SEARCH HERE

Tuesday 1 January 2019

ತುಳಸಿ tulasi




The Benefits of Rendering Service To Srimati Tulasi-devi
nirmita tvam pura devair arcita tvam surasuraih 
tulasi hara me papam pujam grhna namostute
(Hari Bhakti Vilasa 9/101 from Skanda Purana) 
Oh Tulasi, you previously appeared in this world due to the demigods. The demigods and demons together worship you. Please remove all of my sins. I pay my obeisances unto you.

NOTE: Anyone who has received initiation in the Vaishnava mantras is obliged to engage in regular worship of the Deity, including offering all he eats to the Lord. When devotees make such food offerings, they should remember to place Tulasi leaves or flowers on them because Lord Vishnu does not accept any food without Tulasi. Tulasi is most beloved of Lord Krishna and thus Her leaves and flowers are also most dear to Him. The term varknarcavatara meaning the Lord's incarnation meant for accepting worship (arcavatara) in the form of a tree (varkna) is applied to Tulasi-devi. Her leaves and flowers are therefore prescribed as an essential part of the worship of the Lord's other arcavatara, i.e., the deity form of the Lord in the temple. These regulations are found in all the scriptural texts that describe the procedures by which one is to worship such deity forms of the Lord." 



Srila Bhaktisiddhanta Sarasvati Thakura, Gaudiya Bhasya.
ya drsta nikhila agha sangha samani sprsta vapuh pavani
roganam abhivandita nirasini siktantaka trasini 
pratya satti vidhayini bhagavatah krsnasya samropita 
nyasta taccarane vimukti phalada tasyai namah
(Hari Bhakti Vilasa 9/104 from Skanda Purana, Avanti khanda) 
Just by looking at you (Tulasi), all sins become removed. Just by touching you, one's body becomes pure. By praying to Her, all diseases practically become removed. If one waters Her or makes Her wet, the fear of Yamaraja (death personified) is destroyed. Just by planting or transplanting, one achieves nearness to the Supreme Personality of Godhead. If someone offers Tulasi at the lotus feet of Lord Sri Krsna, She awards liberation and devotion to Him, therefore I pay my humble obeisances to such a wonderful Tulasi-devi.
pradaksinam bhramitva ye namaskurvanti nityasah 
na tesam duritam kincid aksinam avasisyate
(Hari Bhakti Vilasa 9/111 from Agastya samhita) 
 If someone daily goes around Tulasi and pays obeisances to Her, there is no more sin to be destroyed in him.
hitva tirtha-sahasrani sarvan api siloccayan 
tulasi kanane nityam kalau tisthati kesavah
(Hari Bhakti Vilasa 9/116 from Skanda Purana) 
 In Kali-yuga, Lord Sri Kesava, after giving up thousands of places of pilgrimage and holy days, He resides in the forest of Tulasi-devi.

drstva sprstva tatha dhyata kirtita namita srta 
ropita sevita nityam pujita tulasi subha 
navadha tulasim nityam ye bhajanti dine dine 
yuga koti sahasrani te vasanti harer grhe
(Hari Bhakti Vilasa 9/126,127 from Skanda Purana, conversation between Lord Brahma and Narada Muni)

Any  person  who daily  sees Tulasi, touches Tulasi, chants Tulasi's prayers, meditates on Tulasi, pays obeisances to Her, hears about Her, transplants, waters and worships Her, he achieves all auspiciousness. Any person who does these nine kinds of service goes to the abode of the Supreme Lord Hari and remains there eternally.
snane dane tatha dhyane prasane kesava arcane 
tulasi dahate papam ropane kirtane kalau
(Hari Bhakti Vilasa 9/132 from Skanda Purana, Avanti khanda)
 In Kali-yuga Tulasi-devi burns up all of a person's sins who bathes Her, gives Her in charity, meditates on Her, eats Her leaves, worships Lord Sri Kesava with Her, transplants Her or sings Her glories.
tulasi  alankrta ye ye tulasi nama japakah 
tulasi vana palaye te tyajya durato bhatah
(Hari Bhakti Vilasa 9/133 from Skanda Purana, Kasi khanda, Yamaraja instructs his messengers)
 Oh messengers, anybody who is decorated with Tulasi wood or chants Her name, always protects a Tulasi forest, you should give up bringing such persons to my abode.

darsanam narmadayas tu ganga snanam visam vara 
tulasi dala samsparsah samam etat trayam smrtam 
ropanat palanat sekad darsanat sparsanat nrnam 
tulasi dahate papam vaca manah kaya sancitam
(Hari Bhakti Vilasa 9/139,140 from Padma Purana)
 Oh best of the Vaisyas, seeing Narmada, taking bath in the Ganges, and touching Tulasi leaves are equally meritorious. If somebody plants, protects, waters, sees or touches Tulasi, then that person's sins acquired by body, mind and words are burnt into ashes.
yad grhe tulasi bhati raksabhir jalasecanaih 
tad grham yama dutas ca durato varjayanti hi
(Hari Bhakti Vilasa 9/145 from Padma Purana, Kartika mahatmya)
 In any house where Tulasi Maharani is very carefully protected and watered, the messengers of Yamaraja give up that house from a distance.
visnos trailokya nathasya ramasya janakatmaja 
priya tathaiva tulasi sarva lokaika pavani
(Hari Bhakti Vilasa 9/151 from Agastya samhita)
  As the daughter of Janaka, Sri Sitadevi, is very dear to Lord Rama, the master of the three worlds, similarly, Tulasi-devi, who purifies all of the planets, is very dear to Him.
tulasi vapita yena punyarame vane grhe 
paksindra tena satyoktam lokah sapta pratisthitah
(Hari Bhakti Vilasa 9/157 from Garuda Purana)
 Oh king of the birds (Garuda), anyone who has planted a garden of Tulasi, either in the forest or in the house, I truthfully say that he has won the seven planetary systems.
sansara-papa vicchedi ganga nama prakirtitam 
tatha tulasya bhaktis ca hari kirti pravaktari
(Hari Bhakti Vilasa 9/161 from Brhan Naradiya Purana)
 As by chanting the name of Ganges, one becomes free from all kinds of worldly sins, if someone chants the name of Tulasi or chants the glories of Lord Hari with devotion, he gets the same merit.
trnani tulasi mulat yavantyapahinoti vai 
tavattir brahma hatya hi chinaty eva nasamsayah
(Hari Bhakti Vilasa 9/165 from Brhan Naradiya Purana, conversation between Yamaraja and Bhagiratha)
 Anybody who removes the straw or dirt from the root of a Tulasi-devi, as many as he has removed, that many sinful reactions of killing brahmanas will be removed from him without a doubt.
durlabha tulasi seva durlabha sungatih satam 
durlabha hari bhaktis ca sansararnava-patina
(Hari Bhakti Vilasa 9/170 from Brhan Naradiya Purana)
 Those people who have fallen in the midst of this material world, among them worship of Tulasi is very rare, the association of real saintly persons is very rare, and real devotion to Lord Hari is also very rare.
yasmin grhe dvija srestha tulasimula mrttika 
sarvada tisthate dehe devata na sa manusa 
tulasi mrttika yatra kastham patran ca vesmani 
tisthate muni sardula niscalam vaisnava padam
(Hari Bhakti Vilasa 9/183,186 from Skanda Purana, conversation between Lord Brahma and Narada Muni)
 Oh best among the brahmanas, in anybody's house or on his body, if the mud from Tulasi is available, they are not just men, but they are equal to the demigods. Oh best among the sages, in anyone's house, if there is the clay of Tulasi, Tulasi wood, and Tulasi leaves available, that house is certainly a place of Lord Vishnu.
tulasi mula sambhuta hari bhakta padodbhava 
gangodbhava ca mrllekha nayaty acyuta rupatam
(Hari Bhakti Vilasa 9/189)
 Any person who puts on tilaka from the mud or clay from the root of Tulasi, mud from the lotus feet of Sri Vaisnava, and mud from the Ganges is said to be equal to the form of Lord Sri Vishnu.
patram puspam phalam kastham tvat sakha-pallavankuram 
tulasi sambhavam mulam pavanam mrttikady api
(Hari Bhakti Vilasa 9/191 from Prahlada samhita and Visnu dharmottara)
 Leaves of Tulasi, flowers of Tulasi, fruits of Tulasi, branches of Tulasi, bark of Tulasi, sprout of Tulasi, blossom or bud of Tulasi, and clay of Tulasi are all completely purified.
          yah kuryat tulasi kasthair aksa malam surupinim 
        kantha malam ca yatnena krtam tasyaksayam bhavet 
(Hari Bhakti Vilasa 9/199 from Skanda Purana, Agastya samhita, conversation between Lord Brahma and Narada Muni)
 Any person who makes a beautiful japamala or neck beads out of Tulasi wood and uses them, if he does not perform any worship to Lord Sri Visnu, all of his activities become unlimitedly resultful.
yasya nabhi sthitam patram mukhe sirasi karnayoh 
tulasi sambhavam nityam tirthais tasya makhais ca kim
(Hari Bhakti Vilasa 9/200 from Skanda Purana, conversation between Lord Brahma and Narada Muni)
 If anyone daily has Tulasi leaves on his navel, in his mouth, on his head, or on both of his ears, what is the use of him going to the places of pilgrimage in this world?
yah kascit vaisnavo loke mithyacaro'py anasrami 
punati sakalan lokan sirasa tulasim vahan
(Hari Bhakti Vilasa 9/202 from Skanda Purana)
 If any Vaisnava in this world becomes a liar or becomes degraded from his own ashrama, if he has a Tulasi leaf on his head, he can alone purify the three worlds.
 Srila Sanatana Gosvami gives his Digdarsani-tika commentary on this verse, stating that if Vaisnavas wear articles which have been offered to the Supreme Lord, then one may question how a Vaisnava can wear something which has not been offered to the Supreme Lord. In answer to this, it can be stated that only a lying or cheating "Vaisnava" can do such a thing because they are all hypocrites and not real Vaisnavas.
bhaksitam lubdhakenapi patram tulasi sambhavam 
pascad distantam apanno bhasmi bhutam kalevaram 
sita sitam yatha niram sarva papa ksayavaham 
tatha ca tulasi patram prasitam sarva kamadam
(Hari Bhakti Vilasa 9/213,214 from Skanda Purana, conversation between Vasistha and King Mandhata)
 Even if a most sinful hunter eats a Tulasi leaf and dies afterwards, whatever sins he has in his body turn into ashes. As whitish and blackish water (Ganges and Yamuna water) remove all kinds of sins, in the very same way white (green) and black Tulasis removes all kinds of sins, and if he eats these leaves (after offering them to Lord Krsna), all of his desires are perfectly achieved.
krtva papa sahasrani purve vayasi manavah 
tulasi bhaksanan mucyet srutam etat pura hareh
(Hari Bhakti Vilasa 9/218 from Skanda Purana, conversation between Vasishtha and King Mandhata)
 If any person in his young age commits thousands of sins but later on eats a Tulasi leaf, he becomes free from all sins. This narration was heard previously near Lord Sri Hari.
kim citram asyah patitam tulasya 
dalam jalam va patitam punite 
lagnadi bhala sthalam alavala 
mrtsnapi krtsna agha vinasanaya 
srimat tulasyah patrasya mahatmyam yadyapi drsam 
tathapi vaisnavas tan na grahyam krsnarpanam vina
(Hari Bhakti Vilasa 9/226,227)
What can I say about the wonderful glories of Tulasi? Her fallen leaves, Her rotten leaves and Her water, even if fallen (mixed with Her mud?) is purifying. If even a minute quantity of the mud which has emanated from the Tulasi root has been placed on one's head, all of one's sins are removed. Although Tulasi is so glorious (and Her leaves are so purifying), still Vaisnavas never eat Tulasi leaves without first offering them to the Supreme Personality of Godhead, Krishna.
**********

Story Of Srimati Tulasi-Devi
Tulasi - Devi Story_pdf


Asta-Nama-Stava from the Padma Purana The Eight Names of Vrinda-devi
Vrindavani, vrinda, visvapujita, pushpasara, nandini, Krishna-jivani, visva-pavani, tulasi

VRINDAVANI - One who first manifested in Vrindavan.
VRINDA - The goddess of all plant and trees ( even if one Tulasi plant is present in a forest it can be called Vrindavana.)
VISHVAPUJITA - One whom the whole universe worships.
PUSHPASARA - The topmost of all flowers, without whom Krishna does not like to look upon other flowers.
NANDINI - Seeing whom gives unlimited bliss to the devotees.
KRISHNA-JIVANI - The life of Sri Krishna.
VISHVA-PAVANI - One who purifies the three worlds.
TULASI - One who has no comparison. 
Anyone while worshiping Tulasi-devi chants these eight names will get the same results as one who performs the Ashvamedha sacrifice. And one who on the full-moon day of Kartika (Tulasi-devi's appearance day) worships Her with this Mantra will break free from the bonds of this miserable world of birth and death, and very quickly attains Goloka Vrndavan. On the full moon-day of Kartik Lord Sri Krishna Himself worships Srimati Tulasi-devi with this Mantra.


One who remembers this Mantra will very quickly attain devotion to Lord Krishna's Transcendental Lotus Feet.
********



  read more uttan dwadashi ಉತ್ಥಾನ ದ್ವಾದಶಿ 
Snaana Kaale Tulasyaange
Drashyate Tulasi Shubhaa
Sarva Teertheshu snaatam
Bhavati tena na Samshayaha.


One who does daily  Saashtaanga/Panchanga Namaskaar to Tulasi Maata He/She will not be victim to Ghatak  Roga(Deadly Diseases)

One who daily Waters Tulasi Plant..
He will never go to Naraka.
New fad--Logone Prachaar kiya -Tulasi Patta Khavo
Log bakari ke tarah Khane lage to Paap Lagega.
***


ತುಳಸಿ 🌹
     ವಿಷ್ಣು ಭಕ್ತರಾದವರು ತುಲಶಿ ಮಿಶ್ರೀತವಾದ ನೀರನ್ನು ಏಕಾದಶಿಯಂದೂ ಸ್ವೀಕರಿಸಬಾರದು.  ಹಾಗೆ ಮಾಡಿದರಲ್ಲಿ ವ್ರತವು ಭಂಗ ವಾಗುವದು.  ಪುಣ್ಯಕರವಾದ ಏಕಾದಶೀಯಂದು ಯಾರು ತುಲಶಿ ಯನ್ನು  ಭಕ್ಷಿಸುವರೊ ಅಂಥ ನರಾಧಮರು ನನ್ನ ದ್ರೋಹಿಗಳೆನಿಸಿ ಘೋರ ನರಕ್ಕಕ್ಕೇ ತರಳುವರು

       ತುಲಶಿ ಯನ್ನು ಬಿಡಿಸಿ ಎಲ್ಲೆಲ್ಲಿ ಸಾಗುವನೋ ಎಲ್ಲೆಲ್ಲಿ ತೆರಳುವನೋ ಅವನೋಡನೇ ಶ್ರೀಹರಿಯು ತಾನೂ ತೆರಳುವನು. ಕರುವಿನ ಮೇಲಿನ ಪ್ರೀತಿಯಿಂದಾ ಗೋವು ಹೇಗೋ ಹಾಗೇ

         ದ್ವಾದಶಿಯಂದು ತುಲಶಿ ದಳವನ್ನು ಬಿಡಿಸಕೂಡದು. ಕಾರ್ತಿಕ ಮಾಸದಲ್ಲಿ  ಧಾತ್ರಿ ಪತ್ರವನ್ನು ಬಿಡಿಸಕೂಡದು. ಒಂದು ವೇಳೆ ಹಾಗೇ  ಬಿಡಿಸದಲ್ಲಿ  ಅಂತಹ ಮಾನವನು ನರಕಕ್ಕೆ ಹೋಗುವನು.  -ಸ್ಕಂದ   ಪುರಾಣ.
        ಕಾರ್ತಿಕ ಮಾಸದಲ್ಲಿ  ಧಾತ್ರಿ ಪತ್ರವನ್ನು, ದ್ವಾದಶಿ ಯಂದು ತುಲಶಿಯನ್ನು ಯಾವ ಮಾನವನು ಬಿಡಿಸುವನೋ ಅವನು ಯಾತನೆ ಉಳ್ಳ ನರಕಕ್ಕೆ ಹೋಗುವನು. - ಪದ್ಮ ಪುರಾಣ
              ಸಲ್ಲದ ಕಾರಣವನ್ನು ಮುಂದಿಟ್ಟು ಪಾಪಬುದ್ಧಿಯಿಂದ ಯಾವ ಜನರು ತುಲಶಿ ಮಾಲೆಯನ್ನು ಧರಿಸುವದಿಲ್ಲವೋ ಅವರು ನನ್ನ ಕೋಪದ ಅಗ್ನಿ ಗೇ ಧಗ್ಧರಾಗಿ ನರಕದಲ್ಲಿ ನೆಲೆಸುವರು.  - ಗರುಡ ಪುರಾಣ.
          ಸ್ನಾನ, ಮಲ - ಮೂತ್ರ  ವಿಸರ್ಜನೆ,   ಮೈಥುನ ಹಾಗೂ ಕೆಲವು ಅನಿವಾರ್ಯ ಕಾರ್ಯಗಳಲ್ಲಿ  ಘಟಿಸುವ  ಕೆಲವು ಪಾಪ ಕಾರ್ಯ ಗಳು,  ಇಂಥಃ ಸಮಯದಲ್ಲೂ ತುಳಶಿ ಮಾಲೇಯನ್ನು ತೊರೆಯ ಕೂಡದು. ಹಾಗೆ ತೊರೆಯುವಲ್ಲಿ ಬ್ರಹ್ಮಹತ್ಯೆಯು  ಲಭಿಸುವದು. - ಶಾಜ್ಞ ಸಂಹಿತ. 
          ತುಳಶಿ ಮಾಲೆಯನ್ನು ಯಜ್ನೋ  ಪವೀತದಂತೇ ಸದಾ ಧರಿಸಬೇಕು,  ಒಂದು ಕ್ಷಣ ತೊರೆದರು  ವಿಷ್ಣು ದ್ರೋಹಿ ಎನಿಸುವನು.
***

ತುಲಸಿಯ ಮಹತ್ತ್ವ 🌹🌷

ತುಲಸೀ ಶಬ್ದದ ಅರ್ಥ

ಯಸ್ಯಾ ದೇವ್ಯಾಸ್ತುಲಾ ನಾಸ್ತಿ ವಿಶ್ವೇಶು ನಿಖಿಲೇಷು ಚ |
ತುಲಸೀ ಯೇನ ವಿಖ್ಯಾತ ತಾಂ ಯಾಮಿ ಶರಣಂ ಪ್ರಿಯೇ ||

ವಿಶ್ವದ ಸಕಲ ವೃಕ್ಷಗಳಲ್ಲೂ ಇದಕ್ಕೆ ಸಮನಾದ ಮತ್ತೊಂದು ವೃಕ್ಷವಿಲ್ಲ ಅದಕ್ಕೇಂದೇ ಇದಕ್ಕೆ ತುಲಸಿ ಎಂದು ಹೆಸರು .
-ಬ್ರಹ್ಮವೈವರ್ತಪುರಾಣ(1-22-24)

    **********

ತುಳಸಿದಳದ ಮಹಿಮೆ

ತುಲಸಿದಲಮಾಹತ್ಮ್ಯಂ ಶ್ರುಣುಷ್ವಾದ್ಯ ಸಮಾಹಿತಃ |
ತೇನಾಧೀತಂ ಶ್ರುತಂ ತೇನ ತೇನ ಸರ್ವಮನುಷ್ಠಿತಮ್||

ತುಲಸೀದಳದ ಮಾಹತ್ಮ್ಯಾ ಆಪಾರವಾದುದು .ಅದನ್ನು ತಿಳಿಯುವುದು ಸಹ ಸಕಲ ಶಾಸ್ತ್ರಗಳ ಅಧ್ಯಯನ , ಶ್ರವಣಗಳ ಹಾಗೂ ಸಕಲಸತ್ಕಾರ್ಯಗಳ ಅನುಷ್ಠಾನ ಫಲಕ್ಕೆ ಸಮವೆನ್ನಿಸುವುದು .
-ವಿಷ್ಣುಧರ್ಮೋತ್ತರ ಪುರಾಣ

**********

ತುಲಸಿಯ ಸೇವೆಯ ಪಲ

ದೃಷ್ಟಾ ಸ್ಪೃಷ್ಟಾsಥವಾ ಧ್ಯಾತಾ ಕೀರ್ತೀತಾ ಶ್ರುತಾ |
ರೋಪಿತಾ ಸೇಚಿತ ನಿತ್ಯಂ ತುಲಸೀ ಪುಜಿತಾ ಶುಭಾ ||

ನವಧಾ ತುಲಸೀಭಕ್ತಿಂ ಯೇ ಕುರ್ವಂತಿ ದಿನೇ ದಿನೆ |
ಯುಗಕೋಟಿ ಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||

ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ, ಕೀರ್ತನ ,ಶ್ರವಣ ,ರೋಪಣ ಸೇಚನ, ಪೂಜನ ,ಹಾಗೋ ವಂದನ ಈರೀತಿಯಾಗಿ ಒಂಬತ್ತುಭಗೆಯಲ್ಲಿ ಭಕ್ತಿಯಿಂದ ತುಲಸಿಯನ್ನು ಯಾರು ಪ್ರತಿದಿನವೂ ಸೇವಿಸುವರೋ ಅವರು ಶ್ರೀಹರಿಯ ಮಂದಿರದಲ್ಲಿ ಕೋಟಿಯುಗಗಳಷ್ಟು ಕಾಲ ನೆಲೆಸುವರು .
-ಪದ್ಮಪುರಾಣ

ರೋಪಣ- ತುಲಸಿಯನ್ನು ದೇವರಿಗಾಗಿ ಬೇಳೆಸುವುದು
ಸೇಚನ- ತುಲಸಿಗೆ ಯಥಾಯೋಗ್ಯವಾಗಿ ನೀರನ್ನು ಹಾಕುವುದು .

