SEARCH HERE

Friday 9 April 2021

ವಾಯು vayu

🕉️
ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ 24 ಗುರುಗಳಲ್ಲಿ ಎರಡನೆಯ ಗುರು: ವಾಯು
👉ಇಪ್ಪತ್ತನಾಲ್ಕು ಗುರುಗಳಲ್ಲಿ ಎರಡನೆಯ ಗುರುವೆಂದರೆ ವಾಯು. ನಮ್ಮ ಪರಿಸರದಲ್ಲಿ ಕಣ್ಣಿಗೆ ಕಾಣದ ವಿಶೇಷ ಶಕ್ತಿಯಾದ ಗಾಳಿಯಿಂದಲೂ ನಾವು ಕಲಿಯಬೇಕಾದದ್ದಿದೆ. ಈ ಗಾಳಿ ಇಲ್ಲದಿದ್ದಲ್ಲಿ ನಾವು ಬದುಕಲಾರೆವು. ಹಾಗಾಗಿ ನಮ್ಮ ಬದುಕು ಪರಿಸರದ ಎಲ್ಲ ಸಂಗತಿಗಳನ್ನು ಅವಲಂಬಿಸಿರುವಂತೆ ಗಾಳಿಯನ್ನೂ ಅವಲಂಬಿಸಿದೆ>

