SEARCH HERE

Tuesday 1 January 2019

ದೇವರ ಮನೆ ಪೂಜೆ ಸಂಕಲ್ಪ ದೇವರ ವಿಚಾರ ಪೂಜಾ ಸಾಮಗ್ರಿಗಳು devara mane vichara puja items sankalpa



ದೇವರ ವಿಚಾರಗಳು..
ನಿಮಗೂಗೊತ್ತಿರಲಿಅಂತ

ನಾವು ಪೂಜೆ ಮಾಡುವಾಗ ಸ್ತ್ರೀ ದೇವತೆಗೆ ತುದಿಯಲ್ಲಿ ದೀರ್ಘ ಸೇರಿಸಿ ಹೇಳ ಬೇಕು.
ಉದಾ : ಸರಸ್ವತೀ ; ಬನಶಂಕರೀ  ಗಾಯತ್ರೀ  ಅಂಬಿಕಾ - ಲಕ್ಷ್ಮೀ  ಈ ರೀತಿಯಾಗಿ  ಮತ್ತೆ ನಮಸ್ಕಾರ ಮಾಡುವಾಗ ಹೀಗೆ ; ನಮಃ ಹೇಳುವಾಗ - ಸರಸ್ವತ್ಯೈ (ತ್+ತ್+ಐ) ಅಂಬಿಕಾಯೈ ನಮಃ ; ಲಕ್ಷ್ಮೀ ದೇವ್ಯೈ ನಮಃ||  ಐ ,ಕಾರ ನನ್ನು ಸೇರಿಸಿ  ಹೇಳಬೇಕು .
      ಮತ್ತು ಪುರುಷ ದೇವತೆಗಳಿಗೆ  ನಮಸ್ಕರಿಸುವಾಗ  ಅ ಕಾರ  ಮತ್ತು  ಏ ಕಾರ ನನ್ನು ಸೇರಿಸಬೇಕು 
ಓಂ ಗುರವೇ ನಮಃ ; ಶ್ರೀವಿಷ್ಣುವೇ ನಮಃ || ಓಂ ಅಥವಾ ಶ್ರೀ ಸೇರಿಸಿ ಅಥವಾ ಎರಡನ್ನೂ ಸೇರಿಸಿ ಹೇಳಬಹುದು .. -  ಶಿವನಿಗೆ ಶಿವಾಯ ನಮಃ , 
ದೇವಾಯ ನಮಃ ಪುಲ್ಲಿಂಗ , ದೇವೈ ನಮಃ ಸ್ತ್ರೀ ಲಿಂಗ.
****

"ಶ್ರೀ ಚಕ್ರ ಇರುವವರ ಮನೆಯಲ್ಲಿ, ಸಾಲಿಗ್ರಾಮ ಇರುವ ಮನೆಯಲ್ಲಿ, ದೇವರ ವಿಗ್ರಹ ಇರುವ ಮನೆಯಲ್ಲಿ, ಪ್ರತಿದಿನ ಪೂಜೆ ನಡೆಯುವ ಮನೆಯಲ್ಲಿ..

