SEARCH HERE

Thursday, 8 July 2021

ಪುಷ್ಯಾರ್ಕ ಯೋಗ or ಪುಷ್ಯ ಅಮೃತಸಿದ್ಧಿ ಯೋಗ ಪುಷ್ಯ ನಕ್ಷತ್ರ ಪ್ರಾಮುಖ್ಯತೆ pushya star importance

ಪುಷ್ಯ ನಕ್ಷತ್ರದ ಪ್ರಾಮುಖ್ಯತೆ 

                                                                                                        ಹಿಂದೂ ಧರ್ಮಗ್ರಂಥಗಳಲ್ಲಿನ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವು ಕೂಡ ಒಂದು. 

                                                                            ಒಬ್ಬ ವ್ಯಕ್ತಿ ಕುರಿತು ನಿಖರವಾದ ಭವಿಷ್ಯ ಹೇಳಲು ಆತನ ಜನ್ಮ ನಕ್ಷತ್ರವನ್ನು ನೋಡಲೇಬೇಕು. ನಕ್ಷತ್ರಗಳ ಮೂಲಕ ವ್ಯಕ್ತಿಯ ಗುಣ, ಬೌದ್ಧಿಕ ಚಿಂತನೆಗಳು ಹಾಗೂ ಶಕ್ತಿಯನ್ನು ಸುಲಭವಾಗಿ ವಿಶ್ಲೇಷಿಸಬಹುದು. ಇವುಗಳ ಸಹಾಯಗಳಿಂದ ಗ್ರಹಗತಿಗಳ ಸ್ಥಿತಿಗತಿಗಳನ್ನು ನೋಡುವುದು ಸುಲಭ.


ನಿಮ್ಮ ನಕ್ಷತ್ರ ಯಾವುದು ಎಂದು ತಿಳಿದುಕೊಂಡು ಜ್ಯೋತಿಷಿಗಳ ಹತ್ತಿರ ಹೋದರೆ ಅವರು ನಿಮ್ಮ ಭವಿಷ್ಯವನ್ನು ನಕ್ಷತ್ರಗಳನ್ನು ಲೆಕ್ಕಹಾಕಿ ಹೇಳುತ್ತಾರೆ. ಹಿಂದೂ ಧರ್ಮಗ್ರಂಥದಲ್ಲಿ ಮುಖ್ಯವಾಗಿ 27 ನಕ್ಷತ್ರಗಳನ್ನು ಗುರುತಿಸಲಾಗುತ್ತದೆ. ಈ ಪೈಕಿ ಪುಷ್ಯ ನಕ್ಷತ್ರವೂ ಒಂದು. ಇಲ್ಲಿ ಪುಷ್ಯ ನಕ್ಷತ್ರದ ಕುರಿತು ಕೆಲವು ಮಾಹಿತಿಯನ್ನು  ವಿವರಿಸಲಾಗಿದೆ.


ಹಿಂದೂ ಪಂಚಾಂಗ ಹಾಗೂ ಧರ್ಮಗ್ರಂಥಗಳಲ್ಲಿ ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಉಲ್ಲೇಖಿಸಲಾಗಿದೆ. ಪುಷ್ಯ ನಕ್ಷತ್ರವನ್ನು ಸಮೃದ್ಧ, ಸರ್ವೋಚ್ಚ, ಫಲಪ್ರದ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇದು ಶುಭ ಲಾಭವನ್ನು ತರುತ್ತದೆ.


ಧರ್ಮಗ್ರಂಥಗಳಲ್ಲಿ ಪುಷ್ಯ ನಕ್ಷತ್ರವನ್ನು ತೃಪ್ತಿ ಹಾಗೂ ಕ್ಷಮಾ ಭಾವ ನೀಡುವ ಏಕೈಕ ನಕ್ಷತ್ರವಾಗಿದೆ. ಈ ನಕ್ಷತ್ರವು ಬದುಕಿನ ಪ್ರತೀ ಗುರಿಗಳನ್ನು ಮುಟ್ಟಲು ನೆರವಾಗುತ್ತದೆ. ಪುಷ್ಯ ಎಂದರೆ ಪೋಷಕ ಎಂದರ್ಥ. ಇದು ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಪುಷ್ಯ ನಕ್ಷತ್ರದ ಪ್ರಾಚೀನ ಹೆಸರು ತಿಷ್ಯ. ಸಂತೃಪ್ತಿ ಹಾಗೂ ಸಮೃದ್ಧಿ ಎಂಬುದು ಇದರ ಅರ್ಥ. ಪಂಡಿತ ಪಾಮರರು ಈ ನಕ್ಷತ್ರವನ್ನು ಶುಭ ಲಾಭ ತರುವ ನಕ್ಷತ್ರ ಎಂದು ಪರಿಗಣಿಸುತ್ತಾರೆ. ಪುಷ್ಯ ನಕ್ಷತ್ರವು ಹಿಂದೂ ಪಂಚಾಂಗದಲ್ಲಿ ಎರಡೇ ಸ್ಥಾನದಲ್ಲಿದೆ. ವೇಗವಾಗಿ ಸಂಚರಿಸುವ ಚಂದ್ರನನ್ನು ಇದು ಸೂಚಿಸುತ್ತದೆ. ಪುಷ್ಯ ನಕ್ಷತ್ರವು ಚಂದ್ರ ಬಲದಿಂದ ಸಂಪತ್ತು ಮತ್ತು ಜ್ಞಾನ ಎರಡನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ನಕ್ಷತ್ರಗಳಲ್ಲಿ ಚಂದ್ರನು ಬಂದಾಗ ಬೇರೆ ಬೇರೆ ರೀತಿಯ ಪರಿಣಾಮಗಳು ಉಂಟಾಗುತ್ತದೆ.


