SEARCH HERE

Tuesday 1 January 2019

ಹಾಡುಗಳು ಈಶ ನಿನ್ನ ಚರಣ ಭಜನೆ esha ninna charana bhajane lyrics and mp4


please read and enhance knowledge

click--> SANSKRIT STOTRAS    


click-->3   ದಾಸರ ದೇವರನಾಮಗಳು  12000+ devaranama with ankita 
                                   ( includes 3000+ audios)


ಈಶ ನಿನ್ನ ಚರಣ ಭಜನೆ  Isha Ninna Charana Bhajane






ಕೇಶವಾಯ ನಮ: ದಿಂದ ಆರಂಭವಾಗುವ ಚತುರ್ವಿಂಶತಿ ನಾಮಗಳನ್ನು ಉಪಯೋಗಿಸಿಕೊಂಡು ಕನಕದಾಸರು ಸರ್ವರಿಗೂ ಉಪಯೋಗವಾಗು ವಂತೆ ಅನುಕೂಲವಾಗುವಂತೆ, ಹೆಣ್ಣುಮಕ್ಕಳಿಗೂ ಸುಲಭವಾದ ಮಂತ್ರವನ್ನುತಮ್ಮ ಕೃತಿಯ ಮೂಲಕ ಉಪದೇಶಿಸಿದ್ದಾರೆ.

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ || 1 ||

ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 2 ||

ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ||
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || 3 ||

ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 4 ||

ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 5 ||

ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 6 ||

ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ||
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || 7 ||

ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 8 ||

ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 9 ||

ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 10 ||

ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||
ಶ್ರೀಮಹಾನುಭಾವನಾದ ದಾಮೋದರ || 11 ||

ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 12 ||

ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 13 ||

ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಇನ್ನು ವಾಸುದೇವನೇ || 14 ||

ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 15 ||

ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 16 ||

ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 17 ||

ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 18 ||

ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕಿರುವೆ ನಿನಗೆ ನಾರಸಿಂಹನೇ || 19 ||

ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ||
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 20 ||

ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 21 ||

ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 22 ||

ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ||
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 23 ||

ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 24 ||


ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ||
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 25 ||

ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||

ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 26 ||
***

Isha ninna charaNa bhajane Asheyinda mADu venu

dOsharAshi nAshamADu shreesha kEshava |1|

sharaNu hokkenayya yenna maraNa samayadalli ninna

carana smaraNe karuNisayya nArAyaNa |2|

shOdhisenna bhavada kalusha bhOdisayya gyAnavenage

bAdhisuva yamana bAdhe biDisu mAdhavA |3|

hindanEka yOnigaLali bandu bandu nondenayya

indu bhavada bandha biDisu tande gOvindA |4|

bhrashTanenisa bEDa krishNa ishTu mAtra bEDikombe

shishTaroDane ishTu kashTa biDisu vishNuvE |5|

madananayya ninna mahime vadanadalli nuDiyuvante

hrudayadoLage hudugisayya madhusUdhanA |6|

kavidukonDu iruva pApa savidu pOguvante mADo

javana bAdheyannu biDisu trivikramA |7|

kAmajanaka ninna nAma prEmadinda pADuvantha

nEmavenage pAlisayya swAmi vAmanA |8|

modalu ninna pAda pUje odaguvante mADO yenna

hrudayalli sadana mADo mudadi shriidara |9|

husiyanADi hoTTe horeva vishayadalli rasikanendu

husige hAkadiirayya hrushiikEshanE |10|

biddu bhavadanEka januma baddhanAgi kalushadinda

geddupOpa buddhi tOrO padmanAbhane |11|


shrii mahAnubhAvanAda dAmOdarA |12|

kAma krOdha biDisi ninna nAma jihveyoLage nuDiso

pankajAksha nEnu yenna manku buddhyannu biDisi

kinkaranna mADikoLLo sankarushaNA |13|


yEsu januma bandarEnu dAsanalla vEno nAnu

ghAsi mADadiru yenna vAsudEvanE |14|

buddhi shOnyanAgi yenna paddha kArya kuhakamanava

tiddi hrudaya shuddhi mADo pradyumnanE |15|

jananijanaka nIne yendu nenevenayya diina bandhu

yenage mukti pAlisayya aniruddhanE |16|

harushadinda ninna nAma smarisuvate mADu nEma

virisu caraNa dalli pushOttamA |17|

sAdhusanga koTTu ninna pAdabhajaneyiTTu enna

bhEdamAdi nODadirO shri adhOkshajA |18|

cAru caraNa tOri yenage pArugANisayya konege

bhAra hAkutiruve ninage nArasimhanE |19|

sancitArtha pApagaLanu kincitAda piiDegaLanu

muncitavAgi kaLedu poreyo swAmi accyutA |20|

gyAna bhakti koTTu ninna dhyAnadalli yiTTu sadA

hiina buddhi biDisu munna shrii janArdhana |21|

japatapAnushTAna villade kupathAgAmiyAda yenna

krupeyamADi kshamisabEku upEndranE |22|

moreya iDuvenayya ninage sharadhi shayana shubhamatIya

irisu bhaktanendu paramapurusha shri harI |23|

puTTisalEbEDa innu puTTisidake pAlisenna

ishTu mAtra bEDikombe shrii krishNanE |24|

satyavAda nAmagaLanu nityadalli paThisuvavara

arthiyinda salahuvanu kartru kEshavA |25|

mareyadale hariyanAma baredu Odi kELidavage

karedu mukti koDuva neleyAdikEshavA |Isha|
***


ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೆನು

ದೋಷರಾಶಿ ನಾಶಮಾಡು ಶ್ರೀಶ ಕೇಶವ                          ||ಪ||

ಶರಣುಹೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ

ಚರಣಸ್ಮರಣೆ ಕರುಣಿಸಯ್ಯ ನಾರಾಯಣ                           ||೧||

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ

ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವಾ                 ||೨||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು

ಎಂದು ಭವದ ಬಂದ ಬಿಡಿಸು ತಂದೆ ಗೋವಿಂದಾ                ||೩||

ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ

ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ                           ||೪||

ಮೊದಲು ನಿನ್ನ ಪಾದಪೂಜೆ ಮುದದಿ ಮಾಡುವೆನೈ ನಾನು

ಹೃದಯದೊಳಗೆ ಹುದುಗಿಸಯ್ಯ ಮಧುಸೂದನಾ                ||೫||

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡಿ

ಜವನ ಬಾಧೆಯನ್ನು ಬಿಡಿಸು ತವೆ ತ್ರಿವಿಕ್ರಮಾ                    ||೬||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ

ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ                     ||೭||

ಮದನನಯ್ಯ ನಿನ್ನ ಮಹಿಮೆ ವದನದಲಿಯೆ ಇರುವಂತೆ

ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರಾ                  ||೮||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು

ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ                          ||೯||

