ತಿಳಿಯಬಯಸಿದ ಕಳ್ಳ ಬ್ರಾಹ್ಮಣರನ್ನು ಹಿಂಬಾಲಿಸಿ ನಡೆದ. 
ಕಳ್ಳನನ್ನು ಕಂಡ ಬ್ರಾಹ್ಮಣ ಪ್ರವಚನದಲ್ಲಿ ದೊರೆತ ಅಲ್ಪ ದಕ್ಷಿಣೆಯನ್ನೂ ಕಳೆದುಕೊಳ್ಳವ ಭಯದಲ್ಲಿ ಕಂಗಾಲಾಗಿ "ನನ್ನಲ್ಲಿ ಏನೂ ಇಲ್ಲ" ಎಂದು ಬಡಬಡಿಸಿದರು. 

"ನನಗದೆಲ್ಲ ಏನೂ ಬೇಡ. ಆಗಲೇ ನೀನು ಹೇಳಿದ ಆ ಗೋಪಾಲಕ ಬಾಲಕೃಷ್ಣ ಎಲ್ಲಿ ಸಿಗುತ್ತಾನೆ ? ಆ ಸ್ಥಳದ ಗುರುತು ಹೇಳು, ನಾ ಅಲ್ಲಿಗೆ ಹೋಗಬೇಕು."

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯೋಚನೆಯಿಂದ ವಿಪ್ರರು ಹೇಳಿದರು, 
"ವೃಂದಾವನದಲ್ಲಿ ಯಮುನಾನದಿಯ ದಡದಲ್ಲಿ ಇಬ್ಬರು ಬಾಲಕರು ಗೋವುಗಳನ್ನು ಮೇಯಿಸುತ್ತಿರುತ್ತಾರೆ. 
ಒಬ್ಬ ಬೆಳ್ಳಗಿದ್ದಾನೆ, ಮತ್ತೊಬ್ಬ ಕಪ್ಪಗಿದ್ದಾನೆ. ಕಪ್ಪು ಹುಡುಗನ ಕೈಯಲ್ಲಿ ಒಂದು ಕೊಳಲು ಇದೆ, ತಲೆಯಲ್ಲೊಂದು ನವಿಲುಗರಿ. ಅವನೇ ಶ್ರೀಕೃಷ್ಣ." 

ಇದನ್ನು ಸಂಪೂರ್ಣವಾಗಿ ನಂಬಿದ ಕಳ್ಳ ಕೂಡಲೇ ವೃಂದಾವನದ ಕಡೆಗೆ ತೆರಳಿದ. 

ಭಾಗವತದಲ್ಲಿ ವಿವರಿಸಿದಂತೆ ಬ್ರಾಹ್ಮಣರು ಹೇಳಿದ ಆ ಸುಂದರವಾದ ಸ್ಥಳವನ್ನು ಹುಡುಕಿ ಅಲ್ಲಿಯೇ ಮರ ಹತ್ತಿ ಹುಡುಗರಿಗಾಗಿ ಕಾದು ಕುಳಿತ. 

ಸೂರ್ಯೋದಯವಾಯಿತು.  

ಇಂಪಾದ ಮುರಳಿಯ ನಾದ ಬೆಳಗನ್ನು ಮತ್ತಷ್ಟು ಸುಂದರಗೊಳಿಸಿತ್ತು. 

ಅದನ್ನು ಹಿಂಬಾಲಿಸಿ ಹುಡುಗರಿಬ್ಬರೂ ಬರುವುದನ್ನು ನೋಡಿ ಕಳ್ಳ ಮರದಿಂದ ಕೆಳಗಿಳಿದ. 
ಹುಡುಗರ ಬಳಿಸಾರಿದ. 
ಮನಮೋಹಕ ಬಾಲಕೃಷ್ಣನ ಕಂಡು ಮೈಮರೆತ.
ತನಗೇ ಗೊತ್ತಿಲ್ಲದೇ ಕೈಗಳನ್ನೆತ್ತಿ ಜೋಡಿಸಿದ. 
ಕಣ್ಣುಗಳು ಆನಂದದಿಂದ ತುಂಬಿಬಂದವು. 
ಶ್ರೀಕೃಷ್ಣನ ಮೇಲಿಂದ ಕಣ್ಣುಗಳನ್ನು ಬೇರೆಡೆಗೆ ಸೆಳೆಯುವುದು ಅವನಿಗೆ ಸಾಧ್ಯವೇ ಆಗಲಿಲ್ಲ. 
ಇಂತಹ ತೇಜಮೂರ್ತಿಗಳನ್ನು ಇಷ್ಟೊಂದು ಬೆಲೆಬಾಳುವ ಅಮೂಲ್ಯ ಆಭರಣಗಳಿಂದ ಅಲಂಕರಿಸಿ ನದೀತೀರಕ್ಕೆ ಕಳುಹಿಸಿದ ಆ ತಾಯಿಯನ್ನು ನೆನೆದು ದಿಗ್ಭ್ರಮೆಗೊಂಡ.

"ನಿಲ್ಲು" ಎನ್ನುತ್ತಾ ಶ್ರೀಕೃಷ್ಣನ ಕೈಹಿಡಿದು ಕೂಗಿದ. 
ಗೋವಿಂದನನ್ನು ಸ್ಪರ್ಶಿಸಿದ ಆ ಕ್ಷಣ ಅವನ ಹಿಂದಿನ ಎಲ್ಲಾ ಪಾಪಗಳು ಕ್ಷಣಾರ್ಧದಲ್ಲಿ ಬೆಂಕಿಯಲ್ಲಿ ಸುಟ್ಟ ಹತ್ತಿಯ ಉಂಡೆಯಂತೆ ಸುಟ್ಟುಹೋದವು. 

ಮನದೊಳಗೆ ಮೂಡಿದ ದೈವಿಕ ಆರ್ದ್ರತೆಯೊಂದಿಗೆ ಭಕ್ತಿಪರವಶನಾಗಿ ಕೇಳಿದ, "ಯಾರು ನೀನು ?"

ಕಪಟನಾಟಕಸೂರ್ತಧಾರಿ ಶ್ರೀಕೃಷ್ಣ ಕಳ್ಳನನ್ನೇ ನೋಡುತ್ತಾ ಮುಗ್ಧಭಾವದಿಂದ "ನೀವು ಹೀಗೆ ನೋಡುತ್ತಿದ್ದರೆ ನನಗೆ ಭಯವಾಗುತ್ತಿದೆ. ದಯವಿಟ್ಟು ನನ್ನ ಕೈ ಬಿಡಿ" ಎನ್ನಲು, ಅದೇ ಪರವಶತೆಯಿಂದ ಕೃಷ್ಣನ ಬಿಡಲೊಲ್ಲದ ಕಳ್ಳ, "ನನ್ನ ಕ್ರೂರ ಮನಸ್ಸು ನನ್ನ ಮುಖದಲ್ಲಿ ಕಾಣಿತ್ತಿದೆಯಷ್ಟೇ.. 
ನಿನಗೆ ಭಯವಾದರೆ ನಾನು ದೂರ ಹೋಗುತ್ತೇನೆ, ಆದರೆ ನಿನ್ನನ್ನು ಬಿಡಲು ಮಾತ್ರ ಹೇಳಬೇಡ.." ಎಂದುಬಿಟ್ಟ..

ತುಂಟ ಕೃಷ್ಣ ಕಳ್ಳನು ಅಲ್ಲಿಗೆ ಬಂದ ಉದ್ದೇಶವನ್ನು ನೆನಪಿಸುವಂತೆ, "ನನ್ನ ಈ ಎಲ್ಲಾ ಆಭರಣಗಳನ್ನು ತೆಗೆದುಕೋ" ಎಂದು ಕೊಟ್ಟುಬಿಟ್ಟ. 
ಕಳ್ಳ ಗೊಂದಲಗೊಂಡ, "ಹೀಗೆ ಎಲ್ಲವನ್ನೂ ನನಗೆ ಕೊಟ್ಟರೆ ನಿನ್ನ ತಾಯಿ ನಿನ್ನನ್ನು ಗದರುವುದಿಲ್ಲವೇ ?" 

ನಗುನಗುತ್ತಾ ಕೃಷ್ಣ ಹೇಳಿದ, 
"ನಾನು ನಿನಗಿಂತ ದೊಡ್ಡ ಕಳ್ಳ. ಇಂಥವು ನನ್ನಲ್ಲಿ ಹೇರಳವಾಗಿವೆ, ಅದರ ಬಗ್ಗೆ ಚಂತೆ ಮಾಡಬೇಡ.
ಆದರೆ ನನಗೂ ನಿನಗೂ ಒಂದು ವ್ಯತ್ಯಾಸ ಇದೆ, ಏನೆಂದರೆ ನಾನು ಕದ್ದರೆ ಯಾರೂ ದೂರುವುದಿಲ್ಲ.  
ಹಾಗಾಗಿಯೇ ನಾನು "ಚಿತ್ತಚೋರ".. 
ನಿನಗೆ ಇದು ಗೊತ್ತಿಲ್ಲ. 
ಎಲ್ಲರ ಚಿತ್ತವನ್ನು ಕದ್ದು ನನ್ನಲ್ಲೇ ಇಟ್ಟುಕೊಳ್ಳುವ ಕಳ್ಳ ನಾನು".. 
ಇಬ್ಬರೂ ಹುಡುಗರು ಅಲ್ಲಿಂದ ಮಾಯವಾದರು. 

ಆಶ್ಚರ್ಯ, ಕಳ್ಳನ ಕೈಯಲ್ಲಿ ಆಭರಣಗಳಿಂದ ತುಂಬಿದ ಚೀಲವೊಂದಿತ್ತು. 
ಕೃಷ್ಣನ ಕತೆ ಹೇಳಿದ ಬ್ರಾಹ್ಮಣರ ಮನೆಗೆ ಬಂದು ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿದ.

ಸಜ್ಜನ ಬ್ರಾಹ್ಮಣರು ಆನಂದಾಶ್ಚರ್ಯದಿಂದ ಕಳ್ಳನನ್ನು ಮನೆಯೊಳಗೆ ಕರೆದು ಚೀಲವನ್ನು ತೆರೆದು ನೋಡಿದರೆ,  ತಾವು ಶ್ರೀಮದ್ಭಾಗವತ ಕಥೆಯಲ್ಲಿ ವರ್ಣಿಸಿದ ಎಲ್ಲಾ ಗುಣಗಳನ್ನು ಹೊಂದಿರುವ ಅಮೂಲ್ಯ ರತ್ನಗಳನ್ನೊಳಗೊಂಡ ಹೊಳೆಹೊಳೆಯುವ ಆಭರಣಗಳು ಆ ಚೀಲದಲ್ಲಿದ್ದವು. 

ಆನಂದಭಾಷ್ಪಭರಿತರಾಗಿ ಸಜ್ಜನ ಬ್ರಾಹ್ಮಣರು ಆ ಕಳ್ಳನನ್ನು, ಆ ಕಪ್ಪು ಹುಡುಗನನ್ನು ನೋಡಿದ ಸ್ಥಳಕ್ಕೆ ಕರೆದೊಯ್ಯಲು ಕೇಳಿಕೊಂಡರು.

" ಇದೇ ಆ ಸ್ಥಳ" ಎಂದು ಕಳ್ಳ ತೋರಿಸಿದ ಜಾಗದಲ್ಲಿ ಬ್ರಾಹ್ಮಣರಿಗೆ ಏನೂ ಕಾಣಲಿಲ್ಲ, ಯಾರೂ ಕಾಣಲಿಲ್ಲ.. 

"ಹೇ ದೇವದೇವ ! ಕಳ್ಳನಿಗೆ ಕಂಡವ ನನಗೆ ಕಾಣಿಸಲಾರೆಯಾ ?"

ಕೃಷ್ಣ ಕಾಣಿಸಲಿಲ್ಲ, ಧ್ವನಿ ಕೇಳಿಸಿತು..

"ನೀನು ಶ್ರೀಮದ್ಭಾಗವತದ ಕತೆಯನ್ನು ಎಲ್ಲಾ ಇತರ ಕಥೆಗಳಂತೆಯೇ ಓದಿದೆ. ಆದರೆ ನೀನು ಓದಿ ಹೇಳಿದ ಕಥೆಯನ್ನು  ಮತ್ತು ನನ್ನ ಬಗೆಗಿನ ವಿವರಗಳನ್ನು ಈ ಕಳ್ಳ ಕಳ್ಳನಾದರೂ ನಂಬಿ ನಡೆದ, ಅದನ್ನು ಒಪ್ಪಿ ನನ್ನನ್ನು‌ ನೋಡಲು ಬಂದ.."

"ನನ್ನನ್ನು ನಂಬಿದವರಿಗೆ ನಾನು‌ ಖಂಡಿತಾ ಕಾಣಿಸುವೆ. ನಂಬಿ ನಡೆದರೆ ನಿನ್ನೊಳಗೆ ನೆಲೆಸುವೆ"

ಭಗವಂತನ ಕಥೆಗಳನ್ನು ಶುಷ್ಕವಾಗಿ ಓದಿ ಕೇಳಿ ಮರೆತುಬಿಡುವುದು ವ್ಯರ್ಥ ಕಾಲಹರಣ.. 

ನಂಬಿ ನಡೆಯೋಣ, ಶ್ರೀಕೃಷ್ಣನನ್ನು ಒಳಗಣ್ಣಿಂದ ಕಾಣುವ ಭಾಗ್ಯ ನಮ್ಮದಾದೀತು.🙏💐🙂
**********

Jambavanta tunnel guha near Porbandar, Gujarat
Krishna and jambavanta fought here..

***********
ಕೃಷ್ಣ ಶಬ್ದ ಚಿಂತನ

ಮಧ್ಯಾಹ್ನದ ನಿದ್ರೆಯ ನಂತರ ಹೊಳೆದಿದ್ದಿಷ್ಟು

ಮಾಮೂಲಿಯಾಗಿ ಕೃಷ್ಣ ಎಂದರೆ ಕಪ್ಪು ಬಣ್ಣ ಎಂದರ್ಥ. ತ್ವಚೆಯ ಬಣ್ಣಕ್ಕೆ ಹೋಲಿಸುವಾಗ ನಸು ನೀಲವರ್ಣ ಎಂದು ಹೇಳಬಹುದು. ಬಿಳಿಯರ ಬಣ್ಣ ಹೇಗೆ ಪಕ್ಕಾ ವೈಟ್ ಪೇಂಟ್ ಅಲ್ಲ ಹಾಗೆ.

"ಕರ್ಷತಿ" "ಆ ಕರ್ಷತಿ" ಇತಿ ಕೃಷ್ಣ
ತನ್ನತ್ತ ಸೆಳೆಯುವ ರೂಪ ಉಳ್ಳವ ಕೃಷ್ಣ.

ಭವ ಸಾಗರದಿಂದ ಮೇಲೆತ್ತುವವ/ ಕಡೆಹಾಯಿಸುವವ ಕೃಷ್ಣ.

ಕೃಷಿ (ಕೃಷ್) + ಣ = ಕೃಷ್ಣ
ಕೃಷಿಃ ಭೂವಾಚಕ ಶಬ್ದ ಭೂಮಿ ಎಂದರ್ಥ. ಣ ಎಂದರೆ ಆನಂದ.

ಭೂಮಿಗೆ ಇಳಿದು ಬಂದ ಆನಂದ ಮೂರ್ತಿ ಕೃಷ್ಣ.

ಭೂಮಿಗೆ ಆನಂದ ತಂದ ಕೃಷ್ಣ. ಭೂರಮಣ ಕೃಷ್ಣ.

