SEARCH HERE

Tuesday 1 January 2019

ಕಾಮದೇನು ಹಸು ಗೋವು kamadhenu govu cow








Vаrіоuѕ deities dwelling аll оvеr thе body оf Gomatha

There аrе vаrіоuѕ deities dwelling аll оvеr thе body оf Gomatha.


  1. Twо Horns оf thе Cow Thе Creator ‘Brahma’
  2. Thе Head оf thе Cow Thе Deity ‘Indra’
  3. Forehead оf thе Cow Thе Deity ‘Agni
  4. Collar оf thе Cow Thе Deity ‘Yama’
  5. Brain оf thе Cow Thе Deity ‘Moon’
  6. Upper Jaw оf thе Cow Thе Highest world Dyuloka
  7. Lоwеr Jaw оf thе Cow Thе Earth
  8. Thе Tongue Thе Lightning
  9. Thе Teeth Thе Deity ‘Marut’
  10. Thе Throat Thе ‘Revatee’ Constellation
  11. Thе Shoulder Thе ‘Kritka’ Constellation
  12. Bones оf thе Shoulder Thе Summer Season
  13. All thе Organs оf thе Cow Thе Deity ‘Vaayu’
  14. Thе BackBone Thе Deity ‘Rudra’ In thе Chest
  15. Space Hunch оf thе Cow Thе Sage Vrihashpati
  16. In thе bones оf thе Chest Thе diety bу thе nаmе оf Vrihatee
  17. Thе Bасk Angels & Fairies
  18. Bones оf thе Ribs Thе Hostesses оf thе Angels & Fairies.
  19. Thе Shoulders Thе Deity ‘Varuna’ аnd Friend
  20. Thе Forelegs Thе Sage ‘Tvashta & thе sage ‘Aryama’
  21. Thе Hindlegs Thе Destroyer ‘Lord Mahadeva’
  22. Thе Backside оf thе Cow Thе wife оf thе Deity ‘Indra’
  23. Thе Tail Thе Deity ‘Vaayu’
  24. Thе Hairs оf thе Body Thе Sage ‘Pawamana’
  25. Thе Buttock Thе Caste ‘Brahmin’ & Thе caste’Kshatriya’ Lies іn thе Thighs Thе Strength оf thе Cow.
  26. Bones оf thе Knees Thе Deity Sun аnd thе Creator
  27. Thе Calf оf thе Cow Thе Celestial Beings ‘Gandharva’
  28. In thе Smaller Bones Thе Celestial Beings ‘Apsara’
  29. Hooves оf thе Cow Thе Mother оf thе Sun, God, ‘Aditi’
  30. In thе Heart ‘The Mind ‘
  31. In thе Liver оf thе Cow ‘The Intelligence ‘
  32. Thе Nerve Bу thе Nаmе Of ‘Puritat’ Thе Religious Vow ‘Vrata’
  33. Thе Belly ‘The Hunger ‘
  34. In thе Intestines ‘Goddess Saraswathi’
  35. In thе internal part оf thе intestines ‘The Mountains’
  36. In thе Ovum ‘The sorrow (Manyu) ‘
  37. In thе sense Organs ‘The Subjects & thе People (Praja)’
  38. In thе Ovary ‘The River’
  39. In thе Breasts Thе Deity ‘Varuna’
  40. In thе cells оf thе Breasts, whісh produce milk ‘The Thundering clouds ‘
  41. In thе Skin Thе ‘All-Pervasive power’
  42. In thе hairs оf thе Body, Of thе cow ‘The Vаrіоuѕ Medicines’
  43. Thе Anus ‘The heavenly & Celestial Beings ‘Devagana’ ‘
  44. In thе Intestine ‘The Man’
  45. In thе Stomach Thе Celestial bеіng ‘Yaksha’
  46. In thе Kidney ‘The Anger’
  47. In thе Blood Thе Demon ‘Rakshasha’

*********

Thе Appearance оf Thе Cow ‘The Constellation’
In thе Stomach ‘The Othеr living beings’ 
In thе Grossness ‘The sky ‘
In thе Bone-Marrow ‘The Death ‘
Iѕ Lіkе Fire ‘The Posture whіlе sitting’
Iѕ thе Deity ‘Ashwinee Kumar Thе posture whіlе gеttіng up
Thе Deity ‘Indra’ Thе Posture whіlе standing аnd facing East
Thе Lord оf Death ‘Yamaraja’ Thе Posture whіlе standing аnd facing South
Thе Creator ‘Brahma’ Thе Posture whіlе standing аnd facing west
Thе Sun God Thе Posture whіlе standing & facing North
Thе Deity Moon Thе Cow whіlе Grazing
Thе Friend Thе Cow whіlе looking
Pure Joy Thе Posture оf thе Cow whіlе turning іt bасk.
****

Significance of Cow Dung in Hinduism
Cow is revered and worshipped by all pious Hindus. It is believed that cows came out of the milky ocean when it was churned by Gods and demons for nectar of immortality. All the Gods and Goddesses reside in the body parts of the cow in their subtle forms.
“Gavām hi tῑrthe vasatῑ ha gaṅgā puṣṭi tatha tad rajasi pravṛddhā
Lakshmῑḥ karῑṣe pranatau ca dharmastāsām praṇāmam satatam ca kuryāt”
“The very form of the cow is the residence of the ganga and all other teerthas. The dust from the feet of the cow (go dhuli) is strength giving. Goddess Lakshmi resides in the dung of the cow and by saluting the cow, one gains all dharma and wealth and thus the cow is worth being worshipped by all.”~ Vishnu Dharmottara – 2.42.58
Hindu Scriptures on sanctity of Cow Dung
The Upanishads say, “Gomaye Vasate Lakshmi”, meaning the Goddess Lakshmi lives in the cow dung.
The epic Mahabharata says, “Of all the 84 lakh (8.4 million) species of living entities, only the cow is such an entity whose dung is not impure, but rather it purifies every kind of impurity.”
Dwelling of Goddess Lakshmi
Goddess Lakshmi is the presiding deity of Cow Dung. She is the embodiment of wealth, prosperity and marital happiness.
”Ashtiishwarya mayi Lakshmi vasategomaye sada”
“Goddess Lakshmi with all eight opulence resides in cow dung.”
According to the Text, Shridharmapaddathi,” Every day early in the morning, the woman of the house should smear cow dung throughout the home, once she has done so, she will meet with no difficulties at all”.
“In the early morning, the threshold of the house is not to be left blank. The Goddess, the Deity of all resides at the threshold. The woman must smear cow dung at the threshold and make auspicious powder designs over it and mark with an auspicious sign of swastika. A woman who follows these rituals will have three things: wealth, long life and good reputation”
Hindu Sacrificial rite or Agni hotra
Rig Veda mentions, “Pancha Gavya or the five products of the cow (ghee, milk, curd, dung, urine) are used for agnihotra (fire sacrifices) and also for bathing of a new deity before installation”.
Cow dung is used in agnihotra to purify the atmosphere. Use of cow dung and ghee gives a detoxifying effect on the atmosphere. Regular performance of agnihotra saves one of all ailments.
Pancha Gavya
Pancha Gavya possesses the quality of nourishment and purification of the five basic elements of the cosmos (earth, water, fire, wind, space). Ayurveda texts say, “Pancha Gavyam is a holy chemical, is a diet, gives of strength, develops the heart, promotes longevity, purifies blood, eliminates the imbalances in the three basic principles, cures the diseases of the heart and removes the toxins.”
Lord Krishna and Cow Dung
In purushottam sahastra nam in vol. 10, name of lord Krishna Himself is given as “gaushthanganah gati priyah” means lord Krishna happily performs pastimes in cow dung in cowshed.
In Srimad Bhagavatam 10.6.20, it is described that, after being breast fed by Putna, a demoness, Lord Krishna was given a bath with cow urine, Goraj (dust raised by cows feet) and cow dung was applied over body of Lord Krishna by gopis.
Use of Cow Dung in Ayurveda
Ayurveda describes cow dung as – germicidal, nourishing, gives brightness to body, destroyer of bad smell, absorber, virya vardhak (increase intelligence), Rasayukta (moisturizer, fatty) and supremely pure and holy.
It has transcendental property of curing skin diseases and reducing toxins of blood. It makes body effulgent.
Hindu Festivals and Cow Dung
In India, during the fire festivals, cow dung cakes are burnt to purify the atmosphere. Such festivals are: Bhogi, Sankranti, Lohri, Pongal, and Bishu.
Cow Dung is also used during the festivals of Naagpanchami, nuakhai, onam, karama, kajari, ugadi, gudi-padwa and govardhan pooja festivals to invite the auspicious energies of Goddess Lakshmi into one`s life.
****

ಕಾಮದೇನು 


ಹಿಂದೂ ಪುರಾಣಗಳಲ್ಲಿ ಕಾಮಧೇನು ಎಂಬ ಹಸುವಿನ ಬಗೆಗೆ ತಿಳಿಸಲಾಗಿದೆ. ಸಮುದ್ರ ಮಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಕಾಮಿಸಿದ್ದನ್ನು ನೀಡುವ ಧೇನು, ಅಂದರೆ ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು.

