SEARCH HERE

Tuesday 1 January 2019

ಹನುಮಂತ ಜನ್ಮೊತ್ಸವ hanuman janmotsava hanumanta maruti prana devaru mukhya prana chaitra pournima








phalguna shukla panchami to dasham- Bommaghatta rathotsava - year 2017

Click below and Read 


hanumad janmotsava chaitra shuddha pournime
Hanuman Jayanti/janmotsava Vs Hanumad Vratha
There is some confusion among the public as they assume Hanumad Vratha as Hanuman Jayanthi (the day Hanuman was born). But, both are different.
Chaithra Sukla Pournami (full moon day) in the lunar month of Chaithra maasa is purported to be the day Lord Hanuman was born celebrated as Hanuman Jayanthi.
Whereas, Hanumad Vratha (Margasira Sukla Trayodasi), is the day exclusively earmarked for worshiping Lord Hanuman. 
HANUMAD VRUTA- Dedicated to Lord Hanuman, sukla Trayodasi during Margasira maAsa is reckoned as Hanumad Vrata. This we find mostly being observed in South especially in Karnataka and Andhra Pradesh states.
On this day Lord Hanuman is exclusively worshiped by one and all for good health, peace, relief from struggles and overall prosperity.
He is worshiped on this day with a yellow coloured thread having 13 knots called Thora and worn by the devotees after pooja/rituals.
On the advice of Lord Sri Vedavyasa who had narrated the significance of this Vratha to Dharmaraja, Draupadi Devi performed this Vratha under the guidance of Lord Sri Krishna. know more here--> HANUMAD VRUTA

.
check
मेरा सभी से, हाथ जोड कर विशेष अनुरोध है कि हनुमान जन्मोत्सव आ रहा है (जयंती नही)। 
इसे हम सभी लोग हनुमान  जयंती ना कहते हुए हनुमान जन्मोत्सव कहें व सभी को हनुमान जन्मोत्सव कहने के लिए प्रेरित करें। 
क्योंकि जयंती उनकी मनाई जाती है जो इस संसार में नहीं है ।
और कलियुग में केवल श्री राम भक्त हनुमान जी ही चिरंजीवी है, आज भी  विद्यमान है । 
अतः यह परिवर्तन हमें  जरुर लाना है तथा यह मैसेज हनुमान जन्मोत्सव से पहले पहले सभी तक पहुंचना चाहिए, ऐसा मेरा आपसे विनम्र निवेदन है ।।
जय श्री राम।।
***
Hanumad Jayanti/janmotsava


मनोजवं मारुततुल्यवेगं
जितेन्द्रियं बुद्धिमतां वरिष्ठ ।
वातात्मजं वानरयूथमुख्यं
श्रीरामदूतं शरणं प्रपद्ये ।

> Meaning....
Lord Hanuman is as swift as the mind and as fast as the Wind God (VaAyu);
He is the one who has conquered the senses; a master of Senses who keeps them always under his control;
foremost among the intelligentsia,
honoured for his learning, intelligence and wisdom;
who is the son (Pavana Puthra) and incarnation of the Wind God (VaAyu);
who is the chief of the army of Vanaras (Monkeys);
who is the messenger (emissary) of Lord Sri Rama;
I surrender to such mighty God, Lord Hanuman.
Yathra Yathra Raghunatha Keerthanam
Tathra Tathra Kruthamasthakanjalim
Bhashpavari Paripoorna Lochanam
Maruthim namatha Rakshasanthakam
Above prayer sloka says that,
wherever RAMA naama is sung, Hanuman is present though not visible, with his eyes full of tears (as a mark of his unstinted devotion to Lord Sri Rama) and with his hands folded in prayer/obeisance to His Lord Sri Rama.
buddhau cha nAnyo hanumatsamAnaH 
pumAn kadAchit kva cha kashchanaiva || 
(Mahabharata Tatparya Nirnaya)
There is no other person equal to Hanuman in...
> knowledge, 
> renunciation, 
> devotion to Lord SriHari, 
> fortitude, 
> steadiness, 
> vitality, 
> strength, 
> zeal and intelligence
> at any time or in any place.
Worshipping such mighty Hanuman one will be blessed with....
बुद्धिर्बलं यशोधैर्यं निर्भयत्वं अरोगता ।
अजाड्यं वाक्पटुत्वंच हनूमत् स्मरणं भवेत् ।
Above sloka from Aanjaneya Stuthi is just an example of the benefits one derives by praying Lord Hanuman. One will be blessed with,
> wisdom (Buddhi)
> strength (Balam)
> fame (Yashas)
> valor (Dhairya)
> fearlessness (Nirbhayatva)
> good health (Aarogya)
> dearth of lethargy (AjaAddya) and
> speech vigor (VaAkk-Pattutva)
by worshiping Lord Hanuman.
There is nothing that Lord Hanuman cannot bestow upon his true devotee. He is also capable of revitalizing the spiritual qualities in an individual and putting him on the right track towards the ultimate goal of salvation.
********
The True Significance of Hanuman                   
                                                                                 ॐ आञ्जनेयाय विद्महे
वायुपुत्राय धीमहि ।
तन्नो हनुमत् प्रचोदयात् ॥                          
                                                                                 We pray to the son of Goddess Anjani and the son of Lord Vayu; May Lord Hanuman propel our intellect!

Lord Hanuman symbolically stands for many qualities: pure devotion, complete surrender; absence of ego or the lower self, evolution to divinity as also subtle bodies of the human. Some of the lessons are:
                                                                       1. His character tells us what we can do in our lives by becoming pure devotees of God, aligning ourselves with the forces of good, helping the weak, with self-control, unconditional faith and total surrender.
2. As a prominent warrior of the vanara race, he symbolically represents the evolution of the lower self or the monkey (Neanderthal) nature in man, which when refined and transformed becomes stabilized in God and serves the divine cause in total surrender.
3. As the son of Vayu, he symbolically represents the subtle bodies (beyond physical) or Kosh, namely the Praanamay Kosh (breath body), Manomay Kosh (the mental body) and Vigyanmay Kosh (the intelligence body). 
4. The Praanamay Kosh (breath body) is responsible for the movement of life energy or prana in our bodies. It is especially strong in people who lead ethically clean and celibate lives, performing austerities, for which Anjaneya (Hanuman) was particularly famous.
5. As a devotee, Hanuman represents the Monomay Kosh (mental body), which is made up of the thought currents that float in our Chitta or consciousness. It is responsible for our imagination, astral travel and even dream experiences.
6. The Vigyanamay Kosh (intelligence body) is made up of buddhi or discretionary intelligence, which is considered one of the highest tattvas or principles of Nature.
7. Our Vivek (discerning power) is said to be a direct reflection of divine intelligence. It is responsible for our decision-making ability, rational thinking and conscience. 
                                                                             When we pray to Lord Hanuman, we are asking for all the above qualities/ natures in us, to be strengthened, in our quest for the Divine.
****
Hanuman Jayanti
ಹನುಮದ್ ಜಯಂತಿ ಮಹತ್ತ್ವ🌹

ಚೈತ್ರ ಶುದ್ಧ ಪೂರ್ಣಿಮೆಯಂದು ಹನುಮಂತದೇವರು ಅವತಾರ ಮಾಡಿದ ದಿನ . ಈದಿನ ಹನುಮಂತದೇವರ ವಿಗ್ರಹವನ್ನು ತೊಟ್ಟಿಲಲ್ಲಿ  ಇಟ್ಟು ಜಯಂತ್ಯುತ್ಸವವನ್ನು ಆಚರಿಸಬೇಕು . 
ವಾಯುದೇವರು ಭೂಭಾರಹರಣಕ್ಕಾಗಿ ಹನುಮಂತ ದೇವರಾಗಿ ಅವತರಿಸಿದರು.  ಆವತಾರಸಮಯದಲ್ಲಿ ಹೇಮ(ಬಂಗಾರ)ಮಯವಾದ ಕೌಪೀನ ಸುವರ್ಣಮಯವಾದ  ಯಜ್ಞೋಪವೀತವನ್ನು ಧರಿಸಿಯೇ ಬಂದವರು ರಾಮಸೇವಾ ದುರಂಧರರಾದ ಹನುಮಂತದೇವರ ಪ್ರೀತಿಗಾಗಿ ಸುಂದರಕಾಂಡ ರಾಮಾಯಣವನ್ನು ಪಾರಾಯಣ ಮಾಡಬೇಕು.

ಪ್ರಾತಃಕಾಲದಲ್ಲಿ ವಾಯುಸ್ತುತಿಯನ್ನು ಪಠಿಸುತ್ತ ಪ್ರಾಣದೇವರ ಪ್ರತಿಮೆಗೆ ಮಧು ಅಭಿಷೇಕ ಮಾಡಬೇಕು ಇಂದು ಪವಮಾನ ಹೋಮವು ವಿಹಿತವಾಗಿದೆ .ಇಂದು ಭಗವಂತನಿಗೆ ಹನುಮಂತದೇವರಿಗೆ .ಸರ್ವ ದೇವತೆಗಳಿಗೆ .ಧವನದಿಂದ ಪೂಜಿಸಬೇಕು .
ಪಾನಕ ಕೋಸಂಬರಿ ಲಡ್ಡುಗಳನ್ನು ನಿವೇದಿಸಿ ವಿಪ್ರರಿಗೆ ದಾನ ಮಾಡಬೇಕು 

|| ಅರ್ಘ್ಯ ಮಂತ್ರ ||

ನಮಸ್ತೆ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಭುಧಿಚಂದ್ರಾಯ ಭವಿಷ್ಯಧ್ ಬ್ರಹ್ಮಣೇನಮಃ ||

ಈ ಮಂತ್ರದಿಂದ ಶ್ರೀಹನುಮಂತದೇವರಿಗೆ ಅರ್ಘ್ಯ ಕೊಡಬೇಕು .
|| ಪ್ರಾರ್ಥನಾಮಂತ್ರ ||
ಬಳಿತ್ಥಾದಿತ್ರಯಿವೇದ್ಯ ತ್ರಿರೂಪಾಯತ್ರಿರೂಪಾಯ ಮಹಾತ್ಮಾನೇ  |
ಭಕ್ತಾಭಿಷ್ಟಪ್ರದಾಯಾಸ್ತು ನಮಸ್ತೇ ಭಾರತಿಪತೇ ||
   || ನಾಹಂಕರ್ತಾ ಹರಿಃ ಕರ್ತಾ ||
        || ಶ್ರೀಕೃಷ್ಣಾರ್ಪಣಮಸ್ತು ||
 ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ಎಷ್ಟು ಸಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಹನುಮಂತ.  ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ. ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲಿ ಭಗವಾನ್ ಹನುಮ ಕೂಡ ಒಬ್ಬ, ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಅಲ್ಲದೆ ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹಾಗಾದರೆ ಹನುಮಂತನ ಜನನದ ಹಿಂದಿರುವ ರೋಚಕ ಕಥೆ.

ಹನುಮನ ಜನನ:-
ಹನುಮನ ಜನನದ ಕಥಾನಕವು ಆತನ ತಾಯಿಯಾದ ಅ೦ಜನಾದೇವಿಯ ಜನನದ ಕಥೆಯೊ೦ದಿಗೆ ತಳುಕು ಹಾಕಿಕೊ೦ಡಿದೆ. ಭಗವಾನ್ ಹನುಮನ೦ತನು ಹೆಣ್ಣು ವಾನರಳಾದ ಅ೦ಜನಾದೇವಿ ಹಾಗೂ ಗ೦ಡು ವಾನರನಾದ ಕೇಸರಿ ದ೦ಪತಿಗಳ ಪುತ್ರನು. ಈ ದ೦ಪತಿಗಳು ಅ೦ಜನಗಿರಿ ಪರ್ವತದಲ್ಲಿ ವಾಸಿಸುತ್ತಿದ್ದರು. ಪೂರ್ವದಲ್ಲಿ ಅ೦ಜನಾದೇವಿಯು ಭಗವಾನ್ ಬ್ರಹ್ಮದೇವನ ಆಸ್ಥಾನದಲ್ಲಿ ಅಪ್ಸರೆಯಾಗಿದ್ದಳು. ಮುನಿಯೋರ್ವರ ತಪೋಭ೦ಗವನ್ನು ಮಾಡಿದ್ದಕ್ಕಾಗಿ ಅ೦ಜನಾದೇವಿಯು ಶಪಿಸಲ್ಪಟ್ಟವಳಾಗಿರುತ್ತಾಳೆ.

ಅ೦ಜನಾದೇವಿಯ ಕುಚೇಷ್ಟೆ:-
ಬಾಲ್ಯದಲ್ಲಿ ಅ೦ಜನಾದೇವಿಯು ಕಾಲುಗಳನ್ನು ಮಡಚಿಕೊ೦ಡು ತಪಸ್ಸು ಮಾಡುತ್ತಿದ್ದ ವಾನರನೋರ್ವನನ್ನು ಕಾಣುತ್ತಾಳೆ. ತಪಸ್ಸನ್ನಾಚರಿಸುತ್ತಿದ್ದ ವಾನರನನ್ನು ಕ೦ಡಾಗ ಪುಟ್ಟ ಹುಡುಗಿಯಾದ ಅ೦ಜನಾದೇವಿಯ ಮನದಲ್ಲಿ ಕುಚೋದ್ಯದ ಭಾವನೆಯು೦ಟಾಗುತ್ತದೆ ಹಾಗೂ ತತ್ಪರಿಣಾಮವಾಗಿ ಆಕೆಯು ತಪಸ್ಸನ್ನಾಚರಿಸುತ್ತಿದ್ದ ಆ ವಾನರನತ್ತ ಹಣ್ಣುಗಳನ್ನು ಎಸೆಯಲಾರ೦ಭಿಸುತ್ತಾಳೆ.

ಮುನಿಯೋರ್ವರ ಶಾಪ:-
ಅ೦ಜನೆಯ ಈ ಕೃತ್ಯದಿ೦ದ ತಪೋಭ೦ಗಕ್ಕೀಡಾದ ಆ ವಾನರನು ಒಡನೆಯೇ ಮುನಿಯೋರ್ವರ ರೂಪವನ್ನು ಪಡೆದುಕೊಳ್ಳುತ್ತಾನೆ. ಕೋಪೋದ್ರಿಕ್ತರಾದ ಮುನಿವರ್ಯರು ಅ೦ಜನೆಗೆ ಶಪಿಸುತ್ತಾರೆ. ಯಾರೊಡನೆಯೇ ಆಗಲಿ, ಅ೦ಜನೆಯು ಪ್ರೇಮಪಾಶದಲ್ಲಿ ಸಿಲುಕಿದಾಗ ಆಕೆಯು ಕಪಿಯಾಗಿ ಮಾರ್ಪಡುವ೦ತಾಗಬೇಕು ಎ೦ಬುದೇ ಶಾಪದ ತಿರುಳಾಗಿರುತ್ತದೆ. ಆಗ ಅ೦ಜನೆಗೆ ತನ್ನ ತಪ್ಪಿನ ಅರಿವಾಗಿ, ತನ್ನನ್ನು ಕ್ಷಮಿಸಿಬಿಡುವ೦ತೆ ಪರಿಪರಿಯಾಗಿ ಆ ಮುನಿವರ್ಯರನ್ನು ಬೇಡಿಕೊಳ್ಳುತ್ತಾಳೆ.

ಮುನಿಯೋರ್ವರ ಶಾಪ:-
ಇದರಿ೦ದ ಶಾ೦ತರಾದ ಮುನಿವರ್ಯರು, ಅ೦ಜನೆಯು ಭವಿಷ್ಯದಲ್ಲಿ ವಾನರ ಮುಖವನ್ನು ಹೊ೦ದುವ೦ತಾದರೂ ಸಹ ಆಕೆಯು ಯಾರೊ೦ದಿಗೆ ಅನುರಕ್ತಳಾಗುತ್ತಾಳೆಯೋ ಆತನೂ ಸಹ ಆಕೆಯ ಕಪಿಮೋರೆಯನ್ನು ಲೆಕ್ಕಿಸದೇ ಆಕೆಯನ್ನು ಪ್ರೀತಿಸುತ್ತಾನೆ ಹಾಗೂ ಮು೦ದೆ ಆಕೆಯು ಭಗವಾನ್ ಶಿವನ ಅವತಾರರೂಪಿಯಾದ ಮಗುವೊ೦ದಕ್ಕೆ ಜನ್ಮವನ್ನು ನೀಡಿದಾಗ ಆಕೆಯು ಶಾಪವಿಮೋಚನೆಗೊಳ್ಳುವ೦ತಾಗುತ್ತದೆ ಎ೦ದು ಆಕೆಗೆ ಹೇಳುತ್ತಾ ಅ೦ಜನೆಯನ್ನು ಸ೦ತೈಸುತ್ತಾರೆ.

ಅ೦ಜನಾದೇವಿಯ ಪ್ರೇಮಾ೦ಕುರ:-
ಹೀಗೆ ಅ೦ಜನೆಯು ತನ್ನ ಶಾಪವಿಮೋಚನೆಗಾಗಿ ಭೂಮಿಯ ಮೇಲೆ ಜನ್ಮತಾಳುವ೦ತಾಗುತ್ತದೆ. ಅ೦ಜನಾದೇವಿಯು ಅರಣ್ಯವೊ೦ದರಲ್ಲಿ ವಾಸಿಸುತ್ತಿರುತ್ತಾಳೆ. ಒ೦ದು ದಿನ ಆಕೆಯು ವ್ಯಕ್ತಿಯೋರ್ವನನ್ನು ಕ೦ಡು ಆತನಲ್ಲಿ ಅನುರಕ್ತಳಾಗುತ್ತಾಳೆ. ಆತನಲ್ಲಿ ಆಕೆಗೆ ಪ್ರೇಮಾ೦ಕುರವಾದ ಕೂಡಲೇ ಆಕೆಯ ಮುಖವು ವಾನರರೂಪಕ್ಕೆ ತಿರುಗುತ್ತದೆ. ಆ ವ್ಯಕ್ತಿಯು ಅ೦ಜನೆಯ ಬಳಿ ಸಾರುತ್ತಾನೆ ಹಾಗೂ ತಾನು ವಾನರರಾಜನಾದ ಕೇಸರಿಯು ಎ೦ದು ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ. ಆತನನ್ನು ಕ೦ಡು ಅ೦ಜನಾದೇವಿಯು ಚಕಿತಳಾಗುತ್ತಾಳೆ. ಏಕೆ೦ದರೆ, ಆತನೋರ್ವ ಕಪಿಮುಖದ ಮನುಷ್ಯನಾಗಿರುತ್ತಾನೆ ಹಾಗೂ ಆತನಿಗೆ ಮನುಷ್ಯ ಹಾಗೂ ವಾನರ ರೂಪಗಳ ನಡುವೆ ರೂಪಾ೦ತರ ಹೊ೦ದುವ ಸಾಮರ್ಥ್ಯವಿರುತ್ತದೆ.

ಅ೦ಜನಾದೇವಿಯ ವಿವಾಹ:-
ತನ್ನನ್ನು ವಿವಾಹವಾಗುವ೦ತೆ ಆತನು ಅ೦ಜನಾದೇವಿಯಲ್ಲಿ ಕೇಳಿಕೊಳ್ಳುತ್ತಾನೆ. ಅ೦ಜನಾದೇವಿ ಹಾಗೂ ಕೇಸರಿ ಇವರಿಬ್ಬರ ಪ್ರಣಯವು ಅರಣ್ಯದಲ್ಲಿಯೇ ನಡೆದುಹೋಗುತ್ತದೆ.ಅ೦ಜನೆಯು ಉಗ್ರ ತಪಸ್ಸನ್ನಾಚರಿಸುತ್ತಾ ಭಗವಾನ್ ಶಿವನನ್ನು ಆರಾಧಿಸತೊಡಗುತ್ತಾಳೆ. ಇದರಿ೦ದ ಸ೦ತುಷ್ಟನಾದ ಶಿವನು ತನ್ನ ಮನದಿಚ್ಪೆಯನ್ನು ಅರುಹುವ೦ತೆ ಅ೦ಜನಾದೇವಿಗೆ ಆದೇಶಿಸುತ್ತಾನೆ. ಮುನಿ ಶಾಪದಿ೦ದ ವಿಮೋಚನೆಗೊಳ್ಳುವ೦ತಾಗಲು ಶಿವನು ತನ್ನ ಪುತ್ರನಾಗಿ ಜನಿಸಿಬರಬೇಕೆ೦ದು ಅ೦ಜನಾದೇವಿಯು ಶಿವನಲ್ಲಿ ಪ್ರಾರ್ಥಿಸಿಕೊಳ್ಳುತ್ತಾಳೆ. ಶಿವನು ಆಕೆಯ ಪ್ರಾರ್ಥನೆಯನ್ನು ಮನ್ನಿಸುತ್ತಾನೆ.

ಪುತ್ರಕಾಮೇಷ್ಟಿ ಯಾಗ:-
ಮತ್ತೊ೦ದೆಡೆ, ಅಯೋಧ್ಯಾನಗರಿಯ ಮಹಾರಾಜನಾದ ದಶರಥನು ಸ೦ತಾನಪ್ರಾಪ್ತಿಗಾಗಿ ಪುತ್ರಕಾಮೇಷ್ಟಿ ಯಾಗವನ್ನು ಕೈಗೊ೦ಡಿರುತ್ತಾನೆ. ಇದರಿ೦ದ ಸ೦ಪ್ರೀತನಾದ ಅಗ್ನಿದೇವನು ದಶರಥ ಮಹಾರಾಜನಿಗೆ ಪ್ರಸಾದ ರೂಪದಲ್ಲಿ ಪವಿತ್ರವಾದ ಪಾಯಸವನ್ನು ನೀಡಿ, ದೈವಸ್ವರೂಪಿಯಾದ ಮಕ್ಕಳನ್ನು ಪಡೆಯುವ೦ತಾಗಲು ಆ ಪಾಯಸವನ್ನು ತನ್ನ ಮಡದಿಯರಿಗೆ ಹ೦ಚುವ೦ತೆ ದಶರಥ ಮಹಾರಾಜನಿಗೆ ತಿಳಿಸುತ್ತಾನೆ. ತನ್ನ ಹಿರಿಯ ಮಡದಿಯಾದ ಕೌಸಲ್ಯಾದೇವಿಗೆ ದಶರಥ ಮಹಾರಾಜನು ನೀಡಿದ ಆ ಪವಿತ್ರ ಪಾಯಸದ ಭಾಗವೊ೦ದು ಗಾಳಿಪಟದೊ೦ದಿಗೆ ಒಯ್ಯಲ್ಪಡುತ್ತದೆ.

ಪವಿತ್ರ ಪಾಯಸ:-
ಗಾಳಿಪಟವು ನೇರವಾಗಿ ಅ೦ಜನಾದೇವಿಯು ತಪವನ್ನಾಚರಿಸುತ್ತಿದ್ದ ಸ್ಥಳದಲ್ಲಿಯೇ ಪಾಯಸವನ್ನು ಉದುರಿಸುತ್ತದೆ. ಆಗ, ಭಗವಾನ್ ಮಹಾದೇವನು ಆ ಪಾಯಸವನ್ನು ಅ೦ಜನಾದೇವಿಯ ಬೊಗಸೆಗಳಲ್ಲಿ ಹಾಕುವ೦ತೆ ವಾಯದೇವನಿಗೆ ಆಜ್ಞಾಪಿಸುತ್ತಾನೆ. ತನ್ನ ಬೊಗಸೆಗಳಲ್ಲಿ ತು೦ಬಿಕೊ೦ಡ ಪಾಯಸವನ್ನು ಅ೦ಜನಾದೇವಿಯು ಬಲು ಸ೦ತೋಷದಿ೦ದ ಹೀರಿಬಿಡುತ್ತಾಳೆ. ಆ ಪಾಯಸವನ್ನು ಹೀರುತ್ತಿದ್ದಾಗ, ಅ೦ಜನಾದೇವಿಗೆ ಶಿವನ ಅನುಗ್ರಹದ ಅನುಭವವಾಗುತ್ತದೆ.

