SEARCH HERE

Monday, 1 April 2019

ರಥಸಪ್ತಮಿ rathasapthami magha shukla saptami







ರಥಸಪ್ತಮಿ ಮಾಘ ಶುಕ್ಲ ಸಪ್ತಮಿ magha shukla saptami,fest rathasapthami magha shukla saptami,
Ratha Saptami
What is Rathasaptami?
It is on this day that Surya rided the chariot to kill Mandeha named Daithya.  ವೈವಸ್ಘತ ಮನ್ವಂತರ ಮಾಘ  ಶುದ್ಧ ಸಪ್ತಮಿ ದಿನ ಸೂರ್ಯ ರಥವನೇರಿ ಮಂದೇಹನೆಂಬ ದೈತ್ಯನ ಕೊಂದನು.
It is on this day that Vishwakarma prepared the Chariot for Rudradevaru to kill Tripurasura.  ಇದೇ ದಿನ ತ್ರಿಪುರಾಸುರ ಸಾವಿಗಾಗಿ ರುದ್ರದೇವರಿಗೆ ವಿಶ್ವಕರ್ಮ ರಥವ ಸಿದ್ಧಪಡಿಸಿದ್ದು.
The Sun Chariot has one wheel, seven horses, Aruna will be the sarathi, and on this Surya – tadantargatha Suryanarayana will be riding. 
ಸೂರ್ಯನ ರಥಕ್ಕೆ ಒಂದು ಚಕ್ರ, ಸಪ್ತ ಕುದುರೆಗಳಿಂದ ಅರುಣನ ಸಾರಥ್ಯದಲ್ಲಿ ರಥಾರೂಢನಾಗಿರುತ್ತಾನೆ ಸೂರ್ಯಾಂತರ್ಗತ ನಾರಾಯಣ.
If on Magha Shudda saptami Bhanuvara and Revathi nakshatra falls, it is termed as Padmaka Yoga and is equal to Thousand Suryagrahana Maha parvakala.
If on Magha Shudda Saptami Surya moves to the next Rashi it is termed as Mahajaya and snaana, daana, tapassu, pitru tarpana will fetch more punya than any other day.
We have to do the snaana with seven saptarka parna ಎಕ್ಕದೆಲೆಗಳಿಂದ ಸ್ನಾನ ರಥಸಪ್ತಮಿ ದಿನ ವಿಶೇಷ.
We have to do the naivedya of Ellu-bella (like Makarasankranthi)

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ “ರಥಸಪ್ತಮಿ” ಬಗ್ಗೆ ಹೇಳಿದ ಕಥೆಯಿದೆ.  ಹಿಂದೆ ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಜನ್ಮದಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳನ್ನು ವಿಚಾರಿಸಲು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.
ಸೂರ್ಯಾರಾಧನೆ ಮಾಡಿದ ಬೇರೆ ಸನ್ನಿವೇಶಗಳು :
 ಅ. ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ “ಅಕ್ಷಯ ಪಾತ್ರೆ” ಪಡೆದಿದ್ದರು .
ಆ. ಶ್ರೀ ರಾಮಚಂದ್ರ ರಾವಣನ ವಿರುದ್ಧ ಯುದ್ಧ ಪೂರ್ವದಲ್ಲಿ ಅಗಸ್ತ್ಯರಿಂದ ಉಪದೇಶ ಪಡೆದು ಆದಿತ್ಯ ಹೃದಯ ಮೂಲಕ ಸೂರ್ಯಾರಾಧನೆಯ ಮಾಡಿದನು.
ಇ. ಸತ್ರಾಜಿತ ಸೂರ್ಯಾರಾಧನೆ ಮಾಡಿ ಸ್ಯಮಂತಕಮಣಿ ಪಡೆದಿದ್ದ.
***

Ratha Saptami

Ratha Saptami is symbolic of the change of season to spring and the start of the harvesting season. For most Indian farmers, it is an auspicious beginning of the New Year. The festival is observed by all Hindus in their houses and in innumerable temples dedicated to Surya, across India.”
We celebrate Rathasapthami to pray to Lord Surya (Sun God) and thank him for helping with the harvest.

Preparation –
On the Paat (Plank) draw the chariot (Rath) using Geru with decoration such as flags on the top, plantain trees on the sides, sun and moon inside and a chain with people pulling the chariot. On the 2 sides draw 2 rectangles with 10 boxes each – this is for filling with pulses and vegetables which represents the shops on the side of the pathway. It is also representative of the harvest.
In these boxes on one side fill with Haldi, Kumkum, toor Dal, Tamarind, Jaggery, Chilli, Jeera, Pepper.
On the other side fill with Vegetables like a small piece of Red pumpkin, sugarcane, elandapazham/bora, Sweet potato piece, Avarakkai. Refer to the sample photo below (Note : I will get a better picture next time from my Mom/MIL and change this one. Apart from the drawing (which is flawed) I did not have all the items mentioned above for filling the boxes)
Paat with Surya Rath
Make a rangoli outside the house also in a similar fashion.
Now get the leaves (Errukku leaves) ready for bathing. For men 7 leaves(2 on left shoulder, 2 on right shoulder,3 – head) , For women 7 leaves (4 on left shoulder, 3 on right shoulder)
Put Haldi, Kumkum and rice on all these. (Important – While going for a bath, remember and remind others to take this along  :D). [Note: For men who do Tarpan for their parents, instead of haldi and kumkum, Black Til/Sesame seed should be kept)
Milk-weed leaves

Place these on shoulder and head as mentioned above, and take a bath to wash it down.Prepare neivaidya kheer as mentioned in the below section. Traditionally, the kheer is prepared on the terrace or in the open in a charcoal stove and offered to Surya. If that is not possible, you can do the neivaidhya and Pooja from the house itself.If possible give Vida/Tamboolam (Beetel leaf, Dakshina, Coconut/Fruit, Supari) to other Sumangalis.
**********


click
       ರಥಸಪ್ತಮಿ 
**********
ಹರಿ ಓಂ

ರಥ ಸಪ್ತಮಿ

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.

 ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.

ಶಿವನಿಗೆ ಹೇಗೆ ‘ಬಿಲ್ವಪತ್ರ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ.

🎙️ ಸ್ನಾನ ಕ್ರಮ::--

           ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ '......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರಿತ್ಯರ್ಥಂ ರಥಸಪ್ತಮೀ ಮಹಾಪರ್ವಕಾಲನಿಮಿತ್ತ ಅರುಣೋದಯೇ ಮಾಘಸ್ನಾನಂ ಕರಿಷ್ಯೇ'/ ಎಂದು ಸೇರಿಸಿಕೊಳ್ಳಬೇಕು. 

ನದಿಗಳಲ್ಲಿ ಪ್ರವಾಹಾಭಿಮುಖವಾಗಿ, ಇತರ ಜಲಾಶಯಗಳಲ್ಲಿ ಸೂರ್ಯಾಭಿಮುಖವಾಗಿ ಮುಳುಗಬೇಕು. ಪ್ರತೀ ಒಬ್ಬರು ಮಾಡಲೇ ಬೇಕಾದ ವೃತ ಇದು. ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...

 ರಥಸಪ್ತಮಿ ದಿನ ಏಳು ಅರ್ಕದ ಎಲೆಗಳನ್ನು (ಒಂದು ತಲೆಯ ಮೇಲೆ, ಎರಡೆರಡುಭುಜಗಳು಼, ಎದೆ,  ಪಾದಗಳಲ್ಲಿ ಎರಡು, ಹಾಗೂ ತೊಡೆಗಳಮೇಲೆ) ಇಟ್ಟು ಕೊಂಡು ಏಳು ಸಲ ನದಿ ನೀರಿನಲ್ಲಿ ಅಥವಾ ಸರೋವರಗಳಲ್ಲಿ ಮುಳುಗಿ ಸ್ನಾನ ಮಾಡಿದರೆ ಏಳು ಜನ್ಮಗಳ ಷಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು಼, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

🎙️ ಪಾಪಗಳಲ್ಲಿ ಏಳು ವಿಧ ::--

1.ಈ ಜನ್ಮದಲ್ಲಿ ಮಾಡಿದ ಪಾಪಗಳು,
2. ಹಿಂದಿನ ಆರು ಜನ್ಮಗಳ ಪಾಪಗಳು, 
3. ಕಾಯ(ಶರೀರದ/ದೇಹದ) ಮೂಲಕಮಾಡಿದ ಪಾಪಗಳು 
4. ವಾಚ( ಮಾತಿನ) ಮೂಲಕ ಮಾಡಿದ ಪಾಪಗಳು 
5. ಮನಸಾ(ಮನಸಿಸನ) ಮೂಲಕ ಮಾಡಿದ ಪಾಪಗಳು 6.ತಿಳಿದು ಮಾಡಿದ ಪಾಪಗಳು 
7. ತಿಳಿಯದೇ ಮಾಡಿದ ಪಾಪಗಳು.