ಈ ಕಾಮಧೇನುವಿನ ಮಗಳು ನಂದಿನಿ. ಇದು ವಸಿಷ್ಠ ಋಷಿಯ ಆಶ್ರಮದಲ್ಲಿದ್ದ . ಹಿಂದೂ ಸಮುದಾಯದಲ್ಲಿ ಕಾಮಧೇನು ಒಂಬ ಪದಕ್ಕೆ ಉತ್ತಮ ಸ್ಥಾನ ಮತ್ತು ಗೌರವವಿದೆ. ಹಿಂದೂ ಧರ್ಮದಲ್ಲಿ ಕಾಮಧೇನನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಕಾಮಧೇನುವಿಗೆ ಮತ್ತೊಂದು ಹೆಸರು ಸುರಭಿ. ಕಾಮೆ ಎಂದರೆ ಆಸೆ ಆಥವಾ ಬಯಕೆ ಒಂದರ್ಥ ಮತ್ತು ದೇನು ಎಂದರೆ ಪವಿತ್ರವಾದ ಹಸುವಿನ ಹಾಲು. ವ್ಯೆದಿಕ ಗ್ರಂಥಗಳಲ್ಲಿ ಕಾಮಧೇನುವನ್ನು ಎಲ್ಲಾ ಧನ-ಕರುಗಳ ಮಹಾಕಾಯಿ ಎಂದು ನಿರೊಪಿಸಿದ್ದಾರೆ.ಕಾಮಧೇನುವಿಗೆ ತನ್ನ ಒಡೆಯ ಅಥವಾ ಯಜಮಾನನಿಗೆ ಅವನು ಬಯಸಿದ್ದನು ನೀಡುವ ಶಕ್ತಿ ಮತು ಸಾಮರ್ಥ್ಯವಿದೆ ಎಂಬ ನಂಬಿಕೆಯಿದೆ.
[೧] ಹಿಂದು ಪುರಾಣದಲ್ಲಿ ಕಾಮದೇನುವನ್ನು ಮುಕೋಟಿ ದೇವರುಗಳು ವಾಸಿಸುವ ಸ್ಥಳವೆಂದು ಗುರುತಿಸಲಾಗಿದೆ.ಇದರ ಒಂದೊಂದು ಭಾಗದಲ್ಲೂ ಕೂಡ ಒಂದೊಂದು ದೇವರಿದೆ ಎಂದು ಪುರಾಣಗಳು ಹೇಳುತ್ತವೆ. ಹಿಂದೂ ಪುರಾಣಗಳು ಹೇಳಿರುವಂತೆ ಬ್ರಹ್ಮನು ಈ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಅವನು ಕಾಮಧೇನುವಿನ ಹಿಂಭಾಗ ಹಾಗೂ ವಿಷ್ಣು ಅದರ ಗಂಟಲು ಎಂಬ ನಂಬಿಕೆಯಿದೆ. ಈ ದ್ಯೆವಿಕ ಹಸುವಿನ ಮೇಲ್ಭಾಗದಲ್ಲಿ ವಿಷ್ಣು ಹಾಗೂ ಕೆಳಭಾಗದಲ್ಲಿ ಶಿವ ಇರುವನು ಎಂಬ ನಂಬಿಕೆಯಿದೆ. ಇವಳ ಕಣ್ಣುಗಳಲ್ಲಿ ಸೂರ್ಯ ಚಂದ್ರರು ಇರುವರು ಮತ್ತು ತನ್ನ ಭುಜದಲ್ಲಿ ಅಗ್ನಿದೇವ ಹಾಗೂ ವಾಯುದೇವನಿರುವನು ಕಾಮಧೇನುವಿನ ಕಾಲುಗಳಲ್ಲಿ ಹಿಮಾಲಯವಿದೆ ಎಂಬ ನಂಬಿಕೆ.ಕಾಮಧೇನು ಹಿಂದೂ ಧರ್ಮವನ್ನು ಅತ್ಯಂತ ಸುಂದರವಾಗಿ ಸಂಕೇತಿಸುತ್ತದೆ ಹೀಗೆಂದರೆ ಕೃತಯುಗದಲ್ಲಿ ಇವಳು ತನ್ನ ನಾಲ್ಕು ಕಾಲುಗಳ ಮೇಲೆ ನಿಂತಿದ್ದಳು ಅದ್ದರಿಂದ ಜಗತ್ತು ಅತ್ಯಂತ ಪ್ರಾಮಾಣಿಕತೆಯಿಂದ ಇತ್ತು, ನಂತರ ತ್ರೇತಯುಗದಲ್ಲಿ ಮೂರು ಕಾಲುಗಳ ಮೇಲೆ, ಮತ್ತು ದ್ವಾಪರಯುಗದಲ್ಲಿ ಎರಡು ಕಾಲುಗಳು ಮೇಲೆ ಹಾಗೂ ಕಲಿಯುಗದಲ್ಲಿ ಒಂಟಿ ಕಾಲಿನ ಮೇಲೆ ನಿಂತಿರಬಹುದು ಎಂಬ ನಂಬಿಕೆಯಿದೆ.ರಾಕ್ಷಸರು ಹಾಗೂ ದೇವತೆಗಳು ಯುದ್ದಮಾಡುವಾಗ ಕಾಮದೇನು ಸಮುದ್ರದಿಂದ ಬಿಳಿಯ ಹಾಲಿನ ಅಲೆಯಿಂದ ಅಪ್ಪಳಿಸಿ ಬಂದಿತೆಂದು ಮಹಾಭಾರತದಲ್ಲಿ ರಸಿಕಾನಂದ ಹೇಳಿದ್ದಾನೆ. ಕಾಮಧೇನು ಕೆಲವೂಮ್ಮೆ ಮಾನವನ ತಲೆ, ಹಸುವಿನ ದೇಹ, ನವಿಲಿನ ಬಾಲ ಹಾಗೂ ಗಿಳಿಯ ರೆಕ್ಕೆಯಿಂದ ಮಾನವನನ್ನು ರೊಪಿಸುತಿತ್ತು ಎಂದು ಮಹಾಭಾರತದ ಶಾಂತಿ ಪರ್ವದಲ್ಲಿ ತಿಳಿಸಲಾಗಿದೆ.ಹಿಂದು ಧರ್ಮವೂ ಕಾಮಧೇನುವನು ಶುದ್ದವಾದ ಹಸುವೆಂದು ಭಾವಿಸಿದ್ದಾರೆ.ವೇದಗಳ ಪ್ರಕಾರೆ ಒಬ್ಬ ಸಮಾನ್ಯ ವ್ಯಕ್ತಿಯು ಹಸುವನ್ನು ಉಡುಗೂರೆಯಾಗಿ ಬ್ರಹ್ಮಾಣ ಅಥವಾ ವೈಷ್ಣವರಿಗೆ ನೀಡುವುದರಿಂದ ತನ್ನ ಪಾಪ-ಕರ್ಮಗಳು ಪರಿಹಾರಗೂಳ್ಳುತ್ತವೆ.ಹಸುವನ್ನು ಯಾರಾದರೂ ಕೊಂದರೆ ಅಥವ ತಿಂದರೆ ಅವರು ನರ್ಕದಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸುತ್ತಾರೆ.ಹಸುವನ್ನು ಹೂಲವನ್ನು ಉಳುಮೆ ಮಾಡಲು ಬಳಸಬಾರದು ಬದಲಿಗೆ ಎತ್ತುಗಳನ್ನು ಇಂತಹ ಕೆಲಸಗಳಿಗೆ ಬಳಾಸಬೇಕು.ಭೂಮಿಯ ಮೇಲೆ ಒಬ್ಬ ವೈಕ್ತಿಯು ಮುನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲಾ ಜೇವಗಳನ್ನು ರಕ್ಷಿಸಿ ಗೌರವಿಸಬೇಕು ಅಂತಯೇ ಮನುಷ್ಯನಾದವನು ಹಸುವನ್ನು ನಮಸ್ಕರಿಸುವುದರಿಂದ ತನ್ನ ಪಾಪ-ಕರ್ಮಗಳು ಪರಿಹಾರಗೂಂಡು,ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆಯಿದೆ ಹಾಗೂ ಹಸುವಿನ ಸಗಣಿ ಅಥವಾ ಅದರ ಮೂತ್ರದ ಬಗ್ಗೆ ಆಸಾಂಗತ್ಯ ಮಾಡಬಾರದು ಎಕೆಂದರೆ ಹಸುವಿನಂತೆ ಈ ವಸ್ತುಗಳು ಕೂಡ ಪರಿಶುದ್ದ.ಹಸುಗಳು ಮೆಲಗಿ ವಿಶ್ರಮಿಸುತ್ತಿರುವ ಸಮಯದಲ್ಲಿ ಅವುಗಳನ್ನು ಯಾರು ಕೂಡ ಅವುಗಳಿಗೆ ತೊಂದರೆ ಮಾಡಬಾರದು.ಹಸುಗಳು ಮನುಷ್ಯರಿಗೆ ಹಾಲು, ತುಪ್ಪ ,ಬೆಣ್ಣೆಯನ್ನು ನೀಡಿ ಸಲಹುತ್ತದೆ.ಹಸುಗಳು ತಮ್ಮ ಉಸೆರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೂಂಡು ಆಮ್ಲಜನಕವನ್ನೇ ಹೂರಗೆ ಬಿಡುತ್ತದೆ, ಇಂತಹ ಜೇವಸಂಕುಲದಲ್ಲೂ ಹೀಗಿಲ್ಲ.[೨]ಯಾವುದಾದರು ಹೋಮೆ ಕುಂಡದಲ್ಲಿ ಆಥವಾ ಅಡುಗೆ ಮಾಡುವಾಗ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ ಮತ್ತು ಇದೂಂದು ವಿಸ್ಮಯಕಾರಿಯಾದ ವಿಷಯವಾಗಿದೆ ಹಾಗೂ ಹಸುವಿಗೆ ವಿಷವನ್ನು ಸತತವಾಗಿ ತೊಂಬುತ್ತ ದಿವಸಗಳವರೆಗೂ ನೇಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಸ್ವಲ್ಬವೂ ಕೂಡ ಇರುವುದೈಲ್ಲ.ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅತೀ ದೂಡ್ಡ ದುರಂತ ನಡೆದುಹೋಗಿತ್ತು, ಅದೇ "ಭೋಪಾಲ್ ಅನೆಲ ದುರಂತ" ಈ ದುರಂತ ಸಂಭವಿಸಿದ್ದಾಗ ಸುಮಾರು ಹತ್ತು ಕಿಲೋಮಿಟರ್ ವರಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಅದರೆ ಕೇವಲ ಒಂದು ಕಿಲೋಮಿಟರ್ ದೂರದಲ್ಲಿದ ನಾಲ್ಕು ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗದೆ ಸುರಕ್ಷಿತವಾಗಿದ್ದರು.ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರು ವಾಸಿಸುತ್ತಿದ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನನಿತ್ಯ ಎರಡೂ ಹೂತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಈ ವಿಷಯವನ್ನು ಅರಿತ ಸಂಶೋಧಕರು ಬೇರೆ ಕಡೆಯಲ್ಲಿ ನೆಲೆಸಿದ್ದ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ತಿಳಿದು ಬಂತು.ಮೈಸೂರಿನಲ್ಲಿ ಹೆಚ್.ಐ.ವಿ ಪಿಡಿತ ಮಕ್ಕಳಿಗಾಗಿ ಒಂದು ಶಾಲೆಯಿದೆ.ಈ ಶಾಲೆಯ ಸ್ಥಾಪಕರಾದ ರಾಮದಾಸರವರು ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದಾಗ ಅಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು."ಅಗ್ನಿ ಹೋತ್ರದ" ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಬೆಳಿಗೆ ಸೂರ್ಯಸ್ತದ ನಂತರ ಅಗ್ ಸ್ವರ್ಶ ಮಾಡಿದಾಗ ದೇಹದ ನರಗಳೆಲ್ಲ ಶುದ್ದವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

🐂🐄🐂🐄🐂🐄🐂🐄🐂🐄🐂

ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..

೧. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..

೨. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..

೩. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..

೪. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ..

೫. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..

೬. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ..

೭. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..

೮. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..

೯. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..

೧೦. ನಾಲಗೆಯಲ್ಲಿ ವರುಣನ ವಾಸ..

೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..

೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..

೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..

೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..

೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..

೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..

೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ..

೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ..

೧೯. ಬೆನ್ನಿನಲ್ಲಿ ರುದ್ರರ ವಾಸ..

೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ..

೨೧. ಬಾಲದಲ್ಲಿ ಸೋಮದೇವತೆಯ ವಾಸ..

೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..

೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..

೨೪. ಗೋಮೂತ್ರದಲ್ಲಿ ಗಂಗೆಯ ವಾಸ..

೨೫. ಗೋಮಯದಲ್ಲಿ ಯಮುನೆಯ ವಾಸ..

೨೬. ಹಾಲಿನಲ್ಲಿ ಸರಸ್ವತಿಯ ವಾಸ..

೨೭. ಮೊಸರಿನಲ್ಲಿ ನರ್ಮದೆಯ ವಾಸ..

೨೮. ತುಪ್ಪದಲ್ಲಿ ಅಗ್ನಿಯ ವಾಸ..

೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..

೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..

೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..

೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..

ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ  ಗೋವು
******



*********

ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಗೋವಿನ ಪೂಜೆಯನ್ನು ಪ್ರತಿನಿತ್ಯ ಮಾಡುವುದು, ಗೋಗ್ರಾಸ ಕೊಡುವುದು ಇವು ಸದಾಚಾರಿಗಳು ಮಾಡುವ ನಿತ್ಯ ಕರ್ಮಗಳಾಗಿವೆ. ಅಷ್ಟೇ ಅಲ್ಲದೆ ಗೋವಿಗೆ ಮಾತೆಯ ಸ್ಥಾನ ಕೊಟ್ಟಿದ್ದೇವೆ.

ತಾಯಿಯಾದವಳು ಜನ್ಮ ಕೊಡುತ್ತಾಳೆ. ಒಂದು ಅವಧಿಯ ತನಕ ಮಾತ್ರ ತಾನು ಸ್ತನ್ಯಪಾನ ಮಾಡಿಸಿ ಹಾಲು ಕೊಡುತ್ತಾಳೆ. ಆದರೆ ಜೀವನವಿಡೀ ನಮಗೆ ಹಾಲು ಕೊಡುವುದು ಹಸು. ಅದಕ್ಕಾಗಿಯೇ ಮನೆ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರು. 

ಹಸು ನೀಡುವ ಹಾಲು, ಅದರಿಂದ ಆಗುವ ಮೊಸರು, ಕಡೆದಾಗ ಬರುವ ಬೆಣ್ಣೆ, ಕಾಯಿಸಿದಾಗ ಬರುವ ತುಪ್ಪ ಇವೆಲ್ಲವೂ ಭಗವಂತನಿಗೆ ನಿತ್ಯ ಮಾಡುವ ಪಂಚಾಮೃತದ ಅಭಿಷೇಕದ ವಸ್ತುಗಳು. ದೇಹ ಶುದ್ಧಿಗಾಗಿ ಬಳಸುವ ಪಂಚಗವ್ಯಕ್ಕೆ ಗೋವಿನ ಮೂತ್ರ ಹಾಗೂ ಗೋವಿನ ಸಗಣಿಯನ್ನು ಬಳಸುತ್ತೇವೆ. ಮನೆಯಲ್ಲಿ ಶುದ್ಧ ಮಾಡಲು ಗೋಮಯ ಮಾಡುತ್ತೇವೆ. ತೀರ್ಥಗಳಲ್ಲಿ ಗಂಗಾ, ಮಂತ್ರಗಳಲ್ಲಿ ಗಾಯತ್ರಿ, ನಾಮಸ್ಮರಣೆಯಲ್ಲಿ ಗೋವಿಂದ, ಶಾಸ್ತ್ರಗಳಲ್ಲಿ ಗೀತಾ, ಪ್ರಾಣಿಗಳಲ್ಲಿ ಪೂಜ್ಯತೆಯನ್ನು ಪಡೆದಿರುವುದು ಗೋವುಗಳು.

ಲಕ್ಷ್ಮೀಗೆ ಇರಲಿಲ್ಲ ಜಾಗ

ಭಗವಂತನನ್ನು 'ಗೋಬ್ರಾಹ್ಮಣ ಹಿತಾಯಚ' ಎನ್ನುತ್ತಾರೆ. ಗೋವಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ವಾಸವಾಗಿದ್ದಾರೆ ಎಂದು ನಂಬಿಕೆ. ಎಲ್ಲ ದೇವತೆಗಳೂ ಸಹ ಗೋವಿನಲ್ಲಿ ಮುಖದಿಂದ ಬಾಲದವರೆಗೂ ನೆಲೆಸಿದ್ದರು. ಶ್ರೀ ಮಹಾಲಕ್ಷ್ಮೀ ಬಂದು, ''ನಾನು ನಿನ್ನಲ್ಲಿ ನೆಲೆಸುತ್ತೇನೆ,'' ಎಂದಳು. ಆಗ ಗೋವುಗಳು, ''ನೀನು ಚಂಚಲೆ, ನಿಂತ ಕಡೆ ನಿಲ್ಲುವುದಿಲ್ಲ, ನಿನಗೆ ಸ್ಥಳ ಕೊಡಲು ನಾವು ತಯಾರಿಲ್ಲ,'' ಎಂದವು. ಆಗ ಮಹಾಲಕ್ಷ್ಮೀ, ''ನಿಮ್ಮಲ್ಲಿ ನೆಲೆಸಿದರೆ ಶಾಶ್ವತವಾಗಿ ನೆಲೆಸುತ್ತೇನೆ,'' ಎಂದಳು. ''ನಖಶಿಖಾಂತ ದೇವತೆಗಳು ನೆಲೆಸಿರುವ ಕಾರಣ ಜಾಗವಿಲ್ಲ. ನಮ್ಮ ಮಲಮೂತ್ರಗಳಲ್ಲಿ ಜಾಗವಿದೆ, ಅಲ್ಲಿ ನೆಲೆಸು,'' ಎಂದಾಗ, ''ಹಾಗೇ ಆಗಲಿ,'' ಎಂದು ಅಲ್ಲಿಯೇ ನೆಲೆಸಿದಳು. ಅದಕ್ಕಾಗಿ ಗೋಮಯದಿಂದ ಬಾಗಿಲು ಸಾರಿಸಿ ರಂಗವಲ್ಲಿ ಹಾಕಿದ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿ ನೆಲೆಸುತ್ತಾಳೆ. ಭೂಭಾರ ಹೆಚ್ಚಾಗಿದೆ ಅದನ್ನು ಇಳಿಸಲು ಅವತಾರ ಮಾಡು ಎಂದು ಲಕ್ಷ್ಮಿಕ್ಷೀರಸಾಗರ ತೀರದಲ್ಲಿ ಎಲ್ಲ ದೇವತೆಗಳೊಂದಿಗೆ ಹೋಗಿ ಪ್ರಾರ್ಥಿಸುವಾಗ ಗೋರೂಪ ಧಾರಣೆ ಮಾಡಿದ್ದಳು. ಶ್ರೀ ಹರಿ ಗೊಲ್ಲರ ಕುಲದಲ್ಲಿ ಕೃಷ್ಣನಾಗಿ ಅವತರಿಸಿ ಗೋವುಗಳನ್ನು ಕಾಯ್ದನು. ಬ್ರಹ್ಮದೇವರು ಹಸುವಾಗಿ ಬಂದು ಹುತ್ತದಲ್ಲಿದ್ದ ಶ್ರೀಹರಿಗೆ ಹಾಲನ್ನಿತ್ತರು. ಇಂದ್ರ ಕಾಮಧೇನುವನ್ನು ತಂದು ಅದರ ಹಾಲಿನಿಂದ ಶ್ರೀಹರಿಗೆ ಅಭಿಷೇಕ ಮಾಡಿ ಗೋವಿಂದ ಎಂದು ಕರೆದ ಎಂಬೆಲ್ಲ ವಿಚಾರಗಳು ಭಾರತ, ಭಾಗವತಾದಿಗಳಿಂದ ತಿಳಿದುಬರುತ್ತದೆ. ಆದ್ದರಿಂದ ಗೋಪೂಜೆ, ಗೋದಾನ ಇವುಗಳಿಂದ ಶ್ರೀಹರಿ ತೃಪ್ತನಾಗುತ್ತಾನೆ. ದೀಪಾವಳಿ ಬರುವುದು ಕಾರ್ತೀಕ ಮಾಸದಲ್ಲಿ. ಈ ಮಾಸದಲ್ಲಿ ಗೋಪೂಜೆ ಗೋದಾನ ಮತ್ತೂ ಶ್ರೇಷ್ಠವಾದದ್ದು.