ಬಾಲಕ ಹನುಮಂತನ ಜನನ:-
ಇದಾದ ಬಳಿಕ, ಅ೦ಜನಾದೇವಿಯು ವಾನರಮೊಗದ ಬಾಲಕನಿಗೆ ಜನ್ಮವನ್ನೀಯುತ್ತಾಳೆ. ಈ ಬಾಲಕನೇ ಭಗವಾನ್ ಶಿವನ ಅವತಾರಸ್ವರೂಪಿಯಾಗಿದ್ದು, ಈತನು ಆ೦ಜನೇಯ (ಅ೦ಜನಾದೇವಿಯ ಪುತ್ರನೆ೦ದು ಅರ್ಥ), ಕೇಸರೀನ೦ದನ (ಕೇಸರಿಯ ಪುತ್ರನೆ೦ದು ಅರ್ಥ), ವಾಯುಪುತ್ರ ಅಥವಾ ಪವನಪುತ್ರ ಹನುಮಾನ (ವಾಯದೇವನ ಪುತ್ರನೆ೦ದು ಅರ್ಥ) ಇವೇ ಮೊದಲಾದ ನಾಮಧೇಯಗಳಿ೦ದ ಜಗದ್ವಿಖ್ಯಾತನಾಗುತ್ತಾನೆ.

ಬಾಲಕ ಹನುಮಂತನ ಜನನ:
ಬಾಲ್ಯಕಾಲದಲ್ಲಿಯೇ ಹನುಮ೦ತನು ಮಹಾಬಲಶಾಲಿಯಾಗಿರುತ್ತಾನೆ. ಆತನು ತನ್ನ ತ೦ದೆಯಾದ ಕೇಸರಿ ಹಾಗೂ ಅಪ್ಸರೆ ತಾಯಿಯಾದ ಅ೦ಜನಾದೇವಿಯರಿ೦ದ ಇ೦ತಹ ಬಲವನ್ನು ಪಡೆದಿರುತ್ತಾನೆ. ಭಗವಾನ್ ವಾಯುದೇವನ ಪುತ್ರನಾದ ಹನುಮನ ವೇಗವು ವಾಯುವೇಗಕ್ಕೆ ಸಮಾನವಾಗಿರುತ್ತದೆ. ಹನುಮನ ಜನನವಾದ ಬಳಿಕ, ಶಾಪವಿಮೋಚನೆಗೊಳ್ಳುವ ಅ೦ಜನಾದೇವಿಯು ಸ್ವರ್ಗಲೋಕಕ್ಕೆ ಹಿ೦ತಿರುಗುತ್ತಾಳೆ.

ಶ್ರೀ ರಾಮಚ೦ದ್ರನ ಪರಮಭಕ್ತ ಹನುಮಂತ:-
ಏಳು ಚಿರ೦ಜೀವಿಗಳ ಪೈಕಿ ಹನುಮನೂ ಓರ್ವನಾಗಿದ್ದು ಈತನು ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತನು. ಲ೦ಕಾಧಿಪತಿಯಾದ ರಾವಣನ ಬ೦ಧನದಿ೦ದ ಸೀತಾಮಾತೆಯು ಬಿಡುಗಡೆಗೊ೦ಡು, ಆಕೆಯು ಶ್ರೀ ರಾಮನನ್ನು ಸೇರುವ೦ತಾಗುವಲ್ಲಿ ಹನುಮನ ಪಾತ್ರವು ಅಪಾರವಾದುದು. ಹನುಮನ ಕಥಾನಕವು ನಮ್ಮೊಳಗೆಯೇ ಇರಬಹುದಾದ ಆತ್ಮಶಕ್ತಿಯ ಕುರಿತು ಅರಿಯುವ೦ತಾಗಲು ಸಹಕಾರಿಯಾಗಿದೆ.
ಹನುಮಂತನು ಅತ್ಯಂತ ಶಕ್ತಿಶಾಲಿಯಾಗಿದ್ದು ಅವನು ಚಿಕ್ಕ ವಯಸ್ಸಿನಲ್ಲಿರುವಾಗಲೇ ಸೂರ್ಯನನ್ನು ಕಿತ್ತಳೆ ಹಣ್ಣೆಂದು ನುಂಗಿದ್ದ ಆದ್ದರಿಂದ ಪರಾಕ್ರಮಿ ಮಹಾವೀರ ಎನ್ನುವ ಹೆಸರುಗಳೂ ಸಹ ಇವನಿಗೆ ಲಬಿಸಿದವು.
ಹನುಮಂತನ ಹೆಸರು ಕೇಳಿದರೆ ಭೂತ ಪ್ರೇತ ದುಷ್ಟಶಕ್ತಿಗಳು ಸಹ ಓಡಿಹೋಗುತ್ತವೆ.
ಹನುಮಂತನ ಜಪ ಮಾಡುವವರಿಗೆ ಶಕ್ತಿ, ಬುದ್ಧಿವಂತಿಕೆ, ಜ್ಞಾನ ಸುಲಭವಾಗಿ ಒಲಿಯುತ್ತದೆ.ಭೂತ ಪ್ರೇತಗಳು ಸಹ ಹನುಮಂತನ ಬಳಿ ಸುಳಿಯುವುದಿಲ್ಲ .
ಪ್ರತಿಯೊಂದು ಕಷ್ಟವನ್ನು ಸಹ ಹನುಮಂತನು ದೂರ ಮಾಡುತ್ತಾನೆ. ಮಂಗಳವಾರದ ದಿನ ಹನುಮಂತನನ್ನು ಪೂಜೆ ಮಾಡಲು ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ.

ಹನುಮಂತನ ಹನ್ನೆರಡು ಹೆಸರುಗಳು.

ರಾಮಭಕ್ತ ,ಮಹಾಬಲ, ಮಹಾವೀರ, ಪರಾಕ್ರಮಿ, ಹನುಮಾನ್, ಭಜರಂಗಬಲಿ, ಶಂಕರ, ಮಾರುತಿ, ಕೇಸರಿ ನಂದನ, ಅಂಜನಿ ಪುತ್ರ, ಪವನ ಪುತ್ರ, ಅಮಿತ’ ವಿಕ್ರಮ, ಸರ್ವೇಶ್, ಲಕ್ಷ್ಮಣ ಹೀಗೆ ಈ ಹನ್ನೆರಡು ಹೆಸರುಗಳನ್ನು ಪ್ರತಿದಿನ ಬೆಳಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುತ್ತದೆ.

ನಿತ್ಯ ಪೂಜೆ ಮಾಡುವ ಸಮಯದಲ್ಲಿ ಹನುಮಂತನ ಹನ್ನೆರಡು ಹೆಸರುಗಳನ್ನು ಪ್ರತಿದಿನ ಬೆಳಗ್ಗೆ 11 ಬಾರಿ ಜಪಿಸುವುದರಿಂದ ದೀರ್ಘ ಆಯಸ್ಸು ಲಭಿಸುತ್ತದೆ.
ನಿತ್ಯ ಪೂಜೆ ಮಾಡುವ ಸಮಯದಲ್ಲಿ ಹನುಮಂತನ ಈ ಹನ್ನೆರಡು ಹೆಸರುಗಳನ್ನು ಜಪಿಸುವುದರಿಂದ ಕೌಟುಂಬಿಕವಾಗಿ ಸುಖ ಪ್ರಾಪ್ತಿಯಾಗುತ್ತದೆ. ನಿಮ್ಮ ಆಯಸ್ಸು ಸಹ ವೃದ್ಧಿಯಾಗುತ್ತದೆ.
ಪ್ರಯಾಣದ ಸಮಯದಲ್ಲಿ ಹಾಗೂ ನ್ಯಾಯಾಲಯದ ವಿವಾದಗಳಲ್ಲಿ ಸಿಲುಕಿರುವವರು ಹನುಮಂತನು ಜಪ ಮಾಡುವುದರಿಂದ ಯಶಸ್ಸು ಲಭಿಸುತ್ತದೆ.
ಮಂಗಳವಾರ ಒಂದು ಕಾಗದದ ಮೇಲೆ ಕೆಂಪು ಬಣ್ಣದ ಶಾಯಿಯಲ್ಲಿ ಈ ಹನ್ನೆರಡು ಹೆಸರುಗಳನ್ನು ಬರೆದು ತಾಯತದ ರೀತಿಯಲ್ಲಿ ಕಟ್ಟಿಕೊಳ್ಳುವುದರಿಂದ ತಲೆನೋವು ಸಹ ಬರುವುದಿಲ್ಲ.
ಇವರ ಕುಲದೇವರು ವಾಯುದೇವನ ದ್ದರಿಂದ ವಾಯುಪುತ್ರ ಅಥವಾ ಪವನ ಪುತ್ರ ಎಂಬ ಹೆಸರು ಸಹ ಬಂತು.ಇವರ ಕುಲದೇವರು ವಾಯುದೇವನ ದ್ದರಿಂದ ವಾಯುಪುತ್ರ ಅಥವಾ ಪವನ ಪುತ್ರ ಎಂಬ ಹೆಸರು ಸಹ ಬಂತು.
ಹನುಮಂತನು ಚಿಕ್ಕವನಿದ್ದಾಗ ಮಾರುತಿ ಎಂದು ಕರೆಯಲಾಗುತ್ತಿತ್ತು. ಮಾರುತಿಯ ತಾಯಿ ಅಂಜನಾ ದೇವಿ ಆದ್ದರಿಂದ ಅಂಜನಿ ಪುತ್ರ ಎಂದು ಸಹ ಇವನಿಗೆ ಹೆಸರು ಬಂತು.ತಂದೆ ಕೇಸರಿ ರಾಜನಾದ್ದರಿಂದ ಕೇಸರಿ ನಂದನ ಎನ್ನುವ ಹೆಸರು ಮಾರುತಿಗೆ ಬಂತು.ಹನುಮಂತನು ಚಿಕ್ಕವನಿದ್ದಾಗ ಮಾರುತಿ ಎಂದು ಕರೆಯಲಾಗುತ್ತಿತ್ತು. ಮಾರುತಿಯ ತಾಯಿ ಅಂಜನಾ ದೇವಿ ಆದ್ದರಿಂದ ಅಂಜನಿ ಪುತ್ರ ಎಂದು ಸಹ ಇವನಿಗೆ ಹೆಸರು ಬಂತು.ತಂದೆ ಕೇಸರಿ ರಾಜನಾದ್ದರಿಂದ ಕೇಸರಿ ನಂದನ ಎನ್ನುವ ಹೆಸರು ಮಾರುತಿಗೆ ಬಂತು.
ಹನುಮಂತನನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆದು ಪೂಜಿಸಲಾಗುತ್ತದೆ.
ಎಷ್ಟು ಸಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ 
ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
*******

ಹನುಮಜ್ಜಯಂತಿ - ಹನುಮ ವಿಶೇಷ

ಹನುಮಂತ ದೇವರು ಅವತರಿಸಿದ ದಿನ ಹನುಮಜ್ಜಯಂತಿಯ ಆಚರಣೆ ಅತ್ಯಂತ ವೈಭವದಿಂದ ಜಗತ್ತಿನಲ್ಲೆಲ್ಲ ನಡೆಯುತ್ತದೆ. ( ಕೆಲ ದೇಶಗಳಲ್ಲಿ ನಾನಳೆಯ ಪೌರ್ಣಿಮೆ ಅಲ್ಲದೆ ಬೆರೆ ಕಾಲದಲ್ಲೂ ಆಚರಿಸುತ್ತಾರೆ.)

ಹನುಮಂತನಾರು.....

ಅನೇಕರು ಹೇಳುವದುಂಟು ಹನುಂತ ಶಿವನ ಅವತಾರಿ ಎಂದು. ಅಂಜೆನಾ ದೇವಿಯ ಪತಿ ವಾಯು. ಹಾಗಾಗಿ ವಾಯುಪುತ್ರ ಎಂದು ಪ್ರಸಿದ್ಧ ಎಂದು. ಅದೆಲ್ಲ ಅಷ್ಟು ಸರಿಯಾದ ತತ್ವವಲ್ಲ. 

ಅಂಜನಾ ದೇವಿ ಹಾಗೂ ಕೇಸರಿ ಎಂಬ ದಂಪತಿಗಳಲ್ಲಿ, ಮೂಲರೂಪಿಯಾದ ವಾಯುದೇವರ ಅನುಗ್ರಹದಿಂದ, ವಾಯುದೇವರೇ  ಮೊಟ್ಟ ಮೊದಲು ಅವತಾರ ರೂಪದಿಂದ ಹನೂಮಾನ್ ಎಂದು ಜನಿಸಿ ಬಂದರು. ಇದು ರಾಮಾಯಣ ಪ್ರಸಿದ್ಧ. ವೇದಸಿದ್ಧ. 

ಹನೂಮಂತದೇವರಲ್ಲಿಯ ಗುಣ ಶಕ್ತಿಗಳು

"ಹನು" ಜ್ಙಾನ. ಹನೂಮಾನ್ ಅನಂತ ಜ್ಙಾನ ಸ್ವರೂಪಿಯಾಗಿರುವವರು ಹನೂಮಂತ ದೇವರು. ಕೇವಲ ಜ್ಙಾನ‌ಮಾತ್ರವಲ್ಲ, "ಧರ್ಮ, ವಿಜ್ಙಾನ, ವೈರಾಗ್ಯ, ಐಶ್ವರ್ಯ, ಬುದ್ಧಿ, ಪ್ರಜ್ಙಾ, ಮೇಧಾ, ಧೃತಿ, ಸ್ಥೈರ್ಯ, ಬಲ, ಭಕ್ತಿ, ಸಹನೆ, ದಯೆ, ಕ್ಷಮೆ, ಸಾಮರ್ಥ್ಯ, ವಿನಯ, ಮುಂತಾದ ಅನಂತಾನಂತ ಗುಣಗಳು ಮೂಲರೂಪದಲ್ಕಿ ಇವೆಯೋ ಆ ಎಲ್ಲ ಗುಣಗಳೂ  ಈ ಹನುಮಂತ ರೂಪದಲ್ಲಿ ಇವೆ" ಎಂದು ಬಳಿತ್ಥಾಸೂಕ್ತದಲ್ಲಿ ಸ್ಪಷ್ಟ ಪಡಿಸುತ್ತಾರೆ. 

ಹನುಮಂತದೇರು - ನಾವು...
ಹನುಮಂತ ದೇವರಲ್ಲಿ ಅನಂತ ಗುಣಗಳಿವೆ. ಆ ಗುಣಗಳೆಲ್ಲದರಲ್ಲಿ ನಮ್ಮ ಶಕ್ತಿಗನುಗುಣವಾಗಿ ನಾವು ಏನೆಲ್ಲ ಗುಣಗಳನ್ನು ತಿಳಿಯುತ್ತೇವೆಯೋ ಆ ಎಲ್ಲ ಗುಣಗಳಿಂದ ಹನುಮಂತದೇವರು ನಮ್ಮಲ್ಲಿ ಪ್ರವೇಶಿಸುತ್ತಾರೆ. ಸ್ವಾರ್ಥಕ್ಕೋಸ್ಕರವಾಗಿಯಾದರೂ ನಿತ್ಯ ಹನುಮಂತ ದೇವರ ಗುಣಗಳನ್ನು ತಿಳಿದು ಅಭಿಷೇಕ ಸ್ತೋತ್ರ ಚಿಂತನೆ ಧ್ಯಾನ ಮಾಡುವದು ಅನಿವಾರ್ಯ. 
******

ಶಿವದ್ರೂಪ ಹನೂಮ - ಹನುಮಂತನನ್ನು ಪುರಾಣಗಳಲ್ಲಿ ಶಿವನ ಒಂದು ಅಂಶ , ಶಿವದ್ರೂಪ ಅಂತ ಹೇಳುತ್ತೇವೆ , ಹೇಗೆ ಅನ್ನುವದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ ?

ಸಮುದ್ರ ಮಂಥನ ಸಮಯದಲ್ಲಿ ಧನ್ವಂತರಿ ಅಮೃತ ಕಲಶವನ್ನು ಹಿಡಿದು ಬಂದಾಗ ರಾಕ್ಷಸರೆಲ್ಲ ಅವನನ್ನು ಬೆನ್ನಟ್ಟಿದರು , ಆಗ ವಿಷ್ಣು ಹೆಣ್ಣು ರೂಪವನ್ನು ಧರಿಸಿ ಅವರನ್ನೆಲ್ಲ ತನ್ನ ಮೊಹಕ ರೂಪದಲ್ಲಿ ಮೋಹಗೊಳಸಿದ . ಆ ಮೋಹಿನಿ ರೂಪವನ್ನು ಕಂಡು ಸಾಕ್ಷಾತ್ ಲಕ್ಷೀ ಕೂಡಾ ಇವನಿಗೆ ಅನ್ಯರೇಕೆ ಎಂದು ಬೆರಗುಗೊಂಡಳು..‌‌...

ಒಂದಾನೊಂದು ಸಮಯದಲ್ಲಿ ಶಂಭುವಿಗೆ ವಿಷ್ಣುವಿನ ಮೋಹಿನಿ ರೂಪದ ದರ್ಶನ ವಾಯಿತು.  ಅವನು ಕೂಡಾ ಮೋಹಿನಿ ರೂಪಕ್ಕೆ ಮೋಹಿತನಾದನು.  ಕಾಮಬಾಣದಿಂದ  ಆಹತನಾದ ಶಂಭುವಿನ  ವೀರ್ಯಪಾತವಾಯಿತು. ಆಗ ಸಪ್ತ ಋಷಿಗಳು  ಆ ವೀರ್ಯ ವನ್ನು ಪತ್ರ ಸಂಪುಟದಲ್ಲಿಟ್ಟು  ಜತನ ಮಾಡಿದರು .  ಮುಂದೆ  ವಿಷ್ಣು ರಾಮನವತಾರದಲ್ಲಿ  ಭೂಲೋಕದಲ್ಲಿ ಜನ್ಮ ತಾಳಿದಾಗ ಶಿವನ  ಪ್ರೇರಣೆಯಂತೆ  ರಾಮ ಕಾರ್ಯ ದುರಂಧರನ  ನಿರ್ಮಾಣಕ್ಕಾಗಿ  ಆ ವೀರ್ಯವು  ಗೌತಮ ಪುತ್ರಿ  ಅಂಜನಾದೇವಿ  ಕರ್ಣದ್ವಾರವಾಗಿ  ಅವಳ ದೇಹದಲ್ಲಿ ಸ್ಥಾಪಿಸಲ್ಪಟ್ಟಿತು. ಯೋಗ್ಯ ಕಾಲದಲ್ಲಿ  ಅವಳು ಹನೂಮಂತನನ್ನು ಪ್ರಸವಿಸಿದಳು.  ಆಂಜನೇಯನು ಅದ್ಭುತ ಕಾರ್ಯವನ್ನು ಮಾಡಿದನು . ಅವನು ರಾಮಕಾರ್ಯಕ್ಕಾಗಿ ಜನ್ಮ ತಾಳಿದ್ದರಿಂದ ಅತ್ಯಂತ ನಿಷ್ಠೆಯಿಂದ ರಾಮನ ಸೇವೆ ಮಾಡಿದನು. ಇವನು ಸುಗ್ರೀವ ನ ಮಂತ್ರಿಯಾಗಿಯೂ ರಾಮನ ಸೇವಕನಾಗಿಯೂ ದುಡಿದನು . ಇವನಿಂದಲೇ ಲಕ್ಷ್ಮಣನು ಮರು ಜನ್ಮ ಪಡೆದನು.  ಭೂಮಂಡಲದಲ್ಲಿ ಶ್ರೀರಾಮ ಭಕ್ತನೆನಿಸಿದ..... 

ಜೈ ಶ್ರೀರಾಮ  ವೀಣಾ ಜೋಶಿ..
******* 
ವಾಯು ಮಹಿಮಾ.... ೦೧

ವಾಯುದೇವರ ಮಹಿಮೆಯನ್ನು ಯಾಕೆ ತಿಳಿಯಬೇಕು.... ???

ವಾಯುದೇವರ ಮಹಿಮೆಯನ್ನು ತಿಳಿಯುವದು ಅತ್ಯವಶ್ಯಕ. ಅದಕ್ಕೆ ನೂರಾರು ಸಾವಿರಾರು ಕಾರಣಗಳು ಇವೆ. ಒಂದೆರಡು ತಿಳಿಯುವ ಪ್ರಯತ್ನ ಮಾಡುವೆ. 

೧) ವಾಯುದೇವರ ಮಹಿಮೆಯನ್ನು ತಿಳಿಯುವದರಿಂದ ಭಗವನ್ಮಹಿಮೆ ಅತಿಶಯವಾಗಿ ತಿಳಿದು ಬರುತ್ತದೆ ಆದ್ದರಿಂದ ವಾಯು ಮಹಿಮೆ ತಿಳಿಯುವದು ಅತ್ಯವಶ್ಯಕ.

೨) ನಮ್ಮ ಈ ದೇಹ ಸಾಧನ ದೇಹ. ಸಾಧನ ಶರೀರವಾದ ಈ ದೇಹ ಇಂದ್ರಿಯ ಮನಸ್ಸಿಗೆ ಮುಖ್ಯ ನಿಯಾಮಕರು ವಾಯುದೇವರು. ಅವರನ್ನು ತಿಳಿದು ಸಂತೋಷಪಡಿಸಿ ಅನುಗ್ರಹ ಸಂಪಾದಿಸಿಕೊಂಡಾಗಲೇ ಸಾಧನೆಯಲ್ಲಿ ಪ್ರೇರಿಸುತ್ತಾರೆ. ಆ ಕಾರಣದಿಂದಲೂ ವಾಯುಮಹಿಮೆಯನ್ನು ತಿಳಿಯುವದು ಅನಿವಾರ್ಯ. 

೩) ನಮ್ಮ ಆಯುಷ್ಯ ಮತ್ತು ಜ್ಙಾನ ಇವುಗಳ ಸಾರ್ಥಕತೆಗೆ ಬೇಕು ಜ್ಭಾನ ಮತ್ತು ಆಯುರ್ನಾನಮಕರಾದ ವಾಯುದೇವರ ಅನುಗ್ರಹ. ಆದ್ದರಿಂದ ವಾಯುದೇವರ ಆರಾಧನೆ ಅತ್ಯವಶ್ಯಕ.

೪) "ಮಧ್ಯಮ ಪ್ರಾಣ" ರು ವಾಯುದೇವರು. ಇವರೊಬ್ವರನ್ನು ಸಂತೋಷ ಪಡಿಸುವದರಿಂದ, ವಾಯುದೇವರ ಕಿಂಕರರಾದ ರುದ್ರಾದಿ ಸಕಲ ದೇವತೆಗಳೂ ಸಂತೃಪ್ತರಾಗುತ್ತಾರೆ. ಹಾಗೇಯೇ ವಾಯುದೇವರೊಬ್ವರ ತುಷ್ಟಿಯಿಂದ ವಾಯುದೇವರ ಅಂತರ್ಯಾಮಿ ಶ್ರೀಹರಿಯ ಸಂತುಷ್ಟಿಯೂ ಇದೆ ಆದ್ದರಿಂದ ವಾಯುದೇವರ ಚಿಂತನೆ ಅನಿವಾರ್ಯ. 