***********

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಮಹತ್ವ

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

************

ತುಲಸಿಯ ಸೇವೆಯ ಫಲ

ತುಲಸ್ಯಾ ಸಹಿತಂ ದತ್ತಂ ತತ್ ಶ್ರೀಕೃಷ್ಣಸ್ಯ ತುಷ್ಟಯೇ|
ತುಲಸ್ಯಾ ಸಹಿತಂ ದಾನಂ ತದ್ದಾನಂ ಚ ಸುಖಾಪ್ತಯೇ||

ಯಾವುದೇ ದಾನವನ್ನು ತುಲಸಿಯ ಸಮೇತವಾಗಿಯೇ ಶ್ರೀಕೃಷ್ಣಪರಮಾತ್ಮನ ಪ್ರೀತಿಗೆಂದು ಸಮರ್ಪಿಸಬೇಕು .ಅಂತಹ ದಾನವು ಸುಖಪ್ರಾಪ್ತಿಗೆ ಸಾಧನವಾಗುವುದು .
-ಶಾಂಡಿಲ್ಯ ಸಂಹಿತೆ

***********


ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿಂದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

************


ಕಾರ್ತಿಕಮಾಸದಲ್ಲಿ ತುಲಸೀ ಆರ್ಚನೆಯ ಫಲ

ಸಂಪ್ರಾಪ್ತಂ ಕಾರ್ತೀಕಂ ದೃಷ್ಟ್ವಾ ನಿಯಮೇನ ಜನಾರ್ದನಃ |
ಪೂಜನಿಯೋ ಮಹದ್ಭಿಶ್ಚ ಕೋಮಲೈ ತುಲಸೀ ದಲೈಃ ||

ಕಾರ್ತೀಕ ಮಾಸದಲ್ಲಿ ಜನಾರ್ಧನನನ್ನು ತುಲಸೀ ದಳಗಳಿಂದ ಪೂಜಿಸಬೇಕು. ಇದನ್ನು ಈ ಮಾಸದಲ್ಲಿ ನಿಯಮವಾಗಿ ಮಾಡಬೇಕು ಮಹಾತ್ಮರಾದವರೂ ಈ ಪೂಜೆಯನ್ನು ತಪ್ಪಿಸಬಾರದು.
-ಪದ್ಮಪುರಾಣ

***********

ಕಾರ್ತಿಕ ಮಾಸದಲ್ಲಿ ತುಲಸೀ ಅರ್ಚನೆಯ ಫಲ

ತುಲಸೀದಳಪುಷ್ಪಾಣಿ ಯೋ ದದ್ಯಾದ್ಧರಯೇ ಮುನೇ |
ಕಾರ್ತಿಕೇ ಸಕಲಂ ಪಾಪಂ ಸೋsತ್ರ ಜನ್ಮಾರ್ಜಿತಂ ದಹೇತ್ ||

ಕಾರ್ತೀಕಮಾಸದಲ್ಲಿ ವಿಶೇಷವಾಗಿ ತುಲಸೀ ಪತ್ರಗಳಿಂದ ,ತುಲಸೀದಳಗಳಿಂದ ಅಥವ ತುಲಸೀ ಪುಷ್ಪಗಳಿoದ ಪರಮಾತ್ಮನನ್ನು ಅರ್ಚಿಸಬೇಕು.ಹೀಗೆ ಮಾಡಿದ ಸಾಧಕನು ತಾನು ಈ ಜನ್ಮದಲ್ಲಿ ಸಂಪಾದಿಸಿದ ಪಾಪಗಳನ್ನೆಲ್ಲ ಕಳೆದುಕೊಳ್ಳುತ್ತಾನೆ ಅವನ ಎಲ್ಲ ಪಾಪಗಳು ಸುಟ್ಟು ಭಸ್ಮವಾಗುತ್ತದೆ.
-ಪದ್ಮಪುರಾಣ

  ************

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಮಹತ್ವ

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

  ************

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಫಲ

ಪ್ರಾತಃ ಸ್ನಾತ್ವ ಶುಚಿರ್ಭೂತ್ವಾ ಕಾರ್ತೀಕೇ ವಿಷ್ಣುತತ್ಪರಃ |
ದೇವಂ ದಾಮೋದರಂ ಪೂಜ್ಯ ಕೋಮಲೈಸ್ತುಲಸೀದಲೈಃ |
ನ ತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯಾ ವಿಚರಣಾ ||

ಕಾರ್ತೀಕಮಾಸದಲ್ಲಿ ಪ್ರಾತಃಕಾಲದಲ್ಲಿ ಸ್ನಾನಮಾಡಿ ಶುಚಿರ್ಭೂತನಾಗಿ ಕೋಮಲವಾದ ತುಳಸಿದಳಗಳಿಂದ ದೇವನಾದ ದಾಮೋದರನನ್ನು ಪೂಜಿಸಿದವನು ಮೋಕ್ಷವನ್ನು ಪಡೆದು ಕೊಳ್ಳುವನು ; ಈ ಬಗ್ಗೆ ವಿಚಾರಮಾಡಬೇಕಿಲ್ಲ .
-ಸ್ಕಂಧಪುರಾಣ

ಕಾರ್ತೀಕೇ ತುಲಸೀಪತ್ರಂ ವಿಷ್ಣವೇ ಯೋ ದದಾತಿ ಚ |
ಗವಾಮಯುತದಾನಸ್ಯ ಫಲಮಾಪ್ನೋತಿ ನಿಶ್ಚೀತಮ್ ||

ಕಾರ್ತೀಕಮಾಸದಲ್ಲಿ ವಿಷ್ಣುವಿಗೆ ತುಲಸಿಯ ಪತ್ರವನ್ನು ಸಮರ್ಪಿಸುವವನಿಗೆ ಹತ್ತು ಸಾವಿರ ಗೋವುಗಳನ್ನು. ದಾನಮಾಡಿದ ಫಲವು ನಿಶ್ಚಿತವಾಗಿ ಲಭಿಸುವುದು .
-ಬ್ರಹ್ಮವೈವರ್ತಪುರಾಣ

     || ಶ್ರೀಕೃಷ್ಣಾರ್ಪಣಮಸ್ತು ||

     ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***

ನಮ್ಮ ನಿತ್ಯಸತ್ಯದಂಗಳದಲ್ಲಿ ತುಳಸಿ ಕಟ್ಟೆ🌱🌱🌱

ನಾವು ನಿತ್ಯ ಪೂಜಿಸುವ ತುಳಸಿಯ ಬಗ್ಗೆ ನಮಗೆಷ್ಟು ಗೊತ್ತು??

ಸಾಧ್ಯವಾದಷ್ಟು ತಿಳಿದು ತಿಳಿಸಿ ತಿಳಿಯೊಣ.
ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?
ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸಿಯಸೃಷ್ಟಿ : ತುಳಸಿಪುರಾಣ. 

ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ.
ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು.
ಶಿವಲಿಂಗಕ್ಕೆ ತುಳಸಿ ಯಾಕೆ ಅರ್ಪಿಸಬಾರದು..??
ಹಿಂದೂ ಕಥೆ ಪುರಾಣಗಳ ಪ್ರಕಾರ, ವಿಷ್ಣುವು ತುಳಸಿಯ ಪತಿ. ಆದ್ದರಿಂದ ವಿಷ್ಣುವಿನ ಅವತಾರಗಳಾದ ಶ್ರೀ ಕೃಷ್ಣ , ರಾಮ , ವಿಷ್ಣುವಿಗೆ ಮಾತ್ರ ತುಳಸಿ ಎಲೆಯನ್ನು ಅರ್ಪಿಸುತ್ತಾರೆ. ಶಿವನು ಸರಳ ಹಾಗೂ ಶಕ್ತಿಗೆ ಹೆಸರಾದವರು. ಹಾಗಾಗಿ ಶಿವನ ಪೂಜೆ ಅಥವಾ ಶಿವಲಿಂಗದ ಪೂಜೆಗೆ ತುಳಸಿ ಎಲೆ ಹಾಗೂ ದಳವನ್ನು ಎಂದಿಗೂ ಬಳಸಬಾರದು. 
ಯಾವ ದಿನಗಳಲ್ಲಿ ತುಳಸಿ ಕೀಳಬಾರದು..??
ಸೂರ್ಯಗ್ರಹಣ, ಚಂದ್ರಗ್ರಹಣ , ಭಾನುವಾರ, ಹಾಗೂ ಏಕಾದಶಿ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು, ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನು ಎಂದಿಗೂ ಮಾಡಬಾರದು ಎಂದು ಹೇಳಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಅದು ಪಾಪ ಕೃತ್ಯ. ಹಾಗಾಗಿ ಶಾಪ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. 
ತುಳಸಿ ಎಲೆ ಬಾಯಲ್ಲಿ ಅಗಿಯ ಬಾರದೇಕೆ..?
ಜನರು ಎಲೆಯು ಆರೋಗ್ಯಕರ ಗುಣಗಳಿಂದ ಕೂಡಿದೆ ಅಂತಾ ಜನರು ತುಳಸಿ ಎಲೆಯನ್ನು ಅಗೆಯುತ್ತಾರೆ. ಆದ್ರೆ ತುಳಸಿ ಎಲೆಯಲ್ಲಿ ಕೆಲವು ವಿಷಕಾರಿ ಲೋಳೆಗಳು ಇರುತ್ತವೆ. ಅವುಗಳಲ್ಲಿ ಉತ್ತಮವಾದುದ್ದಲ್ಲ.  ಅವುಗಳಲ್ಲಿ ಹಲ್ಲಿನಲ್ಲಿ ಜಗೆದಾಗ ನಮ್ಮ ಬಾಯಿಯಲ್ಲಿ ಲೋಳೆಯೊಂದಿಗೆ ಸೇರಿಕೊಂಡು ದವಡೆಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತವೆ. 
ತುಳಸಿ ಗಿಡ ಎಲ್ಲಿರಬೇಕು?
ತುಳಸಿ ಗಿಡವನ್ನು ಪ್ರತಿ ಮನೆಯ ಹೊರಗೆ ಹಾಗೂ ದೇವಾಲಯದ ಹೊರ ಭಾಗದಲ್ಲಿ ನೆಡಲಾಯಿತು. ನಂತರ ತುಳಸಿ ದೇವಿಗೆ ವಿಶೇಷ ಪೂಜೆ ಹಾಗೂ ಹಬ್ಬದ ಆಚರಣೆಯನ್ನು ಸಹ ಮಾಡಲಾಯಿತು ಎನ್ನುವ ಪ್ರತೀತ ಇದೆ.
ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು : ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆಯಾಗುವುದೆಂದು ಹೇಳಲಾಗಿದೆ.

ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಉರಿಸಿಡಬೇಕು? 
ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು 

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||

ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ:
ಯನ್ಮೂಲೇ ಸರ್ವ ತೀರ್ಥಾನಿ
ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ
ತುಲಸಿ ತ್ವಾಂ ನಮಾಮ್ಯಹಮ್||

ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನಿರಿಸುವುದರಿಂದ ಅವುಗಳು ಮನೆಮಂದಿಗೂ ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವವು ತಿಳಿಯುತ್ತದೆ. ಹೀಗಾಗಿ ಆಸ್ತಿಕ ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.

ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?
ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.

ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?
ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.
ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. ಆಸಕ್ತರು ಬೇರೆ ಬೇರೆ ಗ್ರಂಥಗಳನ್ನೋದಿ ಅವುಗಳನ್ನು ಅರಿತುಕೊಳ್ಳಬಹುದು.
ಉತ್ಥಾನ ದ್ವಾದಶಿಯಂದು ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.

💢🌱ತುಳಸಿಯಮಹತ್ವಮತ್ತುಔಷಧೀಯಗುಣಗಳು

೧)ತುಳಸಿಯ ಇನ್ನೊಂದು ಹೆಸರು ವೃಂದಾ,ಎಲ್ಲಿ ತುಳಸಿಯ ಗಿಡಗಳು ಅಧಿಕವಾಗಿರುತ್ತವೋ ಅದಕ್ಕೆ ನಾವು ವೃಂದಾವನ ಎಂದು ಕರೆಯುತ್ತೆವೆ.

೨)ಶ್ರೀ ವಿಷ್ಣು ಹಾಗೂ ಆಂಜನೇಯ ಸ್ವಾಮಿಗೆ ತುಳಸಿ ದಳಗಳನ್ನು ಪ್ರತಿದಿನ ಸಮರ್ಪಿಸಿ ಪೂಜೆ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ.

೩)ತುಳಸಿ ಗಿಡಗಳ ಮದ್ಯೆ ಕುಳಿತು "ಓಂ ನಮೋ ಭಗವತೆ ವಾಸುದೇವಾಯ ನಮಃ" ಎಂದು ಜಪಿಸಿದರೆ, ಶುಕ್ರದೋಷ,ಕಣ್ಣಿನ ತೊಂದರೆ,ಮುಖದ ರೋಗ ನಿವಾರಣೆಯಾಗುತ್ತದೆ.

೪)ಒಂದು ವರ್ಷದವರೆಗೆ ನಿರಂತರವಾಗಿ ತುಳಸಿದಳ ಸೇವನೆಯಿಂದ ಕ್ಯಾನ್ಸರ್ ನಂತಹ ರೋಗಗಳು ಗುಣವಾಗುತ್ತವೆ.

೫)ತುಳಸಿಯ ಎಲೆಯನ್ನು ಆಹಾರದಲ್ಲಿ ಹಾಕಿದರೆ ಆಹಾರವೂ ಸಂಪೂರ್ಣವಾಗುತ್ತದೆ,ಅಂತಹ ಆಹಾರ ದೇವರಿಗೆ ನೈವೇದ್ಯವೂ ಆಗುತ್ತದೆ.

೬)ತುಳಸಿ ಮಾಲೆ ಧರಿಸುವದರಿಂದ ರೋಗ ಮುಕ್ತಿ,ದೃಷ್ಟಿ ದೋಷ ನಿವಾರಣೆಯಾಗುತ್ತದೆ.ಮಾನಸಿಕ ಯಾತನೆ ಮತ್ತು ಪಾಪದಿಂದ ಮುಕ್ತಿ ಸಿಗುತ್ತದೆ.

೭)ಶನಿ ದೇವರ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಿ "ಓಂ ಶಂ ಶನೈಶಚರಾಯ ನಮಃ" ಎಂದು ೧೦೮ ಬಾರಿ ಜಪಿಸಿ ಪೂಜೆ ಮಾಡಿ.

೮)ದ್ವಾದಶಿ,ಅಮವಾಸ್ಯೆ,ಹುಣ್ಣುಮೆಯಂದು ಹಾಗೂ ಭಾನುವಾರ ಮತ್ತು ಸುರ್ಯೋದಯದ ಮೊದಲು ಹಾಗೂ ಸೂರ್ಯಾಸ್ತದ ನಂತರ ತುಳಸಿ ಕೀಳಬಾರದು.

೯)ತುಳಸಿಯನ್ನು ಕೀಳುವಾಗ "ಓಂ ಸುಪ್ರಭಾಯ ನಮಃ" ಎಂದು ಹೇಳಿ.

೧೦)ತುಳಸಿಯನ್ನ ಅಕಸ್ಮಾತ್ ಕೀಳಬಾರದ ದಿನ ಕಿತ್ತರೆ ೧೦೮ ಬಾರಿ "ಓಂ ಸುಪ್ರಭಾಯ ನಮಃ" ಎಂದು ಹೇಳಿದರೆ ದೋಷ ಪರಿಹಾರವಾಗುವದು.

೧೧)ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು.

೧೨)ಬೆಳಿಗ್ಗೆ ಸ್ನಾನ ಮಾಡಿದ ನಂತರ ಹೂ,ಗಂಧ,ಬಟ್ಟೆ ಇವೆಲ್ಲವನ್ನೂ ಅರ್ಪಿಸಿ,ಸೂರ್ರ್ಯೋದಯಕ್ಕೆ ಮುಂಚೆ ಪೂಜೆ ಮಾಡಬೇಕು.ಹೀಗೆ ಪ್ರತಿದಿನ ಪೂಜೆ ಸಲ್ಲಿಸಿದರೆ ದಂಪತಿಗಳ ನಡುವಿನ ಜಗಳ (ದಾಂಪತ್ಯ ದೋಷ) ನಿವಾರಣೆಯಾಗುತ್ತದೆ.

೧೩)ತುಳಸಿ ಗಿಡವನ್ನು ಬೆಳಸಿ ಪೂಜೆ ಮಾಡಿದರೆ, ಬುಧ ಗ್ರಹದ ದೋಷ ನಿವಾರಣೆಯಾಗುತ್ತದೆ.

೧೪)ತುಳಸಿ ಗಿಡಕ್ಕೆ ತುಪ್ಪದ ದೀಪ ಹಚ್ಚಿಡಬೇಕು, ಇದರಿಂದ ನಮ್ಮ ಕಷ್ಟಗಳು ದೂರವಾಗಿ ನಮ್ಮ ಮನಸಿನ ಕಾಮನೆಗಳು ಈಡೇರುತ್ತವೆ.

೧೫) ಶ್ರೀ ಮಹಾಗಣಪತಿಗೆ ತುಳಸಿ ಏರಿಸಬಾರದು, ಒಂದು ವೇಳೆ ಏರಿಸಿದರೆ ಸಂಕಷ್ಟಗಳು ಎದುರಾಗುವವು.

೧೬)ತುಳಸಿ ಮೋಡವೆ ಹಾಗೂ ಇನ್ನಿತರ ಚರ್ಮರೋಗಗಳಿಗೆ ರಾಮಬಾಣ.

೧೭)ತುಳಸಿಯಲ್ಲಿರುವ ಯುಜೇನೋಲ್ ಮತ್ತು ಉರ್ಸೋನೀಲ್ ಆಸಿಡ್ ಸಂಯುಕ್ತಗಳು ಉದರದ ಹಾಗೆ ಮುಖದ ಸಮಸ್ಯೆಗಳಿಗೆ ಒಳ್ಳೆಯದು.

೧೮)ತುಳಸಿಯನ್ನು ಮನೆಯ ಮುಂದೆ ನೆಡುವುದುರಿಂದ ಕ್ರೀಮಿ ಕೀಟಗಳಿಂದ ಹಾಗೂ ವೈರಸ್ ಬ್ಯಾಕ್ಟೀರಿಯಾ ಗಳಿಂದಲೂ ಮುಕ್ತಿ ಸಿಗುತ್ತದೆ.

೧೯)ದೀರ್ಘಕಾಲದ ರೋಗ (ಕ್ಯಾನ್ಸರ್, ಡಯಾಬಿಟಿಸ್..) ನಿಂದಲೂ  ಮುಕ್ತಿ ಪಡೆಯಬಹುದು.

೨೦)ಒತ್ತಡ ಕಡಿಮೆ ಮಾಡಲು,ರೋಗನಿರೋಧಕ ಶಕ್ತಿ ಹೆಚ್ಚಿಸಲು,ದೇಹದ ಸುಕ್ಕು ತಡೆಗಟ್ಟಲು, ಆಮ್ಲಜನಕವನ್ನು ದೇಹಕ್ಕೆ ಸರಿಯಾಗಿ ಪೂರೈಸಲು ಹೆಚ್ಚು ಸಹಕಾರಿ.
ಶುಭವಾಗಲಿ.

🌱🌱🌱🌱🌱

💢ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?

ಉತ್ತರ: ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ. 

ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು. 

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು. 

ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.

ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು. 
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ. 

ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು. 

ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ. 

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ. 

ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ. 

ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ 
ದಾಹಕಾಲೇ ಭವೇನ್ಮುಕ್ತಿಃ 
ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು. 

ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು. ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ। ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।

ಯಾವ ಕಾರಣಕ್ಕೂ ಬಿಸಾಡಬಾರದು.

ಒಂದೊಳ್ಳೆ ಸುವಿಚಾರದೊಂದಿಗೆ ನಿರಂತರ.

✍️ ಸತೀಶ್ ಬಿಲ್ಲವ.
***


ತುಲಸಿ ನಮಸ್ಕಾರ-
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ||

ತುಲಸಿ ಅರ್ಘ್ಯ ಮಂತ್ರ -
ಶ್ರಿಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ  ಮಯಾರ್ಘ್ಯಂ  ಹಿ ತುಲಸಿ  ಪ್ರತಿಗೃಹ್ಯತಾಂ  ||

ನವವಿಧ ತುಲಸಿ ಪೂಜಾ  -
ದೃಷ್ಟ್ವಾ  ಸ್ಪೃಷ್ಟ್ವಾ ಸ್ಮೃತ್ವಾ  ಧ್ಯಾತ್ವಾ  ನಾಮತಃ  ಸ್ತುತಾ   |
ರೂಪಿತಾ ಸೇಚಿತಾ ನಿತ್ಯಂ ಪೂಜಿತಾ ತುಲಸೀ   ಶುಭಾ  |

ತುಲಸೀ ಪ್ರಾರ್ಥನ 
ಮನಪ್ರಸಾದ ಜನನೀ ಸುಖಸೌಭಾಗ್ಯವರ್ಧಿನೀ |
ಆಧಿಂ ವ್ಯಾಧಿಂ ಚ ಹರಂ ಮೇ ತುಲಸೀ ತ್ವಾಂ ನಮಾಮ್ಯಹಂ |

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸಿತ್ವಾಂ ನಮಾಮ್ಯಹಂ ||

ಪ್ರದಕ್ಷಿಣೆ ಮಂತ್ರ 
 ತು‌ಅಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸಂತಸ್ತಥಾ |
ವಾಸುದೇವೋ ದಯೋದೇವಾಃ ವಸಂತಿ ತುಲ್ಳಸೀವನೇ ||

ಪ್ರಸೀದ ತುಲಸೀ ದೇವಿ | ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸೀತ್ವಾಂ ನಮಾಮ್ಯಹಂ ||

ತುಲಸಿ  ಪ್ರದಕ್ಷಿಣ  ಕೃತ್ವ   ಮಂತ್ರ -
ತುಲಸಿ  ಲಾನನಂ ಯತ್ರ ಯತ್ರ ಪದ್ಮ ವನಾನಿ ಚ |
ವಸಂತಿ  ವೈಷ್ಣವ ಯತ್ರ ತತ್ರ ಸನ್ನಿಹಿತೋ ಹರಿಃ ||

ಪುಷ್ಕರಾಧ್ಯಾನಿ ತೀರ್ಥಾನಿ ಗಂಗಾದ್ಯಾಃ  ಸರಿತಸ್ತಥಾ |
ವಾಸುದೇವಾದಯೋ  ದೇವಾ ವಸಂತಿ  ತುಲಸಿವನೇ ||

ಪ್ರಸೀದ ತುಲಸಿದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ  ಮಥನೋದ್ಭೂತೇ  ತುಲಸಿ  ತ್ವಾಂ  ನಮಾಮ್ಯಹಂ  ||

ತುಲಸಿ ಮೃತ್ತಿಕಾಧಾರಣ ಮಂತ್ರ-
ಲಲಾಟೇ ಯಸ್ಯ ದೃಶ್ಯತೇ ತುಲಸಿಮೂಲಮೃತ್ತಿಕಾ | 
ಯಮಸ್ತಮ್ ನೇಕ್ಷಿತುಂ  ಶಕ್ತಃ ಧೂತಾ ಭಯಂಕರಾಃ ||

ತುಲಸೀಯನ್ನು ಕೀಳುವಾಗ –
ತುಲಸ್ಯ ಮೃತಜನ್ಮಾಸಿ ಸದಾ ತ್ವಾಂ ಕೇಶವಪ್ರಿಯೇ |
ಕೇಶವಾರ್ಥಂ ಚಿನೋಮಿ ತ್ವಾಂ ಕ್ಷಮಸ್ವ ಹರಿವಲ್ಲಭೇ |

ತುಲಸೀ ಮಾಲಾಧಾರಣ ಮಂತ್ರ –
ತುಲಸೀಕಾಷ್ಠಸಂಭೂತೇ ಮಾಲೇ ಕೃಷ್ಣಜನಪ್ರಿಯೇ |
ಭಿಭರ್ಮಿ ತಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಮ್ |
ತುಲಸೀದಳ ಮಾಲಾಹೀಂ ಕೃಷ್ಣೋಚ್ಚಿಷ್ಠಾ ತು ಯೋ ವಹೇತ್ |


ಪದೇಪದೇಶ್ವಮೇಧಾನಾಂ ದಶನಾಂ ಲಭತೇ ಫಲಂ |

ತುಳಸಿ  ಶ್ಲೋಕಗಳು

ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣ ಮನಃ ಪ್ರಿಯೇ ||
ಯಾ ದೃಷ್ಠಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾವಪುಪಾವನಿ|
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೇ ವಿಮುಕ್ಥಿಫಲದಾ ತಸ್ಯೈ ತುಲಸ್ಯೈ ನಮ: |
ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೋತೇ ತುಲಸೀ ತ್ವಾಂ ನಮಾಮ್ಯಹಂ |
*****

ತುಳಸಿ ಪೂಜೆ ಅಥವಾ    ಉತ್ಥಾನ ದ್ವಾದಶಿ

ತುಳಸಿಯು ವಿಷ್ಣುವಿನ ಪ್ರಿಯಳು. ವಿಷ್ಣುವಿನ ಪೂಜೆ ತುಳಸಿ ಇಲ್ಲದೇ ಪೂರ್ಣವಾಗುವುದೇ ಇಲ್ಲ. 

ತುಳಸಿಯ ಗಿಡವನ್ನು ಎಲ್ಲರ ಮನೆಯಲ್ಲೂ ಬೆಳಸಿ ಸಂರಕ್ಷಿಸ ಬೇಕು. ತುಳಸಿ ಗಿಡವಿರುವಲ್ಲಿ ನಕಾರಾತ್ಮಕ ಶಕ್ತಿಗಳ ಕೆಲಸ ನಡೆಯುವುದಿಲ್ಲ. 

ತುಳಸಿ ಗಿಡದಿಂದ ಬೀಸುವ ಗಾಳಿಯಿಂದ ಸುತ್ತಮುತ್ತಲಿನ ವಾತಾವರಣ ಪವಿತ್ರಗೊಳ್ಳುತ್ತದೆ. ತುಳಸಿ ಗಿಡದ ಮಹತ್ವ ಅರಿತಿದ್ದ ನಮ್ಮ ಪೂರ್ವಜರು ತುಳಸಿ ಪೂಜೆಯನ್ನು ನಿತ್ಯಕರ್ಮ ವನ್ನಾಗಿಸಿದ್ದಾರೆ. ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ಒಳಿತು ಮತ್ತು ಏಳಿಗೆ ಕಾಣುಬಹುದು. ತುಳಸಿ ಪೂಜೆಯನ್ನು  ಪ್ರತಿದಿನ ತಪ್ಪದೇ ಮಾಡಬೇಕು.

ತುಳಸಿ ಪೂಜೆಯ ವಿಧಾನ :

ಪ್ರತಿದಿನ ಬೆಳಗ್ಗೆ ಬೇಗನೆದ್ದು ಸ್ನಾನ ಮುಗಿಸಿ ತುಳಸಿ ಪೂಜೆ ಮಾಡತಕ್ಕದ್ದು. ಹೆಣ್ಣು ಮಕ್ಕಳು, ಸುಮಂಗಲಿಯರು ಪೂಜೆ ಮಾಡುವ ಮುನ್ನ ಹಣೆಗೆ ಕುಂಕುಮ ಹಚ್ಚಿಕೊಂಡು ತುಳಸಿ ಪೂಜೆ ಮಾಡಬೇಕು. ಮನೆಯ ಮುಂದೆ ಇಟ್ಟಿರುವ ತುಳಸಿ ಕಟ್ಟೆಯನ್ನು ಗೋಮಯದಿಂದ ಸಾರಿಸಿ ಶುಚಿಗೊಳಿಸಬೇಕು. ನಂತರ ತುಳಸಿ ಕಟ್ಟೆಯ ಮುಂದೆ ರಂಗೋಲಿ ಹಾಕಿ ಸಿಂಗರಿಸಬೇಕು.

​ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ಗೋಬ್ರಹ್ಮ ಬಾಲಾಪಿತೃಮಾತೃ ವಧಾದಿಕಾನಿ |
ನಶ್ಯಂತಿ ತಾನಿ ತುಳಸೀವನ ದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||

ಅರ್ಥ : ತುಳಸಿ ವೃಂದಾವನ ವನ್ನು ನೋಡಿದರೆ ಸಾಕು ಕೋಟಿ ಗೋದಾನ ಮಾಡಿದ ಫಲ ಲಭಿಸುತ್ತದೆ. ಗೋಹತ್ಯೆ, ಬ್ರಹ್ಮ ಹತ್ಯೆ, ಬಾಲಹತ್ಯೆ, ಮಾತೃವಧ, ಪಿತೃವಧೆಯಂತಹ ಪಾಪಗಳು ಸಹ ನಾಶವಾಗುತ್ತದೆ.
ತುಳಸಿಯ ಕಟ್ಟೆಗೆ ನೀರನ್ನು ಹಾಕಿದ ಮೇಲೆ ತಲೆಯ ಮೇಲೆ ಆ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಬೇಕು. ತುಳಸಿಯ ಮೃತ್ತಿಕೆ (ಮಣ್ಣನ್ನು) ಹಣೆಗೆ ಹಚ್ಚಿಕೊಳ್ಳಬೇಕು. ಹೀಗೆ ಮೃತ್ತಿಕೆಯನ್ನು ಧರಿಸುವಾಗ ಈ ಶ್ಲೋಕವನ್ನು ಪಠಿಸಬೇಕು.

ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||

ಅರ್ಥ : ತುಳಸಿಯ ಮೃತ್ತಿಕೆ ಯನ್ನು ಧರಿಸಿರುವವರನ್ನು ಯಮನೇ ಕತ್ತೆತ್ತಿ ನೋಡಲಾರ, ಇನ್ನು ಯಮನ ಕಿಂಕರರು ಹೇಗೆ ತಾನೆ ನೋಡಬಲ್ಲರು.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ: ವಸಂತಿ ತುಳಸೀವನೇ ||

ಅರ್ಥ : ತುಳಸಿಯ ಬೃಂದಾವನ ದಲ್ಲಿ ಪುಷ್ಕರಾದಿ ಸರೋವರ ತೀರ್ಥ ಗಳು, ಗಂಗೆ ಮೊದಲಾದ ನದಿ ತೀರ್ಥಗಳು ಮತ್ತು ವಾಸುದೇವಾದಿ ದೇವರೆಲ್ಲಾ ನೆಲೆಸಿರುತ್ತಾರೆ.

ನಂತರ ಅರಿಶಿನ, ಕುಂಕುಮ ಮತ್ತು ನೀರನ್ನು ಹಾಕಬೇಕು. ಪೂಜಿಸು ವಾಗ ಕೆಳಗಿರುವ ಶ್ಲೋಕವನ್ನು ಪಠಿಸಬೇಕು.

ಶ್ರಿಯಃ ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ ಮಯಾಮರ್ಘ್ಯಂ ಹಿ ತುಲಸಿ ಪ್ರತಿಗೃಹ್ಯತಾಂ ||

ಅರಿಶಿನ, ಕುಂಕುಮ ಮತ್ತು ನೀರನ್ನು ಹಾಕಿ ಪೂಜಿಸಿದ ನಂತರ ಹೂವುಗಳಿಂದ ತುಳಸಿಯ ಪೂಜೆ ಮಾಡಬೇಕು, ಪೂಜಿಸುವಾಗ ಕೆಳಗೆ ಕೊಟ್ಟಿರುವ ಶ್ಲೋಕವನ್ನು ಹೇಳಬೇಕು.

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸೀತ್ವಾಂ ನಮಾಮ್ಯಹಂ ||

ಅರ್ಥ : ಎಲ್ಲಾ ತೀರ್ಥಗಳೂ ತುಳಸಿಯ ಕೆಳಗಿವೆ. ಎಲ್ಲಾ ದೇವರು ಗಳು ತುಳಸಿಯ ಮೇಲಿದ್ದಾರೆ. ತುಳಸಿಯ ಮಧ್ಯದಲ್ಲಿ ಎಲ್ಲಾ ವೇದಗಳಿವೆ. ಇಂತಹ ತುಳಸಿಯನ್ನು ನಮಸ್ಕರಿಸುತ್ತೇನೆ.

ತುಳಸಿ ಅರ್ಚನೆ :

ಶ್ರೀ ತುಳಸೈ ನಮಃ
ಶ್ರೀ ವಿಷ್ಣುಪತ್ನಿಯೈ ನಮಃ
ಅಘ ಹಂತಾರ್ಯೈ ನಮಃ
ಲೋಕ ವಂದಿತಾಯೈ ನಮಃ
ಪೀತಾಂಬರ ಧಾರಿಣ್ಯಾಯೈ ನಮಃ
ಕ್ಷೀರಾಬ್ಧಿ ತನಯೈ ನಮಃ
ಲೋಗ ಜನನ್ಯಾಯೈ ನಮಃ
ಸರ್ವಾಭರಣ ಭೂಷಿತಾಯೈ ನಮಃ
ಸುಮುಖಾಯೈ ನಮಃ
ಸುನಸಿಕಾಯೈ ನಮಃ
ಶ್ರೀ ರಾಮಾಯೈ ನಮಃ
ಶ್ರೀ ತುಳಸೈ ನಮಃ

ತುಳಸಿ ಕಟ್ಟೆಯ ಪ್ರದಕ್ಷಿಣೆ ಮಾಡುವಾಗ ಈ ಕೆಳಗಿನ ಶ್ಲೋಕಗಳನ್ನು ಹೇಳಬೇಕು.

ತುಳಸಿಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||

ಅರ್ಥ : ತುಳಸಿ ಕಾನನವೇ ಒಂದು ಪುಣ್ಯ ಕ್ಷೇತ್ರ. ತುಳಸೀವನ, ಪದ್ಮ ಸಮುದಾಯ, ವೈಷ್ಣವ ವಾಸ ಗಳಿರುವ ಪ್ರದೇಶದಲ್ಲಿ ಶ್ರೀಹರಿಯು ನಿತ್ಯವೂ ನೆಲೆಸಿರುತ್ತಾನೆ. 

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸಂತಸ್ತಥಾ |
ವಾಸುದೇವೋ ದಯೋ ದೇವಾಃ ವಸಂತಿ ತುಳಸೀನವೇ ||
ಪ್ರಸೀದ ತುಳಸೀ ದೇವಿ | ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಬೂತೇ ತುಳಸೀತ್ವಾಂ ನಮಾಮ್ಯಹಂ ||

ಅರ್ಥ : ಹಾಲಿನ ಕಡಲನ್ನು ಕಡೆದಾಗ ಧನ್ವಂತ್ರಿಯ ಆನಂದಾಶ್ರುವಿನಿಂದ ಅಮೃತ ಕಳಶದಲ್ಲಿ ಹುಟ್ಟಿದ ಹರಿಪ್ರಿಯಳಾದ ಲಕ್ಷ್ಮಿಗೆ ನಾನು ನಮಸ್ಕರಿಸುತ್ತೇನೆ.

ನಂತರ ತುಳಸಿ ಮಾತೆಗೆ ನಮಸ್ಕರಿಸಬೇಕು. ನಮಸ್ಕರಿಸು ವಾಗ ಈ ಶ್ಲೋಕವನ್ನು ಪಠಿಸಿ.

ತುಳಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ||

ಅರ್ಥ : ಶ್ರೀ ಲಕ್ಷ್ಮಿಯ ಸಖಿ, ಪಾಪ ಪರಿಹರಿಸುವವಳೇ, ಪೂಣ್ಯವನ್ನು ನೀಡುವ ನಾರದ ಮಹರ್ಷಿಯ ಸುತೆ, ಶ್ರೀಮನ್  ನಾರಾಯಣನ ಮನಸ್ಸಿಗೆ ಹತ್ತಿರವಾದವಳೇ, ನಿನ್ನನ್ನು ನಮಸ್ಕರಿಸುತ್ತೇನೆ.

ತುಳಸಿ ಪೂಜೆಯ ಮಹತ್ವ :

ತುಳಸಿ ಗಿಡದ ಮಹತ್ವವನ್ನು ಪದ್ಮ ಪುರಾಣದಲ್ಲಿ ಹೀಗೆ ವಿವರಿಸ ಲಾಗಿದೆ.

ಯಾ ದೃಷ್ಟ್ವಾ ನಿಖಿಲಾಘ ಸಂಘಶಮನೀ ಸ್ಪೃಷ್ಟಾ ವಪುಃಪಾವನೀ ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾsoತಕತ್ರಾಸಿನೀ |
*ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ ನ್ಯಸ್ತಾ ತಶ್ಚರಣೇ ವಿಮುಕ್ತಿಫಲದಾ
ತಸ್ಯೈ ತುಳಸ್ಯೈ ನಮಃ ||*

ಅರ್ಥ : ತುಳಸಿ ಗಿಡವನ್ನು ನೋಡುವುದರಿಂದ ನಮ್ಮ ದೇಹ ಪವಿತ್ರಗೊಳ್ಳುತ್ತದೆ ಮತ್ತು ಪಾಪಗಳು ಕಳೆಯುತ್ತವೆ.ತುಳಸಿ ಗಿಡವನ್ನು ಸ್ಪರ್ಶಿಸುವುದರಿಂದ ನಮ್ಮ ದೇಹ ಸ್ವಚ್ಛಗೊಂಡು ಭಗವಂತನ ಚಿಂತನೆಗೆ ತಯಾರಾಗುತ್ತೇವೆ.

ಪ್ರತಿದಿನ ತುಳಸಿ ಗಿಡಕ್ಕೆ ನಮಸ್ಕರಿಸುವುದರಿಂದ ರೋಗ-ರುಜಿನಗಳು ದೂರವಾಗುತ್ತವೆ.

ಪ್ರತಿದಿನ ತುಳಸಿಯನ್ನು ನೀರೆರೆದು ಸಂರಕ್ಷಿಸುವವರ ಮನೆಗೆ ಯಮ ಧರ್ಮರಾಯ ಪ್ರವೇಶಿಸಲು ಹೆದರಿಕೊಳ್ಳುತ್ತಾನೆ.

ತುಳಸಿ ಗಿಡವನ್ನು ನೆಟ್ಟು ಪೋಷಿಸುವವರು ಕೃಷ್ಣ ಪರಮಾತ್ಮನಿಗೆ ಹತ್ತಿರವಾಗುತ್ತಾರೆ.

ಭಕ್ತಿಯಿಂದ ಕೃಷ್ಣನಿಗೆ ತುಳಸಿ ಅರ್ಪಿಸಿ ಮೋಕ್ಷವನ್ನೂ  ಪಡೆಯಿರಿ.

ತುಳಸಿಯ ಬಳಕೆ ಮತ್ತು ಮಹತ್ವ :

ತುಳಸಿಯು ರೋಗನಿರೋಧಕ ಶಕ್ತಿ ನೀಡುವುದರಿಂದ ತುಳಸಿಯನ್ನು ಆಯುರ್ವೇದ ಚಿಕೆತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ.

ದೇವರ ಪೂಜೆಯ ನಂತರ ಮಾಡುವ ತೀರ್ಥಕ್ಕೆ ತುಳಸಿಯ ಕಾಷ್ಠವನ್ನು ತೇದು ಹಾಕುಲಾಗುತ್ತದೆ.

ತುಳಸಿ ಗಿಡ ಹೆಚ್ಚು ಆಮ್ಲಜನಕ ನೀಡುವ ಸಸ್ಯವಾಗಿದ್ದು, ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಗೊಳಿಸುತ್ತದೆ. ಆದ್ದರಿಂದ ತುಳಸಿಯ ಸುತ್ತ ಪ್ರದಕ್ಷಿಣೆ ಹಾಕಬೇಕು.

ತುಳಸಿ ಗಿಡ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ.

ಗೋಪಿ ಚಂದನದ ಬದಲು ತುಳಸಿಯ ಮೃತ್ತಿಕೆ (ಮಣ್ಣು) ಯನ್ನು ಹಚ್ಚಿಕೊಳ್ಳಬಹುದು.

ತುಳಸಿ ಮಾಲೆ ಧರಿಸುವುದರಿಂದ ಭಯವಿರುವುದಿಲ್ಲ.

ತುಳಸಿ ಮಾಲೆಯನ್ನು ಧರಿಸು ವುದರಿಂದ ಹೃದಯ ಮತ್ತು ಶ್ವಾಸಕೋಶದ ತೊಂದರೆಗಳು ಬರುವುದಿಲ್ಲ.

ತುಳಸಿ ಮಾಲೆಯನ್ನು ಧರಿಸು ವುದರಿಂದ ಸಾತ್ವಿಕ ಭಾವ ನಮ್ಮಲ್ಲಿ ಮೂಡುತ್ತದೆ.

ಮಣಿಕಟ್ಟಿನಲ್ಲಿ ತುಳಸಿ ಮಾಲೆ ಧರಿಸುವುದರಿಂದ ನಾಡಿಬಡಿತ ಸರಿಯಾಗಿರುತ್ತದೆ ಮತ್ತು ಭುಜದ ನೋವು ಬರುವುದಿಲ್ಲ.

ಗರ್ಭಿಣಿಯರ ಸೊಂಟಕ್ಕೆ ತುಳಸಿಯ ಬೇರನ್ನು ಕಟ್ಟುವುದ ರಿಂದ ಪ್ರಸವವೇದನೆ ಕಡಿಮೆ ಯಾಗುತ್ತದೆ.
ತುಳಸಿ ಗಿಡದ ಪೋಷಣೆಯ ನಿಯಮಗಳು :

ಪುರುಷರು ಮಾತ್ರ ತುಳಸಿಯನ್ನು ಕೀಳುವ ಪದ್ಧತಿ ಇದೆ.

ತುಳಸಿ ಗಿಡವನ್ನು ಬಹಳ ಎಚ್ಚರಿಕೆ ಯಿಂದ ಎಡಗೈಲಿ ಹಿಡಿದು ಬಲಗೈ ಯಿಂದ ಎಲೆಯನ್ನು ಕೀಳಬೇಕು. ತುಳಸಿ ಎಲೆಯನ್ನು ತೆಗೆದುಕೊಳ್ಳು ವಾಗ ಈ ಶ್ಲೋಕವನ್ನು ಹೇಳಬೇಕು.

ತುಳಸ್ಯಮೃತನಾಮಾಸಿ ಸದಾತ್ವಂ ಕೆಶವಪ್ರಿಯೆ |
ಕೇಶವಾರ್ಥ ವಿಚಿನ್ವಾಮಿ  ವರದಾಭವ ಶೋಭನೆ ||

ಅರ್ಥ : ಓ ತುಳಸಿ, ನೀನು ಅಮೃತದಿಂದ ಜನಿಸಿದವಳು. ನೀನು ಸದಾ ಕೇಶವನ ಪ್ರಿಯಳು. ಈಗ, ಕೇಶವನ ಪೂಜೆಗೆಂದು ನಾನು ನಿನ್ನ ದಳಗಳನ್ನು ತೆಗೆದುಕೊಳ್ಳು ತ್ತಿದ್ದೇನೆ. ನನ್ನನ್ನು ರಕ್ಷಿಸಮ್ಮ.

ದ್ವಾದಶಿಯಂದು, ರಾತ್ರಿ ಹೊತ್ತು, ಗ್ರಹಣ ದಿನಗಳಂದು ತುಳಸಿಯನ್ನು ಕೀಳಬಾರದು.

ತುಳಸಿ ಗಿಡವನ್ನು ಒಣಗಿಹೋಗ ದಂತೆ ಕಾಪಾಡಬೇಕು.

ಬೇರೆ ಗಿಡಗಳನ್ನು ಎಸೆಯುವಂತೆ ತುಳಸಿ ಗಿಡವನ್ನು ಎಸೆಯಬಾರದು, ಅವಕಾಶವಿದ್ದರೆ ನದಿಯಲ್ಲಿ ವಿಸರ್ಜಿಸಬೇಕು.

ತುಳಸಿ ಗಿಡವನ್ನು ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. 

ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು.

ಸಂಜೆ ಹೊತ್ತು ತುಳಸಿಯ ಮುಂದೆ ತಪ್ಪದೆ ದೀಪ ಹಚ್ಚಿಡಬೇಕು.
(ಸತ್ಸಂಗ ಸಂಗ್ರಹ)
***



ಓಂ ಶ್ರೀ ಗುರುಭ್ಯೋಃ ನಮಃ - ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?

೧. ತುಳಸಿಯ ವೈಶಿಷ್ಟ್ಯಗಳು: ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.

೨. ಲಾಭಗಳು

ಅ. ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.

ಆ. ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.ನ

ಇ. ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ಅದರ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ ನೈವೇದ್ಯವನ್ನು ಸೇವಿಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ.
******



ತುಳಸಿ ಮಹಿಮೆ....

ಒಮ್ಮೆ ದ್ವಿಜೋತ್ತಮರು ಶ್ರೀವೇದವ್ಯಾಸರನ್ನು  ತುಳಸಿ  ಮಹಿಮೆಯ ಬಗ್ಗೆ ಕೇಳಿದರು. ಆಗ ವ್ಯಾಸರು ಹಿಂದೆ ಶತಾನಂದರು ತಮ್ಮ ಶಿಷ್ಯರಿಗೆ ಹೇಳಿದ ತುಳಸಿ ಮಹಿಮೆಯನ್ನು ಹೇಳುತ್ತಾರೆ. ಶಿಷ್ಯರೇ ! ತುಳಸಿ ನಾಮೋಚ್ಚಾರಣೆಯಿಂದಲೇ ಶ್ರೀ ವಿಷ್ಣು ಸುಪ್ರೀತನಾಗುತ್ತಾನೆ . ಮನುಷ್ಯನ ಪಾಪಗಳು ನಾಶವಾಗುತ್ತವೆ. ಆಕೆಯ ದರ್ಶನ ಮಾತ್ರ ದಿಂದಲೇ ನೂರಾರು ಗೋದಾನ ಫಲ ಪ್ರಾಪ್ತಿಯಾಗುತ್ತದೆ. ಕಲಿಯುಗದಲ್ಲಿ ಯಾರಮನೆಯಲ್ಲಿ  ಸಾಲಿಗ್ರಾಮವನ್ನು ಪ್ರತಿದಿನವೂ ತುಳಸಿದಳದಿಂದ  ಪೂಜಿಸುವವರೋ ಆ ಮನೆಯಲ್ಲಿ ಸಕಲ ಸೌಭಾಗ್ಯ ಗಳೂ ಲಭಿಸುವವು. ತುಳಸಿ ಅಮೃತದಿಂದ  ಉತ್ಪನ್ನಗಳಾದವಳು. ಕೇಶವನಿಗೆ ಸದಾ ಪ್ರೀಯಳು ,ಶ್ರೀಕೇಶವನನ್ನು ತುಳಸಿದಳಗಳಿಂದ  ಮಂತ್ರ ಸಹಿತ ಪೂಜಿಸಿದಲ್ಲಿ ಸಕಲ ಪಾಪ ನಾಶವಾಗಿ ಮೋಕ್ಷ ಪ್ರಾಪ್ತಿಯಾಗುವದು..
   ಕ್ಷೀರ ಸಾಗರ ಮಂಥನ ಸಮಯದಲ್ಲಿ  ತುಳಸಿ ಉದ್ಭವವಾಯಿತು. ಶ್ರೀಹರಿ ಆಕೆಯನ್ನು  ತನ್ನ ಶಿರದಮೇಲೆ ಧರಿಸಿದನಾದ್ದರಿಂದ  ಆಕೆಯು ಪರಮ ಪವಿತ್ರಳು. ಸಾಕ್ಷಾತ್ ಶ್ರೀಕೃಷ್ಣನೂ ಸಹ  ತುಳಸಿಯನ್ನು ಗೋಮತಿ ದಡದಲ್ಲಿ ನೆಟ್ಟು ಬೆಳೆಸಿದನು. ಶ್ರೀ ರಾಮನೂ ಸಹ ಸರಯೂ ನದಿ ದಡದಲ್ಲಿ ನೆಟ್ಟು ಪೋಷಿಸಿದ್ದನು. ಸಿತೆಯೂ ಸಹ ತುಳಸಿ ಪೂಜಿಸಿದ್ದಳು. ಶಿವನನ್ನು ಪಡೆಯಲು ಪಾರ್ವತಿಯೂ ಸಹ ಶಿವನ ಪೂಜೆ ಮಾಡಿದ್ದಳು.. ತುಳಸಿ ದಳ ಸೇವನೆಯಿಂದ ಸಕಲ ಪಾಪಗಳು ನಾಶವಾಗುತ್ತವೆ..
ವೀಣಾ ಜೋಶಿ
***********

ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ:*

ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ಪವಿತ್ರ ತುಳಸಿ ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

**********

ತುಳಸಿ ಗಿಡವನ್ನು ದ್ವಾದಶೀ, ಭಾನುವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ, ವೈಧ್ರತಿ, ವ್ಯತೀಪಾತ, ವ್ಯಾಘಾತ ಯೋಗ ಗಳನ್ನು ಹೊರತು ಪಡಿಸಿ ಇತರ ದಿನಗಳಂದು ಮಧ್ಯಾಹ್ನ 12 ಗಂಟೆಯ ಒಳಗೆ ಮಡಿಯಿನ್ದ ನೆಡಬೇಕು. ಬೆಳೆಸಲು ಸ್ತ್ರೀ ಶೂದ್ರರೆಲ್ಲರಿಗೂ ಅಧಿಕಾರವಿದೆ. ದಳ ಕೀಳಲು ಅಧಿಕಾರವಿಲ್ಲದವರು ಇಡೀ ಗಿಡವನ್ನೇ ಮನಸ್ಸಿನಲ್ಲಿ ಭಗವಂತನಿಗೆ ಅರ್ಪಿಸಬಹುದು.
ಒಂದು ತುಳಸೀ ಗಿಡ ನೆಡುವಿಕೆ ಸಾವಿರ ಮಾವಿನ ಗಿಡಗಳನ್ನು ನೆಡುವುದಕ್ಕೆ ಸಮ. ತುಳಸೀ ಗಿಡ ಇತರ ಎಲ್ಲ ವೃಕ್ಷಕ್ಕೂ ಮಿಗಿಲಾಗಿ ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತದೆ. ಹೀಗೆ ನಾವು ದೊಡ್ಡ ವನವನ್ನೇ ಬೆಳೆಸಿದಂತಾಗುತ್ತದೆ.
To plant tulasI (Basil plant), we should exclude the days such as dvaadashi, sunday, friday, amavaasya, huNNime, vaidhriti , vyatipaata, vyaaghaata yogas. We should plant with maDi before 12 noon. To grow the plant all strI shUdras have adhikaara. Those who don't have adhikaara of separating daLa, can do the arpaNa of entire plant to the bhagavanta.
Planting a tulasI plant is equivalent to planting thousand mango plants. TulasI plant produces highest oxygen compared to all other trees. This way we grow a huge forest.

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..

🙏೨. ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು..

🙏೩. ತುಳಸಿಯನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗ ಒಣಗುತ್ತದೆ..

🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..

🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..

🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..

🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..
ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..
ಇದು ಎಚ್ಚರಿಕೆಯ ಸಂದೇಷವೂ ಕೂಡ..

🙏೮. ಪ್ರತಿದಿನ ತುಳಸೀ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ..

🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..

🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..

🙏೧೧. ತುಳಸೀ ಬಿಡಿಸುವಾಗ ವಿಷ್ಣುಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಳ್ಳಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಬಿಡಿಸಿ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.
********

ತುಳಸಿ ಪೂಜಾ ವಿಧಾನ

ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.

ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.

ಸಂಕಲ್ಪ 

ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ

ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:

ಆವಾಹನೆ - 

ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

ಆಸನ- 

ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

ಪಾದ್ಯ -

ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

ಅರ್ಘ್ಯ - 

ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

ಆಚಮನ -

ಕುಡಿಯುವುದಕ್ಕೆ ನೀರು ಕೊಡುವುದು.

ಸ್ನಾನ - 

ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

ವಸ್ತ್ರ - 

ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

ಪುಷ್ಪ ಮಾಲ - 

ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

ಅರ್ಚನೆ/ಅಷ್ಟೋತ್ತರ -

ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

ಧೂಪ -

ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

ದೀಪ - 

ದೀಪ ಸಮರ್ಪಣೆ ಮಾಡುವುದು.

ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

ನೀರಾಜನ - 

ಕರ್ಪುರದಿಂದ ಮಂಗಳಾರತಿ ಮಾಡುವುದು.

ನಮಸ್ಕಾರ - 

ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

ಪ್ರಾರ್ಥನೆ

ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ.
***********

Tulasi Pooja everyday by women

ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
  ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||

|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||

ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ

ಶ್ರೀ ತುಳಸಿ ನಮಸ್ಕಾರ  
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||

ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.


ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.
********

ತಂ ನಾರಸಿಂಹಂ ನಮಾಮಿ ! 

ತುಳಸೀಮಾಹಾತ್ಮ್ಯಂ :- 

(ತುಳಸೀಸ್ತೋತ್ರಂ)

ಯಾ ದೃಷ್ಟಾ ನಿಖಿಲಾಘಸಂಘಶಮನೀ
ಸ್ಪೃಷ್ಟಾ ವಪುಃ ಪಾವನೀ
ರೋಗಾಣಾಮಭಿವಂದಿತಾ ನಿರಸನೀ
ಸಿಕ್ತಾಂತಕತ್ರಾಸಿನೀ ! 
ಪ್ರತ್ಯಾಸತ್ತಿವಿಧಾಯಿನೀ ಭಗವತಃ
ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ 
ತಸ್ಯೈ ತುಲಸ್ಯೈ ನಮಃ !! ೧೧ !!

ಅರ್ಥ :- ಯಾರನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಪಾಪಗಳ ಸಮೂಹಗಳು ಸುಟ್ಟು ಭಸ್ಮ ಆಗ್ತಾವೋ, ಯಾರನ್ನು ಸ್ಪರ್ಶ ಮಾಡಿದರೆ ಸಾಕು ನಮ್ಮ ದೇಹ, ಮನಸ್ಸು ಪವಿತ್ರವಾಗ್ತಾವೋ, ಯಾರನ್ನು ನಮಸ್ಕಾರ ಮಾಡಿದರೆ ನಮ್ಮ ಎಲ್ಲಾ ರೋಗಗಳು (ಸಂಸಾರ ಎಂಬ ರೋಗ) ನಾಶವಾಗ್ತಾವೋ, ಅಂಥ ತುಳಸಿದೇವಿಯ ಚರಣಗಳಲ್ಲಿ ನಮ್ಮ ತಲೆಯನ್ನು ಇಟ್ಟರೆ (ನಮಸ್ಕಾರ ಮಾಡಿದರೆ) ಅವಳು (ತುಳಸಿದೇವಿಯು) ಭಗವಂತನ ಬಗ್ಗೆ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷಫಲವನ್ನು ಕೊಡುತ್ತಾಳೆ. ಕೊಡುವ ಶಕ್ತಿ ದೇವರ ಅನುಗ್ರಹದಿಂದ ಅವಳಿಗೆ ಇದೆ. ಅಂಥ ತುಳಸೀದೇವಿಗೆ ನಮಸ್ಕಾರಗಳು.

ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷವನ್ನು ದಯಪಾಲಿಸಲಿ.

ಸರ್ವೇ ಜನಾಃ ಸುಖಿನೋ ಭವಂತು !
******* 


"ತುಳಸೀ ಮತ್ತು ವಿಶೇಷತೆಗಳು..
(ತುಳಸೀ ಹಬ್ಬಕ್ಕಾಗಿ)

" ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||

ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ |
ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||

  ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣವಾದ , ವಿಷ್ಣುಪ್ರಿಯೆಯಾದ, ಶುಭಸೂಚಕಳಾದ, ಮೋಕ್ಷವೀವಳಾದ, ಸರ್ವಸಂಪತ್ಪ್ರದಾಯಿನಿಯಾದ ಜಗನ್ಮಾತೆ ತುಳಸೀ ದೇವಿಯನ್ನು ನಮಸ್ಕರಿಸುತ್ತೇನೆ..

  ತುಳಸೀದೇವಿಯೇ ನಿನ್ನ ಮೂಲದಲ್ಲಿಯೇ ಗಂಗಾದಿ ಸರ್ವ ತೀರ್ಥಗಳು ವಾಸಿಸುತ್ತಿರುವವುದು, ನಿನ್ನ ಮಧ್ಯಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿದ್ದಾರೆ, ನಿನ್ನ ಅಗ್ರಭಾಗದಲ್ಲಿ ಸಕಲ ವೇದಗಳೂ ಇರುವುದರಿಂದ ಅಂತಹ ತುಳಸೀ ದೇವಿಗೆ ನಿತ್ಯವೂ ನಮಸ್ಕಾರ ಮಾಡಬೇಕು..

ಸರ್ವದೇವತೆಗಳ ಪ್ರತ್ಯಕ್ಷ ರೂಪವನ್ನು ಹೊಂದಿರುವ ತುಳಸೀ ದೇವಿಯು ಅತ್ಯಂತ ಪವಿತ್ರಳು, ಶುಭಪ್ರದಳೂ, ಪೂಜ್ಯಳಾಗಿ ಕಾಮಧೇನು, ಕಲ್ಪವೃಕ್ಷದಂತೆ ಕಲಿಯುಗದಲ್ಲಿ ಮಹಿಮಾನ್ವಿತ ಸ್ಥಾನವನ್ನು ಹೊಂದಿರುವವಳು ...

ಇಂತಹ ಅಮೃತ ಸಮಾನವಾದ "ತುಳಸೀ" ಗಿಡದ ಪೂಜೆಯನ್ನು ಮಾಡುವುದು ಎಲ್ಲಾ ಸ್ತ್ರೀಯರ ಪ್ರಮುಖ ಕರ್ತವ್ಯವಾಗಿದೆ..

ಪುರುಷರೂ ಮಾಡಬಹುದು..

"ಕೆಲವು ಮುಖ್ಯ ಸೂಚನೆಗಳು"

೧. ತುಳಸೀ ಪೂಜೆಯನ್ನು ನಿತ್ಯವೂ ಮಾಡುವುದರಿಂದ ಸರ್ವಸೌಭಾಗ್ಯವೂ ದೊರೆಯುತ್ತದೆ..

ಇಲ್ಲದಿದ್ದಲ್ಲಿ ಪ್ರತಿ ತಿಂಗಳ ಶುದ್ಧ ದ್ವಾದಶಿಯಂದು ಮಾಡುವುದೂ ತುಂಬಾ ಮುಖ್ತವಾಗಿರುತ್ತದೆ..

೨. ವಿಶೇಷವಾಗಿ ಪ್ರತೀ ವರ್ಷದ ಕಾರ್ತಿಕಮಾಸದ "ಶುದ್ಧ ದ್ವಾದಶಿ" ಯಂದು ತುಳಸೀಪೂಜೆ ಮಾಡಲೇಬೇಕು..

೩. ತುಳಸೀ ಗಿಡವನ್ನು ನೆಲಕ್ಕಿಂತ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಬೆಳೆಸಬೇಕು..

೪. ಕಾರ್ತಿಕಮಾಸದಲ್ಲಿ  ಪೂರ್ತಿಯಾಗಿ ತುಳಸೀ ಗಿಡದ ಸುತ್ತಲೂ "ನೆಲ್ಲಿ ಕಾಯಿ" ದೀಪವನ್ನು ಬೆಳಗಿ ಪೂಜಿಸಿದರೆ ಉತ್ತಮ ಫಲ ದೊರೆಯುವುದು..

ಹಣದ ಸಮಸ್ಯೆ ನಿವಾರಣೆಯಾಗಿ, ಸಂಸಾರದಲ್ಲಿ ನೆಮ್ಮದಿ ಕಾಣುವಿರಿ..

೫. "ಶ್ರೀ ತುಳಸೀ ಮತ್ತು ಕೃಷ್ಣತುಳಸೀಗೆ ಭೇದವಿಲ್ಲ..

೬. ತುಳಸೀ ಪೂಜೆಯಲ್ಲಿ ಸಿಹಿ ನೈವೇದ್ಯ ಮಾಡಬೇಕು..

೭. ಸ್ನಾನಕ್ಕೆ ಮುಂಚೆ ಮತ್ತು ಊಟದ ನಂತರ ತುಳಸಿಯನ್ನು ಬಿಡಿಸಬಾರದು..

೮. ತುಳಸೀದಳವನ್ನು ಆದಷ್ಟೂ ಅಷ್ಟಮೀ, ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶೀ, ಸಂಕ್ರಮಣ, ಭಾನುವಾರ, ಮಂಗಳವಾರ, ಶುಕ್ರವಾರಗಳಂದು ಕೀಳಬಾರದು..
(ಅನಿವಾರ್ಯ ಪರಿಸ್ಥಿತಿಯಲ್ಲಿ ಪರವಾಗಿಲ್ಲ)

೯. ಪೂಜೆಗಾಗಿ ಇರಿಸಿರುವ ತುಳಸೀ ಗಿಡದಿಂದ ತುಳಸಿಯನ್ನು ಕೀಳಬಾರದು..

೧೦. ತುಳಸೀ ಗಿಡದ ಮೃತ್ತಿಕೆಯು ಕುಂಕುಮದಂತೆಯೇ ಶ್ರೇಷ್ಠ ಸ್ಥಾನ ಹೊಂದಿದೆ..

ಇದನ್ನು ಧರಿಸಿರುವುದರಿಂದ ಯಾವ ದುಷ್ಟಭಯವೂ ಇರುವುದಿಲ್ಲ ಮತ್ತು ಮಾಟ ಮಂತ್ರ ತಟ್ಟುವುದಿಲ್ಲ..

೧೧. ಲಕ್ಷ್ಮೀ ಪೂಜೆಯನ್ನು ಮಾಡುವವರು ಮೊದಲು ತುಳಸೀ ಪೂಜೆಯನ್ನು ಮಾಡಿ, ನಂತರ ಲಕ್ಷ್ಮೀ ಪೂಜೆ ಮಾಡಿದರೆ ಅತ್ಯಂತ ಶುಭಫಲಗಳು ಶೀಘ್ರವಾಗಿ ಬರುವುದು..

12. ಮನೆಯ ಹತ್ತಿರ ಅಥವಾ ಅಂಗಡಿಯ ಹತ್ತಿರ... ಮಾಟ ಮಂತ್ರದ ವಸ್ತುಗಳು ಬಿದ್ದಿದ್ದರೆ , ಅಂತಹ ವಸ್ತುಗಳ ಮೇಲೆ ತುಳಸೀ ಪತ್ರೆಯನ್ನು ಹಾಕುವುದರಿಂದ , ಆ ಮಾಟ ಮಂತ್ರದಲ್ಲಿನ ವಸ್ತುಗಳ ಶಕ್ತಿ ಪೂರ್ಣವಾಗಿ ಹೊರಟುಹೋಗುತ್ತದೆ..
ಮಾಟ ಮಂತ್ರ ಕೆಲಸ ಮಾಡುವುದಿಲ್ಲ..!

ಇಂತಹ ತುಳಸೀ ಪೂಜೆಯನ್ನು ಪ್ರತಿದಿನ ಮಾಡುವುದು ಅತ್ಯಂತ ಶ್ರೇಯಸ್ಕರವಾದುದು.
**************

ತುಳಸಿಯ ಕೊಯ್ಯುವ ಬಗೆ ತಿಳಿಯೋಣ. 

ಪ್ರಸೀದ ಮಮ ದೇವೇಶಿ ಪ್ರಸೀದ ಹರಿ ವಲ್ಲಭೇ। ಕ್ಷೀರೋದ ಮಥನೋದ್ಭೂತೇ ತುಲಸೀ ತ್ವಂ ಪ್ರಸೀದ ಮೇ।।(ದೇವತೆಗಳ ಒಡತಿಯಾದ ತುಳಸಿಯೇ ವಿಷ್ಣು ಪತ್ನಿಯಾದ ನೀನು ನನ್ನ ಮೇಲೆ ಪ್ರಸನ್ನಳಾಗು. ಕ್ಷೀರಸಾಗರವನ್ನು ಮಥಿಸಿದಾಗ ಉದಿಸಿದ ನಿನಗೆ ನನ್ನ ನಮನಗಳು)ಎಂದು ಪ್ರಾಥಿ೯ಸಿ ತುಲಸ್ಯಮೃತ ಜನ್ಮಾಸಿ ಸದಾ ತ್ವಂ ಕೇಶವಪ್ರಿಯೇ। ಕೇಶವಾಥ೯೦ ವಿಚಿನುವೇ ವರದಾ ಭವ ಸುವ್ರತೇ।।(ತುಳಸಿಯೇ ನೀನು ಅಮೃತದಿಂದ ಉದಿಸಿರುವೆ. ಕೇಶವನಿಗೆ ಸದಾ ಪ್ರೀತಿಪಾತ್ರಳಾಗಿರುವೆ.. ಆದ್ದರಿಂದ ಆ ಕೇಶವ ರೂಪೀ ಪರಮಾತ್ಮನ ಪೂಜೆಗಾಗಿ ನಿನ್ನಕೊಯ್ಯುತಿರುವೆ ನನ್ನ ಮೇಲೆ ವರದಾಯಕಳಾಗು) ಎನ್ನುತ್ತಾಉಗುರ ತಾಗಿಸದೇ ಕೊಯ್ಯಬೇಕು.(ಪ್ರಮಾಣ ವಾಕ್ಯ)ನಖ ಸ್ಪಶೇ೯ನ ರಹಿತಂ ಚಿನುಯಾಚ್ಛುಚಿನಾ ಸ್ವಯಂ। ಇದೇರೀತಿ ದೂವಾ೯ದಿ ಸಂಗ್ರಹ ಮಾಡಿಕೊಳ್ಳಬೇಕು. ತುಳಸಿಕೊಯ್ಯುವ ಬಗ್ಗೆ ಇರುವ ಗೊಂದಲ ವಿಮಶೆ೯:-ಭಾನುವಾರೇ ಬೃಗೌ ಭೌಮೇ ವ್ಯತೀಪಾತೇ ಯುಗಾದಿಷು। ನಾಹರೇತ್ತುಲಸೀಪತ್ರಂ ಮಧ್ಯಾಹ್ನೋಪರಿ ವೈಧೃತೌ।। ಸಂಕ್ರಾಂತೇ ಪಕ್ಷಯೋರಂತೇ ದ್ವಾದಶ್ಯಾಂ ನಿಶಿ ಸಂಧ್ಯಯೋಃ। ತುಲಸೀಂ ಯೇ ವಿಚಿನ್ವಂತಿ ತೇ ವೈ ಬ್ರಹ್ಮಹಣಾ ಸ್ಮೃತಾಃ।।(ಭಾನುವಾರ,ಶುಕ್ರವಾರ,ಮಂಗಳವಾರ,ವ್ಯತೀಪಾತ ಯೋಗವಿರುವ ದಿನ ,ನಾಲ್ಕು ಯುಗಾದಿಗಳಲ್ಲಿ ತುಲಸಿಯನ್ನು ಕೊಯ್ಯಬಾರದು. ಮಧ್ಯಾಹ್ನಾನಂತರ ವೈಧೃತಿ ಯೋಗವಿರುವ ದಿನ ಸಂಕ್ರಂತಿ ಪಕ್ಷಗಳೆರಡರ ಕೊನೇ ದಿನ ದ್ವಾದಶೀ ರಾತ್ರಿ ಮಧ್ಯಾಹ್ನ ಹಾಗೂ ಸಾಯಂ ಸಂಧ್ಯಾ ಕಾಲಗಳಲ್ಲಿ ತುಲಸಿಯನ್ನು ಕೊಯ್ಯುವುದು ನಿಷಿದ್ದ. ಈ ಕಾಲದಲ್ಲಿ ಯಾರು ತುಲಸೀ ತೆಗೆಯುತ್ತಾರೋ ಅವರಿಗೆ ಬ್ರಹ್ಮಹತ್ಯಾ ದೋಷವು ಬರುತ್ತದೆ) ಅಪವಾದ ವಾಕ್ಯ.ನಿಷಿದ್ಧ ದಿವಸೇ ವಾsಪಿ ಚಾಮಾವಾಸ್ಯಾಹನಿ ದ್ವಿಜಾಃ। ತುಲಸ್ಯಾಹರಣಂ ಶಸ್ತಂ ಮಮಾಚಾ೯ಯಾಂತು ಶಾಂಡಿಲ।। ದೇವಾಥೇ೯ತುಲಸೀ ಛೇದೇ ಹೋಮಾಥೇ೯ಸಮಿಧಸ್ತಥಾ। ಇಂದುಕ್ಷಯೇ ನ ದುಷ್ಯೇತ ಗವಾಥೇ೯ತು ತೃಣಸ್ಯ ಚ।(ಇತಿ ಪಾದ್ಮೇ)(ಹಿಂದೆ ನಿಷೇಧಿಸಿಹ ದಿನಗಳಲ್ಲಿಪರಮಾತ್ಮನಿಗಾಗಿ ತುಲಸೀ,ಹೋಮಕ್ಕಾಗಿ ಸಮಿತ್ತು ಹಸುಗಳಿಗಾಗಿ ಹುಲ್ಲು ಕೊಯ್ಯುವುದು ದೋಷಕಾರಣವಾಗಲಾರದು) ಸಂಕ್ರಾಂತ್ಯಾದಿ ನಿಷೇಧಸ್ತು ಪರೇಷಾಂ ಪರಿಕೀತಿ೯ತಃ। ಕ್ವಚಿನ್ನ ತುಲಸೀಂ ಛಿಂದ್ಯಾತ್ದ್ವಾದಶ್ಯಾಮೇವ ವೈಷ್ಣವಃ।।(ಗಾರುಡ) ಅನ್ಯೇ ವಿಧಿ ನಿಷೇಧಾಸ್ತು ಅನ್ಯಯೋರೇವ ಕೇವಲಂ ವೈಷ್ಣವೈಸ್ತು ಸದಾ ಗ್ರಾಹ್ಯಾ ತುಲಸೀ ದ್ವಾದಶೀಂ ವಿನಾ।।(ಹಿಂದೆ ಹೇಳಿದ ನಿಷಿದ್ಧ ದಿನಗಳು ಅಮಾವಾಸ್ಯ ಹುಣ್ಣಿಮೆನಿತ್ಯ ಪೂಜಾ ವಿಧಿಯುಳ್ಳ ವೈಷ್ಣವರುತುಲಸಿಕೊಯ್ದರೂ ದೋಷವಿಲ್ಲ. ಆದರೆ ದ್ವಾದಶೀ ದಿನ ಯಾವುದೇ ಕಾರಣಕ್ಕೂ ತುಲಸಿ ಕೊಯ್ಯಬಾರದು. ಉಳಿದ ವಿಧಿ ನಿಷೇದಾದಿಗಳು ಇತರರಿಗೇ ಹೊರತು ನಿತ್ಯ ಶಾಲಗ್ರಾಮಾಚ೯ನೆ ಮಾಡುವವರಿಗಲ್ಲ)
********

ಬಾಡಿ ಹೋದ ತುಳಸಿಯನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ಓದಿ

ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ.

ಆ ನಂತರ ಗಿಡ ಬಾಡಿ ಹೋಗುತ್ತದೆ. ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು.

ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು. ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ.

ದ್ವಾದಶಿಯಂತೂ ಸರ್ವಥಾ ತೆಗೆಯಬಾರದು. ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು.

ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ.

ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.

(ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.)

ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.

ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು.

ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು.

ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು.

ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು.

ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು.

ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು.

ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು.

ದೇವರಿಗೆ ಅತ್ಯಂತ ಪ್ರಿಯ. ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.

ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ.

ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು.

ದೇವರಿಗೆ ಅತ್ಯಂತ ಪ್ರಿಯ. ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.

"ಯದ್ಯೇಕಂ ತುಲಸೀಕಾಷ್ಠಂ ಮಧ್ಯೇ ಕಾಷ್ಠಶತಸ್ಯ ಚ ದಾಹಕಾಲೇ ಭವೇನ್ಮುಕ್ತಿಃ ಪಾಪಕೋಟಿಯುತಸ್ಯ ಚ"

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.

ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು.
ಯಾವ ಕಾರಣಕ್ಕೂ ಬಿಸಾಡಬಾರದು.

**********

ತುಳಸೀಕಟ್ಟೆಯಿದ್ದ ಮನೆಯ ಬಳಿ ದುಷ್ಟಶಕ್ತಿಗಳು ಬರಲಾರವು, ಮಾಟಮಂತ್ರಗಳು ಫಲಿಸಲಾರವು ಎಂಬುದು ಧಾರ್ಮಿಕ ನಂಬುಗೆಯಾದರೆ ,
ಸೊಳ್ಳೆಗಳ ಸಂತತಿ ತುಳಸಿಯ ಸುವಾಸನೆಗೆ ನಾಶ ಹೊಂದುತ್ತವೆ ಎಂಬುದು ವೈಜ್ಞಾನಿಕವಾಗಿ ಪ್ರಮಾಣೀಕರಿಸಲ್ಪಟ್ಟಿದೆ .

ಶ್ರೀದೇವರ ನೈವೇದ್ಯಕ್ಕೆ ತುಳಸಿದಳ ಸೇರಿಸುವುದು ತುಳಸಿಯ ಪಾವಿತ್ರ್ಯಕ್ಕೆ ಸಾಕ್ಷಿ ಎಂಬುದು ಧಾರ್ಮಿಕತೆಯಾದರೆ , ತುಳಸೀದಳ ಸೇರಿಸಿದ ಆಹಾರದಲ್ಲಿ ರೋಗಾಣುಗಳ ಪ್ರವೇಶವಾಗಲಾರದು  ಎಂಬುದು ವೈಜ್ಞಾನಿಕವಾದ ಸಂಶೋಧನೆಗಳಿಂದ ಧೃಢಪಡಿಸಲ್ಪಟ್ಟ ವಿಚಾರ .

ಕಾರ್ತಿಕ ಮಾಸದಲ್ಲಿ ಪ್ರತೀದಿನ ತುಳಸಿಯನ್ನು ಪೂಜಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪಗಳು ಪರಿಹಾರವಾಗುತ್ತದೆ .
**********

from: ವಿಜಯಲಕ್ಷ್ಮೀ ಬೆಂಗಳೂರು

ಕಾರ್ತಿಕ ಮಾಸದಲ್ಲಿ ತುಳಸಿ ಮದುವೆ ಪ್ರಸಿದ್ಧ ಹಬ್ಬ. ಮಠ-ಮಂದಿರಗಳಲ್ಲಿ ಸಾಲು, ಸಾಲು ದೀಪಗಳ ಸಂಭ್ರಮ. ಮನೆ, ಮನೆಯೂ ಹಣತೆಯ ಸಾಲುಗಳಿಂದ ಕಂಗೊಳಿಸುತ್ತದೆ. ಪ್ರತಿ ಹಿಂದು ಧರ್ವಿುಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ಪವಿತ್ರ ಗಿಡ ತುಳಸಿ. ಸಾವಿರಾರು ವರ್ಷಗಳಿಂದ ತುಳಸಿಯನ್ನು ನಾವು ಪೂಜಿಸುತ್ತ ಬಂದಿದ್ದೇವೆ. ಔಷಧ ಗುಣವುಳ್ಳ ಪವಿತ್ರ ತುಳಸಿಯನ್ನು ಪೂಜಿಸುವ ತುಳಸಿ ಹಬ್ಬ ತುಳಸಿ ಮದುವೆ. ಉತ್ಥಾನ ದ್ವಾದಶಿಯಂದು ಮದುವೆ ಎಂದು ಕರೆಯುವ ಪೂಜೆ ಜರುಗುವುದು ವಿಶೇಷ.

ಆಷಾಢ ಮಾಸದ ಪ್ರಥಮ ಏಕಾದಶಿಯಂದು ಆರಂಭವಾಗುವ ಚಾತುರ್ಮಾಸ ವ್ರತ ಈ ಉತ್ಥಾನ ದ್ವಾದಶಿಯಂದು ಪರಿಸಮಾಪ್ತಿಗೊಳ್ಳುತ್ತದೆ. ಈ ದಿನ ಕಳೆದ ನಾಲ್ಕು ತಿಂಗಳ ಕಾಲ ಯೋಗನಿದ್ರೆಯಲ್ಲಿರುವ ವಿಷ್ಣುವನ್ನು ಎಬ್ಬಿಸಿ, ತುಳಸಿಯೊಂದಿಗೆ ವಿವಾಹ ಮಾಡಲಾಗುತ್ತದೆ. ತುಳಸಿಗೂ ಭವ್ಯ ಪೌರಾಣಿಕ ಹಿನ್ನೆಲೆಯಿದೆ. ಸಮುದ್ರಮಥನ ಸಮಯದಲ್ಲಿ ಬಂದು ಅಮೃತ ಕಳಸವನ್ನು ಮಹಾವಿಷ್ಣು ಪಡೆದುಕೊಳ್ಳುವಾಗ ಆತನ ನೇತ್ರದಿಂದ ಆನಂದಬಾಷ್ಪ ಉಕ್ಕಿ ಬಂತು. ಅದರ ಒಂದು ಹನಿ ಕಳಸದಲ್ಲಿ ಬಿದ್ದಾಗ ತುಳಸಿ ಗಿಡವಾಯಿತು. ಅಮೃತದಿಂದ ಹುಟ್ಟಿದ ತುಳಸಿಯನ್ನು ಯಾವ ವಿಧದಿಂದ ಪ್ರಯೋಗಿಸಿದರೂ ಸಮಸ್ತ ಮಾನವಕೋಟಿಗೆ ಅಮೃತಮಯ.