ಗೋಪೂಜೆ ಹೇಗೆ?

ಗೋಶಾಲೆಯನ್ನು ಶುದ್ಧಿಗೊಳಿಸಿ ರಂಗವಲ್ಲಿಯಿಂದ ಅಲಂಕರಿಸಿ, ಕಾರ್ತೀಕ ದಾಮೋದರನ ಪ್ರೀತಿಗಾಗಿ ತುಪ್ಪದ ದೀಪಗಳನ್ನು ಹಚ್ಚಿ ಇಡಬೇಕು. 

ಕಪ್ಪುಬಣ್ಣದ ಅಥವಾ ನಸುಗೆಂಪು ಬಣ್ಣದ ಗೋವನ್ನು ಅಲಂಕರಿಸಬೇಕು. 

ಅದಕ್ಕೆ ಸುವರ್ಣದಿಂದ ತಯಾರಿಸಿದ ಕೊಂಬಿನ ಆಭರಣ ಹಾಕಿ, ಬೆಳ್ಳಿಯ ಗೊರಸನ್ನು ಹಾಕಬೇಕು. 

ಎರಡು ಶ್ಯಾಮಲ ವರ್ಣದ ವಸ್ತಗಳನ್ನು ಹೊದಿಸಬೇಕು. ಒಂದು ಘಂಟೆಯನ್ನು ಕೊರಳಿಗೆ ಕಟ್ಟಬೇಕು. ಕಂಚಿನ ಪಾತ್ರೆಯನ್ನು ಹಾಲು ಕರೆಯಲು ಕೊಡಬೇಕು. ನಾಲ್ಕು ಕಾಲುಗಳಿಗೆ ಗೆಜ್ಜೆಯನ್ನು ಕಟ್ಟಬೇಕು.

 ಆಹಾರಕ್ಕಾಗಿ ಒಂದು ಪಾತ್ರೆಯನ್ನು ಕೊಡಬೇಕು. ಹಾಲು ಕರೆಯುವ ಸಲುವಾಗಿ ಸಹ ಒಂದು ಪಾತ್ರೆ ಕೊಡಬೇಕು. 

ಗೋವಿನ ಬಾಲಕ್ಕೆ ಅರಿಶಿನ ಕುಂಕುಮ ಪೂಜಿಸಿ, ಸೀರೆ ಕುಪ್ಪಸದ ಬಟ್ಟೆ ಹೊದ್ದಿಸಿ, ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮಿನಾರಾಯಣನ ಅನುಗ್ರಹಕ್ಕಾಗಿ ಗೋಪೂಜೆ ಮಾಡಬೇಕು. 

ಸಗಣಿಯಿಂದ ಬಲಿಯನ್ನು ಮಾಡಿ ಮನೆಯ ದ್ವಾರಗಳಲ್ಲಿ ಇಟ್ಟು ಪೂಜಿಸಿ ಉಪೇಂದ್ರನಾಮಕ ಭಗವಂತನನ್ನು ಚಿಂತಿಸಿ ಮಂಗಳವಾಗಲಿ ಎಂದು ಪ್ರಾರ್ಥಿಸಿ

ಗೋವಿನ ಮುಖದಲ್ಲಿ ನಾಲ್ಕು ವೇದಗಳೂ ನೆಲೆನಿಂತಿವೆ. ಆರು ವೇದಾಂಗಗಳೂ ಮತ್ತೆ ಪದ-- ಕ್ರಮದ ದೇವತೆಗಳೂ ಅಲ್ಲಿದ್ದಾರೆ. 

ಗೋಮಯದಲ್ಲಿ ಲಕ್ಷ್ಮಿಇದ್ದಾಳೆ. ಗೋವಿನ ಮೂತ್ರ ದಲ್ಲಿಯೂ ನಿತ್ಯ ಮಂಗಳ ಸ್ವರೂಪಳಾಗಿ ಲಕ್ಷ್ಮಿಯೇ ಇರುವಳು 


ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
****
#ಆಕಳಹಾಲಿನಲ್ಲಿರುವಅಭಿಮಾನಿ_ದೇವತೆಗಳು
ಗ್ರಹ_ಪ್ರವೇಶದಲ್ಲಿ ಯಾಕೆ ಹಾಲನ್ನು ಉಕ್ಕಿಸಬೇಕು ,
ಆಕಳಹಾಲಿಗೆ ಯಾಕಿಷ್ಟು ಮಹತ್ವ  ಇದೆ ಅಂದರೆ  ಆ ಹಾಲಿನ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ಅಭಿಮಾನಿ ದೇವತೆಗಳಿದ್ದಾರೆ , ಅಗ್ನಿ ಹೋತ್ರ ,ಹವನ , ಭಗವಂತನ ನೈವೇದ್ಯಕ್ಕೆ , ಅಭಿಷೇಕಕ್ಕೆ   ಆಕಳಹಾಲು ಅಮೃತಕ್ಕೆ ಸಮಾನ
ಮೊದಲು ಹಾಲು ದನದ ಕೆಚ್ಚಲಿನಲ್ಲಿರುತ್ತದೆ. ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’.

ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ.

ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು.

ನಂತರ ಹಾಲು ಕರೆಯುವುದು; ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ ದೇವತೆ ಅಶ್ವಿನೀ ದೇವತೆಗಳು.

ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. ‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ ದೇವತೆ ವರುಣ.

ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ).

ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು.

[ಹಾಲು ಉಕ್ಕಿ ಹರಿಯಬೇಕು, ಅದು ಪರಮ ಮಾಂಗಲಿಕ. ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ].
ಹಾಲು ಉಕ್ಕಿ ಬಿದ್ದಾಗ  ಅದನ್ನು ಹಾಗೆಯೇ ಒರೆಯಿಸಬಾರದು  ಅರಿಷಿಣ ಕುಂಕುಮ ಏರಿಸಿ ನಂತರ ಒರೆಸಬೇಕು 

ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ. ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು.

ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ.

ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು.

ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ.

ಈ ಹಾಲನ್ನು ಯಜ್ಞಶಾಲೆಯೊಳಗೆ ವಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ.

ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ.

ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ ಅಗ್ನಿ [ಅಗ್ನಯೇ ಪೂರ್ವಾಹುತಿಃ].

‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು.

ನಂತರ – ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ.

ಕೊನೆಯದಾಗಿ ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ.

ಈತ ಹದಿನಾರನೇ ದೇವತೆ.
ಹೀಗೆ ಯಜ್ಞ ,ಹೋಮ ,ಹವನ ಎಲ್ಲವೂ ಆಕಳ ಹಾಲಿಲ್ಲದೆ ಅಪೂರ್ಣ , ಗೋಮಾತೆಗೆ ಪ್ರತಿದಿನ  ಪೂಜೆ ಪ್ರದಕ್ಷಣೆ ನಮಸ್ಕಾರ ಮಾಡಿದರೆ ಮೂವತ್ತಮೂರು ಕೋಟಿ ದೇವತೆಗಳು ಸಂತ್ರಪ್ತರಾಗುತ್ತಾರೆ.
***

ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ, ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ.

ಜೈವಿಕ ವಿಘಟನೀಯ, ಸೆಗಣಿ ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪದಿಂದ ತಯಾರಿಸಲಾದ ಪಂಚಗವ್ಯ ದೀಪವೇ ಗೋದೀಪ.

ದೀರ್ಘಕಾಲದ ಸಾಲದ ಕಷ್ಟಗಳು ಮತ್ತು ಎಲ್ಲಾ ದೋಷಗಳಿಂದ ವಿಮುಕ್ತಿ ಪಡೆಯಲು ಕಾರ್ತಿಕ ದೀಪ ಆರಾಧನೆ ಮಾಡಬೇಕು ಕಾರ್ತಿಕ ಪೌರ್ಣಮಿಯದಿನ ಪಂಚಗವ್ಯ ದೀಪ ಬೆಳಗುವುದರಿಂದ ಪರಶಿವನ ಅನುಗ್ರಹ ಪಡೆಯಬಹುದು.

ಗೋಮಯ ಹೊಗೆಯು ಮನೆಯಲ್ಲಿರುವ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ. ಗೋದೀಪ ಸಂಪೂರ್ಣ ಸುಡುವ ಕಾರಣ ಅದರ ಬೂದಿಯನ್ನು ರಾಸಾಯನಿಕ ಗೊಬ್ಬರವಾಗಿ ಬಳಸಬಹುದು
***


