SEARCH HERE

Tuesday 1 January 2019

ವಾಸ್ತು ಗೃಹನಿರ್ಮಾಣ ವಿಜ್ಞಾನ vaastu parihara house building and stay






ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ಆಕಾಶ
ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.

ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

ಸರಳ ವಾಸ್ತು ವಿಚಾರ ಶ್ರೀ ಸುಧಾಕರ.
**********

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.  

ಭೂಮಿ ಅಥವಾ ಸೈಟ್ ನ ಯಾವುದಾದರೂ ಒಂದು ಭಾಗದಲ್ಲಿ ಅರ್ಧ ಅಡಿ ವ್ಯಾಸ ಒಂದು ಅಡಿ ಆಳವಿರುವಂತೆ ಗುಂಡಿಯೊಂದನ್ನು ತೋಡಿ. ಹೀಗೆ ಅಗೆದ ಜಾಗದಲ್ಲಿ ತೋರು ಬೆರಳಿನಿಂದ ಓಂಕಾರ ಶಬ್ಧವನ್ನು ಬರೆಯಿರಿ. ಆಮೇಲೆ ಅಷ್ಟದಿಕ್ಕುಗಳ ದೇವರನ್ನು ನೆನೆಯಿರಿ. ಮಣ್ಣನ್ನು ಶೇಖರಣೆ ಮಾಡಿ. ಮೂರು ರಾತ್ರಿಗಳ ಕಾಲ ಆ ಜಾಗವನ್ನು ಹಾಗೇ ಬಿಡಿ. ನಾಲ್ಕನೆಯ ದಿನ ಅಗೆದ ಜಾಗದಲ್ಲಿ ಶೇಖರಿಸಿಟ್ಟುಕೊಂಡ ಮಣ್ಣನ್ನು ತುಂಬಿ. ಒಂದೊಮ್ಮೆ ಮಣ್ಣು ತುಂಬಿದ ಮೇಲೂ ಒಂದಷ್ಟು ಮಣ್ಣು ಉಳಿದರೆ ನೀವು ಕೊಳ್ಳಲಿರುವ ಜಾಗ ಒಳ್ಳೆಯದು ಮುಂದೆ ಅಭಿವೃದ್ಧಿ ಕಾಣುತ್ತದೆ ಎಂದು ಅರ್ಥ. ಶೇಖರಿಸಿದ ಮಣ್ಣು ತುಂಬದೇ ಹೋದರೆ ಆ ಜಾಗ ಪ್ರಶಸ್ತವಲ್ಲ ಎಂದು ಅರ್ಥ.

ಆರ್ಥಿಕ ವೃದ್ಧಿಗೆ ವಾಸ್ತು

1.ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.

2. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.

3.ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.

4. ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.

5. ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.

6. ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.

ಅಡುಗೆಮನೆ  Kitchen  

ನಮ್ಮ ಹಿಂದೂ ಧರ್ಮದ ಪ್ರಕಾರ ಅಥವಾ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುಗಳಿಗೆ ಅದರದೇ ಆದ ಸ್ಥಳಗಳನ್ನು ನಿಗದಿ ಪಡಿಸಲಾಗಿದೆಯಂತೆ ಅದರ ಪ್ರಕಾರ ವಸ್ತುಗಳನ್ನು ಇಟ್ಟರೆ ಆ ಮನೆಗೆ ಶ್ರೇಯಸ್ಸಂತೆ. 

ವಾಸ್ತುಶಾಸ್ತ್ರದ ಪ್ರಕಾರ ಮುಖ್ಯಾವಾಗಿ ಅಡುಗೆ ಮನೆ ಅಗ್ನಿ ಸ್ಥಾನದ ಆಗ್ನೇಯ ಭಾಗದಲ್ಲಿ ಇರಬೇಕು ಹಾಗೂ ಮತ್ತು ಒಲೆಯನ್ನ ಮನೆಗೆ ಬಂದ ಇತರರಿಗೆ ಕಾಣದಂತೆ ಇಡಬೇಕು. ಅಗ್ನಿ ಮತ್ತು ನೀರು ಎರಡು ಪರಸ್ಪರ ವಿರುದ್ಧ ಪದಾರ್ಥಗಳು. ಆದ್ದರಿಂದ ಅಡುಗೆ ಮನೆಯಲ್ಲಿ ಅಗ್ನಿ ಹಾಗು ನೀರಿಗೆ ಸಂಬಂಧ ಪಟ್ಟ ವಸ್ತುವನ್ನ ಆದಷ್ಟು ದೂರ ವಿಟ್ಟರೆ ಒಳ್ಳೆಯದು.

