SEARCH HERE

Friday 1 October 2021

ಕಬ್ಬಿನ ರಸ

 ಕಬ್ಬಿನ ಹಾಲಿಗೆ ಸ್ವಲ್ಪ ನಿಂಬೆ ರಸ , ಶುಂಠಿ ಬೆರೆಸಿ ಕುಡಿದರೆ, ಈ ಲಾಭಗಳು ಗ್ಯಾರೆಂಟಿ...


ಕಬ್ಬಿನ ರಸದಿಂದ ನಿಮ್ಮ ದೇಹಕ್ಕಿವೆ ಈ ಆರು ಬಗೆಯ ಆರೋಗ್ಯ ಪ್ರಯೋಜನಗಳು


ಸಿಹಿಯಾದ ಕಬ್ಬು ಕೇವಲ ಸಂಕ್ರಾಂತಿಯ ಉಡುಗೊರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಇಡೀ ವರ್ಷ ಕಡಿಮೆ ಪ್ರಮಾಣದಲ್ಲಿ ಅಲ್ಲಲ್ಲಿಯಾದರೂ ಕಾಣ ಸಿಗುತ್ತದೆ. ನಾವು ಕಬ್ಬನ್ನು ಹಾಗೇ ಜಿಗಿದು ಬೇಕಾದರೂ ತಿನ್ನಬಹುದು ಅಥವಾ ಅದರಿಂದ ರಸವನ್ನು ತಯಾರಿಸಿ ಬೇಕಾದರೂ ಕುಡಿಯಬಹುದು.


ಆದರೆ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಒಂದೇ ಆಗಿರುತ್ತವೆ. ಮನುಷ್ಯನಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು, ದೇಹದ ತೂಕವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಲು ಉತ್ತೇಜಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಒತ್ತಡವನ್ನು ನಿವಾರಿಸುವುದು, ಹೃದಯರಕ್ತನಾಳದ


ಆರೋಗ್ಯವನ್ನು ಬೆಂಬಲಿಸುವುದು, ಮೂತ್ರ ಪಿಂಡದ ಕಲ್ಲುಗಳ ವಿರುದ್ಧ ಹೋರಾಡುವುದು, ಹಲ್ಲಿನ ಆರೋಗ್ಯವನ್ನು ಕಾಪಾಡುವುದು ಮತ್ತು ಜೀರ್ಣ ಕ್ರಿಯೆಯನ್ನು ಸುಧಾರಿಸುವುದು, ಈ ಎಲ್ಲಾ ಕೆಲಸಗಳನ್ನು ಮಾಡುವ ಯಾವುದಾದರೊಂದು ಪಾನೀಯ ನಮ್ಮ ಕಣ್ಣ ಮುಂದಿದ್ದರೆ, ಅದು ಕಬ್ಬಿನ ಜಲ್ಲೆಯ ರಸ ಅಥವಾ ಕಬ್ಬಿನ ಜ್ಯೂಸು. ಕಬ್ಬಿನಲ್ಲಿ ಆಂಟಿ - ಆಕ್ಸಿಡೆಂಟ್ಗಳು ಸಮೃದ್ಧವಾಗಿವೆ.


ಆದ್ದರಿಂದ ಇದು ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಎಲೆಕ್ಟ್ರೋಲೈಟ್ ಗಳಿಂದ ಸಮೃದ್ಧವಾಗಿದೆ.

​ದೇಹದ ನಿರ್ಜಲೀಕರಣ, ನೆಗಡಿ ಶೀತಕ್ಕೆ ಬಹಳ ಒಳ್ಳೆಯದು


ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ದೇಹದ ನಿರ್ಜಲೀಕರಣ ಸಮಸ್ಯೆಗೆ ಅದ್ಭುತವಾಗಿದೆ. ಅಷ್ಟೇ ಅಲ್ಲದೇ ನೆಗಡಿ ಮತ್ತು ಇತರ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುವುದರಿಂದ ಜ್ವರದ ವಿರುದ್ಧ ಹೋರಾಡುತ್ತದೆ.

