SEARCH HERE

Friday, 9 April 2021

ಸೂರ್ಯ surya





ಸೂರ್ಯ

ರಥಸಪ್ತಾಮಿಯಂದು ಸೂರ್ಯನಮಸ್ಕಾರ ಮಾಡುವ ಪದ್ಧತಿ

ಸೂರ್ಯನಮಸ್ಕಾರವು ಹತ್ತು ಆಸನಗಳನ್ನು ಒಳಗೊಂಡಿದೆ.

ಪ್ರತಿಸಲ ಸೂರ್ಯನಮಸ್ಕಾರವನ್ನು ಮಾಡುವ ಮೊದಲು “ಓಂ ಮಿತ್ರಾಯ ನಮಃ” ದಿಂದ ಎಲ್ಲ ಹದಿಮೂರು ಜಪಗಳನ್ನೂ ಮಾಡಬೇಕು.

ಸೂರ್ಯನಮಸ್ಕಾರ ಮಾಡುವಾಗ ಪಠಿಸಬೇಕಾದ ನಾಮಗಳು
ಓಂ ಮಿತ್ರಾಯ ನಮಃ
ಓಂ ರವಯೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪೂಷ್ಣೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚ್ಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

ಆಸನ ೧

ಪ್ರಾರ್ಥನಾಸನ : ಎರಡೂ ಕಾಲುಗಳು ಒಂದಕ್ಕೊಂದು ಕೂಡಿಕೊಂಡಿರಲಿ, ಎರಡೂ ಹಸ್ತಗಳನ್ನು ಜೋಡಿಸಿ ನಮಸ್ಕಾರ ಮಾಡುವ ರೀತಿಯಲ್ಲಿ ಎದೆಯ ಮಟ್ಟಕ್ಕೆ ತರಬೇಕು. ಬೆನ್ನು ಮತ್ತು ಕತ್ತು ನೇರವಾಗಿರಲಿ ಹಾಗೂ ನೇರವಾಗಿ ಎದುರಿಗೆ ನೋಡುತ್ತಿರಬೇಕು.
ಪ್ರಾಣಾಯಾಮ : ಕುಂಭಕ
ಲಾಭ : ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಆಸನ ೨

ಆಸನ : ಪ್ರಾರ್ಥನಾಸನದಿಂದ ಮುಂದುವರಿಯುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಬೆನ್ನನ್ನು ಹಿಗ್ಗಿಸುವ ರೀತಿಯಲ್ಲಿ ಹಿಂಬದಿಗೆ ಸ್ವಲ್ಪ ಬಾಗಬೇಕು. ಹಸ್ತಗಳನ್ನು ಜೋಡಿಸಿರಬೇಕು ಮತ್ತು ಮೊಣಕೈಗಳನ್ನು ಮಡಚಬಾರದು. ತಲೆಯನ್ನು ಎರಡೂ ತೋಳುಗಳಮಧ್ಯದಲ್ಲಿರಿಸಿ ಮೇಲಕ್ಕೆ ನೋಡುತ್ತಾ ಸೊಂಟದಿಂದ ಸ್ವಲ್ಪ ಹಿಂದಕ್ಕೆ ಬಾಗಬೇಕು.
ಪ್ರಾಣಾಯಾಮ : ಪೂರಕ (ಮೊದಲ ಆಸನದಿಂದ ಎರಡನೆಯ ಆಸನಕ್ಕೆ ಹೋಗುವಾಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು)
ಲಾಭ : ಎದೆಯ ಮಾಂಸಖಂಡಗಳನ್ನು ನೇರವಾಗಿಸುತ್ತದೆ ಮತ್ತು ಉಸಿರಾಟವು ಯೋಗ್ಯರೀತಿಯಲ್ಲಿ ಆಗುವಂತೆ ಮಾಡುತ್ತದೆ.

ಆಸನ ೩

ಉತ್ಥಾನಾಸನ : ಎರಡನೆಯ ಆಸನದಿಂದ ಮುಂದುವರಿಯುತ್ತಾ ಕೈಗಳನ್ನು ಮೇಲಕ್ಕೆ ಎತ್ತಿರುವಂತೆಯೇ ಮುಂದಕ್ಕೆ ಬಾಗುತ್ತಾ ಕೈಗಳನ್ನು ಪಾದಗಳ ಅಕ್ಕಪಕ್ಕದಲ್ಲಿ ನೆಲಕ್ಕೆ ಊರಬೇಕು. ಮೊಣಕಾಲು ನೇರವಾಗಿರಬೇಕು ಮತ್ತು ತಲೆಯನ್ನು ಮೊಣಕಾಲುಗಳಿಗೆತಾಗಿಸಲು ಪ್ರಯತ್ನಿಸಬೇಕು.
ಪ್ರಾಣಾಯಾಮ : ರೇಚಕ (ಆಸನ ೨ ರಿಂದ ೩ ಕ್ಕೆ ಬರುವಾಗ ನಿಧಾನವಾಗಿ ಉಸಿರನ್ನು ಹೊರಗೆ ಹಾಕಬೇಕು)
ಲಾಭ : ಸೊಂಟ ಮತ್ತು ಬೆನ್ನು ಮೂಳೆಯನ್ನು ಮೆತುವಾಗಿಸುತ್ತದೆ. ಮಾಂಸಖಂಡಗಳು ಬಲಗೊಳ್ಳೂತ್ತವೆ ಮತ್ತು ಯಕೃತ್ತಿನ ಕಾರ್ಯಕ್ಕೆ ಸಹಾಯಕಾರಿಯಾಗುತ್ತದೆ.

ಆಸನ ೪

ಏಕಪಾದಪ್ರಸರಣಾಸನ : ಮೂರನೆಯ ಆಸನದಿಂದ ಮುಂದುವರಿದು ಕೆಳಗೆ ಕುಳಿತುಕೊಳ್ಳುತ್ತಾ ಒಂದು ಕಾಲನ್ನು ಹಿಂದಕ್ಕೆ ನೇರವಾಗಿ ಚಾಚಬೇಕು. ಹಸ್ತಗಳು ಕಾಲುಗಳ ಎರಡೂ ಕಡೆಗಳಲ್ಲಿ ನೆಲಕ್ಕೆ ಊರಿರಬೇಕು. ಇನ್ನೊಂದು ಕಾಲನ್ನು ಮಡಚಿರಬೇಕು.ಎದೆಯ ಭಾರವನ್ನು ಮುಂದಿರುವ ಮೊಣಕಾಲಿನಮೇಲೆ ಹಾಕಬೇಕು, ಕಣ್ಣುಗಳ ದೃಷ್ಟಿಯು ನೇರವಾಗಿ ಮೇಲಕ್ಕೆ ಇರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಕಾಲುಗಳ ಮಾಂಸಖಂಡಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಮತ್ತು ಕತ್ತಿನ ಮಾಂಸಗಳು ಮೆತುವಾಗುತ್ತವೆ.