ಉಪ್ಪು ಹಾಗು ಅರಿಶಿನ ಅಡುಗೆಗೆ ಬಳಸುವ ಪ್ರದಾನ ವಸ್ತುಗಳು, ಯಾವುದೇ ಆಹಾರ ತಯಾರಿಸಲು ಉಪ್ಪು ಹಾಗು ಅರಿಶಿನ ಅಗತ್ಯ ಹೆಚ್ಚು, ಉಪ್ಪು ಆಹಾರಕ್ಕೆ ರುಚಿಯನ್ನ ಕೊಟ್ಟರೆ ಅರಿಶಿನ ಆಹಾರಕ್ಕೆ ಬಣ್ಣ ಮತ್ತು ಔಷದಿಯ ಗುಣವನ್ನು ನೀಡಿ ಆರೋಗ್ಯವನ್ನ ನೀಡುತ್ತದೆ. ಈ ಉಪ್ಪು ಮತ್ತು ಅರಿಶಿಣವನ್ನ ಒಂದೇ ಕಡೆ ಭದ್ರಪಡಿಸಿ ಇಡಬಾರದು ಹೀಗೆ ಇಟ್ಟರೆ ದರಿದ್ರ ನಿಮ್ಮನ್ನ ಹುಡುಕಿ ಕೊಂಡು ಬರುತ್ತದೆ ಯಂತೆ, ಹಾಗು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಕಾಣಿಕೊಳ್ಳುತ್ತದೆಯಂತೆ. ಹಾಗೇ ಮನೆಯಲ್ಲಿ ಉಪ್ಪು ಕಳ್ಳತನ ವಾದರೆ ಮನೆಯಿಂದ ಲಕ್ಷ್ಮಿ ಹೊರಹೋದಂತೆ ಎಂದು ಹೇಳುತ್ತಾರೆ.

ನಮ್ಮ ಹಿಂದೂ ಧರ್ಮದ ಪ್ರಕಾರ ಅಥವಾ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುಗಳಿಗೆ ಅದರದೇ ಆದ ಸ್ಥಳಗಳನ್ನು ನಿಗದಿ ಪಡಿಸಲಾಗಿದೆಯಂತೆ ಅದರ ಪ್ರಕಾರ ವಸ್ತುಗಳನ್ನು ಇಟ್ಟರೆ ಆ ಮನೆಗೆ ಶ್ರೇಯಸ್ಸಂತೆ. 

ವಾಸ್ತುಶಾಸ್ತ್ರದ ಪ್ರಕಾರ ಮುಖ್ಯಾವಾಗಿ ಅಡುಗೆ ಮನೆ ಅಗ್ನಿ ಸ್ಥಾನದ ಆಗ್ನೇಯ ಭಾಗದಲ್ಲಿ ಇರಬೇಕು ಹಾಗೂ ಮತ್ತು ಒಲೆಯನ್ನ ಮನೆಗೆ ಬಂದ ಇತರರಿಗೆ ಕಾಣದಂತೆ ಇಡಬೇಕು. ಅಗ್ನಿ ಮತ್ತು ನೀರು ಎರಡು ಪರಸ್ಪರ ವಿರುದ್ಧ ಪದಾರ್ಥಗಳು. ಆದ್ದರಿಂದ ಅಡುಗೆ ಮನೆಯಲ್ಲಿ ಅಗ್ನಿ ಹಾಗು ನೀರಿಗೆ ಸಂಬಂಧ ಪಟ್ಟ ವಸ್ತುವನ್ನ ಆದಷ್ಟು ದೂರ ವಿಟ್ಟರೆ ಒಳ್ಳೆಯದು.