ಅಬ್ದಿಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ

ಗೆದ್ದು ಪೋಪ ಬುದ್ಧಿ ತೋರು ಪದ್ಮನಾಭನೆ                        ||೧೦||

ಕಾಮ-ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು

ಶ್ರೀ ಮಹಾನುಭಾವನಾದ ದಾಮೋದರಾ                          ||೧೧||

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನ

ಕಿಂಕರನನು ಮಾಡಿಕೊಳ್ಳು ಸಂಕರುಷಣ                          ||೧೨||

ಏಸು ಜನ್ಮ ಬಂದರೇನು ದಾಸನಾಗಲಿಲ್ಲ ನಾನು

ಗಾಸಿಮಾಡದಿರು ಇನ್ನು ವಾಸುದೇವನೆ                           ||೧೩||

ಬುದ್ಧಿಶೂನ್ಯನಾಗಿ ನಾನು ಕದ್ದ ಕಳ್ಳನಾದೆ ಎನ್ನ

ತಿದ್ದಿ ಹೃದಯ ಶುದ್ಧಮಾಡು ಪ್ರದ್ಯುಮ್ನನೆ                          ||೧೪||

ಜನನಿ ಜನಕ ನೀನೆಯೆಂದು ಎನುವೆನಯ್ಯ ದೀನಬಂಧು

ಎನಗೆ ಮುಕ್ತಿ ಚರಣದಲ್ಲಿ ಪುರುಷೋತ್ತಮಾ                      ||೧೫||

ಸಾಧುಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ

ಭೇಧಮಾಡಿ ನೋಡದಿರು ಅಧೋಕ್ಷಜಾ                          ||೧೬||

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ

ಭಾರಹಾಕಿರುವೆ ನಿನಗೆ ನಾರಸಿಂಹನೆ                            ||೧೭||

ಸಂಚಿತಾರ್ಥ ಪಾಪಗಳನು ಕಿಂಚಿತಾದರಿಡದಂತೆ

ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ                   ||೧೮||

ಜ್ಞಾನಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ

ಹೀನಬುದ್ಧಿ ಬಿಡಿಸೂ ಮುನ್ನ ಜನಾರ್ದನಾ                       ||೧೯||

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲ

ತಪ್ಪಕೋಟಿ ಕ್ಷಮಿಸಬೇಕು ಉಪೇಂದ್ರನೆ                        ||೨೦||

ಮೊರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ

ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರೆ                 ||೨೧||

ಪುಟ್ಟಿಸಲು ಬೇಡವಿನ್ನು ಪುಟ್ಟಿಸಿದಕೆ ಪಾಲ್ಲಿಸಿನ್ನು

ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ                         ||೨೩||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ

ಅರ್ಥಿಯಿಂದ ಸಲಹುವನು ಕರ್ತು ಕೇಶವ                     ||೨೪||

ಮರೆದು ಬಿಡದೆ ಹರಿಯನಾಮ ಬರೆದು ಓದಿ ಕೇಳಿದರಿಗೆ

ಕರೆದು ಕೊಡುವ ಮುಕ್ತಿ ಬಾಡದಾದಿಕೇಶವ                   ||೨೫||
***


               || ಪದ್ಯ -1 ||

ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು |
ದೋಷರಾಶಿ  ನಾಶ ಮಾಡು
ಶ್ರೀಶ ಕೇಶವ || 1 ||

ಈಶ ನಿನ್ನ ಚರಣಸೇವೆ ಮಾಡುವೆನು.
ನೀನು ಈಶ ಸರ್ವನಿಯಾಮಕ. ನಾನು ನಿನ್ನ ದಾಸ -ನಿಯಮ್ಯ . ಆದುದರಿಂದ ನಿನ್ನ ಸೇವೆ ನಾನು ಮಾಡಬೇಕು .ನಾನೇನು ? ಈ ಪ್ರಕೃತಿ 
ಸಹಿತವಾದ ಪ್ರಪಂಚವೇ  ನಿನ್ನದು.

ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚ  ಜಗತ್ಯಾಂ ಜಗತ್ |
       ಈಶವಾಸ್ಯ ಉಪನಿಷತ್

ಯ ಏತತ್ ಪರತಂತ್ರ ಚ
ಸರ್ವಮೇವ ಹರೇಃ ಸದಾ
ವಶಮಿತ್ಯೇವ ಜಾನಾತಿ ಸಂಸಾರಾನ್ಮುಚ್ಯತೇ ಹಿ ಸಃ
            ತತ್ವವಿವೇಕ

