SEARCH HERE

Tuesday 1 January 2019

ಪ್ರಾಣಾಯಾಮ pranayama



ಪ್ರಾಣಾಯಾಮ ಎಂದರೇನು?

ಶ್ವಾಸೋಚ್ವಾಸ ಇಲ್ಲದೆ ಯಾವುದೇ ಜೀವರಾಶಿಗಳಿರಲು ಸಾಧ್ಯವಿದೆಯೇ. 

ಸಸ್ಯಗಳಿಗೂ ಶ್ವಾಸೋಚ್ವಾಸಗಳಿವೆ. 

ಇದರ ಆದಾರದಲ್ಲೇ ಆಯುಷ್ಯ ನಿಂತಿರುವುದು. 

ಪ್ರಾಣಿಗಳ ಶ್ವಾಸೋಚ್ವಾಸಗಳು ಬೇರೆಬೇರೆ ರೂಪದಲ್ಲಿದೆ. ಮನೆಯಲ್ಲಿ ಸಾಕುವ ನಾಯಿ,ಬೆಕ್ಕು, ಆಕಳುಗಳ ಆಯುಷ್ಯ ಅಬ್ಬಾ ಎಂದರೆ ಹದಿನೈದು ಹದಿನಾರು ವರ್ಷ. 

ಅದರಲ್ಲಿ ಬೆಕ್ಕಿನದ್ದು ಬಹಳ ಕಡಿಮೆ. 

ಆಕಳು 22ವರ್ಷ ಬದುಕಿದ್ದೂ ಇದೆ. 

ಇನ್ನು ಮನುಷ್ಯನದ್ದು. ನಿಯಮ 120ವರ್ಷ. 

ಆದರೆ ಬದುಕುವುದು ಸಾಮಾನ್ಯವಾಗಿ ಎಂಭತ್ತೇ ವರ್ಷ.ನೂರು ದಾಟಿದವರೂ ಇದ್ದಾರೆ ಮತ್ತು ಐವತ್ತು ದಾಟದವರೂ ಇದ್ದಾರೆ ಅನ್ನಿ.

ಹೀಗೆಲ್ಲಾ ವ್ಯತ್ಯಾಸಕ್ಕೆ ಉಸಿರಾಟವೇ ಕಾರಣ. 

ನಮ್ಮ ಪೂರ್ವಜರು ಎಷ್ಟು ಮುಂದುವರಿದಿದ್ದರು ಎಂದರೆ ಈ ಶ್ವಾಸೋಚ್ವಾಸದ ವಿಚಾರದಲ್ಲಿ ಬಹಳ ಅಧ್ಯಯನ ಮಾಡಿದ್ದರು. 

ಇದರ ನಿಯಂತ್ರಣಕ್ಕಾಗಿ ಯೋಗಾಭ್ಯಾಸ ಶುರುವಾಯಿತು. ಅದರಲ್ಲಿ ಪ್ರಾಣಾಯಾಮ ಕ್ರಿಯೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ.

ಶ್ವಾಸೋಚ್ವಾಸದ ನಿಯಮವನ್ನು ಪ್ರಾಣಾಯಾಮದ ಅಭ್ಯಾಸದ ಮೂಲಕ ರೂಢಿಸಿಕೊಳ್ಳಬಹುದು.

ಪ್ರಾಣ ಎಂದರೆ ಆಮ್ಲಜನಕ. ಇದರ ಸಂಚಾರವೇ ಆಯಾಮ.

ಹಾಗಾಗಿ ಪ್ರಾಣ + ಆಯಾಮ= ಪ್ರಾಣಾಯಾಮವಾಗುತ್ತದೆ.

ನಾವು ಕೇವಲ.ಮೂಗಿನ.ಮೂಲಕ ವಾತಾವರಣದ ಗಾಳಿಯನ್ನು ಹೀರಿಕೊಳ್ಳುತ್ತೇವೆ. 

ಇದರಲ್ಲಿ ದೂಳು,ವಿಷಾನಿಲಗಳೂ ಸೇರಿಕೊಂಡಿರುತ್ತದೆ. 

