SEARCH HERE

Tuesday 1 January 2019

ಕಾರ್ಯಸಿದ್ಧಿ ಹನುಮಂತ ಶ್ಲೋಕಗಳನ್ನು ಪಠಿಸುವುದರಿಂದ ಪರಿಹಾರ karyasiddhi hanuman parihara


ಕಾರ್ಯಸಿದ್ಧಿಯನ್ನು ಹೊಂದಲು ಶಕ್ತಿವಂತವಾತ ಆಂಜನೇಯ ಸ್ವಾಮಿಯ ಶ್ಲೋಕಗಳು.

ಹನುಮಂತನು ಕಾರ್ಯಸಾಧಕನು, ಭಕ್ತಿಯಿಂದ ಹನುಮಂತನ್ನು ಆರಾಧನೆ ಮಾಡುವವರಿಗೆ ಅವರ ಕೋರಿಕೆಗಳು ಖಂಡಿತವಾಗಿ ನೆರವೇರಿತ್ತವೆ. ಭಕ್ತರ ಕೋರಿಕೆಯನ್ನು ಅನುಸರಿಸಿ ಆಂಜನೇಯ ಸ್ವಾಮಿಯ ಶ್ಲೋಕಗಳನ್ನು ಭಕ್ತಿಯಿಂದ ಪಠಿಸುವುದರಿಂದ ತಮ್ಮ ತಮ್ಮ ಕಾರ್ಯ ಸಿದ್ಧಿಯನ್ನು ಸಾಧಿಸಬಹುದು

 1.-  *ವಿದ್ಯಾ ಪ್ರಾಪ್ತಿಗೆ

ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |
ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||

 2. :- *ಉದೋಗ ಪ್ರಾಪ್ತಿಗೆ

ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |
ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ ||

 3.  :- ಕಾರ್ಯ ಸಾಧನೆಗೆ

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||

 *4.  :- ಗ್ರಹದೋಷ ನಿವಾರಣೆ

ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||

 5. :- ಆರೋಗ್ಯಮುನಕು 

ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||

 6. - ಸಂತಾನ ಪ್ರಾಪ್ತಿಗೆ 

ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||

 7. :- ವ್ಯಾಪಾರಾಭಿವೃದ್ಧಿಗೆ 

ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|
ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||

 8. :- ವಿವಾಹ ಪ್ರಾಪ್ತಿಗೆ 

ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |
*ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||

ಈ ಶ್ಲೋಕಗಳನ್ನು ಆಯಾ ಕಾರ್ಯಸಿದ್ಧಿಗೆ ಅನುಗುಣವಾಗಿ ಕೋರಿಗೆಗಳು ಇರುವವರು 48 ದಿನಗಳು ನಿಷ್ಟೆಯಿಂದ್ ಪಠನೆ ಮಾಡಿದರೆ ಅಥವಾ ಪ್ರತಿ ದಿನವೂ ಆಂಜನೇಯ ಸ್ವಾಮಿ ಗುಡಿಗೆ ಹೋಗಿ ಶಕ್ತಿಯಷ್ಟು ಪ್ರದಕ್ಷಿಣೆಯ ಸಂಖ್ಯಾ ನಿಯಮವನ್ನು ಅನುಸರಿಸಿ ಪ್ರದಕ್ಷೆಗಳನ್ನು ಹಾಕಿ ಜಪ ಸಂಖ್ಯೆಯಷ್ಟು ಜಪವನ್ನು ಶಕ್ತಿಗನುಸಾರ ಮಾಡಿ ಹನುಮಂತನ ಪೂಜೆಯನ್ನು ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ.