👉ಗಾಳಿಯಿಂದಾಗಿಯೇ ಉಸಿರಾಡುತ್ತಿರುವ ನಾವು ವಾಯುದೇವ ಎಂದು ದೇವರ ರೂಪದಲ್ಲಿ ಗಾಳಿಯನ್ನು ಕಂಡಿದ್ದೇವೆ; ನಮಿಸುತ್ತೇವೆ. ನಮ್ಮೆಲ್ಲರ ಸುತ್ತ ಹರಡಿಕೊಂಡಿರುವ ಗಾಳಿಯಿಂದ ಯಾವ ಜ್ಞಾನವನ್ನು ಹೊಂದಬೇಕು? ಏನನ್ನು ತಿಳಿಸಿಕೊಡುತ್ತದೆ ಎಂಬುದನ್ನು ಮದ್ಭಾಗವತದ ಏಕಾದಶಸ್ಕಂಧದ ಏಳನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
👉ಗಾಳಿಯು ಎಲ್ಲೆಡೆಯೂ ಸಂಚರಿಸುತ್ತದೆ. ಆದರೆ ಯಾವುದರಲ್ಲಿಯೂ ಲಿಪ್ತವಾಗುವುದಿಲ್ಲ. ಗಂಧವನ್ನು ಗ್ರಹಿಸುತ್ತದೆ ಮತ್ತು ಬಿಡುತ್ತದೆ. ಗಾಳಿಯು ಗಂಧವನ್ನು ಹೊತ್ತುಕೊಂಡು ಹೋದರೂ ಅದರ ಗುಣ ದೋಷಗಳಲ್ಲಿ ಸೇರುವುದಿಲ್ಲ. ಅಲ್ಲಿ ಅದು ಅಸಂಗವಾಗಿಯೇ ಇರುತ್ತದೆ. ನಾವು ಕೂಡ ವಾಯುವಿನಂತೆ ಎಲ್ಲೆಡೆ ಸಂಚರಿಸಿದರೂ ಅಲ್ಲಿನ ಗುಣ ದೋಷಗಳಿಂದ ಪ್ರಭಾವಿತರಾಗದೆ ಅದರಿಂದ ದೂರವಿರಬೇಕು.
👉ನಾವು ಸಂಚರಿಸಿದ ಪ್ರದೇಶದಲ್ಲಿ ಕ್ರೌರ್ಯವನ್ನು ನೋಡಿ ಕ್ರೌರ್ಯಕ್ಕೆ ಮುಂದಾಗಬಾರದು. ನಮ್ಮ ಮನಸ್ಸು ಅದನ್ನು ಕಂಡಿದ್ದರೂ ಅನಭವಿಸಿದ್ದರೂ ಅದರಿಂದ ದೂರವೇ ಇರಬೇಕು. ಅಂತಹ ಕ್ರೌರ್ಯ ನಮ್ಮಲ್ಲಿ ಹುಟ್ಟಿಕೊಳ್ಳಬಾರದು. ಗಾಳಿಯು ಇದ್ದಲ್ಲೆಲ್ಲಾ ಒಂದು ಸುಂದರವಾದ ವಾತಾವರಣವಿರುತ್ತದೆ. ಮನಸ್ಸು ಉಲ್ಲಸಿತವಾಗುವಂತೆ ಮಾಡುತ್ತದೆ. ನಾವೂ ಕೂಡ ಎಲ್ಲಿರುತ್ತೇವೆಯೋ ಅಲ್ಲಿ ಸಂತಸದ ವಾತಾವರಣಕ್ಕೆ ಕಾರಣರಾಗಬೇಕು.
👉ಸುಖದುಃಖವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಈ ವಾಯವಿನಿಂದ ಕಲಿಯಬೇಕು. ಮನಸ್ಸು ವಿಚಲಿತವಾಗದಂತೆ ಜಗತ್ತನ್ನು ಸ್ವೀಕರಿಸಬೇಕು. ಹೇಗೆ ಗಾಳಿಯೊಂದು ಉರಿಯುವ ದೀಪಕ್ಕೆ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದೋ ಹಾಗೇ ನಾವು ಜಗತ್ತಿನ ಒಳಿತಿಗೆ ಮಾಧ್ಯಮವಾಗಿ ಬಾಳಬೇಕು.
👉ಗಾಳಿಯು ಎಲ್ಲೆಡೆಯೂ ಚಲಿಸುತ್ತದೆ. ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ಗಂಧವನ್ನು ಹೊತ್ತೊಯ್ಯುತ್ತದೆ. ಆದರೆ ಅದನ್ನು ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲ. ಅದರಿಂದ ಹೊರಗಿರುತ್ತದೆ. ಪ್ರಕೃತಿಯ ಆಗು ಹೋಗುಗಳಿಗೆ ಕಾರಣವಾಗುತ್ತದೆ. ನಾವು ಕೂಡ ಗಾಳಿಯಂತೆ ಎಲ್ಲವುದರಿಂದಲೂ ಹೊರತಾಗಿರಬೇಕು. ಆತ್ಮವೂ ಶರೀರದಲ್ಲಿಯೇ ಇದ್ದರೂ ಶರೀರದಿಂದ ಹೊರತಾದದ್ದು. ಹಾಗಾಗಿ ದೇಹದಲ್ಲಿನ ಗುಣ ದೋಷಗಳೊಂದಿಗೆ ಆತ್ಮವನ್ನು ಒಂದಾಗಿಸಬಾರದೆಂದು ಹೇಳಲಾಗಿದೆ.