ಆಸನ ೫

ಚತುರಾಂಗ ದಂಡಾಸನ : ಈಗ ನಿಧಾನವಾಗಿ ಮಡಚಿರುವ ಕಾಲನ್ನು ಹಿಂದಕ್ಕೆ ಚಾಚಿ ಈಗಾಗಲೇ ಚಾಚಿರುವ ಕಾಲಿನ ಪಕ್ಕದಲ್ಲಿಡಬೇಕು. ಮೊಣಕಾಲುಗಳು ಸಮಾನಾಂತರವಾಗಿರಲಿ. ಇಡೀ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲಿರಲಿ.ಕಾಲು, ಸೊಂಟ ಮತ್ತು ತಲೆ ಒಂದೇ ರೇಖೆಯಂತೆ ನೇರವಾಗಿರಲಿ.ನೇರವಾಗಿ ನೆಲವನ್ನು ನೋಡುತ್ತಿರಬೇಕು. (ಈ ಆಸನಕ್ಕೆ ಚತುರಾಂಗದಂಡಾಸನವೆಂದು ಏಕೆ ಕರೆಯುತ್ತಾರೆಂದರೆ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲೆ ಇರುತ್ತದೆ)
ಪ್ರಾಣಾಯಾಮ : ರೇಚಕ
ಲಾಭ : ತೋಳುಗಳ ಬಲವೃದ್ಧಿಯಾಗುತ್ತದೆ ಮತ್ತು ದೇಹದ ಆಕೃತಿಯು ಸರಿಯಾಗಿ ಬೆಳವಣಿಗೆಯಾಗುತ್ತದೆ.

ಆಸನ ೬

ಅಷ್ಟಾಂಗಾಸನ : ಎದೆಯನ್ನು ನೆಲದಕಡೆಗೆ ತರುತ್ತಾ ಎರಡೂ ಮೊಣಕೈಗಳನ್ನು ಮಡಚಬೇಕು. ಮುಂದೆ ಕೊಟ್ಟಿರುವ ಎಂಟು ಅವಯವಗಳು ನೆಲಕ್ಕೆ ತಾಗಬೇಕು.ಹಣೆ, ಎದೆ, ಎರಡೂ ಹಸ್ತಗಳು, ಎರಡೂ ಮೊಣಕಾಲುಗಳು ಮತ್ತು ಕಾಲಿನ ಹೆಬ್ಬೆರಳುಗಳು. (ಈಆಸನದಲ್ಲಿ ದೇಹದ ಎಂಟು ಅವಯವಗಳು ನೆಲವನ್ನು ಸ್ಪರ್ಷಿಸುತ್ತವೆಯಾದ್ದರಿಂದ ಇದಕ್ಕೆ ಅಷ್ಟಾಂಗಾಸನವೆಂದು ಕರೆಯುತ್ತಾರೆ)
ಪ್ರಾಣಾಯಾಮ : ಕುಂಭಕ (ಬಹಿರ್‌ಕುಂಭಕ)
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತದೆ.

ಆಸನ ೭

ಭುಜಂಗಾಸನ : ಈಗ ಸೊಂಟದ ಮೇಲ್ಭಾಗವನ್ನು ಮೇಲಕ್ಕೆತ್ತಬೇಕು. ಹಿಂದಕ್ಕೆ ಸ್ವಲ್ಪಬಾಗಬೇಕು ಮತ್ತು ಹಿಂದೆ ನೋಡಬೇಕು. ಕಾಲ್ಬೆರಳುಗಳು ಮತ್ತು ತೊಡೆಗಳು ನೆಲಕ್ಕೆ ಸ್ಪರ್ಷಿಸುತ್ತಿರುವಂತೆ ನೋಡಿಕೊಳ್ಳಬೇಕು ಮತ್ತು ಬೆನ್ನು ಅರ್ಧವೃತ್ತಾಕಾರದಲ್ಲಿ ಬಾಗಿದಸ್ಥಿತಿಯಲ್ಲಿರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತವೆ.( ೫, ೬ ಮತ್ತು ೭ನೆಯ ಆಸನಗಳು ಒಟ್ಟಾಗಿ ತೋಳುಗಳನ್ನು ಬಲಶಾಲಿಯನ್ನಾಗಿಸುತ್ತವೆ ಮತ್ತು ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಕೊಬ್ಬನ್ನುಕರಗಿಸುತ್ತವೆ)

ಆಸನ ೮

ಅಧೋಮುಖ ಸ್ವನಾಸನ : ಈಗ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಕೈಗಳು ನೇರವಾಗಿ ಚಾಚಿಕೊಂಡಿರಲಿ,ಹಸ್ತಗಳು ಮತ್ತು ಪಾದಗಳನ್ನು ನೆಲಕ್ಕೆ ಊರಬೇಕು.ಗದ್ದವನ್ನು ಎದೆಗೆ ತಾಗಿಸುವ ಪ್ರಯತ್ನ ಮಾಡಬೇಕು
ಪ್ರಾಣಾಯಾಮ : ರೇಚಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟದ ಮಾಂಸಖಂಡಗಳಿಗೆ ಉಪಯುಕ್ತ.

ಆಸನ ೯

ಏಕಪಾದ ಪ್ರಸರಣಾಸ : ನಾಲ್ಕನೆಯ ಆಸನದಂತೆ ಮಾಡುವುದು ಆದರೆ ಇಲ್ಲಿ ವಿರುದ್ಧ ಕಾಲು ಹಿಂದೆ ಚಾಚಿಕೊಂಡಿರುತ್ತದೆ.
ಪ್ರಾಣಾಯಾಮ : ಪೂರಕ.

ಆಸನ ೧೦

ಅಷ್ಟಾಂಗಾಸನ : ಮೂರನೆಯ ಆಸನದಂತೆ ಮಾಡಬೇಕು (ಉತ್ಥಾನಾಸನ).
ಪ್ರಾಣಾಯಾಮ : ರೇಚಕ
ಇದರ ನಂತರ ನಿಧಾನವಾಗಿ ಮೊದಲನೆಯ ಆಸನ ಎಂದರೆ ಪ್ರಾರ್ಥನಾಸಕ್ಕೆ ಬರಬೇಕು. ಈ ರೀತಿ ಮಾಡಿದಾಗ ಒಂದು ಸೂರ್ಯನಮಸ್ಕಾರ ಆಯಿತು. ಈ ರೀತಿಯಾಗಿ ಪ್ರತಿದಿನ ಹನ್ನೆರಡುಸಲ ಮಾಡಬೇಕು.