ಇದು ಜನಸಂಖ್ಯೆ ಕೆಲಸಕ್ಕೆ ಅನುಗುಣವಾಗಿ ಜಪ ಸಂಖ್ಯೆ ಮುಖ್ಯ
3
9
27 
54
108
1008

ಸರಳ ಪರಿಹಾರ
***
ಒಂದೇ ದಿನದಲ್ಲಿ ಈ ಮೂರು ಮುಖ್ಯಪ್ರಾಣದೇವರ ದರ್ಶನ ವಿಶೇಷ ಫಲ ...ಅದು ಶನಿವಾರ ವಿದ್ದರೆ ಅತ್ಯಂತ ವಿಶೇಷ ಫಲ ಅದು ಅಧಿಕಮಾಸವಾದರಂದು  ಕಾಶೀಯಾತ್ರಾ ವಿಶೇಷ ಫಲ ಅನ್ನುವುದು ಹಿರಿಯರ ಅನುಭವದ ಮಾತುಗಳು.....ಇದಲ್ಲದೇ ಮತ್ತೊಂದು ಅತ್ಯದ್ಭುತವಾದದ್ದು ಏನೆಂದರೆ ಈ ಮೂರು ಪ್ರಾಣದೇವರ ಮೂರ್ತಿಗಳಲ್ಲಿ ಶಾಲಿಗ್ರಾಮಾದಿಗಳ ಸನ್ನಿಧಾನ ವಿರುವುದು ಅದನ್ನು ಅಷ್ಟೊಂದು ಸನ್ನಿಧಾನೊಪೇತ ಕ್ಷೇತ್ರಗಳಾಗಿ ಮನೆ ಮನೆ ಮಾತಾಗಿರುವುದು ದೂರ್ವಾಸರು,ವಶಿಷ್ಠರು (ವ್ಯಾಸರಾಜರಿಂದ ಪುನರ್ಪ್ರತಿಷ್ಠೆಗೊಂಡಿರುವುದು) ಮತ್ತು ಸೂರ್ಯಾಂಶ ಸಂಭೂತರಾದ   ಶ್ರೀಬ್ರಹ್ಮಣ್ಯತೀರ್ಥರಂಥ ಅಪರೋಕ್ಷೀಜ್ಞಾನಿಗಳಿಂದ ಪ್ರತಿಷ್ಠೆ ಮತ್ತು ಪುನರ್ ಪ್ರತಿಷ್ಠಾಪನೆಗೊಂಡಿರುವುವಂಥವುದು...ಹೇಳ್ತಾ ಹೋದ್ರೆ ವಿಶೇಷಗಳ ಮೇಲೆ ವಿಶೇಷ ಸಂಗತಿಗಳ ಮಾಹಿತಿ ಸಿಗುತ್ತಾ ಹೋಗುತ್ತೆ...ಈ ಮೂರು ಮುಖ್ಯಪ್ರಾಣದೇವರು ಅವತಾರತ್ರಯ ರೂಪಗಳಲ್ಲಿವೆ...

ಭ್ರಾಂತೇಶ,ಕಾಂತೇಶ ಮತ್ತು ಶಾಂತೇಶ 

೧) ಶಿಕಾರಿಪುರ (ಶಿವಮೊಗ್ಗ) ಭ್ರಾಂತೇಶ (ಹುಚ್ಚೂರಾಯ ಅಂತಾನು ಕರಿತಾರೆ)...ಮೂಗಿನ ಭಾಗದಲ್ಲಿ ಶಾಲಿಗ್ರಾಮವನ್ನು ಕಾಣಬಹುದು....ಅವತಾರತ್ರಯ ಹನುಮಂತದೇವರ ಅವತಾರದಲ್ಲಿ ನೆಲೆಗೊಂಡು ಭ್ರಾಂತಿಯನ್ನು ಬುಡಸಹಿತ ಕಿತ್ತು ಹಾಕುವವ...ಮೂಗಿನಿಂದ ನಾವುಗಳು ಕೆಟ್ಟ ಉಸಿರನ್ನು ದೇಹದ ಒಳಗೆ ತೆಗೆದುಕೊಂಡಾಗ ನಾನಾ ವಿಧವಾದ ಭ್ರಾಂತಿಗಳು ನಮ್ಮ ಮನಸ್ಸಿಗೆ ಮತ್ತು ದೇಹದೊಳಗೆ ಸೇರಿಕೊಳ್ಳಬಹುದು.
ಭಾಂತಿ ಅಂದರೆ ಹುಚ್ಚು ಈಶ ಅದನ್ನು ಬಡಿಸುವವ... ದರ್ಶನ 
ಅಪೇಕ್ಷಿಗಳಿಗೆ,ಸಾಧಕರಿಗೆ,ಭಕ್ತರಿಗೆ ನಾನಾ ವಿಧವಾದ ಅಜ್ಞಾನದ ಭ್ರಾಂತಿಯನ್ನು ಅಂದರೆ ಹುಚ್ಚನ್ನು ಬಿಡಿಸಿ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವವ ಎಂದರ್ಥ. 

೨) ಕದರಮಂಡಲಗಿ ಕಾಂತೇಶ:  
ಹಾವೇರಿ ಬ್ಯಾಡಗಿ ತಾಲೂಕಿನಲ್ಲಿ ಬರುವ ಕದರಮಂಡಲಗಿ ಕ್ಷೇತ್ರದಲ್ಲಿ ನೆಲೆಗೊಂಡಿರುವ  ಭೀಮಸೇನ ಅವತಾರದಲ್ಲಿ ನೆಲೆಸಿ  ದರ್ಶನ ಮಾಡುವ ಭಕ್ತರಿಗೆ ಭೂತ,ಪ್ರೇತ-ಪೀಶಾಚಾದಿಗಳಂಥ  ದುಷ್ಟ ಬಾಧೆ ಬಿಡಿಸಲು ಪ್ರಾಣದೇವರ ಕೈಯಲ್ಲಿ ನಾವುಗಳು ಗದೆಯನ್ನು ಕಾಣಬಹುದು. ಎರಡು ಕಣ್ಣುಗಳಲ್ಲಿ ಸೂರ್ಯ ಶಾಲಿಗ್ರಾಮಗಳ ದೃಷ್ಟಿಯಿಂದ ದರ್ಶನಾಪೇಕ್ಶಿಗಳಿಗೆ ಉತ್ತಮವಾದಂಥ ಕಾಂತಿಯನ್ನು ಕೊಡುವವನು.