👉ಆತ್ಮವು ಶುದ್ಧವಾಗಿರಬೇಕು. ಯಾವುದರಿಂದಲೂ ಪ್ರಭಾವಿತವಾಗದೆ ದೂರವೇ ಇರಬೇಕು. ಶರೀರದ ಆಗು ಹೋಗುಗಳು ಈ ಆತ್ಮಕ್ಕೆ ಬೇಕಾಗಿ ಇರಬೇಕು. ಆಹಾರ ಸೇವನೆಯು ಪ್ರಾಣಧಾರಣೆಗೆ ಬೇಕಾದಷ್ಟಿರಬೇಕು. ಇಂದ್ರಿಯ ತೃಪ್ತಿಗಾಗಿ ಅಲ್ಲ. ಪ್ರಾಣ ಎಂಬುದು ವಾಯು. ಈ ಪ್ರಾಣ ವಾಯುವಿನಿಂದಾಗಿಯೇ ಶರೀರವನ್ನು ಸೇರಿದೆ. ಅಂತಹ ಪ್ರಾಣಕ್ಕೆ ಬೇಕಾಗುವಷ್ಟು ಆಹಾರವನ್ನು ತೆಗೆದುಕೊಂಡಾಗ ಮನಸ್ಸಿನ ಅಲೆದಾಟ ಇರುವುದಿಲ್ಲ. ಆಗ ಚಿತ್ತದ ಏಕಾಗ್ರತೆ ಸುಲಭ.
👉ಗಾಳಿಯು ಪರಿಮಳವನ್ನು ಹೊತ್ತು ಸಾಗುತ್ತಿದ್ದರೂ ಆ ಪರಿಮಳವೇ ಗಾಳಿಯ ರೂಪವಾಗುವುದಿಲ್ಲವೂ ನಮ್ಮ ಮನಸ್ಸೂ ಕೂಡ ಎಲ್ಲಿಯೇ ಸಂಚರಿಸಿದರೂ ವಿಷಯಾಸಕ್ತಿಗಳಲ್ಲಿ ಮನಸ್ಸು ತೊಡಗಿಕೊಳ್ಳದೆ ಅದನ್ನು ಬಿಟ್ಟುಬಿಡುವುದನ್ನು ರೂಢಿಸಿಕೊಳ್ಳಬೇಕು.
👉ಗಾಳಿಯು ಹೇಗೆ ಎಲ್ಲಾಕಡೆ ಯಾವುದೇ ಸ್ವಾರ್ಥವಿಲ್ಲದೆ ಹರಡಿಕೊಳ್ಳುವುದೋ ಹಾಗೇ ನಾವು ನಿಸ್ವಾರ್ಥದಿಂದ ಕೂಡಿದ ವಿಶಾಲವಾದ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಬದುಕಿನ ಪ್ರತಿಯೊಂದು ಘಟ್ಟವೂ ಒಂದು ಬಗೆಯ ಸಂಚಾರವೇ. ಈ ಸಂಚಾರದಲ್ಲಿ ವಿಷಯಗಳೊಳಗಿದ್ದರೂ ಅದರಿಂದ ಹೊರತಾಗಿರುವ ಜಾಣ್ಮೆ ಈ ವಾಯುವಿನ ಸ್ವರೂಪದಿಂದ ಅರಿಯಬೇಕಾದ ಜ್ಞಾನ.
🌿🍁ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ🍁🌿
(ಲೇಖನ ಕೃಪೆ: ಶ್ರೀ ವಿಷ್ಣು ಭಟ್)
*****
ವಾಯುದೇವರು... 
ಪ್ರತಿ ನಿತ್ಯ ೨೧೬೦೦ ಶ್ವಾಸೋಚ್ಛ್ವಾಸವನ್ನು ತಪ್ಪದೇ ಮಾಡಿ ನಮ್ಮನ್ನು ಬದುಕಿಸುವ ಮಹಾಂತ ಮುಖ್ಯಪ್ರಾಣ.
ಮುಖ್ಯಪ್ರಾಣ ದೇವರನ್ನು ನಾವು ಪ್ರೀತಿಸಿದರೆ,  ತಂದೆ ತಾಯಿ ಬಂಧು ಬಳಗ ಮಿತ್ರ ಶತ್ರು ಉದಾಸೀನ ಎಲ್ಲರ ಅಂತರ್ಯಾಮಿಗಳಾದ ವಾಯು ದೇವರು , ನಮ್ಮನ್ನು ಪ್ರೀತಿಸುವಂತೇ ಪ್ರೇರಿಸುತ್ತಾರೆ. ಹೀಗೆ ಜಗತ್ತು ಪ್ರಿಯವಾಗುತದೆ.
ನಮ್ಮೆಲ್ಲರ ಉದ್ಧಾರಕ್ಕಾಗಿ ಭುಗಿಳಿದು ಬಂದು, ನಾರಾಯಣನಿಗೆ ಅತಿಪ್ರಿಯವಾದ  "ಅನಾದಿ ಸತ್ಸಂಪ್ರದಾಯ ಪರಂಪಾರಾ ಪ್ರಾಪ್ತ"ವಾದ ನಮ್ಮ ಸಿದ್ಧಾಂತವನ್ನು  ಸ್ಥಾಪಿಸಲು ರಚನೆ ಮಾಡಿದ "ಸರ್ವಮೂಲ" ಗ್ರಂಥಗಳ ಅಧ್ಯಯನವೇ ಮುಖ್ಯಪ್ರಾಣದೇವರಿಗೆ "ಅತಿಪ್ರೀತಿ"
