SEARCH HERE

Tuesday 1 January 2019

ಮಹಾ ಶಿವರಾತ್ರಿ ಈಶ್ವರ ಮಹದೇವ ರುಧ್ರ ದೇವ ಶಿವಲಿಂಗ shiva ಮಹದೇವ rudra eshwara ishwara shivalinga magha bahula chaturdashi


navaratna linga

biggest in world 112 ft tall shiva statue in Coimbatore



dos/don'ts click

ಮಾಘ ಬಹುಳ ಚತುರ್ದಶಿ



history


components of shiva linga




Why are trifoliate bel leaves offered to Lord Shiva with their stalks facing oneself?

Contents
        1. Where should one sit during ritualistic worship?
2. Ritualistic worship of the pindi
2.1 Holy ash (bhasma)
2.2 Bel
2.3 The stream of water
3. Worship of the shalunka (base of the linga)
3.1 Holy ash
3.2 White flowers and food grains
4. Some special features of ritualistic worship (puja) of Lord Shiva
5. Circumambulations
6. Ritualistic worship with liquids (abhishek)
7. Chanting the Name of Shiva
7.1 Usage of Om in the chanting of Shiva’s Name
8. Shiva Gayatri
9. Shiva’s temple



1. Where should one sit during ritualistic worship?
Generally worshippers and seekers in a Shankar’s temple do not sit such that the deity’s frequencies directly fall on their bodies because this can be distressing. There is generally a tortoise built in the front of the temple. No one sits in between the deity’s idol and the tortoise, thus automatically no one sits exactly opposite the deity. In the same way, worshippers instead of sitting exactly opposite the flow from the shalunka (base of the linga), sit on its sides.

Sitting position for ritualistic worship
1 to 7 - Seekers should sit here during ritualistic worship
8 - One should not sit here.


2. Ritualistic worship of the pindi
Only cold water and bel is offered to Lord Shankar’s pindi. Neither is it bathed with milk and the five nectars (panchamrut), nor offered turmeric, vermilion (kumkum) or white consecrated rice (akshata). Milk and clarified butter (ghee) symbolise sustenance while turmeric is an underground stem and represents fertility of the soil, that is creation. Vermilion is prepared from turmeric. Since Lord Shankar is the deity of dissolution substances such as milk, vermilion and turmeric are not used in His worship. Holy ash (bhasma) on the contrary symbolises dissolution and is thus used. However in the fourteenth century the Shaivites too incorporated the usage of the five nectars, bathing with milk, etc. as was done by the Vaishnavites. Here, milk is believed to symbolise energy.
2.1 Holy ash (bhasma)
After removing the dried bel leaves (nirmalya) and bathing, either only three horizontal stripes are drawn on the visible side of the pindi (divine phallus) or a circle is drawn in the middle of the stripes. This is referred to as Shiva’s eye (Shivaksha).
2.2 Bel
A pindi contains two types of pure particles (pavitrakas) from both - the ahat sound (that produced by the falling of water onto its surface) and the anahat (subtle) sound. To absorb the three pure particles, that is the two pure particles as well as those in the bel leaves which are offered upon the pindi, trifoliate bel is offered to Lord Shiva. Tender bel leaves can unite ahat (language of sound) and anahat (language of light) sounds. The leaves should be offered with their stalks facing oneself and the leaf should be placed upside down on the pindi. The motive behind this is to attract the combined energy of the three leaves towards oneself. The combined energy of these three pure particles facilitates the reduction of the three components (trigunas). Bel is not offered upon the shalunka, but to the eye of Shiva on it. The kayakalpa from the Ayurveda discusses the importance of partaking juice of three leaves. Ayurveda refers to the fruit of the bel as the fruit of nectar (amrutphal). There is no disease which cannot be cured with bel. If some medicine is not available then bel should be used. However it is contraindicated in pregnancy as it can lead to fetal death.
2.3 The stream of water
Since Shiva and Shakti (Divine Energy) are combined together in the pindi a tremendous amount of radiance is generated. To prevent radiance from having adverse effects on the particles of the pindi and also on its worshippers, a continuous stream of water is made to fall upon the pindi. This stream of water generates the sound of Om (a symbol of the unmanifest Brahman) of a low note. Similarly when a continuous stream of mantras falls upon an embodied soul it opens the kalpinda [the body (pinda) which has crossed the limits of time (kal) is called kalpinda] of the embodied soul. This indicates that one can go upto the unmanifest Brahman.


3. Worship of the shalunka (base of the linga)
3.1 Holy ash
Seekers draw three horizontal stripes on the shalunka at the seven sites, indicated for worship as given in the figure under point ‘Where should one sit during ritualistic worship?’. A circle is drawn over these stripes and white flowers are offered. The circle represents the divine birth passage. It is called Shiva’s eye (Shivaksha) or the third eye of Shiva (yogi).
3.2 White flowers and food grains
An offering of rice (white in colour), rarely wheat and white flowers is made to Shiva’s eye. White represents purity. Then bel leaves with their stalks facing towards oneself should be offered. (In the usual ritualistic worship leaves are offered before the flowers. As described above, the bel leaves facilitate the attraction of combined energy towards the seeker). Foodgrains soaked in water are also offered to Shiva’s eye. They represent fertility. The energies emitted by the soaked foodgrains, holy ash and bel leaves revolve around the form of the shalunka.


4. Some special features of ritualistic worship (puja) of Lord Shiva
(Based on pages 61 and 62 of the book ‘Shastra Ase Sangate’. A critical review by the compilers.)
A. ‘In the ritualistic worship of Lord Shiva neither is the conch worshipped nor is its water used to bathe Lord Shiva. If a banalinga is a part of the five fold family of deities (panchayatan) then one may sprinkle the banalinga with water from the conch. However a banalinga with a pindi (divine phallus) of Lord Mahadev should not be bathed with this water. Since the feminine principle in the form of the shalunka (base of the linga) is present in the pindi, there is no need to sprinkle water from the conch which also has a feminine principle. A banalinga however does not possess a shalunka; hence it is bathed with water from a conch. During ritualistic worship of Mahadev in a temple, worship of the conch (shankhapuja) is not performed. Blowing of the conch before the ritual of waving lit lamps (arti) is allowed and is normally done during the arti. The sound of a conch not only brings about pranayam but also alleviates distress caused by spirits, black magic, etc. in the vicinity where it is heard.
B. Tulsi (basil) leaves are not offered to Lord Shiva. However tulsi leaves offered to a saligram or an idol of Lord Vishnu may be offered as Shiva is a devotee of Vishnu and He loves tulsi offered to Lord Vishnu.
C. It is said that on the eighth day (Ashtami) of the dark fortnight of the Hindu lunar month of Jyeshtha, Lord Shankar and on the fourteenth day (chaturdashi), Revati is ritualistically worshipped with blue flowers. On that day blue colour has the ability to absorb the Shiva principle as much as the green bel leaves. Based on the same principle kevada (a type of fragrant flower) is offered to Shiva during the ritual of conclusion (udyapan) of the vowed religious observance of Mahashivaratri.
D. Bel leaves, white flowers and holy sacrament of food (naivedya) offered to a pindi of Lord Shiva are not accepted as they can induce detachment which an average individual does not desire.
E. People belonging to various sects such as Shaiva, Kapalik, Gosavi, Virashaiva, etc. use various lingas - earthen (parthivlinga), lingas in a silver box donned around the neck (kanthasthalinga), lingas of crystal glass (sphatiklinga), banalingas, a five stringed linga (panchasutri), stone lingas (pashanlinga), etc.


5. Circumambulations
Circumambulations of Shiva are like the half-moon. The channel which runs northwards towards the moon (som) from the shalunka (base of the linga) till the boundary of the temple is called the somsutra. When circumambulating one should begin on the left hand side and continue till the channel of the shalunka from where the water offered during the ritualistic bathing (abhishek) flows. Without crossing it one should complete a circumambulation by moving in the reverse direction upto the other side of the channel (srot). This rule applies only if the Shivalinga is installed or created by man; it does not apply to a svayambhu or a chala linga (kept in the house). The flow of a shalunka is not crossed as it is the flow of energy. When crossing it the legs are pulled apart. As a result formation of semen and the five internal vital energies (vayu) are adversely affected. There is an obstruction in the devadatta and dhananjay vital energies. However these ill effects do not occur if while crossing it the body is contracted, that is the channels (nadis) are contracted. Rationalists feel that the channel of the linga is not crossed because while doing so the dirt on one’s feet contaminates the water there. If this water is consumed by devotees as holy water (tirtha) it could result in illness !


6. Ritualistic worship with liquids (abhishek)
Lord Shiva loves being worshipped with liquids. The linga is constantly kept wet by sprinkling liquids as the divine birth passage of the Primal mother is always wet and consequently is the linga. Shiva is offerred abhishek by reciting a hymn from the Yajurveda called Rudra. It is of two types namakar (namak) and chamakar (chamak). In namakar the word ‘namaha’ while in chamakar the word ‘chamaha’ appears more frequently. This abhishek is performed reciting the Rudradhyay eleven times. Eleven rounds (avartans) of the Rudradhyay constitute one ekadashani. Eleven ekadashanis make up one laghurudra and eleven laghurudras make up one maharudra. Finally eleven maharudras constitute one atirudra.



7. Chanting the Name of Shiva
‘Namaha Shivaya (नम: शिवाय)’ is Lord Shiva’s five lettered (panchakshari) mantra. In a subdivision of the Yajurveda the Rudradhyay begins with these words. The mantra is taken from here. When it is prefixed with the sacred syllable (pranav) Om, it becomes ‘Om namaha Shivaya (ॐ नम: शिवाय)’, the six lettered (shadakshari) mantra. The spiritual meaning of each letter of the five lettered mantra is as follows:
n (न)       = The foremost deity of all the regions (lokas)
m (म)      = The bestower of supreme spiritual knowledge
                   (dnyan) and destroyer of the greatest sins
Shi (शि) = Benevolent, serene and responsible for the
                   initiation by Lord Shiva
va (वा)  = The representation of a bull as the vehicle and
                   the Vasuki and Vamangi Energies (Shakti)
y (य)       = The auspicious abode of Supreme Bliss and
                   Lord Shiva.

Hence obeisance (namaskar) to these five letters.

The above five letters also have a co-relation with the tandav dance of Nataraj Shiva which is as follows:
n    = The hand beholding fire (agni)
m   = The foot pressing the demon Mulayak
Shi = The hand holding a small hour glass shaped drum
          (damaru)
va  = The outstretched hand
y    = The hand bestowing protection

These five letters are also said to be indicative of God (Ishvar), Divine Energy (Shakti), the soul principle (atma), the unmanifest one (antardhan) and vanquishing of sins respectively.’
7.1 Usage of Om in the chanting of Shiva’s Name
For creation of the manifest (sagun), the Great Illusion from the unmanifest (nirgun) Brahman tremendous energy is required. Such energy is generated by Om. Hence, chanting of Om by one whose spiritual level is not adequate to do so can cause physical distress such as hyperacidity, a rise in the body temperature, etc. or psychological distress like restlessness.
The frequencies created from Om generate a lot of energy (heat) in the body. This does not affect the male reproductive organs as they lie outside the body cavity. However, in case of women this heat can affect the reproductive organs as they lie within the abdominal cavity. Thus women may experience distress. They may suffer from excessive menstrual flow, amenorrhoea, dysmenorrhoea, infertility, etc. Hence, it is advisable for women not to prefix Om to the Name unless otherwise recommended by the Guru; for example they may chant ‘namaha Shivaya’ instead of ‘Om namaha Shivaya’. Otherwise they should use Shri as a prefix.



8. Shiva Gayatri
तत्‍पुरुषाय विद्महे । महादेवाय धीमहि । तन्‍नो रुद्र: प्रचोदयात्‌ ।।
Meaning: We are quite familiar with that Supreme Being (Mahadev). We meditate on that Mahadev. May that Rudra inspire our intellect benevolently.


9. Shiva’s temple
Its characteristics are as given below.
A. It is said that ‘Shiva is the deity of married couples as He is accompanied by the Divine Energy (शक्‍त्‍यासहित: शंभु:)’. Shiva without Divine Energy (Shakti) becomes a corpse (shava). Since other deities are solitary there is less radiance generated in their idols. As a result, tranquility is experienced in their temples. However in Shiva’s temple since radiance is generated in greater proportions one experiences energy.
B. Other deities are absent only in Shiva’s temple. In temples of all other deities there are small temples of other deities; they are referred to as the deities of the family.
C. A non-Brahman priest (gurav): A Brahman is not supposed to remove the dried flowers, etc. used in worship (nirmalya) in a Shiva’s temple. Hence non-Brahman priests look after a Shiva’s temple and bhopes look after a temple of Parvati. Just as Brahmans who perform religious rites like ritualistic worship, marriage, etc. do not take a meal during an offering made to ancestors (pindadan), so also they do not remove the dried flowers, etc. on Shiva’s pindi.

D. Brahmans consecrate Shiva by ritualistic worship with liquids (abhishek) amidst chanting of Vedic mantras but do not partake of the food (naivedya) offered to Him. Brahmans who perform ritualistic worship also do not make an offering to ancestors.
****
Maha-Shivarathri prayukta Sri Rudra Devara chintana.....
(as per Madhva sampradaya)
One of the Trinity Gods (Brahma-Vishnu-Maheshwara) ruling Thamasa guna (Ahankaara Tattva);
Lord Shiva (Rudra) is Mano-abhimani devatha;
Mano-niyaamaka the controller of the MANASU.
In Dvaita, Sri Rudra Devaru is placed fairly high in 5th Kaksha along with Garuda & Sesha Devaru as per Tattvavaada/Taratamya;
Basically Lord Shiva is son of Lord Brahma (Virinchi Thanaya) and as such grand son of Lord Vishnu.
One of the Trinity Lords (Brahma-Vishnu-Maheshwara) Lord Shiva is a Vedic God,
the one who is entrusted with the role of destruction (Layakaraka) with Sankarshana roopi Paramatma as his antaryaami.
One of the Ashta Dikkpaalakas (Eeshaana), guardian of the north-east direction;
The one who is bearing Vishnu Padodbhavi (holy Ganga ) on his head; the one who became a platform for the holy Ganga to descent on to the earth;
A divine preceptor, spiritual guide to IndraAdi DEvatas...Lord Indra and other demi Gods;
Modest and benevolent God, Lord Shiva the one who instantly responds to the prayers of his devotees;
A divine doctor (Bhishaje-Bhavaroginaam) - Vaidyanatha coming to the rescue of his devotees' sufferings both physical as well as mind related;
> Foremost among the devotees of Lord Vishnu,
kR^ittivAsane hiMde nI nAl
vattu kalpa samIranali shi
Shyatva vahisi akhiLAgamArthagaLOdi jaladhiyoLu
hattu kalpadi tapavagaidA
dityaroLaguttamanenisi
purushOttamana pariyaMka padavaidideyO mahadEva
(Harikathaamruthasaara - Mangalacharana Sandhi - 1.11)
Rudra is a great disciple of of Mukhya Praana (Lord VaAyu) under whom Rudra studied for 40 Kalpas and then did
Penance for 10 Kalpas under the Sea (Samudra) and pleased Paramatma SriManNaaraayana to attain the forthcoming Sesha Padavi.
> VaisHnavaAnaAm YatHa SambHu (SriMad Bhagavatha Purana);
nimna-ganam yatha ganga
devanam acyuto yatha
> vaisnavanam yatha sambhuh
purananam idam tatha
(Srimad Bhagavatam 12:13:16)
Just as.....
> GANGA is greatest among all the rivers,
> ACHYUTA (Lord Vishnu) is the supreme among deities (Hari Sarvottama); and
> Lord ŚAMBHU [Śhiva] the greatest of Vaiṣṇavas, so also,
> Srimad BHAGAVATAM is greatest of all Purāṇas.”
Above all "Hara Vaishnavottma" Lord Shiva is universally worshiped as the greatest devotee of Lord Vishnu.
> The one who constantly meditates on Lord Vishnu;
The one who has eulogized the glory, significance and merits of RaAma Naama (the gist of Vishnu Sahasranama) by preaching the same to his consort Goddess Parvathi Devi;
the one who has preached Naaraayana manthra to Lord Ganesha;
The one who is the cause to the birth of Lord Subramanya the chief of army of Gods (Deva Senapati);
Worship of Lord Shiva is prevailing in Hindu philosophy since time immemorial perhaps since Vedic times;
There are several historical and pouranic references to the worship of Lord Shiva and we find several divine personalities having worshiped Lord Shiva on different occasions for various reasons.
Lord Vishnu in his incarnations (human form) also worshiped Lord Shiva for Loka Kalyana; welfare of the mankind and to maintain the loka-reeti (local conventions).
If one wants to get a steady mind and Vishnu Bhakti one has to worship and pray Lord Shiva and need His blessings.
kailAsavAsa gaurIsha Isha
tailadhAreyante manasu koDO hAriyalli.....
Basically all Demi- Gods are Vishnu devotees.
Lord Shiva is a Vishnu Parivaara Devatha.
Lord Vishnu will not get pleased if His devotees are not respected.
One cannot overlook /ignore them in one's spiritual journey.
Sri MadHvacHaryaru has introduced Shiva Panchakshari Mantra in TantraSaara Sangraha;
“Na-mah-Si-vaa-ya” known as Panchaakshari (having five syllables) is revered as one of the most popular manthras dedicated to Lord Shiva.
Shiva (Rudra) to be worshiped with proper Anusandhana...
"Hari Sarvottama - Vaayu Jeevottama"
Sri Rudraanthargatha - Bharatheeramana Mukhya Praanaanthargatha - Sankarshana roopi Paramaatma (Lord Vishnu)
🙏RUDRA DEVARU (in the words of Sri Jagannatha Dasaru....)
ವಾಮದೇವ ವಿರಿಂಚಿತನಯ ಊ|
ಮಾ ಮನೋಹರ ಉಗ್ರ ಧೂರ್ಜಟಿ ||
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||
ಕಾಮ ಹರ ಕೈಲಾಸ ಮಂದಿರ |
ಸೋಮ ಸೂರ್ಯನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ ||
vAmadEva viriMchitanaya U|
mA manOhara ugra dhoorjaTi ||
sAmajAjinavasana bhooShaNa sumanasOttaMsa ||
kAma hara kailAsa maMdira |
sOma sUryanala vilOchana |
kAmitaprada karuNisemage sadA sumaMgaLavA ||
(Harikathaamruthasaara - Mangalacharana Sandhi)
> VAMADEVA, the one who is very handsome, fair and pleasant. Vaama also means left; it is said that Lord Shiva always has Lord Vishnu to his left;
> VIRINCHI TANAYA > son of Lord Brahma;
> UGHRA > As Laya-kaaraka Shiva is Maha Rudra a great (Ughra) destroyer, fear less; Shatru Bhayankara who not only destroys creation as per the directions of the Supreme God Vishnu (with Sankarshana as Antharyaami) but also destroys both internal and external enemies; provides cure for all maladies. As Maha Rudra, he is eliminator of agonies and sorrows.
> DHURJATI > the one who has his hair having matted locks which are long and spread in the vast sky (Vyomakesha);
> sAmajAjinavasana bhooShaNa > the one who is adorned with the skin of an Elephant (GajacharmAMbaradhara);
> SUMANASOTTAMSA (Sumanasa + UttamaAmsha) > the one who is good at heart, benevolent and gracious; the one who is higher in Taratamya than Indraadi dEvatas;
> KAMAHARA > the one who has reduced Kamadeva (Manmatha) into ashes; Kaama literally means lust one of the Arishadvargas and Shiva is the one who can destroy (HARA); the negative qualities;
> the one whose abode is KAILASA

> SOMASURYAANALA-VILOCHANA > the one who has three eyes (Trinethra): Surya in his right eye; Chandra (Soma) in his left eye and Agni (Anala) in his third eye in between the eye brows;
> KAMITAPRADA > the one who grants/fulfills the desires of his devotees, He is also Kshipra - the one who grants quickly;
I surrender and offer my obeisance and salutations to such Shiva who is mangalakara, pure, sacred, selfless and who is ever auspicious - SadaShiva;
➡️ PradosHa (brief note.....)
Pra means conspicuous; prominent; great and
Dosha means night/darkness.
Pradosha means great night.
In general Pradosha is associated with worship of Lord Shiva.

Pradosha time is very dear Rudra Devaru.
Originated from the concept of Time; Pradosha is a micro constituent of KaAlachakra (TIME) that occurs every day.
Duration of Six (6) Ghatis ie., 2 hours and 24 minutes after Sunset is called Pradosha Kaala.
The one that occurs on a day when Trayodasi thithi is prevailing during Pradosha kaala is called Maha Pradosha.
If it is associated with Tuesday it is called Bhouma Pradosha.

If it is associated with Monday it is called Soma Pradosha;

if it is associated with Saturday it is called Shani Pradosha;
if it is associated with Sunday it is called Bhanu Pradosha;
Worshiping RUDRA Devarru during Pradosha samaya with proper anusandhana;

> RudraAntargatha-BharatiRamaMukhyaPraAnaAnthargatha-
Sankarshana Rupi Paramatma;
is highly meritorious to get rid of dosha/defects.
Pooja/Abhisehka/Archana with Pushpa/Bilva should be done to Rudra Devaru along with Saligrama in the evening after Sunset during Pradosha Kaala.
Some of the suggested readings during Pradosha are….
> Sri Rudra Dwaadasanaama Stotra;
> Vasishtakruta Daridryadahana Shiva Stothra;
> Narayana Panditacharyakruta Shiva Stuti;
➡️ MAHA SHIVARATHRI..... 
> How to reckon Maha-Shivarathri? 
As per Hindu Lunar Calendar, every 14th lunar day (Chaturdasi) of the dark fortnight (Krishna Paksha) is known as Maasa Shivarathri.
Sometimes it may fall on the 13th day (Trayodasi) itself. It is decided based on the presence of Chaturdasi thithi extending beyond midnight on that particular day.
At the same time every 13th or 14th day of the dark fortnight is not considered as Maha Shivarathri.
It is only the 13th /14th day of dark fortnight (Krishna Paksha) occurring in the lunar month of Maagha Maasam associated with Chaturdasi prevailing beyond mid night (Niseedha Vyaapini) is reckoned as Maha Shivarathri.
If Chaturdasi is prevailing during Pradosha time as well as at midnight it is considered as more meritorious for observing Maha Shivaratri.
> WHAT IS MAHA SHIVARATHRI?
There are several interpretations for the origin of Maha Shivarathri. Some of them are....
Maha Shivarathri literally means the great night belonging to Lord Shiva, his most favourite day.
Maha Shivarathri is reckoned as the day Lord Shiva (Rudra) was born as Virinchi Thanaya (son of Lord Brahma);
It is assumed as the day Lord Shiva emerged out in the divine world in Linga roopa (Jyothirlinga).
It is associated with the day Lord Shiva (Rudra) drank Halahala (poison) with Vaayu Devara anugraha during the episode of Ksheerasaagara Mathanam.
It is assumed as the day Lord Shiva performed his cosmic dance called Pralaya Thandava.
There is also a custom of performing Kalyanotsava of Lord Shiva and Goddess Parvathi Devi on the day of Maha Shivarathri.
Maha Shivarathri dedicated to Lord Shiva is celebrated with great religious significance and fervor across the country by all Hindus.

In Madhwa Sampradaya no fasting and jaagarane is observed on the day of Maha Shivarathri. Darshana of Lord Shiva (Rudraanthargatha Sankarshanamoorthi) during Pradoshakaala is prescribed.