ತುಳಸಿಗೆ ವೇದಗಳ ರೂಪ ನೀಡಲಾಗಿದೆ. ಋಗ್ವೇದವೇ ತುಳಸಿಯ ಶರೀರ, ಯಜುರ್ವೆದವೇ ಅವಳ ಮನಸ್ಸು, ಕಲ್ಪಗಳೇ ತುಳಸಿಯ ಹಸ್ತ, ಅಥರ್ವವೇದವೇ ತುಳಸಿಯ ಪ್ರಾಣ. ತುಳಸಿ ಹಬ್ಬದಂದು ನೆಲ್ಲಿ ಟೊಂಗೆಯನ್ನು ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ಧಾತ್ರಿ ಎಂದರೆ ಲಕ್ಷೀ ಎಂದರ್ಥ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸನ್ನಿಧಾನವಿದೆ. ಹೀಗಾಗಿ, ಶ್ರೀಹರಿಯ ಜತೆ ಲಕ್ಷ್ಮೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಟೊಂಗೆಯನ್ನು ತುಳಸಿಯ ಜತೆ ಇಟ್ಟು ತುಳಸಿಗೆ ಮದುವೆ ಮಾಡುತ್ತಾರೆ.

ಸರ್ವರೋಗ ನಿವಾರಕ
ದಿನದ ಪೂಜೆಯಲ್ಲಿಯೂ ಶ್ರೇಷ್ಠವಾದದ್ದು ತುಳಸಿ ಪೂಜೆ. ಸಂಸ್ಕೃತದಲ್ಲಿ ತುಳಸಿ, ಸುಲಭಾ, ಸುರನಾ, ಬಹುಮಂಜರಿ, ಶೂಲಘೀ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯಾ, ದಿವ್ಯಾ, ಭಾರತೀ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ. ತುಳಸಿಯು ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುತ್ತದೆ. ಸುಗಂಧದ್ರವ್ಯ ತುಳಸಿಯಲ್ಲಿ ಏಳು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ಶ್ರೀ ತುಳಸಿ, ಕೃಷ್ಣ ತುಳಸಿ. ಇದರ ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ ಎನ್ನುವುದು ತುಳಸಿಯ ವಿಶೇಷ. ನಮಗೆ ಸಕಲ ವಿಧದ ಉಪಯೋಗವನ್ನು ಕೊಡುವ ಸಸ್ಯವೊಂದನ್ನು ದೈವೀ ಭಾವದಿಂದ ಪೂಜಿಸುವ ನಿಟ್ಟಿನಲ್ಲಿ ತುಳಸಿ ಕಾರ್ತಿಕ ಗಮನ ಸೆಳೆಯುತ್ತದೆ. ಜ್ಞಾನದ ಬೆಳಕಿನಲ್ಲಿ ಉತ್ತಮ ಚಿಂತನೆಗಳು ಪುನರುತ್ಥಾನಗೊಳ್ಳಲು ಉತ್ಥಾನ ದ್ವಾದಶಿ ಪ್ರೇರಕವಾಗಬೇಕಿದೆ.

ಸಂಜೀವಿನಿ
ತುಳಸಿಯ ವಿಶಿಷ್ಟ ಸುವಾ ಸನೆಯು ಕ್ರಿಮಿಕೀಟಗಳನ್ನು ದೂರವಿಡುತ್ತದೆ. ಶೀತ, ನೆಗಡಿ, ಕೆಮ್ಮು ಮೊದಲಾದ ಕಾಯಿಲೆಗಳು ತುಳಸಿಯ ಎಲೆಯಿಂದ ವಾಸಿಯಾಗುತ್ತವೆ. ಇದರಲ್ಲಿ ವಿಷಾಣುಗಳನ್ನು ನಾಶಪಡಿಸುವ ಶಕ್ತಿಯಿದೆ. ಬೃಂದಾವನದಲ್ಲಿ ಉದುರಿರುವ ತುಳಸಿ ಎಲೆಗಳಿಂದ ಮಣ್ಣುಗೂಡಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿ. ತುಳಸಿ ಭಾರತೀಯರ ಪಾಲಿಗೆ ಸಂಜೀವಿನಿ. ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯ್ಕೆ ಸಾಕ್ಷಿ. ದಾನ ಕೊಡುವ ಸಂದರ್ಭದಲ್ಲಿಯೂ ತುಳಸಿದಳ ಹಾಕಬೇಕು ಎಂಬುದು ಸಂಪ್ರದಾಯ. ಹೀಗೆ ತುಳಸಿಯ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ನಿತ್ರ ಪವಿತ್ರವೇ. ಇಂಥ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಗೆ ಉತ್ಥಾನ ದ್ವಾದಶಿಯಂದು ಪೂಜೆ ಸಲ್ಲಿಸಿ ಧನ್ಯರಾಗೋಣ.
**********


ಶ್ರೀ ತುಳಸಿ ಮಹಿಮೆಯ ಹಾಡು
ರಾಗ: ಭೂಪಾಳಿ

ಶ್ರೀ ತುಳಸಿಯಾ ಸೇವಿಸಿ ||ಪ||
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು ಮಾಡುವಳು
ಯಾತಕನುಮಾನವಯ್ಯಾ ||ಅ||ಪ||

ಸುಧೆಗಡಲ ಮಧಿಸುವ ಸಮಯದಲಿ ವೈದ್ಯನಾಗಿ
ಪದುಮನಾಭನು ತಾನು ಉದುಭವಿಸಿ ಬರಲ೦ದು
ಉದುರಿದವು ಕಣ್ಣಿಂದ ಉದಕ ಉತ್ಸಾಹದಿಂದಲದೆ
ತುಳಸಿನಾಮವಾಗೇ ||

ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ
ತ್ಪದವಿಗೆ ಸಿದ್ದವೆಂದು ಮುದದಿಂದ ತಿಳಿದು
ವೃಂದಾವನ ರಚಿಸಿದರಯ್ಯಾ ||೧||

ರಾಗ: ಮಲಯಮಾರುತ

ಮೂಲದಲಿ ಸರ್ವತೀರ್ಥಗಳುಂಟು ತನ್ಮಧ್ಯೆ
ಕಾಲ ಮೀರದೆ ಸರ್ವನದನದಿಗಳಮರಗಣ
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು
ವಾಲಯವಾಗಿಪ್ಪುದು ||

ಮೂರ್ಲೋಕಗಳ ಧರ್ಮವ್ರತಕೆ ಮಿಗಿಲೆನಿಸುವುದು
ನೀಲೆಮೇಘಶ್ಯಾಮ ಗರ್ಪಿಸಿದ ತುಳಸಿ ನಿ
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ
ಕಾಲನಾಳಿಗೆ ಶೂಲನೋ ||೨||

ರಾಗ: ರಂಜಿನಿ

ಉದಯದೊಳಗೆದ್ದು ನೀರೆರೆದು ಮಜ್ಜನಗೈದು
ತುದಿಬೆರಳಿನಿಂದ ಮೃತ್ತಿಕೆ ಫಣೆಯೊಳಿಟ್ಟು
ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ
ತದನಂತರದಲಿ ಭಜನೇ ||

ವದನದೊಳುಗೈಯೆ ಧರೆಯಮೇಲಿದ್ದ ಸರ್ವ
ನದನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ
ಒದಗುವುದು ಹಿಂದಣಾನಂತ ಜನ್ಮಗಳಘವ
ತುದಿಮೊದಲು ದಹಿಪುದಯ್ಯಾ ||೩||

ರಾಗ: ಬಿಲಹರಿ

ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ
ಆವವನ ಮನೆಯಲ್ಲಿ ಹರಿದಾಸರಾ ಕೂಟ
ಆವವನ ಭುಜದಲ್ಲಿ ತಪ್ತ ಮುದ್ರಾಂಕಿತವು
ಪಾವಮಾನಿಯ ಮತದೊಳು

ಆವವನು ಕಾಲತ್ರಯ ಕಳೆವನಾವಲ್ಲಿ
ಶ್ರೀ ವಾಸುದೇವ ಮುನಿದೇವಾದಿ ಗಣಸಹಿತ
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದೆಲೆ
ಭಾವಿಸಿರಿ ಭಾವಜ್ಜ್ನರೂ ||೪||

ರಾಗ: ಅಠ್ಠಾಣ:

ಕಂಡರೆ ದುರಿತಕ್ಕೆ ಕೆಂಡವನು ಬೀರುವುದು
ಕೊಂಡಾಡಿದರೆ ಪುಣ್ಯವಪರಿಮಿತ ಉಂಟು ಮೈ
ದಿಂಡುಗೆಡಹಿದರೆ ಪುನರಪಿಜನನವಿಲ್ಲ ಸಲೆ
ದಂಡವಿಟ್ಟವ ಮುಕ್ತನೋ ||

ಚಂಡಾಲಕೇರಿಯೊಳು ಇರಲು ಹೀನಯವಲ್ಲ
ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು
ತಂಡತಂಡದ ಕುಲಕೆ ಅವರವರ ಯೋಗ್ಯಫಲ
ಕಂಡವರಿಗುಂಟೆ ಅಯ್ಯಾ ||೫||

ರಾಗ: ಮೋಹನ:

ಚಿತ್ತಶುದ್ದನ ಆಗಿ ಮುಂಜಾನೆಯೊಳು ತುಳಸಿ
ಸ್ತೋತ್ರವನು ಮಾಡುತ್ತ ದಿವ್ಯವಾಗಿಹ ತ್ರಿದಳ
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ
ವಿತ್ತಾದಿಯಲಿತಾರದೇ ||

ಮತ್ತೆ ವಸ್ತ್ರದಿ ಹಸ್ತಶಿಲೆ ಆರ್ಕಏರಂಡ
ಪತ್ರದಲಿ ತಾರದೆಲೆ ಭೂಮಿಯೊಳಗಿಡದೆ ಪೂ
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು
ಹೊತ್ತು ಮೀರಿಸಲಾಗದು ||೬||

ರಾಗ: ಷಣ್ಮುಖಪ್ರಿಯ:

ಕವಿ ಮಂಗಳವಾರ ವೈಧೃತಿ ವೃತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಟ ಉಪರಾಗ ಪಿತೃಶ್ರಾದ್ದ
ಇವುಗಳಲಿ ತೆಗೆಯದಿರೀ ||

ನವವಸನಪೊದ್ದು ಊಟವ ಮಾಡಿ ತಾಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
ದಿವಸ ದಿವಸಗೊಳೊಳಯ್ಯಾ ||೭||

ರಾಗ: ಸಿಂಧುಭೈರವಿ

ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರೂ ತ್ರಿವಾರದಲಿ ತೊಳೆದು
ತೊಳೆದೇರಿಸಲಿ ಬಹುದೂ ||

ತುಳಸಿ ಒಣಗಿದ್ದರೂ ಲೇಶದೋಶಗಳಲ್ಲ
ತುಳಸಿ ವಿರಹಿತ ಪೂಜೆಯದು ಸಲ್ಲದೋ
ತುಳಸೀ ತುಳಸೀ ಎಂದು ಸ್ಮರಣೆಯಾದರೂ ಮಾಡಿ
ಜಲಜಾಕ್ಷನರ್ಚಿಸಿರಯ್ಯಾ ||೮||

ರಾಗ: ಕಾನಡ

ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳೆಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರೂ ವ್ಯರ್ಥ
ತುಳಸಿ ಬಲು ಪ್ರಾಧಾನ್ಯವೋ ||

ತುಳಸಿ ಮಿಶ್ರಿತವಾದ ನೈವೇದ್ಯಗತಿ ಸಾಧ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವೈಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾಗಾಣೆನಯ್ಯಾ ||೯||

ರಾಗ: ಸುರುಟಿ

ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಶ ಶಶಿಬಿಂದು ರುಕುಮಾಂಗದನು
ಇವರೆ ಮೊದಲಾದವರು ಭಕುತಿ ಪೂರ್ವಕದಿಂದ
ವಿವರವನು ತಿಳಿದರ್ಚಿಸೀ ||

ತವಕದಿಂ ತಂತಮ್ಮ ಘನಪದವನೈದಿದರು
ಭುವನದೊಳಗುಳ್ಳ ನಿರ್ಮಲಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ
ಭವ ದೂರರಾದರಯ್ಯಾ ||೧೦||

ರಾಗ: ಮಧ್ಯಮಾವತಿ:

ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ
ಮದಗರ್ವ ಪರಿಹಾರವೋ ||

ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ
ಪದೆಪದೆಗೆ ಸಿರಿ ವಿಜಯ ವಿಠ್ಠಲಗೆ ಪ್ರಿಯಳಾದ
ಮದನತೇಜಳ ಭಜಿಸಿರಯ್ಯಾ ||೧೧||


ಶ್ರೀ ತುಳಸಿಯಾ ಸೇವಿಸಿ ||ಪ||
************


ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?
ಪ್ರಶ್ನೆ. ಬಾಡಿ ಹೋದ ತುಳಸಿಗಿಡವನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ತಿಳಿಸಿ ?


ಉತ್ತರ: ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ ಹೋಗುತ್ತದೆ.


ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.
ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು.
ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು. (ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.)
ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು.
ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು. ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು. ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು.
ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.
ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.
ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ದೇವರಿಗೆ ಅತ್ಯಂತ ಪ್ರಿಯ.
ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.
ಯದ್ಯೇಕಂ ತುಲಸೀಕಾಷ್ಠಂ


ಮಧ್ಯೇ ಕಾಷ್ಠಶತಸ್ಯ ಚ 

ದಾಹಕಾಲೇ ಭವೇನ್ಮುಕ್ತಿಃ 

ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.
ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ಯಾವ ಕಾರಣಕ್ಕೂ ಬಿಸಾಡಬಾರದು.
**********
ತಂ ನಾರಸಿಂಹಂ ನಮಾಮಿ ! 

ತುಳಸೀ ಮಾಹಾತ್ಮ್ಯಂ :- 
(ತುಳಸೀದೇವಿಸ್ತೋತ್ರಂ)

ಪುಷ್ಕರಾದ್ಯಾನಿ ತೀರ್ಥಾನಿ
ಗಂಗಾದ್ಯಾಃ ಸರಿದಸ್ತಥಾ !
ವಾಸುದೇವಾದಯೋ ದೇವಾಃ
ವಸಂತಿ ತುಳಸೀವನೇ !! ೨ !!

ಅರ್ಥ :- ಪುಷ್ಕರತೀರ್ಥವೇ ಮೊದಲಾದ ಸಕಲತೀರ್ಥಗಳು, ಹಾಗೂ ಗಂಗಾನದಿಯೇ ಮೊದಲಾದ ಸಕಲನದಿಗಳು  ಹಾಗೂ ನಾರಾಯಣದೇವರು ಅವನ ಜೊತೆಗೆ ಸಕಲದೇವತೆಗಳು ತುಳಸೀವನದಲ್ಲಿ (ತುಳಸೀಗಿಡದಲ್ಲಿ) ವಾಸವಾಗಿರುತ್ತಾರೆ. ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ.

ತುಳಸೀಗಿಡದಲ್ಲಿ ಎಲ್ಲಾ ದೇವತೆಗಳ, ಎಲ್ಲಾ ನದಿಗಳ, ಎಲ್ಲಾ ತೀರ್ಥಗಳ ವಿಶೇಷ ಸನ್ನಿಧಾನ ಇರುತ್ತದೆ. ಆದ್ದರಿಂದಲೇ ತುಳಸಿದೇವಿಗೆ ಅಪಾರವಾದ ಮಹತ್ವ ಕೊಟ್ಟಿದ್ದಾರೆ. 

ಎಲ್ಲರಿಗೂ ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲಾ ನದಿ ತೀರ್ಥಸ್ನಾಗಳ ಪುಣ್ಯವನ್ನು ಕರುಣಿಸಿ ಅನುಗ್ರಹಿಸಲಿ.

ಎಲ್ಲರಿಗೂ ಬಲಿಪ್ರತಿಪದಾ ಹಬ್ಬದ ಹಾರ್ದಿಕ ಶುಭಾಷಯಗಳು

ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
*******

ತಂ ನಾರಸಿಂಹಂ ನಮಾಮಿ ! 

ತುಳಸೀಮಾಹಾತ್ಮಂ :- 
(ತುಳಸಿದೇವಿಸ್ತೋತ್ರಂ)

ತುಳಸೀಕಾನನಂ ಯತ್ರ
ಯತ್ರ ಪದ್ಮವನಾನಿ ಚ ! 
ವಸಂತಿ ವೈಷ್ಣವಾ ಯತ್ರ
ತತ್ರ ಸನ್ನಿಹಿತೋ ಹರಿಃ !! ೩ !!

ಅರ್ಥ :- ಎಲ್ಲಿ ತುಳಸೀವನ (ತುಳಸೀಗಿಡ) ಇರುತ್ತೋ, ಎಲ್ಲಿ ಪದ್ಮವನ ಇರುತ್ತವೋ, ಎಲ್ಲಿ ವೈಷ್ಣವರು ವಾಸವಾಗಿರ್ತಾರೋ ಅಲ್ಲೆಲ್ಲಕಡೆಗೂ ದೇವರು ವಿಶೇಷವಾಗಿ ಸನ್ನಿಹಿತನಾಗಿರ್ತಾನೆ. 

ತುಳಸಿದೇವಿ ಅವಳ ಅಂತರ್ಗತ ದಾಮೋದರನು ಎಲ್ಲರಿಗೂ ಜ್ಞಾನವನ್ನು ನೀಡಲಿ.

ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
********


ತಂ ನಾರಸಿಂಹಂ ನಮಾಮಿ ! 

ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)

ಯನ್ಮೂಲೇ ಸರ್ವತೀರ್ಥಾನಿ
ಯನ್ಮಧ್ಯೇ ಸರ್ವದೇವತಾಃ ! 
ಯದಗ್ರೇ ಸರ್ವವೇದಾಶ್ಚ
ತುಲಸಿ ತ್ವಾಂ ನಮಾಮ್ಯಹಂ !! ೪ !!

ಅರ್ಥ :- ಯಾವ ಗಿಡದ ಮೂಲದಲ್ಲಿ (ಬೇರು ಇರುವ ಸ್ಥಳದಲ್ಲಿ) ಸಕಲತೀರ್ಥಗಳು ಇವೆಯೋ, ಯಾವ ಗಿಡದ ಮಧ್ಯಭಾಗದಲ್ಲಿ ಸಕಲದೇವತೆಗಳು ವಾಸವಾಗಿದ್ದಾರೋ, ಯಾವ ಗಿಡದ ಮೇಲಿನ ಭಾಗದಲ್ಲಿ ಸಕಲವೇದಗಳು ಇವೆಯೋ ಅಂಥ ತುಳಸಿದೇವಿಯೇ ನಿನಗೆ ನಾನು ನಮಸ್ಕಾರ ಮಾಡುತ್ತೇನೆ ಅಂತ ಪ್ರಾರ್ಥನೆ.

ತುಳಸೀಗಿಡದ ಕೆಳಗಿನ ಭಾಗದಲ್ಲಿ ಸಕಲತೀರ್ಥಗಳು ಸನ್ನಿಹಿತವಾಗಿವೆ, ಮಧ್ಯಭಾಗದಲ್ಲಿ ಎಲ್ಲಾ ದೇವತೆಗಳು ಸನ್ನಿಹಿತರಾಗಿದ್ದಾರೆ, ಮೇಲಿನ ಭಾಗದಲ್ಲಿ ಎಲ್ಲಾ ವೇದಗಳು ಸನ್ನಿಹಿತವಾಗಿವೆ ಇಷ್ಟೆಲ್ಲಾ ಸನ್ನಿಧಾನದಿಂದ ಕೂಡಿದ್ದು ತುಳಸೀಗಿಡ.

ತುಳಸಿದೇವಿಯು ಅಂತರ್ಗತ ದಾಮೋದರನು ನಮ್ಮನ್ನು ಪವಿತ್ರರನ್ನಾಗಿ ಮಾಡಲಿ.

ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
*******
ತಂ ನಾರಸಿಂಹಂ ನಮಾಮಿ !

ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ತುಳಸ್ಯಮೃತಜನ್ಮಾsಸಿ 
ಸದಾ ತ್ವಂ ಕೇಶವಪ್ರಿಯೇ ! 
ಕೇಶವಾರ್ಥೇ ಚಿನೋಮಿ ತ್ವಾಂ
ವರದಾ ಭವ ಶೋಭನೇ !! ೭ !!

ಅರ್ಥ :- ಹೇ ತುಳಸಿದೇವಿ ನೀನು ಜನ್ಮ ಮರಣ ಇಲ್ಲದೇ ಯಾವಾಗಲೂ ಇರುವವಳು. ಯಾವಾಗಲೂ ದೇವರಿಗೆ ಪ್ರಿಯಳಾದವಳು. ಅಂಥ ದೇವರಿಗೆ ಪ್ರಿಯಳಾದ ನಿನ್ನನ್ನು ದೇವರ ಪೂಜೆಗೋಸ್ಕರ ಉಪಯೋಗಿಸುತ್ತೇವೆ ನಮಗೆ ಮಂಗಳವನ್ನುಂಟು ಮಾಡು ಅಂತ ಪ್ರಾರ್ಥನೆ.

ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.


ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)

ಮೋಕ್ಷೈಕಹೇತೋರ್ಧರಣೀಧರಸ್ಯ
ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ ! 
ಆರಾಧನಾರ್ಥಂ ಪುರುಷೋತ್ತಮಸ್ಯ 
ಛಿಂದೇ ದಲಂ ತೇ ತುಳಸಿ ಕ್ಷಮಸ್ವ !! ೮ !!

ಅರ್ಥ :- ಹೇ ತುಳಸಿದೇವಿ  ಮೋಕ್ಷವನ್ನು ಕೊಡಲಿಕ್ಕೆ ಮುಖ್ಯ ಕಾರಣನಾದ, ಭೂಮಿಯನ್ನು ಧರಿಸಿದ, ಎಲ್ಲಾ ಗುರುಗಳಿಗೂ ಪ್ರಿಯನಾದ, ಆ ಪುರುಷೋತ್ತಮಸ್ವರೂಪಿಯಾದ ವಿಷ್ಣುವಿನ ಆರಾಧನೆಗಾಗಿ (ಪೂಜೆಗಾಗಿ) ನಿನ್ನನ್ನು (ನಿನ್ನ ದಳವನ್ನು) ಛೇದಿಸುತ್ತೇನೆ (ಬಿಡಿಸುತ್ತೇನೆ) ಅಂತ ಪ್ರಾರ್ಥನೆ ಮಾಡಿ ತುಳಸೀದಳಗಳನ್ನು ಬಿಡಿಸಬೇಕು.

ತುಳಸಿದೇವಿಯ ಅಂತರ್ಗತ ದಾಮೋದರನು ಮೋಕ್ಷವನ್ನು ಕರುಣಿಸಲಿ.

ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ

************

ತಂ ನಾರಸಿಂಹಂ ನಮಾಮಿ !

ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ತುಳಸ್ಯಮೃತಜನ್ಮಾsಸಿ 
ಸದಾ ತ್ವಂ ಕೇಶವಪ್ರಿಯೇ ! 
ಕೇಶವಾರ್ಥೇ ಚಿನೋಮಿ ತ್ವಾಂ
ವರದಾ ಭವ ಶೋಭನೇ !! ೭ !!

ಅರ್ಥ :- ಹೇ ತುಳಸಿದೇವಿ ನೀನು ಜನ್ಮ ಮರಣ ಇಲ್ಲದೇ ಯಾವಾಗಲೂ ಇರುವವಳು. ಯಾವಾಗಲೂ ದೇವರಿಗೆ ಪ್ರಿಯಳಾದವಳು. ಅಂಥ ದೇವರಿಗೆ ಪ್ರಿಯಳಾದ ನಿನ್ನನ್ನು ದೇವರ ಪೂಜೆಗೋಸ್ಕರ ಉಪಯೋಗಿಸುತ್ತೇವೆ ನಮಗೆ ಮಂಗಳವನ್ನುಂಟು ಮಾಡು ಅಂತ ಪ್ರಾರ್ಥನೆ.

ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.


ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)

ಮೋಕ್ಷೈಕಹೇತೋರ್ಧರಣೀಧರಸ್ಯ
ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ ! 
ಆರಾಧನಾರ್ಥಂ ಪುರುಷೋತ್ತಮಸ್ಯ 
ಛಿಂದೇ ದಲಂ ತೇ ತುಳಸಿ ಕ್ಷಮಸ್ವ !! ೮ !!

ಅರ್ಥ :- ಹೇ ತುಳಸಿದೇವಿ  ಮೋಕ್ಷವನ್ನು ಕೊಡಲಿಕ್ಕೆ ಮುಖ್ಯ ಕಾರಣನಾದ, ಭೂಮಿಯನ್ನು ಧರಿಸಿದ, ಎಲ್ಲಾ ಗುರುಗಳಿಗೂ ಪ್ರಿಯನಾದ, ಆ ಪುರುಷೋತ್ತಮಸ್ವರೂಪಿಯಾದ ವಿಷ್ಣುವಿನ ಆರಾಧನೆಗಾಗಿ (ಪೂಜೆಗಾಗಿ) ನಿನ್ನನ್ನು (ನಿನ್ನ ದಳವನ್ನು) ಛೇದಿಸುತ್ತೇನೆ (ಬಿಡಿಸುತ್ತೇನೆ) ಅಂತ ಪ್ರಾರ್ಥನೆ ಮಾಡಿ ತುಳಸೀದಳಗಳನ್ನು ಬಿಡಿಸಬೇಕು.

ತುಳಸಿದೇವಿಯ ಅಂತರ್ಗತ ದಾಮೋದರನು ಮೋಕ್ಷವನ್ನು ಕರುಣಿಸಲಿ.

ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
********


ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ಕೃಷ್ಯಾರಂಭೇ ತಥಾ ಪುಣ್ಯೇ
ವಿವಾಹೇ ಚಾರ್ಥಸಂಗ್ರಹೇ ! 
ಸರ್ವಕಾರ್ಯೇಷು ಸಿಧ್ಯರ್ಥಂ
ಪ್ರಸ್ಥಾನೇ ತುಳಸೀಂ ಸ್ಮರೇತ್ !! ೯ !!

ಅರ್ಥ :- ಕೃಷಿ ಮಾಡುವ ಆರಂಭದಲ್ಲಿ ಹಾಗೆ ಪುಣ್ಯಕರವಾದ ವಿವಾಹಮಾಡುವ ಆರಂಭದಲ್ಲಿ ಹಾಗೆ ಧನಸಂಪಾದನೆ ಮಾಡುವ ಆರಂಭದಲ್ಲಿ ಒಟ್ಟು ಎಲ್ಲಾ ಕೆಲಸಗಳು ಅನಾಯಾಸವಾಗಿ ಮುಗಿಯಬೇಕು ಅಂತಾದರೆ ಆ ಕೆಲಸಗಳ ಆರಂಭದಲ್ಲಿ ತುಳಸಿದೇವಿಯ ಸ್ಮರಣೆ ಮಾಡಿದರೆ ಸಾಕು ಆ ವ್ಯಕ್ತಿ ಎಲ್ಲಾ ಕಾರ್ಯಗಳಲ್ಲಿ ವಿಜಯಿಯಾಗುತ್ತಾನೆ. ಅಷ್ಟು ಶಕ್ತಿ ತುಳಸಿದೇವಿಯ ಸ್ಮರಣೆಗೆ ಇದೆ.

ಎಲ್ಲರಿಗೂ ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲಾ ಕಾರ್ಯಗಳಲ್ಲಿ ಜಯವನ್ನು ನೀಡಿ ಅನುಗ್ರಹಿಸಲಿ .
ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
**********

ತಂ ನಾರಸಿಂಹಂ ನಮಾಮಿ !

ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)

ಯಃ ಸ್ಮರೇತ್ ತುಳಸೀಂ ಸೀತಾಂ
ರಾಮಂ ಸೌಮಿತ್ರಿಣಾ ಸಹ ! 
ವಿನರ್ಜಿತ್ಯ ರಿಪೂನ್ ಸರ್ವಾನ್ 
ಪುನರಾಯಾತಿ ಕಾರ್ಯಕೃತ್ !! ೧೦ !!

ಅರ್ಥ :- ಲಕ್ಷ್ಮಣನಿಂದ ಕೂಡಿದ ಸೀತಾರಾಮರನ್ನು ಹಾಗೂ ತುಳಸಿದೇವಿಯನ್ನು ಯಾರು ಸ್ಮರಣೆ ಮಾಡ್ತಾರೋ ಅವರು ಜೀವನದಲ್ಲಿ ಎಲ್ಲಾ ಶತ್ರುಗಳನ್ನು ಗೆಲ್ಲುತ್ತಾರೆ. ನಿಜವಾದ ಶತ್ರುಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಆರು ವೈರಿಗಳನ್ನು ಗೆಲ್ಲುತ್ತಾರೆ. ಮತ್ತೆ ಸಂಸಾರಕ್ಕೆ ಬರೋದಿಲ್ಲ ಅಷ್ಟು ಶಕ್ತಿ ಸ್ಮರಣೆಗೆ ಇದೆ.

ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಷಡ್ವೈರಿಗಳನ್ನು ನಾಶಮಾಡಿ ಜ್ಞಾನವನ್ನು ಕರುಣಿಸಲಿ .
ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
********

ತಂ ನಾರಸಿಂಹಂ ನಮಾಮಿ ! 

ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ಯಾ ದೃಷ್ಟಾ ನಿಖಿಲಾಘಸಂಘಶಮನೀ
ಸ್ಪೃಷ್ಟಾ ವಪುಃ ಪಾವನೀ
ರೋಗಾಣಾಮಭಿವಂದಿತಾ ನಿರಸನೀ
ಸಿಕ್ತಾಂತಕತ್ರಾಸಿನೀ ! 
ಪ್ರತ್ಯಾಸತ್ತಿವಿಧಾಯಿನೀ ಭಗವತಃ
ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ 
ತಸ್ಯೈ ತುಲಸ್ಯೈ ನಮಃ !! ೧೧ !!

ಅರ್ಥ :- ಯಾರನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಪಾಪಗಳ ಸಮೂಹಗಳು ಸುಟ್ಟು ಭಸ್ಮ ಆಗ್ತಾವೋ, ಯಾರನ್ನು ಸ್ಪರ್ಶ ಮಾಡಿದರೆ ಸಾಕು ನಮ್ಮ ದೇಹ, ಮನಸ್ಸು ಪವಿತ್ರವಾಗ್ತಾವೋ, ಯಾರನ್ನು ನಮಸ್ಕಾರ ಮಾಡಿದರೆ ನಮ್ಮ ಎಲ್ಲಾ ರೋಗಗಳು (ಸಂಸಾರ ಎಂಬ ರೋಗ) ನಾಶವಾಗ್ತಾವೋ, ಅಂಥ ತುಳಸಿದೇವಿಯ ಚರಣಗಳಲ್ಲಿ ನಮ್ಮ ತಲೆಯನ್ನು ಇಟ್ಟರೆ (ನಮಸ್ಕಾರ ಮಾಡಿದರೆ) ಅವಳು (ತುಳಸಿದೇವಿಯು) ಭಗವಂತನ ಬಗ್ಗೆ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷಫಲವನ್ನು ಕೊಡುತ್ತಾಳೆ. ಕೊಡುವ ಶಕ್ತಿ ದೇವರ ಅನುಗ್ರಹದಿಂದ ಅವಳಿಗೆ ಇದೆ. ಅಂಥ ತುಳಸೀದೇವಿಗೆ ನಮಸ್ಕಾರಗಳು.

ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷವನ್ನು ದಯಪಾಲಿಸಲಿ.
ಸರ್ವೇ ಜನಾಃ ಸುಖಿನೋ ಭವಂತು ! 

ಸುಘೋಷಾಚಾರ್ಯ ಕೊರ್ಲಹಳ್ಳಿ
****************

ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ಚತುಃಕರ್ಣೇ ಮುಖೇ ಚೈಕಂ
ನಾಭಾವೇಕಂ  ತಥೈವ ಚ !
ಶಿರಸ್ಯೇಕಂ ತಥಾ ಪ್ರೋಕ್ತಂ
ತೀರ್ಥತ್ರಯಮುದಾಹೃತಂ !! ೧೩ !!

ಅರ್ಥ :- ದೇವರ  ೧೮ ತುಳಸಿ ನಿರ್ಮಾಲ್ಯಗಳನ್ನು ನಮ್ಮ ದೇಹದಲ್ಲಿ ಧರಿಸಬೇಕು. ಎಲ್ಲೆಲ್ಲಿ ಅಂದರೆ? 
ಕಿವಿಗಳಲ್ಲಿ ೪,(ಒಂದು ಕಿವಿಯಲ್ಲಿ ೨ ಮತ್ತೊಂದು ಕಿವಿಯಲ್ಲಿ ೨), ಮುಖದಲ್ಲಿ ೧, ನಾಭಿಯಲ್ಲಿ (ಹೊಕ್ಕಳಿನಲ್ಲಿ) ೧, ತಲೆಯಲ್ಲಿ ೧, ತೀರ್ಥದಲ್ಲಿ ೩ (ಒಂದೊಂದು ಸಾರಿ ತೀರ್ಥ ತಗೊಳುವಾಗ ಒಂದೊಂದು ದೇವರ ತುಳಸಿನಿರ್ಮಾಲ್ಯವನ್ನು ಸೇರಿಸಿ ತಗೊಬೇಕು.) ೧೮ ರಲ್ಲಿ ೧೦ ಆಯ್ತು ಇನ್ನೂ ೮ ನಾಳಿನ ಶ್ಲೋಕದಲ್ಲಿ. ಹೀಗೆ ತುಳಸಿನಿರ್ಮಾಲ್ಯವನ್ನು ಧರಿಸಿದರೆ ಆ ವ್ಯಕ್ತಿ ಪವಿತ್ರನಾಗುತ್ತಾನೆ.

ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಲಿ.

ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
*******************
ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ಖಾದನ್ ಮಾಂಸಂ ಪಿಬನ್ಮದ್ಯಂ
ಸಂಗಚ್ಛನ್ನಂತ್ಯಜಾದಿಭಿಃ ! 
ಸದ್ಯೋ ಭವತಿ ಪೂತಾತ್ಮಾ 
ಕರ್ಣಯೋಸ್ತುಲಸೀಂ ಧರನ್ !! ೧೨ !! 

ಅರ್ಥ :- ಕೀಳು ಜಾತಿಯವರ (ಅಸಜ್ಜನರ ದುಷ್ಟರ) ಸಂಗದಿಂದ ಮಾಂಸವನ್ನು ತಿಂದಂಥ ಪಾಪವು, ಮದ್ಯಪಾನವನ್ನು ಮಾಡಿದಂಥ ಪಾಪವು, ಅಂತ್ಯಜಾತಿಯವರ ಸಂಗ ಮಾಡಿದ ಪಾಪವು ಎಲ್ಲವೂ ನಾಶವಾಗಬೇಕಾದರೆ ಕಿವಿಯಲ್ಲಿ ತುಳಸೀದಳವನ್ನು ಧರಿಸಬೇಕು ಧರಿಸಿದರೆ ಎಲ್ಲಾ ಪಾಪಗಳಿಂದ ಮುಕ್ತನಾಗಿ ಪವಿತ್ರನಾಗ್ತಾನೆ ಅಷ್ಟು ಮಹತ್ವ ಒಂದು ದಳ ತುಳಸಿಗೆ ಇದೆ. 

ಮಾಂಸವನ್ನು ತಿನ್ನಬಾರದು (ಬೇಕರಿ ಪದಾರ್ಥಗಳು ಕೇಕ್ ಬ್ರೆಡ್ ಇವೆಲ್ಲವೂ ಮಾಂಸದಿಂದ ಕೂಡಿದ ಪದಾರ್ಥಗಳು ಎಂದೂ ತಿನ್ನಬಾರದು ತಿಂದರೆ ಮಹಾಪಾಪ) ಮದ್ಯಪಾನವನ್ನೂ ಕೂಡ ಮಾಡಬಾರದು ಇವಕ್ಕೆಲ್ಲ ಮೂಲ ಕಾರಣವಾದ ದುಷ್ಟರ ಸಂಗವನ್ನು ಮಾಡಲೇಬಾರದು.

ತುಳಸಿದೇವಿಯು ಅಂತರ್ಗತ ದಾಮೋದರನು ದುಷ್ಟಬುದ್ಧಿಯನ್ನು ಹೋಗಿಸಿ ಸದ್ಬುದ್ಧಿಯನ್ನು ನೀಡಿ ಅನುಗ್ರಹಿಸಲಿ.

ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
**********
ತುಳಸೀಮಾಹಾತ್ಮ್ಯಂ :- 
(ತುಳಸೀಸ್ತೋತ್ರಂ)

ಅನ್ನೋಪರಿ ತಥಾ ಪಂಚ 

ಭೋಜನಾಂತೇ ದಲತ್ರಯಂ ! 
ಏವಂ ಶ್ರೀ ತುಳಸೀ ಗ್ರಾಹ್ಯಾ
ಅಷ್ಟಾದಶದಲಾ ಸದಾ !! ೧೪ !!

ಅರ್ಥ :- ನಿನ್ನೆ ೧೮ ರಲ್ಲಿ ೧೦ ತುಳಸೀದಳಗಳನ್ನು ಎಲ್ಲಿ ಧರಿಸಬೇಕು ಅಂತ ತಿಳಿದ್ವಿ. ಇನ್ನೂ ೮ ಎಲ್ಲಿ ಹಾಕಬೇಕು ಅಂದರೆ -  ಭೋಜನ ಮಾಡುವ ಆರಂಭದಲ್ಲಿ ಅನ್ನದ ಮೇಲೆ ೫ ದೇವರ ತುಳಸಿನಿರ್ಮಾಲ್ಯಗಳನ್ನು ಹಾಕಬೇಕು  ಪ್ರಾಣ ಅಪಾನ ವ್ಯಾನ ಉದಾನ ಸಮಾನ ಈ ೫ ನಾಮಗಳಿಂದ ಅನ್ನವನ್ನು ಸೇವಿಸುವಾಗ ತುಳಸಿನಿರ್ಮಾಲ್ಯದ ಜೊತೆಗೆ ಸೇವಿಸಬೇಕು. ನಂತರ ಭೋಜನ ಆದಮೇಲೆ ತೀರ್ಥತಗೊಳುವಾಗ ೩ ತುಳಸೀದಳಗಳನ್ನು ಸೇವಿಸಬೇಕು. ಹೀಗೆ ಒಟ್ಟು ೧೮ ತುಳಸಿನಿರ್ಮಾಲ್ಯಗಳು ನಮ್ಮ ದೇಹದ ಒಳಗೆ ಮತ್ತು ಹೊರಗೆ ಧಾರಣೆ ಮಾಡಿದರೆ ನಮ್ಮ ಇಡೀ ದೇಹವು ಪವಿತ್ರ (ಶುದ್ಧ)ವಾಗುತ್ತೆ. ಇಷ್ಟು ಮಹತ್ವ ತುಳಸಿಗೆ ಇದೆ .


ಅಂಥ ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಜ್ಞಾನವನ್ನು ಕೊಟ್ಟು ಕರುಣಿಸಲಿ.


ಇತಿ ತುಳಸೀಮಾಹಾತ್ಮ್ಯಂ !!

     (ತುಳಸೀಸ್ತೋತ್ರಂ)

ಇಲ್ಲಿಗೆ (ಇವತ್ತಿಗೆ) ತುಳಸೀಮಾಹಾತ್ಮ್ಯ (ತುಳಸೀಸ್ತೋತ್ರ) ವು ಸಮಾಪ್ತಿಯಾಯಿತು.


ಶ್ರೀಕೃಷ್ಣಾರ್ಪಣಮಸ್ತು !!



ಇಷ್ಟು ದಿವಸ ಕಾರ್ತೀಕಮಾಸದಲ್ಲಿ ಅವಶ್ಯವಾಗಿ ಪಠಿಸಬೇಕಾದ ತುಳಸೀಸ್ತೋತ್ರದ ಚಿಂತನೆಯನ್ನು ಅರ್ಥಸಹಿತವಾಗಿ ಯಥಾಶಕ್ತಿಯಾಗಿ ಮಾಡಿದ್ದೇವೆ. ಇದು ದೇವರ ಗುರುಗಳ ತಂದೆತಾಯಿಗಳ ಅನುಗ್ರಹದಿಂದ ಇವತ್ತು ಸಮಾಪ್ತಿಗೊಳ್ಳುತ್ತಾಯಿದೆ. ಈ ಸಮಾಪ್ತಿ (ಅರ್ಪಣೆ) ಆಗುವ ಸಂದರ್ಭದಲ್ಲಿ (ಇವತ್ತು) ನಾವು ಶ್ರೀಮನ್ಮೂಲರಾಮಚಂದ್ರದೇವರ ಶ್ರೀ ದಿಗ್ವಿಜಯರಾಮಚಂದ್ರದೇವರ, ಶ್ರೀರಾಮವಿಠಲದೇವರ ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ, ಶ್ರೀ ಪೇಜಾವರಮಠಾಧೀಶರಾದ ಶ್ರೀ ವಿಶ್ವೇಶತೀರ್ಥರ ಶ್ರೀ ಕಾಣೀಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥರ ಸನ್ನಿಧಿಯಲ್ಲಿ  ತಂದೆತಾಯಿಗಳ ಸನ್ನಿಧಿಯಲ್ಲಿ ಇದ್ದೇವೆ. ಅದು ಅವರೆಲ್ಲರ ಪಾದಪದ್ಮಗಳಲ್ಲಿ ಸಮರ್ಪಿತವಾಗ್ತಾಯಿದೆ. ನಾವುನೀವೆಲ್ಲರೂ ಯಥಾಶಕ್ತಿಯಾಗಿ ಚಿಂತನೆ ಮಾಡಿದ್ದೇವೆ. ಎಲ್ಲರನ್ನೂ ಆಯುರಾರೋಗ್ಯಾದಿಗಳ ಜೊತೆಗೆ ಜ್ಞಾನ ಭಕ್ತಿ ವೈರಾಗ್ಯ ಕೊಟ್ಟು  ಎಲ್ಲರನ್ನೂ ಅನುಗ್ರಹಿಸಲಿ ಅಂತ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇವೆ. ದೇವರು ಎಲ್ಲರನ್ನೂ ಅನುಗ್ರಹಿಸಲಿ ‌.


ಸರ್ವೇ ಜನಾಃ ಸುಖಿನೋ ಭವಂತು !


ಸುಘೋಷಾಚಾರ್ಯ ಕೊರ್ಲಹಳ್ಳಿ
****

ತುಳಸಿ ಮಾಲೆ ತಯಾರು ಮಾಡುವ  ವಿಧಾನ


ಕರ್ಣೇ ಪುಷ್ಪಂ ಗಳೇ ಗಂಧಂ
ಶಿಖಾಯಾಂ ತುಲಸೀದಳಂ |
ಮೋಹಾತ್ ಧಾರಯತೇ ವಿಪ್ರಃ
ಸ ವೈ ಶೂದ್ರೋ ನ ಸಂಶಯಃ ||

ಕಿವಿಯಲ್ಲಿ ಹೂವನ್ನು,
ಕಂಠದಲ್ಲಿ ಗಂಧವನ್ನು,
ಶಿಖೆ(ಜುಟ್ಟು)ಯಲ್ಲಿ ತುಲಸಿಯನ್ನು,
ಯಾರು ಧರಿಸುತ್ತಾರೋ,
ಅವರು ಜ್ಞಾನಸಂಪನ್ನ, ಶ್ರೋತ್ರಿಯನಾದ ಬ್ರಾಹ್ಮಣನಾಗಿದ್ದರೂ,
ಸಂಸ್ಕಾರ ಹೊಂದದ ಅಜ್ಞಾನಿ ಎನಿಸುತ್ತಾನೆ.

ಹಾಗಾದರೆ  ಎಲ್ಲಿ  ಧರಿಸಬೇಕು ?

ಮೊದಲು ಪ್ರಸಾದವನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು,ನಂತರ

ಹೂವನ್ನು ತಲೆಯಲ್ಲಿ,
ತುಳಸಿಯನ್ನು ಕಿವಿಯಲ್ಲಿ,
ಗಂಧವನ್ನು ಹಣೆಯಲ್ಲಿ ಧರಿಸಬೇಕು.
******
ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ

ನಮ್ಮಲ್ಲಿ ಮೊದಲಿನಿಂದಲೂ ಪರಿಸರವನ್ನು ದೇವತೆಯೆಂದು ಪರಿಭ್ರಮಿಸುವ ವಿಶಿಷ್ಟ ಸಂಪ್ರದಾಯವಿದೆ. ನಮ್ಮ ಹಿಂದೂ ಧರ್ಮದಲ್ಲಿ ದೇವಾನು-ದೇವತೆಗಳಿಗೆ ಉಪವಾಸ ವ್ರತ ಪೂಜೆಗಳು ಸಲ್ಲಿಕೆಯಾಗುವಂತೆ ಸಸ್ಯ, ಮರಗಳಿಗೂ ಪೂಜೆ ಪುನಸ್ಕಾರ ವ್ರತ ಉಪವಾಸಗಳು ಸಲ್ಲುತ್ತದೆ. ಆದರೆ ಎಲ್ಲಾ ಸಸ್ಯಗಳು ಪೂಜೆಗೆ ಅರ್ಹವಾಗುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಅಂದರೆ ಅರಳಿಮರ, ಎಕ್ಕದಗಿಡ, ತುಳಸಿಗಿಡಗಳು ಹೀಗೆ ಇವುಗಳ ಪಟ್ಟಿ ದೊಡ್ಡದಾಗಿಯೇ ಬೆಳೆಯುತ್ತಾ ಹೋಗುತ್ತದೆ.
ನಮಗೆಲ್ಲಾ ತಿಳಿದಿರುವಂತೆ ಪ್ರತಿಯೊಂದು ಸಸ್ಯ, ಮರಗಳು ಅದರದೇ ಆದ ವಿಶೇಷ ಗುಣ, ಉಪಯೋಗಗಳೊಂದಿಗೆ ಸಸ್ಯಕಾಶಿಯಲ್ಲಿ ಮೇರು ಸ್ಥಾನದಲ್ಲಿರುತ್ತದೆ. ಅಲ್ಲದೇ ಭಗವಂತನಿಗೂ ಪ್ರಿಯನಾಗಿ, ಜನರ ಜೀವನಾಡಿಯಾಗಿಯೂ, ಶುಭದ ಸಂಕೇತವಾಗಿಯೂ, ಸಮಸ್ಯೆಗಳ ನಿವಾರಕವಾಗಿಯೂ, ಮಾನವರ ಅಗತ್ಯತೆಗಳ ಪೂರೈಕವಾಗಿ ಹೀಗೆ ವ್ಯಕ್ತಿಯ ಮನೋಭಾವಕ್ಕನುಗುಣವಾಗಿ ಸಸ್ಯಗಳು ತಮ್ಮ ಬದುಕನ್ನು ಪರರಿಗಾಗಿಯೇ ಸವೆಸುತ್ತಿರುತ್ತದೆ. ಆದರೆ ಒಂದು ಮಾತ್ರ ಸತ್ಯ ಎಲ್ಲಾ ಸಸ್ಯ-ಮರಗಳು ಪೂಜಿತಗೊಳ್ಳುವುದಿಲ್ಲ.

