SEARCH HERE

Tuesday 1 January 2019

gayathri mantra importance ಗಾಯತ್ರೀ ಮಂತ್ರದ ಮಹತ್ವ


The GAYATRI MANTRA" the most powerful hymn in the world.


Dr.Howard Steingeril, an American scientist, collected Mantras, Hymns and invocations from all over the world and tested for their strength in his Physiology Laboratory& 

Hindu's Gayatri Mantra produced 110,000 sound waves /second... 

This was the highest and was found to be the most powerful hymn in the world. 

Through the combination of sound or sound waves of a particular frequency, this Mantra is claimed to be capable of developing specific spiritual potentialities. 

The Hamburg university initiated research in 

to the efficacy of the Gayatri Mantra both on the mental and physical plane of CREATION... 

The GAYATRI MANTRA is broadcasted daily for 15 minutes from 7 P.M. onwards over Radio Paramaribo, Surinam, South America for the past two years, and in Amsterdam, Holland for the last six months. 

"Om Bhoor Bhuwah Swah, Tat Savitur Varenyam, Bhargo Devasya Dheemahi, Dhiyo Yo Nah Pra-chodayaat !" 😊

"It's meaning: 

God is dear to me like my own breath, He is the dispeller of my pains, and giver of happiness.I meditate on the supremely adorable Light of the Divine Creator, that it may inspire my thought and understanding." 

The above information is worth circulating and sharing with one and all! How rich and wonderful are our Vedas.
********

HOW MANY DEITIES ARE MENTIONED IN GAYATRI MANTRA

There are 26 gods in gayatri mantra

tat - ganesh
sa - Narasimha
vi - vishnu
tu - siva
va - krishna
re - radha
Ni - lakshmi
yam - agni
bha - indra
Rgo - saraswati
dE - durga
va - hanuman
sya - prithvi
dhee - surya
ma - Sriram
hi - seetha
dhi - chandra
yO - yama
ya - brahma
na - varuna
chO - hayagreeva
da - hamsa
yaat - tulasi

One should chant 1008 times, or 108 time of 28 times or atleast 10 times 

Gayatri has fire in face, brahma the creator in forehead, vishnu the protector in heart and Siva the destroyer on top of head.

So its a combination of all Gods.

Gayathri Manthra should be chanted 3 times a day.

Goddess Gaythri confers the boon of Intelligence as Gayathri, Protection as Savithri and Learning as Saraswathi. Gayathri is therefore called Sarvadevata Swarupini.
*****

The Gayatri Mantra Spandanā takes us on a Pilgrimage, read Where and How!

(The only baggage to be packed here is A SIMPLE FAITH, as in it contains a heightened awareness and a surrendering attitude).

प्रिय आत्मन्,
Dear Soul,

॥गायन्तम् गायते इति गायत्री:॥
Mother Gayatri protects the one who meditates upon Her, and chants Her Name.

As you commence the chanting of the Gayatri Mantra, your own Prāna shareera (Energy body) will naturally facilitate the gaps while transitioning from one line to the next.

The Aksharas in the Gayatri Mantra hit the roof of the mouth at 24 different points which go ahead and hit 24 different points in the Amygdala, the emotional brain.Amygdala is the closest to the roof of the mouth, connected by nerves to the roof of the mouth. As the Amygdala is hit upon, the vibration stimulates the nerve arising from the Amygdala, travelling and connecting straight to the borders of the intestines where the nerve makes a complete round of the intestines. At the border of the intestines,on this nerve which came from Amygdala, tiny protein globules are present. These protein globules have within it, in circuital form, our deep-rooted karmic impressions,or samskārās and this is the Area of the Manipura Chakra, the Energy Vortex of Solar-Plexus.

These protein globules, upon receiving the impulses from the Gayatri mantra, split up, and break-open as they receive the vibrations of Gayatri Mantra, which travelled from the Amygdala to the intestines, hitting and breaking open the protein globules containing karmic emotions.

These karmic circuits then travel up in a cylindrical psychic passage connected between solar-plexus (Manipura Chakra) and Ajna Chakra (pineal gland, command center), and karmas get submitted here for a "discriminatory dissection" , called "Vairagya Kriya", by which the required karmic samskaaraas (impressions) which are conducive for growth of the jiva (individual soul) is retained, and the undesired karmas are eliminated. This Vairagya is the quality of the Ajna chakra,--the Command Center, the Pineal Gland, which is the Lingam in us, and as result of this exercise, the Bindu chakra starts emitting the Nectar Elixir,upon the Ajna chakra, Pineal Gland, and this Nectar is the Manasarovar pouring upon the Lingam (the Sri Kailash,Pineal Gland, Ajna chakra).

The Bindu emits the nectar elixir because now there remains only the karmas which are conducive gfor evolution, which is to permanently join the shiva Lingam dimension to the shakthi(peetham) dimension. The nectar acts as a joining glue and keeps two in union eternally..

This pacifies all remaining agitations in the Ajna chakra, and  the Great unity of Shakti gives man the realisation of his own innate nature.

Thus, a pilgrimage of Sri Kailash Manasarovar takes place within, by chanting the Gayatri Mantra.

Hence, the Gayatri Spandana (vibrations) makes us undertake this pilgrimage from samsāra to Sri Kailash Mānasarovarā, a journey from darkness to light, from ignorance to knowledge to wisdom to realisation, from Karma to Moksha, Bondage to Liberation.

॥हरिःऊँ॥
॥ऊँ नमो नारायणाय॥
*****

Listen to this video



***




.ನೋಡೀ ಗಾಯತ್ರಿಮಂತ್ರದ ಸಾಮಾನ್ಯ ಅರ್ಥವನ್ನು ನೋಡುವುದಾದರೆ ಇಲ್ಲಿ-

ಓಂ ಅಂದರೆ ಸಕಲಗುಣಪರಿಪೂರ್ಣನು , 

 ಭೂಃ ಅಂದರೆ ಆ ಒಂದೊಂದು ಗುಣದಿಂದಲೂ ಪೂರ್ಣನಾದವನು , 
ಭುವಃ ಅಂದರೆ ಮಹಾಶ್ವೈರ್ಯವುಳ್ಳವನು , 

ಸ್ವಃ ಅಂದರೆ ಅನಂತವಾದ ಸುಖವುಳ್ಳವನು , 

ಯಃ ಅಂದರೆ ಯಾವ ಪರಮಾತ್ಮನು 

ನಮ್ಮೆಲ್ಲರ ಧಿಯಃ ಅಂದರೆ ಬುದ್ಧಿಯನ್ನು

 ಪ್ರಚೋದಯಾತ್ ಅಂದರೆ ಪ್ರೇರಣೆ ಮಾಡುತ್ತಾನೋ

 ತತ್ (ತಸ್ಯ) ಅಂದರೆ  ಅಂತಹ 

ಸವಿತುಃ ಅಂದರೆ ಜಗತ್ತಿನ ಸೃಷ್ಟಿಕರ್ತೃವಾದ 
.
ದೇವಸ್ಯ ಅಂದರೆ ಕ್ರೀಡಾಧಿಗುಣವಿಶಿಷ್ಟನಾದ ಸೂರ್ಯಾಂತರ್ಗತ ಶ್ರೀಲಕ್ಷ್ಮೀ ನಾರಾಯಣನ

 ತತ್ ಅಂದರೆ  ಗುಣಗಳಿಂದ ವ್ಯಾಪ್ತವಾದ 

ವರೇಣ್ಯಂ ಅಂದರೆ ಆದ್ದರಿಂದಲೇ ಸರ್ವರಿಂದಲೂ ಭಜನೀಯವಾದ 

ಭರ್ಗಃ ಅಂದರೆ ಪ್ರಕಾಶಮಯ-ಕ್ರೀಡಾಮಯ-ಜ್ಞಾನಮಯವಾದ ಸ್ವರೂಪವನ್ನು

 ಧೀಮಹಿ ಅಂದರೆ ಧ್ಯಾನ ಮಾಡೋಣ ಎಂಬ ದಿವ್ಯವಾದ ಪ್ರಾರ್ಥನೆ ನಮ್ಮದಾಗಬೇಕೆಂಬುದು.
***

ಗಾಯತ್ರಿ ಮಂತ್ರ ಎಂದರೆ ಸಂಧ್ಯಾವಂದನೆ ಮಂತ್ರ ಎಂದು ಮಾತ್ರ ನಾವು ತಿಳಿದಿದ್ದೇವೆ.  ಆದರೆ ಈ ಮಂತ್ರ ಸಾಗರದಂತೆ ವಿಶಾಲವಾದುದು.  ಈ ಸಾಗರದ ಪ್ರತಿಯೊಂದು ಅಲೆಯನ್ನು ಅಷ್ಟೇ ಏಕೆ ಪ್ರತಿಯೊಂದು ಹನಿಯನ್ನು ನಾನಾರ್ಥಗಳಲ್ಲಿ ನಮ್ಮ ಹಿರಿಯರು ಪ್ರತಿಪಾದಿಸಿದ್ದಾರೆ.  ನನ್ನ ತೀರ್ಥರೂಪರವರು ನನಗೆ ಆಗಮ ಪಾಠ ಮಾಡುವಾಗ "ಶ್ರೀಮನ್ನಾರಾಯಣಸ್ಯ ಚತುರ್ವಿಂಶತಿ ನಾಮಾನಿ ಗಾಯತ್ರಿ ಮಂತ್ರ ಪ್ರತಿಪಾದಕಾ:" ಎಂಬುದರ ವಿವರಣೆಯನ್ನು ನೀಡುತ್ತಾ ಶ್ರೀಮನ್ನಾರಾಯಣನ ದಶಾವತಾರಗಳ ಸಮನ್ವಯತೆಯನ್ನು ಗಾಯತ್ರಿ ಮಂತ್ರಕ್ಕೆ ಹೋಲಿಸಿ ವಿವರಿಸಿದ್ದರು. 

ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದದ (ಸಾಲುಗಳ) ಮಂತ್ರ, ಒಟ್ಟು 24  ಅಕ್ಷರಗಳ ಒಂದು  ಛಂದಸ್ಸು...

ಓಂ ಭೂರ್ಭುವ ಸ್ವಃ (ಸುವಃ – ಯಜುರ್ವೇದ ಪಾಠ)  ಇವು ಮೂರು ಓಂಕಾರ ಸಹಿತವಾದ ವ್ಯಾಹೃತಿಗಳು

ಓಂ ಭೂರ್ಭುವಸ್ವಃ। ತತ್ಸವಿತುರ್ವರೇಣ್ಯಂ। ಭರ್ಗೋದೇವಸ್ಯ ಧೀಮಹಿ। ಧಿಯೋ ಯೋನಃ ಪ್ರಚೋದಯಾತ್।।

ಇದು ಜಪದಲ್ಲಿ ಉಚ್ಚರಿಸುವ ವ್ಯಾಹೃತಿ ಸಹಿತವಾದ ವಿಶ್ವಾಮಿತ್ರ ಗಾಯತ್ರಿ ಎಂದು ಕರೆಯಲ್ಪಡುವ "ಗಾಯತ್ರಿ ಮಂತ್ರ"...

ಅದರ ಪದ ವಿಭಾಗ ಹೀಗಿದೆ: ಓಂ , ಭೂಃ , ಭುವಃ , ಸ್ವಃ (ಸುವಃ) ತತ್ , ಸವಿತುಃ , ವರೇಣಿಯಂ, ಭರ್ಗಃ  .  ದೇವಸ್ಯ , ಧೀಮಹಿ , ಧಿಯಃ ,ಯಃ , ನಃ , ಪ್ರಚೋದಯಾತ್।।

ನಾವು ನಿತ್ಯ ಜಪಿಸುವ ಗಾಯತ್ರಿ ಛಂದಸ್ಸಿನ ಮಂತ್ರ ಭಗವಂತನ ಸೂರ್ಯಾಂತರ್ಗತ ರೂಪವಾದ ನಾರಾಯಣನನ್ನು ಕುರಿತಾಗಿದ್ದು "ಸೂರ್ಯನಾರಾಯಣ ಮಂತ್ರ" ಅಥವಾ "ವಿಶ್ವಾಮಿತ್ರ ಗಾಯತ್ರಿ ಮಂತ್ರ"ವಾಗಿ,  ಬಳಕೆಯಲ್ಲಿ "ಗಾಯತ್ರಿ ಮಂತ್ರ" ಎಂದು ಪ್ರಸಿದ್ಧಿ ಪಡೆಯಿತು.

ಈ ಗಾಯತ್ರೀ ಮಂತ್ರದಲ್ಲಿ ಒಟ್ಟು 24 ಅಕ್ಷರಗಳಿವೆ. ಅವು ಭಗವಂತನ ಕೇಶವಾದಿ ಚತುರ್ವಿಂಶತಿ ಮೂರ್ತಿಗಳ ಉಪಾಸನೆಗಾಗಿ ಇವೆ. ಅಂದರೆ ಸಂಧ್ಯಾವಂದನೆಯಲ್ಲಿ ಹೇಳುವ "ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ,  ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ, ಕೃಷ್ಣ" ಇವೇ ಆ 24 ಮೂರ್ತಿಗಳು. ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳು.

ಅಷ್ಟೇ ಅಲ್ಲ ಗಾಯತ್ರಿಯಲ್ಲಿ 10 ಶಬ್ದಗಳಿವೆ... ಆ 10 ಶಬ್ದಗಳು ಭಗವಂತನ ದಶಾವತಾರದ ರೂಪಗಳನ್ನು ಹೇಳುವ ಶಬ್ದಗಳು...

ಮೊದಲನೆಯ ಶಬ್ದ ತತ್--"ತತ್"  ಭಗವಂತನ ಮತ್ಸ್ಯ ಅವತಾರವನ್ನು ಹೇಳುವ ಶಬ್ದ. ವೈವಸ್ವತ ಮನು "ಶ್ರಾದ್ಧ ದೇವ " ಅರ್ಘ್ಯ ಕೊಡಬೇಕು ಅಂತ ಬೊಗಸೆಯಲ್ಲಿ ನೀರು ಹಿಡಿದಾಗ, ಭಗವಂತ ಒಂದು ಚಿಕ್ಕ ಮೀನಾಗಿ ಬೊಗಸೆಯ ನೀರಿನಲ್ಲಿ ಬಿದ್ದ. ನಂತರ ಬೊಗಸೆಯಿಂದ ಪಾತ್ರೆಗೆ ಬಿದ್ದು ದೊಡ್ಡದಾದ, ನಂತರ ಹಂಡೆಯಲ್ಲಿ ಹಾಕಿದಾಗ ಅಲ್ಲಿ ಹಂಡೆ ತುಂಬುವಷ್ಟು  ದೊಡ್ಡದಾದ, ನಂತರ ಸರೋವರಕ್ಕೆ ಬಿಟ್ಟಾಗ ಸರೋವರವೆಲ್ಲ ತುಂಬುವಷ್ಟು ದೊಡ್ಡದಾದ, ನಂತರ ಸಮುದ್ರ ಸೇರಿ ಸಮುದ್ರವನ್ನೇ ತುಂಬುವಷ್ಟು ದೊಡ್ಡದಾದ ಇದು ಭಗವಂತನ ಮೊದಲ ಅವತಾರ.

👉ತತ- ಅಂದರೆ ವಿಸ್ತಾರಗೊಳ್ಳುವುದು. ಹೀಗೆ ತತವಾಗಿ, ತತವಾಗಿ, ವಿತತವಾಗಿ ಸಮುದ್ರವನ್ನೆಲ್ಲ ತುಂಬುತ್ತಾ ಪ್ರಳಯಕಾಲದಲ್ಲಿ ಋಷಿಗಳ ದಡಹಾಯಿಸಿದ ರೂಪ ಯಾವುದೋ ಅದೇ "ಮತ್ಸ್ಯಾವತಾರ".

