SEARCH HERE

Friday, 15 October 2021

ನರಕ ಚತುರ್ದಶಿ naraka chaturdashi ashvina bahula chaturdashi

 ನರಕ ಚತುರ್ದಶಿ  naraka chaturdashi

Chaturdashi means 14th day. In Gujarat, they call ‘Kali Chaudas’. In Rajasthan, as ‘Roop Chaudas’.In karnataka some region they call it as Naraka Chaturdashi.

         This day holds many legends.

Narakasura was a demon king of ‘Pradyoshapuram’. Amongst his other wicked deeds, he kidnapped beautiful women and forced them to live with him. To prove his power, Narakasura stole some earrings belonging to Aditi, mother of all gods. The gods were not happy and asked Lord Krishna for help. A animosity had been put on Narakasura. The animosity is one day he would be killed by his mother.

Lord Krishna knew that his wife, Satyabhama was a reincarnation of Narakasura’s mother. So he asked her to drive the chariot as he went to battle with the demon. Narakasura shot an arrow at Lord Krishna, who pretended to be hit. In Animosity, Satyabhama grabbed Lord Krishna’s bow and arrow and killed the demon instantly.

Narakasura’s mother declared that her son’s death should not be a day of gloom. So Hindus celebrate this event. It is said, after the battle with the demon, Lord Krishna bathed in oil to clean the splattered blood from his body. In some regions, rubbing oil into the body or having a special oil bath is part of a Deepavali Celebrations. It’s called as ‘Abhyangasnan’.

Another Myth is, Lord Rama son of ‘Dasaratha’ king of ‘Ayodhya’ and heir to the throne. Rama’s stepmother was jealous of Rama and wanted him to leave the kingdom; so that, her son could become heir. Under the influence of his wife, the king was forced to send Rama to live in exile in the forest for 14 years. Rama’s wife Sita; and his brother Lakshman a accompanied him. In the forest there lived several demons. 

Rama fought with rakshas and drove them away, making Ravana very angry. Ravana king of ‘Lanka’ is a great pundit, highly learned but still evil dominated his wisdom. He captured Rama’s wife Sita, but she cleverly left a trail of jewels so that Rama could follow her to the island of Lanka. With the help of his brother and Hanuman, Rama set off to save her.Hanuman and the army of Vanara’s (monkey) helped to build a huge bridge across to the Island. Rama crossed the bridge and shot an arrow into Ravana. The demon was killed and the Sita was rescued.

Rama, Sita and Lakshman returned to the kingdom after 14 years of living in the forest and Rama became king. People in Ayodhya celebrated Rama’s return by lighting up clay lamps.
***

Naraka chaturdashi

NARAKA CHATURDASHI SNANA AND YAMA THARPANA – On this day, all those who desire freedom from Naraka (hell) should take an oil bath. This bath should be before sunrise, as on this day Goddess Laxmi resides in til oil and Ganga resides in water. Apply til oil (sesame oil) to head and body and take bath in warm water before sunrise ( mandatorily before sunrise - 1 Muhurtha or 48 minutes before sunrise). Apply shikakai powder or Sugandit utna (scented powder available for Deepawali in stores) and take bath

During this bath ,one more important karma in Shastras should be followed. In between the Narakachaturdashi snana/bath, rotate leaves of the 'Apamarga' plant around your head by chanting the following mantra “Seetaloshta….” (See below).This will destroy the sins committed in the past. Apamarga is called Nayuruvi in Tamil, Chirchita in Hindi, Aghada in Marathi, Uttareni in Telugu and Kannada and prickly chaff in English. Also Shastra mentions using Tumbi (bottle gourd in English or Sorakkai in Tamil) leaves and Prapunnata/Chakramarda leaves (Hindi name Chakavad/Pavand, Marathi name Takla, Tamil name Tagharai, Telugu Tagiri English name Cassia tora). These leaves can also be used along with Apamarga during bath. But Apamarga leaves is the main thing to which the sloka is addressed in Shastra. So rotate these leaves clockwise 3 times while chanting the sloka, have a bath and then discard them. The Apamarga leaves are said to absorb all your sins during this bath.

Once you finish the bath, wear fresh new clothes and perform Yama Tarpana (offering water and til to Yama) to please Lord of death. You have to sit facing South and offer Arghya (oblations) 3 times chanting each name. For this you should keep and Kalash/Chombu filled with water, add black til to it and chanting each name 3 times offer water each of the 3 times individually, for these 14 names of Lord Yama and his account keeper Chitragupta. This should be done by all men and boys who have undergone Upanayanam including those who have their respective fathers alive. Shastra recommends one more bath after this called Tula Snanam.

On this day evening, light a lamp with four wicks and donate it to a temple or mutt or keep it outside your house. This is for destruction of sins committed in the past. Mantra for lighting and keeping this lamp starting with “Datto deepachaturdashyam……” (belt). Each family member needs to chant it and keep one lamp with 4 wicks for themselves. Eating curry/sabzi made of urad dal leaves is recommended as per Shastras this day. Donating multilayered lamps in temples on this day is considered to fetch lot of punya (merits). Apart from these lamps, you can light regular Deepawali diyas/Agal vilakku and keep outside your house. Keeping these agal vilakku and lighting crackers on this day (Narakachaturdash) and Deepawali day (laxmi pujan day) has a very big significance, which will be explained below.

Share this article and help spread our Dharma
***

Naraka chaturdashi morning bath before sunrise – Mantra to be chanted while putting 7 dots of oil on right thigh before applying oil on head and other parts of the body.
Sit facing the east and elder women of the house should apply oil of 
all family members. For nuclear small families wife/mother etc.

अश्वत्थामा बलिव्र्यासो हनूमांश्च विभीषण:।
कृप: परशुरामश्च सप्तएतै चिरजीविन:॥

Ashwattama bali vyaso hanumanscha vibhishanaha
Krupah Parashuramscha saptaite chiranjeevinaha

These are 7 Chiranjeevis who are still alive even now. Taking these 7 names one by one, one one dot of oil should be put on the right thigh of house members. Once these dots are applied chant the below sloka praying for long life and then apply til oil on head and then body

Prayer before applying oil
सप्तैतान् संस्मरेन्नित्यं मार्कण्डेयमथाष्टमम्।
जीवेद्वर्षशतं सोपि सर्वव्याधिविवर्जित।।

Saptaitan smarennityam Markandeyam Athashtamam
Jeevedvarsha shatam sopi sarva vyadhi vivarjitah

Mantra to be chanted on Narakachaturdashi in between bath while rotating the 
Apamarga leaves around the head 3 times clockwise (will destroy sins)

सीतालोष्ठ समायुक्ता सकण्टक दलान्वित । हर पापमपामार्गं भ्राम्यमाण: पुनःपुनः ।। 

Seetaloshta samayukta sakantaka dalanvita.
Hara papam-apaamargam brahmyamaanaha punah punah


Mantra for Deepa Danam (donating lamps) with four wicks and til oil in temple or mutt on Narakchaturdashi day evening (for destroying one's sins)

दत्तो दीपः चतुर्दश्यां नरकप्रीतये मया।
चतुर्वर्ति समायुक्तः सर्वपापापनुत्तये।।

Datto deepash-chaturdashyam naraka-preetaye maya | Chaturvarti-samayuktaha sarvapapa-pannutaye ||
***
Who is Narakasura ?