"ಸರ್ವದೇವೋತ್ತಮೋ ವಾಯುಃ" ಎಂದು ತಿಳಿದರೆ ದೇವರಿಗೆ ಅತ್ಯಂತ ಪ್ರೀತಿ.  "ಹರಿಃ ಸರ್ವೋತ್ತಮಃ" ಎಂಬ ತಿಳುವಳಿಕೆ ವಾಯುದೇವರಿಗೂ ಅಷ್ಟೇ ಪ್ರೀತಿಯನ್ನು ತಂದುಕೊಡುವಂತಹದ್ದು.
ವಾಯು ಹಾಗೂ ವಿಷ್ಣು ಇವುರುಗಳನ್ನು ಸಂತೋಷ ಪಡಿಸುವ ಕಾರ್ಯಗಳು ನಮ್ಮಿಂದ ಆಗದ  ಹಾಗೆ ನಮಗೆ ಪ್ರೇರಿಸುವರು ಕಲ್ಯಾದಿ ಮಹಾ ದೈತ್ಯರು.  ಆ ದೈತ್ಯರ ಬಾಧೆ ಆಗದಿರುವದಕ್ಕೆ ವಾಯುದೇವರನ್ನೇ ಮೊರೆ ಹೋಗುವದು ಅನಿವಾರ್ಯ.
ನೀವು ಹೇಗೆ "ಆಖಣಾಶ್ಮ ಸಮಃ" ರಾಗಿ ದೈತ್ಯರಿಂದ ಬಾಧಿತರಾಗದೆ ನಿರಂತರ ವಿಷ್ಣುಪ್ರಿಯ ಕೆಲಸಗಳನ್ನೆಲ್ಲಾ ಮಾಡುತ್ತರೋ, ಹಾಗೆ ನನ್ನಲ್ಲಿ "ಆಖಣಾಶ್ಮಸಮ" ರೂಪದಿಂದ ಪ್ರವೇಶಿಸಿ ದೈತ್ಯರು ನಮ್ಮ ತಲೆ ಕೆಡದೆ ಹಾಗೆ ನೋಡಿಕೊಳ್ಳಿ, ವಾಯು ವಿಷ್ಣು ಪ್ರಿಯ ಕಾರ್ಯಗಳು ನಮ್ಮಿಂದಾಗುವಂತೆ ನೋಡಿಕೊಳ್ಳಿ ಎಂದು.
"ಸೃವಸಮರ್ಪಕ" ಎಂಬ ರೂಪದಿಂದ ನಮ್ಮಲ್ಲಿ ನೆಲೆಸಿ ಆಗಾಗ ಮಾಡುವ , ಮಾಡಿದ ಸಕಲಸತ್ಕರ್ಮಗಳನ್ನೂ ತಮ್ಮ ಮುಖಾಂತರ ವಿಷ್ಣುವಿಗೆ ಸಮರ್ಪಿಸುವ ಸೌಭಾಗ್ಯ ಒದಗಿಸಿಕೊಡಿ. ಇದುವೇ ತಮಗೂ ಹಾಗೂ ವಿಷ್ಣುವಿಗೆ ಪರಮಪ್ರೀತಿ.
"ಪರಮದಯಾಲು" ಎಂಬ ರೂಪದಿಂದ ನಮ್ಮಲ್ಲಿ ಪ್ರವೇಶಿಸಿ ತಮ್ಮ ಹಾಗೂ ವಿಷ್ಣುವಿನ "ಅಪಾರ ದಯೆಯ" ಅರಿವು ದಯಪಾಲಿಸಿ. ದೇವರ ದಯೆಯನ್ನು ಮೆಲಕು ಹಾಕುವದೂ ದೇವರಿಗೆ ಅತಿಪ್ರಿಯ.
ದಯೆ ಕರುಣೆ ಯನ್ನು ನೆನೆಯದೇ ನಾ ಮಹಾ ಕೃತಘ್ನನಾಗಿ ಹಾಳಾಗಿ ಹೋಗಂದತೆ ಮಾಡಿ. ಉದ್ಧಾರಮಾಡಿ.
"ಭಕ್ತವತ್ಸಲ- ಭಕ್ತಾಪರಾಧ ಸಹಿಷ್ಣು- ಭಕ್ತಾನಾಂ ಅಶೇಷ ದೋಶ ದಹನ" ಎಂಬ ರೂಪಗಳಿಂದ,  ಅನಾದಿಯಿಂದಿರುವ ಭಕ್ತಿಯನ್ನ ಅಭಿವ್ಯಕ್ತಗೊಳಿಸಿ, ನಮ್ಮನ್ನು ಭಕ್ತರನ್ನಾಗಿ ಮಾಡಿ ದಯಮಾಡಿ ಈ ಭಕ್ತನಾದ ನಮ್ಮ ಮೇಲೆ ವಾತ್ಸಲ್ಯ ತೋರಿಸಿ. "ವಾತ್ಸಲ್ಯವಿರುವಲ್ಲಿ  ಸಹನೆ ಇರುವದು" ಎನ್ನನಂತ ತಪ್ಪುಗಳನ್ನು ಸಹನೆ ಮಾಡಿ  ನಮ್ಮ ಅನಂತ ಪಾಪಗಳನ್ನು ದೋಷಗಳನ್ನ ಕಳೆದು ಉದ್ಧರಿಸುವದಕ್ಕಾಗಿ ನಮ್ಮಲ್ಲಿ ನೆಲೆಸಿ. 
 ಜಗದ್ಗುರುಗಳಾದ ಹನುಮ ಭೀಮ ಮಧ್ವಾತ್ಮಕ ಮುಖ್ಯಪ್ರಾಣಾದಿ ಅನಂತ ರೂಪಾತ್ಮಕ ಅನಂತ ಗುಣಪೂರ್ಣ ವಾಯುದೇವರಲ್ಲಿ ಶ್ರೀಮದಾಚಾರ್ಯರಲ್ಲಿ ಬೇಡಿಕೊಳ್ಳೋಣ.
"ಅನಂತ ಜನುಮಕ್ಕೂ ನೀವೇ ಗುರು ಎಂಬ ಜ್ಙಾನವೇ ದಯಪಾಲಿಸು" ಎಂದು ಬೇಡಿಕೊಳ್ಳುತ್ತಾ ಅನಂತಾನಂತ ಪ್ರಣಾಮಗಳನ್ನು ಸಲ್ಲಿಸೋಣ.
ಶ್ವಾಸಮಂತ್ರ ಕ್ರಮಸಂಖ್ಯೆ
1 ಘಳಿಗೆಗೆ ಶ್ವಾಸಮಂತ್ರ
     =                         360
