SEARCH HERE

Friday, 1 October 2021

10 ನಿಮಿಷಗಳಲ್ಲಿ ನಿತ್ಯ ದೇವರ ಪೂಜೆ devara pooja in 10 minutes puja

 ಸಂಕ್ಷಿಪ್ತ ವೈಷ್ಣವ ದೇವ ಪೂಜಾ ಪದ್ಧತಿ


(ಗುರು ಮುಖೇನ ಅಥವಾ ತಿಳಿದವರಿಂದ ಇದನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿ ಪೂಜೆಯನ್ನು ಮಾಡಬೇಕು)


ಮೊದಲು ದೇವಗೃಹವನ್ನು ಪ್ರವೇಶಿಸುವುದು.

ದೀಪವನ್ನು ಹಚ್ಚಿ ಗಂಟಾನಾದ ಶಂಖನಾದದೊಡನೆ ಬಾಗಿಲನ್ನು ತೆರೆಯುವುದು.

ಓಂ ಅಪವಿತ್ರಃ ಪವಿತ್ರೋ ವಾ 
ಸರ್ವಾವಸ್ಥಾಮ್ ಗತೋಪಿ ವಾ 
ಯಃ ಸ್ಮರೇತ್ ಪುಂಡರೀಕಾಕ್ಷಮ್ 
ಸ ಬಾಹ್ಯಾಭ್ಯಂತರಃ ಶುಚಿಃ 

“ಶುದ್ಧವಾಗಿರಲಿ, ಅಶುದ್ಧವಾಗಿರಲಿ ಅಥವಾ ಭೌತಿಕ ಜೀವನದ ಎಲ್ಲಾ ಪರಿಸ್ಥಿತಿಗಳನ್ನು ದಾಟಿದ ನಂತರವಾಗಲಿ, ಯಾರು ಕಮಲ ನೇತ್ರನಾದ ಶ್ರೀಕೃಷ್ಣನನ್ನು ಸ್ಮರಿಸುತ್ತಾನೋ, ಅವನು ಹೊರಗಿನಿಂದ ಮತ್ತು ಒಳಗಿನಿಂದ ಶುದ್ಧನಾಗುತ್ತಾನೆ.”

ಸಂಧ್ಯಾವಂದನೆ ಮಾಡುವುದು.

೧ ) ಭೂತೋಚ್ಚಾಟನ

ಅಪಸರ್ಪಂತು ಯೇ ಭೂತಾಃ 

ಯೇ ಭೂತಾಃ ಭುವಿ ಸಂಸ್ಥಿತಾಃ

 ಯೇ ಭೂತಾಃ ವಿಘ್ನಕರ್ತಾರಃ 

ತೇ ನಶ್ಯಂತು ಶಿವಾಜ್ಞಯಾ || 

ಅಪಕ್ರಾಮಾಂತು ಭೂತಾನಿ ಕ್ರೂರಾಚೈವತು ರಾಕ್ಷಸಾಃ | ತೇಷಾಮಪ್ಯ ವಿರೋಧೇನಾ ಪೂಜಾಕರ್ಮ ಸಮಾರಭೇತ್ || ಇತೀ ಭೂತೋಚ್ಚಾಟನಂ.


೨) ಗಂಟಾನಾದ

ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್ ಕುರು ಗಂಟಾರವಂ ತತ್ರ ದೇವತಾಹ್ವಾನ ಸೂಚಕಮ್ || 


೩) ಆಚಮನ- ಪ್ರಾಣಾಯಾಮ - 

ಸಂಕಲ್ಪ

ಶ್ರೀವಿಷ್ಣು ಪ್ರೇರಣೇಯಾ ಶ್ರೀವಿಷ್ಣು ಪ್ರೀತ್ಯರ್ಥಂ ಯಥಾ ಶಕ್ಯ್ತಾ ಯಥಾ ಜ್ಞಾನೇನ ಶ್ರೀ ಲಕ್ಷ್ಮಿನಾರಾಯಣಸ್ಯ ಧ್ಯಾನವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ . 


೪ ] ಕಲಶಪೂಜೆ

ಒಂದು ಸಣ್ಣ ಕಲಶದಲ್ಲಿ ನೀರನ್ನು ತುಂಬಿಸಿ , ಗಂಧ (ಗಂಧೋದಕ) ತುಳಸಿ , ಹೂ ( ಷಟ್ಟೋಣ ) ಹಾಕಿ ಕಲಶವನ್ನು ಮುಟ್ಟಿ ಈ ಕೆಳಗಿನ ಮಂತ್ರವನ್ನು ಹೇಳಬೇಕು . 

ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು .....