ಉಪ್ಪು ಹಾಗು ಅರಿಶಿನ ಅಡುಗೆಗೆ ಬಳಸುವ ಪ್ರದಾನ ವಸ್ತುಗಳು, ಯಾವುದೇ ಆಹಾರ ತಯಾರಿಸಲು ಉಪ್ಪು ಹಾಗು ಅರಿಶಿನ ಅಗತ್ಯ ಹೆಚ್ಚು, ಉಪ್ಪು ಆಹಾರಕ್ಕೆ ರುಚಿಯನ್ನ ಕೊಟ್ಟರೆ ಅರಿಶಿನ ಆಹಾರಕ್ಕೆ ಬಣ್ಣ ಮತ್ತು ಔಷದಿಯ ಗುಣವನ್ನು ನೀಡಿ ಆರೋಗ್ಯವನ್ನ ನೀಡುತ್ತದೆ. ಈ ಉಪ್ಪು ಮತ್ತು ಅರಿಶಿಣವನ್ನ ಒಂದೇ ಕಡೆ ಭದ್ರಪಡಿಸಿ ಇಡಬಾರದು ಹೀಗೆ ಇಟ್ಟರೆ ದರಿದ್ರ ನಿಮ್ಮನ್ನ ಹುಡುಕಿ ಕೊಂಡು ಬರುತ್ತದೆ ಯಂತೆ, ಹಾಗು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಕಾಣಿಕೊಳ್ಳುತ್ತದೆಯಂತೆ. ಹಾಗೇ ಮನೆಯಲ್ಲಿ ಉಪ್ಪು ಕಳ್ಳತನ ವಾದರೆ ಮನೆಯಿಂದ ಲಕ್ಷ್ಮಿ ಹೊರಹೋದಂತೆ ಎಂದು ಹೇಳುತ್ತಾರೆ.

ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು

ಮಲಗುವ ಕೋಣೆ

ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.

ಕುಟುಂಬದ ಸದಸ್ಯರ ಜತೆ ಸಾಮರಸ್ಯ 

ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.

ಚಾಕು ಮತ್ತು ಕತ್ತರಿಗಳು

ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.

ಮಕ್ಕಳು: 

ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.

ದಂಪತಿ ಕೋಣೆಯಲ್ಲಿ

ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು.

ದುಷ್ಟ ಶಕ್ತಿಗಳಿಗೆ  ಸರಳ ಪರಿಹಾರ

ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ಮಾಡಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣಕಾಸಿನ ಸಮಸ್ಯೆ, ಸಂಬಂಧದಲ್ಲಿ ಅಶಾಂತಿ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಆದಕಾರಣ ನಿಮ್ಮ ಮೇಲೆ ಮಾಟಮಂತ್ರ ಪ್ರಯೋಗವಾಗಿದೆ ಎಂಬುದು ಖಚಿತವಾದರೆ ಚಿಂತಿಸಬೇಡಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ.

ನವಗ್ರಹ ತಾಂಬೂಲದಲ್ಲಿ ಬೆಲ್ಲದನ್ನ ಇಟ್ಟು ಪೂಜೆಯನ್ನು ಮಾಡಿ, ಬೆಲ್ಲದನ್ನ ನೈವೇದ್ಯ ಮಾಡಿ, ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು ಬಹಳ ಬೇಗ ನಿವಾರಣೆಯಾಗಿ ಸುಖವಾಗಿರುತ್ತೀರಿ.’

ಈ ಕಾರಣದಿಂದ ಮನೆಯಲ್ಲಿ ಹೆಚ್ಚಾಗುತ್ತೆ ಅಶಾಂತಿ

ಕೆಲವರ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಬಡತನ ಕಾಡುತ್ತಿರುತ್ತೆ. ಇದಕ್ಕೆ ಮನೆಯ ವಾಸ್ತುದೋಷ ಕೂಡ ಕಾರಣ. ವಾಸ್ತುಗೆ ಸಂಬಂಧಿಸಿದ ವಿಷ್ಯಗಳನ್ನು ತಿಳಿಯದೇ ದೋಷ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ.