ಒಳಗಡೆ ಈ ವಾಯು ಹೋದನಂತರ ಒಳಗಡೆ ಅಂದರೆ ದೇಹದಲ್ಲಿ ಇದರ process. ನಡೆಯುತ್ತದೆ. 

ಅಲ್ಲಿ ಶುದ್ಧವಾದ oxygen ಮಾತ್ರ ಒಳಸೇರುತ್ತದೆ. ಇದುವೇ ಪ್ರಾಣವಾಯು. 

ಇದು ಕೇವಲ ಶ್ವಾಸಕೋಶಕ್ಕೇ ಸಿಮಿತವಾಗಿಲ್ಲ. 

ದೇಹದ ಸಕಲ ಭಾಗಕ್ಕೂ ವಾಯು ಸಂಚಾರಬೇಕಾಗುತ್ತದೆ. 

ಇದರ ವಿಸರ್ಜನೆಯ ರೋಮ ಕೂಪಗಳ ಮೂಲಕವೂ ಆಗುತ್ತಿರುತ್ತದೆ. 

ಮೂಗಿನಲ್ಲಿ ಇಡಾ ಪಿಂಗಳಾ ಎಂಬ ನಾಡಿಗಳಿಗೆ. 

ಇದರಲ್ಲಿ ಒಂದರಲ್ಲಿ ತೆಗೆದುಕೊಂಡ ವಾಯುವನ್ನು ಇನ್ನೊಂದರಲ್ಲಿ ಬಿಡಬೇಕು. 

ಹೀಗೆ ಮಾಡಿದರೆ ಮದ್ಯದಲ್ಲಿದ್ದ ಸುಷ್ ಮ್ನಾ ನಾಡಿ ಹೀರಿಕೊಂಡು ದೇಹದ ಎಲ್ಲಾ ಭಾಗಗಳಿಗೂ ಕಳುಹಿಸುತ್ತದೆ. 

ಇದರ ನಿಯಂತ್ರಣ system ನ್ನು ಪ್ರಾಣಾಯಾಮದ ಮೂಲಕ ಸರಿಪಡಿಸಿ ಕೊಳ್ಳಬಹುದು .

ಇನ್ನು ಈ ವಾಯುವಿನಲ್ಲಿ ಐದು ವಿಧ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ವಾಯುಗಳೆಂಬ ಐದು ವಿಧ. ಇದರೊಳಗೂ ಐದು ಉಪವಾಯುಗಳಿವೆ.

ಅವುಗಳು ಕ್ರಮವಾಗಿ - ನಾಗ,ಕೂರ್ಮ, ಕೃಕರ, ದೇವದತ್ತ,, ಧನಂಜಯ. ಈ ಪ್ರಾಣವಾಯು ಹೃದಯದಲ್ಲೂ,, ಅಪಶನವು ಗುದ ಪ್ರದೇಶದಲ್ಲೂ, ಸಮಾನವು ನಾಭಿಯಲ್ಲೂ, ಉದಾನವೂ ಕಂಠದಲ್ಲೂ, ವ್ಯಾನವು ಶರೀರದ ಸಕಲಭಾಗಕ್ಕೂ ಸಂಚರಿಸುತ್ತದೆ. 

ನಾಗ ವಾಯು ವಾಗೀಂದ್ರ್ಯಕ್ಕೂ, ಕೂರ್ಮವು ಉನ್ಮೀಲನ ಕ್ರಿಯೆಗೂ, ಕೃಕರವು ಹಸಿವೆಗೂ, ದೇವದತ್ಯವು ಆಕಳಿಕೆ,ಬಿಕ್ಕಳಿಕೆ,ಆಲಸ್ಯಕ್ಕೂ, ,ಧನಂಜಯವು ವ್ಯಾನದ ಉಪವಾಯುವಾಗಿ ದೇಹದ ಸಕಲಭಾಗಕ್ಕೂ ಸಂಚರಿಸುತ್ತದೆ.