ಸಸ್ಯಸಿರಿಯಲ್ಲಿ ಮಾನವರಿಗೆ ಜೀವನಾಡಿಯಾಗಿ , ಔ‍ಷಧಿಯ ಲೋಕವನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿರುವ, ಮಹಿಳಾ ಪ್ರಿಯವಾಗಿ, ಎಲ್ಲರ ಮನೆಯ ಅಂಗಳದಲ್ಲಿ ಶುಭದ ಸಂಕೇತವಾಗಿ ರಾರಾಜಿಸುವ ಏಕೈಕ ಸಸ್ಯವೇ ತುಳಸಿ. ತುಳಸಿ ಮುತ್ತೈದೆಯ ಸಂಕೇತವಾಗಿದ್ದು, ಕಾರ್ತಿಕ ಮಾಸದಲ್ಲಿ ವಿಶೇಷ ಹಬ್ಬವಾಗಿ, ನಾನಾ ದೀಪ, ಹಲವಾರು ನೆಲ್ಲಿಕಾಯಿಗಳ ಹಾರದ ನಡುವಲ್ಲಿ ಸುಂದರಿಗಳಾಗಿ ರಾರಾಜಿಸುತ್ತಾಳೆ ಮಾತೆ ತುಳಸಿ. ಅದೇ ವಿಶೇಷ ಹಬ್ಬ ತುಳಸಿ ಹಬ್ಬವೇ.
ಹಾಗಾದರೆ ಬನ್ನಿ ತುಳಸಿಯ ಕುರಿತಾಗಿ ನಿಮಗೆ ಗೊತ್ತಿರದ ಹಲವಾರು ವೈವಿಧ್ಯ ಅಂಶಗಳನ್ನು ನೋಡುವ. 
 ‌                                                                                                                           ತುಳಸಿ ಹಬ್ಬದ ನಿಮಗೆ ಗೊತ್ತಿರದ ಕೆಲವು ವೈವಿಧ್ಯ ಅಂಶ
ತುಳಸಿಗೆ ವೈಷ್ಣವರ ಮನೆಗಳಲ್ಲಿ !ವಿಶೇಷ ಸ್ಥಾನವಿದೆ. ವಿಷ್ಣುವಿನ ಅರ್ಚನೆಗೆ ಪ್ರಧಾನವಾದ ಸಾಧನವಾಗಿದೆ ಈ ತುಳಸಿ. ಗೋಪಿ ಚಂದನವಿಲ್ಲದಿರುವಾಗ ಆಸ್ಥಾನದಲ್ಲಿ ತುಳಸಿ ದಳವನ್ನು ಉಪಯೋಗಿಸಬಹುದೆಂದು ಸ್ಮೃತಿಗಳು ಸಾರುತ್ತವೆ. ಯಾವುದೇ ವಯಸ್ಸಿನ ಭೇದವಿಲ್ಲದೇ ಎಲ್ಲರಿಂದ ಪೂಜ್ಯವಾದ ವೈಷ್ಣವ ಸಸ್ಯವೇ ತುಳಸಿ, ಲಕ್ಷ್ಮೀಯ ಸ್ಥಾನವನ್ನು ಕೊಂಚ ಮಟ್ಟಿಗೆ ತುಂಬುವ ಈಕೆ ಮಹಿಳೆಯರ ಪಾಲಿಗೆ ಕಲ್ಪವೃಕ್ಷ, ಮುತ್ತೈದೆತನದ ಸಿರಿತನವೂ ಹೌದು.
 ‌                                                                                                                                              ತುಳಸಿ ಸಸ್ಯ ಹುಟ್ಟಿದ್ದು ಹೇಗೆ ?
ಅಮೃತ ಪ್ರಾಪ್ತಿಗಾಗಿ ದೇವತೆಗಳು-ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾಕಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವ ಆನಂದ ಧನ್ವಂತರಿಯ ಕಣ್ಣುಗಳಲ್ಲಿ ಹರಿದಾಡಿತು. ಆ ಆನಂದ ಅಶ್ರುಗಳಾಗಿ ಅಮೃತ ಕಳಸದಲ್ಲಿ ಉದುರಿದವು. ಆಗಲೇ ತುಳಸಿ ಸಸ್ಯ ಹುಟ್ಟಿತು ಎಂದು ಪುರಾಣದ ಹಿನ್ನೆಲೆ ಇದೆ.

ತುಳಸಿ ಪದದ ಅರ್ಥ ?
ತುಳಸಿ ಎಂಬ ಪದದಲ್ಲಿ 'ತ್-ಉ-ಲಸೀ' ಎಂಬ ಮೂರು ಅಕ್ಷರಗಳಿವೆ. 'ತ್' ಎಂದರೆ ಮರಣವೆಂದರ್ಥ. 'ಉ' ಎಂದರೆ ಸಂಬಂಧ ಉಳ್ಳವರು. ಒಟ್ಟಾರೆ 'ತು' ಎಂದರೆ ಮೃತರಾದವರು ಎಂದರ್ಥ. ಮೃತರಾದವರು ಲಸತಿ ಶೋಭಿಸುತ್ತಾರೆ. ಅರ್ಥಾತ್ 'ಯಾವ ವ್ಯಕ್ತಿ ತುಳಸಿಯ ಸ್ಮರಣಾದಿಗಳನ್ನು ಮಾಡಿ ಮೃತರಾಗಿರುತ್ತಾರೋ ಅವರು ಸ್ವರ್ಗಾದಿಲೋಕದಲ್ಲಿ ಶೋಭಾಯಮಾನರಾಗಿ ಇರುತ್ತಾರೆ' ಎಂಬ ಅರ್ಥವಿದೆ.
 ‌                                                                                                  ತುಳಸಿಗಿರುವ ನಾನಾ ಹೆಸರುಗಳು:
ವೈಷ್ಣವಿ, ವಿಷ್ಣುವಲ್ಲಭೆ, ಹರಿಪ್ರಿಯೆ, ವಿಷ್ಣುತುಳಸಿ, ರಾಮ ತುಳಸಿ, ಶ್ಯಾಮ ತುಳಸಿ, ಕೃಷ್ಣ ತುಳಸಿ ಹೀಗೆ ನಾನಾ ಹೆಸರುಗಳು ತುಳಸಿ ಸಸ್ಯಕ್ಕಿದೆ.
 
ತುಳಸಿ ಸಸ್ಯ ಇದ್ದಲ್ಲಿ ಯಾವ ಯಾವ ದೇವತೆಗಳು ನೆಲೆಸಿರುತ್ತಾರೆ ?
ಯಾವ ಪ್ರದೇಶದಲ್ಲಿ ಒಂದು ತುಳಸಿ ಸಸ್ಯ ಇರುತ್ತದೋ ಅಲ್ಲಿ ತ್ರಿಮೂರ್ತಿ ಗಳಾದ ಬ್ರಹ್ಮ, ವಿಷ್ಣು, ರುದ್ರಾದಿ ದೇವತೆಗಳು, ಲಕ್ಷ್ಮೀ, ಸರಸ್ವತಿ, ಗಾಯತ್ರಿ, ಉಮಾದೇವಿ, ಶಚೀದೇವಿ, ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರ, ಆದಿತ್ಯಾದಿಗ್ರಹದೇವತೆಗಳು, ವಿಶ್ವೇದೇವತೆಗಳು, ಅಷ್ಟವಸ್ತುಗಳು, ಚತುರ್ಧಶಮನುಗಳು, ದೇವರ್ಷಿಗಳು, ವಿದ್ಯಾದರರು, ಗಂಧರ್ವರು, ಸಿದ್ಧರು, ಅಪ್ಸರೆಯರು ಸೇರಿದಂತೆ ಇನ್ನಿತರ ದೇವತೆಗಳ ಪತ್ನಿಯರು ತುಳಸಿ ಪುಷ್ಪದಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಅದನ್ನು ಸಾಮಾನ್ಯವಾಗಿ ಮನೆಯ ಮುಂಬದಿಯಲ್ಲೇ ನೆಟ್ಟಿರುತ್ತಾರೆ.
 
ತುಳಸಿಯು ಯಾವುದರಿಂದ ಅಭ್ಯಂಜನಗೊಳ್ಳುತ್ತಾಳೆ ?
ತುಳಸಿಯನ್ನು ಮೂರು ಕಾಲದಲ್ಲಿಯೂ ಪೂಜಿತಗೊಳ್ಳುತ್ತಾಳೆ. ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಈ ಮಾತೆಗೆ ಸಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ನೀರು, ಹಾಲು, ಎಳನೀರು, ಜೇನುತುಪ್ಪ, ಕಬ್ಬಿನರಸದಿಂದ ಅಭ್ಯಂಜನಗೊಳ್ಳುತ್ತಾಳೆ.
 ‌                                                                     ತುಳಸಿಯ ಸೇವೆಯಿಂದ ಏನು ಲಾಭ ?
ತುಳಸಿಯನ್ನು ಪ್ರಾತಃಕಾಲದಲ್ಲಿ ಪೂಜಿಸುವುದರಿಂದ ದುಸ್ವಪ್ನಗಳು ನಾಶವಾಗುತ್ತವೆ. ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತವಾಗುತ್ತವೆ. ಕೋಟಿ ಆಕಳು ದಾನ ಮಾಡಿದ ಫಲವೇ ಲಭ್ಯವಾಗುತ್ತದೆ, ತನುವೆಲ್ಲಾ ಪುನೀತವಾಗುತ್ತದೆ. ತುಳಸಿಗೆ ಅಭಿಮುಖವಾಗಿ ನಿಂತು ನಮಸ್ಕರಿಸುವುದರಿಂದ ರೋಗ-ರುಜಿನ ನಾಶವಾಗುತ್ತವೆ.
 
ರೋಗನಿರೋಧಕಿ ತುಳಸಿ ದೇವತೆ
ಆಯುರ್ವೇದದಲ್ಲಿಯೂ ಪ್ರಧಾನವಾದ ಸ್ಥಾನ ತುಳಸಿಗೆ ಇದೆ. ಅಜೀರ್ಣ, ಅತಿಸಾರ, ಹೃದಯರೋಗ, ಅಪಸ್ಮಾರ, ಜ್ವರ, ಕೆಮ್ಮು, ಶೀತ, ತಲೆನೋವು, ಕಿಡ್ನಿಸ್ಟೋನ್,
ರಾಮಬಾಣವಾಗಿ ತುಳಸಿ ಕಾರ್ಯ ನಿರ್ವಹಿಸುತ್ತಾಳೆ.
 
ತುಳಸಿ ಹಬ್ಬದಲ್ಲಿ ನೆಲ್ಲಿಕಾಯಿ ಶ್ರೇಷ್ಠ
ತುಳಸಿ ಹಬ್ಬದಲ್ಲಿ ತುಳಸಿ ಸಸ್ಯಕ್ಕೆ ನೆಲ್ಲಿಕಾಯಿ ಹಾರ, ಬತ್ತಿಹಾರ, ಹೂವಿನ ಹಾರದಿಂದ ಶೃಂಗಾರ ಮಾಡುತ್ತಾರೆ. ಜೊತೆಗೆ ತುಪ್ಪದ ದೀಪ ಕೂಡ ಹಚ್ಚಿ, ಹಲವಾರು ಹಣತೆಗಳ ನಡುವಲ್ಲಿ ತುಳಸಿ ಹಬ್ಬದಂದು ತುಳಸಿ ಮಾತೆ ಸುಂದರವಾಗಿ ಗೋಚರಿಸುತ್ತಾಳೆ. ಬಳಿಕ ರೀತಿ ರಿವಾಜಿನ ಮೂಲಕ ಮಹಿಳೆಯರಿಂದ ಪೂಜಿತಗೊಳ್ಳುತ್ತಾಳೆ.
****



  read more uttan dwadashi ಉತ್ಥಾನ ದ್ವಾದಶಿ 


*******
ತುಲಸಿಯ ಕತೆ
ಕಾರ್ತೀಕ ಶುದ್ಧ ದ್ವಾದಶಿ.
" ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.
ತನ್ನಿಮಿತ್ತ ನಿಮಗೆ ತುಲಸಿಯ ಕತೆ.

ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.
ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.
ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.

" ಉತ್ಥಾನದ್ವಾದಶಿ-ತುಲಸೀ ವಿವಾಹ "

ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.
ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.
ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.

ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸೀ.
ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.
ಇದು ತುಳಸಿಯ ಶಕ್ತಿ.
ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.

ಜಲಂಧರಾಸುರನು  ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣುವು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.
ಬೃಂದಾಳ ಪಾತಿವ್ರತ್ಯವನ್ನು ಜಲಂಧರನ ರೂಪಧರಿಸಿ ಮೋಸದಿಂದ ಭಂಗ ಮಾಡಿ,ಅವಳೊಂದಿಗೆ ಸುಖಿಸಿ ಶೀಲಹರಣ ಮಾಡಿದ್ದರಿಂದ ಕುಪಿತಳಾದ ಬೃಂದೆಯು,
*ನನಗೆ ಪತಿಯೊಂದಿಗೆ ಸಮಾಗಮಕ್ಕೆ ಅನರ್ಹಳಾಗುವಂತೆ ಮಾಡಿ ಪತಿ ಸಂಗಮ ಸುಖ ವಂಚಿತಳಾಗಿಸಿದ ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ" ಎಂದು ವಿಷ್ಣುವಿಗೆ ಶಾಪವಿತ್ತಳು.
ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ.
ಪವಿತ್ರ ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು.
ಇದರ ಕುರುಹಾಗಿ ತುಲಸಿಕಟ್ಟೆಗೆ ಬೃಂದಾವನ ಎಂಬ ಹೆಸರು,
ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.
ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆನೆಲ್ಲಿಕಾಯಿಗೆ ಅಶೌಚ.
ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.

ತುಲಸಿಯು ಔಷಧೀಯ ಸಸ್ಯ.
ಜಲಮಾಲಿನ್ಯ,ಅರ್ಬುದ,
ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,
ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.

ತುಳಸಿಯಲ್ಲಿ ಬಿಳಿ ಮತ್ತು ಕರಿ ತುಳಸಿ ಎಂದು ಎರಡು ಪ್ರಭೇದಗಳಿವೆ.
ರಾಮತುಳಸಿ,ಕೃಷ್ಣತುಳಸಿ ಎಂಬ ಹೆಸರುಗಳೂ ಇವೆ.
ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.
ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.
ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.
ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ" ಯ ದಿನ.
ಹಾಗಾಗಿ "ಮಥನ ದ್ವಾದಶಿ,
ಕ್ಷೀರಾಬ್ಧಿ ವ್ರತ" ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.

ನಮಸ್ತುಲಸಿ ಕಲ್ಯಾಣೀ
ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ
ನಮಃ ಸಂಪತ್ಪ್ರದಾಯಿನೀ ||

ತುಲಸಿಯ ಬಗ್ಗೆ ಇನ್ನೊಂದು ಕತೆ ಇದೆ.

" ತುಲಸೀ "

ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.
ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು.
ಬ್ರಹ್ಮನು "ನಿನ್ನ ಕೋರಿಕೆ ಈಡೇರುತ್ತದೆ.
ಆದರೆ ನೀನು ಗಿಡವಾಗುವೆ" ಎಂದನು.
ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.
ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,
ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.
ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.
ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.
ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,
ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದ್ದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.

ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.
ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.

***
ತುಳಸೀದರ್ಶನ (ಪೂಜೆ)ಗೋದಾನಕ್ಕೆ ಸಮ

ಮುಂಜಾನೆ ಸ್ನಾನವಾದ ನಂತರ ಕಲಶದಲ್ಲಿ ಶುದ್ದ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು ಪೂಜೆಯನ್ನು ರಂಗೋಲಿಯನ್ನು ಮುಗಿಸಿ ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು ,ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು,ತುಳಸೀ ಮೂಲಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿ, ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು

ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳು

ಯನ್ಮೂಲೇ ಸರ್ವತೀರ್ಥಾನಿ ಯನ್ಮ ಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||

ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು.ಮಧ್ಯದಲ್ಲಿ ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು.ತುದಿಯಲ್ಲಿ ಋಗ್ವಾದಿ ಚತುರ್ವೇದಗಳು ನೆಲೆಸಿರುತ್ತವೆ. ಅಂತಹ ತುಳಸಿ ದೇವಿಯೇ, ನಿನಗೆ ನನ್ನ ನಮಸ್ಕಾರಗಳು. 

ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||

ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |
ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||

ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ.ರವಿಸುತನಾದ ಯಮನು ಉಲ್ಲೇಖಿಸಿರುವ ಗೋಹತ್ಯೆ,ಬ್ರಹ್ಮಹತ್ಯೆ, ಬಾಲಹತ್ಯೆ,ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀವೃಂದಾವನ ದರ್ಶನದಿಂದ ನಾಶವಾಗುತ್ತವೆ.

ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||

ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು.ಇನ್ನು ಯಮನ ದೂತರು ನೋಡಬಲ್ಲರೇ?ತುಳಸೀ ಮೃತ್ತಿಕೆಯ ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ:  ವಸಂತಿ ತುಳಸೀವನೇ ||

ತುಳಸೀವನದಲ್ಲಿ  ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ..

ಬೆಳಕಿನ ಮಾಸ ಕಾರ್ತಿಕ ಶುದ್ಧ ದ್ವಾದಶಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನ ಎಚ್ಚರಿಸುವ ದಿನ. ಅಂದೇ ಚಾತುರ್ಮಾಸ್ಯದ ಅಂತ್ಯ. ಅಂದು ತುಳಸಿಗೂ, ಶ್ರೀಮನ್ನಾರಾಯಣನಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಈ ದೇವೋತ್ಥಾನದ ದಿನ ಮಾನಿನಿಯರು ಸಿಂಧೂರಾದಿಯಿಂದ ಮನೆಯನ್ನೂ ತುಳಿಸಿ ಕಟ್ಟೆಯನ್ನು ಸಿಂಗರಿಸಿ, ಮಂಟಪ ನಿರ್ಮಿಸಿ, ಅಗಸೆ ಹಾಗೂ ಫಲಸಹಿತವಾದ ಬೆಟ್ಟನೆಲ್ಲಿಯ ಕೊನೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ನೆಲ್ಲಿಕಾಯಿಯ ಕೊರೆದು ಬತ್ತಿ ಹಾಕಿ ದೀಪಾರತಿ ಮಾಡುತ್ತಾರೆ.

ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ.

ತುಳಸಿ ಹಬ್ಬ, ಉತ್ಥಾನ ದ್ವಾದಶಿಅಂದು ತುಳಸಿಯ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ.

ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ. 

ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದೃಷ್ಟಾಂತ. 

ಸನಾತನ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. " ಪವಿತ್ರ ತುಳಸಿ" ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು.  ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
***
ತುಳಸಿಗೆ ನೀರನ್ನು ಅರ್ಪಿಸುವಾಗ ಅನುಸರಿಸಬೇಕಾದ ನಿಯಮಗಳು."🙏
ಸನಾತನ ಧರ್ಮದಲ್ಲಿ, ಮರಗಳು ಮತ್ತು ಸಸ್ಯಗಳನ್ನು ಪೂಜಿಸುವ ಬಗ್ಗೆ ಹೇಳಲಾಗಿದೆ ಮತ್ತು ವಿಶೇಷವಾಗಿ ತುಳಸಿ ಸಸ್ಯವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರುವುದು ಸಾಮಾನ್ಯ ಹಾಗೂ ಅದರಂತೆ ತುಳಸಿಯನ್ನು ನಿತ್ಯವೂ ಪೂಜಿಸಲಾಗುತ್ತದೆ. ತುಳಸಿಯನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.ಏಕೆಂದರೆ ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ.ಹಿಂದೂ ಧರ್ಮದಲ್ಲಿ, ಮಹಿಳೆಯರು ಪ್ರತಿದಿನ ಬೆಳಿಗ್ಗೆ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುತ್ತಾರೆ ಮತ್ತು ಸಂಜೆ ತುಪ್ಪದ ದೀಪವನ್ನು ಬೆಳಗಿಸುತ್ತಾರೆ.ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ಪ್ರಸನ್ನಳಾಗಿ ಆಶೀರ್ವಾದಿಸುತ್ತಾಳೆ ಎನ್ನುವ ನಂಬಿಕೆ ಇದೆ.ತುಳಸಿ ಔಷಧೀಯ ಗುಣಗಳ ಜೊತೆಗೆ,ದೈವಿಕ ಶಕ್ತಿಯನ್ನು ಒಳಗೊಂಡಿದೆ. ಯಾರ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಮನೆಯಲ್ಲಿ ಸಂಪತ್ತು,ಸಂತೋಷ,ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂವಹನ ಇರುತ್ತದೆ ಎಂದು ಹೇಳಲಾಗುತ್ತದೆ. ನಮ್ಮ ಮನೆ ಪ್ರಗತಿಯಾಗಬೇಕು, ಧನಾತ್ಮಕ ಶಕ್ತಿಯು ನಿವಾಸದಲ್ಲಿ ಇರಬೇಕು ಎಂದು ಬಯಸಿದರೆ ತುಳಸಿಗೆ ಪೂಜೆ ಮತ್ತು ನೀರನ್ನು ಸಮರ್ಪಿಸುವಾಗ ಪುರಾಣದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಅನುಸರಿಸುವುದು ಅಷ್ಟೇ ಮುಖ್ಯ.

ಹಿಂದೂ ಶಾಸ್ತ್ರದ ಪ್ರಕಾರ ತುಳಸಿಗೆ ಸ್ನಾನ ಮಾಡದೆ ನೀರನ್ನು ಅರ್ಪಿಸಬಾರದು ಹಾಗೂ ಏನಾದರೂ ತಿಂದ ನಂತರ ಕೂಡ ನೀರನ್ನು ನೀಡಬಾರದು.ಈ ತಪ್ಪುಗಳನ್ನು ಮಾಡುವುದರಿಂದ ವಿಷ್ಣುವಿನ ಕೋಪಕ್ಕೆ ಮಾತ್ರವಲ್ಲ,ಲಕ್ಷ್ಮಿ ದೇವಿಯ ಕೋಪಕ್ಕೂ ಗುರಿಯಾಗಬೇಕಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ.

 ಮನೆಯಲ್ಲಿ ತುಳಸಿ ಗಿಡವಿದ್ದರೆ ಅದಕ್ಕೆ ಪ್ರತಿನಿತ್ಯ ನೀರನ್ನು ಹಾಕಬೇಕು ಜೊತೆಗೆ ಸೂರ್ಯೋದಯಕ್ಕೆ ಮುನ್ನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು.ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯು ಇದರಿಂದ ಪ್ರಸನ್ನಳಾಗುತ್ತಾಳೆ ಎನ್ನಲಾಗುತ್ತದೆ.

ಸಾಮಾನ್ಯವಾಗಿ,ಬೆಳಿಗ್ಗೆ ಸ್ನಾನ ಮಾಡಿದ ನಂತರ ಜನರು ಒದ್ದೆಯಾದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ತುಳಸಿಗೆ ನೀರನ್ನು ಅರ್ಪಿಸುತ್ತಾರೆ.ಈ ರೀತಿ ಮಾಡುವುದನ್ನು ಶಾಸ್ತ್ರಗಳಲ್ಲಿ ತಪ್ಪೆಂದು ಪರಿಗಣಿಸಲಾಗುತ್ತದೆ.ತುಳಸಿಗೆ ನೀರನ್ನು ಅರ್ಪಿಸುವಾಗ ಒದ್ದೆ ಬಟ್ಟೆಯನ್ನು ಧರಿಸಿ ಅರ್ಪಿಸಬಾರದು.

ಶಾಸ್ತ್ರದ ಪ್ರಕಾರ,ತುಳಸಿಗೆ ನೀರನ್ನು ಅರ್ಪಿಸುವಾಗ, ನಮ್ಮ ಮುಖವು ಸೂರ್ಯ ದಿಕ್ಕಿಗೆ ಎದುರಾಗಿರಬೇಕು.ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಈ ದಿಕ್ಕಿಗೆ ಮುಖ ಮಾಡಿ ತುಳಸಿಗೆ ನೀರನ್ನು ಅರ್ಪಿಸುವುದರಿಂದ ತುಳಸಿ ದೇವಿಯ ಆಶೀರ್ವಾದದೊಂದಿಗೆ ತಾಯಿ ಲಕ್ಷ್ಮಿಯ ಅನುಗ್ರಹವು ದೊರೆಯುತ್ತದೆ.ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ವಾರದ ಭಾನುವಾರ ಮತ್ತು ಬುಧವಾರದಂದು ತಪ್ಪಾಗಿಯೂ  ತುಳಸಿ ದೇವಿಗೆ ನೀರನ್ನು ಅರ್ಪಿಸಬಾರದು.ಯಾಕೆಂದರೆ ಈ ದಿನ ತುಳಸಿ ಮಾತೆಯು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುತ್ತಾಳೆ.ಇಂತಹ ಸಂದರ್ಭದಲ್ಲಿ ತುಳಸಿಗೆ ನೀರನ್ನು ಅರ್ಪಿಸುವುದು ಆಕೆಯ ವಿಶ್ರಾಂತಿಗೆ ಅಡ್ಡಿಯುಂಟಾಗುತ್ತದೆ ಇದರಿಂದ  ಆಕೆಯ ಕೋಪಕ್ಕೂ ಗುರಿಯಾಗಬಹುದು.ವಾರದ ಭಾನುವಾರ ಮತ್ತು ಬುಧವಾರವನ್ನು ಹೊರತುಪಡಿಸಿ,ಏಕಾದಶಿಯ ದಿನದಂದು ಕೂಡ ತುಳಸಿಗೆ ನೀರನ್ನು ಅರ್ಪಿಸಬಾರದು.ಯಾಕೆಂದರೆ ಏಕಾದಶಿ ದಿನವು ವಿಷ್ಣುವಿಗೆ ಅರ್ಪಿತವಾಗಿದ್ದು,ಈ ದಿನ ವಿಷ್ಣು ಪ್ರಿಯಳಾದ ತುಳಸಿಯು ವಿಷ್ಣುವಿಗಾಗಿ ಉಪವಾಸ ವ್ರತವನ್ನು ಮಾಡುತ್ತಿರುತ್ತಾಳೆ.ಏಕಾದಶಿ ದಿನದಂದು ಆಕೆ ನೀರಿಲ್ಲದ ಉಪವಾಸವನ್ನು ಮಾಡುತ್ತಿರುವುದರಿಂದ ನೀರು ಆಕೆಗೆ ನೀರನ್ನು ಅರ್ಪಿಸಿದರೆ ಆಕೆಯ ವ್ರತ ಹಾಳಾಗಬಹುದು ಎಂದು ಹೇಳಲಾಗುತ್ತದೆ.