a mystery October 26, 2020

********

ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!
(ಮತ್ಯಾವ ಜೀವಸಂಕುಲದಲ್ಲೂ 
ಹೀಗಿಲ್ಲ)
★ ಗೋವಿನ ಒಂದು ಚಮಚ 
ತುಪ್ಪವನ್ನು ಬೆಂಕಿಗೆ ಸುರಿದಾಗ 
ಸುಮಾರು ಒಂದು ಟನ್ನುಗಳಷ್ಟು 
ಆಮ್ಲಜನಕ ಬಿಡುಗಡೆಯಾಗುತ್ತೆ !!.
★ ಗೋವಿಗೆ ವಿಷವನ್ನು ಸತತ 90 
ದಿನಗಳವರೆವಿಗೂ ನೀಡುತ್ತಾ 
ಬಂದರೂ ಅದರ ಹಾಲಿನಲ್ಲಿ ವಿಷದ 
ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...
ಮಿತ್ರರೇ,
ಈ ಮೆಸೆಜ್ ಓದಲು 5 ನಿಮಿಷ ಬೇಕಾಗಬಹುದು.ಸಮಯ 
ಮಾಡಿಕೊಂಡು ರಾತ್ರಿಯಾದರು 
ಓದಿ.
ಓದಿ ಆದ ಮೇಲೆ ಬೇರೆಯವ
ರಿಗೂ ಕಳಿಸಿ, ಓದಲು ತಾಳ್ಮೆ 
ಇಲ್ಲದಿದ್ದರೆ ಕೂಡಲೇ ಫಾರ್ 
ವರ್ಡ್ ಮಾಡಿಬಿಡಿ....
ದೇಶ ಕಂಡ ಅತೀ ದೊಡ್ಡ ದುರಂತ 
"ಭೋಪಾಲ್ ಅನಿಲ ದುರಂತ" 
ನೀವು ಕೇಳಿರಬಹುದು. ಆ 
ದುರಂತ ಆದಾಗ ಸುಮಾರು 
10 ಕಿ.ಮೀ ವರೆಗೆ ವಾಸವಿದ್ದ 
ಎಲ್ಲ ಜನರು ಸಾವೀಗಿಡಾದರು. 
ಆದರೆ ಕೇವಲ 1 ಕಿ.ಮೀ 
ದೂರವಿದ್ದ 4 ಬ್ರಾಹ್ಮಣ 
ಕುಟುಂಬಕ್ಕೆ ಏನೂ ಆಗಿರಲಿಲ್ಲ. 
ಇದರಿಂದ ಆಶ್ಚರ್ಯ ಚಕಿತರಾ
ದರು ಸಂಶೋಧಕರು ಅವರ 
ಮನೆಯನ್ನು ಅಧ್ಯಯನ 
ನಡೆಸಿದಾಗ ಅವರ ಮನೆಯಲ್ಲಿ 
ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" 
ಹೋಮ ಮಾಡುತ್ತಿದ್ದಾರೆಂದು 
ತಿಳಿಯಿತು. ಇದನ್ನು ತಿಳಿದ 
ಸಂಶೋಧಕರು ಬೇರೆ ಕಡೆ 
ರೋಗಿಗಳ ಮೇಲೆ ಪ್ರಯೋಗ 
ಮಾಡಿದಾಗ ಅವರಲ್ಲಿ ರೋಗ
ನಿರೋಧಕ ಶಕ್ತಿ ಹೆಚ್ಚಾಗಿರುವುದು 
ಕಂಡು ಬಂತು.
H I V ಪೀಡಿತ ಮಕ್ಕಳಿಗಾಗಿ 
ಮೈಸೂರಲ್ಲಿ ಒಂದು ಶಾಲೆ 
ಇದೆ. ಇದರ ಸ್ಥಾಪಕರಾದ 
ರಾಮದಾಸ್ (ಮಾಜಿ ಶಾಸಕರು) 
ತಮ್ಮ ವಿದ್ಯಾರ್ಥಿಗಳ ಮೇಲೆ 
ಇದರ ಪ್ರಯೋಗ ಮಾಡಿದರು . 
ಆಗ ಇಲ್ಲಿನ ಮಕ್ಕಳಲ್ಲೂ ಸಹ 
ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.
"ಅಗ್ನಿ ಹೋತ್ರ" ದ ವಿಧಾನ 
ಅಂದರೆ ಸಣ್ಣದಾದ ತಾಮ್ರದ 
ಹೋಮಕುಂಡಕ್ಕೆ ದನದ ಒಣ 
ಸಗಣಿ, ದನದ ತುಪ್ಪ ಹಾಕಿ 
ಅಗ್ನಿ ಸ್ಪರ್ಶ ಮಾಡಬೇಕು. 
ಇದನ್ನು ಬೆಳಿಗ್ಗೆ ಸೂರ್ಯೋದ
ಯದ ಮೊದಲು, ಸಂಜೆ 
ಸೂರ್ಯಾಸ್ತದ ನಂತರ ಮಾಡಬೇಕು.
ಈ ಪೂಜೆ, ಹೋಮ, ಹವನ 
ಅಂದರೆ ಕೆಲವರಿಗೆ ಅಲರ್ಜಿ. 
ಆದರೆ ಇಲ್ಲಿ ವೈಜ್ಞಾನಿಕವಾಗಿ 
ಹೇಳುವುದಾದರೆ ತಾಮ್ರ 
ಬಿಸಿಯಾದಾಗ ಮತ್ತು ಸಗಣಿ, 
ತುಪ್ಪ ಸುಟ್ಟಾಗ ಬಿಡುಗಡೆಯಾ
ಗುವ ಅನಿಲ ನಮ್ಮ ದೇಹ 
ಪ್ರವೇಶಿಸಿದಾಗ ನಮ್ಮ ದೇಹದ 
ನರಗಳೆಲ್ಲ ಶುದ್ಧವಾಗಿ ರೋಗ 
ನಿರೋಧಕ ಶಕ್ತಿ ಹೆಚ್ಚುತ್ತದೆ...
ಅಮಿತ್ ವೈದ್ಯ, ಇವರು ಅಮೇರಿಕಾ
ದಲ್ಲಿ ನೆಲೆ ನಿಂತ ಭಾರತದ 
ಉದ್ಯಮಿ. ಇವರ ತಂದೆ ತಾಯಿ 
ಇಬ್ಬರು ಕ್ಯಾನ್ಸರ್ ನಿಂದ ತೀರಿ 
ಹೋಗುತ್ತಾರೆ. ಕೆಲವು ಸಮಯ
ದಲ್ಲಿ ಅಮಿತ್ ರಿಗೂ ಕ್ಯಾನ್ಸರ್ 
ಬರುತ್ತದೆ. ವೈದ್ಯರು 6 ತಿಂಗಳ 
ಕಾಲ ಮಾತ್ರ ಕಾಲಾವಕಾಶ 
ನೀಡುತ್ತಾರೆ. ತನ್ನ ಕೊನೆಯ 
ದಿನಗಳನ್ನು ಭಾರತದಲ್ಲಿ ಕಳೆಯ
ಬೇಕೆಂದು ಗುಜರಾತ್ ಗೆ ಬಂದ 
ಅಮಿತ್, ಒಬ್ಬರ ಪರಿಚಯದ 
ಮೇಲೆ ಕರ್ನಾಟಕಕ್ಕೆ ಬರುತ್ತಾರೆ. 
ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ 
ಒಳಪಡುತ್ತಾರೆ. ಕೆಲವೇ 
ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು 
ಬೇರೆಯವರಂತೆ ಆರೋಗ್ಯವಾಗಿ 
ಬದುಕುತ್ತಿದ್ದಾರೆ. ಅವರ ಮಾಡಿದ 
ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".
ಇದೇ ಚಿಕಿತ್ಸೆ ಅನೇಕ ರೋಗಿಗಳ 
ಮೇಲೆ ಪ್ರಯೋಗ ಮಾಡಿದಾಗ 
ಅವರಲ್ಲಿ ರೋಗನಿರೋಧಕ 
ಶಕ್ತಿ ವೃದ್ಧಿಸಿದೆ. "ಪಂಚಗವ್ಯ" 
ಅಂದರೆ ಗೋಮೂತ್ರ, 
ಗೋಸಗಣಿ, ಗೋಹಾಲು, 
ಗೋತುಪ್ಪ, ಗೋಮೊಸರು 
ಇವೆಲ್ಲದರ ಮಿಶ್ರಣದಿಂದ 
ತಯಾರಾಗೋ ಔಷಧಿ.
ಈ ಚಿಕಿತ್ಸೆಯಿಂದ ಗುಣಮುಖ
ರಾದ ಅಮಿತ್ ವೈದ್ಯ ಅವರು 
ಒಂದು ಇಂಗ್ಲಿಷ್ ಪುಸ್ತಕ 
ಬರೆದಿದ್ದಾರೆ. ಅ ಪುಸ್ತಕದ ಕನ್ನಡ 
ಹೆಸರು "ಒಂದು ದನ ನನ್ನ ಜೀವ 
ಹೇಗೆ ಕಾಪಾಡಿತು" ಎಂದು.
ದನವನ್ನು ದೇವರೆಂದು ಪೂಜಿಸೋ 
ಭಾರತೀಯರಾದ ನಮ್ಮಲ್ಲಿ 
ಎಷ್ಟೋ ಜನಕ್ಕೆ ಇದರ 
ಮಾಹಿತಿ ಇಲ್ಲ.ಎಷ್ಟೋ ಕಾಯಿಲೆಗ
ಳಿಗೆ ಮೀನಿನಿಂದ ಔಷಧ 
ತಯಾರಿಸುತ್ತಾರೆ. ಮೀನು 
ತಿನ್ನದವರು ಔಷಧ ಮುಖಾಂತರ 
ಆದರು ತಿನ್ನಲೆ ಬೇಕು.
ಹಾಗೆಯೆ ವಿದೇಶಗಳಲ್ಲಿ ದನದ 
ಮೂತ್ರ, ಸಗಣಿ, ಮಾಂಸದಿಂದ 
ಔಷಧಿ ತಯಾರಿಸಿ ಭಾರತಕ್ಕೆ 
ಕಳಿಸುತ್ತಾರೆ.ಅದನ್ನು ನಾವು 
ತಿನ್ನುತ್ತೇವೆ.
ನಮ್ಮ ಮನೆಯಲ್ಲಿರುವ 
ದನದ ಬಗ್ಗೆ ನಮಗೆ ತಾತ್ಸಾರ. 
*****


2005 ರ ಅಕ್ಟೋಬರ್ 28 ಜಡ್ಜ್‌ಮೆಂಟ್ ಕಾಪಿ. 

ಗೋಹತ್ಯೆಯ ವಿರುದ್ಧ ಅವರು ಏಕಾಂಗಿಯಾಗಿ ಗೆದ್ದು ಬಂದ ಕಥೆ

'ಗೋಹತ್ಯೆ'ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದಗಳನ್ನು ಓದಿ ,ಇತರರಿಗೂ ತಿಳಿಸಿ

ಈ ಪ್ರಕರಣದ ಪ್ರಮುಖ ವಕೀಲರು ಶ್ರೀ ಸೊಲೈಸೊರಬ್ಜಿ = ಶುಲ್ಕ 20 ಲಕ್ಷ, ಶ್ರೀ ಕಪಿಲ್ ಸಿಬಲ್ ಶುಲ್ಕ= 22 ಲಕ್ಷ ಮತ್ತು ಮಹೇಶ್ ಜೇಠ್ಮಲಾನಿ =35 ಲಕ್ಷ ತಗೊಂಡು ಗೋಮಾಂಸ ವ್ಯಾಪಾರಿಗಳ ಪರವಾಗಿ ಪ್ರಕರಣವನ್ನು ವಾದಿಸುತ್ತಿದ್ದವರು.

ಶ್ರೀ ಶ್ರೀ ರಾಜೀವ್ ಭಾಯ್ ಅವರಿಗೆ ವಕೀಲರನ್ನು ನೇಮಿಸಲು ಸಾಕಷ್ಟು ಹಣವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು: ನ್ಯಾಯಾಲಯವು "ನಿಮಗೆ ಕಾನೂನು ನೆರವಿಗಾಗಿ ವಕೀಲರನ್ನು ನೀಡಿದರೆ ಏನು?" ಎಂದು ಕೇಳಿದಾಗ, ಶ್ರೀ ರಾಜೀವ್ 'ಭಾಯ್, "ಇದರಿಂದ ಬಹಳ ಸಂತೋಷವಾಗಿದೆ ಆದರೆ ಈ ಪ್ರಕರಣವನ್ನು ನಾವೇ ವಾದಿಸಲು ನೀವು ಅವಕಾಶ ನೀಡಬೇಕು" ಎಂದು ಹೇಳಿದರು. ನ್ಯಾಯಾಲಯವು ಹಾಗೇ ಮಾಡಲು ಅನುಮತಿ ನೀಡಿದ್ದರಿಂದ, ಕಾನೂನು ಸಹಾಯಕ್ಕಾಗಿ 'ಶ್ರೀ.ಎಂ.ಇ.ಎಸ್ಕುರಿ ಎಂಬ ವಕೀಲರನ್ನು ನೇಮಕ ಮಾಡುವುದರೊಂದಿಗೆ ಪ್ರಕರಣವು ರಾಜೀವ್'ಭಾಯಿಯವರ ವಾದದೊಂದಿಗೆ ಮುಂದುವರಿಯುತ್ತದೆ.

ಈಗ ಈ ಗೋಮಾಂಸವ್ಯಾಪಾರಿಗಳ ವಾದಗಳನ್ನು ಅವಲೋಕಿಸೋಣ.

ವಾದ 1: ಸರ್ಕಾರಕ್ಕೆ ಗೋವನ್ನು ರಕ್ಷಿಸುವಲ್ಲಿ ಯಾವುದೇ ಉದ್ದೇಶವಿಲ್ಲ. ಗೋಮಾಂಸ ರಫ್ತಿನೊಂದಿಗೆ, ನಮ್ಮ ಭಾರತೀಯ ಆರ್ಥಿಕತೆ ಬಲಗೊಳ್ಳುತ್ತಿದೆ.

ವಾದ 2: ಗೋವುಗಳು ಆಹಾರ ಸಿಗದೇ ಹಸಿವಿನಿಂದ ಬಳಲುವುದಕ್ಕಿಂತ ಅವನ್ನು ಕೊಲ್ಲುವುದು ಉತ್ತಮ.

ವಾದ 3: ನಮ್ಮ ಭೂಮಿಯಲ್ಲಿ ಜನರಿಗೇ ಸ್ಥಾನವಿಲ್ಲ. ಜಾನುವಾರುಗಳಿಗೆ ಸ್ಥಳಾವಕಾಶ ಹೇಗೆ?

ವಾದ4: ನಮ್ಮ ಹೆಚ್ಚಿನ ವಿದೇಶೀ ವಿನಿಮಯದ ಹಣ ಮಾಂಸಾಹಾರ ರಫ್ತುಗಳಿಂದಾಗಿ ಬಂದದ್ದು.

ವಾದ5: ಮಾಂಸವನ್ನು ತಿನ್ನುವುದು ಮುಸ್ಲಿಮರ ಧಾರ್ಮಿಕ ಹಕ್ಕು.

(ಮುಸ್ಲಿಂ ಧರ್ಮದಲ್ಲಿ "ಅತ್ಯಂತ ಹಿಂಸಾತ್ಮಕ ಖುರೈಶಿ" ಮಾಡಿದ ಅತ್ಯಂತ ವ್ಯರ್ಥವಾದ ಹಕ್ಕುಗಳು ಇವು)


ಶ್ರೀ ರಾಜೀವ್ ಭಾಯ್ "ಈ ಎಲ್ಲಾ ಹಕ್ಕುಗಳನ್ನು ಭಾರತೀಯರು ತುಂಬಾ ಕಷ್ಟದಿಂದ ಸಹಿಸಿಕೊಂಡಿದ್ದಾರೆ" ಎಂಬ ವಿಷಯದ ಬಗ್ಗೆ ನ್ಯಾಯಾಲಯವು ಕೇಳಿದ ಎಲ್ಲಾ ಅಂಕಿಅಂಶಗಳನ್ನೂ ಸಲ್ಲಿಸಿದರು.

ಶ್ರೀ ರಾಜೀವ್ ಭಾಯ್ ಅವರ ಉತ್ತರಗಳನ್ನು ಪರಿಶೀಲಿಸೋಣ.

ಆರೋಗ್ಯಕರ ಗೋವು 3 ರಿಂದ 3.5 ಕ್ವಿಂಟಾಲ್ ತೂಗುತ್ತದೆ. ಮಾಂಸಕ್ಕಾಗಿ ವಧಿಸಲ್ಪಟ್ಟಾಗ ಸುಮಾರು 70 ಕೆಜಿ ಮಾಂಸವನ್ನು ಪಡೆಯಲಾಗುತ್ತದೆ. ಈ ಮಾಂಸಕ್ಕೆ ಕೆ.ಜಿ.ಗೆ 50 ರೂ.ನಂತೆ 3,500/- ಹಸುವಿನ ರಕ್ತಕ್ಕೆ 30-35 ಕೆಜಿಗೆ ರೂ. 1500. ಮೂಳೆಗಳಿಗೆ ಸಿಗುವ ಹಣ 1,000/- ದಿಂದ 1,200/- ರೂ

ಹೀಗೆ ಸ್ವಾರ್ಥಕ್ಕಾಗಿ ಒಂದು ಗೋ ಹತ್ಯೆಯಿಂದ ಗಳಿಸುವುದು ಸುಮಾರು7000/- ರೂಗಳು.