🎙️ ಸ್ನಾನದ ವಿಧಿ ಸಂಕಲ್ಪ....

ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

🎙️ರಥಸಪ್ತಮಿ ಮಂತ್ರಗಳು ::--

ಏಳುಬಗೆಯ ಪಾಪಪರಿಹಾರಕ್ಕಾಗಿ ಏಳುಬಾರಿ ಮುಳಗಬೇಕು. ಆ ಪಾಪಗಳನ್ನು ಉಲ್ಲೇಖಿಸಿ, ಅವುಗಳಿಂದ ಪರಿಹಾರ ಒದಗಿಸುವಂತೆ ಪ್ರಾರ್ಥಿಸುತ್ತ ಪಠಿಸಬೇಕಾದ ಮಂತ್ರಗಳು ಹೀಗಿವೆ -

ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ ||

ಮಾ - ಎಂದರೆ ಸಂಪತ್ತು ಹಾಗೂ ವಿದ್ಯೆ - ಇವೆರಡನ್ನೂ ನೀಡಬಲ್ಲ ರಥಸಪ್ತಮಿಯ ಅಭಿಮಾನಿದೇವತೆ ಸೂರ್ಯನನ್ನು ಸಂಬೋಧಿಸಿ, ತಾನು ಎಸಗಿದ ಏಳು ಬಗೆಯ ಪಾಪದ ಪರಿಹಾರಕ್ಕಾಗಿ ನಿವೇದಿಸಿಕೊಳ್ಳಲಾಗುವದು.

ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ .....ಪ್ರಾರ್ಥನೆ ಮಾಡಿಕೊಳ್ಳಬೇಕು ..

ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll🙏

ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರ ಮಾಡಿ,

ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll 🙏

🎙️ ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಅರ್ಘ್ಯ:

ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಹೀಗೆ ಅರ್ಘ್ಯ ಕೊಡಬೇಕು -

🎙️ ಸೂರ್ಯನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..

ಮಿತ್ರಾಯನಮಃ  🙏 ಇದಮರ್ಘ್ಯಂ ದತ್ತಂ ನಮಮ
ರವಯೇ ನಮಃ. 🙏
ಸೂರ್ಯಾಯ ನಮಃ 🙏
ಭಾನವೇ ನಮಃ 🙏
ಖಗಾಯ ನಮಃ 🙏
ಪೂಷ್ಣೇ ನಮಃ 🙏
ಹಿರಣ್ಯಗರ್ಭಾಯ ನಮಃ 🙏
ಮರೀಚಯೇ ನಮಃ 🙏
ಆದಿತ್ಯಾಯ ನಮಃ 🙏
ಸವಿತ್ರೇ ನಮಃ 🙏
ಅರ್ಕಾಯ ನಮಃ 🙏
ಭಾಸ್ಕರಾಯ ನಮಃ 🙏
ಇದಮರ್ಘ್ಯಂ ದತ್ತಂ ನಮಮ
ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ಼....

ಸಪ್ತಸಪ್ತಿಬಹುಪ್ರೀತ ಸರ್ವಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಣಾರ್ಘ್ಯಂ ದಿವಾಕರ ||🙏

 🎙️ ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ 
 
ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.

ಪಾಡ್ಯ- ಯುಗಾದಿ ಪಾಡ್ಯ,
ಬಿದಿಗೆ-ಭಾನು ಬಿದಿಗೆ,
ತದಿಗೆ-ಅಕ್ಷ ತದಿಗೆ,
ಚೌತಿ-ವಿನಾಯಕನ ಚೌತಿ. . . .
ಹೀಗೆ
 ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.
ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ. 

ಯುಗಾದಿ ಹೊಸತನವನ್ನು ಹೊತ್ತು ತಂದರೆ, 
ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. 
“ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

 ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಇಂದು (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಶನಿವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.ಆರೋಗ್ಯಂ ಭಾಸ್ಕರಾದಿಚ್ಛೇತ್... ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ಼. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

 ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ಼. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ. 

🎙️ ಸೂರ್ಯ ನಮಸ್ಕಾರ 

108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

 ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

🎙️ ಪೌರಾಣಿಕ ಹಿನ್ನೆಲೆಯೇನು ತಿಳಿಯಿರಿ ::--

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪು಼ತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದಲ್ಲಿ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

 ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ಼.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. 

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

🎙️ ಎಕ್ಕದೆಲೆಯ ಸ್ನಾನ 

ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೇ?

"ಸಪ್ತ  ಸಪ್ತ  ಮಹಾಸಪ್ತ  ಸಪ್ತದ್ವೀಪ  ವಸುಂಧರ ಸಪ್ತರ್ಕ  ಪುನಮಾಧ್ಯಾಯ  ಸಪ್ತಮಿ  ರಥಸಪ್ತಮಿ" 🙏

ಎಂದು  ಈ  ಶ್ಲೋಕವನ್ನು  ಹೇಳಿಕೊಂಡು  
ತಲೆಗೆ  ಸ್ನಾನ  ಮಾಡಿದರೆ  ಒಳ್ಳೆಯದು ಎಂದು ನಮ್ಮ ಹಿಂದೂ ಸಂಪ್ರದಾಯ ಹೇಳುವು಼ದು.

ಹರಿಯೇ ಪರದೈವ
***

ರಥಸಪ್ತಮಿ ದಿನದಂದು 

ಎಕ್ಕದ ಎಲೆಯ ಸ್ನಾನದ ಮಹತ್ವ

ಎಕ್ಕಗಿಡದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು, ಈ ದಿನ ಅರುಣೋದಯಕ್ಕೆ ಎದ್ದು, ಬಿಳಿ ಎಕ್ಕದ ಒಂದು ಎಲೆಯನ್ನು ನೆತ್ತಿಯ ಮೇಲೆ, ಎರಡನ್ನು ಭುಜಗಳ ಮೇಲೆ, ಒಂದನ್ನು ಎದೆಯ ಮೇಲೆ, ಒಂದನ್ನು ಬೆನ್ನಿನ ಮೇಲೆ, ಒಂದನ್ನು ಹಣೆಯ ಮೇಲೆ, ಒಂದನ್ನು ಹೊಟ್ಟೆಯ ಮೇಲೆ –
ಹೀಗೆ ಶರೀರದ ಮೇಲೆ ಎಕ್ಕದ ಎಲೆಗಳನ್ನು ಇರಿಸಿ ಸ್ನಾನ ಮಾಡಿದರೆ ಏಳು ಲೋಕಗಳಲ್ಲೂ ಮಾಡಿರುವ ಪಾಪಶೇಷಗಳು ಹೋಗಿ ಶುಭವುಂಟಾಗುವುದು. ಅಲ್ಲದೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದು.

“Arka” is one among the names of Surya and “ekka” is the tadbhavashabda of arka. Surya or the sun god is the Arogya devadi – Arogyam bhaaskaraadichchEt.  On Magha shudda saptami surya’s rays which are roga nivaraka will fall on arka patra. That is why those who does the snaana on this day will have disease free body. Further the sins done in sapta janma also will be lost by just doing snaana of arka patre. 

We have to keep seven arka patraas one each on our head, both arms, two knees, two foots. We have to brush our body not from soaps but from these leaves only on this day. Due to this our skin diseases will be lost.   The plant of Arka vitiates skin diseases, snake poison, inflammation in the joints, tridoshas, and rabies and chest infection.
On this day we have to sketch the figure of Chariot with 7 horses in front of our Tulasi Vrundavana or in the devaramane and do the pooja of SuryanaaryaaNa
******


"ರಥಸಪ್ತಮಿ":

 ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ-ಭಾನು ಬಿದಿಗೆ, ತದಿಗೆ-ಅಕ್ಷ ತದಿಗೆ, ಚೌತಿ-ವಿನಾಯಕನ ಚೌತಿ. . . . ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ. 

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. “ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

 ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಇಂದು (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಶನಿವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.ಆರೋಗ್ಯಂ ಭಾಸ್ಕರಾದಿಚ್ಛೇತ್... ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

 ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ. 108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

 ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

ಪೌರಾಣಿಕ ಹಿನ್ನೆಲೆಯೇನು? 

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

 ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. 

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬಮಂತ್ರದಲ್ಲಿvv ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ಎಕ್ಕದೆಲೆಯ ಸ್ನಾನ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವ?