ಪುಷ್ಯ ನಕ್ಷತ್ರದಲ್ಲಿ ಬೀಳುವ ಮಹೂರ್ತದಲ್ಲಿ ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ ಸಿದ್ಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಲ್ಲೂ ಅಪರೂಪಕ್ಕೆ ಬೀಳುವ ಗುರುಪುಷ್ಯಾಮೃತ ಹಾಗೂ ರವಿಪುಷ್ಯಾಮೃತ ಯೋಗವನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ. ಈ ಯೋಗದಲ್ಲಿ ಕೈ ಹಾಕುವ ಕೆಲಸಗಳು ಯಶಸ್ವಿಯಾಗುತ್ತದೆ. ಉದ್ಯಮಿಗಳಿಗೆ ಅಮೃತ ಯೋಗವು ಲಾಭವನ್ನುಂಟುಮಾಡುತ್ತದೆ. ಈ ಯೋಗದಲ್ಲಿ ಮಂತ್ರ ಪಠಣೆ, ಧ್ಯಾನ ಹಾಗೂ ದಾನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.


ಪುಷ್ಯ ನಕ್ಷತ್ರದ ಪ್ರಾಮುಖ್ಯತೆ:


ನಿಗದಿತ ಮುಹೂರ್ತಗಳಲ್ಲಿ ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಶುಭ ಲಾಭವಾಗುತ್ತದೆ ಎಂದು ಪಂಚಾಂಗ ಹೇಳುತ್ತದೆ. ಇಂತಹ ಶುಭ ಮುಹೂರ್ತಗಳಲ್ಲಿ ಪುಷ್ಯ ನಕ್ಷತ್ರವೂ ಒಂದು. ಜನ ಸಾಮಾನ್ಯರಿಗೆ ಇದು ಸನ್ಮಂಗಳವನ್ನುಂಟು ಮಾಡುತ್ತದೆ. ಕಾರ್ತಿಕ ಅಮಾವಾಸ್ಯೆಗೂ ಮುನ್ನ ಬೀಳುವ ಪುಷ್ಯ ನಕ್ಷತ್ರದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ಕೈಗೂಡುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.


ಸೋಮವಾರ, ಗುರುವಾರ ಹಾಗೂ ಆದಿತ್ಯವಾರ ಪುಷ್ಯ ನಕ್ಷತರ ಬಿದ್ದರೆ ಅದನ್ನು ವರ ನಕ್ಷತ್ರ ಯೋಗ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಕೈ ಹಾಕುವ ಕೆಲಸಗಳು ಸಿದ್ಧಿಸುತ್ತವೆ. ಅದರಲ್ಲೂ ಗುರುವಾರ ಬೀಳುವ ಗುರು ಪುಷ್ಯ ಯೋಗವು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಪುಷ್ಯ ನಕ್ಷತ್ರವು ಎಂಟನೇ ಸ್ಥಾನದಲ್ಲಿರುವ ಕಾರಣ ಅದು ಶುಭಕರ ಎಂದು ಹೇಳುತ್ತಾರೆ. ಗುರು ಪುಷ್ಯ ನಕ್ಷತ್ರವು ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ಗಳಿಗೆ.


ಹುಟ್ಟು ನಕ್ಷತ್ರವಾದರೆ:


ಶನಿಯು ಪುಷ್ಯ ನಕ್ಷತ್ರದ ಪೋಷಕ ಗ್ರಹವಾಗಿರುತ್ತದೆ. ಈ ನಕ್ಷತ್ರವು ಗುರುವಿನ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಪುಷ್ಯ ನಕ್ಷತ್ರವನ್ನು ಪರಿಶುದ್ಧತೆ, ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಶನಿಯು ಸ್ಥಿರತೆ ಕಾಯ್ದುಕೊಳ್ಳುವ ಗ್ರಹವಾಗಿದೆ. ಗುರು ಹಾಗೂ ಶನಿ ಬಲದಿಂದ ಪುಷ್ಯ ನಕ್ಷತ್ರವು ಶುಭಕರವಾಗಿರುತ್ತದೆ. ಪಂಚಾಂಗದಲ್ಲಿ ಅತ್ಯಂತ ಶುಭವಾದ ರವಿ ಪುಷ್ಯ ಯೋಗವು ಅಪರೂಪಕ್ಕೆ ಪುಷ್ಯ ನಕ್ಷತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯ ಅತ್ಯಂತ ಶ್ರೇಷ್ಠ.