Narakasura is a daithya born to Bhoodevi and Varahadevaru.   He was the king of Pragjyotisha Nagar (now in Assam). He had occupied that King’s position after overthrowing daanava king Ghatakasura.  He did a severe penance to please Lord Brahma.  Narakasura asked Brahma to bestow a boon that he shall die only in the hands of Bhoodevi, his mother.  He did not asked the boon of immortality, as he was sure that Brahma can’t give that boon.  So he asked for the killing only at the hands of Bhoodevi. 

Why Krishna & Satyabhama killed Narakasura ?

Narakasura in association with Murasura, had brought control of the entire world under his belt.  He went to Swargaloka and attacked Devendra, who had to flew out of Indraloka.  He stole 16100 women (gopikaa stree, who are originally sons of Agni, born as ladies just to marry to Krishna) and Narakasura had kept them in his Jail. 

Narakasura was very much arrogant he didn’t even let Aditi, the mother of the Devas. Aditi, had some precious heavenly ear rings, which was glowing even in the dark.  Narakasura tore the ear rings from Aditi, and took it.  Aditi, the mother of gods, (Devategalu) approached Satyabhama for help, who in turn approached Srikrishna. Narakasura had 11 Akshohini Sainya,

All gods approached Srihari with the leadership of Indra, who assured them to put an end to Narakasura.  But Narakasura had a boon that he would face death only at the hands of his mother Bhoodevi. So, Krishna asks his wife Sathyabhama, the reincarnation of Bhudevi, to be his charioteer in the battle with Naraka.

Krishna went alongwith Satyabhama, attacked Narakasura and his fort, riding on his chariot Garuda.  Naraka’s palace was guarded by the five-headed daithya Murasura .  Murasura hurled countless weapons at Krishna, but  Krishna shot each one down with his bow and arrow. Then Krishna killed him with his Sudarshana dislocating Mura’s five heads.  That is why Krishna got the name “Murari”.

Then a fierce fight went on with Krishna and Narakasura.  Satyabhama also joined in fighting with the daithya. Krishna also killed Narakasura with his Sudarshana Chakra and freed all the 16100 women who were imprisoned by the daithya. Bhoodevi then praises Krishna and begged him to take Naraka’s son Bhagadatta under his protection.  Krishna placed Bhagadatta (Narakasura’s son Bhagadatta who had fought for Kauravaas in Kurukshetra War)  on the throne and then freed all prisoners. The devathaas showered Krishna with flowers from the heavens. Before dying, Narakasura, requested a boon that his death anniversary should be celebrated by all people on earth with colorful light. This day is celebrated as ‘Naraka Chaturdashi’ – the first day of Diwali.  Narakasura’s death is celebrated as the victory of light over darkness

Narahari Sumadhwa
***
Naraka Chaturdashi
ನರಕ ಚತುರ್ದಶಿ

What is Naraka Chaturdashi ?

ನರಕ ಚತುರ್ದಶಿ –   ಆಶ್ವೀಜ ಬಹುಳ ಚತುರ್ದಶಿ

ನರಕ ಚತುರ್ದಶಿ ಹಬ್ಬವನ್ನು ಆಶ್ವಯುಜ ಕೃಷ್ಣಪಕ್ಷ ಚತುರ್ದಶಿ ದಿನ ಆಚರಿಸಲಾಗುತ್ತದೆ.  ಈ ಹಬ್ಬವನ್ನು ದೈತ್ಯ ನರಕಾಸುರನ ಸಂಹಾರ ನಿಮಿತ್ತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

Naraka Chaturdashi is celebrated to mark the end of Narakasura named daithya.  It is celebrated on Ashwija Krishna Chaturdashi.


ನರಕಾಸುರನ ಹಿನ್ನೆಲೆ ಏನು?

ಪರಮಾತ್ಮನ ವರಾಹಾವತಾರ ಕಾಲದಲ್ಲಿ ಭೂದೇವಿಯಲ್ಲಿ ಜನಿಸಿದ್ದ.  (ಪಂಚ ಭೂತಾಭಿಮಾನಿಗಳಲ್ಲಿ ಕೊನೆಯವಳು ಭೂದೇವಿ. ಸಾಕ್ಷಾತ್ ಲಕ್ಷ್ಮೀ ಅಲ್ಲ.)  ಮೂಲಪ್ರಕೃತಿಯಾದ ಮಹಾಲಕ್ಷ್ಮಿಯ ಭೂರೂಪದ ಆವೇಶ ಭೂದೇವಿಯಲ್ಲಿತ್ತು.  ಅವನು ಪ್ರಾಗ್ಜೋತಿಷಪುರದ ರಾಜನಾಗಿದ್ದ.  ಭೂದೇವಿಯ ಸುತನಾದ್ದರಿಂದ ಇವನನ್ನು ಭೌಮಾಸುರ ಎನ್ನುತ್ತಿದ್ದರು.  ನರಕಾಸುರನ ಬಳಿ ವೈಷ್ಣವಾಸ್ತ್ರ ಇತ್ತು ಮತ್ತು ಅವನಿಗೆ ಬ್ರಹ್ಮದೇವರಿಂದ ಅವಧ್ಯತ್ವ ವರವಿದ್ದಿತು. ಆದ್ದರಿಂದ ಅವನನ್ನು ಯಾರೂ ಸೋಲಿಸಲು ಆಗುತ್ತಿರಲಿಲ್ಲ.  ದೇವಮಾತೆಯಾದ ಅದಿತಿಯ ಕುಂಡಲಿಗಳನ್ನು ಅಪಹರಿಸಿದ್ದ.    ಅವನು ಎಲ್ಲಾ ಪ್ರಸಿದ್ಧ ರಾಜರುಗಳನ್ನೂ ಸೋಲಿಸಿ  ಅವರ ಎಲ್ಲಾ ಪುತ್ರಿಯರನ್ನೂ ಅಪಹರಿಸಿದ್ದ.    ಹೀಗೆ ಅಪಹರಿಸಿದ್ದ ರಾಜಕುಮಾರಿಯರ‌ ಸಂಖ್ಯೆಯೇ 16100.   ಈ ಎಲ್ಲಾ ರಾಜಕುಮಾರಿಯರೂ ಮೂಲತಃ: ಅಗ್ನಿಪುತ್ರರಾಗಿದ್ದು   ಸ್ತ್ರೀತ್ವ ಪಡೆದು ಕೃಷ್ಣನ ಮಡದಿಯರಾಗಬೇಕೆಂದು ತಪಸ್ಸು ಮಾಡಿ ಜನಿಸಿದ್ದರು.  ಅಂತಹ ಈ ಎಲ್ಲಾ ರಾಜಕುಮಾರಿಯರೂ ನರಕಾಸುರನ ಬಂಧನದಲ್ಲಿದ್ದರು.  ಒಮ್ಮೆ ನಾರದರು ಇವರನ್ನು ಭೇಟಿಯಾಗಿ ಅತ್ಯಂತ ನಿಷ್ಠೆಯಿಂದ ಲಕ್ಷ್ಮೀ ವ್ರತ ಮಾಡಲು ಹೇಳಿದರು.  ಅದರಂತೆ ಸಂಪೂರ್ಣ ಇಂದ್ರಿಯ ನಿಗ್ರಹವುಳ್ಳವರಾಗಿ ವ್ರತವನ್ನು ಮಾಡಿದರು.  ವಾಯುದೇವರು ಇವರ ತಪಸ್ಸಿಗೆ ಮೆಚ್ಚಿ ಶ್ರೀ ಕೃಷ್ಣನೇ ಪತಿಯಾಗುತ್ತಾನೆಂದು ಹೇಳಿದ್ದರು.