1. ಮಡಿ ಮೈಲಿಗೆ ಅನುಸರಿಸಿ..
೨. ಪ್ರತಿದಿನ ನೈವೇದ್ಯ ಆಗಬೇಕು..
೩. ಮನೆಗೆ ಬಂದ ಸುಮಂಗಲಿಯರಿಗೆ ಅರಿಸಿನ ಕುಂಕುಮ ಕೊಡದೇ ಕಳುಹಿಸಬೇಡಿ..
೪. ಸ್ತ್ರೀಯರನ್ನು ಗೌರವಿಸಿ, ಯಾವುದೇ ಕಾರಣಕ್ಕೂ ಕಣ್ಣಲ್ಲಿ ನೀರು ಹಾಕಿಸಬೇಡಿ..
೫. ಶುಕ್ರವಾರ, ಮಂಗಳವಾರಗಳಂದು ದೇವರ ವಿಗ್ರಹ ಇತರೆ ವಸ್ತುಗಳನ್ನು ಶುದ್ಧ ಮಾಡಬೇಡಿ..
೬. ಮನೆಯ ಹೊಸ್ತಿಲನ್ನು ಕಸದ ಪೊರಕೆಯಲ್ಲಿ ಗುಡಿಸಬೇಡಿ..
೭. ಪ್ರತಿ ಶುಕ್ರವಾರ ದೇವರಿಗೆ ಆರತಿ ಮಾಡಿ, ಪಾನಕ, ಕೋಸಂಬರಿ ದಾನ ಮಾಡಿ..
೮. ದೇವರಿಗೆ ಮೊಸರನ್ನ, ಚಿತ್ರಾನ್ನ, ತುಪ್ಪದ ಅನ್ನ, ಬೆಲ್ಲದ ಅನ್ನ, ಸಿಹಿ ಪೊಂಗಲ್, ಶಾಲ್ಯಾಹ್ನ ನೈವೇದ್ಯ ಮಾಡಿ..
ಯಾವುದು ಸಾಧ್ಯವೋ ಅದನ್ನು ಮಾಡುತ್ತಿರಿ..
೯. ದೊಡ್ಡ ವಿಗ್ರಹಗಳು ಇದ್ದರೆ ೧ ಸೇರು ಅನ್ನವನ್ನು ನೈವೇದ್ಯ ಮಾಡಬೇಕಾಗುತ್ತದೆ..
ಅದಕ್ಕೆ ತುಂಬಾ ದೊಡ್ಡ ವಿಗ್ರಹ ಇಟ್ಟುಕೊಳ್ಳಬೇಡಿ..
೧೦. ದೇವರ ಪೂಜಾ ಸಮಯದಲ್ಲಿ ಒಗೆದಿರುವ ಶುದ್ಧ ವಸ್ತ್ರಗಳನ್ನೇ ಧರಿಸಿ, ಶ್ವೇತ ವರ್ಣದ ಪಂಚೆ-ಶಲ್ಯ ತುಂಬಾ ಶ್ರೇಷ್ಠ..
೧೧. ದೇವರ ಪೂಜಾ ಸಮಯದಲ್ಲಿ ಆಕಳಿಕೆ ಬಂದು ಪೂಜೆ ಮಾಡೋದು, ಕೋಪ ಮಾಡಿಕೊಂಡು ಪೂಜೆ ಮಾಡೋದು, ಅನಗತ್ಯ ಸಂಭಾಷಣೆ,ನಿರ್ಮಾಲ್ಯ ತೆಗೆಯದೆ ಪೂಜೆ ಮಾಡೋದು ಮಾಡಬೇಡಿ..
12. ಭಿನ್ನವಾದ ವಿಗ್ರಹ, ದೇವರ ಪೂಜಾ ಸಾಮಗ್ರಿಗಳನ್ನು ಬಳಸಬೇಡಿ..
೧೩. ದುರ್ಗಂಧ ಪುಷ್ಪ, ನಿರ್ಗಂಧ ಪುಷ್ಪ ಪೂಜೆಗೆ ಬಳಸಬೇಡಿ..
ಉದಾಹರಣೆ ; ಚಂಡು ಹೂವು, ಚಿಂತಾಮಣಿ ಹೂವು,.. ಇತ್ಯಾದಿ
೧೩. ಹಸೀ ಹಾಲನ್ನೇ ದೇವರ ಪೂಜೆಗೆ ಬಳಸಿ..
