SEARCH HERE

Tuesday, 1 January 2019

shankaracharyaru 746 ಶಂಕರಾಚಾರ್ಯರು





Pictorial Biograph Of Jagadguru Adi Shankaracharya 








ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ 

ಪರಿಪೂರ್ಣ ನಾಮ ಶ್ರಿಆದಿ ಶಂಕರಾಚಾರ್ಯ 
 
 ವೈಶಾಖ ಶುದ್ಧ ಪಂಚಮಿಯಂದು "ಶ್ರೀ ಶಂಕರ ಜಯಂತಿ" ಈ ದಿನವನ್ನು ಭಾರತ ಸರ್ಕಾರ ದಾರ್ಶ'ನಿಕರ ದಿನ ಎಂದು ಘೋಷಿಸಿದೆ

ಶ್ರೀ ಶಂಕರ ಜಯಂತಿ : ವೈಶಾಖ ಶುದ್ಧ ಪಂಚಮಿ

ಕಾಲ : ಕ್ರಿ.ಶ.788-820

ತಾಯಿ-ತಂದೆ ಆರ್ಯಾಂಬಾ ಶಿವಗುರು

ಜನ್ಮಸ್ಥಳ : ಕೇರಳದ ಪೂರ್ಣ ನದಿ ತೀರದ ಕಾಲಡಿ

ಸನ್ಯಾಸ ಸ್ವೀಕಾರ : ಎಂಟನೆಯ ವರ್ಷ

ಗುರುಗಳು : ಶ್ರೀ ಗೋವಿಂದ ಭಗವತ್ಪಾದರು

ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ

ಪಂಥಗಳು : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.

9 .ಪಂಚಾಯತನ ದೇವತೆಗಳು :ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.

ಶಂಕರರ ಮಾತೃಭಾಷೆ : ಮಲಯಾಳಂ

ಶಂಕರರ ಸಂಪರ್ಕ ಭಾಷೆ : ಸಂಸ್ಕೃತ

ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ

ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ

ಗುರುದ್ರೋಹ : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )

ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು :

ಪದ್ಮಪಾದಚಾರ್ಯ,
ಹಸ್ತಾಮಲಕಾಚಾರ್ಯ,
ತೋಟಕಾಚಾರ್ಯ,
ಸುರೇಶ್ವರಾಚಾರ್ಯ

ಪದ್ಮಪಾದಾಚಾರ್ಯರ ಪೂರ್ವನಾಮ : ಸನಂದನ

ಸುರೇಶ್ವರಾಚಾರ್ಯರ ಪೂರ್ವನಾಮ : ಮಂಡನ ಮಿಶ್ರ

ರಚಿಸಿದ ಗ್ರಂಥಗಳು : 54

ರಚಿಸಿದ ಕೊನೆಯ ಗ್ರಂಥ : ವಿವೇಕ ಚೂಡಾಮಣಿ

ಪ್ರಸ್ಥಾನತ್ರಯಗಳು : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ತುಗಳು

ಬ್ರಹ್ಮ ಸೂತ್ರ : 555 ಸೂತ್ರಗಳು

ಭಗವದ್ಗೀತೆ : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು

ಉಪನಿಷತ್ತುಗಳು : 10

ರಚಿಸಿದ ಸ್ತೋತ್ರಗಳು : 72

ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ :
       ಏಕಶ್ಲೋಕಿ ( ಕಿಂ ಜ್ಯೋತಿಸ್ತವ )

ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು :

1.ಕಾಲಭೈರವಾಷ್ಟಕ, 
2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ 
4.ಕಾಶಿ ಸ್ತೋತ್ರ

ಚತುರಾಮ್ನಾಯ ಪೀಠಗಳು ಮತ್ತು ಪೀಠಗಳ ಪ್ರಥಮಾಚಾರ್ಯರು :

ಶೃಂಗೇರಿ ಪೀಠ  - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ

ಪೀಠಗಳ ದೇವದೇವಿಯರು

1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ

ಪವಿತ್ರ ತೀರ್ಥಗಳು - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್ರ

ಸರ್ವಜ್ಞ ಪೀಠಾರೋಹಣ : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ

ಶಂಕರರ ಮಹಾ ಸಿದ್ಧಾಂತ : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ

ಶಂಕರರ ಸಾಧನೆ ;

 1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ

2.ದ್ವಾದಶೇ ಸರ್ವಶಾಸ್ತ್ರವಿತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ 

3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ

4.ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ

ದೇಹತ್ಯಾಗ - ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ
***

ಶಂಕರ ಜಯಂತಿ ಹಬ್ಬದ ಶುಭಾಶಯಗಳು
🙏ll ನಮೋ ನಮಃ ಶ್ರೀಗುರುಪಾದುಕಾಭ್ಯಾಂ ll🙏

🙏🙏ll ಶ್ರುತಿ ಸ್ಮೃತಿ ಪುರಾಣಂ 
            ಆಲಯಂ ಕರುಣಾಲಯಂ l 
            ನಮಾಮಿ ಭಗವತ್ಪಾದಂ 
            ಶಂಕರಂ ಲೋಕಶಂಕರಂ ll 🙏🙏

        🙏🙏ll भारतीतीर्थ माश्रये ll🙏🙏

ಮಾಲಾವಾರ ಪ್ರಾಂತದ ಕಾಲಡಿಯಲ್ಲಿ ವಿಧ್ಯಾಧಿರಾ -ಜ / ವಿಧ್ಯಾಧರ ಎಂಬ ಕರ್ಮನಿಷ್ಠ ವೇದ ಪಂಡಿತ -ರು, ಸದಾಚಾರಿಗಳು, ಶಿವ-ಭಕ್ತರು ವಾಸವಿದ್ದರು.
ವಿಧ್ಯಾಧಿರಾಜರು 'ಶಿವ-ಪುರಂ' ಮೂಲದವರು. ಕುಂಭಕೊಣಂನಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿ 'ಶಿವ-ಪುರಂ' ಗ್ರಾಮ ಇದೆ. ಅಲ್ಲೊಂದು ಶಿವನ ದೇವಸ್ಥಾನವಿದೆ. ಆ ಸ್ಥಳದಲ್ಲೇ ಶ್ರೀಮನ್ನಾರಾ ಯಣ ದೇವರು 'ವರಾಹ' ರೂಪದಲ್ಲಿ ಶಿವನನ್ನು ಆರಾಧಿಸಿದ್ದು. ಈ ದೇವಸ್ಥಾನದ ಪ್ರಧಾನ ದೇವರು ಲಿಂಗದ ರೂಪದಲ್ಲಿರುವ “ಶಿವ-ಗುರು-ನಾಥ“.

ವಿದ್ಯಾಧಿರಾಜರ ಪ್ರಖರ ಪಾಂಡಿತ್ಯವನ್ನು, ವಿದ್ವತ್ತನ್ನು ಮನಗಂಡ ಕೇರಳದ ಮಹಾರಾಜರು ಇವರಿಗೆ ‘ಆಕಾಶ-ಲಿಂಗ-ಮಹಾದೇವ’ ಮಂದಿರದ ಪ್ರಧಾನಾಧ್ಯಕ್ಷ ಪದವಿಯನ್ನು ನೀಡಿ ಗೌರವಿಸಿದ್ದರು ಮತ್ತು ಜೊತೆಗೆ ಮಂದಿರಕ್ಕೆ ಸೇರಿದ ಸ್ವತ್ತನ್ನು ಕೊಟ್ಟಿದ್ದರು. ಇದರಿಂದ ಬರುವ ಆದಾಯ ವಿದ್ಯಾಧರ ಪಂಡಿತರ ಜೀವನಕ್ಕೆ ಸಾಕಾಗುತ್ತಿತ್ತು. 

ವಿದ್ಯಾಧರ ಪಂಡಿತರು ಬಹಳವೇ ಸರಳ , ಮೃದು ಸ್ವಭಾವದ, ಮಿತ ಭಾಷಿಗಳು, ಉದಾರಶೀಲರು ಹಾಗೂ ದಾನವಂತ ಸಜ್ಜನರು.
ವಿದ್ಯಾಧರ ಪಂಡಿತರ ಧರ್ಮಪತ್ನಿ ಗಂಡು ಮಗುವಿಗೆ ಜನ್ಮವಿತ್ತರು. ಮಗುವಿನ ತೇಜೋವಂತ ಮುಖ ಮಂಡಲವನ್ನು, ಲಲಾಟವನ್ನು ನೋಡಿದ ತಂದೆ ವಿದ್ಯಾಧರ ಪಂಡಿತರು ಬಹಳ ಹರ್ಷಚಿತ್ತರಾಗಿ ಭಗವಂತ 'ಪಿನಾಕಪಾಣಿಯ' ಪ್ರಸಾದವೆಂದು ಮನಗಂಡು ತಮ್ಮ ಮಗುವಿಗೆ/ಮಗನಿಗೆ 'ಶಿವಗುರು' ಎಂದು ಹೆಸರಿಟ್ಟರು.

ಸೂಕ್ತವಾದ ಸಮಯಕ್ಕೆ ಬಾಲಕ ಶಿವಗುರು ವಿಗೆ ಉಪನಯನವನ್ನು ಮಾಡಿ ವಿದ್ಯಾಭ್ಯಾಸಕ್ಕೆ ಗುರುಕುಲಕ್ಕೆ ಕಳುಹಿಸಲಾಯಿತು. ಅತ್ಯಂತ ಕಡಿಮೆ ಸಮಯದಲ್ಲಿ ಪ್ರಚಂಡ ಪ್ರತಿಭೆಯ ಶಿವಗುರು ರವರು ವೇದ- ವೇದಾಂಗ ಗಳಲ್ಲಿ, ಶಾಸ್ತ್ರಗಳಲ್ಲಿ ಪರಿಣತಿ ಹೊಂದಿದರು. ತಮ್ಮ ಶಿಷ್ಯನ ಇಂತಹ ಅಸಾಮಾನ್ಯ ಗುಣವನ್ನು ಕಂಡ ಶಿವಗುರು ರವರ ಗುರುಗಳು ತಮ್ಮ ಶಿಷ್ಯನ ಬಗ್ಗೆ ಬಹಳ ಹೆಮ್ಮೆ ಪಟ್ಟರು.

ಕೆಲಸಮಯದ ನಂತರ ಗುರುಗಳು ತಮ್ಮ ಶಿಷ್ಯ ಶಿವಗುರು ರನ್ನು ಕರೆದ ಗುರುಗಳು, “ಮಗೂ, ಇಲ್ಲಿಗೆ ನಿನ್ನ ಗುರುಕುಲದ ವಿದ್ಯಾಭ್ಯಾಸ ಸಾಂಗೊಪಾಂಗವಾ ಯಿತು. ಇನ್ನು ನೀನು ಗೃಹಸ್ತಾಶ್ರಮಕ್ಕೆ ಅಡಿಯಿಟ್ಟು ತಂದೆ-ತಾಯಿಯ ಸೇವೆ ಮಾಡುತ್ತಾ ಜೀವನ ಸಾಗಿಸು“ ಎಂದರು. 

ತಮ್ಮ ಮಾತನ್ನು ಕೇಳಿದ ಶಿವಗುರು ರವರು ಬಹಳ ಖಿನ್ನಗೊಂಡಿದ್ದನ್ನು ನೋಡಿದ ಗುರುಗಳು, ಬಹಳ ಪ್ರೀತಿಯಿಂದ ಮಗ ಸಮಾನನಾದ ಶಿಷ್ಯನಿಗೆ ಕಾರಣವೇನೆಂದು ಕೇಳಿದಾಗ ಶಿವಗುರು ರವರು, 
“ಗುರುದೇವ, ಈ ಸಂಸಾರ ಎಂಬುದು ನಶ್ವರ. ಇದರ ಸುಖ-ದುಃಖ ಎರಡು ಅಲ್ಪಕಾಲಿಕ. ಇದರ ಮಾಯೆ ಎಂತಹ ಪಂಡಿತರನ್ನು ಮತಿಭ್ರಮಣೆ ಮಾಡುತ್ತದೆ. ಆದ್ದರಿಂದ ನಿಮ್ಮ ಸೇವೆಯನ್ನು ಮಾಡುತ್ತಾ ಬ್ರಹ್ಮಚಾರಿಯಾಗಿ ಯಜ್ಞ - ಯಾಗಾದಿಗ ಳನ್ನು ಮಾಡುತ್ತಾ ವೇದ- ಶಾಸ್ತ್ರಗಳ ಪಾರಾಯಣ ಮಾಡುತ್ತಾ ಇಲ್ಲಿಯೇ ಇರುತ್ತೇನೆ“ ಎನ್ನುತ್ತಾರೆ.