👉ಸವಿತುಃ - ಅಂದರೆ ಕೂರ್ಮಾವತಾರ-ಸವಿತಾ ಅಂದರೆ ಸವನ.  ಸೋಮಲತೆಯನ್ನು ಕುಟ್ಟಿ ಅದರಿಂದ ರಸತೆಗೆಯುವ ಕ್ರಿಯೆಗೆ ಸವನ ಅನ್ನುತ್ತಾರೆ.

ದೇವ-ರಾಕ್ಷಸರ ಸಮುದ್ರಮಥನ ಕ್ರಿಯೆಯಲ್ಲಿ ಮಂದರಕ್ಕೆ ಬೆನ್ನುಕೊಟ್ಟು ಸಮುದ್ರದಿಂದ ಅಮೃತವನ್ನು ತಂದುಕೊಟ್ಟ ರೂಪ "ಕೂರ್ಮಾವತಾರ".

👉 ವರೇಣ್ಯಂ - ವರಾಹಾವತಾರ-ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು. "ಕಪಿರ್ವರಾಹ ಶ್ರೇಷ್ಠಶ್ಚ" ಎಂಬ ಉಕ್ತಿಯಂತೆ ವರಾಹ ಅಂದರೆ ಶ್ರೇಷ್ಠವಾದದ್ದು, ಎತ್ತರದಲ್ಲಿರುವಂತದು. ಅದೇ ವರೇಣ್ಯ.

ಭಗವಂತ ವರಾಹ ರೂಪದಿಂದ ಆದಿದೈತ್ಯರನ್ನು ಕೊಂದು ಭೂಮಿ ಕುಸಿಯದಂತೆ ತಡೆದು ಮತ್ತೆ ಅದರ ಕಕ್ಷೆಯಲ್ಲಿಟ್ಟ ರೂಪ. ಅದೇ ವರಾಹಾವತಾರ.

👉"ವರೇಣ್ಯಂ" ಎಂಬುದು ಬರೆಯುವಾಗ ಮಾತ್ರ ಇರುವ ಶಬ್ದ. ಜಪದಲ್ಲಿ ಅದನ್ನು ಬಿಡಿಸಿಯೇ ಹೇಳುತ್ತೇವೆ. ಇಲ್ಲದಿದ್ದರೆ ಗಾಯತ್ರಿ ಮಂತ್ರ 23 ಅಕ್ಷರವಷ್ಟೇ ಆಗುತ್ತದೆ. ಬಿಡಿಸಿ ಹೇಳುವ ಅಕ್ಷರ "ಣ್ಯಂ" ಅದೇ ಜಪದಲ್ಲಿ "ಣಿಯಂ" ಆಗುತ್ತದೆ. ಅದೇ "ವಾಮನ ತ್ರಿವಿಕ್ರಮನಾದಂತೆ".

‘ಣಿಯಂ – ಣಿ+ಯಂ – ಈ ಎರಡು ಅಕ್ಷರಗಳ ಪ್ರತಿಪಾದ್ಯ ದೇವತೆ ತ್ರಿವಿಕ್ರಮ ಮತ್ತು ವಾಮನ. ಆದರೆ ಅವು ಎರಡು ಅವತಾರಗಳಲ್ಲ, ಒಂದೇ ಅವತಾರದ ಎರಡು ಮುಖಗಳು ಎಂದು ತೋರಿಸುವುದಕ್ಕಾಗಿ ‘ಣ್ಯಂ’ ಎಂಬುವ ಒಂದೇ ಅಕ್ಷರ ಬಂದಿದೆ ಎನ್ನಬಹುದು. ಆದರೂ ಚತುರ್ವಿಂಶತಿ ಮೂರ್ತಿಗಳಲ್ಲಿ ಅವು ಭಿನ್ನರೂಪಗಳೂ ಹೌದು ಎನ್ನುವುದಕ್ಕಾಗಿ ‘ಣಿಯಂ’ ಎಂದು ಬಿಡಿಸಿ ಉಚ್ಚಾರ.’ (ತಂತ್ರಸಾರ ಸಂಗ್ರಹ ಪೂಜ್ಯ ಶ್ರೀ  ಬನ್ನಂಜೆ ಗೋವಿಂದಾಚಾರ್ಯರು) 

👉ಭರ್ಗಃ - ನರಸಿಂಹಾವತಾರ-ಶತ್ರುಗಳನ್ನು ಭರ್ಜನೆ ಮಾಡಿದ ಉಗ್ರರೂಪ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ "ಭ" ರತಿ ಜ್ಞಾನರೂಪ. ತಾನು ಜ್ಞಾನ ಸ್ವರೂಪ ಮತ್ತು ಪ್ರಹ್ಲಾದನನ್ನು ಉದ್ಧಾರ ಮಾಡಿದ ರೂಪ ಎಂದು ತೋರಿಸಿದ "ನರಸಿಂಹಾವತಾರ".

👉ದೇವಸ್ಯ - ವಾಮನಾವತಾರ-ದಿವು ವ್ಯವಹಾರೆ. ದೀವ್ಯತಿ ಇತಿ ದೇವಃ ಎಂಬ ವ್ಯಾಕರಣ ಸೂತ್ರದ ಅನುಸಾರ ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ. ಸ್ಪಷ್ಟವಾಗಿ "ವಾಮನಾವತಾರ"ವನ್ನು ಹೇಳುವ ಶಬ್ದ.

👉ಧೀಮಹಿ - ಪರಷುರಾಮಾವತಾರ-'ಮಹಿ' ಅಂದರೆ ಭೂಮಿ. ದಿನು ಪುಷ್ಟೌ. ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪ "ಪರುಷರಾಮಾವತಾರ".

👉ಧಿಯಃ - ರಾಮಾವತಾರ-'ಯಂ' ಅಂದರೆ ವಾಯುಬೀಜ. "ಯಂ" ಅಂದರೆ ಜ್ಞಾನ ಸ್ವರೂಪರಾದ ವಾಯು (ವಾಯುಪುತ್ರ ಹನುಮಂತ). ಅವರಿಗೆ "ದಿನೋತಿ" ಆನಂದವನ್ನು ಕೊಟ್ಟ ರೂಪ "ಧಿಯಃ" ರಾಮರೂಪ. ಅದೇ "ರಾಮಾವತಾರವ"

👉ಯಃ - ಕೃಷ್ಣಾವತಾರ-"ಯ"ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿರತಕ್ಕ ಪೂರ್ಣಜ್ಞಾನ ಸ್ವರೂಪನಾದವ ಕೃಷ್ಣ. ಅದೇ "ಕೃಷ್ಣಾವತಾರ".

👉ನಃ - ಬುದ್ಧಾವತಾರ-ನಃ ಅಂದರೆ ಬುದ್ಧ. ಸರ್ವಂ ಶೂನ್ಯಂ, ಸರ್ವಂ ಕ್ಷಣಿಕಂ. ಏನೂ ಇಲ್ಲ , ಎಲ್ಲವೂ ಕ್ಷಣಿಕ ಅಂತ ಹೇಳಿ ನ ನ ಅಂತ ಉಪದೇಶ ಮಾಡಿದವ ಬುದ್ಧ. ಬುದ್ಧ ನಮ್ಮ ಹತ್ತಿರದ ಅವತಾರ, ಆದರೂ ಅದು ಮೋಹಾವತಾರ. ಆದ್ದರಿಂದ ನಃ - ಬುದ್ಧಾವತಾರದ ಉಪಾಸನೆ ಮಾಡಬೇಡಿ ಅಂತ ಹೇಳಿತು ಭಾಗವತ. ಇದು "ಬುದ್ಧಾವತಾರ" (ಇದನ್ನೇ ಮೋಹಿನಿ ಅವತಾರವೆಂದು ಸಂಪ್ರದಾಯ ನಂಬಿದೆ).

👉ಪ್ರಚೋದಯಾತ್ - ಕಲ್ಕ್ಯಾವತಾರ-ಯಃ ಧರ್ಮಂ ಪ್ರಚೋದಯತಿ. ಕಲಿಯುಗದ ಅಂತ್ಯದಲ್ಲಿ ಧರ್ಮದ ಪ್ರಚೋದನೆಗಾಗಿ ಬಂದವ ಕಲ್ಕಿ. ಇದು "ಕಲ್ಕ್ಯಾವತಾರ".

     ಹೀಗೆ ಗಾಯತ್ರಿಯ ಹತ್ತು ಶಬ್ದಗಳು ಸ್ಪಷ್ಟವಾಗಿ ಭಗವಂತನ ಹತ್ತು ರೂಪಗಳನ್ನು ಹೇಳುತ್ತವೆ.

ಗಾಯತ್ರಿ ಮಂತ್ರ-ದೇಹದ ನಾಡಿ ಶುದ್ಧಿ-ಇನ್ನು ಜಪದ ಸಂಖ್ಯೆ ಎಷ್ಟು? ಅನ್ನುವುದಕ್ಕೂ ಕರಾರುವಾಕ್ಕಾದ ಗಣಿತ ಇದೆ. ಗಾಯತ್ರಿ ಮಂತ್ರವನ್ನು ದಿನದಲ್ಲಿ ಮೂರು ಕಾಲ (ತ್ರಿಸಂಧ್ಯಾ) ದಲ್ಲಿ ಜಪಿಸುತ್ತಾರೆ. (ಪ್ರಾತಃ, ಮಧ್ಯಾಹ್ನ ಮತ್ತು ಸಾಯಂಕಾಲ)

ಒಂದು ಬಾರಿ ಹೆಚ್ಚೆಂದರೆ 1000 ಗಾಯತ್ರಿ ಮಾಡಬೇಕು. ಆಗ ದಿನಕ್ಕೆ 3000 ಆಯಿತು. ಇದಕ್ಕಿಂತ ಹೆಚ್ಚಿಗೆ ಮಾಡಬಾರದು. ಏಕೆಂದರೆ ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಪ್ರಧಾನ ನಾಡಿಗಳು 72000 (ದ್ವಾ ಸಪ್ತತಿ ಸಹಸ್ರಾಣಿ ಹೃದಯಸ್ಯ ನಾಡ್ಯಃ) ಅದು ನಮ್ಮ ದೇಹದ ಬಲಭಾಗದಲ್ಲಿ 36000, ಎಡಭಾಗದಲ್ಲಿ 36000 ಎಂದು ವಿಭಾಗಿಸಲ್ಪಟ್ಟಿದೆ. ಆದ್ದರಿಂದಲೇ ನಮ್ಮ ಪ್ರಾಚೀನರು ಆದೇಶ ಮಾಡಿದರು ಒಂದು ದಿನದಲ್ಲಿ ನಾವು ಮಾಡತಕ್ಕ ಗಾಯತ್ರಿ ಮಂತ್ರ ಜಪ, ಒಟ್ಟು ಅಕ್ಷರ ಸಂಖ್ಯೆಯಲ್ಲಿ ಈ ಸಂಖ್ಯೆಯನ್ನು (72000) ಮೀರಬಾರದು ಎಂದು. ಆದ್ದರಿಂದ ಗಾಯತ್ರಿಯ ಒಟ್ಟು ಸಂಖ್ಯೆ 24 ಅಕ್ಷರ. 3000ಜಪ ದಿನಕ್ಕೆ =72000 ಅಕ್ಷರ ಜಪವಾಯಿತು. ವೇದದಲ್ಲಿ ಒಂದು ಮಾತಿದೆ-

ವೇದಾಕ್ಷರಾಣಿ ಯಾವಂತಿ ಪಠಿತಾನಿ ದ್ವಿಜಾದಿಭಿಃ।
     ತಾವಂತಿ ಹರಿ ನಾಮಾನಿ  ಪಠಿತಾನಿ ನ ಸಂಶಯಃ।।


ಗಾಯತ್ರಿಯ ಒಂದೊಂದು ಅಕ್ಷರ ಒಂದೊಂದು ಹರಿಯ ನಾಮ ಆದಾಗ ಅದು ನಮ್ಮ ದೇಹದ 72000 ಪ್ರಧಾನ ನಾಡಿಗಳಲ್ಲಿರುವ  ಭಗವಂತನ 72000 ರೂಪಗಳ ಅನುಸಂಧಾನವೂ ಆದಂತಾಯಿತು. ನಮ್ಮ ಗಾಯತ್ರಿ ಜಪದಿಂದ ಉತ್ಪತ್ತಿಯಾದ ತೇಜಸ್ಸು ಆ 72000 ನಾಡಿಗಳ ಶುದ್ಧಿಗೆ ಕಾರಣವಾಗಿ ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ. ಅದು ಶಕ್ತಿ ರೂಪವಾಗಿ ನಮ್ಮಲ್ಲಿ  ಕೆಲಸಮಾಡುತ್ತದೆ. ಆದ್ದರಿಂದಲೇ ನಮ್ಮ ಜಪ ಸಂಖ್ಯೆ 72000 ವನ್ನು ಮೀರಬಾರದು ಎಂದು ನಮ್ಮ ತೀರ್ಥರೂಪರವರು ಹೇಳುತ್ತಿದ್ದರು. ಹಾಗಾದರೆ ಹೆಚ್ಚು ಜಪದಿಂದ ತೇಜಸ್ಸು ಹೆಚ್ಚಾಗುವುದಲ್ಲವೇ ಅಂದರೆ ಹೆಚ್ಚು ವೋಲ್ಟೇಜ್ ಸಪ್ಲೈನಿಂದ ಬಲ್ಬು ಬರ್ನಾದಂತೆ ಎಂದೆನ್ನಬಹುದು.

ಆದ್ದರಿಂದಲೇ ಹಿಂದಿನವರು ಗಾಯತ್ರಿಗೆ ಇಷ್ಟು ಮಹತ್ವ ಕೊಟ್ಟದ್ದು. ಅಣೋರಣೀಯಾನ್ ಮಹತೋಮಹಿಯಾನ್ ಎಂಬ ಉಪನಿಷತ್ತುಗಳ ವಾಕ್ಯವನ್ನು ಇಲ್ಲಿ ಹೀಗೆ ಸಮನ್ವಯ ಮಾಡಬಹುದು. ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು. ಈ ಮೂರು ಪಾದದ ಗಾಯತ್ರಿಯೇ ಬೆಳೆದು ಮೂರು ವರ್ಗದ ಪುರುಷಸೂಕ್ತ ಆಯಿತು. ಮೂರು ವರ್ಗದ ಪುರುಷಸೂಕ್ತ ಬೆಳೆದು ಮೂರು ವೇದಗಳಾದವು. ಆದ್ದರಿಂದಲೇ ಗಾಯತ್ರಿಯನ್ನು "ವೇದಮಾತಾ" ಎಂದು ಕರೆಯುತ್ತಾರೆ.

Importance of Gayathri Mantra

ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ 

ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| 

ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. 

ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ , ಕೃಷ್ಣ….

ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ. ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ… ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ… ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”.

ಧಿಯಃ – ಅಂದರೆ ರಾಮಾವತಾರ

“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”. ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…

ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ

ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.

