ಋಗ್ವೇದದ ಪ್ರಕಾರ ವೇದಗಳ ಕಾಲದಲ್ಲಿ ಯಾವೆಲ್ಲಾ ದೇವರನ್ನು ಪೂಜಿಸಲಾಗುತ್ತಿತ್ತು..?
ಋಗ್ವೇದ ಕಾಲದಲ್ಲೂ ಕೂಡ ದೇವರುಗಳನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತಿತ್ತು. ಋಗ್ವೇದದಲ್ಲಿನ ದೇವರುಗಳು ತಮ್ಮದೇ ಆದ ಸ್ತೋತ್ರಗಳನ್ನು ಕೂಡ ಒಳಗೊಂಡಿತ್ತು. ಋಗ್ವೇದದಲ್ಲಿ
ವೇದಗಳಲ್ಲಿ 4 ವಿಧ, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವು ಅತ್ಯಂತ ಪ್ರಾಚೀನ ಸಾಹಿತ್ಯವಾಗಿದೆ. ಋಗ್ವೇದವೆಂದರೆ ಅದುವೇ ಅದುವೇ 'ಪದ್ಯಗಳ ಜ್ಞಾನ'. ಋಗ್ವೇದದಲ್ಲಿ 1028 ಸ್ತುತಿಗೀತೆಗಳು ಹಾಗೂ 10,600 ಪದ್ಯಗಳಿವೆ. ಋಗ್ವೇದದಲ್ಲಿನ ಸ್ತೋತ್ರಗಳನ್ನು ಇಂದಿಗೂ ಕೂಡ ಏಷ್ಯಾದ ವಿವಿಧ ಭಾಗಗಳಲ್ಲಿ ದೇವರನ್ನು ಪೂಜಿಸಲು ಬಳಸಲಾಗುತ್ತಿದೆ. ಋಗ್ವೇದದ ಪ್ರಕಾರ 6 ಪ್ರಮುಖ ವೈದಿಕ ದೇವರುಗಳಿವೆ. ಅವು ಯಾವುವು ಎಂದು ತಿಳಿಯೋಣ...
1) ಇಂಧ್ರ: ಋಗ್ವೇದದಲ್ಲಿ ದೇವರುಗಳ ರಾಜನಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗುತ್ತಿತ್ತು. 289 ವೈದಿಕ ಸ್ತೋತ್ರಗಳು ಹೇಳುವ ಪ್ರಕಾರ ವೇದಗಳ ಕಾಲದಲ್ಲಿ ಇಂಧ್ರನು ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲು ದುಷ್ಟ ಶಕ್ತಿಗಳನ್ನು ನಾಶಮಾಡಿದಾತ ಎಂದು ಕರೆಯಲಾಗಿದೆ. ಇನ್ನು ಈತನನ್ನು ಮಳೆಗಾಗಿ ಹೆಚ್ಚು ಪೂಜಿಸಲಾಗುತ್ತಿತ್ತಂತೆ. ಮಳೆ ಬಾರದ ಸಮಯದಲ್ಲಿ ಆಗಿನ ಜನರು ಹೆಚ್ಚಾಗಿ ಇಂಧ್ರನ ಮೊರೆ ಹೋಗುತ್ತಿದ್ದರೆಂಬ ಉಲ್ಲೇಖವಿದೆ. ವೇದಗಳ ಕಾಲದಲ್ಲಿ ದುಷ್ಟರನ್ನು ಶಿಕ್ಷಿಸುವ ಇಂಧ್ರನ ವಾಹನ ಬಿಳಿಯ ಐರಾವತವಾಗಿತ್ತೆಂದು ಕೂಡ ಹೇಳಲಾಗಿದೆ.