ಆರೋಗ್ಯವಾಗಿರುವ ಗೋವು ದಿನಕ್ಕೆ 10 ಕೆ.ಜಿ.ಗೋಮಯ ಮತ್ತು 3 ಲೀ. ಗೋಮೂತ್ರವನ್ನು ನೀಡುತ್ತದೆ. ೧ ಕಿಲೋಗ್ರಾಂ(ಕೆ.ಜಿ.) ಗೋಮಯದಿಂದ 33 ಕೆ.ಜಿ.ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ಇದನ್ನು'ಸಾವಯವಗೊಬ್ಬರ' ಎಂದು ಕರೆಯಲಾಗುತ್ತದೆ.

ಶ್ರೀ ರಾಜೀವ್ ಭಾಯ್'ಯವರೇ"ಅದು ಹೇಗೆ ಸಾಧ್ಯ?" ಎಂದು ಮಾನ್ಯ ನ್ಯಾಯಾಲಯವು ಅವರನ್ನು ಕೇಳಿತು. ನ್ಯಾಯಾಲಯಕ್ಕೆ ಅವರು ಈ ವಿಷಯದ ಬಗ್ಗೆ ವಿವರಿಸಿ, ಆ ಅಂಶಗಳನ್ನು ನ್ಯಾಯಾಲಯವು ಅಂಗೀಕರಿಸಿದ ನಂತರ, ಶ್ರೀ ರಾಜೀವ್'ಭಾಯ್ 33 ಕೆ.ಜಿ.ಸಾವಯವ ಗೊಬ್ಬರವನ್ನು ಉತ್ಪಾದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. "ಐಆರ್‌ಸಿ ವಿಜ್ಞಾನಿ"ಗಳು ಗೋಮಯದ ಗೊಬ್ಬರವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಅದನ್ನು 'ಅತ್ಯುತ್ತಮ ಸಾವಯವಗೊಬ್ಬರ' ಎಂದು ಘೋಷಿಸಿದರು. ಈ ಸಾವಯವಗೊಬ್ಬರವು ಭೂಮಿಗೆ 18 ವಿಧಗಳ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿ ತಿಳಿಸಿದ್ದಾರೆ. ಈ ಸೂಕ್ಷ್ಮ ಪೋಷಕಾಂಶಗಳು ಕೃಷಿ ಕ್ಷೇತ್ರದಲ್ಲಿ ಮ್ಯಾಂಗನೀಸ್, ಫಾಸ್ಫೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕೋಬಾಲ್ಟ್, ಸಿಲಿಕಾನ್ ಇತ್ಯಾದಿ ಸಸ್ಯಪೋಷಕಾಂಶಗಳ ಇರುವನ್ನು ಖಚಿತಪಡಿಸುತ್ತವೆ. ಆದರೆ ರಾಸಾಯನಿಕ ಗೊಬ್ಬರಗಳಲ್ಲಿ ಕೇವಲ 3 ಖನಿಜಾಂಶಗಳಿವೆ.  ರಾಸಾಯನಿಕ ಗೊಬ್ಬರಗಳಿಗಿಂತ ಗೋಮೂತ್ರಗೋಮಯಾಧಾರಿತ ಸಾವಯವಗೊಬ್ಬರವು 10ಪಟ್ಟು ಹೆಚ್ಚು ಪರಿಣಾಮಕಾರ ಎಂದು ಶ್ರೀರಾಜೀವ್ ಭಾಯ್ ತಮ್ಮ ವಾದದಲ್ಲಿ ಹೇಳಿದ್ದಾರೆ. ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.

ಶ್ರೀ ರಾಜೀವ್ ಭಾಯ್ ಅವರು ನ್ಯಾಯಾಲಯವನ್ನು ಕಾನೂನಿನ ಪ್ರಕಾರ ನ್ಯಾಯಾಲಯವು ಅನುಮತಿಸಿದರೆ, ನ್ಯಾಯಾಧೀಶರು ಮನೆಗೆ ಬಂದು - ತಾವು ಮತ್ತು ತಮ್ಮ ಕುಟುಂಬವು ಕಳೆದ 15 ವರ್ಷಗಳಿಂದ 1 ಕೆ.ಜಿ. ಗೋಮಯದಿಂದ 33 ಕೆ.ಜಿ. ಸಾವಯವ ಗೊಬ್ಬರವನ್ನು ಹೇಗೆ ಮಾಡುತ್ತಿದೆ? ಎಂಬುದನ್ನು ನೋಡಲು ಆಹ್ವಾನಿಸಿದರು.

ಶ್ರೀ ರಾಜೀವ್ ಭಾಯ್ ತಮ್ಮ ಹೇಳಿಕೆಯಲ್ಲಿ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿಲೋ ಗ್ರಾಂ ಸಾವಯವಗೊಬ್ಬರದ ಬೆಲೆಯು ಕನಿಷ್ಠ ರೂ.6 ಆಗಿದ್ದರೆ, ಗೋಮಾತೆಯು ದಿನಕ್ಕೆ 1,800/- ರೂ.ಗಳಿಂದ 2,000/- ರೂ.ಆದಾಯ ನೀಡುವಳು. (1 ಕೆ.ಜಿ.ಹಸುವಿನ ಗೊಬ್ಬರದಿಂದ 330 ಕೆ.ಜಿ.ಸಾವಯವ ಗೊಬ್ಬರತಯಾರಾಗುವುದು. 330 × 6/-ರೂ. ಈ ಗೋವುಗಳಿಗೆ ಭಾನುವಾರ ಇಲ್ಲ! ಹಾಗಾಗಿ ಈ ಲೆಕ್ಕಾಚಾರದ ಪ್ರಕಾರ) ಒಂದು ವರ್ಷದಲ್ಲಿ ಅಂದರೆ ರೂ.1800 × 365 = 365 ದಿನಗಳಲ್ಲಿ 6 ಲಕ್ಷ 57ಸಾವಿರ/- ರೂ.ಬೆಲೆಬಾಳುವುದು-ಎಂದು ವಾದಮಂಡಿಸಿದರು.

ಶ್ರೀ ರಾಜೀವ್ ಭಾಯ್ ಅವರ ಪ್ರಕಾರ, ಗೋಮಾತೆಯ 20 ವರ್ಷಗಳ ಆದಾಯವು 1 ಕೋಟಿ, 31 ಲಕ್ಷ ಮತ್ತು 40 ಸಾವಿರ ರೂ.ಗಳನ್ನು ಮೀರಿದೆ ಎಂದು ತಿಳಿಸಿದಾಗ ಆಶ್ಚರ್ಯಚಕಿತರಾದರು.

"ಸಾವಿರಾರು ವರ್ಷಗಳ ಹಿಂದಿನಿಂದಲೂ ಲಕ್ಷ್ಮೀ ಗೋಮಯದಲ್ಲಿ ವಾಸಿಸುತ್ತಿದ್ದಳು" ಎಂದು ನಮ್ಮ ಪೂರ್ವಜರು ಭಾವಿಸಿದ್ದರು ಎಂದು ಶ್ರೀರಾಜೀವ್'ಭಾಯ್ ಸುಪ್ರೀಂಕೋರ್ಟ್'ನಲ್ಲಿ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ, ಅದನ್ನು ಅಪಹಾಸ್ಯ ಮಾಡುವವರಿಗೆ ಕಪಾಳಮೋಕ್ಷ ಮಾಡಿದರು.

"ಮೆಕಾಲೆಯ ಶಿಕ್ಷಣಪದ್ಧತಿ"(?)ಯಲ್ಲಿ ಓದಿಕೊಂಡವರು "ಲಕ್ಷ್ಮಿಯು ನಮ್ಮ "ಗೋಮಯದಲ್ಲಿ ವಾಸಿಸುತ್ತಾಳೆ"ಎಂಬಂಶವನ್ನು ಹಲವು ವರ್ಷಗಳಿಂದ ಕುಚೋದ್ಯಮಾಡುವುದನ್ನು ತಪ್ಪುಎಂದು ಈ ರೀತಿ ಸಾಬೀತು ಮಾಡಿದ್ದಾರೆ.ಆ ಬಗ್ಗೆ ಶ್ರೀ ರಾಜೀವ್ ಭಾಯ್ ಅವರ ವಿವರಣೆಯು ಹೀಗಿದೆ.

"ಒಂದು ಗೋವು ದಿನಕ್ಕೆ 2 ಅಥವಾ 2.25 ಲೀ. ಗೋಮೂತ್ರ ನೀಡುತ್ತದೆ. ಇದು ಹಲವಾರು ರೋಗಗಳಿಗೆ ಪರಿಹಾರಕವಾಗಿದ್ದು ಮಧುಮೇಹ, ಕ್ಷಯ, ಸಂಧಿವಾತ, ಮೂಳೆ ರೋಗಗಳಂತಹ ವಿವಿಧ ರೋಗಗಳನ್ನು ಗುಣಪಡಿಸಿ ನಿವಾರಿಸುತ್ತದೆ."

ಭಾರತೀಯ ಮಾರುಕಟ್ಟೆಯಲ್ಲಿ 1 ಲೀ. ಗೋಮೂತ್ರದ ಬೆಲೆ ರೂ 500/-. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೆಲೆ ಇನ್ನೂ ಹೆಚ್ಚಾಗಿದೆ. ಯುಎಸ್'ನಲ್ಲಿ "ಗೋಟ್ರಾಮ್ ಪೇಟೆಂಟ"ನ್ನು ಸಹ ಪಡೆದಿರುವರು. ಗೋಮೂತ್ರಕ್ಕೆ 3 ಪೇಟೆಂಟ್‌ಗಳಿವೆ. ಯುಎಸ್'ಸರ್ಕಾರವು ಭಾರತದಿಂದ ಗೋಮೂತ್ರವನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಅದರಿಂದ ಕ್ಯಾನ್ಸರ್ ಮತ್ತು ಮಧುಮೇಹಕ್ಕೆ 'medicines' ತಯಾರಿಸುತ್ತಿದೆ.

ಯುಎಸ್'ಗೆ ಗೋಮೂತ್ರ ರಫ್ತು ದರವು ಪ್ರಸ್ತುತ (ದಾವೆ ನಡೆಯುತ್ತಿದ್ದಾಗಿನ ಕಾಲದಲ್ಲಿ) 1,200/-ರೂಪಾಯಿ. ಈ ಲೆಕ್ಕಾಚಾರದ ಪ್ರಕಾರವಾಗಿ ಗೋಮೂತ್ರಕ್ಕೆ ದಿನಕ್ಕೆ 3,000/- ರೂ.

3000 × 365 =10 ಲಕ್ಷ 95ಸಾವಿರರೂ.ಗಳು.

ಗೋವಿನ ಜೀವನದ ಕೇವಲ 20 ವರ್ಷಗಳಲ್ಲಿ ಆದಾಯ ರೂ.

2 ಲಕ್ಷ19ಸಾವಿರ ರೂ.ಗಳು

ಇನ್ನು ಈ ಗೋಮಯವು "ಮೀಥೇನ್" ಎಂಬ ಅನಿಲವನ್ನು ಉತ್ಪಾದಿಸುತ್ತದೆ. ನಾವು ಅದನ್ನು ನಮ್ಮ ಅಡುಗೆಮನೆಗಳಲ್ಲಿ ಅಡುಗೆಬೇಯಿಸಲು ಬಳಸಬಹುದು. ಈ ಅನಿಲದಿಂದ ನಾವು ನಮ್ಮ ದ್ವಿಚಕ್ರವಾಹನ ಮತ್ತು ನಮ್ಮ ಚತುಶ್ಚಕ್ರವಾಹನ(ಕಾರು)ಗಳನ್ನು ಓಡಿಸಬಹುದು.

ತೀರ್ಪುಗಾರರಾದ ನ್ಯಾಯಾಧೀಶರಿಗೆ ಈ ವಾದವನ್ನು ನಂಬಲು ಸಾಧ್ಯವಾಗಲಿಲ್ಲ. ಆಗ ಶ್ರೀ ರಾಜೀವ್'ಭಾಯ್, "ನೀವು ಅನುಮತಿ ನೀಡಿದರೆ, ನಾನು ನಿಮ್ಮ ಕಾರಿನಲ್ಲಿ ಮಿಥೇನ್'ಗ್ಯಾಸ್ ಸಿಲಿಂಡರ್ ಜೋಡಿಸುತ್ತೇನೆ. ನಿಮ್ಮ ಕಾರನ್ನು ಅದರಿಂದ ಓಡಿಸಿದ ನಂತರ ನೀವು ಅದನ್ನು ಪರೀಕ್ಷೆಮಾಡಿಸಿ" ಎಂದು ಹೇಳಿದರು. ಅವರ ಈ ವಾದದಂತೆ ತೀರ್ಪುಗಾರ ನ್ಯಾಯಾಧೀಶರು 'ಮೀಥೇನ್' ಅನಿಲದಿಂದ 3 ತಿಂಗಳುಗಳ ಕಾಲ ತಮ್ಮ ಕಾರನ್ನು ಓಡಿಸಿದರು. ಪ್ರತೀ ಕಿಲೋಮೀಟರಿಗೆ 50 ರಿಂದ 60 ಪೈಸೆಗಿಂತ ಹೆಚ್ಚು ಖರ್ಚು ಮಾಡದೇ ಅವರು ತಮ್ಮ ಕಾರನ್ನು ಓಡಿಸಿದರು.