ಸೂಚನೆ : ಕತ್ತಿನಲ್ಲಿ ಸಮಸ್ಯೆ ಇರುವವರು ಸೂರ್ಯನಮಸ್ಕಾರ ಮಾಡುವ ಮೊದಲು ವೃತ್ತಿಪರ ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.

ಧರ್ಮಾಧಾರಿತ ಮಾಹಿತಿಗಾಗಿ:
Follow... 𝗦𝗮𝗻𝗮𝘁𝗮𝗻𝗮𝗗𝗛𝗔𝗥𝗠𝗔🚩
***

ಸೂರ್ಯನ ಜನನ:- 

ಸೂರ್ಯದೇವನ ಕುರಿತಾದ ವಿಷಯಗಳು ಋಗ್ವೇದದಲ್ಲಿ ಉಲ್ಲೇಖಿಸಿದೆ. ಅನೇಕ ಪುರಾಣಗಳ ಪ್ರಕಾರ  ಬ್ರಹ್ಮನ ಮಾನಸ ಪುತ್ರ  ಮರೀಚಿ, ಇವರ ಮಗ ಕಶ್ಯಪ. ಇವರು ದಕ್ಷಬ್ರಹ್ಮನ ಮಕ್ಕಳಾದ ಅದಿತಿ  ಮತ್ತು  ದಿತಿಯನ್ನು  ವಿವಾಹವಾಗುತ್ತಾರೆ. ಕಶ್ಯಪ ರಿಂದ ಅದಿತಿಗೆ  ದೇವತೆಗಳು ಹುಟ್ಟಿದರೆ, ದಿತಿಗೆ ಅಸುರರು ಹುಟ್ಟುತ್ತಾರೆ. ಋಷಿಮುನಿಗಳು ಬ್ರಾಹ್ಮಣರು ಮಾಡಿದ  ಯಾಗಾದಿಗಳ ಫಲ ದೇವತೆಗಳಿಗೆ ಹೋಗಿ ಅವರಿಗೆ ಹೆಚ್ಚು ಶಕ್ತಿ ಬರುತ್ತದೆ.
ಇದರಿಂದಾಗಿ ಅಸುರರು ತಮಗೆ ಫಲ ದೊರಕುವುದಿಲ್ಲ ವೆಂದು ದೇವತೆಗಳ ಮೇಲೆ ದ್ವೇಷ ಬೆಳೆಯುತ್ತದೆ. ಬರಬರುತ್ತಾ ಇದು ಇಷ್ಟಕ್ಕೆ ನಿಲ್ಲದೆ ದೇವತೆಗಳಿಗೆ ಹಿಂಸೆ ಕೊಡುವುದಲ್ಲದೆ, ಅವರ ಮೇಲೆ ಯುದ್ಧಮಾಡಿ ಸ್ವರ್ಗ ಲೋಕದಿಂದ ಹೊರಗೆ ತಳ್ಳುತ್ತಾರೆ. ಸ್ವರ್ಗವನ್ನು ಅಸುರರು ಆಕ್ರಮಿಸುತ್ತಾರೆ. 

ದೇವತೆಗಳ ತಾಯಿಯಾದ ಅದಿತಿಗೆ ಇದನ್ನೆಲ್ಲಾ ನೋಡಿ ಸಂಕಟವಾಗಿ ತನ್ನ ಮಕ್ಕಳಾದ ದೇವತೆಗಳನ್ನು ರಕ್ಷಿಸಲು ಈಶ್ವರನ ಕುರಿತು ಘೋರವಾದ ತಪಸ್ಸು ಮಾಡುತ್ತಾಳೆ.  ಅವಳ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷವಾಗಿ ಏನು ವರ ಬೇಕೆಂದು ಕೇಳುತ್ತಾನೆ.  ಅದಿತಿಯು ಕೈಮುಗಿದು  ದೇವಾ,  ನನ್ನ ತಂಗಿ 'ದಿತಿ' ಯ  ಮಕ್ಕಳಾದ ಅಸುರರು ನನ್ನ ಮಕ್ಕಳಿಗೆ ಚಿತ್ರಹಿಂಸೆಗಳನ್ನು ಕೊಟ್ಟು ಸ್ವರ್ಗದಿಂದ ದಬ್ಬಿ, ನಿಲ್ಲಲು ನೆಲೆಯಿಲ್ಲದೆ ಒದ್ದಾಡುವಂತೆ ಮಾಡಿದ್ದಾರೆ. ದೇವ ನೀವು ಕರುಣೆಯಿಟ್ಟು ನನ್ನ ಮಕ್ಕಳಿಗೆ ಎಂದಿನಂತೆ ಸ್ವರ್ಗವು ದೊರಯುವಂತೆ ಆಶೀರ್ವದಿಸಬೇಕು ಎಂದು ಬೇಡಿದಳು.  ಆಗ ಶಿವನು ನನ್ನ ಅಂಶದಿಂದ ನಿನಗೆ ಒಬ್ಬ ಮಗ ಜನಿಸುತ್ತಾನೆ ಅವನು ರಾಕ್ಷಸರನ್ನು ಸೋಲಿಸಿ ಸ್ವರ್ಗವನ್ನು ನಿನ್ನ ಮಕ್ಕಳಿಗೆ ಕೊಡಿಸುತ್ತಾನೆ ಎಂದು ಅದಿತಿಗೆ  ಹರಸಿದನು. 

