SEARCH HERE

Friday, 9 July 2021

ದಕ್ಷಿಣಾಯಣ ಪರ್ವ ಪುಣ್ಯಕಾಲ ಸಂಕಲ್ಪ dakshinayana punya kala sankalpa yearly july 16

July 16, 2021


 ದಕ್ಷಿಣಾಯಣ ಪರ್ವ ಪುಣ್ಯಕಾಲ

ದಕ್ಷಿಣಾಯನ ಪುಣ್ಯಕಾಲ ಕರ್ಕ ಸಂಕ್ರಮಣ


Dakshinayana Punyakaala – 

(ದಕ್ಷಿಣಾಯನ ಪುಣ್ಯಕಾಲ )

            (Karka Sankramana)  


What is Dakshinayana Punya kaala?              ದಕ್ಷಿಣಾಯನ ಪರ್ವಕಾಲವೆಂದರೇನು?

ಮಾನವನ ಒಂದು ವರ್ಷಕ್ಕೆ ದೇವತೆಗಳ ಒಂದು ದಿನಕ್ಕೆ ಸಮ.  ದೇವತೆಗಳಿಗೆ ಉತ್ತರಾಯಣ ಬೆಳಿಗ್ಗೆಯಾದರೆ ದಕ್ಷಿಣಾಯಣ ರಾತ್ರಿಕಾಲ


One year of the  human year is one day for Gods.  For Gods  it is night during Dakshinayana and it is Day during Uttarayana.  Uttarayana starts on Makara Sankramana Day, usually January 14 or 15th and Dakshinayana starts  on July 15th or 16th or 17th.  


ಉತ್ತರಾಯಣ ಸಾಮಾನ್ಯವಾಗಿ ಜನವರಿ 14 ಅಥವಾ 15ರಂದು ಬರುತ್ತದೆ.

ದಕ್ಷಿಣಾಯಣ ಸಾಮಾನ್ಯವಾಗಿ ಜುಲೈ 15, 16,  ಅಥವಾ 17ಬರುತ್ತದೆ.


ಗಮನಿಸಿ : ದಕ್ಷಿಣಾಯಣ/ಉತ್ತರಾಯಣ ಯಾವುದೇ ತಿಥಿಗೆ ಸಂಬಂಧಿಸಿದ್ದಲ್ಲ.


Surya enters Karkarashi ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ.  : 

 “ತ್ರಿಂಶತಿ ಕರ್ಕಾಟಕೇ ಪೂರ್ವೇ”, ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುವ  30 ಘಳಿಗೆ ಮುನ್ನ ಅಂದರೆ ಉತ್ತರಾಯಣದಲ್ಲೇ ಪರ್ವಕಾಲ ಉಂಟಾಗುತ್ತದೆ.  ಆದ್ದರಿಂದ ಈ ಪರ್ವಕಾಲದಲ್ಲೇ ಸ್ನಾನ, ತರ್ಪಣ, ದಾನ ಕೊಡತಕ್ಕದ್ದು.


      (ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್  30 x 24 = 720 ನಿಮಿಷ.  720/60 = 12  ಘಂಟೆ)

ತರ್ಪಣಾಧಿಕಾರಿಗಳು ಉತ್ತರಾಯಣ ಇರುವಾಗಲೇ ಅಂದರೆ ದಕ್ಷಿಣಾಯನ ಆರಂಭಕ್ಕೆ ಮುನ್ನವೇ (ಬೆಳಿಗ್ಗೆ 10.58ರ ಮುನ್ನ) ತರ್ಪಣ ಕೊಡತಕ್ಕದ್ದು.


"trimshati karkaTagE pUrvE” –  Hence, before thirty Galige before Karkataka Sankramana is said to be Sankramana Punyakala.


The calculation of Dakshinayana and Uttarayana differs from South India to North India.   Uttarayana starts on Makara Sanrramana Day, usually January 14 or 15th and Dakshinayana starts usually on July 16th or 17th.  This method of calculation of the period of Sun’s transit is known as the Nirayana System and in it Dakshinayana starts when ‘nirayana surya’ enters cancer.  In North India, Uttarayana period starts on December 21 and ends on June 21. Dakshinayana is from June 21 to December 21. This method of calculation of the period of Sun’s transit is known as Drika Siddhanta and in this method Dakshinayana starts when sayana Sun enters Cancer.