ಅದರಲ್ಲೂ ಕಬ್ಬಿಣದ ತಿರುಗಣೆಯ ನಡುವೆ ಕಬ್ಬಿನ ಜಲ್ಲೆಯನ್ನು ಹಿಂಡಿದಾಗ ಬರುವ ರಸದೊಂದಿಗೆ ಕೊಂಚ ಹಸಿಶುಂಠಿ, ಲಿಂಬೆ, ಪುದಿನಾ ಮತ್ತು ಕೊಂಚ ಕಲ್ಲುಪ್ಪು ಬೆರೆಸಿ ಸೇವಿಸಿದರೆ ಈ ಹಾಲಿನ ರುಚಿಯನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಬನ್ನಿ, ಈ ರಸದ ಸೇವನೆಯ ಪ್ರಯೋಜನಗಳನ್ನು ನೋಡೋಣ....


​ಮೂತ್ರದ ಸೋಂಕು, ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳ್ಳೆಯದು...


ಕಬ್ಬಿನ ರಸದಿಂದ ಆರೋಗ್ಯದ ಒಂದು ಪ್ರಮುಖ ಪ್ರಯೋಜನವೆಂದರೆ ಇದು ಮೂತ್ರವರ್ಧಕವಾಗಿದ್ದು, ಇದು ಮೂತ್ರದ ಸೋಂಕು, ಮೂತ್ರ ಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಮತ್ತು ಮೂತ್ರ ಪಿಂಡಗಳ ಸರಿಯಾದ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.


​ಕಾಮಾಲೆ ರೋಗಕ್ಕೆ ಬೆಸ್ಟ್ ಮನೆಮದ್ದು


ಆಯುರ್ವೇದ ಶಾಸ್ತ್ರದ ಪ್ರಕಾರ, ಕಬ್ಬಿನ ರಸವು ನಿಮ್ಮ ಯಕೃತ್ತನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕಬ್ಬಿನ ರಸವನ್ನು ಕಾಮಾಲೆ ರೋಗಕ್ಕೆ ಪರಿಹಾರವಾಗಿ ಸೂಚಿಸಲಾಗುತ್ತದೆ.

ಕಾಮಾಲೆ ಎನ್ನುವುದು ದೈಹಿಕ ದ್ರವಗಳಲ್ಲಿ ಬಿಲಿರುಬಿನ್ ಎಂದು ಕರೆಯಲ್ಪಡುವ ವಸ್ತುವಿನ ಅಧಿಕ ಮಟ್ಟದಿಂದಾಗಿ ಚರ್ಮ ಮತ್ತು ನಮ್ಮ ದೇಹದ ಮೇಲ್ಮೈ ಹಳದಿ ವರ್ಣದ್ರವ್ಯಕ್ಕೆ ತಿರುಗುವ ಸ್ಥಿತಿ.

ಇದು ಕಾರ್ಯ ನಿರ್ವಹಿಸದ ಯಕೃತ್ತಿನಿಂದ ಪ್ರಚೋದಿಸಲ್ಪಡುತ್ತದೆ. ಕಬ್ಬಿನ ರಸವು ನಿಮ್ಮ ದೇಹವನ್ನು ಕಳೆದು ಹೋದ ಪ್ರೋಟೀನ್ ಗಳು ಮತ್ತು ತ್ವರಿತವಾಗಿ ಚೇತರಿಸಿಕೊಳ್ಳಲು ಅಗತ್ಯವಿರುವ ಪೋಷಕಾಂಶಗಳಿಂದ ತುಂಬಿಸುತ್ತದೆ.


​ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ


ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರಬೇಕಾದರೆ ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇರಬೇಕಾಗುತ್ತದೆ. ಈ ಅಂಶಗಳು ಕಬ್ಬಿನ ಹಾಲಿನಲ್ಲಿ ಹೇರಳವಾಗಿದ್ದು ಇದರ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.