ಸ್ವಲ್ಪ ದಿನಗಳಲ್ಲಿ ಪರಮೇಶ್ವರನ ಅನುಗ್ರಹದಿಂದ ಅದಿತಿಗೆ ಒಬ್ಬ ಮಗ ಜನಿಸುತ್ತಾನೆ. ಅವನು ಹುಟ್ಟುವಾಗಲೇ ಫಳಫಳ ಹೊಳೆಯುತ್ತಿದ್ದು ಬೆಂಕಿಯಂತೆ ಪ್ರಜ್ವಲಿಸುತ್ತಿದ್ದನು  ಆದುದರಿಂದ ಮಗುವಿಗೆ 'ಸೂರ್ಯ' ಎಂದು ಹೆಸರಿಟ್ಟರು. ಇವನು ಮುಂದೆ ಬೆಳೆದು  ದೊಡ್ಡವನಾಗಿ  ಸಹೋದರರೊಂದಿಗೆ ಅಸುರರ ಮೇಲೆ ಯುದ್ಧ ಸಾರಿ, ಸ್ವರ್ಗದಿಂದ ಅಸುರರನ್ನು ಹೊರಗೆ ದಬ್ಬಿ  ತನ್ನ ಸಹೋದರರಿಗೆ  ಅವರ ಸ್ವರ್ಗವನ್ನು ಅವರಿಗೆ ಕೊಡಿಸುತ್ತಾನೆ.  ಅಂದಿನಿಂದಲೇ ಸೂರ್ಯದೇವನು ಜಗತ್ತಿಗೆ ಬೆಳಕನ್ನು ಕೊಡುತ್ತಾ ಅನೇಕ ಜೀವ ಕೋಟಿಗಳಿಗೆ ಕಾರಣನಾಗುತ್ತಾನೆ. 

ಸೂರ್ಯನು ಹುಟ್ಟುವ ಮೊದಲು, ಸೃಷ್ಟಿಯು ಆರಂಭವಾಗುವ ಸಮಯ ಮೊದಲು ಜಗತ್ತು ಕತ್ತಲಲ್ಲಿ ತುಂಬಿತ್ತು.  ಆಗ ವಿಷ್ಣು ತಾನೊಬ್ಬನೇ ಇದ್ದು ಅವನಿಗೆ ಜೊತೆ ಬೇಕು ಎನಿಸಿ ಹಲವಾರು ದೇವತೆಗಳನ್ನು ಸೃಷ್ಟಿಸಲು ಯೋಚಿಸುತ್ತಾನೆ.  ಹೀಗೆ ಯೋಚಿಸಿದಾಗ ಅವನ ನಾಭಿಯಿಂದ ಒಂದು ಕಮಲದ ಹೂವು ಹೊರಬರುತ್ತದೆ ಅದರೊಳಗಿಂದ ಬ್ರಹ್ಮ ಸೃಷ್ಟಿಯಾದನು. ಬ್ರಹ್ಮ ಹುಟ್ಟಿದಾಗ ಜಗತ್ತೆಲ್ಲ ಕತ್ತಲೆ ಮಯವಾಗಿತ್ತು ಬ್ರಹ್ಮಾಂಡದಲ್ಲಿನ ನೀರು ತುಂಬಿತ್ತು. ಬ್ರಹ್ಮನು ಈ ಕತ್ತಲ ಪ್ರಪಂಚದಲ್ಲಿ ಸಾವಿರಾರು ವರುಷ ಕಳೆದನು. 

ಹೀಗೆ ಕಳೆಯುತ್ತಿರುವಾಗ ಸಮುದ್ರದ ನೀರಿನಲ್ಲಿ ಬರುವ ತೊರೆಗಳೆಲ್ಲ ಒಂದೆಡೆ ಸಂಗ್ರಹವಾಗಿ ಮೊಟ್ಟೆಯ ರೂಪ ತಾಳುತ್ತದೆ. ಬ್ರಹ್ಮನು ಆ ಮೊಟ್ಟೆಯನ್ನು ಒಡೆದಾಗ ಸೂರ್ಯದೇವನು ಹೊರಬರುತ್ತಾನೆ. ಸೂರ್ಯದೇವನು ಹುಟ್ಟುತ್ತಿದ್ದಂತೆಯೇ ಶಾಖ ಮತ್ತು ಬೆಳಕನ್ನು ಉತ್ಪತ್ತಿಮಾಡುತ್ತ ಬಂದನು. ಶಾಖ ಮತ್ತು ಬೆಳಕು ದಿನೇ ದಿನೇ ಹೆಚ್ಚಾಗತೊಡಗಿತ್ತು. ಇದರಿಂದ ನೀರೆಲ್ಲಾ ಬತ್ತಿತು.  ಶಾಖ ತಡೆದುಕೊಳ್ಳಲಾಗದೆ ಎಲ್ಲಾ ಜೀವಿಗಳು ಒದ್ದಾಡಿದವು.
ಬ್ರಹ್ಮನಿಗೂ ಈ ತಾಪ ತಾಳಲಾರದೆ ಸೂರ್ಯದೇವನನ್ನು ಸಂಹರಿಸಿದನು.
ಇದರಿಂದ ಬೆಳಗ್ಗೆ ಇಲ್ಲದಂತಾಗಿ ದೇವತೆಗಳಿಗೆ ಹೀಗೆ ಬದುಕುವುದು ಅಸಾಧ್ಯವೆನಿಸಿತು.  ಅವರೆಲ್ಲರೂ ಬೆಳಕು ಬೇಕೆಂದು ಶಿವನ ಮೊರೆ ಹೊಕ್ಕರು. ಶಿವನು ಸೂರ್ಯದೇವನಿಗೆ ಸಾಮಾನ್ಯ  ಶಾಖ ವಿರುವಂತೆ ಮಾಡಿ ಅದಿತಿಯ ಹೊಟ್ಟೆಯಲ್ಲಿ ಜನಿಸುವಂತೆ ಮಾಡುತ್ತಾನೆ. 

ಸೂರ್ಯ ಎಂದರೆ ಬೆಳಕು. ನವಗ್ರಹಗಳಲ್ಲಿ ಸೂರ್ಯ ಪ್ರಮುಖನಾದವನು. ಸೂರ್ಯನ ದೇವತೆ ಆದಿತ್ಯ. ಸೂರ್ಯನಿಗೆ  ಹೊಂಬಣ್ಣದ ಕೂದಲುಗಳಿವೆ. ಬಂಗಾರ ಬಣ್ಣದ ಕೈಗಳಿವೆ. ಸೂರ್ಯನು ತನ್ನ ವಿಜಯೋತ್ಸವದ ರಥದಲ್ಲಿ ಸ್ವರ್ಗದಿಂದ ಇಳಿದು ಬರುತ್ತಾನೆ. ಏಳು ಕುದುರೆಗಳು ರಥವನ್ನು ಎಳೆಯುತ್ತವೆ.  ಅವುಗಳ ತಲೆಯು ಕಾಮನಬಿಲ್ಲಿನ ಬಣ್ಣಗಳನ್ನು ಪ್ರತಿನಿಧಿಸುತ್ತವೆ. ಸೂರ್ಯ ಪ್ರತಿನಿಧಿಸುವ ವಾರ ರವಿವಾರ.  ಕಣ್ಣಿಗೆ ಕಾಣುವ ದೇವರು ಸೂರ್ಯ. ಪ್ರತಿದಿನ ಮುಂಜಾನೆ ಸೂರ್ಯೋದಯ ನೋಡಿ ಸ್ತುತಿಸಿ ನಮಸ್ಕರಿಸುತ್ತಾರೆ.  ಸೂರ್ಯರಾಧನೆ ಬಹಳ ಪ್ರಾಮುಖ್ಯ ಪಡೆದಿದೆ. ಸೂರ್ಯ ಜಗತ್ತಿಗೆ ಆಧಾರ.
💐🙏💐
ಈ ಪಿತೃ ಪಕ್ಷದಲ್ಲಿ ಪ್ರತಿದಿನ ಸೂರ್ಯ ದೇವನಿಗೆ ಅರ್ಘ್ಯ ಪ್ರದಾನ ಮಾಡಿ, ಆದಿತ್ಯ ಹೃದಯ ಪಠಿಸುವುದು ತುಂಬಾನೇ ಒಳ್ಳೆಯ ಫಲವನ್ನು ಕೊಡುತ್ತದೆ.
( ವಾಟ್ಸ್ ಅಪ್ ಸಂಗ್ರಹ )
***