ಶಿಷ್ಯನ ವಿರಕ್ತಿಯ ಮಾತನ್ನು, ಭಾವವನ್ನು ಕೇಳಿದ, ನೋಡಿದ ಗುರುಗಳು ತಮ್ಮ ಶಿಷ್ಯನಿಗೆ, “ ಮಗು , ಇದು ಸನ್ಯಾಸಿಯಾಗುವ ಸಮಯವಲ್ಲ. ಗೃಹಸ್ಥಾಶ್ರ ಮಕ್ಕೆ ಅಡಿಯಿಟ್ಟು ದೇವ ಋಣ- ಋಷಿ ಋಣ - ಪಿತೃ ಋಣವನ್ನು ತೀರಿಸಬೇಕು. ಎಲ್ಲಿಯವರೆಗೂ ಈ ಋಣದಿಂದ ಮುಕ್ತನಾಗುವುದಿಲ್ಲವೋ ಅಲ್ಲಿಯ ವರೆಗೂ ಯಾವ ತಪಸ್ಸು, ಧರ್ಮ ಸಾಧನೆಯೂ ಫಲಿಸದು.ಆದ್ದರಿಂದ ಗೃಹಸ್ಥನಾಗಿ ತಂದೆ ತಾಯಿಯ ನ್ನು ಸಂತೋಷ ಪಡಿಸು. ಭವಿಷ್ಯದಲ್ಲಿ ನಿನ್ನಿಂದ ಈ ಪ್ರಪಂಚಕ್ಕೆ ಒಂದು ಮಹತ್ಕಾರ್ಯ ಸಿದ್ಧಿ ಆಗುತ್ತದೆಂ ದು ನನಿಗೆ ಅನ್ನಿಸುತ್ತಿದೆ. ಆದ್ದರಿಂದ ಗೃಹಸ್ಥನಾಗು. ನಂತರ ಸೂಕ್ತ ಸಮಯ ಒದಗಿ ಬಂದಾಗ ವಾನಪ್ರ ಸ್ಥಾಶ್ರಮ ಸ್ವೀಕರಿಸಿ ಸನ್ಯಾಸಿಯಾಗು“ ಅನ್ನುತ್ತಾರೆ.

ಶಿವಗುರು ರವರು ಗುರುಗಳ ಆಜ್ಞೆ - ಇಚ್ಚೆಯಂತೆ ಗೃಹಸ್ಥನಾಗುವುದಕ್ಕೆ ನಿರ್ಧರಿಸಿ, ಅವರಿಂದ ಆಶೀರ್ವಾದ ಪಡೆದು ಗುರುಕುಲದಿಂದ ಮನೆಗೆ ಹಿಂದಿರುಗುತ್ತಾರೆ.

ಗುರುಕುಲದಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಮರಳಿದ ಮಗನನ್ನು ಕಂಡ ವಿಧ್ಯಾಧರ ದಂಪತಿಗಳು ಮುದಗೊಳ್ಳುತ್ತಾರೆ. ಖುದ್ದು ವಿಧ್ಯಾಧಿರಾಜರು ವೇದ -ಶಾಸ್ತ್ರಗಳಲ್ಲಿ ಪಂಡಿತರಾದ್ದರಿಂದ ತಾವೇ ಮಗನನ್ನು ಪ್ರಶ್ನೆಗಳಿಂದ ಪರೀಕ್ಷಿಸುತ್ತಾ ಒರೆಗಲ್ಲಿಗೆ ಹಚ್ಚುತ್ತಾರೆ. ಶಿವಗುರು ರವರು ತಂದೆಯ ಪ್ರತೀ ಪ್ರಶ್ನೆಗೆ ಮಂದಹಾಸದಿಂದ, ಮನದಲ್ಲಿ ತಮ್ಮ ಗುರುಗಳಿಗೆ ವಂದನೆಗೈಯುತ್ತಾ ಉತ್ತರಿಸುತ್ತಾರೆ. ತಮ್ಮ ಮಗನ ವೇದ-ಶಾಸ್ತ್ರಗಳ ಪಾಂಡಿತ್ಯಕ್ಕೆ ಸ್ವತಃ ವಿಧ್ಯಾಧಿರಾಜರು ಮಾರುಹೋಗುತ್ತಾರೆ. 

ಹೆಸರಿಗೆ ತಕ್ಕಂತೆ ಜ್ಞಾನದಲ್ಲಿ 'ಶಿವ' ನಂತೆ , ವಾಕ್ಸಿದ್ಧಿಯಲ್ಲಿ 'ಗುರು-ಬೃಹಸ್ಪತಿ' ಯಂತೆ ಇರುವ ಮಗನನ್ನು ನೋಡಿದ ತಂದೆ ವಿದ್ಯಾಧರ ಪಂಡಿತರ ಸಂತೋಷ ಇಮ್ಮಡಿಯಾಗುತ್ತದೆ. 
ತೇಜೋವಂತ, ವಿದ್ಯಾಸಂಪನ್ನ ಶಿವಗುರು ರವರ ಖ್ಯಾತಿ ಎಲ್ಲ ಕಡೆ ಪಸರಿಸುತ್ತದೆ. ಬಹಳ ಜನ ಕನ್ಯಾ ಪಿತೃಗಳು ತಮ್ಮ ಮಗಳ ಜೊತೆ ಭಾಂದವ್ಯಕ್ಕೆ ಮುಂದು ಬರುತ್ತಾರೆ.

ಕೊನೆಗೆ, ಮೆಲ್ಪಳೂರು ಗ್ರಾಮದ ಮಘ ಪಂಡಿತರ ಮಗಳಾದ ವಿಧುಷಿ, ಸಾಧ್ವಿ, ಸುಶೀಲೆ, ಮತ್ತು ಭಕ್ತಿಸಂಪನ್ನೆಯಾದ 'ಕಾಮಾಕ್ಷಿ-ದೇವಿ/ ಆರ್ಯಾಂಬ' ರವರ ಜೊತೆ ಶಿವಗುರು ರವರ ಮದುವೆ ಸಂಪನ್ನವಾಗುತ್ತದೆ.

🙏🙏ll ಹರಿಃ ಕೃಷ್ಣಾರ್ಪಣಮಸ್ತು ll🙏🙏
🙏ll ಸದ್ಗುರುಚರಣವಿಂದಾರ್ಪಣ ಮಸ್ತು ll🙏

******

ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ

ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ

1.ಶ್ರೀ ಶಂಕರ ಜಯಂತಿ :

ವೈಶಾಖ ಶುದ್ಧ ಪಂಚಮಿ
2.ಕಾಲ : ಕ್ರಿ.ಶ.788-820
3.ತಾಯಿ-ತಂದೆ 
ಆರ್ಯಾಂಬಾ ಶಿವಗುರು
4.ಜನ್ಮಸ್ಥಳ : ಕೇರಳದ ಪೂರ್ಣ ನದಿ ತೀರದ ಕಾಲಡಿ
5.ಸನ್ಯಾಸ ಸ್ವೀಕಾರ : ಎಂಟನೆಯ ವರ್ಷ
6.ಗುರುಗಳು : ಶ್ರೀ ಗೋವಿಂದ ಭಗವತ್ಪಾದರು
7. ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ
8.ಪಂಥಗಳು : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.
9.ಪಂಚಾಯತನ ದೇವತೆಗಳು :
ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.
10.ಶಂಕರರ ಮಾತೃಭಾಷೆ : ಮಲಯಾಳಂ
11. ಶಂಕರರ ಸಂಪರ್ಕ ಭಾಷೆ : ಸಂಸ್ಕೃತ
12.ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ
13.ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ
14.ಗುರುದ್ರೋಹ : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )
15.ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು : ಪದ್ಮಪಾದಚಾರ್ಯ,ಹಸ್ತಾಮಲಕಾಚಾರ್ಯ,ತೋಟಕಾಚಾರ್ಯ,ಸುರೇಶ್ವರಾಚಾರ್ಯ
16. ಪದ್ಮಪಾದಾಚಾರ್ಯರ ಪೂರ್ವನಾಮ : ಸನಂದನ
17.ಸುರೇಶ್ವರಾಚಾರ್ಯರ ಪೂರ್ವನಾಮ : ಮಂಡನ ಮಿಶ್ರ
18.ರಚಿಸಿದ ಗ್ರಂಥಗಳು : 54
19.ರಚಿಸಿದ ಕೊನೆಯ ಗ್ರಂಥ : ವಿವೇಕ ಚೂಡಾಮಣಿ
20.ಪ್ರಸ್ಥಾನತ್ರಯಗಳು : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ತುಗಳು
21.ಬ್ರಹ್ಮ ಸೂತ್ರ : 555 ಸೂತ್ರಗಳು 
22.ಭಗವದ್ಗೀತೆ : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು
23.ಉಪನಿಷತ್ತುಗಳು  :  10
24.ರಚಿಸಿದ ಸ್ತೋತ್ರಗಳು : 72
25.ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ : ಏಕಶ್ಲೋಕಿ ( ಕಿಂ ಜ್ಯೋತಿಸ್ತವ )
26.ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು : 1.ಕಾಲಭೈರವಾಷ್ಟಕ, 2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ 4.ಕಾಶಿ ಸ್ತೋತ್ರ
27.ಚತುರಾಮ್ಮಾಯ ಪೀಠಗಳು : 
ಮತ್ತು ಪೀಠಗಳ ಪ್ರಥಮಾಚಾರ್ಯರು :
ಶೃಂಗೇರಿ ಪೀಠ  - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ
29.ಪೀಠಗಳ ದೇವದೇವಿಯರು 1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ
30.ಪವಿತ್ರ ತೀರ್ಥಗಳು - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್ರ
31.ಸರ್ವಜ್ಞ ಪೀಠಾರೋಹಣ : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ 
32.ಶಂಕರರ ಮಹಾ ಸಿದ್ಧಾಂತ : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
33.ಶಂಕರರ ಸಾಧನೆ ; 1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ
2.ದ್ವಾದಶೇ ಸರ್ವಶಾಸ್ತೃಸರ್ವಶಾಸ್ತವಿ ತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ 
3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ
4.ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ
34.ದೇಹತ್ಯಾಗ - ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ.
ಆಧಾೄತ್ಮ ಧೀವಿಗೆ...
*********

ಶೀೃ ಶಂಕರ ಜಯಂತಿ

ಶಂಕರಜಯಂತಿ ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ. ಮಾಧವೀಯ ಶಂಕರ ವಿಜಯವೇ ಪ್ರಾಚೀನವಾದುದು.

ಬಾಲ್ಯ :-

ಶ್ರೀ ಶಂಕರರ ತಂದೆ ಕಾಯ್‌ಪಿಳ್ಳೆ ಶಿವಗುರು ನಂಬೂದರಿ; ತಾಯಿ ಆರ್ಯಾಂಬಾ. ಅವರು ಬಹಳ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡರು. ಅದರ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಅಥವಾ ಅದರ ಹತ್ತಿರ ಕ್ರಿ. ಶ. ೭೮೮ ರಲ್ಲಿ ಶುಭ ನಕ್ಷತ್ರದಲ್ಲಿ ಜನಿಸಿದರು. (ಇತ್ತೀಚೆಗೆ ಕಾಂಬೋಡಿಯಾದಲ್ಲಿ ಶ್ರೀ ಶಂಕರರ ಶಿಷ್ಯ ಶಿವಸೋಮ ಇವರ ಕ್ರಿ.ಶ.880 ರ ಶಾಸನವೊಂದುಪ್ರಾಪ್ತವಾಗಿದೆ. ಅದರ ಪ್ರಕಾರ ಶ್ರೀ ಶಂಕರರು ಕ್ರಿ.ಶ.880 ರಲ್ಲಿ ಕಾಲವಾದರೆಂಬ ಅಂಶ ತಿಳಿಯುತ್ತದೆ. ಅವರು ಬದುಕಿದ್ದು ಕೇವಲ 32 ವರ್ಷ ಅದ್ದರಿಂದ ಜನನ ಕ್ರಿ.ಶ. 788 ರಲ್ಲಿ ಎನ್ನುವುದು ಖಚಿತ.-ಭಾರತದ ಇತಿಹಾಸ ಫಾಲಾಕ್ಷ ಭಾಗ-1-೧೯೮೪/ಪುಟ ೨೬೬ ;ಕಾಲಡಿಯ ಜನ್ಮ ಸ್ಥಳ,- ಶ್ರೀ ಶಂಕರರ ಕೀರ್ತಿ ಸ್ಥಂಭ, ಕಾಲಡಿ)

ತಂದೆ ಶಿವಗುರು, ಶಂಕರರು ಚಿಕ್ಕವರಿದ್ದಾಗಲೇ ತೀರಿಕೊಂಡರು. ಶಂಕರರು ಐದು ವರ್ಷದವರಿದ್ದಾಗಲೇ ಅವರ ಉಪನಯನವನ್ನು ತಾಯಿ ಆರ‍್ಯಾಂಬಾ ನೆರವೇರಿಸಿದರು. ಅಸಾಧಾರಣ ಮೇಧಾವಿಯಾದ ಶಂಕರರು ಎಂಟು ವರ್ಷಕ್ಕೇ ನಾಲ್ಕು ವೇದಗಳನ್ನೂ ಕಲಿತು ಕರಗತ ಮಾಡಿಕೊಂಡರು. ಬೇರೆ ಬೇರೆ ಗುರುಗಳಿಂದ ಷಡ್ದರ್ಶನಗಳನ್ನೂ ಪುರಾಣಗಳನ್ನೂ , ಸಕಲ ಶಾಸ್ತ್ರಗಳನ್ನೂ ಹನ್ನೆರಡನೇ ವರ್ಷಕ್ಕೆಲ್ಲಾ ಕಲಿತು ಸರ್ವ ಶಾಸ್ತ್ರ ವಿಶಾರದರಾದರು.