ಕಬ್ಬಿನ ಹಾಲಿನ ನಿಯಮಿತ ಸೇವನೆಯ ಮೂಲಕ ಹೊಟ್ಟೆ, ಯಕೃತ್, ಮೂತ್ರಪಿಂಡಗಳು ಮತ್ತು ಶ್ವಾಸಸಂಬಂಧಿ ಅಂಗಗಳಲ್ಲಿ ಸೋಂಕು ಎದುರಾಗುವುದನ್ನು ತಡೆಯುತ್ತದೆ.


​ಮಲಬದ್ಧತೆ ಸಮಸ್ಯೆಗೆ ಒಳ್ಳೆಯದು


ಕಬ್ಬಿನ ರಸವು ವಿರೇಚಕ ಗುಣಗಳನ್ನು ಪ್ರದರ್ಶಿಸುತ್ತದೆ ಇದರಿಂದ ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಕಬ್ಬಿನ ರಸವು ಕ್ಷಾರೀಯ ಗುಣಗಳನ್ನು ಹೊಂದಿದೆ. ಅಂದರೆ ಆಮ್ಲೀಯತೆ ಮತ್ತು ಹೊಟ್ಟೆಯುರಿ ಸಮಸ್ಯೆಗೆ ಚಿಕಿತ್ಸೆ ನೀಡಲು ಇದು ಒಳ್ಳೆಯದು.


​ಕಬ್ಬಿನ ರಸ ಮಧುಮೇಹಿಗಳಿಗೆ ಒಳ್ಳೆಯದು, ಆದರೆ ವೈದ್ಯರ ಸಲಹೆ ಪಡೆದುಕೊಳ್ಳಿ


ಕಬ್ಬಿನ ರಸವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು (ಜಿ.ಐ) ಹೊಂದಿದೆ. ಆದ್ದರಿಂದ ಮಧುಮೇಹಿಗಳಿಗೆ ಇದನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತೀವ್ರವಾಗಿ ಬದಲಾಯಿಸುವುದಿಲ್ಲ ಎಂದು ಅಧ್ಯಯನವೊಂದು ತೋರಿಸಿ ಕೊಟ್ಟಿದೆ.

ಆದರೆ, ಒಂದು ವೇಳೆ ನೀವೂ ಕೂಡ ಮಧುಮೇಹ ರೋಗಿಯಾಗಿದ್ದರೆ, ಮೊದಲು ನೀವು ನಿಮ್ಮ ವೈದ್ಯರನ್ನು ಕೇಳಿ ತಿಳಿದು ನಂತರ ಅವರ ಸೂಚನೆಯ ಮೇರೆಗೆ ಸೂಚಿಸಿದ ಪ್ರಮಾಣದಲ್ಲಿ ಸೇವಿಸಬಹುದು.


​ಬಾಯಿಯ ಆರೋಗ್ಯಕ್ಕೆ ಒಳ್ಳೆಯದು


ಕಬ್ಬಿನ ರಸವು ಖನಿಜಗಳಿಂದ ಸಮೃದ್ಧವಾಗಿದೆ, ಇದು ಬಾಯಿಯ ಆರೋಗ್ಯ ಅಂದರೆ ಹಲ್ಲುಗಳು ಹುಟ್ಟುವುದು ಮತ್ತು ಕೆಟ್ಟ ಉಸಿರಾಟವನ್ನು ತಡೆಯಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಕಬ್ಬಿನ ರಸ ಏಕೆ ಜನಪ್ರಿಯವಾಗಿದೆ ಎಂದು ಈಗ ನಿಮಗೆ ತಿಳಿದಿದೆ ಅನ್ನಿಸುತ್ತದೆ. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಪುನಃಚೇತನಗೊಳಿಸಿ ಮತ್ತೆ ಹೈಡ್ರೇಟ್ ಮಾಡಬೇಕೆಂದು ನೀವು ಭಾವಿಸಿದಾಗ, ಒಂದು ಲೋಟ ಕಬ್ಬಿನ ರಸವನ್ನು ಕುಡಿಯಿರಿ.

***


No comments:

Post a Comment