ಈ ಪರತಂತ್ರ  ಪ್ರಪಂಚವೆಲ್ಲವೂ 
ಸರ್ವದಾ  ಶ್ರೀಹರಿಯ ವಶ  ಎಂದು ತಿಳಿದವನೆ ಮುಕ್ತಿ ಪಡೆಯುವುದು ತಾನೆ .
ಕ -ಬ್ರಹ್ಮ ಈ -ಲಕ್ಷ್ಮೀ  ಇ -ಕಾಮ , ಈಶ -ರುದ್ರ ಇವರಿಗೆಲ್ಲ ನಿಯಾಮಕ
ಆದುದರಿಂದಲೇ ನೀನು  ಕೇಶವ -ಕಂ  ಬ್ರಹ್ಮಾಣಂ , ಈಂ -ಲಕ್ಷ್ಮೀಂ  ಇಂ -ಕಾಮ , ಈಶಂ -ರುದ್ರಂವರ್ತಯತಿ ಇತಿ ಕೇಶವಃ ಬ್ರಹ್ಮಾದಿಗಳಿಗಿಂತ ಹಿರಿಯಳಾದ ಶ್ರೀದೇವಿಗೂ ನಿನು ಈಶ . ಹೀಗೆ ಸರ್ವೋತ್ತಮನು . ಸರ್ವನಿಯಾಮಕನು .  ಆಗಿ ಕೇಶವ ಎನಿಸಿದ ಶ್ರೀಶ ನಿನ್ನ ಚರಣಭಜನೆ ಮಾಡುವೆನು.
***
ಈಶ !ನಿನ್ನ ಚರಣಗಳಲ್ಲಿ  ಒಂದು  ಚರಣ ಮುಕ್ತಿಯಲ್ಲಿ ಭಜಕರಿಗೆ  ಸುಖವನ್ನು ಕೊಡುವುದರಿಂದ  ಸು ಎನಿಸಿದರೆ. ಮತ್ತೊಂದು ಚರಣ  ಜ್ಞಾನವನ್ನು ಕೊಡುವುದರಿಂದ. ವರ್ ಎನಿಸುವುದು. ಜ್ಞಾನ ಆನಂದಗಳನ್ನು  ಪಡೆಯಲು ನಿನ್ನ ಚರಣ ಭಜನೆ ಮಾಡುವೆನು .

ಎನ್ನ ಸೇವೆ ಬೆಸರದೆ  ದಿನ
ದಿನ್ನ ಮಾಡುವ ಮಾನವರಿಗೆ
ಪ್ರಸನ್ನ ನಾಹೆ ಕೃಪಾಳು ಎಂಬುದು ಎನಗೆ ಬಲು ಬಿರುದು
ಮನ್ನದಲ್ಲಿ  ಬೇಸತ್ತು ಕೊಂಡರೆ  ಮಣ್ಣು ಹೊಯಿಸದೆ ಮಾಣೆನದರಿಂ - ದುನ್ನತೋನ್ನತ ಪೂಜೆಗಳನು ದಿನ್ನ ಮಾಡುತಿರು.
ಸ್ವಪ್ನಪದ -ಶ್ರೀವಾದಿರಾಜರು

