SEARCH HERE

Tuesday 1 January 2019

ಪಂಚಾಮೃತ ಮಂತ್ರ ವಿಶ್ಲೇಷಣೆ ಫಲ panchamruta mantra and other details phala


ಪಂಚಾಮೃತ ಮಂತ್ರ


ಪಂಚಾಮೃತ ಸ್ನಾನಾಭಿಷೇಕಮ್ ಕ್ಷೀರಾಭಿಷೇಕಂ
ಆಪ್ಯಾ’ಯಸ್ವ ಸಮೇ’ತು ತೇ ವಿಶ್ವತ’ಸ್ಸೋಮವೃಷ್ಣಿ’ಯಮ್ | ಭವಾವಾಜ’ಸ್ಯ ಸಂಗಧೇ || ಕ್ಷೀರೇಣ ಸ್ನಪಯಾಮಿ ||

ದಧ್ಯಾಭಿಷೇಕಂ
ದಧಿಕ್ರಾವಣ್ಣೋ’ ಅಕಾರಿಷಂ ಜಿಷ್ಣೋರಶ್ವ’ಸ್ಯ ವಾಜಿನಃ’ | ಸುರಭಿನೋ ಮುಖಾ’ಕರತ್ಪ್ರಣ ಆಯೂಗ್‍ಮ್’ಷಿತಾರಿಷತ್ || ದಧ್ನಾ ಸ್ನಪಯಾಮಿ ||

ಆಜ್ಯಾಭಿಷೇಕಂ
ಶುಕ್ರಮ’ಸಿ ಜ್ಯೋತಿ’ರಸಿ ತೇಜೋ’‌உಸಿ ದೇವೋವಸ್ಸ’ವಿತೋತ್ಪು’ನಾ ತ್ವಚ್ಛಿ’ದ್ರೇಣ ಪವಿತ್ರೇ’ಣ ವಸೋ ಸ್ಸೂರ್ಯ’ಸ್ಯ ರಶ್ಮಿಭಿಃ’ || ಆಜ್ಯೇನ ಸ್ನಪಯಾಮಿ ||

ಮಧು ಅಭಿಷೇಕಂ
ಮಧುವಾತಾ’ ಋತಾಯತೇ ಮಧುಕ್ಷರಂತಿ ಸಿಂಧ’ವಃ | ಮಾಧ್ವೀ”ರ್ನಸ್ಸಂತ್ವೋಷ’ಧೀಃ | ಮಧುನಕ್ತ’ ಮುತೋಷಸಿ ಮಧು’ಮತ್ಪಾರ್ಥಿ’ವಗ್ಂ ರಜಃ’ | ಮಧುದ್ಯೌರ’ಸ್ತು ನಃ ಪಿತಾ | ಮಧು’ಮಾನ್ನೋ ವನಸ್ಪತಿರ್ಮಧು’ಮಾಗ್ಮ್ ಅಸ್ತು ಸೂರ್ಯಃ’ | ಮಾಧ್ವೀರ್ಗಾವೋ’ ಭವಂತು ನಃ || ಮಧುನಾ ಸ್ನಪಯಾಮಿ ||

ಶರ್ಕರಾಭಿಷೇಕಂ
ಸ್ವಾದುಃ ಪ’ವಸ್ವ ದಿವ್ಯಾಯ ಜನ್ಮ’ನೇ ಸ್ವಾದುರಿಂದ್ರಾ”ಯ ಸುಹವೀ”ತು ನಾಮ್ನೇ” | ಸ್ವಾದುರ್ಮಿತ್ರಾಯ ವರು’ಣಾಯ ವಾಯವೇ ಬೃಹಸ್ಪತ’ಯೇ ಮಧು’ಮಾಗ್ಮ್ ಅದಾ”ಭ್ಯಃ || ಶರ್ಕರಯಾ ಸ್ನಪಯಾಮಿ ||

ಯಾಃ ಫಲಿನೀರ್ಯಾ ಅ’ಫಲಾ ಅ’ಪುಷ್ಪಾಯಾಶ್ಚ’ ಪುಷ್ಪಿಣೀ”ಃ | ಬೃಹಸ್ಪತಿ’ ಪ್ರಸೂತಾಸ್ತಾನೋ ಮುಂಚಸ್ತ್ವಗ್‍ಮ್ ಹ’ಸಃ || ಫಲೋದಕೇನ ಸ್ನಪಯಾಮಿ ||