ಮನೆಯ ಮುಖ್ಯದ್ವಾರದ ಬಣ್ಣ ಕಪ್ಪಗಿರಬಾರದು. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಬಣ್ಣ ಕಪ್ಪಗಿದ್ದರೆ ಸದಾ ಗಲಾಟೆ, ಜಗಳ, ಅಶಾಂತಿ ನೆಲೆಸಿರುತ್ತದೆ.

ಮನೆಯ ಮುಖ್ಯದ್ವಾರಕ್ಕಿಂತ ಮನೆಯ ಉಳಿದ ಬಾಗಿಲು ಚಿಕ್ಕದಿರಬೇಕು. ಉಳಿದ ಬಾಗಿಲು ದೊಡ್ಡದಿದ್ದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಬೆಳಿಗ್ಗೆ ಸೂರ್ಯೋದಯದ ವೇಳೆ ಮನೆಯ ಕಿಟಕಿಗಳನ್ನು ತೆರೆದಿರಬೇಕು. ಇದ್ರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸೂರ್ಯೋದಯದ ವೇಳೆ ಕಿಟಕಿ ಬಾಗಿಲುಗಳು ಮುಚ್ಚಿದ್ದರೆ ಹಿರಿಯರು ಹಾಗೂ ಚಿಕ್ಕ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡಲು ಶುರುವಾಗುತ್ತದೆ.

ಮುಖ್ಯದ್ವಾರದ ಬಳಿ ಚಾಕು ಅಥವಾ ಕತ್ತಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಇಡಬೇಡಿ. ಇದ್ರಿಂದ ಗಲಾಟೆ ಜಗಳ ಹೆಚ್ಚಾಗುತ್ತದೆ.

ಮನೆಯ ಮುಖ್ಯ ದ್ವಾರ

ಇಳಿಜಾರು, ಬದಿಗೆ ಸರಿದ ಅಥವಾ ವೃತ್ತಾಕಾರವನ್ನು ಮುಖ್ಯ ದ್ವಾರ ಹೊಂದಿರಬಾರದು.

ಇನ್ನೊಂದು ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ಇದು ಇರಬಾರದು.

ಕಾಂಪೌಂಡ್ಗೆ ನೇರವಾಗಿ ಮುಖ್ಯ ದ್ವಾರ ಇರುವುದು ಸೂಕ್ತವಲ್ಲ.

ಮುಖ್ಯ ದ್ವಾರವು ಸಂಪು, ಸೆಪ್ಟಿಕ್ ಟ್ಯಾಂಕ್ ಮೊದಲಾದವುಗಳ ಮೇಲಿರಬಾರದು.

ಇತರ ಕಟ್ಟಡ ಇಲ್ಲವೇ ಮರಗಳ ನೆರಳು ಅದರ ಮೇಲೆ ಬೀಳಬಾರದು.

ಕಸದ ಬುಟ್ಟಿ ಅಥವಾ ತ್ಯಾಜ್ಯ ಋುಣಾತ್ಮಕ ಎನರ್ಜಿಯನ್ನು ಹೊಸ ಸೂಸುತ್ತದೆ.

ಸ್ವಯಂಚಾಲಿತವಾಗಿ ತೆರೆಯುವ-ಮುಚ್ಚಿಕೊಳ್ಳುವ ಬಾಗಿಲು ಬೇಡ.

ಯಾವುದೇ ಗೋಡೆಯ ಸರಿ ಮಧ್ಯ ಭಾಗದಲ್ಲಿ ಮುಖ್ಯ ದ್ವಾರ ಇರುವುದು ಬೇಡ.

ಒಂದನ್ನೊಂದು ಹಾಯುವ ರಸ್ತೆಗೆ ಮುಖ ಮಾಡಿ ಮುಖ್ಯ ದ್ವಾರ ನಿರ್ಮಿಸಬೇಡಿ.