“ಗ್ರಹಾಣಾಮಾದಿರಾದಿತ್ಯಃ” ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗೆ. ಆರೋಗ್ಯ ಜ್ಞಾನಗಳನ್ನು ದಯಪಾಲಿಸುವ ದೇವತೆ. ೨ ಕೈಯಲ್ಲಿ ಕೆಂಪು ಕಮಲಗಳು ಕೆಂಪು ರಥದಲ್ಲಿ ರಥಿಕ, ಅರುಣನೇ ಇವಗೆ ಸಾರಥಿ. ರಥಕ್ಕೆ ಕಟ್ಟಿರುವ ಕುದುರೆಗಳು ೭.
ಸೂಕ್ಷ್ಮಗುಂಗುರು ಕೂದಲುಗಳಿಂದ ಒಪ್ಪುವ ತಲೆ. ಆಕರ್ಷಕ ರೂಪ ಚೇತೋಹಾರಿಯಾದ ಗಂಭೀರ ಧ್ವನಿ. ಹೆಚ್ಚು ಎತ್ತರವಿಲ್ಲದ ನಿಲುವು. ಅನುಪಮ ಬುದ್ಧಿ ಚಾತುರ್ಯ. ಗೋರೋಚನದಂತೆ ಕೆಂಪು ಬೆರೆತ ಸುಂದರ ಕಣ್ಗಳು. ಧೈರ್ಯಶಾಲಿ ಪ್ರಚಂಡ. ಪಿತ್ತಪ್ರಕೃತಿ, ಉನ್ನತ ವ್ಯಕ್ತಿತ್ವ. ದೊಡ್ಡ ಕೈಗಳು. ಕೆಂಪುಉಡುಗೆ, ಇದು ರವಿಯನ್ನು ಶಾಸ್ತ್ರಾಕಾರರು ಗುರುತಿಸುವ ಬಗೆ.
ಆದಿತ್ಯ ಮಾರ್ತಾಂಡ ಭಾನು,ರವಿ,ದಿವಾಕರ,ಪ್ರಭಾಕರ ಇವು ಸೂರ್ಯನ ಪ್ರಸಿದ್ಧ ಹೆಸರುಗಳು. ಅದಿತಿ-ಕಶ್ಯಪರ ಮಗ. ಅದೊಂದು ದಿನ ಕಶ್ಯಪರು

ಮನೆಯಲ್ಲಿ ಇರಲಿಲ್ಲ. ಅದಿತಿದೇವಿ ತುಂಬು ಗರ್ಭಿಣಿ. ದೇವರ ಧ್ಯಾನದಲ್ಲಿದ್ದಾಳೆ. ಹೊರಗಿನಿಂದ ಭವತಿ ಭಿಕ್ಷಾಂಧೇಹಿ ಎಂಬ ಮಾಣವಕನ ಧ್ವನಿ. ಬುಧನು

ಭಿಕ್ಷೆಗಾಗಿ ಬಂದಿದ್ದ. ಕರೆದ ಕೂಡಲೇ ಭಿಕ್ಷೆಗೆ ಬರಲಿಲ್ಲವೆಂಬ ಸಿಟ್ಟು ಬುಧನಿಗೆ. ಏನು ಗರ್ಭಿಣಿ ಎಂಬ ಅಹಂಕಾರವೋ? ಗರ್ಭದಲ್ಲಿರುವ ಆ ಶಿಶು ಸತ್ತು ಹೋಗಲಿ

ಎಂಬ ಶಾಪವಾಗಿ ಆ ಸಿಟ್ಟು ಸ್ಪೋಟಗೊಂಡಿತು. ಆಕೆ ತತ್ತರಿಸಿ ಬಿದ್ದಳು. ಮೃತವಾದ ಅಂಡದಮ್ತೆ ಕಾಣಿಸಿದ ಆ ಶಿಶು ಶ್ರೀಹರಿಯ ಮಹಿಮೆಯಿಂದ ಕಶ್ಯಪರ

ಪ್ರಭಾವದಿಂದ ಸತ್ತು ಬದುಕಿತು. ಈ ಮಗುವೇ ಸೂರ್ಯ. ಆದ್ದರಿಂದಲೇ ಮಾರ್ತಾಂಡ ಆದಿತ್ಯ ಎಂಬುದು ಇವನ ಇನ್ನೊಂದು ಹೆಸರು. ಅದಿತಿಯ

ಮಗನೆಂಬ ಕಾರಣದಿಂದ ಮಾತ್ರ ಇವನಿಗೆ ಈ ಹೆಸರಲ್ಲ. ದಿನದಿನವೂ ಉದಯಿಸುತ್ತಾ ಅಸ್ತಮಿಸುತ್ತಾ ಜೀವಜಾತದ ೨೪ ಘಂಟೆಗಳ ಆಯುಷ್ಯವನ್ನು ಕಿತ್ತು

ಸಾಗುವುದರಿಂದ ಇವನಿಗೆ ಈ ಹೆಸರು. (ಆಯುರಾದಾಯ ಯಾತೀತಿ ಆದಿತ್ಯಃ)
ಮನುಷ್ಯ ಪ್ರತಿದಿನವೂ ಸೂರ್ಯಾಸ್ತದ ಸುಂದರ ಸಂಜೆಯನ್ನು ನೋಡಿ ಖುಶಿ ಪಡುತ್ತಾನೆ. ತನ್ನ ವಯಸ್ಸು ಒಂದು ದಿನ ಜಾಸ್ತಿಯಾಯಿತು ಎಂದೇ ಭಾವಿಸುತ್ತಾನೆ.