ಶುದ್ಧೋದಕ ಅಭಿಷೇಕಂ
ಓಂ ಆಪೋ ಹಿಷ್ಠಾ ಮ’ಯೋಭುವಃ’ | ತಾ ನ’ ಊರ್ಜೇ ದ’ಧಾತನ | ಮಹೇರಣಾ’ಯ ಚಕ್ಷ’ಸೇ | ಯೋ ವಃ’ ಶಿವತ’ಮೋ ರಸಃ’ | ತಸ್ಯ’ ಭಾಜಯತೇ ಹ ನಃ | ಉಷತೀರಿ’ವ ಮಾತರಃ’ | ತಸ್ಮಾ ಅರ’ಂಗ ಮಾಮ ವಃ | ಯಸ್ಯ ಕ್ಷಯಾ’ಯ ಜಿ’ನ್ವಥ | ಆಪೋ’ ಜನಯ’ಥಾ ಚ ನಃ || ಇತಿ ಪಂಚಾಮೃತೇನ ಸ್ನಾಪಯಿತ್ವಾ ||

ಸರಳ ಪರಿಹಾರ'
*********

ದೇವರಿಗೆ "ಪಂಚಾಮೃತ" ಅಭಿಷೇಕದ ಫಲ ..!

( ಗುಂಜೂರು ರಾಮಚಂದ್ರ ಶಾಸ್ತ್ರಿಗಳ "ವ್ರತ ಮುಂಜೂಷ" ಗ್ರಂಥದಿಂದ ಸಂಗ್ರಹ ಮಾಡಲಾಗಿದೆ)

ಪಂಚಾಮೃತ

" ಕ್ಷೀರೇಣ ಕ್ಷೀಯತೇ ಪಾಪಂ|
ದಧ್ನಾ ಧನವಿವರ್ಧನಮ್ |
ಆಜ್ಯೇ ನಾಯುಷ್ಯ ಮಾಪ್ನೋತಿ|
ಮಧು ನಾಹಂತಿ ಕಿಲ್ಬಿಷಂ|
ಸುಖಿ ಶರ್ಕರಮು ವಿಂದ್ಯಾತ್|
ಪಂಚಾಮೃತ ಫಲಂ ಸ್ಮೃತಮ್ |
ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||
ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ..

ತಾತ್ಪರ್ಯ : " ಹಾಲಿನಿಂದ ಅಭಿಷೇಕ ಮಾಡಿದರೆ "ಪಾಪಗಳು ನಿವಾರಣೆಯಾಗುತ್ತದೆ (ಗೋಹತ್ಯಾದೋಷ ನಿವಾರಣೆಯಾಗುತ್ತದೆ)

ಮೊಸರು ಇಂದ ಅಭಿಷೇಕ ಮಾಡಿದರೆ ಧನಸಂಪತ್ತು ಅಧಿಕವಾಗಿ ಶ್ರೀಮಂತರಾಗುತ್ತೀರಿ..!

ತುಪ್ಪ ದಿಂದ ಅಭಿಷೇಕ ಮಾಡಿದರೆ ಆಯಸ್ಸು ಹೆಚ್ಚುವುದು. (ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ)

ಜೇನುತುಪ್ಪ ದಿಂದ ಅಭಿಷೇಕ ಮಾಡಿದರೆ ಜ್ಞಾನದಿಂದಲೋ, ಅಜ್ಞಾನದಿಂದಲೋ ಮಾಡಿದ ದೋಷಗಳು, (ಮಾತೃಹತ್ಯಾದೋಷ ನಿವಾರಣೆಯಾಗುತ್ತದೆ) ನಿವಾರಣೆಯಾಗುತ್ತದೆ..!

ಸಕ್ಕರೆ ಇಂದ ಅಭಿಷೇಕ ಮಾಡಿದರೆ ಸುಖ ಲಭಿಸುವುದು.. !

ಆದ ಕಾರಣ ದೇವರಿಗೆ ಪ್ರತ್ಯೇಕವಾಗಿಯೇ ಎಲ್ಲಾ ಸಾಮಗ್ರಿಗಳಿಂದ ಅಭಿಷೇಕ ಮಾಡಬೇಕು..!