Uttarayana or Dakshinayana comprising of six months each is the time taken by the Sun to travel from one house to the other during these periods. Starting from “ಮಕರ ರಾಶಿ” (Capricorn) up to “ಮಿಥುನ” (Gemini), the travel of Sun is called as Uttarayana and starting from “ಕರ್ಕಾಟಕ” (Cancer) up to”ಧನು”, (Sagittarius) it is known as Dakshinayana. We all know that Dakshina means South direction and “ಆಯನ” means  movement.   The movement of Sun in the Southern direction is called as Dakshinayana. The time when the Sun leaves “ಮಿಥುನ ರಾಶಿ” (Gemini) and enters “ಕರ್ಕಾಟಕ ರಾಶಿ” (Cancer) is called as Karkataka Sankramana (“ಕರ್ಕಾಟಕ ಸಂಕ್ರಮಣ”), when the period of Uttarayana ends ದಕ್ಷಿಣಾಯನ, Dakshinayana begins.


Things to be done during Dakshinayana/Uttarayana –

1.  Do snaana at the time of Parvakaala, usually before 30 Galige of Dakshinayana.  

2.  Those who do not have their pitru (father) have to give tarpana to their forefathers unfailingly with black thil (kari yellu) (ಕರಿಎಳ್ಳು),  If it falls on Ekadashi, Tarpana need not be given on that day. Those who have given tarpana have to take Teertha prasada only once in the day.

3.   Yathashakthi Daana to be given

4. Morning he has to get up as usual (Usha:kaala), (Some people may not get up as there is lot of time for Dakshinayana Punyakala),  We have to do our regular Snaana, Sandhyavandhane, Nirmalya Visarjane, pooja  as usual.

He should be empty stomach till Parvakaala , then he must have another bath (if possible Theertha snaana),   Then he has to give Tarpana as per the above method.

For those who are Jeevanpitrus  (those who are have their father) – they need not give tarpana, they can do their daily routine works.


ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ  :-

೧.  ಆಚಮನ

೨.  ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)

೩.  ಪುನರಾಚಮನ

೪.  ಪ್ರಾಣಾಯಾಮ

ನಂತರ ಸಂಕಲ್ಪ —

ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ __ನಾಮ ಸಂವತ್ಸರೇ, ದಕ್ಷಿಣಾಯನೇ, __ಋತು, __ಮಾಸೇ, __ಪಕ್ಷೇ, __ತಿಥೌ, __ನಕ್ಷತ್ರೇ, __ ಯೋಗೇ, __ಕರಣೇ, __ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ – 


೧. ಪಿತ್ರು, ಪಿತಾಮಹ, ಪ್ರಪಿತಾಮಹ

೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ

೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ

೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ

ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು.  (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)

ಅವತ್ತು ಏಕಭುಕ್ತನಾಗಿರಬೇಕು. ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,

ದಕ್ಷಿಣಾಯನ ಪರ್ವಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ) ನಂತರ ತರ್ಪಣ ಕೊಡಬೇಕು.

tila tarpaNa sankalpa –

1.     Achamana

2.    Pavitra dhaaraNa (pavitra maaDalu baradiddare pavitrada uMguraviddarU paravaagilla)

3.    punaraachamana

4.    praaNaayaama

sankalpa —

shrI gOviMda gOviMda viShNOraaj~Jayaa pravartamaanasya, Adya brahmaNa:, dvitIya paraardhE, shrI shvEtavaraahakalpE, vaivasvata manvaMtarE, kaliyugE, prathamapaadE, jaMbhOdvIpE, daMDakaaraNyE, gOdaavaryaa: dakShiNEtIrE shaalIvaahana shakE, bouddhaavataarE, raamakShEtrE (parashuraamakShEtrE), shrI parama vaiShNava sannidhou, asmin vartamaanE chaaMdramaanEna ___naama saMvatsarE, dakShiNaayanE, ___Rutou, ___maasE, ___pakShE, ___tithou, ___nakShatrE, ___ yOgE, __ karaNE, ___vaasara yuktaayaM, pitraadi samasta pitrUNaaM aMtargata, manunaamaka, shrI bhaaratI ramaNa muKyapraaNaaMtargata shrImanmadhvavallabha janaardhana vaasudEva prEraNayaa, shrImanmadhvavallabha janaardhana vaasudEva prItyarthaM, viShNu nakShatra, viShNuyOga, viShNu karaNa, EvaM guNa vishEShaNa viSiShTaayaaM puNyatithou., (praachInaavIti), (janivaaravannu eDakke haakikoMDu) sadya: tilatarpaNaM kariShyE –


1. pitru, pitaamaha, prapitaamaha

2. maatru, pitaamahi, prapitaamahahi

3. maataamaha, maatu: pitaamaha, maatu: prapitaamaha

4. maataamahi, maatu: pitaamahi, maatu: prapitaamahi

Tarpana to be given for the above mentioned 12 people  (However, if any one of them is still there, note not to include him in the tarpana list)

NARAHARI SUMADHWASEVA

****


ದಕ್ಷಿಣಾಯಣ_ಪುಣ್ಯಕಾಲ (ಕಟಕ ಸಂಕ್ರಮಣ).       