1 ತಾಸಿಗೆ (2॥ಘಳಿಗೆ)
     =                          900
1 ಯಾಮ (3) ತಾಸಿಗೆ 
     =                         2,700
2 ಯಾಮ (6) ತಾಸಿಗೆ 
     =                          5,400
3 ಯಾಮ (9) ತಾಸಿಗೆ 
     =                           8,100
4 ಯಾಮ (12) ತಾಸಿಗೆ 
     =                          10,800
1  ದಿವಸ 24 ತಾಸಿಗೆ 
     =                          21,600
15  ದಿವಸದ (1) ಪಕ್ಷಕ್ಕೆ 
     =                       3,24,000
2  ಪಕ್ಷವಾದ (1) ಮಾಸಕೆ 
     =                     9,48,000
2  ತಿಂಗಳಾದ (1) ಋತುವಿಗೆ
     =                    12,96,000
3   ಋತುವಾದ (1) ಅಯನಕ್ಕೆ
     =                   38,88,000
2  ಅಯನ = 1 ವರ್ಷಕ್ಕೆ 
     =                   77,76,000
    ಒಂದು ವರುಷಕ್ಕೆ, ಇಷ್ಟು ಶ್ವಾಸಜಪಗಳು, ಗುರುವರ್ಯ, ಗುರುಗಳಲ್ಲಿ ಶ್ರೇಷ್ಠರಾದ ದ್ವಾತ್ರಿಂಶಲ್ಲಕ್ಷಣೋಪೇತರಾದ ಶ್ರೀ ವಾಯುದೇವರು ಈ ಹಂಸ ಮಂತ್ರವನ್ನು ತಾವು ಮಾಡಿಸುತ್ತಾರೆಂದು ಯಾರು ಸಜ್ಜನರು ತಿಳಿಯುವರೋ ಅವರ ದುರಿತಗಳನ್ನು ಪರಿಹರಿಸುವರು. ಸುರವಿರೋಧಿಗಳಾದ ದೈತ್ಯರ ಸ್ವಭಾವ ತಿಳಿದವರಾದ ವಾಯುದೇವರು, ಆ ದೈತ್ಯರಲ್ಲಿ ನೆಲಸಿದ್ದು , ಅವರ ದೈತ್ಯ ಸ್ವಭಾವ ಗುಣದಂತೆ ಸೋಹಂ ಉಪಾಸನೆ ಅವರಂತೆ ಮಾಡಿಸಿ ನಿರಯವೀವರು. ವಾಯುದೇವರಿಗೆ ದೋಷವೆತ್ತಣದಯ್ಯಾ , ಇಂಥಾ ಹಂಸೋಪಾಸನೆ ಶ್ವಾಸ ಮಾಡಿಸುವ ಕಾರ್ಯ ವಾಯುದೇವರ ವ್ಯತಿರಿಕ್ತವಾಗಿ ಇನ್ನಾರಿಗೂ ಅಧಿಕಾರವಿಲ್ಲ. ಪರಮಾತ್ಮನಿಗೆ ಮುಖ್ಯ ಪ್ರತಿಬಿಂಬರು. ಜಗತ್ತಿಗೆ ದ್ವಿತೀಯ ಈಶ್ವರರು. ಪ್ರಳಯದಲ್ಲೂ ಕೂಡ ಅಜ್ಞಾನಾದಿ ದೋಷಗಳಿಲ್ಲ. ಅಮೃತವೆಂದು ಕರೆಸುವ ವಾಯುದೇವರು, (ಅನಿಲದೇವನು.) ಸರ್ವ ಜೀವರೊಳಿದ್ದು ಹೀಗೆ ಹಂಸೋಪಾಸನೆ ಮಾಡುವ ಕ್ರಮ. ಶ್ವಾಸ ಬಿಡುವ ಶಕ್ತಿ ಲೇಶಿಲ್ಲೆಂಬುದೇ ಇಂಥಾ ಜ್ಞಾನವಿಲ್ಲದೇ ಈ ವಾಯುದೇವರ ಶ್ವಾಸ ಜಪ, ಮಹಾಕಾರ್ಯ ತಿಳಿಯದೇ, ಚಿಂತನೆಯ ಮಾಡದೇ ಕಂಡ ನೀರಿನಲ್ಲಿ ಮುಳುಗಿ ಮನೆಯಲ್ಲಿ ಕೃಷ್ಣಾಜಿನಾದ್ಯಾಸನದಿಂದ ಕುಳಿತು ಬೇಸರಿಯದಲೇ ಜಪ ಮಣಿಗಳನ್ನು ಡಂಬಾಚಾರದಿಂದ ತಿರುವಿ ಎಣಿಸಿದರೆ ಫಲವಿಲ್ಲ. 
********