Sri UmaPati Rudrantargata Sri BharatiRamana MukhyaPranaantargata Sri Sankarshanaya Namaha
Sri Krishnaarpanamasthu
****

ಮಹಾಶಿವರಾತ್ರಿಯ ತತ್ತ್ವ 
    ಪ್ರತಿವರ್ಷವೂ ಮಾಘ ಬಹುಳ ಚತುರ್ದಶಿಯಂದು ಪ್ರಾಪ್ತವಾಗುವ ಮಹಾಶಿವರಾತ್ರಿಯ ಅನುಷ್ಠಾನವು ವಿಶ್ವಾದ್ಯಂತ ಅನೇಕ ಭಕ್ತರಿಂದ ಆಚರಿಸಲ್ಪಡುತ್ತದೆ. ಶಿವನ ಆರಾಧನೆಗೆ ಮುಖ್ಯವಾದ ದಿನವೇ ಶಿವರಾತ್ರಿಯು. ಇದು ಹಿಂದೂಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಪ್ರಾಪ್ತವಾಗುತ್ತದೆ. ಇದನ್ನು 'ಮಾಸಶಿವರಾತ್ರಿ'ಯೆಂದು ಕರೆಯುತ್ತಾರೆ, ಆದ್ದರಿಂದಲೇ ಮಾಘಮಾಸದಲ್ಲಿ ಬರುವ ಶಿವರಾತ್ರಿಗೆ 'ಮಹಾಶಿವರಾತ್ರಿ' ಎಂಬ ವಿಶೇಷವಾದ ಹೆಸರಿದೆ. 
    ರಾತ್ರಿಯು ಯಾವಾಗಲೂ ಜೀವರಿಗೆ ಭಯಂಕರವಾದುದು. ಎಲ್ಲಾ ಪದಾರ್ಥಗಳೂ ಕಗ್ಗತ್ತಲೆಯಲ್ಲಿ ಮುಳುಗಿರುವಾಗ ಏನೊಂದೂ ಕೆಲಸವು ಸಧ್ಯವಾಗುವದಿಲ್ಲ ಹಾಗೂ ಪ್ರಾಣಿಗಳಿಗೆಲ್ಲ ನಿದ್ರೆಯ ಸಮಯವೂ ರಾತ್ರಿಯೇ ಆಗಿದೆ ಕೆಲವೇ ಭೂತ ಪ್ರೇತಪಿಶಾಚಾದಿ ಸತ್ತ್ವಗಳಿಗೂ ಗೂಬೆ ಮುಂತಾದವುಗಳಿಗೂ ರಾತ್ರಿಯ ಚಟುವಟಿಕೆಯ ಕಾಲವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿಯು ಅಮಂಗಳಕರವು ಹೀಗಿರುವಲ್ಲಿ 'ಶಿವರಾತ್ರಿ' ಎಂದು ರಾತ್ರಿಯನ್ನು ಮಂಗಳಕರವೆಂತ ಕರೆಯಲು ಕಾರಣವೇನು? ಆ ರಾತ್ರಿಗೆ ಮಂಗಳತ್ವವು ಉಂಟಾಗುವದಕ್ಕೆ ನಿಮಿತ್ತವೇನಾದರೂ ಇರಬಹುದೆ? ಎಂದು ಯಾರಾದರೂ ಕೇಳಬಹುದಾಗಿದೆ. ಇದಕ್ಕೆ ಉತ್ತರವನ್ನು ಒಂದು ಗೀತಾಶ್ಲೋಕದಿಂದ ಕಂಡುಹಿಡಿಯಲು ಯತ್ನಿಸೋಣ. ಹೇಗೆಂದರೆ: 'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ' ಎಂಬ ಪದ್ಯವು ಗೀತಾಪಾಠಕರಿಗೆಲ್ಲ ಪರಿಚಿತವೇ ಆಗಿದೆ. ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಾಗಿರುವಲ್ಲಿ ಸಂಯಮಿಯು ಎಚ್ಚತ್ತಿರುವನು - ಎಂಬ ಅಭಿಪ್ರಾಯವು ಇಲ್ಲಿದೆ. ಇದರ ಪ್ರಕಾರ ಆತ್ಮವಸ್ತುವು ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಂತೆ ತಿಳಿಯದೆ ಇದೆ. ತಮ್ಮೊಳಗೆ ಇದ್ದು ಕೊಂಡಿರುವ ಈ ಪ್ರಕಾಶಮಯವಾದ ಜ್ಯೋತಿಯನ್ನು ಸಂಸಾರಿಗಳಾದ ಪ್ರಾಣಿಗಳು ಅರಿಯದೆ ನಿದ್ರೆಮಾಡುತ್ತಿವೆ - ಎಂದರೆ ಎಂಥ ಅನರ್ಥವಾಯಿತು? 'ದೀಪದ ಬುಡದಲ್ಲಿಯೇ ಕತ್ತಲೆ' ಎಂದಂತೆ ಆತ್ಮ(ತಾನು) ವಸ್ತುವಿನ ವಿಷಯದಲ್ಲಿಯೇ ಅಜ್ಞಾನಿಗಳಾಗಿರುವ ನಮಗೆ ಅದು ರಾತ್ರಿಯಂತಿರುತ್ತದೆ. ಇಂಥ ಆತ್ಮತತ್ತ್ವದ ವಿಷಯದಲ್ಲಿ ಜ್ಞಾನಿಯು ಎಚ್ಚರವಾಗಿರುತ್ತಾನೆ - ಎಂದರೆ ಅದನ್ನು ಸಂಪೂರ್ಣವಾಗಿ ತಿಳಿದು ಆ ಪರಂಜ್ಯೋತಿಯಲ್ಲಿಯೇ ನೆಲೆನಿಂತಿರುತ್ತಾನೆ - ಎಂದು ಗೀತಾವಾಕ್ಯದ ಅರ್ಥ. ಇದಕ್ಕೆ ಅನುಸಾರವಾಗಿ ರಾತ್ರಿ ಎಂಬುದು ಶಿವವಾಗಿದೆ - ಎಂದು ಹೇಳುವಾಗ ಶಿವರಾತ್ರಿಯು ಆತ್ಮಜ್ಞಾನದ ಪರ್ಯಾಯಶಬ್ದವಾಗಲಿದೆ, ಆದ್ದರಿಂದ 'ಶಿವರಾತ್ರಿ' ಎಂದರೂ 'ಬ್ರಹ್ಮಜ್ಞಾನ'ವೆಂದರೂ ಒಂದೇ ಅರ್ಥ. ಇದು ಜ್ಞಾನಿಗಳಿಗೇ ಮಿಸಲು ಎಂದು ಬೇರೆ ಹೇಳಬೇಕಾಗಿಲ್ಲ. 
    ಈಗ 'ಮಹಾಶಿವರಾತ್ರಿ' ಹೇಗಾಗುತ್ತದೆ - ಎಂಬುದನ್ನು ಅಲೋಚಿಸೋಣ, ವರ್ಷಕ್ಕೊಮ್ಮೆ 'ಮಹಾಶಿವರಾತ್ರಿ'ಯು ಬರುವಂತೆ ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಒಮ್ಮೆ ಮಹಾಶಿವರಾತ್ರಿಯು ಬರಬಹುದಾಗಿದೆ. ಹೇಗೆಂದರೆ: ಯಾವನು ತನ್ನ ಸ್ವರೂಪವನ್ನು ಅರಿತುಕೊಳ್ಳುವದಕ್ಕಾಗಿ ಪ್ರಾಪಂಚಿಕವಿಷಯಗಳಿಂದ ನಿವೃತ್ತನಾಗಿ ಶಮಾದಿಸಾಧನಗಳಿಂದ ಕೂಡಿ ಸದ್ಗುರುವನ್ನು ಬಳಿಸಾರಿ ಶ್ರವಣಾದಿಗಳಿಂದ ಆತ್ಮತತ್ತ್ವವನ್ನು ತಿಳಿದುಕೊಂಡು ಮುಂದೆ ಮನನನಿದಿಧ್ಯಾಸನಗಳಿಂದ ಆ ತತ್ತ್ವವನ್ನು ತನ್ನಲ್ಲಿಯೇ ಕಂಡುಕೊಂಡು ಯಾವಾಗ ನೆಲೆನಿಲ್ಲುವನೋ ಆ ದಿನವೇ ಎಂದರೆ ಜ್ಞಾನಪ್ರಾಪ್ತಿಯಾದ ಕಾಲವೇ ಅವನಿಗೆ 'ಮಹಾಶಿವರಾತ್ರಿ'ಯಾಗುವದು. ಬುದ್ಧನಿಗೆ ಜ್ಞಾನೋದಯವಾದದ್ದು ವೃಷಭತೀರ್ಥಂಕರರಿಗೆ ಜ್ಞಾನಕಲ್ಯಾಣವಾದದ್ದು ಎಂದು ಮುಂತಾಗಿ ಆಯಾ ಮತದವರು ಹೇಳುವಂತೆ ಸನಾತನಧರ್ಮಾವಲಂಬಿಗಳಾದ ನಾವು ನಮ್ಮ ನಮ್ಮ 'ಮಹಾಶಿವರಾತ್ರಿ'ಯ ದಿನವನ್ನು ಸಾಧಿಸಿಕೊಳ್ಳಬೇಕಾಗಿದೆ. ಅಲ್ಲಿಯವರೆಗೂ ನಾವು ಎಷ್ಟು ಶಿವರಾತ್ರಿವ್ರತಗಳು, ಉಪವಾಸ, ಜಾಗರಣ-ಗಳನ್ನು ಮಾಡಿದರೂ ಅವು ಕೇವಲ ಸಾಂಕೇತಿಕವೇ ಆಗುವವು. ಮುಖ್ಯಾರ್ಥದಲ್ಲಿ 'ಮಹಾಶಿವರಾತ್ರಿ'ಯಾಗಬೇಕಾದರೆ ನಾವು ಅನುಭವ ಪರ್ಯಂತವಾದ ಆತ್ಮಜ್ಞಾನದಲ್ಲಿಯೇ ನೆಲೆನಿಂತು ಸ್ಥಿತಪ್ರಜ್ಞರೇ ಆಗಬೇಕು ಅದೂ ಕೂಡ ನಾವು ಬದುಕಿರುವಾಗಲೇ ಆಗಬೇಕು. 
    ಶಿವರಾತ್ರಿಯು 'ವ್ರತ'ವು ಹೇಗಾಗುತ್ತದೆ? 'ವ್ರತ' ಎಂದರೆ ನಿಯಮಪರಿಪಾಲನೆ - ಎಂದರ್ಥ. ಸತ್ಯವ್ರತ, ಪತಿವ್ರತೆ - ಮುಂತಾದ ಶಬ್ದಗಳಲ್ಲಿ ವ್ರತಶಬ್ದವು ಅಡಕವಾಗಿರುವದನ್ನು ಗಮನಿಸಿರಿ. ಅದರಂತೆ ಅತ್ಮವ್ರತ ನಿಷ್ಠರಾಗಲು ಸಜ್ಜಾಗುವದೇ ಶಿವರಾತ್ರಿವ್ರತವು ಆತ್ಮನೆಂಬ ವಸ್ತುವು ಪ್ರತ್ಯಕ್ ಎಂದರೆ ಎಲ್ಲಕ್ಕಿಂತ ತೀರ ಒಳಗೆ ಇದ್ದುಕೊಂಡಿದೆಯಾದ್ದರಿಂದ ಅದನ್ನು ಮುಟ್ಟಲು ಮಾಡಬೇಕಾದ ವಿಶೇಷಪ್ರಯತ್ನಗಳಿಗೆ 'ವ್ರತ'ವೆಂದು ಹೆಸರು. ಸಾಂಕೇತಿಕವಾಗಿ ಶಿವರಾತ್ರಿಯ ದಿನ ಉಪವಾಸ, ಜಾಗರಣಾದಿ - ಕೆಲವು ನಿಯಮಗಳನ್ನು ಶಾಸ್ತ್ರದಲ್ಲಿ ಗೊತ್ತುಪಡಿಸಿದ್ದಾರೆ. ಹೇಗೆಂದರೆ:ಒಂದು ದಿನದಮಟ್ಟಿಗೆ ನಮ್ಮ ಶರೀರೇಂದ್ರಿಯಗಳ ವ್ಯವಹಾರಗಳಲ್ಲಿ ಅತ್ಯಗತ್ಯವಾದದ್ದು ಹೊರತು ಉಳಿದವುಗಳಿಗೆ 'ರಜಾ'ಕೊಡಬೇಕೆಂಬರ್ಥವು ತಾನೇ ಸಿದ್ಧವಾಗುವದು. ಆ ದಿನ ಚತುರ್ದಶೀ ತಿಥಿಯು ಇರುವದರಿಂದ ಐದು ಕಮೇಂದ್ರಿಯಗಳು ಐದು ಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ - ಎಂಬ ನಮ್ಮ ಹದಿನಾಲ್ಕು ವಿಧವಾದ ಉಪಾಧಿವರ್ಗಕ್ಕೆ ವ್ಯವಹಾರದಿಂದ ವಿಶ್ರಾಂತಿಯನ್ನು ಕೊಡಿಸುವದು ಮುಖ್ಯಕರ್ತವ್ಯವಾಗಿದೆ. ಹಾಗಾದರೆ ಉಸಿರಾಡದೆ, ಶರೀರವನ್ನಳ್ಳಾಡಿಸದೆ ಬದುಕಿರುವದು ಹೇಗೆ? ಎಂದು ಕೇಳಬಹುದು. ಅದಕ್ಕೆ ಸಮಾಧಾನವೇನೆಂದರೆ: ಬಹುರ್ಮುಖವಾಗಿರುವ ಈ ಸಂಘಾತವನ್ನು ಆತ್ಮನಕಡೆಗೆ ತಿರುಗಿಸುವದು ಮಾತ್ರ ಇಲ್ಲಿ ಪ್ರಕೃತವು ಅಷ್ಟೇ ಹೊರತು ಎಲ್ಲಾ ಶರೀರವ್ಯಾಪಾರಗಳನ್ನೂ 'ಬಂದ್' ಮಾಡುವ ಅವಶ್ಯಕತೆಯಿರುವದಿಲ್ಲ. ಇದೇ ವ್ರತವು. 
    ಈಗ ಉಪವಾಸವೆಂದರೇನು? ಕೆಲವರು ಅನ್ನವನ್ನು ತಿನ್ನದೆ ಬೇರೇನಾದರೂ ಆಹಾರವನ್ನು ತೆಗೆದುಕೊಳ್ಳುವದೇ ಉಪವಾಸವೆಂದು ಭಾವಿಸುತ್ತಾರೆ. ಸಂಪೂರ್ಣ ನಿರಾಹಾರವು ಸಾದ್ಯವಾಗುವದಿಲ್ಲವೆಂತ ಅವರ ಭಾವನೆ ಆದರೆ ಶಾಸ್ತ್ರವು ಅವನವನ ದೈಹಿಕಸ್ಥಿತಿಗನುಗುಣವಾಗಿ, ಭಗವಚ್ಚಿಂತನೆಗೆ ಅಡ್ಡಿಯಾಗದಂತೆ ಲಘುವಾದ ಆಹಾರಸೇವೆನೆಯನ್ನು ಮಿತವಾಗಿ ಒಮ್ಮೆ ಮಾತ್ರ ಸ್ವೀಕರಿಸಲು ಅವಕಾಶವನ್ನು ನೀಡಿದೆಯಾದ್ದರಿಂದ, ಫಲಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡದೆ, ಉಪ-ಭಗವಂತನ ಸಮೀಪದಲ್ಲಿ ವಾಸ ಇದ್ದುಕೊಂಡಿರುವ ರೂಪವಾದ ಉಪವಾಸವನ್ನು ಆಚರಿಸಬೇಕು. ಇದಕ್ಕಾಗಿ ಕೈಗಳಿಂದ ಪೂಜೆ, ಬಾಯಿಂದ ಸ್ತೋತ್ರಪಾಠಗಳೂ, ಭಜನೆ, ಶರೀರದಂಡ ಪ್ರದಕ್ಷಿಣಾಧಿಗಳು, ಮನಸ್ಸಿನಿಂದ ಮಂತ್ರಾವೃತ್ತಿ - ಮುಂತಾದ ಸಾಧನಗಳನ್ನು ಬಳಸಬಹುದಾಗಿದೆ. ಶಿವನಿಗೆ ಪ್ರಿಯವಾದ ಪದಾರ್ಥಗಳ ಸಮರ್ಪಣೆ, ಮನಸ್ಸಿನ ಒಲವಿಗೆ ತಕ್ಕಂತೆ ಆಯಾ ಉಪಾಯಗಳನ್ನು ಕೈಗೊಂಡು ಶಿವರಾತ್ರಿಯನ್ನು ಸಂಪೂರ್ಣವಾಗಿ 'ವ್ರತ'ವಾಗಿ ಮಾರ್ಪಡಿಸಿಕೊಳ್ಳಬಹುದಾಗಿದೆ. 
    ಹೀಗೆಯೇ "ಜಾಗರಣ"ದ ಅರ್ಥವನ್ನು ತಿಳಿಯಬೇಕು. ಈ ಸಾದನವು 'ಸ್ವಲ್ಪ' ಕಷ್ಟಸಾಧ್ಯವಾದದು. ಸಾಮಾನ್ಯವಾದ ಅರ್ಥದಲ್ಲಿ ನಿದ್ರೆಮಾಡದೆ ಎಚ್ಚರವಾಗಿರುವದು ಎಂಬಿದು ಅರ್ಥವಾದರೂ ಆಧ್ಯಾತ್ಮಿಕಜಾಗರಣವು "ಜಾಗರ್ತಿ ಸಂಯಮಿ' ಎಂದು ಭಗವಂತನು ತಿಳಿಸಿರುವ ಅರ್ಥದಲ್ಲೇ ಸಮನ್ವಿತವಾಗಿರುವದು. ಹೇಗೆಂದರೆ ಎಷ್ಟೇ ಶಾಸ್ತ್ರಗಳನ್ನು ಓದಲಿ, ವಿದ್ಯಾವಂತನಾಗಿರಲಿ ಅವನು ಆತ್ಮವಿದ್ಯೆಯೊಂದನ್ನು ಕಲಿಯದೆ ಇದ್ದರೆ ನಿದ್ರೆ ಮಾಡಿದ್ದಂತೆಯೇ ಎಂದು ಭಾವಿಸಲಾಗಿದೆ. 'ಅನಾದಿಮಾಯಾ ನಿದ್ರೆ' ಎಂಬ ಹೆಸರಿನಿಂದ ವೇದಾಂತಾಚಾರ್ಯರು ಕರೆದಿರುವ ಈ ಸ್ಥಿತಿಯು ಈಗಿನ ಪ್ರಾಪಂಚಿಕರಿಗೆಲ್ಲ ಅನ್ವಯಿಸುತ್ತದೆ. ಇದರಲ್ಲಿ ಬಡವ, ಬಲ್ಲಿದ, ವಿದ್ಯಾವಂತ, ದಡ್ಡ, ಉಚ್ಚ, ನೀಚಗಳೆಂಬ ಭೇದವಿಲ್ಲ ಬ್ರಹ್ಮವಿದ್ಯಾವಿಹೀನರಾದ ಎಲ್ಲ ಜೀವರೂ ಮಾಯಾನಿದ್ರಾಮೋಹಿತರೆಂದೇ ತೀರ್ಮಾನವು. ಈ ಅಭಿಪ್ರಾಯದಲ್ಲಿ ಆತ್ಮ ಜ್ಞಾನಿಯೊಬ್ಬನೇ ಎಚ್ಚರವಾಗಿರುವವನೆಂದು ನಿಶ್ಚಯಿಸಲಾಗಿದೆ. ಆದ್ದರಿಂದ ಜಾಗರಣವೆಂದರೆ ನಾವು ವರ್ಷಕ್ಕೊಮ್ಮೆ ಒಂದು ರಾತ್ರಿ ಅದೂಕೂಡ ಏನೇನೋ ಲೌಕಿಕೋಪಾಯಗಳಿಂದ ನಿದ್ದೆಗೆಟ್ಟಮಾತ್ರಕ್ಕೆ ಸಾಧಿಸಿದಂತೆ ಆಯಿತೆಂದು ಭಾವಿಸಿದರೆ ನಮ್ಮಂಥ ಮೂರ್ಖರು ಬೇರೆ ಇಲ್ಲ, ಆದ್ದರಿಂದ ಮುಖ್ಯಾರ್ಥದ ಜಾಗರಣವು ನಮಗೆ ದೊರಕಬೇಕಾದರೆ ನಮ್ಮ ಜನ್ಮ ಜನ್ಮಾಂತರಗಳ ಪ್ರಯತ್ನವೂ ಸಾಕಾಗಲಾರದು. ನಿತ್ಯ ಜಾಗರೂಕನಾದ ಮಹಾದೇವನ ಅಪಾರವಾದ ಕರುಣೆಯು ನಮ್ಮ ಮೇಲೆ ಹರಿದಾಗ ಮಾತ್ರ ನಾವು ಜಾಗರಣೆಯ ಫಲವನ್ನು ಪೂರ್ಣವಾಗಿ ಪಡೆದುಕೊಂಡೇವು. 
    ಇನ್ನು ಶಿವರಾತ್ರಿಯ ಶಬ್ದದಲ್ಲಿ ಅಡಗಿರುವ 'ಶಿವ' ತತ್ತ್ವದ ಬಗ್ಗೆ ವಿಚಾರ ಮಾಡೋಣ. ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಇವೆಲ್ಲವೂ ಪರ್ಯಾಯ ಶಬ್ದಗಳು, ಪರಮೇಶ್ವರನಿಗೆ ಶಿವನೆಂಬ ಹೆಸರು ವೇದದಿಂದಲೇ ಬಂದಿರುತ್ತದೆ. 'ವಶ ಕಾಂತೌ' ಎಂಬ ಧಾತುವಿನಿಂದ ಹುಟ್ಟಿರುವ ಈ ಶಬ್ದವು ಲೋಕಕ್ಕೆಲ್ಲ ಇಷ್ಟನಾದವನೂ ಎಲ್ಲ ಪ್ರಾಣಿಗಳಿಂದಲೂ ಪೂಜಿಸಲ್ಪಡುವವನೂ ಆದವನೇ ಶಿವನು ಎಂದು ತಿಳಿಸುತ್ತದೆ. ಪೌರಾಣಿಕರ ದೃಷ್ಟಿಯಿಂದಲೂ ಶಿವನು ಸಕಲ ಭೂತಗಳಿಗೂ ಆರಾಧ್ಯನು ವಿಷ್ಣುವನ್ನಾದರೊ, ರಾಕ್ಷಸರು ಪೂಜಿಸುವದಿಲ್ಲ. ದ್ವೇಷಿಸುತ್ತಾರೆ, ಆದರೆ ದೇವ-ರಾಕ್ಷಸ ಕಿನ್ನರ ಗಂಧರ್ವಾದಿ ಮನುಷ್ಯರವರೆಗಿನ ಯಾವ ಬುದ್ಧಿಜೀವಿಗಳೂ ಶಿವನನ್ನು ದ್ವೇಷಿಸುವದಿಲ್ಲ. ಇವರೆಲ್ಲರಿಗೂ ಶಿವನೇ ಪೂಜ್ಯನು; ವರದನು, ಆಶುತೋಷ (ಬೇಗನೆ ಒಲಿಯುವವನು) ಎಂಬ ಬಿರುದನ್ನು ಹೊತ್ತಿರುವ ಶಿವನು ಮಹಾದೇವನೆಂದೂ ಶಂಕರನೆಂದೂ ವಿಶ್ವೇಶ್ವರನೆಂದೂ ಅನ್ವರ್ಥನಾಮಗಳನ್ನು ಪಡೆದಿರುತ್ತಾನೆ. ಪ್ರತಿಯೊಬ್ಬನ, ಆತ್ಮಲಿಂಗನಾದ ಶಿವನು ಎಲ್ಲರಿಗೂ ಪರಮಪ್ರಿಯನಾಗಿರುವದರಲ್ಲಿ ಆಶ್ಚರ್ಯವೇನಿದೆ? ಭೂಮಿಯೇ ಮುಂತಾದ ಪಂಚ ಮಹಾಭೂತಗಳೊಡನೆ ಅಷ್ಟಮೂರ್ತಿರೂಪದಿಂದ ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಯೋಗಿಗಳ ಹೃದಯದಲ್ಲಿ ನೆಲಸಿರುವವನೂ ಸರ್ವಪ್ರಾಣಿಗಳ ಅಂತರಾತ್ಮನೂ ಆದ ಶಿವನನ್ನು ಒಂದಲ್ಲ ಒಂದು ರೀತಿಯಿಂದ ಎಲ್ಲರೂ ತಿಳಿದೇ ಇದ್ದಾರೆ. ಆದರೆ ಅವನನ್ನು 'ಶಿವ'ನೆಂದೇ ಖಚಿತವಾಗಿ ನಿಶ್ಚಯಿಸಿಕೊಂಡ ದಿನವೇ ಶಿವರಾತ್ರಿಯಾಗುವದು. ಇಂಥ ಶಿವರಾತ್ರಿಯನ್ನು ಆಚರಿಸುವ ಮಹಾತ್ಮರು ಶಿವಸ್ವರೂಪರೇ ಎಂದು ಧಾರಾಳವಾಗಿ ಹೇಳಬಹುದು. 
    ಅಧ್ಯಾತ್ಮದೃಷ್ಟಿಯಿಂದ ಶಿವ, ವಿಷ್ಣು ಮುಂತಾಗಿ ಎಲ್ಲಾ ನಾಮಗಳೂ ಒಬ್ಬ ಭಗವಂತನದೇ ಆಗಿವೆ. ವಿಷ್ಣು ಎಂದರೆ ಸರ್ವವ್ಯಾಪಕನೆಂದೂ ಶಿವನೆಂದರೆ ಮಂಗಳಸ್ವರೂಪನೆಂದೂ ಭಾವಿಸಿ ನೀವು ಭಗವಂತನ ಕಡೆಗೆ ಹೊರಡಲು ಸಿದ್ಧರಾಗೋಣ. ನಿಮ್ಮ ಮನೋಬುದ್ಧಿಗಳನ್ನು ಆ ಪರಮಾತ್ಮನ ಕಡೆಗೆ ತಿರುಗಿಸೋಣ, ಅದಕ್ಕಾಗಿ ನಮ್ಮ ಎಲ್ಲಾ ಸಾಧನಗಳನ್ನೂ ವಿನಿಯೋಗಿಸಿ. ಜಾತಿಮತಗಳ ಬೇದವನ್ನೆಣಿಸದೆ ನಿಮ್ಮ 'ಆತ್ಮ'ನೇ ಶಿವನೆಂದು ಸಾರುವ 'ಶಿವೋಹಂ' ಎಂಬ ಬಲ್ಲವರ ಅನುಭವದಲ್ಲಿ ಶ್ರದ್ಧೆಯಿಟ್ಟು ಸಾಧಿಸಿಕೊಳ್ಳೋಣ.   "ದ್ವೈತವೆಲ್ಲ ಅಶಿವವು; ಅದ್ವಯತೆಯೇ ಶಿವವು" ಎಂಬ ಜ್ಞಾನಿಗಳ ವಾಕ್ಯದಲ್ಲಿ ವಿಶ್ವಾಸವಿಡೋಣ..
*****

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ|’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.
ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು?
ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.
ವ್ರತವನ್ನಾಚರಿಸುವ ಪದ್ಧತಿ
ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.
ವ್ರತದ ವಿಧಿ
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.
ಯಾಮಪೂಜೆ
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.
೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?   ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ.

ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು.
ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ.
ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.
(ಬುದ್ಧಿಪ್ರಾಮಾಣ್ಯವಾದಿಗಳಿಗೆ, ಹರಿನಾಳವನ್ನು ದಾಟುವಾಗ ನಮ್ಮ ಕಾಲುಗಳಲ್ಲಿನ ಕೊಳೆಯು ಅದರಲ್ಲಿ ಬಿದ್ದರೆ, ಆ ನೀರನ್ನು ತೀರ್ಥವೆಂದು ಸೇವಿಸುವ ಭಕ್ತರಿಗೆ ರೋಗಗಳು ಬರುತ್ತವೆ, ಆದುದರಿಂದ ಅದನ್ನು ದಾಟುವುದಿಲ್ಲವೆಂದು ಅನಿಸುತ್ತದೆ !)