ಆಯುಷ್ಯದಲ್ಲಿ ಒಂದುದಿನ ಕಡಿಮೆಯಾಯಿತು ಎಂದು ಯೋಚಿಸುವುದಿಲ್ಲ. ಇದು ದುರಂತ.

ಸಂಜ್ಞಾ ಮತ್ತು ಛಾಯಾ ಸೂರ್ಯನ ಹೆಂಡಂದಿರು. ಸಂಜ್ಞೆಯಲ್ಲಿ ಯಮ ಯಮುನೆ ಮತ್ತು ಮನು ಹುಟ್ಟಿದರು. ಛಾಯಾ ದೇವಿಯಲ್ಲಿ ಸಾವರ್ಣಿ ಮತ್ತು ಶನೀಶ್ವರ ಎಂಬ ಈರ್ವರು ಹುಟ್ಟಿದರು. ಈ ಮನ್ವಂತರದ ಅಧಿಪತಿಯಾದ ವೈವಸ್ವತ ಮನು ಸೂರ್ಯನ ಪುತ್ರ. ಗ್ರಹಕೋಟಿಯಲ್ಲಿ ಭಯಂಕರನೆನಿಸಿದ ಶನಿಯೂ ರವಿಕುಮಾರ. ಕರ್ಣ ಸುಗ್ರೀವರು ಸೂರ್ಯಾಂಶ ಸಂಭೂತರು.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ರಿಹರಿಸಿಕೊಳ್ಳಬಹುದು.
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |

ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||

“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”.
***
ವಿಷ್ಣುಪುರಾಣ
ಸಂಚಿಕೆ - 355
****
ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
****
ದ್ವಿತೀಯಾಂಶ:

ಅಷ್ಟಮೋಧ್ಯಾಯ:
****
ವಿದಿಶಾಸು ತ್ವಶೇಷಾಸು ತಥಾ ಬ್ರಹ್ಮನ್ ದಿಶಾಸು ಚ|
ಯೈರ್ಯತ್ರ ದೃಶ್ಯತೇ ಭಾಸ್ವಾನ್ ಸ ತೇಷಾಮುದಯ: ಸ್ಮೃತ:||15||

ತಿರೋಭಾವಂ ಚ ಯತ್ರೈತಿ ತತ್ರೈವಾಸ್ತಮನಂ ರವೇ:|
ನೈವಾಸ್ತಮನಮರ್ಕಸ್ಯ ನೋದಯ: ಸರ್ವದಾ ಸತ:||16||

ಉದಯಾಸ್ತಮನಾಖ್ಯಂ ಹಿ ದರ್ಶನಾದರ್ಶನಂ ರವೇ:|
ಶಕ್ರಾದೀನಾಂ ಪುರೇ ತಿಷ್ಠನ್ ಸ್ಪೃಶತ್ಯೇಷ ಪುರತ್ರಯಮ್||17||

ವಿಕೋಣೌ ದ್ವೌ ವಿಕೋಣಸ್ಥ:ತ್ರೀನ್ ಕೋಣಾನ್ ದ್ವೇ ಪುರೇ ತಥಾ|
ಉದಿತೋ ವರ್ದ್ಧಮಾನಾಭಿರಾಮಧ್ಯಾಹ್ನಾತ್ತಪನ್ ರವಿ:||18||

ಸಮಸ್ತ ದಿಕ್ಕುಗಳಲ್ಲಾಗಲಿ ವಿದಿಕ್ಕುಗಳಲ್ಲಾಗಲಿ ಅಲ್ಲಿರುವ ಜನರಿಗೆ ಸೂರ್ಯನು ಯಾವಾಗ ಕಾಣಿಸುತ್ತಾನೋ ಆಗ ಸೂರ್ಯೋದಯವೆಂದು ಹೇಳಲ್ಪಡುತ್ತದೆ. ಯಾವಾಗ ಸೂರ್ಯನು ಕಾಣಿಸುವುದಿಲ್ಲವೋ ಆಗ ಸೂರ್ಯಾಸ್ತಮಯವೆಂದು ಹೇಳಲ್ಪಡುತ್ತದೆ. 

ಸರ್ವದಾ ಪ್ರಕಾಶಿಸುತ್ತಿರುವ ಸೂರ್ಯನಿಗೆ ಅಸ್ತಮಯವೂ ಇಲ್ಲ, ಉದಯವೂ ಇಲ್ಲ. 

ಸೂರ್ಯನ ದರ್ಶನವೇ ಸೂರ್ಯೋದಯ. ಅದರ್ಶನವೇ ಅಸ್ತಮಯ. 
ಸೂರ್ಯನು ಇಂದ್ರಾದಿಗಳ ನಗರದಲ್ಲಿ ಪ್ರಕಾಶಿಸುತ್ತಿರುವಾಗ ಮೂರು ನಗರಗಳನ್ನೂ ಎರಡು ವಿಕೋಣಗಳನ್ನೂ ಬೆಳಗುತ್ತಾನೆ. 

ಆತನು ವಿಕೋಣದಲ್ಲಿದ್ದಾಗ ಮೂರು ವಿಕೋಣಗಳನ್ನೂ ಎರಡು ನಗರಗಳನ್ನು ಬೆಳಗುತ್ತಾನೆ. 
ಅವನು ಉದಿತನಾದ ಮೇಲೆ ವರ್ಧಿಸುತ್ತಿರುವ ಕಿರಣಗಳಿಂದ ಮಧ್ಯಾಹ್ನದವರೆಗೆ ತಾಪವನ್ನು ಕೊಡುತ್ತ ಹೋಗುತ್ತಾನೆ. 
****
ನಾಹಂ ಕರ್ತಾ ಹರಿ: ಕರ್ತಾ:
****
ಸಂಗ್ರಹ:-

ಪಂ. ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ.  Shivamogga. 
06-01-2019. 
**
ವಿಕೋಣ. = ವಿದಿಕ್ಕು, ಮೂಲೆ ಪೂರ್ವದಲ್ಲಿದ್ದಾಗ ಪಾಶ್ವದ ಎರಡು ಮೂಲೆಗಳನ್ನೂ, ಪೂರ್ವ, ದಕ್ಷಿಣ, ಉತ್ತರಗಳನ್ನೂ ಬೆಳಗುತ್ತಾನೆ. 
ಮೂಲೆಯಲ್ಲಿದ್ದಾಗ ಪಾರ್ಶ್ವದ ಎರಡು ದಿಕ್ಕು, ಆ ದಿಕ್ಕುಗಳ ತುದಿಯಲ್ಲಿರುವ ಎರಡು ಮೂಲೆಗಳು ಮತ್ತು ತಾನಿದ್ದ ಮೂಲೆ ಇವನ್ನು ಬೆಳಗುತ್ತಾನೆ. 
ಅಂತೂ ಭೂಗೋಳದ ಅರ್ಧಭಾಗದಷ್ಟು ಸದಾ ಬೆಳಕಿನಿಂದ ಕೂಡಿರುತ್ತದೆ. 