೧೪. ದೇವರ ವಿಗ್ರಹಕ್ಕೆ ಇಡುವ ಹೂವು ಚೆನ್ನಾಗಿ ಅರಳಿರಲಿ, ತೊಟ್ಟು ತೆಗೆದು ದೇವರ ವಿಗ್ರಹಗಳಿಗೆ ಇಡಿ..
೧೫. ದೇವರಿಗೆ ನೈವೇದ್ಯ ಮಾಡೋವಾಗ ಪಾನಕಕ್ಕೆ ಸಕ್ಕರೆ ಬದಲು ಜೇನುತುಪ್ಪ ಹಾಕಿದರೆ ವಿಶೇಷ ಫಲಪ್ರಾಪ್ತಿಯಾಗುತ್ತದೆ..
೧೬. ಪೂರ್ಣಫಲ ನೈವೇದ್ಯ ಮಾಡುವುದು ತುಂಬಾ ವಿಶೇಷ ಫಲವನ್ನು ನೀಡುವುದು, ಸಕಲ ಕಾರ್ಯ ವಿಜಯವಾಗುವುದು.. ,ಮನೆಯಲ್ಲಿ ಶುಭಕಾರ್ಯಗಳು ಆಗುತ್ತವೆ..
೧೭. ಗಂಡಸರು ಶಲ್ಯವನ್ನು ಹೊದಿಯದೇ ಪೂಜೆ ಮಾಡಬಾರದು, ಹಾಗೆ ಮಾಡಿದರೆ ಪೂಜಾ ಫಲವೆಲ್ಲಾ ರಾಕ್ಷಸರ ಪಾಲಾಗುವುದು..
೧೮. ಗರಿಕೆ ಇಲ್ಲದ ಗಣೇಶನ ಪೂಜೆ, ತುಳಸೀ ಇಲ್ಲದ ನೈವೇದ್ಯ, ಬಿಲ್ವಪತ್ರೆ ಇಲ್ಲದ ಅರ್ಚನೆ ಪೂಜೆಗಳು ಫಲ ನೀಡುವುದಿಲ್ಲ..
೧೯. ಬಲಮುರಿ ಗಣೇಶ, ಬಲಮುರಿ ಶಂಖ, ಸಾಲಿಗ್ರಾಮ, ಶ್ರೀ ಚಕ್ರ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮಿ, ಅಷ್ಟಮುಖೀ ರುದ್ರಾಕ್ಷಿ, ಪಂಚಮುಖೀ ಗಾಯತ್ರೀ ದೇವಿ, ಪಂಚಮುಖಿ ಆಂಜನೇಯ.. ಇತ್ಯಾದಿ
ಇವೆಲ್ಲಾ ತುಂಬಾ ವಿಶೇಷ ಫಲ ಕೊಡೋ ಅಂತಹ ದೇವರುಗಳು..
ಅಷ್ಟೈಶ್ವರ್ಯಗಳನ್ನೂ ಕರುಣಿಸುತ್ತವೆ..
೨೦. ದೇವರ ಮನೆಯಲ್ಲಿ ಅಷ್ಟದಳ ಪದ್ಮ ರಂಗೋಲಿ ಹಾಕಿ ಅದರ ಮೇಲೆ ದೇವರನ್ನಿಟ್ಟು ಪೂಜಿಸಿದರೆ ತುಂಬಾ ವಿಶೇಷ ಫಲ, ಇಷ್ಟಾರ್ಥ ಸಿದ್ದಿಯಾಗುವುದು..
21. ಯಾವುದೇ ಪುಸ್ತಕ ಸಹಸ್ರನಾಮ ಓದುವಾಗ ದೇವರ ಪುಸ್ತಕಗಳನ್ನು ಮಣೆಯ ಮೇಲೆ ಅಥವಾ ಪೀಠದಲ್ಲಿ ಇಟ್ಟು ಓದಿದರೆ ತುಂಬಾ ಒಳ್ಳೆಯದು ..
ಕೈಯಲ್ಲಿ ಹಿಡಿದು ಓದುವುದು ಬೇಡ.
***