ಗಾಯತ್ರೀಮಂತ್ರ

ಗಾಯತ್ರಿಯ ಅರ್ಥ :- ಯಃ ನಃ ದಿಯಃ ಪ್ರಚೋದಯಾತ್ - ಯಾವ ಭಗವಂತ ನಮ್ಮೆಲ್ಲರ ಬುದ್ಧಿಗಳನ್ನೂ ಪ್ರೇರಿಸುತ್ತಾನೋ (ಬುದ್ಧಿ ಸ್ಪೂರ್ತಿಯನ್ನು ಕೊಡುತ್ತಾನೋ ) ಅಂಥಾ ಸವಿತುಃ ದೇವಸ್ಯ - ಜಗತ್ ಸೃಷ್ಟ್ಯಾದಿ ಕರ್ತನಾದ್ದರಿಂದ ಸವಿತೃನಾಮಕನಾದ ಭಗವಂತ (ದೇವಸ್ಯ) - ನಾರಾಯಣನ, ತತ್ ವರೇಣ್ಯಂ ಭರ್ಗಃ ಧೀಮಹಿ - ಅಗೋಚರವಾದರೂ ಗುಣಪರಿಪೂರ್ಣವಾದ - ಆದ್ದರಿಂದಲೇ ಸರ್ವರಿಂದಲೂ ಆಶ್ರಯಿಸಲ್ಪಡುವ (ಸರ್ವೋತ್ತಮನಾದ ) ಸಕಲ ಜಗತ್ತನ್ನೂ ಧರಿಸಿರುವುದರಿಂದಲೂ ಅದಕ್ಕಾಗಿ ಎಲ್ಲರ ಹೃದಯದಲ್ಲಿರುವ (ನೆಲೆಸಿರುವ) ಮತ್ತು ಕಡೆಯಲ್ಲಿ ಗಮ್ಯವಾದ (ಪ್ರಾಪ್ಯವಾದ) ಆ ಸ್ವಾಮಿಯ ಪ್ರಕಾಶ (ಭಾ)-ಸುಖ (ರ)-ಜ್ಞಾನ ಸ್ವರೂಪವನ್ನು ನಾವೆಲ್ಲರೂ ಧ್ಯಾನಿಸಬೇಕು. ಎಂಬುದೇ ಗಾಯತ್ರಿಯ ಅರ್ಥ. ಇದನ್ನೇ ಋಗ್ ಭಾಷ್ಯದಲ್ಲಿ ಹೀಗೆ ಹೇಳಿದ್ದಾರೆ.

ಗುಣೈಸ್ತತಃ ಪ್ರವಿಸತಾ ವರಣೀಯೋ ಗುಣೋನ್ನತೇಃ !
ಭಾ-ರತಿ-ಜ್ಞಾನರೂಪತ್ವಾದ್ ಭರ್ಗೋ, ಧ್ಯೇಯೋSಖಿಲೈರ್ಜನೈಃ !
ಪ್ರೇರಕೋSಶೇಷ ಬುದ್ಧೀನಾ೦ ಸ ಸಗಾಯತ್ರ್ಯರ್ಥ ಈರಿತಃ !!
*********


ಗಾಯತ್ರೀಮಂತ್ರದಮಹತ್ವ. 

ಮಕ್ಕಳಿಗೆ ಬ್ರಹ್ಮೋಪದೇಶದಲ್ಲಿ ತಂದೆ ಗುರಸ್ಥಾನದಲ್ಲಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾರೆ. ಗಾಯತ್ರೀ ಮಂತ್ರೋಪದೇಶ ಪಡೆಯದಿದ್ದರೆ ಯಾವದೇ ಪೂಜೆ ಪುನಸ್ಕಾರ , ಕರ್ಮ ಏನೂ ಮಾಡಲು ಅಧಿಕಾರವಿಲ್ಲ ಅದಕ್ಕಾಗಿಯೇ ಮೊದಲು ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡುತ್ತಿದ್ದರು. ಆದರೆ ಈಗ ಬರೀ ಆಡಂಬರಕ್ಕೆ ಮಹತ್ವ , ಕೆಲವರಂತೂ ಮದುವೆ ಮುಂದೆ ಮಾಡಿದರಾಯಿತು ಅನ್ನುವವರು ಇದ್ದಾರೆ. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು.... ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆ ದಿಂದ ದೈಹಿಕ ,ಮಾನಸಿಕ ವಿದ್ಯೆ ಬುದ್ಧಿ ಏಲ್ಲದರಲ್ಲೂ ತೆಜಸ್ಸನ್ನು ಪಡಿತಾರೆ.... ಈ ಪೋಸ್ಟ ಇಷ್ಟವಾದರೆ ಶೇರ ಮಾಡಿ ಕಾಫಿ ಪೇಸ್ಟ ಬೇಡ...

ವಿಶ್ವಾಮಿತ್ರ ಮಹರ್ಷಿ ಗಳೇ ಹೇಳುವಂತೆ 

ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು..

ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ...

ಗಾಯತ್ರ್ಯಾಃ ನ ಪರಂಜಪ್ಯಂ 
ಗಾಯತ್ರ್ಯಾಃ ನ ಪರಂ ತಪಃ l

ಗಾಯತ್ರ್ಯಾಃ ನ ಪರಂ ದ್ಯೇಯಂ 
ಗಾಯತ್ರ್ಯಾಃ ನ ಪರಂ ಹುತಃ ll


#ಅರ್ಥಾತ

ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ ..


#ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು 

ಗಾಯತ್ರೀ ಮಹಾ ಮಂತ್ರ....

ಓಂ ಭೂರ್ಭುವಸ್ಸುವಃ 
ತತ್ಸುವಿತುರ್ವರೇಣ್ಯಂ 
ಭರ್ಗೋ ದೇವಸ್ಯ ಧೀಮಹಿ 
ಧೀಯೋ ಯೋ ನಃ ಪ್ರಚೋದಯಾತ್


ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌

1ತ 2 ತ್ಸ 3 ವಿ 4 ತು 5 ರ್ವ 6 ರೇ 7 ಣಿ 8 ಯಂ 9 ಭ 10 ರ್ಗೋ 11 ದೇ 12 ವ 13 ಸ್ಯ 14 ಧೀ 15 ಮ 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 ದ 24 ಯಾತ್....

ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ ಅಂತ ಬಿಡಿಸಿ ಹೇಳುತ್ತೇನೆ ಕೇಳಿ

ಮೊದಲನೇ ಅಕ್ಷರ ತ ಕಾರ ಇದು ಅಂದಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ..

#ಓಂಏಕದಂತಾಯವಿದ್ಮಹೇವಕ್ರತುಂಡಾಯಧಿಮಹೀತನ್ನೋದಂತೀ_ಪ್ರಚೋದಯಾತ್

ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ

#ಓಂಉಗ್ರನೃಸಿಂಹಾಯವಿದ್ಮಹೇವಜ್ರನಖಾಯ_ಧೀಮಹಿತನ್ನೋನೃಸಿಂಹ_ಪ್ರಚೋದಯಾತ್

ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ

#ಓಂನಾರಾಯಣಾಯವಿದ್ಮಹೇವಾಸುದೇವಾಯ_ಧೀಮಹಿತನ್ನೋವಿಷ್ಣುಃಪ್ರಚೋದಯಾತ್

ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ

#ತತ್ವುರುಷಾಯವಿದ್ಮಹೇಮಹಾದೇವಾಯಧೀಮಹಿತನ್ನೋರುದ್ರಃಪ್ರಚೋದಯಾತ್

ಐದು ಅಕ್ಷರ * ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.

#ದೇವಕಿನಂದಾಯವಿದ್ಮಹೇವಸುದೇವಾಯಧೀಮಹಿತನ್ನೋಕೃಷ್ಣಪ್ರಚೋದಯಾತ್

ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ

#ಓಂವೃಷಭಾನುಜಾಯವಿದ್ಮಹೇಕೃಷ್ಣಪ್ರೀಯಾಯಧೀಮಹಿತನ್ನೋರಾಧಾ_ಪ್ರಚೋದಯಾತ್

ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ.

#ಓಂಮಹಾಲಕ್ಷೀಚವಿದ್ಮಹೇವಿಷ್ಣುಪತ್ನಿಚಧೀಮಹಿತನ್ನೋಲಕ್ಷೀ_ಪ್ರಚೋದಯಾತ್

ಏಂಟು ಅಕ್ಷರ * ಯಂ.* ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ

ಇದು ಅಗ್ನಿ ಗಾಯತ್ರೀ

#ಓಂಮಹಾಜ್ವಾಲಾಯವಿದ್ಮಹೇಅಗ್ನಿಜ್ವಾಲಾಯಧೀಮಹಿತನ್ನೋಅಗ್ನಿ_ಪ್ರಚೋದಯಾತ

ಒಂಬತ್ತು ಅಕ್ಷರ * ಭ *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ

#ಓಂಸಹಸ್ರನೇತ್ರಾಯವಿದ್ಮಹೇವಜ್ರನಖಾಯಧೀಮಹಿತನ್ನೋಇಂದ್ರಃಪ್ರಚೋದಯಾತ್

ಹತ್ತು ಅಕ್ಷರ ರ್ಗೋಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ

#ಓಂಸರಸ್ವತ್ತೈಚವಿದ್ಮಹೇಬ್ರಹ್ಮಪತ್ನಿಚಧೀಮಹಿತನ್ನೋವಾಣಿಪ್ರಚೋದಯಾತ್

ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..

#ಓಂಗಿರಿಜಾಯೈವಿದ್ಮಹೇಶಿವಪ್ರೀಯಾಯೈ__ಧೀಮಹಿತನ್ನೋದುರ್ಗಾಪ್ರಚೋದಯಾತ್

ಹನ್ನೆರಡು ಅಕ್ಷರ * ವ *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ

#ಓಂಅಂಜನಾಸುತಾಯವಿದ್ಮಹೇವಾಯುಪುತ್ರಾಯಧೀಮಹಿತನ್ನೋಆಂಜನೇಯ_ಪ್ರಚೋದಯಾತ್

ಹದಿಮೂರು ಅಕ್ಷರ * ಸ * ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ

#ಓಂಪೃಥ್ವಿದೇವೈವಿದ್ಮಹೇಸಹಸ್ರಮೂರ್ತೈ_ಧೀಮಹೆತನ್ನೋಪೃಥ್ವಿಪ್ರಚೋದಯಾತ್

ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ...

ಇದು ಸೂರ್ಯ ಗಾಯತ್ರೀ

#ಓಂಭಾಸ್ಕರಾಯವಿದ್ಮಹೇದಿವಾಕರಾಯಧೀಮಹಿತನ್ನೋಸೂರ್ಯಃಪ್ರಚೋದಯಾತ್

ಹದಿನೈದು ಅಕ್ಷರ * ಮ* ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ....

#ಓಂದಾಶರಥಾಯವಿದ್ಮಹೇಸೀತಾವಲ್ಲಭಾಯಧೀಮಹಿತನ್ನೋರಾಮಃಪ್ರಚೋದಯಾತ್

ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ

#ಓಂಜನಕನಂದಿನ್ನೈವಿದ್ಮಹೇಭೂಮಿಜಾಯೈಧೀಮಹಿತನ್ನೋಸೀತಾಪ್ರಚೋದಯಾತ್

ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ

#ಓಂಕ್ಷೀರಪುತ್ರಾಯವಿದ್ಮಹೇಅಮೃತತತ್ವಾಯಧೀಮಹಿತನ್ನೋಚಂದ್ರಃಪ್ರಚೋದಯಾತ್

ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ..

#ಓಂಸೂರ್ಯಪುತ್ರಾಯವಿದ್ಮಹೇಮಹಾಕಾಲಾಯಧೀಮಹಿತನ್ನೋಯಮಃ_ಪ್ರಚೋದಯಾತ್

ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ

#ಓಂಚತುರ್ಮುಖಾಯವಿದ್ಮಹೇಹಂಸರೂಢಾಯಧೀಮಹಿತನ್ನೋಬ್ರಹ್ಮಪ್ರಚೋದಯಾತ್

ಇಪ್ಪತ್ತನೇಯ ಅಕ್ಷರ * ನ *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ್ ಗಾಯತ್ರೀ

#ಓಂಜಲಬಿಂಬಾಯವಿದ್ಮಹೇನೀಲಪುರುಷಾಯಧೀಮಹಿತನ್ನೋವರುಣಪ್ರಚೋದಯಾತ್

ಇಪ್ಪತ್ತೊಂದು ಅಕ್ಷರ * ಪ್ರ * ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ

#ಓಂನಾರಾಯಣಾಯವಿದ್ಮಹೇವಾಸುದೇವಾಯಧೀಮಹಿತನ್ನೋನಾರಾಯಣಪ್ರಚೋದಯಾತ್

ಇಪ್ಪತ್ತೇರಡು ಅಕ್ಷರ ಚೋ ಕಾರ

#ಓಂವಾಗೀಶ್ವರಾಯವಿದ್ಮಹೇಹಯಗ್ರೀವಾಯಧೀಮಹಿತನ್ನೋಹಯಗ್ರೀವಃ_ಪ್ರಚೋದಯಾತ್

ಇಪ್ಪತ್ತಮೂರು ಅಕ್ಷರ * ದ * ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ

#ಓಂಪರಮಹಂಸಾಯವಿದ್ಮಹೇಮಹಾಹಂಸಾಯಧೀಮಹಿತನ್ನೋಹಂಸಃಪ್ರಚೋದಯಾತ್

ಇಪ್ಪತ್ತನಾಲ್ಕು ಅಕ್ಷರ * ಯಾತ್* ಕಾರ ತ್ರಿಮೂರ್ತಿಗಳ ಪ್ರಸಾರ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌....

#ಓಂತುಲಸ್ಮೈವಿದ್ಮಹೇವಿಷ್ಣುಪ್ರೀಯಾಯೈ_ಧೀಮಹಿತನ್ನೋಬೃಂದಾ_ಪ್ರಚೋದಯಾತ್

ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ.....

ಇನ್ನು ಸಂದ್ಯಾವಂದನೆ ಸಮಯ

ಸಂಧ್ಯಾವಂದನೆ ಸಮಯ ಮತ್ತು ಮಹತ್ವ.....

ಶ್ಲೋಕ ll ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ l
ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ ll ......

.ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರ ಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭಮಾಡಿ ಸುರ್ಯೋದಯವಾಗುವವರೆಗೆ ಮುಗಿಸುವದು ಉತ್ತಮ ಪರ್ಯಾಯ . ಸಂಧೌಭವಾಸಂಧ್ಯಾ ಎಂಬ ಅವಯವಾರ್ಥದ ಪ್ರಕಾರ ‌ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು * ಸಂಧ್ಯಾ* ಎನಿಸಿಕೊಳ್ಳುವದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು.ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ *ಸತ್ವಗುಣ * ಎನಿಸಿಕೊಳ್ಳುವದು. ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವದರೊಳಗಾಗಿ ಸಂಧ್ಯಾವಂದನೆ ಯನ್ನು ಪುರೈಸುವದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆ ಯನ್ನು ಸತ್ವಗುಣಕಾಲವು ಮುಗಿಯುವದರೊಳಗಾಗಿ ಮುಗಿಸುವದು ಅಧಮ ಪರ್ಯಾಯ..

ಮಧ್ಯಾಹ್ನಿಕ ಸಂಧ್ಯಾಕಾಲ

ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ .ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರ ವೇ ಆಗಲಿ ಶ್ರೇಷ್ಠವಲ್ಲ...

ಸಾಯಂ ಸಾಂಧ್ಯಾಕಾಲ

ಶ್ಲೋಕ ll ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ l

ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾll

ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವದು ಅಧಮ. ಮಧ್ಯಾಹ್ನ ನಾಲ್ಕು ಘಂಟೆ ಯಿಂದ ರಾತ್ರಿ ಎಂಟು ಘಂಟೆಯವರೆಗೆ *ಸಾತ್ವಿಕ ಕಾಲ * ಎನಿಸಿಕೊಳ್ಳುವದು. ನಿರ್ದಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆ ಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತ ವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು. ಸಂಧ್ಯಾಕರ್ಮವನ್ನು ಆಚರಿಸದೆ ಇತರ ಯಾವ ದೇವತಾ ಪೂಜೆಯನ್ನಾಗಲೀ ,ದಾನ, ಧರ್ಮ ,ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.a
********

ಧರ್ಮ ಶಿಕ್ಷಣ 🕉


ಗಾಯತ್ರಿ ಮಂತ್ರದ ಬಗ್ಗೆ ಮಹಾ ಪುರುಷರ ಉವಾಚ

ಭಗವಾನ್ ಶ್ರೀ ಕೃಷ್ಣ: ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಉಪದೇಶಿಸಿದ ಹಲವಾರು ಮಂತ್ರಗಳಲ್ಲಿ 'ಗಾಯತ್ರಿ ಮಂತ್ರ'ವೇ ಶ್ರೇಷ್ಠವೆಂದು ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ವಿಷಕಂಠ: ಲೋಕೋದ್ಧಾರಕನಾದ ಶಿವನು ಕಲಿಯುಗದಲ್ಲಿ 'ಗಾಯತ್ರಿ ಮಂತ್ರ'ದಿಂದಲೇ ಶ್ರೇಷ್ಠವಾದ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತದೆ ಎಂದು ಹೇಳಿದ್ದಾನೆ.