ಕಲಶಃ ಕೀರ್ತಿಮಾಯುಶ್ಚ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಮ್ | ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ || ಅನೇನ ಕಲಶಪೂಜನೇನ ಭಗವಾನ್ ತತ್ಸತ್ ಶ್ರೀಕೃಷ್ಣಾರ್ಪಣಮಸ್ತು || 


[ ಈ ಕಲಶದ ನೀರನ್ನು ದೇವರ ಅಭಿಷೇಕದ ( ಪ್ರೋಕ್ಷಣೆ ) ಸಂದರ್ಭದಲ್ಲಿ ಉಪಯೋಗಿಸಬೇಕು ]


೫), ಶಂಖಪೂಜೆ

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ | ನಮಿತಃ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೇ || ಈ ಕೆಳಗಿನ ಮಂತ್ರವನ್ನು ಹೇಳುತ್ತ ಶಂಖದಲ್ಲಿ ಕಲಶದ ನೀರನ್ನು ತುಂಬಿಸಿ ಹೂವನ್ನು ಇಡಬೇಕು . ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹೀ ತನ್ನೋ ಶಂಖಃ ಪ್ರಚೋದಯಾತ್

ನಂತರ ಶಂಖದ ನೀರನ್ನು ಪೂಜಾದ್ರವ್ಯಗಳ ಮೇಲೆ ತುಳಸೀ ಅಥವಾ ಹೂವಿನಿಂದ ಈ ಕೆಳಗಿನ ಮಂತ್ರವನ್ನು ಹೇಳುತ್ತ ಪ್ರೋಕ್ಷಿಸಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ


೬) ಪೀಠಪೂಜೆ

ವಿಷ್ಣೋರಾಸನ ಭೂತಾಯ ದಿವ್ಯರತ್ನಮಯಾಯ ಚ ಪ್ರಧಾನ ಪುರುಷೇಶಾಯ ಮಹಾಪೀಠಾಯತೇ ನಮಃ |

ದೇವರ ಪೀಠಕ್ಕೆ ತುಳಸಿಯನ್ನು ಹಾಕಿ ನಮಸ್ಕಾರ ಮಾಡುವುದು.


ಷೋಡಶೋಪಚಾರ


ಧ್ಯಾನಮ್

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾ ಪತಯೇ ನಮಃ || (ನಿಮ್ಮ ಇಷ್ಟ ದೇವರ ಅಥವಾ ಪ್ರತಿಮೆಯ ಧ್ಯಾನವನ್ನು ಮಾಡುವುದು)

( ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . ) 


ಆವಾಹನಮ್

ಶ್ರೀ ಲಕ್ಷ್ಮೀನಾರಾಯಣಾಯ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ || ಎಂದು ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . (ಪುರುಷಸೂಕ್ತ ತಿಳಿದವರು ಪಠಿಸಬೇಕು)


ಆಸನಮ್

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಆಸನಮ್ ಸಮರ್ಪಯಾಮಿ


ಪಾದ್ಯಮ್

ಶ್ರೀ ಲಕ್ಷ್ಮಿನಾರಾಯಣಾಯ ನಮಃ - : ಪಾದ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ] 


ಅರ್ಘ್ಯಮ್ : 

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಅರ್ಘ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]


ಆಚಮನೀಯಮ್

- : ಶ್ರೀ ಲಕ್ಷ್ಮಿನಾರಾಯಣಾಯ ನಮ : ಆಚಮನೀಯಂ ಸಮರ್ಪಯಾಮಿ || ] ಕಲಶದ ನೀರು ಬಿಡುವುದು ] 


ಸ್ನಾನಮ್ - : 

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಸ್ನಾನಂ ಸಮರ್ಪಯಾಮಿ || [ ಹೂವಿನಿಂದ ಪ್ರತಿಮೆಗೆ ಕಲಶದ ನೀರನ್ನು ಪ್ರೋಕ್ಷಿಸುವುದು. (ಅಭಿಷೇಕದ ಮೂರ್ತಿ ಅಥವಾ ಸಾಲಿಗ್ರಾಮ ಇದ್ದರೆ ಶಂಖದಿಂದ ಅಭಿಷೇಕ ಮಾಡುವುದು)


ವಸ್ತ್ರಮ್

: ಶ್ರೀ ಲಕ್ಷ್ಮಿನಾರಾಯಣಾಯ ನಮ : ವಸ್ತ್ರಂ ಸಮರ್ಪಯಾಮಿ || (ವಸ್ತ್ರವನ್ನು ಅಥವ ತುಳಸಿ ಹಾಕುವುದು)


ಉಪವೀತಂ

- ಶ್ರೀ ಲಕ್ಷ್ಮಿನಾರಾಯಣಾಯ ನಮಃ ಯಜ್ಞೋಪವೀತಂ ಸಮರ್ಪಯಾಮಿ || [ ಯಜೋಪವೀತವನ್ನು ಅಥವ ತುಳಸಿ ಹಾಕುವುದು ] (ಆಭರಣಗಳಿದ್ದಲ್ಲಿ ಹಾಕಬಹುದು)


ಗಂಧಮ್

- : ಶ್ರೀ ಲಕ್ಷ್ಮೀನಾರಾಯಣಾಯ ನಮಃ ಗಂಧಂ ಸಮರ್ಪಯಾಮಿ || [ ಗಂಧವನ್ನು ಹಚ್ಚುವುದು ]


ಪುಷ್ಪಾಣಿ

: - ಶ್ರೀ ಲಕ್ಷ್ಮಿನಾರಾಯಣಾಯ ನಮಃ ಪುಷ್ಪಂ ಸಮರ್ಪಯಾಮಿ || [ ಪ್ರತಿಮೆಯನ್ನು ಹೂವುಗಳಿಂದ ಅಲಂಕರಿಸಬೇಕು ) |


ನಂತರ ಯಾವುದೇ ಸ್ತೋತ್ರ;ಅಷ್ಟೋತ್ತರ ಇದ್ದಲ್ಲಿ ಪಠಿಸಬೇಕು ಉದಾಹರಣೆಗೆ ವಿಷ್ಣು ಸಹಸ್ರನಾಮ ಇತ್ಯಾದಿ..