ಪುಷ್ಯ ನಕ್ಷತ್ರದಲ್ಲಿ ಜನಿಸುವವರು ಕಷ್ಟದಲ್ಲಿರುವವರಿಗೆ ಕೈ ಚಾಚಲು ಸದಾ ಸಿದ್ಧರಾಗಿರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಕಷ್ಟಗಳನ್ನು ನೋಡುವ ಅವರು ತಮ್ಮ ಅನುಭವದಿಂದ ಎಲ್ಲವನ್ನೂ ಕಲಿತು ಪ್ರಪಂಚವನ್ನು ನೋಡುವ ದೃಷ್ಟಿಯನ್ನೇ ಬದಲಿಸಿಕೊಂಡಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಶ್ರಮದಾಯಕ ಕೆಲಸಗಳನ್ನು ಸುಲಭವಾಗಿ ಮಾಡುತ್ತಾರೆ. ಜೊತೆಗೆ ತಮ್ಮ ಕೆಲಸವನ್ನು ಅಷ್ಟೇ ಪೂಜಿಸುತ್ತಾರೆ. ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರ ಮೇಲೆ ದೈವ ಕೃಪೆ ಯಾವಾಗಲೂ ಇರುತ್ತದೆ.


ಸತ್ಯದ ದಾರಿಯನ್ನು ಎಂದೂ ಬಿಡಲೊಪ್ಪದ ಈ ನಕ್ಷತ್ರದವರು ತಮ್ಮ ಸಂಗಾತಿಗಳ ಮೇಲೆ ಕಾಳಜಿ ಹೊಂದಿರುತ್ತಾರೆ. ಪ್ರವಾಸ ಪ್ರಿಯರೂ ಕೂಡ. ಅವರ ಶ್ರಮದಾಯಕ ಕೆಲಸವು ಸ್ವಲ್ಪ ನಿಧಾನವಾಗಿಯಾದರೂ ಉತ್ತಮ ಫಲ ನೀಡುತ್ತದೆ. ತಮ್ಮ ದಾರಿಯಲ್ಲಿ ಎಷ್ಟೇ ಕಷ್ಟಬಂದರೂ ಅವರು ಸತ್ಯ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತಾರೆ.


ಯಾವ ಕೆಲಸಕ್ಕೆ ಪುಷ್ಯ ನಕ್ಷತ್ರ ಶ್ರೇಷ್ಠ ?


ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು,

ಪ್ರವಾಸ ಆರಂಭಿಸಲು,

ಹೊಸ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು,

ಗುರುವಿನಿಂದ ಮಂತ್ರಗಳನ್ನು ದೀಕ್ಷೆ ಪಡೆಯಲು,

ಕಾರ್ಯಕ್ರಮಗಳನ್ನು ಆಯೋಜಿಸಲು,

ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು,

                                                                                         

ಪುಷ್ಯ ನಕ್ಷತ್ರವಿದ್ದರೂ ಈ ವಾರದಂದು ಶುಭಕರವಲ್ಲ:

ಈಗಾಗಲೇ ಹೇಳಿರುವ ದಿನಗಳು ಹೊರತಾಗಿ ಇನ್ಯಾವುದೇ ದಿನ ಪುಷ್ಯ ನಕ್ಷತ್ರದಲ್ಲಿ ಕೆಲಸಗಳಿಗೆ ಕೈ ಹಾಕಿದರೆ ಅದು ಕೈಗೂಡುವುದಿಲ್ಲ. ಇದು ವರದ ಬದಲು ಗ್ರಹದೋಷದಿಂದ ಶಾಪವಾಗಿ ಪರಿಣಮಿಸಬಹುದು. ಶುಕ್ರವಾರ ಪುಷ್ಯ ನಕ್ಷತ್ರವಿದ್ದು ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ವಿಫಲವಾಗುವ ಜೊತೆಗೆ ನಿಮಗೆ ಬಹಳಷ್ಟು ನಷ್ಟವನ್ನೂ ತರುತ್ತದೆ. ಅದೇ ರೀತಿ ಪುಷ್ಯ ನಕ್ಷತ್ರವು ಬುಧವಾರ ಬಿದ್ದಾಗಲೂ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ವಿಫಲರಾಗುತ್ತೀರಿ.


ಶುಕ್ರವಾರ ಹಾಗೂ ಬುಧವಾರವನ್ನು ಹೊರತುಪಡಿಸಿ ಇನ್ನೆಲ್ಲಾ ದಿನಗಳಲ್ಲೂ ಪುಷ್ಯ ನಕ್ಷತ್ರವು ಶುಭ ಎಂದು ಪರಿಗಣಿಸಲಾಗುತ್ತದೆ. ರವಿ ಹಾಗೂ ಗುರು ಪುಷ್ಯ ಯೋಗವು ಯಶಸ್ಸು ಹಾಗೂ ಶುಭ ತರುವ ಯೋಗಗಳಾಗಿವೆ. ಪುಷ್ಯ ನಕ್ಷತ್ರವು ಮದುವೆಯಂತಹ ವಿಷಯದಲ್ಲಿ ಅಷ್ಟು ಶುಭಕರವಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ.


ಮುಂಬರಲಿರುವ ಪುಷ್ಯ ನಕ್ಷತ್ರ  ಬೀಳುವ ಅಮೃತ ಯೋಗ ದಿನಗಳು


08 ಮೇ 2022, ರವಿವಾರ

25 ಆಗಸ್ಟ್ 2022, ಗುರುವಾರ

08 ಜನವರಿ 2023, ರವಿವಾರ

05 ಫೆಬ್ರವರಿ 2023, ರವಿವಾರ‌         ‌    ‌                                                                       ‌                                                                                           

ಮೇ‌ 08, 2022 ರವಿವಾರ ರವಿ ಪುಷ್ಯ ಅಮೃತಸಿದ್ಧಿ ಯೋಗ ಇರುತ್ತದೆ.                 