ಈ ಹಿಂದೆ ಡೀಸೆಲ್ ಬೆಲೆ ಪ್ರತಿ ಕಿ.ಮೀ.ಗೆ 40 ರೂಗಳಿಂದ ಕಾರ್ ನಡೆಸುತ್ತಿದ್ದರು. ಆದರೆ ಗೋಮಯದ ಮಿಥೇನ್ದಿಂದ ವಾತಾವರಣವು ಮಲಿನವಾಗುವುದಿಲ್ಲ ಹಾಗೂ ಮಿತವ್ಯಯಿಯೂ ಹೌದು ಎಂದು ಆ ನ್ಯಾಯಾಧೀಶರು ಶ್ರೀರಾಜೀವ್'ಭಾಯ್ ವಾದಿಸಿದ್ದನ್ನು ಕೇಳಿ ನಿಜವೆಂದು ಒಪ್ಪಿ, ಭಾಯ್'ಯವರನ್ನು ಮುಂದಿನ ಅಂಶಗಳನ್ನು ಪ್ರಸ್ತಾಪಿಸಲು ಅನುಮತಿಯನ್ನಿತ್ತರು. 10 ಕೆ.ಜಿ. ಹಸುವಿನ ಗೊಬ್ಬರದಲ್ಲಿ ಎಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದು? ಮತ್ತು 20 ವರ್ಷಗಳಲ್ಲಿ ಅದರಿಂದ ದೇಶಕ್ಕೆ ಎಷ್ಟು ಉಳಿತಾಯವಾಗುತ್ತದೆ? ಎಂದು ವಿವರಿಸಿ, ಅವರು ತಮ್ಮ ಅಂಕಿ-ಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ದೇಶದಲ್ಲಿ 17ಕೋಟಿ ಗೋವುಗಳಿದ್ದು 32 ಲಕ್ಷಕೋಟಿ ರೂ. ಬೆಲೆಬಾಳುವುವು ನಮ್ಮ ದೇಶದ ಎಲ್ಲಾ ಸಾರಿಗೆಯು ಮೀಥೇನ್ ಆಧಾರಿತವಾಗಿದ್ದರೆ, ನಾವು ಅರಬ್ಬರ ದೇಶಗಳಿಂದ ಪೆಟ್ರೋಲ್-ಡೀಸೆಲ್ ಅನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ನಮ್ಮ ವಿದೇಶೀವಿನಿಮಯವನ್ನುಇಂಧನಕ್ಕಾಗಿ ಖರ್ಚು ಮಾಡುವ ಅಗತ್ಯವಿಲ್ಲ. ನಮ್ಮ ರೂಪಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತದೆ. ಗೋ-ಆಧಾರಿತ ಹಣಕಾಸುವ್ಯವಸ್ಥೆಯ ಕಾರಣದಿಂದಾಗಿ ಇದು ಸಾಧ್ಯವಾಗುವುದು.ಹಿಂದೆ ಇತಿಹಾಸಕಾಲದಲ್ಲಿ ಗೋ-ಆಧಾರಿತ ಹಣಕಾಸುವ್ಯವಸ್ಥೆಯಿಂದಾಗಿಯೇ ಭಾರತದೇಶವೇ ಪ್ರಮುಖ ರಾಷ್ಟ್ರವಾಗಿತ್ತು.

ಈ ವಾದವನ್ನು ಕೇಳಿದ ಸುಪ್ರೀಂಕೋರ್ಟ್ ಆಘಾತಕ್ಕೊಳಗಾಯಿತು ಮತ್ತು ಶ್ರೀ ರಾಜೀವ್ ಭಾಯ್ ಅವರ ಅಂಕಿಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿತು. ಭಾರತದ ಸುಪ್ರೀಂ ಕೋರ್ಟ್(ಎಸ್ಸಿ) ತನ್ನ ಹೇಳಿಕೆಯಲ್ಲಿ- "ರಾಜೀವ್ ಭಾಯ್ ತಿಳಿಸಿರುವ ಸತ್ಯವನ್ನು ಅರಿತುಕೊಂಡಿದ್ದೇವೆ. ಮತ್ತು "ಗೋ-ಕೇರ್" (ಗೋ-ಆಧಾರಿತಹಣಕಾಸುವ್ಯವಸ್ಥೆಯು) ಭಾರತದೇಶದ ಆರ್ಥಿಕಾಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ" ಎಂದು ಒಪ್ಪಿಕೊಂಡಿದೆ.

ಶ್ರೀ ರಾಜೀವ್ ಭಾಯ್ ಅವರ ವಾದಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಾಗ ಗೋಕೊಲೆಗಡುಕರ ತಲೆತಿರುಗಿ, ಬೆವರಿ, ಉಸಿರುಗಟ್ಟಿತ್ತು. ಪ್ರಕರಣವು ತಮ್ಮ ಕೈಯಿಂದ ಜಾರುತ್ತಿದೆ ಎಂದು ಅವರು ಅರಿತುಕೊಂಡರು.

ಈ ಹಿಂದೆ "ಸರ್ಕಾರವು 1 ಗೋವಿನಿಂದ 7,000 ರೂ.ಗಿಂತ ಹೆಚ್ಚು ಗಳಿಸುತ್ತಿಲ್ಲ"ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆಗ ಕೊಲೆಗಡುಕರು "ಗೋಮಾಂಸಭಕ್ಷಣೆ ಮುಸ್ಲಿಮರ ಇಸ್ಲಾಮಿಕ್ ಹಕ್ಕು" ಎಂದು ವಾದಿಸಿದರು.

ಶ್ರೀ ರಾಜೀವ್'ಭಾಯ್  "ಈ ಧಾರ್ಮಿಕ ಹಕ್ಕನ್ನು ಈ ಹಿಂದೆ ಎಷ್ಟು ಇಸ್ಲಾಮಿಕ್ ಆಡಳಿತಗಾರರು ಬಳಸಿದ್ದಾರೆ? ಈ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುವ ಇಸ್ಲಾಮಿಕ್ ಗ್ರಂಥಗಳು ಯಾವುವು?" ಎಂದು ವಿಚಾರಮಾಡಿದ ನಂತರ ಸುಪ್ರೀಂಕೋರ್ಟ್ ಈ ವಿಷಯಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿತು. ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಮಿತಿಗೆ ಆದೇಶಿಸಲಾಯಿತು. “ಇಸ್ಲಾಮಿಕ್ ಆಡಳಿತಗಾರರು ಮತ್ತು ಧಾರ್ಮಿಕ ಗ್ರಂಥಗಳು ಮಾಂಸ ತಿನ್ನುವ ಬಗ್ಗೆ ಏನು ಹೇಳಿದರು?ಎನ್ನುವ ಬಗ್ಗೆ ಸಮಿತಿಯು ಐತಿಹಾಸಿಕ ದಾಖಲೆಗಳನ್ನು ಶೋಧಿಸಿ, ತೀರ್ಮಾನಿಸಿತು.

"ಇಸ್ಲಾಮಿಕ್ ಆಡಳಿತಗಾರರು ಗೋವಧೆಯನ್ನು ಬೆಂಬಲಿಸಲಿಲ್ಲ. ವಾಸ್ತವವಾಗಿ, ಕೆಲವು ಆಡಳಿತಗಾರರು ಗೋವಧೆಯ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದರು. ಅವರ ಮುಖ್ಯಸ್ಥನಾಗಿದ್ದ ಬಾಬರ್ ತನ್ನ "ಬಾಬರ್ ನಮನ" ದಲ್ಲಿ ಗೋವಧೆಯು ಅಪರಾಧ ಮತ್ತು ಈ ದೇಶದಲ್ಲಿ ಇಂತಹ ಅಪರಾಧವು ನಡೆಯಬಾರದು ಎಂದಿದ್ದ ಆ ಕಾಲದ ಕಾನೂನ್ನು ದಾಖಲಿಸಿದ್ದಾರೆ.

ಇದೇ ವೇಳೆ, ಟಿಪ್ಪುಸುಲ್ತಾನನ ತಂದೆ, ದಕ್ಷಿಣದಲ್ಲಿ ಹೈದರ್ ಅಲಿಯು, "ಗೋವನ್ನು ಕೊಂದವನು ನರಕವನ್ನು ಪಡೆಯುವನು"ಎಂದು ತಿಳಿಸಿದ್ದು ಕಂಡುಬರುತ್ತದೆ. ಅನೇಕರು ಇದರಿಂದಾಗಿ ಶಿಕ್ಷೆಗೊಳಗಾಗಿದ್ದರು.

ಟಿಪ್ಪುಸುಲ್ತಾನನು ರಾಜನಾಗಿದ್ದಾಗ, ಅವನು "ಗೋವಧೆಗೆ ಶಿಕ್ಷೆ- ಕೈ ಕತ್ತರಿಸುವುದು" ಎಂದು ಘೋಷಿಸಿದ್ದನು' ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದಾಗ ಶ್ರೀ ರಾಜೀವ್'ಭಾಯ್ ಅವರ ವಾದವು ಮತ್ತಷ್ಟು ಬಲಪಡೆಯಿತು.

"ಗೋವಧೆಯು ಧಾರ್ಮಿಕಹಕ್ಕಾಗಿದ್ದರೆ, ಇಸ್ಲಾಂಧರ್ಮವನ್ನು ಆಳಿದ ಚಕ್ರವರ್ತಿಗಳಾದ- ಬಾಬರ್, ಹುಮಾಯೂನ್ ಮತ್ತು ಅಂತಿಮವಾಗಿ ಔರಂಗಜೇಬನು ಗೋವಧೆಯ ವಿರುದ್ಧ ಕಾನೂನುಗಳನ್ನು ರಚಿಸಿದ್ದರು ಮತ್ತು ನಂತರ ಅನುಷ್ಠಾನಿಸಲು ಮುಂದಾಳುಗಳಾಗಿದ್ದರು" ಎಂಬ ಐತಿಹಾಸಿಕ ಅಂಶದ ಪ್ರಸ್ತುತಿಯ ನಂತರ ಶ್ರೀರಾಜೀವ್'ಭಾಯ್ ತಮ್ಮ ಪ್ರಮುಖ ವಾದವನ್ನು ಪ್ರಾರಂಭಿಸಿದರು. ಸುಪ್ರೀಂಕೋರ್ಟ್‌ನ ಅನುಮತಿಯೊಂದಿಗೆ, ಪವಿತ್ರ ಕುರಾನ್, ಹದಿದ್ ಮತ್ತು ಉಳಿದ ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಗೋವಧೆಯ ಬಗ್ಗೆ ಏನು ಹೇಳುವುದು? ಎಂದು ಪರಿಶೀಲಿಸಲು ಮನವಿಮಾಡಲಾಯಿತು. ಯಾವುದೇ ಇಸ್ಲಾಮಿಕ್'ಗ್ರಂಥ/ಪುಸ್ತಕವು ಗೋವಧೆಯನ್ನು ಬೆಂಬಲಿಸುವುದಿಲ್ಲ. ಮತ್ತು "ಸರ್ಕಾರವು ಗೋವನ್ನು ರಕ್ಷಿಸಲಿ, ಅದು ನಿಮ್ಮನ್ನು ರಕ್ಷಿಸುತ್ತದೆ" ಎಂದು

"'ಹದಿದ್'"ನಲ್ಲಿ ಹೇಳಿರುವರು.

ಪ್ರವಾದೀ ಮೊಹಮ್ಮದ್'ನು ಒಬ್ಬ ಮುಗ್ಧಜೀವಿ, ಮತ್ತು ಅವರನ್ನು ಪಿತೃ, ಪ್ರಭು, ಕರುಣಾಮಯಿ ಎಂದು ವರ್ಣಿಸಿದ್ದಾರೆ. ಪ್ರವಾದಿ ಮಹಮ್ಮದ್ ಅವರ ಭವಿಷ್ಯವಾಣಿಯಲ್ಲಿ, "ಗೋಹತ್ಯೆಯನ್ನು ಮಾಡಿದವನಿಗೆ ನರಕದಲ್ಲೂ ಸ್ಥಾನವಿಲ್ಲ." ಎಂದು ಘೋಷಿಸಿರುವರು. ಎಂಬ ಅಂಶವನ್ನು ನ್ಯಾಯಾಲಯಕ್ಕೆ ತಮ್ಮ ವಾದವನ್ನು ಪ್ರಸ್ತುತಪಡಿಸಿದಾಗ ತಿಳಿಸಿರುವರು. ಮುಕ್ತಾಯದ ಹಂತದಲ್ಲಿ, ಶ್ರೀ ರಾಜೀವ್'ಭಾಯ್ ಅವರು ಪವಿತ್ರ ಕುರಾನ್, ಮೊಹಮ್ಮದ್, ಪ್ರವಾದಿ, ಹದೀದ್ ಮತ್ತು "ಗೋವಾಡ್" 'ನಲ್ಲಿ ಇಸ್ಲಾಂಧರ್ಮವು ಹೇಗೆ ? ಎಂದು ವಿವರಿಸುತ್ತಾರೆ. ಮೆಕ್ಕಾ ಮತ್ತು ಮದೀನಾದ ಮುಸ್ಲಿಂ ಮುದುಕವಯಸ್ಕ ಜನರಿಗೆ - "ಈ ಪ್ರಾಣಿಭಕ್ಷಣಕ್ರಮ ಯಾವ ಪುಸ್ತಕ(ಗ್ರಂಥ)ದಲ್ಲಿ ತಿಳಿಸಲಾಗಿದೆ? ಹೇಳಿರಿ... ಎಂದು ಪ್ರಶ್ನಿಸಿದಾಗ ಅವರು"ಅದು ನಮಗೆ ಗೊತ್ತಿಲ್ಲ. ತಿಳಿದಿಲ್ಲ" ಎಂದು ತಿಳಿಸಿದುದನ್ನೂ ಸುಪ್ರೀಂಕೋರ್ಟಿಗೆ ವಿಜ್ಞಾಪಿಸಿದಾಗ ಗೋವುಕೊಲೆಗಾರರು ಓಡಿಹೋದರು.

ಸುಪ್ರೀಂ ಕೋರ್ಟ್ ಪದೇಪದೇ "ಗೋವಧೆ ಧಾರ್ಮಿಕ ಹಕ್ಕು"ಎಂಬುದಕ್ಕೆ ಆಧಾರ ತೋರಿಸಿರಿ ಎಂದು ಆಜ್ಞಾಪೂರ್ವಕ ಆಗ್ರಹಿಸಿತು.

ಈ ಅತ್ಯಂತ ನಿರ್ಣಾಯಕವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನ್ಯಾಯಾಲಯವು 2005 ರ ಅಕ್ಟೋಬರ್ 26 ರಂದು ತನ್ನ ತೀರ್ಪನ್ನು ಪ್ರಕಟಿಸಿತು.