ಎಂದು ನಿನ್ನ ಆದೇಶ ಆದುದರಿಂದಲೆ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು.
***
ಸೂರ್ಯಸ್ಯ ತಪತೊ ಲೋಕಾನಗ್ನೇಃ ಸೋಮಸ್ಯ ವಾಪ್ಯುತಃ ಅಂಶವೋ ಯತ್ ಪ್ರಕಾಶಂತೇ ಮಮ ತೇ ಕೇಶಸಂಜ್ಞಿತಾಃ | ಸರ್ವಜ್ಞಾಃ ಕೇಶವಂ ತಸ್ಮಾನ್ಮಾಮಾಹುರ್ದ್ವಿಜಸತ್ತಮಾಃ | ತೇನ ಕೇಶವನಾಮಾಹಂ ಖ್ಯಾತೋ ಲೋಕೇ ಯುಗೇ ಯುಗೇ || ಲೋಕಗಳನ್ನು ಸುಡುವ ಸೂರ್ಯನ ಅಗ್ನಿಯ ಹಾಗೂ ಚಂದ್ರನ ಪ್ರಕಾಶಿಸುವ ಕಿರಣಗಳೇ ವಿಶ್ವವ್ಯಾಪಿಯಾದ ನನ್ನ ಕೇಶ ಎನ್ನಿಸಿದ್ದು ಅವುಗಳನ್ನು ಮುಖ್ಯವಾಗಿ ನಾನು ಹೊಂದಿರುವುದರಿಂದ ಜ್ಞಾನಿಗಳು ನನ್ನನ್ನು ಕೇಶವ ಎಂದು ಕರೆಯುವರು . ಆದುದರಿಂದ ಲೋಕದಲ್ಲಿ ಪ್ರತಿಯೊಂದು ಯುಗದಲ್ಲೂ ನಾನು ಕೇಶವ ಎಂಬ ಹೆಸರಿನಿಂದ ಪ್ರಸಿದ್ದನಾಗಿರುವೆನು -ಎಂದು ಭಗವಂತನೇ ತಾನು ಕೇಶವ ಏಂದೆನಿಸಿರುವುದ ಔಚಿತ್ಯವನ್ನು ಮಹಾಭಾರತ ಶಾಂತಿಪರ್ವದಲ್ಲಿ ತಿಳಿಸಿದ್ದಾನೆ *** ಕೇಶವೋsನ್ಯತರಸ್ಯಾಮ್ ಇತಿ ಸೂತ್ರಾನುಸಾರೇಣ ಪ್ರಶಸ್ತಾಃ ಕೇಶಾಃ ಅಸ್ಯ ಸಂತೀತಿ ಪ್ರಶಂಸಾಯಾಮ್ ಕೇಶಾದ್ ವಪ್ರತ್ಯಯೇ ಸತಿ ಕೇಶವ ಇತಿ ಸಿದ್ಧ್ಯತಿ . ಪ್ರಶಸ್ತವಾದ ತಲೆಗೊದಲನ್ನು ಹೊಂದಿರುವವನು ಆದ್ದರಿಂದ ಕೇಶವ. ಎಂದು ಕರೆಯಃಲ್ಪಡುತ್ತಾನೆ . ಆನಂದಶ್ಮಶ್ರುರಾನಂದಕೇಶ ಆಪಾದನಖಾತ್ಸರ್ವ ಏವಾನಂದಃ ಭಗವಂತನ ತಲೆಗೂದಲು ಯಾವಾಗಲೂ ಅವನಂತೆಯೇ ಆನಂದಸ್ವರೂಪಿ -ಮಾಧ್ಯಂದಿನ ಶ್ರುತಿ ಭಾಗವತತಾತ್ಪರ್ಯನಿರ್ಣಯ10-3-49 ಯತಃ ಪ್ರಾಣಾದಿ ಶಕ್ತಿಮಾನ್ ಕೇಶಾದಿ ಸರ್ವತ್ರ || ಭಗವಂತನ ಸ್ವರೂಪಾತ್ಮಕವಾದ ತಲೆಗೂದಲು ಅವನಷ್ಟೇ ಸಮರ್ಥ .ಅವನ ಕೈಕಾಲುಗಳಲ್ಲಿರುವ ಕೇಶಾದಿ ಸ್ವಸಾಮರ್ಥ್ಯವು ಅದರಲ್ಲಿದೆ . --ಗೀತಾತಾತ್ಪರ್ಯ ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಈ ವಿಷಯವನ್ನು ತಿಳಿಸಿದ್ದಾನೆ . ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸ ದುಚ್ಯತೇ | ಸರ್ವತಃ ಪಾಣಿಪಾದಂ ತತ್ ಸರ್ವತೋsಕ್ಷಿಶಿರೋಮುಖಂ | ಸರ್ವತಃ ಶ್ರುತಿಮಾಲ್ಲೋಕೇ ಸರ್ವಮೋವೃತ್ಯ ತಿಷ್ಠತಿ || ಭಗವಂತನಿಗೆ ಪ್ರಾಕೃತದೇಹವಾಗಲಿ ಪ್ರಾಕೃತ ಇಂದ್ರಿಯವಾಗಲಿ ಇರುವುದಿಲ್ಲ .ಅವನ ದೇಹ ಇಂದ್ರಿಯಾದಿಗಳೂ ಅವನ ಸ್ವರೂಪವೇ ಅವನ ಎಲ್ಲ ಅವಯವಗಳಲ್ಲಿಯೂ ಕೈಕಾಲುಗಳುಳ್ಳ ಶಕ್ತಿ ಉಳ್ಳವನು . ಎಲ್ಲ ಅವಯವಗಳಲ್ಲಿಯೂ ಕಿವಿಯ ಕಾರ್ಯಶಕ್ತಿ ಉಳ್ಳವನು .ಪ್ರತಿಯೊಂದು ಅವಯವೂ ಎಲ್ಲ ಅವಯವಗಳ ಕಾರ್ಯಮಾಡಬಲ್ಲದು . ಜಗತ್ತಿನಲ್ಲಿರುವ ಎಲ್ಲ ವಸ್ತುವನ್ನು ವ್ಯಾಪಿಸಿರುತ್ತಾನೆ ಆತ . ಅತ್ಯಂತ ಸೂಕ್ಷ್ಮವಾದ ಕೈಕಾಲು ಮುಂತಾದ ಎಲ್ಲ ಅವಯವಗಳಿಂದ ಕೂಡಿದ ಅಣುರೂಪಗಳಿಂದ ಎಲ್ಲ ಅಣುಪದಾರ್ಥಗಳಲ್ಲಿಯೂ ಇದ್ದು ವ್ಯಾಪ್ತರೂಪದಿಂದ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನೂ ವ್ಯಾಪಿಸಿರುತ್ತಾನೆ . -ಶ್ರೀಮದ್ ಭಗವದ್ಗೀತೆ 13- 13 ,14 ಕೃಷ್ಣ ಕೇಶೋ ಹಿ ಯಾದವಃ || -ಗೀತಾತಾತ್ಪರ್ಯ ಹರಿಶುಕ್ಲಕೇಶಯುತಶ್ಶೇಷೋ ದೇವಕಿರೋಹೀಣಿಜಃ || ಭಗವಂತನ ಕಪ್ಪು ತಲೆ ಗೂದಲೇ ಶ್ರೀಕೃಷ್ಣನಾಗಿ ಅವತರಿಸಿದ್ದರೆ ಬಿಳಿತಲೆಗೂದಲು ಶೇಷನಲ್ಲಿ ಅವೇಶ ಹೊಂದಿ ಬಲರಾಮನಾಗಿ ಅವತರಿಸಿದೆ ..ಇಷ್ಟು ಉತ್ಕೃಷ್ಟವಾದ ತಲೆಗೂದಲು ಭಗವಂತನದ್ದು . -ಶ್ರೀಮಹಾಭಾರತತಾತ್ಪರ್ಯನಿರ್ಣಯ 12-112 ಕೇಶೇನ ಕೃಷ್ಣರೂಪಿ ಸನ್ ಜಗತಿ ವರ್ತತ ಇತಿ ಕೇಶವಃ || ಕಪ್ಪು ತಲೆಗೂದಲಿಂದ ಶ್ರೀಕೃಷ್ಣನಾಗಿ ಭೂಮಿಯಲ್ಲಿ ಇರುವವನ. -ವಾದಿರಾಜೀಯ ಕೇಶೇನ ಕೃಷ್ಣ ಕೇಶೇನ ವಾತಿ ಗಂಧಯತಿ ದೈತ್ಯಾನಿತಿ ಕೇಶವಃ | ಕಪ್ಪು