ಮುಖ್ಯ ಬಾಗಿಲಿಗೆ ಕಪ್ಪು ಬಣ್ಣ ಬಳಿಯಬೇಡಿ.

ದೇವಾಲಯ ಅಥವಾ ಯಾವುದೇ ಧಾರ್ಮಿಕ ಕೇಂದ್ರಕ್ಕೆ ನೇರವಾಗಿ ಇರಬಾರದು.

ಕಂಬ, ಮರ, ವಯರ್ ಮೊದಲಾದವು ಮುಖ್ಯ ದ್ವಾರದ ಎದುರು ಇರುವುದು ಬೇಡ.

ಪಾಸಿಟಿವ್ ಎನರ್ಜಿಯನ್ನು ತಡೆಯುವ ಕಮಾನು ಕಿಟಕಿ, ಬಾಗಿಲು ಇರುವುದು ಬೇಡ.

ಜ್ಯೋತಿಷದ ಪ್ರಕಾರ ಮರ, ಗಿಡಗಳ ಪೋಷಣೆ, ಆರಾಧನೆ, ಅರ್ಚನೆ, ರಕ್ಷಣೆಯಿಂದ ದೋಷಗಳು ನಿವಾರಣೆಯಾಗುತ್ತವೆ.

ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು, ನಕಾರಾತ್ಮಕ ಅಂಶಗಳು ಮೂಡಣ ದಿಕ್ಕಿನಲ್ಲಿ ಹೆಚ್ಚಬಾರದು ಎಂದರೆ 
ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಗಿಡ, 
ಉತ್ತರಕ್ಕೆ ಮಾವಿನ ಗಿಡ, 
ದಕ್ಷಿಣಕ್ಕೆ ಅಡಿಕೆ ಮರ,
 ಪೂರ್ವಕ್ಕೆ ಹಲಸಿನ ಮರವನ್ನು ನೆಡಬೇಕೆನ್ನುತ್ತದೆ ವಾಸ್ತುಶಾಸ್ತ್ರ. 

ಉತ್ತರ ದಿಕ್ಕಿನಲ್ಲಿ ಅಡುಕೆಯ ಹೊಂಬಾಳೆಯನ್ನು ಸಿಲುಕಿಸುವುದರಿಂದ ದೋಷ ನಿವಾರಣೆಯಾಗುತ್ತದೆ.

ದೈವ ಬಲವಿದ್ದರೂ ಲಕ್ಷ್ಮೇ ಕಟಾಕ್ಷವಿಲ್ಲದಿದ್ದರೆ ಪ್ರಯೋಜನವಿಲ್ಲ. ಲಕ್ಷ್ಮೇ ದೇವಿಯ ಕೃಪೆಗಾಗಿ ಮನೆಯ ಪೂರ್ವದಲ್ಲಿ ಬಿಲ್ವ ವೃಕ್ಷವನ್ನು ಬೆಳೆಸಬೇಕು.

ಮನೆ ಕಟ್ಟುವ ಮೊದಲು ಈ ವಿಷಯಗಳ ಮೇಲೆ ಗಮನ ಕೊಡಿ.

ನೀವು ಆಯ್ಕೆ ಮಾಡದ ನಿವೇಶನ ಎರೆಮಣ್ಣು (ಕಪ್ಪು) ಅಥವಾ ಜೇಡಿ ಮಣ್ಣಿನದಾಗಿರಬಹುದು.

ಹಳೆಯ ಸ್ಮಶಾನ ಬಂಡೆಗಲ್ಲು ಮತ್ತು ನೀರಿನ ಝರಿಇಂದ ಉಂಟಾದ ಕೊರಕಲುಗಳನ್ನುಳ್ಳ ನಿವೇಶನ ಖರೀದಿಸಲುಬಾರದು.

ನಿವೇಶನದಲ್ಲಿ ಸುಲಭವಾಗಿ ನೀರು ದೊರೆಯುವಂತಿರಬೇಕು.