2) ಅಗ್ನಿ: ಅಗ್ನಿ ಅಥವಾ ಬೆಂಕಿಗೆ ಅಧಿಪತಿ ಈ ಅಗ್ನಿ ದೇವತೆ. ಋಗ್ವೇದದಲ್ಲಿ ಅಗ್ನಿದೇವಿಯು 10 ಸಂಪುಟಗಳಲ್ಲಿ 218 ಸ್ತೋತ್ರಗಳನ್ನು ಹೊಂದಿದ್ದಾಳೆ. ಅಗ್ನಿಯು ಋಗ್ವೇದದಲ್ಲಿ ಪ್ರಮುಖ ದೇವರಾಗಿದ್ದು, ತ್ಯಾಗದ ಮೂಲ ಸಂಕೇತವಾಗಿದೆ. ಅಗ್ನಿಯನ್ನು ಋಗ್ವೇದ ಸಂದರ್ಭದಲ್ಲಿ ಮಾನವರು ಮತ್ತು ದೇವರುಗಳ ನಡುವಿನ ಮುಖ್ಯ ಸಂದೇಶವಾಹಕನೆಂದೂ ಕೂಡ ಪರಿಗಣಿಸಲಾಗಿತ್ತು. ಮಿಂಚು ಮತ್ತು ಸೂರ್ಯನಿಗೆ ಶಕ್ತಿ ತುಂಬವ ಪ್ರಭಾವ ಅಗ್ನಿದೇವನದಾಗಿತ್ತು.
3) ವರುಣ: ಋಗ್ವೇದದಲ್ಲಿ ಬೆಂಕಿಗೆ ಅಧಿಪತಿ ಅಗ್ನಿ ದೇವನಾದರೆ, ನೀರಿಗೆ ಅಧಿಪತಿ ವರುಣ ದೇವನಾಗಿದ್ದ. ವರುಣನು ಋಗ್ವೇದದಲ್ಲಿನ ಮತ್ತೋರ್ವ ಪ್ರಮುಖ ದೇವರು. ವರುಣ ದೇವನು ತನ್ನ ಸಾವಿರ ಕಣ್ಣುಗಳ ಮೂಲಕ ನಿಸರ್ಗದಲ್ಲಾಗುವ ಆಚಾರ - ವಿಚಾರಗಳನ್ನು, ನ್ಯಾಯವನ್ನು ನೋಡುತ್ತಿರುತ್ತಾನೆ. ಋಗ್ವೇದದ ಆರಂಭದಲ್ಲಿ ವರುಣನು ಋಗ್ವೇದದಲ್ಲಿ 46 ವಿವಿಧ ಸ್ತೋತ್ರಗಳನ್ನು ಒಳಗೊಂಡಿದ್ದು, ಈತನ ಮೊದಲ ವಾಹನ ಬಿಳಿ ಬಣ್ಣದ ಸುಂದರ ಹಂಸವಾಗಿತ್ತು, ತದನಂತರ ಈತನ ವಾಹನ ಮೊಸಳೆಯಾಗಿದೆ. ವೇದಗಳಲ್ಲಿ ಪಶ್ಚಿಮ ದಿಕ್ಕಿನ ರಕ್ಷಕನೆಂದು ವರುಣನನ್ನು ಪರಿಗಣಿಸಲಾಗಿದ್ದು, ಈತನು ವೇದಗಳ ಆರಂಭದಲ್ಲಿಪ್ರಮುಖ ದೇವನಾಗಿದ್ದನು ತದನಂತರ ಈತ ತನ್ನ ಸ್ಥಾನವನ್ನು ಇಂಧ್ರ ಮತ್ತು ಪ್ರಜಾಪತಿಗೆ ನೀಡಿದನು.
4) ವಾಯು: ಋಗ್ವೇದಕ್ಕೆ ಸಂಬಂಧಿಸಿದ ಅನೇಕ ದಂತಕಥೆಗಳಲ್ಲಿ ವಾಯುವನ್ನು ಉಸಿರಾಟವನ್ನು ನೀಡುವವ ಅಥವಾ ಪ್ರಾಣ ಎಂದು ಸಂಕೇತಿಸಲಾಗಿದೆ. ವೇದಗಳಲ್ಲಿ ವಾಯುವಿಗೆ ಅರ್ಪಿತವಾದ 12 ಸ್ತೋತ್ರಗಳು ಆತನ ಸೌಂದರ್ಯವನ್ನು ವರ್ಣಿಸುತ್ತದೆ. ವಾಯುವನ್ನು ವೇದಗಳ ಕಾಲದಲ್ಲಿ ಆಲೋಚನೆಗಳ, ಸೌಂದರ್ಯದ ಹಾಗೂ ಬಿದ್ಧಿವಂತಿಕೆಯ ಅಧಿಪತಿ ಎಂದು ಕರೆಯಲಾಗುತ್ತಿತ್ತು.
