SEARCH HERE

Friday 15 October 2021

ನರಕ ಚತುರ್ದಶಿ naraka chaturdashi ashvina bahula chaturdashi

 ನರಕ ಚತುರ್ದಶಿ  naraka chaturdashi

Chaturdashi means 14th day. In Gujarat, they call ‘Kali Chaudas’. In Rajasthan, as ‘Roop Chaudas’.In karnataka some region they call it as Naraka Chaturdashi.

         This day holds many legends.

Narakasura was a demon king of ‘Pradyoshapuram’. Amongst his other wicked deeds, he kidnapped beautiful women and forced them to live with him. To prove his power, Narakasura stole some earrings belonging to Aditi, mother of all gods. The gods were not happy and asked Lord Krishna for help. A animosity had been put on Narakasura. The animosity is one day he would be killed by his mother.

Lord Krishna knew that his wife, Satyabhama was a reincarnation of Narakasura’s mother. So he asked her to drive the chariot as he went to battle with the demon. Narakasura shot an arrow at Lord Krishna, who pretended to be hit. In Animosity, Satyabhama grabbed Lord Krishna’s bow and arrow and killed the demon instantly.

Narakasura’s mother declared that her son’s death should not be a day of gloom. So Hindus celebrate this event. It is said, after the battle with the demon, Lord Krishna bathed in oil to clean the splattered blood from his body. In some regions, rubbing oil into the body or having a special oil bath is part of a Deepavali Celebrations. It’s called as ‘Abhyangasnan’.

Another Myth is, Lord Rama son of ‘Dasaratha’ king of ‘Ayodhya’ and heir to the throne. Rama’s stepmother was jealous of Rama and wanted him to leave the kingdom; so that, her son could become heir. Under the influence of his wife, the king was forced to send Rama to live in exile in the forest for 14 years. Rama’s wife Sita; and his brother Lakshman a accompanied him. In the forest there lived several demons. 

Rama fought with rakshas and drove them away, making Ravana very angry. Ravana king of ‘Lanka’ is a great pundit, highly learned but still evil dominated his wisdom. He captured Rama’s wife Sita, but she cleverly left a trail of jewels so that Rama could follow her to the island of Lanka. With the help of his brother and Hanuman, Rama set off to save her.Hanuman and the army of Vanara’s (monkey) helped to build a huge bridge across to the Island. Rama crossed the bridge and shot an arrow into Ravana. The demon was killed and the Sita was rescued.

Rama, Sita and Lakshman returned to the kingdom after 14 years of living in the forest and Rama became king. People in Ayodhya celebrated Rama’s return by lighting up clay lamps.
***

ನರಕ_ಚತುರ್ದಶಿ

or
ನರಕ ಚತುರ್ದಶಿ NARAKA CHATURDASHI
 
ನರಕ ಚತುರ್ದಶಿಯಂದೇ ಅಮಾವಾಸ್ಯೆಯ ಆಚರಣೆಯಿರುವಾಗ ಎಣ್ಣೆನೀರು ಹಾಕಿಕೊಳ್ಳಬಹುದಾ ? –

 ಹಾಕಿಕೊಳ್ಳಬಹುದು. ನರಕಚತುರ್ದಶಿ ಸ್ನಾನ ಮಾಡಲೇಬೇಕಾದ್ದರಿಂದ ಅಮಾವಾಸ್ಯೆ ಇದ್ದರೂ ಎಣ್ಣೆ ಸ್ನಾನ ಮಾಡಬಹುದು


 ತೈಲಾಭ್ಯಂಜನ ಕಡ್ಡಾಯ –  ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.

ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.
ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.   ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಕೂಡ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.
 

 ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.  ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು.  ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದು ಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  
 

 ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.
 

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 
 

 ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ – 

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಎಣ್ಣೆ ಶಾಸ್ತ್ರಕ್ಕೆ ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

ಎಣ್ಣೆ ಶಾಸ್ತ್ರ ಮಾಡಿಸಿಕೊಳ್ಳುವಾಗ ಪೂರ್ವಾಭಿಮುಖವಾಗಿ ಕೂಡಬೇಕು.

ಎಣ್ಣೆ ಶಾಸ್ತ್ರಕ್ಕೆ ಕೂಡುವವರು ದೇವರಿಗೆ ನಮಿಸಿ ಕೂಡಬೇಕು.

ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


 ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು 

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
***

ಆರತಿ ಹಾಡು
ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
***


 ತೈಲಾಭ್ಯಂಜನ ಸ್ನಾನ ಸಂಕಲ್ಪ –
ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಚಂದ್ರೋದಯಕಾಲೇ ನರಕಾಂತಕ  ಶ್ರೀ ಗೋಪಾಲಕೃಷ್ಣ ಪ್ರೇರಣಯಾ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ ಸಪರಿವಾರಾಯ ಶ್ರೀ ಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗ ಸ್ನಾನಂ ಕರಿಷ್ಯೇ

ಯಮತರ್ಪಣಂ  यमतर्पणं

ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಮಮ ನರಕ ಭಯ ನಿವೃತ್ತಿದ್ವಾರ ಶ್ರೀ ಯಮಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ನರಕಚತುರ್ದಶಿ ಪರ್ವಕಾಲ ಪ್ರಯುಕ್ತಂ ಯಮ ತರ್ಪಣಮಹಂ ಕರಿಷ್ಯೇ.

ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ |
ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ |
ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ |
ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ |
ದದ್ಧ್ನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ |
ನೀಲಂ ತರ್ಪಯಾಮಿ | ಪರಮೇಷ್ಟಿನಂ ತರ್ಪಯಾಮಿ |
ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ |

यमं तर्पयामि । धर्मराजं तर्पयामि ।
मृत्युं तर्पयामि । अंतकं तर्पयामि ।
वैवस्वतं तर्पयामि । कालं तर्पयामि ।
सर्वभूतक्षयं तर्पयामि । औदुंबरं तर्पयामि ।
दद्ध्नं तर्पयामि । वृकोदरं तर्पयामि ।
नीलं तर्पयामि । परमेष्टिनं तर्पयामि ।
चित्रं तर्पयामि । चित्रगुप्तं तर्पयामि ।

——————
ಉಲ್ಕಾದಾನ – ಸೂರ್ಯನು ತುಲಾದಲ್ಲಿರುವಾಗ ಪ್ರದೋಷಕಾಲದಲ್ಲಿ ಉಲ್ಕೆಯನ್ನು ಪ್ರದರ್ಶಿಸಬೇಕು. ಇದರಿಂದ ಮಹಾಲಯಕ್ಕಾಗಿ ಯಮಲೋಕದಿಂದ ಬಂದ ಪಿತೃಗಳು ಹಿಂದಿರುಗುವಾಗ ದಾರಿಯನ್ನು ತೋರಲು ಹಾಗೂ ಕುಲದಲ್ಲಿ ಹುಟ್ಟಿ ಬೆಂಕಿಯಲ್ಲಿ ದಗ್ಧರಾದವರು, ಹಾಗೆಯೇ ಮೃತರಾದವರೂ, ಸಿಡಿಲು-ಮಿಂಚುಗಳಿಂದ ಮೃತರಾದವರೂ ಉತ್ತಮಗತಿಯನ್ನು ಹೊಂದಲು ಮನೆ ಸುತ್ತಮುತ್ತ ದೀಪಗಳನ್ನು ಬೆಳಗಿಸಬೇಕು.
ಅಗ್ನಿದಗ್ದಾ: ಯೇ ಜೀವಾ ಯೇಪ್ಯದಗ್ದಾ: ಕುಲೇ ಮಮ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ |
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಪದೇ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ |

ಸಂಗ್ರಹ : ನರಹರಿ ಸುಮಧ್ವ
- By NARAHARI SUMADHWA
***

ಅಭ್ಯಂಗಸ್ನಾನ, 
ಯಮತರ್ಪಣ

ಯಾರಿಗೆ ನರಕವನ್ನು ಕುರಿತು ಭಯವಿದೆಯೋ  ಅವರು  ನರಕ ಚತುರ್ದಶಿ ದಿನ  ಚಂದ್ರ ನಕ್ಷತ್ರಗಳಿರುವಾಗ ಅಭ್ಯಂಗ ಸ್ನಾನವನ್ನು ಮಾಡಿದರೆ ನರಕದ ಭೀತಿ ತಪ್ಪುತ್ತಧೆ.  ಚತುರ್ದಶಿಯಂದು ನರಕಾಸುರನನ್ನು ವಧಿಸಿ ಬಂದ ಕೃಷ್ಣನಿಗೆ  ರುಕ್ಮಿಣಿ ಸಹಿತ ಎಲ್ಲರೂ ಆರತಿಯನ್ನು ಮಾಡುತ್ತಾರೆ.   ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಕೆಲವು ಭಾಗದ ಜನರು ಅಭ್ಯಂಗ ಸ್ನಾನದ ನಂತರ  ಮನೆ ಮಂದಿಗೆಲ್ಲ ಆರತಿಯನ್ನು ಮಾಡತಾರೆ, ಕೆಲವು ಭಾಗದಲ್ಲಿ ಸ್ನಾನದಕ್ಕಿಂತ   ಮುಂಚೆ ಆರತಿಯನ್ನು ಮಾಡುತ್ತಾರೆ. ನಮ್ಮ ಪದ್ಧತಿ ಪ್ರಕಾರ ನಾವು ಸ್ನಾನಕ್ಕಿಂತ ಮೊದಲು ಮನೆಮಂದಿಗೆಲ್ಲ ಆರತಿ ಮಾಡಿ ನಂತರ ಅಭ್ಯಂಗ ಮಾಡುತ್ತೇವೆ...‌ ಯಾಕೆಂದರೆ  ಚಂದ್ರ ನಕ್ಷತ್ರ ಸಾಕ್ಷಿಯಾಗಿ ಆರತಿಯಾಗಬೇಕು..‌

ಅಭ್ಯಂಗ ಸ್ನಾನ.‌‌‌

ಬ್ರಹ್ಮ ಮುಹೂರ್ತದಲ್ಲಿ ಮಾಡುವ ಸ್ನಾನವು 'ದೇವ ಪರಂಪರೆ' ಎಂದು ಪರಿಗಣಿಸಲ್ಪಡುತ್ತದೆ. ಈ ರೀರಿ ದೇವ ಪರಂಪರೆಯನ್ನು ಅನುಸರಿಸುವುದರಿಂದ ಮನುಷ್ಯರಿಗೆ ಮುಂದಿನ ಲಾಭಗಳಾಗುತ್ತವೆ –

ಅ. ಶುದ್ಧ, ಪವಿತ್ರ ಮತ್ತು ನಿರ್ಮಲ ಸಂಸ್ಕಾರಗಳಾಗುತ್ತವೆ.

ಆ. ಬ್ರಹ್ಮ ಮುಹೂರ್ತದಲ್ಲಿ ಪ್ರಕ್ಷೇಪಿಸುವ ಈಶ್ವರೀ ಚೈತನ್ಯ ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸುವ ಸಾಮರ್ಥ್ಯ ಬರುತ್ತದೆ.

ಇ. ಈಶ್ವರೀ ಚೈತನ್ಯವನ್ನು ಗ್ರಹಿಸುವಂತಾಗಲು ತನ್ನನ್ನು ಸಮರ್ಥನನ್ನಾಗಿಸಲು ಮತ್ತು ಈಶ್ವರನ 'ಸಂಕಲ್ಪ, ಇಚ್ಛೆ ಮತ್ತು ಕ್ರಿಯೆ' ಈ ಮೂರು ರೀತಿಯ ಶಕ್ತಿಗಳು, ಮತ್ತು ಆ ಶಕ್ತಿಯ ಸಮ್ಮಿಲದಿಂದ ಜ್ಞಾನ ಶಕ್ತಿಯೂ ಗ್ರಹಿಸಲು ಅನುಕೂಲವಾಗುತ್ತದೆ.

ಈ. ಸ್ನಾನದ ನಂತರ ಹಣೆಗೆ ಹಚ್ಚಿಕೊಳ್ಳುವ ತಿಲಕವು 'ದುಷ್ಟ ಸಂಹಾರ, ಮತ್ತು ಧರ್ಮದ ವಿಜಯದ' ಪ್ರತೀಕವಾಗಿದೆ !

ಆ ದಿನದ ವಿಶೇಷ ಅಂದರೆ ಅಭ್ಯಂಗ ಸ್ನಾನ..