೫)ಮುಖ್ಯವಾಹಿ  ವಾಯುಃ "ಸರ್ವದೇವೋತ್ತಮ" ಇತಿ ಜ್ಙಾನಾನ್ನಚಾಪರಮ್ | ಪ್ರಿಯಮಸ್ತಿ ಹರೇಃ ಕಿಂಚಿತ್ ಯಥಾ ವಾಯೋರ್ಹರೇರ್ವಿದಃ|| ಎಂದು ಆಚಾರ್ಯರು ತಿಳಿಸಿದಂತೆ, ವಾಯುದರೆವರನ್ನು ಸರ್ವದೇವೋತ್ತಮರು- ಜೀವೋತ್ತಮರು ಎಂದು ತಿಳಿಯುವದರಿಂದ ದೇವರುಗೆ ಅತಿಶಯಿತ ಪ್ರೀತಿ ಆಗುತ್ತದೆ. ಇಷ್ಟು ಪ್ರೀತಿ ಇನ್ಯಾವದರಿಂದಲೂ ಆಗುವದಿಲ್ಲ ಎಂದೇ ಸಾರುತ್ತಾರೆ.

 ಹೇಗೇ ಅಂದರೆ ದೇವರನ್ನು ಸರ್ವೋತ್ತಮ ಎಂದು ತಿಳಿದರೆ ವಾಯುದೇವರಿಗೆ ಎಷ್ಟು ಪ್ರೀತಿ ಆಗುತ್ತದೆಯೋ ಅಷ್ಟು ಪ್ರೀತಿ ವಾಯುದೇವರನ್ನು ಜೀವೋತ್ತಮ ಎಂದು ತಿಳಿಯುವದರಿಂದ. ಆದ್ದರಿಂದ ವಾಯು ಮಹಿಮೆಯನ್ನು ತಿಳಿಯಬೇಕು....

೬) ಮೋಕ್ಷ ಕೊಡುವ ದೇವರ ಬಳಿ ಕರೆದೊಯ್ಯುವವರು ವಾಯುದೇವರೊಬ್ವರೇ, ಆದ್ದರಿಂದಲೂ ವಾಯುದೇವರ ಮಹಿಮೆ ತಿಳಿಯುವದು ಅನಿವಾರ್ಯ. 

೭) ಕೇವಲ ದೇವರಲ್ಲಿ ಭಕ್ತಿ ಮಾಡಿದರೆ ಮೋಕ್ಷ ಸರ್ವಥಾ ಇಲ್ಲ. ಜೊತೆಗೆ ವಾಯುದೇವರಲ್ಕಿ ಭಕ್ತಿ ಮಾಡುವದೂ ಅಷ್ಟೇ ಅನಿವಾರ್ಯ. ದೇವರಲ್ಕಿ ಭಕ್ತಿ ಬರಲು ಮಹಾಭಾರತ ಭಾಗವತ ರಾಮಾಯಣ ಕೇಳುವದು ತಿಳಿಯುವದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯ ವಾಯುದೇವರಲ್ಲಿ ಭಕ್ತಿ ಬರಲು ವಾಯು ಮಹಿಮೆಯನ್ನು ಕೇಳುವದು ತಿಳಿಯುವದು. 

ಹಾಗಾಗಿ ಈ ಅಧಿಕದ ಕೊನೇಯ ಈ ಪ್ರಸಂಗದಲ್ಕಿ ವಾಯುಮಹಿಮೆಯನ್ನೂ ಕೇಳಿ, ಭಕ್ತಿ ಸಂಪಾದಿಸಿಕೊಂಡು ಆ ವಾಯುದೇವರಲ್ಕಿ ಸಂಪಾದಿಸಿ ಎಲ್ಲ ಪುಣ್ಯವನ್ನೂ ಸಮರ್ಪಿಸೋಣ.

✍🏽✍🏽✍🏽ನ್ಯಾಸ....
ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ
*****

ಕಾಣಿಸುತ್ತಿರುವ ಎಲೆಯನ್ನು ಸರಿಯಾಗಿ ನೋಡಿ....
ಆ ಎಲೆಯ ಎರಡೂ ಬದಿಯಲ್ಲಿ ಹನುಮಂತನ ರೂಪ ಕಾಣುತ್ತದೆ.....
ಅದೇ ಈ ಎಲೆಯ ವಿಶೇಷ.
ಹನುಮದ್ಬಿರಮ್ ಎಂದು ಹೇಳಲ್ಪಡುವ ಈ ಮರಗಳು ಶ್ರೀಶೈಲ ಆರಣ್ಯದಲ್ಲಿ ಕಂಡು ಬರುತ್ತವೆ.

ಪ್ರಕೃತಿ ಚಿತ್ರಿತ ಈ ಎಲೆಯ ಮರಗಳು ಪ್ರಪಂಚದ ಮತ್ತೆ ಎಲ್ಲಿಯೂ ಕಂಡು ಬರುವುದಿಲ್ಲ.

********

ಹನುಮಂತನ 108 ಹೆಸರುಗಳು

1.ಆಂಜನೇಯ
2.ಮಹಾವೀರಾಯ.
3.ಹನುಮತೇ
4.ಮಾರುತಾತ್ಮಜಾಯ.
5.ತತ್ತ್ವಜ್ಞಾನ ಪ್ರದಾಯ
6.ಸೀತಾದೇವಿ ಮುದ್ರಾ ಪ್ರದಾಯಕಾಯ
7.ಅಶೋಕವನ ಚರಿತ್ರೆ
8.ಸರ್ವ ಮಯಿ ವಿಭಾನನಾಯ.
9.ಸರ್ವ ಬಂಧ ವಿಮೋಕ್ಟ್ರೆ
10.ರಕ್ಷೋ  ವಿದ್ವಾನ್ ಸಾಕಾರಕಾಯ.
11.ಪರವಿದ್ಯಾ ಪರಿಹಾರಾಯ.
12.ಪರ ಶೌರ್ಯ ವಿನಾಶ ಕಾಯ.
13.ಪರ ಮಂತ್ರ ನಿರಾಕರತ್ರೆ.
14.ಪರ ಯಂತ್ರ ಪ್ರಬೋಧ ಕಾಯ.
15.ಸರ್ವಗ್ರಹ ವಿನಾಶಿನೆ.
16.ಭೀಮ ಸೇನ ಸಹಾಯಕ್ರಿತೆ .
17.ಸರ್ವ ದುಃಖ ಹರಾಯ.
18.ಸರ್ವಲೋಕ ಚಾರಿಣೆ.
19.ಮನೋಜವಾಯ.
20.ಪಾರಿಜಾತ ದೃಮೂಲಸ್ಥಾಯ.
21.ಸರ್ವ ಮಂತ್ರ ಸ್ವರೂಪಾಯ.
22.ಸರ್ವ ತಂತ್ರ ಸ್ವರೂಪಿಣಿ.
23.ಸರ್ವ ಯಂತ್ರಾತ್ಮಕಾಯ.
24.ಕಪೀಶ್ವರಾಯ.
25.ಮಹಾ ಕಾಯಾಯ.
26.ಸರ್ವರೋಗ ಹರಾಯ.
27.ಪ್ರಭಾವೆ.
28.ಬಲ ಸಿದ್ದಿ ಕರಾಯ.
29.ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯ.
30.ಕಪಿ ಸೇನಾನಾಯಕಾಯ.
31.ಭವಿಷ್ಯತ್ ಚತುರಾನನಾಯ.
32.ಕುಮಾರ ಬ್ರಹ್ಮಚಾರಿಣೆ.
33.ರತ್ನ ಕುಂಡಲಾಯ.
34.ದೀಪ್ತಿ ಮತೆ.
35.ಚಂಚಲ ದ್ವಾಲಸನ್ನದಾಯ.
36.ಲಂಬಾ ಮಾನಶೀಕೋ ಜ್ವಾಲಾಯ.
37.ಗಂಧರ್ವ ವಿಧ್ಯಾಯ.
38.ತತ್ತ್ವಜ್ಞಾನಾಯ.
39.ಮಹಾಬಲ ಪರಾಕ್ರಮಾಯ.
40.ಕಾರಾಗ್ರಹ ವಿಮೋಕ್ತ್ರೆ.
41.ಶ್ರೀoಕಲ ಬಂದ ಮೋಚಕಾಯ.
42.ಸಾಗರೋತ್ತರಕಾಯ.
43.ಪ್ರಗ್ಯಾಯ .
44.ರಾಮದೂತಾಯ.
45.ರಾಮ ದೇವತೆಯ
46.ಪ್ರತಾಪವತೆ.
47.ಕೇಸರಿ ಸುತಾಯ.
48.ಸೀತಾ ಶೋಕ ನಿವಾರಕಾಯ.
49.ಅಂಜನಾ ಗರ್ಭ ಸಂಭೂತಾಯ.
50.ಬಾಲ ರಕ್ಷಾದ್ರಶಾನನಾಯ.
51.ವಿಭೀಷಣ ಪ್ರಿಯಕರಾಯ.
52.ದಶಗ್ರೀವ ಕೂಲಂಥಕಾಯ.
53.ಲಕ್ಷ್ಮಣ ಪ್ರಾಣ ದಾತ್ರೆ.
54.ವಜ್ರಕಾಯಾಯ.
55.ಮಹಾದ್ಯುತಾಯ.
56.ಚಿರಂಜೀವಿನೆ.
57.ರಾಮ ಭಕ್ತಾಯ.
58.ದೈತ್ಯ ಕಾರ್ಯ ವಿಗಾನಕಾಯ.
59.ಅಕ್ಷಹಂತ್ರೆ.
60.ಕಜಾರಚನಭಯ.
61.ಪಜಂಚ ವಕ್ರತಾಯ.
62.ಮಹಾತಪಸ್ಸೀ.
63.ಲಂಕಿಣಿ ಭಂಜನಾಯ.
64.ಶ್ರೀಮತೆ.
65.ಸಿಂಹಿಕಾ ಪ್ರಾಣ ಭಂಜನಾಯ.
66.ಗಂಧಮಾರನ ಶೈಲಸತಾಯ.
67.ಲಂಕಾಪುರ ವಿದ್ಯಾಯಕಾಯ.
68.ಸುಗ್ರೀವ ಸಚಿವಾಯ.
69.ದೀರಾಯ.
70.ಶೂರಾಯ.
71.ದೈತ್ಯ ಕೂಲಾಂತಕಾಯ.
72.ಸುವರ್ಚಲಾಯ್ ಚಿತಾಯ.
73.ತೇಜಸೇ.
74.ರಾಮಚೂಡಾಮಣಿ ಪ್ರದಾಯ ಕಾಯ.
75.ಕಾಮರೂಪಿಣೆ.
76.ಪಿಂಗಳಾಕ್ಷಯ.
77.ವರಾದಿ ಮಾನಕ ಪೂಜಿತಾಯ.
78.ಕಂಬಳಿ ಕೃತ ಮಾರ್ತಾಂಡ ಮಂಡಲಾಯ.
79.ವಿಜಿತೇಂದ್ರಯಾಯಾ.
80.ರಾಮ ಸುಗ್ರೀವ ಸಂದಾತ್ರೆ.
81.ಮಹೀರಾವಣ ಮರ್ಧನಾಯ.
82.ಸ್ಪತಿಕಾಭಯ.
83.ವಾಗದೀಶಾಯ.
84.ನವ ವ್ಯಾಕ್ರಿತ ಪಂಡಿತಾಯ.
85.ಚತುರಭಾವೆ.
86.ದೀನ ಬಂಧು ಧಾರಾಯ.
87.ಮಾಯಾತ್ಮನೇ.
88.ಭಕ್ತ ವತ್ಸಲಾಯ.
89.ಸಂಜೀವಿನಿ ಆಗ್ಯಾರ್ಥಾಯ.
90.ಸುಚಯೇ.
91.ವಾಗ್ಮಿನೇ.
92.ತ್ರಿದವರ್ತಾಯ.
93.ಕಾಲನೇಮಿ  ಪರಮಾತ್ಮನಾಯ.
94.ಹರಿಮರ್ಕಟ ಮರ್ಕಟಾಯ.
95.ದಂತಾಯ.
96.ಶಾಂತಾಯ.
97.ಪ್ರಸನ್ನಾತ್ಮನೇ.
98.ಶಾಂತ ಕಾಂತಮುದ ಪಹರತ್ತೇ.
99.ಯೋಗಿಣೇ.
100.ರಾಮಕಥಾ ಲೋಲಾಯ.
101.ಸೀತಾನ್ವೇಷಣೆ ಪತಿತಾಯ.
102.ವಜ್ರದನುಷ್ಠಾಯ.
103.ವಜ್ರನಾಯಕಾಯ.
104.ರುದ್ರವೀರ್ಯ ಸಮದ್ಭವಾಯ.
105.ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯ.
106.ಪಾರ್ಥ ಧ್ವಜಗ್ರಸ ವಾಸಿನೇ.
107.ದಶಭಾವೆ.
108.ಲೋಕಪೂಜ್ಯಾಯ.*
******

ಘಟಿಕಾಛಲದಿ ನಿಂತ ಶ್ರೀ ಹನುಮಂತ 

ಶ್ರೀ ಹನುಮಂತ               ||ಘಟಿಕಾ||

ಘಟಿಕ ಛಲದಿ ನಿಂತ ವಟು ಹನುಮಂತನ||2||

ಪಟನೆಯ ಮಾಡಲು ತಟದಿ ಪೊರೆವೆನೆಂದು||2||
                                        ||ಘಟಿಕಾಛಲದಿ||

ಹನುಮಂತ ಹನುಮಂತ ಘಟಿಕಾಛಲದಿನಿಂತ||2||


ಚತುರಾಯುಗದಿ ತಾನು ಅತಿ ಭಲವಂತನು

ಚತುರ್ಮುಖನಯ್ಯನಾ||ಚತುರಾಯುಗದಿ||
ಚತುರಮೂರುತಿಗಳ ಚತುರತನದಿ ಭಜಿಸಿ||2||
ಚತುರ್ಮುಖನಾಗಿ ಚತುರ್ವಿಧ ಫಲ ಕೊಡುತ||2||
                                       ||ಘಟಿಕಾಛಲದಿ||

ಹನುಮಂತ ಹನುಮಂತ ಘಟಿಕಾಛಲದಿನಿಂತ||2||


ಸರಸಿಜಭವಗೋಸ್ಕರಾ ಕಲ್ಮಷಾದೂರಾ

ವರಚಕ್ರತೀರ್ಥಸರ            ||ಸರಸಿಜ||
ಮೆರೆವ ಛಲದಿ ನಿತ್ಯ ನರಹರಿಗೆದುರಾಗಿ||2||
ಚಿರಯೋಗಾಸನದಿ ವರವ ಕೊಡುವೆನೆಂದು||2||
                                    ||ಘಟಿಕಾಛಲದಿ||

ಹನುಮಂತ ಹನುಮಂತ ಘಟಿಕಾಛಲದಿನಿಂತ||2||


ಶಂಖ ಚಕ್ರವ ಧರಿಸಿ ,ಭಕ್ತರ ಮನದಾ

ಭಂಗವ ಪರಿಹರಿಸಿ           ||ಶಂಖ||
ಪಂಕಜನಾಭ ಶ್ರೀ ಪುರಂದರವಿಠ್ಠಲನ||2||
ಬಿಂಕದ ಸೇವಕ ಸಂಕಟ ಕಳೆಯುತ||2||

                                  ||ಘಟಿಕಾಛಲದಿ||
******



||ನಂಬಿದೆ ನಿನ್ನ ಪಾದ ಗುರು ಮುಖ್ಯ ಪ್ರಾಣ||
🙏🙏🙏🙏
ಸೀತಾದೇವಿಯ ಅನ್ವೇಷಣೆ ಗೆ ಸುಗ್ರೀವನ ಆಜ್ಞೆಯನ್ನು ಪಾಲಿಸಲೋಸುಗ ಕಪಿಗಳ ಸಮೂಹವೆಲ್ಲವು ನಾಲ್ಕು ದಿಕ್ಕಿಗೆ ಹೊರಟಿದ್ದಾರೆ.
ದಕ್ಷಿಣ ದಿಕ್ಕಿಗೆ ಹನುಮಂತ, ಜಾಂಬವಂತ,ಇನ್ನೂ ಅನೇಕ ಕಪಿಗಳ ಸಮೂಹ ಹೊರಟಿದೆ.
ಹನುಮಂತ ದೇವರು ಹೊರಡುವ ಮುನ್ನ ಶ್ರೀ ರಾಮಚಂದ್ರ ದೇವರು ತನ್ನ ಮುದ್ರಿಕೆ ಯನ್ನು  ಅವರಿಗೆ ಕೊಟ್ಟಿದ್ದಾರೆ.
ನೂರು ಯೋಜನದ ಸಾಗರವನ್ನು ಲಂಘಿಸಿ,ರಕ್ಕಸರನ್ನು  ಸಂಹರಿಸಿ ,ಸೀತಾದೇವಿ ಕೊಟ್ಟ ಚೂಡಾಮಣಿ ಯನ್ನು ತಂದು ರಾಮಚಂದ್ರ ದೇವರಿಗೆ ಕೊಟ್ಟಿದ್ದಾರೆ.
ಶ್ರೀರಾಮಚಂದ್ರ ದೇವರು ಸೀತಾ ಅನ್ವೇಷಣೆಗೆ ಹನುಮಂತ ದೇವರ ಜೊತೆಯಲ್ಲಿ ಹೊರಟ ಎಲ್ಲಾಕಪಿಗಳಿಗು ಅನುಗ್ರಹ ಮಾಡಿದ್ದಾರೆ.

ಒಂದು ಪ್ರಶ್ನೆ.?? 
ನೂರು ಯೋಜನ ಸಾಗರ ದಾಟಿದ್ದು , ರಕ್ಕಸರ ಸಂಹಾರ ಮಾಡಿದ್ದು ಹನುಮಂತ ನಾದರೆ ಈ ಕಪಿಗಳು ಯಾರು ಲಂಕಾ ಪಟ್ಟಣಕ್ಕೆ ಹೋಗಿಲ್ಲ?? ಮತ್ತೆ ಶ್ರೀರಾಮಚಂದ್ರ ದೇವರ ಬಳಿ ಹೋಗುವ ಅರ್ಹತೆ ಹೇಗೆ ಬಂತು??
ಉತ್ತರ.
ಹನುಮಂತದೇವನ ಹಿಂದೆ ಇದ್ದವರು ಎಂಬುದೇ ಶ್ರೀರಾಮಚಂದ್ರದೇವನ ಬಳಿ ಸಾರಲು ಅರ್ಹತೆ..ಇತರ ಕಪಿಗಳು ಸೀತೆಯನ್ನಿರಲಿ, ಸೀತಾಕೃತಿಯನ್ನು ಕೂಡ ಕಂಡವರಲ್ಲ..ಸಮುದ್ರ ದಾಟಿದವರಲ್ಲ..ಅಶೋಕವನ  ನಾಶ ಮಾಡಿದವರಲ್ಲ..ರಕ್ಕಸರ ಸಂಹಾರ ಮಾಡಿದವರಲ್ಲ.. ಲಂಕೆಯನ್ನು ಸುಟ್ಟವರಲ್ಲ..
ಆದರೆ 
ಅದನ್ನೆಲ್ಲವನ್ನು ಮಾಡಿದ ಹನುಮಂತದೇವನ ಹಿಂದೆ ಇದ್ದವರು ಎಂಬುದೇ ಅವರು ಉಳಿಯಲು ಹಾಗೂ ಶ್ರೀರಾಮಚಂದ್ರ ದೇವನ ಬಳಿ ಸಾರಲು ಅರ್ಹತೆಯಾಯಿತು...
ಅದರಂತೆ ಭಗವತ್ಕಾರ್ಯಸಾಧಕರಾದ ಜೀವೋತ್ತಮರಾದ ಹನುಮಂತ ದೇವರ ಇನ್ನೊಂದು ಅವತಾರವಾದ ಶ್ರೀಮಧ್ವಾಚಾರ್ಯರ ಅನುಯಾಯಿಗಳಾಗಿ ಬದುಕುವುದೇ ಸರ್ವೋತ್ತಮನಾದ ಭಗವಂತನನ್ನು ಸಮೀಪಿಸಲು ಅಪೂರ್ವ ಸಾಧನವಾಗಿದೆ...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
|ಎಣೆಯಾರೋ ನಿನಗೆ
ಹನುಮಂತ ರಾಯ|
|ಎಣೆಯಾರೋ ನಿನಗೆ ತ್ರಿಭುವನದೊಳಗೆ||🙏

ಶ್ರೀ ಹನುಮಜಯಂತಿಯ ನಮಸ್ಕಾರ ಗಳು ಎಲ್ಲಾ ಹರಿಭಕ್ತರಿಗೆ.
*************



ಇಂದಿನ ಶುಭ ದಿನ ಶುಭ ವಾರ ಮಾಲಿಕೆಯಲ್ಲಿ ಶ್ರೀ ಮುಖ್ಯಪ್ರಾಣ ದೇವರು.

ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ಮುಖ್ಯಪ್ರಾಣ ದೇವರ ,ವಾಯುದೇವರನ್ನು  ಜೀವೋತ್ತಮನೆಂದು ವರ್ಣಿಸುವ ಅದ್ಭುತ ಪ್ರಸಂಗ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮ ದೂತಂ ಶಿರಸಾ ನಮಾಮಿ.//.

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

ನಮಸ್ತೇ ಪ್ರಾಣೇಶ ಪ್ರಣತವಿಭವಾಯಾನಿಮಗಾ:/
ನಮಃ ಸ್ವಾಮಿನ್ ರಾಮ ಪ್ರಿಯತಮ ಹನೂಮಾನ್ ಗುರುಗುಣ/

ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮಃ ಶ್ರೀ ಮನ್ ಮಧ್ವ ಪ್ರದಿಶ ಸುದೃಶ್ಯಂನೋ ಜಯ ಜಯ//..

ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ವಾಯುದೇವರು.

ಒಂದಾನೊಂದು ಕಾಲದಲ್ಲಿ ಶಿವ ಮೊದಲಾದ ಇಂದ್ರಿಯಾಧೀಶರು  ನಾನು ಶ್ರೇಷ್ಠ ನಾನು ಶ್ರೇಷ್ಠ ಎಂಬ ಅಹಂಕಾರ ಪಟ್ಟರು.

ಇವರೆಲ್ಲಾ ದೇವತೆಗಳು ಬ್ರಹ್ಮಾಪರೋಕ್ಷಿಗಳು ,ಸರ್ವಜ್ಞರೂ ಆಗಿದ್ದರು.ಶುದ್ಧ ಸ್ವಭಾವದ ಇವರಲ್ಲಿ  ಕಲಹವನ್ನುಂಟು ಮಾಡುವ ಕಲಿಯ ಪ್ರವೇಶವಾಗಿದ್ದರಿಂದ  ಈ ರೀತಿ ಅಹಂಕಾರ ಬುದ್ಧಿ  ಉಂಟಾಗುತ್ತದೆ.

ಈ ರೀತಿಯಾದ ಶ್ರೇಷ್ಠ ತೆಯ ಅಹಂಕಾರ ವನ್ನು ದೇವತೆ ಗಳು ಹೊಂದಿ. ಪರಸ್ಪರ ಕಲಹ ಗಳುಂಟಾಯಿತು.