ಪ್ರದಕ್ಷಿಣೆ ಹಾಕುವ ಮಾರ್ಗ
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವನ ಉಪಾಸನೆಯ ಹಿಂದಿನ ಶಾಸ್ತ್ರ’)


ಶಿವಲಿಂಗದ ವಿಧಗಳು
ಚಲ ಮತ್ತು ಅಚಲ
೧. ಚಲ ಲಿಂಗವನ್ನು ಯಾವುದಾದರೊಂದು ವಿಶಿಷ್ಟ ಪೂಜೆಯನ್ನು ಮಾಡಲು ತಯಾರಿಸುತ್ತಾರೆ. ಶ್ರೀಗಣೇಶ ಚತುರ್ಥಿಗೆ ಯಾವ ರೀತಿ ಶ್ರೀಗಣೇಶನ ನೂತನ ಮೂರ್ತಿಯನ್ನು ತಯಾರಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆಯೋ ಅದೇ ರೀತಿ ಇದನ್ನು ಮಾಡುತ್ತಾರೆ. ಅಚಲ ಲಿಂಗವನ್ನು ಒಂದು ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ.
೨. ಲಿಂಗಾಯತರು ಕುತ್ತಿಗೆಯಲ್ಲಿ ಧರಿಸುವ ಲಿಂಗಕ್ಕೆ ‘ಚಲ ಲಿಂಗ’ ಎಂದು ಹೇಳುತ್ತಾರೆ.
ಭೂಮಿಯ ಸಂದರ್ಭದಲ್ಲಿ
೧. ಭೂಮಿಯ ಒಳಗಿರುವ ಲಿಂಗಗಳು (ಸ್ವಯಂಭೂ)
ಅ. ಇವುಗಳಲ್ಲಿ ಬಹಳ ಶಕ್ತಿಯಿರುತ್ತದೆ; ಆದುದರಿಂದಲೇ ಇವು ಭೂಮಿಯ ಒಳಗಿರುತ್ತವೆ. ಅವು ಭೂಮಿಯ ಮೇಲಿದ್ದರೆ ಅವುಗಳಿಂದ ಹೊರಬೀಳುವ ಶಕ್ತಿಯನ್ನು ಭಕ್ತರು ಸಹಿಸಲಾರರು. (ಕಣ್ಣುಗಳಿಂದ ಹೊರಬೀಳುವ ತೇಜದಿಂದ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗ ಬಾರದೆಂದು ತಿರುಪತಿ ಬಾಲಾಜಿಯ ಕಣ್ಣುಗಳು ಅರ್ಧಮುಚ್ಚಿರುತ್ತವೆ.) ಪೂಜೆಯನ್ನು ಮಾಡುವವರು ನೆಲದ ಮೇಲೆ ಮಲಗಿಕೊಂಡು ಕೆಳಗೆ ಕೈ ಹಾಕಿ ಲಿಂಗದ ಪೂಜೆಯನ್ನು ಮಾಡುತ್ತಾರೆ. ಜ್ಯೋತಿರ್ಲಿಂಗಗಳ ನಂತರ ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಶಿವತತ್ತ್ವವಿರುತ್ತದೆ. ಇವು ಶಿವೇಚ್ಛೆಯಿಂದ ತಯಾರಾಗುತ್ತವೆ. ಮುಂದೆ ಯಾವುದಾದರೊಬ್ಬ ಭಕ್ತನಿಗೆ ಸಾಕ್ಷಾತ್ಕಾರವಾಗಿ ಇವುಗಳ ಅಸ್ತಿತ್ವದ ಅರಿವಾಗುತ್ತದೆ ಮತ್ತು ಅವುಗಳ ಪೂಜೆಯು ಪ್ರಾರಂಭವಾಗುತ್ತದೆ.
೨. ಭೂಮಿಗೆ ಸಮಾನವಾಗಿರುವ ಲಿಂಗಗಳು : ಇವುಗಳನ್ನು ಋಷಿ ಅಥವಾ ರಾಜರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಶಕ್ತಿಯು ಕಡಿಮೆಯಿರುತ್ತದೆ. ಭಕ್ತರಿಗೆ ಈ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ. ಪೂಜೆ ಮಾಡುವವನು ಲಿಂಗದ ಪಕ್ಕದಲ್ಲಿರುವ ತಗ್ಗಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾನೆ.
೩. ಭೂಮಿಯ ಮೇಲಿರುವ ಲಿಂಗಗಳು : ಇವುಗಳನ್ನು ಭಕ್ತರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಮತ್ತು ಎಲ್ಲರಿಗೂ ಸಹನವಾಗುವಷ್ಟೇ ಶಕ್ತಿಯಿರುತ್ತದೆ. ಪೂಜೆ ಮಾಡುವವರು ಲಿಂಗದ ಪಕ್ಕದಲ್ಲಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ.
ಎರಡನೆಯ ಮತ್ತು ಮೂರನೆಯ ವಿಧದ ಲಿಂಗಗಳಿಗೆ ‘ಮಾನುಷ ಲಿಂಗ’ ಎನ್ನುತ್ತಾರೆ. ‘ಇವುಗಳನ್ನು ಮನುಷ್ಯರು ತಯಾರಿಸುವುದರಿಂದ ಇವುಗಳಿಗೆ ಮಾನುಷಲಿಂಗ ಎಂಬ ಹೆಸರು ಬಂದಿರಬಹುದು. ಈ ಲಿಂಗಗಳನ್ನು ಸ್ಥಿರಲಿಂಗಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ರಹ್ಮಭಾಗ, ವಿಷ್ಣುಭಾಗ ಮತ್ತು ರುದ್ರಭಾಗ ಎಂದು ಮೂರು ಭಾಗಗಳಿರುತ್ತವೆ. ಎಲ್ಲಕ್ಕಿಂತಲೂ ಕೆಳಗಿನ ಭಾಗಕ್ಕೆ ‘ಬ್ರಹ್ಮಭಾಗ’ ಎನ್ನುತ್ತಾರೆ. ಅದು ಚತುಷ್ಕೋನಾಕಾರದ್ದಾಗಿರುತ್ತದೆ. ಮಧ್ಯದ ಅಷ್ಟಕೋನಾಕಾರದ ಭಾಗವನ್ನು ‘ವಿಷ್ಣುಭಾಗ’ ಎನ್ನುತ್ತಾರೆ. ಈ ಎರಡೂ ಭಾಗಗಳು ಭೂಮಿಯ ಒಳಗೆ ಇರುತ್ತವೆ. ಎಲ್ಲಕ್ಕಿಂತಲೂ ಮೇಲಿನ ಉದ್ದನೆಯ ದುಂಡಾದ ಭಾಗಕ್ಕೆ ರುದ್ರಭಾಗ ಎಂಬ ಹೆಸರಿದೆ. ಇದಕ್ಕೆ ಪೂಜೆಯ ಭಾಗವೆಂದೂ ಕರೆಯುತ್ತಾರೆ. ಏಕೆಂದರೆ ಪೂಜೆಯ ಸಾಮಗ್ರಿಗಳನ್ನು ಇದರ ಮೇಲೆಯೇ ಅರ್ಪಿಸುತ್ತಾರೆ. ಮೂರ್ತಿಶಾಸ್ತ್ರದ ಗ್ರಂಥಗಳಲ್ಲಿ ರುದ್ರಭಾಗದ ಮೇಲೆ ಕೆಲವು ರೇಖೆಗಳಿರಬೇಕು ಎಂದು ಹೇಳಲಾಗಿದೆ. ಈ ರೇಖೆಗಳಿಗೆ ‘ಬ್ರಹ್ಮಸೂತ್ರಗಳು’ ಎನ್ನುತ್ತಾರೆ. ದೈವಿಕ ಮತ್ತು ಆರ್ಷಕ ಲಿಂಗಗಳ ಮೇಲೆ ಇಂತಹ ರೇಖೆಗಳು ಇರುವುದಿಲ್ಲ.’
೪. ಗಾಳಿಯಲ್ಲಿ ತೇಲಾಡುವ ಲಿಂಗಗಳು : ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ ಐದು ಮೀ.ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ದರ್ಶನಾರ್ಥಿಗಳು ಅದರ ಕೆಳಗಿನಿಂದ ಹೋಗುತ್ತಿದ್ದರು. ಅದೇ ಲಿಂಗದ ಪ್ರದಕ್ಷಿಣೆಯಾಗುತ್ತಿತ್ತು.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)
***

ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು.
ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ.
೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು ಮಾಡುವುದು ಉಚಿತವಲ್ಲ; ಆದರೆ ಆರತಿಯ ಮೊದಲು ಮಾಡುವ ಶಂಖನಾದವು ಯೋಗ್ಯವಾಗಿದೆ ಮತ್ತು ಅದನ್ನು ಅವಶ್ಯವಾಗಿ ಮಾಡಬೇಕು.’
ಶಾಸ್ತ್ರ: ಶಂಖನಾದದಿಂದ ಪ್ರಾಣಾಯಾಮದ ಅಭ್ಯಾಸವಾಗುತ್ತದೆ; ಅಷ್ಟೇ ಅಲ್ಲದೇ ಶಂಖನಾದವು ಎಲ್ಲಿಯ ವರೆಗೆ ಕೇಳಿಸುತ್ತದೆಯೋ, ಅಲ್ಲಿಯ ವರೆಗಿನ ಪರಿಸರದಲ್ಲಿ ಭೂತ, ಮಾಟ ಇತ್ಯಾದಿ ದುಷ್ಟಶಕ್ತಿಗಳ ತೊಂದರೆಯಾಗುವುದಿಲ್ಲ.
೩. ‘ಶಿವನಿಗೆ ತುಳಸಿಯನ್ನು ಅರ್ಪಿಸುವುದಿಲ್ಲ; ಆದರೆ ಸಾಲಿಗ್ರಾಮಕ್ಕೆ ಅಥವಾ ವಿಷ್ಣುವಿನ ಮೂರ್ತಿಗೆ ಅರ್ಪಿಸಿದ ತುಳಸಿಯನ್ನು ಶಿವನಿಗೆ ಅರ್ಪಿಸಬಹುದು.’
ಶಾಸ್ತ್ರ: ಶಿವನು ಶ್ರೀ ವಿಷ್ಣುವನ್ನು ಗುರು ರೂಪದಲ್ಲಿ ನೋಡುತ್ತಾನೆ. ಶಿವನು ವಿಷ್ಣು ಭಕ್ತನಾಗಿದ್ದಾನೆ; ಆದುದರಿಂದ ವಿಷ್ಣುವಿಗೆ ಅರ್ಪಿಸಿರುವ ತುಳಸಿಯು ಶಿವನಿಗೆ ಪ್ರಿಯವಾಗಿರುತ್ತದೆ.
೪. ‘ಜ್ಯೇಷ್ಠ ಕೃಷ್ಣ ಅಷ್ಟಮಿಯಂದು ಶಂಕರನ ಪೂಜೆಯನ್ನು ಮತ್ತು ಚತುರ್ದಶಿಯಂದು ರೇವತಿಯ ಪೂಜೆಯನ್ನು ನೀಲಿ ಹೂವುಗಳಿಂದ ಮಾಡಬೇಕು. ಶಿವನಿಗೆ ಕೇದಗೆಯ ತುರಾಯಿಯನ್ನು ಮಹಾಶಿವರಾತ್ರಿಯ ವ್ರತದ ಉದ್ಯಾಪನೆಯ ಸಮಯದಲ್ಲಿಯೇ ಅರ್ಪಿಸಬೇಕು.’
ಶಾಸ್ತ್ರ: ಕಾಲಕ್ಕನುಸಾರ ದೇವತೆಗಳ ಪೂಜೆಯ ಸಾಮಗ್ರಿಗಳಲ್ಲಿ ಬದಲಾವಣೆಯಾಗುತ್ತದೆ, ಉದಾ.ಜ್ಯೇಷ್ಠ ಕೃಷ್ಣ ಅಷ್ಟಮಿಯ ದಿನ ನೀಲಿ ಬಣ್ಣದಲ್ಲಿ ಹಸಿರು ಬಿಲ್ವಪತ್ರೆಯಂತೆ ಶಿವತತ್ತ್ವವನ್ನು ಗ್ರಹಿಸುವ ಕ್ಷಮತೆ ಬರುತ್ತದೆ. ಆದುದರಿಂದ ಆ ದಿನ ಶಿವನಿಗೆ ನೀಲಿ ಹೂವುಗಳನ್ನು ಅರ್ಪಿಸುತ್ತಾರೆ.
೫. ‘ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆ, ಬಿಳಿ ಹೂವು ಮತ್ತು ನೈವೇದ್ಯವನ್ನು ಸ್ವೀಕರಿಸಬಾರದು.’
ಶಾಸ್ತ್ರ: ಶಿವನು ವೈರಾಗ್ಯದ ದೇವತೆಯಾಗಿದ್ದಾನೆ. ಸಾಮಾನ್ಯ ವ್ಯಕ್ತಿಯು ಶಿವನಿಗೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ಅವನಿಗೆ ವೈರಾಗ್ಯ ಬರುವ ಸಾಧ್ಯತೆಯಿರುತ್ತದೆ. ಸಾಮಾನ್ಯ ವ್ಯಕ್ತಿಗೆ ವೈರಾಗ್ಯ ಬೇಕಾಗಿರುವುದಿಲ್ಲ. ಆದುದರಿಂದ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ.ಶೇ. ೫೦ ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಮಟ್ಟವು ಹೆಚ್ಚಿರುವುದರಿಂದ ವೈರಾಗ್ಯ ಲಹರಿಗಳ ಪರಿಣಾಮವು ಅವನ ಮೇಲಾಗುವುದಿಲ್ಲ. ಅವನಲ್ಲಿ ಮಾಯೆಯಿಂದ ದೂರ ಹೋಗುವ ವಿಚಾರಗಳು ಆಗಲೇ ಪ್ರಾರಂಭವಾಗಿರುತ್ತವೆ. ಅದರಂತೆ ಶೇ. ೫೦ ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಯು ಸ್ಥೂಲ ಕರ್ಮಕಾಂಡದ ಆಚೆಗೆ ಹೋಗಿರುವುದರಿಂದ ಅವನಲ್ಲಿ ಮಾನಸ-ಉಪಾಸನೆಯು ಪ್ರಾರಂಭವಾಗಿರುತ್ತದೆ. ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ‘ಶಿವನಿಗೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬೇಕು’ ಎಂಬ ಕರ್ಮಕಾಂಡದ ವಿಚಾರಗಳು ಬರುವ ಸಾಧ್ಯತೆಗಳೇ ಕಡಿಮೆಯಿರುತ್ತವೆ.
೬. ‘ಶೈವರು, ಕಾಪಾಲಿಕರು, ಗೋಸಾವಿಗಳು, ವೀರಶೈವ ಇತ್ಯಾದಿ ಸಂಪ್ರದಾಯ ದವರು ತಮ್ಮ-ತಮ್ಮ ಸಂಪ್ರದಾಯಕ್ಕನುಸಾರ ಪಾರ್ಥಿವಲಿಂಗ, ಕಂಠಸ್ಥಲಿಂಗ (ಕೊರಳಿನಲ್ಲಿ ಧರಿಸಿರುವ ಬೆಳ್ಳಿಯ ಪೆಟ್ಟಿಗೆಯಲ್ಲಿನ ಲಿಂಗ), ಸ್ಫಟಿಕಲಿಂಗ, ಬಾಣಲಿಂಗ, ಪಂಚಸೂತ್ರಿಲಿಂಗ, ಪಾಷಾಣಲಿಂಗ ಇಂತಹ ವಿಧದ ಲಿಂಗಗಳನ್ನು ಶಿವಪೂಜೆಯಲ್ಲಿ ಉಪಯೋಗಿಸುತ್ತಾರೆ.’
(ಆಧಾರ: ಸನಾತನ ನಿರ್ಮಿತ ಗ್ರಂಥ ‘ಶಿವ’)
********
ಶಿವರಾತ್ರಿ ದಿನದಂದು ರುಧ್ರದೇವರ ಸ್ಮರಣೆಗೆ:-
ಉಮಾದೇವಿಯವರು ಕೇಳುವ 4) ಪ್ರಶ್ನೆ ಗಳಿಗೆ ರುದ್ರ ದೇವರು ಉತ್ತರಿಸುತ್ತಾರೆ, ಮೂದಲನೇ ಪ್ರಶ್ನೆ ಗೆ ತನಗೆ ಪಂಚಮುಖ ಬರಲು ಕಾರಣ ತಿಳಿಸುತ್ತಾರೆ. 