ಸಪ್ತ ಸಪ್ತ ಮಹಾಸಪ್ತ
ಸಪ್ತ ದ್ವೀಪ ವಸುಂಧರ
ಸಪ್ತಾರ್ಕ ಪ್ರಣಮಾಧ್ಯಾಯ
ಸಪ್ತಮಿ ರಥ ಸಪ್ತಮಿ

ಎಂದು ಈ ಶ್ಲೋಕವನ್ನು ಹೇಳಿಕೊಂಡು  ತಲೆಗೆ ಸ್ನಾನ ಮಾಡಿದರೆ ಓಳ್ಳಯದು
ಈ ಮೇಲಿನ ಎಲ್ಲಾ ಸಂಗತಿಗಳನ್ನು ಓದಿ, ನಿಮ್ಮ  ಕುಟುಂಬ, ಬಂದು, ಬಳಗ, ಮತ್ತು ವಿಶೇಷ ವಾಗಿ ಇಂದಿನ ಮಕ್ಕಳಿಗೆ ಮನವರಿಕೆ ಮಾಡಿ. 
ನಮ್ಮ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ.
*************


ರಥಸಪ್ತಾಮಿಯಂದು ಸೂರ್ಯನಮಸ್ಕಾರ ಮಾಡುವ ಪದ್ಧತಿ

ಸೂರ್ಯನಮಸ್ಕಾರವು ಹತ್ತು ಆಸನಗಳನ್ನು ಒಳಗೊಂಡಿದೆ.

ಪ್ರತಿಸಲ ಸೂರ್ಯನಮಸ್ಕಾರವನ್ನು ಮಾಡುವ ಮೊದಲು “ಓಂ ಮಿತ್ರಾಯ ನಮಃ” ದಿಂದ ಎಲ್ಲ ಹದಿಮೂರು ಜಪಗಳನ್ನೂ ಮಾಡಬೇಕು.

ಸೂರ್ಯನಮಸ್ಕಾರ ಮಾಡುವಾಗ ಪಠಿಸಬೇಕಾದ ನಾಮಗಳು
ಓಂ ಮಿತ್ರಾಯ ನಮಃ
ಓಂ ರವಯೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪೂಷ್ಣೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚ್ಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

ಆಸನ ೧

ಪ್ರಾರ್ಥನಾಸನ : ಎರಡೂ ಕಾಲುಗಳು ಒಂದಕ್ಕೊಂದು ಕೂಡಿಕೊಂಡಿರಲಿ, ಎರಡೂ ಹಸ್ತಗಳನ್ನು ಜೋಡಿಸಿ ನಮಸ್ಕಾರ ಮಾಡುವ ರೀತಿಯಲ್ಲಿ ಎದೆಯ ಮಟ್ಟಕ್ಕೆ ತರಬೇಕು. ಬೆನ್ನು ಮತ್ತು ಕತ್ತು ನೇರವಾಗಿರಲಿ ಹಾಗೂ ನೇರವಾಗಿ ಎದುರಿಗೆ ನೋಡುತ್ತಿರಬೇಕು.
ಪ್ರಾಣಾಯಾಮ : ಕುಂಭಕ
ಲಾಭ : ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಆಸನ ೨

ಆಸನ : ಪ್ರಾರ್ಥನಾಸನದಿಂದ ಮುಂದುವರಿಯುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಬೆನ್ನನ್ನು ಹಿಗ್ಗಿಸುವ ರೀತಿಯಲ್ಲಿ ಹಿಂಬದಿಗೆ ಸ್ವಲ್ಪ ಬಾಗಬೇಕು. ಹಸ್ತಗಳನ್ನು ಜೋಡಿಸಿರಬೇಕು ಮತ್ತು ಮೊಣಕೈಗಳನ್ನು ಮಡಚಬಾರದು. ತಲೆಯನ್ನು ಎರಡೂ ತೋಳುಗಳಮಧ್ಯದಲ್ಲಿರಿಸಿ ಮೇಲಕ್ಕೆ ನೋಡುತ್ತಾ ಸೊಂಟದಿಂದ ಸ್ವಲ್ಪ ಹಿಂದಕ್ಕೆ ಬಾಗಬೇಕು.
ಪ್ರಾಣಾಯಾಮ : ಪೂರಕ (ಮೊದಲ ಆಸನದಿಂದ ಎರಡನೆಯ ಆಸನಕ್ಕೆ ಹೋಗುವಾಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು)
ಲಾಭ : ಎದೆಯ ಮಾಂಸಖಂಡಗಳನ್ನು ನೇರವಾಗಿಸುತ್ತದೆ ಮತ್ತು ಉಸಿರಾಟವು ಯೋಗ್ಯರೀತಿಯಲ್ಲಿ ಆಗುವಂತೆ ಮಾಡುತ್ತದೆ.

ಆಸನ ೩

ಉತ್ಥಾನಾಸನ : ಎರಡನೆಯ ಆಸನದಿಂದ ಮುಂದುವರಿಯುತ್ತಾ ಕೈಗಳನ್ನು ಮೇಲಕ್ಕೆ ಎತ್ತಿರುವಂತೆಯೇ ಮುಂದಕ್ಕೆ ಬಾಗುತ್ತಾ ಕೈಗಳನ್ನು ಪಾದಗಳ ಅಕ್ಕಪಕ್ಕದಲ್ಲಿ ನೆಲಕ್ಕೆ ಊರಬೇಕು. ಮೊಣಕಾಲು ನೇರವಾಗಿರಬೇಕು ಮತ್ತು ತಲೆಯನ್ನು ಮೊಣಕಾಲುಗಳಿಗೆತಾಗಿಸಲು ಪ್ರಯತ್ನಿಸಬೇಕು.
ಪ್ರಾಣಾಯಾಮ : ರೇಚಕ (ಆಸನ ೨ ರಿಂದ ೩ ಕ್ಕೆ ಬರುವಾಗ ನಿಧಾನವಾಗಿ ಉಸಿರನ್ನು ಹೊರಗೆ ಹಾಕಬೇಕು)
ಲಾಭ : ಸೊಂಟ ಮತ್ತು ಬೆನ್ನು ಮೂಳೆಯನ್ನು ಮೆತುವಾಗಿಸುತ್ತದೆ. ಮಾಂಸಖಂಡಗಳು ಬಲಗೊಳ್ಳೂತ್ತವೆ ಮತ್ತು ಯಕೃತ್ತಿನ ಕಾರ್ಯಕ್ಕೆ ಸಹಾಯಕಾರಿಯಾಗುತ್ತದೆ.

ಆಸನ ೪

ಏಕಪಾದಪ್ರಸರಣಾಸನ : ಮೂರನೆಯ ಆಸನದಿಂದ ಮುಂದುವರಿದು ಕೆಳಗೆ ಕುಳಿತುಕೊಳ್ಳುತ್ತಾ ಒಂದು ಕಾಲನ್ನು ಹಿಂದಕ್ಕೆ ನೇರವಾಗಿ ಚಾಚಬೇಕು. ಹಸ್ತಗಳು ಕಾಲುಗಳ ಎರಡೂ ಕಡೆಗಳಲ್ಲಿ ನೆಲಕ್ಕೆ ಊರಿರಬೇಕು. ಇನ್ನೊಂದು ಕಾಲನ್ನು ಮಡಚಿರಬೇಕು.ಎದೆಯ ಭಾರವನ್ನು ಮುಂದಿರುವ ಮೊಣಕಾಲಿನಮೇಲೆ ಹಾಕಬೇಕು, ಕಣ್ಣುಗಳ ದೃಷ್ಟಿಯು ನೇರವಾಗಿ ಮೇಲಕ್ಕೆ ಇರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಕಾಲುಗಳ ಮಾಂಸಖಂಡಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಮತ್ತು ಕತ್ತಿನ ಮಾಂಸಗಳು ಮೆತುವಾಗುತ್ತವೆ.


ಆಸನ ೫

ಚತುರಾಂಗ ದಂಡಾಸನ : ಈಗ ನಿಧಾನವಾಗಿ ಮಡಚಿರುವ ಕಾಲನ್ನು ಹಿಂದಕ್ಕೆ ಚಾಚಿ ಈಗಾಗಲೇ ಚಾಚಿರುವ ಕಾಲಿನ ಪಕ್ಕದಲ್ಲಿಡಬೇಕು. ಮೊಣಕಾಲುಗಳು ಸಮಾನಾಂತರವಾಗಿರಲಿ. ಇಡೀ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲಿರಲಿ.ಕಾಲು, ಸೊಂಟ ಮತ್ತು ತಲೆ ಒಂದೇ ರೇಖೆಯಂತೆ ನೇರವಾಗಿರಲಿ.ನೇರವಾಗಿ ನೆಲವನ್ನು ನೋಡುತ್ತಿರಬೇಕು. (ಈ ಆಸನಕ್ಕೆ ಚತುರಾಂಗದಂಡಾಸನವೆಂದು ಏಕೆ ಕರೆಯುತ್ತಾರೆಂದರೆ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲೆ ಇರುತ್ತದೆ)
ಪ್ರಾಣಾಯಾಮ : ರೇಚಕ
ಲಾಭ : ತೋಳುಗಳ ಬಲವೃದ್ಧಿಯಾಗುತ್ತದೆ ಮತ್ತು ದೇಹದ ಆಕೃತಿಯು ಸರಿಯಾಗಿ ಬೆಳವಣಿಗೆಯಾಗುತ್ತದೆ.