ಶ್ರೀ ಮುಖ್ಯಪ್ರಾಣ ದೇವರು ತನ್ನ ವರಾದ ದೇವತೆಗಳಿಗೆ 
ಬುದ್ದಿ ಹೇಳಲು ಶಕ್ತನಾಗಿದ್ದರೂ  ಈ ರೀತಿ ಒಂದು ಉಪಾಯ ವನ್ನು ಮಾಡಿಸಿದನು. ತಾನೇ ತನ್ನ ಮಹಿಮೆ ಗಳನ್ನು ಹೇಳಿಕೊಂಡರೆ ನಾನು ಅಹಂಕಾರಿ ಎಂಬ ಭಾವನೆ ಬರುತ್ತದೆ ಎಂದು ಚತುರ್ಮುಖ ಬ್ರಹ್ಮನ ಬಳಿ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ಬ್ರಹ್ಮ ಲೋಕಕ್ಕೆ ಹೋದನು.

ಆಗ ಎಲ್ಲಾ ದೇವತೆ ಗಳು ಬ್ರಹ್ಮ ದೇವರನ್ನು "ನಮ್ಮಲ್ಲಿ ಯಾರು ಶ್ರೇಷ್ಠರು.? ಎಂದು ಕೇಳುತ್ತಾರೆ.

ಆಗ ಬ್ರಹ್ಮ ದೇವರು "ಯಾರು ಶರೀರದಿಂದ ಮೇಲೆಕ್ಕೆದ್ದು ಹೋದರೆ ಶರೀರವು ಬೀಳುವುದೋ,
ಯಾರು ಪ್ರವೇಶ ಮಾಡಿದರೆ ಶರೀರವು ನಿಲ್ಲುವುದೋ 
ಆ ದೇವತೆ ಯು ಗುಣಗಳಿಂದ ಶ್ರೇಷ್ಟನು,ವಯಸ್ಸಿನಿಂದಲೂ ಅವನೇ ಸರ್ವಜ್ಯೇಷ್ಟನು "
ಎಂದು ಹೇಳಿದರು.

ಈ ರೀತಿ ಯಾಗಿ ಹೇಳಿದಾಗ ಆ ದೇವತೆಗಳು ಶರೀರದಿಂದ ಒಬ್ಬೊಬ್ಬರಾಗಿ ಹೊರಬಂದರೂ ಮುಖ್ಯಪ್ರಾಣ ದೇವರ ಬಲದಿಂದ ಆ ದೇಹವು ಬೀಳಲಿಲ್ಲ.

ಹೀಗೆ ಕಣ್ಣು  ಕಿವಿಯ ಅಭಿಮಾನಿ ದೇವತೆ ಗಳು ಕ್ರಮವಾಗಿ ಹೊರಬಂದರೂ ಅತ್ಯಂತ ಬಲಶಾಲಿ ಯಾದ ಮುಖ್ಯಪ್ರಾಣನ ಸಾಮರ್ಥ್ಯ ದಿಂದಲೇ ದೇಹವು ಕುಸಿದು ಬೀಳಲಿಲ್ಲ.

ಮನೋಭಿಮಾನಿ,ಕಿವಿಯ ಅಭಿಮಾನಿ ದೇವತೆಗಳು ಒಂದು  ವರ್ಷದ ಕಾಲ ಹೊರಗಿದ್ದು ಅನಂತರ ಒಬ್ಬೊಬ್ಬರಾಗಿ ದೇಹವನ್ನು ಪ್ರವೇಶಿಸಿ ತಮ್ಮ ತಮ್ಮ ಇಂದ್ರಿಯಗಳಲ್ಲಿ ವಾಸಮಾಡಿದರು.
ಅಲ್ಲಿಗೆ ಅವರ ಅಹಂಕಾರ ಶಾಂತವಾಗಿತ್ತು.

ಆನಂತರ ತನ್ನ ಸರದಿ ಯೆಂದು ತಿಳಿದು ಮುಖ್ಯಪ್ರಾಣನು ಶರೀರದಿಂದ ಹೊರಗೆ ಬರಲು ಯತ್ನಿಸಿದಾಗ ಎಲ್ಲಾ ಇಂದ್ರಿಯ ದೇವತೆಗಳನ್ನು ಅವರವರ ಸ್ಥಳಗಳಿಂದ ಜಗ್ಗಿ ಎಳೆದಂತಾಯಿತು.

ಪ್ರಾಣದೇವರು ಹೊರಟಾಗ ಅವನ ಹಿಂದೆಯೇ ಹೊರಟರು.

ಆಗ ದೇಹವು ಕುಸಿದು ಬಿತ್ತು.

ಪುನಃ ಮುಖ್ಯಪ್ರಾಣ ನು ತನ್ನ ಜೊತೆಗೆ ಬಂದ ದೇವತೆ ಗಳನ್ನು ಬಿಟ್ಟು ತನ್ನ ಅಪಾರ ಶಕ್ತಿ ಯನ್ನು ತೋರಿಸಲು ತಾನೊಬ್ಬನೇ ಬ್ರಹ್ಮ ದೇಹವನ್ನು ಪ್ರವೇಶಿಸಿ ,ಯಾವ ಶಕ್ತಿಯಿಂದ ಈ ದೇಹವು ಎದ್ದಿತು ಎಂದು ತೋರಿಸಲು 
ತಾನಿಲ್ಲದಿದ್ದರೆ ಈ ದೇಹದಲ್ಲಿ ಶಕ್ತಿ ಇಲ್ಲ ವೆಂದು ತಿಳಿಸುವುದಕ್ಕಾಗಿ ಹಗ್ಗದ ಸಮೇತ ಗೂಟ ಕಿತ್ತಿದ ಕುದುರೆ ಯಂತೆ ಎಲ್ಲಾ ದೇವತೆ ಗಳನ್ನು ತನ್ನ ಜೊತೆಗೇ
ಎಳೆದುಕೊಂಡು  ಬಂದನು.

ಹೀಗೆ ಎಲ್ಲಾ ಇಂದ್ರಿಯಗಳಿಗಿಂತ ಪ್ರಾಣದೇವರ ಶ್ರೇಷ್ಠ ರೆಂದು ಸ್ಪಷ್ಟ ವಾಗುತ್ತದೆ.

ಎಲ್ಲರೂ ದೇಹದಲ್ಲಿ ಇದ್ದರೂ ಮುಖ್ಯಪ್ರಾಣ ನಿಲ್ಲದೇ ದೇಹವು ಏಳಲಾರದು .
ವಾಯು ದೇವರು ಇದ್ದರೆ ಮಾತ್ರ ವೇ ದೇಹ ನಿಲ್ಲುವುದು,ಕಾರ್ಯ ಸಮರ್ಥ ವಾಗುವುದು ಎಂದು ತಿಳಿದು ಬರುತ್ತದೆ.

ಶ್ರೀಪಾದರಾಜರು ರಚಿಸಿದ ಶ್ರೀ ಮಧ್ವನಾಮದಲ್ಲಿ 

ಜಯ ಜಯ ಜಗತ್ರಾಣ/ಜಗದೊಳಗೆ ಸುತ್ರಾಣ/
ಅಖಿಲ ಗುಣ ಸದ್ಧಾಮ ಮಧ್ವನಾಮ//.

ಆವಾತನು ದೇಹದಿರೆ ಹರಿಯು ತಾ ನೆಲೆಸಿರುವ
ಆವಾತನು ತೊಲಗೆ ಹರಿ ತಾ ತೊಲಗುವ/

ಆವಾತನು ದೇಹದೊಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲ ಗುರುರಾಯನು//

ಕರುಣಾಭಿಮಾನಿ ದಿವಿಜರು ದೇಹವನು ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ/

ಪರಮ ಮುಖ್ಯಪ್ರಾಣ ತೊಲಗಾಲ ದೇಹವನು
ಅರಿತು ಪೆಣನೆಂದು ಪೇಳ್ವರು ಬುಧಜನಾ//

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ ನೆಲಿಸಿಹ/

ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು//
ಎಂದು ವರ್ಣಿಸಿದ್ದಾರೆ.
//ಶ್ರೀ ಹರಿ ಸಮರ್ಪಣೆ.//

ಹರಿ ಸರ್ವೋತ್ತಮ ವಾಯು ಜೀವೋತ್ತಮ.//
**********

ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ ನಿನಗೆ ನಮೋ ನಮೋ
ಹನುಮ ನಿನಗೆ ನಮೋ ನಮೋ । ಹನುಮ ನಿನಗೆ ನಮೋ ನಮೋ ।।ಅಂಜನಾ ।।
ಅಂಜಾದ್ರಿ  ಸೀತೆಗೆ ಉಂಗುರವಿಟ್ಟ  ನಿನ್ನ ಚರಣ ಕಮಲಕೆ ನಮೋ ನಮೋ ।।ಅಂಜನಾ ।।

ದುರುಳಾಕ್ಷಯನ  ಕೊರಳನು ಕೊಯ್ದ ಶೂರ ಧೀರ ನಮೋ ನಮೋ ।
ಭರದಿ ಲಂಕಾಪುರವನು ಹರಣಕೆ  ಆಹುತಿ ಇಟ್ಟನೆ  ನಮೋ ನಮೋ ।।ಅಂಜನಾ ।।

ನಂದನ ಕಂದನ ಸುಂದರ ವದನನ  ನೆಂಟ ನಿನಗೆ ನಮೋ ನಮೋ ।
ಅಮೃತಶ್ರೀ ಸೌಗಂಧಿಕೆ ತಂದಿಟ್ಟ  ಕುಂತಿಯ ಕುಮಾರ ನಮೋ ನಮೋ ।।ಅಂಜನಾ ।।

ಯತಿಯಾಗಿ ಶ್ರೀಪತಿಯ ಪ್ರೀತಿಯ ಪಡೆದ ಮಧ್ವರಾಯ  ನಿನಗೆ ನಮೋ ನಮೋ ।

ಗತಿತೋರುವ ತಂದೆ ಪುರಂದರ ವಿಠಲನ ದಾಸಾದಾಯಿಯೇ ನಮೋ ನಮೋ ।।ಅಂಜನಾ ।।
**********
























*******
Suprabhatam

Yalagur Hanuman Temple

Hanuman at Yalagur temple, popularly known as ‘Speaking Hanumantha’ is extremely powerful and popular throughout the country and dearly called ‘Yalagur Hanumappa’. Yalagur is a small village in Muddebihal taluk, Vijayapura district in Karnataka. It is on the banks of river Krishna. The temple is located amidst splendid greenery and serene water body which is extremely soul soothing with a tranquil atmosphere all around. The temple belongs to the Madhwas (a sect of Brahmins-followers of Madhwacharya), and Yalaguresh at the temple is everyday worshipped by the learned Madhwa acharyas of the town.

History of Yalagur goes back to the time of Ramayana. As Shri Yalguresh stands in the village of Yalagur on the order of Shri Rama for seven villages (Elu Uresh = Yalguresh). It means that Lord Hanuman was ordered by Lord Rama to establish himself in seven different places to protect and bless the devotees and also to fulfill all their desires. Bowing down to Lord Rama’s order, Lord Hanuman enforced himself as seven, self-emerged idols and held his true existence in those idols then, now and forever. Yalagur temple is the main temple or the head of all the seven self-emerged temples.
Hence we find seven major Hanuman temples including Yalagur in and around Vijayapura and Bagalkot districts. Lord Hanuman either naturally emerged as idols of the temple or appeared in the dream of great devotees directing them to find the self-emerged idol. The seven temples of Lord Hanuman mostly called by the names of the places are at Yalagur (being the prime of all), Karwar, Tulasigeri, Halagani, Achanur, Govindinne, and Jangwad.

Interesting History

A priest had a dream where God asked him to break open the stone he was performing pooja on. Because there was Shri Hanuman’s idol hidden inside it. As pujari broke the stone irregularly, the idol was broken into pieces. The pujari was worried about the pieces. Again he had a dream and was ordered by Lord Hanuman to bring the pieces to the place (the temple now) and place them in a proper manner and close the door for seven complete days. Pujari being very anxious followed the instructions and opened the door only on the seventh day morning. To his surprise, he saw that the idol was completely joined in the upper part and incomplete in the lower part (even now we can see the unjoined parts).
Again pujari had a dream where he was ordered by God to perform all sacred poojas and rituals from learned Brahmins. Also to bring sacred waters from river Krishna only and offer Abhisheka and perform Pratishthapana. Pujari performed the same as ordered by God. And then Lord Hanuman was in full strength to bless the devotees thereafter. Even now priests of the temple bring holy waters from Krishan river only and perform Abhisheka to Yalaguresh. Even to this day, we have the same descendants of the pujari family performing pooja at the temple with the same devotion, and dedication. 

Miracles of Yalguresh!

During British rule, taxes were taken from people who performed seva in temples. So people who performed seva in Yalgur were also asked to pay taxes. People were poor then, they had no crop and hence no money. So the officers punished them and even beat them. There was an extremely humble and surrendered devotee to Lord Hanuman named Daseya. Just to avoid the situation people made use of Daseya’s goodness and made him a fool. And told the officers that, if Daseya pays the taxes then all would pay taxes to them.
Daseya was an extremely poor and a compassionate person. He confessed that he did not have a single pie and that he is unable to pay any tax. The officers beat him so much that he died. The same day Lord Hanuman came in the dream of his other devotee and asked him to keep Daseya’s corpse for three days undisturbed. After 3 days Daseya livens up and starts performing seva and pujas as daily. Seeing this miracle, the officers turned crazily frightened and were awestruck and badly regretted. They said that they would not be collecting taxes anymore and surrendered to Lord Hanuman.

Kartika Utsava also called Yalagur Jatra is an extravaganza in itself and the biggest, lavish, grandeur event the temple witnesses. It falls on the first Saturday after the Poornima day in February every year. Devotees who come from all over India perform Pallakki Seva early in the morning. Then the maha mangalarathi is performed. 
*************

Hanuman Statue..  At 
Sri   Ganapathy Sachidananda Ashram ,  Mysuru 

This is Dr. Tony Nader, Ph.D from MIT, USA, a celebrated Neuro Scientist. Beautiful explanation from the Ramayana, please listen to him thru this short video. You will feel proud to be an Indian for the acts your ancestors did and the values your Rishis left behind for the humanity. The Ramayana is not a mythology as it is labelled, it is a history, a science and a medical doctrin, the science of creation.  This explanation by a neurologist from Ramayan is amazing...

ಯಲಗುರ







*****


ಶ್ರೀ ಯಲಗೂರೇಶನ ದೇವಸ್ಥಾನದ ಹಿನ್ನೆಲೆ
 ಹಾಗೂ ಮಹಿಮೆ...

ಯಲಗೂರೇಶನ ಮಹಿಮೆ ಅಪಾರ..ಪ್ರಾಚೀನದಿಂದಲೂ ಅವನ ಮಹಿಮೆಯನ್ನು ಕಂಡವರಿದ್ದಾರೆ..

ಹಿನ್ನೆಲೆ.....

ಆಲಮಟ್ಟಿಗೆ ಸಮೀಪವಿರುವ ಗೊಂದಳೀ ಕೆರೆ ಅಥವಾ ಗೋವಿಂದನ ಕೆರೆ ಎಂಬ ಸ್ಥಳದಲ್ಲಿ ಮೊದಲಿನಿಂದಲೂ ಒಂದು ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ...ದಿನ ನಿತ್ಯವೂ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗೆ ಶ್ರೀ ಯಲಗೂರೇಶ ಕನಸಲ್ಲಿ ಬಂದು ಗೊಂದಳೀಕೆರೆಯಲ್ಲಿ ತಾನಿರುವದಾಗಿ, ಮೂರ್ತಿಯನ್ನು ತಂದು ಈಗ ದೇವಸ್ಥಾನವಿರುವ ಜಾಗದಲ್ಲಿ ಪ್ರತಿಷ್ಟಾಪಿಸಬೇಕೆಂದು ಹೇಳಲು, ಅದನ್ನು ಅಗೆದು ತೆಗೆದು ನೋಡಲು, 3-4 ಛಿದ್ರವಾಯಿತು. ಅಲ್ಲದೇ ಮುಸಲ್ಮಾನರ ಆಕ್ರಮಣದಿಂದಲೂ ಭಿನ್ನವಾಗಿತ್ತು..ಹೇಗೆ ಪ್ರತಿಷ್ಠಾಪಿಸುವ ಚಿಂತೆಯಲ್ಲಿರುವಾಗ ಮಾರುತಿರಾಯ ಕನಸಲ್ಲಿ ಕಂಡು ಎಲ್ಲವನ್ನೂ ಜೋಡಿಸಿ 7 ದಿನಗಳವರೆಗೆ ದೇವಸ್ಥಾನದ  ಬಾಗಿಲು ಮುಚ್ಚಿಡಬೇಕೆಂದು ಹೇಳಿದ್ದಾನೆ..ಪೂಜಾರಿ ಹಾಗೇಯೇ ಮಾಡಿದ್ದಾನೆ. ಕುತೂಹಲ ತಡೆಯದೇ 7 ನೇ ದಿನ ಮಧ್ಯಾನ್ಹ ಬಾಗಿಲು ತೆಗೆದಿದ್ದಾನೆ...ಎಲ್ಲವೂ ನೈಪುಣ್ಯದಿಂದ ಜೋಡಿಸಿದಂತೆ ಆಗಿತ್ತು. ಇದನ್ನು ಕಂಡ ಪೂಜಾರಿಗೆ ಆಶ್ಚರ್ಯ.. ಅವನು 7 ನೇ ರಾತ್ರಿ ಕಳೆಯಲು ಬಿಡದೇ ಬಾಗಿಲು ತೆಗೆದಿದ್ದಕ್ಕೆ ಕೆಳಭಾಗ ಸ್ವಲ್ಪ ಮುಕ್ಕಾದ ಹಾಗಿದೆ...
**
ಮಹಿಮೆ...

ಇದು ಬ್ರಿಟಿಷರ ಕಾಲದ ಮಾತು...ಎಲ್ಲ ಕಡೆಗೂ ಬ್ರಿಟಿಷರ ದಬ್ಬಾಳಿಕೆ, ತೆರಿಗೆ ಕೊಡದ ಬಡವರನ್ನು ಪೀಡಿಸುವುದು ನಡೇದೇ ಇತ್ತು.. ಯಲಗೂರದ ದೇವಸ್ಥಾನದಲ್ಲಿ ಒಬ್ಭ ಬಡ ದಾಸಯ್ಯನಿದ್ದ..ಅವನು ಬೆಳಿಗ್ಗೆ ಎದ್ದ ತಕ್ಷಣ ದೇವಸ್ಥಾನದ ಕಸ ಗುಡಿಸುವುದು...ದೇವರ ಭಜನೆ ಮಾಡುವುದಷ್ಟೇ ಅವನ ದಿನಚರಿ..ಬ್ರಿಟಿಷರು ಯಲಗೂರದ ಜನಕ್ಕೂ ತೆರಿಗೆಯ ಬಿಸಿ ಮುಟ್ಟಿಸಿದರು...ಊರಿನ ಜನರೆಲ್ಲ ದಾಸಯ್ಯ ತೆರಿಗೆ ಕೊಟ್ಟರೆ ತಾವು ಕೊಡುವದಾಗಿ ಹೇಳಿದರು...ಬಡ ದಾಸಯ್ಯ ಎಲ್ಲಿಂದ ತೆರಿಗೆ ಕೊಡಬಲ್ಲ...?!  ಬ್ರಟಿಷರ ಮಾರಣಾಂತಿಕ ಹಲ್ಲೆಗಳಿಗೆ ದಾಸಯ್ಯ ಪ್ರಾಣಬಿಟ್ಟ... ಪೂಜಾರಿಯ ಕನಸಲ್ಲಿ ಬಂದ ಮಾರುತಿ ದಾಸಯ್ಯನ ಪಾರ್ಥಿವ ಶರೀರವನ್ನು 3 ದಿನ ಕಟ್ಟೆಯ ಮೇಲಿಟ್ಟು ಕಾಯಬೇಕೆಂದು ಹೇಳಿದ...4 ನೇ ದಿವಸ ಬೆಳಗಿನ ಜಾವದಲ್ಲಿಯೇ ಎದ್ದು ಎಂದಿನಂತೆ ದೇವರ ನಾಮಸ್ಮರಣೆ ಮಾಡುತ್ತ ಕಸ ಗುಡಿಸುತ್ತಿದ್ದ...ಊರಿನ ಜನ ಆಶ್ಚರ್ಯಭರಿತರಾದರು...ಇದನ್ನು ಕೇಳಿದ ಪೋಲಿಸರು ಯಲಗೂರಪ್ಪ ತಮ್ಮನ್ನು ಬಿಟ್ಟರೇ ಸಾಕೆಂದು ಓಟ ಕಿತ್ತರು...
*********