ಬಹಳ ಆಳಕ್ಕೆ ಬೇರುಗಳನ್ನು ಬಿಟ್ಟಂತಹ ಬೃಹತ್ ಮರಗಳು ಅಂದರೆ ಬೇವು, ಮಾವು, ಆಲ ಮುಂತಾದ ಮರಗಳಿದ್ದ ನಿವೇಶನವನ್ನು ಖರೀದಿಸಬಾರದು.

ನಿವೇಶನ ಚೌಕಾಕಾರವಾಗಿದ್ದು ಉತ್ತರ ಮತ್ತು ಈಶಾನ್ಯ ದಿಕ್ಕುಗಳ ಕಡೆಗೆ ಇಳಿಜಾರಾಗಿರಬೇಕು.

ಐದು ಮೂಲೆಗಳನ್ನು ಹೊಂದಿರುವ ನಿವೇಶನವನ್ನು ಖರೀದಿಸಬಾರದು.


ಅಂದರೆ ಮೂರು ಮೂಲೆಯ ನಿವೇಶನವು ಒಳ್ಳೆಯದಲ್ಲ
***

ವಾಸ್ತು ಶಾಸ್ತ್ರ: ವಾಸ್ತು ಪ್ರಕಾರ ಮನೆಗೆ ಸಕಾರಾತ್ಮಕತೆ ತುಂಬುವುದು ಹೇಗೆ?

☘️☘️☘️☘️☘️☘️☘️☘️☘️☘️

ನಾವು ಸದಾ ಸಕಾರಾತ್ಮಕವಾಗಿರಬೇಕು, ಒಳ್ಳೆಯದನ್ನೇ ಯೋಚಿಸಬೇಕು, ಒಳಿತನ್ನೇ ಸದಾ ಬಯಸಬೇಕು. ಆದರೆ ಇದೆಲ್ಲವೂ ನಮ್ಮ ಮಾನಸಿಕ ಭಾವನೆಗಳು ಒಂದಾದರೆ ದೈವಿಕ ಶಕ್ತಿ ಸಹ ಇರಬೇಕು, ನಮ್ಮ ಸುತ್ತಮುತ್ತ ವಾತಾವರಣ ಸಹ ಅದಕ್ಕೆ ಸಹಕಾರ ನೀಡುವಂತಿರಬೇಕು.

ಮನೆಯಲ್ಲಿ, ಕಚೇರಿಯಲ್ಲಿ ಸಕಾರಾತ್ಮಕತೆಯನ್ನು ತರುವುದು ಹೇಗೆ, ಇದಕ್ಕೆ ಮನೆಯ ವಾಸ್ತು ಹೇಗಿರಬೇಕು ಎಂಬುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ವಿನ್ಯಾಸ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಿಂದ ಹೊರಹೊಮ್ಮುವ ಸಕಾರಾತ್ಮಕತೆಯು ಅಲ್ಲಿ ವಾಸಿಸುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರನ್ನು ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.ಹೀಗಾಗಿ, ಸರಿಯಾದ ವಾಸ್ತು ತತ್ವಗಳು ಅದು ಸೃಷ್ಟಿಸುವ ಸಕಾರಾತ್ಮಕ ಶಕ್ತಿಯು ಮನೆಯ ಸದಸ್ಯರನ್ನು ರೀಚಾರ್ಜ್ ಮಾಡುತ್ತದೆ ಮತ್ತು ಜೀವನವು ಅವರ ಮೇಲೆ ಎಸೆಯುವ ಎಲ್ಲಾ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ.

ವಾಸ್ತು ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ, ಮನೆಯಲ್ಲಿ ಸಕಾರಾತ್ಮತೆ ತುಂಬುವುದು ಹೇಗೆ ಮುಂದೆ ನೋಡೋಣ:

ನಿಮ್ಮ ಮುಖ್ಯ ಬಾಗಿಲು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಮನೆಯ ಮುಖ್ಯ ದ್ವಾರದ ಹೊರಗೆ ಕಸವನ್ನು ಇಡಬೇಡಿ. ಅಲ್ಲದೆ, ಯಾವುದೇ ಭಾರವಾದ ವಸ್ತುವನ್ನು ಮುಖ್ಯ ಬಾಗಿಲಿನ ಬಳಿ ಇಡಬೇಡಿ ಏಕೆಂದರೆ ಅದು ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತದೆ.