***

ವಿಷ್ಣುಪುರಾಣ🙏🏽
🌷🔔ॐ🔔🌷
🔯🔔 ಸಂಚಿಕೆ - 356🔔🔯
****
ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
****
ದ್ವಿತೀಯಾಂಶ:

ಅಷ್ಟಮೋಧ್ಯಾಯ:
****
ತತ: ಪರಂ ಹ್ರಸಂತೀಭಿರ್ಗೋಭಿರಸ್ತಂ ನಿಯಚ್ಛತಿ|
ಉದಯಾಸ್ತಮಾನಾಭ್ಯಾಂ ಚ ಸ್ಮೃತೇ ಪೂರ್ವಾಪರೇ ದಿಶೌ||19||

ಯಾವತ್ಪುರಸ್ತಾತ್ತಪತಿ ತಾವತ್ ಪೃಷ್ಠೇ ಚ ಪಾರ್ಶ್ವಯೋ:|
ಋತೇಮರಗಿರೇರ್ಮೇರೋರುಪರಿ ಬ್ರಹ್ಮಣ: ಸಭಾಮ್||20||

ಯೇ ಯೇ ಮರೀಚಯೋರ್ಕಸ್ಯ ಪ್ರಯಾಂತಿ ಬ್ರಹ್ಮಣ: ಸಭಾಮ್|
ತೇ ತೇ ನಿರಸ್ತಾಸ್ತದ್ಭಾಸಾ ಪ್ರತೀಪಮುಪಯಾಂತಿ ವೈ||21||

ತಸ್ಮಾದ್ದಿಶ್ಯುತ್ತರಸ್ಯಾಂ ವೈ ದಿವಾರಾತ್ರಿ: ಸದೈವ ಹಿ|
ಸರ್ವೇಷಾಂ ದ್ವೀಪವರ್ಷಾಣಾಂ ಮೇರುರುತ್ತರತೋ ಯತ:||22||

ಅನಂತರ ಕ್ರಮವಾಗಿ ಕ್ಷೀಣವಾಗುವ ಕಿರಣಗಳೊಡನೆ ಅಸ್ತಂಗತನಾಗುತ್ತಾನೆ. 
ಸೂರ್ಯನ ಉದಯಾಸ್ತಮನಗಳ ನಿಮಿತ್ತದಿಂದ ಪೂರ್ವದಿಕ್ಕು, ಪಶ್ಚಿಮದಿಕ್ಕು ಎಂಬ ವ್ಯವಹಾರ ಬಂದಿದೆ.‌

ಆತನು ಪೂರ್ವ ದಿಕ್ಕಿನಲ್ಲಿ ಬೆಳಗುವಾಗ ಹಿಂದಿನ ಪಶ್ಚಿಮವನ್ನೂ, ಪಾರ್ಶ್ವಗಳಾದ ಉತ್ತರ-ದಕ್ಷಿಣಗಳನ್ನೂ ಬೆಳಗುತ್ತಲೇ ಇರುತ್ತಾನೆ. 
ಅಮರಗಿರಿಯಾದ ಮೇರುವಿನ ಮೇಲಿರುವ ಬ್ರಹ್ಮಸಭೆಯನ್ನು ಮಾತ್ರ ಬೆಳಗಲಾರ. 

ಏಕೆಂದರೆ, ಸೂರ್ಯನ ಯಾವ ಯಾವ ಕಿರಣಗಳು ಬ್ರಹ್ಮಸಭೆಯನ್ನು ಸೇರುತ್ತವೆಯೋ ಅವು ಬ್ರಹ್ಮದೇವನ ತೇಜಸ್ಸಿನಿಂದ ಪರಾಹತವಾಗಿ ಹಿಂದಿರುತ್ತವೆ.‌ 

ಸಮಸ್ತ ದ್ವೀಪಗಳಿಗೂ ದೇಶಗಳಿಗೂ ಮೇರುಪರ್ವತವು ಉತ್ತರದಲ್ಲಿ ಇರುವುದರಿಂದ, ಮೇರುಪರ್ವತದ ಮೇಲೆ ಯಾವಾಗಲೂ (ಒಂದು ಪಾರ್ಶ್ವದಲ್ಲಿ) ಹಗಲು (ಇನ್ನೊಂದು ಪಾರ್ಶ್ವದಲ್ಲಿ) ರಾತ್ರಿಯಾಗಿರುತ್ತದೆ. 
****

ಸಂಗ್ರಹ:-

ಪಂ. ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ.  Shivamogga. 07-01-2019. 
**
ಸೂರ್ಯ ನಮಸ್ಕಾರ

ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ಼. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

🎙️ ಸೂರ್ಯಮಂಡಲ ಸ್ತೋತ್ರಂ
🙏  surya mandala stotra surya mantra

ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇ
ಸಹಸ್ರಶಾಖಾನ್ವಿತ ಸಂಭವಾತ್ಮನೇ |
ಸಹಸ್ರಯೋಗೋದ್ಭವ ಭಾವಭಾಗಿನೇ
ಸಹಸ್ರಸಂಖ್ಯಾಯುಧಧಾರಿಣೇ ನಮಃ || ೧ ||

ಯನ್ಮಂಡಲಂ ದೀಪ್ತಿಕರಂ ವಿಶಾಲಂ |
ರತ್ನಪ್ರಭಂ ತೀವ್ರಮನಾದಿ ರೂಪಮ್ |
ದಾರಿದ್ರ್ಯ ದುಃಖಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೨ ||

ಯನ್ಮಂಡಲಂ ದೇವಗಣೈಃ ಸುಪೂಜಿತಂ |
ವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ |
ತಂ ದೇವದೇವಂ ಪ್ರಣಮಾಮಿ ಸೂರ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೩ ||