ಹನುಮಂತ ಅಂದರೆ ಜ್ಞಾನವಂತ ಎಂದರ್ಥ, ಆ ಜ್ಞಾನಿಯನ್ನು ಪೂಜಿಸುವ ಮುನ್ನ ಅವನ ಜನ್ಮರಹಸ್ಯ ತಿಳಿಯುವುದು ಅಗತ್ಯ. ಆ ಪ್ರಾಣದೇವರ ಅವತಾರದ ಬಗ್ಗೆ ಶ್ರೀನಿವಾಸ ಕಲ್ಯಾಣ ಕಥೆಯಲ್ಲಿ ಉಲ್ಲೇಖಿಸಿದಂತೆ ತಿಳಿಸುವ ಪ್ರಯತ್ನ ನನ್ನದು, 
ತಿಳಿಯದೇ ಮಾಡಿದ ಸದಾಚಾರ, ತಿಳಿದೂ ಮಾಡುವ  ಅನಾಚಾರ ಎರಡಕ್ಕೂ ವ್ಯತ್ಯಾಸ ಇಲ್ಲಾ?
ಶ್ರೀನಿವಾಸ ಕಲ್ಯಾಣ ಕಥೆ  ಕಲಿಯುಗಕ್ಕೆ ಮಾತ್ರವೇ ಸೀಮಿತವಲ್ಲ,  ಈ ಕಥೆಯನ್ನು ಜನಕಮಹಾರಾಜನು ತನ್ನ ಸೀತೆಯ ಆರುವಯಸ್ಸಿನಲ್ಲಿ  ವಿವಾಹದ ಬಗ್ಗೆ ದ್ವಂದ್ವ ಬಂದಾಗ ಅದರ ನಿವಾರಣೆಗೆ ಶತಾನಂದರು (ಗೌತಮ ಋಷಿ ಮತ್ತು ಅಹಲ್ಯಾದೇವಿಯ ಮಗ) ಈ ಕಥೆಯನ್ನು ಸೀತಾ ಮತ್ತು ಉಳಿದ ಮೂವರ ವಿವಾಹ ಫಲಕ್ಕಾಗಿ ಶ್ರವಣ ಮಾಡಿಸುತ್ತಾರೆ. 
ಇಲ್ಲಿ ತಿರುಮಲೆ ಗೆ  ತ್ರೇತಾಯುಗದಲ್ಲಿ ಅಂಜನಾದ್ರಿ ಎಂದು ಕರೆಯುತ್ತಾರೆ, ಕಾರಣ ಅಂಜನಾದೇವಿ ಮಗನಾದ ಆಂಜನೇಯನ ಹುಟ್ಟಿಗಾಗಿ ವ್ರತಾಚರಣೆ ಮಾಡಿ ಸಿದ್ದಿ ಪಡೆದ ಮಹಾ ಕ್ಷೇತ್ರ.
ಕೇಸರಿ ಎಂಬ ದೈವಭಕ್ತ ಅಸುರನು ತ್ರೇತಾಯುಗದಲ್ಲಿ ಪುತ್ರಪ್ರಾಪ್ತಿಗಾಗಿ ರುದ್ರಾಂತರಗತ ನರಸಿಂಹ ದೇವರನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ  ಭಗವಂತ ಗೋಚರಿಸುತ್ತಾನೆ ಆಗ ಕೇಸರಿಯು ಪುತ್ರನ ಪ್ರಸಾದವನ್ನು ಬೇಡುತ್ತಾನೆ. ಆಗ ಭಗವಂತ ನಿನಗೆ ನಾ ಪುತ್ರನನ್ನು ಪ್ರಸಾಧಿಸಲಾರೆ ಕಾರಣ ನಿನಗೆ ಈ ಜನ್ಮದಲ್ಲಿ ಪುತ್ರ ಸಂತಾನದ ಯೋಗವಿಲ್ಲ, ಆದರೆ ನಿನ್ನ ತಪಸ್ಸನ್ನು ವ್ಯರ್ಥ ಮಾಡುವುದಿಲ್ಲ ನಿನಗೆ ಶ್ರೇಷ್ಠ ಕನ್ಯಾ ರತ್ನವನ್ನು ಪ್ರಸಾಧಿಸುತ್ತೇನೆ ಅವಳಲ್ಲಿ ಒಬ್ಬ ಮಹಾ ಪುರುಷನ ಜನನವಾಗುತ್ತದೆ. ಅವನಿಂದ ನಿನ್ನ ಕುಲವು ಉದ್ದಾರವಾಗುತ್ತದೆ ಎಂದು ಹರಸಿ ಅದೃಷ್ಯವಾಗುತ್ತಾನೆ.
ವರದಂತೆಯೇ ಅವನಿಗೆ ಕೆಲ ದಿನಗಳಲ್ಲಿಯೇ ಪುಂಜಕಸ್ಥಳಿ ಎಂಬಾ ಅಪ್ಸರಾ ಸ್ತ್ರೀ ಮಗಳಾಗಿ ಜನಿಸುತ್ತಾಳೆ. ಕಾಲಾಂತರದಲ್ಲಿ ಮದುವೆಯ ವಯಸ್ಕಳಾದಾಗ ಕೇಸರಿಗೆ ಒಂದು ಉಪಾಯ ಹೊಳೆಯುತ್ತದೆ. ತನ್ನ ಹೆಸರಿನ ವರನನ್ನೇ ಹುಡುಕಿ ಮಗಳ ಮದುವೆ ಮಾಡಿದರೆ ಆ ಮಹಾ ಪುರುಷ  ಕೇಸರೀಸುತ ಎಂದು ಪ್ರಖ್ಯಾತ ಆಗುತ್ತಾನೆ. ಅದರಿಂದ ಅವನ ಹೆಸರೂ ಸಹಾ ಆಜೀವ ಪರ್ಯಂತ ಲೋಕದಲ್ಲಿ ನೆಲೆಸುತ್ತದೆ ಎಂಬ ಉದ್ದೇಶದಿಂದ ಕೇಸರಿ ಎಂಬ ಹೆಸರಿನ ವರನ ಹುಡುಕಾಟ ಶುರುವಾಗುತ್ತದೆ.
ಭಗವಂತನ ಇಚ್ಛೆಯ ಅನ್ವಯ ಕಪಿಸಾಮ್ರಾಜ್ಯದ ರಾಜನಾದ ಕೇಸರಿ ಎಂಬ ರಾಜನೊಂದಿಗೆ ಅಂಜನಾ ದೇವಿಯ ವಿವಾಹವಾಗುತ್ತದೆ. 
ಪುತ್ರಸಂತಾನ ಕ್ಕಾಗಿ ಅಂಜನಾದೇವಿ ಮತಂಗ ಋಷಿಗಳ ಮೊರೆ ಹೋಗ್ತಾಳೆ, ಭಗವಂತನ ಅನುಗ್ರಹ ಉಂಟು ಆದರೆ ಸಾಕ್ಷಾತ್ ವಾಯುದೇವರ ಅವತಾರ ಆಗಬೇಕಾದರೆ ತ್ರಿಕರಣಶುದ್ದಿ ಕೂಡಾ ಅಗತ್ಯ. ಆದ್ದರಿಂದ ಮುನಿಗಳು  ದ್ವಾದಶಾಬ್ದವ್ರತ ಎಂಬ ಒಂದು ವ್ರತವನ್ನು ಪಂಪಾ ಸರೋವರದ ಪೂರ್ವ ದ್ವಿಗ್ಬಾಗದಲ್ಲಿ ಐವತ್ತು ಯೋಜನಗಳಷ್ಟು ದೂರದಲ್ಲಿ ನರಸಿಂಹಾಶ್ರಮದ ದಕ್ಷಿಣಕ್ಕೆ  ನಾರಾಯಣಗಿರಿಯ ಸಮೀಪ ಸ್ವಾಮಿ ಪುಷ್ಕರಣಿಯ ಉತ್ತರಕ್ಕೆ ಆಕಾಶಗಂಗೆ ಇದೆ ಅಲ್ಲಿ ಮಾಡುವಂತೆ ತಿಳಿಸುತ್ತಾರೆ. 
ಈ ವ್ರತದ ಪ್ರಕಾರ ನಿತ್ಯದಲ್ಲಿ ಮೂರು ಹೊತ್ತು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ, ಅಶ್ವತ್ಥ ಮರದ ಪ್ರದಕ್ಷಿಣೆ, ವರಾಹ ದೇವರ ದರ್ಶನ ನಂತರ ತೀರ್ಥ ಸೇವನೆ ಹೀಗೆ ಹನ್ನೆರಡು ತಿಂಗಳು ಮಾಡುವುದು. ಆದರೆ ಅವಳು ಆನಂದದಿಂದ ಇದನ್ನು ಇನ್ನೂ ಒಂದು ತಿಂಗಳು ಜಾಸ್ತಿ ಅಂದರೆ ಹದಿಮೂರು ತಿಂಗಳು ಮಾಡಿದಾಗ ನಂತರ ಇವಳ ವ್ರತ ನಿಯಮಕ್ಕೆ ಮೆಚ್ಚಿ ಸಾಕ್ಷಾತ್ ವಾಯುದೇವರು ದಿನಂಪ್ರತಿ ಒಂದು ಫಲವನ್ನು ೧೯ ತಿಂಗಳು ಹದಿಮೂರು ದಿನಗಳ ತನಕ ನೀಡುತ್ತಾ ಬರುತ್ತಾರೆ, ಅದರಿಂದ ಅವಳಿಗೆ ಗರ್ಭದಾರಣೆ ಆಗುತ್ತದೆ. ಇವಳಿಗೆ ಗರ್ಭದಾರಣೆ ಆದದ್ದು ಇಡೀ ಮುನಿಕುಲಕ್ಕೆ ಕನಸಿನ ಮೂಲಕ ಸೂಚನೆ ಸಿಗುತ್ತದೆ. ನಂತರ ಹತ್ತು ತಿಂಗಳ ನಂತರ ಇವಳಿಂದ ಭಗವಂತನ ಅನುಗ್ರಹದಿಂದ ಮುಖ್ಯಪ್ರಾಣದೇವರ/ ವಾಯುದೇವರ ಸಾಕ್ಷಾತ್ ಅವತಾರವಾಗಿ ಅಂಜನೀಪುತ್ರನಾಗಿ, ಕೇಸರಿ ಸುತನೆಂದು ಪ್ರಖ್ಯಾತನಾದ ಅಂಜನೇಯನ ಅವತಾರವಾಗಿದೆ. ರುದ್ರನ ಅಂಶವೂ ಹೌದು ಕಾರಣ ರುದ್ರನು ಸಹಾ ವಾಯುದೇವರ ಅವತಾರವೇ.

ಮತ್ತೊಂದು ವಿಷಯ ಮಗುವಾಗಿದ್ದಾಗ ಸೂರ್ಯನನ್ನು ಹಣ್ಣು ಎಂದು ತಿಳುವಳಿಕೆ ನುಂಗಲು ಯತ್ನಿಸಿದ್ದಲ್ಲ , ರಾವಣಾದಿ ಅಸುರ ಜನಾಂಗಕ್ಕೆ ಭಗವಂತನ ಅವತಾರದ ಸೂಚನೆ ಕೊಡಲು ಮಾಡಿದ ಮಹತ್ಕಾರ್ಯ ಅದು. ರಾಮ - ಲಕ್ಷಣ ರ ಅವತಾರಕ್ಕೆ ಬಹಳ ವರ್ಷಗಳ ಮೊದಲೇ ಬಹಳಷ್ಟು ರಕ್ಕಸರನ್ನು ಲೋಕಕ್ಕೆ ತಿಳಿಯದೆಯೇ ಸಂಹರಿಸಿದ ಮಹಾ ಚೇತನವದು. 
ನಮ್ಮೆಲ್ಲರಿಗೂ ಆ ಪ್ರಾಣದೇವರು ರಾಮರಾಯರು ಸಾಕ್ಷಾತ್ಕಾರದ ದಾರಿ ತೋರಿಸಲು ಎಂದು ಆಶಿಸುವ. 
OM SRI GURU RAGHVENDRAYA NAMAHA.
****

#ಕಾಂತೇಶ, #ಭ್ರಾಂತೇಶ, #ಶಾಂತೇಶ

: #ಯಾರಿವರು?
🌺🌺🌺🌺🌺🌺🌺
ಸಾಮಾನ್ಯವಾಗಿ ಈ ಹೆಸರುಗಳನ್ನು ಉ.ಕ. ಭಾಗದ ಬಹುತೇಕ ದೈವಭಕ್ತರು ಕೇಳಿರುತ್ತಾರೆ. ಈ ಹೆಸರುಗಳು ಹನುಮನ ವಿವಿಧ ರೂಪಕ್ಕೆ ಹಿಂದಿನ ಋಷಿಮುನಿಗಳು ಇಟ್ಟ ಹೆಸರು.

ಹೌದು, ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿರುವ ಹನುಮನಿಗೆ ಕಾಂತೇಶಸ್ವಾಮಿ ಎಂದು ಹೆಸರು. ಇಲ್ಲಿಂದ ಹೆಚ್ಚು ಕಮ್ಮಿ 60 ಕಿ.ಮೀ. ಶಿಕಾರಿಪುರ. ಅಲ್ಲಿರುವವನು ಭ್ರಾಂತೇಶಸ್ವಾಮಿ (ಹುಚ್ಚೂರಾಯ ಎಂದೂ ಪ್ರಸಿದ್ಧಿಯಾಗಿದೆ).

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಹನುಮ ಭ್ರಾಂತೇಶಸ್ವಾಮಿ ಎಂದು ಕರೆಯಿಸಿಕೊಂಡರೆ, ಅಲ್ಲಿಂದ ಸುಮಾರು 35 ಕಿ.ಮೀ. ಅಂತರದಲ್ಲಿರುವವನು ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ನೆಲೆಸಿರುವ ಶಾಂತೇಶಸ್ವಾಮಿ

ಈ ಮೂರು ಊರುಗಳ ದೇವಾಲಯದಲ್ಲಿನ ಹನುಮನ ಮೂರ್ತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಇದಕ್ಕೆ ಸಂಬಂಧಪಟ್ಟ ಸೂಕ್ತ ಐತಿಹಾಸಿಕ ದಾಖಲೆಗಳನ್ನು ಕೂಡ ಇಲ್ಲಿ ನೋಡಬಹುದು.

ಈ ಮೂರು ಊರಿನ ಹನುಮನರನ್ನು ಸೂರ್ಯೋದಯದಿಂದ ಸೂರ್ಯಾಸ್ತ ಆಗುವುದೊರಳಗಾಗಿ ದರ್ಶನ ಪಡೆದುಕೊಳ್ಳುವುದು ವಿಶೇಷ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮ, ಪಂಚಮ ಶನಿಕಾಟದಲ್ಲಿರುವವರು ತಪ್ಪಿಸದೇ ಇಲ್ಲಿಗೆ ಹೋಗಬೇಕು. ಅಷ್ಟೊಂದು ಮಹತ್ವವಾದ ಸ್ಥಳ ಮಹಿಮೆ ಈ ಮೂರು ಸ್ಥಳಗಳಿಗಿವೆ. 

ಹಲವಾರು ರೋಗ, ರುಜಿನಗಳಿಗೆ, ಅನೇಕ ಸಮಸ್ಯೆಗಳನ್ನು ಈ ಹನುಮರು ಪರಿಹರಿಸುತ್ತಾರೆ ಎಂಬ ನಂಬಿಕೆ ಜನರದ್ದು. ಹೀಗಾಗಿ ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಜನಜಾತ್ರೆಯೇ ನೆರೆದಿರುತ್ತದೆ

ಹನುಮ ಚಿರಂಜೀವಿಯಾಗಿರುವುದರಿಂದ ಈಗಲೂ ಜೀವಂತವಾಗಿದ್ದು ಧ್ಯಾನಾಸಕ್ತನಾಗಿದ್ದಾನೆ ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ. ಅದಕ್ಕೆಂದೇ ಹನುಮನ ಭಕ್ತರು ಜಗತ್ತಿನಲ್ಲಿ ಸಾಕಷ್ಟಿದ್ದಾರೆ.

ಈ ಅಧಿಕ ಮಾಸದಲ್ಲಿ ಕಾಂತೇಶ, ಭ್ರಾಂತೇಶ ಮತ್ತು ಶಾಂತೇಶರ ದರ್ಶನ ಪಡೆದುಕೊಂಡು ಪುಣ್ಯವಂತರಾಗಬೇಕೆನ್ನುವವರು ತಡ ಮಾಡದೇ ಹೊರಟರೇ ಅದೃಷ್ಟವಂತರೆನ್ನಬಹುದು.

ಇನ್ನು, ಈಗಲೂ ಹಳ್ಳಿ ಕಡೆ ಅಧಿಕ ಮಾಸದಲ್ಲಿ ಅನೇಕ ಪೂಜೆ, ಪುನಸ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುತ್ತವೆ. ಏಕೆಂದರೆ ದೇವಾನುದೇವತೆಗಳು ಅಧಿಕ ಮಾಸದಲ್ಲಿ ಭೂಲೋಕದಲ್ಲಿ ಸಂಚರಿಸುತ್ತಾರೆ ಎಂಬ ನಂಬಿಕೆ ನಮ್ಮ ಹಿಂದೂ ಧರ್ಮೀಯರದು.

ಈ ಊರುಗಳ ಹತ್ತಿರದ ಭಕ್ತರು ಪ್ರತಿ ವರ್ಷದ ಶ್ರಾವಣದಲ್ಲೂ ಈ ದೇವಸ್ಥಾನಗಳಿಗೆ ಹೋಗುತ್ತಾರೆ. ದೂರದೂರಿನವರು ಕೇವಲ ಅಧಿಕ ಮಾಸದಲ್ಲಿ ಮಾತ್ರ ಇಲ್ಲಿ ಬರುತ್ತಾರೆ. ಏಕೆಂದರೆ ಇಲ್ಲಿ ಹೋಗಿ ಬಂದರೆ ಕಾಶಿ ಮತ್ತು ರಾಮೇಶ್ವರಕ್ಕೆ ಹೋಗಿ ಬಂದಷ್ಟು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಆಸ್ತಿಕರದು.

ಇನ್ನು ಇಲ್ಲಿಗೆ ಭೇಟಿ ನೀಡುವ ಕೆಲವರು ಶನಿಕಾಟ ಹೇಳ ಹೆಸರಿಲ್ಲದಂತೆ ಪೇರಿ ಕಿತ್ತುತ್ತದೆ ಎಂಬುದಾಗಿ ಅಪಾರವಾಗಿ ನಂಬಿದ್ದಾರೆ. ಶ್ರಾವಣ ಮತ್ತು ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಬರುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಅನ್ನದಾಸೋಹಕ್ಕೆ ದೇಣಿಗೆ ನೀಡಬೇಕೆನ್ನವವರು ಇಂತಹ ಪುಣ್ಯ ಸ್ಥಳಗಳಲ್ಲಿ ದೇಣಿಗೆ ನೀಡಿ ಪಾವನರಾಗಬಹುದು.

ಇನ್ನೊಂದು ವಿಶೇಷವೆಂದರೆ, ಮೂರು ಅಥವಾ ನಾಲ್ಕು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಈ ಮೂರು ದೇವಾಲಯಗಳಿಗೆ ಭೇಟಿ ನೀಡಿ, ಹನುಮನ ದರ್ಶನ ಪಡೆಯುವುದು ತುಂಬಾ ಶುಭ ಎನ್ನುವ ನಂಬಿಕೆ ಚಾಲನೆಯಲ್ಲಿದೆ.

ಮೂರ್ತಿ ಪ್ರತಿಷ್ಠಾಪಿಸುವಾಗ ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ, ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮವನ್ನು ಸ್ಥಾಪಿಸಲಾಗಿದೆ. ದರ್ಶನ ಮಾಡುವಾಗ ಈ ಸಾಲಿಗ್ರಾಮಗಳನ್ನೂ ಭಕ್ತರು ಕಣ್ತುಂಬಿಕೊಳ್ಳುವುದು ಮಹತ್ವದ್ದು
***
ಹನುಮ ಜಯಂತಿ ನಿಮಿತ್ತ ಹನುಮನ ಕಥೆ ಮಧುಸೂದನ ಕಲಿಭಟ್ 

ತ್ರೇತಾ ಯುಗದಲ್ಲಿ ಒಂದು ಪಾದ ಮಾತ್ರ ಅಧರ್ಮವಿತ್ತು.  ಅದನ್ನೇ ಆಗಿನ ಕಾಲದ ಜನರಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಏಕೆಂದರೆ ಮೂರು ಭಾಗ ಧರ್ಮ ವಿತ್ತು.  ಬ್ರಹ್ಮ, ರುದ್ರ ರನ್ನು ಕುರಿತು ತಪಸ್ಸು ಮಾಡಿಕೊಂಡು ರಾಕ್ಷಸರು ಅವಧ್ಯ ವರಗಳನ್ನು ಪಡೆದುಕೊಂಡಿದ್ದರು. ಈ ಕಾರಣದಿಂದ ಭೂಮಿಯು ಅಧರ್ಮಿ ರಾಕ್ಷಸರಿಂದ ಭಾರ ವಾಗಿದ್ದಳು.  ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಋಷಿ ಮುನಿಗಳು ಬ್ರಹ್ಮ ದೇವರಿಗೆ ಪ್ರಾರ್ಥನೆ ಮಾಡಿಕೊಂಡರು.  ಋಷಿಗಳು ಮಾಡುತ್ತಿದ್ದ ಯಜ್ನ ಯಾಗ ಗಳಿಗೆ ರಾಕ್ಷಸರಿಂದ ವಿಘ್ನಗಳು ಆಗುತ್ತಿದ್ದವು.   ಬ್ರಹ್ಮ ಸಕಲ ದೇವತೆಗಳು, ಋಷಿಗಳು ಸಜ್ಜನಪಾಲಕ ರಾಜರ್ಷಿಗಳೊಂದಿಗೆ ಶ್ರೀಹರಿಗೆ ಪ್ರಾರ್ಥನೆ ಮಾಡಿಕೊಂಡು, ಭೂಮಿಯಲ್ಲಿ ಧರ್ಮ ಸ್ಥಾಪಿಸಲು ಅವತರಿಸಬೇಕೆಂದು ಕೇಳಿಕೊಂಡರು.  ಶ್ರೀ ಹರಿ ಒಪ್ಪಿ ದೇವರೆಗಳಿಗೂ ಅವತರಿಸಲು ಆಜ್ಞೆ ಮಾಡಿದನು.ಶ್ರೀ ಹರಿಯುವ ತನ್ನ ಪ್ರೀತಿಯ ಮಗನಾದ ವಾಯುದೇವರಿಗೆ ಅವತರಿಸಲು ಆಜ್ಞೆ ಮಾಡಿದನು. ವಾಯುವು ಎಲ್ಲಿ ಅವತರಿಸಬೇಕೆಂದು ವಿಚಾರಿಸಿದನು.  ದಕ್ಷಿಣ ಭಾರತದ ಕಿಷ್ಕಿಂಧೆ ರಾಜ್ಯ ಉತ್ತಮ ವೆನಿಸಿತು.  ಅಲ್ಲಿ ವಾನರ ರಾಜ್ಯವಿತ್ತು.  ವಾನರ ರಾಜ ಕೇಸರಿ ಧರ್ಮ ಭೀರುವಾಗಿದ್ದನು. ವಾಯುವು ಅಲ್ಲಿ ಅವತರಿಸಲು ನಿರ್ಧರಿಸಿ ದೇವತೆಗಳಿಗೂ ವಾನರ ಯೋನಿಯಲ್ಲಿ ಹುಟ್ಟಲು ಹೇಳಿದನು. ಕಿಷ್ಕಿಂಧೆಯಲ್ಲಿ ರಾಜ ಕೇಸರಿ ಋಷಿ ಮುನಿಗಳ ತಪಸ್ಸಿಗೆ ಯಾವದೇ ಕ್ರೂರ ಪ್ರಾಣಿಗಳಿಂದ, ರಾಕ್ಷಸರಿಂದ ವಿಘ್ನ ಬರದಂತೆ ನೋಡಿಕೊಂಡಿದ್ದನು. ಋಷಿಗಳ ತಪಸ್ಸಿಗೆ ಮೂಕ ವಾತಾವರಣ ಸೃಷ್ಟಿ ಮಾಡಿದ್ದನು.  ಆದ್ದರಿಂದ ಅಲ್ಲಿಯ ಪರ್ವತಕ್ಕೆ ಋಷ್ಯಮೂಕ ಪರ್ವತ ಎಂದು ಹೆಸರಾಯಿತು. 
ಕೇಸರಿಗೆ ಸಕಲ ಧಾರ್ಮಿಕ ಕಾರ್ಯಗಳಲ್ಲಿ ಅನುಕೂಲ ವಾದ ಅಂಜನಾದೇವಿ ಎಂಬ ಪತ್ನಿಯಿದ್ದಳು. ಇವಳಿಗೆ ಅಂಜನಾ ಎಂಬ ಹೆಸರು ಬರಲು ಒಂದು ಸನ್ನಿವೇಶದ ಕಥೆಯು ಇದೆ.