   ಆರು ತಿಂಗಳಿಂದ ಉತ್ತರ ದಿಕ್ಕಿನತ್ತ ಸಾಗಿದ್ದ ಸೂರ್ಯ ತನ್ನ ಪಥವನ್ನು ಬದಲಿಸಿ  ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ  ದಕ್ಷಿಣಾಯನ ಕಾಲ ಆರಂಭವಾಗುತ್ತದೆ.


  ಸ್ವಾಭಾವಿಕವಾಗಿ ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಚಾಂದ್ರಮಾನದ ಪ್ರಕಾರ ಚೈತ್ರ, ವೈಶಾಖ ಮುಂತಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಸೌರಮಾನದ ಪ್ರಕಾರ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಹಾಗೂ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. 


     ಆರು ತಿಂಗಳಿಗೊಮ್ಮೆ ಪಥ ಬದಲಿಸುವ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಮಣ ವೆಂತಲೂ. ಮಿಥುನರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುವುದನ್ನು ಕಟಕ ಸಂಕ್ರಮಣ ವೆಂತಲೂ ಕರೆಯುತ್ತಾರೆ. ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಕ್ಕೆ ಸಾಗುವುದನ್ನು ಉತ್ತರಾಯಣ ಎಂದು, ಕಟಕ ಸಂಕ್ರಮಣದ ನಂತರ ದಕ್ಷಿಣಾಯನ ಎಂದು ಕರೆಯುತ್ತೇವೆ.


    ಧಾರ್ಮಿಕವಾಗಿ ಈ ದಿನದಿಂದ ದೇವತೆಗಳಿಗೆ ರಾತ್ರಿ ಕಾಲ ಆರಂಭ. ಮಾನವರಿಗೆ ಒಂದು ವರ್ಷವಾದರೆ, ಅದು ದೇವತೆಗಳಿಗೆ ಒಂದು ದಿನಕ್ಕೆ ಸಮ.  ಉತ್ತರಾಯಣ ಹಗಲಾದರೆ, ದಕ್ಷಿಣಾಯಣ ರಾತ್ರಿ.


  ಸಾಮಾನ್ಯವಾಗಿ ಜನವರಿ 14‌ ಅಥವಾ 15 ರಂದು ಉತ್ತರಾಯಣ ಸಂಭವಿಸುತ್ತದೆ. ಅಂದು ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತೇವೆ.


  ಹಾಗೆಯೇ ದಕ್ಷಿಣಾಯನ ಪುಣ್ಯಕಾಲ ಸಾಮಾನ್ಯವಾಗಿ ಜುಲೈ 15, 16 ಅಥವಾ 17ರಂದು ಸಂಭವಿಸುತ್ತದೆ. ಈ ವರ್ಷ ಜುಲೈ 17 ರಂದು ಸಂಕ್ರಮಣ ನಡೆಯುತ್ತಿದೆ. ಸಾಮಾನ್ಯವಾಗಿ ಈ ದಕ್ಷಿಣಾಯನ ಪುಣ್ಯಕಾಲವನ್ನು ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ, ಹೆಚ್ಚಾಗಿ ಸಾಮಾನ್ಯ ಜನರು ಆಚರಿಸುವುದಿಲ್ಲ. 


 ಈ ದಿನ ಪರ್ವಕಾಲದ ವೇಳೆ ಅಂದರೆ ಸೂರ್ಯೋದಯದ ನಂತರ ಬೆಳಗ್ಗೆ  10-58ರೊಳಗೆ ವಿಶೇಷವಾಗಿ ಸ್ನಾನ ಮಾಡಿ ಇಷ್ಟದೇವರ ಜಪ ತಪಾದಿಗಳನ್ನು ನಡೆಸಬಹುದು.    ಅಧಿಕಾರವುಳ್ಳವರು( ತಂದೆಯಿಲ್ಲದವರು) ಪರ್ವಕಾಲದ ಅಂಗವಾಗಿ ತಿಲತರ್ಪಣ ನೀಡಬೇಕು. ಇದು ಸಾಧ್ಯವಿಲ್ಲದವರು ಅರ್ಹರಿಗೆ ದಾನ ನೀಡಬಹುದು. ಶ್ರೀಹರಿಯನ್ನು ಮನಸಾ ಸ್ಮರಿಸಿ ಗತಿಸಿದ ಪಿತೃಗಳಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಬಹುದು.