ಪುಷ್ಯ ನಕ್ಷತ್ರ ಪ್ರಾರಂಭ : ಶನಿವಾರ ಹಗಲು 12:16 ಗಂಟೆಯಿಂದ.   ‌                    

ಪುಷ್ಯ ನಕ್ಷತ್ರ ಅಂತ್ಯ : ರವಿವಾರ ಹಗಲು 02:56 ಗಂಟೆಯವರೆಗೆ... ‌     ‌                                                        ‌      ‌                                                            ‌ಭಾರತೀಯ ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ, ರವಿ ಪುಷ್ಯ ಯೋಗವು ಒಂದು ವರ್ಷದಲ್ಲಿ ಅಪರೂಪದ ಘಟನೆಯಾಗಿದೆ. ಪುಷ್ಯವು ಅತ್ಯಂತ ಮಂಗಳಕರವಾದ ನಕ್ಷತ್ರವಾಗಿದೆ ಮತ್ತು ಇದು ಭಾನುವಾರದಂದು ಅಂದರೆ ರವಿವಾರದಂದು ಸಂಭವಿಸಿದರೆ ಅದು ರವಿ ಪುಷ್ಯ ನಕ್ಷತ್ರ ಯೋಗವನ್ನು ರೂಪಿಸುತ್ತದೆ.


ಸಾಮಾನ್ಯವಾಗಿ ಈ ನಕ್ಷತ್ರವನ್ನು ಸಿಂಹಕ್ಕೆ ಹೋಲಿಸಲಾಗುತ್ತದೆ - ಕಾಡಿನ ರಾಜ ಮತ್ತು ಪ್ರಾಣಿಗಳ ನಾಯಕ. ಹಾಗೆಯೇ ಪುಷ್ಯ ನಕ್ಷತ್ರವು ಅತ್ಯಂತ ಶ್ರೇಷ್ಠವಾದ ನಕ್ಷತ್ರವಾಗಿದೆ. ಇದು ಎಲ್ಲಾ ಕುಂಡಲಿ ದೋಷಗಳನ್ನು ಗುಣಪಡಿಸಬಹುದಾದ ಪ್ರಮುಖ ನಕ್ಷತ್ರವಾಗಿದೆ.

ಪುಷ್ಯ ನಕ್ಷತ್ರವು ವೇದಾ ಮತ್ತು ದುಷ್ಟ ಗ್ರಹಗಳ ಕಾರಣದಿಂದ ನಿರ್ಬಂಧಿಸಲ್ಪಟ್ಟಿದ್ದರೆ, ಅದು ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಈ ನಕ್ಷತ್ರದಲ್ಲಿ ಮದುವೆಯ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಆದಾಗ್ಯೂ, ರವಿ ಪುಷ್ಯ ನಕ್ಷತ್ರ ಯೋಗದ ಸಮಯದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಮಾಡಬಹುದು:


- ಮದುವೆಯ ಶಾಪಿಂಗ್

- ಕಾರ್ಯಕ್ರಮಗಳು ಮತ್ತು ಹಬ್ಬಗಳ ಯೋಜನೆ

- ಹೊಸ ಗ್ಯಾಜೆಟ್‌ಗಳು, ಕಾರುಗಳು ಇತ್ಯಾದಿಗಳನ್ನು ಖರೀದಿಸುವುದು.

- ಹೊಸ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಿ

- ಚಿನ್ನವನ್ನು ಖರೀದಿಸಿ

- ಆಸ್ತಿಯನ್ನು ಖರೀದಿಸಿ - ಪೂಜೆ, ಮನೆ, ಹವನ ಇತ್ಯಾದಿಗಳನ್ನು ಮಾಡಿ.


ಈ ದಿನ, ಮಾತೆ ಮಹಾಲಕ್ಷ್ಮಿ ಯನ್ನು ಆರಾಧನೆ ಮಾಡುವವರ ಮನೆಯಲ್ಲಿ ದೀರ್ಘಕಾಲ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಲಕ್ಷ್ಮೀ ದೇವಿಯು ಪುಷ್ಯ ನಕ್ಷತ್ರದಲ್ಲಿ ಜನಿಸಿದಳು ಎಂದೂ ಹೇಳಲಾಗುತ್ತದೆ. ಆದ್ದರಿಂದ, ಈ ಅವಧಿಯು ಅತ್ಯಂತ ಮಂಗಳಕರವಾಗಿದೆ. ಪುಷ್ಯ ನಕ್ಷತ್ರದ ಸ್ವಭಾವವು ಇಳುವರಿ, ಕಾಳಜಿ ಮತ್ತು ಪೋಷಣೆಯಾಗಿದೆ. ಪುಷ್ಯ ನಕ್ಷತ್ರದೊಂದಿಗೆ ಶುಭ, ಅದೃಷ್ಟ ಮತ್ತು ಐಶ್ವರ್ಯದಂತಹ ಗುಣಗಳು ಸಂಬಂಧಿಸಿವೆ. ಒಟ್ಟಾರೆಯಾಗಿ, ಯಾವುದೇ ಒಳ್ಳೆಯದನ್ನು ಮಾಡಲು ಇದು ತುಂಬಾ ಸಕಾರಾತ್ಮಕ ದಿನವಾಗಿದೆ. ಈ ದಿನದಂದು ಗ್ರಹಗಳ ಅನುಕೂಲಕರ ಸಂಯೋಗ, ಇದು ಎಲ್ಲರಿಗೂ ಶಾಂತಿ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.