another version "ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..

೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.  

೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..

೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..

೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..

೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..

೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..

೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..

೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..

೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..

೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..

೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!

೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..


೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..
*******

"ದೇವರ ಪೂಜಾ ಸಾಮಗ್ರಿಗಳು".. ಮತ್ತು ವಿಶೇಷತೆ..
ಕಲಶಪಾತ್ರೆ, ಸ್ನಾನಪಾತ್ರೆ, ಅರ್ಘ್ಯಪಾತ್ರೆ, ಪಂಚಪಾತ್ರೆ, ಉದ್ಧರಣೆ, ಆಚಮನ ಪಾತ್ರೆ.. ಇತ್ಯಾದಿ ಇವು ದೇವರ ಪೂಜೆಯಲ್ಲಿ ಉಪಯೋಗಿಸುವ ಪಾತ್ರಾ ಸಾಮಗ್ರಿಗಳು..
ಈ ಎಲ್ಲಾ ಸಾಮಗ್ರಿಗಳನ್ನು ನಾವು ಪೂಜೆಯಲ್ಲಿ ಉಪಯೋಗಿಸುತ್ತೇವೆ..!
ಆದರೆ
ಇದನ್ನು ಯಾಕೆ ಉಪಯೋಗಿಸಬೇಕು..?
ಏನು ಫಲ ಉಪಯೋಗಿಸುವುದರಿಂದ..?
ತುಂಬಾ ಜನಕ್ಕೆ ಗೊತ್ತಿಲ್ಲ..;
*ಕಲಶಪಾತ್ರೆ* : ಶುದ್ಧವಾದ ಕಲಶಪಾತ್ರೆಯನ್ನು ಪೂಜೆಯಲ್ಲಿ ಇಟ್ಟುಕೊಳ್ಳುವಾಗ " ಪೂರ್ಣವಾಗಿ" ನೀರು ತುಂಬಿರಬೇಕು..!
ಇದರಿಂದ ಸಾಲದ ವಿಮೋಚನೆಯಾಗುವುದು..
ಕಲಶದ ನೀರು ಪೂರ್ಣ ಇಲ್ಲದಿದ್ದರೆ ಹಣದ ಸಮಸ್ಯೆಯಾಗಿ ಅಲೆಮಾರಿ ಜೀವನವಾಗುವುದು..!
*ಸ್ನಾನಪಾತ್ರೆ* : ದೇವರನ್ನು ಶುದ್ಧ ಮಾಡುವ ಪಾತ್ರೆ, ಇದರಿಂದ ದೇವರ ವಿಗ್ರಹಕ್ಕೆ ಬ್ರಹ್ಮತೇಜಸ್ಸು ಬಂದು ಮನೆಯಲ್ಲಿ ದೈವಿಕ ಶಕ್ತಿ ವೃದ್ಧಿಸುತ್ತದೆ..!
ಸ್ನಾನಪಾತ್ರೆ ಶುದ್ಧವಿಲ್ಲದಿದ್ದೇ ಮನೆಯಲ್ಲಿ ದೈವಬಲ ಇರುವುದಿಲ್ಲ..!
*ಆಚಮನಪಾತ್ರೆ* ಇಷ್ಟಾರ್ಥಸಿದ್ಧಿ, ಮಾನಸ ಸಂಕಲ್ಪಗಳು ನೆರವೇರುತ್ತವೆ..!
**ಪಂಚಪಾತ್ರೆ* : ಅಪಮೃತ್ಯು ನಿವಾರಣ, ಅಪಘಾತದ ಭಯ ನಿವಾರಣೆಯಾಗುತ್ತದೆ..
*ಉದ್ಧರಣೆ* : ಅದೃಷ್ಟ, ಉದ್ಯೋಗದಲ್ಲಿ ಪ್ರಗತಿ..

*ದೀಪಪಾತ್ರೆ* : ಮಾನಸಿಕ ನೆಮ್ಮದಿ, ಸಂತೋಷ , ತೇಜಸ್ಸು..

*ಪುಷ್ಪಪಾತ್ರೆ* : ಸತ್ಕಳತ್ರ ಯೋಗ, ಸುಖ ದಾಂಪತ್ಯ..!