ಆಸನ ೬

ಅಷ್ಟಾಂಗಾಸನ : ಎದೆಯನ್ನು ನೆಲದಕಡೆಗೆ ತರುತ್ತಾ ಎರಡೂ ಮೊಣಕೈಗಳನ್ನು ಮಡಚಬೇಕು. ಮುಂದೆ ಕೊಟ್ಟಿರುವ ಎಂಟು ಅವಯವಗಳು ನೆಲಕ್ಕೆ ತಾಗಬೇಕು.ಹಣೆ, ಎದೆ, ಎರಡೂ ಹಸ್ತಗಳು, ಎರಡೂ ಮೊಣಕಾಲುಗಳು ಮತ್ತು ಕಾಲಿನ ಹೆಬ್ಬೆರಳುಗಳು. (ಈಆಸನದಲ್ಲಿ ದೇಹದ ಎಂಟು ಅವಯವಗಳು ನೆಲವನ್ನು ಸ್ಪರ್ಷಿಸುತ್ತವೆಯಾದ್ದರಿಂದ ಇದಕ್ಕೆ ಅಷ್ಟಾಂಗಾಸನವೆಂದು ಕರೆಯುತ್ತಾರೆ)
ಪ್ರಾಣಾಯಾಮ : ಕುಂಭಕ (ಬಹಿರ್‌ಕುಂಭಕ)
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತದೆ.

ಆಸನ ೭

ಭುಜಂಗಾಸನ : ಈಗ ಸೊಂಟದ ಮೇಲ್ಭಾಗವನ್ನು ಮೇಲಕ್ಕೆತ್ತಬೇಕು. ಹಿಂದಕ್ಕೆ ಸ್ವಲ್ಪಬಾಗಬೇಕು ಮತ್ತು ಹಿಂದೆ ನೋಡಬೇಕು. ಕಾಲ್ಬೆರಳುಗಳು ಮತ್ತು ತೊಡೆಗಳು ನೆಲಕ್ಕೆ ಸ್ಪರ್ಷಿಸುತ್ತಿರುವಂತೆ ನೋಡಿಕೊಳ್ಳಬೇಕು ಮತ್ತು ಬೆನ್ನು ಅರ್ಧವೃತ್ತಾಕಾರದಲ್ಲಿ ಬಾಗಿದಸ್ಥಿತಿಯಲ್ಲಿರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತವೆ.( ೫, ೬ ಮತ್ತು ೭ನೆಯ ಆಸನಗಳು ಒಟ್ಟಾಗಿ ತೋಳುಗಳನ್ನು ಬಲಶಾಲಿಯನ್ನಾಗಿಸುತ್ತವೆ ಮತ್ತು ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಕೊಬ್ಬನ್ನುಕರಗಿಸುತ್ತವೆ)

ಆಸನ ೮

ಅಧೋಮುಖ ಸ್ವನಾಸನ : ಈಗ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಕೈಗಳು ನೇರವಾಗಿ ಚಾಚಿಕೊಂಡಿರಲಿ,ಹಸ್ತಗಳು ಮತ್ತು ಪಾದಗಳನ್ನು ನೆಲಕ್ಕೆ ಊರಬೇಕು.ಗದ್ದವನ್ನು ಎದೆಗೆ ತಾಗಿಸುವ ಪ್ರಯತ್ನ ಮಾಡಬೇಕು
ಪ್ರಾಣಾಯಾಮ : ರೇಚಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟದ ಮಾಂಸಖಂಡಗಳಿಗೆ ಉಪಯುಕ್ತ.

ಆಸನ ೯

ಏಕಪಾದ ಪ್ರಸರಣಾಸ : ನಾಲ್ಕನೆಯ ಆಸನದಂತೆ ಮಾಡುವುದು ಆದರೆ ಇಲ್ಲಿ ವಿರುದ್ಧ ಕಾಲು ಹಿಂದೆ ಚಾಚಿಕೊಂಡಿರುತ್ತದೆ.
ಪ್ರಾಣಾಯಾಮ : ಪೂರಕ.

ಆಸನ ೧೦

ಅಷ್ಟಾಂಗಾಸನ : ಮೂರನೆಯ ಆಸನದಂತೆ ಮಾಡಬೇಕು (ಉತ್ಥಾನಾಸನ).
ಪ್ರಾಣಾಯಾಮ : ರೇಚಕ
ಇದರ ನಂತರ ನಿಧಾನವಾಗಿ ಮೊದಲನೆಯ ಆಸನ ಎಂದರೆ ಪ್ರಾರ್ಥನಾಸಕ್ಕೆ ಬರಬೇಕು. ಈ ರೀತಿ ಮಾಡಿದಾಗ ಒಂದು ಸೂರ್ಯನಮಸ್ಕಾರ ಆಯಿತು. ಈ ರೀತಿಯಾಗಿ ಪ್ರತಿದಿನ ಹನ್ನೆರಡುಸಲ ಮಾಡಬೇಕು.

ಸೂಚನೆ : ಕತ್ತಿನಲ್ಲಿ ಸಮಸ್ಯೆ ಇರುವವರು ಸೂರ್ಯನಮಸ್ಕಾರ ಮಾಡುವ ಮೊದಲು ವೃತ್ತಿಪರ ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.

ಧರ್ಮಾಧಾರಿತ ಮಾಹಿತಿಗಾಗಿ:
Follow... 𝗦𝗮𝗻𝗮𝘁𝗮𝗻𝗮𝗗𝗛𝗔𝗥𝗠𝗔🚩
***


ರಥಸಪ್ತಮೀ
ಮಂಗಲಂ ನಿತ್ಯ ಕಲ್ಯಾಣಂ ಲಕ್ಷ್ಮೀ ಸೌಭಾಗ್ಯವರ್ಧನಂ|
ಲಕ್ಷ್ಮೀ ಮನೋರಥಂ ಪ್ರಾಪ್ತಿಕರಂ ಪಂಚಾಂಗಂ ಫಲಮುತ್ತಮಂ||
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್||

************

ಮಾಘ ಶುದ್ಧ ಸಪ್ತಮಿ : ರಥ ಸಪ್ತಮಿ

ಯನ್ಮಂಡಲಂ ದೀಪ್ತಿಕರಂ ವಿಶಾಲಂ 
ರತ್ನಪ್ರಭಂ ತೀವ್ರಮನಾದಿರೂಪಮ್ । ದಾರಿದ್ರ್ಯದುಃಖಕ್ಷಯಕಾರಣಂ ಚ 
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥

ರಥ ಸಪ್ತಮಿ ದಿನ ವಿಶೇಷ
ಸೂರ್ಯ ಮಂದೇಹ ಎಂಬ ದೈತ್ಯನ ಸಂಹಾರ ಮಾಡಿದ ದಿನ. ದೈತ್ಯ ತ್ರಿಸುಪರ್ಣನನ್ನು ಸಂಹಾರ ಮಾಡಲು ರುದ್ರದೇವರಿಗೆ ದೇವಶಿಲ್ಪಿ ವಿಶ್ವಕರ್ಮ ರಥ ನಿರ್ಮಾಣ ಮಾಡಿದ ದಿನ.

7 ಅರ್ಕದೆಲೆಗಳಿಂದ ಸ್ನಾನ :
ಈ ದಿನದಂದು 7 ಅರ್ಕದೆಲೆಗಳಿಂದ ಸ್ನಾನ ಮಾಡಬೇಕು. ಅರ್ಕದೆಲೆಯ ಸ್ನಾನ ಸೂರ್ಯನಾರಾಯಣನ ಅನುಗ್ರಹದಿಂದ ಸರ್ವವ್ಯಾಧಿಗಳ ನಿವಾರಣೆ ಮತ್ತು ಸಪ್ತಜನ್ಮಗಳ ದುಷ್ಕರ್ಮಗಳ ನಾಶವಾಗುತ್ತೆ.

ಸ್ನಾನ ಮಂತ್ರ :

ಯದ್ಯಜ್ಜನ್ಮಕೃತಂ ಪಾಪಂ 
ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ 
ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ 
ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ 
ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ 
ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ 
ಹರ ಮಾಕರಿ ಸಪ್ತಮಿ |

ಸೂರ್ಯ ಅರ್ಘ್ಯ ಮಂತ್ರ :
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ 
ದಿವಾಕರ ||

ಕೂಷ್ಮಾಂಡ (ಬೂದಗುಂಬಳಕಾಯಿ) ದಾನ :
ಈ ದಿನ ಕೂಷ್ಮಾಂಡ (ಬೂದಗುಂಬಳಕಾಯಿ) ದಾನ ಮಾಡುವದರಿಂದ ಗರ್ಭ ದೋಷ ನಿವಾರಣೆಯಾಗಿ ವಿಶೇಷ ಸಂತಾನದ ಫಲ ಲಭಿಸುತೇ.