ಪುಷ್ಯ ನಕ್ಷತ್ರದ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ:


• ಈ ದಿನದಂದು ಪೂಜೆ ಅಥವಾ ಸಾಧನೆ ಯನ್ನು ಮಾಡುವುದರಿಂದ ಜೀವನದ ಯಾವುದೇ ಅಂಶದಲ್ಲಿ ಯಶಸ್ಸು ಸಿಗುತ್ತದೆ.

• ಕೆಲಸದ ಗುಣಮಟ್ಟ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.

• ಉತ್ಪಾದಕತೆ ಮತ್ತು ಐಷಾರಾಮಿ ಹೆಚ್ಚಿಸುತ್ತದೆ.

* ಸಿದ್ಧ ಯಂತ್ರಗಳನ್ನು ಸ್ಥಾಪಿಸುವುದು ಶುಭ.

* ಜಾತಕದಲ್ಲಿ ಸೂರ್ಯನಿಂದ ಉಂಟಾಗುವ ದುಷ್ಪರಿಣಾಮಗಳನ್ನು ನಿವಾರಣೆ ಪಡೆಯಬಹುದು.

•  ಸೂರ್ಯನಿಂದ ಅಧಿಕ ಶುಭ ಪ್ರಯೋಜನ ಪಡೆಯಲು, ಈ ದಿನ ಮಾಣಿಕ್ಯವನ್ನು ಧರಿಸುವುದು ಅತ್ಯಂತ ಮಂಗಳಕರ ಮತ್ತು ಅದೃಷ್ಟ ತರುತ್ತದೆ.

• ವೈವಾಹಿಕ ಅಡೆತಡೆಗಳನ್ನು ನಿವಾರಿಸುವುದು.                                      • ಈ ದಿನದ ವಿಶೇಷ ಪೂಜೆಯೊಂದಿಗೆ ವಿವಾದಗಳು ನಿವಾರಣೆಯಾಗುತ್ತದೆ,

ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

• ಈ ದಿನದಲ್ಲಿ ಚಿಕಿತ್ಸೆ ಪ್ರಾರಂಭವಾದರೆ ದೀರ್ಘಕಾಲದ ಕಾಯಿಲೆಗಳನ್ನು ಜಯಿಸುವುದು.

*** 

July 2021

"ಪುಷ್ಯಾರ್ಕ ಯೋಗ" ದಂದು ರಾಯರ ಅಷ್ಟೋತ್ತರ ಪಾರಾಯಣದ ಮಹತ್ವ ಮತ್ತು ಫಲ

ಪುಷ್ಯ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ “ಪೋಷಿಸುವುದು”.  ಗುರುವಾರ ಅಥವಾ ಭಾನುವಾರ ಪುಷ್ಯ ನಕ್ಷತ್ರ ಬಿದ್ದಾಗ ಜ್ಯೋತಿಷಿಗಳು ಇದನ್ನು ಆಧ್ಯಾತ್ಮಿಕ ಸಾಧನೆಗೆ  ಅನುಕೂಲಕರವೆಂದು ಪರಿಗಣಿಸಿ ಅದನ್ನು ಪುಷ್ಯ ಅಮೃತ ಸಿದ್ಧಿ ಯೋಗ ಎಂದು ಕರೆಯುತ್ತಾರೆ. 

ಪುಷ್ಯ ನಕ್ಷತ್ರದ ದಿನ ಗುರುಗಳ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ. ಈ ರೀತಿಯಾಗಿಯೇ ಪುಷ್ಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳೊಂದಿಗೆ ಶುಭ ಸಂಬಂಧವನ್ನು ಹೊಂದಿದೆ.

ರಾಯರ ಅಂತರಂಗ ಭಕ್ತರಾದ ಅಪ್ಪಣಾಚಾರ್ಯರು, ಪುಷ್ಯ ನಕ್ಷತ್ರದ ದಿನ ಗುರುರಾಯರ ಸ್ತೋತ್ರದ ಪಾರಾಯಣದ ಪ್ರಯೋಜನಗಳನ್ನು ಉಲ್ಲೇಖಿಸಿದ್ದಾರೆ.

ಅವರು ರಚಿಸಿರುವ ರಾಘವೇಂದ್ರ ಸ್ತೋತ್ರದಲ್ಲಿ ಶ್ರೀ ಅಪ್ಪಣಾಚಾರ್ಯರು,

“ಸೋಮ- ಸೂರ್ಯ ಪರಾಗೇಚ ಪುಷ್ಯಾರ್ಕಾಧಿ ಸಮಾಗಮೇ,
ಯೋನುತ್ತಮ ಮಿದಂ ಸ್ತೋತ್ರಂ   ಅಷ್ಟೋತ್ತರ ಶತಮ್ ಜಪೆತ್, ಭೂತಾ ಪ್ರೇತಾ ಪಿಶಾಚಾದಿ ಪೀಡಾsಥಸ್ಯ ನಾ ಜಾಯಥೇ ”