ದೇವರಿಗೆ ಅರಳಿದ ಸುವಾಸನೆಯ ಪುಷ್ಪ ಸಮರ್ಪಿಸಿದರೆ ಸರ್ವದೋಷನಿವಾರಣೆ, ಆರೋಗ್ಯಭಾಗ್ಯ..!

ಈ ಎಲ್ಲಾ ಕಾರಣಗಳಿಗೆ ದೇವರ ಪೂಜೆ ಮಾಡುವಾಗ ಯಾವ ವಸ್ತುವು ನ್ಯೂನವಾಗದಂತೆ ನೋಡಿ ಪೂಜಿಸಬೇಕು..
ಇವೆಲ್ಲವೂ ತುಂಬಾ ಶುದ್ಧವಸಗಿರಬೇಕು.! ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸವಾಗುವುದು.

*********

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..

೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.  

೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..

೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..

೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..

೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..

೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..

೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..

೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..

೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..

೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..

೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!

೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..

೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ.
*********
ಪೂಜಾ ಸಂಕಲ್ಪ ಮಂತ್ರ

ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. 


ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.


ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

*******

ಸರ್ವಜ್ಞರಾದ ಶ್ರೀ ವಾದಿರಾಜಭಗವತ್ಪಾದರು ವಿರಚಿಸಿದ ಪುಟ್ಟದಾದ ದೇವತಾಹ್ವಾನ ದೇವಪೂಜಾ ಕಾಲದಲ್ಲಿ ಅತ್ಯಂತ ಉಪಯೋಗವಾಗುವುದು.


॥ಸರ್ವಕರ್ಮಕಾರಯಿತೃಭಾರತೀರಮಣಮುಖ್ಯಪ್ರಾಣಾಂತರ್ಗತ- ಅನಂತಗುಣಗಣಪರಿಪೂರ್ಣ- ಅನಂತಾವತಾರಾತ್ಮಕ-ಅನಂತಜೀವಾಂತರ್ಯಾಮಿ ಬಿಂಬನಾಮಕ ಪರಮಾತ್ಮನ್, ಮಯಾ ಪ್ರತಿಕ್ಷಣೇ ಮನೋವಾಕ್ಕಾಯಕರ್ಮಭಿಃ ಕ್ರಿಯಮಾಣಾನ್ ಅನಂತಾಪರಾಧಾನಗಣಯ್ಯ ಮದರ್ಥಮಸ್ಮದ್ಗುರ್ವಂತರ್ಗತಭಾರತೀರಮಣಮುಖ್ಯಪ್ರಾಣೇನಾನಂತವೇದೋಕ್ತಪ್ರಕಾರೇಣ ಕ್ರಿಯಮಾಣಪ್ರಾರ್ಥನೋಪರಿ ದೃಷ್ಟಿಂ ದತ್ವಾ ಮದ್ಧಸ್ತೇನ ಪೂಜಾಂ ಕಾರಯಿತ್ವಾ ಪಾಲಯಿತುಂ ತ್ವತ್ಸಾಕ್ಷಾತ್ಪ್ರತಿಬಿಂಬಭೂತೇನ ಭಾರತೀರಮಣ ಮುಖ್ಯಪ್ರಾಣದ್ವಾರಾ  ಮದ್ ಜ್ಞಾನೇಂದ್ರಿಯಕರ್ಮೇಂದ್ರಿಯಾಭಿಮಾನಿದೇವಾನುದ್ಬೋಧಯಿತ್ವಾ ತದ್ದ್ವಾರಾ ಮಾಂ ಚ ಬೋಧಯಿತ್ವಾ ಮದ್ಧೃತಕಮಲಾಕರಸ್ಥಿತತುಲಸೀದಲದ್ವಾರಾ ತ್ವತ್ಪರಿವಾರಭೂತ ರಮಾಬ್ರಹ್ಮಾದಿಭಿಃ ಸಹ ವಾಯುವಾಹನೋ ಭೂತ್ವಾ ವಾಮನಾಸಾಪುಟೇನ ಬಹಿರಾಗತ್ಯ ತತ್ತತ್ಪ್ರತಿಮಾಭಿಮಾನಿದೇವತಾತ್ಮಕತೇಜೋಮಯಮುಖ್ಯಪ್ರಾಣ ಗೋಲಕಾನ್ತರ್ಗತನಿತ್ಯಮುಕ್ತ ರಮಾಗೋಲಕಾಂತರ್ಗತಸ್ವಸ್ವರೂಪಗೋಲಕೇ ಸ್ಥಿತ್ವಾ ಪೂಜಾಂ ಗೃಹೀತ್ವಾ ಮಾಂ ಪಾಲಯ . .. ಇತಿ ಶ್ರೀವಾದಿರಾಜತೀರ್ಥಶ್ರೀಚರಣಕೃತಃ ದೇವತಾಹ್ವಾನಪ್ರಕಾರಃ 