ಸುವಾಸನೆಯಿಂದ ಕೂಡಿದ ಎಣ್ಣೆಯನ್ನು  ಹೆಣ್ಣುಮಕ್ಕಳು ಮಕ್ಕಳು ಗಂಡಂದಿರಿಗೆ  ಹಚ್ಚಿ  ಅದಕ್ಕೂ ಒಂದು ಪದ್ಧತಿ ಇದೆ  ಮಣೆಯನ್ನು ಹಾಕಿ ಪೂರ್ವ ಅಥವಾ ಉತ್ತರಾಭಿಮುಖವಾಗಿಟ್ಟು  ಮಣೆ ಸೂತ್ತಲೂ ರಂಗವಲ್ಲಿ ಹಾಕಿ  ಒಬ್ಬೊಬ್ಬರನ್ನಾಗಿ ಕೂಡಿಸಿ ಹಣೆಗೆ ತಿಲಕಹಚ್ಚಿ   ಬಂಗಾರದ ಉಂಗುರದಿಂದ  ಎಣ್ಣೆಯಲ್ಲಿ ಅದ್ದಿ  ಹರಿಸಿ ಮಕ್ಕಳಿಗೆ ಈ ರೀತಿಯಾಗಿ 

ಆಯುಷ್ಯವಂತನಾಗು ..
ವಿದ್ಯಾವಂತನಾಗು 
ಬುದ್ಧಿವಂತನಾಗು
ಧನವಂತನಾಗು 
ಧಾನ್ಯವಂತನಾಗು
ಅಂತ ಹರಿಸಿ ಮಕ್ಕಳ ನೆತ್ತಿಗೆ ಬಂಗಾರದ ಉಂಗುರದಿಂದ ಎಣ್ಣೆ ಹಚ್ಚಿ ನಂತರ ಎಣ್ಣೆ ಹಚ್ಚಿ  ಮುಖಕ್ಕೆ ಕೈಕಾಲುಗಳಿಗೆ ಚಿಟಿಕೆ ಅರಿಷಿಣ ಹಾಕಿ,  ಅರಿಷಿಣ ಎಣ್ಣೆಹಚ್ಚಿ ಬಿಸಿನೀರಿನಿಂದ ಸ್ನಾನ ಹಾಕಮಾಡಿಸಬೇಕು, ಮನೆಯ ಪ್ರತಿಯೊಬ್ಬರು ಈ ರೀತಿ ಅಭ್ಯಂಗ ಸ್ನಾನ ಮಾಡಬೇಕು.‌

ನರಕ ಚತುರ್ದಶಿ ದಿವಸ ಬೆಳಗಿನ ಜಾವ ದೇವರಿಗೆ ಆರತಿ, ತುಳಸೀದೇವಿಗೆ ಆರತಿ ಮಾಡಿಎಣ್ಣೆ ಶಾಸ್ತ್ರ ಮಾಡುವಾಗ ಕಾಮಪಿತನನ್ನು ಸ್ಮರಿಸುತ್ತಾ ತೈಲ ಶಾಸ್ತ್ರ ಮಾಡುವಾಗ ಹೇಳುವ ಹಾಡು.

ಕಾರ್ತೀಕ ಮಾಸದಲ್ಲಿ ಕಾಮಪಿತನ ಪೂಜಿಸೆ//ಪ//.

ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ /
ದೇವಕಿ ಸುತನ ಪೂಜಿಸಿ/ 
ಮಾಸಾಭಿಮಾನಿ ದಾಮೋದರನ ಭಜಿಸಿ/
ಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿ/
ಮಹಾಪುಣ್ಯ ಪುರುಷೋತ್ತಮ ನ
ಕೊಂಡಾಡುತ ಎಣ್ಣೆ ಶಾಸ್ತ್ರ ವನೆ ರಚಿಸಿರಿ//೧//.

ಪುಣ್ಯ ಸಾಧನದ ಜನರೆಲ್ಲಾ / 
ಬ್ರಾಹ್ಮೀ ಸುಮುಹೂರ್ತದಲೆ ತಾವೆದ್ದು/
ಕುಂಭಿಣೀ ಕಸ್ತೂರಿ ಕರ್ಪೂರ ದ ವೀಳವ ಪಿಡಿದು/
ಮಹಾ ಪುಣ್ಯ ಪುರುಷೋತ್ತಮ ನ ಕೊಂಡಾಡುತ
ಎಣ್ಣೆ ಶಾಸ್ತ್ರ ವನು ರಚಿಸಿರಿ//೨//.