ಒಮ್ಮೆ ನಾರದರು  ಕೃಷ್ಣನ  ಹಿರಿಮಡದಿ ರುಕ್ಮಿಣೀದೇವಿಗೆ ಪಾರಿಜಾತ ಪುಷ್ಪವನ್ನು ನೀಡಿ ಶ್ರೀ ಕೃಷ್ಣ ಮತ್ತು ರುಕ್ಮಣಿಯರ ಮಹಿಮೆಯನ್ನು ಪ್ರಶಂಸಿದರು.  ಇದನ್ನು ನೋಡಿದ ಸತ್ಯಭಾಮೆ ತನ್ನನ್ನು ಹೊಗಳಲಿಲ್ಲ ಎಂದು ಕುಪಿತಳಾದಳು.   ಇದನ್ನು ಗಮನಿಸಿದ ಶ್ರೀ ಕೃಷ್ಣನು ನಿನಗೆ ಇಂದ್ರ ಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಕೊಡುತ್ತೇನೆ ಎಂದನು.  (ಇಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆ ಇಬ್ಬರೂ ಸಾಕ್ಷಾತ್ ಲಕ್ಷ್ಮೀದೇವಿಯ ಶ್ರೀ ಮತ್ತು ಭೂ ರೂಪಗಳೇ.  ಅವರಿಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ.  ಆದರೂ ಭೂಲೋಕದಲ್ಲಿ ಅವತಾರ ಮಾಡಿದುದರಿಂದ ಸವತಿ ಮತ್ಸರ ತೋರಿದ್ದಾರೆ ಎಂಬುದನ್ನು ಗಮನಿಸಬೇಕು.)

ಇದೇ ಸಂದರ್ಭದಲ್ಲಿ ನರಕಾಸುರನಿಂದ ದೇವೇಂದ್ರನು ಪರಾಜಿತನಾಗಿ, ಎಲ್ಲಾ ದೇವತೆಗಳಿಂದ ಋಷಿಮುನಿಗಳಿಂದಲೂ ಕೂಡಿ ಕೃಷ್ಣನ ಸಹಾಯ ಕೋರಿದರು.   ಕೃಷ್ಣನು ಸತ್ಯಭಾಮಾ ಸಹಿತನಾಗಿ ಗರುಡನ ಏರಿ ಪ್ರಾಗ್ಜ್ಯೋತಿಷಪುರವನ್ನು ತಲುಪಿ , ಅಲ್ಲಿ ಇದ್ದ ಎಲ್ಲಾ ದುರ್ಗಗಳನ್ನೂ ಭೇದಿಸಿ, ಐದು ಮುಖದ ಮುರಾಸುರನ ಸಂಹರಿಸಿ, ಮುರಾರಿ ಎನಿಸಿದನು.  ಆಗ ನರಕಾಸುರ ತನ್ನ  30 ಅಕ್ಷೋಹಿಣಿ ಸೈನ್ಯ ಸಮೇತನಾಗಿ ಯುದ್ಧಕ್ಕೆ ಬಂದು, ಬ್ರಹ್ಮದೇವರು ನೀಡಿದ್ದ *ಶತಘ್ನಿ ಎಂಬ ಗದೆಯನ್ನು ಕೃಷ್ಣನ ಮೇಲೆ ಎಸೆಯಲು, ತಾನು ಸ್ವತಃ ಅಭೇದ್ಯ, ಅಚ್ಚೇಧ್ಯನಾದರೂ ಅಪ್ರಾಕೃತ ಶರೀರಿಯಾದರೂ, ಆ ಗದಾ ಪ್ರಹಾರದಿಂದ ಶ್ರಮಗೊಂಡವನಂತೆ ನಟಿಸುತ್ತ ಮೂರ್ಛಿತನಾದನು.  ಆಗ ಸತ್ಯಭಾಮೆಯು ಕೃಷ್ಣನ ಶಾಂಜ್ಞ ಬಿಲ್ಲನ್ನು ಹಿಡಿದು ನರಕಾಸುರನ ಜೊತೆಗೆ ಯುದ್ಧ ಮಾಡಿ ಸೋಲಿಸಿದಳು. (ಇಲ್ಲಿ ಲಕ್ಷ್ಮೀದೇವಿಯ ಭೂರೂಪದ ಆವಿಷ್ಟ ರೂಪದ ಮಗ ನರಕಾಸುರ ಮತ್ತು ಸಾಕ್ಷಾತ್ ಲಕ್ಷ್ಮೀ ದೇವಿಯ ಭೂರೂಪದ ಅವತಾರಳಾದ ಸತ್ಯಭಾಮೆಯಿಂದಲೇ ಪರಾಜಿತನಾದ ನರಕಾಸುರ ಎಂಬುದು ಗಮನಾರ್ಹ). ನಂತರ ಕೃಷ್ಣ ಪರಮಾತ್ಮ ಮೇಲೆದ್ದು ತನ್ನ ಸುದರ್ಶನ ಚಕ್ರದಿಂದ ನರಕಾಸುರನ ಶಿರಸ್ಸು ಛೇದಿಸಿದನು.  ನಂತರ ಕೃಷ್ಣ ಸತ್ಯಭಾಮೆಯೊಂದಿಗೆ ನರಕಾಸುರನ ಅಂತ:ಪುರ ಪ್ರವೇಶಿಸಿ ಅಲ್ಲಿ ನರಕಾಸುರನ ತಾಯಿ ಭೂದೇವಿಯಿಂದ ಅದಿತಿಯ ಕುಂಡಲಿಗಳನ್ನು ಪಡೆದು, ದೇವೇಂದ್ನನಿಗೆ ನೀಡಿ, ನರಕಾಸುರನ ಪುತ್ರ ಭಗದತ್ತನನ್ನು ರಾಜನಾಗಿ ನೇಮಿಸಿದನು.  ನರಕಾಸುರನಿಂದ ಬಂಧಿತ ೧೬೧೦೦ ರಾಜಕುವರಿಯರನ್ನೂ ಬಂಧ ವಿಮೋಚನೆಗೊಳಿಸಿದನು.  ಶ್ರೀಕೃಷ್ಣ ಭಗದತ್ತನಿಗೆ ಆದೇಶಿಸುತ್ತಾನೆ – ” ಈ ಎಲ್ಲಾ ರಾಜಕುವರಿಯರಿಗೂ ಅಭ್ಯಂಜನ ಸ್ನಾನ ಮಾಡಿಸಿ, ಶ್ರೇಷ್ಠ ಉಡುಗೆ ತೊಡುಗೆ ಕೊಟ್ಟು ಕಳುಹಿಸು”. ಆಗ ಭೂದೇವಿ ತನ್ನ ಮಗ ನರಕಾಸುರನ ಕೊಂದ ರಾಜಕುಮಾರಿಯನ್ನು ವಿಮೋಚನೆ ಮಾಡಿಸಿದ ನೆನಪಿಗಾಗಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸಬೇಕೆಂದು ಕೋರಿದರು.