ಹೃದಯದ ಒಡಲಿಗೆ ನಾಮದ ಬೀಜ ಊರಿ ಭಕ್ತಿಯ ನೀರು ಹಾಯಿಸಿ ಮದಗಳ ಕಳೆ ತೆಗೆದು ಬೆಳೆದ ನಂತರ ಸಿಗುವ  ಆನಂದವೆಂಬ ಫಲ ಕೃಷ್ಣ.

ನಿರ್ದುಷ್ಟವಾದ (ದೋಷರಹಿತ ವಾದ) ಜ್ಞಾನ ಆನಂದಗಳ ಸ್ವರೂಪ ಕೃಷ್ಣ.
---ಜನಮೇಜಯ
***********

🌹 ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.  🌹

ಶ್ರಿರಾಮ,ಸೀತೆ,ಲಕ್ಷ್ಮಣರು ವನವಾಸಕ್ಕೆಂದು,ಅಯೋಧ್ಯೆಯಿಂದ ಹೊರಟು,ಗುಹನಿಂದ ಗಂಗೆಯನ್ನು ದಾಟಿ,ಮುಂದೆ ಸಾಗಿ,ದಟ್ಟಡವಿಯನ್ನು ಪ್ರವೇಶಿಸಿದರು.
ನಡೆದು ದಣಿದ  ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು.
ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು
ಕಾಣಿಸಲಿಲ್ಲ.ದೂರ ದೂರದ ವರೆಗೆ ಬರೀ ಕಾಡೇ ಕಾಣುತ್ತಿತ್ತು. 
ಆಗ ಶ್ರೀ ರಾಮನು ವಿಧಿಯನ್ನು ಪ್ರಾರ್ಥಿಸಿ,
"ಹೇ,ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ,ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು",ಎಂದು ಬೇಡಿಕೊಂಡನು.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆಹೇಳಿತು...
"ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ.ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು.ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ" ಎಂದಿತು.
ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು "ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು,ನಾನು ಹಾರುತ್ತ ನನ್ನ ಒಂದೊಂದೇ  ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು.ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ" ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ.
ಇಲ್ಲಾಗಿದ್ದೂ ಅದೇ!!

ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ,ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.!!

"ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ,ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ.ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ" ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು.  "ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು.  
ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ  ಧರಿಸುವೆನು" ಎಂದನು.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು.ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಆನಂತರ ಮುಂದಿನ  ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ವ...

ಋಣ ತೀರಿಸಲು,ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು.ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ.
ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ??
ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ.

🦚ಜೈ ಶ್ರೀ ಕೃಷ್ಣ 🦚
*****

Krishna's brother Poundrakavasudeva
||ಈಶೋಹಂ ಎನ್ನದಿರಿ|| 
ಕಾಶೀರಾಜನ ಒಬ್ಬಳೇ ಮಗಳಾದ ಸುತನುವನ್ನು ವಸುದೇವನು ಮದುವೆಯಾಗಿದ್ದ. ಪೌಂಡ್ರಕವಾಸುದೇವ ಇವರ ಮಗ.  
ನಂತರ ವಸುದೇವ ಕಂಸನ ತಂಗಿಯ ಕೈಹಿಡಿದು ಸೆರೆಮನೆ ಸೇರಿದ. ಇತ್ತ ಪೌಂಡ್ರಕ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳುವ ಬದಲು ಉನ್ಮತ್ತನಾಗಿ ಬೆಳೆದ. ಕಂಸನನ್ನು  ಕೊಂದು ಶ್ರೀಕೃಷ್ಣಪರಮಾತ್ಮನು  ಲೋಕವಿಖ್ಯಾತನಾಗಲು ಪೌಂಡ್ರಕನು ನಾನು ಕೃಷ್ಣನ ಅಣ್ಣ ಎಂದು, ಗರ್ವ ಪರ್ವತೋಪಮವಾಗಿ ಬೆಳೆಯಿತು. ಶ್ರೀಕೃಷ್ಣನಿಲ್ಲದ ಸಮಯ ನೋಡಿ, ರಾತ್ರೋರಾತ್ರಿ ಮಧುರೆಯನ್ನು ಆಕ್ರಮಿಸಿದ. ಆದರೆ ಬಲರಾಮ ಸಾತ್ಯಕಿಗಳಿಂದ ಪೆಟ್ಟು ತಿಂದು ಓಡಿಹೋದ. ಸ್ವಲ್ಪ ಸಮಯದ ನಂತರ ಅವನು ಕೃಷ್ಣನಿಗೆ ಅಜ್ಞಾರೂಪವಾದ ಒಂದು ಪತ್ರ ಕಳುಹಿಸಿದ "ನೀನು ವಾಸುದೇವ ನಾಮವನ್ನು ತ್ಯಜಿಸಬೇಕು. ಶ್ರೀವತ್ಸಚಿಹ್ನೆ, ಕೌಸ್ತುಭಹಾರ, ಗರುಡವಾಹನಗಳನ್ನು ಧರಿಸಬಾರದು..". 
ಉಗ್ರಸೇನಾದಿ ಎಲ್ಲ ಸಭಿಕರು ಗಹಗಹಿಸಿ ನಕ್ಕರು. ಶ್ರೀಕೃಷ್ಣನಾದರೂ ವಾಸುದೇವನನ್ನು ನೋಡಲು ತಾನೆ ಬರುವುದಾಗಿ ಹೇಳಿ ಕಳುಹಿಸಿದ. 
ಶ್ರೀಕೃಷ್ಣನನ್ನು ಎದುರಿಸಲು ಪೌಂಡ್ರಕನು ಸುವರ್ಣಗರುಡವನ್ನು ಏರಿ ಬಂದ.
ಜಡ ಬುದ್ಧಿಯವ ಜಡ ಗರುಡವನೇರಿ ಬಂದ.
 ನಾಟಕಗಳಲ್ಲಿ ಕೃಷ್ಣನ ವೇಷಧಾರಿಗಳಂತೆ ಶಂಖ, ಚಕ್ರ,ಗದೆ, ಪದ್ಮಗಳೆಲ್ಲನ್ನವನ್ನು ಧರಿಸಿದ್ದ. ಶ್ರೀವತ್ಸ ಚಿಹ್ನೆಯಾಗಿ ಎಷ್ಟು ಕಪ್ಪನ್ನು ಹಚ್ಚಿದರು ನಿಲ್ಲದಾಗ ತನ್ನ ವಕ್ಷವನ್ನೇ ಸುಟ್ಟು ಕರಕಲಾಗಿಸಿಕೊಂಡ.
ನಾನೇ ದೇವನೆಂದು ಹಮ್ಮಿನಿಂದ ಬೀಗುತ್ತಿದ್ದ ಪ್ರಜೆಗಳನ್ನು ಕಾಡುತ್ತಿದ್ದ,ಲೋಕ ಕಂಟಕನಾದ ಬಯಲಾಡಂಬರದ ಪೌಂಡ್ರಕನನ್ನು ಶ್ರೀಕೃಷ್ಣ ಧರೆಗುರುಳಿಸಿದ..
ಇದು ನಮಗೂ ಸಲ್ಲುವ ಎಚ್ಚರಿಕೆ!!
ಸರ್ವದಾ ನಮಗೆ "ದಾಸೋಹಂ" ಎಂಬ ಪ್ರಜ್ಞೆ ಇರಬೇಕೆ ವಿನಾ "ಈಶೋಹಂ" ಎಂಬ ಪ್ರಜ್ಞೆಯಲ್ಲ.
ನಾನೇ ಸ್ವತಂತ್ರ, ಪುರುಷೋತ್ತಮ ಎಂದು ಹಮ್ಮಿನಿಂದ ದೇವರಾಗ ಹೊರಟರೆ ಪೌಂಡ್ರಕನ ಸ್ಥಿತಿಯೇ ಗತಿ ನಮಗು ಆಗುತ್ತದೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಮಾನಿಸ ರೂಪದಿ ಧನುವನು ಮುರಿದನೆ|
ಮಾನಿಸ ದೃಷ್ಟಿಗೆ ಮಾನುಷ್ಯನಂತೆ ಅ|
ಮಾನುಷ್ಯ ಮಹಿಮೆನೆ ಮರೆಮೋಸ ಮಾಡೋದು|
ಮಾನಿತವೇನಯ್ಯ ಮಾನವಂತನೆ ಹೀಗೆ|
ಮಾನಿಸಾನ್ನವನುಂಬ ಮನುಜನಾದುದರಿಂದ|
ಮಾನುಷ್ಯನಂತೆ ನಿನ್ನ ಮನದಿ ನಿಶ್ಚಯಿಸಿದೇ|
ಮಾನ ಗುಣಾಂಬುಧಿ ಗೋಪಾಲ ವಿಠ್ಠಲ|
ಮಾನಸಾ ವಾಚಾ ಕಾಯಾ ಮೊರೆ ಹೊಕ್ಕೆ|
*****

*****

ಈ ಪಾತ್ರೆ ಶ್ರೀಕೃಷ್ಣ ವಾಸುದೇವ ನೊಂದಿಗೆ ಇರುವ ವಿಗ್ರಹವಾಗಿದೆ ಈ ಪಾತ್ರೆಯು ಸುಮಾರು 250 ವರ್ಷಗಳ ಹಿಂದೆ ವಿವಿಧ ಲೋಹಗಳಿಂದ ತಯಾರಿಸಲ್ಪಟ್ಟ ತಂತ್ರಜ್ಞಾನ ಪಾತ್ರೆ ಯಾಗಿದೆ ಈ ಪಾತ್ರೆಯಲ್ಲಿ ನೀರು ತುಂಬಿದಾಗ ನೀರಿನ ಮಟ್ಟ ಶ್ರೀಕೃಷ್ಣನ ಪಾದ ಮುಟ್ಟುವವರೆಗೂನೀರು ಒಂದು ಹನಿಯು ಪಾತ್ರೆಯ ಕೆಳಭಾಗದಿಂದ ಹೊರಬರುವುದಿಲ್ಲ ನೀರಿನ ಮಟ್ಟ  ಕೃಷ್ಣನ ಪಾದ ಮುಟ್ಟಿದ ಕೂಡಲೇ ಒಂದು ಹನಿಯು ಪಾತ್ರೆಯಲ್ಲಿ ಉಳಿಯುವುದಿಲ್ಲ ಎಂತಹ ಚಮತ್ಕಾರ  ಲೋಹಗಾರ  ಶಿಲ್ಪಿ "ವಿಶ್ವಕರ್ಮ " ಪಾತ್ರೆಯಲ್ಲಿ ಎಂತಹ ಆಶ್ಚರ್ಯಕರ ತಂತ್ರಜ್ಞಾನ ಅಳವಡಿಸಿದ್ದಾರೆ !. ಈ ಕೆಳಗಿನ ವಿಡಿಯೋವನ್ನು ಪೂರ್ತಿಯಾಗಿ ನೋಡಿ. 


***


BEAUTIFUL SUMARY



before you read... this may not be correct IN MANY POINTS
INFO ABOUT KRISHNA IN BRIEF

1) Krishna was born 5,252 years  ago as on 11/08/2020. 
2) Date of Birth : 18 th July,3,228 B.C
3) Month : Shravan
4) Day :  Ashtami
5) Nakshatra : Rohini
6) Day : Wednesday
7) Time : 00:00 A.M.
8) Shri Krishna lived 125 years, 08 months & 07 days.
9) Date of Death : 18th February 3102.
10) When Krishna was 89 years old ; the mega war (Kurukshetra) war took place. 
11) He died 36 years after the Kurukshetra war.
12) Kurukshetra War was started on Mrigashira Shukla Ekadashi,BCE 3,139. i.e "8th December 3139" and ended on "25th December, 3,139".  
12) There was a Solar eclipse between "3p.m to 5p.m on 21st December, 3,139" ; cause of Jayadrath's death.
13) Bhishma died on 2nd February,( First Ekadasi of the Uttarayana), in 3,138 B.C.
14) Krishna  is worshipped as:👇
(a)Krishna Kanhaiyya : Mathura
(b) Jagannath:- In Odisha
(c) Vithoba:- In Maharashtra
(d) Srinath:  In Rajasthan
(e) Dwarakadheesh: In Gujarat
(f) Ranchhod: In Gujaarat
(g) Krishna : Udipi, Karnataka
15) Bilological Father: Vasudeva
16) Biological Mother: Devaki
17) Adopted Father:- Nanda
18) Adopted Mother: Yashoda
19 Elder Brother: Balaram
20) Sister: Subhadra
21) Birth Place: Mathura
22) Wives: Rukmini, Satyabhama, Jambavati, Kalindi, Mitravinda, Nagnajiti, Bhadra, Lakshmana
23) Krishna is reported to have Killed only 4 people in his life time. 
(i) Chanoora ; the Wrestler
(ii) Kamsa ; his maternal uncle
(iii) & (iv) Shishupaala and Dantavakra ; his cousins. 
24) Life was not fair to him at all. His mother was from Ugra clan, and Father from Yadava clan, inter-racial marriage. 
25) He was born dark skinned. He was not named at all throughout his life. The whole village of Gokul started calling him the black one ; Kanha. He was ridiculed and teased for being black, short and adopted too. His childhood was wrought with life threatening situations.
26) 'Drought' and "threat of wild wolves" made them shift from 'Gokul' to 'Vrindavan' at the age 9.
27) He stayed in Vrindavan till 14~16 years. He killed his own uncle at the age of  14~16 years at Mathura.He then released  his biological mother and father. 
28) He never returned to Vrindavan ever again.
29) He had to migrate to Dwaraka from Mathura due to threat of a Sindhu King ;  Kala Yaavana.
30) He defeated 'Jarasandha' with the help of 'Vainatheya' Tribes on Gomantaka hill (now Goa).
31) He rebuilt Dwaraka. 
32) He then left to Sandipani's Ashram in Ujjain to start his schooling at age 16~18. 
33) He had to fight the pirates from Afrika and rescue his teachers son ;  Punardatta;  who was kidnapped near Prabhasa ; a sea port in Gujarat. 
34) After his education, he came to know about his cousins fate of Vanvas. He came to their rescue in ''Wax house'' and later his cousins got married to Draupadi. His role was immense in this saga. 
35) Then, he helped his cousins to establish Indraprastha and their Kingdom. 
36)He saved Draupadi from embarrassment.
37) He stood by his cousins during their exile.
38) He stood by them and made them win the Kurushetra war.
39) He saw his cherished city, Dwaraka washed away. 
40) He was killed by a hunter (Jara by name) in nearby forest. 
41) He never did any miracles. His life was not a successful one. There was not a single moment when he was at peace throughout his life. At every turn, he had challenges and even more bigger challenges. 
42) He faced everything and everyone with a sense of responsibility and yet remained unattached.
43)  He is the only person, who knew the past and probably future ; yet he lived at that present moment always.
44) He and his life is truly an example for every human being.
Hare Krishna ps: many facts are definitely incorrect.
******
AUTHENTICATED INFO.
ಎನ್ ಸಿ ಲಾಹರಿ ಪ್ರಶಸ್ತಿ ವಿಜೇತ, ಮದ್ರಾಸಿನ ಪ್ರೊಫೆಸರ್ ಕೆ ಆರ್ ಶ್ರೀನಿವಾಸರಾಘವನ್ ರವರು ನಿಖರವಾಗಿ ಶ್ರೀ ಕೃಷ್ಣನ ಕಾಲಮಾನದ ವಿವರ ಕೊಟ್ಟಿದ್ದಾರೆ. ಈ ಕಾಲಮಾನ ಶ್ರೀ ನಾರಾಯಣಾಚಾರ್ಯರ ಮಹಾಭಾರತ ಪಾತ್ರಪ್ರಪಂಚದ ಮುನ್ನುಡಿಯಲ್ಲಿ ಈ ಕೆಳಕಂಡಂತೆ ಇದೆ.