2) ಮುಂದುವರೆದು ತಾನು ಎತ್ತನ್ನು ವಾಹನವನ್ನಾಗಿ ಮಾಡಿಕೂಂಡ ಬಗ್ಗೆ ತಿಳಿಸುತ್ತಾ , ಒಮ್ಮೆ ರುದ್ರ ದೇವರು ಕೈಲಾಸ ದಲ್ಲಿ ಸಂಚರಿಸುವಾಗ, ಆಕಾಶ ಮಾರ್ಗ ವಾಗಿ ಆನೇಕ ಗೋವುಗಳು , ಕರುಗಳು ಹೋಗುತ್ತಿವುದನ್ನು ನೋಡುತ್ತಾರೆ. ಸ್ವಲ್ಪ ಸಮಯದ ನಂತರ ಆ ಗೋವುಗಳಿಂದ, ಗೋ ಮೂತ್ರ,, ಗೋಮಯ (ಸಗಣಿ), ಮತ್ತು ಕರುಗಳು ಕರೆಯುವಾಗ ಹಾಲು ಎಲ್ಲ ರುದ್ರ ದೇವರ ತಲೆಯಮೇಲೆ ಬಿಳುತ್ತದೆ. ಆಗ ರುದ್ರ ದೇವರು ಕೋಪದಿಂದ ಆ ಗೋವುಗಳ ಕಡೆ ನೋಡುವಾಗ, ಒಂದು ಎತ್ತು ಬಂದು, ಗೋವುಗಳ ಮೇಲೆ ಕೋಪಗೂಳ್ಳದಿರಲೂ, ಶಾಂತನಾಗಿ ಅನುಗ್ರಹಿಸಲು ಬೇಡುತ್ತದೆ. ಎತ್ತಿನ ಗುಣವನ್ನು ಮೆಚ್ಚಿದ ಶಿವನು ಆ ಎತ್ತನ್ಮೆ ವಾಹನವನ್ನಾಗಿ ಮಾಡಿಕೂಂಡಿರುದಾಗಿ, ಮತ್ತು ಎತ್ತನ್ಮೆ ತನ್ನ ಧ್ವಜ ಲಾಂಚನ ವಾಗಿ ಮಾಡಿಕೂಂಡು, ಅಂದಿನಿಂದ ವೃಷಭ ವಹಾನಾದೆನು ಮತ್ತು ವೃಷಭ ಧ್ವಜನಾದೆನು ಎಂದು ರುದ್ರ ದೇವರು ಹೇಳುತ್ತಾರೆ.
3) ಇನ್ನೂ ತನಗೆ ವಿಷಕಂಟ ಎಂದು ಹೆಸರು ಬರಲು , ಈಹಿಂದೆ ದೇವಧಾನವರು ಸಮುದ್ರ ಮಂಥನ ಮಾಡುವಾಗ ಮೂದಲು ಹುಟ್ಟಿ ಬಂದದ್ದೇ ವಿಷ. ವಾಯುದೇವರು ಕೂಟ್ಟ ಸ್ವಲ್ಪ ವಿಷವನ್ನು ಕುಡಿದಾಗ, ತನ್ನ ಕಂಟ ನೀಲಿ ಯಾಗಿ, ಅಂದಿನಿಂದ ವಿಷಕಂಟ, ನಂಜೂಂಡೇಶ್ವರ ಎಂದು ಹೆಸರು ಪಡೆದಿರುವುದಾಗಿ ರುದ್ರ ದೇವರು ಹೇಳುತ್ತಾರೆ.
4) ಇನ್ನೂ ರುದ್ರ ದೇವರು ತಮಗೆ ಪೀನಾಕ ಧನಸ್ಸು ಹೇಗೆ ಬಂತು, ಎಂದರೆ, ಈ ಹಿಂದೆ ಕಣ್ವ ಖುಷಿ ಗಳು ಬ್ರಹ್ಮದೇವ ರನ್ನು ಕುರಿತು ಘೋರ ತಪಸ್ಸು ಮಾಡುತ್ತಾರೆ, ಹಾಗೆ ತಪಸ್ಸು ಮಾಡುವಾಗ ಅವರ ಸೂಕ್ತ ಹುತ್ತ ಬೆಳೆಯುತ್ತದೆ, ದೂಡ್ಡ ಹುತ್ತ ಬೆಳೆಯಲು, ಕಣ್ವ ಖುಷಿ ಗಳು ಹುತ್ತ ದಲ್ಲಿ ಪೂತಿ€ ಮುಚ್ಚಿಹೋಗುತ್ತಾರೆ ಮತ್ತು ಹುತ್ತದ ಮೇಲೆ ಮೂರು ದೂಡ್ಡ ಬೀದರಿನ (ಬೂಂಬು), ಮರಗಳು ಬೇಳೆಯುತ್ತವೆ.
ಇವರ ಘೋರ ತಪಸ್ಸಿಗೆ ಮೇಚ್ಚಿದ ಬ್ರಹ್ಮದೇವರು ಬಂದು ಹುತ್ತದ ಮೇಲೆ ಬೆಳೆದ ಆ ಮೂರು ಡೊಡ್ಡ ಬೊಂಬುಗಳನ್ನು ತೆಗೆದುಕೊಂಡು, ಮೂರು ಬಿಲ್ಲುಗಳನ್ನು ಮಾಡುತ್ತಾರೆ. ಆ ಮೂರು ಬಿಲ್ಲುಗಳೇ ಶಾರ್ಜ್ಞ್ಗಧನ್ವಾ ಧನಸ್ಸು ಇದನ್ನು ವಿಷ್ಣುವಿಗೆ ಕೂಡುತ್ತಾರೆ, ಇನ್ನೂಂದು ಧನಸ್ಸು ಗಾಂಡೀವ ಧನಸ್ಸು ಇದನ್ನು ಬ್ರಹ್ಮ ದೇವರು ತಮ್ಮ ಬಳಿ ಇಟ್ಟುಕೂಂಡು, ಮತ್ತೂಂದು ಧನಸ್ಸು ಪೀನಾಕ ಧನಸ್ಸು, ಈ ಪೀನಾಕ ಧನಸ್ಸನ್ನು ನನಗೆ ಕೂಟ್ಟರೇಂದು ರುದ್ರ ದೇವರು ಹೇಳುತ್ತಾರೆ. ಹೀಗೆ ಪೀನಾಕ ಧನಸ್ಸು ತನಗೆ ಬಂದಿರುವಬಗ್ಗೆ ತಿಳಿಸುತ್ತಾರೆ. 
ಮುಂದೆ ಗಾಂಡೀವ ಧನಸ್ಸು ಬ್ರಹ್ಮ ನಿಂದ ರುದ್ರನಿಗೆ, ರುದ್ರ ರಿಂದ ಚಂದ್ರನಿಗೆ, ಚಂದ್ರ ನಿಂದ ಇಂದ್ರನಿಗೆ, ಇಂದ್ರನಿಂದ ವರುಣನಿಗೆ ಬರುತ್ತದೆ. ಮುಂದೆ ಖಾಂಡವ ಧಹನ ಕಾಲದಲ್ಲಿ ಅರ್ಜುನ ಆಯುಧಗಳನ್ನು ಕೇಳಿದ ನೆಂದು ಅಗ್ನಿ ಯು ವರುಣ ನನ್ನು ಕೇಳಿ ಗಾಂಡೀವ ಧನಸ್ಸು ನ್ನು ತಂದು ಅರ್ಜುನನಿಗೆ ಕೂಡುತ್ತಾರೆ.
******
ತುಂಬಾ ಆಸಕ್ತಿದಾಯಕವಾಗಿದೆ - ಈ ಎಲ್ಲಾ ಪ್ರಮುಖ ದೇವಾಲಯಗಳ ನಡುವೆ ಸಾಮಾನ್ಯವಾದದ್ದನ್ನು ನೀವು Can ಹಿಸಬಲ್ಲಿರಾ?
1. ಕೇದಾರನಾಥ
2. ಕಲಹಸ್ತಿ
3. ಏಕಂಬರನಾಥ- ಕಾಂಚಿ
4. ತಿರುವನಾಮಲೈ
5. ತಿರುವನಾಯ್ಕವಾಲ್
6. ಚಿದಂಬರಂ ನಟರಾಜ
7. ರಾಮೇಶ್ವರಂ
8. ಕಾಲೇಶ್ವರಂ ಎನ್-ಇಂಡಿಯಾ
ತುಂಬಾ ಆಸಕ್ತಿದಾಯಕವಾಗಿದೆ - ಈ ಎಲ್ಲಾ ಪ್ರಮುಖ ದೇವಾಲಯಗಳ ನಡುವೆ ಸಾಮಾನ್ಯ ಶಿವ ದೇವಾಲಯಗಳು.
ಇದು ವಾಸ್ತವವಾಗಿ ಈ ದೇವಾಲಯಗಳು ಇರುವ ರೇಖಾಂಶವಾಗಿದೆ.
ಅವೆಲ್ಲವೂ 79 ° ರೇಖಾಂಶಗಳಲ್ಲಿವೆ. ಆಶ್ಚರ್ಯಕರ ಮತ್ತು ಅದ್ಭುತವಾದ ಸಂಗತಿಯೆಂದರೆ, ಈ ದೇವಾಲಯಗಳ ವಾಸ್ತುಶಿಲ್ಪಿಗಳು ಜಿಪಿಎಸ್ ಅಥವಾ ಅಂತಹ ಯಾವುದೇ ಗಿಜ್ಮೊ ಇಲ್ಲದೆ ಈ ನಿಖರವಾದ ಸ್ಥಳಗಳೊಂದಿಗೆ ಹೇಗೆ ಬಂದರು.
1. ಕೇದಾರನಾಥ 79.0669 °
2. ಕಲಹಸ್ತಿ 79.7037 °
3. ಏಕಂಬರನಾಥ- ಕಾಂಚಿ 79.7036 °
4. ತಿರುವನಾಮಲೈ 79.0747 °
5. ತಿರುವನಾಯ್ಕವಾಲ್ 78.7108
6. ಚಿದಂಬರಂ ನಟರಾಜ 79.6954 °
7. ರಾಮೇಶ್ವರಂ 79.3129 °
8. ಕಾಲೇಶ್ವರಂ ಎನ್-ಇಂಡಿಯಾ 79.9067 °
ಚಿತ್ರವನ್ನು ನೋಡಿ - ಎಲ್ಲವೂ ಸರಳ ರೇಖೆಯಲ್ಲಿವೆ.
ಕೇದಾರನಾಥದಿಂದ ರಾಮೇಶ್ವರಂ ವರೆಗೆ ಸರಳ ರೇಖೆಯಲ್ಲಿ ನಿರ್ಮಿಸಲಾಗಿರುವ ಶಿವ ದೇವಾಲಯಗಳು ಭಾರತದಲ್ಲಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಮ್ಮ ಪೂರ್ವಜರೊಂದಿಗೆ ನಾವು ಯಾವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೊಂದಿದ್ದೇವೆ ಎಂದು ಆಶ್ಚರ್ಯ ಪಡುತ್ತೇವೆ, ಅದು ಇಂದಿನವರೆಗೂ ನಮಗೆ ಅರ್ಥವಾಗಲಿಲ್ಲ. ಉತ್ತರಾಖಂಡದ ಕೇದಾರನಾಥ, ತೆಲಂಗಾಣದ ಕಲೇಶ್ವರಂ, ಆಂಧ್ರಪ್ರದೇಶದ ಕಲಹಸ್ತಿ, ತಮಿಳುನಾಡಿನ ಅಖೇಶೇಶ್ವರ, ಚಿದಂಬರಂ ಮತ್ತು ಅಂತಿಮವಾಗಿ ರಾಮೇಶ್ವರಂ ದೇವಾಲಯಗಳನ್ನು ಭೌಗೋಳಿಕ ನೇರ ರೇಖೆಯಲ್ಲಿ ಅಥವಾ 79 ° E 41 '54 "ರೇಖಾಂಶಕ್ಕೆ ಹತ್ತಿರದಲ್ಲಿ ನಿರ್ಮಿಸಲಾಗಿದೆ.
ಈ ಎಲ್ಲಾ ದೇವಾಲಯಗಳು ಪ್ರಕೃತಿಯ 5 ಅಂಶಗಳಲ್ಲಿ ಲಿಂಗದ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತವೆ, ಇದನ್ನು ನಾವು ಸಾಮಾನ್ಯ ಭಾಷೆಯಲ್ಲಿ ಪಂಚ್ ತತ್ವಾ (ಐದು ಅಂಶಗಳು) ಎಂದು ಕರೆಯುತ್ತೇವೆ. ಪಂಚ್ ತತ್ವಾ ಅಂದರೆ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಸ್ಥಳ. ಇವು ಐದು ಅಂಶಗಳ ಆಧಾರದ ಮೇಲೆ ಈ ಐದು ಶಿವ ಲಿಂಗಗಳನ್ನು ಬಿಡುಗಡೆ ಮಾಡಿವೆ.
1. ತಿರುವನಕ್ವಾಲ್ ದೇವಸ್ಥಾನದಲ್ಲಿ ನೀರನ್ನು ಪ್ರತಿನಿಧಿಸಲಾಗುತ್ತದೆ,
2. ಬೆಂಕಿಯ ಪ್ರಾತಿನಿಧ್ಯವು ತಿರುವಣ್ಣಾಮಲೈನಲ್ಲಿದೆ,
3. ಕಲಹಸ್ತಿಯಲ್ಲಿ ಗಾಳಿಯನ್ನು ನಿರೂಪಿಸಲಾಗಿದೆ,
4. ಭೂಮಿಯನ್ನು ಕಾಂಚೀಪುರಂ ಮತ್ತು ಶೀತದಲ್ಲಿ ಪ್ರತಿನಿಧಿಸಲಾಗುತ್ತದೆ
5. ಚಿದಂಬರಂ ದೇವಸ್ಥಾನದಲ್ಲಿ ಸ್ಥಳ ಅಥವಾ ಆಕಾಶವನ್ನು ಪ್ರತಿನಿಧಿಸಲಾಗುತ್ತದೆ! ಈ ಐದು ದೇವಾಲಯಗಳು ವಾಸ್ತು-ವಿಜ್ಞಾನ-ವೇದದ ಅದ್ಭುತ ಸಂಯೋಗವನ್ನು ಪ್ರತಿನಿಧಿಸುತ್ತವೆ.
ಈ ದೇವಾಲಯಗಳಲ್ಲಿ ಭೌಗೋಳಿಕ ವಿಧಾನದಲ್ಲೂ ವಿಶೇಷತೆ ಕಂಡುಬರುತ್ತದೆ. ಈ ಐದು ದೇವಾಲಯಗಳನ್ನು ಯೋಗ ವಿಜ್ಞಾನದ ಪ್ರಕಾರ ನಿರ್ಮಿಸಲಾಗಿದೆ, ಮತ್ತು ಅವುಗಳನ್ನು ಒಂದು ನಿರ್ದಿಷ್ಟ ಭೌಗೋಳಿಕ ಜೋಡಣೆಯಲ್ಲಿ ಇರಿಸಲಾಗಿದೆ. ಮಾನವ ದೇಹದ ಮೇಲೆ ಪರಿಣಾಮ ಬೀರುವ ವಿಜ್ಞಾನ ಖಂಡಿತವಾಗಿಯೂ ಇರುತ್ತದೆ.
ಆ ಸ್ಥಳಗಳ ಅಕ್ಷಾಂಶ ಮತ್ತು ರೇಖಾಂಶವನ್ನು ಅಳೆಯಲು ಯಾವುದೇ ಉಪಗ್ರಹ ತಂತ್ರಜ್ಞಾನ ಲಭ್ಯವಿಲ್ಲದಿದ್ದಾಗ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಈ ದೇವಾಲಯಗಳನ್ನು ನಿರ್ಮಿಸಲಾಯಿತು. ಹಾಗಾದರೆ ಐದು ದೇವಾಲಯಗಳನ್ನು ಎಷ್ಟು ನಿಖರವಾಗಿ ಸ್ಥಾಪಿಸಲಾಯಿತು? ದೇವರಿಗೆ ಗೊತ್ತು.
ಕೇದಾರನಾಥ ಮತ್ತು ರಾಮೇಶ್ವರಂ ನಡುವೆ 2383 ಕಿ.ಮೀ ದೂರವಿದೆ. ಆದರೆ ಈ ಎಲ್ಲಾ ದೇವಾಲಯಗಳು ಬಹುತೇಕ ಒಂದೇ ಸಮಾನಾಂತರ ಸಾಲಿನಲ್ಲಿ ಬರುತ್ತವೆ. ಎಲ್ಲಾ ನಂತರ, ಸಾವಿರಾರು ವರ್ಷಗಳ ಹಿಂದೆ, ಈ ದೇವಾಲಯಗಳನ್ನು ಯಾವ ತಂತ್ರಜ್ಞಾನವನ್ನು ಸಮಾನಾಂತರ ರೇಖೆಯಲ್ಲಿ ನಿರ್ಮಿಸಲಾಗಿದೆ ಎಂಬುದು ಇಂದಿಗೂ ನಿಗೂ ery ವಾಗಿದೆ. ಶ್ರೀಕಲಹಸ್ತಿ ದೇವಸ್ಥಾನದಲ್ಲಿರುವ ಶಿಮ್ಮರ್ ದೀಪವು ಆಕಾಶವಾಣಿಯ ಲಿಂಗವನ್ನು ಪ್ರತಿನಿಧಿಸುತ್ತದೆ ಎಂದು ತೋರಿಸುತ್ತದೆ. ತಿರುವನಕ್ಕ ದೇವಸ್ಥಾನದ ಒಳ ಪ್ರಸ್ಥಭೂಮಿಯಲ್ಲಿನ ನೀರಿನ ಬುಗ್ಗೆ ನೀರು-ಲಿಂಗವನ್ನು ಪ್ರತಿನಿಧಿಸುತ್ತದೆ ಎಂದು ತೋರಿಸುತ್ತದೆ. ಅಣ್ಣಾಮಲೈ ಬೆಟ್ಟದ ಮೇಲಿನ ದೊಡ್ಡ ದೀಪವು ಫೈರ್-ಲಿಂಗವನ್ನು ಪ್ರತಿನಿಧಿಸುತ್ತದೆ ಎಂದು ತೋರಿಸುತ್ತದೆ. ಕಾಂಚೀಪುರಂನ ಮರಳುಗಳ ಸಾವನ್ಭೂ ಲಿಂಗವು ಭೂಮಿಯ ಲಿಂಗವನ್ನು ಪ್ರತಿನಿಧಿಸುತ್ತದೆ ಮತ್ತು ಚಿದಂಬರಂನ ಅಸಂಗತ (ನಿರಕರ್) ರಾಜ್ಯವನ್ನು ಪ್ರತಿನಿಧಿಸುತ್ತದೆ ಎಂದು ತೋರಿಸುತ್ತದೆ.
ಈಗ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ, ಬ್ರಹ್ಮಾಂಡದ ಐದು ಅಂಶಗಳನ್ನು ಪ್ರತಿನಿಧಿಸುವ ಐದು ಲಿಂಗಗಳನ್ನು ಶತಮಾನಗಳ ಹಿಂದೆ ಇದೇ ಸಾಲಿನಲ್ಲಿ ಸ್ಥಾಪಿಸಲಾಗಿದೆ. ಆಧುನಿಕ ವಿಜ್ಞಾನವನ್ನು ಸಹ ಪ್ರತ್ಯೇಕಿಸದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅವರು ಹೊಂದಿದ್ದಾರೆಂದು ನಮ್ಮ ಪೂರ್ವಜರ ಜ್ಞಾನ ಮತ್ತು ಬುದ್ಧಿವಂತಿಕೆಯ ಬಗ್ಗೆ ನಾವು ಹೆಮ್ಮೆಪಡಬೇಕು. ಇದು ಕೇವಲ ಐದು ದೇವಾಲಯಗಳು ಮಾತ್ರವಲ್ಲದೆ ಈ ಸಾಲಿನಲ್ಲಿರುವ ಅನೇಕ ದೇವಾಲಯಗಳು ಕೇದಾರನಾಥದಿಂದ ರಾಮೇಶ್ವರಂವರೆಗಿನ ನೇರ ಸಾಲಿನಲ್ಲಿವೆ ಎಂದು ನಂಬಲಾಗಿದೆ. ಈ ಸಾಲನ್ನು "ಶಿವ ಶಕ್ತಿ ಎಕೆಎಸ್ ರೇಖಾ" ಎಂದೂ ಕರೆಯುತ್ತಾರೆ. 81.3119 ° E !? ನಲ್ಲಿ ಬರುವ ಪ್ರದೇಶಗಳಲ್ಲಿ ಕೈಲಾಶ್‌ನ ಸಂಪೂರ್ಣ ದೇವಾಲಯವನ್ನು ಇಟ್ಟುಕೊಂಡು ಇದನ್ನು ಮಾಡುವ ಸಾಧ್ಯತೆಯಿದೆ. ಉತ್ತರ ದೇವರಿಗೆ ಮಾತ್ರ ತಿಳಿದಿದೆ .. ...
ಅದ್ಭುತ ವಿಷಯ. ಮಹಕಲ್ ಶಿವ ಜ್ಯೋತಿರ್ಲಿಂಗಗಳ ನಡುವಿನ ಸಂಬಂಧವೇನು ...... ??
ಉಜ್ಜಯಿನಿಯಿಂದ ಉಳಿದ ಜ್ಯೋತಿರ್ಲಿಂಗಮ್‌ಗಳ ಅಂತರವೂ ಆಸಕ್ತಿದಾಯಕವಾಗಿದೆ-
ಉಜ್ಜಯಿನಿ ನಿಂದ ಸೋಮನಾಥ್ -777 ಕಿ.ಮೀ.
ಉಜ್ಜಯಿನಿ ನಿಂದ ಓಂಕಾರೇಶ್ವರ -111 ಕಿ.ಮೀ.
ಉಜ್ಜಯಿನಿ ನಿಂದ ಭೀಮಾಶಂಕರ್ -666 ಕಿ.ಮೀ.
ಕಾಶ್ ವಿಶ್ವನಾಥ್ ಉಜ್ಜಯಿನಿ -999 ಕಿ.ಮೀ.
ಉಜ್ಜಯಿನಿ ನಿಂದ ಮಲ್ಲಿಕಾರ್ಜುನ್ -999 ಕಿ.ಮೀ.
ಕೇಜಾರ್ನಾಥ್ ಉಜ್ಜಯಿನಿ -888 ಕಿ.ಮೀ.
ಉಜ್ಜಯಿನಿ ಟು ಟ್ರಯನ್‌ಬಕೇಶ್ವರ -555 ಕಿ.ಮೀ.
ಉಜ್ಜಯಿನಿ ಬೈ ಬೈಜ್ನಾಥ್ -999 ಕಿ.ಮೀ.
ರಾಮೇಶ್ವರಂ -1999 ಉಜ್ಜಯಿನಿಯಿಂದ ಕಿ.ಮೀ.
ಉಜ್ಜಯಿನಿ ಯಿಂದ ನೌಶೇಶ್ವರ -555 ಕಿ.ಮೀ.
ಯಾವುದೇ ಕಾರಣವಿಲ್ಲದೆ ಹಿಂದೂ ಧರ್ಮದಲ್ಲಿ ಏನೂ ಇರಲಿಲ್ಲ.
ಉಜ್ಜಯಿನಿ ಭೂಮಿಯ ಕೇಂದ್ರವೆಂದು ಪರಿಗಣಿಸಲಾಗಿದೆ. ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಕೇಂದ್ರವಾಗಿ, ಉಜ್ಜಯಿನಿಯಲ್ಲಿ ಸೂರ್ಯ ಮತ್ತು ಜ್ಯೋತಿಷ್ಯವನ್ನು ಲೆಕ್ಕಾಚಾರ ಮಾಡಲು ಮಾನವ ನಿರ್ಮಿತ ಸಾಧನವನ್ನು ಸುಮಾರು 2050 ವರ್ಷಗಳ ಹಿಂದೆ ರಚಿಸಲಾಗಿದೆ.
ಮತ್ತು ಭೂಮಿಯ ಕಾಲ್ಪನಿಕ ರೇಖೆಯ ಬಗ್ಗೆ ಸುಮಾರು 100 ವರ್ಷಗಳ ಹಿಂದೆ ಬ್ರಿಟಿಷ್ ವಿಜ್ಞಾನಿ ರಚಿಸಿದಾಗ, ಅದರ ಕೇಂದ್ರ ಭಾಗ ಉಜ್ಜಯಿನಿ. ಇಂದಿಗೂ ವಿಜ್ಞಾನಿಗಳು ಸೂರ್ಯ ಮತ್ತು ಬಾಹ್ಯಾಕಾಶದ ಬಗ್ಗೆ ತಿಳಿಯಲು ಉಜ್ಜಯಿನಿಗೆ ಬರುತ್ತಾರೆ.
******
ಶ್ರೀ ರುದ್ರಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ದೇವರು.
ಮನೋನಿಯಾಮಕರಾದ ಶ್ರೀ ರುದ್ರ ದೇವರು.
ತಾರತಮ್ಯ ದಲ್ಲಿ ಐದನೇ ಕಕ್ಷಾದಲ್ಲಿ.
ಶ್ರೀ ರಮಣಿ ಕರಕಮಲ ಪೂಜಿತ
ಚಾರು ಚರಣ ಸರೋಜ ಬ್ರಹ್ಮ ಸ
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ/
ನೀರಜ ಭವಾಂಡೋದಯ ಸ್ಥಿತಿ
ಕಾರಣನೆ ಕೈವಲ್ಯ ದಾಯಕ
ನಾರಸಿಂಹ ನೆ ನಮಿಪೆ ಕರುಣಿಪುದೆಮಗೆ ಮಂಗಳವಾ//
(ಹರಿಕಥಾಮೃತಸಾರ).
ರುದ್ರ ದೇವರು--
ಹರಿಕಥಾಮೃತಸಾರ ದಲ್ಲಿ ಜಗನ್ನಾಥ ದಾಸರು ವರ್ಣಿಸಿದ ರುದ್ರ ದೇವರು.
ವಾಮದೇವ ವಿರಿಂಚಿತನಯ ಉ/
ಮಾ ಮನೋಹರ ಉಗ್ರ ದೂರ್ಜಟಿ/
ಸಾಮಜಾಜಿವಸನ ಭೂಷಣ ಸುಮನಸೋತ್ತಂಸ/
ಕಾಮಹರ ಕೈಲಾಸ ಮಂದಿರ
ಸೋಮ ಸೂರ್ಯಾನಲವಿಲೋಚನ
ಕಾಮಿತಪ್ರದ ಕರುಣೆಸೆಮಗೆ ಸದಾ ಸುಮಂಗಳವಾ//.
ನರಸಿಂಹ ದೇವರನ್ನು ಸ್ತೋತ್ರ ಮಾಡುವಾಗ ಹರಿದಾಸರು ಅವತಾರ ಕಾಲದ ವರ್ಣನೆ ಯೊಂದಿಗೆ 
ದೇವರು ಪ್ರಾದುರ್ಭಾವ ದಿಂದ ಕಂಭದಲ್ಲಿ ಮೂಡಿ  ಹಿರಣ್ಯಕಶಿಪು ಸಂಹಾರ, ಪ್ರಹ್ಲಾದ ನಿಗೆ ಅಭಯ ಪ್ರದಾನ ವನ್ನು ಮಾಡಿದ್ದು ವರ್ಣಿಸಿದ್ದಾರೆ.
ಶ್ರೀ ವಿಜಯದಾಸರು ತಮ್ಮ ಕೃತಿ ಯಲ್ಲಿ 
ರಂಗ ಮಾನವ ಸಿಂಗ ನಾದನು//
ರಂಗ ಮಾನವ ಸಿಂಗ ನಾಗಲು/
ಭಂಗಾರ ಗಿರಿ ಯ ಶೃಂಗಗಳಲ್ಲಾಡೆ/
ಹಿಂಗದೆ ಎಂಟು ಮಾತಂಗ ಸಪುತದ್ವೀ/
ಪಗಳು ಕಂಪಿಸಿ ವಿಗಡದಿ//.
ಎಂದು ವರ್ಣಿಸಿದ್ದಾರೆ.
ಶ್ರೀ ಭಾವೀ ಸಮೀರ ವಾದಿರಾಜರು ತಮ್ಮ ಕೃತಿ ಯಲ್ಲಿ
ರುದ್ರ ದೇವರನ್ನು ಕುರಿತು
ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯ ಗುರು ಕುಲೋತ್ತುಂಗ/
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀನೆನ್ನ
ಅನ್ಯರನರಿಯೆನೊ ಗುರುವೆಂಬೆ ನಿನ್ನ
ಇನ್ನಾದರೂ ಹರಿಯ ತೋರೊ ಮುಕ್ಕಣ್ಣ//
ಎಂದು ಸ್ತುತಿ ಮಾಡಿದ್ದಾರೆ.
ತಾರತಮ್ಯ ದಲ್ಲಿ ರುದ್ರ ದೇವರನ್ನು ಕುರಿತು ವಾದಿರಾಜರು ಬಹು ಸುಂದರ ವಾಗಿ ರುದ್ರ ದೇವರನ್ನು
ವರ್ಣನೆ ಮಾಡಿದ್ದಾರೆ.
ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿ
ಕಡು ಘೋರ ತಪಗೈಯೆ ಮನ್ಮಥನು ಬರಲು
ಕಿಡಿಗಣ್ಣಿನಲಿ ಅವನ ಭಸ್ಮವನ್ನು ಮಾಡಿದಿ
ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ//.
ಮನೋ ನಿಯಾಮಕನಾದ ರುದ್ರ ದೇವರನ್ನು 
ತೈಲ ಧಾರೆಯಂತೆ ಮನಸು ಕೊಡು ಹರೀಯಲ್ಲಿ
ಎಂದು ವಿಜಯದಾಸರು ಸ್ತುತಿಸಿ ದಂತೆ ಸದಾ ಶ್ರೀ ಹರಿ
 ಯ ಧ್ಯಾನ ವನ್ನು ಸರ್ವರಿಗೂ ನೀಡಿ ಮಂಗಳವನ್ನು ಮಾಡಲಿ.
ರುದ್ರಾಂತರ್ಗತ ಭಾರತೀ ರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ//
******




 *ಮಣಿಕರನ್ * 
ಅತ್ಯಂತ ಶೀತ ಪ್ರದೇಶ ಎಂದು ಗುರುತಿಸಿಕೊಂಡಿರುವ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮಣಿಕರನ್ ಎಂಬ ಪ್ರದೇಶದಲ್ಲಿ ಈ ಬಿಸಿ ನೀರಿನ ಬುಗ್ಗೆ ಕಂಡು ಬರುತ್ತದೆ.

 ಇದು ಪಾರ್ವತಿ ನದಿಯ ಎಡದಂಡೆಯಾಗಿದ್ದು, ಕಣಿವೆಯ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಬಿಸಿನೀರಿನ ಬುಗ್ಗೆ ಭೂಮಿ ಅಡಿಯಿಂದ ಇಲ್ಲಿ ಉಕ್ಕಿ ಬರುತ್ತದೆ.

ಪೌರಾಣಿಕ ಹಿನ್ನೆಲೆ ಪ್ರಕಾರ ಶಿವ ಪಾರ್ವತಿಯವರು ಕೈಲಾಸದಲ್ಲಿ ಕುಳಿತು ಬೇಸರವಾದಾಗ ಪರ್ವತದ ತಪ್ಪಲಿಗೆ ಇಳಿದು ಬಂದಿದ್ದರಂತೆ. ಈ ಪ್ರದೇಶ ತಲುಪಿದಾಗ ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು ತುಂಬಾ ಸಮಯ ಇಲ್ಲಿಯೇ ಕಳೆಯುತ್ತಾರೆ. ಒಮ್ಮೆ ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯ ಹೊಂಡಕ್ಕೆ ಬೀಳುತ್ತದೆ. ಅದನ್ನು ನೀರಿನಿಂದ ಎತ್ತಲು ಈಶ್ವರನು ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅವರು ಎಷ್ಟು ಹುಡುಕಿದರೂ ಆ ಮಣಿ ಸಿಗುವುದಿಲ್ಲ. ಆಗ ಶಿವ ಕೋಪಗೊಂಡು ತಾಂಡವ ನೃತ್ಯ ಮಾಡುತ್ತಾ ಮೂರನೆಯ ಕಣ್ಣು ತೆರೆಯುವಾಗ ಗುಡುಗು ಮಿಂಚುಗಳು ಸಿಡಿದು ಜಗತ್ತು ಅಲ್ಲೋಲ ಕಲ್ಲೋಲವಾಗುತ್ತದೆ.

ಅಗ ದೇವತೆಗಳು ತಾಂಡವರೂಪಿ ಶಿವನನ್ನು ಮರಳಿ ವಾಸ್ತವಕ್ಕೆ ತರಲು ಶೇಷನಾಗನನ್ನು ಕೋರುತ್ತಾರೆ. ಶೇಷನಾಗ ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಆಗ ನೀರು ಮೇಲಕ್ಕೆ ಚಿಮ್ಮುತ್ತದೆ ಅದರಲ್ಲಿ ಪಾರ್ವತಿ ದೇವಿ ಕಳೆದುಕೊಂಡ ಮಣಿ ಸಿಗುತ್ತದೆ!! ಇದನ್ನು ಕಂಡು ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ ಎಂಬುದು ಐತಿಹ್ಯ. 

ಶಿವನ ಮಂದಿರದ ಪಕ್ಕದಲ್ಲೇ ಇರುವ ಗುರುದ್ವಾರ ಸಿಖ್ಖರ ಪವಿತ್ರ ಕ್ಷೇತ್ರವೂ ಹೌದು. ಇಲ್ಲಿ ಯಾರು ಎಷ್ಟು ಹೊತ್ತಿಗೆ ಬಂದರೂ ಊಟ ಸಿದ್ಧ ಇರುತ್ತದೆ. ಅಕ್ಕಿ, ಬೇಳೆ ಮತ್ತು ಕಡಲೆಕಾಳನ್ನು ಶಿವನ ಸಾನಿಧ್ಯವಿರುವ ಪಕ್ಕದಲ್ಲಿ ಪ್ರಾಕೃತಿಕವಾಗಿ ಭೂಮಿ ಅಡಿಯಿಂದ ಉಕ್ಕಿ ಬರುವ ಬಿಸಿನೀರಿನಲ್ಲೇ ಬೇಯಿಸುತ್ತಾರೆ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಬಟ್ಟೆಯನ್ನು ಕಟ್ಟಿ ಬಿಸಿನೀರಿನ ಕುಂಡದೊಳಗೆ ಇಳಿಸುತ್ತಾರೆ. 20 ನಿಮಿಷದೊಳಗೆ ಅಕ್ಕಿ ಊಟಕ್ಕೆ ಸಿದ್ಧವಾಗುತ್ತದೆ.
ಅದರ ವಿಡಿಯೋ ನೋಡಿ 👇👇