ಅಡುಗೆ ಮನೆ

ಅಗ್ನಿಯ ಅಧಿಪತಿಯಾದ ಅಗ್ನಿ ಭಗವಂತನ ದಿಕ್ಕು ಎಂದು ನಂಬಿರುವುದರಿಂದ ಆಗ್ನೇಯ ದಿಕ್ಕಿನಲ್ಲಿ ಮಾತ್ರ ಅಡುಗೆ ಮನೆಯನ್ನು ನಿರ್ಮಿಸಬೇಕು.

ಕಿರಣಗಳು

ವಾಸ್ತು ಶಾಸ್ತ್ರದ ಪ್ರಕಾರ, ಕಿರಣಗಳ ಕೆಳಗೆ ಕುಳಿತುಕೊಳ್ಳುವುದರಿಂದ ನಾವು ದೈವಿಕ ಶಕ್ತಿಯ ಮೂಲದೊಂದಿಗೆ ಹಂಚಿಕೊಳ್ಳುವ ಸಂಪರ್ಕವನ್ನು ಮುರಿಯಬಹುದು ಮತ್ತು ಆದ್ದರಿಂದ, ಹಾಸಿಗೆ, ಸ್ಟಡಿ ಟೇಬಲ್ ಮುಂತಾದ ಯಾವುದೇ ಪೀಠೋಪಕರಣಗಳನ್ನು ಕಿರಣದ ಕೆಳಗೆ ಇಡಬಾರದು.

ವಾಶ್‌ರೂಮ್‌ಗಳು

ವಾಶ್‌ರೂಮ್‌ಗಳನ್ನು ಮೆಟ್ಟಿಲುಗಳ ಕೆಳಗೆ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಾರದು ಏಕೆಂದರೆ ಇದು ಕುಟುಂಬದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣಕಾಸಿನಲ್ಲಿ ಕುಸಿತವನ್ನು ತರುತ್ತದೆ.

ಪೂಜಾ ಕೊಠಡಿ

ಬೃಹತ್ ಪೂಜಾ ಕೊಠಡಿಗಳನ್ನು ನಿರ್ಮಿಸಬೇಡಿ ಮತ್ತು ಮಲಗುವ ಕೋಣೆಯಲ್ಲಿ ಎಂದಿಗೂ ಪೂಜಾ ಕೋಣೆಯನ್ನು ಮಾಡಬೇಡಿ. ಇದನ್ನು ಬದಲಾಯಿಸಲಾಗದಿದ್ದರೆ, ರಾತ್ರಿಯ ಸಮಯದಲ್ಲಿ ಅದನ್ನು ಬಟ್ಟೆಯಿಂದ ಮುಚ್ಚಿ. ಅಲ್ಲದೆ, ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿಯನ್ನು ಮಾಡಬೇಡಿ.

ಪೀಠೋಪಕರಣಗಳ ಆಯ್ಕೆ

ಯಾವಾಗಲೂ ಚೂಪಾದ ಅಂಚುಗಳನ್ನು ಹೊಂದಿರದ ಸಾಮಾನ್ಯ ಆಕಾರದ ಪೀಠೋಪಕರಣಗಳನ್ನು ಬಳಸಿ. ಅಲ್ಲದೆ, ಸಾಮಾನ್ಯ ಕಂದು ಬಣ್ಣವನ್ನು ಆರಿಸಿ ಮತ್ತು ಮನೆಯನ್ನು ಸಜ್ಜುಗೊಳಿಸಲು ಬೂದು, ಕಪ್ಪು ಮತ್ತು ಕೆಂಪು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ.