५) आदिन्मातॄराविशद्यास्वा शुचिरहिंस्यमान उर्विया वि वावृधे ।

    अनु यत्पूर्वा अरुहत्सनाजुवो नि नव्यसीष्ववरासु धावते ॥५॥


ಪದಪಾಠ

आत्। इत्। मातॄ:। आ। आविषत्। यासु। आ। शुचिः। अहिंस्यमानः। ऊर्विया। वि। वावृधे।

अनु। यत्। पूर्वाः। अरुहत्। सनाजुवः। नि। नव्यसिषु। अवरासु। धावते।।


ಮಂತ್ರಾರ್ಥ:-

'ಉಭಾ ಯದಸ್ಯ ಜನುಷಂ' 'ಯೋಷಣ: ಜನಯಂತ' ಇತ್ಯಾದಿಗಳಲ್ಲಿ ಹಿಂದೆ ವಾಯುದೇವರು ಮಧ್ವಯತಿಗಳಾಗಿ ಅವತಾರಮಾಡಿದರು ಎಂದು ಹೇಳಲಾಗಿದೆ. ಹಾಗಾದರೆ ಅವರಿಗೂ ಸಹ ಶುಕ್ಲಶೋಣಿತ ಸಂಬಂಧದಿಂದ ಗರ್ಭವಾಸಾದಿ ದೋಷಗಳು ಇವೆಯೆ? ಕರ್ಮಫಲ ಭೋಗವಿದೆಯೆ? ಮೋದಲಾದ ಶಂಕೆಗಳಿಗೆ ಈ ಮಂತ್ರ ಉತ್ತರಕೊಡುತ್ತದೆ.

ನಿರ್ದೋಷನು ಅನಂತಕಳ್ಯಾಣಗುಣಪೂರ್ಣನು (ಆತ್ ಇತ್) ಅಕಾರ ಶಬ್ದವಾಚ್ಯನಾದ ನಾರಾಯಣನ ಪ್ರೇರಣೆಯಿಂದಲೆ ಅವತಾರತ್ರಯಗಳಲ್ಲಿಯೂ (ಮಾತೃ:)ತಾಯಿಯನ್ನು ಅರ್ಥಾತ್ ಅಂಜನಾ,ಕುಂತಿ, ಮಧ್ಯಗೇಹಭಟ್ಟರ ಪತ್ನಿ ಇವರಲ್ಲಿ ಕ್ರಮವಾಗಿ ತ್ರೇತ-ದ್ವಾಪರ-ಕಲಿಯುಗಗಳಲ್ಲಿ (ಆವಿಶತ್) ಚೆನ್ನಾಗಿ ಪ್ರವೇಶಿಸಿದರು ಅರ್ಥಾತ್ ಯಾವ ಶುಕ್ಲಶೋಣಿತ ಸಂಬಂಧವಿಲ್ಲದೆಯೇ ಮಾಸ- ಮಾಸಕ್ಕೆ ಅಂಗಾಂಗವೃದ್ಧಿಯಿಲ್ಲದೇನೆ ಸರಿಯಾಗಿ ಪ್ರಸವಕಾಲದಲ್ಲಿ ತಾಯಿಯ ಉದರವನ್ನು ಅನಾಯಾಸವಾಗಿ ಪ್ರವೇಶಿಸಿದರು.