ಇದರ ಅರ್ಥವೇನೆಂದರೆ, ಚಂದ್ರ ಅಥವಾ ಸೂರ್ಯಗ್ರಹಣ ಇದ್ದಾಗ ಅಥವಾ ಭಾನುವಾರ ಪುಷ್ಯ ನಕ್ಷತ್ರದ ಸಮಯದಲ್ಲಿ, ಯಾವುದೇ ವ್ಯಕ್ತಿಯು ರಾಯರ ಅಷ್ಟೋತ್ತರ  ಶ್ಲೋಕಗಳನ್ನು ಪಠಿಸಿದರೆ ಜಾತಕದಲ್ಲಿ ಇರುವ ದೋಷ ಮುಕ್ತವಾಗಿ, ಸನ್ಮಾರ್ಗ ದೊರಕುವುದು. ಯಾರು ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವರೋ ಅ ವ್ಯಕ್ತಿಗೆ  ಯಾವುದೇ ದುಷ್ಟಶಕ್ತಿಗಳು ತೊಂದರೆಗೊಳಿಸುವುದಿಲ್ಲ.

ಆದ್ದರಿಂದ ನಾವೆಲ್ಲರೂ 2021 ಜುಲೈ ,೧೧ ರ ಭಾನುವಾರದಂದು ಶ್ರೀ ರಾಯರ ಮೃತಿಕ ಬೃಂದಾವನ ಅಥವಾ ಅವರ ಚಿತ್ರಪಟದ ಮುಂದೆ ಆಸೀನರಾಗಿ ಪ್ರಸಿದ್ಧ ಶ್ರೀ ರಾಯರ ಸ್ತೋತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸಿ, ಅವರ ಆಶೀರ್ವಾದವನ್ನು ಗಳಿಸುವ ಮೂಲಕ ಈ ಶುಭ ದಿನವನ್ನು ಬಳಸಿಕೊಳ್ಳೋಣ. ಅಜ್ಞಾನವನ್ನು ನಾಶಮಾಡಿ, ಸುಜ್ಞಾನನವನ್ನು ನೀಡಿ, ಅನಂದವನ್ನು ಸದಾ ನೀಡುವ ರಾಯರ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ.

ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಃ

ಓಂ ಸ್ವವಾಗ್ದೇವತಾ ಸರಿದ್ಭಕ್ತವಿಮಲೀಕರ್ತ್ರೇ ನಮಃ |
ಓಂ ಶ್ರೀರಾಘವೇಂದ್ರಾಯ ನಮಃ |
ಓಂ ಸಕಲಪ್ರದಾತ್ರೇ ನಮಃ |                                                ಓಂ ಭಕ್ತಾಘಸಂಭೇದನದೃಷ್ಟಿ ವಜ್ರಾಯ ನಮಃ  |                                                ಓಂ ಕ್ಷಮಾ ಸುರೇಂದ್ರಾಯ ನಮಃ |
ಓಂ ಹರಿಪಾದ ಪದ್ಮನಿಷೇವಣಾಲ್ಲಬ್ಧ ಸರ್ವಸಂಪದೇ ನಮಃ |
ಓಂ ದೇವಸ್ವಭಾವಾಯ ನಮಃ |
ಓಂ ದಿವಿಜದ್ರುಮಾಯ ನಮಃ |                                  ಓಂ ಇಷ್ಟಪ್ರದಾತ್ರೇ ನಮಃ |
ಓಂ ಭವ್ಯಸ್ವರೂಪಾಯ ನಮಃ | ೧೦
ಓಂ ಭವದುಃಖಶೂಲ ಸಂಘಾಗ್ನಿಚರ್ಯಾಯ ನಮಃ
ಓಂ ಸುಖಧೈರ್ಯಶಾಲಿನೇ ನಮಃ |
ಓಂ ಸಮಸ್ತ ದುಷ್ಟಗ್ರಹನಿಗ್ರಹಕರ್ತ್ರೇ ನಮಃ |
ಓಂ ದುರತ್ಯಯೋಪಪ್ಲವಸಿಂಧುಸೇತವೇ ನಮಃ |