ವಾಲ್ಮೀಕಿ ಋಷಿ: ವಾಲ್ಮೀಕಿಯಿಂದ ರಚಿತವಾದ ಶ್ರೀಮದ್ ರಾಮಾಯಣದಲ್ಲಿ ಇಂದ್ರನು ರಥಾರೋಹಣ ಮಾಡುವ ಪ್ರಥಮದಲ್ಲಿ ಗಾಯತ್ರಿ ಮಂತ್ರವನ್ನು 24 ಮುದ್ರೆಗಳೊಂದಿಗೆ ಜಪಿಸಿ ಸೂರ್ಯನ ತೇಜಸ್ಸನ್ನು ಹೊಂದಿ ತೇಜೋಪುಂಜನಾಗಿ ರಥಾರೋಹಣ ಮಾಡಿದನೆಂದು ಉಲ್ಲೇಖವಿದೆ.

ಋಷಿ ಮುನಿಗಳು *: ಗಾಯತ್ರಿ ಮಂತ್ರದಲ್ಲಿ ಜ್ಞಾನ, ಕರ್ಮ, ಉಪಾಸನೆಗಳು ಅಡಕವಾಗಿದೆ.ನಾಲ್ಕು ವೇದಗಳಲ್ಲಿ ಮಾನವ ಜೀವನೋದ್ಧಾರದ ರಹಸ್ಯಗಳು ಹೇಳಲ್ಪಟ್ಟಿವೆಯೋ ಅವೆಲ್ಲದರ ಪ್ರತೀಕ ಗಾಯತ್ರಿ ಮಂತ್ರವಾಗಿದೆ.ಆದ್ದರಿಂದ ಋಷಿ ಮುನಿಗಳು ಗಾಯತ್ರಿ ಮಂತ್ರವನ್ನು ಮಹಾ ಮಂತ್ರವೆಂದು ಕರೆದಿದ್ದಾರೆ.

ಜನಕ ಮಹರಾಜ: ಗಾಯತ್ರಿ ಮಂತ್ರವನ್ನು ಸಕಲ ಪಾಪಗಳನ್ನು ಸುಟ್ಟು ಭಸ್ಮ ಮಾಡಿ ಪವಿತ್ರಾತ್ಮವನ್ನು ಮಾಡುವ ಮಂತ್ರ ಎಂದಿದ್ದಾನೆ.

ಯತಿಗಳು: ಗಾಯತ್ರಿ ದೇವಿಯನ್ನು ವೇದ ಮಾತೆ, ವರದಾಯಿನಿ ಎಂದು ಹಾಗೂ ಆಯಸ್ಸು, ಸ್ವಾಸ್ಥ್ಯ, ಸಂತಾನ, ಧನ, ಪಶು, ವೈಭವ, ಯಶಸ್ಸು ಮತ್ತು ಇಷ್ಟಾರ್ಥಗಳನ್ನು ಪೂರೈಸುವ ಮಂತ್ರ ಇದಾಗಿಯೆಂದು ಹೇಳಿದ್ದಾರೆ.ಇದೇ ಕಾರಣಕ್ಕೆ ಗಾಯತ್ರಿ ಮಂತ್ರವನ್ನು 'ಗುರು ಮಂತ್ರ' ಎಂದು ಯತಿಗಳು ಅಭಿಪ್ರಾಯ ಪಡುತ್ತಾರೆ.

ಯೋಗ: ವಿದ್ಯೆಯಲ್ಲಿ ಸೂರ್ಯ ನಮಸ್ಕಾರ ಮಾಡುವ ಮೊದಲು ಸೂರ್ಯೋಪಾಸನೆ ಮಂತ್ರವನ್ನು ಉಚ್ಚರಿಸಬೇಕು ಹಾಗೆಯೇ ಪ್ರಾಣಾಯಾಮ ಮಾಡುವ ಪ್ರಥಮದಲ್ಲಿ ಕೂಡ ಗಾಯತ್ರಿ ಮಂತ್ರವನ್ನು ಹೇಳಲಾಗುತ್ತದೆ.

ಮನಸ್ಮೃತಿ: ಮಹರ್ಷಿಗಳು ದೀರ್ಘಕಾಲದ ಗಾಯತ್ರಿ ಮಂತ್ರದ ಪಠಣದಿಂದ ಪ್ರಜ್ಞಾಶಕ್ತಿ, ಇಚ್ಛಾಶಕ್ತಿ, ಅಣಿಮಾದಿ ಅಷ್ಟ ಸಿದ್ಧಿಗಳು ಹಾಗೂ ಬ್ರಹ್ಮ ವರ್ಚಸ್ಸು ಗಳಿಸುತ್ತಾರೆ.

ಉಪನಯನ: ಶ್ರೇಷ್ಠವಾದ ಉಪನಯನದ ಸಂದರ್ಭದಲ್ಲಿ ಆಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶಿಸುತ್ತಾರೆ.ನಂತರ ವಟುವಿಗೆ ವೇದಾಧ್ಯಯನ ಅಧಿಕಾರ ಸಿಗುತ್ತದೆ ಮತ್ತು ಮದುವೆಯಾಗಲು ಅರ್ಹನಾಗುತ್ತಾನೆ.ಗಾಯತ್ರಿ ಮಂತ್ರದ ವಿಸ್ತಾರವೇ ವೇದಗಳು.ವೇದವೆಂದರೆ 'ಬ್ರಹ್ಮ' ಗಾಯತ್ರಿ ಮಂತ್ರೋಪದೇಶವನ್ನು 'ಬ್ರಹ್ಮೋಪದೇಶ' ಎನ್ನುತ್ತಾರೆ.
*******

Sri Vidya 

"#ಗಾಯತ್ರಿ_ಮಹತ್ವ

ಗಾಯತ್ರೀ" ಎನ್ನುವುದು ಒಂದು ಛಂದಸ್ಸಿನ ಹೆಸರು. 
24 ಅಕ್ಷರ ಮೂರು ಪಾದದಿಂದ ಕೂಡಿದ ಮಂತ್ರಕ್ಕೆ ಗಾಯತ್ರೀಮಂತ್ರ ಎಂದು ಹೆಸರು. 
24 ಅಕ್ಷರ ಮೂರು ಪಾದದಿಂದ ಕೂಡಿದ ಗಾಯತ್ರೀಮಂತ್ರಗಳು ಸಹಸ್ರಾರು ಇವೆ. ಪ್ರತೀ ಒಂದು ದೇವರಿಗೆ ಒಂದು ಗಾಯತ್ರೀಮಂತ್ರ ಇರುತ್ತದೆ. ನಾವು ತಿಳಿಯಬೇಕಾದುದು ಸಂಧ್ಯಾವಂದನದಲ್ಲಿ ಮಾಡುವ ಗಾಯತ್ರೀಜಪದ ಮಂತ್ರ.

ಬ್ರಹ್ಮಗಾಯತ್ರೀ ಮತ್ತು ವಿಶ್ವಾಮಿತ್ರಗಾಯತ್ರೀ ಎಂದು ಗಾಯತ್ರೀಮಂತ್ರವು ಎರಡು ವಿಧವಾದದ್ದು‌. 
ಸಂಧ್ಯಾವಂದನಸ್ಥವಾದ ಗಾಯತ್ರೀಮಂತ್ರವು ವಿಶ್ವಾಮಿತ್ರಗಾಯತ್ರೀ ಆಗಿರುತ್ತದೆ. 
ಇದಕ್ಕೆ ವಿಶ್ವಾಮಿತ್ರರು ಋಷಿಗಳು. 
ಬ್ರಹ್ಮಗಾಯತ್ರೀಗೆ ಬ್ರಹ್ಮನೇ ಋಷಿ. ಇದರ ವಿವರಗಳು ವರಾಹಪುರಾಣದಲ್ಲಿ ಹೇಳಿದೆ.

ವಿಶ್ವಾಮಿತ್ರಗಾಯತ್ರೀ

ವಿಶ್ವಾಮಿತ್ರಗಾಯತ್ರಿಯು ಋಗ್ವೇದದ ಮೂರನೆಯ ಮಂಡಲದ, ಆರ್ವತ್ತೊಂಬತ್ತನೆಯ ಸೂಕ್ತದ, ಹತ್ತನೆಯ ಶ್ಲೋಕವಾಗಿರುತ್ತದೆ. (3-69-10).

"ತತ್ ಸವಿತುರ್ವರೇಣ್ಯಂ| ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋ ನ: ಪ್ರಚೋದಯಾತ್||"

ಇದರಲ್ಲಿ ಹತ್ತು ಶಬ್ದಗಳಿವೆ. ಈ ಹತ್ತು ಶಬ್ದಗಳು ಭಗವಂತನ ದಶಾವತಾರವನ್ನು ಸ್ಮರಣೆಗೆ ತರುತ್ತದೆ.

ಈ ಗಾಯತ್ರೀಮಂತ್ರಕ್ಕೆ ಪ್ರಣವಶಬ್ದ (ಓಂಕಾರ), ಮತ್ತು "ಭೂ: ಭುವ: ಸ್ವ:" ಎನ್ನುವ ವ್ಯಾಹೃತಿಯನ್ನು ಸೇರಿಸಿ ಗಾಯತ್ರೀಜಪ ಮಾಡುವುದಾಗಿರುತ್ತದೆ.

ಈ ಗಾಯತ್ರೀಜಪವು ಮೂರು ವಿಧವಾದದ್ದು.

"ಏಕೋಂಕಾರ ಸಂಪುಟಾಚ ಷಡೋಂಕಾರೇತಿ ಸಾ ತ್ರಿಧಾ||" ಎಂದು ಪ್ರಮಾಣವಿರುತ್ತದೆ:-

1. ಏಕೋಂಕಾರ ಗಾಯತ್ರೀ ಜಪ;
2. ಸಂಪುಟೋಂಕಾರ ಗಾಯತ್ರೀ ಜಪ;
3. ಷಡೋಂಕಾರ ಗಾಯತ್ರೀ ಜಪ;

ಎಂದು ಮೂರು ವಿಧ.

ಬ್ರಹ್ಮಚಾರಿಗಳೂ, ಗೃಹಸ್ಥಾಶ್ರಮಿಗಳೂ ಏಕೋಂಕಾರ ಗಾಯತ್ರೀ ಜಪ ಮಾತ್ರವೇ ಮಾಡುವುದಾಗಿರುತ್ತದೆ.

ಸಂಪುಟೋಂಕಾರ ಗಾಯತ್ರೀಜಪ ಮತ್ತು ಷಡೋಂಕಾರ ಗಾಯತ್ರೀಜಪವನ್ನು ಮಾಡಲು ವಾನಪ್ರಸ್ಥರಿಗೆ, ಯತಿಗಳಿಗೆ ಮತ್ತು ಆಶ್ರಮವಾಸಿಗಳಿಗೆ ಮಾತ್ರ ಅಧಿಕಾರವಿರುತ್ತದೆ.

"ಆದ್ಯೋಂಕಾರಾ ಗೃಹಸ್ಥಸ್ಯ ವರ್ಣಿನಶ್ಚನ ಚೇತರೇ| ವಾನಪ್ರಸ್ಥಯತೀನಾಂ ತು ಷಡೋಂಕಾರ ಪ್ರಶಸ್ಯತೇ||".

ಏಕೋಂಕಾರ ಗಾಯತ್ರೀ ಮಂತ್ರ

"ಪೂರ್ವೋಂಕಾರಾ ವ್ಯಾಹೃತಿಯುಗಂತೇ ಚಾ ಪ್ರಣವಾಹಿ ಯಾ| ನೈಕ ಪ್ರಣವ ಗಾಯತ್ರೀ ಕೀರ್ತಿತಾತು ಮನೀಷಿಭಿ:||" (ವ್ಯಾಸಸ್ಮೃತಿ).

"ಓಂ ಭೂರ್ಭುವಸ್ವ:| ತತ್ಸವಿತುರ್ವರೇಣ್ಯಂ| ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋ ನ: ಪ್ರಚೋದಯಾತ್||"

ಇದು ಒಂದೇ ಓಂಕಾರ ಇರುವ ಗಾಯತ್ರೀಮಂತ್ರ. ಈ ಓಂಕಾರವು ಮಂತ್ರದ ಪ್ರಾರಂಭದಲ್ಲಿ ಮಾತ್ರ ಇರುತ್ತದೆ. 
*********

ಸಂಪುಟೋಂಕಾರ ಗಾಯತ್ರೀ ಮಂತ್ರ

"ಓಂಕಾರಂ ಪೂರ್ವಮುಚ್ಚಾರ್ಯ ಭೂರ್ಭುವಸ್ವಸ್ತಥೈವಚ| ಗಾಯತ್ರೀ ಪ್ರಣವಂ ಚಾಂತೇ ಗಾಯತ್ರೀ ಸಂಪುಟಾಸ್ಮೃತಾ||" (ಯೋಗಯಾಜ್ಞವಲ್ಕ್ಯ)

"ಓಂ|| ಭೂರ್ಭುವ:ಸ್ವ:| ತತ್ಸವಿತುರ್ವರೇಣ್ಯಂ| ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋ ನ: ಪ್ರಚೋದಯಾತ್| ಓಂ||"

ಇಲ್ಲಿ ಓಂಕಾರವನ್ನು ಸಂಪುಟಾಕಾರಕ್ಕೆ ಉಪಯೋಗಿಸಿದ ಮಂತ್ರ. ಅಂದರೆ ಓಂಕಾರವು ಮಂತ್ರದ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಇರುತ್ತದೆ. 
*********

ಷಡೋಂಕಾರ ಗಾಯತ್ರೀ ಮಂತ್ರ

"ತಿಸ್ರೋವ್ಯಾಹೃತಯ: ಪೂರ್ವಂ ಪೃಥಗೋಂಕಾರಸಂಯುತಾ:| ಪೂರ್ವಂ ಪುನರ್ವ್ಯಾಹೃತೀನಾಂ ಮಂತ್ರಸ್ಯಾದ್ಯಂತಯೋ ಸ್ತಥಾ||".

ಓಂ| ಓಂ ಭೂ:| ಓಂ ಭುವ:| ಓಂ ಸ್ವ:| ಓಂ ತತ್ಸವಿತುರ್ವರೇಣ್ಯಂ| ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋ ನ: ಪ್ರಚೋದಯಾತ್| ಓಂ||"

ಈ ಗಾಯತ್ರೀಮಂತ್ರದಲ್ಲಿ ಒಟ್ಟು ಆರು (6) ಸಲ ಓಂಕಾರ ಬರುತ್ತದೆ.

ಏಕೋಂಕಾರ ಗಾಯತ್ರೀಮಂತ್ರದ ಸಂಕ್ಷಿಪ್ತ ಅರ್ಥ:-

"ಪರಿಪೂರ್ಣನಾಗಿರುವ, ಪ್ರಾಣಸ್ವರೂಪನೂ, ಸರ್ವತ್ರವ್ಯಾಪ್ತನೂ, ದು:ಖನಾಶಕನೂ, ಸೃಷ್ಟಿಕರ್ತನೂ, ಸುಖಸ್ವರೂಪನೂ, ಸ್ವತಂತ್ರನೂ, ಶ್ರೇಷ್ಠನೂ, ತೇಜಸ್ವಿಯೂ, ಪಾಪನಾಶಕನೂ ಮತ್ತು ದೇವಸ್ವರೂಪನೂ ಆದ ಪರಮಾತ್ಮನನ್ನು/ಭಗವಂತನನ್ನು ನಾನು ಅಂತರಾತ್ಮದಲ್ಲಿ/ಹೃದಯದಲ್ಲಿ ಧಾರಣೆ ಮಾಡುತ್ತೇನೆ. ಪರಮಾತ್ಮನು ನನ್ನ ಬುದ್ಧಿಯನ್ನು ಸನ್ಮಾರ್ಗದೆಡೆಗೆ ಪ್ರೇರೇಪಿಸಲಿ."
*****

🕉️॥ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ॥🕉️


ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.


ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್||


ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.


ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.


ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.


ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು.


ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.


ಕೇಶವ, 

ನಾರಾಯಣ, 

ಮಾಧವ,

ಗೋವಿಂದ,

ವಿಷ್ಣು , 

_ಮಧುಸೂದನ,

_ತ್ರಿವಿಕ್ರಮ, 

_ವಾಮನ,

ಶ್ರೀಧರ, 

_ಹೃಷೀಕೇಶ, 

ಪದ್ಮನಾಭ,

ದಾಮೋದರ,

ಸಂಕರ್ಷಣ, 

ವಾಸುದೇವ,

ಪ್ರದ್ಯುಮ್ನ ,

ಅನಿರುದ್ಧ ,

ಪುರುಷೋತ್ತಮ,

ಅಧೋಕ್ಷಜ,_ 

_ನರಸಿಂಹ, 

ಅಚ್ಯುತ,

ಜನಾರ್ದನ,

ಉಪೇಂದ್ರ,

ಹರಿ ,

ಕೃಷ್ಣ….


ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ. ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ದಶಾವತಾರ.


ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.


ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….


ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು..“ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. 

ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ…


ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ…


ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….


ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”…


ಧಿಯಃ – ಅಂದರೆ ರಾಮಾವತಾರ

“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…


ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”.


ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…


ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ_

_ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.

    ಧಮೋ೯ ರಕ್ಷತಿ ರಕ್ಷಿತ:

         🙏ಸರ್ವೇಜನಾಃ ಸುಖಿನೋಭವತು🙏

***


- ಶ್ರೀ ಗಾಯತ್ರೀ ದೇವಿ 

🎙️ನವರಾತ್ರಿಯು ಅಮ್ಮನ ದ್ವಿತೀಯಾ ಅವತರ 
2ನೇ ದಿನ ಶ್ರೀ ಗಾಯತ್ರೀ ದೇವಿ:

🎙️ ಗಾಯತ್ರಿ ದೇವಿ ಯಾರು...
,🎙️ಗಾಯತ್ರಿ ಮಂತ್ರದಲ್ಲಿ 24 ದೈವಿಕ ಶಕ್ತಿಗಳು
🎙️ಶ್ರೀ ಗಾಯತ್ರಿ ಮಾತಾ ಮಹಾತ್ಯ:
🎙️ ಶ್ರೀ ಗಾಯತ್ರೀ ಮಂತ್ರ
🎙️ ಗಾಯತ್ರಿ ಅಷ್ಟೋತ್ತರ ಶತನಾಮಾವಳಿ
🎙️ಗಾಯತ್ರೀ ಕವಚಂ
🎙️ ಶ್ರೀಗಾಯತ್ರೀ ಸಹಸ್ರನಾಮ ಸ್ತೋತ್ರಂ ದೇವೀ ಭಾಗವತಾಂತರ್ಗತಂ 
🎙️ ಗಾಯತ್ರ್ಯಷ್ಟೋತ್ತರ ಶತ ನಾಮ ಸ್ತೋತ್ರಂ
🎙️ಶ್ರೀ ಗಾಯತ್ರೀ ಅಷ್ಟೋತ್ತರ ಶತನಾಮಾವಳಿಃ

“ ಮುಕ್ತ ವದ್ರುಮಾ ಹೇಮಣಿಲಾ ಧವಲಚ್ಚಾಯೈ ಮುಖೈಸ್ತ್ರಿ ಕ್ಷ್ಣೈಃ ಯುಕಮಿಂದು ನಿಬಾದರತ್ನ ಮಕುಟಂ ತತ್ತ್ವಾರ್ಥ ವರ್ಣಾತ್ಮಿಕಾಂ ಗಾಯತ್ರಿಂ ವರದಭಯಂಕುಶಕಶ್ಶುಭ್ರಂ ಕಪಾಲಂ ಗದಾಂ ಶಂಖಮದಾ ಚಕ್ರಮಧರಾ🙏🙏

ಗಾಯತ್ರಿ ದೇವಿಯು ಎಲ್ಲಾ ವೇದಗಳ ಮೂರ್ತರೂಪವಾಗಿದೆ. ಎಲ್ಲಾ ಮಂತ್ರಗಳ ಮೂಲ ತಾಯಿ. ಶಂಖಂ, ಚಕ್ರ, ಗದಾ ಮತ್ತು ಅಂಕುಶವನ್ನು ಧರಿಸಿ ಮುಕ್ತ, ವಿದ್ರುಮ, ಹೇಮ, ನೀಲ ಮತ್ತು ಧವಳ ವರ್ಣಗಳ ಐದು ಮುಖಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಆದಿ ಶಂಕರರು ಗಾಯತ್ರಿ ದೇವಿಯನ್ನು ಅನಂತ ಶಕ್ತಿಯ ರೂಪವಾಗಿ ಪೂಜಿಸಿದರು. ಭಕ್ತರು ಬೆಳಿಗ್ಗೆ ಗಾಯತ್ರಿ, ಮಧ್ಯಾಹ್ನ ಸಾವಿತ್ರಿ ಮತ್ತು ಸಂಜೆ ಸರಸ್ವತಿ ಎಂದು ಪೂಜಿಸುತ್ತಾರೆ. ಮುಖದಲ್ಲಿ ಅಗ್ನಿ, ತಲೆಯಲ್ಲಿ ಬ್ರಹ್ಮ, ಹೃದಯದಲ್ಲಿ ವಿಘ್ನ ಮತ್ತು ಹಣೆಯಲ್ಲಿ ರುದ್ರ ಎಂದು ಪುರಾಣಗಳು ಹೇಳುತ್ತವೆ. ಅವಳನ್ನು ಧ್ಯಾನಿಸಿದರೆ ಅನಂತ ಮಾಯಾಶಕ್ತಿ ಸಿಗುತ್ತದೆ. ಎಲ್ಲಾ ತೀವ್ರ ಅಡಚಣೆಗಳು ಶಾಂತವಾಗುತ್ತವೆ. ಬ್ರಹ್ಮ ಜ್ಞಾನ ಪ್ರಾಪ್ತಿಯಾಗುತ್ತದೆ ಗಾಯತ್ರಿ ಉಪಾಸನೆ ಮಾಡುವುದರಿಂದ ಮನಸ್ಸು ಉಜ್ವಲವಾಗುತ್ತದೆ. ಗಾಯತ್ರಿ ಮಂತ್ರ ಪಠಣವು ಚತುರ್ವೇದ ಪಾರಾಯಣದ ಫಲಿತಾಂಶವನ್ನು ನೀಡುತ್ತದೆ.
 “ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಲೋ ದೇವಸ್ಯಾಸಾಧಿ ಮಹಿ ಧಿಯೋ ಯೋನಃ ಪ್ರಚೋದಯಾತ್” 🙏🙏
ಎಂಬ ಮಂತ್ರವನ್ನು ಪಠಿಸುತ್ತಾ ಅಮ್ಮನನ್ನು ಧ್ಯಾನಿಸಬೇಕು. ವೇದಾಧ್ಯಯನ ಮಾಡಿದ ಬ್ರಾಹ್ಮಣರನ್ನು ಗಾಯತ್ರಿ ಎಂದು ಪೂಜಿಸಬೇಕು.

🎙️ ಗಾಯತ್ರಿ ದೇವಿ ಯಾರು...

ಗಾಯತ್ರಿ ಮಂತ್ರದಲ್ಲಿರುವ ದೈವಿಕ ಶಕ್ತಿಗಳು...  ಶಕ್ತಿಯುತ ಗಾಯತ್ರಿ ಮಂತ್ರಗಳು....
ತಾಯಿಯನ್ನು ಮೀರಿದ ದೇವರಿಲ್ಲ, ಗಾಯತ್ರಿಯನ್ನು ಮೀರಿದ ದೇವರಿಲ್ಲ... 

ಈ ಸಂದೇಹ ಒಮ್ಮೆ ವಸಿಷ್ಠ ಋಷಿಗೆ ಬಂದಿತ್ತು. ತಕ್ಷಣವೇ ವಿಧಾತನ ಬಳಿಗೆ ಹೋಗಿ ಗಾಯತ್ರಿಯ ತತ್ತ್ವವನ್ನು ವಿವರಿಸಲು ಬೇಡಿಕೊಂಡನು ಮತ್ತು 'ನನ್ನ, ಸ್ಫೂರ್ತಿಯಿಂದ ಯಾವ ಪ್ರಜ್ಞೆಯು ಉಂಟಾಗುತ್ತದೆಯೋ ಅದನ್ನು ಜ್ಞಾನ ಅಥವಾ ವೇದವೆನ್ನಬಹುದು. ಇದನ್ನು ಗಾಯತ್ರಿ ಎಂದು ಕರೆಯಲಾಗುತ್ತದೆ. ನನ್ನಿಂದ ಬೆಂಕಿ. ಅಗ್ನಿಯಿಂದ ವಾಯು, ವಾಯು ಓಂಕಾರ, ಓಂಕಾರ ಹೃತಿ, ಹೃತಿ ವ್ಯಾಹೃತಿ, ವ್ಯಾಹೃತಿ ಗಾಯತ್ರಿ, ಗಾಯತ್ರಿ ಸಾವಿತ್ರಿ, ಸಾವಿತ್ರಿಯಿಂದ ವೇದಗಳು, ವೇದಗಳಲ್ಲಿ ಸಕಲ ಕ್ರಿಯೆಗಳೂ ನಡೆಯುತ್ತವೆ’ ಎಂದು ಬ್ರಹ್ಮ ತಿಳಿಸಿದನು.

,🎙️ಗಾಯತ್ರಿ ಮಂತ್ರದಲ್ಲಿ 24 ದೈವಿಕ ಶಕ್ತಿಗಳು ಅಡಕವಾಗಿವೆ. 24 ಗಾಯತ್ರಿ ಮಂತ್ರದ ದೇವತೆಗಳು ಮತ್ತು ಅವರ ಪ್ರಜ್ಞೆಯ ಶಕ್ತಿಗಳು:

🔮1. ಗಣೇಶ: ಯಶಸ್ಸಿನ ಶಕ್ತಿಯ ಅಧಿಪತಿ. ವಿನಾಯಕನು ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುತ್ತಾನೆ.
 
🛑2. ನೃಸಿಂಹ ಸ್ವಾಮಿ: ಅವನು ಪರಾಕ್ರಮದ ಅಧಿಪತಿ, ಪರಾಕ್ರಮ, ಪರಾಕ್ರಮ ಮತ್ತು ವೀರ ವಿಜಯಗಳನ್ನು ಕೊಡುವವನು.
 
🔮3. ವಿಷ್ಣು ಮೂರ್ತಿ: ಸರ್ವೋಚ್ಚ ಆಡಳಿತಗಾರನಾದ ವಿಷ್ಣುವು ಎಲ್ಲಾ ಜೀವಿಗಳ ರಕ್ಷಕ.
 
🛑4. ಈಶ್ವರ:
ಸಕಲ ಜೀವರಾಶಿಗಳಿಗೂ ಸರ್ವವಿಧ ಕಲ್ಯಾಣ ಶಕ್ತಿಗಳನ್ನು ದಯಪಾಲಿಸುವ ದಯಾಮಯನಾಗಿದ್ದಾನೆ.
 
🔮5. ಶ್ರೀಕೃಷ್ಣ:
ಯೋಗದ ಪರಮ ಶಕ್ತಿಯಾಗಿರುವ ಶ್ರೀಕೃಷ್ಣನು ಜೀವಿಗಳಿಗೆ ಕರ್ಮಯೋಗ ಆತ್ಮನಿಷ್ಠೆ, ವೈರಾಗ್ಯ, ಜ್ಞಾನ ಮತ್ತು ಸೌಂದರ್ಯವನ್ನು ದಯಪಾಲಿಸುತ್ತಾನೆ.
 
🛑6. ರಾಧಾ ದೇವಿ:
ಪ್ರೇಮ ಶಕ್ತಿಯ ಮಠಾಧೀಶಳಾದ ಆಕೆ ಭಕ್ತರಲ್ಲಿ ನಿಜವಾದ ಪ್ರೀತಿಯನ್ನು ತುಂಬಿ ಅಸೂಯೆ ಭಾವನೆಗಳಿಂದ ದೂರವಿಡುತ್ತಾಳೆ.
 
🔮7. ಲಕ್ಷ್ಮಿ ದೇವಿ:
ಧನ ಅದ್ಭುತ ಶಕ್ತಿಗಳ ಅಧಿಪತಿ. ಇಡೀ ಜಗತ್ತಿಗೆ ಸಂಪತ್ತು, ಸಂಪತ್ತು, ಸ್ಥಾನ, ಕೀರ್ತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ.
 
🛑8. ಅಗ್ನಿ ದೇವರು: ಅವನು ತೇಜೋಶಕ್ತಿಯ ಅಧಿಪತಿ ಮತ್ತು ಪ್ರಕಾಶ, ಶಕ್ತಿ ಮತ್ತು ತೇಜಸ್ಸಿನ ಶಕ್ತಿಯನ್ನು ದಯಪಾಲಿಸುತ್ತಾನೆ.
 
🔮9. ಮಹೇಂದ್ರ: ರಕ್ಷಾಶಕ್ತಿಗಿಂತ ಶ್ರೇಷ್ಠ, ರೋಗಗಳು, ದ್ವೇಷ, ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ.
 
🛑10. ಸರಸ್ವತಿ:
ಶೈಕ್ಷಣಿಕ ಪೂರೈಕೆದಾರ. ಇದು ಜ್ಞಾನ, ಬುದ್ಧಿವಂತಿಕೆ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತದೆ.
 
🔮11. ದುರ್ಗಾ ದೇವಿ:
ದಮನ ಶಕ್ತಿಯ ಅಧಿಪತಿ. ಇದು ಎಲ್ಲಾ ದುಃಖಗಳನ್ನು ನಿವಾರಿಸುತ್ತದೆ ಮತ್ತು ಶತ್ರುಗಳ ಹಿಡಿತದಿಂದ ರಕ್ಷಿಸುವಾಗ ಎಲ್ಲಾ ಸಂಪತ್ತನ್ನು ನೀಡುತ್ತದೆ.
 
🛑12. ಆಂಜನೇಯು: ಹನುಮಂತ ನಿಷ್ಠಾಶಕ್ತಿಯ ಸಹಾಯಕ. ಅವನು ತನ್ನ ಭಕ್ತರಿಗೆ ಭಕ್ತಿ, ನಿಷ್ಠೆ, ಕರ್ತವ್ಯ ಮತ್ತು ಬ್ರಹ್ಮಚರ್ಯವನ್ನು ನೀಡುತ್ತಾನೆ.
 
🔮13. ಭೂದೇವಿ: ಧಾರಣಾಶಕ್ತಿ ದೇವತೆ. ಇದು ಎಲ್ಲಾ ಜೀವಿಗಳಿಗೆ ಕ್ಷಮೆ, ಧೈರ್ಯ, ದೃಢತೆ ಮತ್ತು ನಿರಂತರತೆಯನ್ನು ನೀಡುತ್ತದೆ.
 