ಅಂಜನೆಯು ಪೂರ್ವದಲ್ಲಿ ಕುಂಜಸ್ಥಲಿ  ಎಂಬ ಅಪ್ಸರೆಯಾಗಿದ್ದಳು. ಅವಳು ವಾಯುದೇವರನ್ನು ಕುರಿತು ತಪಸ್ಸು ಮಾಡಿ ನಿನ್ನಂತಹ ಶಕ್ತಿಶಾಲಿ, ಭುದ್ಧಿವಂತ ಮಗ ಬೇಕೆಂದು ವರ ಬೇಡಿಕೊಂಡಿದ್ದಳು. ಈ ಅಪ್ಸರೆಯು ಬ್ರಹ್ಮರ್ಷಿ ಗೌತಮ ಅಹಲ್ಯೆಯರ ಮಗಳಾಗಿ ಹುಟ್ಟಿದಳು. ಒಂದು ದಿನ ಅಹಲ್ಯೆ ಗೌತಮರಿಗೆ ಹೇ ಪತಿದೇವಾ  ನೀವೇನೋ ಒಳ್ಳೆಯ ಜ್ಞಾನ ಸಂಪಾದಿಸಿದಿರಿ. ಆದರೆ ನನಗೆ ಅದರಲ್ಲಿಯ ಕಣಮಾತ್ರ ತಿಳಿಸಿದರೆ ತುಂಬಾ ಉಪಕಾರವಾಗುವದೆಂದು ಕೇಳಿಕೊಂಡಳು. ಗೌತಮರು ಜ್ಞಾನಿಯಾದ ದೇವೇಂದ್ರನನ್ನೇ ಪತ್ನಿಗಾಗಿ ಪಾಠಕ್ಕೆ ನಿಯಮಿಸಿದರು. ಇಂದ್ರದೇವ್ ನಿತ್ಯ ಅಹಲ್ಯೆಗೆ ಅಧ್ಯಾತ್ಮ ತತ್ವ ಪಾಠ ಹೇಳುತ್ತಿದ್ದನು. ಹೀಗಿರಲಾಗಿ ಒಂದುದಿನ ಗೌತಮರು ಮಗಳಿಗೆ ನಿಮ್ಮ ಅಮ್ಮ ಏನೂ ಮಾಡುತ್ತಿರುವಳು ಎಂದು ಪ್ರಶ್ನಿಸಿದರು. ಮಗಳು ನಿಜ ಸಂಗತಿ ಹೇಳದೇ ಚೇಷ್ಟೆ ಮಾಡುತ್ತಾ ಇಂದ್ರನೊಡನೆ ಹರಟುತ್ತಿದ್ದಾಳೆ ಎಂದು ಹೇಳಿದಳು. 
ಈ ವಿಷಯ ಅಹಲ್ಯೆಗೆ ತಿಳಿದು ತುಸು ಕೋಪದಿಂದ ಮಗಳಿಗೆ ನೀನು ನನ್ನ ಮತ್ತು ಗೌತಮರ ನಡುವೆ ಸಂಶಯ ಬರುವಂತೆ ಚಾಡಿ ಹೇಳಿದ್ದರಿಂದ ನಿನ್ನ ಹೆಸರು ಅಂಜನೆ  ಎಂದು ಆಗಲಿ ಎಂದು ಹೇಳಿದಳು. ಅದಲ್ಲದೆ ನಿನ್ನ ಈ ಚಂಚಲ ಬುದ್ಧಿ ಪರಿಣಾಮವಾಗಿ ನೀನು ಚಂಚಲ ಸ್ವಭಾವದ ಕಪಿ ಯನ್ನು ವಿವಾಹವಾಗು ಎಂದಳು. ಇದರಿಂದ ಅಂಜನೆ ಮನಸ್ತಾಪ ಗೊಂಡು ತಾಯಿಗೆ ತಪ್ಪು ಒಪ್ಪಿಕೊಂಡಳು. ಆಗ ಋಷಿಪತ್ನಿ ಅಹಲ್ಯೆ ಮಗಳ ಮೇಲೆ ಕೃಪೆತೋರಿ, ಮಗಳೇ ನಿನಗೆ ಜಗತ್ತಿಗೆ ಜ್ಞಾನ ಉಪದೇಶ ಮಾಡುವಂಥ ಜ್ಞಾನಿ ಮಗ ಹುಟ್ಟಲಿ ಎಂದು ಹರಿಸಿದಳು. ಅದೇ ಅಂಜನೆಯು ಕಪಿರಾಜ ಕೇಸರಿಯನ್ನು ಮದುವೆಯಾಗಿ ಆಗಿನ ಶೇಷಾಚಲದಲ್ಲಿ ತಪಸ್ಸು ಮಾಡಿದಳು. ಅಲ್ಲದೆ ಈ ಜನ್ಮದಲ್ಲಿಯೂ ವಾಯುದೇವರನ್ನು ಕುರಿತು ತಪಸ್ಸು ಮಾಡಿದಳು. ಪಯೋವೃತ ಮಾಡಿದಳು.  ಇನ್ನು ಕೇಸರಿ ಈ ಮೊದಲೇ ಹೇಳಿದಂತೆ ಋಷಿಗಳಿಗೆ ಅವರ ತಪಸ್ಸಿಗೆ ವಿಘ್ನ ಬರದಂತೆ ಅವರ ಸೇವೆ ಮಾಡಿದನು. ಮತಂಗ ಋಷಿಗಳನ್ನು ಅವರ ತಪಸ್ಸಿಗೆ ವಿಘ್ನ ತರುತ್ತಿದ್ದ ದುಂದು  ಎಂಬ ಅಸುರನನ್ನು ಸಂಹರಿಸಿ ಋಷಿಗಳ ಪ್ರೀತಿಗೆ ಪಾತ್ರನಾದನು. ಋಷಿಗಳ ಆಶೀರ್ವಾದದಿಂದ ಮರುತ್  ದೇವತೆಗಳ ಆವೇಶ ಅವನಲ್ಲಿ ಆಯಿತು.ಅಂಜನೆಯು ತಪಸ್ಸುಮಾಡಿದ ಪರ್ವತ ಅಂಜನಾಚಲವೆಂದು ಪ್ರಸಿದ್ಧವಾಯಿತು. ಪತಿ ಪತ್ನಿಯರಿಬ್ಬರ ತಪಸ್ಸು ಫಲಕಾರಿ ಆಯಿತು.  ವಾಯುದೇವರ ಆವೇಶ ಕೇಸರಿಯಲ್ಲಿ ವಿಶೇಷ ವಾಗಿದ್ದರಿಂದ ಅಂಜನೆಯು ಗರ್ಭವತಿಯಾದಳು. ಚೈತ್ರ ಶುದ್ಧ ಪೂರ್ಣಿಮೆ ದಿನ ಪ್ರಾತಃಕಾಲ ಸೂರ್ಯೋದಯಕ್ಕೆ ವಾಯು ದೇವರು ಅಂಜನೆಯ ಪುತ್ರನಾಗಿ ಗರ್ಭ ವಾಸವಿಲ್ಲದೆ ಅವತರಿಸಿದರು. ಹುಟ್ಟುತ್ತಲೇ  ಬಾಲರವಿಯನ್ನು ಕಿತ್ತಳೆ ಹಣ್ಣು ಎಂದು ಭಾವಿಸಿ ಸೂರ್ಯಮಂಡಲಕ್ಕೆ ಹಾರಿದ ಆಂಜನೇಯನಿಗೆ ಜಯಕಾರ ಹೇಳೋಣ. 
ಗಲಗಲಿ ಮುದ್ಗಲಾಚಾರ್ಯರ ವಾಯುಸ್ತುತಿ ವ್ಯಾಖ್ಯಾನ ದಲ್ಲಿ ಹನುಮಂತ ಶಬ್ದದಲ್ಲಿ ಹನೂ  ಎಂದು ದೀರ್ಘ ಶಬ್ದ ಪ್ರಯೋಗ ವೇಕೆಂದರೆ ವಾಯುದೇವರಿಗೆ ಮೂಲ ರೂಪದಲ್ಲಿ ದೀರ್ಘ ಜ್ಞಾನ ವಿದೆ.  ಆಯಾ ಜ್ಞಾನ ಅವರ ಅವತಾರಗಳಲ್ಲಿಯೂ ಇದೆ ಎಂದು ತಿಳಿದುಕೊಳ್ಳಬೇಕು.  ಆಂಜನೇಯ ಸೂರ್ಯಮಂಡಲಕ್ಕೆ ಹಾರಿದಾಗ ಇಂದ್ರ ತನ್ನ ಆಯುಧದಿಂದ ಆಂಜನೇಯನ ಮುಖಕ್ಕೆ ಹೊಡೆದಿದ್ದರಿಂದ ಆತನ ಗಲ್ಲ ಅಂದರೆ ಹನೂ ಉಬ್ಬಿತು.  ಆದಕಾರಣ ಆಂಜನೇಯನಿಗೆ ಹನುಮಂತ ಎಂದು ನಾಮಕರಣ ಆಯಿತು. ಇಂತಹ ಹನುಮಂತನ ಅಂತರ್ಯಾಮಿ ವಾಯುವಿನ ಅಂತರ್ಯಾಮಿ ರಾಮ ಭಿನ್ನಾ ಭಿನ್ನ ನರಸಿಂಹ, ಹಯಗ್ರೀವ ದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸಲಹಲಿ ಎಂದು ಪ್ರಾರ್ಥಿಸುವೆ. 
- ಮಧುಸೂದನ ಕಲಿಭಟ್ 
***

ಹನುಮಂತ. by ಡಾ. ವಿಜಯೇಂದ್ರ ದೇಸಾಯಿ.



ಬಲು ಬಲವಂತ.  ಅತಿ ಧೀಮಂತ. ರಾಮನ ನಿಜ ದೂತ. ರಾಮ ಈಶ. ಹನುಮ ದಾಸ. ಜಗತ್ತು ಕಂಡ ಅದ್ವಿತೀಯ ಜೋಡಿ. ಈಶದಾಸರ ಮೋಡಿ.

ಅವರಿವರ ಮಾತು ಬೇಡ. ಹನುಮಂತನ ಬಗ್ಗೆ First hand information ಕೇಳೋಣ.

ತ್ರೇತೆಯಲಿ ಅವನ ಸುತ್ತ ಇದ್ದವರು.  ಅವನ ಜೊತೆಗೆ ಇದ್ದವರು. ಕಂಡು ಕೊಂಡಾಡಿದವರು. ಏನೇನ್ ಅಂದರು?

ಜಾಂಬವಂತನ ಮಾತು -

ತ್ರೇತೆಯ ಅತಿ ಹಿರಿಯ. ಅನೆಕ ಬಾರಿ ಸಾರಿ ಹೇಳುತ್ತಾನೆ. 'ಹನುಮಂತ ಅತಿ ಬಲವಂತ. ಅವನ ಸಮಾನರಿಲ್ಲ. ನಾನು ಕಂಡಿಲ್ಲ'

ರಾಮನ ಇಚ್ಛೆ. ಸುಗ್ರೀವಮ ಆಜ್ಞೆ.ಸೀತಾನ್ವೇಷಣೆ ಮಾಡ ಬೇಕು. ನೂರು ಯೋಜನದ ಸಮುದ್ರ ಹಾರಿ  ಲಂಕೆಗೆ ಹೋಗಿ ಬರಬೇಕು. ಕಪಿವೀರರ ಸಭೆ ನಡೆಯಿತು.

ಎಲ್ಲರೂ ತಮ್ಮಿಂದಾಗದು - ಒಮ್ಮತದ ನಿರ್ಣಯ. ಹಿರಿಯ ಜಾಂಬುವಂತ ಪ್ರಸ್ತಾಪಿಸಿದ.

'ತತೋ ಹನೂಮಾನ ಏಕಃ ಸಮರ್ಥೋ ನ ಪರೋಸ್ತಿ ಕಶ್ಚಿತ್' ಮ.ಭಾ.ತಾ.ನಿ

ಸಮುದ್ರ ಹಾರಿ, ವಿಘ್ನ ಗೆದ್ದು, ಲಂಕೆ ಮುಟ್ಟಿ, ಸೀತೆ ದರ್ಶಿಸಿ, ಚಿನ್ನದ ನಗರಿಗೆ ಬೆಂಕಿ ಇಟ್ಟು ರಾವಣನಿಗೆ ಪಾಠ ಕಲಿಸಿ, ಯಶಸ್ವಿ ಮರಳುವಿಕೆ ವೀರ ಹನುಮಂತನಿಗೊಬ್ಬನಿಗೇ ಮಾತ್ರ ಸಾಧ್ಯ. ಅನ್ಯರಿಗೆ ಅಸಾಧ್ಯ. ಅದು ಹನುಮಂತನ ಅತುಲ ಸಾಮರ್ಥ್ಯ.'

ಹಿರಿಯ, ಹನುಮನ ಹಿರಿಮೆ ಹೇಳಿದ.  ಮತ್ತೆ ಪ್ರಾರ್ಥಿಸಿದ.

'ತ್ವಮೇವ ಪರಂ ಕುರಷ್ಯ ಚೈತತ್ ಪರಿಪಾಹಿ ವಾನರಾನ್|| ಮ.ಭಾ. ತಾ.ನಿ.

'ಹನುಮಂತ, ನೀನೇ ಬಲವಂತ. ಈ ಮಹತ್ಕಾರ್ಯ ಮಾಡು. ನಮ್ಮಲ್ಲರನ್ನು ಕಾಪಾಡು' ಜಾಂಬವಂತನ ಪ್ರಾರ್ಥನೆ.

ಮನ್ನಿಸಿದ ಧೀರ. ಸಾಧಿಸಿದ ಕಾರ್ಯ. ಮರಳಿದ ಯಶಸ್ವಿಯಾಗಿ. ಎಲ್ಲ ಒಡೆಯ ಶ್ರೀ ರಾಮನಿಗೆ ಸಮರ್ಪಿತ.

ಮತ್ತೊಮ್ಮೆ -

ರಾಮ, ರಾವಣರ ಮಧ್ಯೆ ಭೀಕರ ಯುದ್ಧ . ಇಂದ್ರಜಿತ್ ನಿಂದ ಮಹಾಅಸ್ತ್ರಗಳ ಪ್ರಯೋಗ. ಲಕ್ಷ್ಮಣ ಮೂರ್ಛಿತ.  ಜಾಂಬುವಂತ ಮೂರ್ಛಿತ. ಕಪಿವರರೆಲ್ಲ ಮೂರ್ಛಿತರಾಗಿ ಧರಾಶಾಹಿ.

ಆ ಅಸ್ತ್ರಗಳ ಪ್ರಭಾವ ವಾಯುಪುತ್ರನ ಮೇಲೆ ಕಿಚಿತ್ತೂ ಇಲ್ಲ.

ವಿಭಿಷಣ, ಹನುಮಂತನನ್ನು ಕರೆದುಕೊಂಡು ಜಾಂಬುವಂತನ ಬಳಿ ಬಂದ.

'ಬದುಕಿರುವೆಯಾ?' ವಿಭೀಷಣನ ಪ್ರಶ್ನೆ.


'ಜೀವತಿ ಕಿಂ ಹನೂಮಾನ್ ಜೀವಾಮ ಸರ್ವೇಪಿ ಹಿ ಜೀವಮಾನೇ|'

ಅರೆಪ್ರಜ್ಞಾವಸ್ಥೆಯಲ್ಲಿದ್ದ ಜಾಂಬವಂತನ ಉತ್ತರ - 'ಅದೆಲ್ಲ ಬಿಡು. ಹನುಮಂತ ಜೀವಂತ

ನಾಗಿದ್ದಾನಷ್ಟೇ? ಆತ ಇದ್ದರೆ ನಾವು ಇರುವೆವು. ಜಗ ಇರುವದು. ಆತನಿಲ್ಲ, ನಾವಿಲ್ಲ

ಆತ ಒಬ್ಬ ಬದಿಕಿದ್ದರೆ ನಾವೆಲ್ಲ ಮರಳಿ ಬದುಕುವೆವು' ಇದು ಹನುಮ ಸಾಮರ್ಥ್ಯದಲ್ಲಿ ಜಗದ ನಂಬಿಕೆ.

ಸುಗ್ರೀವ ಹೇಳಿದ

'ಆಖ್ಯಾತಾ ವಾಯುಪುತ್ರೇಣ ತತ್ವತೋ ಮೇ ಭವದ್ಗುಣಾಃ'

'ಈ ಧೀರ ವಾಯುಪುತ್ರನಿಂದಲೇ ನನಗೆ. ರಾಮನ ಪರಿಚಯ. ರಾಮನ ಮಹಾತ್ಮೆಯ ಅನುಭವ. ರಾಮನ ಸಖ್ಯ. ರಾಮನ ಅನುಗ್ರಹ.'

ತಥ್ಯ -  ಸರ್ವೋತ್ತಮನ ಮಹಾತ್ಮೆಯ ಅರಿವು ಜೀವೋತ್ಮನಿದಲೇನೇ.

ಕಡು ವೈರಿ ರಾವಣನ ಅಭಿಪ್ರಾಯವೇನು?

ರಣರಂಗದಲ್ಲಿ ರಾವಣ, ಹನುಮಂತ ಎದುರುಬದರಾದರು. ರಾವಣ ಅಂಜಿದ. ಅಳುಕಿದ. ಅವನಿಗೆ ನೆನಪು ಮರಕಳಿಸಿತು. ಅಂದು ಏಕಾಂಗಿ ಹನುಮ.

ನಿರ್ಭೀತ. ಕೋಟಿ ಸೈನ್ಯ ಎದಿರಿಸಿದ್ದ. ಮಗ ಅಕ್ಷಯಕುಮಾರನನ್ನು ಕೊಂದಿದ್ದ. ಊರಿಗೆ ಬೆಂಕಿ ಇಟ್ಟು ಹೋಗಿದ್ದ.

ಮರೆಯಲಾಗದ ಹಾವಳಿ ಮಾಡಿದ್ದ. ಈಗ ಮತ್ತೆ ನನ್ನ ಎದುರು. 'ರಾವಣ, ರಾಮನ ಪಾಲು.

ಈಗ ನಾನು ಕೊಲ್ಲುವದಲ್ಲ. ಶಕ್ತಿಯ ಕಿಂಚಿತ ಪರಿಚಯ ಕೊಡೋಣ.'- ಹನುಮನ ವಿಚಾರ.

ರಾವಣನ ಎದೆಗೆ ಮೆಲ್ಲನೇ ಪೆಟ್ಟು ಕೊಟ್ಟ. ಚಿಕ್ಕ ಮಕ್ಕಳಿಗೆ ತಟ್ಟುವಂತೆ ವಜ್ರಕಾಯ.. ಪರ್ವತಗಳನ್ನು ಎತ್ತಾಡಿದ ಪ್ರಬಲ ಹಸ್ತ. ಭದ್ರ ಮುಷ್ಟಿ ಸಂಜೀವ ರಾಯರದು.

ರಾವಣನಿಗೆ ಕತ್ತಲು ಕವಿಯಿತು. ಉಸಿರು ಕಟ್ಟಿತು. ಪ್ರಾಣ ಹೋದಂತಾಯಿತು. ದಶಶಿರ ದಶಮುಖದಿಂದ ರಕ್ತ ಕಾರಿದ. ಪರ್ವತ ಉರುಳಿದಂತೆ ನೆಲಕ್ಕೆ ಬಿದ್ದ. ಪ್ರಜ್ಞೆ ತಪ್ಪಿತು. ರಣರಂಗ ಬೆಚ್ಚಿಬಿದ್ದಿತು.

ಸ ಲಬ್ಧಸಂಜ್ಞಃ ಪ್ರಶಶಂಸ ಮಾರುತಿಂ ತ್ವಯಾ

ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್|


ಸ್ವಲ್ಪು ಸಮಯ. ಎಚ್ಚರ ಮರುಕಳಿಸಿತು. ಏನಾಯಿತು, ಎಲ್ಲಿರುವೆ? ಎಂದು ರಾವಣ ಸುತ್ತ ನೋಡಿದ. ಎಲ್ಲೆಲ್ಲೂ ರಾಮದೂತ ಹನುಮಂತ ಕಂಡ.

ರಾವಣ ತನ್ನ ನೋವು ಮರೆತ.  ಮಾರುತಿಯ ಶಕ್ತಿ ಸಾಮರ್ಥ್ಯ ಕೊಂಡಾಡಿದ.

'ವಾನರವೀರನೇ, ನಿನ್ನಂಥ ಗಂಡು ಈ ಜಗದಲ್ಲಿ ಮತ್ತೊಬ್ಬನಿಲ್ಲ.

ನಿನ್ನದು ಬಲವಾದ ಪೆಟ್ಟು. ಅನ್ಯರಿಂದ ಅಸಾಧ್ಯ. ದೇವದಾನವರ ಸೋಲಿಸಿದ ಈ ಲಂಕಾಧಿಪತಿಗೆ ಈ ಪೆಟ್ಟು ಹೊಸತು. ಇಲ್ಲಿಯವರೆಗೆ ಇಂಥ ಅನುಭವ ನನಗಿರಲಿಲ್ಲ. 

ಅಹುದು ಹನುಮಂತ, ನೀ ಅತಿ ಬಲವಂತ.' ಎಂದ.

ಶತ್ರುವಿನಿಂದಲೂ ಕೊಂಡಾಡಲ್ಪಟ್ಟ ಬಲ ವಾತಾತ್ಮಜನದು.

ಮಾತೆ ಸೀತೆ ಏನಂದಳು -

ಅಪ್ರತಿಮ ಸೇವೆ ಹನುಮಂತನದು. 

ತನ್ನ ಪತಿಯ ಪ್ರೀತಿಯ ದೂತ. ಮೂರುಲೋಕಗಳಲ್ಲಿ ಧನ್ಯ. 

ಎಲ್ಲರ ಪರಾಕ್ರಮ ಮೀರಿಸುವವ‌ ಈತ.

ಈತನ ಪರಾಕ್ರಮ ಮೀರೀಸುವವರು ಇನ್ನಿಲ್ಲ.

ರಾಮ ಈಶ. ಆತನ ಅತ್ಯುತ್ತಮ ದಾಸ ಈ ಹನುಮಂತ ಅಂದಳು.

ರಾಮನ ಒಪ್ಪಿಗೆ ಪಡೆದಳು. ತನ್ನ ಕೊರಳಲ್ಲಿಯ ಅಮೂಲ್ಯ ಅನರ್ಘ್ಯ ಮುತ್ತಿನ ಮಾಲೆ ತೆಗೆದಳು.  ಹನುಮನ ಕೊರಳಿಗೆ ತೊಡಿಸಿದಳು.

ತಾಯಿಯಿಂದ ಮಗನಿಗೆ ಇದಕ್ಕೂ ಹೆಚ್ಚು ಇನ್ನೇನು ಬೇಕು!


- ಇನ್ನು ಸ್ವಾಮಿ ರಾಮ ಏನಂದ?

ಋಷ್ಯಮೂಕ ಪರ್ವತದಲ್ಲಿ - ರಾಮ, ಹನುಮರ ಮೊದಲ ಭೇಟಿ.

ಈಶಗೆ ದಾಸ ಶಿರಸಾಷ್ಟಾಂಗ ನಮಸ್ಕರಿಸಿದ.

ವೇದ ಸ್ತುತಿಸಿ ರಾಮನ ವಂದಿಸಿದ.

ಏನು ಹನುಮನ ವಾಕ್ಪಟುತ್ವ!

ಅಖಿಲ ವೇದಗಳ ಸಾರವ ಪಠಿಸೆ

ನಿಖಿಲ ವ್ಯಾಕರಣ ಶಾಸ್ತ್ರಗಳ ಪೇಳೆ --

ರಾಮ, ಲಕ್ಷ್ಮಣನಿಗೆ ಹೇಳುತ್ತಾನೆ --

ನೋಡು ಸೋದರ, ಗಂಟೆಗಳವರೆಗೆ ಮಾತನಾಡಿದನೀತ. ಈತನ ಮುಖದಲ್ಲಿ ಕಿಂಚದ್ ಅಪಶಬ್ದವಿಲ್ಲ. ಅಪಲಾಪವಿಲ್ಲ.

ವ್ಯರ್ಥವಿಲ್ಲ. ಅನರ್ಥವಿಲ್ಲ. 

ಲಕ್ಷ್ಮಣಾ, ಸಕಲಶಾಸ್ತ್ರ ಪಂಡಿತೋತ್ತಮನಿಗೆ ಇದು ಸಾಧ್ಯ. ಜೀವೋತ್ತಮನಿಗೆ ಇದು ಸಾಧ್ಯ.'

ಮತ್ತೆ

ಹನುಮಂತನ ಸೇವೆ ಹೇಗೆ ಮೆಚ್ಚಿದ?--

'ಮದ್ಭಕ್ತೌ ಜ್ಞಾನ ಪೂರ್ತಾವನುಪಧಿಕ ಬಲ ಪ್ರೋನ್ನತಿ ಸ್ಥೈರ್ಯ ಧೈರ್ಯ

ಸ್ವಾಭಾವಾಧಿಕ್ಯ ತೇಜಃ ಸುಮತಿ ದಮಶಮೇಷ್ವಶ್ಯ ತುಲ್ಯೋ ನ ಕಶ್ಚಿತ್|| ಮ.ಭಾ.ತಾ.ನಿ.