ಓಂ ನಿರಸ್ತದೋಷಾಯ ನಮಃ |                     ಓಂ ನಿರವದ್ಯದೇಹಾಯ ನಮಃ |                              ಓಂ ಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ |                                                     ಓಂ ವಿದ್ವತ್ಪರಿಜ್ಞೇಯ ಮಹಾವಿಶೇಷಾಯ ನಮಃ |                                 ಓಂ ವಾಗ್ವೈಖರೀನಿರ್ಜಿ ಭವ್ಯ ಶೇಷಾಯ ನಮಃ
ಓಂ ಸಂತಾನಸಂಪತ್ ಪರಿಶುದ್ಧ ಭಕ್ತಿ ವಿಜ್ಞಾನ ವಾಗ್ತೇಹ ಸುಪಾಟವಾದಿದಾತ್ರೇ ನಮಃ |  ೨೦
ಓಂ ತಾಪತ್ರಯವಿನಾಶಕಾಯ ನಮಃ |
ಓಂ ಚಕ್ಷುಪ್ರದಾಯಕಾಯ ನಮಃ |
ಓಂ ಹರಿಚರಣ ಸರೋಜರಜೋಭೂಷಿತಾಯ ನಮಃ |
ಓಂ ದುರಿತಕಾನನದಾವಭೂತಾಯ ನಮಃ | 
ಓಂ ಸರ್ವತಂತ್ರಸ್ವತಂತ್ರಾಯ ನಮಃ |
ಓಂ ಶ್ರೀಮಧ್ವಮತವರ್ಧನಾಯ ನಮಃ |
ಓಂ ಸತತಸನ್ನಿಹಿತಾಶೇಷದೇವತಾಸಮುದಾಯಾಯ ನಮಃ |
ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ |
ಓಂ ಶ್ರೀವೈಷ್ಣವಸಿದ್ಧಾಂತಪ್ರತಿಷ್ಠಾಪಕಾಯ ನಮಃ |
ಓಂ ಯತಿಕುಲತಿಲಕಾಯ ನಮಃ | ೩೦
ಓಂ ಜ್ಞಾನಭಕ್ತ್ಯಾಯುರಾರೋಗ್ಯ ಸುಪುತ್ರಾದಿವರ್ಧನಾಯ ನಮಃ |
ಓಂ ಪ್ರತಿವಾದಿಮಾತಂಗ ಕಂಠೀರವಾಯ ನಮಃ |
ಓಂ ಸರ್ವವಿದ್ಯಾಪ್ರವೀಣಾಯ ನಮಃ | 
ಓಂ ದಯಾದಾಕ್ಷಿಣ್ಯ ವೈರಾಗ್ಯಶಾಲಿನೇ ನಮಃ |
ಓಂ ರಾಮಪಾದಾಂಬುಜಾಸಕ್ತಾಯ ನಮಃ |
ಓಂ ರಾಮದಾಸಪದಾಸಕ್ತಾಯ ನಮಃ |
ಓಂ ರಾಮಕಥಾಸಕ್ತಾಯ ನಮಃ |
ಓಂ ದುರ್ವಾದಿದ್ವಾಂತರವಯೇ ನಮಃ |
ಓಂ ವೈಷ್ಣವೇಂದೀವರೇಂದವೇ ನಮಃ |
ಓಂ ಶಾಪಾನುಗ್ರಹಶಕ್ತಾಯ ನಮಃ | ೪೦
ಓಂ ಅಗಮ್ಯಮಹಿಮ್ನೇ ನಮಃ |
ಓಂ ಮಹಾಯಶಸೇ ನಮಃ | 
ಓಂ ಶ್ರೀಮಧ್ವಮತ ದುಗ್ದಾಬ್ಧಿಚಂದ್ರಮಸೇ ನಮಃ |
ಓಂ ಪದವಾಕ್ಯಪ್ರಮಾಣಪಾರಾವಾರ ಪಾರಂಗತಾಯ ನಮಃ |
ಓಂ ಯೋಗೀಂದ್ರಗುರವೇ ನಮಃ |
ಓಂ ಮಂತ್ರಾಲಯನಿಲಯಾಯ ನಮಃ |
ಓಂ ಪರಮಹಂಸ ಪರಿವ್ರಾಜಕಾಚಾರ್ಯಾಯ ನಮಃ |
ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ |
ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ |
ಓಂ ಸತ್ಯಾದಿರಾಜಗುರವೇ ನಮಃ |
ಓಂ ಭಕ್ತವತ್ಸಲಾಯ ನಮಃ | ೫೦