ಈ ತೀರ್ಪನ್ನು ನೀವು ಸುಪ್ರೀಂ ಕೋರ್ಟ್'ನ ವೆಬ್‌ಸೈಟ್‌ನಲ್ಲಿ ಇಂದಿಗೂ ವೀಕ್ಷಿಸಬಹುದು.

ಸುಪ್ರೀಂ ಕೋರ್ಟ್ ತನ್ನ 61 ಪುಟಗಳ ಐತಿಹಾಸಿಕವಾದ ತೀರ್ಪಿನೊಂದಿಗೆ ದಾಖಲೆ ನಿರ್ಮಿಸಿದೆ."ಗೋವಧೆ/ಹತ್ಯೆಯು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರತಿಯೊಬ್ಬ ನಾಗರಿಕನು ಸರ್ಕಾರದ ಸಾಂವಿಧಾನಿಕ ಆದೇಶದಂತೆ ಕರ್ತವ್ಯವಾಗಿ ಗೋವನ್ನು ರಕ್ಷಣೆಮಾಡಬೇಕು" ಅದನ್ನು ಬಲಪಡಿಸಲು ನಾವು ಸಂವಿಧಾನವನ್ನು ರಚಿಸಿದ್ದೇವೆ. ಈಗ ಇದು ಹಸುಗಳ ರಕ್ಷಣೆಯನ್ನೂ ಒಳಗೊಂಡಿದೆ".

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ "ಎಲ್ಲಾ 34(28+6) ರಾಜ್ಯ ಹಾಗೂ ಕೇಂದ್ರಾಡಳಿತಪ್ರದೇಶಗಳೂ ಗೋಸಂರಕ್ಷಣೆಯನ್ನು ನೋಡಿಕೊಳ್ಳಬೇಕು. ಪ್ರತಿಯೊಬ್ಬ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಕಾರ್ಯದರ್ಶಿಗಳೂ ಈ ಕಾನೂನಿನ ರಕ್ಷಣೆಯಲ್ಲಿ ಜವಾಬ್ದಾರರು" ಎಂದು ಹೇಳಿಕೆಯಿತ್ತಿದೆ.

ಕರ್ತವ್ಯನಿರತಾದ ಹಿಂದೂ ರಕ್ಷಣಾ ಸಿಪಾಯಿಗಳು ಹಂದಿಕೊಬ್ಬುಲೇಪಿತ ಗುಂಡುಗಳನ್ನು ಬಾಯಿಂದ ಕಚ್ಚಿ ಕೋವಿಗೆ ತುಂಬಲು ನಿರಾಕರಿಸಿದಾಗ, ಆ ಸಿಪಾಯಿಗಳಿಗೆ ಅದಕ್ಕಾಗಿ ಆಗ್ರಹಿಸಿದ ಬ್ರಿಟಿಷ್'ಅಧಿಕಾರಿಯನ್ನು ದೇಶಭಕ್ತ"ಶ್ರೀ ಮಂಗಲ್ ಪಾಂಡೆಯು ಗುಂಡಿಕ್ಕಿ ಕೊಂದರು. ಈ ಘಟನೆಯು ನಮ್ಮ ಮೊದಲ ಸ್ವಾತಂತ್ರ್ಯ ಅಭಿಯಾನ ಮತ್ತು ಗೋಕೇರ್ (ಗೋಸಂರಕ್ಷಣಾಂದೋಲನವ)ಅನ್ನು ಪ್ರಾರಂಭಿಸಲು ಕಾರಣವಾಯಿತು. ಶ್ರೀ ಮಂಗಲ್'ಪಾಂಡೆ ಮಾಡಿದ ತ್ಯಾಗ, ಬಲಿದಾನವನ್ನು ನಾವು ಮರೆತರೆ ನಮ್ಮ ಕೃತಜ್ಞತಾಬುದ್ಧಿಯನ್ನು ಕಳೆದುಕೊಂಡು, ಕೃತಘ್ನರಾಗುತ್ತೇವೆ.

ಗೋವಿನ ಆರೈಕೆ, ಸಂರಕ್ಷಣೆಯು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಆ ಕರ್ತವ್ಯವು ಸಂವಿಧಾನ ಬದ್ಧವಾಗಿದೆ. ಗೋಹತ್ಯಾ ತಪ್ಪು, ಎಲ್ಲಿಯಾದರೂ ಸಂಭವಿಸಿದಲ್ಲಿ ಅದನ್ನು ತಡೆಯುವುದು ಅಪರಾಧವಲ್ಲ. ಇದು ಸುಪ್ರೀಂಕೋರ್ಟ್‌ನ ತೀರ್ಪು. ವಂದೇ ಗೋಮಾತರಂ ಭಾರತೀಯರ ರಾಷ್ಟ್ರೀಯ ಸಾಕು ಪ್ರಾಣಿಯಾದ ದನಕರುಹಸುಗಳು “ಶ್ರೀಲಕ್ಷ್ಮೀನಿವಾಸಿ”ಗಳೂ ಹೌದು !!

"ಶುಭಂ-ಸ್ವಸ್ತಿ- ಮಂಗಲಂ" 

***

ಗೋ  ಮಾತೆಯ ಮಹತ್ವ 

ದೇಸಿ ತಳಿಯ ಗೋವು  ಅಂದರೆ ಭಗವಂತ ಶ್ರೀ ಕೃಷ್ಣ ಮತ್ತು ಎಲ್ಲ ದೇವ  ದೇವತೆಗಳ ಸಾನಿಧ್ಯ ವಿರುವ ದೇವಷ್ಟಾನ .

ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ. ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ. ಇವುಗಳೆಲ್ಲವೂ ಪರಮಪವಿತ್ರ ಮಾತ್ರವಲ್ಲದೆ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಶುದ್ಧೀಕರಣ ಮಾಡುತ್ತವೆ.


ಗೋಮೂತ್ರ: ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಸುಮಾರು ೧0೮ ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ. ಕ್ಯಾನ್ಸರ್‌ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ ಬೆಳೆಯುತ್ತದೆ. ಗೋಮೂತ್ರವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಎಂಬ ಸತ್ಯವು ಇತ್ತೀಚೆಗೆ ಪ್ರಚಾರಕ್ಕೆ ಬಂದಿರುವುದಾದರೂ ಇದರ ಉಲ್ಲೇಖವು ವೇದಗಳಲ್ಲಿ ಬಂದಿದೆ. ಶರೀರದ ಮೇಲೆ ಗಂಟುಗಳು ಆದಲ್ಲಿ ಗೋಮೂತ್ರದ ನೊರೆಯಿಂದ ತೇವ ಭರಿತವಾಗಿಸುವುದು, ಗೋಮೂತ್ರವನ್ನು ಅದರ ಮೇಲೆ ಧಾರೆಯಂತೆ ಸುರಿಯುವುದು, ಗೋಮೂತ್ರದಿಂದ ತೊಳೆಯುವುದು ಮೊದಲಾದ ಚಿಕಿತ್ಸಾ ವಿಧಾನವನ್ನು ‘ಅಥರ್ವವೇದ’ದಲ್ಲಿ ಹೇಳಲಾಗಿದೆ. ರಸೌಷಧಿಗಳ ಶೋಧನೆಗೂ ಗೋಮೂತ್ರವನ್ನು ಬಳಸುತ್ತಾರೆ.


ಗೋಮಯ: ಹಸುವಿನ ಸೆಗಣಿಯು ಕ್ರಿಮಿನಾಶಕ ಗುಣಗಳನ್ನು ಹೊಂದಿರುವುದರಿಂದ ಮೊದಲು ಜನರು ನೆಲವನ್ನು ಸಾರಿಸಲು ಉಪಯೋಗಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಜನರು ಇದನ್ನು ಬಳಸುತ್ತಾರೆ. ಬೆರಣಿಯ ಭಸ್ಮವು ಚಳಿ, ಜ್ವರ ಇತ್ಯಾದಿಗಳಲ್ಲಿ ಮೈ ಶಾಖವನ್ನು ಕಾಪಾಡಲು ಸಹಾಯ ಮಾಡುತ್ತದೆ.


ಗೋಕ್ಷೀರ (ಹಸುವಿನ ಹಾಲು): ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಉಪಯುಕ್ತ. ಹಾಲು ವಾತ, ಪಿತ್ಥ, ಕಫಗಳೆಂಬ ಮೂರು ದೋಷಗಳನ್ನು ಹೋಗಲಾಡಿಸುತ್ತದೆ.


ದಧಿ (ಮೊಸರು): ಹಸುವಿನ ಮೊಸರು ಶರೀರಕ್ಕೆ ಬಲಕರ. ವಾತ ಹರವೂ ದೇಹಪುಷ್ಟಿಕರವೂ ಆಗಿದೆ. ಮೊಸರಿಗೆ ಸಕ್ಕರೆ ಹಾಕಿ ಸೇವಿಸಿದರೆ ರಕ್ತದೋಷ ಹಾಗೂ ಪಿತ್ತದೋಷಗಳನ್ನು ಹೋಗಲಾಡಿಸಿ ಮೈ ಉರಿಯನ್ನು ಕಡಿಮೆ ಮಾಡುತ್ತದೆ.


ನವನೀತ (ಬೆಣ್ಣೆ): ತದ್‌ಹಿತಂ ಬಾಲಕೇ ವೃದ್ಧೇ ವಿಶೇಷಾದಮೃತಂ ಶಿಶೋಃ | ತಾಜಾ ಬೆಣ್ಣೆಯು ಮಕ್ಕಳಿಗೂ ಮತ್ತು ವೃದ್ಧರಿಗೂ ಹಿತವಾಗಿರುತ್ತದೆ. ಎಳೆ ಮಕ್ಕಳಿಗೆ ಅಮೃತದಂತೆ. ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುತ್ತದೆ.


ಘೃತ (ತುಪ್ಪ): ತುಪ್ಪವು ವಾತಪಿತ್ತಹರ, ವಿಷಹರ, ಕಣ್ಣಿನ ರೋಗಗಳನ್ನು ಹೋಗಲಾಡಿಸಿ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಖಾಯಿಲೆಗಳಲ್ಲಿ ಅರಿಶಿನ ಹಾಕಿ ಕಾಯಿಸಿದ ತುಪ್ಪವು ಉಪಯುಕ್ತವಾಗಿದೆ.

ಗೋ   ಮಾತೆ ಅಂದರೆ ಎಲ್ಲವನ್ನೂ ಕೊಡುವ ಕಾಮಧೇನು. ಅವಳನ್ನು ರಕ್ಷಿಸೋಣ ,ಪೂಜಿಸೋಣ .

ಗೋ ಸೇವೆಯಿಂದ ಮಾನವ ಜನ್ಮವೇ ಸಾರ್ಥಕವಾಗುತ್ತದೆ 

ಜೈ ಗೌ ಮಾತಾ 🙏🏻

***



 🕉️ಗೋಮೂತ್ರವು ತೀಕ್ಷ್ಣ ಬಿಸಿ ಮತ್ತು ಸ್ವಲ್ಪ ಮಧುರ ಗುಣವುಳ್ಳದ್ದಾಗಿದೆ ಇದು ಪಾಚಕ ಅಗ್ನಿ ದೀಪಕ ಹಾಗೂ ಬುದ್ಧಿ ವರ್ಧಕ ವಾಗಿದೆ ಕಪ ಬಾಯಿ  ಕುಷ್ಟ ಪಾಂಡುರೋಗ ದಮ್ಮು ಜ್ವರ ಕೆಮ್ಮು ಮಲಬದ್ಧತೆ ನೇತ್ರರೋಗ ಮತ್ತು ತ್ವಜ  ರೋಗಗಳನ್ನು ನಾಶಗೊಳಿಸುತ್ತದೆ.......


🕉️ಗೋಮೂತ್ರವು ಕರುವನ್ನು ಬಿಟ್ಟು ಹಿಂಡಿ ಕೊಳ್ಳುವಾಗ ಸಂಗ್ರಹಿಸಿ ಉಪಯೋಗಿಸಬೇಕು.....


🕉️ ಗೋಮೂತ್ರದಲ್ಲಿ ಸಕ್ಕರೆ ಹಾಗೂ ಉಪ್ಪುಗಳನ್ನು ಸಮ ಭಾಗದಲ್ಲಿ ಅರೆದು ಕೂಡಿಸಿ ಇಲ್ಲವೇ ಸೈಂಧವ ಲವಣ ಮತ್ತು ರಾಗಿಯ ಚೂರ್ಣವನ್ನು ಗೋಮೂತ್ರದಲ್ಲಿ ಬೇರಸಿ ಸೇವಿಸುವುದರಿಂದ ಉದರವ್ಯಾಧಿ ಯು ವಾಸಿಯಾಗುವುದು.....


🕉️ಪ್ರಾಂತಕಾಲ ಹಾಗೂ ಸಾಯಂಕಾಲ ಗೋಮೂತ್ರದಲ್ಲಿ ಅರಿಶಿನ ಪುಡಿಯನ್ನು ಕೂಡಿಸಿ ಪಾಣ ಮಾಡಿಸಿದರೆ ಮಕ್ಕಳ ಹೊಟ್ಟೆ ರೋಗವು ದೂರಾಗುವುದು......


 🕉️ಪ್ರತಿದಿವಸ ಪ್ರಾಂತಕಾಲ ತಮ್ಮ ಶಕ್ತಾನುಸಾರ ಬಟ್ಟೆಯಲ್ಲಿ ಸೋಸಿದ ಗೋಮೂತ್ರವನ್ನು 21 ಇಲ್ಲವೇ 42 ದಿನಗಳವರೆಗೆ ಸೇವಿಸಿದರೆ ಪಾಂಡು ರೋಗವು ಗುಣವಾಗುವುದು......


🕉️ಬಿಸಿಮಾಡಿದ ಗೋಮೂತ್ರದಿಂದ ಕಿವಿಯನ್ನು ತೊಳೆದರೆ ಕಿವಿ ಸೋರುವಿಕೆ ನಿಲ್ಲುತ್ತದೆ....