ಧೂಪಂ

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಧೂಪಂ ಆಘ್ರಾಪಯಾಮಿ [ ಧೂಪವನ್ನು ಹಚ್ಚಿ ದೇವರಿಗೆ ತೋರಿಸಬೇಕು ]


ದೀಪಃ 

ಶ್ರೀ ಲಕ್ಷ್ಮಿನಾರಾಯಣಾಯ ನಮ : ದೀಪಂ ದರ್ಶಯಾಮಿ || [ ಮೂರು ಬತ್ತಿಯ ದೀಪವನ್ನು [ ಏಕಾರತಿ ] ಹಚ್ಚಿ ದೇವರಿಗೆ ತೋರಿಸಿ ನಂದಿಸಬೇಕು ] 

(ದೇವರಿಗೆ ಹಚ್ಚಿಟ್ಟ ದೀಪಗಳು ಸರಿಯಾಗಿದೆಯೇ ಎಂದು ಒಮ್ಮೆ ನೋಡಿ)


ನೈವೇದ್ಯಮ್

: - ಶುದ್ಧವಾದ ನೆಲದ ಮೇಲೆ ತಟ್ಟೆಯಲ್ಲಿ ಹಣ್ಣುಕಾಯಿ ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ನೈವೇದ್ಯವನ್ನು ಇಟ್ಟು ತುಳಸಿ ನೀರಿನಿಂದ ಆ ನೈವೇದ್ಯವನ್ನು ಪ್ರೋಕ್ಷಿಸಿ , ತುಳಸಿಯನ್ನು ಅದರ ಮೇಲೆ ಹಾಕಿ , ಕೈಯಲ್ಲಿ ತುಳಸಿಯನ್ನು ಹಿಡಿದುಕೊಂಡು : - ಶ್ರೀ ಲಕ್ಷ್ಮಿನಾರಾಯಣಾಯ ನಮಃ ನೈವೇದ್ಯಂ ನಿವೇದಯಾಮಿ || ಎಂದು ದೇವರಿಗೆ ಅರ್ಪಿಸಬೇಕು. (ಪಂಚಮುದ್ರೆಯನ್ನು ತಿಳಿದವರು ಪ್ರದರ್ಶಿಸುವುದು)

ಅಭಿಷೇಕದ ತೀರ್ಥವನ್ನು ಆ ನೈವೇದ್ಯಗಳ ಮೇಲೆ ಹಾಕಬೇಕು


ತಾಂಬೂಲಂ

ಶ್ರೀಲಕ್ಷ್ಮಿನಾರಾಯಣಾಯ ನಮಃ ತಾಂಬೂಲಂ ಸಮರ್ಪಯಾಮಿ . 


ಮಂಗಲನೀರಾಜನಮ್

: -ಶ್ರೀ ಲಕ್ಷ್ಮೀನಾರಾಯಣಾಯ ನಮಃ ಮಂಗಲನೀರಾಜನಮ್ ಸಮರ್ಪಯಾಮಿ || ದೇವರಿಗೆ ಮಂಗಳಾರತಿ ಬೆಳಗಬೇಕು.


ಮಂತ್ರಪುಷ್ಪಾಂಜಲಿ

ಶ್ರೀ ಲಕ್ಷ್ಮಿನಾರಾಯಣಾಯ ನಮಃ ಮಂತ್ರಪುಷ್ಪಾಂಜಲಿ ಸಮರ್ಪಯಾಮಿ ||


ನಮಸ್ಕಾರ

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ ||


ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ | ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||


ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ । ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ ||


ನಮಸ್ಕಾರಂ ಸಮರ್ಪಯಾಮಿ.


ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ

 ಅನೇನ ಶ್ರೀ ಲಕ್ಷ್ಮಿನಾರಾಯಣ ಪೂಜಾರಾಧನೇನ ಭಗವಾನ್ ತತ್ಸತ್ ಶ್ರೀಹರಿಕೃಷ್ಣಾರ್ಪಣಮಸ್ತು ||


(ಇದನ್ನು ಸಂಕ್ಷೇಪವಾಗಿ ನೀಡಿದ್ದೇನೆ ವಿಸ್ತಾರವಾಗಿಯೂ ದೇವರ ಪೂಜೆ ಮಾಡಬಹುದು )

ಸಂಗ್ರಹ 

***


No comments:

Post a Comment