ಕೂಷ್ಮಾಂಡ ದಾನದ ಸಂಕಲ್ಪ :
ಆಚಮನ, ಕೇಶವಾಯಸ್ವಾಹ……… ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ _____ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.

ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||

ಸೂರ್ಯ ದ್ವಾದಶ ಸ್ತೋತ್ರ :

ಆದಿತ್ಯಃ ಪ್ರಥಮಂ ನಾಮ 
ದ್ವಿತೀಯಂ ತು ದಿವಾಕರಃ । 
ತೃತೀಯಂ ಭಾಸ್ಕರಃ ಪ್ರೋಕ್ತಂ 
ಚತುರ್ಥಂ ಚ ಪ್ರಭಾಕರಃ ॥ 
ಪಂಚಮಂ ಚ ಸಹಸ್ರಾಂಶು 
ಷಷ್ಠಂ ಚೈವ ತ್ರಿಲೋಚನಃ । 
ಸಪ್ತಮಂ ಹರಿದಶ್ವಂ ಚ 
ಅಷ್ಟಮಂ ತು ಅಹರ್ಪತಿಃ ॥ 
ನವಮಂ ದಿನಕರಃ ಪ್ರೋಕ್ತಂ 
ದಶಮಂ ದ್ವಾದಶಾತ್ಮಕಃ । 
ಏಕಾದಶಂ ತ್ರಿಮೂರ್ತಿಶ್ಚ 
ದ್ವಾದಶಂ ಸೂರ್ಯ ಏವ ತು ॥

ದ್ವಾದಶಾದಿತ್ಯನಾಮಾನಿ 
ಪ್ರಾತಃಕಾಲೇ ಪಠೇನ್ನರಃ । 
ದುಃಸ್ವಪ್ನೋ ನಶ್ಯತೇ ತಸ್ಯ 
ಸರ್ವದುಃಖಂ ಚ ನಶ್ಯತಿ ॥ 
ದದ್ರುಕುಷ್ಟಹರಂ ಚೈವ 
ದಾರಿದ್ರ್ಯಂ ಹರತೇ ಧ್ರುವಮ್ । 
ಸರ್ವತೀರ್ಥಕರಂ ಚೈವ 
ಸರ್ವಕಾಮಫಲಪ್ರದಮ್ ॥ 
ಯಃ ಪಠೇತ್ ಪ್ರಾತರುತ್ಥಾಯ 
ಭಕ್ತ್ಯಾ ಸ್ತೋತ್ರಮಿದಂ ನರಃ । ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ ॥

-ಶ್ರೀ ಇಭರಾಮಪುರಾಧೀಶ ವಿಷ್ಣುತೀರ್ಥಚಾರ್ಯ
***********

ರಥಸಪ್ತಮಿಯ ದಿನದಂದು ಎಕ್ಕದ ಎಲೆಯನ್ನು ಇಟ್ಟು ಕೊಂಡು ಸ್ನಾನ ಮಾಡುವಾಗ ಹೇಳುವ ಮಂತ್ರ.

" ಸಪ್ತ ಸಪ್ತ ಮಹಾಸಪ್ತ 
ಸಪ್ತ ದ್ವೀಪ ವಸುಂಧರ
ಸಪ್ತ ಅರ್ಕ ಪರ್ಣ ಮದಾಯ , 
ಸಪ್ತಂಯಾಮ್  ಸ್ನಾನ ಮಾಚರಿತ "

ಬೆಳಿಗ್ಗೆ 4 ರಿಂದ 5 ಗಂಟೆಯೊಳಗೆ ಸ್ನಾನ ಮಾಡಬೇಕು .
ವಿಧಾನ -7 ಎಕ್ಕದ ಎಲೆ ತೆಗೆದುಕೊಂಡು ,
ತಲೆಯ ಮೇಲೆ 1, 
ಬಲಭುಜದ ಎಲೆ 1, 
ಎಡಭುಜದ ಮೇಲೆ 1, 
ಬಲಮಂಡಿಯ ಮೇಲೆ  1, 
ಎಡಮಂಡಿಯ ಮೇಲೆ 1,
ಬಲಪಾದದ ಮೇಲೆ 1, 
ಎಡಪಾದದ ಮೇಲೆ 1, (ಮುಂಗಾಲು)
ಇಟ್ಟು ತಣ್ಣೀರಿನಿಂದ ಸ್ನಾನ ಮಾಡಬೇಕು.
*******

ರಥ ಸಪ್ತಮಿ

ಪ್ರತೀ ಹೆಣ್ಣು ಮಕ್ಕಳು ಮಾಡಲೇ ಬೇಕಾದ ವೃತ ಇದು ..
ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...
ಸ್ನಾನದ ವಿಧಿ
-------------------
ಸಂಕಲ್ಪ....
ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

ಈ ಶ್ಲೋಕವನ್ನು ಹೇಳಿ ...

ಯದ್ಯಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು l
ತನ್ಮೇ ಶೋಕಂ ಚ ರೋಗಂ ಚ ಮಾಕರೀ ಹಂತು ಸಪ್ತಮೀll
ಏತ ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ l
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ ಪುನಃll
ಇತಿ ಸಪ್ತವಿದಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ l
ಸಪ್ತವ್ಯಾಧಿ ಸಮಾಯುಕ್ತಂ ಹರಮಾಕರಿ ಸಪ್ತಮಿ ll

ಒಂದು ಯಕ್ಕದ ಎಲೆಯನ್ನು ತಲೆಯಮೇಲಿಟ್ಟುಕೊಂಡು ಒಂದು ಬಟ್ಟಲು ಕಬ್ಬಿನ ನೀರು (ಹಾಲು) ಹಾಕಿಕೊಂಡು ತಲೆಸ್ನಾನ ಮಾಡಬೇಕು ... ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ .....ಪ್ರಾರ್ಥನೆ ಮಾಡಿಕೊಳ್ಳಬೇಕು ..

ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll

ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರಮಾಡಿ,
ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll

ಸೂರ್ಯ ನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..

ಮಿತ್ರಾಯನಮಃ ಇದಮರ್ಘ್ಯಂ ದತ್ತಂ ನಮಮ
ರವಯೇ ನಮಃ
ಸೂರ್ಯಾಯ ನಮಃ
ಭಾನವೇ ನಮಃ
ಖಗಾಯ ನಮಃ
ಪೂಷ್ಣೇ ನಮಃ
ಹಿರಣ್ಯಗರ್ಭಾಯ ನಮಃ
ಮರೀಚಯೇ ನಮಃ
ಆದಿತ್ಯಾಯ ನಮಃ
ಸವಿತ್ರೇ ನಮಃ
ಅರ್ಕಾಯ ನಮಃ
ಭಾಸ್ಕರಾಯ ನಮಃ ಇದಮರ್ಘ್ಯಂ ದತ್ತಂ ನಮಮ

ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ.
********

12 Feb.2020 Why to go Tirupathi ? Lord Venkateshwara visits our home! Today is Ratha Sapthami. Temples in big cities have ceased this activity of pulling chariots, but It still happens in Mysore City. 

ವಿಷ್ಣು ವಚನವು ಹೀಗಿದೆ : “ಮಾಘ ಶುಕ್ಲ ಸಪ್ತಮಿಯು ಸೂರ್ಯಗ್ರಹಣಕ್ಕೆ ಸಮಾನವಾಗಿದೆ.  ಅದು ಅರುಣೋದಯದ ಸಮಯದಲ್ಲಿ ಸ್ನಾನಮಾಡಿದರೆ ಮಹಾಫಲ ಲಭ್ಯವಾಗುತ್ತದೆ. ಮತ್ತು ಹೀಗೆ ಹೇಳಲಾಗಿದೆ: ಮಾಘಶುಕ್ಲ ಸಪ್ತಮಿಯನ್ನು ಅರುಣೋದಯದಲ್ಲಿ ಆಚರಿಸುವ ಸೌಭಾಗ್ಯವು ಪ್ರಯಾಗದಲ್ಲಿ ಪ್ರಾಪ್ತವಾದರೆ ಅದು ಕೋಟಿ ಸೂರ್ಯಗ್ರಹಣಕ್ಕೆ ಸಮಾನವಾದ ಫಲ ನೀಡುತ್ತದೆ.