year 2021 shivaratri in Mysuru

growing shiva linga in Khajuraho


*****

by ಆಚಾರ್ಯ ನಾಗರಾಜು ಹಾವೇರಿ
" ಮಹಾ ಶಿವರಾತ್ರಿ - 1 "
ದಿನಾಂಕ : 11.03.2021 ಗುರುವಾರ " ಮಹಾ ಶಿವರಾತ್ರಿ "
ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಕೃತ ಹರಿಕಥಾಮೃತಸಾರದನ್ವಯ.... 
" ಶ್ರೀ ಹರಿಯ ಮೊಮ್ಮಕ್ಕಳೂ, ಶ್ರೀ ಬ್ರಹ್ಮದೇವರ ಮಕ್ಕಳೂ, ಪರವ ವೈಷ್ಣವೋತ್ತಮರೂ ಆದ ಶ್ರೀ ಮಹಾರುದ್ರದೇವರು "
ವಾಮದೇವ ವಿರಿಂಚಿತನಯ । ಉ ।
ಮಾ ಮನೋಹರ ಉಗ್ರ ಧೂರ್ಜಟಿ ।
ಸಾಮಜಾಜಿನ ವಾಸನಭೂಷಣ -
ಸುಮನಸೋತ್ತಂಸ ।।
ಕಾಮಹರ ಕೈಲಾಸ ಮಂದಿರ ।
ಸೋಮಸೂರ್ಯನಲವಿಲೋಚನ ।
ಕಾಮಿತಪ್ರದ ಕರುಣಿಸೆಮಗೆ -
ಸದಾ ಸುಮಂಗಳವಾ ।। ಹ ಸಾ - 01/10 ।।
" ವಾಮದೇವ "
ಮನೋಹರನೂ - ಕ್ರೀಡಾ ಗುಣವಂತನೂ - ಹೊಳೆಯುವವನೂ 
( ತನ್ನ ವಾಮ ಪಾರ್ಶ್ವದಲ್ಲಿರುವ ಭಗವಂತನನ್ನು ಭಕ್ತಿಯಿಂದ ಸರ್ವದಾ ಪೂಜಿಸುವುದರಿಂದ " ವಾಮದೇವ " ಎಂದು ಕರೆಯಲ್ಪಡುವವರು )
" ವಾಮನಃ ದೇವಃ ಯಸ್ಯ ಸಃ " 
ಎಂಬ ವ್ಯುತ್ಪತ್ತಿಯಿಂದಲೂ " ವಾಮದೇವ " ಎಂಬ ಹೆಸರು ಸಾರ್ಥಕ. 
ಶ್ರೀ ಇಂದ್ರಾರಾಧಿತನಾದ ಶ್ರೀ ವಾಮನ ರೂಪಿ ಶ್ರೀ ಹರಿ ಪರಮಾತ್ಮನನ್ನು ಶ್ರೀ ರುದ್ರದೇವರು ಆರಾಧಿಸುವುದರಿಂದ ಆ ಹೆಸರು ಸಾರ್ಥಕವಾಗಿದೆ.
" ಶ್ರೀ ಗರುಡ ಪುರಾಣದ - ಬ್ರಹ್ಮಕಾಂಡ " ದಲ್ಲಿ..... 
ಈಶಾನ್ಯಕೋಣೇ ಸಂಸ್ಥಿತೋ ಯಸ್ತು ರುದ್ರೋ 
ಹ್ಯ ವಾಪ ದೇವೋ ವಾಮದೇವೇತಿ ಸಂಜ್ಞಾಮ್ । 
ಸ್ವ ವಾಮಭಾಗೇ ಸಂಸ್ಥಿತಂ ವಾಸುದೇವಂ 
ಸ್ವಯೋಗ್ಯಭಕ್ತ್ಯಾ ಪೂಜತೇ ಸರ್ವದೇವ ।
ಅತೋ ರುದ್ರೋ ವಾಮದೇವೇತಿ 
ಸಂಜ್ಞಾ೦ಹ್ಯ ವ್ಯಾಪ 
ಜ್ಯೇಷ್ಠತ್ವಮಥೋತ್ತಮತ್ವಮ್ ।। 
ಶ್ರೀ ರುದ್ರದೇವರು ಪರಮ ಸುಂದರ ಮೂರ್ತಿಗಳು. 
ಶ್ರೀ ಶುಕ ರೂಪದ ಶ್ರೀ ರುದ್ರದೇವರನ್ನು ಶ್ರೀಮದ್ಭಾಗವತ ಮಹಾ ಪುರಾಣದಲ್ಲಿ.... 
ಶ್ಯಾಮಂ ಸದಾsವೀಚ್ಯವಯೋ೦ಗ 
ಲಕ್ಷ್ಮ್ಯಾ ಸ್ತ್ರೀಣಾಂ 
ಮನೋಜ್ಞ೦ ರುಚಿರಸ್ಥಿತೇನ ।।      
ವಿರಿಂಚಿತನಯ = ಶ್ರೀ ಚತುರ್ಮುಖ ಬ್ರಹ್ಮದೇವರ ಪುತ್ರನೇ 
" ಉಮಾ ಮನೋಹರ "
ಶ್ರೀ  ಪಾರ್ವತೀದೇವಿಯರ ಮನಸ್ಸನ್ನು ಹರಣ ಮಾಡುವವನೇ 
" ಉಗ್ರ " ಅಂದರೆ.... 
ಉಂ = ಸಂಸಾರವನ್ನೂ 
ಗ್ರ = ನಾಶ ಗೈಸುವವನೇ 
( ದುಷ್ಟರಾದ ಶತ್ರುಗಳಿಗೆ ಉಗ್ರ ಸ್ವರೂಪನೂ, ಪ್ರಳಯ ಕಾಲದಲ್ಲಿ ಉಗ್ರ ರೂಪದಿಂದ ಪ್ರಪಂಚವನ್ನು ದಹಿಸುವುದರಿಂದ " ಉಗ್ರ "  ನೆಂದು ಕರೆಯಲ್ಪಡುವವರು )
 ಧೂರ್ಜಟಿ = ಹೊಗೆಯಂತಿರುವಜಡೆಯನ್ನು ಧರಿಸಿರುವವನೇ 
" ಸಾಮಜಾಜಿನ ವಸನಭೂಷಣ "
ಆನೆಯ ಚರ್ಮವೆಂಬ ವಸ್ತ್ರ ಭೂಷಣದಿಂದ ಅಲಂಕೃತನೇ 
ಸಾಮಜ = ಆನೆಯ 
ಅಜಿನ = ಚರ್ಮವೆಂಬ 
ವಸನ = ವಸ್ತ್ರದಿಂದ 
ಭೂಷಣ = ಭೂಷಿತರಾಗಿರುವರು
ಸುಮನಸೋತ್ತಂಸ = ಇಂದ್ರಾದಿ ದೇವತೆಗಳಿಗಿಂತ ಉತ್ತಮನೇ 
" ಕಾಮಹರ "
ಮನ್ಮಥನನ್ನು ಸಂಹಾರಗೈದವನೇ ( ಮನ್ಮಥನನ್ನು ದಹಿಸಿದವರು )
ಕೈಲಾಸ ಮಂದಿರ = ಕೈಲಾಸವೇ ಮನೆಯಾಗಿ ಉಳ್ಳವನೇ 
ಸೋಮಸೂರ್ಯನಲ = ಚಂದ್ರ, ಸೂರ್ಯ, ಅಗ್ನಿಗಳಾಗಿ 
ವಿಲೋಚನ = ಕಣ್ಣುಗಳಾಗಿ ಉಳ್ಳವನೇ 
ಕಾಮಿತಪ್ರದ = ಇಷ್ಟಾರ್ಥಪ್ರದನೇ 
ಎಮಗೆ = ನಮಗೆ 
ಸದಾ = ಅನವರತ 
ಸುಮಂಗಳವಾ = ಉತ್ತಮವಾದ ಮಂಗಳವನ್ನು 
ಕರುಣಿಸು = ಕರುಣೆಯಿಂದ ದಯಪಾಲಿಸು!!
ಪ್ರಮಾಣ : 
ಏಕಾಕ್ಷರ ಕೋಶದಲ್ಲಿ.... 
" ಉ " ಮೃತ್ಯುರಿತಿ ಸಂಪ್ರೋಕ್ತೋ 
ಮೃತ್ಯು: ಸಂಸಾರ ಈರಿತಃ ।।
ಶ್ರೀಮದ್ಭಾಗವತದಲ್ಲಿ.... 
ವೈಷ್ಣವಾನಾ೦ ಯಥಾ ಶಂಭು: ।।
ಹರಿವಂಶದಲ್ಲಿ.... 
" ಉ " " ಮಾ " ಇತಿ ನಿಷೇಧ೦ತೀ 
ಮಾತೃ ಸ್ನೇಹೇನ ದುಃಖಿತಾ ।
ಸಾ ತಥೋಕ್ತಾ ತುಯಾ 
ಮಾತ್ರಾ ದೇವೀ ದಶ್ಚರಚಾರಿಣೀ ।।
ಉಮೇತ್ಯೇವಾಭವತ್ ಖ್ಯಾತಾ 
ತ್ರಿಷು ಲೋಕೇಷು ಸುಂದರೀ ।।
ಶ್ರೀಮದ್ಭಾಗವತದಲ್ಲಿ.... 
ಯದರೋಧೀ: ಸುರಶ್ರೇಷ್ಠ 
ಸೋದ್ವೇಗ ಇವ ಬಾಲಕಃ ।
ತತಸ್ತ್ವಾಮಭಿಧಾಸ್ಯ೦ತಿ 
ನಾಮ್ನಾ ರುದ್ರ ಇತಿ ಪ್ರಜಾ: ।।
*****
" ಮಹಾ ಶಿವರಾತ್ರಿ - 2 "
ಕೃತ್ತಿವಾಸನೆ ಹಿಂದೆ । ನೀನಾ ।
ಲ್ವತ್ತು ಕಲ್ಪ ಸಮೀರನಲಿ । ಶಿ ।
ಷ್ಯತ್ವ ವಹಿಸ್ಯಖಿಳಾಗಮಾರ್ಥ-
ಗಳೋದಿ ಜಲಧಿಯೊಳು ।।
ಹತ್ತು ಕಲ್ಪದಿ ತಪವಗೈದಾ ।
ದಿತ್ಯರೊಳಗುತ್ತಮನೆನಿಸಿ । ಪುರು ।
ಷೋತ್ತಮನ ಪರಿಯಂಕ 
ಪದ ವೈದಿದಿಯೋ 
ಮಹದೇವ ।। ಹ ಸಾ - 01/11 ||
ಹತ್ತು ಕಲ್ಪಗಳ ಕಾಲ ಲವಣ ಸಮುದ್ರದಲ್ಲಿ ಉತ್ತಮ ಶ್ಲೋಕನಾದ ಶ್ರೀ ಹರಿಯನ್ನು ಕುರಿತು ತಪಸ್ಸು ಮಾಡಿ ಒಲಿಸಿ, ಕೃತಕೃತ್ಯನಾಗಿ ಆತನ ನಿಯಮದಂತೆ ಕುಶಾಸ್ತ್ರಗಳನ್ನು ವಿಸ್ತರಿಸಿ, ದುರಾತ್ಮರನ್ನು ಮೋಹನ ಗೊಳಿಸಿ, ನಿತ್ಯ ನರಕಕ್ಕೆ ಅರ್ಹರನ್ನಾಗಿಸಿದ ಕೃತ್ತಿವಾಸನಿಗೆ, ಆತನು ಶೇಷ ಪದಾರ್ಹನು ಎಂದು ತಿಳಿದು ನಮಸ್ಕರಿಸುವೆನು. 
ಶ್ರೀ ರುದ್ರದೇವರು ಶ್ರೀ ಮಹಾ ವಿಷ್ಣುವಿನ ಅಪ್ಪಣೆಯಂತೆ " ಪಾಶುಪತ ಶಾಸ್ತ್ರ " ವನ್ನು ಪ್ರಸಾರ ಮಾಡಿ ಅಸುರರನ್ನು ಮೋಹಿಸಿದ ವಿವರ ಪದ್ಮಪುರಾಣ ಮತ್ತು ವರಾಹ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. 
ವರಾಹ ಪುರಾಣದಲ್ಲಿ...... 
ತ್ವಂ ಚ ರುದ್ರ ಮಹಾಬಾಹೋ 
ಮೋಹ ಶಾಸ್ತ್ರಾಣಿ ಕಾರಯ ।
ಆತಥ್ಯಾನಿ ವಿತಥ್ಯಾನಿ 
ದರ್ಶಯಸ್ವ ಮಹಾಭುಜ ।
ಪ್ರಕಾಶಂ ಕುರು ಚಾತ್ಮಾನಮ 
ಪ್ರಕಾಶಂ ಚ ಮಾಂ ಕುರು ।।
ಕೃತ್ತಿವಾಸನೆ = ವ್ಯಾಘ್ರ ಚರ್ಮ ಧರಿಸಿದವನೇ 
ಅಮರಕೋಶದಲ್ಲಿ.... 
ಅಜಿನಂ ಚರ್ಮ ಕೃತ್ತಿಸ್ತ್ರೀ ।।
ಹಿಂದೆ ನೀ = ಶ್ರೀ ರುದ್ರ ಪದವಿಗೆ ಬರವುದಕ್ಕೂ ಪೂರ್ವದಲ್ಲಿ ನೀವು 
" ನಾಲ್ವತ್ತು ಕಲ್ಪ "
ಶ್ರೀ ಚತುರ್ಮುಖ ಬ್ರಹದೇವರ 40 ದಿನ ಕಲ್ಪದ ವರೆಗೂ 
ಸಮೀರನಲಿ = ಶ್ರೀ ವಾಯುದೇವರಲ್ಲಿ 
ಶಿಷ್ಯತ್ವ ವಹಿಸಿ = ಶಿಷ್ಯರಾಗಿ 
ಅಖಿಳಾಗಮಾರ್ಥಗಳೋದಿ = ಸಕಲ ವೇದಾದಿ ದ್ವೈತ ಶಾಸ್ತ್ರಗಳನ್ನು ಓದಿ 
ಜಲಧಿಯೊಳು = ಸಮುದ್ರದಲ್ಲಿ 
ಹತ್ತು ಕಲ್ಪದಿ = ಶ್ರೀ ಚತುರ್ಮುಖ ಬ್ರಹದೇವರ ೧೦ ದಿನ ಕಲ್ಪದ ವರೆಗೂ 
ಮಾಡಿ ತಪವಗೈದು = ತಪಸ್ಸು ಮಾಡಿ 
ಆದಿತ್ಯರೊಳು = ಅದಿತಿ ಮಕ್ಕಳಾದ ದೇವತೆಗಳಲ್ಲಿ 
ಉತ್ತಮನೆನಿಸಿ = ಶ್ರೇಷ್ಠರೆಂದು ಪ್ರಸಿದ್ಧರಾಗಿ 
" ಪುರುಷೋತ್ತಮನ "
ಕ್ಷರಾಕ್ಷರ ಪುರುಷರಲ್ಲಿ ಶ್ರೇಷ್ಠನಾದ ಶ್ರೀಮನ್ನಾರಾಯಣನ 
" ಪರಿಯಂಕ ಪದ "
ಶ್ರೀಮನ್ನಾರಾಯಣನಿಗೆ ಹಾಸಿಗೆಯಾದ ಶ್ರೀ ಶೇಷದೇವರ ಪದವಿಯನ್ನು 
ಮಹಾದೇವ = ಶ್ರೀ ರುದ್ರದೇವರೇ 
ವೈದಿದಿಯೋ = ನೀವು ಹೊಂದಿರುವಿರಿ
ಪ್ರಮಾಣ : -
ಶ್ರೀಮದಾಚಾರ್ಯರು ಶ್ರೀಮದ್ಭಾಗವತ ತಾತ್ಪರ್ಯದಲ್ಲಿ..... 
तथैव चत्वारिंशदभिः 
पदम् शैवंच जन्मभिः ।।
ಅನುವ್ಯಾಖ್ಯಾನದಲ್ಲಿ... 
दशकल्पं तपशचीर्णं 
*****
" ಮಹಾ ಶಿವರಾತ್ರಿ - 3 "
" ಶ್ರೀ ರುದ್ರದೇವರ ಕುರಿತು ಮತ್ತಷ್ಟು ಮಾಹಿತಿ "
ಹರಿ ಸಮೀರಾವೇಶ ನರ । ಸಂ ।
ಕರುಷಣಾವೇಶಯುತ ಲಕ್ಷ್ಮಣ ।
ಪರಮ ಪುರುಷನ ಶುಕ್ಲ-
ಕೇಶಾವೇಶ ಬಲರಾಮ ।।
ಹರ ಸದಾಶಿವ ತಪ ಅಹಂಕೃತು ।
ಮರುತಯುಕ್ತ ಶುಕೋರ್ಧ್ವಪಟ । ತ ।
ತ್ಪುರುಷ ಜೈಗೀಷರ್ವ 
ದ್ರೌಣೀ ವ್ಯಾಧ ದುರ್ವಾಸ ।। 21/11 ।। 
1. ಶ್ರೀ ರುದ್ರದೇವರು 5ನೇ ಕಕ್ಷಾಪನ್ನರು. 
2. ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರು ಸಮರು. 
ಗರುಡ ಶೇಷ ಶಶಾಂಕದಳ । ಶೇ ।
ಖರರು ತಮ್ಮೊಳು ಸಮರು । ಭಾರತೀ ।
ಸರಸಿಜಾಸನ ಪತ್ನಿಗಧಮರು 
ನೂರು ಗುಣದಿಂದ ।।
ಹರಿ ಮಡದಿ ಜಾಂಬವತಿಯೊಳು । ಶ್ರೀ ।
ತರುಣಿ ಆವೇಶವಿಹದೆಂದಿಗು ।
ಕೊರತೆಯೆನಿಪರು ಗರುಡ 
ಶೇಷರಿಗೈವರೈದುಗುಣ ।। 21/12  ।।  
3. ಸ್ವರೂಪ ಯೋಗ್ಯತೆಯಿಂದ ಶ್ರೀ ರುದ್ರದೇವರು, ಶ್ರೀ ಶೇಷದೇವರಿಂದ ಸಮರಾದರೂ, ಪದ ನಿಮಿತ್ತವಾದ ಅಲ್ಪ ನ್ಯೂನತೆಯುಳ್ಳವರು. 
ಶ್ರೀ ರುದ್ರದೇವರು ಶ್ರೀ ಶೇಷದೇವರ ಪದವಿಯಿಂದಲೇ ಮುಕ್ತರಾಗುವರು. 
ನಂದಿವಾಹನ ನಳಿನಿಧರ । ಮೌ ।
ಳೀ೦ದುಶೇಖರ ಶಿವ ತ್ರಯಂಬಕ ।
ಅಂಧಕಾಸುರ ಮಥನಗಜ 
ಶಾರ್ದೂಲ ಚರ್ಮಧರ ।।
ಮಂದಜಾಸನ ತನಯ । ತ್ರಿಜಗ ।
ದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ ।
ವಂದಿಸುವೆನನವರತ ಪಾಲಿಸು 
ಪಾರ್ವತೀ ರಮಣ ।। 31/10 ।।
ಫಣಿಪಾಣಾಂಚಿತ ಮಕುಟ ರಂಜಿತ ।
ಕ್ವಣಿತಡಮರತ್ರಿಶೂಲ ಶಿಖಿದಿನ ।
ಮಣಿನಿಶಾಕರ ನೇತ್ರ 
ಪರಮ ಪವಿತ್ರ ಸುಚರಿತ್ರ ।।
ಪ್ರಣತ ಕಾಮದ 
ಪ್ರಮಥ ಸುರಮುನಿ ।
ಗಣ ಸುಪೂಜಿತ 
ಚರಣಯುಗ । ರಾ ।
ವಣ ಮದ ವಿಭಂಜನ ಸತತ 
ಮಾಂ ಪಾಹಿ ಮಹಾದೇವ ।। 32/11 ।।
ನಾಗಗಳ ಹೆಡೆಗಳಿಂದ ಶೋಭಿಸುವ ಕಿರೀಟದಿಂದ ಭೂಷಿತನೇ !
ಧನಿಗೈಯ್ಯುತ್ತಿರುವಡಮರುಗವನ್ನು  ಹಿಡಿದವನೇ ।
ತ್ರಿಶೂಲ ಪಾಣಿಯೇ - ಅಗ್ನಿ, ಸೂರ್ಯ ಮತ್ತು ಚಂದ್ರನನ್ನು ಕಣ್ಣುಗಳಲ್ಲಿ ಹೊಂದಿರುವವನೇ !
ಪರಮ ಪವಿತ್ರನಾದವನೇ - ಉತ್ತಮ ನಡತೆಯುಳ್ಳವನನೇ !
ಭಕ್ತಿಯಿಂದ ನಮಿಸುವವರಿಗೆ ಇಷ್ಟಾರ್ಥಗಳನ್ನು ಪೂರೈಸುವವನೇ !
ಪ್ರಮಥ ಗಣದಿಂದಲೂ - ಸುರಮುನಿಗಳ ಗಣದಿಂದಲೂ ಬಹಳವಾಗಿ ಪೂಜಿತವಾದ ಎರಡು ಪಾದಗಳನ್ನು ಹೊಂದಿರುವನೇ !
ರಾವಣನ ಗರ್ವವನ್ನು ನಾಶ ಮಾಡಿದವನೇ !ಮಹಾದೇವನೇ ! ನೀನು - ನನ್ನನ್ನು ಸದಾ ಪಾಲಿಸು !!    
4. ಮಹಾದೇವ - ರುದ್ರ - ಶಿವ - ಪರಮೇಶ್ವರ ಈ ಮೊದಲಾದ ನಾಮಗಳು ಅಹಂಕಾರ ತತ್ತ್ವದ ಅಭಿಮಾನಿ ದೇವತೆಯ ನಾಮಗಳು. 
5. ಅಹಂಕಾರ ತತ್ತ್ವವು ವೈಕಾರಿಕ, ತೈಜಸ, ತಾಮಸಗಳೆಂಬ ಮೂರು ಪ್ರಭೇದಗಳುಳ್ಳದ್ದು. 
ಆ) ವೈಕಾರಿಕದಿನ ಮನಸ್ಸು ಮತ್ತು ತತ್ತ್ವಾಭಿಮಾನಿ ದೇವತೆಗಳೂ ( ಇಂದ್ರಾದಿ ದೇವತೆಗಳ ಸೂಕ್ಷ್ಮ ದೇಹಗಳೂ;
ಆ) ತೈಜಸದಿಂದ ಜ್ಞಾನ ಕರ್ಮೇಂದ್ರಿಯಗಳೂ;
ಇ) ತಾಮಸದಿಂದ ತನ್ಮಾತ್ರಗಳೂ, ಪಂಚ ಭೂತಗಳೂ ಉತ್ಪನ್ನವಾಗಿವೆ. 
ಹೀಗಿರುವುದರಿಂದ ವೈಕಾರಿಕದಿಂದ ಹುಟ್ಟಿದ ಮನಸ್ತತ್ತ್ವಕ್ಕೂ ಶ್ರೀ ರುದ್ರದೇವರೇ ಅಭಿಮಾನಿಗಳೂ - ನಿಯಾಮಕರು. 
ಈ) ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸಬೇಕೆಂಬ ಇಚ್ಛೆಯೂ, ತಜ್ಜನ್ಮ ಸುಖವೇ ಪುರುಷಾರ್ಥವೆಂದು ಭ್ರಮಿಸಿ, ವಿಷಯ ಭೋಗಗಳಲ್ಲಿ ಆಸಕ್ತರಾಗುವುದು " ರಾಗ " ವೆನಿಸುತ್ತದೆ. 
ರಾಗವಿಲ್ಲದಿರುವುದೇ ವೈರಾಗ್ಯವು. 
ವೈರಾಗ್ಯಕ್ಕೆ ಮನಸ್ಸೇ ಆಶ್ರಯ ಸ್ಥಾನವು. 
ಮನೋ ನಿಯಾಮಕರಾದ ಶ್ರೀ ಮಹಾರುದ್ರದೇವರೇ ರಾಗವನ್ನು ಹೊರ ಹೊರಡಿಸಿ ವೈರಾಗ್ಯವನ್ನು ಕೊಡುವವರು. 
ಆದ್ದರಿಂದ ಶ್ರೀ ಮಹಾರುದ್ರದೇವರೇ ವೈರಾಗ್ಯವನ್ನು ಕರುಣಿಸಬೇಕು. 
ಅದಕ್ಕಾಗಿ ಶ್ರೀ ಮಹಾರುದ್ರದೇವರನ್ನೇ ಪ್ರಾರ್ಥಿಸಬೇಕು. 
6. ಶ್ರೀ ರುದ್ರದೇವರ ಸೃಷ್ಟಿ " ಹರಿವಂಶ " ದಲ್ಲಿ..... 
ತತೋsಸೃಜತ್ ಪುನರ್ಬ್ರಹ್ಮಾ 
ರುದ್ರಂ ರೋಷಾತ್ ಸಂಭವಮ್ ।
ಸನತ್ಕುಮಾರಂ ಚ ವಿಭು೦ 
ಪೂರ್ವೇಷಾಮಪಿ ಪೂರ್ವಜಮ್ ।। 32 ।।
ಸಪ್ತೈತೇ ಜನಯಂತಿ ಸ್ಮ 
ಪ್ರಜಾ ರುದ್ರಶ್ಚ ಭಾರತ ।
ಸಂಧ: ಸನತ್ಕುಮಾರಶ್ಚ ತೇಜ: 
ಸಂಕ್ಷಿಪ್ಯ ತಿಷ್ಠತ: ।। 33 ।।
ಮುಂದೆ ಶ್ರೀ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ಸನಕಾದಿ ಪುತ್ರರನ್ನು ಸೃಷ್ಟಿಸಿದರು. 
" ನೀವೆಲ್ಲರೂ ಪ್ರಜಾ ಸೃಷ್ಟಿಯಲ್ಲಿ ತೊಡಗಿರಿ " 
ಎಂದು ಆಜ್ಞಾಪಿಸಿದರು. 
ಅವರು ಪ್ರವೃತ್ತ ಧರ್ಮದಲ್ಲಿ ತೊಡಗಲು ಇಚ್ಛಿಸಲಿಲ್ಲ. 
ಶ್ರೀ ಹರಿ ಪರಾಯಣರಾದ ಅವರು ಪ್ರಜಾ ಸೃಷ್ಟಿ ಕಾರ್ಯದಲ್ಲಿ ಪ್ರವೃತ್ತರಾಗಲಿಲ್ಲ. 
ಮಕ್ಕಳು ತಂದೆಯ ಆಜ್ಞೆಯನ್ನು ಪಾಲಿಸದ ಕಾರಣ ವಿಧಿಯು ಕೋಪದಿಂದ ಕಿಡಿಯಾದರು. 
ಹೀಗೆ ಕೋಪಗೊಂಡ ಶ್ರೀ ಬ್ರಹ್ಮದೇವರ ಭ್ರೂ ಮಧ್ಯದಿಂದ ಒಬ್ಬ ಬಾಲಕನು  ಇವರು ಕಾಲಾಗ್ನಿಯಂತೆ ಪ್ರಕಾಶಿಸುತ್ತಿದ್ದರು. 
ಪರಮ ಕೋಪಿಷ್ಟರಾಗಿದ್ದರು. 
ಕೋಪದಿಂದಾಗಿ ಅಳಲು ಪ್ರಾರಂಭಿಸಿದರು. 
ಇದಕ್ಕಾಗಿ " ರುದ್ರ " ರೆಂದು ಕರೆಯಲ್ಪಟ್ಟರು.
7. ಅವತಾರಗಳು :-
ದಕ್ಷ ಯಜ್ಞ ವಿಭಂಜನನೆ । ವಿರು ।
ಪಾಕ್ಷ ವೈರಾಗ್ಯಾಧಿಪತಿ । ಸಂ ।
ರಕ್ಷಿಸೆಮ್ಮನು ಸರ್ವ 
ಕಾಲದಿ ಸನ್ಮುದವನಿತ್ತು ।।
ಯಕ್ಷಪತಿ ಸಖ ಯಜಿಪರಿಗೆ । ಸುರ ।
ವೃಕ್ಷ ವೃಕದನುಜಾರಿ । ಲೋಕಾ ।
ಧ್ಯಕ್ಷ ಶುಕ ದೂರ್ವಾಸ 
ಜೈಗೀಷವ್ಯ ಸಂತೈಸು ।। 32/ 12 ।।
ದಕ್ಷ ಯಜ್ಞವನ್ನು ವಿಶೇಷವಾಗಿ ಹಾಳು ಮಾಡಿದವನೇ !
ವಿರೂಪವೆನ್ನಿಸುವಂತಹ ಕಣ್ಣುಗಳನ್ನು ಹೊಂದಿದವನೇ !
ವೈರಾಗ್ಯದಭಿಮಾನಿ ದೇವತೆಯೇ !
ಸರ್ವ ಕಾಲದಲ್ಲೂ ಉತ್ತಮ ಆನಂದವನ್ನಿತ್ತು ರಕ್ಷಿಸು !
ಯಕ್ಷ ಪತಿಯಾದ ಕುಬೇರನ ಮಿತ್ರನೇ !
ಆರಾಧಿಸುವವರಿಗೆ ಕಲ್ಪವೃಕ್ಷನೇ !
ವೃಕಾಸುರ ಎಂಬ ಅಸುರನಿಗೆ ಶತ್ರುವಾದವನೇ !
ಲೋಕಗಳಿಗೆ ಒಡೆಯನೇ !
ಶುಕ - ದೂರ್ವಾಸ - ಜೈಗೀಷವ್ಯನೇ ನಮ್ಮಸು ಸಂತೋಷ ಪಡಿಸು !!
ತಪ - ಶುಕ - ದುರ್ವಾಸ - ಅಶ್ವತ್ಥಾಮ - ವಾಮದೇವ - ಅಘೋರ - ಸದ್ಯೋಜಾತ - ಔರ್ವ ಇವು 8 ಪ್ರಸಿದ್ಧ ಅವತಾರಗಳು. 
ಸದಾಶಿವ - ಊರ್ಧ್ವರೇತ - ಲಂಪಟ - ಜೈಗೀಷವ್ಯಗಳೆಂಬ ರೂಪಗಳೂ ಸೇರಿ 12 ಎಂದು ಹೇಳಲಾಗಿದೆ.  
8. ಕಪಾಲ, ರುಂಡಮಾಲಗಳುಳ್ಳವನು, ಸ್ಮಶಾನವಾಸಿಯೂ ಆದ್ದರಿಂದ ಅಮಂಗಳನು ಎಂದು ತಿಳಿಯದಿರಲು " ಶಿವ " ಎಂದು ಕರೆಯಲ್ಪಡುವವರು. 
9. ೨೮ ಲಕ್ಷಣಗಳಿಂದ ಶೋಭಿತರು. 
ಹತ್ತು ಕಲ್ಪಾದಿ ಲವಣ ಜಲಧಿಯೊ _ ।
ಳುತ್ತಮ ಶ್ಲೋಕನ ಒಲಿಸಿ । ಕೃತ ।
ಕೃತ್ಯನಾಗಿ ಜಗತ್ಪತಿಯ 
ನೇಮದಿ ಕುಶಾಸ್ತ್ರಗಳ ।।
ಬಿತ್ತರಿಸಿ ಮೋಹಿಸಿ ದುರಾತ್ಮರ ।
ನಿತ್ಯ ನಿರಯ ನಿವಾಸರೆನಿಸಿದ ।
ಕೃತ್ತಿವಾಸಗೆ ನಮಿಪೆ ಶೇಷ 
ಪದಾರ್ಹನಹುದೆಂದು ।। 32/13 ।।
ಹತ್ತು ಕಲ್ಪಗಳ ಕಾಲ ಲವಣ ಸಮುದ್ರದಲ್ಲಿ ಉತ್ತಮ ಶ್ಲೋಕನಾದ ಶ್ರೀ ಹರಿ ಪರಮಾತ್ಮನನ್ನು ಒಲಿಸಿ - ಕೃತಕೃತ್ಯನಾಗಿ ಆತನ ನಿಯಮದಂತೆ ಕುಶಾಸ್ತ್ರಗಳನ್ನು ವಿಸ್ತರಿಸಿ - ದುರಾತ್ಮರನ್ನು ಮೋಹಗೊಳಿಸಿ - ನಿತ್ಯ ನರಕಕ್ಕೆ ಅರ್ಹರನ್ನಾಗಿಸಿದ ಕೃತ್ತಿವಾಸನಿಗೆ - ಆತನು ಶೇಷ ಪದಕ್ಕೆ ಅರ್ಹನೆಂದು ತಿಳಿದು ನಮಸ್ಕರಿಸುತ್ತೇನೆ !
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
*****
" ಮಹಾ ಶಿವರಾತ್ರಿ - 4 "
ಕಂಡೆ ಕರುಣಾನಿಧಿಯಾ । 
ಗಂಗೆಯಾ ।
ಮಂಡೆಯೋಳಿಟ್ಟ -
ಧೊರಿಯಾ ಹರನಾ ।
ರುಂಡಮಾಲಿ ಸಿರಿಯಾ-
ನೊಸಲೊಳು ।
ಕೆಂಡಗಣ್ಣಿಹ 
ಬಗೆಯಾ ಹರನಾ ।।
ಜಗತ್ತಿನ ಸೃಷ್ಠಿ - ಪಾಲನೆ - ಸಂಹಾರ ಯೆಂಬ ಮೂರು ಕಾರ್ಯಗಳಿಂದ ಜಗತ್ತಿನಲ್ಲಿ ಮಾನ್ಯರಾಗಿರುವ ಶ್ರೀ ಬ್ರಹ್ಮ - ಶ್ರೀ ವಿಷ್ಣು - ಶ್ರೀ ರುದ್ರರೆಂಬ ಮೂವರು ಮಹನೀಯರಲ್ಲಿ ಒಬ್ಬರಾದ ಶ್ರೀ ರುದ್ರದೇವರು ಭಾಗವತಾಗ್ರಣಿಗಳೂ - ತಪೋಮೂರ್ತಿಗಳೂ - ದಯಾಶೀಲರೂ ಆಗಿದ್ದಾರೆ. 
ಇವರು ಶ್ರೀ ಹರಿಯ ಪರಮ ಭಕ್ತರು. 
ಸ್ವಾಮೀ ಪರಮಶಿವನೇ! 
ಪರ್ವತೀಶರೇ! 
ನೀವು ಮಹಾ ಕಾರುಣ್ಯಶಾಲಿಗಳು. 
ಹಿಂದೆ ಅಮೃತ ಮಥನ ಕಾಲದಲ್ಲಿ ಜಗತ್ತನ್ನೇ ನಾಶ ಪಡಿಸಲು ಸಮರ್ಥವಾದ ಕಾಲಾಗ್ನಿಯಂತಿರುವ " ಕಾಲಕೊಟ ವಿಷವು " ಹುಟ್ಟಿತು. 
ಅದರ ಬಾಧೆಯಿಂದ ಸಮಸ್ತ ದೇವತೆಗಳೂ - ದೈತ್ಯರೂ ಮತ್ತು ಪ್ರಪಂಚವೆಲ್ಲಾ ಹಾಹಾಕಾರ ಮಾಡುತ್ತಾ ಅತಿ ಕಷ್ಟ ಪಡುತ್ತಿರುವುದನ್ನು ಕಂಡು ಕಾರುಣ್ಯಮೂರ್ತಿಗಳಾದ ನೀವು ಸಮಸ್ತರನ್ನೂ ರಕ್ಷಿಸಲು " ಕಾಲಕೊಟ ವಿಷ " ವನ್ನು ಶ್ರೀ ವಾಯುದೇವರ ಅನುಗ್ರಹದಿಂದ ಪಾನ ಮಾಡಿದಿರಿ. 
ಇದರಿಂದ ಜಗದ್ರಕ್ಷಣೆಯಾಯಿತು. 
" ಕಾಲಕೊಟ ವಿಷ " ದಿಂದ ನಿಮ್ಮ ಕಂಠವು " ನೀಲವರ್ಣ " ವಾಯಿತು. 
ಅಂದಿನಿಂದ ನಿಮ್ಮನ್ನು " ನೀಲಕಂಠ " ಎಂದು ಕರೆದು ಶ್ಲಾಘಿಸಿದರು. 
ಅದು ನಿಮಗೆ ಬಿರುದಾಯಿತು. 
ದೇವಾ! 
ನೀವು " ಕಾಲಕೊಟ ವಿಷ " ಪಾನ ಮಾಡಿ " ನೀಲಕಂಠ " ಬಿರುದಾಂಕಿತರಾಗಿ ಜಗತ್ತನ್ನು ಕಾಪಾಡಿದ ಮಹಾನುಭಾವರು. 
ಕೈಲಾಸ ಪರ್ವತಕ್ಕೆ ನೀವು ಒಡೆಯರು. 
" ಗರಳಪುರಿ " ಯೆಂದು ಹೆಸರು ಪಡೆದ ನಂಜನಗೂಡಿನಲ್ಲಿ " ನಂಜುಂಡೇಶ್ವರ " ರಾಗಿ ವಿಹರಿಸುತ್ತಿರುವ ಮತ್ತು ಫಾಲ ಪ್ರದೇಶದಲ್ಲಿ ಬಾಲ ಚಂದ್ರನನ್ನು ಧರಿಸಿರುವ ಪಾರ್ವತೀ ಪತಿಗಳಾದ ಶ್ರೀ ರುದ್ರದೇವರ ಮಹಿಮೆಯನ್ನು " ಶಿವರಾತ್ರಿ " ಯ ಶುಭ ಸಂದರ್ಭದಲ್ಲಿ ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ!!
ಮೂಲೇ ಕಲ್ಪದ್ರುಮಸ್ಯ 
ದೃತ ಕನಕನಿಭಂ 
ಚಾರು ಪದ್ಮಾಸನಸ್ಥಂ ।
ವಾಮಾಂಕಾರೂಢ 
ಗೌರೀ ನಿಬಿಡ 
ಕುಚಭರಾಭೋಗ 
ಗಾಢೋಪಗೂಢಮ್ ।।
ನಾನಾಲಂಕಾರ ಕಾಂತಂ 
ಮೃಗ ಪರಶುವರಾಭೀತಿ 
ಹಸ್ತಂ ತ್ರಿನೇತ್ರಂ ।
ವಂದೇ ಬಾಲೇಂದು 
ಮೌಲಿಂ ಗಣವದನ 
ಗುಹಾಶ್ಲಿಷ್ಟಪಾರ್ಶಂ 
ಮಹೇಶಾಮ್ ।।
ಕಲ್ಪವೃಕ್ಷದ ಕೆಳಗೆ, ತಪ್ತ ಕಾಂಚನಕ್ಕೆ ಸಮಾನವಾದ ಕಾಂತಿಯುಕ್ತ, ಸುಂದರ ಪದ್ಮಾಸನ ಹಾಕಿ ಕುಳಿತ - ಎಡ ತೊಡೆಯ ಮೇಲೆ ಅತ್ಯಂತ ನಿಕಕಟವಾಗಿ - ಗೋಪ್ಯವಾಗಿ ಕುಳಿತಿರುವ ಪಾರ್ವತೀಯ ನಿಬಿಡ ಸ್ತನ ಪ್ರದೇಶದಿಂದ ಆವೃತನಾಗಿರುವ - ಹಲವಾರು ರೀತಿಯ ಆಭೂಷಣಗಳಿಂದ ಸುಶೋಭಿತನಾದ - ಕರಗಳಲ್ಲಿ ಮೃಗ - ಪರಶು - ವರ ಹಾಗೂ ಅಭಯ ಮುದ್ರೆಗಳನ್ನು ಧರಿಸಿರುವ - ಮುಕ್ಕಣ್ಣನಾಗಿರುವ - ಕಿರೀಟದಲ್ಲಿ ಬಾಲ ಚಂದ್ರನನ್ನು ಧರಿಸಿರುವ - ಎರಡು ಪಕ್ಕದಲ್ಲಿಯೂ ಗಣೇಶ ಹಾಗೂ ಸುಬ್ರಹ್ಮಣ್ಯರಿಂದ ಆಲಿಂಗಿಸಲ್ಪಟ್ಟಿರುವ ಆ ಪರಮೇಶ್ವರನಿಗೆ ನಾನು ನಮಸ್ಕರಿಸುತ್ತೇನೆ.
****
" ಮಹಾ ಶಿವರಾತ್ರಿ - 5 "
" ಶಿವರಾತ್ರಿ ನಿರ್ಣಯ "
ಶಿವರಾತ್ರಿಯು ಪೂರ್ವ ತಿಥಿ ಯೆಂದರೆ, ತ್ರಯೋದಶೀ ವೇಧವಿರುವಾಗಲೇ ಗ್ರಾಹ್ಯವಾಗಿದೆ ಎಂದು " ಸ್ಕಾಂದ ಪುರಾಣ " ದಲ್ಲಿ ಹೇಳಲಾಗಿದೆ. 
ಕೃಷ್ಣಾಷ್ಟಮೀ, ಸ್ಕಂಧ ಷಷ್ಟಿ, ಶಿವರಾತ್ರಿ - ಚತುರ್ದಶೀ ಈ ತಿಥಿಗಳನ್ನೆಲ್ಲಾ ಪೂರ್ವ ತಿಥಿ ವೇಧವಿರುವಾಗಲೇ ಆ ವ್ರತಗಳ ಆಚರಣೆಗಾಗಿ ಸ್ವೀಕರಿಸಬೇಕು. 
ತಿಥಿಯು ಮುಗಿದ ಮೇಲೆ ಪಾರಣೆ ಮಾಡಬೇಕೆಂದು ಸ್ಕಾಂದಪುರಾಣದ ವಚನ. 
ಶಿವರಾತ್ರಿಯು ಚತುರ್ದಶಿ  ಅಮಾವಾಸ್ಯೆಯ ಸಂಬಂಧವನ್ನು ಸ್ಕಾಂದಪುರಾಣದಲ್ಲಿಯೇ ನಿಷೇಧಿಸಿರುವುದು ಕಂಡು ಬರುತ್ತದೆ. 
ಮಹತ್ತಾದ ಪಾಪಗಳಿಗೂ ಪ್ರಾಯಶ್ಚಿತ್ತವಿದೆ ಎಂದು ಹಿಂದಿನ ಅನೇಕ ದೃಷ್ಟಾಂತಗಳಿಂದ ತಿಳಿದಿದೆ. 
ಆದರೆ " ಕುಹೂ " ಯೆಂದರೆ ಅಮಾವಾಸ್ಯೆಯಿಂದ ಕೂಡಿದ ರಾತ್ರಿಯ ದಿನ ಶಿವರಾತ್ರಿಯು ಆಚರಣೆ ಮಾಡುವ ಪಾಪಿಗಳಿಗೆ ಪ್ರಾಯಶ್ಚಿತ್ತವು ಎಲ್ಲಿಯೂ ಕಂಡು ಬರುವುದಿಲ್ಲ. 
ಆ ಶಿವರಾತ್ರಿಯು ಚತುರ್ದಶಿಯೂ ಪ್ರದೋಷ ಯೆಂದರೆ ರಾತ್ರಿಯ ಆರಂಭ ಕಾಲದ ವರೆಗೆ ವ್ಯಾಪಿಸಿರುವಾಗಲೇ ವ್ರತಾಚರಣೆಗೆ ಗ್ರಾಹ್ಯವಾಗಿದೆಯೆಂದು " ಈಶಾನ ಸಂಹಿತೆ " ಯಲ್ಲಿ ಹೇಳಿದೆ. 
ಶಿವನಿಗೆ ಪ್ರೀತಿಕರವಾದ ಶಿವರಾತ್ರಿಯು ಪ್ರದೋಷ ವ್ಯಾಪ್ತಿಯಿರುವಾಗಲೇ ವ್ರತಾಚರಣೆಗೆ ಪ್ರಶಸ್ತವಾಗಿದೆ ಎಂದು " ಈಶಾನ ಸಂಹಿತಾ ವಾಕ್ಯ " ದ ಅಭಿಪ್ರಾಯ. 
" ವಾಯು ಪುರಾಣ " ದಲಿಯೂ ಶಿವರಾತ್ರಿಯ ಚತುರ್ದಶಿಗೆ ಪ್ರದೋಷ ವೇಧವಿರಬೇಕೆಂದು ಹೇಳಿದ್ದಾರೆ. 
ಸೂರ್ಯನು ಅಸ್ತಮಯ ಹೊಂದುತ್ತಿರುವ 4 ಘಳಿಗೆಗಳು ಮಾತ್ರ ತ್ರಯೋದಶಿಯಿದ್ದು, ಆ ಚತುರ್ದಶಿಯು " ಭೂತ " ಅಂದರೆ ತ್ರಯೋದಶೀ ವೇಧದಿಂದ ಸಹಿತವಾಗಿದ್ದಾಗ " ಶಿವರಾತ್ರಿ ವ್ರತ " ವನ್ನು ಆಚರಿಸಬೇಕು. 
ಅರ್ಧರಾತ್ರಿ ವ್ಯಾಪಿನಿಯಾದ ಚತುರ್ದಶಿಯು ಶಿವರಾತ್ರಿ ವ್ರತಕ್ಕೆ ಗ್ರಾಹ್ಯವಾಗಿದೆಯೆಂದು " ನಾರದೀಯ ಸಂಹಿತೆ " ಯಲ್ಲಿ ಹೇಳಿದೆ. 
ಯಾವಾಗ ಮಾಘ ಬಹುಳ ಚತುರ್ದಶೀಯು ಅರ್ಧರಾತ್ರಿಯ ವರೆಗೆ ವ್ಯಾಪಿಸಿರುತ್ತದೆಯೋ ಆಗಲೇ ಶಿವರಾತ್ರಿ ವ್ರತವು ಆಚರಣೆಗೆ ಯೋಗ್ಯವಾಗಿದೆ. 
ಹೀಗೆ ಹಗಲು ತ್ರಯೋದಶೀ ವೇಧವಿದ್ದು ಮಧ್ಯರಾತ್ರಿಯ ವರೆಗೆ ವ್ಯಾಪಿಸಿರುವ ಚತುರ್ದಶಿಯ ದಿನ ಶಿವರಾತ್ರಿ ವ್ರತವನ್ನು ಆಚರಿಸುವವನು " ಅಶ್ವಮೇಧ ಯಾಗದ ಫಲ " ವನ್ನು ಹೊಂದುತ್ತಾನೆ ಎಂದು " ನಾರದೀಯ ಸಂಹಿತಾ " ವಚನವಿದೆ. 
ಹೀಗಿರಲಾಗಿ ಹಿಂದಿನ ದಿನದಲ್ಲಿಯಾಗಲೀ; ಮರು ದಿನದಲ್ಲಿಯಾಗಲೀ; ಸಾಯಂಕಾಲ ಮತ್ತು ಮಧ್ಯರಾತ್ರಿ ವ್ಯಾಪಿ ಯಾವಾಗ ಇರುತ್ತದೆಯೋ ಆಗ ಈ ವ್ರತವನ್ನು ಆಚರಿಸಬೇಕು. 
ಹಿಂದಿನ ದಿನವೇ ಸಾಯಂಕಾಲ ಮತ್ತು ಮಧ್ಯರಾತ್ರಿ ವ್ಯಾಪಿ ಇದ್ದರೆ ಅದೇ ವ್ರತಾಚರಣೆಗೆ ಯೋಗ್ಯವೆಂದು " ಸ್ಕಾಂದಪುರಾಣ " ದಲ್ಲಿ ಹೇಳಿದೆ. 
ದೇವಿಯೇ! 
ಯಾವಾಗ ತ್ರಯೋದಶೀಯು ದಿನಭುಕ್ತಿಯ ಪ್ರಮಾಣದಿಂದ ( ಅಂದರೆ ಅಸ್ತಮಯ ಸಮಯದಲ್ಲಿ ) ಇರುತ್ತದೆಯೋ ಅಂದೇ ರಾತ್ರಿ ಜಾಗರಣೆ ಸಹಿತವಾದ ಶಿವರಾತ್ರಿಯು ಆಗುತ್ತದೆ. ಆದರೆ ಆದಿನ ರಾತ್ರಿ ಪೂರ್ತಿಯಾಗಿ ಚತುರ್ದಶಿಯು ಇರಬೇಕು. 
ಇದು " ಸ್ಕಾಂದಪುರಾಣ " ದ ವಚನ. 
ಇಲ್ಲಿ ದಿನಭುಕ್ತಿ ಯೆಂದರೆ " ಅಸ್ತಮಯ " ಯೆಂದು ಅರ್ಥ. 
ಮರುದಿನ ಉಭಯ ವ್ಯಾಪಿಯಿದ್ದರೆ ಮರುದಿನವೇ ವ್ರತಕ್ಕಾಗಿ ಸ್ವೀಕಾರಾರ್ಹವಾಗಿದೆ ಎಂದು " ಕಾಮಿಕ " ದಲ್ಲಿ ತೋರಿಸಿದ್ದಾರೆ. 
ಎರಡೂ ರಾತ್ರಿಯಲ್ಲಿ ಚತುರ್ದಶಿ ಯಿದ್ದರೆ ಹಿಂದಿನದನ್ನು ಬಿಡಬೇಕು. 
ಮಂಗಳಕರವಾದ ಎರಡನೇಯದನ್ನೇ ಸ್ವೀಕರಿಸಬೆಕೆಂದು " ಕಾಮಿಕ " ದ ವಚನ. 
ಯಾವಾಗ ಕೃಷ್ಣ ಪಕ್ಷದ ಚತುರ್ದಶಿಯು ಎರಡೂ ದಿನವೂ ಮಧ್ಯರಾತ್ರಿಯಲ್ಲಿ ಬರುತ್ತದೆಯೋ ಅಥವಾ ಎರಡೂ ದಿನದಲ್ಲಿಯೂ ಬರುವುದಿಲ್ಲವೋ ಆಗ ಅಮಾವಾಸ್ಯೆಯಿಂದ ವಿದ್ಧವಾದ ಚತುರ್ದಶಿಯು ಪ್ರಾಶಸ್ತ್ಯವಾಗಿರುತ್ತದೆ ಯೆಂದು " ಶಿವ ಪುರಾಣ " ದಲ್ಲಿ ಹೇಳಿದೆ. 
" ಶಿವ ಪುರಾಣ " ದಲ್ಲಿಯೇ ವಿಶೇಷವನ್ನೂ ತೋರಿಸಿದ್ದಾರೆ. .... 
ಪ್ರದೋಷ ಕಾಲದಲ್ಲಿಯಾಗಲೀ; ಮಧ್ಯ ರಾತ್ರಿಯಲ್ಲಾಗಲೀ ಯಾವ ಚತುರ್ದಶಿಯು ಇದೆಯೋ ಅದೇ ಶಿವರಾತ್ರಿ ವ್ರತಕ್ಕೆ ಆಗಬೇಕು. 
ಹೀಗೆ ಪ್ರದೋಷ ಮತ್ತು ಅರ್ಧರಾತ್ರಿ ಎರಡರಲ್ಲಿಯೂ ಚತುರ್ದಶಿ ಇರುವುದು ಪ್ರಶಸ್ತವಾಗಿದೆ. 
ಹೀಗಿಲ್ಲದಿದ್ದರೆ ಮಧ್ಯರಾತ್ರಿಯ ವರೆಗೆ ವ್ಯಾಪಿನಿಯಾದ ಚತುರ್ದಶಿಯನ್ನು ಮಾತ್ರವಾದರೂ ಪರಿಗ್ರಹಿಸಬೇಕು. 
ಎರಡು ದಿನಗಳಲ್ಲಿ ಎರಡು ಅರ್ಧರಾತ್ರಿಗಳ ವರೆಗೂ ಚತುರ್ದಶಿ ವ್ಯಾಪಿಸಿದ್ದಾರೆ ಮೊದಲಿನದನ್ನು ಬಿಡಬೇಕು. 
ಎರಡನೇಯ ಚತುರ್ದಶಿಯೇ ಮಂಗಳಕರವಾಗಿದೆ. 
ಹೀಗೆ ಎರಡೂ ಸಂಭವಿಸದಿದ್ದರೆ ಪ್ರದೋಷ ವ್ಯಾಪಿಯಾದ ಚತುರ್ದಶಿಯನ್ನೇ ಸ್ವೀಕರಿಸಬೇಕು. 
ಶೂಲಧಾರಿಯಾದ ಶಂಕರನ ಶಕ್ತಿ ರೂಪಗಳಾಗಿರುವ ಭೂತಗಳು ರಾತ್ರಿಯ ಹೊತ್ತು ತಿರುಗುತ್ತವೆ. ಆದುದರಿಂದ ರಾತ್ರಿ ವೇಳೆಯಲ್ಲಿ ಚತುರ್ದಶಿ ಯಿದ್ದಾಗ ಈಶ್ವರನ ಪೂಜೆಯು ನಡೆಯಬೇಕಾಗಿದೆ. 
ಶಿವರಾತ್ರಿ ವ್ರತವನ್ನು ಬಿಟ್ಟು ಬೇರೇ ವ್ರತಗಳಲ್ಲಿ ಹಗಲು ತಿಥಿಯ ಸಂಬಂಧವನ್ನು ನೋಡಿಕೊಳ್ಳತಕ್ಕದ್ದು. 
ಶಿವರಾತ್ರಿ ವ್ರತದಲ್ಲಿ ಅಲ್ಲ!!
****
" ಮಹಾ ಶಿವರಾತ್ರಿ - 6 "
" ಪಾರಣಾಕಾಲ "
ಈ ಶಿವರಾತ್ರಿಯ ವ್ರತದಲ್ಲಿ ಪೂರ್ವದ ತ್ರಯೋದಶಿಯ ವೇಧವುಳ್ಳ ಚತುರ್ದಶೀ ದಿನ ಉಪವಾಸ ಮಾಡಿದರೆ ಮರುದಿನ ಚತುರ್ದಶಿಯು ಮೂರು ಜಾವಗಳ ವರೆಗೂ ಇದ್ದಾರೆ ತಿಥಿಯು ಸಮಾಪ್ತವಾದ ಮೇಲೆ ಪಾರಣೆ ಮಾಡಬೇಕೆಂದು " ಸ್ಕಾಂದಪುರಾಣ "  ಹೇಳಿದೆ. 
ಯಾವಾಗ ಮರುದಿನ ಮೂರು ಜಾವಗಳ ಮೇಲೂ ಚತುರ್ದಶೀ ಇರುತ್ತದೆಯೋ ಆಗ ಚತುರ್ದಶಿಯಲ್ಲಿಯೇ ಪಾರಣವೆನ್ದು " ಸ್ಕಾಂದಪುರಾಣ " ದ ವಚನ. 
" ಶಿವರಾತ್ರಿಯ ಕರ್ತವ್ಯಗಳು "
ಉಪವಾಸ 
ಶಿವ ಪೂಜಾ 
ಜಾಗರಣೆ 
ಎಂದು ಮೂರು ಕರ್ತವ್ಯಗಳನ್ನು ಮಾಡಬೇಕು. ಈ ವಿಷವನ್ನು " ಸ್ಕಾಂದಪುರಾಣ " ದ " ನಾಗರಖಂಡ " ದಲ್ಲಿ ಹೇಳಲಾಗಿದೆ. 
ಶಿವರಾತ್ರಿಯ ದಿನದಲ್ಲಿ ಉಪವಾಸ ಮಾಡಿದ ಪ್ರಭಾವದಿಂದಲೂ ಮತ್ತು ಯಾವುದೋ ಒಂದು ರೀತಿಯಲ್ಲಿ ಬಲಾತ್ಕಾರದಿಂದಲಾದರೂ " ಜಾಗರಣೆ " ಮಾಡಿದರೂ ಹಾಗೆಯೇ ಆ ದಿನ ಶಿವಲಿಂಗದ ಪೂಜೆಯನ್ನು ಮಾಡಿದರೆ ಈ ಮೂರು ಕಾರ್ಯಗಳ ಪ್ರಭಾವದಿಂದ ಶಾಶ್ವತ ಲೋಕಗಳ ಪ್ರಾಪ್ತಿಯಾಗುತ್ತದೆ ಮತ್ತು ಶಿವ ಸಾಯುಜ್ಯವನ್ನೂ ಭಕ್ತನು ಹೊಂದುತ್ತಾನೆ. 
" ಶಿವರಾತ್ರಿ ಫಲ " 
ಶಿವರಾತ್ರಿಯ ಫಲವನ್ನು " ಸ್ಕಾಂದಪುರಾಣ " ದಲ್ಲಿ ಈ ರೀತಿ ಹೇಳಿದ್ದಾರೆ.... 
ಮಾಘೇ ಕೃಷ್ಣ ಚತುರ್ದಶ್ಯಾಂ 
ಯಃ ಶಿವಂ ಸಂಶಿತವ್ರತಃ ।
ಮುಮುಕ್ಷುಃ ಪೂಜಯೇನ್ನಿತ್ಯಂ 
ಸ ಲಭೇದೀಪ್ಸಿತ ಫಲಮ್ ।।
ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಯಾರು ಕಠಿಣವಾದ ನಿಯಮವನ್ನು ಸ್ವೀಕರಿಸಿ ಮೋಕ್ಷಾಪೇಕ್ಷಿಯಾಗಿ ಈಶ್ವರನನ್ನು ಪೋಜಿಸುತ್ತಾರೋ ಅವರು ಬಯಸಿದ ಫಲವನ್ನೇಲ್ಲಾ ಪಡೆಯುತ್ತಾರೆ ಎಂದು ತಾತ್ಪರ್ಯ!!
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****

