ಸೋದರಬಿದಿಗೆ ಅಥವ ಯಮದ್ವಿತೀಯಾ ಎಂದು ಕಾರ್ತೀಕ ಶುಕ್ಲ ದ್ವಿತೀಯಕ್ಕೆ ಹೆಸರು ಬರಲು ಮುಖ್ಯ ಕಾರಣ -- ಈದಿನ ಯಮನು ತನ್ನ ತಂಗಿ ಯಮುನಾದೇವಿಯ ಮನೆಗೆ ಭೋಜನಕ್ಕೆ ಹೋಗಿದ್ದನಂತೆ !! ದೀಪಾವಳಿಯ ಮೂರೂ ದಿವಸವೂ ಅಪಮೃತ್ಯು ಬರಬಾರದೆಂದು ಮೃತ್ಯುವಿನ ದೇವತೆಯಾದ ಯಮಧರ್ಮನ ಪೂಜೆಯನ್ನು ದೀಪಬೆಳಗುವುದರೊಂದಿಗೆ ಆಚರಿಸುತ್ತಾರೆ -- ಕಾರ್ತಿಕ ಮಾಸದಲ್ಲಿ ದೀಪದಾನ ಮಾಡುವುದರಿಂದ ಅಪಮೃತ್ಯು ಪರಿಹಾರವಾಗುವುದೆಂದು ತಿಳಿಸಿದ್ದಾರೆ .
ಸೋದರ ಸಹೋದರಿಯರ ಸಂಬಂಧ ಬಹಳ ಅನುರೂಪವಾದದ್ದು ! ಕಷ್ಟಸುಖಗಳಲ್ಲಿ ಪರಸ್ಪರ ಇಬ್ಬರಲ್ಲೂ ಒಂದಾಗುವ ಹೊಂದಾಣಿಕೆಯ ಬೆಸುಗೆ ಈ ಸೋದರಸಂಬಂಧದ ಹೆಗ್ಗಳಿಕೆಯಾಗಿದೆ !
ಈ ಸೋದರಬಿದಿಗೆಯಂದು ತಮ್ಮ ಅಣ್ಣತಮ್ಮಂದಿರನ್ನು ಸಹೋದರಿಯರು ಊಟಕ್ಕೆ ಕರೆದು ಆದರದಿಂದ ಉಪಚರಿಸಿ ಆರತಿಮಾಡಿ ಉಡುಗೊರೆ ಕೊಟ್ಟು ಉಪಚರಿಸುವರು ಮತ್ತು ಸಹೋದರರು ತಾವೂ ಪ್ರೀತಿಯಿಂದ ಉಡುಗೊರೆಕೊಟ್ಟು ಹಿರಿಯರಾದರೆ ಆಶೀರ್ವಾದ ಮಾಡಿ ಕಿರಿಯರಾದರೆ ಆಶೀರ್ವಾದ ಪಡೆಯುವರು .
ಅಕ್ಕನ ತದಿಗೆ ಯತಂದು ಸಹೋದರಿಯರೆಲ್ಲಾ ಒಟ್ಟಿಗೇ ಸೇರಿ ಪರಸ್ಪರ ಹಬ್ಬಕ್ಕೆ ಉಡುಗೊರೆ ಕೊಟ್ಟು ಪಡೆದು ಒಟ್ಟಾಗಿ ಸಂತಸದಿಂದ ಭೋಜನ ಮಾಡುವರು .
****
No comments:
Post a Comment