ಸಂನ್ಯಾಸ :- 

ಅವರಿಗೆ ಚಿಕ್ಕಂದಿನಲ್ಲೇ ಸಂನ್ಯಾಸದ ಕಡೆ ಒಲವಿದ್ದರೂ ತಾಯಿ ಒಪ್ಪಿರಲಿಲ್ಲ. ಈಬಗ್ಗೆ ಒಂದು ಕಥೆ ಇದೆ. ಅವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅವರ ಕಾಲನ್ನು ಹಿಡಿಯಿತೆಂದೂ, ಆಗ ಕೊನೆಯ ಹೊತ್ತಿಗೆ ಸಂನ್ಯಾಸ ಸ್ವೀಕರಿಸಲು ಅಲ್ಲಿಯೇ ಇದ್ದ ತಾಯಿ ಒಪ್ಪಲು ಅವರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಲು ಮೊಸಳೆ ಅವರ ಕಾಲು ಬಿಟ್ಟಿತು. ನಂತರ ಅವರು ಗುರುವನ್ನು ಅರಸತ್ತಾ ಉತ್ತರದ ಕಡೆ ಹೊರಟರು.

ಗುರುದರ್ಶನ :- 

ಸಂನ್ಯಾಸ ಸ್ವೀಕರಿಸಿದ ಶಂಕರರು ತಮಗೆ ತಕ್ಕ ಗುರುಗಳನ್ನು ಅರಸುತ್ತಾ ಉತ್ತರದ ನರ್ಮದಾ ನದಿಯ ತಟದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡರು. ಅವರು ಇವರ ಪರಿಚಯ ಕೇಳಲು, ಅದ್ವೈತ ತತ್ವಾರ್ಥವಿರುವ ಶ್ಲೋಕದಲ್ಲಿ ಶಂಕರರು ಉತ್ತರಿಸಿ ನಮಸ್ಕರಿಸಿದರು. ಗೋವಿಂದ ಭಗವತ್ಪಾದರು ಮೆಚ್ಚಿ ಒಪ್ಪಲು, ಅವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಗೋವಿಂದ ಭಗವತ್ಪಾದರು ಗೌಡಪಾದ ಮುನಿಗಳ ಶಿಷ್ಯರು. ಗೌಡ ಪಾದ ಮುನಿಗಳು ಮಾಂಡೂಕ್ಯ ಉಪನಿತ್ತಿಗೆ ಭಾಷ್ಯ ಬರೆದು, ಅದಕ್ಕೆ ಅದ್ವೈತ ಸಿದ್ಧಾಂತದ ಕಾರಿಕೆಯನ್ನು ೫೨ ಶ್ಲೋಕಗಳಲ್ಲಿ ಬರೆದಿದ್ದಾರೆ. ಅದನ್ನೇ ವಿಸ್ತರಿಸಿ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಲು ಗೋವಿಂದ ಭಗವತ್ಪಾದರು ತಮ್ಮಲ್ಲಿ ಅಭ್ಯಾಸ ಮಾಡಿ ಮುಗಿದ ನಂತರ ಶಂಕರರಿಗೆ ಹೇಳಿದರು. ಶಂಕರರು ಒಪ್ಪಿ ಕಾಶಿಗೆ ಹೊರಟರು.ಅದ್ವೈತ ಸಿದ್ದಾಂತದ ಪ್ರತಿಪಾದನೆ ಇವರ ಮುಖ್ಯ ಉದ್ದೇಶವಾಗಿತ್ತು.

ಶಂಕರಸಂಚಾರ ಮತ್ತು ದಿಗ್ವಿಜಯ : 

ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ಚೋಳ ದೇಶದ [ತಮಿಳು] ಯುವಕ ಸಂನ್ಯಾಸಿ ಇವರ ಶ್ಯಿಷ್ಯನಾದನು; ಪದ್ಮಪಾದ. ಅವರು ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಕಥೆ ಇದೆ. ಒಬ್ಬ ಅಸ್ಪೃಶ್ಯ [ಚಾಂಡಾಲ] ವ್ಯಕ್ತಿಯು ದಾರಿಯಲ್ಲಿ ಎದುರಿಗೆ ಬರಲು ಅವನಿಗೆ ಪಕ್ಕಕ್ಕೆ ಸರಿಯಲು ಹೇಳಿದಾಗ ಅವನು ನೀನು ಹೇಳಿದ್ದು ಯಾರಿಗೆ ? ದೇಹಕ್ಕೋ? ಆತ್ಮಕ್ಕೋ? ಎಂದು ಕೇಳಲು. ಅವನೇತನ್ನನ್ನು ಪರೀಕ್ಷಿಸಲು ಬಂದ ಪರಶಿವನೆಂದು ಅರಿತು ಅವನಿಗೆ ಕೈಮುಗಿದು ಐದುಶ್ಲೋಕಗಳಿಂದ ಸ್ತುತಿಸಿದರು. ಅದು ಮನೀಷಿ ಪಂಚಕವೆಂದು ಪ್ರಸಿದ್ಧಿಯಾಗಿದೆ. 

ಅಲ್ಲಿಂದ ಬದರಿಗೆ ಹೋಗಿ ಅಲ್ಲಿ ತಮ್ಮ ಪ್ರಸಿದ್ಧವಾದ ಭಾಷ್ಯಗಳನ್ನು ಬರೆದರು. ಅವು ಪ್ರಕರಣ ಗ್ರಂಥ ಗಳೆಂದು [ತತ್ವಾರ್ಥ] ಪ್ರಸಿದ್ಧವಾಗಿವೆ. ಬ್ರಹ್ಮಸೂತ್ರ, ಭಗವದ್ಗೀತಾ, ಮತ್ತು ದಶ ಉಪನಿಷತ್‌ಗಳ ಭಾಷ್ಯ ಗಳೇ ಪ್ರಸ್ಥಾನತ್ರಯ ಭಾಷ್ಯಗಳು; ಪ್ರಕರಣ ಗ್ರಂಥಗಳು.. ಈಶ, ಕೇನ ಕಠ; ಪ್ರಶ್ನ, ಮುಂಡಕ, ಮಾಂಡೂಕ್ಯ; ಐತರೇಯ, ತೈತ್ತರೀಯ; ಬೃಹದಾರಣ್ಯಕ, ಛಾಂದೋಗ್ಯ, ಇವು ಆ ದಶ ಉಪನಿಷತ್ತುಗಳು. ನಂತರ ಅವರು ಪ್ರಯಾಗದಲ್ಲಿ ಉಮಿಹೊಟ್ಟಿನ ಬೆಂಕಿಯಲ್ಲಿ ಕುಳಿತಿದ್ದ ಪ್ರಸಿದ್ಧ ಮೀಮಾಂಸಕ ಪಂಡಿತರಾದ ಕುಮಾರಿಲ ಭಟ್ಟರನ್ನು ಬೆಟ್ಟಿಯಾದರು. ಅವರು ಬೌದ್ಧ ಗರುಗಳಿಗೆ ಸುಳ್ಳು ಹೇಳಿ ಶಿಷ್ಯರಾಗಿ ಬೌದ್ಧ ಧರ್ಮದ ರಹಸ್ಯವನ್ನು ಕಲಿತಿದ್ದರು. ಅದರ ಪ್ರಾಯಶ್ಚಿತ್ತವಾಗಿ ಅಗ್ನಿ ಪ್ರವೇಶ ಮಾಡಿದ್ದರು. ಅವರು ತಮ್ಮ ಶಿಷ್ಯ ಮಂಡನ ಮಿಶ್ರರನ್ನು ಕಂಡು ವಾದ ಮಾಡಲು ಹೇಳಿದರು.

ಮೀಮಾಂಸ ಕಮಂಡನ ಮಿಶ್ರರ ಭೇಟಿ :- 

ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತವೆಂದು ಸಾಧಿಸಲು ಅಂದಿನ ಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರನ್ನು ಕಾಣಲು ಮಾಹಿಷ್ಮತಿ ನಗರಕ್ಕೆ [ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್ ಸಹರ‍್ಸ] ಹೋದರು. ಅವರೊಡನೆ ಹದಿನೈದು ದಿನಗಳ ಕಾಲ ಸತತ ವಾದ ಮಾಡಿದರು. ಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರವುದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನೂ ಗೆಲ್ಲಬೇಕೆಂದು ಪಂಥವನ್ನು ಮಾಡಿದಳು.
 ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಿದಳು. ಬಾಲ ಸಂನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಆವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ-ಮರಣ ಹೊಂದಿದ ವಿಕ್ರಮರಾಜನ ಶರೀರದಲ್ಲಿ ಪರಕಾಯ ಪ್ರವೇಶಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ತಿಳಿದು, ತಮ್ಮ ವಾದ ಬರೆದರು. ಪುನಹ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿ ದೇವಿಗೆ ಕೊಟ್ಟು ಉತ್ತರವನ್ನು ಕಂಡುಕೊಳ್ಳಲು ಹೇಳಿದರು .

ನಾಲ್ಕುಮಠಗಳು 
ಅವರು ವೈದಿಕ ಧರ್ಮದ ಮತ್ತು ಅದ್ವೈತದ ಪ್ರಚಾರಕ್ಕಾಗಿ ಭಾರತದೇಶದ ನಾಲ್ಕು ದಿಕ್ಕಿಗೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ಆವು ನಾಲ್ಕು ಬಗೆಯ ಪ್ರಚಾರ ಸಿದ್ಧಾಂತ ಹೊಂದಿದೆ.

೧.ದಕ್ಷಿಣದಲ್ಲಿ ಕರ್ನಾಟಕದಲ್ಲಿರುವ ಶೃಂಗೇರಿಯ ಶಾರದಾ ಪೀಠ ;
೨. ಪಶ್ಚಿಮದಲ್ಲಿ ಗುಜರಾತಿನಲ್ಲಿರುವ ದ್ವಾರಕೆಯ ದ್ವಾರಕಾ ಪೀಠ ;
೩. ಪೂರ್ವದಲ್ಲಿ ಒರಿಸ್ಸಾದಲ್ಲಿರುವ ಪುರಿಯಲ್ಲಿರುವ ಶ್ರೀಶಂಕರ ಪೀಠ [ಗೋವರ್ಧನ ಮಠ] ;
೪. ಉತ್ತರದಲ್ಲಿ ಈಗಿನ ಉತ್ತರಖಂಡ ರಾಜ್ಯದಲ್ಲಿರುವ ಜ್ಯೋತಿರ್ ಮಠ [ಜ್ಯೋಶಿಮಠ] .
ಈ ನಾಲ್ಕು ಮಠ ಗಳಿಗೆ ಕ್ರಮವಾಗಿ, ಶ್ರೀಶಂಕರರ ಹತ್ತಿರದ ಶಿಷ್ಯರಾದ
೧. ಸುರೇಶ್ವರಾಚಾರ್ಯರು ;
೨. ಪದ್ಮಪಾಧಾಚಾರ್ಯರು.;
೩. ಹಸ್ತಾಮಲಕಾಚಾರ್ಯರು;
೪. ತೋಟಕಾಚಾರ್ಯರು , ಪ್ರಥಮ ಮಠಾಧೀಶರಾದರು.

 ಪೀಠವೆಂದು ಹೇಳುತ್ತಾರೆ
 [ *ಉದಾ: ದಕ್ಷಿಣಾಮ್ಮಾಯ ಪೀಠ -ಶೃಂಗೇರಿ ಶಂಕರ ಮಠ] .