ಕೃಷ್ಣಾವತಾರ - ಕ್ರಿ ಪೂ. 3112 ಜುಲೈ 27 ಶುಕ್ರವಾರ ರಾತ್ರಿ 11.40
ಯುಧಿಷ್ಠಿರನ ಜನನ - ಕ್ರಿ ಪೂ. 3114 ಆಗಸ್ಟ್ 31 ಮಂಗಳವಾರ  (ಕೃಷ್ಣನಿಗಿಂತ 696 ದಿನ ದೊಡ್ಡವನು)
ಮಹಾ ಯುದ್ಧ - ಕ್ರಿ ಪೂ. 3067 ನವೆಂಬರ್ 22 ಶುಕ್ರವಾರ, ಮಾರ್ಗಶಿರ ಶುಕ್ಲ ಏಕಾದಶಿ 
ಶ್ರೀಕೃಷ್ಣ ನಿರ್ಯಾಣ - ಕ್ರಿ ಪೂ. 3031 ಏಪ್ರಿಲ್ 13
****
year 2021

 ..

..ಶ್ರೀಕೃಷ್ಣಜಯಂತಿ

ಈ ಬಾರಿ ತಾ. ೨೯-೮-೨೦೨೧ ಜನ್ಮಾಷ್ಟಮಿಯ ಆಚರಣೆಯನ್ನು ಕೆಲವರು ತಿಳಿಸಿದ್ದರೆ ಇನ್ನೂ ಕೆಲವು ಪಂಚಾಂಗಗಳು ತಾ. ೩೦-೮-೨೦೨೧ ಜಯಂತಿಯ ಆಚರಣೆಯನ್ನು ವಿಧಿಸಿವೆ. ಅವರವರು ಆಯಾಯ ಗುರುಮಠವನ್ನು ಅನುಸರಿಸುವುದು ಸೂಕ್ತವಾದರೂ ಯಾವ ದಿನ ಸರಿ ಎಂಬ ಜಿಜ್ಞಾಸೆ ಸಹಜ. ತಾರೀಕು ೨೯-೮-೨೧ ರಂದು ದೃಗ್ಗಣಿತ ಅಥವಾ ಆರ್ಯಭಟೀಯ ಎರಡೂ ಪಂಚಾಂಗ ರೀತ್ಯಾ ಚಂದ್ರೋದಯ ಕಾಲದಲ್ಲಿ ಅಷ್ಟಮಿಯಿದೆ. ಆದರೆ ರೋಹಿಣೀ ನಕ್ಷತ್ರ ಇರುವುದಿಲ್ಲ. ಶ್ರೀಮದಾಚಾರ್ಯರು ಜಯಂತೀ ನಿರ್ಣಯದಲ್ಲಿ ಹೇಳುವಂತೆ -

रोहिण्यां अर्धरात्रे तु यदा  कालाष्टमी भवेत् ।

जयन्ती नाम सा प्रोक्‍ता सर्वपापप्रणाशिनी ।

यस्‍यां जातो जगन्नाथः निशीथे भगवानजः ॥

ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀ ನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -

सिंहमासे तु रोहिण्यायुतां कृष्णाष्टमीं पुमान् ।

उपोष्य मध्यरात्रे तु पूजयेत् नन्दनन्दनम् ॥

 ಸಿಂಹಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮೀ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿ ಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -

सत्यष्टममुहूर्ते वा *रोहिणीसहिताष्टमी ।

श्रावणे मासि सिंहार्के क्वचित्सापि च शस्यते ।। 

एकादशीनां कोटीनां व्रतैश्च लभते फलम्।

अतो दशगुणं प्रोक्तं कृत्वैतत्फलमाप्नुयात् ।।

ಸಿಂಹಮಾಸದಲ್ಲಿ ಒದಗಿದ ಶ್ರಾವಣ ಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡ ಪುರಾಣದಲ್ಲೂ,

कृष्णाष्टम्यां च रोहिण्यां अर्धरात्रेऽर्चनं हरेः ।

कार्याविद्धापि सप्तम्यां हन्तिपापं त्रिजन्मनः॥

ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಅಷ್ಟಮೀ ಯೋಗವನ್ನು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀ ಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ. 

रोहिण्याश्च यदा कृष्णपक्षेऽष्टम्यांद्विजोत्तम।

जयन्ती नाम सा प्रोक्ता सर्वपापहरातिथिः॥                                             - विष्णुधर्म

कृष्णाष्टम्यां भवेद्यत्र कलैका रोहिणी नृप।

जयन्ती नाम सा प्रोक्ता उपोष्या सा प्रयत्नतः                              

 - आग्नेय

ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕಲೆಯಷ್ಟಾದರೂ ರೋಹಿಣಿಯು ಒದಗಿದರೆ ಅಂದು ಉಪವಾಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾರೆ. ಆದ್ದರಿಂದ ತಾ. ೩೦-೮-೨೦೨೧ ರಂದೇ ಜಯಂತಿಯ ಆಚರಣೆ ಶಾಸ್ತ್ರಸಮ್ಮತವಾಗಿದೆ. ೨೯ ರ ಆಚರಣೆ ಪ್ರಶಸ್ತವಲ್ಲ. 

उदये अष्टमी किञ्चित्

 नवमी सकलायदि।

भवेद्भुदेन्दुसंयुक्ता प्रजापत्यर्क्ष्यसंयुता॥

अपि वर्षशतेनापि लभ्यते वा न लभ्यते।

व्रतं तत्र व्रती कुर्यात्पुंसां कोटिं समुद्धरेत् ॥

ಎಂಬ ಬ್ರಹ್ಮವೈವರ್ತವಚನದಂತೆ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು ಅಂದು ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗವು ಅಲಭ್ಯ ,ಅಮೂಲ್ಯ, ಅಂದು ಜಯಂತಿಯನ್ನು ಆಚರಿಸಬೇಕೆಂದು ಹೇಳಿದ್ದಾರೆ. ತಾ. ೩೦-೮-೨೦೨೧ ರಂದು ಅಷ್ಟಮೀ ಸಹಿತವಾದ ರೋಹಿಣಿಯ ಯೋಗವಿದೆ, ಸೋಮವಾರವು ಒದಗಿ ಅತ್ಯಮೂಲ್ಯವಾಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿಯಿದೆ. ಚಂದ್ರನು ರೋಹಿಣೀ ಸಹಿತನಾಗಿ ಇರುವುದರಿಂದ गृहाणार्घ्यं मयादत्तं रोहिण्या सहितः शशिन् । ಎಂದು ಕೊಡುವ ಚಂದ್ರಾರ್ಘ್ಯಪ್ರಧಾನ ಹೆಚ್ಚು ಮಹತ್ವಪೂರ್ಣವೆನಿಸಿರುತ್ತದೆ.ಅರ್ಥಪೂರ್ಣವೂ ಹೌದು. ಹೀಗೆ ಶ್ರೀಮದಾಚಾರ್ಯರು, ಶ್ರೀವಿಷ್ಣುತೀರ್ಥರು, ಹಾಗೆಯೇ ಪುರಾಣವಚನಗಳ ಅನುಸಾರ ೩೦-೮-೨೦೨೧ ರಂದು ಹಗಲು ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಅಂದರೆ ಸುಮಾರು, ರಾತ್ರಿ 12-15 ರ ಹೊತ್ತಿಗೆ ಅರ್ಘ್ಯಪ್ರದಾನದ ಆಚರಣೆಯು ಸೂಕ್ತ. ಹಾಗೆಯೇ ಪಾರಣೆಯ ವಿಷಯದಲ್ಲೂ ೩೦-೮-೨೦೨೧ ರಾತ್ರಿ ತಿಥ್ಯಂತಪಾರಣೆಯನ್ನು ಹೇಳಿದ್ದಾರೆ. ಆದರೆ -

पारणं पावनं पुंसां सर्वपापप्रणाशनम् ।

उपवासाङ्गभूतं च

 फलदं सिद्धिकारणम्।।

सर्वेष्वेवोपवासेषु

 दिवा पारणमिष्यते ।

अन्यया फलहानिः स्यात्कृते घारणपारणे ।।

न रात्रौ पारणं कुर्याह्यते वै रोहिणीव्रतम्।

ಎಂಬ ಬ್ರಹ್ಮವೈವರ್ತಪುರಾಣದ ವಚನದ ಅನುಸಾರ ಹಾಗೆಯೇ, 

सर्वेष्वेवोपवासेषु पूर्वाह्णे पारणं भवेत् ।

अन्याया तु फलस्यार्धं धर्ममेवोपसर्पति।।

ಎಂಬ ದೇವಲರ ವಚನದಂತೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಎಲ್ಲಾ ಉಪವಾಸಗಳಲ್ಲಿ ಮಾಡಬೇಕು. ಇಲ್ಲವಾದರೆ ವ್ರತದ ಫಲವು ಹಾನಿಯಾಗಿ ಅಪೂರ್ಣವಾಗುತ್ತದೆ. ಆದ್ದರಿಂದ ೨೯-೮-೨೦೨೧ ಉಪವಾಸ ಮಾಡಿ "ತಿಥಿಭಾಂತೇ ಚ ಪಾರಣಂ" ಎಂಬ ನಿಯಮದವರು ೩೧-೮-೨೦೨೧ ಬೆಳಿಗ್ಗೆಯೇ  ತಿಥಿ ಹಾಗೂ ನಕ್ಷತ್ರ ಮುಗಿದ ಮೇಲೆ ಅಭಿಷೇಕ ನೈವೇದ್ಯಾದಿಗಳನ್ನು ಪೂರೈಸಿ ತದನಂತರವೇ ಪಾರಣೆಯನ್ನು ಮಾಡಬೇಕಾಗುತ್ತದೆ. ಆದರೆ

ವಿ, ಸೂ:-ಉತ್ತರಾದಿ ಮಠ ಹಾಗೂ ಒಂಟಿಕೊಪ್ಪಲು ಪ್ರಕಾರ  ಭಾನುವಾರ ಅಂದರೆ ೨೯-೦೮-೨೦೨೧ ರಂದು  ಕೃಷ್ಣಾಷ್ಟಮೀ ಆಚರಣೆ .ರಾತ್ರಿ ಅರ್ಘ್ಯಪ್ರದಾನ, ಉತ್ತರಾದಿ ಮಠದವರು ಮರುದಿನ ಸೋಮವಾರವೂ ಉಪವಾಸವಿದ್ದು ರಾತ್ರಿ ಅಷ್ಟಮೀ ಮುಗಿದ ನಂತರ ಪೂಜೆ ಪಾರಣೆ ಮಾಮಾಡುವರುಆದರೆ ನಕ್ಷತ್ರ ರೋಹಿಣಿಯು ಮಂಗಳವಾರದ ಬೆಳಗಿನವರೆಗೂ ಇರುತ್ತದೆ.ಇದನ್ನು ಪರಿತ್ಯಜಿಸಿ ಪಾರಣೆ ಮಾಡುವಂತಿಲ್ಲ. ರೋಹಿಣೀ ನಕ್ಷತ್ರ ಮುಗಿಯುವುದು ಮಂಗಳವಾರ ಬೆಳಿಗ್ಗೆ 09-40 ಕ್ಕೆ. 

ಶ್ರೀಮಧ್ವೇಶಾರ್ಪಣಮಸ್ತು


ಅರ್ಘ್ಯ ಸಮಯ.

ARGHYA TIMINGS.

FOR SRSM (ಶ್ರೀಗುರುರಾಘವೇಂದ್ರಸ್ವಾಮಿಗಳವರ ಮಠ) 12:02PM (ರಾತ್ರಿ ೧೨:೦೨ ನಿಮಿಷಕ್ಕೆ)

FOR SVM ಸೋಸಲೆ ಶ್ರೀ ವ್ಯಾಸರಾಜರ ಮಠ 12:10PM (ರಾತ್ರಿ ೧೨:೧೦ ನಿಮಿಷಕ್ಕೆ)

FOR SPRM ಮುಳಬಾಗಿಲು ಶ್ರೀಶ್ರೀಪಾದರಾಜರ 12:02PM ಮಠ (ರಾತ್ರಿ ೧೨:೦೨ ನಿಮಿಷಕ್ಕೆ)

 FOR SKM ಶ್ರೀಕಣ್ವಮಠ 11:52PM (ರಾತ್ರಿ ೧೧:೫೨ ನಿಮಿಷಕ್ಕೆ)

ಶ್ರೀ ರಾಯರ ಮಠಕ್ಕೆ 30 th monday 

 ಶ್ರೀ ಕೃಷ್ಣ ಜಯಂತಿ 

ಮಂಗಳವಾರ 31 st ಪಾರಣೆ.

ಉತ್ತರಾದಿ ಮಠಕ್ಕೆ 

29 th  sunday.

ಶ್ರೀ ಕೃಷ್ಣ ಜಯಂತಿ .

30.08.2021

 ರಾತ್ರಿ 11.45 pm ಮೇಲೆ ಪಾರಣೆ .

https://maps.app.goo.gl/kseHsSWLfF9sTk3R9

***


For elaborate reading related to Krishna Jayanthi, you may refer to the below write-up

ಶ್ರೀಕೃಷ್ಣಜಯಂತಿ ಎಂದು !?🌸

ಈ ಬಾರಿಯ ಪಂಚಾಂಗಗಳಲ್ಲಿ ಕೆಲವು ತಾ. ೨೯-೮-೨೦೨೧ ಜಯಂತಿಯ ಅಥವಾ ಜನ್ಮಾಷ್ಟಮಿಯ ಆಚರಣೆಯನ್ನು ತಿಳಿಸಿದ್ದರೆ ಇನ್ನೂ ಕೆಲವು ಪಂಚಾಂಗಗಳು ತಾ. ೩೦-೮-೨೦೨೧ ಜಯಂತಿಯ ಆಚರಣೆಯನ್ನು ವಿಧಿಸಿದೆ. ಅವರವರು ಆಯಾಯ ಗುರುಮಠವನ್ನು ಅನುಸರಿಸುವುದು ಸೂಕ್ತವಾದರೂ ಯಾವತ್ತು ಸರಿ ಎಂಬ ಜಿಜ್ಞಾಸೆ ಸಹಜ. ಇದರ ಬಗ್ಗೆ ನೋಡೋಣ. ತಾರೀಕು ೨೯-೮-೨೧ ರಂದು ದಗ್ಗಣಿತ ಅಥವಾ ಆರ್ಯಭಟೀಯ ಎರಡೂ ಪಂಚಾಂಗರೀತ್ಯಾ ಅರ್ಧರಾತ್ರಿಯ ವೇಳೆಗೆ ಅಷ್ಟಮಿಯಿದೆ. ಆದರೆ ರೀಹಿಣೀನಕ್ಷತ್ರ ಇರುವುದಿಲ್ಲ. ಶ್ರೀಮದಾಚಾರ್ಯರು ಜಯಂತೀನಿರ್ಣಯದಲ್ಲಿ ಹೇಳುವಂತೆ -

रोहिण्यां अर्धरात्रे तु यदा काळाष्टमी भवेत् ।

जयन्ती नाम सा प्रोक्‍ता सर्‍वपापप्रणाशिनी ।

यस्‍यां जातो जगन्नाथः निशीथे भगवानजः ॥

ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -

सिंहमासे तु रोहिण्यायुतां कष्णाष्टमीं पुमान् ।

उपोष्य मध्यरात्रे तु पूजयेत् नन्दनन्दनम् ॥

ಸಿಂಹಮಾಸದಲ್ಲಿ ರೋಹಿಣೀಸಹಿತವಾದ ಅಷ್ಟಮಿ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -

सत्यष्टममुहूर्ते वा रोहिणीसहिताष्टमी ।

श्रावणे मासि सिंहार्के क्वचित्सापि च शस्यते ।। 

एकादशीनां कोटीनां व्रतैश्च लभते फलम् ।

अतो दशगुणं प्रोक्तं कृत्वैतत्फलमाप्नुयात् ।।

ಸಿಂಹಮಾಸದಲ್ಲಿ ಒದಗಿದ ಶ್ರಾವಣಮಾಸದಲ್ಲಿ ರೋಹಿಣೀಸಹಿತಾವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡಪುರಾಣದಲ್ಲೂ,

कृष्णाष्टम्यां च रोहिण्यां अर्धरात्रेऽर्चनं हरेः ।

कार्याविद्धापि सप्तम्यां हन्तिपापं त्रिजन्मनः ॥

ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥಾರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಯೋಗವು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ. 