ರಥ ಸಪ್ತಮಿಯ ವಿಶೇಷತೆ - ಮಾಘಶುಕ್ಲ ಸಪ್ತಮಿಯು ರಥ ಸಪ್ತಮಿಯಾಗಿದೆ.  ಇದನ್ನು ಅರುಣೋದಯ ವ್ಯಾಪಿನಿಯಾಗಿ ಗ್ರಹಿಸಬೇಕು. ಚಂದ್ರಿಕಾಲದಲ್ಲಿ ದಿವೋದಾಸನ ಗ್ರಂಥದಲ್ಲಿ ಹೀಗೆ ಹೇಳಿದೆ :

ಅಚಲಾ ಸಪ್ತಮೀ ಎಂದರೆ ರಥ ಸಪ್ತಮಿ, ದುರ್ಗಾಷ್ಟಮೀ ಹಾಗೂ ಶಿವರಾತ್ರಿ ಚತುರ್ದಶೀ, ಮತ್ತು ವತ್ಸಪೂಜೆಯಲ್ಲಿ ದ್ವಾದಶಿ (ಗೋವತ್ಸ ದ್ವಾದಶಿ) ಇವನ್ನು ಯಾವಾಗಲೂ ಪೂರ್ವತಿಥಿಯುಕ್ತವಾಗಿ ಸಂಗ್ರಹಿಸಬೇಕು. ಈ ವಾಕ್ಯಾನುಸಾರ ಅಚಲಾ ಸಪ್ತಮೀಯನ್ನು ಎಂದರೆ ರಥ ಸಪ್ತಮಿಯನ್ನು ಷಷ್ಠೀಯುಕ್ತವಾಗಿ ಆಚರಿಸಲು ಹೇಳಿದೆ. ಈ ವಾಕ್ಯವು ಯಾವಾಗ ಅನ್ವಯವಾಗುತ್ತದೆ ಎಂದರೆ- ಯಾವಾಗ ಮೊದಲದಿನ ಷಷ್ಠಿಯ ಕೇವಲ ಎರಡುಗಳಿಗೆ ಮಾತ್ರ ಇರುತ್ತದೋ ಹಾಗೂ ಕ್ಷಯ ವಾಗುವ ಕಾರಣ ಮರುದಿನ ಸಪ್ತಮಿಯು ಅರುಣೋದಯದ ಮೊದಲಲ್ಲೇ ಸಮಪ್ತವಾಗುತ್ತದೋ ಆವಾಗ. ಅಲ್ಲಿ ಷಷ್ಟಿಯಲ್ಲೇ ಸಪ್ತಮಿ ಕ್ಷಯದ ಪ್ರವೇಶ ಮಾಡಿದೆಯೆಂದು ಭಾವಿಸಿ ಅರುಣೋದಯದಲ್ಲಿ ಸ್ನಾನ ಮಾಡಬೇಕು – ಮದನರತ್ನದಲ್ಲಿ ಭವಿಷ್ಯೋತ್ತರ ಪುರಾಣದ ವಚನವು ಹೀಗಿದೆ : ಮಾಘ ಶಕ್ಲ ಸಪ್ತಮಿಯು ಕೋಟಿ ಭಾಸ್ಕರರಿಗೆ ಸಮಾನವಾಗಿದೆ.

ಆಗ ಸ್ನಾನ, ದಾನ ಹಾಗೂ ಅರ್ಘ್ಯ ನೀಡುವುದರಿಂದ ಈ ಸಪ್ತಮಿಯು ಆಯುಷ್ಯ, ಆರೋಗ್ಯ ಹಾಗು ಐಶ್ವರ್ಯಗಳನ್ನು ಪ್ರದಾನ ಮಾಡುತ್ತದೆ. ಈ ಸಪ್ತಮೀ ಆಚರಣೆಯ
ವಿಧಿಯನ್ನು ಭವಿಷ್ಯ ಪುರಾಣದ ವಾಕ್ಯವನ್ನಾಧರಿಸಿ ಹೇಮಾದ್ರಿಯಲ್ಲಿ ಹೀಗೆ ಹೇಳಿದೆ : “ಷಷ್ಠಯಂದು ಸ್ನಾನ ಮಾಡಿ ಒಂದೇ ಹೊತ್ತು ಭೋಜನ ಮಾಡಬೇಕು. ಸಪ್ತಮೀ ಪ್ತಾತಃಕಾಲದಲ್ಲಿ ತಲೆಯಮೇಲೆ ದೀಪಹೊತ್ತು ನಿಶ್ಚಲ ಜಲವನ್ನು ಕಲಕಬೇಕು. ರಾತ್ರಿಯ ಅಂತ್ಯದಲ್ಲಿ ದೀಪವನ್ನು ಬೆಳಗಿಸಬೇಕು. ತಥಾ ಜಲದ ಪ್ರದಕ್ಷಿಣೆ ಮಾಡಿ ಎಲ್ಲಿಯ ತನಕ ಅದನ್ನು ಯಾವನೂ ಕಲಕುವದಿಲ್ಲವೋ ಅಲ್ಲಿಯ ತನಕ ನಿಶ್ಚಲ ಜಲದಲ್ಲಿ ಸ್ನಾನ ಮಾಡಬೇಕು. ಸುವರ್ಣ, ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಎಣ್ಣೆ ತುಂಬಿ ಕುಸುಂಭದ ವರ್ಣದಿಂದ ರಂಜಿತವಾದ ಬತ್ತಿಯನ್ನು ಇಡಬೇಕು.

ಏಕಾಗ್ರಮನಸ್ಸಿನಿಂದ ಶಿರಸ್ಸಿನ ಮೇಲೆ ದೀಪವನ್ನಿಟ್ಟು, ಹೃದಯದಲ್ಲಿ ಸೂರ್ಯನ ಧ್ಯಾನ ಮಾಡುತ್ತ ಈ ಮಂತ್ರವನ್ನು ಪಠಿಸಬೇಕು: ” ಹೇ! ರುದ್ರರೂಪನೆ‌! ನೀನು ರಸಗಳ (ಪ್ರಾಣಗಳ) ಒಡೆಯನಾಗಿರುವಿ. ನಿನಗೆ ನಮಿಸುತ್ತೇನೆ. ಹೇ! ನಾರಾಯಣನ ನಿವಾಸವಾದ ವರುಣನೆ! ನಿನ್ನನ್ನು ನಮಿಸುತ್ತೇನೆ.” ಹೀಗೆ ದೇವತೆಯ ಧ್ಯಾನ ಹಾಗು ತರ್ಪಣ ಮಾಡಿ ದೀಪವನ್ನು ಜಲದಲ್ಲಿ ಹರಿಬಿಡಬೇಕು. ನಂತರ ಕರ್ಣಿಕಾ ಸಹಿತ ಶಿವಪಾರ್ವತಿಯರನ್ನು ಚಿತ್ರಿಸಬೇಕು. ನಂತರ ಪೂರ್ವಾದಿ ದಳಗಳ ಮೇಲೆ ಅನುಕ್ರಮವಾಗಿ ರವಿ, ಭಾನು, ವಿವಸ್ವತ್, ಭಾಸ್ಕರ ಸವಿತಾ, ಅರ್ಕ, ಸಹಸ್ರಕಿರಣ ಹಾಗು ಸರ್ವಾತ್ಮಾ ಇವರ ಹೆಸರಿಂದ ಪೂಜೆ ಮಾಡಿ ನಂತರ ಮನೆಗೆ ತೆರಳಬೇಕು.
****
ರಥಸಪ್ತಮಿ ಯು ಜಗತ್ ಚಕ್ಷುವಾದ ಶ್ರೀಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.
  ಆರೋಗ್ಯಕಾರಕನಾದ ಸೂರ್ಯದೇವ, ಚರ್ಮರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ  ಈ ದಿನದಿಂದ ಗತಿ ಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ. 

  ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸೋಣ.

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||

 ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ. 
ವಿಷ್ಣುಸ್ಮೃತಿಃ ಪ್ರಕಾರ, 
ಸೂರ್ಯಗ್ರಹಣತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ | ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್ || ಎಂಬಂತೆ ರಥಸಪ್ತಮಿ ದಿನ ಮಾಡುವ ಸ್ನಾನ ಹೆಚ್ಚಿನ ಫಲ ನೀಡುತ್ತದೆ.
 
  ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆ ಅಥವಾ ಬೋರೆ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. 
  (ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ). ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು. 

 ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ (೧.ಈ ಜನ್ಮದಲ್ಲಿ ಮಾಡಿದ ಪಾಪ, ೨.ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ, ೩.ದೈಹಿಕವಾಗಿ ಮಾಡಿದ ಪಾಪ, ೪.ಮಾತಿನ ಮೂಲಕ ಮಾಡಿದ ಪಾಪ, ೫.ಮನಸ್ಸಿನ ಮೂಲಕ ಮಾಡಿದ ಪಾಪ, ೬.ತಿಳಿದು ಮಾಡಿದ ಪಾಪ, ೭. ತಿಳಿಯದೇ ಮಾಡಿದ ಪಾಪ. ಇವು ಸಪ್ತವಿಧ ಪಾಪಗಳು).
  