ರುದ್ರ ದೇವರು.🙏🙏
ರುದ್ರರು ಬ್ರಹ್ಮದೇವರ ಪುತ್ರರು.
ನಂದಿವಾಹನ, ನಳಿನಧರ (ಗಂಗೆಯನ್ನು ಅಂದರೆ ವಿಷ್ಣು ಪಾದೋದಕವನ್ನು ಜಟೆಯಲ್ಲಿ ಧರಿಸಿದವನು ), ಮೌಳೇಂದು ಶೇಖರ (ಅರ್ಧ ಚಂದ್ರನನ್ನು ತಲೆಯಲ್ಲಿ ಧಾರಣ ಮಾಡಿದವನು ), ಶಿವ (ಮಂಗಳಮಯನಾದ, ಸುಂದರನಾದ ), ತ್ರಯಂಬಕ ( ಸೂರ್ಯ, ಚಂದ್ರ,ಅಗ್ನಿ ಗಳನ್ನು ಕಣ್ಣಾಗುಳ್ಳವನು ), ಅಂಧಕಾಸುರಮಥನ, ಗಜ ಚಾರ್ಮಾಂಬರಧಾರಿ ( ಮಹಿಷಾಸುರನ ಮಗನಾದ ಗಜಾಸುರನನ್ನು  ಸಂಹರಿಸಿ ಆತನ ಅಪೇಕ್ಷೆಯಂತೆ ಆತನ ಚರ್ಮ ಹೊದ್ದಿರುವವನು, ಸ್ಕಂದ ಪುರಾಣದಲ್ಲಿ ಉಲ್ಲೇಖಸಿದಂತೆ ), ಶಾರ್ದೂಲ ಚರ್ಮಧರ ( ಹುಲಿ ವೇಷದ ದೈತ್ಯ ಋಷಿಗಳಿಗೆ ಹಿಂಸೆ ಕೊಡುತ್ತಿದ್ದಾಗ ಆತನನ್ನು ಕೊಂದ ಶಿವ ಆ ಹುಲಿಯ ಚರ್ಮ ಹೊದ್ದ, ಕೂರ್ಮ ಪುರಾಣದಲ್ಲಿ ಬಂದಿದೆ ), ಮಂದಜಾಸನ ತನಯ ಅಂದರೆ ಬ್ರಹ್ಮ ದೇವರ ಪುತ್ರ, ತ್ರಿಜಗದಿಂದ ವಂದಿತ, ಪಾರ್ವತಿರಮಣ,ದಕ್ಷನ ಯಜ್ಞವನ್ನು ನಾಶ ಮಾಡಿದವನು, ವೈರಾಗ್ಯದ ಅಧಿಪತಿ, ಯಕ್ಷ ಪತಿಸಖ (ಕುಬೇರನ ಗೆಳೆಯ ), ಪಂಚಮುಖ ( ಈಶಾನ, ವಾಮದೇವ, ಸದ್ಯೋಜಾತಾ,ತತ್ಪುರುಷ, ಅಘೋರ ),ಊಗ್ರ ಧೂರ್ಜಟಿ (ಕೆಂಜೆಡೆಯನ್ನು ಆಕಾಶದ ತುಂಬ ಹರಡಿಕೊಂಡವನು ), ಕೈಲಾಸವಾಸ, ( ವಿವಿಧ ಪುರಾಣಗಳ ಪ್ರಕಾರ ಕೈಲಾಸವು ಮೇರು ಪರ್ವತದಲ್ಲೊಂದು, ಗಂಧ ಮಾದನ ಪರ್ವತದಲ್ಲೊಂದು, ಹೇಮ ಕೂಟದಲ್ಲೊಂದು, ಹಿಮಾಲಯದಲ್ಲೊಂದು ಇದೆ.) 75 ವರ್ಷ  ಭಾವೀ ಸಮೀರರಲ್ಲಿ ಶಿಷ್ಯತ್ವ ವಹಿಸಿ ಅಖಿಳ ಆಗಮ ಶಾಸ್ತ್ರಗಳನ್ನು ಓದಿ ಜ್ಞಾನಾರ್ಜನೆ ಪಡೆದು ಮುಂದೆ ಲವಣ ಸಮುದ್ರದಲ್ಲಿ ಹತ್ತು ಕಲ್ಪ ದಿನ ತಪಸ್ಸು ಮಾಡಿ ಸಾಧನೆ ಬಳಿಕ ಹರಿಯ ಪರಿಯಂಕ ಪದವಿಯನ್ನು ಗಳಿಸಿದವರು, ಶುಕ ಜೈಗೀಷವ್ಯ, ದುರ್ವಾಸ ರಾಗಿ ಅವತರಿಸಿದವರು, ಇಂತಹ ರುದ್ರರ ಸ್ಮರಣೆ ಪ್ರತಿಯೊಬ್ಬ ಮೋಕ್ಷ ಸಾಧಕನಿಗೆ ಬೇಕೇ ಬೇಕು.ರುದ್ರಂತರ್ಗತ ನರಸಿಂಹ ರೂಪಿ ಪರಮಾತ್ಮನ ಕರುಣೆ ಅನುಗ್ರಹ ಸದಾ ಇರಲಿ ಎಲ್ಲರಿಗೂ ಎಂದು ಆ ಜಗನ್ನಾಥವಿಠಲಾತ್ಮಕ ಪರಮಾತ್ಮನಲ್ಲಿ ಪ್ರಾರ್ಥನೆ.
🙏ಹರೇ ಶ್ರೀ ಶ್ರೀ ನಿವಾಸ 🙏