 ಉತ್ತರಾಯಣದಲ್ಲಿ ವಿಶೇಷವಾಗಿ ಮದುವೆ, ಗೃಹ ನಿರ್ಮಾಣ, ಗೃಹಪ್ರವೇಶ, ಉಪನಯನ ಇತ್ಯಾದಿ ಶುಭಕಾರ್ಯಗಳನ್ನು ನಡೆಸುತ್ತೇವೆ. ಆದರೆ ದಕ್ಷಿಣಾಯನ ಪುಣ್ಯ ಸಂಚಯನಕಾಲ ಎನ್ನುತ್ತೇವೆ. ಈ ಕಾಲದಲ್ಲಿ ವ್ರತಗಳ ಆಚರಣೆ ಹೆಚ್ಚು. ಚಾತುರ್ಮಾಸ್ಯ ಆಚರಣೆಯ ಜತೆ ಹಬ್ಬ ಹರಿದಿನಗಳ ಸಡಗರವೂ ಜೋರು. 


   ಪುಣ್ಯ ಸಂಚಯದ ಜತೆ, ವೈಜ್ಞಾನಿಕ ಕಾರಣವೂ ಇದೆ. ದಕ್ಷಿಣಾಯನ ಬಹುತೇಕ ಮಳೆಗಾಲ. ಜೋರು ಮಳೆ, ಜಿಟಿಪಿಟಿ ಮಳೆ, ಸೋನೆಮಳೆ ಸದಾ ಒಂದಿಲ್ಲೊಂದು ಸಮಯದಲ್ಲಿ ಸುರಿಯುತ್ತದೆ. ಆಹ್ಲಾದಕರ ವಾತಾವರಣವಿದ್ದರೂ, ಚಳಿ ಹೆಚ್ಚು. ಮಳೆಯಲ್ಲಿ ನೆನೆಯುವ ಹಾಗೂ ಚಳಿಯಲ್ಲಿ ನಡಗುವ ವ್ಯಕ್ತಿಗೆ ಬಿಸಿ ಬಿಸಿ ಆಹಾರ ಬೇಕು. ಸೂರ್ಯನ ಶಾಖದ ತಾಪವೂ ಕಡಿಮೆಯಿರುವುದರಿಂದ, ಬಿಸಿಯಾದ, ಸತ್ವಭರಿತ ಆಹಾರ ಸೇವನೆ ಚಳಿಯ ತಾಡನದಿಂದ ನಮ್ಮನ್ನು ಸಂರಕ್ಷಿಸುತ್ತದೆ. ಹಾಗಾಗಿ ಹಿರಿಯರು ಹಲವಾರು ವ್ರತಗಳನ್ನು ಕಡ್ಡಾಯವಾಗಿ ಆಚರಿಸುವಂತೆ ನಿಯೋಜಿಸಿದ್ದಾರೆ.

 

    ಬೇಸಿಗೆಯಲ್ಲಿ ನಮ್ಮ ಮೈ ಚರ್ಮವನ್ನು ಸಂರಕ್ಷಿಸಿಕೊಳ್ಳಲು ಮಕರಸಂಕ್ರಾಂತಿ ವೇಳೆ ಎಳ್ಳು  ತಿನ್ನುತ್ತೇವೆ. ಹಾಗೆಯೇ ಮಳೆಗಾಲದಲ್ಲಿ ದೇಹದ ಕಾಂತಿ ಕಾಪಿಡಲು ಎಳ್ಳಿನ ಬಳಕೆಯಿದೆ. ನಾಗರ ಪಂಚಮಿ, ಗಣಪನ ಹಬ್ಬ ಹೀಗೆ ಎಳ್ಳಿನ ಬಳಕೆ ಉಂಟು. ಆಯಾ ವ್ರತಗಳಂದು ವಿಶೇಷ ಭಕ್ಯಗಳನ್ನು ಭುಂಜಿಸುವುದು ವಾಡಿಕೆ. ಒಂದೊಂದು ವ್ರತ (ಹಬ್ಬ) ಕ್ಕೆ ಒಂದೊಂದು ರೀತಿಯ ಅಡುಗೆ, ಇದು ನಮ್ಮ ಆರೋಗ್ಯ ಕಾಪಾಡುತ್ತದೆ. 


 ವೈಜ್ಞಾನಿಕ ಹಿನ್ನೆಲೆಯನ್ನು ಧಾರ್ಮಿಕ ನೆಲೆಗಟ್ಟಲ್ಲಿ ನಮಗೆ ಬಳುವಳಿಯಾಗಿ ನೀಡಿದ ಋಷಿ ಮುನಿಗಳಿಗೆ ನಮೋ ಎನ್ನೋಣ.. 


ಶ್ರೀಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನ್ನೂ ಸಲಹಲಿ.


ಶ್ರೀಶ ಚರಣಾರಾಧಕ:

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,

ಆನೇಕಲ್.