ಯನ್ಮಂಡಲಂ ಜ್ಞಾನಘನಂತ್ವಗಮ್ಯಂ |
ತ್ರೈಲೋಕ್ಯ ಪೂಜ್ಯಂ ತ್ರಿಗುಣಾತ್ಮ ರೂಪಮ್ |
ಸಮಸ್ತ ತೇಜೋಮಯ ದಿವ್ಯರೂಪಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೪ ||

ಯನ್ಮಂಡಲಂ ಗೂಢಮತಿ ಪ್ರಬೋಧಂ |
ಧರ್ಮಸ್ಯ ವೃದ್ಧಿಂ ಕುರುತೇ ಜನಾನಾಮ್ |
ಯತ್ಸರ್ವ ಪಾಪಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೫ ||

ಯನ್ಮಂಡಲಂ ವ್ಯಾಧಿವಿನಾಶದಕ್ಷಂ |
ಯದೃಗ್ಯಜುಃ ಸಾಮಸು ಸಂಪ್ರಗೀತಮ್ |
ಪ್ರಕಾಶಿತಂ ಯೇನ ಚ ಭೂರ್ಭುವಃ ಸ್ವಃ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೬ ||

ಯನ್ಮಂಡಲಂ ವೇದವಿದೋ ವದಂತಿ |
ಗಾಯಂತಿ ಯಚ್ಚಾರಣಸಿದ್ಧಸಂಘಾಃ |
ಯದ್ಯೋಗಿನೋ ಯೋಗಜುಷಾಂ ಚ ಸಂಘಾಃ |
ಪುನಾತು ಮಾಂ ತತ್ಸವಿತುರ್ವರೇಣ್ಯಮ಼್ || ೭ ||

ಯನ್ಮಂಡಲಂ ಸರ್ವಜನೈಶ್ಚ ಪೂಜಿತಂ |
ಜ್ಯೋತಿಶ್ಚಕುರ್ಯಾದಿಹ ಮರ್ತ್ಯಲೋಕೇ |
ಯತ್ಕಾಲ ಕಾಲಾದ್ಯಮರಾದಿ ರೂಪಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೮ ||

ಯನ್ಮಂಡಲಂ ವಿಷ್ಣುಚತುರ್ಮುಖಾಖ್ಯಂ |
ಯದಕ್ಷರಂ ಪಾಪಹರಂ ಜನಾನಾಮ್ |
ಯತ್ಕಾಲಕಲ್ಪಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೯ ||

ಯನ್ಮಂಡಲಂ ವಿಶ್ವಸೃಜಂ ಪ್ರಸಿದ್ಧಂ |
ಉತ್ಪತ್ತಿ ರಕ್ಷ ಪ್ರಲಯ ಪ್ರಗಲ್ಭಮ್ |
ಯಸ್ಮಿನ್ ಜಗತ್ಸಂಹರತೇಽಖಿಲಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೦ ||

ಯನ್ಮಂಡಲಂ ಸರ್ವಗತಸ್ಯ ವಿಷ್ಣೋಃ |
ಆತ್ಮಾ ಪರಂ ಧಾಮ ವಿಶುದ್ಧತತ್ತ್ವಮ್ |
ಸೂಕ್ಷ್ಮಾಂತರೈರ್ಯೋಗಪಥಾನುಗಮ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೧ ||

ಯನ್ಮಂಡಲಂ ವೇದವಿದೋಪಗೀತಂ |
ಯದ್ಯೋಗಿನಾಂ ಯೋಗ ಪಥಾನುಗಮ್ಯಮ್ |
ತತ್ಸರ್ವ ವೇದ್ಯಂ ಪ್ರಣಮಾಮಿ ಸೂರ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೨ ||

ಸೂರ್ಯಮಂಡಲಸು ಸ್ತೋತ್ರಂ ಯಃ ಪಠೇತ್ಸತತಂ ನರಃ |
ಸರ್ವಪಾಪವಿಶುದ್ಧಾತ್ಮಾ ಸೂರ್ಯಲೋಕೇ ಮಹೀಯತೇ ||

ಇತಿ ಶ್ರೀ ಭವಿಷ್ಯೋತ್ತರಪುರಾ಼ಣೇ ಶ್ರೀ ಕೃಷ್ಣಾರ್ಜುನ ಸಂವಾದೇ ಸೂರ್ಯಮಂಡಲ ಸ್ತೋತ್ರಂ |
*****

🎙️ ಶ್ರೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್ 

ಪ್ರಾತ:ಸ್ಮರಾಮಿ ಖಲು ತತ್ ಸವಿತುರ್ವರೇಣ್ಯಂ |
ರೂಪಂ ಹಿ ಮಂಡಲಮೃಚೋsಥ ತನುರ್ಯಜೂಂಷಿ ||
ಸಾಮಾನಿ ಯಸ್ಯ ಕಿರಣಾ: ಪ್ರಭವಾದಿ ಹೇತುಂ |
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯಹೇತುಂ ||೧||

ಪ್ರಾತರ್ನಮಾಮಿ ತರಣಿಂ ತನುವಾಙ್ಮನೋಭಿ: |
ಬ್ರಹ್ಮೇಂದ್ರಪೂರ್ವಕ ಸುರೈರ್ನುತಮರ್ಚಿತಂ ಚ ||
ವೃಷ್ಟಿ ಪ್ರಮೋಚನ ವಿನಿಗ್ರಹ ಹೇತುಭೂತಂ |
ತ್ರೈಲೋಕ್ಯ ಪಾಲನಪರಂ ತ್ರಿಗುಣಾತ್ಮಕಂ ಚ ||೨||

ಪ್ರಾತರ್ಭಜಾಮಿ ಸವಿತಾರಮನಂತ ಶಕ್ತಿಂ |
ಪಾಪೌಘ ಶತ್ರು ಭಯರೋಗ ಹರಂ ಪರಂ ಚ಼ ||
ತಂ ಸರ್ವಲೋಕ ಕಲನಾತ್ಮಕ ಕಾಲಮೂರ್ತಿಂ |
ಗೋಕಂಠ ಬಂಧನ ವಿಮೋಚನಮಾದಿದೇವಮ್ ||೩||

ಶ್ಲೋಕತ್ರಯಮಿದಂ ಭಾನೋ: ಪ್ರಾತ:ಕಾಲೇ ಪಠೇತ್ತುಯ: |
ಸರವ್ಯಾಧಿವಿನಿರ್ಮುಕ್ತ: ಪರಂ ಸುಖಮಾಪುಯಾತ್ ||೪||
***


No comments:

Post a Comment