🛑14. ಭಗವಾನ್ ಸೂರ್ಯ: ಜೀವ ಶಕ್ತಿಯ ಅಧಿಪತಿ. ಅವನು ಆರೋಗ್ಯ, ದೀರ್ಘಾಯುಷ್ಯ, ಚೈತನ್ಯ, ಅಭಿವೃದ್ಧಿ ಮತ್ತು ತೇಜಸ್ಸನ್ನು ನೀಡುತ್ತಾನೆ.
 
🔮15. ಶ್ರೀರಾಮ:
 ಇದು ಸದ್ಗುಣ, ಸದ್ಗುಣ, ಸೌಮ್ಯತೆ, ಸ್ನೇಹ ಮತ್ತು ಶೌರ್ಯದಂತಹ ಗುಣಗಳ ಸಂಕೇತವಾಗಿದೆ. ಅವರು ಸಭ್ಯತೆಯ ಪ್ರತಿರೂಪ.
 
🛑16. ಸೀತಾ ದೇವಿ: ತಪಸ್ಸಿನ ದೇವತೆ. ಭಕ್ತರನ್ನು ಅನನ್ಯ ಭಾವನೆಗಳಿಂದ ತಪೋನಿಷ್ಠರನ್ನಾಗಿ ಮಾಡಿ ಅವರನ್ನು ಆಧ್ಯಾತ್ಮಿಕತೆಯ ಹಾದಿಗೆ ಪ್ರೇರೇಪಿಸುತ್ತಾಳೆ.
 
🔮17. ಚಂದ್ರ:
ಶಾಂತಿಯ ಶಕ್ತಿಯ ಶ್ರೇಷ್ಠತೆ. ಅವನು ಚಿಂತೆ, ದುಃಖ, ಕ್ರೋಧ, ಕಾಮ ಮತ್ತು ಲೋಭಗಳಂತಹ ಮಾನಸಿಕ ಅಸ್ವಸ್ಥತೆಗಳನ್ನು ನಿಗ್ರಹಿಸಿ ಶಾಂತಿಯನ್ನು ದಯಪಾಲಿಸುತ್ತಾನೆ.
 
🛑18. ಯಮ: ಸಮಯ ಶಕ್ತಿ. ಮೃತ್ಯುಭೀತಿಯಿಲ್ಲದೆ ಸಮಸ್ತ ಜನರನ್ನು ರಕ್ಷಿಸುವವನು.
 
🔮19. ಬ್ರಹ್ಮ:
ಎಲ್ಲಾ ಸೃಷ್ಟಿಯ ಶ್ರೇಷ್ಠತೆ.
 
🛑20. ವರುಣ: ಇಂದ್ರಿಯತೆ, ಮೃದುತ್ವ, ದಯೆ, ಆನಂದ ಮತ್ತು ಸಂತೋಷವನ್ನು ನೀಡುತ್ತದೆ.
 
🔮21. ನಾರಾಯಣ: ಆದರ್ಶ ಶಕ್ತಿಯ ಶ್ರೇಷ್ಠತೆ. ಅವನು ಶುದ್ಧತೆಯನ್ನು ದಯಪಾಲಿಸುತ್ತಾನೆ.
 
🛑22. ಹಯಗ್ರೀವ: ಸಹಿಷ್ಣುತೆಯ ಶ್ರೇಷ್ಠತೆ. ಉತ್ಸಾಹ ಮತ್ತು ಸಾಹಸವನ್ನು ನೀಡುತ್ತದೆ.
 
🔮23. ಹಂಸ:
ವಿವೇಕ ಅಧಿಕಾರದ ಅಧಿಪತಿ. ಹಂಸ ಕ್ಷೀರನಿರವಿವೇಕ ಜಗತ್ ಪ್ರಸಿದ್ಧಃ ।
 
🛑24. ತುಳಸಿ ಮಾತಾ: ಸೇವೆಯ ದೇವತೆ. ಮನಸ್ಸಿನ ಶಾಂತಿ ಮತ್ತು ದುಃಖ ಪರಿಹಾರದಂತಹ ಫಲಿತಾಂಶಗಳನ್ನು ನೀಡುತ್ತದೆ.
 
🎙️ಶ್ರೀ ಗಾಯತ್ರಿ ಮಾತಾ ಮಹಾತ್ಯ:

ವಾಲ್ಮೀಕಿಯ ರಾಮಾಯಣವು ಗಾಯತ್ರಿ ಮಂತ್ರವನ್ನು ಆಧರಿಸಿದೆ. ಈ ಮಹಾಕಾವ್ಯವನ್ನು ಗಾಯತ್ರಿ ಮಹಾಮಂತ್ರದ ವ್ಯಾಖ್ಯಾನದ ರೂಪದಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ.
ಓಂ ಭೂರ್ಭುವಃ ಸ್ವಾಃ ಓಂತಾತ ತ್ಸವಿತುರ್ವರೇಣ್ಯಮ್
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ॥🙏🙏
ಇದು ಗಾಯತ್ರಿಯ ಮೂಲ ಮಂತ್ರ. ಗಾಯತ್ರಿಯನ್ನು ಮೀರಿದ ಮಂತ್ರವಿಲ್ಲ. ತಾಯಿಯನ್ನು ಮೀರಿದ ದೇವರಿಲ್ಲ.
 
ತ್ರಿಕಾಲದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ತುಂಬಾ ಪ್ರಯೋಜನಕಾರಿ. ಈ ಮಂತ್ರವು ಆರೋಗ್ಯ, ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಪಡೆಯಲು ಉಪಯುಕ್ತವಾಗಿದೆ ಎಂದು ನಮ್ಮ ಪ್ರಾಚೀನ ಋಷಿಗಳು ಹೇಳುತ್ತಾರೆ. ಇಂತಹ ಗಾಯತ್ರಿ ಮಂತ್ರಕ್ಕಿಂತ ಮಿಗಿಲಾದ ಮಂತ್ರ ಮತ್ತೊಂದಿಲ್ಲ, ಗಾಯತ್ರಿದೇವಿಗಿಂತ ಮಿಗಿಲಾದ ದೇವರಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಆತ್ಮ ಶಕ್ತಿಯನ್ನು ದಯಪಾಲಿಸಲು ಅನೇಕ ಮಂತ್ರಗಳಿದ್ದರೂ, ಗಾಯತ್ರಿ ಮಂತ್ರವು ಎಲ್ಲಕ್ಕಿಂತ ಉತ್ತಮವಾಗಿದೆ. ನಾಲ್ಕು ವೇದಗಳಲ್ಲಿ ಗಾಯತ್ರಿಗೆ ಸಮಾನವಾದ ಮಂತ್ರವಿಲ್ಲ ಎಂದು ವಿಶ್ವಾಮಿತ್ರರು ಹೇಳುತ್ತಾರೆ. ಗಾಯತ್ರಿ ಮಂತ್ರವನ್ನು ಮೂರು ಬಾರಿ ಹತ್ತು ಬಾರಿ ಪಠಿಸುತ್ತಾ, ಪ್ರತಿ ಬಾರಿಯೂ ಧ್ಯಾನ ಮಾಡಲು ಮತ್ತು ಗಾಯತ್ರಿಯನ್ನು ಪ್ರಾರ್ಥಿಸಲು ಸಾಧ್ಯವಾಗದವರು ತುಂಬಾ ಒಳ್ಳೆಯದು. ಈ ಮಂತ್ರವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಮತ್ತು ಪಾದಗಳ ಮೇಲೆ ಪಾದರಕ್ಷೆಗಳನ್ನು ಬಿಟ್ಟು ಜಪಿಸಬಹುದು. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತವಾಗುತ್ತದೆ. ಗಾಯತ್ರಿ ಮಂತ್ರದ ಜೊತೆಗೆ, ಪ್ರತಿಯೊಬ್ಬರೂ 'ಓಂ ನಮೋ ಗಾಯತ್ರಿ ಮಾತ್ರೆ' ಎಂದು ಸಾಧ್ಯವಾದಷ್ಟು ಬಾರಿ ಪಠಿಸುವುದರಿಂದ ಖಂಡಿತವಾಗಿಯೂ ಉತ್ತಮ ಫಲಿತಾಂಶಗಳು ಸಿಗುತ್ತವೆ. ಶ್ರೀ ಗಾಯತ್ರಿ ಮಾತೆಯ ಕೃಪೆಗೆ ಪಾತ್ರರಾಗಬೇಕು.

ಬ್ರಾಹ್ಮೀ ಮುಹೂರ್ತದಲ್ಲಿ ನಿಸರ್ಗದಲ್ಲಿ ಪ್ರಜ್ಞೆಯು ಹರಿಯುತ್ತಿರುವಾಗ ಶುದ್ಧ ನದಿಯ ಅಲೆಗಳು ನೋವಿನಂತೆ ಅಲೆಯುತ್ತಿರುವಾಗ ಮಹಾಕಾಂತಿಯನ್ನು ಹೊಂದಿದ್ದ ಮುನಿಸತ್ತು ಕಂಠದಿಂದ ಹೊರಹೊಮ್ಮಿದ ಸುಸ್ವರ ಮಂತ್ರಪರಿ ಎಂಬ ಅದ್ಭುತ ಚಂದ್ರ ತರಂಗ ಗಾಯತ್ರಿ ಮಂತ್ರ. ಸೃಷ್ಟಿಯ ಉತ್ಪಾದನೆ, ನಡವಳಿಕೆ ಮತ್ತು ಪೋಷಣೆಯನ್ನು ನಿರ್ದೇಶಿಸುವ ಅದ್ಭುತ ಚಂದ್ರ ತರಂಗ ಗಾಯತ್ರಿ ಮಂತ್ರವಾಗಿದೆ. ಆ ರಿಷಿ ಸತ್ತಾಮ ಬೇರೆ ಯಾರೂ ಅಲ್ಲ. ವಿಶ್ವಾಮಿತ್ರ ಮಹರ್ಷಿಯೇ ಸೃಷ್ಟಿಯನ್ನು ಸೃಷ್ಟಿಸಿದ ಶ್ರೀಮಂತ. ಆ ಮಹರ್ಷಿಯ ತಪಸ್ಸಿನಿಂದ ಬಂದ ಮಂತ್ರವಿದು.

🎙️ಗಾಯತ್ರಿ ಮಂತ್ರಗಳು:

ಸಹಸ್ರ ಪರಮಾಂ ದೇವೀಂ ಶತಮಧ್ಯಂ ದಳವರಮ್
ಸಹಸ್ರ ನೇತ್ರಲಾ ಗಾಯತ್ರಿಂ ಶರಣ ಮಹಾಂ ಪ್ರಪದ್ಯೇ
'ನ ಗಾಯತ್ರ್ಯ ನರಂ ಮಂತ್ರ ನ ಮಾತುಃ ಪರ ದೈವತಮ್'🙏🙏

ಗಾಯತ್ರಿ ಮಂತ್ರವು ಎಲ್ಲಾ ಮಂತ್ರಗಳಿಗಿಂತ ಉತ್ತಮವಾಗಿದೆ. ತಾಯಿಯನ್ನು ಮೀರಿದ ದೇವರಿಲ್ಲ, ಗಾಯತ್ರಿಯನ್ನು ಮೀರಿದ ದೇವರಿಲ್ಲ. 'ಗಾಯನ್ ತ್ರಾಯತೇ ಇತಿ ಗಾಯತ್ರಿ.' ಶಂಕರರ ಭಾಷ್ಯದ ಪ್ರಕಾರ ಗಾಯತ್ರಿಯು ಪ್ರಾಣ ಉಳಿಸುವವಳು. ಅಂದರೆ ಸ್ವತಂತ್ರ ದೇವಿ, ದೇವತೆಯಲ್ಲ. ಗಾಯತ್ರಿ ಪರಬ್ರಹ್ಮ ಪರಮಾತ್ಮನ ಸಕ್ರಿಯ ಭಾಗವಾಗಿದೆ. ಬ್ರಹ್ಮವೇ ಗಾಯತ್ರಿ. ಶತಪಥ ಬ್ರಾಹ್ಮಣವು ಗಾಯತ್ರಿಯನ್ನು ಬ್ರಹ್ಮವೆಂದು ಹೇಳುತ್ತದೆ. ಶ್ರೀ ಗಾಯತ್ರಿ ಮಂತ್ರದ 24 ಅಕ್ಷರಗಳು ಶಿವನು ಬ್ರಹ್ಮಾನಂದದಲ್ಲಿ ಮಾಡಿದ 24 ಶಬ್ದಗಳಾಗಿವೆ. ಈ 24 ಅಕ್ಷರಗಳು 24 ದೈವಿಕ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಅವರಿಗೆ 24 ಹೆಸರುಗಳಿವೆ. ಇವುಗಳಲ್ಲಿ 12 ವೈದಿಕ ಮಾರ್ಗಗಳು ಮತ್ತು 12 ತಾಂತ್ರಿಕ ಮಾರ್ಗಗಳು. ಈ 24 ಅಕ್ಷರಗಳು ನೆಲೆಸಿದ್ದರೆ, 24 ದೇವತೆಗಳನ್ನು ಆಯಾ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಗಾಯತ್ರಿ ಮಂತ್ರವನ್ನು ಸದಾ ಭಕ್ತಿಯಿಂದ ಪಠಿಸುವವರನ್ನು ಆ 24 ಶಕ್ತಿಗಳು ರಕ್ಷಿಸುತ್ತವೆ.

🎙️ ಗಾಯತ್ರಿ ಅಷ್ಟೋತ್ತರ ಶತ ನಾಮಾವಳಿ

ಓಂ ತರುಣಾದಿತ್ಯ ಸಂಕಾಶಾಯೈ ನಮಃ
ಓಂ ಸಹಸ್ರ ನಯನೋಜ್ಜ್ವಲಾಯೈ ನಮಃ
ಓಂ ವಿಚಿತ್ರ ಮಾಲ್ಯಾಭರಣಾಯೈ ನಮಃ
ಓಂ ತುಹಿನಾಚಲ ವಾಸಿನ್ಯೈ ನಮಃ
ಓಂ ವರದಾಭಯ ಹಸ್ತಾಬ್ಜಾಯೈ ನಮಃ
ಓಂ ರೇವಾತೀರ ನಿವಾಸಿನ್ಯೈ ನಮಃ
ಓಂ ಪ್ರಣಿತ್ಯಯ ವಿಶೇಷಜ್ಞಾಯೈ ನಮಃ
ಓಂ ಯಂತ್ರಾಕೃತ ವಿರಾಜಿತಾಯೈ ನಮಃ
ಓಂ ಭದ್ರಪಾದಪ್ರಿಯಾಯೈ ನಮಃ
ಓಂ ಗೋವಿಂದ ಪದಗಾಮಿನ್ಯೈ ನಮಃ (10)

ಓಂ ದೇವರ್ಷಿಗಣ ಸಂಸ್ತುತ್ಯಾಯೈ ನಮಃ
ಓಂ ವನಮಾಲಾ ವಿಭೂಷಿತಾಯೈ ನಮಃ
ಓಂ ಸ್ಯಂದನೋತ್ತಮ ಸಂಸ್ಥಾನಾಯೈ ನಮಃ
ಓಂ ಧೀರಜೀಮೂತ ನಿಸ್ವನಾಯೈ ನಮಃ
ಓಂ ಮತ್ತಮಾತಂಗ ಗಮನಾಯೈ ನಮಃ
ಓಂ ಹಿರಣ್ಯಕಮಲಾಸನಾಯೈ ನಮಃ
ಓಂ ಧೀಜನಾಧಾರ ನಿರತಾಯೈ ನಮಃ
ಓಂ ಯೋಗಿನ್ಯೈ ನಮಃ
ಓಂ ಯೋಗಧಾರಿಣ್ಯೈ ನಮಃ
ಓಂ ನಟನಾಟ್ಯೈಕ ನಿರತಾಯೈ ನಮಃ (20)