5) ಸೂರ್ಯ: ಸೂರ್ಯ ನನ್ನು ಸೂರ್ಯದೇವ ಎಂದು ಕರೆಯಲಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಋಗ್ವೇದದಲ್ಲಿ ಸೂರ್ಯನನ್ನು ಸಾವಿತ್ರಿ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು ಎನ್ನುವುದೇ ವಿಶೇಷ. ವೈದಿಕ ಯುಗದಲ್ಲಿ ವಿಷ್ಣುವಿ ಮೂಲ ಹೆಸರು ಸೂರ್ಯ ದೇವನಾಗಿತ್ತು. ಸೂರ್ಯ ದೇವನು ವೇದಗಳ ಕಾಲದಲ್ಲಿ 7 ಕುದುರೆಗಳನ್ನೊಳಗೊಂಡ ಚಿನ್ನದ ರಥವನ್ನು ಹೊಂದಿದ್ದನು. ಸೂರ್ಯದೇವನು ಅಂದಿನಿಂದ ಇಮದಿನವರೆಗೂ ಹೆಚ್ಚಿನ ಮಹತ್ವವನ್ನು ಪಡೆದುಕೊಮಡ ದೇವರಾಗಿದ್ದು, ಗಾಯತ್ರಿ ಮಂತ್ರ ಸೇರಿದಂತೆ 8 ಸ್ತೋತ್ರಗಳು ಇವನಿಗಾಗಿಯೇ ರಚಿಸಲಾಗಿದೆ.
6) ಯಮ: ವೇದಗಳ ಕಾಲದಲ್ಲಿನ ದೇವರುಗಳಲ್ಲಿ ಯಮ ಕೂಡ ಒಬ್ಬನು. ವೈದಿಕ ಸ್ತೋತ್ರಗಳು ಯಮನನ್ನು ನ್ಯಾಯದ ಅಧಿಪತಿ ಹಾಗೂ ಸತ್ತವರ ರಾಜ ನೆಂದು ವರ್ಣಿಸಲಾಗಿದೆ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ವಿಧಿಸುವ ಹಕ್ಕನ್ನು ಯಮನು ಹೊಂದಿದ್ದಾನೆ. ಯಮನು ಎಮ್ಮೆಯನ್ನು ತನ್ನ ವಾಹನವಾಗಿ ಮಾಡಿಕೊಂಡಿದ್ದಾನೆ. ಯಮನ ಬಳಿ 4 ಕಣ್ಣುಗಳು ಹಾಗೂ ಅಗಲವಾದ ಮೂಗಿನ ಹೊಳ್ಳೆಯನ್ನೊಳಗೊಂಡ ಎರಡು ವಿಚಿತ್ರ ರೂಪದ ನಾಯಿಗಳಿವೆ. ಈ ನಾಯಿಗಳು ಯಮಲೋಕದ ದ್ವಾರವನ್ನು ಕಾಯುತ್ತಿರುತ್ತದೆ. ಈ ಎಲ್ಲಾ ದೇವರುಗಳನ್ನು ಹೊರತುಪಡಿಸಿ ಋಗ್ವೇದ ಕಾಲದಲ್ಲಿ ಸರಸ್ವತಿ, ಸೋಮ, ವಿಷ್ಣು, ಅದಿತಿ, ಈಶ್ವರ, ಅಶ್ವಿನಿ, ರುದ್ರಾ, ಮಿತ್ರ ಸೇರಿದಂತೆ ಇನ್ನು ಹಲವಾರು ದೇವರುಗಳೂ ಕೂಡ ಇದ್ದರು ಎನ್ನಲಾಗಿದೆ.
(source vijaya karnataka paper)
***
No comments:
Post a Comment