 ‌(received in WhatsApp)

****

ಮಹರುದ್ರದೇವರ ಚಿಂತನಾಕ್ರಮ –
Chintana krama of Shiva according to Madhwa Philosophy

ಧ್ಯೇಯ: ಪಂಚಮೂಖೋ ರುದ್ರ:
ಸ್ಫಟಿಕಾಮಲ ಕಾಂತಿಮಾನ್ |  

ವಿದ್ಯುಚ್ಚಭ್ರಾಸಿತರಜ: ಶ್ಯಾಮಾನ್ಯಸ್ಯ ಮುಖಾನಿ ತು

ಜಟಾವಬದ್ಧೇಂದುಕಲ: ಪ್ರಿಯಾಯುಕ್ ನಾಗಭೂಷಣ: ||

dhyEya: paMchamukhO rudra: sphaTikaamala kaaMtimaan |

vidyuchchabhraasitaraja: shyaamaanyasya muKaani tu|

jaTaavabaddhEMdukala: priyaayuk naagabhUShaNa: |

ರುದ್ರದೇವರಿಗೆ ಐದು ಮುಖಗಳು, – ಅವುಗಳು ಕ್ರಮವಾಗಿ ಮಿಂಚಿನ ಬಣ್ಣ, ಬಿಳಿ, ಕಪ್ಪು, ನೀಲಿ ಬಣ್ಣಗಳಿಂದ ಕೂಡಿದೆ.’ ಅವರ ಮೈಬಣ್ಣ ಸ್ಫಟಿಕದಂತೆ ಸ್ಪುಟವಾದ ಶುಭ್ರದೇಹ; ಅವನ ಜಟೆ ಚಂದ್ರನ ಕಲೆಯಿಂದ ಕೂಡಿಕೊಂಡಿದೆ;  ಅವನೊಂದಿಗೆ ಪ್ರಿಯಳಾದ ಪಾರ್ವತೀದೇವಿ ಇದ್ದಾಳೆ. ಅವನ ಆಭರಣ ಸರ್ಪವಾಗಿದೆ; ಶಿರಸ್ಸಿನಲ್ಲಿ ಗಂಗೆ ಧರಿಸಿದವನಾಗಿದ್ದಾನೆ,  ಪ್ರತಿಮುಖದಲ್ಲಿ ಮೂರು ಕಣ್ಣುಗಳೂ;  ಮೈಮುಖಗಳಲ್ಲಿ ಊರ್ಧ್ವಪುಂಡ್ರ ಧಾರಣೆ, ಬಾಹುಗಳಲ್ಲಿ ಶಂಖಚಕ್ರ ಚಿಹ್ನೆ; ಕೊರಳಲ್ಲಿ ಪದ್ಮಾಕ್ಷಿ ತುಳಸೀಮಾಲೆ ; ನಾಲ್ಕು ಕೈಗಳಲ್ಲಿ ಕ್ರಮವಾಗಿ ಜಿಂಕೆ – ಶೂಲ – ವರಮುದ್ರೆ – ಅಭಯಮುದ್ರೆ ;

Chintana krama of Maharudra Devaru –
Rudra devaru has five faces – the colour of body look like spatika;
He has Chandra in his Jate ;
He is sarpabhooshana;
Always Parvati Devi will be there with him;
He has Ganga, the Vishnu paadodaka on his head (to prove Harisarvottamatva);
He has three eyes on all his five faces
He always has Urdwapundra, shanka Chakra symbol,
Has Padmakshi Tulasimaale;
In his four hands he has shoola, varamudre, abhayamudre, and deer.
The names of the five faces are tatpurusha, Aghora, sadyojaata, vaamadeva and Eeshana.

 ಪಂಚಾಕ್ಷರ ಮಂತ್ರ –  ಮನಸ್ಥಿತ: ಶಿವಶ್ಚಾತ್ರ ಮನೋನಾಮಾ ಮಹಾಬಲ: | ಅಭವತ್ ಸಾರಥಿರ್ವಿಷ್ಣೋ: |   –  ಗರುಡಪುರಾಣ

ಶಿವಪಂಚಾಕ್ಷರ ಮಂತ್ರ –  ಶ್ರೀಮದಾಚಾರ್ಯರು ನಮಗೆ ತಂತ್ರಸಾರ ಸಂಗ್ರಹದಲ್ಲಿ ಶಿವಪಂಚಾಕ್ಷರ ಮಂತ್ರವನ್ನು ಪರಿಚಯಿಸಿದ್ದಾರೆ –  “ಓಮ್ ನಮ: ಶಿವಾಯ:” | – ಈ ಮಂತ್ರದಿಂದ ಜಪಿಸಿದಾಗ ಮನಸ್ಸು ನಿರ್ಮಲವಾಗಿ ಹರಿಧ್ಯಾನಕ್ಕೆ, ಶಾಸ್ತ್ರಾಭ್ಯಾಸಕ್ಕೆ ಅನುಕೂಲವಾಗುವುದೆಂದು ಶ್ರೀ ವಿದ್ಯಾಮಾನ್ಯತೀರ್ಥರು ಹೇಳಿದ್ದಾರೆ.

ನಿಜವಾದ ವೈಷ್ಣವರು “ಶಿವ ಪಂಚಾಕ್ಷರೀ” ಜಪವನ್ನು ತಾರತಮ್ಯಾನುಸಾರವಾಗಿ ಮಾಡಲು ತಯಾರಾಗಿರುತ್ತಾರೆ
****

🌺🌺🌺🌺🌺🌺
ಮಹಾ ಶಿವರಾತ್ರಿ
🌺🌺🌺🌺🌺🌺
ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. 

ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. 

ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ.

ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. 

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ. 

ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ. 

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ. 

ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ... ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿಯ ಮಹಿಮೆ:

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಇದು ಸ್ಕಂದ ಪುರಾಣ ಒಂದು ಭಾಗ

ಬೇಡನ ಶಿವಭಕ್ತಿ: 

ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

ಶಿವರಾತ್ರಿ ಆಚರಣೆ ಹಿನ್ನೆಲೆ:

೧. ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ.

೨. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

೩. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. 

೪. 'ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

೫. ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ

೧. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ' ಸ್ಕಂದ ಪುರಾಣ 'ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ... ' ಗರುಡ ಮತ್ತು ಅಗ್ನಿ ಪುರಾಣ ' ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. 

೨. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

೩. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

೪. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಟಕ್ಕೆ ಸಿಲುಕಿದ್ದೂ ಇದೆ.. ಆದರೆ ಎಂಥದ್ದೇ ಸಂಕಟವಿದ್ದರೂ ಶಿವನು ಭಕ್ತರನ್ನು ಸದಾ ಅನುಗ್ರಹಿಸುತ್ತಲೇ ಇರುತ್ತಾನೆ.. ಅದಕ್ಕೆ “ಶಿವ ಭಕ್ತನಿಗೆ ನರಕಾ ಇಲ್ಲ” ಅನ್ನೋ ಮಾತಿದೆ.

೫. ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು... ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. 

ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. 

ವೇದೋಕ್ತ ಪೂಜೆ ಮತ್ತು ಆಚರಣೆ

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. 

ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.

ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. 

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

ಜಾಗರಣೆ, ಹಬ್ಬದ ವಿಶೇಷ ಆಚರಣೆ:

ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ.

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.
***
ಶಿವನ ತಲೆಗೆ ಬಂದಿದ್ದು ಚಂದ್ರ ಹೇಗೆ ಬಂದ

ಎರಡು ಕಥೆಗಳಿವೆ ಓದಿ ಒಮ್ಮೆ

ದೇವತೆಗಳು ಮತ್ತು ರಾಕ್ಷಸರು ಅಮೃತ ಮತ್ತು ಇತರೆ ರತ್ನಗಳನ್ನು ಪಡೆಯಲು ಸಮುದ್ರ ಮಂಥನ ಮಾಡಿದರು ಆದರೆ ಇದರಲ್ಲಿ ವಿಷ ಬಂದಾಗ ದೇವತೆಗಳು ಮತ್ತು ರಾಕ್ಷಸರು ಸ್ವೀಕರಿಸಲು ನಿರಾಕರಿಸಿದರು. ಆಗ ದೇವಾನು ದೇವತೆಗಳ ಮನವಿಯಂತೆ ಶಿವ ಬಂದು ಈ ವಿಷವನ್ನು ಸೇವಿಸಿ ಕಂಠದಲ್ಲಿ ಹಿಡಿದು ಇಟ್ಟುಕೊಳ್ಳುತ್ತಾರೆ.

ಇದರಿಂದ ಕಂಠದಲ್ಲಿ ನೀಲಿ ಬಣ್ಣಕ್ಕೆ ತಿರುಗಿತು ಆದರೆ ವಿಷವನ್ನು ಕುಡಿದ್ದಿದ್ದರಿಂದ ಅವರ ದೇಹದ ಉಷ್ಣಾಂಶ ಕೂಡ ಹೆಚ್ಚಾಯಿತು. ಈ ವೇಳೆ ಶಿವನ ಬಳಿ ಬಂದ ದೇವಾನು ದೇವತೆಗಳು ತಲೆಯ ಮೇಲೆ ಚಂದ್ರನನ್ನು ಧರಿಸಬೇಕು ಎಂದು ಮನವಿ ಮಾಡಿಕೊಂಡರು 

ದೇವತೆಗಳ ಮಾತಿನಂತೆ ಶಿವ ಚಂದ್ರನನ್ನು ತಲೆಯ ಮೇಲೆ ಧರಿಸಿ ಕೊಂಡರು ಇದರಿಂದ ಶಿವನ ದೇಹದ ಉಷ್ಣಾಂಶ ಇಳಿಯಿತು ಆದರೆ ಚಂದ್ರ ದೇವ ಮಾತ್ರ ಶಿವನ ತಲೆಯಲ್ಲಿ ಉಳಿದುಕೊಂಡರು .

ಗಜ ಭಕ್ತಿಯ ಶಾಪಕ್ಕೆ ಗುರಿಯಾದ ಚಂದ್ರ. ಘೋರ ತಪಸ್ಸಿನ ಬಳಿಕ ಶಿವನ ತಲೆಯ ಮೇಲೆ ಸ್ಥಾನ ಪಡೆದ. 

ಮತ್ತೊಂದು ಕಥೆಯ ಪ್ರಕಾರ ದಕ್ಷ ಪ್ರಜಾಪತಿ ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರ ದೇವನಿಗೆ ಮದುವೆ ಮಾಡಿ ಕೊಟ್ಟಿದ್ದರು ಅದರಲ್ಲಿ ರೋಹಿಣಿ ತುಂಬಾ ಸುಂದರವಾಗಿ ಇದ್ದಳು ಮೊದಲೇ ಸೌಂದರ್ಯದ ಆರಾಧಕ ಆಗಿದ್ದ ಚಂದ್ರ ದೇವ ರೋಹಿಣಿ ಗೆ ಶುರು ಮಾಡಿದರು ಇದು ಉಳಿದ ಪತ್ನಿಯರ ಬೇಸರಕ್ಕೆ ಕಾರಣ ಆಯಿತು ಅವರು ಸೀದಾ ತನ್ನ ತಂದೆ ಪ್ರಜಾಪತಿಯ ಬಳಿ ಹೋಗಿ ತಮ್ಮ ಕಷ್ಟವನ್ನು ಹೇಳಿಕೊಂಡರು ಇದರಿಂದ ಕೋಪಗೊಂಡ ದಕ್ಷ ಪ್ರಜಾಪತಿ ನೀನು ಕ್ಷಯ ರೋಗಕ್ಕೆ ತುತ್ತಾಗುವಂತೆ ಪ್ರಜಾಪತಿ ಗೆ ಶಾಪ ಕೊಟ್ಟು ಬಿಟ್ಟರು

ಕಾಲ ಕಳೆದಂತೆ ದಕ್ಷ ನ ಶಾಪದಂತೆ ಚಂದ್ರ ದೇವನ ಆರೋಗ್ಯ ಹದ ಗೆಡುತ್ತ ಬಂತು ಇದನ್ನು ಕಂಡ ದೇವ ಋಷಿ ನಾರದ ಚಂದ್ರನ ಬಳಿ ಬಂದು ಶಿವನ ಆರಾಧನೆ ಮಾಡುವಂತೆ ಸಲಹೆ ಕೊಟ್ಟರು ತಡ ಮಾಡದೆ ಚಂದ್ರ ಕೂಡಲೇ ಶಿವನ ಪ್ರಾರ್ಥನೆ ಶುರು ಮಾಡಿದರು ಚಂದ್ರನ ಭಕ್ತಿಯಿಂದ ಪ್ರಸನ್ನ ಆದ ಶಿವ ಪ್ರತ್ಯಕ್ಷ ಆಗಿ ಕಾಯಿಲೆಗಳನ್ನು ದೂರ ಮಾಡಿ ಪುನರ್ ಜೀವನ ಕೊಟ್ಟು ತಮ್ಮ ತಲೆಯಲ್ಲಿ ಧರಿಸಿದರು.

.ಓದಿದ್ದು ಕೇಳಿದ್ದು ಸಂಗ್ರಹಿಸಿದ ಮಾಹಿತಿ ಇದು.
***

ಶಿವನ ಸಂಕೇತಗಳು ಯಾವುವು ಗೊತ್ತಾ..? ಶಿವನ ಸಂಕೇತಗಳ ಅರ್ಥವೇನು..?

ಶಿವನ ರೂಪವೇ ವಿಚಿತ್ರ. ಕೊರಳಲ್ಲಿ ಹಾವು, ಒಂದು ಕೈಯಲ್ಲಿ ಡಮರು, ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದು ಭಯಾನಕ ರೂಪವನ್ನು ಹೊಂದಿರುವವನು ಶಿವ. ಶಿವನ ಈ ಸಂಕೇತಗಳ ಅರ್ಥವೇನು ಗೊತ್ತಾ..? ಶಿವನ ಸಂಕೇತಗಳು ಏನನ್ನು ಸೂಚಿಸುತ್ತದೆ ನೋಡಿ.

ತ್ರಿಮೂರ್ತಿ ದೇವರುಗಳಲ್ಲಿ ಒಬ್ಬನು ಪರಶಿವನು. ಹಿಂದೂ ಧರ್ಮದಲ್ಲಿ ಪೂಜಿಸಲಾಗುವ ದೇವರುಗಳಲ್ಲಿ ಈತನೇ ಪ್ರಮುಖನು. ಸೃಷ್ಟಿಯ ಪ್ರಾರಂಭವೂ ಇವನೇ..ಅಂತ್ಯವೂ ಇವನೇ. ಶಿವನನ್ನು, ಪರಶಿವ, ರುದ್ರ, ನಟರಾಜ, ವಿಶ್ವನಾಥ, ಭೋಲೇನಾಥ, ವಿನಾಶಕ, ಪರಿವರ್ತಕ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಶಿವ ಎಂದರೆ ಶುಭ ಎಂಬರ್ಥವನ್ನು ನೀಡುತ್ತದೆ. ಶಿವನು ಅನೇಕ ಸಂಕೇತಗಳನ್ನು ಹೊಂದಿದ್ದಾನೆ. ಶಿವನ ಚಿಹ್ನೆಗಳು ಅಥವಾ ಶಿವನ ಸಂಕೇತಗಳು ಯಾವುವು ನೋಡಿ.

​ಅರ್ಧಚಂದ್ರ

ವೈಜ್ಞಾನಿಕ ಹಾಗೂ ತಾತ್ವಿಕ ದೃಷ್ಟಿಕೋನದಿಂದ ನೋಡುವುದಾದರೆ ಶಿವನ ಶಿರದ ಮೇಲಿನ ಅರ್ಧಚಂದ್ರನು ಸಮಯದ ನಿಯಂತ್ರಣವನ್ನು ಸೂಚಿಸುತ್ತದೆ. ನಮ್ಮ ಪೂರ್ವಜರು ದಿನಗಳನ್ನು, ತಿಂಗಳುಗಳನ್ನು ಚಂದ್ರನ ಆಧಾರದ ಮೇಲೆ ಲೆಕ್ಕ ಹಾಕುತ್ತಿದ್ದರು. ನಾವೀಗ ಕ್ಯಾಲೆಂಡರ್ ನೋಡಿ ಹುಣ್ಣಿಮೆ, ಅಮಾವಾಸ್ಯೆಯೆಂದರೆ ಅವರು ಚಮದ್ರನನ್ನು ನೋಡಿಯೇ ಹೇಳುತ್ತಿದ್ದರು. ಸಮಯವನ್ನು ಸೂಚಿಸುವ ಚಂದ್ರನನ್ನು ಶಿವನು ತನ್ನ ಶಿರದಲ್ಲಿ ಧರಿಸುವುದರ ಮೂಲಕ ಕಾಲಗಳ ಮೇಲೆ, ಪ್ರಕೃತಿಯ ಮೇಲೆ ಮತ್ತು ಸಮಯಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾನೆ. ಶಿವನು ಬ್ರಹ್ಮಾಂಡದಲ್ಲಿ ಯಾವ ಸಮಯಕ್ಕೆ ಏನಾಗಬೇಕೆಂಬೂದನ್ನು ನಿರ್ಧಾರ ಮಾಡುತ್ತಾನೆ.

​ಬೂದಿಯಿಂದ ಕೂಡಿದ ದೇಹ

ಶಿವನ ಈ ಸಂಕೇತವು ನೋಡಲು ಕೇವಲ ಒಂದು ಅಂಶದಂತೆ ಕಂಡರೂ ಸಾಕಷ್ಟು ಅರ್ಥವನ್ನು ಹೊಂದಿದೆ. ಪ್ರಕೃತಿಯಲ್ಲಿ ಶಿವನು ತನ್ನ ಅತೀಂದ್ರಿಯ ಶಕ್ತಿಯಲ್ಲಿ ಹೇಗೆ ಅಸ್ಥಿತ್ವದಲ್ಲಿದ್ದಾನೆ ಎನ್ನುವುದನ್ನು ಮತ್ತು ಪ್ರಕೃತಿಯಲ್ಲಿ ಶಿವನ ಉಪಸ್ಥಿತಿಯನ್ನು ಬೂದಿಯು ಸೂಚಿಸುತ್ತದೆ. ಬೂದಿ ಎಂದರೆ ಅದುವೇ ಸಾಮನ್ಯವಾದ ಬೂದಿಯಲ್ಲ, ಬದಲಾಗಿ ಸ್ಮಶಾನದ ಬೂದಿಯಾಗಿದೆ. ಸಾವು ಪ್ರತಿಯೊಂದು ಜೀವಿಯ ಅಂತ್ಯವೆಂಬೂದನ್ನು ಬೂದಿಯು ಸೂಚಿಸುತ್ತದೆ.

ಜಟೆ ಅಥವಾ ಕೂದಲು

ಶಿವನ ಜಟೆಯು ಪರಶಿವನು ಗಾಳಿ ಅಥವಾ ವಾಯುವಿನ ದೇವರು ಎಂದು ಸೂಚಿಸುತ್ತದೆ. ಪ್ರತೀ ಕ್ಷಣವು ಸೃಷ್ಟಿಯ ಎಲ್ಲಾ ಜೀವಸಂಕುಲಗಳು ಗಾಳಿಯನ್ನು ಪಡೆಯುವ ಮೂಲಕ ಶಿವನನ್ನು ಅನುಭವಿಸುತ್ತದೆ. ಆದ್ದರಿಂದ ಶಿವನನ್ನು ಪಶುಪತಿನಾಥ ನೆಂದು ಕರೆಯಲಾಗುತ್ತದೆ. ಪಶುಪತಿನಾಥನೆಂದರೆ ಎಲ್ಲಾ ಜೀವಿಗಳ ಪ್ರಭು ಎಂದರ್ಥ.

ಗಂಗಾ

ಹಿಂದೂ ಧರ್ಮದಲ್ಲಿ ಗಂಗೆಯನ್ನು ದೇವತೆಯೆಂದು ಹಾಗೂ ಪವಿತ್ರ ನದಿಯೆಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಗಂಗೆಯು ಶಿವನ ಶಿರದಿಂದ ಹರಿದುಬಂದಳೆಂದು ಹೇಳಲಾಗುತ್ತದೆ. ಶಿವನು ಭೂಮಿ ಮೇಲಿನ ಜೀವಿಗಳ ರಕ್ಷಣೆಗಾಗಿ ಗಂಗೆಯನ್ನು ತನ್ನ ಶಿರದಿಂದ ಭೂಮಿಗೆ ಹರಿದು ಬಿಡುತ್ತಾನೆ. ಗಂಗೆಯನ್ನು ಶಿವನು ಶಿರದ ಮೇಲೆ ಹೊತ್ತಿರುವುದರಿಂದ ಆತನನ್ನು ಗಂಗಾಧರನೆಂದು ಕರೆಯಲಾಗುತ್ತದೆ. ಸನಾತನ ಧರ್ಮವು ಶಿವನು ಕೇವಲ ವಿನಾಶದ ದೇವರು ಮಾತ್ರವಲ್ಲ, ಶುದ್ಧತೆ ಮತ್ತು ಶಾಂತಿಯ ಪ್ರತೀಕವೆಂದು ಉಲ್ಲೇಖಿಸಲಾಗಿದೆ. ಗಂಗೆಯನ್ನು ಶುದ್ಧವೆಂದು ಹಾಗೂ ಪ್ರಕೃತಿಯನ್ನು ಶುದ್ಧೀಕರಿಸುತ್ತದೆ ಎಂದು ಹೇಳಲಾಗುತ್ತದೆ.

​ಮೂರನೇ ಕಣ್ಣು

ಶಿವನನ್ನು ಹೆಚ್ಚಾಗಿ ಮೂರು ಕಣ್ಣುಗಳಿಂದ ಚಿತ್ರಿಸಲಾಗುತ್ತದೆ. ಶಿವನು ಮೂರು ಕಣ್ಣುಗಳನ್ನು ಹೊಂದಿರುವುದರಿಂದ ಆತನನ್ನು ತ್ರಯಂಬಕಂ, ತ್ರಿನೇತ್ರ ಸೇರಿದಂತೆ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಶಿವನ ಮೂರನೇ ಕಣ್ಣು ಶಿವ ಭಕ್ತರಿಗೆ ಜ್ಞಾನವನ್ನು ನೀಡುವ ಸಂಕೇತವಾಗಿದೆ.

ಅರೆ ತೆರೆದ ಕಣ್ಣುಗಳು

ನೀವು ಗಮನಿಸಿರಬಹುದು ಶಿವನು ತನ್ನ ಕಣ್ಣುಗಳನ್ನು ಸಂಪೂರ್ಣವಾಗಿ ತೆರೆದಿರುವುದಿಲ್ಲ. ಆತ ಯಾವಾಗಲೂ ತನ್ನ ಕಣ್ಣುಗಳನ್ನು ಅರ್ಧ ಮಾತ್ರ ತೆರೆದಿರುತ್ತಾನೆ. ಶಿವನ ಅರ್ಧ ತೆರೆದ ಕಣ್ಣುಗಳು ಬ್ರಹ್ಮಾಂಡದ ಸುರಕ್ಷತೆಯನ್ನು ಸೂಚಿಸುತ್ತದೆ. ಒಂದು ವೇಳೆ ಶಿವನು ತನ್ನ ಕಣ್ಣುಗಳನ್ನು ಸಂಪೂರ್ಣವಾಗಿ ತೆರೆದರೆ ಇಡೀ ಬ್ರಹ್ಮಾಂಡವೇ ನಾಶವಾಗುತ್ತದೆ. ಬ್ರಹ್ಮಾಂಡದ ಶಾಶ್ವತ ಉಳಿವಿಗಾಗಿ ಶಿವನು ತನ್ನ ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡಿರುತ್ತಾನೆ.

ಕುತ್ತಿಗೆಯನ್ನು ಸುತ್ತಿರುವ ಹಾವು

ಶಿವನು ತನ್ನ ಗುತ್ತಿಗೆಗೆ ಹಾವನ್ನು ಸುತ್ತಿಕೊಂಡಿರುತ್ತಾನೆ. ಹಾಗೂ ಈ ಹಾವು ಶಿವನ ಕುತ್ತಿಗೆಯನ್ನು ಮೂರು ಸುತ್ತು ಸುತ್ತಿಕೊಂಡಿರುತ್ತದೆ. ಶಿವನ ಕುತ್ತಿಗೆಯಲ್ಲಿನ ಹಾವಿನ ಮೂರು ಸುರುಳಿಗಳು ಭೂತ, ವರ್ತಮಾನ ಮತ್ತು ಭವಿಷ್ಯತ್‌ ಕಾಲವನ್ನು ಸೂಚಿಸುತ್ತದೆ. ಶಿವನೊಳಗಿನ ಕುಂಡಲಿನಿ ಶಕ್ತಿ ಎಂದು ಕರೆಯಲ್ಪಡುವ ಸುಪ್ತ ಶಕ್ತಿಯನ್ನು ಇದು ಪ್ರತಿನಿಧಿಸುತ್ತದೆ.

​ಹಣೆಯಲ್ಲಿನ ಮೂರು ಪಟ್ಟಿಗಳು

ಶಿವನ ಹಣೆಯ ಮೇಲಿನ ಮೂರು ಪಟ್ಟಿಗಳು ಮೂರು ಗುಣಗಳ ಸಂಕೇತವಾಗಿದೆ. ಈ ಮೂರು ಪಟ್ಟಿಗಳು ತಮೋಗುಣ, ರಜೋಗುಣ ಮತ್ತು ಸತ್ವಗುಣ ಈ ಮೂರು ಗುಣವನ್ನು ಸೂಚಿಸುತ್ತದೆ. ಶಿವನನ್ನು ಅನುಸರಿಸುವುದರಿಂದ ಮೂರು ಸದ್ಗುಣಗಳನ್ನು ಪಡೆದುಕೊಳ್ಳಬಹುದು.