ಓಂ ಪ್ರಣವಾದ್ಯಕ್ಷರಾತ್ಮಿಕಾಯೈ ನಮಃ
ಓಂ ಚೋರಚಾರಕ್ರಿಯಾಸಕ್ತಾಯೈ ನಮಃ
ಓಂ ದಾರಿದ್ರ್ಯಚ್ಛೇದಕಾರಿಣ್ಯೈ ನಮಃ
ಓಂ ಯಾದವೇಂದ್ರ ಕುಲೋದ್ಭೂತಾಯೈ ನಮಃ
ಓಂ ತುರೀಯಪಥಗಾಮಿನ್ಯೈ ನಮಃ
ಓಂ ಗಾಯತ್ರ್ಯೈ ನಮಃ
ಓಂ ಗೋಮತ್ಯೈ ನಮಃ
ಓಂ ಗಂಗಾಯೈ ನಮಃ
ಓಂ ಗೌತಮ್ಯೈ ನಮಃ
ಓಂ ಗರುಡಾಸನಾಯೈ ನಮಃ (30)

ಓಂ ಗೇಯಗಾನಪ್ರಿಯಾಯೈ ನಮಃ
ಓಂ ಗೌರ್ಯೈ ನಮಃ
ಓಂ ಗೋವಿಂದಪದ ಪೂಜಿತಾಯೈ ನಮಃ
ಓಂ ಗಂಧರ್ವ ನಗರಾಕಾರಾಯೈ ನಮಃ
ಓಂ ಗೌರವರ್ಣಾಯೈ ನಮಃ
ಓಂ ಗಣೇಶ್ವರ್ಯೈ ನಮಃ
ಓಂ ಗದಾಶ್ರಯಾಯೈ ನಮಃ
ಓಂ ಗುಣವತ್ಯೈ ನಮಃ
ಓಂ ಗಹ್ವರ್ಯೈ ನಮಃ
ಓಂ ಗಣಪೂಜಿತಾಯೈ ನಮಃ (40)

ಓಂ ಗುಣತ್ರಯ ಸಮಾಯುಕ್ತಾಯೈ ನಮಃ
ಓಂ ಗುಣತ್ರಯ ವಿವರ್ಜಿತಾಯೈ ನಮಃ
ಓಂ ಗುಹಾವಾಸಾಯೈ ನಮಃ
ಓಂ ಗುಣಾಧಾರಾಯೈ ನಮಃ
ಓಂ ಗುಹ್ಯಾಯೈ ನಮಃ
ಓಂ ಗಂಧರ್ವರೂಪಿಣ್ಯೈ ನಮಃ
ಓಂ ಗಾರ್ಗ್ಯ ಪ್ರಿಯಾಯೈ ನಮಃ
ಓಂ ಗುರುಪದಾಯೈ ನಮಃ
ಓಂ ಗುಹ್ಯಲಿಂಗಾಂಗ ಧಾರಿನ್ಯೈ ನಮಃ
ಓಂ ಸಾವಿತ್ರ್ಯೈ ನಮಃ (50)

ಓಂ ಸೂರ್ಯತನಯಾಯೈ ನಮಃ
ಓಂ ಸುಷುಮ್ನಾ ನಾಡಿಭೇದಿನ್ಯೈ ನಮಃ
ಓಂ ಸುಪ್ರಕಾಶಾಯೈ ನಮಃ
ಓಂ ಸುಖಾಸೀನಾಯೈ ನಮಃ
ಓಂ ಸುಮತ್ಯೈ ನಮಃ
ಓಂ ಸುರಪೂಜಿತಾಯೈ ನಮಃ
ಓಂ ಸುಷುಪ್ತ್ಯವಸ್ಥಾಯೈ ನಮಃ
ಓಂ ಸುದತ್ಯೈ ನಮಃ
ಓಂ ಸುಂದರ್ಯೈ ನಮಃ
ಓಂ ಸಾಗರಾಂಬರಾಯೈ ನಮಃ (60)

ಓಂ ಸುಧಾಂಶು ಬಿಂಬವದನಾಯೈ ನಮಃ
ಓಂ ಸುಸ್ತನ್ಯೈ ನಮಃ
ಓಂ ಸುವಿಲೋಚನಾಯೈ ನಮಃ
ಓಂ ಸೀತಾಯೈ ನಮಃ
ಓಂ ಸರ್ವಾಶ್ರಯಾಯೈ ನಮಃ
ಓಂ ಸಂಧ್ಯಾಯೈ ನಮಃ
ಓಂ ಸುಫಲಾಯೈ ನಮಃ
ಓಂ ಸುಖದಾಯಿನ್ಯೈ ನಮಃ
ಓಂ ಸುಭ್ರುವೇ ನಮಃ
ಓಂ ಸುನಾಸಾಯೈ ನಮಃ (70)

ಓಂ ಸುಶ್ರೋಣ್ಯೈ ನಮಃ
ಓಂ ಸಂಸಾರಾರ್ಣವತಾರಿಣ್ಯೈ ನಮಃ
ಓಂ ಸಾಮಗಾನ ಪ್ರಿಯಾಯೈ ನಮಃ
ಓಂ ಸಾಧ್ವ್ಯೈ ನಮಃ
ಓಂ ಸರ್ವಾಭರಣ ಪೂಜಿತಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ವಿಮಲಾಕಾರಾಯೈ ನಮಃ
ಓಂ ಮಹೇಂದ್ರ್ಯೈ ನಮಃ
ಓಂ ಮಂತ್ರರೂಪಿಣ್ಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ (80)

ಓಂ ಮಹಾಸಿದ್ಧ್ಯೈ ನಮಃ
ಓಂ ಮಹಾಮಾಯಾಯೈ ನಮಃ
ಓಂ ಮಹೇಶ್ವರ್ಯೈ ನಮಃ
ಓಂ ಮೋಹಿನ್ಯೈ ನಮಃ
ಓಂ ಮಧುಸೂದನ ಚೋದಿತಾಯೈ ನಮಃ
ಓಂ ಮೀನಾಕ್ಷ್ಯೈ ನಮಃ
ಓಂ ಮಧುರಾವಾಸಾಯೈ ನಮಃ
ಓಂ ನಗೇಂದ್ರ ತನಯಾಯೈ ನಮಃ
ಓಂ ಉಮಾಯೈ ನಮಃ
ಓಂ ತ್ರಿವಿಕ್ರಮ ಪದಾಕ್ರಾಂತಾಯೈ ನಮಃ (90)

ಓಂ ತ್ರಿಸ್ವರಾಯೈ ನಮಃ
ಓಂ ತ್ರಿಲೋಚನಾಯೈ ನಮಃ
ಓಂ ಸೂರ್ಯಮಂಡಲ ಮಧ್ಯಸ್ಥಾಯೈ ನಮಃ
ಓಂ ಚಂದ್ರಮಂಡಲ ಸಂಸ್ಥಿತಾಯೈ ನಮಃ
ಓಂ ವಹ್ನಿಮಂಡಲ ಮಧ್ಯಸ್ಥಾಯೈ ನಮಃ
ಓಂ ವಾಯುಮಂಡಲ ಸಂಸ್ಥಿತಾಯೈ ನಮಃ
ಓಂ ವ್ಯೋಮಮಂಡಲ ಮಧ್ಯಸ್ಥಾಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಕ್ರರೂಪಿಣ್ಯೈ ನಮಃ
ಓಂ ಕಾಲಚಕ್ರ ವಿತಾನಸ್ಥಾಯೈ ನಮಃ (100)

ಓಂ ಚಂದ್ರಮಂಡಲ ದರ್ಪಣಾಯೈ ನಮಃ
ಓಂ ಜ್ಯೋತ್ಸ್ನಾತಪಾನುಲಿಪ್ತಾಂಗ್ಯೈ ನಮಃ
ಓಂ ಮಹಾಮಾರುತ ವೀಜಿತಾಯೈ ನಮಃ
ಓಂ ಸರ್ವಮಂತ್ರಾಶ್ರಯಾಯೈ ನಮಃ
ಓಂ ಧೇನವೇ ನಮಃ
ಓಂ ಪಾಪಘ್ನ್ಯೈ ನಮಃ
ಓಂ ಪರಮೇಶ್ವರ್ಯೈ ನಮಃ (108)