ಈ ಮಠಗಳ ನಂತರದ ಪೀಠಾಧಿಪತಿಗಳು ತಮ್ಮ ಹೆಸರಿನ ಮುಂದೆ ಶಂಕರಾಚಾರ್ಯ ಎಂದು ಸೇರಿಸಿಕೊಳ್ಳುತ್ತಾರೆ.
***

ಶಂಕರ ಭಾಗವತ್ಪಾದರು ಸ್ಥಾಪಿಸಿದ ನಾಲ್ಕು ಮಹಾ ಪೀಠಗಳು(smk)

ಆಚಾರ್ಯ ಶಂಕರ ಭಗವತ್ಪಾದರಿಂದ ಪ್ರಪ್ರಥಮವಾಗಿ ಸೃಷ್ಟಿಸಲ್ಪಟ್ಟಿರುವುದು, ಶೃಂಗೇ ರಿ ದಕ್ಷಿಣಾಮ್ನಾಯ ಪೀಠ. ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಈ ಕ್ಷೇತ್ರವಿದೆ. ನಾರಾಯಣ ಸ್ವರೂಪಳೆನೆಸಿರುವ ತುಂಗೆ ಈ ಕ್ಷೇತ್ರದಲ್ಲಿ ಹರಿದು ಇಲ್ಲಿಯ ನೆಲವನ್ನು ಪಾವನ ಗೊಳಿಸಿದ್ದಾಳೆ. ತುಂಗಾ ನದಿಯ ಬಲದಂಡೆಯಲ್ಲಿಯೇ ಮಠದ ಸ್ಥಾಪನೆಯಾಗಿದೆ. ಈ ಮಠದ ಮೇಲ್ವಿಚಾರಣೆ ಆಚಾರ್ಯರ ಪ್ರಧಾನ ಶಿಷ್ಯರಾಗಿದ್ದ ‘ಸುರೇಶ್ವರಾ ಚಾರ್ಯ’ರಿಗೆ ಸೇರಿದ್ದು. ಇವರೇ ಈ ಮಠದ ಪ್ರಥಮ ಆಚಾರ್ಯ ರಾದರು. ದಕ್ಷಿಣ ಭಾರತದ ಪಂಚ ದ್ರಾವಿಡ ಪ್ರದೇಶಗಳು ಈ ಮಠದ ಶಾಸನಕ್ಕೆ ಒಳಪಟ್ಟಿವೆ.  ‘ಶೃಂಗ ಗಿರಿ’ ಎಂಬ ಹೆಸರೇ ಕಾಲಾನುಕ್ರಮದಲ್ಲಿ ‘ಶೃಂಗೇರಿ’ ಎಂದಾ ಗಿದೆ. ಈ ಕ್ಷೇತ್ರ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. “ಗಂಗಾ ಸ್ನಾನ ತುಂಗಾ ಪಾನ” ಎಂಬ ನಾಣ್ಣುಡಿ ಇಂದ ಪ್ರಸಿದ್ಧಿಯಾಗಿರುವ ತುಂಗಾ ನದಿ ಸುತ್ತಲೂ ಹರಡಿರುವ ಮಲೆನಾಡಿನ ವನಸಿರಿ ರಮಣೀಯವಾದ ಹಸುರಾದ ಗುಡ್ಡ ಬೆಟ್ಟಗಳು ಜೊತೆಗೆ ಆಚಾರ್ಯರ ಆಧ್ಯಾತ್ಮ ಕಾರ್ಯಗಳ ನೆಲೆಬೀಡು ಇವುಗಳಿಂದಾಗಿ ಈ ಕ್ಷೇತ್ರದ ಸೌಂದರ್ಯ ಪಾವಿತ್ರ್ಯತೆಗಳು ಇಮ್ಮಡಿಗೊಂಡಿವೆ. ಯಜುರ್ವೇದದ ಸಂಬಂಧ ಹೊಂದಿರುವ ಈ ಪೀಠದ ಪ್ರಥಮ ಆಚಾರ್ಯರು “ಸುರೇಶ್ವರಾ ಚಾರ್ಯರು”.

ಆಚಾರ್ಯರು ಸ್ಥಾಪಿಸಿರುವ ‘ಪೂರ್ವಾಮ್ನಾಯ’ಮಠವು ಒರಿಸ್ಸಾ ರಾಜ್ಯದಲ್ಲಿರುವ ಜಗನ್ನಾಥ ಪುರಿ ಕ್ಷೇತ್ರದಲ್ಲಿದೆ. ಮಹೋದಧಿ ( ಪೂರ್ವ ಸಮುದ್ರ)  ತೀರದಲ್ಲಿರುವ ಈ ಪೀಠವೇ’ ಗೋವರ್ಧನ ಪೀಠ’. ಈ ಪೀಠದ ಪ್ರಥಮ ಆಚಾರ್ಯರು ಹಸ್ತಾ ಮಲಕರು. ಋಗ್ವೇದದ ಸಂಬಂಧವನ್ನು ಹೊಂದಿರುವ ಈ ಮಠದ ಶಾಸನಾದೀನಕ್ಕೆ ಭಾರತದ ಪೂರ್ವ ದಿಕ್ಕಿನ ಭಾಗಗಳು ಸೇರಿವೆ.

ಪಶ್ಚಿಮಾಮ್ನಾಯ ಮಠವೇ ‘ಶಾರದಾ ಪೀಠ’.   ಇದು ಗುಜರಾತ್ ರಾಜ್ಯದ ಖಾತೆಯವಾಡದಲ್ಲಿರುವ ದ್ವಾರಕಾ ಕ್ಷೇತ್ರದಲ್ಲಿ ರತ್ನಾಕರದ ( ಪಶ್ಚಿಮ ಸಮುದ್ರ) ತೀರದಲ್ಲಿದೆ. ಈ ಪೀಠದ ಪ್ರಥಮ ಆಚಾರ್ಯರು ಪದ್ಮಪಾದರು. ಸಾಮವೇದದ ಸಂಬಂಧ ಹೊಂದಿರುವ ಈ ಮಠದ ಶಾಸನಕ್ಕೆ ಭಾರತದ ಪಶ್ಚಿಮ ಭಾಗದ ದೇಶಗಳು ಒಳಪಟ್ಟಿವೆ. 

ಉತ್ತರದಿಕ್ಕಿನ ಹಿಮವತ್ಪರ್ವತ ಶ್ರೇಣಿಯಲ್ಲಿ ನೆಲೆಗೊಂಡಿರುವ ‘ಉತ್ತರಾಮ್ನಾಯ ಪೀಠವೇ ಜ್ಯೋತಿರ್ಮಠ’. ಇದನ್ನು ಜೋಶಿ ಮಠ ಎಂದು ಕರೆಯುವ ವಾಡಿಕೆಯು ಇದೆ. ಇಲ್ಲಿರುವ ಪವಿತ್ರ ತೀರ್ಥ ಅಲಕನಂದ ನದಿ, ಈ ಮಠದ ಪ್ರಥಮ ಆಚಾರ್ಯ ರು ‘ತೋಟಕಾಚಾರ್ಯರು’. ‘ಅಥರ್ವಣ’ ವೇದಕ್ಕೆ ಸಂಬಂಧಪಟ್ಟಿರುವ ಈ ಮಠದ ಶಾಸನಕ್ಕೆ ಭಾರತದ ಉತ್ತರ ಭಾಗದ ಪ್ರದೇಶಗಳು ಒಳಪಟ್ಟಿವೆ.  ಜ್ಯೋತಿರ್ಮಠ 
ವಿರುವ ಪ್ರದೇಶದಿಂದ ಉತ್ತರಕ್ಕೆ ಸುಮಾರು 20 ಮೈಲಿಗಳ ದೂರದಲ್ಲಿ ಬದರಿ ನಾಥ ಕ್ಷೇತ್ರವಿದೆ.

ಶ್ರೀ ಶಂಕರಾಚಾರ್ಯರು ತಮ್ಮದೇ ಆದ ಯಾವ ಮತವನ್ನು ಸ್ಥಾಪಿಸಲಿಲ್ಲ. ಅವರು ಮಾಡಿದ ಪ್ರಮುಖ ಕಾರ್ಯವೆಂದರೆ ‘ವೈದಿಕ ಮತದ’ ಪುನರುಜ್ಜೀವನ ಮತ್ತು ‘ಅದ್ವೇತ ತತ್ವ’ ಪ್ರತಿಪಾದನೆ. ಅವರ ಆವಿರ್ಭಾವವಾದ ಕಾಲದಲ್ಲಿ ನಾಸ್ತಿಕ ಮತಗ ಳೇ  ಭಾರತದಲ್ಲಿ ತಾಂಡವ ವಾಡುತ್ತಿದ್ದವು.  ಮಾತ್ರವಲ್ಲದೆ ಮಧ್ಯ ಸೇವನೆ, ಮಾಂಸಾಹಾರ, ನರಬಲಿ, ಮೊದಲಾದ ದುಷ್ಟ ಪದ್ಧತಿಗಳಿಂದ ಕೂಡಿದ್ದ ತಾಂತ್ರಿಕ ಮತಗಳು ಆಚರಣೆಯಲ್ಲಿದ್ದವು.  ಆಚಾರ್ಯರು ಆ ಎಲ್ಲಾ ಮತಗಳನ್ನು ಖಂಡಿಸಿ ಆ ಮತಗಳ ಮುಖಂಡರನ್ನು ವಾದದಲ್ಲಿ ಪರಾಭವಗೊಳಿಸಿ ನಶಿಸಿ ಹೋಗುತ್ತಿದ್ದ ವೈದಿಕ ಮತವನ್ನು ಪುನರುಜ್ಜೀವನಗೊಳಿಸಿದರು. ಇಷ್ಟೇ ಅಲ್ಲದೆ ತಾಮಸ ವಿಧಿ ವಿಧಾನ ಗಳಿಂದ ಕೂಡಿದ್ದ ತಾಂತ್ರಿಕ ಮತಗಳನ್ನು ಶುದ್ಧೀಕರಿಸಿ ಸಾತ್ವಿಕ ರೂಪಕ್ಕೆ ಪರಿವರ್ತಿಸಿದರು. ತತ್ಪಲವಾಗಿ ಆಚಾರ್ಯರಿಗೆ “ಷಣ್ಮತ ಸ್ಥಾಪನಾಚಾರ್ಯ”ರೆಂಬ ಬಿರುದು ಸಂದಿತು.

ಇಡೀ ಭಾರತದಲ್ಲಿ ವೈದಿಕ ಮತವು ಇಂದಿಗೂ ಅಭಿಚ್ಛಿನ್ನವಾಗಿ ಮತ್ತು ಸಂಪ್ರ ದಾಯ ಭದ್ಧವಾಗಿ ನಡೆದು ಬರುತ್ತಿದೆ. ಈ ಒಂದು ಸಂಪ್ರದಾಯವನ್ನು ಭದ್ರವಾದ ತಳಹದಿಯ ಮೇಲೆ ನಿಲ್ಲಿಸಿ ಆಚರಣೆಯಲ್ಲಿ ತಂದವರು “ವಿಭೂತಿ ಪುರುಷರಾದ ಆಚಾರ್ಯ ಶಂಕರ ಭಗವತ್ಪಾದರು”. ಮಹಾಪುರುಷರಾದ ಆಚಾರ್ಯರ ಆವಿರ್ಭಾವ ಆಗದೆ ಇದ್ದಿದ್ದರೆ ಇಂದು ಸನಾತನ ಧರ್ಮದ ಹೆಸರೇ ಇಲ್ಲವಾಗಿರುತ್ತಿ ತ್ತು. ವೈದಿಕ ಧರ್ಮವನ್ನು ಉದ್ದರಿಸುವ ಮೂಲಕ ಅವರು ಮಾಡಿರುವ ಉಪಕಾರ ಕ್ಕಾಗಿ ಪ್ರತಿಯೊಬ್ಬ ಹಿಂದೂ ಪ್ರಜೆಯೂ ಅವರಿಗೆ ಋಣಿಯಾಗಿರಲೇ ಬೇಕು.

ಶ್ರೀ ಶಂಕರಾಚಾರ್ಯರು ಮಾಡಿದ ಇನ್ನೊಂದು ಮಹತ್ಸಾಧನೆ ಎಂದರೆ ‘ಅದ್ವೈತ ತತ್ವ’ ಪ್ರತಿಪಾದನೆ.  ಈ ತತ್ವವನ್ನು ಅವರೇನು ಹೊಸದಾಗಿ ಕಂಡು ಹಿಡಿಯಲಿಲ್ಲ ಉಪನಿಷತ್ತಿನಲ್ಲಿರುವ ಈ ತತ್ವವನ್ನೇ ಹೊರತೆಗೆದು ಪ್ರತಿಪಾದಿಸಿದರಷ್ಟೇ. ಅದ್ವೇತ ತತ್ವವು ಅತ್ಯಂತ ಪ್ರಾಚೀನವಾದ ಸಿದ್ಧಾಂತ.”