रोहिण्याश्च यदा कृष्णपक्षेऽष्टम्यां द्विजोत्तम ।

जयन्ती नाम सा प्रोक्ता सर्वपापहरातिथिः ॥

                                                   - विष्णुधर्म

कृष्णाष्टम्यां भवेद्यत्र कलैका रोहिणी नृप ।

जयन्ती नाम सा प्रोक्ता उपोष्य सा प्रयत्नतः                              

 - आग्नेय

ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕಲೆಯಷ್ಟಾದರು ರೋಹಿಣಿಯು ಒದಗಿದರೆ ಅಂದು ಉಪವಾಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾರೆ. ಆದ್ದರಿಂದ ತಾ. ೩೦-೮-೨೦೨೧ ರಂದು ಜಯಂತಿಯ ಆಚರಣೆ ಶಾಸ್ತ್ರಸಮ್ಮತವಾಗಿದೆ. ೨೯ ರ ಆಚರಣೆ ಪ್ರಶಸ್ತವಲ್ಲ. 

उदये अष्टमी किञ्चित् नवमी सकलायदीम् ।

भवेद्भुदेन्दुसंयुक्ता प्रजापत्यर्क्ष्यसंयुता ॥

अपि वर्षशतेनापि लभ्यते वा न लभ्यते ।

व्रतं तत्र व्रती कुर्यात्पुंसां कोटिं समुद्धरेत् ॥

ಎಂಬ ಬ್ರಹ್ಮವೈವರ್ತವಚನದಂತೆ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು ಅಂದು ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗವು ಅಲಭ್ಯ ಅಮೂಲ್ಯ ಅಂದು ಜಯಂತಿಯನ್ನು ಆಚರಿಸಬೇಕೆಂದು ಹೇಳಿದ್ದಾರೆ. ತಾ. ೩೦-೮-೨೦೨೧ ರಂದು ಅಷ್ಟಮಿಸಹಿತವಾದ ರೋಹಿಣಿಯ ಯೋಗವಿದೆ, ಸೋಮವಾರವು ಒದಗಿ ಅತ್ಯಮೂಲ್ಯವಾಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿಯಿದೆ. ಚಂದ್ರನು ರೋಹಿಣೀಸಹಿತನಾಗಿ ಇರುವುದರಿಂದ गृहाणार्घ्यं मयादत्तं रोहिण्या सहितः शशिन् । ಎಂದು ಕೊಡುವ ಚಂದ್ರಾರ್ಘ್ಯಪ್ರಧಾನ ಹೆಚ್ಚು ಮಹತ್ವಪೂರ್ಣವೆನಿಸಿರುತ್ತದೆ. ಹೀಗೆ ಶ್ರೀಮದಾಚಾರ್ಯರು, ಶ್ರೀವಿಷ್ಣುತೀರ್ಥರು, ಹಾಗೆಯೇ ಪುರಾಣವಚನಗಳ ಅನುಸಾರ ೩೦-೮-೨೦೨೧ ರಂದು ಆಚರಣೆಯು ಸೂಕ್ತ. ಹಾಗೆಯೇ ಪಾರಣೆಯ ವಿಷಯದಲ್ಲೂ ೩೦-೮-೨೦೨೧ ರಾತ್ರಿ ತಿಥ್ಯಂತಪಾರಣೆಯನ್ನು ಹೇಳಿದ್ದಾರೆ. ಆದರೆ -

पारणं पावनं पुंसां सर्वपापप्रणाशनम् ।

उपवासाङ्गभूतं च फलदं सिद्धिकारणम् ।।

सर्वेष्वेवोपवासेषु दिवा पारणमिष्यते ।

अन्यया फलहानिः स्यात्कृते घारणपारणे ।।

न रात्रौ पारणं कुर्याह्यते वै रोहिणीव्रतम् ।

ಎಂಬ ಬ್ರಹ್ಮವೈವರ್ತಪುರಾಣದ ವಚನದ ಅನುಸಾರ ಹಾಗೆಯೇ, 

सर्वेष्वेवोपवासेषु पूर्वाह्णे पारणं भवेत् ।

अन्याया तु फलस्यार्धं धर्ममेवोपसर्पति ।।

ಎಂಬ ದೇವಲರ ವಚನದಂತೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಎಲ್ಲಾ ಉಪವಾಸಗಳಲ್ಲಿ ಮಾಡಬೇಕು. ಇಲ್ಲವಾದರೆ ವ್ರತದ ಫಲವು ಹಾನಿಯಾಗಿ ಅಪೂರ್ಣವಾಗುತ್ತದೆ. ಆದ್ದರಿಂದ ೨೯-೮-೨೦೨೧ ಉಪವಾಸ ಮಾಡಿ ತಿಥ್ಯಂತೇ ಪಾರಣೆಯನ್ನು ಮಾಡುವವರು ೩೧-೮-೨೦೨೧ ಬೆಳಿಗ್ಗೆಯೇ ಪಾರಣೆಯನ್ನು ಮಾಡಬೇಕಾಗುತ್ತದೆ. ಎರಡುದಿನಗಳ ಉಪವಾಸಮಾಡಿದಂತೆ ಆಗುವುದು. ೩೦-೮-೨೦೨೧ ರಂದು ಆಚರಣೆಯು ಪ್ರಶಸ್ತವು ಮರುದಿವಸ ಪಾರಣೆಯು ಯಾವುದೇ ತೊಂದರೆ ಇಲ್ಲದೆ ಆಚರಣೆಗೂ ಅನುಕೂಲವಾಗಿದೆ.

ಶ್ರೀಕೃ಼ಷ್ಣಾರ್ಪಣಮಸ್ತು 

- ಬೆಳ್ಳೆ ಸುದರ್ಶನ ಆಚಾರ್ಯ

***
ಶ್ರೀಕೃಷ್ಣ ಪರಮಾತ್ಮನ ಪತ್ನಿಯರ ಸಂಖ್ಯೆ ..16,108..
(16,100 ಜನ ರಾಜ ಪುತ್ರಿಯರು  ಮತ್ತು 08 ಜನ ಅಷ್ಟ ಮಹಿಷಿಯರು).
ಪುತ್ರರ ಸಂಖ್ಯೆ... 
ಪ್ರತಿಯೊಬ್ಬ ಪತ್ನಿಯಲ್ಲಿ 10 ಜನರಂತೆ 1,61,080 ಒಟ್ಟು ಪುತ್ರರು..
(16,108×10=1,61080)
ಪುತ್ರಿಯರ ಸಂಖ್ಯೆ.. .
ಪ್ರತಿಯೊಬ್ಬರಲ್ಲಿ ಒಬ್ಬರಂತೆ 16,108  ಜನ ಪುತ್ರಿ ಯರು..
(16108×1=16,108)
ಒಟ್ಟು ಮಕ್ಕಳ ಸಂಖ್ಯೆ.1,77,188..ಜನರು..

ಈ ರೀತಿಯ ಅದ್ಭುತವಾದ ಮತ್ತು ವಿಶಿಷ್ಠವಾದ ವ್ಯಾಪಾರದಿಂದ ತಾನು ಸರ್ವಶಕ್ತನಾದ ಭಗವಂತನೆಂದು  ಶ್ರೀಕೃಷ್ಣ ಪರಮಾತ್ಮ ಜಗತ್ತಿಗೆ ತೋರಿಸಿದ..
ತನ್ನ ಪ್ರತಿಯೊಬ್ಬ ಪತ್ನಿಯಲ್ಲಿ ಪಡೆದ ಮಕ್ಕಳ ಸಂಖ್ಯೆ.. ೧೦+೧=೧೧..ಎಂದು ತೋರುವ ಮೂಲಕ 
ತಾನು ಏಕಾದಶೇಂದ್ರಿಯಾಧಿಪತಿಯಾದ ಶ್ರೀಹೃಷೀಕೇಶ ರೂಪಿ ಯಾದ ಶ್ರೀಹರಿಯೇ ತಾನು ಎಂದು ನಿರೂಪಿಸಿದ....
ಹಾಗು 
ತನಗೆ  ಅತ್ಯಂತ ಪ್ರಿಯವಾದ ವ್ರತವು ಪ್ರತಿ ಮಾಸದ(ತಿಂಗಳು) ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ೧೧ನೆಯ ದಿನವಾದ ಏಕಾದಶಿ ಎಂದು ಸಾರಿದ..
ಈ ದಿನ ಅನ್ನ, ಪಾನ ,ತಾಂಬೂಲ, ದರ್ಪಣಾದಿ, ಚೆನ್ನ ವಸ್ತ್ರಗಳೆಲ್ಲ, ವರ್ಜಿತವು,|
ಆದರೆ
ಭಗವಂತನ ನಾಮ ಸ್ಮರಣೆ,ಕಥಾ ಶ್ರವಣ, ಕೀರ್ತನೆ ಮಾತ್ರ ನಿಷಿದ್ದವಲ್ಲ....
🙏ಶ್ರೀ ಕೃಷ್ಣಾರ್ಪಣಮಸ್ತು🙏
ಏಕಾದಶಿಯಂದು ನಿರಾಹಾರನಾಗಿದ್ದು ಮುಂದಿನ ದಿನ ಭೇೂಜನ ಮಾಡುವೆ, ಅಚ್ಯುತ! 
ಚ್ಯುತಿ ಬರದಂತೆ ರಕ್ಷಿಸು. ಪುಂಡರೀಕಾಕ್ಷ ನೀನು ರಕ್ಷಕನಾಗು.
🙏ಶ್ರೀ ಕಪಿಲಾಯ ನಮಃ
***

ಮೊಸರು ಕುಡಿಕೆ

ದಹೀಕಾಲಾ
ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣ ಮಾಡುವುದೇ ‘ಕಾಲಾ’. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಆ ಖಾದ್ಯಪದಾರ್ಥಗಳ ‘ಕಾಲಾ’ ಮಾಡಿದನು ಮತ್ತು ಎಲ್ಲರೊಂದಿಗೆ ತಿಂದನು. ಈ ಕಥೆಗನುರ ಮುಂದೆ ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಮೊಸರು ಕುಡಿಕೆಯ ವೈಶಿಷ್ಟ್ಯಗಳು

ಗೋಪಾಲಕಾಲಾ
ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲಾಷ್ಟಮಿಯ ನಂತರ ಮೊಸರು ಕುಡಿಕೆಯನ್ನು ಒಡೆದು ಗ್ರಹಿಸುವ ಪ್ರಸಾದ.

ಗೋಪಾಲಕಾಲಾದ ಸವಿರುಚಿ
ಅವಲಕ್ಕಿ, ಹಾಲು, ಮೊಸರು, ಮಜ್ಜಿಗೆ ಮತ್ತು ಬೆಣ್ಣೆ ಈ ಐದು ಪದಾರ್ಥಗಳನ್ನು ಒಟ್ಟು ಮಾಡಿ ತಯಾರಿಸುವ ಪ್ರಸಾದಕ್ಕೆ ಒಂದು ಬಣ್ಣಿಸಲಾಗದ ದಿವ್ಯ ರುಚಿ ಇರುತ್ತದೆ.

ಮೊಸರು ಕುಡಿಕೆ
ಮೊಸರು ಕುಡಿಕೆ ಅಂದರೆ ‘ಜೀವ’. ಮೊಸರು ಕುಡಿಕೆಯನ್ನು ಒಡೆಯುವುದು ಅಂದರೆ ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು. ಅದರ ನಂತರ ಸ್ವೀಕರಿಸುವ ಪ್ರಸಾದ ಆನಂದದ ಪ್ರತೀಕವಾಗಿದೆ.
***

ಕೃಷ್ಣನ ಇತರ ಹೆಸರುಗಳು

ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು.
ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು.
ವಾಸುದೇವ : ವಸುದೇವನ ಮಗ
ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು
ಕಾಲದೇವ: ಯಮನನ್ನು ಮೀರಿಸಿದವ.
ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ
ಗೊಲ್ಲ: ಎಮ್ಮೆಗಳನ್ನು ಪಾಲಿಸಿ, ಕಾಪಾಡುವವನು.
ವೇಣುಗೋಪಾಲ : ಕೊಳಲನ್ನು ನುಡಿಸುವವನು.
ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು
ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು
ಜಗನ್ನಾಥ: ಜಗತ್ತಿಗೆ ನಾಯಕನಾದವನು
ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
ಪತಿತ ಪಾವನ: ಪಾಪಿಗಳನ್ನು ಉದ್ದರಿಸುವವನು
ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು)
ಪಾರ್ಥ ಸಾರಥಿ: ಅರ್ಜುನನ ಸಾರಥಿ
ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು.
ಮಾಧವ: ವಸಂತ ಋತು ತರುವವ, ಮಾ =ಲಕ್ಷ್ಮಿ -ಧವ =ಒಡೆಯ
ಮುಕುಂದ: ಮುಕ್ತಿಯನ್ನು ಕೊಡುವವನು
ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು
ಶ್ಯಾಮಸುಂದರ: ಕಪ್ಪು ವರ್ಣದವನು
ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು
ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
ನವನೀತ : ತಾಜಾ ಬೆಣ್ಣೆಯನ್ನು ತಿಂದವನು
ಸುದರ್ಶನ : ಸುದರ್ಶನ ಚಕ್ರ ಹೊಂದಿದವ
ಮುರಳಿ : ಕೊಳಲನ್ನು ಹೊಂದಿದವ
ಜನಾರ್ಧನ :
ಮುರಾರಿ :
ಘನಶ್ಯಾಮ: 
ದಾಮೋದರ:
ಪಾಂಡುರಂಗ:
ಕೇಶವ:
ವಿಠಲ:
ಶ್ರೀರಂಗನಾಥ
***
ಕೃಷ್ಣನ ಅವತಾರದ ಕಾರಣ :- 

ಹಸ್ತಿನಾಪುರದ ರಾಜ ಪರೀಕ್ಷಿತ ಮಹಾರಾಜನಿಗೆ,  ಶುಕಾಚಾರ್ಯರು ಭಾಗವತ
ಸಪ್ತಾಹ  ಮಾಡುತ್ತಿದ್ದಾರೆ. ಬಹಳ ಉತ್ಸಾಹ ಹಾಗೂ ಕುತೂಹಲದಿಂದ ಕಥೆಯನ್ನು ಪರೀಕ್ಷಿತ  ಕೇಳುತ್ತಿದ್ದಾನೆ. ಹಾಗೆಯೇ ಮಹಾರಾಜನು,  ತನ್ನ ತಾತ  (ಪಾಂಡವರು ಹಾಗೂ ಕೃಷ್ಣನ) ಮುತ್ತಾತಂದಿರ ಕುರಿತು ಆಗಾಗ  ಪ್ರಶ್ನೆ ಮಾಡಿ ಕೇಳುತ್ತಿದ್ದನು. ಈಗ ಮತ್ತೊಂದು ಪ್ರಶ್ನೆ ಕೇಳಿದ. ಗುರುಗಳೇ  ಭಗವಂತನಾದ  ಕೃಷ್ಣನ ಅವತಾರ  ಭೂಮಿಯಲ್ಲಿ ಏಕಾಯಿತು? ಹೇಗಾಯಿತು? ಎಂದು ಕೇಳಿದ. 