ಯಾವ ಸ್ತ್ರೀಯರಲ್ಲಿ ಈ ವಾಯುದೇವರು (ಆ ಶುಚಿ:) ಅತ್ಯಂತ ಪರಿಶುದ್ಧರಾಗಿ ಅಥವಾ (ಪಾಪಾದಿಕರ್ಮಲೇಪರಹಿತ: ಇತ್ಯರ್ಥ) ಪಾಪಾದಿಕರ್ಮಗಳ ಲೇಪವಿಲ್ಲದೆ (ಊರ್ವಿಯಾ) ತಮ್ಮ ಅಚಿಂತ್ಯಾದ್ಭುತ ಶಕ್ತಿಯಿಂದ, ಉರುತರಸ್ವಶಕ್ತಿಯಿಂದ

(ಅಹಿಂಸ್ಯಮಾನ:) ಗರ್ಭವಾಸಾದಿ ದುಃಖಗಳನ್ನು ಅನುಭವಿಸದೆ ಅರ್ಥಾತ್ ಕಲ್ಯಾದಿದೈತ್ಯಬಾಧ ರಹಿತರಾಗಿ (ವಿವಾವೃಧೆ)ವಿಶೇಷವಾಗಿ ವೃದ್ಧಿಯಾದರು.

ಅರ್ಥಾತ್ ಮಧ್ವಾಚಾರ್ಯರಿಗೆ ಉದರದಲ್ಲಿರುವಾಗ ಗರ್ಭವಾಸಾದಿ ದುಃಖಗಳು ಮತ್ತು ಪ್ರಸವಾದಿ ದೋಷಗಳು ಜನ್ಮಾಂತರದಲ್ಲಿ ಕಲ್ಯಾದಿದೈತ್ಯರಿಂದ ಅಬಾಧಿತರು.

ಸಕಲಜೀವರುಗಳು(ರುದ್ರಾದಿ ದೇವತೆಗಳೂ ಸಹ) ತಂದೆಯಿಂದ ತಾಯಿಯನ್ನು ಪ್ರವೇಶಿಸಿ ನವಮಾಸಗಳು ದಿನೇದಿನೇ ಅಂಗಾಂಗಳ ವೃದ್ಧಿಯನ್ನು ಹೋಂದುತ್ತಾ ಆ ಗರ್ಭವಾಸದಲ್ಲಿರುವಾಗ ಆಗುವ ಅನೇಕ ಪೀಡೆಗಳನ್ನು ಅನುಭವಿಸುತ್ತಾ ಎಲ್ಲಾ ಯಾತನೆಗಳನ್ನು ಸಹಿಸಿಕೋಂಡು ಜನನವನ್ನು ಎತ್ತಿ ಪುನಃ ಕಲ್ಯಾದಿಗಳ ದುಷ್ಪರಿಮಾಣದಿಂದ ಪಾಪಕರ್ಮರತರಾಗುವಂತೆ ಸಾಕ್ಷಾತ್ ನಾರಾಯಣನಿಂದ ಜನಿಸುವ ವಾಯುದೇವರಿಗೆ ಈ ಎಲ್ಲಾ ವಿಧವಾದ ಲೇಪ-ದೋಷಗಳು ಸರ್ವಥಾ ಇಲ್ಲ.

ಹೀಗಾಗಿ ಮೋದಲು ಹೇಳಿದಂತೆ ಮೂಲರೂಪದ ಜ್ಞಾನಾನಂದಾದಿ ಗುಣಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರದೆ ದ್ವಾತ್ರಿಂಶಲ್ಲಕ್ಷಣೋಪೇತವಾದ ದೇಹದಿಂದಲೆ ಮೂರು ಅವತಾರಗಳನ್ನು ವಾಯುದೇವರು ಧರಿಸಿದರು.

ಇನ್ನೋಂದು ಅರ್ಥವನ್ನೂ  ಶೃತಿ ಹೇಳುತ್ತದೆ.ಅದು ಹೀಗೆ

(ಆತ್ ಇತ್) ಲಕ್ಷ್ಮೀನಾರಾಯಣರ ಅನುಗ್ರಹದಿಂದ (ಮಾತೃ:) ಋಗಾದಿ ಸಪ್ತಶಾಸ್ತ್ರಗಳಲ್ಲಿ (ಆ ವಿಶತ್) ಚೆನ್ನಾಗಿ ಪ್ರವೇಶಿಸಿದರು.ಅಲ್ಲಿ 

(ಆ ಶುಚಿ:)ಅಜ್ಞಾನಾದಿ ದೋಷಗಳಿಲ್ಲದೆ ಪರಿಶುದ್ಧರಾಗಿ 

(ಅಹಿಂಸ್ಯಮಾನ:) ಪೂರ್ವಪಕ್ಷಿಗಳು ಹೇಳುವ ಜೀವೇಶ್ವರೈಕ್ಯ, ಪ್ರಪಂಚಮಿಥ್ಯತ್ವ ಮೋದಲಾದವುಗಳನ್ನು ಹೇಳಿದಂತೆ ತೋರುವ ಶೃತಿಗಳಿಂದ ಹಿಂಸಿತರಾಗದೆ (ಊರ್ವಿಯಾ) ತಮ್ಮ ಅತ್ಯಧಿಕಸ್ವಶಕ್ತಿಯಿಂದ (ವಿವಾವೃಧೆ) ವಿಜೃಂಭಿಸಿದರು.