ತುಳಸಿ ನೀರನ್ನು ಅರ್ಪಿಸುವಾಗ ನಾವು ಕೆಲವೊಂದು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.ಕೆಲವೊಮ್ಮೆ ನಾವು ತುಳಸಿಗೆ ಯತೇಚ್ಚವಾಗಿ ನೀರನ್ನು ಅರ್ಪಿಸುತ್ತೇವೆ.ಇದು ಒಂದೆಡೆ ತುಳಸಿ ಗಿಡ ಹಾಳಾಗುವುದಕ್ಕೆ ಕಾರಣವಾದರೆ, ಮತ್ತೊಂದೆಡೆ ತುಳಸಿಗೆ ಅರ್ಪಿಸಿದ ನೀರು ನೆಲದ ಮೇಲೆ ಹರಿದು ಹೋಗುವುದು ಅಶುಭವೆಂದು ಪರಿಗಣಿಸಲಾಗುತ್ತದೆ.ತುಳಸಿಗೆ ಅರ್ಪಿಸಿದ ನೀರು ಎಂದಿಗೂ ಗಿಡದ ಚೌಕಟ್ಟಿನಿಂದ ಕೆಳಗೆ ಬೀಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

 ಕೆಲವರು ಸೂರ್ಯೋದಯದ ಸಮಯದಲ್ಲಿ ಮತ್ತು ಇನ್ನು ಕೆಲವರು ಸೂರ್ಯಾಸ್ತದ ಸಮಯದಲ್ಲಿ ತುಳಸಿ ಪೂಜೆ ಮಾಡುವುದನ್ನು ನೋಡಿರಬಹುದು.ಆದರೆ ತುಳಸಿಯನ್ನು ನಾವು ಸೂರ್ಯೋದಯದ ಸಮಯದಲ್ಲಿ ಮಾತ್ರ ಪೂಜಿಸಬೇಕು ಮತ್ತು ಈ ಸಮಯದಲ್ಲಿ ನೀರನ್ನು ಅರ್ಪಿಸುವುದು ಮಂಗಳಕರ, ಶುಭಕರವಾಗಿರುತ್ತದೆ.ಆದರೆ,ಮುಸ್ಸಂಜೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ತುಳಸಿಗೆ ನೀರನ್ನು ನೀಡಬಾರದು.

ತುಳಸಿಗೆ ನೀರನ್ನು ಅರ್ಪಿಸಲು, ತಾಮ್ರದ ಪಾತ್ರೆಯನ್ನು ಮಾತ್ರ ಬಳಸಬೇಕು ಮತ್ತು ನೀರನ್ನು ಅರ್ಪಿಸುವಾಗ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು.ಇದು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಮತ್ತು ಸಂಪತ್ತಿನ ದಾರಿಯನ್ನು ತೆರೆಯುತ್ತದೆ.ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮೇಲಿನ ನಿಯಮಗಳನ್ನಾಗಲಿ ಅಥವಾ ವಿಚಾರಗಳನ್ನಾಗಲಿ ಗಮನದಲ್ಲಿಟ್ಟುಕೊಂಡು ಒಳ್ಳೆಯದು.ಹೀಗೆ ತುಳಸಿಗೆ ನೀರನ್ನು ನೀಡಿದಾಗ ಮಾತ್ರ ಅದು ನಮಗೆ ಪ್ರಯೋಜನಕಾರಿಯಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
***


ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ
1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ 
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ 
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ

ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು.
***

 #ಅಷ್ಟೋತ್ತರಶತನಾಮಾವಳಿ

ll ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ll


ಓಂ ತುಲಸ್ಯೈ ನಮಃ

ಓಂ ತುಲಸೀವರ್ಯಾಯೈ ನಮಃ

ಓಂ ತುಮುಲ್ಯೈ ನಮಃ

ಓಂ ತುಮುಲಪ್ರಾಜ್ಞ್ಯೈ ನಮಃ

ಓಂ ತುರಗ್ಯೈ ನಮಃ

ಓಂ ತುರಗಾರೂಢಾಯೈ ನಮಃ

ಓಂ ತುಮುಲಾಸುರಘಾತಿನ್ಯೈ ನಮಃ

ಓಂ ತುಮುಲಕ್ಷತಜಪ್ರೀತಾಯೈ ನಮಃ

ಓಂ ತುಮುಲಾಂಗಣನರ್ತಕ್ಯೈ ನಮಃ

ಓಂ ತುರಂಗಪೃಷ್ಠಗಾಮಿನ್ಯೈ ನಮಃ 10


ಓಂ ತುರಂಗಗಮನಾಹ್ಲಾದಾಯೈ ನಮಃ 

ಓಂ ತುರಂಗವೇಗಗಾಮಿನ್ಯೈ ನಮಃ

ಓಂ ತುರೀಯಾಯೈ ನಮಃ

ಓಂ ತುಲನಾಯೈ ನಮಃ

ಓಂ ತುಲ್ಯಾಯೈ ನಮಃ

ಓಂ ತುಲ್ಯವೃತ್ಯೈ ನಮಃ

ಓಂ ತುಲ್ಯಕೃತ್ಯೈ ನಮಃ

ಓಂ ತುಲನೇಶ್ಯೈ ನಮಃ

ಓಂ ತುಲಾರಾಜ್ಞ್ಯೈ ನಮಃ

ಓಂ ತುಲಾರಾಜ್ಞೀತ್ವಸೂಕ್ಷ್ಮವಿದಯೈ ನಮಃ 20


ಓಂ ತುಮ್ಬಿಕಾಯೈ ನಮಃ

ಓಂ ತುಮ್ಬಿಕಾಪಾತ್ರಭೋಜನಾಯೈ ನಮಃ

ಓಂ ತುಮ್ಬಿಕಾರ್ಥಿನ್ಯೈ ನಮಃ

ಓಂ ತುಲಜಾಯೈ ನಮಃ

ಓಂ ತುಲಜೇಶ್ವರ್ಯೈ ನಮಃ

ಓಂ ತುಷಾಗ್ನಿವ್ರತಸನ್ತುಷ್ಟಾಯೈ ನಮಃ

ಓಂ ತುಷಾಗ್ನೆಯೈ ನಮಃ

ಓಂ ತುಷರಾಶಿಕೃತ್ಯೈ ನಮಃ

ಓಂ ತುಷಾರಕರಶೀತಾಂಗ್ಯೈ ನಮಃ

ಓಂ ತುಷಾರಕರಪೂರ್ತಿಕೃತ್ಯೈ 30


ಓಂ ತುಷಾರಾದ್ರ್ಯೈ ನಮಃ

ಓಂ ತುಷಾರಾದ್ರಿಸುತಾಯೈ ನಮಃ

ಓಂ ತುಹಿನದೀಧಿತಯ್ಯೈ ನಮಃ

ಓಂ ತುಹಿನಾಚಲಕನ್ಯಾಯೈ ನಮಃ

ಓಂ ತುಹಿನಾಚಲವಾಸಿನ್ಯೈ ನಮಃ

ಓಂ ತುರ್ಯವರ್ಗೇಶ್ವರ್ಯೈ ನಮಃ

ಓಂ ತುರ್ಯವರ್ಗದಾಯೈ ನಮಃ

ಓಂ ತುರ್ಯವೇದದಾಯೈ ನಮಃ

ಓಂ ತುರ್ಯವರ್ಯಾತ್ಮಿಕಾಯೈ ನಮಃ

ಓಂ ತುರ್ಯಾಯೈ ನಮಃ 40


ಓಂ ತುರ್ಯೇಶ್ವರಸ್ವರೂಪಿಣ್ಯೈ ನಮಃ

ಓಂ ತುಷ್ಟಿದಾಯೈ ನಮಃ

ಓಂ ತುಷ್ಟಿಕೃತ್ಯೈ ನಮಃ

ಓಂ ತುಷ್ಟ್ಯೈ ನಮಃ

ಓಂ ತೂಣೀರದ್ವಯಪೃಷ್ಠಧೃಷ್ಯೈ ನಮಃ

ಓಂ ತುಮ್ಬುರಾಜ್ಞಾನಸನ್ತುಷ್ಟಾಯೈ ನಮಃ 

ಓಂ ತುಷ್ಟಸಂಸಿದ್ಧಿದಾಯಿನ್ಯೈ ನಮಃ

ಓಂ ತೂರ್ಣರಾಜ್ಯಪ್ರದಾಯೈ ನಮಃ

ಓಂ ತೂರ್ಣಗದ್ಗದಾಯೈ ನಮಃ

ಓಂ ತೂರ್ಣಪದ್ಯದಾಯೈ ನಮಃ 50


ಓಂ ತೂರ್ಣಪಾಂಡಿತ್ಯಸನ್ದಾತ್ರ್ಯೈ ನಮಃ

ಓಂ ತೂರ್ಣಾಯೈ ನಮಃ

ಓಂ ತೂರ್ಣಬಲಪ್ರದಾಯೈ ನಮಃ

ಓಂ ತೃತೀಯಾಯೈ ನಮಃ

ಓಂ ತೃತೀಯೇಶ್ಯೈ ನಮಃ

ಓಂ ತೃತೀಯಾತಿಥಿಪೂಜಿತಾಯೈ ನಮಃ 

ಓಂ ತೃತೀಯಾಚನ್ದ್ರಚೂಡೇಶ್ಯೈ ನಮಃ

ಓಂ ತೃತೀಯಾಚನ್ದ್ರಭೂಷಣಾಯೈ ನಮಃ 

ಓಂ ತೃಪ್ತ್ಯೈ ನಮಃ

ಓಂ ತೃಪ್ತಿಕರ್ಯೈ ನಮಃ 60


ಓಂ ತೃಪ್ತಾಯೈ ನಮಃ

ಓಂ ತೃಷ್ಣಾಯೈ ನಮಃ

ಓಂ ತೃಷ್ಣಾವಿವರ್ಧಿನ್ಯೈ ನಮಃ

ಓಂ ತೃಷ್ಣಾಪೂರ್ಣಕರ್ಯೈ ನಮಃ

ಓಂ ತೃಷ್ಣಾನಾಶಿನ್ಯೈ ನಮಃ

ಓಂ ತೃಷಿತಾಯೈ ನಮಃ

ಓಂ ತೃಷಾಯೈ ನಮಃ

ಓಂ ತ್ರೇತಾಸಂಸಾಧಿತಾಯೈ ನಮಃ

ಓಂ ತ್ರೇತಾಯೈ ನಮಃ

ಓಂ ತ್ರೇತಾಯುಗಫಲಪ್ರದಾಯೈ ನಮಃ 70


ಓಂ ತ್ರೈಲೋಕ್ಯಪೂಜ್ಯಾಯೈ ನಮಃ

ಓಂ ತ್ರೈಲೋಕ್ಯದಾತ್ರ್ಯೈ ನಮಃ

ಓಂ ತ್ರೈಲೋಕ್ಯಸಿದ್ಧಿದಾಯೈ ನಮಃ

ಓಂ ತ್ರೈಲೋಕ್ಯೇಶ್ವರತಾದಾತ್ರ್ಯೈ ನಮಃ 

ಓಂ ತ್ರೈಲೋಕ್ಯಪರಮೇಶ್ವರ್ಯೈ ನಮಃ 

ಓಂ ತ್ರೈಲೋಕ್ಯಮೋಹನೇಶಾನ್ಯೈ ನಮಃ 

ಓಂ ತ್ರೈಲೋಕ್ಯರಾಜ್ಯದಾಯಿನ್ಯೈ ನಮಃ 

ಓಂ ತೈತ್ರಿಶಾಖೇಶ್ವರ್ಯೈ ನಮಃ

ಓಂ ತೈತ್ರಿಶಾಖಾಯೈ ನಮಃ

ಓಂ ತೈತ್ರವಿವೇಕವಿದಯೈ ನಮಃ 80


ಓಂ ತೋರಣಾನ್ವಿತಗೇಹಸ್ಥಾಯೈ ನಮಃ 

ಓಂ ತೋರಣಾಸಕ್ತಮಾನಸಾಯೈ ನಮಃ 

ಓಂ ತೋಲಕಾಸ್ವರ್ಣಸನ್ದಾತ್ರ್ಯೈ ನಮಃ 

ಓಂ ತೋಲಕಾಸ್ವರ್ಣಕಂಕಣಾಯೈ ನಮಃ 

ಓಂ ತೋಮರಾಯುಧರೂಪಾಯೈ ನಮಃ

ಓಂ ತೋಮರಾಯುಧಧಾರಿಣ್ಯೈ ನಮಃ 

ಓಂ ತೌರ್ಯತ್ರಿಕೇಶ್ವರ್ಯೈ ನಮಃ

ಓಂ ತೌರ್ಯತ್ರಿಕ್ಯೈ ನಮಃ

ಓಂ ತೌರ್ಯತ್ರಿಕೋತ್ಸುಕ್ಯೈ ನಮಃ

ಓಂ ತಮೋನುದಾಯೈ ನಮಃ 90


ಓಂ ತಾರಿಣ್ಯೈ ನಮಃ

ಓಂ ತಾರಾಯೈ ನಮಃ

ಓಂ ತಾರಯನ್ತ್ಯೈ ನಮಃ

ಓಂ ತುಷ್ಟ್ಯೈ ನಮಃ

ಓಂ ತ್ರಿವಿಧಾಯೈ ನಮಃ

ಓಂ ತ್ರಿಗುಣಾಯೈ ನಮಃ

ಓಂ ತ್ರಿಗುಣಾಲಯಾಯೈ ನಮಃ

ಓಂ ತ್ರಿವರ್ತ್ಮಗಾಯೈ ನಮಃ

ಓಂ ತ್ರಿಲೋಕಸ್ಥಾಯೈ ನಮಃ

ಓಂ ತ್ರಿವಿಕ್ರಮಪದೋದ್ಭವಾಯೈ ನಮಃ 100


ಓಂ ತ್ರಿಧಾಸೂಕ್ಷ್ಮಾಯೈ ನಮಃ

ಓಂ ತ್ರಿರಾಮೇಶ್ಯೈ ನಮಃ

ಓಂ ತ್ರಿರಾಮಾರ್ಚ್ಯಾಯೈ ನಮಃ

ಓಂ ತ್ರಿರಾಮವರದಾಯಿನ್ಯೈ ನಮಃ

ಓಂ ತ್ರಿದಶಾಶ್ರಿತಪಾದಾಬ್ಜಾಯೈ ನಮಃ

ಓಂ ತ್ರಿದಶಾಲಯಚಂಚಲಾಯೈ ನಮಃ 

ಓಂ ತ್ರಿದಶಪ್ರಾರ್ಥ್ಯಾಯೈ ನಮಃ

ಓಂ ತ್ರಿದಶಾಶುವರಪ್ರದಾಯೈ ನಮಃ 108


ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

***


ತುಳಸೀ ಅಷ್ಟೋತ್ತರಶತ ನಾಮಾವಳಿಃ



ಓಂ ಶ್ರೀ ತುಲಸ್ಯೈ ನಮಃ

ಓಂ ನಂದಿನ್ಯೈ ನಮಃ

ಓಂ ದೇವ್ಯೈ ನಮಃ

ಓಂ ಶಿಖಿನ್ಯೈ ನಮಃ

ಓಂ ಧಾರಿಣ್ಯೈ ನಮಃ

ಓಂ ಧಾತ್ರ್ಯೈ ನಮಃ

ಓಂ ಸಾವಿತ್ರ್ಯೈ ನಮಃ

ಓಂ ಸತ್ಯಸಂಧಾಯೈ ನಮಃ

ಓಂ ಕಾಲಹಾರಿಣ್ಯೈ ನಮಃ

ಓಂ ಗೌರ್ಯೈ ನಮಃ    || ೧೦ ||

ಓಂ ದೇವಗೀತಾಯೈ ನಮಃ

ಓಂ ದ್ರವೀಯಸ್ಯೈ ನಮಃ

ಓಂ ಪದ್ಮಿನ್ಯೈ ನಮಃ

ಓಂ ಸೀತಾಯೈ ನಮಃ

ಓಂ ರುಕ್ಮಿಣ್ಯೈ ನಮಃ

ಓಂ ಪ್ರಿಯಭೂಷಣಾಯೈ ನಮಃ

ಓಂ ಶ್ರೇಯಸ್ಯೈ ನಮಃ

ಓಂ ಶ್ರೀಮತ್ಯೈ ನಮಃ

ಓಂ ಮಾನ್ಯಾಯೈ ನಮಃ

ಓಂ ಗೌತಮಾರ್ಚಿತಾಯೈ ನಮಃ || ೨೦ ||

ಓಂ ತ್ರೇತಾಯೈ ನಮಃ

ಓಂ ತ್ರಿಪಥಗಾಯೈ ನಮಃ

ಓಂ ತ್ರಿಪಾದಾಯೈ ನಮಃ

ಓಂ ತ್ರೈಮೂರ್ತ್ಯೈ ನಮಃ

ಓಂ ಜಗತ್ರಯಾಯೈ ನಮಃ

ಓಂ ತ್ರಾಸಿನ್ಯೈ ನಮಃ

ಓಂ ಗಾತ್ರಾಯೈ ನಮಃ

ಓಂ ಗಾತ್ರಿಯಾಯೈ ನಮಃ

ಓಂ ಗರ್ಭವಾರಿಣ್ಯೈ ನಮಃ

ಓಂ ಶೋಭನಾಯೈ ನಮಃ  || ೩೦ ||

ಓಂ ಸಮಾಯೈ ನಮಃ

ಓಂ ದ್ವಿರದಾಯೈ ನಮಃ

ಓಂ ಆರಾಧ್ಯೈ ನಮಃ

ಓಂ ಯಜ್ಞವಿದ್ಯಾಯೈ ನಮಃ

ಓಂ ಮಹಾವಿದ್ಯಾಯೈ ನಮಃ

ಓಂ ಗುಹ್ಯವಿದ್ಯಾಯೈ ನಮಃ

ಓಂ ಕಾಮಾಕ್ಷ್ಯೈ ನಮಃ

ಓಂ ಕುಲಾಯೈ ನಮಃ

ಓಂ ಶ್ರೀಯೈ ನಮಃ

ಓಂ ಭೂಮ್ಯೈ ನಮಃ  || ೪೦ ||

ಓಂ ಭವಿತ್ರ್ಯೈ ನಮಃ

ಓಂ ಸಾವಿತ್ರ್ಯೈ ನಮಃ

ಓಂ ಸರ್ವವೇದವಿದಾಂವರಾಯೈ ನಮಃ

ಓಂ ಶಂಖಿನ್ಯೈ ನಮಃ

ಓಂ ಚಕ್ರಿಣ್ಯೈ ನಮಃ

ಓಂ ಚಾರಿಣ್ಯೈ ನಮಃ

ಓಂ ಚಪಲೇಕ್ಷಣಾಯೈ ನಮಃ

ಓಂ ಪೀತಾಂಬರಾಯೈ ನಮಃ

ಓಂ ಪ್ರೋತ ಸೋಮಾಯೈ ನಮಃ

ಓಂ ಸೌರಸಾಯೈ ನಮಃ || ೫೦ ||

ಓಂ ಅಕ್ಷಿಣ್ಯೈ ನಮಃ

ಓಂ ಅಂಬಾಯೈ ನಮಃ

ಓಂ ಸರಸ್ವತ್ಯೈ ನಮಃ

ಓಂ ಸಂಶ್ರಯಾಯೈ ನಮಃ

ಓಂ ಸರ್ವ ದೇವತ್ಯೈ ನಮಃ

ಓಂ ವಿಶ್ವಾಶ್ರಯಾಯೈ ನಮಃ

ಓಂ ಸುಗಂಧಿನ್ಯೈ ನಮಃ

ಓಂ ಸುವಾಸನಾಯೈ ನಮಃ

ಓಂ ವರದಾಯೈ ನಮಃ

ಓಂ ಸುಶ್ರೋಣ್ಯೈ ನಮಃ  || ೬೦ ||

ಓಂ ಚಂದ್ರಭಾಗಾಯೈ ನಮಃ

ಓಂ ಯಮುನಾಪ್ರಿಯಾಯೈ ನಮಃ

ಓಂ ಕಾವೇರ್ಯೈ ನಮಃ

ಓಂ ಮಣಿಕರ್ಣಿಕಾಯೈ ನಮಃ

ಓಂ ಅರ್ಚಿನ್ಯೈ ನಮಃ

ಓಂ ಸ್ಥಾಯಿನ್ಯೈ ನಮಃ

ಓಂ ದಾನಪ್ರದಾಯೈ ನಮಃ

ಓಂ ಧನವತ್ಯೈ ನಮಃ

ಓಂ ಶೋಚಮನಸ್ಯಾಯೈ ನಮಃ

ಓಂ ಶುಚಿನ್ಯೈ ನಮಃ  ||  ೭೦ ||

ಓಂ ಶ್ರೇಯಸ್ಯೈ ನಮಃ

ಓಂ ಪ್ರೀತಿಚಿಂತೇಕ್ಷಣಾಯೈ ನಮಃ

ಓಂ ವಿಭೂತ್ಯೈ ನಮಃ

ಓಂ ಆಕೃತ್ಯೈ ನಮಃ

ಓಂ ಆವಿರ್ಭೂತ್ಯೈ ನಮಃ

ಓಂ ಪ್ರಭಾವಿನ್ಯೈ ನಮಃ

ಓಂ ಗಂಧಿನ್ಯೈ ನಮಃ

ಓಂ ಸ್ವರ್ಗಿನ್ಯೈ ನಮಃ

ಓಂ ಗದಾಯೈ ನಮಃ

ಓಂ ವೇದ್ಯಾಯೈ ನಮಃ || ೮೦ ||

ಓಂ ಪ್ರಭಾಯೈ ನಮಃ

ಓಂ ಸಾರಸ್ಯೈ ನಮಃ

ಓಂ ಸರಸಿವಾಸಾಯೈ ನಮಃ

ಓಂ ಸರಸ್ವತ್ಯೈ ನಮಃ

ಓಂ ಶರಾವತ್ಯೈ ನಮಃ

ಓಂ ರಸಿನ್ಯೈ ನಮಃ

ಓಂ ಕಾಳಿನ್ಯೈ ನಮಃ

ಓಂ ಶ್ರೇಯೋವತ್ಯೈ ನಮಃ

ಓಂ ಯಾಮಾಯೈ ನಮಃ

ಓಂ ಬ್ರಹ್ಮಪ್ರಿಯಾಯೈ ನಮಃ  || ೯೦ ||

ಓಂ ಶ್ಯಾಮಸುಂದರಾಯೈ ನಮಃ

ಓಂ ರತ್ನರೂಪಿಣ್ಯೈ ನಮಃ

ಓಂ ಶಮನಿಧಿನ್ಯೈ ನಮಃ

ಓಂ ಶತಾನಂದಾಯೈ ನಮಃ

ಓಂ ಶತದ್ಯುತಯೇ ನಮಃ

ಓಂ ಶಿತಿಕಂಠಾಯೈ ನಮಃ

ಓಂ ಪ್ರಯಾಯೈ ನಮಃ

ಓಂ ಧಾತ್ರ್ಯೈ ನಮಃ

ಓಂ ಶ್ರೀವೃಂದಾವನ್ಯೈ ನಮಃ

ಓಂ ಕೃಷ್ಣಾಯೈ ನಮಃ || ೧೦೦ ||

ಓಂ ಭಕ್ತವತ್ಸಲಾಯೈ ನಮಃ

ಓಂ ಗೋಪಿಕಾಕ್ರೀಡಾಯೈ ನಮಃ

ಓಂ ಹರಾಯೈ ನಮಃ

ಓಂ ಅಮೃತರೂಪಿಣ್ಯೈ ನಮಃ

ಓಂ ಭೂಮ್ಯೈ ನಮಃ

ಓಂ ಶ್ರೀಕೃಷ್ಣಕಾಂತಾಯೈ ನಮಃ ‌                                   

ಓಂ ಶ್ಯಾಮಸುಂದರಾಯೈ ನಮಃ                       

 ಓಂ ಭೂಲೋಕಾಮೃತರೂಪಾಯೈ ನಮಃ 


ಇತಿ ಶ್ರೀ ತುಳಸೀ ಅಷ್ಟೋತ್ತರಶತನಾಮಾವಳಿಃ ಸಂಪೂರ್ಣಂ

***




No comments:

Post a Comment