ಇದನ್ನು ಕೇಳುತ್ತಿದ್ದಂತೆ ಶುಕ ಮುನಿಗಳಿಗೆ ತುಂಬಾ ಆನಂದವಾಯಿತು. ಪರೀಕ್ಷಿತ ಎಂಥಾ ಒಳ್ಳೆಯ  ಪ್ರಶ್ನೆಯನ್ನು ಕೇಳುತ್ತಿರುವೆ. ಈ ಕಥೆಯನ್ನು ಹೇಳಿರಿ ಎಂದು ಕೇಳಿದವನು,  ತಾನು ಕೇಳಿ, ಕಥೆ ಹೇಳುವವನಿಗೂ ಹಾಗೂ ಕೇಳಿದವನಿಗೂ ಗಂಗಾ ಭಾಗೀರಥಿಯಂಥ (  ಭಗೀರಥ ತಪಸ್ಸು ಮಾಡಿ ದೇವಲೋಕದಿಂದ ಗಂಗೆಯನ್ನು ತರಿಸಿ, ಮೂರು ಲೋಕಗಳಲ್ಲು ಹರಿದು ಪವಿತ್ರ ಮಾಡುವ ಪುಣ್ಯ ನದಿ ಗಂಗೆ ಭಾಗಿರತಿ) ಪುಣ್ಯ ಪ್ರಾಪ್ತಿಯಾಗುವುದು. ನಾನು ಇದನ್ನು ಬಹಳ ಉತ್ಸಾಹ ಹಾಗೂ ಸಂತೋಷದಿಂದ ನಿನಗೆ ಕೃಷ್ಣನ ಕತೆಯನ್ನು ವಿಸ್ತಾರವಾಗಿ ಹೇಳುತ್ತೇನೆ.  ಕೇಳು, ಮಾನವ ಜನ್ಮದಿಂದ ಮುಕ್ತಿ  ಪಥದತ್ತ ಸಾಗುವೆ ಎಂದು ಹೇಳಿ  ಶುಕಾಚಾರ್ಯರು ಕಥೆ ಹೇಳ ತೊಡಗಿದರು. 

ಭಗವಂತನು ಮಾನವ ಶರೀರಧಾರಿಯಾಗಿ ಭೂಲೋಕದಲ್ಲಿ ಅವತರಿಸಬೇಕು ಎಂದು ದೇವತೆಗಳು ಸಂಕಲ್ಪ ಮಾಡಿದರು. ದೇವತೆಗಳ ಸಂಕಲ್ಪ ಭಗವಂತನಿಗೆ ಮುಟ್ಟುತ್ತದೆ. ಅವರೆಲ್ಲರೂ ಬ್ರಹ್ಮನ ಹತ್ತಿರ ಹೋಗಿ ಎಲ್ಲರ ತಾಯಿಯಾದ ಭೂತಾಯಿಯನ್ನು ಗೋವಿನ ವೇಷ ಧರಿಸುವಂತೆ ಮಾಡಿ, ಗೋರೂಪಿಣಿ ದೇವಿಯ ಜೊತೆಯಲ್ಲಿ ಬ್ರಹ್ಮನು ಕ್ಷೀರಸಾಗರದಲ್ಲಿ ನಿಂತು ದೇವತೆಗಳೊಂದಿಗೆ ಭಗವಂತನಲ್ಲಿ ಪ್ರಾರ್ಥನೆ ಮಾಡಿದನು. 

ಆ ಪ್ರಾರ್ಥನೆ ಹೀಗಿದೆ, "ಹೇ ಭಗವಂತ, ನಿನಗೆ ಶರೀರ ಇಲ್ಲ. ಏಕೆಂದರೆ ಎಲ್ಲರ ಶರೀರದೊಳಗೂ ನೀನೇ ಇರುವೆ. ಅಂಥ ನೀನು ನಿನ್ನದೇ ಆದ  ಶರೀರದಿಂದ  ಭೂಮಿಯಲ್ಲಿ ಅವತರಿಸು. ಈಗಾಗಲೇ ಭೂ ಭಾರ ಹೆಚ್ಚಾಗಿದೆ.  ಅಲ್ಲದೆ ಭೂಮಿಯಲ್ಲಿ ನಿನ್ನ ದರ್ಶನಕ್ಕಾಗಿ ಋಷಿಮುನಿಗಳು ಹಲವಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆ, ಹಾಗೆ ಅನೇಕ ಹೆಣ್ಣು ಮಕ್ಕಳು ನಿನ್ನನ್ನೇ ಪತಿಯಾಗಿ ಬೇಕೆಂದು ಕಾದಿದ್ದಾರೆ,ಎಷ್ಟೋ ತಾಯಂದರು ನಿನ್ನನ್ನು ಮಗನಾಗಿ ಪಡೆಯಬೇಕೆಂದು, ಮತ್ತಷ್ಟು ಜನರು ಅವರ ಅಣ್ಣನಾಗಿ, ತಮ್ಮನಾಗಿ, ಬಂಧು- ಬಳಗವಾಗಿ , ಧೂತನಾಗಿ ಗೆಳೆಯನಾಗಿ, ಹೀಗೆ ನಾನಾ ವಿಧದಲ್ಲಿ ನಿನ್ನನ್ನೇ ಪಡೆಯಬೇಕೆಂದು ಪರಿತಪಿ ಸುತ್ತಿದ್ದಾರೆ. ಅವರೆಲ್ಲರ ಆಶಯ ನೆರವೇರಿಸಲು, ಕಂಸ -ಜರಾಸಂಧ ರನ್ನು ಸಂಹರಿಸಲು, ಹಾಗೂ ಭೂ ಬಾರವನ್ನು ಕಡಿಮೆ ಮಾಡಲು ನೀನು ಈ ಭೂಮಿಯಲ್ಲಿ ಅವತರಿಸಲು ಇಳಿದು ಬಾ" ಎಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರು.  

ಇವರೆಲ್ಲರ ಪ್ರಾರ್ಥನೆಯ ಫಲವೋ ಎಂಬಂತೆ, ಮಹಾವಿಷ್ಣುವು ಬ್ರಹ್ಮನಿಗೆ ದರ್ಶನ ಕೊಟ್ಟನು ಹಾಗೂ ಉಳಿದ ದೇವತೆಗಳಿಗೆ  ತನ್ನ ತೇಜಸ್ಸನ್ನು ತೋರಿಸಿ ಆಶರೀರವಾಣಿಯಂತೆ, ನಾನು ಈಗಾಗಲೇ ಭೂಮಿಯಲ್ಲಿ ಜನ್ಮ ತಾಳಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ.  ಸದ್ಯದಲ್ಲೇ  ಈ ಭೂಮಿ ಮೇಲೆ ಅವತರಿಸುತ್ತೇನೆ ಎಂದನು. ಇದನ್ನು ಕೇಳಿ ಸಮಾಧಾನಗೊಂಡ ದೇವತೆಗಳು ಭಗವಂತನನ್ನು ಮತ್ತೊಮ್ಮೆ ಪ್ರಾರ್ಥಿಸಿ ಹೊರಟರು. 

'ಶೂರಸೇನ' ದೇಶದ ನಾನಾ ರಾಜ್ಯಗಳಲ್ಲಿ ಹಲವು ರಾಜರುಗಳು ಇದ್ದರು.'ಶೂರಸೇನ' ರಾಜ್ಯದ ರಾಜಧಾನಿ 'ಮಥುರಾ ಪಟ್ಟಣ ' ಈ ಹೆಸರೇ ಸಿಹಿ ಯಾದದ್ದು. ಆನಂದ ರೂಪನಾದ  ಭಗವಂತ ಜನಿಸಿ  ನಡೆದಾಡಿದ  ಪುಣ್ಯಕರವಾದ ಪವಿತ್ರ ಕ್ಷೇತ್ರವಿದು. ಮೊದಲಿ ನಿಂದಲೂ ಪವಿತ್ರವಾದ  ಸ್ಥಳವಾದ್ದರಿಂದ, ಅಂದಿನ ರಾಜರು ಗಳು ಇದನ್ನೇ ರಾಜಧಾನಿಯಾಗಿ ಮಾಡಿಕೊಂಡಿದ್ದರು.  ಮಥುರಾ  ನಗರದಲ್ಲಿ  ಯದು ಕುಲದ 'ಶೂರಸೇನಾ' ಎಂಬ ರಾಜನಿದ್ದನು. ಇವನಿಗೆ ಆರು ಜನ ಹೆಣ್ಣು ಮಕ್ಕಳು ಇವರೆಲ್ಲ ನಡುವಿನವನು 'ವಸುದೇವ' ಒಟ್ಟು ಏಳು ಜನ ಮಕ್ಕಳು. 

ಇದೇ ರಾಜ್ಯದ ಇನ್ನೊಂದು ರಾಜ್ಯದಲ್ಲಿ 'ಆಹುಕಾ' ಎಂಬ ರಾಜನಿಗೆ ಉಗ್ರಸೇನ- ದೇವಕಾ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಉಗ್ರಸೇನನಿಗೆ ಹಿರಿಯನಾದ ಕಂಸನು ಸೇರಿದಂತೆ  9 ಜನ ಗಂಡು ಮಕ್ಕಳು. ಆರು ಜನ ಹೆಣ್ಣು ಮಕ್ಕಳು. ಇದು ಉಗ್ರಸೇನನ ಕುಟುಂಬ. ತಮ್ಮನಾದ ದೇವಕನಿಗೆ ಏಳು ಜನ ಹೆಣ್ಣು ಮಕ್ಕಳು ಕೊನೆಯವಳು ' ದೇವಕಿ'  ದೇವಕಿಯ ಕುರಿತು ಇನ್ನೊಂದು ಮಾಹಿತಿ ಇದೆ. ಆ ಪ್ರಕಾರ, ದೇವಕಿ ತಾತ ಅಂದರೆ ಅಜ್ಜ 'ಆಹುಕಾ'  ರಾಜನಿಗೆ  ಹೆಣ್ಣು ಮಕ್ಕಳಿರಲಿಲ್ಲ. ಇಬ್ಬರೇ ಗಂಡು ಮಕ್ಕಳು ಉಗ್ರಸೇನ ಮತ್ತು ದೇವಕಾ. ಆಹುಕರಾಜನಿಗೆ ಒಂದು ಹೆಣ್ಣು ಮಗು ಇದ್ದರೆ ಕನ್ಯಾದಾನವನ್ನು ಮಾಡಿ ಆ ಪುಣ್ಯ ಪಡೆಯಬೇಕು ಎಂಬ ಆಸೆ ಇತ್ತು. ಆದ್ದರಿಂದ ಅವನು ತನ್ನ ಮಗನಾದ ದೇವಕನಿಗೆ, ನಿನಗೆ ಇನ್ನು ಮುಂದೆ ಹೆಣ್ಣು ಮಗುವಾದರೆ ಅದನ್ನು ನನಗೆ ದತ್ತು ಪುತ್ರಿಯಾಗಿ  ಕೊಡು ಎಂದು ಕೇಳಿದ್ದನು. ಈಗಾಗಲೇ ದೇವಕನಿಗೆ ಆರು ಹೆಣ್ಣು ಮಕ್ಕಳು, ಗಂಡು ಮಕ್ಕಳು ಇದ್ದರು. ಆದ್ದರಿಂದ ಒಪ್ಪಿಗೆ ಕೊಟ್ಟಿದ್ದನು. ಕೊನೆಯ ದಾಗಿ ದೇವಕಿ ಹುಟ್ಟುತ್ತಾಳೆ. ಅವನು ತಂದೆಯ ಮಾತಿನಂತೆ  ತಂದೆಗೆ ತನ್ನ ಮಗಳನ್ನು ದತ್ತು ಪುತ್ರಿಯಾಗಿ ದಾನ ಕೊಡುತ್ತಾನೆ. ಆದ್ದರಿಂದ  ದೇವಕನಿಗೂ, ಮತ್ತು ಇವನ  ಅಣ್ಣನಾದ, ಹಾಗೂ ದೇವಕಿಗೆ  ದೊಡ್ಡಪ್ಪನಾದ ಉಗ್ರಸೇನ ನಿಗೂ  ದೇವಕಿ ತಂಗಿಯಾಗುತ್ತಾಳೆ. ಇದರಿಂದಾಗಿ  ಕಂಸನಿಗೆ ದೇವಕಿಯು, ತಂಗಿಯೂ ಆಗುತ್ತಾಳೆ.  ಸೋದರತ್ತೆಯು ಆಗುತ್ತಾಳೆ.  

ಶೂರಸೇನನಿಗೆ  ಆರು ಜನ ಹೆಣ್ಣು ಮಕ್ಕಳಲ್ಲಿ  ಶ್ರುತ ದೇವಿ, ಶೃತ ಕೀರ್ತಿ, ಪೃಥಾ ಮುಂತಾದ ಸಹೋದರಿಯರ  ಮಧ್ಯದಲ್ಲಿ ಹುಟ್ಟಿದವನು ವಸುದೇವ.  ಹುಟ್ಟುವಾಗಲೇ  ಎಲ್ಲೆಡೆಯೂ ಶುಭ ಶಕುನಗಳೇ ಕಂಡು ಬಂದವು. ಇವನು ಹುಟ್ಟಿದಾಗ ಆಕಾಶದಿಂದ ಭೇರಿ- ನಗಾರಿ-ವಾದ್ಯದ ಶಬ್ದಗಳು ಕೇಳಿಸಿತು. ಇದು ಭ್ರಮೆ ಆಗಿರದೆ ಆಕಾಶದಿಂದ ಶಬ್ದ ಆಕಾಶವಾಣಿಯಂತೆ ಕೇಳುತ್ತಿತ್ತು. ಇದನ್ನು  ದೇವತೆಗಳೇ  ಮೊಳಗಿಸುತ್ತಾ, ಹರ್ಷದಿಂದ ಕುಣಿದಾಡುತ್ತಿದ್ದರು. 'ವಸುದೇವ' ಎಂದರೆ ಸಾಧಾರಣ ಅಲ್ಲ.  ಪೂರ್ವಜನ್ಮದಲ್ಲಿ ಕಶ್ಯಪ ಪ್ರಜಾಪತಿಯಾಗಿದ್ದು  ಪತ್ನಿ ಅದಿತಿ, ಇವರಿಬ್ಬರ ದಾಂಪತ್ಯದ  ಕಠಿಣ ತಪಸ್ಸಿನ ಫಲವಾಗಿ ಸಾಕ್ಷಾತ್  'ಶ್ರೀಮನ್ನಾರಾಯಣನೇ' ವಸುದೇವ ದೇವಕಿಯರಿಗೆ  ಶ್ರೀ ಕೃಷ್ಣನೆಂದು ಮಗನಾಗಿ ಜನಿಸುತ್ತಾನೆ. 