ಓಂ ಪ್ರತ್ಯಕ್ಷಫಲದಾಯ ನಮಃ |
ಓಂ ಜ್ಞಾನಪ್ರದಾಯ ನಮಃ |
ಓಂ ಸರ್ವಪೂಜ್ಯಾಯ ನಮಃ |
ಓಂ ತರ್ಕತಾಂಡವವ್ಯಾಖ್ಯಾಕರ್ತ್ರೇ ನಮಃ |
ಓಂ ಕೃಷ್ಣೋಪಾಸಕಾಯ ನಮಃ |
ಓಂ ಕೃಷ್ಣದ್ವೈಪಾಯನಸುಹೃದೇ ನಮಃ |
ಓಂ ಆರ್ಯಾನುವರ್ತಿನೇ ನಮಃ |
ಓಂ ನಿರಸ್ತದೋಷಾಯ ನಮಃ |
ಓಂ ನಿರವದ್ಯವೇಷಾಯ ನಮಃ | 
ಓಂ ಪ್ರತ್ಯರ್ಧಿಮೂಕತ್ವನಿದಾನಭಾಷಾಯ ನಮಃ | ೬೦
ಓಂ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಟಾನ ನಿಷ್ಟಾಯ ನಮಃ | 
ಓಂ ಸಾಂಗಾಮ್ನಾಯಕುಶಲಾಯ ನಮಃ |
ಓಂ ಜ್ಞಾನಮೂರ್ತಯೇ ನಮಃ |
ಓಂ ತಪೋಮೂರ್ತಯೇ ನಮಃ |
ಓಂ ಜಪಪ್ರಖ್ಯಾತಾಯ ನಮಃ |
ಓಂ ದುಷ್ಟಶಿಕ್ಷಕಾಯ ನಮಃ |
ಓಂ ಶಿಷ್ಟರಕ್ಷಕಾಯ ನಮಃ |
ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ | 
ಓಂ ಶೈವಪಾಷಂಡಧ್ವಾಂತ ಭಾಸ್ಕರಾಯ ನಮಃ |
ಓಂ ರಾಮಾನುಜಮತಮರ್ದಕಾಯ ನಮಃ | ೭೦
ಓಂ ವಿಷ್ಣುಭಕ್ತಾಗ್ರೇಸರಾಯ ನಮಃ |
ಓಂ ಸದೋಪಾಸಿತಹನುಮತೇ ನಮಃ |
ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ |
ಓಂ ಅದ್ವೈತಮೂಲನಿಕೃಂತನಾಯ ನಮಃ |
ಓಂ ಕುಷ್ಠಾದಿರೋಗನಾಶಕಾಯ ನಮಃ |
ಓಂ ಅಗ್ರಸಂಪತ್ಪ್ರದಾತ್ರೇ ನಮಃ |
ಓಂ ಬ್ರಾಹ್ಮಣಪ್ರಿಯಾಯ ನಮಃ | 
ಓಂ ವಾಸುದೇವಚಲಪ್ರತಿಮಾಯ ನಮಃ |
ಓಂ ಕೋವಿದೇಶಾಯ ನಮಃ |
ಓಂ ಬೃಂದಾವನರೂಪಿಣೇ ನಮಃ | ೮೦
ಓಂ ಬೃಂದಾವನಾಂತರ್ಗತಾಯ ನಮಃ |
ಓಂ ಚತುರೂಪಾಶ್ರಯಾಯ ನಮಃ |
ಓಂ ನಿರೀಶ್ವರಮತ ನಿವರ್ತಕಾಯ ನಮಃ |
ಓಂ ಸಂಪ್ರದಾಯಪ್ರವರ್ತಕಾಯ ನಮಃ |
ಓಂ ಜಯರಾಜ ಮುಖ್ಯಾಭಿಪ್ರಾಯವೇತ್ರೇ ನಮಃ |
ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ | 
ಓಂ ಸದಾಸ್ವಸ್ಥಾನಕ್ಷೇಮಚಿಂತಕಾಯ ನಮಃ |
ಓಂ ಕಾಷಾಯಚೇಲಭೂಷಿತಾಯ ನಮಃ |
ಓಂ ದಂಡಕಮಂಡಲುಮಂಡಿತಾಯ ನಮಃ |
ಓಂ ಚಕ್ರರೂಪಹರಿನಿವಾಸಾಯ ನಮಃ |‌ ೯೦
ಓಂ ಲಸದೂರ್ಧ್ವಪುಂಡ್ರಾಯ ನಮಃ |
ಓಂ ಗಾತ್ರಧೃತ ವಿಷ್ಣುಧರಾಯ ನಮಃ |
ಓಂ ಸರ್ವಸಜ್ಜನವಂದಿತಾಯ ನಮಃ |
ಓಂ ಮಾಯಿಕರ್ಮಂದಿಮತಮರ್ದಕಾಯ ನಮಃ |
ಓಂ ವಾದಾವಲ್ಯರ್ಥವಾದಿನೇ ನಮಃ | 
ಓಂ ಸಾಂಶಜೀವಾಯ ನಮಃ |
ಓಂ ಮಾಧ್ಯಮಿಕಮತವನಕುಠಾರಾಯ ನಮಃ |
ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥ (ಸ್ವಾರಸ್ಯ) ಗ್ರಾಹಿಣೇ ನಮಃ |
ಓಂ ಅಮಾನುಷನಿಗ್ರಹಾಯ ನಮಃ | ೧೦೦
ಓಂ ಕಂದರ್ಪವೈರಿಣೇ ನಮಃ |
ಓಂ ವೈರಾಗ್ಯನಿಧಯೇ ನಮಃ |
ಓಂ ಭಾಟ್ಟಸಂಗ್ರಹಕರ್ತ್ರೇ ನಮಃ |
ಓಂ ದೂರೀಕೃತಾರಿಷಡ್ವರ್ಗಾಯ ನಮಃ |
ಓಂ ಭ್ರಾಂತಿಲೇಶವಿಧುರಾಯ ನಮಃ | 
ಓಂ ಸರ್ವಪಂಡಿತಸಮ್ಮತಾಯ ನಮಃ |
ಓಂ ಅನಂತಬೃಂದಾವನನಿಲಯಾಯ ನಮಃ |
ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ |
ಓಂ ಯಥಾರ್ಥವಚನಾಯ ನಮಃ |
ಓಂ ಸರ್ವಗುಣಸಮೃದ್ಧಾಯ ನಮಃ |
ಓಂ ಅನಾದ್ಯವಿಚ್ಛಿನ್ನ ಗುರುಪರಂಪರೋಪದೇಶ ಲಬ್ಧಮಂತ್ರಜಪ್ತ್ರೇ ನಮಃ |
ಓಂ ಧೃತಸರ್ವದ್ರುತಾಯ ನಮಃ |
ಓಂ ರಾಜಾಧಿರಾಜಾಯ ನಮಃ |
ಓಂ ಗುರುಸಾರ್ವಭೌಮಾಯ ನಮಃ |                                                             ಓಂ ಮಂತ್ರಾಲಯ ನಿವಾಸಿನೇ ನಮಃ
ಓಂ ಶ್ರೀಮೂಲರಾಮಾರ್ಚಕ ಶ್ರೀರಾಘವೇಂದ್ರ ಯತೀಂದ್ರಾಯ ನಮಃ |

ಇತಿ ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳೀ |

|| ಶ್ರೀ ಕೃಷ್ಣಾರ್ಪಣಮಸ್ತು ||
****

No comments:

Post a Comment