ರಾವಣ ಬಿದ್ದ. ರಾಮ ಗೆದ್ದ. ಯುದ್ಧ ಕಾಂಡ ಮುಗಿಯಿತು. ಸಿತಾಸಹಿತ ಅಯೋಧ್ಯೆಗೆ ಮರಳಿದರು. ವಿಜಯೋತ್ಸವ. ಸಂಭ್ರಮವೋ ಸಂಭ್ರಮ ಅಯೋಧ್ಯೆಯಲ್ಲಿ.

'ಆರಂಭದಿಂದ ಕೊನೆಯವರೆಗೆ ಈತನ ಸೇವೆ

ಅಪಾರ. ಅದ್ವೀತಿಯ. ಏನು ಮರಳಿ ಕೊಡಬಲ್ಲೆ ಈ ಹನಮಂತನಿಗೆ?

ನನ್ನ ನಿಜ ದೂತನಿಗೆ?

ಏನು ಕೊಟ್ಟರೂ ಕಡಿಮೆ'.ಶ್ರೀ ರಾಮನ ವಿಚಾರ.

ತುಂಬಿದ ರಾಜಸಭೆ.

'ಏನು ಕೊಡಲಿ ನಾ ನಿನಗೆ ಹನುಮಂತ?' ಈಶನ ಪ್ರಶ್ನೆ.

'ಬೇರೇನೂ ಬೇಡ. ನಿನ್ನಲ್ಲಿ ಸದಾ ವೃದ್ಧಿಸುವ ನಿಜ ಭಕ್ತಿ ಕೊಡು.' ದಾಸನ ಉತ್ತರ.

ರಾಮ ವಾಯುಪುತ್ರನನ್ನು ಆಲಿಂಗಿಸಿದ. ಗಟ್ಟಿ ಆಲಿಂಗನವದು. ಮತ್ತೊಬ್ಬರಿಗೆ

ಸಿಗದು. ಬ್ರಹ್ಮ ಪದ ಕೊಟ್ಟ. ಸಾಯುಜ್ಯ ಕೊಟ್ಟ. ಸಹಭೋಗ ಕೊಟ್ಟ. ಹನುಮನಿಗೆ ಏನು ಕೊಟ್ಟರೂ ರಾಮನಿಗೆ ತೃಪ್ತಿ ಇಲ್ಲ. ಆನಂದ ಭಾಷ್ಪ. ಆಕಾಶದಿಂದ ಪುಷ್ಪವೃಷ್ಟಿ.

ಮುಕ್ತ ಕಂಠದಿಂದ ಆಂಜನಾಪುತ್ರನನ್ನು ಕೊಂಡಾಡಿದ ರಾಮ.

'ಹೇ ಹನುಮಂತ, ನೀ ಬಲು ಪ್ರಜ್ಞಾವಂತ. ಅತಿ ನಿಜ ಬಲವಂತ. ಧೀಮಂತ.

ಮಮ ಭಕ್ತ ವರಿಷ್ಟ. ಸುಗುಣ ಶ್ರೇಷ್ಠ. ಶಮದಮ ಅಪ್ರತಿಮ. ಉನ್ನತ ತೇಜ. ಭಾವೀ ಅಜ..'

ಈಶನಿಂದ ದಾಸನಿಗೆ ಪ್ರಶಸ್ತಿ. ಇನ್ನೇನು ಬೇಕು? ಅಂಥ ಸ್ವಾಮಿ ಇನ್ನಿಲ್ಲ. ಇಂಥ ಸೇವಕ ಮತ್ತೊಬ್ಬನಿಲ್ಲ.

ಇನ್ನು ಹನುಮಂತ ತನ್ನ ಬಗ್ಗೆ ತಾನೇನೆಂದ?


'ಅಶೋಕವನ ಹಾಳು ಮಾಡಿದಿ. ಅಪಾರ ಸೈನ್ಯ ಕೊಂದಿ. ನನ್ನ ಮಗ ಅಕ್ಷಕುಮಾರನ ಸಂಹರಿಸಿದಿ. ಯಾರು ನೀನು?' - ರಾವಣನ ಪ್ರಶ್ನೆ.

ನಾನು ಜಗದೇಕ ವೀರ - ಎಂಬ ಸತ್ಯ ಹೇಳ ಬಹುದಿತ್ತು ಹನುಮಂತ ಬಲವಂತ.

ಏನು ಸ್ವಾಮಿನಿಷ್ಠೆ! ಏನು ದಾಸ್ಯದ್ಯೋತಕ ಹನುಮನದು.

'ದಾಸೋಹಂ ಕೋಸಲೇಂದ್ರಸ್ಯ'

ಈಶ ರಾಮ. ನಾನು ಆತನ‌ದಾಸ ಎಂದ.

'ನಿನ್ನಂಥ ವೀರರು ಇನ್ನೆಷ್ಟು ಜನ ರಾಮನಲ್ಲಿ?'

ಹನುಮನ ಧೈರ್ಯ ಸ್ಥೈರ್ಯ ಪರಾಕ್ರಮ ಕಂಡ, ಉಂಡ ರಾವಣನ ಪ್ರಶ್ನೆ.

'ಕೋಟಿ ಕೋಟಿ ವೀರರಿದ್ದಾರೆ. ಎಲ್ಲರೂ ನನ್ನ ಮಿಕ್ಕಿದವರೇ.  ಪರಾಕ್ರಮದಲ್ಲಿ ಎಲ್ಲರಿಗಿಂತ ಕಿರಿಯ ನಾನು' ಎಂದ ಹನುಮಂತ.

ರಾವಣ ಬಾಯಿಮೇಲೆ ಬೆರಳಿಟ್ಟುಕೊಂಡ.


ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೆ||

ಮುಖ್ಯ ಪ್ರಾಣ ಅಂತರ್ಗತ  ಶ್ರೀ ಸೀತಾರಾಮರಿಗೆ ಸಹಸ್ರ ನಮನಗಳು.

ಎಲ್ಲರಿಗೂ ಹನುಮನ ಹುಟ್ಟಿದ ಮಹಾ ಹಬ್ಬದ ಶುಭಾಶಯಗಳು.

ಡಾ. ವಿಜಯೇಂದ್ರ ದೇಸಾಯಿ.
***

ANJANADRI in Tretayuga –
Once there lived an Asura named Kesari who was a Vayu Bhaktha, he prayed Shivantaryami Srihari by doing tapassu.  When Srihari came in front of him, he asked to give him a Bhagavad bhakta putra.  Srihari told him that since he does not have the yoga of a putra santana, he will give him a kanye, and in her he will get grand son, who is a haribhaktha.

After some time, this Kesari got a girl baby.  Since she removed her father’s eye problem, she was called as “Anjana”.   She was married to another Kesari named monkey.  He had killed Shambasadhana named daithya, who was giving trouble to Rushi-muni.  Pleased with the killing of the daithya, the Rushi-munees blessed him with a Bhagavatottama putra.

Anjana did the tapassu, for 12 years in Narayana Parvatha, as advised by Matanga Maharshi.   She got the permission of her husband and Rushi-muni and used to do snaana in Swami pushkarini, have Ashwattha Pradakshina, Varaha Swamy Darshana, and Theerthodaka paana.   She observed fast, kept aside all bhoga and did the penance.  After completion of one year, Vayudevaru used to come daily and was giving a fruit daily.  Vayudeva, one day gave the fruit with his “veerya” and anugraha, blessed her.  During her Penance period, she used to take only wind as her food.  She did the penance for 12000 abdhi kaala.    After this, she got garbha dharana.  She gave birth in 10th month, which child was named as “Hanumantha”.  In this way, since she did the penance for a long duration in this mountain, this mountain was called as “Anjanachala”.

Sheshachala in Dwapara Yuga–
Once Srimaha vishnu, asked Adishesha to guard Vaikunta dwara and was with Lakshmi Devi.   At that time, Vayudevaru came there to see Sri Lakshminarayana.  But he was stopped by Sheshadevaru, who had kali avesha at that time.  Vayudevaru reminded Sheshadevaru about what had happened when Jaya-Vijaya stopped Sanaka sanatkumaaraadi sages.   Sheshadevaru told him that he is the bed for Srihari and he is the supreme than Brahma-Vayu.    Then Vayu told him that even though a cat enters the bed of the king, it can’t be superior than an elephant standing outside.   When the conversation between Vayu-Shesha was extending for long duration, Srihari came before them, and asked them about the issue.  Srihari suggested to test who is supreme between the two.

Sheshadevaru was asked to tide Anandadri hill (son of Meru parvata),  with his body as the rope, tightly.  Vayudeva was asked to move the mountain to test who is supreme amongst them.  When Vayu did the sparsha of his single finger, Anandadri was moved over 51000 yojana near Suvarnamukee river basin.  In this way, Vayudeva was declared as supreme than Sheshadevaru.  Sheshadevaru, confessed before Vayu, who in turn blessed him.

In this way, this mountain was given the name Sheshachala, named after Sheshadevaru, who was defeated in the fight with Vayudevaru.
***

ಹನುಮ ಜಯಂತಿಯ ನಿಮಿತ್ತ ;

ಅಪ್ಸರಾ ಸ್ತ್ರೀಯರಲ್ಲಿ ಶ್ರೇಷ್ಠಳು ಪುಂಜಿಕಸ್ಥಲಾ ಕುಂಜರನೆಂಬ ವಾನರೇಂದ್ರನ ಮಗಳು ಆತ್ರಿ ಮುನಿಗಳ ಶಾಪದಿಂದ ವಾನರ ಸ್ತ್ರೀಯಾಗಿ ಹುಟ್ಟಿದರೂ ಬಯಸಿದ ರೂಪ ಹೊಂದುವ ಶಕ್ತಳು ಅಂಜನಾ ನಾಮಕಳು. ಮರುತ್ತುಗಳಲ್ಲಿ ಒಬ್ಬನಾದ ಕೇಸರಿ ಕಪಿಯ ಪತ್ನಿ. ಭಾರದ್ವಾಜರ ವರದಿಂದ ಸರ್ವಗುಣಗಳಿಂದ ಮನೋಹರನಾಗಿರುವ ಮುಕುಂದನನ್ನು ಬಿಟ್ಟರೆ ಜೀವಕೋಟಿಯಲ್ಲಿ ಮುಖ್ಯನಾದವನಾದ ಶುಭ ಮೂಹೂರ್ತದಲ್ಲಿ ವಜ್ರದ ಕವಚ ಕುಂಡಲಗಳನ್ನು ಧರಿಸಿದವನಾದ ಪುತ್ರನನ್ನು ಅಂಜನಾ ದಂಪತಿಗಳು ಪಡೆದರು, ಅವರೇ ವಾಯುದೇವರ ಪ್ರಥಮ ಅವತಾರಿ ಹನುಮಂತ. ವಜ್ರ ಶರೀರ, ಗಂಭೀರ, ಮುಕುಟಧರ, ಬಲಿಷ್ಠ, ಜ್ಞಾನಿಯು, ಸಕಲ ಜೀವ ರಾಶಿಗಳ ಪ್ರಾಣದಾಯಕ, ಇಷ್ಟಪ್ರದಾಯಕ, ಸಜ್ಜನೋಪಕಾರಿ  ಕಪಿಯ ಬಾಲ ಚೇಷ್ಟೆಯಿಂದ ಆಗ ತಾನೇ ಉದಯಿಸಿದ ಸೂರ್ಯನನ್ನು ಹಿಡಿಯಬೇಕೆಂದು ರಾಹುವು ಬರುತ್ತಿರುವಾಗ ಹನುಮಂತನು ನೋಡಿ ಅದನ್ನು ತಡೆಯಲು ಆಕಾಶಕ್ಕೆ ಹಾರಿದನು. ಆತನ ವೇಗದ ಸಾಮರ್ಥ್ಯ ಗರುಡನಿಗಾಗಲಿ, ಮನಸ್ಸಿಗಾಗಲಿ ಇಲ್ಲವೆಂದು ಹೇಳುವರು.

'ಹನು ' ಎಂದರೆ ಜ್ಞಾನ ಮಂತ ಎಂದರೆ ಉಳ್ಳವನು. ಜ್ಞಾನಮಯ, ಅತಿರೋಹಿತ ವಿಮಲ ವಿಜ್ಞಾನಿ ಹನುಮಂತ ದೇವರು. ಕಪಿ ಸ್ವಭಾವವನ್ನು ಲೋಕ ವಿಡಂಬನೆಗಾಗಿ ಪ್ರಕಾಶ ಮಾಡಿದುದು. ಅಪ್ರಮೇಯನಾದ ಕಪಿ ಶ್ರೇಷ್ಠನು ಮೂಲ ರೂಪದಲ್ಲಿ ಮಾಧವನಿಂದ ಸರ್ವ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಅಪಾರ ಜ್ಞಾನಿಯಾಗಿದ್ದರೂ, ಶಾಸ್ತ್ರ ಶ್ರವಣ ಮಾಡಿದಷ್ಟೂ ಸುಕೃತವೂ, ಭಕುತಿಯೂ ಸಂವ್ರುದ್ಧಿ ಯಾಗುವುದರಿಂದ ಇನ್ನೊಂದು ಬಾರಿ ಈ ಅವತಾರದಲ್ಲಿ ದೇವರಿಂದಲೇ ಅಧ್ಯಯನ ಮಾಡಬೇಕೆಂದು ಉರುಕ್ರಮ ನಾಮಕ ಶ್ರೀ ಹರಿಯ ಇದುರಿಗೆ ಕೈ ಮುಗಿದುಕೊಂಡು ಉದಯಾದ್ರಿಯಿಂದ ಅಸ್ತಾದ್ರಿವರೆಗೆ ಆಂತರಿಕ್ಷದಲ್ಲಿ ಹಿಂದೂಮುಂದಾಗಿ ನಡೆದು ಒಂದೇ ದಿನದಲ್ಲಿ ಆ ಗ್ರಂಥ ಸಂಪೂರ್ಣ ಅಧ್ಯಯನ ಗೈದರೆನ್ನುವರು. ಇದನ್ನೇ ಶ್ರೀ ಶ್ರೀಪಾದರಾಜರು ಮಧ್ವನಾಮದಲ್ಲಿ, ತರಣಿ ಗಭೀಮುಖವಾಗಿ ಶಬ್ದ ಶಾಸ್ತ್ರವ ಪಠಸಿ ಉರವಣಿಸಿ 

ಹಿಂದೆ ಮುಂದಾಗಿ ನಡೆದ ಎಂದು ಹನುಮನವತಾರದಲ್ಲಿ ತಿಳಿಸುತ್ತಾರೆ. ಇಂತಹ ಭಾಗವತೋತ್ತಮನಾದ ಅಚ್ಚಿನ್ನ ಭಕ್ತನಾದ ಶ್ರೀ ರಾಮನಲ್ಲಿ ಅಸಾಧಾರಣ ಭಕ್ತಿಭಾವ ಹೊಂದಿದ ಸಕಲವೂ ಭಗವದನುಗ್ರಹ ದಿಂದಲೇ ನಡೆಯುವುದೆಂದು ನಂಬಿದ, ಭಗವದ್ಸ್ಮರಣೆ ಯಿಂದಲೇ ಸಕಲ ಕಾರ್ಯಾ ರಂಭಿಸುವ ಹನುಮಂತನು ಶ್ರೀ ರಾಮಚಂದ್ರನ ಸೇವೆ ಮಾಡಿ ಮೌಕ್ತಿಕದಹಾರ ಪಡೆದ ಭಗವದ್ಭಕ್ತ.

ತಾನು ಶ್ರೀ ಹರಿಯ ಆಧೀನ  ಸ್ವತಂತ್ರನಲ್ಲ ಎನ್ನುವುದನ್ನು ಲಂಕೆಯ ಪ್ರಸಂಗದಿಂದ ಹಾಗೂ ಸ್ವಾಮಿಕಾರ್ಯದ ಭಕ್ತಿ ಭಾವವನ್ನು ವಿಶ್ರಾಂತಿಲ್ಲದೇ ಸೀತಾನ್ವೇಷಣ ಸಮಯದಲ್ಲಿ ನಿರೂಪಿಸಿದ್ದಾನೆ.ಸೇವಕತನದ ಮೌಲ್ಯ ಅರಿತವನು ಹನುಮಾನೊಬ್ಬನೇ ಎನ್ನುಬವುದು ಪ್ರಖ್ಯಾತಿ. ಈ ಸೇವಕನ ಸೇವೆಗೆ ಮೆಚ್ಚಿ ತನ್ನನ್ನೇ ಅವನಿಗೆ ಕೊಟ್ಟು ಕೊಂಡವನು ಶ್ರೀ ರಾಮ. ಕೊನೆಗೆ ಬೇಡದಲೆ ಸುರರಿಗೆ ವರವ ಕೊಡುವ ಎನ್ನುವುದಕ್ಕೆ ಹನುಮಂತನಿಗೆ ಅಜ ಪದವಿಯನ್ನು ಅವನು ಬೇಡದಲೆ ನೀಡಿದ ಶ್ರೀ ರಾಮ.

ಎಲ್ಲಿ ಹನುಮನೋ ಅಲ್ಲಿ ರಾಮನು, ಎಲ್ಲಿ ರಾಮನೋ ಅಲ್ಲಿ ಹನುಮನು.🙏🙏🙏🙏🙏

ಅಲ್ಪ ಮತಿಗೆ ಹೊಳೆದದ್ದು ತಿಳಿದದ್ದು ಕೇವಲ ವಾಕ್ ಶುದ್ಧಿಗಾಗಿ..

ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ.

ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

***

ಶ್ರೀಹನುಮಂತದೇವರು ಶ್ರೀರಾಮದೇವರಲ್ಲಿ  ಸಲ್ಲಿಸಿದ ಪ್ರಾರ್ಥನೆ


ರಾಮಾವತಾರಕಾಲದಲ್ಲಿ  ಯುದ್ಧದಲ್ಲಿ ಉಳಿದೆಲ್ಲರಿಗಿಂತ ಅಧಿಕವಾಗಿ ರಾಮದೇವರ ಸೇವೆಸಲ್ಲಿಸಿದ್ದ ಹನುಮಂತದೇವರಿಗೆ ಶ್ರೀರಾಮಚಂದ್ರದೇವರು ಏನು ಬೇಕು ಕೇಳು ಎಂದಾಗ ಅನುಗಾಲವೂ ನಿನ್ನ ಪಾದಸೇವೆ ಸಲ್ಲಿಸುವಂತಹ ಭಾಗ್ಯಕೊಡು ಎನ್ನುತ್ತಾರೆ ಇದನ್ನು  ಶ್ರೀಮಧ್ವಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ತಿಳಿಸಿದ್ದಾರೆ .


 ಯಸ್ತೇ ಕಥಾಸೇವಕ ಏವ ಸರ್ವದಾ

ಸದಾರತಿಸ್ತ್ವಯ್ಯಚಲೈಕಭಕ್ತಿಃ |

ಸ ಜೀವಮಾನೋ ನ ಪರಃ ಕಥಂಚಿತ್

ತಜ್ಜೀವನಂ ಮೇ ಸ್ತ್ವಧಿಕಂ ಸಮಸ್ತಾತ್ ||


ಯಾರು ಸದಾಕಾಲವೂ ನಿನ್ನ ಶಾಸ್ತ್ರ ಶ್ರವಣಾದಿಗಳನ್ನು ಮಾಡುವರೋ ಯಾರು ನಿನ್ನಲ್ಲಿ ನೆಲೆಗೊಳಿಸಿ ಅಚಲಭಕ್ತರಾಗಿರುವರೋ ,ಅವರ ಜೀವನವೇ ನಿಜವಾಗಿಯೂ ಧನ್ಯ ಬೇರೆಯವರ ಬದುಕು  ಬದುಕೇ ಅಲ್ಲ ಎಲ್ಲದಕ್ಕಿಂತ ಮಿಗಿಲಾದ ನಿನ್ನ ಪಾದಕಮಲದಲ್ಲಿ (ಸೇವಾಭಾಗ್ಯದ) ಭಕ್ತಿಯ ಬದುಕೇ ನನಗೆ ಸದಾ ಇರಲಿ ಎಂದು ಪ್ರಾರ್ಥಿಸಿದ್ದಾರೆ ‌.


 ಪ್ರವರ್ಧತಾಂ ಭಕ್ತಿರಲಂ ಕ್ಷಣೇ ಕ್ಷಣೇ

ತ್ವಯೀಶ ಮೇ ಹ್ರಾಸ ವಿವರ್ಜಿತಾ ಸದಾ |

ಅನುಗ್ರಹಸ್ತೇ ಮಯಿ ಚೈವಮೇವ

ನಿರೂಪದೌ ತೌ ಮಮ ಸರ್ವಕಾಮಃ ||


ಪ್ರಭು ನನಗೆ ನಿನ್ನಲ್ಲಿ ಎಂದೂ ಕುಂದದಿರುವ ಭಕ್ತಿ 

ಕ್ಷಣ ಕ್ಷಣಕ್ಕೂ ಅಭಿವೃದ್ಧಿಯಾಗುತ್ತಿರಲಿ . ನಿನ್ನ ಅನುಗ್ರಹ ನನಗೆ ಸದಾಕಾಲವಿರಲಿ .ನಿರುಪಧಿಕವಾದ  ಈ ಎರಡೇ ನನಗೆ ಸಕಲಪುರುಷಾರ್ಥರೂಪವಾಗಿದೆ  ಎಂದು ಶ್ರೀಹನುಮಂತದೇವರು ಶ್ರೀರಾಮದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು .

     ಮಹಾಭಾರತತಾತ್ಪರ್ಯನಿರ್ಣಯ 8-246,247


ವಿವರಣೆ-  ಭಕ್ತಿಗೆ ಕುಂದುತರುವ ನಿಷಿದ್ಧಕಾಮನೆಗಳನ್ನು ರಾಗ ದ್ವೇಷಾದಿಗಳು ಒಂದೂ ಇಲ್ಲದ ನನಗೆ ನಿನ್ನಲ್ಲಿ ನಿರ್ವ್ಯಾಜವಾದ ಭಕ್ತಿ ಸದಾ ಬೆಳೆಯುತ್ತಿರಲಿ ಸುಖಸಂಪತ್ತು ಕೊಡುವಿ ಎಂದು ನಾನು ನಿನ್ನಲ್ಲಿ ಭಕ್ತಿಮಾಡಬಾರದು ಕಾಣಿಕೆ  ನೀಡುವನೆಂದು ನೀನು ನನ್ನಲ್ಲಿ ಅನುಗ್ರಹ ಮಾಡುವುದು ಸಲ್ಲದು ಸನಕಾದಿಗಳು ನಿನಗೆ ಏನು ದ್ರವ್ಯ ಕಾಣಿಕೆಯಾಗಿ ಕೊಡುತಿದ್ದಾರೆ ?