****

ದಕ್ಷಿಣಾಯನ ಪುಣ್ಯ ಕಾಲ .

ದಕ್ಷಿಣಾಯನ ಪರ್ವ ಕಾಲ .. ಎಷ್ಟೆಷ್ಟು ಪುಣ್ಯ ಕಾರ್ಯಗಳು ಮಾಡಿದರೆ ಅಷ್ಟು ಪುಣ್ಯ .


ಆಲಸ್ಯ ಮಾಡದೆ ಸಮಯ ಮಾಡಿಕೊಂಡು ಮಾಡಬೇಕಾದ ನಿತ್ಯ ಕರ್ಮಗಳು ಹಾಗೂ ನೈಮಿತ್ತಿಕ ಕರ್ಮಗಳ ಆಚರಿಸೋಣ. ಎಂದಿನಂತೆ ಪ್ರತಿನಿತ್ಯ ಮಾಡುವ ನಿತ್ಯ ಕರ್ಮಗಳು .. ಸ್ನಾನ , ಸಂಧ್ಯಾವಂದನೆ , ದೇವರ ಪೂಜೆ ಮುಗಿಸಿ ಪುರುಷ ಸೂಕ್ತ, ಶ್ರೀ ಸೂಕ್ತ, ಮನ್ಯು ಸೂಕ್ತ, ಶ್ರೀ ವಿಷ್ಣು ಸಹಸ್ರನಾಮ, ವಾಯುಸ್ತುತಿ, ಸುಂದರ ಕಾಂಡ ಹಾಗೂ ವಿಶೇಷವಾಗಿ ಮಹಿಳೆಯರು ಮದ್ವನಾಮ, ಶ್ರೀ ಹರಿಕಥಾ ಮೃತಸಾರ, ಶ್ರೀ ಲಕ್ಷ್ಮೀ ಶೋಭಾನೆ, ಕೇಶನಾಮ ಮತ್ತೆ ಅವರವರು ಹೇಳಿಕೊಳ್ಳುವ ಸ್ತೋತ್ರಗಳು ಹೇಳಿಕೊಳ್ಳ ಬಹುದು. ಈ ಪುಣ್ಯ ಪರ್ವಕಾಲದಲ್ಲಿ ಎಷ್ಟು ಶ್ರದ್ದೆಯಿಂದ ಕೇಳಿಕೊಂಡರೆ ಅಷ್ಟು ಹೆಚ್ಚಿನ ಫಲ ಇದೆ. ಅದರಲ್ಲಿ ಗಂಡಸರು ಯಾವ ಕಾಲಕ್ಕೂ  ತಿಲ ತರ್ಪಣಗಳ ಕೊಡಲೇ ಬೇಕು. ಮರೆಯುವ ಹಾಗಿಲ್ಲ. ನಂತರವೂ ಸಾಧಕರು ಇನ್ನು ಹೆಚ್ಚಿನ ಸ್ತೋತ್ರಗಳು ಹೇಳಿಕೊಳ್ಳ ಬಹುದು. ತರ್ಪಣ ಕೊಡುವುದರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತ ರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲ ವಾಗುವುದು! 

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣ ವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು. ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು. ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂಡಾದರೂ ತರ್ಪಣವನ್ನು ಕೊಡಬಹುದು.


೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.

೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.

೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ; " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.

೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.

೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲ ಅಂದರೆ ಕರಿ ಎಳ್ಳು ವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.

೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.


ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-

೧.  ಆಚಮನ

೨.  ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)

೩.  ಪುನರಾಚಮನ

೪.  ಪ್ರಾಣಾಯಾಮ

ನಂತರ ಸಂಕಲ್ಪ —


ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ,ಜಂಭೋದ್ವೀಪೇದಂಡಕಾರಣ್ಯೇ,ಗೋದಾರ್ಯಾ ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ __ನಾಮ ಸಂವತ್ಸರೇ, ದಕ್ಷಿಣಾಯನೇ, __ಋತು, __ಮಾಸೇ, __ಪಕ್ಷೇ, __ತಿಥೌ, __ನಕ್ಷತ್ರೇ, __ ಯೋಗೇ, __ಕರಣೇ, __ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ.


