ದೇವರ ದೀಪ ಹಚ್ಚಲು ಎಣ್ಣೆಯಪ್ರಾಮುಖ್ಯತೆ🌹
🌸ಇಪ್ಪೆ ಎಣ್ಣೆ🌸
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ..
ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ ..
ಗೃಹಕಲಹವು ನಿಂತುಹೋಗುತ್ತದೆ ..
ದೇವರ ಅನುಗ್ರಹ ಹಾಗೂ ಗುರುಗಳ ಅನುಗ್ರಹ ಎಂದೆಂದೂ ಇದ್ದು, ಶುಭಕಾರ್ಯಗಳು ಯಾವುದೇ ತೊಂದರೆ ಇರದೆ ಸುಸೂತ್ರವಾಗಿ ನಡೆಯುತ್ತದೆ..
🌷ಗಂಧದ ಎಣ್ಣೆ🌷
ಈ ಎಣ್ಣೆಯ ಬೆಲೆ ಜಾಸ್ತಿ..
2. "ಗಂಧದ ಎಣ್ಣೆ" ಯನ್ನು ದೀಪಕ್ಕೆ ಉಪಯೋಗಿಸಿದರೆ, ಸಾಲದ ಭಾದೆ ಇರುವುದಿಲ್ಲ, ಮನೆಯು ದಿನೇ ದಿನೇ ಅಭಿವೃದ್ಧಿ ಹೊಂದಿ ಧನ-ಕನಕ-ವಸ್ತು, ವಾಹನಗಳು ಹೆಚ್ಚಾಗುತ್ತವೆ..
ಮನೆಯಲ್ಲಿ ಹಿರಿಯರಿಗೆ ಗೌರವ ಜಾಸ್ತಿಯಾಗುತ್ತದೆ ..
ರೋಗಭಾದೆ, ಶತೃಭಾಧೆ ನಿವಾರಣೆಯಾಗುತ್ತದೆ ..
🌷ಎಳ್ಳೆಣ್ಣೆ🌷
3. ದೇವರ ದೀಪಕ್ಕೆ ಎಳ್ಳೆಣ್ಣೆ ಉಪಯೋಗಿಸಿದರೆ ಕಷ್ಟಗಳು ದಿನಕ್ರಮೇಣ ಕಡಿಮೆಯಾಗುತ್ತದೆ ..
ದೇಹದ ಆರೋಗ್ಯವು ದಿನೇ ದಿನೇ ಸುಧಾರಿಸುತ್ತದೆ..
ಉದರ ವ್ಯಾಧಿಗಳು ನಿವಾರಣೆಯಾಗುತ್ತದೆ , ಕಣ್ಣಿಗೆ ಸಂಬಂಧಿಸಿದ ಖಾಯಿಲೆ ನಿವಾರಣೆಯಾಗುತ್ತದೆ ..
🌷 ಮೇರುದಾನಿರುದಾನಿ ಎಣ್ಣೆ🌷🌹 ಅಥವಾ ನವಗ್ರಹ ಎಣ್ಣೆ🌹
4. ಕೋರ್ಟು ತಕರಾರು ಇದ್ದ ಪಕ್ಷದಲ್ಲಿ ಆ ದಿವಸ ದೇವರಿಗೆ "ಮೆರುದಾನಿ ಎಣ್ಣೆ "ಯಲ್ಲಿ ದೀಪ ಹಚ್ಚಿದರೆ, ವ್ಯಾಜ್ಯದಲ್ಲಿ ಜಯ ಸಿದ್ಧ..
ಸತ್ಯಕ್ಕೆ ಜಯವಾಗುತ್ತದೆ
🪷ಎಲ್ಲದಕ್ಕೂ ನಂಬಿಕೆ ಶ್ರದ್ದೆ ಭಕ್ತಿ ಮುಖ್ಯ🪷
***
No comments:
Post a Comment