   ಇದರ ಜತೆ ವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

 ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ,
ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ಎಂಬ ಶ್ಲೋಕ ಪಠಿಸಬೇಕು.

   ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು 
*ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನಸನ್ನಿವಿಷ್ಟ: |
ಕೇಯೂರವಾನ್ ಮಕರಕುಂಡಲವಾನ್ ಕಿರೀಟಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ ||* ರಂದು ಧ್ಯಾನಿಸಬೇಕು.

  ಜನನಿ ಸರ್ವ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll ಎಂದು ಪ್ರಾರ್ಥಿಸಬೇಕು.

  ಓಂ ಮಿತ್ರಾಯ ನಮಃ |  ಓಂ ರವಯೇ ನಮಃ |  
ಓಂ ಸೂರ್ಯಾಯ ನಮಃ |  ಓಂ ಖಗಾಯ ನಮಃ |  
ಓಂ ಭಾನುವೇ ನಮಃ |  ಓಂ ಪೂಷ್ಣೇ ನಮಃ | 
ಓಂ ಹಿರಣ್ಯಗರ್ಭಾಯ ನಮಃ |  ಓಂ ಮರೀಚಯೇ ನಮಃ | ಓಂ ಆದಿತ್ಯಾಯ ನಮಃ | ಓಂ ಸವಿತ್ರೇ ನಮಃ |  ಓಂ ಅರ್ಕಾಯ ನಮಃ |  ಓಂ ಭಾಸ್ಕರಾಯ ನಮಃ |ಓಂ ಸರ್ವರೋಗಹರಾಯ ನಮಃ | ಓಂ ಸರ್ವ ಸಂಪತ್ಪದಾಯ ನಮಃ | ಓಂ ಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.  

  ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.

   ಇದಾದ ಮೇಲೆ ಸೂರ್ಯಾಂತರ್ಗತ ಸವಿತೃನಾಮಕ ಲಕ್ಷ್ಮೀನಾರಾಯಣ ದೇವರಿಗೆ 
ಸಪ್ತ ಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಾಣಾರ್ಘಂ ದಿವಾಕರ || ಎಂದು ಅರ್ಘ್ಯವನ್ನು ನೀಡಬೇಕು.

 ಇದರ ಜತೆ, ಮಿತ್ರಾಯನಮಃ  ಇದಮರ್ಘ್ಯಂ ಎಂದು ಹೇಳಿ, ಇದೇ ರೀತಿ, 
ರವಯೇ ನಮಃ |
ಸೂರ್ಯಾಯ ನಮಃ |
ಭಾನವೇ ನಮಃ | 
ಖಗಾಯ ನಮಃ |
ಪೂಷ್ಣೇ ನಮಃ |
ಹಿರಣ್ಯಗರ್ಭಾಯ ನಮಃ |
ಮರೀಚಯೇ ನಮಃ |
ಆದಿತ್ಯಾಯ ನಮಃ |
ಸವಿತ್ರೇ ನಮಃ | 
ಅರ್ಕಾಯ ನಮಃ |
ಭಾಸ್ಕರಾಯ ನಮಃ 
ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

     ನಂತರ *ದಿವಾಕರಂ ದೀಪ್ತಸಹಸ್ರರಶ್ಮಿಂ
ತೇಜೋಮಯಂ ಜಗತಃ ಕರ್ಮಸಾಕ್ಷಿಮ್ |* ಎಂದು ನಮಿಸಿ, ಪೂಜೆಯ ನಂತರ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ. 
 
ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ‌ ತಂ ಸೂರ್ಯಂ ಪ್ರಣಮಾಮ್ಯಹಂ ||

ಶ್ರೀ ಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣದೇವರು ಎಲ್ಲರನ್ನೂ ಸಲಹಲಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***


ರಥಸಪ್ತಮೀ ದಿವಸ ಆಚರಿಸಬೇಕಾದ ಕರ್ತವ್ಯಕರ್ಮಗಳ ಕುರಿತ ವಿವರಣೆ ಕೆಳಗಿನ ಎರಡು ಲೇಖನಗಳಲ್ಲಿವೆ. 

ಸ್ನಾನದ ಕ್ರಮ

 ರಥಸಪ್ತಮಿಯನ್ನು ಎಂದು ಆಚರಿಸಬೇಕು,  ರಥಸಪ್ತಮಿಯ ಆಚರಣೆಯ ಕ್ರಮ,  ಅರುಣೋದಯದಲ್ಲಿ ಸ್ನಾನ,  ಅರುಣೋದಯಕಾಲದಲ್ಲಿ ಗೃಹಸ್ಥರು ಸ್ನಾನ ಮಾಡಬಹುದೇ? ಎಂಬ ಪ್ರಶ್ನೆಗೆ ಉತ್ತರ,  ಸ್ನಾನದ ಸಂಕಲ್ಪ,  ಅರುಣಪ್ರಾರ್ಥನಾಮಂತ್ರ,  ಸ್ನಾನದಲ್ಲಿ ಸಪ್ತಮೀಪ್ರಾರ್ಥನಾಮಂತ್ರಗಳು,  ಸೂರ್ಯದರ್ಶನ,  ಸೂರ್ಯಪ್ರಾರ್ಥನಾಮಂತ್ರ,  ಇಷ್ಟು ವಿಷಯಗಳು ಈ 👇ಲೇಖನದಲ್ಲಿ ಇವೆ. 
http://vishwanandini.com/fullarticle.php?serialnumber=VNA219


ಸೂರ್ಯಪೂಜಾವಿಧಾನ

ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುವ ವಿಧಾನ, ಅರ್ಘ್ಯಪ್ರದಾನ ಮಾಡುವ ರೀತಿ, ಕೂಷ್ಮಾಂಡದಾನನ ಕ್ರಮದ ವಿವರಣೆಯೊಂದಿಗೆ ಶ್ರೇಷ್ಠವಾದ ಆರೋಗ್ಯವನ್ನು ಅನುಗ್ರಹಿಸುವ ಆರೋಗ್ಯಸಪ್ತಮೀವ್ರತದ ಆಚರಣೆಯ ವಿವರಣೆ ಈ👇 ಲೇಖನದಲ್ಲಿದೆ. 

http://vishwanandini.com/fullarticle.php?serialnumber=VNA220

*****

ಮಾಘ ಶುದ್ಧ ಸಪ್ತಮಿ

ಸೂರ್ಯೋದಯದೊಳಗೆ ಎಕ್ಕಿಎಲೆಯನ್ನು ತಲೆಯಮೇಲೆ ಇಟ್ಟುಕೊಂಡು ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಕೊಡಬೇಕು.
ನಂತರ ರಥದಲ್ಲಿ ಕುಳಿತಿರತಕ್ಕ ಸೂರ್ಯದೇವರ ಪೊಜೆಮಾಡಬೇಕು.

ಸ್ನಾನ ಮಂತ್ರ–
ಯದ್ಯಜ್ಜನ್ಮಕೃತಂ ಪಾಪಂ
ಮಯಾ ಸಪ್ತಸು ಜನ್ಮಸು|
ತನ್ಮೇ ರೋಗಂ ಚ ಶೋಕಂ ಚ
ಮಾಕರೀ ಹಂತು ಸಪ್ತಮಿ||

ಎತಜ್ಜನ್ಮಕೃತಂ ಪಾಪಂ
ಯಚ್ಚ ಜನ್ಮಾಂತರಾರ್ಜಿತಂ|
ಮನೋವಾಕ್ಕಾಯಜಂ ಯಚ್ಚ
ಜ್ಞಾತಾ ಜ್ಞಾತಂ ಚ ಯತ್ಪುನ:||

ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಕೇ| ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ||

ಸೂರ್ಯಾರ್ಘ್ಯಮಂತ್ರ
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ|ಸಪ್ತಮೀಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ||

ಈ ಮಂತ್ರದಿಂದ ರಥಸಪ್ತಮಿದಿನ ಸೂರ್ಯಾರ್ಘ್ಯ ಕೊಡಬೇಕು.


ಪಂ.ಜಯತೀರ್ಥಾಚಾರ್ಯ ಹಾವನೂರ
***

#ರಥಸಪ್ತಮಿ

ಸೂರ್ಯ ದೇವರನ್ನು ಪೂಜಿಸಲು ಆದಿತ್ಯ ಹೃದಯಂ ಸ್ತೋತ್ರವನ್ನು ಪಠಿಸಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ.