Narahari Sumadhwa
***
Yamadeepa daana –

On this day, lamps are kept burning through out night in as a devotion to Yamadharmaraja, the god of death and prayers offered to him to keep away death and despair. There is a very interesting story about this day.

Story behind Yamadeepdaana

Once there lived a king whose son was supposed to die of a snake bite on the fourth day of his marriage as per the horoscope.

On the fourth day of his marriage his young wife did not allow him to sleep. She laid all the ornaments and lots of gold and silver coins in a big heap at the entrance of her husband’s palatial room and lighted infinite numbers of lamps all over the place.   Further she went on telling stories and singing songs to ensure that her husband won’t sleep.

Yamadharmaraja came, in the form of a snake. His eyes got blinded by the dazzle of those brilliant lights and he could not enter the Prince’s chamber. So, he climbed on top of the heap of the ornaments  and sat there whole night listening to the melodious songs. In the morning he quietly went away.

Thus the young wife saved her husband from the door of death. Since then this day was regarded as the day of Yamadeepdaana and lamps are kept burning throughout the night in remembering Yamadharmaraja, the god of Death.

Lamps lighted with gingelli oil are placed outside the house, facing southwards (direction of Yama), in the evening. Normally a lamp is never allowed to be kept facing southwards. But on this day, it is an exception and the light is facing the south direction only. The stotra to be chanted on this day is while doing the deepadaana is :

dIpadaana maMtra–

mRutyunaa paashadanDaabhyaam kaalEna shyaamayaayuta: |
trayOdashyaam dIpadaanaat sUryaja: prIyataaM mama |

-NARAHARI SUMADHWA

ಯಮದೀಪ ದಾನ 

ಆಶ್ವಯುಜ ಬಹುಳ ತ್ರಯೋದಶಿಯಂದು ಯಮದೀಪದಾನ ಮಾಡತಕ್ಕದ್ದು.

ಈ ದಿನ ಸಾಯಂಕಾಲ ದೀಪವನ್ನು ಯಮನಿಗಾಗಿ ದಕ್ಷಿಣದಿಕ್ಕಿಗೆ ಮುಖಮಾಡಿ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ಹಚ್ಚಬೇಕು. ಇದರಿಂದ ಅಪಮೃತ್ಯು ಪರಿಹಾರವಾಗಲಿದೆ. ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶದೀಪ ಎನ್ನುತ್ತಾರೆ.

ಅಕಾಶದೀಪ ಮತ್ತು ಯಮದೀಪದಾನ ಮಾಡುವ ಉದ್ದೇಶ :

ಅ. ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೀರಿಸುವುದು.

ಆ. ಪಿತೃದೇವತೆಗಳ ತೃಪ್ತಿ

ಇ. ದೀಪ ಬೆಳಗುವುದರಿಂದ ನಮ್ಮ ಸಂಸ್ಕೃತಿಯ ಪ್ರೋತ್ಸಾಹ.

ಈ. ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ  ಎಳ್ಳೆಣ್ಣೆಯ ದೀಪವನ್ನು ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.

ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಯಮದೀಪದ ತಯಾರಿಕೆ : ಅಷ್ಟಭುಜಾಕಾಲದಲ್ಲಿ ಅಥವಾ ದ್ವಾದಶ ಭುಜಾಕಾರದಲ್ಲಿ ಬಿದಿರಿನ ಕೋಲುಗಳಿಂದ ಗೂಡು ರಚಿಸಿ, ದೀಪವು ಶಾಂತವಾಗದಂತೆ ಅದನ್ನು ಬಟ್ಟೆ ಅಥವಾ ಕಾಗದದಿಂದ ಸುತ್ತಿ ಮನೆಯ ಎತ್ತರದ ಭಾಗದಲ್ಲಿ ಹಚ್ಚಿಡಬೇಕು. ಕೆಲವರು ವಿದ್ಯುದ್ದೀಪಗಳಿಂದ ಅಲಂಕಾರ ಮಾಡುತ್ತಾರೆ. ಆದರೆ ಎಣ್ಣೆ ದೀಪವನ್ನು ಹಚ್ಚುವುದರಿಂದ ಪುಣ್ಯ ಬರುತ್ತದೆ.

ಸಂಕಲ್ಪ :  ಪ್ರಣವಸ್ಯ……. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶ್ಯಾಂ ಶುಭತಿಥೌ, ಪ್ರದೋಷ ಸಮಯೇ, ಯಮಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ ಯಮದೀಪದಾನಂ ಕರಿಷ್ಯೇ. ಇದು ಯಮನಿಗೆ ಉದ್ದಿಶ್ಯವಾದ ದೀಪಜ್ವಲನವಾದ್ದರಿಂದ ಯಮದೀಪದಾನ ಎಂದು ಹೆಸರಾಗಿದೆ.

ಸಾಧ್ಯವಾದರೆ ಒಬ್ಬ ಬ್ರಾಹ್ಮಣನಿಗೆ ಒಂದು ಜೊತೆ ದೀಪವನ್ನು ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು.


ದೀಪದಾನ ಮಂತ್ರ :

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |

ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |

ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮ ಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.