೩) ಸಾತೇನಹಳ್ಳಿ ಶಾಂತೇಶ :  
ಹಾವೇರಿ ಹಿರೇಕೆರೂರ(ಹಂಸಭಾವಿ) ತಾಲೂಕಿನ ಸಾತೇನಹಳ್ಳಿ ಶಾಂತೇಶ. ಶ್ರೀಆನಂದತೀರ್ಥ ಭಗವದ್ಪಾದಾಚಾರ್ಯರ ಅವತಾರದಲ್ಲಿ ನೆಲೆಗೊಂಡು ಭಕ್ತರಿಗೆ ಭಗವಂತನ ಬಗ್ಗೆ ಶಾಂತವಾದ ಪರಿಶುದ್ಧವಾದ ಜ್ಞಾನವನ್ನು ಕೊಡುವವರು ಎಂಬರ್ಥದಲ್ಲಿ ಈ ಅವತಾರದಲ್ಲಿ ಪ್ರತಿಷ್ಥಿತ ಗೊಂಡಿರುವರು.ಕೆಲವರ ಮಾತು ಪಾದಲ್ಲಿ ಶಾಲಿಗ್ರಾಮವಿದೆ ಅಂತ ಇನ್ನೂ ಕೆಲವರ ಮಾತುಗಳು ಶಿರಭಾಗದಲ್ಲಿ ಶಾಲಿಗ್ರಾಮವಿರುವದು ಅಂತ ನನಗೂ ಕಂಡು ಬಂದಿರುವುದು ಶಿರ ಭಾಗದಲ್ಲಿಯೆ ಶಾಲಿಗ್ರಾಮ ಶ್ರೀಮದಾನಂದತೀರ್ಥಭಗವದ್ಪಾದಾಚಾರ್ಯರ ಅವತಾರ ಸಾಧಕರಿಗೆ ಪರಿಶುದ್ಧವಾದ ವೈರಾಗ್ಯಸಹಿತವಾದಂಥ ಜ್ಞಾನ,ಭಕ್ತಿ  ಅದೆ ಮುಂದೆ ಮೋಕ್ಷಕ್ಕೂ ಕಾರಣ ..ಹೀಗಾಗಿ ಶಿರದಲ್ಲಿಯೇ ಶಾಲಿಗ್ರಾಮವಿರುವುದು ಸೂಕ್ತವೆನಿಸುವುದು...

ವಿಶೇಷ : ಭ್ರಾಂತಿ ಮನಸ್ಸಿನಿಂದ ಆಚೆ ಹೊದರೆ ತಾನೇ ಕಾಂತಿ ಮತ್ತು ಶಾಂತವಾದ ಪರಿಶುದ್ಧವಾದ ಸವೈರಾಗ್ಯಸಹಿತವಾದಂಥ ಜ್ಞಾನದ ಅರಿವು ಸಾಧ್ಯ.


ಸಾಧಕರು,ಭಕ್ತಾದಿಗಳು ನಾನಾವಿಧವಾದ ತಾಪತ್ರಯಗಳಿಂದ ಮುಕ್ತಿಹೊಂದಿ ಭಗವಂತನ ಬಗ್ಗೆ ಸರ್ವೋತ್ತಮನಾದ  ಶ್ರೀಮನ್ ನಾರಾಯಣನ ಬಗ್ಗೆ ಪರಿಶುದ್ಧವಾದ ಜ್ಞಾನವನ್ನು ಪಡೆಯಲು(ಹೊಂದಲು) ಈ ಅವತಾರತ್ರಯ ಮುಖ್ಯಪ್ರಾಣದೇವರ ದರ್ಶನ ಅವಶ್ಯವಾಗಿ ಮಾಡಲು ಪ್ರಯತ್ನಿಸಿರಿ... 

ಗುರ್ವಂತರ್ಯಾಮೀ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನರಸಿಂಹದೇವರು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ..

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಕೃಷ್ಣಾರ್ಪಣಮಸ್ತು ||
*****


No comments:

Post a Comment