೧. ಪಿತೃ ವರ್ಗ ( ೩ ) =

 ಪಿತೃ .. ತಂದೆಯ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿತರ್ಪಯಾಮಿ ತರ್ಪಯಾಮಿ

 

ಪಿತಾಮಹ .. ತಾತನ ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ 

ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಪ್ರಪಿತಾಮಹ.. ಮುತ್ತಾತನ ಹೆಸರು, ಗೋತ್ರ ಹೇಳಿ  ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


೨. ಮಾತೃ ವರ್ಗ ( ೩ ) = 

ಮಾತೃ .. ಕರ್ತೃವಿನ ತಾಯಿ ಹೆಸರು,ಗೋತ್ರ 

ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿತರ್ಪಯಾಮಿ ತರ್ಪಯಾಮಿ

 

ಪಿತಾಮಹಿಮ್ .. ತಂದೆಯ ತಾಯಿ..ಆಕೆಯ ಹೆಸರು, ಗೋತ್ರ, ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಪ್ರಪಿತಾಮಹಿ.. ತಂದೆಯ ಅಜ್ಜಿ . ಆಕೆಯ ಹೆಸರು , ಗೋತ್ರ, ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


೩. ಮಾತಾಮಹ ವರ್ಗ ( ೩ ) = 

ಮಾತಾ ಮಹ .. ತಾಯಿಯ ತಂದೆ , ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಮಾತು: ಪಿತಾಮಹ .. ತಾಯಿಯ ಅಜ್ಜ, ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಮಾತು: ಪ್ರಪಿತಾಮಹ... ತಾಯಿಯ ಮುತ್ತಜ್ಜ .. ಹೆಸರು, ಗೋತ್ರ ಹೇಳಿ ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


೪. ಮಾತಾಮಹಿ ವರ್ಗ ( ೩ ) = ಮಾತಾಮಹಿ.. ತಾಯಿಯ ತಾಯಿ, ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಮಾತು: ಪಿತಾಮಹಿ..ತಾಯಿಯ ಅಜ್ಜಿ, ಅವರ ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಮಾತು: ಪ್ರಪಿತಾಮಹಿ.. ತಾಯಿಯ ಮುತ್ತಜ್ಜಿ .. ಅವಳ ಹೆಸರು, ಗೋತ್ರ ಹೇಳಿ 

ಆದಿತ್ಯಾ ಅಂತರ್ಗತ ಭಾರತಿ ರಾಮನ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಪತ್ನಿಂ .. ಹೆಂಡತಿ, ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿರಮಣ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಸುತಮ್. .ಮಗ.. ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿರಮಣ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಭ್ರಾತರಂ.. ಅಣ್ಣ ತಮ್ಮ , ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಪಿತೃವ್ಯಂ .. ದೊಡ್ಡಪ್ಪ,  ಚಿಕ್ಕಪ್ಪ ಅವರ ಹೆಸರು, ಗೋತ್ರ ಹೇಳಿ  ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಮಾತೃಶ್ವಸಾರಂ .. ದೊಡ್ಡಮ್ಮ, ಚಿಕ್ಕಮ್ಮ ಅವರ ಗೋತ್ರ ಹೇಳಿ 

ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ಚ್ವ ಶುರಂ .. ಹೆಣ್ಣು ಕೊಟ್ಟ ಮಾವ ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮದ್ ಗುರುಂ ..ಶಾಸ್ತ್ರವನ್ನು ಮಂತ್ರವನ್ನು ಹೇಳಿಕೊಟ್ಟ ಗುರುಗಳು . ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಅಸ್ಮತ್ ಆಚಾರ್ಯಮ್ .. ಪುರೋಹಿತರು ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.


ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು । ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ । ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।।ಎಂದು ಹೇಳಿ.. ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!


ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.


ಸೂರ್ಯನು ಜುಲೈ 16/17 ರಂದು ತನ್ನ ಸಂಚಾರವನ್ನು ಆರಂಭಿಸಲಿ ದ್ದಾನೆ. ಇಂದಿನಿಂದ ಸೂರ್ಯನು ಸಂಪೂರ್ಣವಾಗಿ ದಕ್ಷಿಣಾಯಣದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾನೆ. ದಕ್ಷಿಣಾಯನದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿ ದಾಗ, ಅದು ಹಿಮ್ಮುಖವಾಗಿ ರುತ್ತದೆ. ಹಾಗೆಯೇ ಕರ್ಕಾಟಕ ರಾಶಿ ಯನ್ನು ಪ್ರವೇಶಿಸಿದಾಗ ಅದು ದಕ್ಷಿಣಕ್ಕೆ ಹೋಗು ತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉತ್ತರಾಯಣದಲ್ಲಿ ಸೂರ್ಯ ಉತ್ತರದ ಕಡೆಗೆ ವಾಲಿದರೆ, ದಕ್ಷಿಣಾಯನದಲ್ಲಿ ಸೂರ್ಯ ದಕ್ಷಿಣದ ಕಡೆಗೆ ವಾಲುತ್ತಾನೆ. ಅದಕ್ಕಾಗಿಯೇ ಇದನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ.