ಎಲ್ಲವನ್ನೂ ಮಿಶ್ರಮಾಡಿ ಅಭಿಷೇಕ ಮಾಡಬಾರದು..! ಬೇರೆ ಬೇರೆಯಾಗಿಯೇ ಹಾಕಿ ಅಭಿಷೇಕ ಮಾಡಬೇಕು..!
************

ದೇವರಿಗೆ ಪಂಚಾಮೃತ ಅಭಿಷೇಕ ಮಾಡುವುದರಿoದ ದೊರೆಯುವ ಫಲ
 ಅಪರಾಧ ಹತ್ತಕ್ಕೆ ಅಭಿಷೇಕ ಉದಕ .ಅಪರಾಧ ನೂರಕ್ಕೆ ಕ್ಷೀರ ಹರಿಗೆ. ಅಪರಾಧ ಸಹಸ್ರಕ್ಕೆ ಹಾಲು ಮೋಸರು ಕಾಣೋ. ಅಪರಾಧ ಲಕ್ಕ್ಷಕ್ಕೆ ಜೇನು‌  ಅಪರಾಧ ಹತ್ತುೆ ಲಕ್ಷಕ್ಕೆ ಬಲುಪರಿ ಕ್ಷೀರ  ll
ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು. ಅಪರಾಧ ಕೋಟಿಗೆ ಸ್ವಚ್ಛ ಜಲ. ಅಪರಾಧ ಅನಂತ ಕ್ಷಮೆಗೆ ಗಂಧೋದಕ. ಉಪಮೆರಹಿತ ನಮ್ಮ ಪುರಂದರ ವಿಠಲಗೆ ಶಾಂತ ಮನವಯ್ಯ ಶಾಂತವಾಕ್ಯ.l l

ಕ್ಷೀರ ಸ್ನಾನo ಪ್ರಕುರ್ವೀತ ಯೇ ನರಾ ಮಮ ಮೂರ್ಧನಿ ಶತಾಶ್ವಮೇಧಜo ಪುಣ್ಯo ಬಿoದುನ ಸ್ಮೃತo 
ಭಗವoತ ಹೇಳುತ್ತಾನೆ .ಯಾವ ಮನುಷ್ಯನು ನನ್ನ ಶಿರಸ್ಸಿನಲ್ಲಿ ಹಾಲಿನಿoದ ಅಭಿಷೇಕ ಮಾಡುವನೋ ,ಅವನು ಒಂದೂoದು ಬಿoಧುವಿಗೂ ನೂರು ಅಶ್ವಮೇಧಯಾಗಗಳ ಪುಣ್ಯವನ್ನು
 ಹೊoದುತ್ತಾನೆ 
ಕೆಳಗೆ ನೀರುಪಣೆ ಮಾಡುವ ಶ್ಲೋಕ ಗಳ ಅರ್ಥವನ್ನೆ ದಾಸರಾಯರು ಇಲ್ಲಿ ತಿಳಿಸಿದ್ದಾರೆ 

ದಶಪರಾಧo ತೋಯೇನ ಕ್ಷೀರೇಣ  ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.
ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo  ಅನಂತo ಗಂಧವಾರಿಣಾ.
                             ಸ್ಕಂದ ಪುರಾಣ

ನೀರಿನಿoದ ಅಭಿಷೇಕ ಮಾಡುವವನ ಹತ್ತು ಅಪರಾಧಗಳನ್ನು ಶ್ರೀಹರಿಯು ಮನ್ನಿಸುವನು .ಹಾಲಿನಿoದ ಅಭಿಷೇಕ ಮಾಡುವವನ ನೂರು ಆಪರಾಧಗಳನ್ನು, ,ಮೊಸರಿನಿoದ ಅಭಿಷೇಕ ಮಾಡುವವನ ಸಾವಿರ ಅಪರಾಧಗಳನ್ನು ,ತುಪ್ಪದಿoದ ಅಭಿಷೇಕ ಮಾಡುವವನ ಹತ್ತುಸಾವಿರ ಅಪರಾಧಗಳನ್ನು ,ಜೇನುತುಪ್ಪದಿoದ  ಅಭಿಷೇಕ ಮಾಡುವವನ ಲಕ್ಷ ಅಪರಾಧಗಳನ್ನು , ಕಬ್ಬಿನ ಹಾಲಿನಿoದ ಅಭಿಷೇಕ ಮಾಡುವವನ ಹತ್ತು ಲಕ್ಷ ಅಪರಾಧಗಳನ್ನು ,ಎಳನೀರಿನಿoದ ಅಭಿಷೇಕ ಮಾಡುವವನ ಕೋಟಿ ಅಪರಾಧಗಳನ್ನು ,ಗಂಧೋಧಕದಿoದ ಅಭಿಷೇಕ ಮಾಡುವವನ ಅನಂತ ಅಪರಾಧಗಳನ್ನು ಶ್ರೀಹರಿಯು ಮನ್ನಿಸುವನು(ಕ್ಷಮಿಸುವನು).
***********




No comments:

Post a Comment