ಹೀಗೇ ಈ ಪಂಚ ವಾಯು ಮತ್ತು ಅದರ ಉಪವಾಯು ಸೇರಿ ಹತ್ತು ವಿಧದ ವಾಯುಗಳು ಆಗುತ್ತದೆ.ಇದಲ್ಲದೆ ಮಾರುತ ( ಮಾ+ ರುದ) ಅಂದರೆ ಅಳಬೇಡ ಎಂಬ ಅರ್ಥದಲ್ಲಿ ಈ ವಾಯುವಿಗೆ ಹೆಸರು ಬಂತು. 

ಒದರಲ್ಲಿ 49 ವಿಧಗಳಿವೆ. 

ಪಂಚ ಪ್ರಾಣಗಳೂ ಸೇರಿ ಈಗ 54ರೂಪದ ವಾಯುಗಳಾಯಿತು. 

ಈ ವಾಯುಗಳೆಲ್ಲಾ ದೇಹದೊಳಗೆ ಅಷ್ಟ ದಿಕ್ಪಾಲತ್ವ,ಅವರ ಉಪ ದಿಕ್ಪಾಲತ್ವಗಳ ಕೆಲಸ ಮಾಡುತ್ತವೆ. ಯಾವಾ ಪ್ರಾಣದ ಆಯಾಮಗಳು ಸರಿಯಾಗಿರುತ್ತದೋ ಅಂತವರಿಗೆ ಆಯುಸ್ಸಿನ ಲೆಕ್ಕಾಚಾರವಿಲ್ಲ.ಅಂದರೆ ಸಾವಿರಾರು ವರ್ಷವೂ ಬದುಕಬಹುದು. 

ವಸಿಷ್ಟಾದಿ ಋಷಿಗಳು ಈಗಲೂ ಸೂಕ್ಷ್ಮ ಶರೀರದಲ್ಲಿ ಬದುಕಿರುವುದು ಈ ಪ್ರಾಣದ ಆಯಾಮ ನಿಯಮದಲ್ಲಿ.ಅಂತೂ ನಾವೂ ಅವರಷ್ಟಲ್ಲದಿದ್ದರೂ ಬದುಕಿರುವವರೆಗೆ ಆರೋಗ್ಯಪೂರ್ಣವಾಗಿರಲು ಪ್ರಾಣಾಯಾಮ ನಿಯಮವನ್ನು ಪಾಲಿಸಿದರೆ ಉತ್ತಮ. ಇನ್ನೊಂದು ಮುಖದಲ್ಲಿ ನೋಡಿದಾಗ, ಈ ಪ್ರಾಣದ ಆಯಾಮ ಕ್ರಿಯೆ ರೂಢಿಸಿಕೊಂಡರೆ ತ್ರಿಕಾಲ ಜ್ಞಾನ ಪ್ರಾಪ್ತಿಯೂ ಆಗುತ್ತದೆ.ಇದಕ್ಕೆಲ್ಲಾ ನಿತ್ಯ ಅಭ್ಯಾಸ ಬೇಕು.ಹಾಗಾಗಿ ಭಾರತದ ಈ ಯೋಗ ಕ್ರಿಯೆಗೆ ಇಷ್ಟು ಮಹತ್ವ ಬಂದದ್ದು. ಯೋಗವು ಯಾವುದೇ ಮತ ಸಂಪ್ರದಾಯಗಳ. ಸಿಮಿತಕ್ಕಿಲ್ಲ.ಇದು ಸಂಪೂರ್ಣವಾದ ವೈದಿಕ ಸನಾತನ ಧರ್ಮದ ಪಾಲನೆಗಾಗಿಯೇ ಇರುವಂತದ್ದು. ಇದಕ್ಕಾಗಿಯೇ ಪುರಾತನರು ಶರೀರ ಮಾಧ್ಯಂ ಖಲು ಧರ್ಮ ಸಾಧನಂ.ಎಂದಿದ್ದಾರೆ.

**********

No comments:

Post a Comment