ಬ್ರಹ್ಮ ಸತ್ಯಂ ಜಗನ್ಮಿಥ್ಯ  ಜೀವೋ 
ಬ್ರಹ್ಮೈವ  ನಾಪರ: ! 
ಆನೇನ ವೇದ್ಯಂ ಸಚ್ಚಾಸ್ತ್ರಮಿತಿ 
ವೇದಾಂತ ಡಿಂಡಿಮ:!!

ಬ್ರಹ್ಮವೊಂದೇ ಸತ್ಯ;  ಜಗತ್ತು ಮಿಥ್ಯ ; ಜೀವನು ಬ್ರಹ್ಮನೇ;  ಜೀವ ಬ್ರಹ್ಮನಿಂದ ಬೇರೆ ಅಲ್ಲ - ಎಂಬ ಈ ನಾಲ್ಕು ಸಿದ್ಧಾಂತಗಳೇ ಅದ್ವೇತ ತತ್ವದ ಸಾರಾಂಶ.

ಸೃಷ್ಟಿಯ ಸಮಸ್ತ ಜೀವ ರಾಶಿಗಳಲ್ಲಿಯೂ ಪ್ರಕಾಶಿಸುತ್ತಿರುವ ವಸ್ತು ಒಂದೇ ಆದಾಗ ಇನ್ನೊಂದು ತನಗಿಂತ ಬೇರೆ ಎಂಬ ಭಾವನೆಗೆ ಅವಕಾಶವೆಲ್ಲಿಯದು? 
ಎಲ್ಲವೂ ಒಂದೇ ಆಗಿರುವಾಗ ಯಾರು ಯಾರನ್ನು ದ್ವೇಷಿಸುವುದು? ವ್ಯವಹಾರಿಕ ಜೀವನದಲ್ಲಿ ಈ ತತ್ವವನ್ನು ಅರಿತು ಅಳವಡಿಸಿಕೊಂಡಿದ್ದೆ ಆದರೆ, ದ್ವೇಷ ಅಸೂಯೆ ಎಂಬ ಪದಗಳಿಗೆ ಅರ್ಥವೇ ಇಲ್ಲದಂತಾಗಿ ಮಾನವ ಅತ್ಯಂತ ಸುಖಿಯಾದಾನು.

ಆಚಾರ್ಯರು ಈ ‘ಅದ್ವೈತ ತತ್ವ’ವನ್ನು ಪ್ರತಿಪಾದಿಸುವ ವಾಕ್ಯಗಳನ್ನೇ ಉಪ ನಿಷತ್ತುಗಳಿಂದ ಅರಸಿ ತೆಗೆದು ತಾವು ಸ್ಥಾಪಿಸಿರುವ ಚಾತುರಾಮ್ನಾಯ ಮಠಗಳ ಮಹಾವಾಕ್ಯಗಳನ್ನಾಗಿ ಸ್ವೀಕರಿಸಿದ್ದಾರೆ. ಪ್ರತಿಯೊಂದು ಆಮ್ನಾಯ ಪೀಠಕ್ಕೂ ಆಯಾ ವೇದಗಳಿಗೆ ಸಂಬಂಧಿಸಿದ ಉಪನಿಷತ್ತಿನ ವಾಕ್ಯವೇ ಮಹಾ ವಾಕ್ಯವಾಗಿದೆ. ಬೃಹದಾರಣ್ಯಕ ಉಪನಿಷತ್ತಿನ “ಅಹಂ ಬ್ರಹ್ಮಾಸ್ಮಿ”  ಶೃಂಗೇರಿ ದಕ್ಷಿಣಾಮ್ನಾಯ  ಪೀಠದ ಮಹಾವಾಕ್ಯ. ಐತರೇಯ ಉಪನಿಷತ್ತಿನ “ಪ್ರಜ್ಞಾನಂ ಬ್ರಹ್ಮ” ಪೂರ್ವಾಮ್ನಾ ಯ ಪೀಠ ವಾದ ‘ಗೋವರ್ಧನ’ ಪೀಠದ ಮಹಾವಾಕ್ಯ. ಛಾಂದೋಗ್ಯೋಪನಿಷತ್ತಿನ “ತತ್ವಮಸಿ” ಪಶ್ಚಿಮಾಮ್ನಾಯ ಪೀಠವಾದ ದ್ವಾರಕಾಪೀಠದ ಮಹಾವಾಕ್ಯ.   ಮಾಂಡೂಕ್ಯೋಪನಿಷತ್ತಿನ “ಅಯಮಾತ್ಮಾ ಬ್ರಹ್ಮ” ಉತ್ತರಾಮ್ನಾಯ ಪೀಠವಾದ ‘ಜ್ಯೋತಿರ್ಮಠ’ದ ಮಹಾ ವಾಕ್ಯ. 

ಆಚಾರ್ಯರ ಕಾವ್ಯ ಸೃಷ್ಟಿಯಾದರೊ ಅದೊಂದು ಮಹಾಸಾಗರದಂತೆ. ಪ್ರಸ್ತಾನ ತ್ರಯದಂತಹ ಕಠಿಣವಾದ ಆಧ್ಯಾತ್ಮ ಗ್ರಂಥಗಳ ಬಾಷ್ಯಗಳು ಪಂಡಿತರಿಗಾಗಿ ರಚಿಸಿರುವಂತೆಯೇ ಸುಲಭವಾಗಿ ಗ್ರಾಹ್ಯವಾಗುವಂತಹ ಪ್ರಕರಣ ಗ್ರಂಥಗಳನ್ನೂ ಪಾಮರ ಜನರಿಗಾಗಿಯೇ ಅವರು ರಚಿಸಿರುವರು. ಮೋಕ್ಷ ಸಾಧನೆಗೆ ಆಚಾರ್ಯ ರು ಜ್ಞಾನಮಾರ್ಗಕ್ಕೆ ಹೆಚ್ಚಿನ ಮಹತ್ವ ನೀಡಿ “ಜ್ಞಾನದಿಂದಲೇ ಮೋಕ್ಷ” ಎಂದು ಪ್ರತಿ ಪಾದಿಸಿರುವುದು ನಿಜ. ಆದರೆ ಭಕ್ತಿ ಮಾರ್ಗಕ್ಕೂ ಅವರು ಅಷ್ಟೇ ಮಹತ್ವ ನೀಡಿರುವರು. ಅವರು ರಚಿಸಿರುವ ಹಲವಾರು ದೇವತಾ ಸ್ತೋತ್ರಗಳೇ ಇದಕ್ಕೆ ಸಾಕ್ಷಿ. ಮೋಕ್ಷ ಸಾಧನೆಗೆ  ಜ್ಞಾನಮಾರ್ಗ ಕಷ್ಟವೆನಿಸುವುದಾದರೆ ಭಕ್ತಿ ಮಾರ್ಗ ದಿಂದ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂಬುದು. ಅವರ ಈ ಸಿದ್ಧಾಂತದ ಕಾರಣದಿಂದಲೇ ಆಚಾರ್ಯರು ಭಕ್ತಿ ಪ್ರಧಾನವಾದ ಸ್ತೋತ್ರಗಳನ್ನು ರಚಿಸಿರುವರು. 

ಭಕ್ತಿ ಮಾತ್ರವಲ್ಲ, ಜ್ಞಾನ ವೈರಾಗ್ಯಗಳು ಅವರ ರಚನೆಗಳಲ್ಲಿ ಇವೆ. ಭಕ್ತಿ ಪ್ರಧಾನ ಕೃತಿಗಳಲ್ಲಿ ‘ಶಿವಾನಂದ ಲಹರಿ’ ಹಾಗೂ ವೈರಾಗ್ಯ ಪ್ರಧಾನ ಕೃತಿಗಳಲ್ಲಿ “ ಮೋಹ ಮುದ್ಗರ” (ಭಜಗೋವಿಂದಂ ಸ್ತೋತ್ರ) ಅತ್ಯುತ್ತಮ ಉದಾಹರಣೆಗಳು. ಭಕ್ತ ಅಥವಾ ಸಾಧಕನನ್ನು ತನಗೆಷ್ಟವಾದ ದೇವತೆಯ ಉಪಾಸನೆ ಮಾಡುವ ಅವಕಾಶವನ್ನು ಕಲ್ಪಿಸಬೇಕೆಂಬುದು ಆಚಾರ್ಯರ ಉದ್ದೇಶವಾಗಿತ್ತು. ಅದಕ್ಕಾಗಿ “ಸೂರ್ಯ, ಶಕ್ತಿ , ( ದೇವಿ ) ವಿಷ್ಣು, ಶಿವ, ಗಣಪತಿ” ಈ ದೇವತೆಗಳನ್ನು ಒಟ್ಟಾಗಿ ಉಪಾಸನೆ ಮಾಡುವ ಶಿವ ಪಂಚಾಯತನ ಪದ್ಧತಿಯನ್ನು ಜಾರಿಗೆ ತಂದರು.

ಆಚಾರ್ಯರ ಪಾಂಡಿತ್ಯ,  ಕವಿತಾ ಶೈಲಿಗಳಂತೂ ಅತ್ಯದ್ಭುತ. ಪ್ರಾಸ ಉಪಮೆಗಳ ಮಹಾಪೂರವೇ ಹರಿದಿದೆ ಅವರ ಕೃತಿಗಳಲ್ಲಿ . “ಸೌಂದರ್ಯ ಲಹರಿ” ಸ್ತೋತ್ರ ಕೃತಿಗೆ ಮುವತ್ತಾರಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಾಖ್ಯಾನಗಳಿರುವುದೆಂದರೆ ಆಚಾರ್ಯರ ಪಾಂಡಿತ್ಯ ಪ್ರತಿಭೆಗಳಿಗೆ ಸರಿಸಾಟಿ ಉಂಟೇ ? ಎಲ್ಲಕ್ಕಿಂತ ಮುಖ್ಯ ವಾಗಿ ಅವರ ತತ್ಕೋಪ ದೇಶಗಳು ಅದ್ವೇತ ಗಳೆನ್ನುವ ಕೇವಲ ಒಂದು ಪಂಗಡದ ಜನರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅನ್ವಯಿಸುವುದು ಎಂಬುದು ಗಮನೀಯವಾದ ಅಂಶ. ಇಡೀ ಮಾನವ ಕುಲದ ಉದ್ದಾರವೇ ಅವರ ಗುರಿ ಯಾಗಿತ್ತು. 

ಆಚಾರ್ಯರು ಜೀವಿಸಿದ್ದು ಕೇವಲ 32 ವರ್ಷಗಳು ಮಾತ್ರ. ಈ ಅಲ್ಪಾವಧಿಯಲ್ಲಿ ಅವರು ಮಾಡಿದ ಮಹತ್ಸಾದನೆ ಅಪಾರ. ಎಂಟನೆಯ ವರ್ಷದ ವೇಳೆಗೆ ನಾಲ್ಕು ವೇದಗಳ ಅಧ್ಯಯನ ಸನ್ಯಾಸ ಸ್ವೀಕಾರ, 12ನೆಯ ವಯಸ್ಸಿಗೆ ಸಮಗ್ರ ಶಾಸ್ತ್ರಗಳ ಪಾಂಡಿತ್ಯ, ಹದಿನಾರನೆಯ ವಯಸ್ಸಿನಲ್ಲಿ ಭಾಷ್ಯಗಳ ರಚನೆ, ಉಳಿದ 16 ವರ್ಷಗ ಳಲ್ಲಿ ಸಮಗ್ರ ಭಾರತದ ಸಂಚಾರ, ಅದೂ ಕಾಲ್ನಡಿಗೆಯಲ್ಲಿ. ಸರಿಯಾದ ರಸ್ತೆಗಳೇ ಇಲ್ಲದಿದ್ದ ಕಾಲದಲ್ಲಿ ಕಾಡುಮೇಡುಗಳಲ್ಲಿ ಸುತ್ತಾಡಿ ಧರ್ಮ ಪ್ರಚಾರ ಕಾರ್ಯ, ಇಷ್ಟೇ ಅಲ್ಲದೆ ಭಾರತದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಮಠದ ಸ್ಥಾಪನೆ. 
ಇದೇನು ಸಾಮಾನ್ಯ ಸಾಧನೆಯೇ ? ದೈವಾಂಶ ಪುರುಷರಿಂದಲ್ಲದೆ  ಸಾಮಾನ್ಯ ಮಾನವನಿಂದ ಸಾಧ್ಯವಾದೀತೇ?  ಸಾಧ್ಯವಾಗುವುದು ಹಾಗಿರಲಿ ಊಹೆಗೂ ನಿಲುಕದ ವಿಚಾರ. ಆದ್ದರಿಂದಲೇ ಶ್ರೀ ಶಂಕರ ಭಗವತ್ಪಾದ ರನ್ನು ಸಾಕ್ಷಾತ್ ‘ಶಂಕರನ’ ಅವತಾರವೆಂದೇ ಪರಿಗಣಿಸಿರುವುದು ಅತ್ಯಂತ ಸೂಕ್ತವಾಗಿದೆ. 