ವರ್ಣಚಿತ್ರಗಳು

ಯಾವಾಗಲೂ ಮನೆಯಲ್ಲಿ ಪ್ರಕೃತಿ ದೃಶ್ಯಗಳು, ಸಕಾರಾತ್ಮಕ ಆಲೋಚನೆಗಳಂತಹ ಸಕಾರಾತ್ಮಕ ಚಿತ್ರಗಳನ್ನು ಇರಿಸಿ. ಅಲ್ಲದೆ, ಯಾವುದೇ ಯುದ್ಧದ ವರ್ಣಚಿತ್ರಗಳು ಅಥವಾ ಬಡತನದ ಚಿತ್ರಗಳನ್ನು ಬಳಸಬೇಡಿ ಏಕೆಂದರೆ ಇದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ಮನೆಯ ಅಲಂಕಾರ

ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಗೋಡೆಗಳನ್ನು ಚಿತ್ರಿಸಲು ಸೂಕ್ತವಾದ ವಾಸ್ತು ಬಣ್ಣಗಳನ್ನು ಬಳಸಿ. ಅಲ್ಲದೆ, ಹಿತವಾದ ವಾತಾವರಣವನ್ನು ಸೃಷ್ಟಿಸಲು ಏರ್ ಫ್ರೆಶ್ನರ್, ಬೆಳಕಿನ ಕರ್ಪೂರ ಮತ್ತು ಅಗರಬತ್ತಿಗಳನ್ನು ಬಳಸಿ.

ಮುಂಜಾನೆ ಸಕಾರಾತ್ಮಕತೆ

ಮುಂಜಾನೆಯ ಸಮಯವು ಮನೆಯಲ್ಲಿ ಸಕಾರಾತ್ಮಕತೆಯನ್ನು ತುಂಬಲು ಕಿಟಕಿಗಳನ್ನು ತೆರೆಯುವ ಮೂಲಕ ಧನಾತ್ಮಕ ಶಕ್ತಿಯನ್ನು ತುಂಬಲು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ, ಇದರಿಂದ ಸೂರ್ಯನ ಬೆಳಕು ತಾಜಾ ಗಾಳಿಯೊಂದಿಗೆ ಮನೆಗೆ ಪ್ರವೇಶಿಸುತ್ತದೆ ಮತ್ತು ಕೆಲವು ದೈವಿಕ ಸಂಗೀತವನ್ನು ನುಡಿಸುತ್ತದೆ. ನಿಮ್ಮ ದಿನಕ್ಕೆ ಉತ್ತಮ ಆರಂಭ.

ಅಸ್ತವ್ಯಸ್ತತೆಯನ್ನು ಸ್ವಚ್ಛಗೊಳಿಸಿ

ಇನ್ನು ಬಳಕೆಯಲ್ಲಿಲ್ಲದ ವಸ್ತುಗಳನ್ನು ರಾಶಿ ಹಾಕುವುದು ಮನೆಯಲ್ಲಿ ಬಹಳಷ್ಟು ನಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ, ನೀವು ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಇದರಿಂದ ಅದು ಧನಾತ್ಮಕ ಶಕ್ತಿಗೆ ದಾರಿ ಮಾಡಿಕೊಡುತ್ತದೆ.

ವಿಶೇಷ ಸೂಚನೆ

ಮೇಲೆ ತಿಳಿಸಿದ ಸಲಹೆಗಳ ಹೊರತಾಗಿ, ನಿಮ್ಮ ಮನೆಗೆ ಹಿತವಾದ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವ ಧನಾತ್ಮಕ ಶಕ್ತಿಯ ಮಾರ್ಗಸೂಚಿಗಳಿಗಾಗಿ ಅನೇಕ ಇತರ ವಾಸ್ತುಗಳಿವೆ. ಎಲ್ಲಾ ಕಡೆಯಿಂದ ನಿಮ್ಮ ಮನೆಗೆ ಧನಾತ್ಮಕತೆಯನ್ನು ತರುವ ವೈಯಕ್ತೀಕರಿಸಿದ ಪರಿಹಾರಗಳನ್ನು ಪಡೆಯಲು ನೀವು ವಾಸ್ತು ತಜ್ಞರನ್ನು ಸಂಪರ್ಕಿಸಿ.
*****

No comments:

Post a Comment