ತಲೆಗೂದಲಿನ ಮೂಲಕ ಕಂಸನೇ ಮೊದಲಾದ ಅಸುರರನ್ನು ಸಂಹರಿಸಿದವನು. -ಶ್ರೀಸತ್ಯಸಂಧೀಯ ವಿಷ್ಣುಸಹಸ್ರನಾಮ ಸಹಸ್ರನಾಮ ವ್ಯಾಖ್ಯಾನ ಕೇಶಿವಧಾತ್ ಕೇಶವ ಕೇಶಿ ಎಂಬ ಅಸುರರನ್ನು ಸಂಹರಿಸಿದವನು . ಯಸ್ಮತ್ತ್ವಯೈವ ದುಷ್ಟಾತ್ಮ ಹತಃ ಕೇಶಿ ಜನಾರ್ದನ | ತಸ್ಮಾತ್ ಕೇಶವನಾಮ್ನಾ ತ್ವಂ ಲೋಕೆ ಖ್ಯಾತಿಂ ಗಮಿಷ್ಯಸಿ || ಕೇಶಿ ಎಂಬ ಅಸುರನನ್ನು ಸಂಹರಿಸಿರುವುದರಿಂದಲೇ ನೀನು ಕೇಶವ ಎಂದೆನಿಸಿರುವಿ ಎಂದು ಭಗವಂತನಲ್ಲಿ ನಿವೇದಿಸಿಕೋಳ್ಳಲಾಗಿದೆ . -ವಿಷ್ಣುಪುರಾಣ ಕಸ್ಯ ಬ್ರಹ್ಮಣಃ ಈಶಃ ಕೇಶಃ |ವರಿತಿ ಜ್ಞಾನಮುಚ್ಯತೇ ಇತಿ ಜ್ಞಾನ ರೂಪತ್ವಾತ್ ವಃ | ಕೇಶಶ್ಚಾ ಸೌ ವಶ್ಚ ಕೇಶವಃ || ಚತುರ್ಮುಖ ಬ್ರಹ್ಮದೇವರ ಒಡೆಯ ಮತ್ತು ಜ್ಞಾನಸ್ವರೂಪಿ .ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ . -ಸುಖಶ್ರೇಷ್ಠಃ ವಹತಿ ವರ್ತಯತೀತಿ ಕೇಶವಃ (ಯೋಗ್ಯರಿಗೆ ) ಸುಖಶ್ರೇಷ್ಠವಾದ ಮೋಕ್ಷ ಸುಖವನ್ನು ತಲುಪೀಸುವವನು ಅಥವ ಪ್ರವರ್ತಿಸುವವನು ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ . -ಶ್ರೀವಿದ್ಯಾದಿರಾಜೀಯ ವಿಷ್ಣುಸಹಸ್ರನಾಮ ವ್ಯಾಖ್ಯಾನ ***
ಅರ್ಚಿತಃ ಸಂಸ್ಮೃತೋ ಧ್ಯಾತಃ ಕೀರ್ತಿತಃ ಕಥಿತಃ ಶ್ರುತಃ ಯೋ ದದಾತ್ಯಮೃತತ್ವಂ ಹಿ ಸಮಾಂ ರಕ್ಷತು ಕೇಶವಃ ನಿನ್ನ ಅರ್ಚನ ಸಂಸ್ಮರಣೆ ,ಧ್ಯಾನ ,ಕೀರ್ತನೆ , ಮಾಹಾತ್ಮ್ಯ ,ಕಥನ ಶ್ರವಣಗಳನ್ನು ಮಾಡಿದವನಿಗೆ ನೀನು ಮುಕ್ತಿಯನ್ನು .ಕೊಡುವಿ ಅಂಥ ಕೇಶವ ! ನೀನು ರಕ್ಷಣೆ ಮಾಡು -ಶ್ರೀಕೃಷ್ಣಾಮೃತ ಮಹಾರ್ಣವ *** ಅಥಾಂಘ್ರಯೇ ಪ್ರೋನ್ನಮಿತಾಯ ವಿಷ್ಣೋ ರುಪಾಹರತ ಪದ್ಮಭವೋsರ್ಹಣಾದಿಕಮ್ |ಸಮರ್ಚ್ಯ ಭಕ್ತ್ಯಾsಭ್ಯಗೃಣಾಚ್ಛುಚಿಶ್ರವಾ ಯನ್ನಾಭಿಪಂಕೇರುಹಸಂಭವಃ ಸ್ವಯಮ್ || ಧ್ಯಾತುಃ ಕಮಂಡಲಜಲಂ ತದುರುಕ್ರಮಸ್ಯ ಪಾದಾವನೇಜನಪವಿತ್ರ ತಯಾ ನರೇಂದ್ರ|| ಸ್ವರ್ಧುನ್ಯಭೂನ್ನಸಿ ಸಾ ಪತತೀ ನಿರ್ಮಾಷ್ಟಿ ಲೋಕತ್ರಯಂ ಭಗವತೋ ವಿಶದೇವ ಕೀರ್ತಿಃ || ವಾಮನ ರೂಪಿ ಪರಮಾತ್ಮನು ತ್ರಿವಿಕ್ರಮನಾಗಿ ಬೆಳೆದಾಗ ಸತ್ಯಲೋಕಕ್ಕೆ ಬಿಜಯಂ ಗೈದ ನಿನ್ನ ಪಾದಕ್ಕೆ ನಿನ್ನ ಪಾದನಖಾಗ್ರ ಸ್ಪರ್ಶಮಾತ್ರದಿಂದ ಸ್ಪೋಟಗೊಂಡ ಬ್ರಹ್ಮಾoಡದ ಹೊರಗಿಂದ ಬಂದ ನೀರನ್ನು ತನ್ನ ಕಮಂಡಲುವಿನಲ್ಲಿ ಹಿಡಿದು ಜೀವೋತ್ತಮರಾದ ಬ್ರಹ್ಮ ದೇವರು ಪೂಜೆಗೈದು ಕೃತಾರ್ಥರಾದರಲ್ಲವೇ ? ಅದೇ ನೀರು ನಿನ್ನ ಪಾದ ಸಂಗದಿಂದ ಪವಿತ್ರ ಗಂಗೆಯಾಗಿ ಭುವನ ಪಾವನವೆನಿಸಿದೆ . -ಶ್ರೀಮದ್ ಭಾಗವತಪುರಾಣ 8-20-3,4,5 ಯಚ್ಛೌಚ ನಿಸೃತ ಸರಿತ್ಪ್ರವರೋದಕೇನ ತೀರ್ಥೇನ ಮೂರ್ಧ್ನ್ಯ ಧೀಧೃತೇನ ಶಿವಃ ಶಿವೋ ಭೂತ್ || ಪರಶಿವನೂ ನಿನ್ನ ಈ ಪಾದೋದಕವನ್ನು ಧರಿಸಿ ಸದಾಶಿವ(ಮಂಗಲ)ನಾದನಲ್ಲವೇ ಪ್ರಭು ! . -ಶ್ರೀಮದ್ ಭಾಗವತಪುರಾಣ ಹೀಗೆ ಕ -ಬ್ರಹ್ಮ -ಈಶ -ರುದ್ರರನ್ನು ತನ್ನ ಪಾದಸೇವನೆಯಲ್ಲಿ ತೊಡಗಿಸಿದ ಕೇಶವ ನೀನು . (ಈ )ಲಕ್ಸ್ಮೀ ದೇವಿಗೆ (ಶ) ಚರಣಭಜನೆಯ ಸೌಖ್ಯ ಕೊಟ್ಟ ಈಶ ನೀನು .ನನ್ನಿಂದಲೂ ನಿನ್ನ ಚರಣಭಜನೆ ಮಾಡಿಸಿಕೊ ಎಂದು ಶ್ರೀಕನಕದಾಸಾರ್ಯರು ಈಶ ನಿನ್ನ ಚರಣಾ ಭಜನೆ ಆಶೆಯಿಂದ ಮಾಡುವೇನು | ದೋಷರಾಶಿ ನಾಶಮಾಡು ಶ್ರೀಶ ಕೇಶವ || ಎಂದು ಕೇಶವರೂಪಿ ಪರಮಾತ್ಮನನನ್ನು ಮೊದಲ ಪದ್ಯದಲ್ಲಿ ವರ್ಣಿಸಿದ್ದಾರೆ || ಶ್ರೀಕೃಷ್ಣಾರ್ಪಣಾಮಸ್ತು || ಮೊದಲನೇ ಪದ್ಯದ ವಿವರಣೆ ಮುಗಿಯಿತು

 ‌(received in WhatsApp)

****


1 comment:

  1. thank you so much for such a wonderful information,-vasegowda

    ReplyDelete