🙏🙏ಇತಿ ಶ್ರೀಗಾಯತ್ರ್ಯಷ್ಟೋತ್ತರಶತನಾಮಾವಳಿಃ ಸಂಪೂರ್ಣಾ ।

***
ಗಾಯತ್ರಿ ದೇವಿಯ ಮಹಿಮೆ
  1. ಕ್ಷುದ್ರನಾದ ಮಾನವನನ್ನು ಬ್ರಾಹ್ಮಣನನ್ನಾಗಿ ಮಾಡುವ ಪರಮ ಪವಿತ್ರ ಮಂತ್ರ.
  2. ತಂದೆಯು ಮಗನಿಗೆ ಕೊಡುವ ಅತ್ಯಮೂಲ್ಯ ಬಹುಮಾನ ಆಸ್ತಿಯೇ ಗಾಯತ್ರಿ.
  3. ಗಾಯತ್ರಿ ಮಂತ್ರಕ್ಕೆ ಮಿಗಿಲಾದ ಬೇರೊಂದು ಮಂತ್ರವೇ ಇಲ್ಲ.
  4. ನಿತ್ಯ ಗಾಯತ್ರಿ ಜಪದಿಂದ ಸಮಸ್ತ ವೇದ ಪಾರಾಯಣದ ಫಲಪ್ರಾಪ್ತಿ, ಸಂದೇಹವೇ ಬೇಡಾ!
  5. ನಿತ್ಯ ಗಾಯತ್ರಿ ಜಪದಿಂದ ಸಮಸ್ತ ಎಂಥಹ ಕ್ರೂರ ಘೋರ ಮಹಾಮೃತ್ಯು ರೋಗಗಳನ್ನಾದರೂ ಖಂಡಿತ ಶಮನಗೋಳಿಸಬಹುದು, ಇದರಲ್ಲಿ ಸಂದೇಹವೇ ಬೇಡ.
  6. ಗಾಯತ್ರಿ ಜಪಕ್ಕಿಂತ ಬೇರೊಂದು ಜಪವಿಲ್ಲ; ಗಾಯತ್ರಿ ತಾಯಿಗಿಂತ ಬೇರೊಂದು ದೇವತೆ ಇಲ್ಲ.
  7. ಸಹಸ್ರ ಗಾಯತ್ರಿ ಜಪದಿಂದ ಸಂಪೂರ್ಣ 24000 ರಾಮಾಯಣ ಪಾರಾಯಣ ಫಲಪ್ರಾಪ್ತಿ.
  8. ದೃಷ್ಟಿ, ಭಯ, ಅನಾರೋಗ್ಯ, ಚಿಂತೆ, ಶತ್ರು ಕಾಟ, ಭೂತಪ್ರೇತ ಕಾಟ, ಶ್ರಾದ್ಧ ಭೋಜನ ಧೋಷ, ಇಂತಹ ಲಕ್ಷ ಕೋಟಿ ದೋಷಗಳನ್ನು ಕ್ಷಣಮಾತ್ರದಲ್ಲಿ ಭಸ್ಮಗೊಳಿಸಿ ನಮ್ಮನ್ನು ಪಾವನಗೊಳಿಸುವ ಈ ಮಂತ್ರಕ್ಕೆ ಸರಿಸಾಟಿ ಬೇರೆ ಯಾವ ಜಪವು ಇಲ್ಲ.
  9. ಉಪನಯನದಲ್ಲಿ ಜನಿವಾರ ಧಾರಣೆ, ಮದುವೆಯಲ್ಲಿ ಎರಡನೇ ಜನಿವಾರ ಧಾರಣೆ, ಶ್ರಾದ್ಧದಲ್ಲಿ ಅಡಿಗೆ ಸಂಪ್ರೋಕ್ಷಣೆ, ಮರಣಿಸಿದ ವ್ಯಕ್ತಿಗೆ ಪಂಚಗವ್ಯ ಸ್ನಾನ, ಅಸ್ಥಿಗಳನ್ನು ಶುಚಿಗೊಳಿಸುವಾಗ, ಹೀಗೆ ಎಲ್ಲಿ ಯಾವ ಯಾವ ಸಂದರ್ಭದಲ್ಲಿ ಈ ಮಂತ್ರವನ್ನು ಬಳಸಿದರೂ ಇದಕ್ಕೆ ಮೈಲಿಗೆಯೇ ಇಲ್ಲ.
  10. ಗಾಯತ್ರಿ ಜಪಕ್ಕೆ ಯಾವುದೇ ಕಾಲನಿಯಮವಿಲ್ಲ. ಎಲ್ಲಿ ಯಾವಾಗ ಬೇಕಾದರೂ ಜಪಿಸಬಹುದು.
  11. ಒಂದೆಡೆ ನಾಲ್ಕು ವೇದಗಳು ಮತ್ತೊಂದೆಡೆ ಗಾಯತ್ರಿ ಮಂತ್ರವನ್ನು ತೂಗಿದರೇ ಗಾಯತ್ರಿ ಮಂತ್ರದ ತಕ್ಕಡಿಯೇ ಭಾರವಾಗಿ ಕೆಳಗೆ ಉಳಿಯುತ್ತದೆ. ಅಷ್ಟು ಶಕ್ತಿಶಾಲಿಯಾದದ್ದು ಗಾಯತ್ರಿಯ ಮಂತ್ರ.
  12. ನಿತ್ಯ ಗಾಯತ್ರಿ ಜಪದಿಂದ ಮುಖದಲ್ಲಿ ತೇಜಸ್ಸು, ವರ್ಚಸ್ಸು ವೃದ್ಧಿಸುತ್ತದೆ.
  13. ನಿತ್ಯ ಗಾಯತ್ರಿ ಜಪದಿಂದ ಎಂತಹ ಕ್ರೂರ ಕರ್ಮವನ್ನಾದರೂ ಶಮನಗೊಳಿಸಬಹುದು.
  14. ನಿತ್ಯ ಗಾಯತ್ರಿ ಅನುಷ್ಟಾನ ನಿಮ್ಮ ಬಳಿ ಇದ್ದರೇ ಶ್ರಾದ್ಧ ಮಾಡುವ ದಿನ, ಶ್ರಾದ್ಧ ಸಮಯದಲ್ಲಿ ಲಕ್ಷ ಮೈಲಿಗೆಯಿದ್ದರು ಅದು ಶ್ರಾದ್ಧಕ್ಕೆ ಅಡ್ಡ ಬರದಂತೆ ಗಾಯತ್ರಿ ದೇವಿಯು ರಕ್ಷಿಸುತ್ತಾರೆ.
  15. ಗಾಯತ್ರಿ ಜಪವು ನಿಮ್ಮ ಪಾಲಿಗೆ ಆರೋಗ್ಯ ವಿಮೆ ಇದ್ದಂತೆ.
  16. ಸಾವಿರ ಗಾಯತ್ರಿ ಜಪದಿಂದ ನಿಮ್ಮ ಮೆದುಳಲ್ಲಿ ಸಾವಿರ ಅಣುಬಾಂಬ್ ಸಿಡಿದಷ್ಟು ಸಾತ್ವಿಕ ತರಂಗಗಳು ಮೆದುಳನ್ನು ತುಂಬ ಬುದ್ದಿಶಾಲಿಯನ್ನಾಗಿ ಮಾಡುತ್ತದೆ.
  17. ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನು ಎಲ್ಲ ವೇದ ಮಂತ್ರ ಚಂದಸ್ಸುಗಳಲ್ಲಿ, “ಎಲ್ಲವನ್ನು ಪಾವನಗೊಳಿಸುವ ಗಾಯತ್ರಿ ಚಂದಸ್ಸೆ ನಾನು” ಎಂದಿರುವನು.
  18. ಗಾಯತ್ರಿ ಜಪದಿಂದ ನಾವು ಎಷ್ಟು ಪ್ರಾರಬ್ದ ಕರ್ಮಗಳನ್ನು ಕಳೆದುಕೊಳ್ಳಬಹುದೆಂದರೆ, ಅಷ್ಟು ಕರ್ಮಗಳನ್ನು ಈ ಜನ್ಮದಲ್ಲೆ ನಾವು ಮಾಡಲಾರದಷ್ಟು ಕರ್ಮಗಳು ಗಾಯತ್ರಿ ಜಪದಿಂದ ನಾವು ಕಳೆದುಕೊಳ್ಳಬಹುದು.
  19. ಮಹಾಪಂಡಿತ ವೇದ ವಿದ್ವಾಂಸನಾಗುವುದಕ್ಕಿಂದ ನಿತ್ಯ ಗಾಯತ್ರಿ ಅನುಷ್ಟಾನವಂತನಾಗುವುದು ತುಂಬು ಜನ್ಮದ ಪುಣ್ಯದ ವಿಶೇಷ ಫಲ.
  20. ಗಾಯತ್ರಿಯನ್ನು ಬಿಟ್ಟು ಕೆಟ್ಟವರುಂಟು, ಆದರೇ ಗಾಯತಿ ಅನುಷ್ಟಾನ ಮಾಡಿ ಕೆಟ್ಟಿರುವರು ಯಾರಿಲ್ಲ.
  21. ನಿತ್ಯ ಗಾಯತ್ರಿ ಜಪದಿಂದ ಆ ತಾಯಿ ನಿಮಗೆ ಸನ್ಮರಣವನ್ನು ತಪ್ಪದೆ ಕರುಣಿಸುವಳು, ಇದು ಪರಮ ಸತ್ಯ, ಇದರಲ್ಲಿ ಸಂದೇಹವೇ ಬೇಡ. ಬ್ರಹ್ಮನ ವಾಕ್ಯ ಸುಳ್ಳಾಗಬಾಹುದು ಗಾಯತ್ರಿಯ ಫಲ ಎಂದು ನಿಷ್ಫಲವಾಗುವುದಿಲ್ಲ, ಇದಕ್ಕೆ ಹರಿಹರ ಬ್ರಹ್ಮದೇವರೇ ಸಾಕ್ಷಿ.
  22. ಗಾಯತ್ರಿಗಿಂತಾ ಧನವಿಲ್ಲ, ಗಾಯತ್ರಿಗಿಂತಾ ಜ್ಞಾನವಿಲ್ಲ, ಗಾಯತ್ರಿಗಿಂತಾ ಐಶ್ವರ್ಯವಿಲ್ಲ, ಗಾಯತ್ರಿಗಿಂತಾ ಯಜ್ಞವಿಲ್ಲ, ಗಾಯತ್ರಿಗಿಂತಾ ಆಹುತಿಯಿಲ್ಲ, ಗಾಯತ್ರಿ ಇಲ್ಲದೇ ಮುಕ್ತಿಯೇ ಇಲ್ಲ.
  23. ಹತ್ತು ಗಾಯತ್ರಿಯಿಂದ ಮಹಾಪಾಪನಾಶ, ಶತ ಗಾಯತ್ರಿಯಿಂದ ಈ ಜನ್ಮದ ಪಾಪಗಳೆಲ್ಲ ನಾಶ, ಸಹಸ್ರ ಗಾಯತ್ರಿಯಿಂದ ನೂರಾರು ಜನ್ಮಗಳ ಪಾಪವೆಲ್ಲ ನಾಶ, ಲಕ್ಷ ಗಾಯತ್ರಿಯಿಂದ ಯುಗ ಯುಗ ಪಾಪನಾಶ, ಕೋಟಿ ಗಾಯತ್ರಿ ಮಾಡಿದ್ದೇ ಆದರೆ ಅವನಿಗೆ ಸತ್ತಾಗ ಕರ್ಮವು ಬೇಕಿಲ್ಲ. ಅವನಿಗೆ ಅಪರ-ಸಂಸ್ಕಾರವಿಲ್ಲ. ಪುನರ್ಜನ್ಮವೆಂಬುದು ಇಲ್ಲವೇ ಇಲ್ಲ, ಇದು ಪರಮ ಸತ್ಯ.
  24. ಗಾಯತ್ರಿ ಮಾಡುವವನು ಶ್ರಾದ್ಧಕ್ಕೆ ಬಂದರೆ ಪಿತೃದೇವತೆಗಳು ಕುಣಿದಾಡುತ್ತಾರಂತೆ.
  25. ನಿತ್ಯ ಗಾಯತ್ರಿ ಮಾಡುವವನು ಹಾವು ತನ್ನ ಪೊರೆಯನ್ನು ಕಳಚಿ ಶುಚಿಯಾಗುವಂತೆ, ಮಾನವ ತನ್ನ ಕರ್ಮಬಂಧನದಿಂದ ವಿಮುಕ್ತಿ ಹೊಂದಿ, ಮುಕ್ತಿ ಹೊಂದುತ್ತಾನೆ.
  26. ಮರಣಹೊಂದಿದ ವ್ಯಕ್ತಿಯನ್ನು ದರ್ಭೆಯಿಂದ ಸ್ಪರ್ಶಿಸಿ ಯಾರಾದರು ಬ್ರಾಹ್ಮಣನು ಸಾವಿರ ಗಾಯತ್ರಿ ಜಪಿಸಿದ್ದೆ ಆದರೆ ಮರಣ ಹೊಂದಿದವನಿಗೂ, ಜಪ ಮಾಡಿದವನಿಗೂ ಇಬ್ಬರಿಗೂ ಮುಕ್ತಿ ಶತಸಿದ್ದ.
  27. ಗಾಯತ್ರಿಯು ಎಲ್ಲಾ ಜಪಗಳ ತಾಯಿಯಿದ್ದಂತೆ, ತಾಯಿಗೂ ಮಿಗಿಲು ಲೋಕದಲ್ಲಿ ಯಾರಿಲ್ಲ.
  28. ಗಾಯತ್ರಿ ಅನುಷ್ಟಾನ ಬಿಟ್ಟ ಬ್ರಾಹ್ಮಣನು ಶ್ರಾದ್ಧ ಮಾಡುವಾಗ ಆಹ್ವಾನಿಸಿದರೂ ಅವನ ಐಕ್ಯದೇವತೆಗಳು ಬರುವದಿಲ್ಲವಂತೆ. ಏಕೇಂದರೆ ಅವರು ಕೊಟ್ಟ ಪರವಾನಗಿ ಅವಧಿ ಮುಗಿದಕಾರಣ ಬರುವದಿಲ್ಲವಂತೆ. ಅದರಿಂದ ಗಾಯತ್ರಿಯ ಪರವಾನಗಿ ಅವಧಿ ಮುಗಿಯದಂತೆ ನೋಡಿಕೊಳ್ಳಿ.
  29. ಗಾಯತ್ರಿ ದೇವಿಯ ಅನುಗ್ರಹ ಸಿದ್ದಿಯಾಯಿತೆಂದರೆ ಆ ವ್ಯಕ್ತಿಗೆ ಜಗತ್ತಿನ ಎಲ್ಲಾ ಸುಖ ಭೋಗಗಳು ಕೂಡ ಯಕಶ್ಚಿತ್ ತೃಣಸಮಾನವಾಗುತ್ತದೆ.
  30. ಗಾಯತ್ರಿ ಜಪದಿಂದ ಬರುವ ಅನುಗ್ರಹವು ಯಾರು ಅಪಹರಿಸಲಾಗದ ಜ್ಞಾನ ನಿನ್ನದಾದ ಹಾಗೆ, ಇದರಲ್ಲಿ ಎಳ್ಳಷ್ಟು ಸಂದೇಹವೇ ಬೇಡ.
  31. ಸಾವಿರ ಅಶ್ವಮೇಧ ಯಾಗಗಳಿಗಿಂತ ಶ್ರೇಷ್ಠ, ಸಾವಿರ ಗಾಯತ್ರಿ ಜಪ.
  32. ಗಾಯತ್ರಿಯನ್ನು ವಿಪ್ರನು ತ್ಯಜಿಸಿದರೆ, ಅವನ ಸರ್ವಸ್ವವೆಲ್ಲವು ನಾಶವಾದಂತೆ ಸರಿ. ಮುಕ್ತಿ, ಶಾಂತಿ ಅವನ ಪಾಲಿಗೆ ಕನಸಿನ ಮಾತು ಸಾರಿ.
  33. ನಿತ್ಯ ಗಾಯತ್ರಿ ಅನುಷ್ಟಾನವಂತನಿಗೆ, ಪ್ರೇತಗಳಿಗೆ ಮುಕ್ತಿಕೊಡುವುದು ನೀರು ಕುಡಿದಷ್ಟೆ ಸುಲಭ.
  34. ನಿತ್ಯ ಗಾಯತ್ರಿ ಅನುಷ್ಟಾನವಂತನ ಅಂತ್ಯಕಾಲಕ್ಕೆ ಯಮದೂತರು ಕೂಡ ಆತನನ್ನು ಪಾಶ ಹಾಕಲು ಒಂದು ನಿಮಿಷ ಯೋಚಿಸಿ ಮುಟ್ಟಲು ಭಯಪಡುತ್ತಾರೆ. ಆಗ ಧರ್ಮ ದೇವರ ಯಮಧರ್ಮನೆ ಬಂದು ಈ ಲೋಕದ ಬಂಧ ಬಿಡಿಸಿ ಮುಕ್ತಿಗೆ ಕರೆದುಕೊಂಡು ದಾರಿ ತೋರಿಸುತ್ತಾನಂತೆ.
  35. ಗಾಯತ್ರಿ ಅನುಷ್ಟಾನವು ನಿಮಗೆ ಎಲ್ಲಾ ಕಷ್ಟಗಳಿಗೂ ಬ್ರಹ್ಮಾಸ್ತ್ರವಿದ್ದಂತೆ.
  36. ಗಾಯತ್ರಿ ಅನುಷ್ಟಾನ ಮತ್ತು ರಾಮಬಾಣ ಇವೆರಡು ಎಂದು ಯುಗ ಯುಗಗಳಲ್ಲು ನಿಷ್ಫಲವಾಗುವುದು ಚರಿತ್ರೆಯಲ್ಲೇ ಇಲ್ಲ, ಏಕಂದರೆ ಗಾಯತ್ರಿ ಮಂತ್ರದ ಅನುಷ್ಟಾನಕ್ಕೆ ಹೆಸರಾದ ಶ್ರೇಷ್ಠ ಋಷಿಗಳಾದ ವಿಶ್ವಾಮಿತ್ರ ಮಹರ್ಷಿಗಳೇ ರಾಮನಿಗೂ, ಧನುರ್ ವಿದ್ಯೆ ಬಿಲ್ಲು ವಿದ್ಯೆ ಸಮಸ್ತ ವಿದ್ಯೆಗಳನ್ನು ಕಲಿಸಿದ ಮಹಾ ಗುರುಗಳು ಎಂಬುದು ನಮಗೆಲ್ಲ ತಿಳಿದಿದೆ. ಅದರಿಂದ ಗಾಯತ್ರಿ ಮಂತ್ರದ ಶಕ್ತಿ ರಾಮಬಾಣ ಇವೆರೆಡು ಗುರಿ ತಪ್ಪುವುದೇ ಇಲ್ಲ.
  37. ಯಾರೋ ಒಬ್ಬ ಬ್ರಾಹ್ಮಣನು ಐಶ್ವರ್ಯಕ್ಕಾಗಿ ಗಾಯತ್ರಿಯನ್ನು ಎದೆಬಿಡದೆ ಜಪಿಸುತ್ತಿದ್ದನಂತೆ ಕೊನೆಗೂ ಗಾಯತ್ರಿ ತಾಯಿ ಪ್ರತ್ಯಕ್ಷಳಾಗಿ ಏನು ಬೇಕೆಂದು ಕೇಳಲು, ಅವನಿಗೆ ಮಾತೇ ಹೊರಡದೆ ಮುಕ್ತಿಯನ್ನು ಬೇಡಿದನಂತೆ. ಈ ಮಂತ್ರದ ಜಪದಲ್ಲಿ ಭಕ್ತಿಯೆಂಬುದು ಸೇರಿದೆ ಆದರೆ ನೀನು ಬಯಸುವ ಫಲಕ್ಕೆ ಸಾವಿರ ಪಟ್ಟು ಈ ತಾಯಿ ನೀಡುತ್ತಾಳಂತೆ. ಅದರಿಂದ ಬಯಸುವ ಜಪಕ್ಕಿಂತಾ ಕೃಷ್ಣನ ವಾಕ್ಯದಂತೆ ನಿಷ್ಕಾಮ ಕರ್ಮ ಜಪಕ್ಕೆ ಶಕ್ತಿಯು ಜಾಸ್ತಿಯಂತೆ.
  38. ಗಾಯತ್ರಿ ಜಪಮಾಡುವವರು ಸಣ್ಣ ಸಣ್ಣ ಕಾರಣಕ್ಕೆ ಕ್ರೋಧಗೊಂಡು ಯಾರಿಗೂ ಶಪಿಸಬಾರದು. ಕಾರಣ ನೀವು ಸಣ್ಣ ಕಾರಣಗಳಿಗೆಲ್ಲ ಶಪಿಸುತ್ತಿದ್ದರೆ ನಿಮ್ಮ ಶಾಪವು ಕೊಟ್ಟವರಿಗೆ ಖಂಡಿತ ತಟ್ಟುತ್ತದ. ಹಾಗೆ ನೀವು ಮಾಡುವ ಗಾಯತ್ರಿ ಜಪವು ನಿಮಗರಿವಿಲ್ಲದಂತೆಯೇ ಶಾಪದ ರೂಪದಲ್ಲಿ ಗಾಯತ್ರಿಯು ಹೋಗುತ್ತಾ ಹೋಗುತ್ತಾ ನಿಮ್ಮ ಖಾತೆಯಲ್ಲಿ ಗಾಯತ್ರಿಯೇ ಇಲ್ಲದಾಗುತ್ತೆ. ಯಾರಿಗೂ ಎಂದಿಗೂ ಶಪಿಸದಿರಿ ಇದರಿಂದ ನಿಮ್ಮ ಗಾಯತ್ರಿ ನಿಮ್ಮ ಬಳಿ ಸುಭದ್ರವಾಗಿ ನೆಲೆಸಿರುತ್ತಾಳೆ.
  39. ಮೋಕ್ಷವನ್ನೊಂದಬೇಕೆಂದು ಇಚ್ಚಿಸುವವನು ಒಂದು ಕ್ಷಣವು ವ್ಯರ್ಥ ಮಾಡದೆ ನಿರಂತರ ಗಾಯತ್ರಿ ಜಪಮಾಡುತ್ತಿರಬೇಕು, ಮೋಕ್ಷ ಮಾರ್ಗಕ್ಕೆ ಇದಕ್ಕಿಂತ ಸುಲಭ ಉಪಾಯ ಬೇರೆ ಇಲ್ಲ.
(ಕೃಪೆ )
***

ಸಂದ್ಯಾವಂದನೆ ಸಮಯದಲ್ಲಿ ಪ್ರತಿ ದಿಕ್ಕಿಗೂ ನಮಸ್ಕಾರ ಮಾಡುತ್ತೀರಾ ಅದೇ  ಪ್ರತಿ ದಿಕ್ಕಿಗೂ  ಗಾಯತ್ರೀ ಹೇಳುತ್ತಾ ನಮಸ್ಕಾರಗಳನ್ನು  ಹಾಕಿದಾಗ  ಫಲಗಳು ಬೇಗ ಸಿದ್ಧಿಸುತ್ತವೆ.

ಗಾಯಿತ್ರೀ ಹೇಳುತ್ತಾ ದಿಕ್ಕುಗಳಿಗೆ ನಮಸ್ಕಾರ












No comments:

Post a Comment