SEARCH HERE

Sunday, 11 April 2021

ಮಾನವರ ದೇಹದಲ್ಲಿ ನವಗ್ರಹಗಳ ಪಾತ್ರ

ಮಾನವರ ದೇಹದಲ್ಲಿ ನವಗ್ರಹಗಳ ಪಾತ್ರ

ಮಾನವನ ಆಯುಸ್ಸು 120 ವರ್ಷ.ಇದನ್ನು

ಕೇತು 7 ವರ್ಷ,

ಶುಕ್ರ 20 ವರ್ಷ,.

ರವಿ  6 ವರ್ಷ,

ಚಂದ್ರ 10 ವರ್ಷ,

ಕುಜ 7 ವರ್ಷ,

ರಾಹು 18 ವರ್ಷ,

ಗುರು 16 ವರ್ಷ,

ಶನಿ 19 ವರ್ಷ,

ಬುಧ 17ವರ್ಷ, ಅಂದರೆ-

7+20+6+10+7+18+16+19+17

= 120 ವರ್ಷಗಳಾಗಿ ವಿಂಗಡನೆ ಮಾಡಲಾಗಿದೆ.


ಇಲ್ಲಿ ತೋರಿಸಿದ ಗ್ರಹಗಳ ಬದಲಾವಣೆಯ ಆಧಾರದಲ್ಲಿ ಮಾನವನ ಬೆಳವಣಿಗೆಗಳು ವೆತ್ಯಾಸವಾಗುತ್ತದೆ.


 ಆದಿತ್ಯಾದಿ ನವಗ್ರಹರ ರಷ್ಮಿ ಶಕ್ತಿಗಳೇ ಮಾನವಾದಿ ಜೀವರಾಶಿಗಳ ಒಳಗಿರುವುದು. 


ರವಿಯು ಶರೀರವನ್ನು ಸೂಚಿಸುತ್ತಾನೆ. 

ಪರಾಕ್ರಮಾದಿ ಗುಣಗಳನ್ನು ರವಿ ಕುಜರು ಶರೀರದೊಳಗೆ ಸೃಷ್ಟಿಸುತ್ತಾರೆ. 


ತಾಳ್ಮೆ,ಸೌಂದರ್ಯಗಳಿಗೆ ಚಂದ್ರ ಶುಕ್ರರು ಕಾರಣರು. 

ಮನೋಬಲಕ್ಕೆ ಚಂದ್ರನೇ ಕಾರಣ. ಜ್ಞಾನವನ್ನು ನೀಡುವವನು ಗುರುವಾದರೆ, ಬುದ್ಧಿ ಚತುರತೆಗಳಿಗೆ ಕಾರಣನು ಬುಧ.ಶನಿಯು ದೇಹದ ಎಲುಬು (ಕಾಂಕ್ರಿಟ್ ಕಂಬದೊಳಗಿನ ಕಬ್ಬಿಣದ ಸರಳುಗಳಂತೆ) ಕಾರಕನು.ಯಾವಾಗ ಎಲುಬುಗಳು ಕಳಚುತ್ತದೋ ಆಗ ಮೃತ್ಯುವಾಗುತ್ತದೆ. 


ಅಂದರೆ ಶನಿಯು ಮರಣ ಕಾರಕನೂ ಆಗುತ್ತಾನೆ. 

ಅಲ್ಲದೆ ಪೂರ್ವಾಪರಗಳ ಮುತ್ಸದಿತನವನ್ನೂ ನೀಡುವವನು ಶನಿ. ಇನ್ನು ರಾಹು ಕೇತುಗಳು ಸಂಕರ್ಷಣಾ ಶಕ್ತಿಗಳು. 


ಅಂದರೆ ಉತ್ಸಾಹ ಮತ್ತು ನಿರುತ್ಸಾಹಗಳನ್ನು ನೀಡುವವರು. ಉದಾ: ಜಾತಕದಲ್ಲಿ ರವಿ ಕುಜರು ನಿರ್ಬಲರಾಗಿದ್ದು ರಾಹು ಪರಾಕ್ರಮ ಭಾಗದಲ್ಲಿ ಬಲಿಷ್ಟನಾಗಿದ್ದರೆ ಅತಿಯಾದ ಪರಾಕ್ರಮದ ಉತ್ಸಾಹ ಉಂಟಾಗುತ್ತದೆ. 


ಆದರೆ ಸಾಧಿಸಲು ಅಸಾಧ್ಯವಾದಾಗ ತಕ್ಷಣ ಸಂಪೂರ್ಣ ನಿರುತ್ಸಾಹಿಯಾಗುತ್ತಾನೆ. 

ಇಲ್ಲಿ ಮುತ್ಸದಿ ಶನಿಯೂ ದುರ್ಬಲನಾಗಿದ್ದರೆ ಪರಾಕ್ರಮ ಮಾಡಲು ಹೋಗಿ ಕೈಕಾಲು ಮುರಿದುಕೊಳ್ಳುವುದೋ ಅಥವಾ ಇನ್ನಾವುದೋ ಅನಾಹುತ ವಾಗಬಹುದು

ಅದಕ್ಕಾಗಿ ಜ್ಯೋತಿಷ್ಯರಿಂದ ಸಲಹೆ ಪಡೆಯಬೇಕು ಎನ್ನುವುದು. ಜ್ಯೋತಿಷ್ಯರಾದವರಿಗೆ ಈ ಪರಿಜ್ಞಾನ ಇರಲೇ ಬೇಕು. 