ಹುಲಿ ಚರ್ಮ

ಹುಲಿಯು ಶಕ್ತಿ ದೇವತೆಯಾದ ದುರ್ಗೆಯನ್ನು ಪ್ರತಿನಿಧಿಸುತ್ತದೆ. ಹುಲಿ ಚರ್ಮವನ್ನು ಧರಿಸಿದ ಶಿವನು ತನ್ನ ಶಕ್ತಿಯನ್ನು ಪ್ರತಿನಿಧಿಸುತ್ತಾನೆ ಮತ್ತು ಅವನು ಉಳಿದೆಲ್ಲಾ ಶಕ್ತಿಗಳಿಗಿಂತಲೂ ಉತ್ತಮನು ಎಂದು ಪ್ರತಿನಿಧಿಸುತ್ತದೆ. ಹುಲಿಯು ಶಕ್ತಿಯ ಸಂಕೇತವಾಗಿದ್ದು, ಶಿವನು ಬ್ರಹ್ಮಾಂಡವನ್ನೇ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾನೆಂಬೂದನ್ನು ಹೇಳುತ್ತದೆ. ಶಿವನು ತನ್ನದೇ ಆದ ದೈವಿಕ ಶಕ್ತಿಯನ್ನು ಹೊಂದಿದವನಾಗಿದ್ದಾನೆ.

​ರುದ್ರಾಕ್ಷಿ ಹಾರ

ರುದ್ರಾಕ್ಷಿ ಮಣಿಯು ಶಿವನ ಕಣ್ಣೀರಿನಿಂದ ಸೃಷ್ಟಿಯಾದ ಮಣಿಯೆಂಬ ನಂಬಿಕೆಯಿದೆ. ಶಿವನು ಧರಿಸಿರುವ ರುದ್ರಾಕ್ಷಿಯಲ್ಲಿ ಸುಮಾರು 108 ಮಣಿಗಳಿವೆ ಎನ್ನಲಾಗುತ್ತದೆ. ಶಿವನು ರುದ್ರಾಕ್ಷಿಯನ್ನು ಧರಿಸಿದನೆಂದರೆ ಆತನು ಕಾಸ್ಮಿಕ್‌ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಹಾಗೂ ಬ್ರಹ್ಮಾಂಡದ ನಿಯಮಗಳ ಬಗ್ಗೆ ದೃಢವಾಗಿದ್ದಾನೆ ಎನ್ನುವುದನ್ನು ಅರ್ಥೈಸುತ್ತದೆ.

​ಡಮರು

ಶಿವನ ಕೈಯಲ್ಲಿರುವ ಡಮರು ಕಾಸ್ಮಿಕ್ ಶಬ್ಧವನ್ನು ಪ್ರತಿನಿಧಿಸುತ್ತದೆ. ಡಮರುಗದಿಂದ ಹೊರಹೊಮ್ಮುವ ಶಬ್ಧವನ್ನು ಪ್ರಣವಾಮಂಡ್‌ ಎಂದು ಕರೆಯಲಾಗುತ್ತದೆ. ಹಾಗೂ ಇದರ ಶಬ್ಧವು ಶಬ್ಧ ಬ್ರಹ್ಮ ಅಥವಾ ಓಂ ಅನ್ನು ಪ್ರತಿನಿಧಿಸುತ್ತದೆ. ಓಂ ಕಾಸ್ಮಿಕ್‌ ಶಬ್ಧವಾಗಿದ್ದು, ಧ್ಯಾನದ ಸಮಯದಲ್ಲಿ ಈ ಶಬ್ಧವನ್ನು ಉಚ್ಛರಿಸಲುಬಹುದು ಹಾಗೂ ಕೇಳಲುಬಹುದು. ಧರ್ಮಗ್ರಂಥಗಳ ಪ್ರಕಾರ, ಶಿವನು ಡಮರುವನ್ನು ಸುಮಾರು 14 ಬಾರಿ ನುಡಿಸುತ್ತಾನೆಂದು ಹೇಳಲಾಗಿದೆ. ಅಷ್ಟು ಮಾತ್ರವಲ್ಲ, ಶಿವನ ಕೈಯಲ್ಲಿನ ಡಮರು ವರ್ಣಮಾಲೆಗಳನ್ನು, ವ್ಯಾಕರಣವನ್ನು ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ.

​ತ್ರಿಶೂಲ

ತ್ರಿಶೂಲದಲ್ಲಿ ಮೂರು ಬಿಂದುಗಳುವೆ. ಈ ಮೂರು ಬಿಂದುಗಳು ಶಿವನ ಮೂರು ವಿವಿಧ ಮೂಲಭೂತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆ ಶಕ್ತಿಗಳೆಂದರೆ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಹಾಗೂ ಜ್ಞಾನ ಶಕ್ತಿಗಳಾಗಿವೆ. ಶಿವನು ದುಷ್ಟಶಕ್ತಿಗಳನ್ನು, ದುಷ್ಟರನ್ನು ಮತ್ತು ಅಜ್ಞಾನವನ್ನು ನಾಶಮಾಡಬಲ್ಲನೆಂದು ಇದು ತಿಳಿಸುತ್ತದೆ.

ಕಮಂಡಲ

ಶಿವನು ಉಪಯೋಗಿಸುವ ಅಂಶಗಳಲ್ಲಿ ಕಮಂಡಲ ಕೂಡ ಒಂದಾಗಿದೆ. ಶಿವನ ಕೈಯಲ್ಲಿರುವ ಕಮಂಡಲವನ್ನು ಒಣಗಿದ ಕುಂಬಳಕಾಯಿಯಿಂದ ತಯಾರಿಸಲಾಗಿದ್ದು, ಇದರಲ್ಲಿ ಅಮೃತವಿರುತ್ತದೆ. ಕಮಂಡಲವು ಶಿವನ ಯೋಗಿ ಭಾಗವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಯೋಗಿಗಳು ಕಮಂಡಲವನ್ನು ಹಿಡಿದುಕೊಳ್ಳಲು ಇದು ಒಂದು ಕಾರಣ. ಶಿವನು ಹಿಡಿದಿರುವ ಕಮಂಡಲವು ಓರ್ವ ವ್ಯಕ್ತಿಯು ಭೌತಿಕ ಜಗತ್ತನ್ನು ತ್ಯಜಿಸಬೇಕು, ತನ್ನಲ್ಲಿನ ಅಹಂಕಾರವನ್ನು, ದುರಾಸೆಯನ್ನು, ಹಿಂಸೆಯನ್ನು ಹಾಗೂ ಅತಿಯಾದ ಕೋಪವನ್ನು ತ್ಯಜಿಸಬೇಕೆಂಬುದನ್ನು ಇದು ಸೂಚಿಸುತ್ತದೆ.

​ಕುಂಡಲಗಳು

ಶಿವನ ಕುಂಡಲಗಳು ಆತನ ಕಿವಿಯೋಲೆಗಳನ್ನು ಸೂಚಿಸುತ್ತದೆ. ಕುಂಡಲಗಳು ಶಿವ ಮತ್ತು ಶಕ್ತಿಯ ಸ್ವರೂಪವನ್ನು ಪ್ರತಿನಿಧಿಸುತ್ತದೆ ಹಾಗೂ ಶಿವನ ಅಗ್ರಾಹ್ಯ ಸ್ವರೂಪವನ್ನು ಸೂಚಿಸುತ್ತದೆ. ಕುಂಡಲವನ್ನು ಪುರುಷರು ತಮ್ಮ ಬಲಭಾಗದ ಕಿವಿಗೆ ಹಾಕುತ್ತಾರೆ. ಹಾಗೂ ಮಹಿಳೆಯರು ತಮ್ಮ ಎಡಭಾಗದ ಕಿವಿಗೆ ಧರಿಸುತ್ತಾರೆ. ಶಿವನ ಅರ್ಧನಾರೀಶ್ವರ ರೂಪ ಮಾತ್ರವಲ್ಲ, ಆತನು ಧರಿಸುವ ಕುಂಡಲಗಳು ಕೂಡ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರು ಸಮಾನರು ಎನ್ನುವುದನ್ನು ಸಾರುತ್ತದೆ.

​ಕೈಲಾಸ ಪರ್ವತ

ಹಿಂದೂ ಧರ್ಮದಲ್ಲಿ ಕೈಲಾಸ ಪರ್ವತವನ್ನು ಶಿವನ ವಾಸಸ್ಥಾನವೆಂದು ಹೇಳಲಾಗುತ್ತದೆ. ಹಾಗೂ ಪರ್ವತವು ಬ್ರಹ್ಮಾಂಡದ ಕೇಂದ್ರ ಬಿಂದುವೆಂದು ಹೇಳಲಾಗುತ್ತದೆ. ಶಿವನು ಶಾಂತಿಯನ್ನು ನೀಡುವ ಕೈಲಾಸವೆಂದು ಪರ್ವತವು ಸೂಚಿಸುತ್ತದೆ.

​ನಂದಿ

ನಂದಿಯನ್ನು ನಾವು ಪ್ರತಿಯೊಂದು ಶಿವ ದೇವಾಲಯಗಳಲ್ಲಿ ನೋಡಬಹುದು. ನಂದಿಯನ್ನು ಶಿವನ ಸಂದೇಶವಾಹಕ ಹಾಗೂ ಶಿವನ ವಾಹನವೆಂದು ಪರಿಗಣಿಸಲಾಗುತ್ತದೆ. ನಂದಿಯನ್ನು ಸಂಸ್ಕೃತದಲ್ಲಿ ವೃಷ ಎಂದು ಕರೆಯಲಾಗುತ್ತದೆ. ವೃಷ ಎಂದರೆ ಸದಾಚಾರ ಎಂದರ್ಥ.
***
ಶಿವಲಿಂಗಪ್ರಾಚೀನನ್ಯೂಕ್ಲಿಯರ್_ರಿಯಾಕ್ಟರಿನ ಸಂಕೇತವೆ? 🙄🤔

ಜಗತ್ತಿನ ಮೊತ್ತ ಮೊದಲ ಪರಮಾಣು ಶಸ್ತ್ರಾಸ್ತ್ರಗಳ ನಿರ್ಮಾಪಕ ಕೈಲಾಸವಾಸಿ ಶಿವನೆ?

ಸನಾತನ ಧರ್ಮ ದ್ವೇಷಿಗಳ ಕೈಯಲ್ಲಿ ಅಶ್ಲೀಲತೆಯ ಸಂಕೇತವೆಂದು ಕರೆಸಿಕೊಳ್ಳುವ ಶಿವಲಿಂಗದ ನಿಜವಾದ ರಹಸ್ಯವೇನೆಂದು ತಿಳಿದರೆ ಮುಂದೆಂದೂ ಸನಾತನ ಧರ್ಮದ ಬಗ್ಗೆಯಾಗಲೀ ಅಥವಾ ದೇವರುಗಳ ಬಗ್ಗೆಯಾಗಲೀ ಕೀಳಾಗಿ ಮಾತನಾಡಲಾರಿರಿ. 

ಶಿವಲಿಂಗವನ್ನು ಪುರುಷ ಮತ್ತು ಸ್ತ್ರೀ ಜನನಾಂಗಕ್ಕೆ ಹೋಲಿಸಿ ಅದರಲ್ಲಿ ಅಶ್ಲೀಲತೆಯನ್ನು ತುಂಬುವ ಪ್ರಯತ್ನಗಳು ನಡೆಯುತ್ತಲೆ ಬಂದಿದೆ. ಆದರೆ ಶಿವಲಿಂಗದ ಹಿಂದಿರುವ ರಹಸ್ಯವೆ ಬೇರೆ!

ಶಿವಲಿಂಗಬ್ರಹ್ಮಾಂಡದಆಕಾರವೆ? 🤔

ಆಧ್ಯಾತ್ಮದ ಪ್ರಕಾರ ನಮ್ಮ ಬ್ರಹ್ಮಾಂಡವು ಶಿವಲಿಂಗದ ಆಕಾರದಲ್ಲಿದೆ ಮೇರು ದಂಡದ ಸುತ್ತ ಸುತ್ತುವ ನಮ್ಮ ಬ್ರಹ್ಮಾಂಡದ ಆಕಾರವನ್ನು ತೋರಿಸುವುದಕ್ಕಾಗಿಯೆ ಶಿವಲಿಂಗವನ್ನು ನಮ್ಮ ಪೂರ್ವಜರು ನಿರ್ಮಾಣ ಮಾಡಿದ್ದರು.

ಅಂತರಿಕ್ಷದಲ್ಲಿ ನಡೆಯುತ್ತಿರುವ ಸಂಶೋಧನೆಗಳೂ ಕೂಡಾ ನಮ್ಮ ಬ್ರಹ್ಮಾಂಡ ಶಿವಲಿಂಗದ ಆಕಾರದಲ್ಲಿದೆ ಎಂದು ಹೇಳುತ್ತವೆ! ಹಾಗಾದರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬ್ರಹ್ಮಾಂಡದ ಆಕಾರವನ್ನು ಇಷ್ಟು ಸ್ಪಷ್ಟವಾಗಿ ಕಂಡುಕೊಂಡಿದ್ದು ಹೇಗೆ?

‘ಶಿವ’ ಅಂದರೆ ಕಾಲಾತೀತ, ನಿರಾಕಾರ, ನಿರ್ಗುಣ, ಶೂನ್ಯ, ಆದಿ-ಅಂತ್ಯವಿಲ್ಲದ್ದು. ಶಿವಲಿಂಗದ ಅಂಡಾಕಾರದ ರಚನೆಯನ್ನು “ಶಕ್ತಿ” ಅಥವಾ ಯೋನಿ ಅನ್ನುತ್ತಾರೆ. ಇದು ಮನುಷ್ಯ ಶರೀರಕ್ಕೆ ಸಂಬಂಧ ಪಟ್ಟದ್ದಲ್ಲ, ಬದಲಾಗಿ ಬ್ರಹ್ಮಾಂಡಕ್ಕೆ ಸಂಬಂಧ ಪಟ್ಟಿದೆ. 

ಒಂದು ಅವಿಛಿನ್ನ ಶಕ್ತಿಯ ಮೇಲೆ ಸಂಪೂರ್ಣ ಬ್ರಹ್ಮಾಂಡವೆ ನಿಂತಿದೆ ಎನ್ನುವುದನ್ನು ಶಿವಲಿಂಗದ ಆಕಾರದಲ್ಲಿ ತೋರಿಸಿಕೊಟ್ಟಂತಹ ಜಾಣರು ನಮ್ಮ ಪೂರ್ವಜರು. ಯಾವುದೇ ವಿಜ್ಞಾನಿಗೂ ಬ್ರಹ್ಮಾಂಡದ ಆದಿ ಅಂತ್ಯವನ್ನು, ಸೃಷ್ಟಿ ರಚನೆಯ ರಹಸ್ಯವನ್ನು ಕಂಡುಹಿಡಿಯಲಾಗಿಲ್ಲ!

ಶಿವಲಿಂಗ ನ್ಯೂಕ್ಲಿಯರ್ ರಿಯಾಕ್ಟರ್ ನ ಪ್ರತೀಕವೆ? 🤔

ಇರಬಹುದೆನ್ನುತ್ತದೆ ವಿಜ್ಞಾನ!! ಶಿವಲಿಂಗ ಮತ್ತು ನ್ಯೂಕ್ಲಿಯರ್ ರಿಯಾಕ್ಟರ್ ಗಳಲ್ಲಿ ಅನೇಕ ಸಾಮ್ಯತೆಗಳಿವೆ.

ಎರಡರ ಆಕಾರವೂ ಒಂದೇ ತೆರನಾಗಿದೆ ಹೇಗೆ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕವಾಗುತ್ತಿರಬೇಕೋ ಹಾಗೆಯೆ ನ್ಯೂಕ್ಲಿಯರ್ ರಿಯಾಕ್ಟರ್ ಗಳ ಒಳಗೆಯೂ ನೀರು ಪ್ರವಹಿಸುತ್ತಲೆ ಇರಬೇಕು. ನ್ಯೂಕ್ಲಿಯರ್ ರಿಯಾಕ್ಟರ್ ನೊಳಗೆ ಪರಮಾಣುಗಳ ಸಂಯೋಜನೆ ನಡೆಯುವಾಗ ಆಗಾಧ ಪ್ರಮಾಣದ ಶಾಖ ಮತ್ತು ವಿಕಿರಣ ಉತ್ಪತ್ತಿಯಾಗುತ್ತದೆ, ಈ ವಿಕಿರಣಗಳ ಕಲ್ಮಶಗಳನ್ನು ಹೊರಸಾಗಿಸುತ್ತಿರಬೇಕು. ಈ ನೀರು ಅತ್ಯಂತ ಅಪಾಯಕಾರಿ ಇದನ್ನು ಕುಡಿದರೆ ಸಾವು ನಿಶ್ಚಿತ
ನೀವು ಗಮನಿಸಿರಬಹುದು ಶಿವಲಿಂಗಕ್ಕೆ ಅಭಿಷೇಕ ಮಾಡಿದ ನೀರನ್ನು ಇಲ್ಲವೆ ಹಾಲನ್ನು ತೀರ್ಥದ ರೂಪದಲ್ಲಿ ಕುಡಿಯುವಂತಿಲ್ಲ. ಶಿವಲಿಂಗಕ್ಕೆ ಅಭಿಷೇಕವಾದ ದ್ರವ್ಯಗಳು ಕುಡಿಯಲು ಯೋಗ್ಯವಲ್ಲ ಎನ್ನುವುದು ಇದು ಒಂದು ನ್ಯೂಕ್ಲಿಯರ್ ರಿಯಾಕ್ಟರ್ ನ ಪ್ರತೀಕವಾಗಿದ್ದಿರಬಹುದು ಎಂದು “BARC Atomic Reactor – The True Story” ಪುಸ್ತಕದ ಲೇಖಕ ಪ್ರೊಫೆಸರ್ ಒ.ಪಿ.ನಾಕ್ ಹೇಳುತ್ತಾರೆ.

ಇನ್ನು ಶಿವನ ದೇವಸ್ಥಾನಗಳಲ್ಲಿ ಸಂಪೂರ್ಣ ಪ್ರದಕ್ಷಿಣೆ ಹಾಕುವ ಪರಿಪಾಠವಿಲ್ಲ. ಲಿಂಗ ರೂಪದಲ್ಲಿ ಪೂಜಿಸಲ್ಪಡುವ ಶಿವನ ದೇವಸ್ಥಾನಗಳಲ್ಲಿ ಅರ್ಧ ಸುತ್ತು ಬಂದು ಮತ್ತೆ ಅಪ್ರದಕ್ಷಿಣಾಕಾರವಾಗಿ ಹಿಂತಿರುಗಿ ಬರಬೇಕು, ಇದೂ ಕೂಡಾ ಶಿವಲಿಂಗದಿಂದ ಹೊರಸೂಸುವ ವಿಕಿರಣದ ಪರಿಣಾಮ ನಮ್ಮ ಮೇಲೆ ಆಗದಿರಲೆಂದು ಮಾಡಿರುವ ಕಟ್ಟಳೆ ಇರಬಹುದು. 

ಎಷ್ಟೋ ಜನರಿಗೆ ಈ ಎಲ್ಲಾ ಕಟ್ಟಳೆಗಳ ಹಿಂದಿನ ವೈಜ್ಞಾನಿಕ ಸತ್ಯಗಳ ಅರಿವೇ ಇರುವುದಿಲ್ಲ ಸುಮ್ಮನೆ ಬೋಳೆ ಬಸವರಂತೆ ಯಾರು ಏನು ಹೇಳಿದರೂ ಅದನ್ನು ಪ್ರಶ್ನಿಸದೆ ನಂಬಿ ಪಾಲಿಸುತ್ತಿರುತ್ತಾರೆ.
ಇನ್ನು ಪುರಾಣಗಳನ್ನು ಅವಲೋಕಿಸಿದರೆ ಶಿವ ಪ್ರಪಂಚವನ್ನು ವಿನಾಶ ಮಾಡುವ ಶಕ್ತಿಯುಳ್ಳವನು ಒಬ್ಬ ವ್ಯಕ್ತಿಯ ಬಳಿ ಪರಮಾಣು ಬಾಂಬ್ ಅಥವಾ ಶಸ್ತ್ರಾಸ್ತ್ರ ಮಾಡುವ ಸಾಮರ್ಥ್ಯವಿದ್ದರೆ ಆತ ವಿನಾಶಕಾರಿ ಆಗಿರಲೇಬೇಕು, ಹೌದಲ್ಲವೆ? ಪುರಾಣಗಳಲ್ಲಿ, ರಾಮಾಯಣ ಮಹಾಭಾರತಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಶಿವ ತನ್ನ ಭಕ್ತರಿಗೆ ಅಸ್ತ್ರಗಳನ್ನು ದಯಪಾಲಿಸಿರುತ್ತಾನೆ ವಿಷ್ಣುವಿನ ಸುದರ್ಶನ ಚಕ್ರದಿಂದ ಹಿಡಿದು, ಅರ್ಜುನನ ಪಾಶುಪತಾಸ್ತ್ರದವರೆಗೂ ಎಲ್ಲವನ್ನು ನಿರ್ಮಿಸಿದವನು ಶಿವನೆ.

 ಅಂದರೆ ಶಿವನಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಮಾಡುವ ವಿದ್ಯೆ ತಿಳಿದಿತ್ತೆಂದಾಯ್ತು! ಒಂದು ಪರಮಾಣು ಬಾಂಬ್ ಇಡಿಯ ಪ್ರಪಂಚವನ್ನೆ ನಾಶ ಮಾಡಬಲ್ಲದು ಎನ್ನುವ ಸತ್ಯ ನಮಗೆಲ್ಲರಿಗೂ ತಿಳಿದಿದೆ. ಅಂತಹ ಸಾವಿರಾರು ಅಸ್ತ್ರಗಳನ್ನು ನಿರ್ಮಿಸುವ ಶಿವ ಇನ್ನೆಷ್ಟು ಶಕ್ತಿ ಶಾಲಿಯಾಗಿದ್ದಿರಬೇಕು? ಅದಕ್ಕೆ ದೇವ-ದಾನವರು ಶಿವನ ಧ್ಯಾನ ಮಾಡಿ ಆತನನ್ನು ಒಲಿಸಿಕೊಳ್ಳುತ್ತಿದ್ದುದು.
ಶಿವನನ್ನು ವಿಷಕಂಠನೆಂದೂ ಹೇಳಲಾಗುತ್ತದೆ ಅಂದರೆ ಶಿವನ ಮೇಲೆ ವಿಷದ ಪ್ರಭಾವ ನಗಣ್ಯ. ವಿಷವನ್ನು ಅರಗಿಸುವ ಶಕ್ತಿ ಶಿವನಿಗಲ್ಲದೆ ಬೇರಾರಿಗೂ ಇಲ್ಲ ಅಂದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವಾಗ ಹೊರಸೂಸುವ ವಿಷಾಕ್ತ ವಿಕಿರಣಗಳ ಪ್ರಭಾವವನ್ನು ಹೇಗೆ ಕಡಿಮೆಗೊಳಿಸಬಹುದೆನ್ನುವ ವಿದ್ಯೆ ಶಿವನಿಗೆ ಗೊತ್ತಿತ್ತು.
ಇತ್ತೀಚೆಗೆ ನಡೆದ ಸಂಶೋಧನೆಗಳಲ್ಲಿ ಕೈಲಾಸ ಪರ್ವತ ಒಂದು ಮಾನವ ನಿರ್ಮಿತ ಪಿರಮಿಡ್ ಎನ್ನುತ್ತಾರೆ ವಿಜ್ಞಾನಿಗಳು. 

ಶಿವನ ಆವಾಸಸ್ಥಾನ ಒಂದು ಪಿರಮಿಡ್ ಮತ್ತು ಅದರೊಳಗೆ ಈಗಲೂ ಶಿವ ತನ್ನ ಗಣಗಳ ಜೊತೆ ವಾಸವಾಗಿದ್ದಾನೆ ಎಂದು ವಿಜ್ಞಾನ ಮತ್ತು ಆಧ್ಯಾತ್ಮಗಳೆರಡೂ ನಂಬುತ್ತವೆ, ಕೈಲಾಸ ಪರ್ವತದ ಸುತ್ತಲೂ ರೇಡಿಯೋ ತರಂಗಗಳು ಪ್ರವಹಿಸುತ್ತಿರುತ್ತವೆ ಹಾಗಾಗಿ ಇದನ್ನು ಹತ್ತಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ ಆದರೆ ಒಬ್ಬರನ್ನು ಹೊರತುಪಡಿಸಿ ಬೌದ್ಧ ಮುನಿ ಮಿಲರೇಪ 11ನೇ ಶತಮಾನದಲ್ಲಿ ಕೈಲಾಸ ಪರ್ವತದ ಶಿಖರಕ್ಕೆ ಹತ್ತಿದರು ಎಂದು ಹೇಳಲಾಗುತ್ತೆ ಈ ಎಲ್ಲಾ ಬಿಂದುಗಳನ್ನು ಒಟ್ಟುಗೂಡಿಸುವಾಗ ಶಿವನಿಗೆ ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ಮಾಡುವ ಬಗ್ಗೆ ತಿಳಿದಿತ್ತು ಮತ್ತು ಶಿವಲಿಂಗವು ಅದೆ ಪರಮಾಣು ರಿಯಾಕ್ಟರಿನ ಪ್ರತೀಕವಾಗಿದ್ದಿರಬಹುದು ಎನ್ನುವ ನಂಬಿಕೆಗಳು ಬಲವಾಗುತ್ತಾ ಹೋಗುತ್ತವೆ.

ಇನ್ನಾದರೂ ಶಿವಲಿಂಗದಲ್ಲಿ ಅಶ್ಲೀಲತೆಯನ್ನು ಹುಡುಕುವುದನ್ನು ಬಿಟ್ಟು, ನಮ್ಮ ಪೂರ್ವಜರ ಅಗಾಧ ಜ್ಞಾನಕ್ಕೆ ಒಂದು ದೀರ್ಘದಂಡ ನಮಸ್ಕಾರ ಹೊಡೆಯಿರಿ.
***
ತ್ರೈಗುಣ್ಯ ಮತ್ತು ತ್ರೈಲೋಕದ ಸಂಕೇತ - ಮಹಾಶಿವನ ತ್ರಿಶೂಲವು: -"

1.ಶಿವನ ತ್ರಿಶೂಲವು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ಪ್ರತಿನಿಧಿಸುತ್ತದೆ ಹಾಗೂ ಈ ಅಂಶಗಳು ಜಗತ್ತಿನ ವಾತಾವರಣದಲ್ಲಿರುತ್ತದೆ.

2. ತ್ರಿಶೂಲವು ಶಿವನ ಆಯುಧವಾಗಿದ್ದು, ಆತನು "ತ್ರಿ"ಶೂಲದಿಂದ ಮೂರು ಲೋಕಗಳನ್ನು ನಾಶಮಾಡಬಲ್ಲನು ಎಂದರ್ಥ. ಅಂದರೆ, ಆಕಾಶ, ಪಾತಾಳ ಮತ್ತು ಭೂಮಿ [ ಪೃಥ್ವಿ ]. ಈ ಮೂರು ಲೋಕಗಳ ಅಳಿವು - ಉಳಿವು ಶಿವನ ತ್ರಿಶೂಲದ ಹೊಡೆತದಲ್ಲಿರುತ್ತದೆ.

3. ನಮ್ಮ ಶರೀರಕಾಯದಲ್ಲಿ ಶಿವನ ತ್ರಿಶೂಲದ ಸಂಕೇತವು ನಮ್ಮ ಕಣ್ಣಿನ ಹುಬ್ಬುಗಳ ನಡುವೆ ಕೇಂದ್ರೀಕೃತವಾಗಿರುತ್ತದೆ.
***



***


No comments:

Post a Comment