🕉️ಪ್ರತಿದಿವಸ ಎರಡು ತೊಲ  ಗೋಮೂತ್ರ ನೀರಿನಲ್ಲಿ ಬೆರೆಸಿ ಪಾನ ಮಾಡುವುದರಿಂದ ಮೂತ್ರ ಕೃಚ ವು ಕಡಿಮೆಯಾಗುವುದು....


 🕉️ಗೋಮೂತ್ರದಲ್ಲಿ ಸ್ವಲ್ಪ ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಕಣ್ಣು ಉರಿ ದಾಹ ಆಲಸ್ಯ ಕಬ್ಜ ಮತ್ತು ಊಟದಲ್ಲಿ ರುಚಿ ಮುಂತಾದವುಗಳು ಗುಣವಾಗುತ್ತವೆ.....


 🕉️ತಾಜಾ ಗೋಮೂತ್ರವನ್ನು ಬಟ್ಟೆಯಲ್ಲಿ ಸೋಸಿಕೊಂಡು ಅದರಲ್ಲಿ ಒಂದು ಮಾಸಿ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ಸ್ವಲ್ಪೇ ಸಮಯದಲ್ಲಿ  ಹೊಟ್ಟೆ ಉಬ್ಬರ ಕಡಿಮೆಯಾಗುವುದು.....


🕉️ಮಕ್ಕಳ ಹೊಟ್ಟೆಯೂ ಉಬ್ಬಿದರೆ ಒಂದು ವರ್ಷದ ಮಕ್ಕಳಿಗೆ ಒಂದು ಚಮಚೆ ಗೋಮೂತ್ರದಲ್ಲಿ ಸ್ವಲ್ಪ ಉಪ್ಪು ಕೂಡಿಸಿ ಕುಡಿಸಬೇಕು.....


🕉️2ತೊಲೆ ಗೋಮೂತ್ರದಲ್ಲಿ ಕಡಲೆಕಾಳಿನ ಷ್ಟು ಡಿಕ್ಕಿ ಮಲ್ಲಿಯನ್ನು ಕೂಡಿಸಿ ಮಕ್ಕಳಿಗೆ ಪ್ರಾಂತಕಾಲ ಏಳು ದಿನ ಕುಡಿಸಿದರೆ ಹೊಟ್ಟೆಯ ಕ್ರಿಮಿ ಗಳೆಲ್ಲ  ನಾಶವಾಗುತ್ತವೆ ಹೊಟ್ಟೆಯ ಯಾವುದೇ ರೋಗಕ್ಕೆ ಗೋಮೂತ್ರ ರಾಮಬಾಣವಿದ್ದಂತೆ......


🕉️ ಶರೀರದ ತುಂಬೆಲ್ಲಾ ತಿಂಡಿ ಬಿಡುತ್ತಿದ್ದರೆ ಕಹಿ ಜೀರಿಗೆ ಯನ್ನು ಗೋ ಮೂತ್ರದಲ್ಲಿ ಅರೆದು ಅದರ ಗಂಧವನ್ನು ಮೈತುಂಬ ಹಚ್ಚಿಕೊಂಡು ನಂತರ ಬೇವಿನ ತಪ್ಪಲ್ಲ ಹಾಕಿ ಕುದಿಸಿದ ನೀರಿನಿಂದ ತೊಳೆಯುತ್ತಾ ಹೋದರೆ ಶರೀರದ ಚರ್ಮರೋಗ ಸಂಪೂರ್ಣ ವಾಸಿಯಾಗುವುದು......


🕉️ ಹೀಗೆ ಗೋಮೂತ್ರದ ಉಪಚಾರವೂ ಹೇರಳವಾಗಿದೆ ಅಂತೆಯೇ ಸರ್ವೇಶ್ವಪಿಚ ಮುತ್ರೆಶು ಗೋಮೂತ್ರ ಗುಣ ತೋ ಅಧಿಕಂ.. ಅಂದರೆ ಎಲ್ಲಾ ಮೂತ್ರ ಗಳಲ್ಲಿ ಗೋಮೂತ್ರವು ಅಧಿಕ ಗುಣಕಾರಿ ಎಂಬುದಾಗಿ ಹೇಳಲಾಗಿದೆ.

****

💥ನಮ್ಮಲ್ಲಿ ಹೆಚ್ಚಿನವರಿಗೆ ಹಸು ಮತ್ತು ಎಮ್ಮೆಯ ಹಾಲಿನ ವ್ಯತ್ಯಾಸ ಅರ್ಥವಾಗುವುದಿಲ್ಲ...ಹೆಚ್ಚಿನವರಿಗೆ ಗೊತ್ತಿಲ್ಲ. 💥

🐃 ಎಮ್ಮೆ ಕೆಸರನ್ನು ಪ್ರೀತಿಸುತ್ತದೆ. 

🐂 ಹಸು ತನ್ನ ಸಗಣಿ ಮೇಲೆ ಕೂಡ ಕೂರುವುದಿಲ್ಲ. ಹಸು ಶುದ್ಧತೆಯನ್ನು ಪ್ರೀತಿಸುತ್ತದೆ. 

🐃 ಎಮ್ಮೆಯನ್ನು 2ಕಿಮೀ ದೂರ ತೆಗೆದುಕೊಂಡು ಹೋಗಿ ಬಿಟ್ಟರೆ, ಮನೆಗೆ ಹಿಂತಿರುಗುವುದಿಲ್ಲ. ಪವರ್ ಮೆಮೊರಿ ಶೂನ್ಯವಾಗಿದೆ. 

🐂 ನಾವು ಹಸುವನ್ನು 5ಕಿ.ಮೀ. ದೂರ ಬಿಟ್ಟರೂ, ಅದು ಮನೆಗೆ ಹಿಂದಿರುಗುತ್ತದೆ..    ಹಸುವಿನ ಹಾಲಿಗೆ ನೆನಪಿನ ಶಕ್ತಿ ಇದೆ.

🐃 ಹತ್ತು ಎಮ್ಮೆಗಳನ್ನು ಕಟ್ಟಿಹಾಕಿ ಅವುಗಳ ಮಕ್ಕಳನ್ನು ಬಿಟ್ಟರೆ ಒಂದು ಮರಿಯೂ ತನ್ನ ತಾಯಿಯನ್ನು ಗುರುತಿಸುವುದಿಲ್ಲ.

🐂 ಆದರೆ ಹಸುವಿನ ಕರು, ಕೆಲವು ನೂರು ಹಸುಗಳ ಮಧ್ಯೆ ತಾಯಿಯನ್ನು ಗುರುತಿಸಬಲ್ಲದು.

🐃 ಹಾಲು ತೆಗೆಯುವಾಗ ಎಮ್ಮೆ ತನ್ನೆಲ್ಲ ಹಾಲನ್ನು ಕೊಡುತ್ತದೆ.

🐂 ಹಸು ತನ್ನ ಮರಿಗೆ ಸ್ವಲ್ಪ ಹಾಲನ್ನು ಬಚ್ಚಿಡುತ್ತದೆ. ಇದು ಮರಿ ಕುಡಿಯುವಾಗ ಮಾತ್ರ ಸಂಗ್ರಹವಾಗಿರುವ ಹಾಲನ್ನು ಬಿಡುಗಡೆ ಮಾಡುತ್ತದೆ. ಹಸುವಿನ ಹಾಲಿನಲ್ಲಿ ಮಾತೃತ್ವದ‌  ಮೃದುತ್ವವಿದೆ

🐃 ಎಮ್ಮೆ ಬಿಸಿಲು ಅಥವಾ ಶಾಖವನ್ನು ತಡೆದುಕೊಳ್ಳುವುದಿಲ್ಲ.

🐂 ಹಸು ಏಪ್ರಿಲ್-ಮೇ ಸೂರ್ಯನನ್ನೂ ಸಹ ತಡೆದುಕೊಳ್ಳಬಲ್ಲದು.

🐃 ಎಮ್ಮೆ ದೊಡ್ಡದಾಗಿದೆ ಮತ್ತು ಸೋಮಾರಿಯಾಗಿದೆ ಮತ್ತು ಬೇಗನೆ ಕಿರುಚುವುದಿಲ್ಲ. ಇದರ ಹಾಲು ದಪ್ಪವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಾವು ಅದರ ಹಾಲನ್ನು ಸೇವಿಸಿದಾಗ ಅದೇ ಸೋಮಾರಿತನ ಮತ್ತು ಅಜೀರ್ಣ ಉಂಟಾಗುತ್ತದೆ. ಹಾಲುಕರೆಯುವ ಸಮಯದಲ್ಲಿ ಮಾಲೀಕರು ಕರುವನ್ನು ಸಾಕುತ್ತಾರೆ.

🐂 ತಾಯಿಯಿಂದ ಬೇರ್ಪಟ್ಟ ಕರುವನ್ನು ನಿಭಾಯಿಸುವುದು ತುಂಬಾ ಕಷ್ಟ. ಹಾಲುಣಿಸುವ ಸಮಯದಲ್ಲಿ ಕರುವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದು ತಾಯಿಯಿಂದ ತನ್ನ ಪಾಲಿನ ಹಾಲನ್ನು ಕುಡಿದು ಮುಗಿದ ನಂತರವೂ. ಆ ಕಾಳಜಿ ಮತ್ತು ಮೃದುತ್ವವು ಅದರ ಹಾಲಿನಲ್ಲಿ ಹಂಚಲ್ಪಟ್ಟಿದೆ.

💧ಹಸುವಿನ ಬೆನ್ನ ಮೇಲಿರುವ "ಸೂರ್ಯ ಕೇತು ನರ" ಬಿಸಿಲಿರುವಾಗ ಜಾಗೃತವಾಗುತ್ತದೆ. ಈ ನರವು ಸೂರ್ಯ, ನಕ್ಷತ್ರಗಳು, ಚಂದ್ರ ಮತ್ತು ಬ್ರಹ್ಮಾಂಡದಿಂದ "ಕಾಸ್ಮಿಕ್ ಶಕ್ತಿಯನ್ನು" ಹೀರಿಕೊಳ್ಳುತ್ತದೆ. ಆದ್ದರಿಂದಲೇ ಹಸುವಿನ ಹಾಲಿಗೆ ರೋಗಗಳನ್ನು ಹೋಗಲಾಡಿಸುವ ಶಕ್ತಿಯಿದೆ. ವಿಶ್ವದಲ್ಲಿ ಯಾವುದೇ ಜೀವಿಯು ಅಂತಹ ಶಕ್ತಿಯನ್ನು ಹೊಂದಿಲ್ಲ.💧 

🦚ವಾಸ್ತವವಾಗಿ, ಹಸುವಿನ ಹಾಲು ಸೇವಿಸಿದಾಗ ನಿಮ್ಮ ದೇಹವನ್ನು ಬಿಸಿ ಮಾಡುವುದಿಲ್ಲ. ಎಮ್ಮೆಯ ಹಾಲು ದಟ್ಟವಾಗಿರುತ್ತದೆ, ಸೇವಿಸಿದಾಗ ದೇಹವು ಬಿಸಿಯಾಗುತ್ತದೆ ಮತ್ತು ನಮ್ಮ ದೇಹದಲ್ಲಿನ ಸಕ್ಕರೆಯೂ ಹೆಚ್ಚಾಗುತ್ತದೆ (ಜೆರ್ಸಿ ಹಾಲಿನಲ್ಲಿ ಹೆಚ್ಚು) ಸಕ್ಕರೆಯ ಮಟ್ಟವು ಹೆಚ್ಚಾಗುವುದರಿಂದ ಇದು ಸಕ್ಕರೆ ರೋಗಿಗಳಿಗೆ ಒಳ್ಳೆಯದಲ್ಲ. ಆದರೆ ಹಸುವಿನ ಹಾಲು ಸೇವಿಸಿದಾಗ ಅದಕ್ಕೆ ವಿರುದ್ಧವಾಗಿರುತ್ತದೆ.

🦚ನಾವು ಎಲ್ಲದರಲ್ಲೂ ಕೊಬ್ಬಿನಂಶವನ್ನು ನೋಡುತ್ತೇವೆ. ನಾವು ಜಾಹೀರಾತಿನ ಸಲಹೆಯನ್ನು ಅನುಸರಿಸುತ್ತೇವೆ, ಸಂಸ್ಕರಿಸಿದ ಎಣ್ಣೆಯು ಕೊಲೆಸ್ಟ್ರಾಲ್ ಅನ್ನು ಉಂಟುಮಾಡುವುದಿಲ್ಲ, ನಾವು ಆ ಎಣ್ಣೆಯನ್ನು ಬಳಸುತ್ತೇವೆ. ಆದರೆ ವಾಸ್ತವವೆಂದರೆ ನಾವು ಪಾವತಿಸಿ ಮನೆಗೆ ಬರುತ್ತೇವೆ, ಎಮ್ಮೆಯ ಹಾಲಿನಲ್ಲಿ ಹೆಚ್ಚಿನ ಕೊಬ್ಬಿನಂಶವಿದೆ, ಇದು ಕೊಲೆಸ್ಟ್ರಾಲ್‌ಗೂ (ಕೊಬ್ಬಿನ ಅಂಶ) ಕಾರಣವಾಗಿದೆ.

🐃 ಎಮ್ಮೆ ಹಾಲನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿದಾಗ ಅದರಲ್ಲಿನ ಮೂರು ಮತ್ತು ನಾಲ್ಕನೆಯ ಪೋಷಕಾಂಶಗಳು ಆವಿಯಾಗುತ್ತದೆ.

🐂 ಹಸುವಿನ ಹಾಲನ್ನು ಎಷ್ಟು ಬಾರಿ ಕುದಿಸಿದರೂ ಅದರಲ್ಲಿರುವ ಪೌಷ್ಟಿಕ ಗುಣಗಳು ನಾಶವಾಗುವುದಿಲ್ಲ. 

***

No comments:

Post a Comment