ಪರಮಜ್ಞಾನಿಗಳೂ, ಯತಿಶ್ರೇಷ್ಠರೂ, ಆದ ಶ್ರೀ ಶಂಕರಾಚಾರ್ಯರ ಆವಿರ್ಭಾವ ತಿರೋಧಾನಗಳಾಗಿ ಸುಮಾರು ಸಹಸ್ರವರ್ಷಗಳೇ ಕಳೆದಿವೆ. ಆದರೆ  ಅವರ ಹೆಸರು ಕೀರ್ತಿಗಳು ಇಂದಿಗೂ ಅಜರಾಮರವಾಗಿ ಉಳಿದಿದೆ. ಸನಾತನ ಧರ್ಮದ ಪುನರುದ್ದಾರಕ್ಕೆಂದೇ ಅವತರಿಸಿದ ಮಹಾಮಹಿಮರವರು, ಶ್ರೇಷ್ಠ ದಾರ್ಶನಿಕರು, ನವಯುಗವನ್ನೇ ನಿರ್ಮಾಣ ಮಾಡಿದ ಸಾಧಕರು, ಪ್ರಾತಸ್ಮರಣೀಯರು. ಅವರು ಪ್ರಚಾರ ಪಡಿಸಿದ “ಅದ್ವೈತ ತತ್ವ”ವನ್ನು ಇಂದು ಇಡೀ ಜಗತ್ತು ಗೌರವಿಸಿ ಆದರಿ ಸುತ್ತಿದೆ. 

ಮಾತಾ ಚ ಪಾರ್ವತೀ ದೇವಿ ಪಿತಾ 
ದೇವೋ ಮಹೇಶ್ವರ !
ಭಾಂಧವಾ:  ಶಿವಭಕ್ತಾಶ್ಚ ಸ್ವದೇಶೋ 
ಭುವನತ್ರಯಂ !!

“ಜಗಜ್ಜನನಿಯಾದ ಪಾರ್ವತಿಯೇ ನನ್ನ ತಾಯಿ ;ಜಗದೀಶ್ವರನಾದ ಪರಮೇಶ್ವರನೇ ನನ್ನ ತಂದೆ;  ಶಿವಭಕ್ತರೇ ಬಂಧು ಜನರು; ಮೂರು ಲೋಕಗಳೇ ನನ್ನ ಸ್ವದೇಶ”.
ಇದು ಶ್ರೀ ಶಂಕರ ಭಗವತ್ಪಾದರ ದಿವ್ಯ ವಾಣಿ. ಈ ದಿವ್ಯ ವಾಣಿಯಲ್ಲಿ “ಅದ್ವೇತ ತತ್ವದ” ಗೂಡಾರ್ಥವೇ ಅಡಗಿದೆ.

ಆಚಾರ್ಯರು ಅಂದು ಘೋಷಿಸಿದ-  “ಇಡೀ ಭಾರತ ಒಂದೇ ರಾಷ್ಟ್ರ” ಎಂಬ ಉಕ್ತಿಯನ್ನರಿತು ನಾವಿಂದು ನಡೆಯಬೇಕು. “ಭಾರತೀಯರೆಲ್ಲಾ ಒಂದೇ ಜನಾಂಗ” ಎಂಬ ಭಾವನೆಗಳಿಂದ ಬಾಳಬೇಕು. ಸನಾತನ ಧರ್ಮವನ್ನುಳಿಸಲು ಬದ್ಧ ಕಂಕಣರಾಗಬೇಕು. 

ಭಗವದ್ಪಾದ ಶ್ರೀ ಶಂಕರಾಚಾರ್ಯರ  ಕಥಾಮೃತ 30 ಅಧ್ಯಾಯಗಳು ಸಂಪನ್ನ ಗೊಂಡಿತು. ಮುಂದಿನ ವಾರ” ಶ್ರೀ ಶೃಂಗೇರಿ ಕ್ಷೇತ್ರ” ಮಹಿಮೆ.

ಜೈ ಜೈ ಶಂಕರಾಚಾರ್ಯ
ನಿತ್ಯ ನಿರಂಜನ ಸೂರ್ಯ
ಕರಿತೋಹಿ ಪರಿಚರ್ಯ 
ಆರತಿ ಯತಿವರ್ಯ ಪ

ಶೃಂಗಗಿರಿ ಪುರವಾಸ
ಬ್ರಹ್ಮಾನಂದ ವಿಲಾಸ
ಬೋಧ ಪ್ರದಮಿಜ ಮೀಮಾಂಸ
ಬೋಧ ಪರಮಹಂಸ ||೧||

ಸ್ವಾಮಿತದಾ ಅವತರಲ 
ಧರ್ಮ ಸುಜಾಗ್ರತ ಕೇಲ
ಜೀನ್ಮುನಿ ಮಂಡನ ಮಿಶ್ರಾಲ
ದಿಗ್ವಿಜಯೀ ಜಾಲ ||೨||

ಬುದ್ಧ ಮಹಾ ಅಭಿಮಾನಿ
ಶ್ರುತಿ ರೋಕ್ಕ ಅವಮಾನಿ
ದ್ವಿಜ ದೇವ ಶ್ರೀಪಮಾನಿ 
ಸಮತೋಚಿತ ಮಾನಿ ||೩||

ತೋಟಕ ಸುರೇಶ್ವರ ಭಜಿತ
ಪರಮಾಜ್ಞಾಧಾರಕ ಪದ್ಮಪಾದ
ಹಸ್ತಾಮಲಕ ಶಿಷ್ಯ
ಭವೇತ್ ಪ್ರಮುಖ ||೪||

ಮಾಘ್ನ ಶುದ್ಧ ಪಂಚಮೀಲ
ಗುಂಪಿಯಲಿ ಸ್ಮವಮಾಲ
ದತ್ತ ಮಣೆ ಆಫಾಲಾ
ಶಂಕರ ಭಾರತಿ ಲಾ ||೫||
*****
ಆಮ್ನಾಯ ಪೀಠಗಳ ವಿವರ—–

1)ಗೋವರ್ಧನ ಪೀಠ–ಹಸ್ತಾಮಲಕಾಚಾರ್ಯರು–ಮಹಾವಾಕ್ಯ–ಪ್ರಜ್ಞಾನಂ ಬ್ರಹ್ಮ–ಋಗ್ವೇದ–ಐತ್ತರೇಯ ಉಪನಿಷತ್–ಭೋಗವಾಲ ಸಂಪ್ರದಾಯ

2)ಶಾರದಾ ಪೀಠ–ಸುರೇಶ್ವರಾಚಾರ್ಯರು–ಮಹಾವಾಕ್ಯ–ಅಹಂ ಬ್ರಹ್ಮಾಸ್ಮಿ–ಯಜುರ್ವೇದ–ಬ್ರಹದಾರಣ್ಯಕ ಉಪ.–ಭೂರಿವಾಲ ಸಂಪ್ರದಾಯ

3)ದ್ವಾರಕಾ ಪೀಠ–ಪದ್ಮಪಾದಾಚಾರ್ಯರು–ಮಹಾವಾಕ್ಯ–ತತ್ವಮಸೀ–ಸಾಮವೇದ–ಛಾಂದೋಗ್ಯ ಉಪನಿಷತ್–ಕೀಟವಾಲ ಸಂಪ್ರದಾಯ

4)ಜ್ಯೋತಿರ್ಮಠ–ತೋಟಕಾಚಾರ್ಯರು–ಮಹಾವಾಕ್ಯ–ಅಯಮಾತ್ಮಾ ಬ್ರಹ್ಮ–ಅಥರ್ವ ವೇದ– ಮಾಂಡೂಕ್ಯ ಉಪ.–ನಂದವಾಲ ಸಂಪ್ರದಾಯ

ದಶನಾಮೀ ಪದ್ಧತಿ–ಶಂಕರಾಚಾರ್ಯರು ಏಕದಂಡಿ ಸಂಪ್ರದಾಯವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಯಾವುವೆಂದರೆ ಸರಸ್ವತಿ, ತೀರ್ಥ, ಅರಣ್ಯ, ಭಾರತೀ, ಆಶ್ರಮ, ಗಿರಿ, ಪರ್ವತ, ಸಾಗರ, ವನ ಮತ್ತು ಪುರಿ. ಸರಸ್ವತಿ, ಭಾರತಿ ಮತ್ತು ಪುರಿ ಉಪನಾಮಗಳು ಶೃಂಗೇರಿ ಮಠಕ್ಕೆ ಸೇರಿವೆ. ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಜ್ಯೋತಿರ್ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಆದರೂ ಇದು ಅಷ್ಟೇನೂ ಬಿಗಿಯಾದ ನಿಯಮವಿದ್ದಂತೆ ಕಾಣುವುದಿಲ್ಲ. ಕಾರಣ ಅರಣ್ಯನಾಮದ ವಿದ್ಯಾರಣ್ಯರು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದರು.

ಷಣ್ಮತ ಸ್ಥಾಪನೆ—-ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಮತ್ತು ಸ್ಕಂದ ಈ ದೇವರುಗಳ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳವಾಡುತ್ತಿದ್ದುದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ, ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮವನ್ನು ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತಾ ಇಟ್ಟು, ಅದನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಲು ಹೇಳಿದರು. ಈ ಪದ್ಧತಿ ಅಂದಿನಿಂದ ಶುರುವಾಯಿತು. ಈ ಕಾರಣದಿಂದ ಶಂಕರರಿಗೆ ಷಣ್ಮತಸ್ಥಾಪಕರೆಂದು ಹೆಸರಾಯಿತು.

ನಿರಾಕಾರ ಪರಬ್ರಹ್ಮ ಸಾಕ್ಷಾತ್ಕಾರಕ್ಕೆ ಇರುವ ಮಾರ್ಗಗಳಲ್ಲಿ ಶ್ರೀಚಕ್ರ ಉಪಾಸನೆಯೂ ಒಂದು. ಶಂಕರರ ಕಾಲದಲ್ಲಿ ಶ್ರೀ ಚಕ್ರ ಪೂಜೆಯು ಉಗ್ರಶಕ್ತಿಯ ಉಪಾಸನೆಯಾಗಿತ್ತು. ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಸ್ಥಾಪನೆಯನ್ನು ಮಾಡಬೇಕಿತ್ತು. ಅದ್ವೈತ ಸಿದ್ಧಾಂತದ ಸ್ಥಾಪನೆಯ ಹಿನ್ನೆಲೆಯಲ್ಲಿ ನಿರಾಕಾರ ಪರತತ್ವದ ಸ್ಥಾಪನೆ, ಪ್ರತಿಮಾ ಪೂಜೆಗಳಿಂದ ಹೊರತಾದ ಪರಬ್ರಹ್ಮದ ಅರ್ಚನೆಯಾಗಬೇಕಿತ್ತು. ಆದರೆ ಸಾಮಾನ್ಯ ಜನರಿಗೆ ಆಕಾರಸಹಿತವಾಗಿರುವ ದೇವ-ದೇವಿಯರನ್ನು ಪೂಜಿಸಿಯೇ ರೂಢಿ. ಈ ಹಿನ್ನೆಲೆಯಲ್ಲಿ ಆಕಾರಸಹಿತವಾದ ಪ್ರತಿಮೆ, ನಿರಾಕಾರವಾಗಿರುವ ಪರಬ್ರಹ್ಮ ಎರಡರ ಮಧ್ಯದಲ್ಲಿ ಒಂದು ಸಾಧನ ಬೇಕಿತ್ತು. ಅದಕ್ಕಾಗಿ ಶಂಕರರು ಶ್ರೀ ಚಕ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ ಭಂಡಾಸುರನ ವಧೆಯ ಕಾರಣವಾಗಿ ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀ ಚಕ್ರವನ್ನು ಯಥಾಸ್ಥಿತಿಯಲ್ಲಿ ಉಪಾಸನೆ ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಶ್ರೀಚಕ್ರವಿದ್ದಲ್ಲಿಗೆ ಹೋಗಿ ಶ್ರೀಚಕ್ರವನ್ನು ಪರಿಷ್ಕರಿಸಿ ಸಾತ್ವಿಕರೂಪವು ಉಗಮಿಸುವಂತೆ ಸಾತ್ವಿಕ ಶ್ರೀಚಕ್ರ ಸ್ಥಾಪನೆ ಮಾಡಬೇಕು. ಅದು ಸಾಧ್ಯವಾದರೆ, ಆ ಶ್ರೀಚಕ್ರಾರ್ಚನೆ ಮೂಲಕ ಪ್ರತಿಮಾ ಪೂಜೆಯನ್ನು ಮೀರಿ ನಿರಾಕಾರ ಪರಬ್ರಹ್ಮದ ಕಡೆಗೆ ಹೋಗುವ ಪಥದಲ್ಲಿ ಒಂದು ಸಾಧನವನ್ನು ಸ್ಥಾಪನೆ ಮಾಡಿದಂತಾಗುತ್ತದೆ. ಉಗ್ರಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತೀ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷೀ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷೀ ದೇವಾಲಯವನ್ನೇ ಆಯ್ಕೆಮಾಡಿಕೊಂಡರು. ಸಂಖ್ಯಾಶಾಸ್ತ್ರ, ಅಕ್ಷರಶಾಸ್ತ್ರದ ಅನುಗುಣವಾಗಿ ಘೋರಮಂತ್ರಗಳನ್ನು (ಘೋರಾಕ್ಷರ) ತೆಗೆದು, ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನು ನಿಗ್ರಹಿಸಿದರು. ಸಾತ್ವಿಕ ಶ್ರೀಚಕ್ರಸೃಷ್ಟಿ ಆದುದು ಹೀಗೆ.