ಹೀಗೇ ಒಂದೊಂದು ಗ್ರಹಗಳು ಒಂದೊಂದು ಬಲವನ್ನು ನೀಡುತ್ತಾರೆ. 


ಈ ಗ್ರಹರ ಸಂಧಿಕಾಲದಲ್ಲಿ ಆಸಕ್ತಿಗಳ ಬದಲಾವಣೆಯೂ ಆಗುತ್ತದೆ. ಇಲ್ಲಿ ಶುಕ್ರಾದಿತ್ಯ, ಕುಜ ರಾಹು, ರಾಹು ಬೃಹಸ್ಪತಿ ಸಂಧಿಗಳ ಕಾಲ ಅಪಾಯಕಾರಿ.ಇದು ಮನುಷ್ಯನ mentality ಬದಲಾಗುವ ಕಾಲವಿದು. 


ಬೇರೆ ಗ್ರಹರಲ್ಲೂ ಇದೇರೀತಿ ಇದ್ದರೂ ಅದು ಅಪಾಯ ಕಾರಿಯಾಗುವುದಿಲ್ಲ. ಹಾಗಾಗಿ ಇದಕ್ಕೆ ಪುರಾತನರು ಸಂಧಿ ಶಾಂತಿ ಹೋಮ ಪರಿಹಾರಗಳನ್ನು ತಿಳಿಸಿದ್ದಾರೆ. ಇನ್ನು ಆಹಾರ ನಿಯಮಗಳಿಂದಲೂ ಸಾಧ್ಯವಿದ್ದರೆ  ನಿಯಂತ್ರಿಸಬಹುದು. 


ಯಾಕೆಂದರೆ ಗ್ರಹರ ರಷ್ಮಿಗಳು vitamin, protein ಗಳಿಗೂ ಕಾರಕವಾಗುತ್ತದೆ. ಯಾವಾಗ ಈ ಪೋಷಕಾಂಶಗಳ ಕೊರತೆಗಳುಂಟಾಗುತ್ತದೋ ಆಗ ರೋಗೋತ್ಪತ್ತಿ, ಮರಣಾದಿಗಳು ಸಂಭವಿಸುತ್ತದೆ. 


ಜಗತ್ತಿನ ಪ್ರತಿಯೊಂದು ನಾವು ತಿನ್ನುವ ಆಹಾರಗಳಿಗೆ ಗ್ರಹರ ಕಾರಕತ್ವ ಇರುತ್ತದೆ. ಉದಾ: ಕೆಲವರು ಹೇಳುವ ಮಾತುಗಳನ್ನು ನೀವು ಕೇಳಿರಬಹುದು. ' ಮೊದಲು ನನಗೆ ಸಿಹಿ ಎಂದರೆ ಪಂಚಪ್ರಾಣ.


ಈಗ ಸಿಹಿಯೇ ಇಷ್ಟವಿಲ್ಲ. ಈಗ ಖಾರವೇ ಇಷ್ಟ, ಆ ತರಕಾರಿ ನನಗೆ ತುಂಬಾ ಇಷ್ಟವಿತ್ತು ಈಗ ಅದರ ವಾಸನೆ ಬಂದರೂ ಇಷ್ಟವಾಗದು ಎಂಬಿತ್ಯಾದಿ ವಿಚಾರಗಳನ್ನು ಹೇಳುತ್ತಾರೆ.ಇದೆಲ್ಲಾ ದೇಹದ ಬೆಳವಣಿಗೆಯ ಫಲಗಳು.


ಅಂದರೆ ದಶಾ ಕಾಲಗಳ ಫಲ. ಹಾಗಾಗಿ ದೇಹದ ಆಯುಸ್ಸು 120 ವರ್ಷಗಳನ್ನು ನವಗ್ರಹರು ಸೂಚಿಸುತ್ತಾರೆ.ಇದನ್ನು ಈ ರೀತಿ ವಿಂಗಡಿಸಲಾಗಿದೆ. ಒಟ್ಟಿನಲ್ಲಿ 'ಶರೀರ ಮಾಧ್ಯಂ ಖಲು ಧರ್ಮ ಸಾಧನಂ' ಎಂಬಂತೆ ಸಕಲ ಕರ್ಮಗಳಿಗೂ ಶರೀರದ ಸೌಖ್ಯವೇ ಅಗತ್ಯ.ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ.


ದೇಹದ ರಕ್ಷಣೆಯಿಂದ ದೇಶವನ್ನು ಕಟ್ಟಬಹುದು.

ದೇಶದ ಸ್ವಾಸ್ಥ್ಯವು ದೇಹದ ಸ್ವಾಸ್ಥ್ಯದ ಆಧಾರದಲ್ಲಿದೆ. — at Vijaya Gardens,Baridih,Jamshedpur.

***

No comments:

Post a Comment