*******

how to do pooja read-->  POOJA IN 30 MINUTES

devara deepa--> DEVARA DEEPA


******

important information

(days of the week) ವಾಸರ
Sunday: ಭಾನು ವಾಸರ;
Monday: ಇಂದು/ಸೊಮ ವಾಸರ;
Tuesday: ಭೌಮ ವಾಸರ;
Wednesday: ಸೌಮ್ಯ ವಾಸರ;
Thursday: ಗುರು ವಾಸರ;
Friday: ಬೃಗು ವಾಸರ;
Saturday: ಸ್ಥಿರ ವಾಸರ


ಋತುಗಳು (೬) ಮತ್ತು ಮಾಸ (೧೨) 

1. ಚೈತ್ರ ವೈಶಾಖ - ವಸಂತ ಋತು
2. ಜ್ಯೇಷ್ಠ ಆಷಾಢ - ಗ್ರೀಷ್ಮ ಋತು

3. ಶ್ರಾವಣ ಭಾದ್ರಪದ - ವರ್ಷ ಋತು

4. ಆಶ್ವಯುಜ/ಶ್ವಿನ ಕಾರ್ತಿಕ ಶರದ್ ಋತು

5. ಮಾರ್ಗಶಿರ ಪುಷ್ಯ - ಹೇಮಂತ ಋತು

6. ಮಾಘ ಫಾಲ್ಗುಣ - ಶಿಶಿರ ಋತು


ನಕ್ಷತ್ರಗಳು (೨೮)

ಅಶ್ವನೀ,  ಭರಣೀ,  ಕೃತಿಕಾ,  ರೋಹಿಣೀ,  ಮೃಗ,  ಆರ್ದ್ರಾ,  ಪುನರ್ವಸು,  ಪುಷ್ಯ,  ಆಶ್ಲೇಷಾ,  ಮೇಘಾ,  ಪೂರ್ವಾಫಾಲ್ಗುನೀ,  ಉತ್ತರಾ ಫಾಲ್ಗುನೀ,  ಹಸ್ತ, ಚಿತ್ರಾ,  ಸ್ವಾತೀ, ವಿಶಾಖಾ,  ಅನುರಾಧಾ,  ಜ್ಯೇಷ್ಠ,ಮೂಲ,  ಪೂರ್ವಾಷಾಢಾ,  ಉತ್ತರಾಷಾಢಾ,  ಶ್ರಾವಣ,  ಘನಿಷ್ಠಾ,  ಶತತಾರಕಾ,  ಪೂರ್ವಾಭಾದ್ರಪದಾ, 
ಉತ್ತರಾಭಾದ್ರಪದಾ,  ರೇವತೀ,  ಅಭಿಜಿತ


ರಾಶೀಗಳು (೧೨)

ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ.

ದಿಕ್ಕುಗಳು (೧೦)
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ
******

No comments:

Post a Comment