ಈ ಮಧ್ವರೂಪದಿಂದ ವಾಯುದೇವರು (ಸನಾಜುವ:) ಸನಾತನನಾದ ನಾರಾಯಣನನ್ನು ನಿರಂತರ ಗುಣಗಾನಮಾಡುತ್ತಾ ಅವನನ್ನು ಸೇವಿಸುತ್ತಿರುವರು.

ಈ ಮಧ್ವಾಚಾರ್ಯರು (ಪೂರ್ವಾ:) ಸಪ್ತವಿದ್ಯೆಗಳಲ್ಲಿ ಮೋದಲಿನ ನಾಲ್ಕು ವೇದಗಳುಅರ್ಥಾತ್ ಋಕ್-ಯಜು-ಸಾಮ-ಅಥರ್ವಣಾದಿ ವೇದಗಳನ್ನು (ಅನು) ಉಪಕ್ರಮ- ಉಪಸಂಹಾರಾದಿಗಳನ್ನು ಅನುಸರಿಸಿ 

(ಅರುಹತ್) ಮನಸ್ಸಿನಿಂದ ಮೇಲೆ ಹತ್ತಿ ಅರ್ಥಾತ್ ಅವುಗಳನ್ನು ಅಭಿಮಾನಿತ್ವೇನ ಅಧಿಷ್ಠಾನಮಾಡಿ ಸ್ಥಿತರಾದರು.

ಅಂದರೆ ಅಪೂರ್ವಾನಂತಾರ್ಥಗಳಿರುವ ವೇದಗಳಿಗೆ ಉಪಕ್ರಮ- ಉಪಸಂಹಾರ-ಅಭ್ಯಾಸ-ಅಪೂರ್ವತಾ-ಫಲ-ಅರ್ಥವಾದ-ಉಪಪತ್ತಿ ಮೋದಲಾದ ಏಳು ಯುಕ್ತಿಗಳನ್ನು ಅನುಸರಿಸಿ ಅಶ್ವಾರೋಹಿಯು ತನ್ನ ಅಶ್ವಕ್ಕೆ ಯಾವ ಧಕ್ಕೆಯೂ ಬಾರದಂತೆ ನೋಡಿಕೊಳ್ಳುವ ಹಾಗೆ ಮಧ್ವಾಚಾರ್ಯರು ವೇದಗಳನ್ನು ಅಧಿಷ್ಠಾನ ಮಾಡಿ  ಹಿಂದೆಹೇಳಿದ ಯುಕ್ತಿಗಳಿಂದ ವೇದಗಳಿಗೆ ಅರ್ಥಗಳನ್ನು ಸಾವಕಾಶವಾಗಿ ಇತಿಹಾಸ-ಪುರಾಣಾದಿಗಳಿಗೆ ವಿರೋಧ ಬಾರದಂತೆ ಸಕಲಸಜ್ಜನಸಾಮಾನ್ಯರಿಗೂ ಅರ್ಥವಾಗುವಂತೆ ನಿರ್ಣಯಿಸಿದರು.

ಹೀಗೆಯೆ (ನವ್ಯಸೀಷು) ವೇದಗಳನಂತರ ಬಂದ ಅಥವಾ ಮೂಲರೂಪದಿಂದ ಉದ್ಭವಿಸಿದ ವೇದವ್ಯಾಸರೂಪದಿಂದ ಜನಿಸಿದ (ಅವರಾಸು) ವೇದಗಳಿಗಿಂತ ಕಿರಿಯರಾದ ಇತಿಹಾಸ-ಪುರಾಣ-ಪಂಚರಾತ್ರಗಳೆಂಬ ಮೂರು ವಿದ್ಯೆಗಳಿಗೆ

(ನಿ ಧಾವತೆ) ನೇರವಾಗಿ ಸುಸ್ಪಷ್ಟವಾಗಿ ವೇಗವಾಗಿ ಅರ್ಥಗಳನ್ನು ಹೇಳಿದರು.

*********





No comments:

Post a Comment