ಶೂರಸೇನನಿಗೆ ಬೇಕಾದಷ್ಟು ಜನ ಪತ್ನಿಯರಿದ್ದರು. ಅದರಲ್ಲಿ ನಾಲ್ಕು ವರ್ಣಕ್ಕೆ ಸೇರಿದ ಪತ್ನಿಯರು ಇದ್ದರು. ಅವರಲ್ಲಿ  ಶೂದ್ರ ಸ್ತ್ರೀಯ ಮಗಳನ್ನು ವಿದುರ ಮದುವೆಯಾಗಿದ್ದನು. ವಿದುರನ ಪತ್ನಿ ಕುಂತಿಗೆ ತಂಗಿ. ಹೀಗಾಗಿ ಪಾಂಡವರು ವನವಾಸಕ್ಕೆ ಹೋದಾಗ  ಕುಂತಿಯು ತನ್ನ ತಂಗಿ ವಿದುರನ ಪತ್ನಿಯಾದ ಕಾರಣ ಅವರ ಮನೆಯಲ್ಲಿ ಇದ್ದಳು ಎಂದು ಕೆಲವು ಮೂಲಗಳು ತಿಳಿಸುತ್ತವೆ. 

ವಸುದೇವನು ಹುಟ್ಟುವಾಗ ಬೇರಿ- ನಗಾರಿಗಳ  ಶಬ್ದವಾದ್ದರಿಂದ, ವಸುದೇವಗೆ ಅನಕ  ದುಂದುಭಿ (ಆನಕ ಎಂದರೆ ಭೇರಿ- ದುಂದುಭಿ  ಎಂದರೆ  ನಗಾರಿ)  ಮತ್ತು ಶೂರಸೇನನ  ಮಗನಾದ್ದರಿಂದ 'ಶೌರಿ' ಎಂದು, ಹಾಗೂ ನಾಮಕರಣ ದಲ್ಲಿ 'ವಸುದೇವ' ನೆಂದು ಇಷ್ಟು ಹೆಸರು ಇರುತ್ತದೆ. ವಸುದೇವ, ಮನ್ಮಥನಷ್ಟೇ 
ಸುರಸುಂದರಾಂಗ, ಇವನಿಗೆ ಹೆಣ್ಣು ಕೊಡ ಬೇಕೆಂದು ಹೆಣ್ಣು ಹೆತ್ತ ತಂದೆಯರು ಮುಂದಾಗಿದ್ದರು. ಹೀಗಾಗಿ 'ಆಹುಕಾ' ರಾಜನ ಮಗನಾದ 'ದೇವಕನು, ತನಗೆ  ಹುಟ್ಟಿದ  ಏಳು ಹೆಣ್ಣು ಮಕ್ಕಳನ್ನು ದೇವಕಿಯು ಸೇರಿದಂತೆ ವಸುದೇವನಿಗೆ ಕೊಟ್ಟು ವಿವಾಹ  ಮಾಡುತ್ತಾನೆ. 

ಈಗ ವಸುದೇವನ ಜೊತೆ ದೇವಕಿಯ ವಿವಾಹವನ್ನು ಸಂಭ್ರಮದಿಂದ ಅಣ್ಣ ನಾದ ಕಂಸನು ಮುಂದೆ ನಿಂತು ಮಾಡುತ್ತಿದ್ದಾನೆ. 10000 ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ನವದಂಪತಿಗಳಾದ ವಸುದೇವ- ದೇವಕಿಯರ  ಮೆರವಣಿಗೆಯ ಸಾರೋಟಿನ ಸಾರಥ್ಯವನ್ನು ತಾನೇ ವಹಿಸಿಕೊಂಡ ಕಂಸನು  ರಥವನ್ನು ಓಡಿಸುತ್ತಿದ್ದಾನೆ. ಎಲ್ಲೆಲ್ಲೂ ವಾದ್ಯ  ನಗಾರಿಗಳು ಮೊಳಗುತ್ತಿವೆ. ಸ್ವಲ್ಪ ಹೊತ್ತಿಗೆ ವಾದ್ಯ ಮೇಳಗಳ  ಶಬ್ದ ಸ್ವಲ್ಪ ಕಡಿಮೆಯಾದಾಗ, ಆಕಾಶವಾಣಿಯೊಂದು ಕಂಸನ ಕಿವಿಗೆ ಮಾತ್ರ ಕೇಳಿಸುವಂತೆ  ಏ ಪೆದ್ದ, ಮೂರ್ಖ ಕಂಸನೇ,ಇಷ್ಟೊಂದು ಸಂಭ್ರಮದಿಂದ ನಿನ್ನ ತಂಗಿಯ ವಿವಾಹ ಮಹೋತ್ಸವ ಮಾಡುತ್ತಿದ್ದೀಯಾ? ಆದರೆ ಇವಳ ಹೊಟ್ಟೆಯಲ್ಲಿ ಹುಟ್ಟುವ 8ನೇ ಮಗುವಿನಿಂದಲೇ ನಿನಗೆ ಮರಣ ಕಾದಿದೆ. ಈ ಅಶರೀರವಾಣಿ ಕೇಳುತ್ತಿದ್ದಂತೆ ಕಂಸನ ಮನಸ್ಸು ರಾಕ್ಷಸನಂತೆ ಅಲ್ಲೋಲ ಕಲ್ಲೋಲಾಯಿತು. ಅವನ ದುಷ್ಟ ಯೋಚನೆಗಳು ಈಚೆಗೆ ಬಂದಿತು. ತಕ್ಷಣವೇ ಮುದ್ದಿನ ತಂಗಿ ಎಂದು ಹೇಳುತ್ತಿದ್ದ ದೇವಕಿಯ ಶಿರವನ್ನು ಹೂವಿನ ಸಹಿತ ಹಿಡಿದೆಳೆದು ಹಿಂಡಿದಾಗ ಹೂವಿನ ರಸವೆಲ್ಲ ತೊಟ್ಟಿಕ್ಕಿತು. ಅವನು ಆಕೆಯ ಶಿರವನ್ನು ಕಡಿಯಲು ಮುಂದಾದನು. ಆಗ ವಸುದೇವ ಕಂಸನ ಕೈಯನ್ನು ಬಲವಾಗಿ ಹಿಡಿದು, ಅವಸರ ಪಡಬೇಡ ಈಗ ತಾನೇ ಶುಭ ಕಾರ್ಯವನ್ನು ಮಾಡಿರುವೆ. ನೀನು ಒಬ್ಬ ರಾಜ ಎನ್ನುವುದನ್ನು ಮರೆಯಬೇಡ. 'ಯಥಾ ರಾಜ ತಥಾ ಪ್ರಜೆ' ಎನ್ನುವಂತೆ ನೀ ಮಾಡುವ ದುಷ್ಕೃತ್ಯವನ್ನು ನಿನ್ನ  ಪ್ರಜೆಗಳು ಅನುಸರಿಸುತ್ತಾರೆ. ಆದ್ದರಿಂದ ಈ ಸಮೂಹದಲ್ಲಿ  ಸ್ತ್ರೀಯನ್ನು ಕೊಲ್ಲುವಂಥ ಕೆಲಸ ಮಾಡಬೇಡ. ದುಷ್ಟ ಕಂಸ ಯಾವುದನ್ನು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ.
ಅವನು ಯೋಚಿಸಬಹುದಿತ್ತು. ಎಂಟನೇ ಮಗು ಎಂದರೆ ಅಲ್ಲಿಯವರೆಗೂ 
ತನಗೆ ಸಾವಿಲ್ಲ ಎನ್ನುವುದು ಖಚಿತವಾಯಿತು. ಇಷ್ಟಕ್ಕೂ ಹುಟ್ಟಿದ ಮನುಷ್ಯ ಸಾಯಲೇಬೇಕು. ಅದರಲ್ಲೂ ದೇವಕಿ ತಂಗಿ, ವಸುದೇವನಿಗೆ  ಈಗಾಗಲೇ ಬೇಕಾದಷ್ಟು ಪತ್ನಿಯರಿದ್ದರು. ದೇವಕಿಗೆ ಮಕ್ಕಳಾಗದಂತೆ ನೋಡಿಕೋ ಎಂದು ಹೇಳಬಹುದಿತ್ತು. ಅಷ್ಟೆಲ್ಲ ವ್ಯವಧಾನವಿರಲಿಲ್ಲ ರಾಕ್ಷಸ ಬುದ್ದಿ. 

ಕಂಸನಿಗಿಂತ, ವಸುದೇವ ಬಲಶಾಲಿ ಇದ್ದನು. ಕಂಸನ ಕೈ ಹಿಡಿದಿದ್ದರೆ, ಆ ಹಿಡಿತದ ಒತ್ತಡವನ್ನು ಕಂಸನಿಂದ ಸಹಿಸಿಕೊಳ್ಳಲಾಗಲಿಲ್ಲ. ಸಾಕಷ್ಟು ವಾದ ವಿವಾದಗಳ ನಂತರ  ವಸುದೇವ ಹೇಳಿದ ನಿನ್ನ ತಂಗಿಯನ್ನು ಕೊಲ್ಲಬೇಡ ಅವಳಿಗೆ ಹುಟ್ಟುವ ಮಕ್ಕಳನ್ನೆಲ್ಲ ನಿನಗೆ ಒಪ್ಪಿಸುತ್ತೇನೆ ಎಂದಾಗ ಕಂಸನು ವಸುದೇವನ ಕಪಿಮುಷ್ಠಿ, ಹಾಗೂ ಸುತ್ತಲೂ ಜನಸಂದಣಿ, ಆ ಜನರೆಲ್ಲರೂ ವಸುದೇವನ ಪರವಾಗಿ ನಿಲ್ಲುತ್ತಾರೆ ಇದನ್ನೆಲ್ಲ ಅರಿತ ಕಂಸ  ಆ ಸಮಯಕ್ಕೆ  ಒಪ್ಪಿಕೊಳ್ಳು ವಂತಾಯಿತು. ಸದ್ಯಕ್ಕಂತೂ ನಾನು ಬದುಕುವ  ಅವಕಾಶ ಇದೆ. ತಂಗಿಯನ್ನು ಸಾಯಿಸದೆ ಬದುಕಿಸಿದ ಪುಣ್ಯದಿಂದ ನನ್ನ  ಸಾವು ಆಗದೇ ಇರಬಹುದು ಎಂಬ ಆಶಾಭಾವದಿಂದ. ತನ್ನನ್ನು ತಾನು ಸಮಾಧಾನ ಪಡಿಸಿಕೊಂಡನು. 

ನಾರಾಯಣಂ ದುಃಖ ವಿನಾಶನಂತಂ 
ಮಾಯವಿಹೀನಂ ಸಕಲಂ ಗುಣಙ್ಞಂ!
ಯಂ ಧ್ಯಾಯ ಮಾನಹ ಸುಗತಿಂ ವ್ರಜಂತಿ
ತಂ ವಾಸುದೇವಂ ಸತತಂ ನಮಾಮಿ !! 
***

ಕೃಷ್ಣನ ಐತಿಹಾಸಿಕ ಬದುಕು - ಒಂದು ಸ್ಥೂಲ ನೋಟ

ಕೃಷ್ಣನ ಕಾಲನಿರ್ಣಯದ ಕುರಿತಾಗಿ ಈ ಹಿಂದಿನ ಎಲ್ಲಾ ಲೇಖನ ಸರಣಿಗಳಲ್ಲಿ ವಿವಿಧ ಐತಿಹಾಸಿಕ, ಸಾಹಿತ್ಯಿಕ ಜ್ಯೋತಿಷ್ಯ ದಾಖಲೆಗಳನ್ನೂ ಅವಲೋಕಿಸಿದ ನಂತರ ಇದೀಗ ಕೃಷ್ಣನ ಐತಿಹಾಸಿಕ ಬದುಕು ಹೇಗಿತ್ತು ಎನ್ನುವುದು ನೋಡೋಣ. 

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣ ವಸುದೇವ-ದೇವಕಿಯರ ಎಂಟನೇ ಪುತ್ರ. ಕೃಷ್ಣನ ಜನನ ದಿನಾಂಕ ಕ್ರಿ.ಪೂ. 3228ರ  17-18 ಜುಲೈ. ಅಂದು ಶ್ರೀಮುಖನಾಮ ಸಂವತ್ಸರದ ಶ್ರಾವಣ ಬಹುಳ(ಕೃಷ್ಣ) ಅಷ್ಟಮಿ ರಾತ್ರಿ ಹನ್ನೆರಡು ಗಂಟೆಯ ಸಮಯ. ಬಾರ್ಹಸ್ಪತ್ಯ ರೀತ್ಯಾ ಪಾರ್ಥಿವ ನಾಮ ಸಂವತ್ಸರ. ರೋಹಿಣಿ ನಕ್ಷತ್ರ, (ಅಷ್ಟಮಿ ಜೂನ್ 17 ರಂದು ಸಂಜೆ ಕೊನೆಯಾಗಿದ್ದರೂ  ನವಮಿ ತಿಥಿ ಇದ್ದೂ  ಹುಟ್ಟಿದ ಸಮಯದಲ್ಲಿ ರೋಹಿಣಿ ನಕ್ಷತ್ರವಿತ್ತು) ಶುಕ್ರವಾರವಿತ್ತು. ಅಂದಿಗೆ ಜಗತ್ತು ಸೃಷ್ಟಿಯಾಗಿ 195,58,79,894 ವರ್ಷಗಳಾಗಿತ್ತು!!!

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣನ ಜನನವಾಗಿ ಸ್ವಲ್ಪ ಹೊತ್ತಿಗೇ ದೈವ ಸಂಕಲ್ಪ ಎಂಬಂತೆ ಕೃಷ್ಣನನ್ನು ವಸುದೇವ ಗೋಕುಲಕ್ಕೆ ಕರೆದೊಯ್ಯುತ್ತಾನೆ.  ಈತ ಬಾಲ್ಯ ಕಳೆದದ್ದು ಗೋಕುಲದಲ್ಲಿ. ಸಾಕು ತಂದೆ ತಾಯಿಯರಾದ ನಂದಗೋಪ ಮತ್ತು ಯಶೋದೆಯ ಮಡಿಲಲ್ಲಿ!! 

ವಿವಿಧ ಸ್ಥಳಗಳಲ್ಲಿ ಶ್ರೀ ಕೃಷ್ಣನ ಜೀವಿತಾವಧಿ

ಕೃಷ್ಣ ತನ್ನ ಜೀವನವನ್ನು 3 ಪ್ರಮುಖ ಭಾಗಗಳಲ್ಲಿ ವಿಂಗಡಿಸಬಹುದು,

ವೃಂದಾವನ  ಲೀಲೆ: 11 ವರ್ಷ 6 ತಿಂಗಳು (ಬೃಂದಾವನ/ಗೋಕುಲದಲ್ಲಿ ಬಾಲ್ಯದ ದಿನಗಳು)
ಮಥುರಾ ಲೀಲೆ: 10 ವರ್ಷ 6 ತಿಂಗಳು (ತನ್ನ ಮಾವ ಕಂಸನನ್ನು ಕೊಂದ ನಂತರ ಹದಿಹರೆಯದ ಜೀವನ)
ದ್ವಾರಕಾ ಲೀಲೆ: 105 ವರ್ಷ 3 ತಿಂಗಳು (ದ್ವಾರಕದಲ್ಲಿ ರಾಜ್ಯವನ್ನು ಸ್ಥಾಪಿಸಿದ ನಂತರದ ಜೀವನ)
ಕೃಷ್ಣ ಗೋಕುಲದಲ್ಲಿದ್ದಾಗಲೇ  ತನ್ನನ್ನು ಕೊಲ್ಲಲಿರುವ ಮಗು ಗೋಕುಲದಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು, ಆ ಶಿಶುವನ್ನು ಹತ್ಯೆಗೈಯಲು ಕಂಸ ನಾನಾ ಸಂಚು ರೂಪಿಸಿದ್ದ (ಈ ನಿಟ್ಟಿನಲ್ಲಿ ಬಂದವರೇ ಪೂತನಿ, ಶಕಟಾಸುರ, ಕಾಲಯವನ, ತೃಣಾವರ್ತ, ಬಕ,ಅಘ, ಅರಿಷ್ಟ, ಕೇಶಿ ಮುರ, ಜರಾಸಂಧ, ಪೌಂಡ್ರಕ )

ಬೃಂದಾವನ ಲೀಲೆಯ ಸಮಯದಲ್ಲೇ ಕೃಷ್ಣ ಮರದರೂಪದಲ್ಲಿದ್ದ ನಳಕುಬೇರ ಹಾಗೂ ಮಣಿಗ್ರೀವ ಎಂಬ ಶಾಪಗ್ರಸ್ಥ ಗಂಧರ್ವರಿಗೆ ಮೋಕ್ಷ ನೀಡಿದನು.(ಈ ಇಬ್ಬರೂ ಗಂಧರ್ವ ಕುಲಕ್ಕೆ ಸೇರಿದವರಾಗಿದ್ದು ಕಂಸನೋ ಇನ್ನಾರೋ ಅಣತಿಯಂತೆ ಆ ಪ್ರದೇಶದಲ್ಲಿ ಜೀತದಾಲಾಗಿ ದುಡಿಯುತ್ತಿರಬಹುದು, ಆ ಜೀತದಿಂದ ಬಾಲಕ ಕೃಷ್ಣ ಅವರನ್ನು ಮುಕ್ತಗೊಳಿಸಿದ್ದ)

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)

ಕೃಷ್ಣನಿಗೆ 7 ವರ್ಷ 2 ತಿಂಗಳು 10 ದಿನಗಳಾಗಿದ್ದ ವೇಳೆ ಗೋವರ್ಧನ ಗಿರಿ ಘಟನೆ ನಡೆದಿತ್ತು!!