ಇಂದಿನಿಂದ ಪ್ರತಿದಿನ ದೀಪವನ್ನು ಕಾರ್ತೀಕ ಮಾಸದ ಅಮಾವಾಸ್ಯೆಯವರೆಗೂ ಪ್ರಜ್ವಲಿಸಬೇಕು. ಸಾಧ್ಯವಿಲ್ಲದಿದ್ದರೆ ಬೇರೆಯವರು ಹಚ್ಚಿದ ದೀಪದ ತುದಿಯನ್ನು (ಕರಿಯನ್ನು) ತೆಗೆದು ದೀಪ ಆರದಂತೆ ನೋಡಿಕೊಳ್ಳಿ.

 

ಇದರ ಬಗ್ಗೆ ಒಂದು ಕಥೆಯಿದೆ :

ಹಿಂದೆ ಒಬ್ಬ ರಾಜಕುಮಾರನ ಜಾತಕ ರೀತ್ಯಾ ಅವನ ಮೃತ್ಯು ಸರ್ಪ ಕಡಿತದಿಂದ ಅವನ ವಿವಾಹವಾದ ನಾಲ್ಕನೇ ದಿನ ಸಾವು ಬರಬೇಕಿತ್ತು. ಆದರೆ ಅವನ ಪತ್ನಿ ಆ ನಾಲ್ಕನೇ ದಿನ ಅವನು ನಿದ್ರಿಸಲು ಬಿಡಲಿಲ್ಲ. ಅವಳು ತನ್ನ ಕೊಠಡಿಯ ಹೊರಗೆ ತನ್ನೆಲ್ಲಾ ಆಭರಣಗಳನ್ನು ಇಟ್ಟು ಅದರ ಸುತ್ತಲೂ ಲೆಕ್ಕವಿಲ್ಲದಷ್ಟು ದೀಪದ ಹಣತೆ ಹಚ್ಚಿ ದೇವರನಾಮಗಳನ್ನು ಪಾಡುತ್ತಾ, ಕಥೆಗಳನ್ನು ಹೇಳುತ್ತಾ ರಾಜಕುಮಾರ ನಿದ್ರಿಸದಂತೆ ನೋಡಿಕೊಂಡಳು. ಅದೇ ಸಮಯದಲ್ಲಿ ಯಮಧರ್ಮ ಹಾವಿನ ರೂಪದಲ್ಲಿ ಅಲ್ಲಿಗೆ ಬಂದಾಗ ಆ ದೀಪಗಳ ತೀವ್ರ ಪ್ರಕಾಶದ ಸಮೂಹದ ಮಧ್ಯೆ ಒಳ ಪ್ರವೇಶಿಸಲಾಗದೆ ಆಭರಣರಾಶಿಗಳ ಮೇಲೆ ಕುಳಿತು ಆಕೆಯ ಹಾಡು ಕೇಳುತ್ತಾ ಕುಳಿತನು. ತನ್ನ ಪತಿಯ ಪ್ರಾಣವನ್ನು ಉಳಿಸಿದಳು. ಅಂದಿನಿಂದ ಯಮದೀಪ ಎಂಬ ಹೆಸರಿನಿಂದ ದೀಪವನ್ನು ಯಮನ ದಿಕ್ಕಿನಲ್ಲಿ ಬೆಳಗುವ ಸಂಪ್ರದಾಯ ಇದೆ.

ನರಹರಿ ಸುಮಧ್ವ
***


ನರಕ_ಚತುರ್ದಶಿ

or
ನರಕ ಚತುರ್ದಶಿ NARAKA CHATURDASHI
 
ನರಕ ಚತುರ್ದಶಿಯಂದೇ ಅಮಾವಾಸ್ಯೆಯ ಆಚರಣೆಯಿರುವಾಗ ಎಣ್ಣೆನೀರು ಹಾಕಿಕೊಳ್ಳಬಹುದಾ ? –

 ಹಾಕಿಕೊಳ್ಳಬಹುದು. ನರಕಚತುರ್ದಶಿ ಸ್ನಾನ ಮಾಡಲೇಬೇಕಾದ್ದರಿಂದ ಅಮಾವಾಸ್ಯೆ ಇದ್ದರೂ ಎಣ್ಣೆ ಸ್ನಾನ ಮಾಡಬಹುದು


 ತೈಲಾಭ್ಯಂಜನ ಕಡ್ಡಾಯ –  ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.

ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.
ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.   ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಕೂಡ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.
 

 ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.  ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು.  ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದು ಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  
 

 ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.
 

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 
 

 ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ – 

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಎಣ್ಣೆ ಶಾಸ್ತ್ರಕ್ಕೆ ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

ಎಣ್ಣೆ ಶಾಸ್ತ್ರ ಮಾಡಿಸಿಕೊಳ್ಳುವಾಗ ಪೂರ್ವಾಭಿಮುಖವಾಗಿ ಕೂಡಬೇಕು.

ಎಣ್ಣೆ ಶಾಸ್ತ್ರಕ್ಕೆ ಕೂಡುವವರು ದೇವರಿಗೆ ನಮಿಸಿ ಕೂಡಬೇಕು.

ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


 ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು 

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
***

ಆರತಿ ಹಾಡು
ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
***


 ತೈಲಾಭ್ಯಂಜನ ಸ್ನಾನ ಸಂಕಲ್ಪ –
ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಚಂದ್ರೋದಯಕಾಲೇ ನರಕಾಂತಕ  ಶ್ರೀ ಗೋಪಾಲಕೃಷ್ಣ ಪ್ರೇರಣಯಾ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ ಸಪರಿವಾರಾಯ ಶ್ರೀ ಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗ ಸ್ನಾನಂ ಕರಿಷ್ಯೇ

ಯಮತರ್ಪಣಂ  यमतर्पणं

ಆಚಮನ, ಸಂಕಲ್ಪ –  ಪ್ರಣವಸ್ಯ………………….

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ಚತುರ್ದಶ್ಯಾಂ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಮಮ ನರಕ ಭಯ ನಿವೃತ್ತಿದ್ವಾರ ಶ್ರೀ ಯಮಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ನರಕಚತುರ್ದಶಿ ಪರ್ವಕಾಲ ಪ್ರಯುಕ್ತಂ ಯಮ ತರ್ಪಣಮಹಂ ಕರಿಷ್ಯೇ.

ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ |
ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ |
ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ |
ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ |
ದದ್ಧ್ನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ |
ನೀಲಂ ತರ್ಪಯಾಮಿ | ಪರಮೇಷ್ಟಿನಂ ತರ್ಪಯಾಮಿ |
ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ |

यमं तर्पयामि । धर्मराजं तर्पयामि ।
मृत्युं तर्पयामि । अंतकं तर्पयामि ।
वैवस्वतं तर्पयामि । कालं तर्पयामि ।
सर्वभूतक्षयं तर्पयामि । औदुंबरं तर्पयामि ।
दद्ध्नं तर्पयामि । वृकोदरं तर्पयामि ।
नीलं तर्पयामि । परमेष्टिनं तर्पयामि ।
चित्रं तर्पयामि । चित्रगुप्तं तर्पयामि ।

——————
ಉಲ್ಕಾದಾನ – ಸೂರ್ಯನು ತುಲಾದಲ್ಲಿರುವಾಗ ಪ್ರದೋಷಕಾಲದಲ್ಲಿ ಉಲ್ಕೆಯನ್ನು ಪ್ರದರ್ಶಿಸಬೇಕು. ಇದರಿಂದ ಮಹಾಲಯಕ್ಕಾಗಿ ಯಮಲೋಕದಿಂದ ಬಂದ ಪಿತೃಗಳು ಹಿಂದಿರುಗುವಾಗ ದಾರಿಯನ್ನು ತೋರಲು ಹಾಗೂ ಕುಲದಲ್ಲಿ ಹುಟ್ಟಿ ಬೆಂಕಿಯಲ್ಲಿ ದಗ್ಧರಾದವರು, ಹಾಗೆಯೇ ಮೃತರಾದವರೂ, ಸಿಡಿಲು-ಮಿಂಚುಗಳಿಂದ ಮೃತರಾದವರೂ ಉತ್ತಮಗತಿಯನ್ನು ಹೊಂದಲು ಮನೆ ಸುತ್ತಮುತ್ತ ದೀಪಗಳನ್ನು ಬೆಳಗಿಸಬೇಕು.
ಅಗ್ನಿದಗ್ದಾ: ಯೇ ಜೀವಾ ಯೇಪ್ಯದಗ್ದಾ: ಕುಲೇ ಮಮ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ |
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಪದೇ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ |

ಸಂಗ್ರಹ : ನರಹರಿ ಸುಮಧ್ವ
- By NARAHARI SUMADHWA
***

ಅಭ್ಯಂಗಸ್ನಾನ, 
ಯಮತರ್ಪಣ

ಯಾರಿಗೆ ನರಕವನ್ನು ಕುರಿತು ಭಯವಿದೆಯೋ  ಅವರು  ನರಕ ಚತುರ್ದಶಿ ದಿನ  ಚಂದ್ರ ನಕ್ಷತ್ರಗಳಿರುವಾಗ ಅಭ್ಯಂಗ ಸ್ನಾನವನ್ನು ಮಾಡಿದರೆ ನರಕದ ಭೀತಿ ತಪ್ಪುತ್ತಧೆ.  ಚತುರ್ದಶಿಯಂದು ನರಕಾಸುರನನ್ನು ವಧಿಸಿ ಬಂದ ಕೃಷ್ಣನಿಗೆ  ರುಕ್ಮಿಣಿ ಸಹಿತ ಎಲ್ಲರೂ ಆರತಿಯನ್ನು ಮಾಡುತ್ತಾರೆ.   ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಕೆಲವು ಭಾಗದ ಜನರು ಅಭ್ಯಂಗ ಸ್ನಾನದ ನಂತರ  ಮನೆ ಮಂದಿಗೆಲ್ಲ ಆರತಿಯನ್ನು ಮಾಡತಾರೆ, ಕೆಲವು ಭಾಗದಲ್ಲಿ ಸ್ನಾನದಕ್ಕಿಂತ   ಮುಂಚೆ ಆರತಿಯನ್ನು ಮಾಡುತ್ತಾರೆ. ನಮ್ಮ ಪದ್ಧತಿ ಪ್ರಕಾರ ನಾವು ಸ್ನಾನಕ್ಕಿಂತ ಮೊದಲು ಮನೆಮಂದಿಗೆಲ್ಲ ಆರತಿ ಮಾಡಿ ನಂತರ ಅಭ್ಯಂಗ ಮಾಡುತ್ತೇವೆ...‌ ಯಾಕೆಂದರೆ  ಚಂದ್ರ ನಕ್ಷತ್ರ ಸಾಕ್ಷಿಯಾಗಿ ಆರತಿಯಾಗಬೇಕು..‌

ಅಭ್ಯಂಗ ಸ್ನಾನ.‌‌‌

ಬ್ರಹ್ಮ ಮುಹೂರ್ತದಲ್ಲಿ ಮಾಡುವ ಸ್ನಾನವು 'ದೇವ ಪರಂಪರೆ' ಎಂದು ಪರಿಗಣಿಸಲ್ಪಡುತ್ತದೆ. ಈ ರೀರಿ ದೇವ ಪರಂಪರೆಯನ್ನು ಅನುಸರಿಸುವುದರಿಂದ ಮನುಷ್ಯರಿಗೆ ಮುಂದಿನ ಲಾಭಗಳಾಗುತ್ತವೆ –

ಅ. ಶುದ್ಧ, ಪವಿತ್ರ ಮತ್ತು ನಿರ್ಮಲ ಸಂಸ್ಕಾರಗಳಾಗುತ್ತವೆ.

ಆ. ಬ್ರಹ್ಮ ಮುಹೂರ್ತದಲ್ಲಿ ಪ್ರಕ್ಷೇಪಿಸುವ ಈಶ್ವರೀ ಚೈತನ್ಯ ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸುವ ಸಾಮರ್ಥ್ಯ ಬರುತ್ತದೆ.

ಇ. ಈಶ್ವರೀ ಚೈತನ್ಯವನ್ನು ಗ್ರಹಿಸುವಂತಾಗಲು ತನ್ನನ್ನು ಸಮರ್ಥನನ್ನಾಗಿಸಲು ಮತ್ತು ಈಶ್ವರನ 'ಸಂಕಲ್ಪ, ಇಚ್ಛೆ ಮತ್ತು ಕ್ರಿಯೆ' ಈ ಮೂರು ರೀತಿಯ ಶಕ್ತಿಗಳು, ಮತ್ತು ಆ ಶಕ್ತಿಯ ಸಮ್ಮಿಲದಿಂದ ಜ್ಞಾನ ಶಕ್ತಿಯೂ ಗ್ರಹಿಸಲು ಅನುಕೂಲವಾಗುತ್ತದೆ.

ಈ. ಸ್ನಾನದ ನಂತರ ಹಣೆಗೆ ಹಚ್ಚಿಕೊಳ್ಳುವ ತಿಲಕವು 'ದುಷ್ಟ ಸಂಹಾರ, ಮತ್ತು ಧರ್ಮದ ವಿಜಯದ' ಪ್ರತೀಕವಾಗಿದೆ !

ಆ ದಿನದ ವಿಶೇಷ ಅಂದರೆ ಅಭ್ಯಂಗ ಸ್ನಾನ..

ಸುವಾಸನೆಯಿಂದ ಕೂಡಿದ ಎಣ್ಣೆಯನ್ನು  ಹೆಣ್ಣುಮಕ್ಕಳು ಮಕ್ಕಳು ಗಂಡಂದಿರಿಗೆ  ಹಚ್ಚಿ  ಅದಕ್ಕೂ ಒಂದು ಪದ್ಧತಿ ಇದೆ  ಮಣೆಯನ್ನು ಹಾಕಿ ಪೂರ್ವ ಅಥವಾ ಉತ್ತರಾಭಿಮುಖವಾಗಿಟ್ಟು  ಮಣೆ ಸೂತ್ತಲೂ ರಂಗವಲ್ಲಿ ಹಾಕಿ  ಒಬ್ಬೊಬ್ಬರನ್ನಾಗಿ ಕೂಡಿಸಿ ಹಣೆಗೆ ತಿಲಕಹಚ್ಚಿ   ಬಂಗಾರದ ಉಂಗುರದಿಂದ  ಎಣ್ಣೆಯಲ್ಲಿ ಅದ್ದಿ  ಹರಿಸಿ ಮಕ್ಕಳಿಗೆ ಈ ರೀತಿಯಾಗಿ 

ಆಯುಷ್ಯವಂತನಾಗು ..
ವಿದ್ಯಾವಂತನಾಗು 
ಬುದ್ಧಿವಂತನಾಗು
ಧನವಂತನಾಗು 
ಧಾನ್ಯವಂತನಾಗು
ಅಂತ ಹರಿಸಿ ಮಕ್ಕಳ ನೆತ್ತಿಗೆ ಬಂಗಾರದ ಉಂಗುರದಿಂದ ಎಣ್ಣೆ ಹಚ್ಚಿ ನಂತರ ಎಣ್ಣೆ ಹಚ್ಚಿ  ಮುಖಕ್ಕೆ ಕೈಕಾಲುಗಳಿಗೆ ಚಿಟಿಕೆ ಅರಿಷಿಣ ಹಾಕಿ,  ಅರಿಷಿಣ ಎಣ್ಣೆಹಚ್ಚಿ ಬಿಸಿನೀರಿನಿಂದ ಸ್ನಾನ ಹಾಕಮಾಡಿಸಬೇಕು, ಮನೆಯ ಪ್ರತಿಯೊಬ್ಬರು ಈ ರೀತಿ ಅಭ್ಯಂಗ ಸ್ನಾನ ಮಾಡಬೇಕು.‌

ನರಕ ಚತುರ್ದಶಿ ದಿವಸ ಬೆಳಗಿನ ಜಾವ ದೇವರಿಗೆ ಆರತಿ, ತುಳಸೀದೇವಿಗೆ ಆರತಿ ಮಾಡಿಎಣ್ಣೆ ಶಾಸ್ತ್ರ ಮಾಡುವಾಗ ಕಾಮಪಿತನನ್ನು ಸ್ಮರಿಸುತ್ತಾ ತೈಲ ಶಾಸ್ತ್ರ ಮಾಡುವಾಗ ಹೇಳುವ ಹಾಡು.

ಕಾರ್ತೀಕ ಮಾಸದಲ್ಲಿ ಕಾಮಪಿತನ ಪೂಜಿಸೆ//ಪ//.

ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ /
ದೇವಕಿ ಸುತನ ಪೂಜಿಸಿ/ 
ಮಾಸಾಭಿಮಾನಿ ದಾಮೋದರನ ಭಜಿಸಿ/
ಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿ/
ಮಹಾಪುಣ್ಯ ಪುರುಷೋತ್ತಮ ನ
ಕೊಂಡಾಡುತ ಎಣ್ಣೆ ಶಾಸ್ತ್ರ ವನೆ ರಚಿಸಿರಿ//೧//.

ಪುಣ್ಯ ಸಾಧನದ ಜನರೆಲ್ಲಾ / 
ಬ್ರಾಹ್ಮೀ ಸುಮುಹೂರ್ತದಲೆ ತಾವೆದ್ದು/
ಕುಂಭಿಣೀ ಕಸ್ತೂರಿ ಕರ್ಪೂರ ದ ವೀಳವ ಪಿಡಿದು/
ಮಹಾ ಪುಣ್ಯ ಪುರುಷೋತ್ತಮ ನ ಕೊಂಡಾಡುತ
ಎಣ್ಣೆ ಶಾಸ್ತ್ರ ವನು ರಚಿಸಿರಿ//೨//.

ಸೃಷ್ಟಿ ಗೆ ಕರ್ತ ಶ್ರೀಹರಿಯು/
ಸೃಷ್ಟಿಸಿದನು ದೀಪಾವಳಿಯ/
ಉತ್ತಮ ಚತುರ್ದಶಿ ದಿನದಲೆ ಬಂದು/
ಮತ್ತೆ ನರಕಾಸುರನ ವಧೆಯನು ಮಾಡಿ/
ಭಕ್ತರಿಗೊಲಿದ ಉತ್ತಮ ಶ್ರೀ ಹಯವದನ ಗೆ

ಎಣ್ಣೆ ಶಾಸ್ತ್ರ ವ ರಚಿಸಿರಿ //೩//..

or

 ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರ ರಚನೆ

ಎಣ್ಣೆ ಶಾಸ್ತ್ರದ ಪದ. (ದೀಪಾವಳಿ ಹಾಡುಗಳ ಸರಿಳಿಯಲ್ಲಿ ಆಯ್ದ ಕೃತಿ)


ಎಣ್ಣೀಯ ಹಚ್ಚಿದೆನೆ ಸುಗಂಧದ ಎಣ್ಣೀಯ ಹಚ್ಚಿದೆನೆ.. ಪಲ್ಲವಿ


ಎಣ್ಣೀಯ ಹಚ್ಚಿರೆ ವನ್ನುತೆಯರೆ ಕೇಶವನ್ನೆ ಹರವಿ ಚಲುವ ಮನ್ಮಥ ಪಿತನಿಗೆ.. ಅನುಪಲ್ಲವಿ.


ಶ್ಯಾಮಸುಂದರ ಸತ್ಯಭಾಮೆ ಸಹಿತ ಪೋಗಿ

ಭೂಮಿಸುತನ ಕೊಂದನೀ ಮಹದಿನದಿ....1


ಎಷ್ಟೊ ಕುಸುಮಗಳ ನಟ್ಟಿತೆಗೆದ ತೈಲ

ವೃಷ್ಣಿನಾಥನ ಮೈಯ ಮುಟ್ಟಿ ಸರ್ವಾಂಗದಿ.... 2


ಸಿಂಧುತನುಜೆ ಪ್ರೇಮಾನಂದಾದಿಂದಪ್ಪುವ

ಇಂದಿರೇಶನ ಸರ್ವ ಸುಂದರ ಕಾಯದಿ.... 3

***



ಯಮತರ್ಪಣೆ:

ಯಮ ತರ್ಪಣಇದು ಕೂಡಾ ಬಹಳ ಮಹತ್ವವಾದದ್ದು . ಯಮನ ಪ್ರಿತ್ಯರ್ಥವಾಗಿ ಅಭ್ಯಂಗ ಸ್ನಾನದ ನಂತರ ಅಪಮೃತ್ಯು (ಅಕಾಲ ಮೃತ್ಯು) ಬಾರದಿರುವಂತೆ ಯಮತರ್ಪಣೆಯನ್ನು ನೀಡಲು ಶಾಸ್ತ್ರಗಳಲ್ಲಿ ಹೇಳಲಾಗಿದೆ.  