2. ಹಗಲು ಮತ್ತು ರಾತ್ರಿಯ ವ್ಯತ್ಯಾಸ: ಸೂರ್ಯನ ಈ ಉತ್ತರಾಯಣ ಮತ್ತು ದಕ್ಷಿಣಾಯನ ಚಲನೆ ಯಿಂದಾಗಿ, ಉತ್ತರಾ ಯಣದ ಸಮಯದಲ್ಲಿ ಹಗಲು ದೀರ್ಘ ವಾಗಿರುತ್ತದೆ ಮತ್ತು ರಾತ್ರಿ ಚಿಕ್ಕದಾಗಿರುತ್ತದೆ. ಆದರೆ ದಕ್ಷಿಣಾಯಣದ ಸಮಯದಲ್ಲಿ ರಾತ್ರಿಗಳು ಹೆಚ್ಚಾಗಿರುತ್ತದೆ ಮತ್ತು ಹಗಲುಗಳು ಕಡಿಮೆ ಯಿರುತ್ತದೆ. 

***


ದಕ್ಷಿಣಾಯನ ಪುಣ್ಯಕಾಲ

(16-07-2021)

ತರ್ಪಣದ ವಿಧಿಯ  ಸಂಕಲ್ಪ :-

೧.  ಆಚಮನ

೨.  ಪವಿತ್ರ ಧಾರಣ ( ಪವಿತ್ರದ

      ಉಂಗುರವಿದ್ದರೂ

      ಪರವಾಗಿಲ್ಲ)

೩.  ಪುನರಾಚಮನ

೪.  ಪ್ರಾಣಾಯಾಮ

ನಂತರ ಸಂಕಲ್ಪ —

ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ  ಪ್ಲವ ನಾಮ ಸಂವತ್ಸರೇ, ದಕ್ಷಿಣಾಯನೇ, ಗ್ರೀಷ್ಮ ಋತು, ಆಷಾಢ ಮಾಸೇ, ಶುಕ್ಲ ಪಕ್ಷೇ, ಸಪ್ತಮಿಯಾಂ ಶುಭ ತಿಥೌ, ಹಸ್ತಾ ನಕ್ಷತ್ರೇ, ಪರಿಘ ಯೋಗೇ, ಗರಜ  ಕರಣೇ, ಭಾರ್ಗವ ವಾಸರೆ ಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ -

೧. ಪಿತ್ರು, ಪಿತಾಮಹ, ಪ್ರಪಿತಾಮಹ

೨. ಮಾತ್ರು, ಪಿತಾಮಹಿ, ಪ್ರಪಿತಾಮಹಹಿ

೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ

೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ

ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು.  (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)

ಅವತ್ತು ಏಕಭುಕ್ತನಾಗಿರಬೇಕು.

ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,

ದಕ್ಷಿಣಾಯನ ಪರ್ವಕಾಲ  ಮಧ್ಯಾಹ್ನ 12-27ರ ವರೆಗೆ ಉಪವಾಸವಿದ್ದು, ನಂತರ ಸ್ನಾನಾದಿಗಳನ್ನು ಮಾಡಿ ನಂತರ ತರ್ಪಣ ಕೊಡುವದು ಶಾಸ್ತ್ರ ವಿಧಾನ.

****


#ದಕ್ಷಿಣಾಯಣ_ಪುಣ್ಯಕಾಲ (ಕಟಕ ಸಂಕ್ರಮಣ).       

ಉತ್ತರ ದಿಕ್ಕಿನತ್ತ ಸಾಗಿರುವ ಸೂರ್ಯ ತನ್ನ ಪಥವನ್ನು ಬದಲಿಸಿ ಇಂದಿನಿಂದ ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ ಈ ಹೊತ್ತಿನಿಂದ #ದಕ್ಷಿಣಾಯನ ಕಾಲ ಆರಂಭವಾಗುತ್ತದೆ.


   ಧಾರ್ಮಿಕವಾಗಿ ಇಂದಿನಿಂದ ದೇವತೆಗಳಿಗೆ ರಾತ್ರಿ ಕಾಲ ಆರಂಭ. ಮಾನವರಿಗೆ ಒಂದು ವರ್ಷ, ಅದು ದೇವತೆಗಳಿಗೆ ಒಂದು ದಿನಕ್ಕೆ ಸಮ.  ಉತ್ತರಾಯಣ ಕಾಲ ಹಗಲಾದರೆ, ದಕ್ಷಿಣಾಯಣ ಕಾಲ ರಾತ್ರಿ.
 ಸಾಮಾನ್ಯವಾಗಿ ಜನವರಿ ತಿಂಗಳ 14, 15ರಂದು ಉತ್ತರಾಯಣ ಕಾಲ ಬರುತ್ತದೆ. ಈ ವೇಳೆ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಜತೆಗೆ ದಕ್ಷಿಣದತ್ತ ಸಾಗುವ ತನ್ನ ಪಥವನ್ನು ಬದಲಿಸಿ ಉತ್ತರದತ್ತ ಕ್ರಮಿಸಲು ಆರಂಭಿಸುತ್ತಾನೆ. ಇದನ್ನು ನಾವು ಉತ್ತರಾಯಣ ಪುಣ್ಯಕಾಲ ಅಥವಾ ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತೇವೆ.

