SEARCH HERE

Friday 1 October 2021

ಏಕಶ್ಲೋಕಿ ರಾಮಾಯಣ

  by narahari sumadhwa

ಏಕಶ್ಲೋಕಿ ರಾಮಾಯಣ


ಆದೌ ರಾಮ­ತ­ಪೋ­ವ­ನಾ­ಭಿ­ಗ­ಮನಂ 

ಹತ್ವಾ ಮೃಗಂ ಕಾಂಚನಂ

ವೈದೇಹಿ ಹರಣಂ ಜಟಾಯು ಮರಣಂ 

ಸುಗ್ರೀವ ಸಂಭಾ­ಷಣಂ

ವಾಲೀ ನಿರ್ದ­ಲನಂ ಸಮುದ್ರ ತರಣಂ 

ಲಂಕಾ­ಪುರೇ ದಾಹನಂ

ಪಶ್ಚಾ­ದ್ರಾ­ವಣ ಕುಂಭ­ಕರ್ಣ ಹನನಂ 

ಏತ­ದ್ಧಿ ರಾಮಾ­ಯಣಂ |


ನಮ್ಮ ತಂದೆ ದಿವಂಗತ ಶತಾಯುಷಿ 

ಶ್ರೀ ರಾಮಚಂದ್ರಾಚಾರ್ಯರು ನಿತ್ಯ ರಾಮಾಯಣ ಪಾರಾಯಣ ಮಾಡುತ್ತಿದ್ದರು.   ಕೆಲವೊಮ್ಮೆ ಪಾರಾಯಣ ಮಾಡಲು ಅಸಾಧ್ಯವಾದಾಗ ಏಕಶ್ಲೋಕೀ ರಾಮಾಯಣ ಪಾರಾಯಣ ಮಾಡುತ್ತಿದ್ದರು.  ಇದು ಯಾರ ರಚನೆ ಎಂದು ಗೊತ್ತಿಲ್ಲ, ಆದರೂ ಸಂಪೂರ್ಣ ರಾಮಾಯಣ ಸಂಕ್ಷಿಪ್ತ ಚಿಂತನೆ ಇಲ್ಲಿದೆ.  ಆ ಶ್ಲೋಕವನ್ನು ಇಲ್ಲಿ ಹಾಕಿದ್ದೇನೆ :


ಅಯೋಧ್ಯೆಯಲಿ ಜನಿಸಿದ ರಾಮಚಂದ್ರನು  ವಿಶ್ವಾಮಿತ್ರರ ಯಜ್ಞ ರಕ್ಷಿಸಲು ಅವರೊಂದಿಗೆ ತೆರಳಿ ; ಕೈಕೆಯ ಪ್ರಾಪ್ತವಾದ ವರದಂತೆ ರಾಜ್ಯಾಭಿಷೇಕ ಬಿಟ್ಟು ಪತ್ನಿ ಅನುಜರೊಡೆ ವನಗಮಿಸಿ ; ಮಾಯಾಮೃಗದಿಂದ ಮೋಹಗೊಂಡವಳಂತೆ ತೋರಿದ ಸೀತೆಗಾಗಿ ಕಾಂಚನಮೃಗ ಕೊಂದು ; ರಾವಣನಿಂದ ಅಪಹರಿಸಲ್ಪಟ್ಟ ಜಾನಕಿಯನರಸಿ ಕಿಷ್ಕಿಂಧೆ ಸೇರಿ ಕಿಷ್ಕಿಂಧೆ ಸೇರಿದ.   ಜಾನಕಿಯ ರಕ್ಷಣೆಗೆ ಬಂದ ಜಟಾಯು ರಾವಣನಿಂದ ಕೊಲ್ಲಲ್ಪಟ್ಟ.


ಕಿಷ್ಕಿಂಧೆಯಲ್ಲಿ ಹನುಮನ ಕೂಡಿ ಸುಗ್ರೀವನ ಜೊತೆ ಸೇರಿ, ವಾಲಿಯ ನಿಗ್ರಹಿಸಿ,  ಸಮುದ್ರ ದಾಟಿ ಲಂಕೆಯ ದಹಿಸಿ; ರಾವಣಾದಿಗಳ ಮಣಿಸಿ ಸೀತೆಯೊಡನೆ  ಪುಷ್ಪಕ ವಿಮಾನವೇರಿ ಸಂಭ್ರಮದಿ ಸಾವಿರಾರು ವರುಷ ರಾಮರಾಜ್ಯವ ನೀಡಿದ ಕಥೆಯೇ ರಾಮಾಯಣ.


ಶ್ರೀ ಸೀತಾಪತಿ ರಾಮಚಂದ್ರನಿಗೆ ನಮೋ ನಮೋ: !


ನರಹರಿ ಸುಮಧ್ವ

ಸುಮಧ್ವಸೇವಾ

***



No comments:

Post a Comment