ಸೃಷ್ಟಿ ಗೆ ಕರ್ತ ಶ್ರೀಹರಿಯು/
ಸೃಷ್ಟಿಸಿದನು ದೀಪಾವಳಿಯ/
ಉತ್ತಮ ಚತುರ್ದಶಿ ದಿನದಲೆ ಬಂದು/
ಮತ್ತೆ ನರಕಾಸುರನ ವಧೆಯನು ಮಾಡಿ/
ಭಕ್ತರಿಗೊಲಿದ ಉತ್ತಮ ಶ್ರೀ ಹಯವದನ ಗೆ

ಎಣ್ಣೆ ಶಾಸ್ತ್ರ ವ ರಚಿಸಿರಿ //೩//..

or

 ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರ ರಚನೆ

ಎಣ್ಣೆ ಶಾಸ್ತ್ರದ ಪದ. (ದೀಪಾವಳಿ ಹಾಡುಗಳ ಸರಿಳಿಯಲ್ಲಿ ಆಯ್ದ ಕೃತಿ)


ಎಣ್ಣೀಯ ಹಚ್ಚಿದೆನೆ ಸುಗಂಧದ ಎಣ್ಣೀಯ ಹಚ್ಚಿದೆನೆ.. ಪಲ್ಲವಿ


ಎಣ್ಣೀಯ ಹಚ್ಚಿರೆ ವನ್ನುತೆಯರೆ ಕೇಶವನ್ನೆ ಹರವಿ ಚಲುವ ಮನ್ಮಥ ಪಿತನಿಗೆ.. ಅನುಪಲ್ಲವಿ.


ಶ್ಯಾಮಸುಂದರ ಸತ್ಯಭಾಮೆ ಸಹಿತ ಪೋಗಿ

ಭೂಮಿಸುತನ ಕೊಂದನೀ ಮಹದಿನದಿ....1


ಎಷ್ಟೊ ಕುಸುಮಗಳ ನಟ್ಟಿತೆಗೆದ ತೈಲ

ವೃಷ್ಣಿನಾಥನ ಮೈಯ ಮುಟ್ಟಿ ಸರ್ವಾಂಗದಿ.... 2


ಸಿಂಧುತನುಜೆ ಪ್ರೇಮಾನಂದಾದಿಂದಪ್ಪುವ

ಇಂದಿರೇಶನ ಸರ್ವ ಸುಂದರ ಕಾಯದಿ.... 3

***



ಯಮತರ್ಪಣೆ:

ಯಮ ತರ್ಪಣಇದು ಕೂಡಾ ಬಹಳ ಮಹತ್ವವಾದದ್ದು . ಯಮನ ಪ್ರಿತ್ಯರ್ಥವಾಗಿ ಅಭ್ಯಂಗ ಸ್ನಾನದ ನಂತರ ಅಪಮೃತ್ಯು (ಅಕಾಲ ಮೃತ್ಯು) ಬಾರದಿರುವಂತೆ ಯಮತರ್ಪಣೆಯನ್ನು ನೀಡಲು ಶಾಸ್ತ್ರಗಳಲ್ಲಿ ಹೇಳಲಾಗಿದೆ.  

ತಂದೆ ಇದ್ದವರು ಸವ್ಯದಿಂದ ತಂದೆ ಇಲ್ಲದವರು ಅಪಸವ್ಯದಿಂದ ತರ್ಪಣ ಕೊಡಬೇಕು ದಕ್ಷಿಣದಿಕ್ಕಿಗೆ ಮುಖಮಾಡಿ ...

ಸಂಕಲ್ಪ..‌

ಮಮ ಸಕಲ ಅರಿಷ್ಟ ಪರಿಹಾರ ದ್ವಾರಾ  ಶುಭಫಲ ಪ್ರಾಪ್ತರ್ಥಂ ಅಕಾಲ ,ಕಾಲಪಾಶ ,  ನಿವಾರಣಾರ್ಥಂ  ನರಕಚತುರ್ದಶಿನಿಮಿತ್ತಂ  ಯಮತರ್ಪಣಂ ಕರಿಷ್ಯೇ..