ಶಂಕರಾಚಾರ್ಯರು ಎಲ್ಲಾ ದೇವ-ದೇವಿಯರ ಮೇಲೂ ಛಂದೋಬದ್ಧವಾದ, ಆರ್ಥಗರ್ಭಿತವಾದ, ಮನೋಹರವಾದ, ಭಕ್ತಿಯಿಂದ ಸ್ತುತಿಸಿದರೆ ಇಷ್ಟಾರ್ಥವನ್ನು ಕೈಗೂಡಿಸುವಂತಹ ಅಸಂಖ್ಯ ಸ್ತೋತ್ರಗಳನ್ನು ರಚಿಸಿದ್ದಾರೆ. ಏಕಶ್ಲೋಕಿಯಿಂದ ಹಿಡಿದು ದಶ ಶ್ಲೋಕಿ, ಶತಶ್ಲೋಕಿ, 580 ಶ್ಲೋಕಗಳಿರುವ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀವರೆಗೂ ಇವರ ರಚನೆಗಳಿವೆ. ಚಿಕ್ಕವಯಸ್ಸಿನವರಿಗೆ ಸುಲಭವಾದ ರಚನೆಗಳಿದ್ದರೆ, ಪಂಡಿತರಿಗೆ ಅಷ್ಟೇ ಕ್ಲಿಷ್ಟವಾದ ರಚನೆಗಳೂ ಇವೆ.

ಶಂಕರ ಅದ್ವೈತ ಸಿದ್ಧಾಂತ ತತ್ವಗಳು—-ಮೂಲತತ್ವ–ಬ್ರಹ್ಮ ಒಂದೇ ಸತ್ಯ. ಜಗತ್ತು. ಬ್ರಹ್ಮವು ಜ್ಞಾನಸ್ವರೂಪವಾಗಿದೆ.. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.

ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು. ಈ ಜ್ಞಾನವನ್ನು ಪಡೆಯಲು ನಾಲ್ಕು ಸಾಧನೆಗಳು ಅವಶ್ಯ. ಅವು ಯಾವುವೆಂದರೆ——

1) ನಿತ್ಯಾನಿತ್ಯ ವಿವೇಕ-ಬ್ರಹ್ಮವೊಂದೇ ಸತ್ಯ, ಉಳಿದವು ಅನಿತ್ಯ ಎಂಬ ವಿವೇಕ.

2) ಇಹಾಮುತ್ರ ಫಲಭೋಗ ವಿರಾಗ. ಈ ಲೋಕದ ಮತ್ತು ಪರಲೋಕದ ಭೋಗದ ಬಗಗೆ ವಿರಕ್ತಿ.

3) ಶಮ ದಮಾದಿ ಷಟ್ಕ ಸಂಪತ್ತಿ—ಅ) ಶಮ–ಅಂತರಂಗದ ಇಂದ್ರಿಯಗಳ ಹತೋಟಿ. ಆ) ದಮ–ಬಹಿರಿಂದ್ರಿಯ ನಿಗ್ರಹ, (ಇ) ಉಪರತಿ–ಕರ್ಮಫಲ ತ್ಯಾಗ., (ಈ) ತಿತಿಕ್ಷ–ಸಹನೆ, (ಉ) ಚಿತ್ತದ ಏಕಾಗ್ರತೆ, (ಊ) ಶ್ರದ್ಧೆ–ಗುರು ಹಾಗೂ ವೇದಾಂತದಲ್ಲಿ ನಿಷ್ಠೆ.

4) ಮುಮುಕ್ಷತ್ತ್ವ– ಮೋಕ್ಷ ಬೇಕೆಂಬ ತೀವ್ರ ಅಪೇಕ್ಷೆ

ಈ ಮೇಲೆ ನಮೂದಿಸಿದ ನಾಲ್ಕು ಸಾಧನೆಗಳ ಜೊತೆಗೆ, ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಮೂರೂ ವಿಧದ ಸಾಧನೆಯೂ ಜ್ಞಾನದ ಪ್ರಾಪ್ತಿಗೆ ಅವಶ್ಯ.

ಶ್ರೀ ಶಂಕರರು ಬದುಕಿದ್ದು ಕೇವಲ 32 ವರ್ಷ. ಆದರೆ ಅವರು ತಮ್ಮ ಜೀವಿತದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗುವಂತೆ ಕೆಲಸಮಾಡಿದರು. ಅವರ ಬಗಗೆ ಜನಶ್ರುತಿ ಹೀಗಿದೆ–

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರವಿತ್,
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್॥
ಅರ್ಥ—8ನೇ ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವ ಶಾಸ್ತ್ರಗಳನ್ನೂ ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು, 32ನೇ ವರ್ಷದಲ್ಲಿ ಹೊರಟುಹೋದರು.

ಇಂಥಾ ಮಹಾಮಹಿಮರಾದ, ಅದ್ಭುತ ಕಾರ್ಯಗಳನ್ನು ಎಸಗಿದ, ಯತಿಚಕ್ರವರ್ತಿಯಾದ, ಆಚಾರ್ಯವರ್ಯರಾದ ಶ್ರೀ ಶಂಕರಾಚಾರ್ಯರಿಗೆ ಅನಂತಾನಂತ ಕೋಟಿಕೋಟಿ ನಮನಗಳು.

॥ಜಯತು ಜಯತು ನಿತ್ಯಂ ಶಂಕರಾಚಾರ್ಯವರ್ಯಾ
ಜಯತು ಜಯತು ತಸ್ಯ ಅದ್ವೈತವಿದ್ಯಾ ಅನವದ್ಯಾ।
॥ಜಯತು ಜಯತು ಲೋಕೇ ತಚ್ಚರಿತ್ರಂ ಪವಿತ್ರಂ
॥ಜಯತು ಜಯತು ಭಕ್ತಿಸ್ತತ್ಪದಾಬ್ಜೇ ಜನಾನಾಂ॥
***


Vaishakha Shukla Panchami is the birth day of Shankarachaya


Shankaracharya meeting his guru at cave in Omkareshwara, Madhya Pradesh


***

ಶ್ರೀ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ 

ಪರಿಪೂರ್ಣ ನಾಮ:- ಶ್ರೀ ಆದಿ ಶಂಕರಾಚಾರ್ಯ
 
 ವೈಶಾಖ ಶುದ್ಧ ಪಂಚಮಿಯಂದು "ಶ್ರೀ ಶಂಕರರ ಜಯಂತಿ":- ಈ ದಿನವನ್ನು ಭಾರತ ಸರ್ಕಾರ "ದಾರ್ಶನಿಕರ ದಿನ" ಎಂದು ಘೋಷಿಸಿದೆ.

1. ಶ್ರೀ ಶಂಕರ ಜಯಂತಿ:- ವೈಶಾಖ ಶುದ್ಧ ಪಂಚಮಿ

2. ಕಾಲ:- ಕ್ರಿ.ಶ. 788-820

3. ತಾಯಿ, ತಂದೆ:- ಆರ್ಯಾಂಬಾ, ಶಿವಗುರು

4. ಜನ್ಮಸ್ಥಳ:- ಕೇರಳದ ಪೂರ್ಣ ನದಿ ತೀರದ ಕಾಲಡಿ

5. ಸನ್ಯಾಸ ಸ್ವೀಕಾರ:- ಎಂಟನೆಯ ವರ್ಷ

6. ಗುರುಗಳು:- ಶ್ರೀ ಗೋವಿಂದ ಭಗವತ್ಪಾದರು

7. ಪ್ರತಿಪಾದಿಸಿದ ದರ್ಶನ:- ಅದ್ವೈತ ಸಿದ್ಧಾಂತ

8. ಪಂಥಗಳು:- ಶಿವ, ವೈಷ್ಣವ, ಶಾಕ್ತ, ಸೌರ, ಗಾಣಪತ್ಯ, ಕೌಮಾರ.

9. ಪಂಚಾಯತನ ದೇವತೆಗಳು:- ಸೂರ್ಯ, ಗಣಪತಿ, ದುರ್ಗೆ, ಶಿವ, ವಿಷ್ಣು.

10. ಶ್ರೀ ಶಂಕರರ ಮಾತೃಭಾಷೆ:- ಮಲಯಾಳಂ

11. ಶ್ರೀ ಶಂಕರರ ಸಂಪರ್ಕ ಭಾಷೆ:- ಸಂಸ್ಕೃತ

12. ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ:- ಕನಕಧಾರ ಸ್ತೋತ್ರ.

13. ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು:- ಸ್ವರ್ಣತ್ತಿಲ್ಲಂ

14. ಗುರುದ್ರೋಹ ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು:- ಕುಮಾರಿಲ ಭಟ್ಟರು (ಕುಮಾರ್ಲ ಭಾಟ್)

15. ಶ್ರೀ ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರುಗಳು:-              
1. ಪದ್ಮಪಾದಚಾರ್ಯ                  
2. ಹಸ್ತಾಮಲಕಾಚಾರ್ಯ             
3. ತೋಟಕಾಚಾರ್ಯ                   
4. ಸುರೇಶ್ವರಾಚಾರ್ಯ

16. ಪದ್ಮಪಾದಾಚಾರ್ಯರ ಪೂರ್ವನಾಮ:- ಸನಂದನ

17. ಸುರೇಶ್ವರಾಚಾರ್ಯರ ಪೂರ್ವನಾಮ:- ಮಂಡನ ಮಿಶ್ರ

18. ರಚಿಸಿದ ಗ್ರಂಥಗಳು:- 54

19. ರಚಿಸಿದ ಕೊನೆಯ ಗ್ರಂಥ:- ವಿವೇಕ ಚೂಡಾಮಣಿ

20. ಪ್ರಸ್ಥಾನ ತ್ರಯಗಳು:- ಬ್ರಹ್ಮಸೂತ್ರ, ಭಗವದ್ಗೀತೆ, ಉಪನಿಷತ್ತುಗಳು.

21. ಬ್ರಹ್ಮ ಸೂತ್ರ:- 555 ಸೂತ್ರಗಳು 

22. ಭಗವದ್ಗೀತೆ:- 18 ಅಧ್ಯಾಯ(ವ್ಯಾಖ್ಯಾನ), 700 ಶ್ಲೋಕಗಳು

23. ಉಪನಿಷತ್ತುಗಳು:- 10

24. ರಚಿಸಿದ ಸ್ತೋತ್ರಗಳು:- 72

25. ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ:- ಏಕಶ್ಲೋಕಿ(ಕಿಂ ಜ್ಯೋತಿಸ್ತವ)

26. ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು:-               
1. ಕಾಲಭೈರವಾಷ್ಟಕ   2. ಮನೀಷಾ ಪಂಚಕ 
3. ಅನ್ನಪೂರ್ಣ ಸ್ತೋತ್ರ   4. ಕಾಶಿ ಸ್ತೋತ್ರ

27. ಚತುರಾಮ್ನಾಯ ಪೀಠಗಳು ಮತ್ತು ಪೀಠಗಳ ಪ್ರಥಮಾಚಾರ್ಯರುಗಳು:-
1. ಶೃಂಗೇರಿ ಪೀಠ - ಸುರೇಶ್ವರಾಚಾರ್ಯರು - ದಕ್ಷಿಣ
2. ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ 
3. ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - ಪಶ್ಚಿಮ
4. ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ

29. ಪೀಠಗಳ ದೇವ, ದೇವಿಯರು:- 
1. ಚಂದ್ರಮೌಳೇಶ್ವರ - ಶಾರದಾ ದೇವಿ
2. ಜಗನ್ನಾಥ - ವಿಮಲಾ ದೇವಿ
3. ಸಿದ್ಧೇಶ್ವರ - ಭದ್ರಕಾಳಿ
4. ನಾರಾಯಣ - ಪೂರ್ಣ ದೇವಿ

30. ಪವಿತ್ರ ತೀರ್ಥಗಳು:- ತುಂಗಾ, ಗೋಮತಿ, ಅಲಕಾನಂದ, ಪೂರ್ವ ಸಮುದ್ರ.