ತಂದೆ ಇದ್ದವರು ಸವ್ಯದಿಂದ ತಂದೆ ಇಲ್ಲದವರು ಅಪಸವ್ಯದಿಂದ ತರ್ಪಣ ಕೊಡಬೇಕು ದಕ್ಷಿಣದಿಕ್ಕಿಗೆ ಮುಖಮಾಡಿ ...

ಸಂಕಲ್ಪ..‌

ಮಮ ಸಕಲ ಅರಿಷ್ಟ ಪರಿಹಾರ ದ್ವಾರಾ  ಶುಭಫಲ ಪ್ರಾಪ್ತರ್ಥಂ ಅಕಾಲ ,ಕಾಲಪಾಶ ,  ನಿವಾರಣಾರ್ಥಂ  ನರಕಚತುರ್ದಶಿನಿಮಿತ್ತಂ  ಯಮತರ್ಪಣಂ ಕರಿಷ್ಯೇ..

ನಂತರ ತರ್ಪಣ ಕೊಡಬೇಕು

ಯಮಂ ತರ್ಪಯಾಮಿ
ಧರ್ಮರಾಜಂ ತರ್ಪಯಾಮಿ
ಮೃತ್ಯುಂ ತರ್ಪಯಾಮಿ
ಅಂತಕಂ ತರ್ಪಯಾಮಿ
ವೈವಸ್ವತಂ ತರ್ಪಯಾಮಿ
ಕಾಲಂ ತರ್ಪಯಾಮಿ
ಸರ್ವಭೂತಕ್ಷಯಂ ತರ್ಪಯಾಮಿ
ಔದುಂಬರಂ ತರ್ಪಯಾಮಿ
ದದ್ನಂ ತರ್ಪಯಾಮಿ
ನೀಲಂ ತರ್ಪಯಾಮಿ
ಪರಮೇಷ್ಠೀನಂ ತರ್ಪಯಾಮಿ
ವೃಕೋಧರಂ ತರ್ಪಯಾಮಿ
ಚಿತ್ರಂ ತರ್ಪಯಾಮಿ
ಚಿತ್ರಗುಪ್ತಂ ತರ್ಪಯಾಮಿ

ಇಷ್ಟನ್ನು ಗಂಡಸರು ತಪ್ಪದೆ  ಈ ದಿನ ತರ್ಪಣವನ್ನು ಕೊಡಬೇಕು.....

ನಂತರ ಸಂಜೆ..

ಪಿತೃಗಳಿಗೆ ದಾರಿತೋರಿಸಬೇಕು ಆ ದಿನ . ಯಾರಿಗೆ ಪಿತೃ ದೋಷ , ಕಾಡಾಟ ಇರುತ್ತೊ ಅದೆಲ್ಲ ಕಡಿಮೆ ಆಗುತ್ತೆ ಹೇಗೆ ಅಂತ ತಿಳಿಸಿ ಕೊಡತೇನೆ....‌

ಸೂರ್ಯಾಸ್ತದ ನಂತರ  ಸಂಜೆ   ಒಂದು ಕಟ್ಟಿಗೆಗೆ ಕೊಳ್ಳಿಯನ್ನು ಹಚ್ಚಿ ..ಈಮಂತ್ರ ಹೇಳಿ ಮೇಲೆ ತೂರಬೇಕು... 

ಮಂತ್ರ..

ಅಗ್ನಿ ದಗ್ಧಾಶ್ಚ  ಯೇ ಜೀವಾ ಯೇsಪ್ಯದಗ್ಧಾಃ ಕುಲೆ ಮಮl
ಉಜ್ವಲಜ್ಯೋತಿಷಾ ದಗ್ಧಾಸ್ತೇ ಯಾಂತು  ಪರಮಾಂ ಗತಿಮ್ ll
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ 
ಉಜ್ವಲ ಜೋತಷಾ ವರ್ತ್ಮ  ಪ್ರಪಶ್ಯಂತು  ವ್ರಜಂತುತೆ ll

ಈ ಮಂತ್ರವನ್ನು ಹೇಳಿ ಕೊಳ್ಳಿಯನ್ನು ಸ್ವಲ್ಪ ಮೇಲೆ ತೂರಬೇಕು ..‌ ಸಾದ್ಯವಿದ್ದಷ್ಟು ಮಾತ್ರ  ತೂರಿ  ಬೇರೆಯವರ ಅಂಗಳ, ಮನೆ ಮೇಲೆ ಬಿಳಬಾರದು  ಸ್ವಲ್ಪ ಶಾಸ್ತ್ರ ಮಾಡಿದರೆ ಮಕ್ಕಳು ಒಳಗಿರಲಿ..‌‌...

ಈ ರೀತಿ ಮಾಡುವದರಿಂದ ಪಿತೃಗಳಿಗೆ ದಾರಿ ತೋರಿಸಿದಂತೆ  ....

ಯಮದೀಪ ಎಂದರೆ ಯಾವುದು

ದಕ್ಷಿಣ ದಿಕ್ಕಿಗೆ ಮುಖ ಮಾಡಿ ಧನತ್ರಯೋದಶಿ ದಿನ ಹಚ್ಚುವ ಪ್ರಥಮ ದೀಪ

***
6:23 PM
ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –
ಪಟಾಕಿ ಏಕೆ ಹಚ್ಚುತ್ತಾರೆ ?

Why oil bath to be taken on Naraka Chaturdashi day ?-

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪ ಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.   ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  ಅದರಂತೆ ಈದಿನ ಹಬ್ಬವನ್ನಾಗಿ ಆಚರಿಸಿ, ಅಭ್ಯಂಜನ ಮಾಡಿ ಕೊಳ್ಳುವ ಪರಿಪಾಠವಿದೆ.  ನರಕಾಸುರ ಸಾಯುವ ಮುನ್ನ ಈ ದಿನವನ್ನು ಬಣ್ಣಬಣ್ಣದ ದೀಪಗಳನ್ನು ಹಚ್ಚಿ ಆಚರಿಸಬೇಕೆಂದು ಕೋರಿದನು.  ಅದರಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ.



ತೈಲಾಭ್ಯಂಜನ ಕಡ್ಡಾಯ – 
 ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು. ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ. ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.  ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.


Narahari Sumadhwa
***

Another Version - ಎಣ್ಣೆಶಾಸ್ರ on Naraka Chaturdashi
ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು

“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |

ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|

ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.


ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 


ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –


ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||

ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.


ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು

click listen audio ಬಣ್ಣಿಸಿ ಗೋಪಿ ಹರಸಿದಳು

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |

ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |

ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||

ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||

ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
***

No comments:

Post a Comment