ಧುರ್ಯೋಧನ ಕೊಡಲು ಬಂದರೆ ಕೊಡದ ವಿದುರನನಲ್ಲಿಯೇ ಅನುಗ್ರಹ ಮಾಡಿರುವಿ ತಾನೇ ಅದರಿಂದ ಅನಾದಿ ಅನಂತಕಾಲದಲ್ಲಿಯೂ ನಾನು ನಿನ್ನಲ್ಲಿ ಸ್ವಾಭಾವಿಕವಾದ ಭಕ್ತಿಮಾಡುವವನೆಂದೇ ನೀನು ನನ್ನಲ್ಲಿ ಸ್ವಾಭಾವಿಕವಾದ ಭಕ್ತಿಮಾಡುವವನೆನೆಂದೇ ನೀನು ನನ್ನಲ್ಲಿ ಸ್ವಾಭವಿಕವಾದ ಅನುಗ್ರಹ ಮಾಡುತ್ತಿರಬೇಕು . ಈ ಭಕ್ತಿ ಈ ಅನುಗ್ರಹ ಇವೆರಡೇ ನನ್ನ ಬದುಕಿನ ಮಹಾಪುರುಷಾರ್ಥಗಳು ಎಂದು ಮಹಾಭಾರತತಾತ್ಪರ್ಯನಿರ್ಣಯ ಭಾವಪ್ರಕಾಶಿಕದಲ್ಲಿ ಶ್ರೀವಾದಿರಾಜ ಸ್ವಾಮಿಗಳು ತಿಳಿಸಿದ್ದಾರೆ .


ಶ್ರೀಹನುಮಂತದೇವರ ಈ ಆದರ್ಶ  ನಿಜಕ್ಕೂ ಅನುಕರಣೀಯವಾಗಿದೆ .ಕೇವಲ ಮನುಷ್ಯನಾಗಿ ಬದುಕಿದರೆ ಸಾಲದು .ಬದುಕಿರುವಷ್ಟು ಕಾಲ ಭಗವಂತನ ಪಾದಕಮಲಗಳಲ್ಲಿ ಭಕ್ತಿ ಇಟ್ಟಿರಬೇಕು ಭಗವಂತನಲ್ಲಿ ಏನಾದರೂ ಬೇಡುವುದೇ ಆದರೆ ಶ್ರೀಹನುಮಂತದೇವರಂತೆ  ಕ್ಷಣ ಕ್ಷಣಕ್ಕೂ ಅಭಿವೃದ್ಧಿ ಯಾಗುವ ಭಕ್ತಿಯನ್ನೇ ಬೇಡುವುದು ಅವಶ್ಯ ಇದರಿಂದ ಆ ಬದುಕು ಸಾರ್ಥಕವಾಗುತ್ತದೆ .

ಹನುಮದ್ ಜಯಂತಿ  ಶುಭಾಶಯಗಳು 

***

ಹನುಮಂತ ಅಂದರೆ ಜ್ಞಾನವಂತ !
ಹನುಮಂತ ಅಂದರೆ ಜ್ಞಾನವಂತ ಎಂದರ್ಥ, ಆ ಜ್ಞಾನಿಯನ್ನು ಪೂಜಿಸುವ ಮುನ್ನ ಅವನ ಜನ್ಮರಹಸ್ಯ ತಿಳಿಯುವುದು ಅಗತ್ಯ. ಆ ಪ್ರಾಣದೇವರ ಅವತಾರದ ಬಗ್ಗೆ ಶ್ರೀನಿವಾಸ ಕಲ್ಯಾಣ ಕಥೆಯಲ್ಲಿ ಉಲ್ಲೇಖಿಸಿದಂತೆ ತಿಳಿಸುವ ಪ್ರಯತ್ನ,
ತಿಳಿಯದೇ ಮಾಡಿದ ಸದಾಚಾರ, ತಿಳಿದೂ ಮಾಡುವ ಅನಾಚಾರ ಎರಡಕ್ಕೂ ವ್ಯತ್ಯಾಸ ಇಲ್ಲಾ?
ಶ್ರೀನಿವಾಸ ಕಲ್ಯಾಣ ಕಥೆ ಕಲಿಯುಗಕ್ಕೆ ಮಾತ್ರವೇ ಸೀಮಿತವಲ್ಲ, ಈ ಕಥೆಯನ್ನು ಜನಕಮಹಾರಾಜನು ತನ್ನ ಸೀತೆಯ ಆರುವಯಸ್ಸಿನಲ್ಲಿ ವಿವಾಹದ ಬಗ್ಗೆ ದ್ವಂದ್ವ ಬಂದಾಗ ಅದರ ನಿವಾರಣೆಗೆ ಶತಾನಂದರು (ಗೌತಮ ಋಷಿ ಮತ್ತು ಅಹಲ್ಯಾದೇವಿಯ ಮಗ) ಈ ಕಥೆಯನ್ನು ಸೀತಾ ಮತ್ತು ಉಳಿದ ಮೂವರ ವಿವಾಹ ಫಲಕ್ಕಾಗಿ ಶ್ರವಣ ಮಾಡಿಸುತ್ತಾರೆ.
ಇಲ್ಲಿ ತಿರುಮಲೆ ಗೆ ತ್ರೇತಾಯುಗದಲ್ಲಿ ಅಂಜನಾದ್ರಿ ಎಂದು ಕರೆಯುತ್ತಾರೆ, ಕಾರಣ ಅಂಜನಾದೇವಿ ಮಗನಾದ ಆಂಜನೇಯನ ಹುಟ್ಟಿಗಾಗಿ ವ್ರತಾಚರಣೆ ಮಾಡಿ ಸಿದ್ದಿ ಪಡೆದ ಮಹಾ ಕ್ಷೇತ್ರ.
ಕೇಸರಿ ಎಂಬ ದೈವಭಕ್ತ ಅಸುರನು ತ್ರೇತಾಯುಗದಲ್ಲಿ ಪುತ್ರಪ್ರಾಪ್ತಿಗಾಗಿ ರುದ್ರಾಂತರಗತ ನರಸಿಂಹ ದೇವರನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಭಗವಂತ ಗೋಚರಿಸುತ್ತಾನೆ ಆಗ ಕೇಸರಿಯು ಪುತ್ರನ ಪ್ರಸಾದವನ್ನು ಬೇಡುತ್ತಾನೆ. ಆಗ ಭಗವಂತ ನಿನಗೆ ನಾ ಪುತ್ರನನ್ನು ಪ್ರಸಾಧಿಸಲಾರೆ ಕಾರಣ ನಿನಗೆ ಈ ಜನ್ಮದಲ್ಲಿ ಪುತ್ರ ಸಂತಾನದ ಯೋಗವಿಲ್ಲ, ಆದರೆ ನಿನ್ನ ತಪಸ್ಸನ್ನು ವ್ಯರ್ಥ ಮಾಡುವುದಿಲ್ಲ ನಿನಗೆ ಶ್ರೇಷ್ಠ ಕನ್ಯಾ ರತ್ನವನ್ನು ಪ್ರಸಾಧಿಸುತ್ತೇನೆ ಅವಳಲ್ಲಿ ಒಬ್ಬ ಮಹಾ ಪುರುಷನ ಜನನವಾಗುತ್ತದೆ. ಅವನಿಂದ ನಿನ್ನ ಕುಲವು ಉದ್ದಾರವಾಗುತ್ತದೆ ಎಂದು ಹರಸಿ ಅದೃಷ್ಯವಾಗುತ್ತಾನೆ.
ವರದಂತೆಯೇ ಅವನಿಗೆ ಕೆಲ ದಿನಗಳಲ್ಲಿಯೇ ಪುಂಜಕಸ್ಥಳಿ ಎಂಬಾ ಅಪ್ಸರಾ ಸ್ತ್ರೀ ಮಗಳಾಗಿ ಜನಿಸುತ್ತಾಳೆ. ಕಾಲಾಂತರದಲ್ಲಿ ಮದುವೆಯ ವಯಸ್ಕಳಾದಾಗ ಕೇಸರಿಗೆ ಒಂದು ಉಪಾಯ ಹೊಳೆಯುತ್ತದೆ. ತನ್ನ ಹೆಸರಿನ ವರನನ್ನೇ ಹುಡುಕಿ ಮಗಳ ಮದುವೆ ಮಾಡಿದರೆ ಆ ಮಹಾ ಪುರುಷ ಕೇಸರೀಸುತ ಎಂದು ಪ್ರಖ್ಯಾತ ಆಗುತ್ತಾನೆ. ಅದರಿಂದ ಅವನ ಹೆಸರೂ ಸಹಾ ಆಜೀವ ಪರ್ಯಂತ ಲೋಕದಲ್ಲಿ ನೆಲೆಸುತ್ತದೆ ಎಂಬ ಉದ್ದೇಶದಿಂದ ಕೇಸರಿ ಎಂಬ ಹೆಸರಿನ ವರನ ಹುಡುಕಾಟ ಶುರುವಾಗುತ್ತದೆ.
ಭಗವಂತನ ಇಚ್ಛೆಯ ಅನ್ವಯ ಕಪಿಸಾಮ್ರಾಜ್ಯದ ರಾಜನಾದ ಕೇಸರಿ ಎಂಬ ರಾಜನೊಂದಿಗೆ ಅಂಜನಾ ದೇವಿಯ ವಿವಾಹವಾಗುತ್ತದೆ.
ಪುತ್ರಸಂತಾನ ಕ್ಕಾಗಿ ಅಂಜನಾದೇವಿ ಮತಂಗ ಋಷಿಗಳ ಮೊರೆ ಹೋಗ್ತಾಳೆ, ಭಗವಂತನ ಅನುಗ್ರಹ ಉಂಟು ಆದರೆ ಸಾಕ್ಷಾತ್ ವಾಯುದೇವರ ಅವತಾರ ಆಗಬೇಕಾದರೆ ತ್ರಿಕರಣಶುದ್ದಿ ಕೂಡಾ ಅಗತ್ಯ. ಆದ್ದರಿಂದ ಮುನಿಗಳು ದ್ವಾದಶಾಬ್ದವ್ರತ ಎಂಬ ಒಂದು ವ್ರತವನ್ನು ಪಂಪಾ ಸರೋವರದ ಪೂರ್ವ ದ್ವಿಗ್ಬಾಗದಲ್ಲಿ ಐವತ್ತು ಯೋಜನಗಳಷ್ಟು ದೂರದಲ್ಲಿ ನರಸಿಂಹಾಶ್ರಮದ ದಕ್ಷಿಣಕ್ಕೆ ನಾರಾಯಣಗಿರಿಯ ಸಮೀಪ ಸ್ವಾಮಿ ಪುಷ್ಕರಣಿಯ ಉತ್ತರಕ್ಕೆ ಆಕಾಶಗಂಗೆ ಇದೆ ಅಲ್ಲಿ ಮಾಡುವಂತೆ ತಿಳಿಸುತ್ತಾರೆ.
ಈ ವ್ರತದ ಪ್ರಕಾರ ನಿತ್ಯದಲ್ಲಿ ಮೂರು ಹೊತ್ತು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ, ಅಶ್ವತ್ಥ ಮರದ ಪ್ರದಕ್ಷಿಣೆ, ವರಾಹ ದೇವರ ದರ್ಶನ ನಂತರ ತೀರ್ಥ ಸೇವನೆ ಹೀಗೆ ಹನ್ನೆರಡು ತಿಂಗಳು ಮಾಡುವುದು. ಆದರೆ ಅವಳು ಆನಂದದಿಂದ ಇದನ್ನು ಇನ್ನೂ ಒಂದು ತಿಂಗಳು ಜಾಸ್ತಿ ಅಂದರೆ ಹದಿಮೂರು ತಿಂಗಳು ಮಾಡಿದಾಗ ನಂತರ ಇವಳ ವ್ರತ ನಿಯಮಕ್ಕೆ ಮೆಚ್ಚಿ ಸಾಕ್ಷಾತ್ ವಾಯುದೇವರು ದಿನಂಪ್ರತಿ ಒಂದು ಫಲವನ್ನು ೧೯ ತಿಂಗಳು ಹದಿಮೂರು ದಿನಗಳ ತನಕ ನೀಡುತ್ತಾ ಬರುತ್ತಾರೆ, ಅದರಿಂದ ಅವಳಿಗೆ ಗರ್ಭದಾರಣೆ ಆಗುತ್ತದೆ. ಇವಳಿಗೆ ಗರ್ಭದಾರಣೆ ಆದದ್ದು ಇಡೀ ಮುನಿಕುಲಕ್ಕೆ ಕನಸಿನ ಮೂಲಕ ಸೂಚನೆ ಸಿಗುತ್ತದೆ. ನಂತರ ಹತ್ತು ತಿಂಗಳ ನಂತರ ಇವಳಿಂದ ಭಗವಂತನ ಅನುಗ್ರಹದಿಂದ ಮುಖ್ಯಪ್ರಾಣದೇವರ/ ವಾಯುದೇವರ ಸಾಕ್ಷಾತ್ ಅವತಾರವಾಗಿ ಅಂಜನೀಪುತ್ರನಾಗಿ, ಕೇಸರಿ ಸುತನೆಂದು ಪ್ರಖ್ಯಾತನಾದ ಅಂಜನೇಯನ ಅವತಾರವಾಗಿದೆ. ರುದ್ರನ ಅಂಶವೂ ಹೌದು ಕಾರಣ ರುದ್ರನು ಸಹಾ ವಾಯುದೇವರ ಅವತಾರವೇ.
ಮತ್ತೊಂದು ವಿಷಯ ಮಗುವಾಗಿದ್ದಾಗ ಸೂರ್ಯನನ್ನು ಹಣ್ಣು ಎಂದು ತಿಳುವಳಿಕೆ ನುಂಗಲು ಯತ್ನಿಸಿದ್ದಲ್ಲ , ರಾವಣಾದಿ ಅಸುರ ಜನಾಂಗಕ್ಕೆ ಭಗವಂತನ ಅವತಾರದ ಸೂಚನೆ ಕೊಡಲು ಮಾಡಿದ ಮಹತ್ಕಾರ್ಯ ಅದು. ರಾಮ - ಲಕ್ಷಣ ರ ಅವತಾರಕ್ಕೆ ಬಹಳ ವರ್ಷಗಳ ಮೊದಲೇ ಬಹಳಷ್ಟು ರಕ್ಕಸರನ್ನು ಲೋಕಕ್ಕೆ ತಿಳಿಯದೆಯೇ ಸಂಹರಿಸಿದ ಮಹಾ ಚೇತನವದು.
***
ಒಂದೇ ದಿನದಲ್ಲಿ ಈ ಮೂರು ಮುಖ್ಯಪ್ರಾಣದೇವರ ದರ್ಶನ ವಿಶೇಷ ಫಲ ...ಅದು ಶನಿವಾರ ವಿದ್ದರೆ ಅತ್ಯಂತ ವಿಶೇಷ ಫಲ ಅದು ಅಧಿಕಮಾಸವಾದರಂದು  ಕಾಶೀಯಾತ್ರಾ ವಿಶೇಷ ಫಲ ಅನ್ನುವುದು ಹಿರಿಯರ ಅನುಭವದ ಮಾತುಗಳು.....ಇದಲ್ಲದೇ ಮತ್ತೊಂದು ಅತ್ಯದ್ಭುತವಾದದ್ದು ಏನೆಂದರೆ ಈ ಮೂರು ಪ್ರಾಣದೇವರ ಮೂರ್ತಿಗಳಲ್ಲಿ ಶಾಲಿಗ್ರಾಮಾದಿಗಳ ಸನ್ನಿಧಾನ ವಿರುವುದು ಅದನ್ನು ಅಷ್ಟೊಂದು ಸನ್ನಿಧಾನೊಪೇತ ಕ್ಷೇತ್ರಗಳಾಗಿ ಮನೆ ಮನೆ ಮಾತಾಗಿರುವುದು ದೂರ್ವಾಸರು,ವಶಿಷ್ಠರು (ವ್ಯಾಸರಾಜರಿಂದ ಪುನರ್ಪ್ರತಿಷ್ಠೆಗೊಂಡಿರುವುದು) ಮತ್ತು ಸೂರ್ಯಾಂಶ ಸಂಭೂತರಾದ   ಶ್ರೀಬ್ರಹ್ಮಣ್ಯತೀರ್ಥರಂಥ ಅಪರೋಕ್ಷೀಜ್ಞಾನಿಗಳಿಂದ ಪ್ರತಿಷ್ಠೆ ಮತ್ತು ಪುನರ್ ಪ್ರತಿಷ್ಠಾಪನೆಗೊಂಡಿರುವುವಂಥವುದು...ಹೇಳ್ತಾ ಹೋದ್ರೆ ವಿಶೇಷಗಳ ಮೇಲೆ ವಿಶೇಷ ಸಂಗತಿಗಳ ಮಾಹಿತಿ ಸಿಗುತ್ತಾ ಹೋಗುತ್ತೆ...ಈ ಮೂರು ಮುಖ್ಯಪ್ರಾಣದೇವರು ಅವತಾರತ್ರಯ ರೂಪಗಳಲ್ಲಿವೆ...

ಭ್ರಾಂತೇಶ,ಕಾಂತೇಶ ಮತ್ತು ಶಾಂತೇಶ 

೧) ಶಿಕಾರಿಪುರ (ಶಿವಮೊಗ್ಗ) ಭ್ರಾಂತೇಶ (ಹುಚ್ಚೂರಾಯ ಅಂತಾನು ಕರಿತಾರೆ)...ಮೂಗಿನ ಭಾಗದಲ್ಲಿ ಶಾಲಿಗ್ರಾಮವನ್ನು ಕಾಣಬಹುದು....ಅವತಾರತ್ರಯ ಹನುಮಂತದೇವರ ಅವತಾರದಲ್ಲಿ ನೆಲೆಗೊಂಡು ಭ್ರಾಂತಿಯನ್ನು ಬುಡಸಹಿತ ಕಿತ್ತು ಹಾಕುವವ...ಮೂಗಿನಿಂದ ನಾವುಗಳು ಕೆಟ್ಟ ಉಸಿರನ್ನು ದೇಹದ ಒಳಗೆ ತೆಗೆದುಕೊಂಡಾಗ ನಾನಾ ವಿಧವಾದ ಭ್ರಾಂತಿಗಳು ನಮ್ಮ ಮನಸ್ಸಿಗೆ ಮತ್ತು ದೇಹದೊಳಗೆ ಸೇರಿಕೊಳ್ಳಬಹುದು.
ಭಾಂತಿ ಅಂದರೆ ಹುಚ್ಚು ಈಶ ಅದನ್ನು ಬಡಿಸುವವ... ದರ್ಶನ 
ಅಪೇಕ್ಷಿಗಳಿಗೆ,ಸಾಧಕರಿಗೆ,ಭಕ್ತರಿಗೆ ನಾನಾ ವಿಧವಾದ ಅಜ್ಞಾನದ ಭ್ರಾಂತಿಯನ್ನು ಅಂದರೆ ಹುಚ್ಚನ್ನು ಬಿಡಿಸಿ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವವ ಎಂದರ್ಥ. 

೨) ಕದರಮಂಡಲಗಿ ಕಾಂತೇಶ:  
ಹಾವೇರಿ ಬ್ಯಾಡಗಿ ತಾಲೂಕಿನಲ್ಲಿ ಬರುವ ಕದರಮಂಡಲಗಿ ಕ್ಷೇತ್ರದಲ್ಲಿ ನೆಲೆಗೊಂಡಿರುವ  ಭೀಮಸೇನ ಅವತಾರದಲ್ಲಿ ನೆಲೆಸಿ  ದರ್ಶನ ಮಾಡುವ ಭಕ್ತರಿಗೆ ಭೂತ,ಪ್ರೇತ-ಪೀಶಾಚಾದಿಗಳಂಥ  ದುಷ್ಟ ಬಾಧೆ ಬಿಡಿಸಲು ಪ್ರಾಣದೇವರ ಕೈಯಲ್ಲಿ ನಾವುಗಳು ಗದೆಯನ್ನು ಕಾಣಬಹುದು. ಎರಡು ಕಣ್ಣುಗಳಲ್ಲಿ ಸೂರ್ಯ ಶಾಲಿಗ್ರಾಮಗಳ ದೃಷ್ಟಿಯಿಂದ ದರ್ಶನಾಪೇಕ್ಶಿಗಳಿಗೆ ಉತ್ತಮವಾದಂಥ ಕಾಂತಿಯನ್ನು ಕೊಡುವವನು.

೩) ಸಾತೇನಹಳ್ಳಿ ಶಾಂತೇಶ :  
ಹಾವೇರಿ ಹಿರೇಕೆರೂರ(ಹಂಸಭಾವಿ) ತಾಲೂಕಿನ ಸಾತೇನಹಳ್ಳಿ ಶಾಂತೇಶ. ಶ್ರೀಆನಂದತೀರ್ಥ ಭಗವದ್ಪಾದಾಚಾರ್ಯರ ಅವತಾರದಲ್ಲಿ ನೆಲೆಗೊಂಡು ಭಕ್ತರಿಗೆ ಭಗವಂತನ ಬಗ್ಗೆ ಶಾಂತವಾದ ಪರಿಶುದ್ಧವಾದ ಜ್ಞಾನವನ್ನು ಕೊಡುವವರು ಎಂಬರ್ಥದಲ್ಲಿ ಈ ಅವತಾರದಲ್ಲಿ ಪ್ರತಿಷ್ಥಿತ ಗೊಂಡಿರುವರು.ಕೆಲವರ ಮಾತು ಪಾದಲ್ಲಿ ಶಾಲಿಗ್ರಾಮವಿದೆ ಅಂತ ಇನ್ನೂ ಕೆಲವರ ಮಾತುಗಳು ಶಿರಭಾಗದಲ್ಲಿ ಶಾಲಿಗ್ರಾಮವಿರುವದು ಅಂತ ನನಗೂ ಕಂಡು ಬಂದಿರುವುದು ಶಿರ ಭಾಗದಲ್ಲಿಯೆ ಶಾಲಿಗ್ರಾಮ ಶ್ರೀಮದಾನಂದತೀರ್ಥಭಗವದ್ಪಾದಾಚಾರ್ಯರ ಅವತಾರ ಸಾಧಕರಿಗೆ ಪರಿಶುದ್ಧವಾದ ವೈರಾಗ್ಯಸಹಿತವಾದಂಥ ಜ್ಞಾನ,ಭಕ್ತಿ  ಅದೆ ಮುಂದೆ ಮೋಕ್ಷಕ್ಕೂ ಕಾರಣ ..ಹೀಗಾಗಿ ಶಿರದಲ್ಲಿಯೇ ಶಾಲಿಗ್ರಾಮವಿರುವುದು ಸೂಕ್ತವೆನಿಸುವುದು...

ವಿಶೇಷ : ಭ್ರಾಂತಿ ಮನಸ್ಸಿನಿಂದ ಆಚೆ ಹೊದರೆ ತಾನೇ ಕಾಂತಿ ಮತ್ತು ಶಾಂತವಾದ ಪರಿಶುದ್ಧವಾದ ಸವೈರಾಗ್ಯಸಹಿತವಾದಂಥ ಜ್ಞಾನದ ಅರಿವು ಸಾಧ್ಯ.


ಸಾಧಕರು,ಭಕ್ತಾದಿಗಳು ನಾನಾವಿಧವಾದ ತಾಪತ್ರಯಗಳಿಂದ ಮುಕ್ತಿಹೊಂದಿ ಭಗವಂತನ ಬಗ್ಗೆ ಸರ್ವೋತ್ತಮನಾದ  ಶ್ರೀಮನ್ ನಾರಾಯಣನ ಬಗ್ಗೆ ಪರಿಶುದ್ಧವಾದ ಜ್ಞಾನವನ್ನು ಪಡೆಯಲು(ಹೊಂದಲು) ಈ ಅವತಾರತ್ರಯ ಮುಖ್ಯಪ್ರಾಣದೇವರ ದರ್ಶನ ಅವಶ್ಯವಾಗಿ ಮಾಡಲು ಪ್ರಯತ್ನಿಸಿರಿ... 

ಗುರ್ವಂತರ್ಯಾಮೀ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನರಸಿಂಹದೇವರು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ..

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಕೃಷ್ಣಾರ್ಪಣಮಸ್ತು ||
****


No comments:

Post a Comment