31. ಸರ್ವಜ್ಞ ಪೀಠಾರೋಹಣ:- ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ 

32. ಶ್ರೀ ಶಂಕರರ ಮಹಾ ಸಿದ್ಧಾಂತ:- ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ. ಇದರ ಅರ್ಥ: ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ, ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ. 

33. ಶ್ರೀ ಶಂಕರರ ಸಾಧನೆ:-
1. ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ

2. ದ್ವಾದಶೇ ಸರ್ವಶಾಸ್ತ್ರವಿತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ 

3. ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ

4. ಮೂವತ್ತೆರಡನೇ ವರ್ಷಕ್ಕೆ ದೇಹತ್ಯಾಗ

34. ದೇಹ ತ್ಯಾಗ:- ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ

🙏🕉️🚩ಸಂಕ್ಷಿಪ್ತ ಸಂಗ್ರಹ:- ಪ್ರಶಾಂತ್ ಮೈಸೂರ್
***
ಶ್ರೀಶಂಕರಾಚಾರ್ಯರು
    ಶ್ರೀ ಶಂಕರಾಚಾರ್ಯರು, ಕ್ರಿಸ್ತ ಶಕ 788ರಲ್ಲಿ ಕೇರಳದಲ್ಲಿ ಪೂರ್ಣಾನದಿ ತೀರದಲ್ಲಿರುವ ಕಾಲಡಿ ಗ್ರಾಮದ ವೇ.ಬ್ರ.ಶ್ರೀಶಿವಗುರು ಹಾಗೂ ಸಾಧ್ವಿ ಶ್ರೀಮತಿ ಆರ್ಯಾಂಬಾರ ಸುಪುತ್ರರಾಗಿ ಜನಿಸಿದ ಈ ಮಹಾತ್ಮರು,  8 ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಶಂಕರಚಾರ್ಯರು / ಶ್ರೀ ಆದಿ ಶಂಕರಾಚಾರ್ಯರಾದರು. 
 ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರ ಮಾರ್ಗದರ್ಶನದಲ್ಲಿ ಬ್ರಹ್ಮಸೂತ್ರ ಭಾಷ್ಯ,  ಐತರೇಯ ಉಪನಿಷದ್ಭಾಷ್ಯ ( ಋಗ್ವೇದ ), ಬೃಹದಾರಣ್ಯಕ ಉಪನಿಷದ್ಭಾಷ್ಯ ( ಶುಕ್ಲ ಯಜುರ್ವೇದ ), ಈಶಾವಾಸ್ಯೋಪನಿಷದ್ಭಾಷ್ಯ ( ಶುಕ್ಲ ಯಜುರ್ವೇದ ), ತೈತ್ತಿರೀಯೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ ),  ಶ್ವೇತಾಶ್ವತರೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ ), ಕಾಠಕೋಪನಿಷದ್ಭಾಷ್ಯ ( ಕೃಷ್ಣ ಯಜುರ್ವೇದ ), ಕೇನೋಪನಿಷದ್ಭಾಷ್ಯ ( ಸಾಮವೇದ ), ಛಾ೦ದೋಗ್ಯ ಉಪನಿಷದ್ಭಾಷ್ಯ ( ಸಾಮವೇದ ),  ಮಾಂಡೂಕೋಪನಿಷದ್ಭಾಷ್ಯ ( ಅಥರ್ವಣವೇದ ), ಪ್ರಶ್ನೋಪನಿಷದ್ಭಾಷ್ಯ ( ಅಥರ್ವಣವೇದ ), ಶ್ರೀಮದ್ಭಗವದ್ಗೀತಾ ಭಾಷ್ಯ, ಶ್ರೀ ವಿಷ್ಣುಸಹಸ್ರನಾಮ ಭಾಷ್ಯ, ಸನತ್ಸುಜಾತೀಯ, ಶ್ರೀ ಗಾಯತ್ರೀ ಮಂತ್ರ ಭಾಷ್ಯ, ವಿವೇಕ ಚೂಡಾಮಣಿ, ಉಪದೇಶ ಸಹಸ್ರಿ, ಶತಶ್ಲೋಕಿ, ದಶ ಶ್ಲೋಕಿ, ಏಕಶ್ಲೋಕಿ, ಪಂಚೀಕರಣ, ಆತ್ಮ ಬೋಧ, ಅಪರೋಕ್ಷಾನುಭೂತಿ, ಸಾಧನಾ ಪಂಚಕಮ್, ನಿರ್ವಾಣ ಶತಕಮ್, ಮನೀಶ ಪಂಚಕಮ್, ಯತಿ ಪಂಚಕಮ್, ವಾಕ್ಯಸುಧಾ, ತತ್ತ್ವ ಬೋಧ, ವಾಕ್ಯವೃತ್ತಿ, ಸಿದ್ಧಾಂತ ತತ್ತ್ವ ಬಿಂದು, ನಿರ್ಗುಣ ಮಾನಸ ಪೂಜಾ, ಪ್ರಶ್ನೋತ್ತರ ರತ್ನ ಮಾಲಿಕಾ, ಪ್ರಬೋಧ ಸುಧಾಕರ, ಸ್ವಾತ್ಮ ಪ್ರಕಾಶಿಕಾ, ಸೌಂದರ್ಯ ಲಹರಿ, ಶ್ರೀಗಣೇಶ ಪಂಚರತ್ನಂ, ಶ್ರೀಅನ್ನಪೂರ್ಣಾಷ್ಟಕಂ,  ಶ್ರೀಕಾಲಭೈರವಾಷ್ಟಕಂ, ಶ್ರೀದಕ್ಷಿಣಾಮೂರ್ತಿ ಸ್ತೋತ್ರಂ, ಶ್ರೀ ಕೃಷ್ಣಾಷ್ಟಕಮ್, ಶ್ರೀ ನಾಮ ರಾಮಾಯಣಮ್, ಭಜ ಗೋವಿಂದಂ, ಶ್ರೀ ಶಿವಾನಂದಲಹರಿ, ಶ್ರೀ ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರಂ, ಶ್ರೀ ಶಾರದಾ ಭುಜಂಗಮ್, ಶ್ರೀ ಕನಕಧಾರಾ ಸ್ತೋತ್ರಂ, ಶ್ರೀ ಭವಾನಿ ಅಷ್ಟಕಂ, ಶ್ರೀ ಶಿವ ಮಾನಸ ಪೂಜಾ, ಶ್ರೀ ಪಾಂಡುರಂಗಾಷ್ಟಕಮ್, ಶ್ರೀ ಸುಬ್ರಹ್ಮಣ್ಯ ಭುಜಂಗಮ್, ಕಾಶಿ ಪಂಚಕಂ, ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರಂ, ಶ್ರೀ ಮೀನಾಕ್ಷಿ ಪಂಚರತ್ನಂ, ಆತ್ಮ ಶತಕಂ, ಯೋಗಸೂತ್ರ,  ಸೂತ್ರತ್ರಯಿ ಭಾಷ್ಯ ಸೇರಿ 300ಕ್ಕೂ ಅಧಿಕ ಗ್ರಂಥಗಳನ್ನು ಅವರ 32 ವರ್ಷಗಳ ಜೀವಿತಾವಧಿಯಲ್ಲಿ ರಚಿಸಿದ್ದಾರೆ. 
 ಸಣ್ಣ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ, ಗುರುಗಳಾದ ಶ್ರೀಗೋವಿಂದ ಭಗವತ್ಪಾದರ ಮಾರ್ಗದರ್ಶನದಲ್ಲಿ ಸಾಗಿದ ಯತಿಗಳು "ಅದ್ವೈತ ಸಿದ್ಧಾಂತ" ವನ್ನು ಪ್ರತಿಪಾದಿಸಿ, ಶಿವ, ವೈಷ್ಣವ, ಶಾಕ್ತ, ಸೌರ ಗಾಣಪತ್ಯ, ಕೌಮಾರ ಪಂಥಗಳನ್ನು ರೂಪಿಸಿದರು. ಸೂರ್ಯ, ಗಣಪತಿ, ದುರ್ಗೆ, ಶಿವ, ವಿಷ್ಣುವನ್ನು ಪೂಜಿಸುವ ಪಂಚಾಯತನ ಪದ್ಧತಿಯನ್ನು ಜಾರಿಗೆ ತಂದರು. ಮಾತೃಭಾಷೆ ಮಲಯಾಳಿಯಾದರೂ ಅವರ ಸಂಪರ್ಕ ಭಾಷೆ ಸಂಸ್ಕೃತವಾಗಿತ್ತು. ಅಪಾರ ದೈವ ಭಕ್ತಿ ಹೊಂದಿದ್ದ ಮಹನೀಯರು. 
 ದೇಶ ಪರ್ಯಟನೆ ವೇಳೆ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ಅವುಗಳ ಪ್ರಥಮಾಚಾರ್ಯರನ್ನಾಗಿ ಶೃಂಗೇರಿ ಪೀಠದ ಶ್ರೀಚಂದ್ರಮೌಳೀಶ್ವರ  ಹಾಗೂ ಶ್ರೀ ಶಾರದಾದೇವಿಯನ್ನರ್ಚಿಸಲು ಶ್ರೀಸುರೇಶ್ವರಾಚಾರ್ಯರನ್ನು, ಪೂರಿ ಜಗನ್ನಾಥ ಪೀಠದಲ್ಲಿ ಶ್ರೀಜಗನ್ನಾಥ ಹಾಗೂ ಶ್ರೀವಿಮಲಾದೇವಿಯನ್ನು ಸೇವಿಸಲು ಶ್ರೀಪದ್ಮಪಾದಾಚಾರ್ಯರನ್ನು, ದ್ವಾರಕಾ ಪೀಠದಲ್ಲಿ ಶ್ರೀಸಿದ್ದೇಶ್ವರ ಹಾಗೂ ಭದ್ರಕಾಳಿಯನ್ನು ಪೂಜಿಸಲು ಶ್ರೀಹಸ್ತಾಮಲಕಾಚಾರ್ಯರನ್ನು ಹಾಗೂ ಜ್ಯೋತಿಷ್ಮತಿ ಪೀಠದಲ್ಲಿ ಶ್ರೀನಾರಾಯಣದೇವರು ಹಾಗೂ  ಪೂರ್ಣಾದೇವಿಯ ಪಾದಸೇವೆಗಾಗಿ ಶ್ರೀತೋಟಕಾಚಾರ್ಯರನ್ನು ನಿಯೋಜಿಸಿದರು. 
   ಅಷ್ಟವರ್ಷೇ ಚತುರ್ವೇದಿ(8 ನೇ ವಯಸ್ಸಿಗೆ ನಾಲ್ಕು ವೇದಗಳ ಅಧ್ಯಯನ), ದ್ವಾದಶೇ ಸರ್ವಶಾಸ್ತ್ರವಿತ್ (12 ನೇ ವಯಸ್ಸಿಗೆ ಸಕಲ ಶಾಸ್ತ್ರಗಳ ಪಾಂಡಿತ್ಯ), ಷೋಡಶೇ ಕೃತವಾನ್ ಭಾಷ್ಯಂ (16 ನೇ ವರ್ಷಕ್ಕೆ ಭಾಷ್ಯ ರಚನೆ).
 ಇಂತಹ ಮಹಾಮಹಿಮರು 32ನೇ ವಯಸ್ಸಿನಲ್ಲಿ ಶ್ರೀಕೇದಾರನಾಥನ ಸನ್ನಿಧಿಯಲ್ಲಿ ಭೌತಿಕಕಾಯ ತ್ಯಜಿಸಿ ಶ್ರೀಮಹಾದೇವನ ಚರಣಗಳಲ್ಲಿ ಲೀನವಾದರು..
**

No comments:

Post a Comment