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)

ಕ್ರಿ.ಪೂ 3222 ಆಗಸ್ಟ್ 28 ರ ರಾತ್ರಿ ಕೃಷ್ಣನು ಭೀಕರ ಮಳೆ ಹಾಗೂ ಬಿರುಗಾಳಿಗಳಿಂದ ದನಗಳನ್ನು ಮತ್ತು ಜನರನ್ನು ಗೋವರ್ಧನ ಗಿರಿ ಗುಹೆಯಲ್ಲಿ ಅಡಗಿಸಿಟ್ಟು ರಕ್ಷಿಸಿದ್ದನು.

ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)

ಬೃಂದಾವನ ಲೀಲೆಯ ಕಡೆಯಲ್ಲಿ ಕೃಷ್ಣನು ಮಥುರಾವನ್ನು ಪ್ರವೇಶಿಸಲು ನಿರ್ಧರಿಸಿದನು ಮತ್ತು ಅವನ ಮಾವ ಕಂಸ ನಡೆಸುತ್ತಿದ್ದ ದುರಾಡಳಿತವನ್ನು ಕೊನೆಗೊಳಿಸಿದನು

ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)

ಮಥುರ ಲೀಲೆಯ ಸಮಯದಲ್ಲಿ ಕ್ರಿ,ಪೂ. 3218ರ ಡಿಸೆಂಬರ್ 14 ಕ್ಕೆ ಶಿವರಾತ್ರಿಯ ದಿನ ಕೃಷ್ಣನು ಕಂಸನ ವಧೆ ಮಾಡಿದ್ದನು, (ಆ ದಿನಗಳಲ್ಲಿ ಶಿವರಾತ್ರಿ ಈಗಿನ ಕಾಲಮಾನಕ್ಕೆ ಹೋಲಿಸಿದರೆ  2-3 ತಿಂಗಳು ಮುಂಚಿತವಾಗಿ ಸಂಭವಿಸುತ್ತಿತ್ತು. ಕಳೆದ 5000+ ವರ್ಷಗಳಲ್ಲಿ ಸಂಕ್ರಾಂತಿ ಹಾಗೂ ವಿಷು ಕಾಲಮಾನದ ಬದಲಾವಣೆಯ ಕಾರಣ ಈಗ ಶಿವರಾತ್ರಿ ಫೆಬ್ರವರಿ ಇಲ್ಲವೆ ಮಾರ್ಚ್ ಗೆ ಸಂಭವಿಸುತ್ತದೆ.) ಕಂಸನನ್ನು ಕೊಂದ ನಂತರ ಕಂಸನ ತಂದೆ ಉಗ್ರಸೇನನನ್ನು ಮಥುರಾದ ರಾಜನನ್ನಾಗಿ ಮಾಡಿದ್ದನು ಕಂಸ ವಧೆ ಮಾಡುವಾಗ ಕೃಷ್ಣನಿಗೆ 11 ವರ್ಷ 6 ತಿಂಗಳಾಗಿತ್ತು

ದ್ವಾರಕೆಯತ್ತ ಗಮನ (ಕ್ರಿ.ಪೂ 3207 ಜೂನ್)

ಅದಾಗಿ ಸುಮಾರು ಹತ್ತು ವರ್ಷಗಳ ಕಾಲ ಮಥುರೆಯಲ್ಲಿದ್ದ ಕೃಷ್ಣ ಕ್ರಿ.ಪೂ 3207 ಜೂನ್ ನಲ್ಲಿ  ಮಥುರೆಯನ್ನು ತೊರೆದು ಪಶ್ಚಿಮ ಸಮುದ್ರ ತೀರದಲ್ಲಿ ದ್ವಾರಕ ಎಂಬ ಹೊಸ ನಗರವನ್ನು ರೂಪಿಸಲು ತಯಾರಾದ. ಅದಕ್ಕೆ ಕಾರಣ ಹೀಗಿದೆ- 

ಮಗಧ ದೊರೆ ಜರಾಸಂಧ 17 ಬಾರಿ ಮಥುರೆಯ ಮೇಲೆ ಮೇಲೆ ದಾಳಿ ಮಾಡಿದ ಅಲ್ಲದೆ ಇನ್ನೂ ಅನೇಕ ರಾಜರು ಮಥುರೆಯ ಆಕ್ರಮಣಕ್ಕೆ ಮುಂದಾಗಿದ್ದರು.ಪರಿಣಾಮ ಕೃಷ್ಣ  ತನ್ನ ಯಾದವ ಪರಿವಾರದ ರಕ್ಷಣೆಗಾಗಿ ಯುದ್ಧವನ್ನು ಪರಿತ್ಯಜಿಸಿದನು ಹಾಗೂ ತನ್ನ ರಾಜಧಾನಿಯನ್ನು  ಮಥುರೆಯ ಬದಲು ದ್ವಾರಕೆಗೆ ಬದಲಿಸಿದನು. ಅಲ್ಲಿ ಆತ 12 ಯೋಜನ ಜಾಗದಲ್ಲಿ ದ್ವಾರಕಾ ನಗರವನ್ನು ನಿರ್ಮಿಸಿದ್ದನು,  ದ್ವಾರಕಾ ಅಥವಾ ದ್ವಾರವತಿ ಎಂದು ಕರೆಯಲಾಗುತ್ತಿದ್ದ ಈ ನಗರ ಯಾದವರಿಗೆ ಹೊಸ ಜೀವನ ಕಟ್ಟಿಕೊಟ್ಟಿತು.

ದ್ವಾರಕೆಯಲ್ಲಿ ಕೃಷ್ಣ, ಅವನ ಪತ್ನಿಯರು, ಮಕ್ಕಳು

ಕೃಷ್ಣ ತನ್ನ ಜೀವನದ ಬಹುಪಾಲು ಅವಧು ಕಳೆದದ್ದು ದ್ವಾರಕೆಯಲ್ಲಿ. ದ್ವಾರಕೆಗೆ ಬಂದು ನೆಲೆಸಿದ್ದ ಕೃಷ್ಣನಿಗೆ  16,108 ಪತ್ನಿಯರೆಂದು  ಹೇಳಲಾಗಿದೆ, ಆದರೆ ಅದರಲ್ಲಿ ಆದರೆ 8 ಜನ ಪತ್ನಿಯರು ಮಾತ್ರವೇ ಮುಖ್ಯವಾಗಿರುತ್ತಾರೆ. ಅವರೆಂದರೆ
ವಿದರ್ಭ ರಾಜ ಭೀಷ್ಮಕನ ಮಗಳು ರುಕ್ಮಿಣಿ 
ಸತ್ರಾಜಿತನ ಮಗಳು ಸತ್ಯಭಾಮೆ
ಜಾಂಬವನ ಮಗಳು ಜಾಂಬವತಿ
ಸೂರ್ಯದೇವನ ಮಗಳಾದ ಕಳಿಂದಿ
ಕೋಸಲ ರಾಜ ನಗ್ನಜಿತನ ಮಗಳು ನಗ್ನಜಿತಿ 
ಉಜೈಯನಿಯ ಪ್ರಖ್ಯಾತ ರಾಜರಾದ ವಿಂದ ಮತ್ತು ಅನುವಿಂದರ ಮುದ್ದಿನ ಹಾಗೂ ಏಕೈಕ ಸಹೋದರಿ ಮಿತ್ರಾವಿಂದ 
ದ್ರಿಷ್ಟಿಕೇತು ಮತ್ತು ಶ್ರುತಕೀರ್ತಿ ದಂಪತಿಗಳ ಮಗಳಾದ  ಭದ್ರ
ಮದ್ರಾ ರಾಜ್ಯದ ಬೃಹತ್ಸೇನನ ಮಗಳು ಲಕ್ಷ್ಮಣ 

ಈ ಎಲ್ಲಾ ರಾಜರು, ಸಾಮಂತರ ಪುತ್ರಿಯರನ್ನು ಕೃಷ್ಣ ವಿವಾಹವಾಗುವುದರ ಮೂಲಕ ದ್ವಾರಕೆಯ ಸುತ್ತಮುತ್ತಲ ಹ್ಗಡಿಯನ್ನು ಭದ್ರಪಡಿಸಿದ್ದಲ್ಲದೆ.ದ್ವಾರಕೆಗೆ ಶತ್ರುಗಳಿಂದಾಗಬಹುದಾದ ಹಾನಿಯನ್ನೂತನ್ನ ರಾಜನೀತಿ ಚಾತುರ್ಯದಿಂದ  ತಪ್ಪಿಸಿದ್ದ!!!

ಇದಲ್ಲದೆ ನರಕ ಎಂಬ ಅಸುರ(ರಾಜ?) ಬೇರೆ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿದ್ದಾಗ ಕದ್ದು ತಂದು ಬಂಧಿಸಿಟ್ಟಿದ್ದ  16,100 ಮಹಿಳೆಯರನ್ನು ಕೃಷ್ಣ ಬಂಧನದಿಂದ ಬಿಡಿಸಿದ್ದನು, ಈ ವೇಳೆ ಇಷ್ಟು ದಿನ ನರಕನ ಆಶ್ರಯದಲ್ಲಿದ್ದ ಅವರನ್ನು ಬೇರಾರೂ ವಿವಾಹವಾಗದೆ ಹೋಗಲು ಕೃಷ್ಣ ಎಲ್ಲರನ್ನೂ ತಾನೇ ವಿವಾಹವಾದನೆಂದು ಹೇಳಲಾಗುತ್ತದೆ, 

ಕೃಷ್ಣನಿಗೆ ಅಷ್ಟ ಪತ್ನಿಯರಲ್ಲಿ ಪ್ರತೊಬ್ಬರಿಗೆ ಹತ್ತು ಮಂದಿ ಒಟ್ಟೂ ಎಂಬತ್ತು ಮಂದಿ ಮಕ್ಕಳಿದ್ದರು ಎಂದು ಹೇಳಲಾಗಿದೆ. ಆದರೆ ಅವರೆಲ್ಲರ ಪೈಕಿ ಕೃಷ್ಣ ಹಾಗೂ ರುಕ್ಮಿಣಿಯ ಮಗ ಪ್ರದ್ಯುಮ್ನ ಅತ್ಯಂತ ಪ್ರಮುಖನಾಗಿದ್ದಾನೆ. ಜಾಂಬವತಿಗೆ ಹುಟ್ಟಿದ ಸಾಂಬ ಕೃಷ್ಣನ ಇನ್ನೋರ್ವ ಪುತ್ರ. 

ಕೃಷ್ಣನ ಮುಂದಿನ ತಲೆಮಾರುಗಳಿಗೆ ಕೊಂಡಿಯಾಗಿದ್ದು ಪ್ರದ್ಯುಮ್ನ ಮಾತ್ರ!!

ಪ್ರದ್ಯುಮ್ನ ಹಾಗೂ ರುಕ್ಮಿಯ ಮಗಳು ರುಕ್ಮವತಿ ವಿವಾಹವಾಗಿ ಹುಟ್ಟಿದವ ಅನಿರುದ್ದ!!

ಅನಿರುದ್ದ ನೋಡಲು ಆತನ ಅಜ್ಜ ಕೃಷ್ಣನ ಹಾಗೇ ಇದ್ದವನು. ಅದಕ್ಕಾಗಿ ಆತನನ್ನು  ಕೃಷ್ಣಾಅಂಶ ಸಂಭೂತ ಎಂದು ಕರೆಯಲಾಗುತ್ತದೆ,  ಅನಿರುದ್ದ ಬಾಣಾಸುರನ ಮಗಳು ಉಷೆಯೊಡನೆ ವಿವಾಹವಾಗುತ್ತಾನೆ, ಬಾಣಾಸುರನೆಂದರೆ ಆತ ಬಲಿಚಕ್ರವರ್ತಿಯ ಮಗ. ಆತ ಅನಿರುದ್ದ ತನ್ನ ಮಗಳನ್ನು ವಿವಾಹವಾದ ಕಾರಣ ಕೋಪಗೊಂಡು ಅವನನ್ನು ಸೆರೆಯಲ್ಲಿಡುತ್ತಾನೆ. ಆಗ ಅಜ್ಜ ಕೃಷ್ಣ ಹಾಗೂ ಆತನ ಸೋದರ ಬಲರಾಮ ಬಾಣನೊಡನೆ ಹೋರಾಡಿ ಮೊಮ್ಮಗನನ್ನು ಸೆರೆಯಿಂದ ಮುಕ್ತಗೊಳಿಸುತ್ತಾರೆ!!

ಮುಂದೆ ಯಾದವರಲ್ಲಿ ಅವರವರೇ ಜಗಳವಾಡಿಕೊಂಡು ಸಾವನ್ನಪ್ಪಿದ್ದ ವೇಳೆ ಉಳಿದ ಯಾದವರೊಡನೆ ಕೃಷ್ಣನ ಪುತ್ರ ಪ್ರದ್ಯುಮ್ನ ದೇಹತ್ಯಾಗ ಮಾಡುತ್ತಾನೆ. ಆದರೆ ಹಾಗೆ ಕಲಹವಾದಾಗ ಬದುಕುಳಿದ ಕೆಲವೇ ಕೆಲವು ಯಾದವರ ಪೈಕಿ ಕೃಷ್ಣನ ಮರಿ ಮಗ ಪ್ರದ್ಯುಮ್ನನ ಮೊಮ್ಮಗ, ಅನಿರುದ್ದನ ಮಗ ವಜ್ರನಾಭ ಸಹ ಒಬ್ಬನಾಗಿದ್ದ. ಇದೇ ವಜ್ರನಾಭ ದ್ವಾರಕೆಯಲ್ಲಿ ಮೊಟ್ಟ ಮೊದಲಿಗೆ ಶ್ರೀಕೃಷ್ಣನ ದೇವಾಲಯ ನಿರ್ಮಾಣ ಮಾಡಿದ್ದ!!