ನಂತರ ತರ್ಪಣ ಕೊಡಬೇಕು

ಯಮಂ ತರ್ಪಯಾಮಿ
ಧರ್ಮರಾಜಂ ತರ್ಪಯಾಮಿ
ಮೃತ್ಯುಂ ತರ್ಪಯಾಮಿ
ಅಂತಕಂ ತರ್ಪಯಾಮಿ
ವೈವಸ್ವತಂ ತರ್ಪಯಾಮಿ
ಕಾಲಂ ತರ್ಪಯಾಮಿ
ಸರ್ವಭೂತಕ್ಷಯಂ ತರ್ಪಯಾಮಿ
ಔದುಂಬರಂ ತರ್ಪಯಾಮಿ
ದದ್ನಂ ತರ್ಪಯಾಮಿ
ನೀಲಂ ತರ್ಪಯಾಮಿ
ಪರಮೇಷ್ಠೀನಂ ತರ್ಪಯಾಮಿ
ವೃಕೋಧರಂ ತರ್ಪಯಾಮಿ
ಚಿತ್ರಂ ತರ್ಪಯಾಮಿ
ಚಿತ್ರಗುಪ್ತಂ ತರ್ಪಯಾಮಿ

ಇಷ್ಟನ್ನು ಗಂಡಸರು ತಪ್ಪದೆ  ಈ ದಿನ ತರ್ಪಣವನ್ನು ಕೊಡಬೇಕು.....

ನಂತರ ಸಂಜೆ..

ಪಿತೃಗಳಿಗೆ ದಾರಿತೋರಿಸಬೇಕು ಆ ದಿನ . ಯಾರಿಗೆ ಪಿತೃ ದೋಷ , ಕಾಡಾಟ ಇರುತ್ತೊ ಅದೆಲ್ಲ ಕಡಿಮೆ ಆಗುತ್ತೆ ಹೇಗೆ ಅಂತ ತಿಳಿಸಿ ಕೊಡತೇನೆ....‌

ಸೂರ್ಯಾಸ್ತದ ನಂತರ  ಸಂಜೆ   ಒಂದು ಕಟ್ಟಿಗೆಗೆ ಕೊಳ್ಳಿಯನ್ನು ಹಚ್ಚಿ ..ಈಮಂತ್ರ ಹೇಳಿ ಮೇಲೆ ತೂರಬೇಕು... 

ಮಂತ್ರ..

ಅಗ್ನಿ ದಗ್ಧಾಶ್ಚ  ಯೇ ಜೀವಾ ಯೇsಪ್ಯದಗ್ಧಾಃ ಕುಲೆ ಮಮl
ಉಜ್ವಲಜ್ಯೋತಿಷಾ ದಗ್ಧಾಸ್ತೇ ಯಾಂತು  ಪರಮಾಂ ಗತಿಮ್ ll
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ 
ಉಜ್ವಲ ಜೋತಷಾ ವರ್ತ್ಮ  ಪ್ರಪಶ್ಯಂತು  ವ್ರಜಂತುತೆ ll

ಈ ಮಂತ್ರವನ್ನು ಹೇಳಿ ಕೊಳ್ಳಿಯನ್ನು ಸ್ವಲ್ಪ ಮೇಲೆ ತೂರಬೇಕು ..‌ ಸಾದ್ಯವಿದ್ದಷ್ಟು ಮಾತ್ರ  ತೂರಿ  ಬೇರೆಯವರ ಅಂಗಳ, ಮನೆ ಮೇಲೆ ಬಿಳಬಾರದು  ಸ್ವಲ್ಪ ಶಾಸ್ತ್ರ ಮಾಡಿದರೆ ಮಕ್ಕಳು ಒಳಗಿರಲಿ..‌‌...

ಈ ರೀತಿ ಮಾಡುವದರಿಂದ ಪಿತೃಗಳಿಗೆ ದಾರಿ ತೋರಿಸಿದಂತೆ  ....

ಯಮದೀಪ ಎಂದರೆ ಯಾವುದು

ದಕ್ಷಿಣ ದಿಕ್ಕಿಗೆ ಮುಖ ಮಾಡಿ ಧನತ್ರಯೋದಶಿ ದಿನ ಹಚ್ಚುವ ಪ್ರಥಮ ದೀಪ

***

Another Version - ಎಣ್ಣೆಶಾಸ್ರ on Naraka Chaturdashi
ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು

“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |

ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|

ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.


ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 


ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –


ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||

ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.


ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು

click listen audio ಬಣ್ಣಿಸಿ ಗೋಪಿ ಹರಸಿದಳು

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |

ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |

ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||

ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
***

No comments:

Post a Comment