 ಹಾಗೆಯೇ ದಕ್ಷಿಣಾಯಣ ಸಾಮಾನ್ಯವಾಗಿ ಜುಲೈ ತಿಂಗಳ 15, 16,  ಅಥವಾ 17ರಂದು ಬರುತ್ತದೆ. ಈ ದಿನ ಸೂರ್ಯ ಮಿಥುನ ರಾಶಿಯನ್ನು ತ್ಯಜಿಸಿ ಕರ್ಕಾಟಕ(ಕಟಕ) ರಾಶಿಯನ್ನು ಪ್ರವೇಶಿಸುವುದರೊಂದಿಗೆ ಉತ್ತರದತ್ತ ಸಾಗುವ ಪಥವನ್ನು ಬದಲಿಸಿ ದಕ್ಷಿಣದತ್ತ ಪರಿಕ್ರಮಿಸಲು ಆರಂಭಿಸುತ್ತಾನೆ. ಹಾಗಾಗಿ ಇದನ್ನ ದಕ್ಷಿಣಾಯನ ಪುಣ್ಯಕಾಲ ಎನ್ನಲಾಗುತ್ತೆ. ಈ ಆಚರಣೆಯನ್ನ ಹೆಚ್ಚಾಗಿ ಸಾಮಾನ್ಯ ಜನರಲ್ಲಿ ಪ್ರಚಲಿತವಾಗಿಲ್ಲ, ಆದ್ದರಿಂದ ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ. ಆದರೆ ಇದು ಎಲ್ಲರೂ ಆಚರಿಸುವಂತಹ ಹಬ್ಬ. 

 ಈ ದಿನ ಅಧಿಕಾರವಯಳ್ಳವರು ಅಂದರೆ ತಂದೆಯಿಲ್ಲದವರು ಪರ್ವಕಾಲದ ಅಂಗವಾಗಿ ಸ್ನಾನ, ಗತಿಸಿದ ಪಿತೃ( ಜೀವಂತವಿಲ್ಲದ ತಂದೆ, ತಾತಾ, ಮುತ್ತಾತ. ಜೀವಂತವಿಲ್ಲದ ತಾಯಿ, ತಂದೆಯ ತಾಯಿ ಹಾಗೂ ತಂದೆಯ ಅಜ್ಜಿ. ತಾಯಿಯ ತಂದೆ, ತಾತಾ, ಮುತ್ತಾತ. ತಾಯಿಯ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿಗೆ ಮೂರು ಬಾರಿ ಹಾಗೂ ಉಳಿದ ಗತಿಸಿದ) ಸಂಭಂಧಿಗಳಿಗೆ ಒಂದು ಬಾರಿ ತಿಲ ತಿಲತರ್ಪಣ ನೀಡಿ ಹಾಗೂ ಯಥಾಶಕ್ತಿ  ದಾನ ಮಾಡಬಹುದು. ಉಳಿದವರು ಸ್ನಾನ, ದೇವರ ಪೂಜೆ ಹಾಗೂ ದಾನ ಮಾಡಬಹುದು.

ಏಕಾದಶಿಯಂದು ಸಂಕ್ರಮಣವಾದರೆ  ತಿಲ(ಎಳ್ಳು) ತರ್ಪಣವಿಲ್ಲ.  

ಪವಮಾನ ಸೂಕ್ತ ಅಥವಾ ಪಿತೃ ಸೂಕ್ತವನ್ನು ಅರ್ಹರು ಪಾರಾಯಣ ಮಾಡಬೇಕು. ಉಳಿದವರು  ತರ್ಪಣಕ್ಕೆ ಬದಲಾಗಿ.  ದಾನಮಾಡಬಹುದು, ಇಲ್ಲವೇ ಶ್ರೀಹರಿಯನ್ನು ಮನಸಾ ಸ್ಮರಿಸಿ ಗತಿಸಿದ ಪಿತೃಗಳಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಭಕ್ತಿಯಿಂದ ಪ್ರಾರ್ಥಿಸಬಹುದು.
 ಎಲ್ಲರೂ ಈ ಹಬ್ಬವನ್ನು ಆಚರಿಸಿ.
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

***

No comments:

Post a Comment