ಕೃಷ್ಣ-ಬಲರಾಮರ ಸೋದರಿ ಸುಭದ್ರೆ

ಕೃಷ್ಣನ ತಂದೆ ವಸುದೇವನ ಮೊದಲ ಪತ್ನಿ ರೋಹಿಣಿಯ ಮಗಳು ಸುಭದ್ರಾ ಅಥವಾ ಸುಭದ್ರೆ. ಈಕೆ ಕೃಷ್ಣ ಹಾಗೂ ಬಲರಾಮರಿಗೆ ಸೋದರಿಯಾಗಿದ್ದು ಇವಳು ಅರ್ಜುನನ್ನು ಪ್ರೀತಿಸಿ ಕೃಷ್ಣ ಸಹಕಾರದೊಡನೆ ವಿವಾಹವಾಗುತ್ತಾಳೆ. ಈಕೆಯ ಪುತ್ರನೇ ಅಭಿಮನ್ಯು, ಹಾಗೆಯೇ ಕಲಿಯುಗದ ಪ್ರಾರಂಭದಲ್ಲಿ ಮಹಾಭಾರತದ ಪಾಂಡವರ ಕುಲದಲ್ಲಿ ಬದುಕಿದ್ದ ಪರೀಕ್ಷಿತ ಮಹಾರಾಜನ ಅಜ್ಜಿ ಇದೇ ಸುಭದ್ರೆ.

ಪರೀಕ್ಷಿತನ ಪುತ್ರ ಜನಮೇಜಯ ಅರ್ಜುನನಿಂದ ಮೂರನೇ ತಲೆಮಾರಿನವನಾಗಿದ್ದಾನೆ. ಈತ ಹಾಗೂ ಪರೀಕ್ಷಿತ ಮಹಾರಾಜನ ಹೆಸರು ವೇದಗಳಲ್ಲಿ ಕಾಣಸಿಗುತ್ತದೆ,.

ಕೃಷ್ಣ ಹಾಗೂ ಪಾಂಡವರು,

ಪಾಂಡವರು ಕೃಷ್ಣನ ತಂದೆ ವಸುದೇವನ ತಂಗಿ ಕುಂತಿಯ ಮಕ್ಕಳು. ಅಂದರೆ ಪಾಂಡವರಿಗೆ ಕೃಷ್ಣ ಸಂಬಂಧದಲ್ಲಿ ಖಾಸಾ ಸೋದರಮಾವನಾಗುತ್ತಾನೆ

ಜರಾಸಂಧ ವಧೆ (ಕ್ರಿ.ಪೂ 3154 ಸೆಪ್ಟೆಂಬರ್)

ಕೃಷ್ಣನ ಅಣತಿಯಂತೆ ಮಗಧ ದೇಶದ ಅರಸ. ಬೃಹದ್ರಥನ ಪುತ್ರ, ಯಾದವರ ಶತ್ರುವಾಗಿದ್ದ ಜರಾಸಂಧನನ್ನು ವಧಿಸಿದ್ದ. ಭೀಮ ಹಾಗೂ ಜರಾಸಂಧನ ನಡುವೆ ದ್ವಂದ್ವ ಯುದ್ಧ ಕ್ರಿ.ಪೂ 3154 ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿ  14 ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ನಡೆದಿತ್ತು!!!

ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)

ಕ್ರಿ.ಪೂ. 3153ರಲ್ಲಿ ಕೃಷ್ಣನಿಗೆ 75 ವರ್ಷ 8 ತಿಂಗಳವಾಗಿದ್ದ ಸಮಯ ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಸಿದ್ದರು, ಅಂದು ಚೈತ್ರ ಪೂರ್ಣಿಮೆಯ ದಿನ ಯಾಗದ ವೇಳೆ  ದಮಘೋಷ ಎಂಬ ಛೇದಿ ರಾಜ್ಯದ ರಾಜನ ಮಗ ಶಿಶುಪಾಲನನ್ನು ಎಲ್ಲಾ ರಾಜರ ಸಮ್ಮುಖದಲ್ಲೇ ಕೊಂದು ಹಾಕಿದ್ದನು!!!

ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)

ವಿಶೇಷವೆಂದರೆ ಶಿಶುಪಾಲ ಕೃಷ್ಣನ ಸೋದರತ್ತೆಯ ಮಗ. ಶಿಶುಪಾಲನ ತಾಯಿ ಶ್ರುತಕೀರ್ತಿ ಹಾಗೂ  ಪಾಂಡವರ ತಾಯಿ ಕುಂತಿ ಕೃಷ್ಣನ ಜನ್ಮದಾತ ವಸುದೇವನ ಸ್ವಂತ ತಂಗಿಯರು

ದ್ಯೂತದಲ್ಲಿ ಪಾಂಡವರ ಸೋಲು(ಕ್ರಿ.ಪೂ 3153 ರ ಮೇ 2)

ಕ್ರಿ.ಪೂ 3153 ರ ಮೇ 2 ರಂದು ಪಾಂಡವರು ತಮ್ಮ ದಾಯಾದಿ ಕೌರವರೆದುರು ದ್ಯೂತವಾಡಿ ಎಲ್ಲವನ್ನೂ ಕಳೆದುಕೊಂಡರು ಮತ್ತು ವನವಾಸಕ್ಕೆ ಹೊರಟರು. ಅವರು ಹೊರಡುವ ಮುನ್ನ ಶ್ರೀ ಕೃಷ್ಣ ಅವರನ್ನು ಭೇಟಿಯಾಗಿದ್ದನು. ಯುಧಿಷ್ಟಿರ(ಧರ್ಮರಾಯ) ಹಾಗೂ  ಭೀಮನ ಆಶೀರ್ವಾದ ಪಡೆದ ಕೃಷ್ಣ ಅರ್ಜುನನನ್ನು ತಬ್ಬಿ ಸಂತೈಸಿದ್ದನು, ಹಾಗೆಯೇ ನಕುಲ ಹಾಗೂ ಸಹದೇವರಿಗೆ  ಆಶೀರ್ವದಿಸಿದನು.  ಈ ಘಟನೆಯಿಂದ ಭೀಮ ಹಾಗೂ ಯುಧಿಷ್ಠಿರರು ಕೃಷ್ನನಿಗಿಂತ ವಯಸ್ಸಿನಲ್ಲಿ ಹಿರಿಯರು ಎನ್ನುವುದು ನಮಗೆ ಅರಿವಾಗುತ್ತದೆ!!

ಅರ್ಜುನ ಕೃಷ್ಣನ ಸಮಾನ ವಯಸ್ಸಿನವನಾಗಿದ್ದರೆ ನಕುಲ ಹಾಗೂ ಸಹದೇವ ಅವನಿಗಿಂತ ಸಣ್ಣವರಿದ್ದರು

ಪಾಂಡವರ ವಮವಾಸ, ಅಜ್ಞಾತವಾಸ ಅಂತ್ಯ ಉತ್ತರ ಕುಮಾರನಿಗೆ ಅರ್ಜುನನ  ಮೂಲ ಸ್ವರೂಪ ದರ್ಶನ (ಕ್ರಿ.ಪೂ. 3140ರ ಮೇ 7)

ಕ್ರಿ.ಪೂ. 3140ರ ಮೇ 7(ಆಷಾಢ ಶುಕ್ಲ ಸಪ್ತಮಿ) ಅಂದು ಪಾಂಡವರು ತಮ್ಮ 12  ವರ್ಷಗಳ ವನವಾಸ ಹಾಗೂ ಒಂದು  ವರ್ಷದ ಅಜ್ಞಾತವಾಸವನ್ನು ಕೊನೆಗೊಳಿಸಿದ್ದರು, ಅಂದು ಅರ್ಜುನನು ತನ್ನ ಮೂಲ ರೂಪವನ್ನು ಉತ್ತರ ಕುಮಾರನಿಗೆ ಬಹಿರಂಗಪಡಿಸಿದನು. ಅವರು ಕ್ರಿ.ಪೂ. 3140ರ ಮೇ 15ರಂದು (ಆಷಾಢ ಪೂರ್ಣಿಮೆ) ವಿರಾಟ ರಾಜನ ಮುಂದೆ ಕಾಣಿಸಿಕೊಂಡರು.

ಇದಾಗಿ 6 ತಿಂಗಳ ನಂತರ, ಕೃಷ್ಣನ ಸಂಧಾನ ಪ್ರಯತ್ನಗಳು  ವಿಫಲವಾದಾಗ, ಕುರುಕ್ಷೇತ್ರ ಯುದ್ಧ ಜರುಗಿತ್ತು

ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!

ಕುರುಕ್ಷೇತ್ರ ಯುದ್ಧವು ಕ್ರಿ.ಪೂ 3140 ರ ನವೆಂಬರ್ ನಲ್ಲಿ ಪ್ರಾರಂಭವಾಗಿತ್ತು. ಯುದ್ಧದ ಮೊದಲ ದಿನ ಕೃಷ್ಣ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ್ದ ದಿನವಾಗಿದ್ದು ಅಂದು ಕೃಷ್ಣನಿಗೆ  89 ವರ್ಷ ಮತ್ತು ಅರ್ಜುನನಿಗೆ 88 ವರ್ಷ.ವಯಸ್ಸು.

ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!

ಯುದ್ಧದ 10 ನೇ ದಿನದಂದು ಭೀಷ್ಮನನ್ನು ಅರ್ಜುನನು ಶರಶಯ್ಯೆ (ಬಾಣಗಳಿಂದ ಮಾಡಿದ್ದ ಹಾಸಿಗೆ) ಮೇಲೆ ಮಲಗಿಸಿದನು. ಅದಾದ 3 ದಿನಗಳ ನಂತರ, ದ್ರೋಣಾಚಾರ್ಯರು ಯೋಜಿಸಿದ ಪದ್ಮ ವ್ಯೂನಲ್ಲಿ ಅರ್ಜುನನ ಮಗ ಅಭಿಮನ್ಯುನನ್ನು ಕೊಲ್ಲಲಾಯಿತು. ಆ ನಂತರ ಕೃಷ್ಣ ಅರ್ಜುನ ಸೇರಿ ಕುರು, ಪಾಡವರ ಗುರುವಾಗಿದ್ದ, ಮಹಾನ್‌ ಮುನಿಯಾದ ಭಾರದ್ವಾಜ ರ ಮಗ. ದ್ರೋಣಾಚಾರ್ಯನನ್ನು ತಂತ್ರದಿಂದ ಮಣಿಸುತ್ತಾನೆ, 

ಇದಾದ ನಂತರ ಸೇನಾಪತಿಯಾದ ಕುಂತಿಯ ಕಾನೀನ ಪುತ್ರ ಕರ್ಣನನ್ನೂ ಸಹ ಕೃಷ್ಣನ ಸಲಹೆ ಮೇರೆಗೆ ಆತ ನಿರಾಯುಧನಾಗಿದ್ದಾಗಲೇ ಅರ್ಜುನ ಕೊಲ್ಲುತ್ತಾನೆ. ದುರ್ಯೋಧನನ ಮರಣದೊಂದಿಗೆ ಕುರುಕ್ಷೇತ್ರ ಯುದ್ಧವು 18 ದಿನಗಳಲ್ಲಿ ಕೊನೆಗೊಂಡಿತು.

ಭೀಷ್ಮನಿಂದ ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶ( ಕ್ರಿ.ಪೂ. 3140ರ ಡಿಸೆಂಬರ್ 5) 

.ಪೂ. 3140ರ ಡಿಸೆಂಬರ್ 5 (ಮಾಘ ಶುಕ್ಲ ಏಕಾದಶಿ)ರಂದು ಭೀಷ್ಮ ಯುಧಿಷ್ಟಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸುತ್ತಾನೆ, ಹಾಗೂ ತಾನು ದೇಹತ್ಯಾಗ ಮಾಡುತ್ತಾನೆ.

ಎರಡು ತಿಂಗಳ ನಂತರ , ಕ್ರಿ.ಪೂ 3139 ರ ಫೆಬ್ರವರಿ 5ರಂದು (ಚೈತ್ರ ಪೂರ್ಣಿಮೆ) ಯುಧಿಷ್ಟಿರ ಅಶ್ವಮೇಧ ಯಾಗವನ್ನು ಪ್ರಾರಂಭಿಸುತ್ತಾನೆ.

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)

ಅದಾಗಿ 37 ವರ್ಷಗಳ ನಂತರ, ಕ್ರಿ.ಪೂ 3102ರ ಫೆಬ್ರವರಿ 17ರಂದು ಸಂಜೆ ಬೇಟೆಗಾರನೊಬ್ಬನ ಬಾಣ ಕೃಷ್ಣನ ಕಾಲಿಗೆ ತಗುಲಿ ಗಾಯವಾಗುತ್ತದೆ. ಅದಾಗಿ ಮರುದಿನ 18 ಫೆಬ್ರವರಿ ನಸುಕಿನ ಜಾವ  02 ಗಂಟೆ 27 ನಿಮಿಷ 30 ಸೆಕೆಂಡ್ ಗೆ ಕೃಷ್ಣ ತನ್ನ ದೇಹತ್ಯಾಗ ಮಾಡುತ್ತಾನೆ, ಆ ದಿನ ಸೂರ್ಯೋದಯವು ಶುಕ್ರವಾರ, ಅಶ್ವಿನಿ ನಕ್ಷತ್ರ ಹಾಗೂ  ತಿಥಿ (ಚಂದ್ರನ ದಿನ) ಶುದ್ದ ಪಾಡ್ಯಮಿ(ಶುಕ್ಲ ಪ್ರತಿಪದ್ ಅಥವಾ ಚಂದ್ರ ಮಾಸದ ಮೊದಲ ದಿನ). ಪ್ರಮಾದಿ ನಾಮ ಸಂವತ್ಸರದ ಮೊದಲ ದಿನ!!!   

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)

ಹೀಗೆ ಒಟ್ತಾರೆ ಕೃಷ್ಣ ಈ ಭೂಮಿಯಲ್ಲಿ 126 ವರ್ಷ 8 ತಿಂಗಳ ಕಾಲ ಬದುಕಿದ್ದನು, 

ಯಾದವರ ಕಲಹ, ದ್ವಾರಕೆಯ ಮುಳುಗಡೆ(ಕ್ರಿ.ಪೂ. 3102)

ಕೃಷ್ಣನ ಅವಸಾನದ ನಂತರ  ವಾದವಿವಾದಗಳಿಂದ ಅವರವರ ನಡುವೆಯೇ ಕದನ ನಡೆದು ಪ್ರಮುಖ ಯಾದವ ಮುಖಂಡರು ನಿಧನಹೊಂದಿದರು, ಅರ್ಜುನನು ದ್ವಾರಕಾ ನಗರಕ್ಕೆ ಹೋಗಿ ಕೃಷ್ಣನ ಮೊಮ್ಮಕ್ಕಳು ಹಾಗೂ ಯಾದವರ ಪತ್ನಿಯರನ್ನು ಸುರಕ್ಷಿತತೆಗಾಗಿ ಹಸ್ತಿನಾಪುರಕ್ಕೆ ಕರೆತಂದನು. ಅರ್ಜುನನು ದ್ವಾರಕಾ ನಗರವನ್ನು ಬಿಟ್ಟಬಳಿಕ ಕೃಷ್ಣ ಕ್ರಿ.ಪೂ. 3102ರಲ್ಲಿ ಅವಸಾನ ಹೊಂದಿದ ಬಳಿಕ ದ್ವಾರಕಾ ಕ್ರಿ.ಪೂ 3031 ರಲ್ಲಿ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಯಿತು, ಕೃಷ್ಣನ  ಮೊಮ್ಮಗ ವಜ್ರನಾಭನನ್ನು ಹೊರತುಪಡಿಸಿ ಎಲ್ಲರೂ ಕಾಲವಶರಾದರು,
**

No comments:

Post a Comment