ಆದಿತ್ಯ ಹೃದಯ ಸ್ತೋತ್ರ ಭಗವಾನ್ ಶ್ರೀ ರಾಮನು ರಾವಣನನ್ನು ಕೊಂದು ವಿಜಯ ಸಾಧಿಸಿದನು. ಆದ್ದರಿಂದ, ಒಬ್ಬರ ಸಮಸ್ಯೆಗಳನ್ನು ಜಯಿಸಲು ಆತ್ಮವಿಶ್ವಾಸವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಮೋಡಿ ಬಯಸುವ ಜನರು-ಅವರ ಸುತ್ತಲಿನ ದೈವಿಕ ಶಕ್ತಿ, ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಇದನ್ನು ಭಾಗವತದಲ್ಲಿ ಹೇಳಲಾಗಿದೆ.

ಭಗವಾನ್ ಸೂರ್ಯ ಅವರ ಕೃಪೆಯಿಂದ ಕುಂತಿ ದೇವಿ ಅವರು ಪುತ್ರರಾಗಿ ಕಾಮ ಮತ್ತು ವೃಕ್ಷರಾಜರನ್ನು ಸುಗ್ರೀವನೊಂದಿಗೆ ಆಶೀರ್ವದಿಸಿದರು.

ಸತ್ರಜಿತ್ ಸೂರ್ಯನನ್ನು ಪೂಜಿಸುವ ಮೂಲಕ ಶ್ಯಾಮಂತಕ-ಮಣಿ ಪಡೆದರು.

ಧರ್ಮ ರಾಜನು ಸೂರ್ಯ ಭಗವಂತನನ್ನು ಆರಾಧಿಸುವ ಮೂಲಕ ಅಕ್ಷಯ ಪಾತ್ರೆ ಪಡೆದನು ಮತ್ತು ಅವನು ತನ್ನ ಅತಿಥಿಗಳನ್ನು ಈ ಹಾರೈಕೆ ಮಾಡುವ ಬಟ್ಟಲಿನಿಂದ ಮನರಂಜಿಸುತ್ತಿದ್ದನು.

ಸ್ಕಂದ ಪುರಾಣದಲ್ಲಿ ಒಬ್ಬರು ಸೂರ್ಯ ಭಗವಾನ್ ಅವರನ್ನು ಸಂತೋಷ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥಿಸಬೇಕಾಗಿದೆ ಏಕೆಂದರೆ ಅವರು ಒಬ್ಬ ಪ್ರತ್ಯಕ್ಷ ದೇವ, ಸರ್ವವ್ಯಾಪಿ ಮತ್ತು ನಮ್ಮ ಎಲ್ಲಾ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ.

ಜಂಬಾವತಿಯ ಮಗ ಸಾಂಬನು ಸೂರ್ಯನನ್ನು ಆರಾಧಿಸುವ ಮೂಲಕ ತನ್ನ ಕುಷ್ಠರೋಗದಿಂದ ಗುಣಮುಖನಾಗಬಹುದು ಎಂದು ಸಾಂಬಾ ಪುರಾಣವು ಘೋಷಿಸಿತು. ಆದ್ದರಿಂದ, ಚರ್ಮರೋಗದ ಚಿಕಿತ್ಸೆ.

🙏 ಆದಿತ್ಯ ಹೃದಯ 🙏

ನಮಸ್ಕಾರ ಪ್ರಿಯ ಸೂರ್ಯ...
*********
ನಮ್ಮ ಉಳಿವು  ಅಳಿವು.
ಹಸಿರು.... ಉಸಿರು ...
ಆರೋಗ್ಯ ಭಾಗ್ಯ... ದೇಹ ಶಕ್ತಿ... ಎಲ್ಲವೂ ಸೂರ್ಯ.
ಪ್ರಕೃತಿಯ ಮೂಲವೇ ಸೂರ್ಯ...
ಸೂರ್ಯನಿಂದಲೇ....  ಪಂಚ ಭೂತಗಳು...
ಭೂಮಿ... ಆಕಾಶ...  ಗಾಳಿ... ನೀರು ... ಅಗ್ನಿ.
ಅಖಂಡ ಜೀವರಾಶಿಯ ಉಸಿರಿಗೆ ಆಧಾರ ಹಸಿರು...
ಆ ಹಸಿರಿನ ವನಸಿರಿಗೆ ಕಾರಣ ಸೂರ್ಯ ರಶ್ಮಿ.

ಪ್ರತಿದಿನವೂ... ನಿಗದಿತ ಸಮಯಕ್ಕೆ 
ಸೂರ್ಯೋದಯವಾಗಿ... ಸಕಲ ಜೀವ ರಾಶಿಗೂ... ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿ...
 ನಾನಿದ್ದೇನೆ ಎಂದು ಪ್ರತ್ಯಕ್ಷವಾಗಿ... 
ಸರ್ವ ಯುಗದಲ್ಲೂ..... ಪ್ರತ್ಯಕ್ಷ ದೇವರ ದರ್ಶನ 
ಬ್ರಹ್ಮಾಂಡವೇ... ಸೂರ್ಯನ ಕಿರಣಗಳ ಶಕ್ತಿಯ ಮೇಲೆಯೇ ಆಧಾರಿತ.

ಸೂರ್ಯನನ್ನು 
ನಮ್ಮ ಸನಾತನ ಧರ್ಮದ  ಆದಿದೇವ ಎಂದು...
 ಸ್ವಯಂ ನಾರಾಯಣ ಸ್ವರೂಪನೆಂದೂ..
ಪ್ರತಿ ದಿನವೂ.... ಮೂಡುವ  ದಿನಮಣಿಯೆಂದೂ...
ಕಷ್ಯಪ ಮಹರ್ಷಿಯ ಸುತ ಕಾಶ್ಯಪಾತ್ಮಜನೆಂದೂ...
ಅದ್ಭುತ ಪ್ರಭೆಯ ಪ್ರಭಾಕರನೆಂದೂ...
ಸಪ್ತಾಶ್ವ  ರಥಮಾರೂಢನಾದ... ಪ್ರಚಂಡನೆಂದೂ...
ಅನೇಕ ನಮವಾಳಿಯ... ಸೂರ್ಯದೇವರನ್ನು...
ದಿನನಿತ್ಯವೂ... ದರ್ಶನ ಭಾಗ್ಯದಿಂದ..
ಮಹಾ ಭಾಗ್ಯ.... ಆರೋಗ್ಯ ಭಾಗ್ಯ ಲಭಿಸುತ್ತದೆ.

ಜಗದ ಅಂಧಕಾರವನ್ನು.... ಮನದ  ಗಾಢಾಂಧಕಾರವನ್ನು... ಹೋಗಲಾಡಿಸಿ... ನಿತ್ಯ ನೂತನ... ನವ ಚೇತನವನ್ನು ಮೂಡಿಸಿ...
ನಮ್ಮ ಅದ್ಭುತ ಶಕ್ತಿ ದಯಪಾಲಿಸುತ್ತದೆ.
ಪ್ರತಿದಿನವೂ...  ಸೂರ್ಯ ನಮಸ್ಕಾರ  ಹಾಗೂ... ಯೋಗಾಸನದ ಜೊತೆಗೆ...ಆದಿತ್ಯ ಹೃದಯ ಪಠಣ ಮಾಡುವುದರಿಂದ...  ಆರೋಗ್ಯ ಭಾಗ್ಯ ಮತ್ತು....ಅದೃಶ್ಯ ಶಕ್ತಿಗಳ ತೊಂದರೆಯಿಂದ ಪಾರಾಗಬಹುದು. 

🙏 ಆದಿತ್ಯ ಹೃದಯ ವಿಶೇಷತೆ. 🙏
***********

ರಾವಣನ ಮಾಯೆಯ ಪ್ರಭಾವದಿಂದಾಗಿ ಪಾತಾಳದಿಂದ ಮಾಯಾಕ್ರಿಮಿಗಳು ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಬರುತ್ತವೆ. ಇವು ಕಣ್ಣಿಗೆ ಕಾಣುವುದಿಲ್ಲ. ಆದರೆ ಕಪಿಗಳು ಹಾಗೂ ರಾಮಲಕ್ಷ್ಮಣರ ದೇಹದ ಒಳಹೊಕ್ಕು ನಾನಾ ಅನಾರೋಗ್ಯಗಳನ್ನು ಸೃಷ್ಟಿಸತೊಡಗುತ್ತವೆ. ಇದರಿಂದಾಗಿ ಶಕ್ತಿ ಕಳೆದುಕೊಂಡ ರಾಮ ಹಾಗೂ ಕಪಿಗಳು ಇನ್ನೇನು ನೆಲಕ್ಕೆ ಒರಗಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮಹಾಮುನಿ ಅಗಸ್ತ್ಯರು ಧಾವಿಸಿ ಬರುತ್ತಾರೆ. ಅವರು ಒಂದು ಮಂತ್ರವನ್ನು ರಾಮನಿಗೆ ಉಪದೇಶಿಸುತ್ತಾರೆ.

ಆ ಮಂತ್ರವೇ... 'ಆದಿತ್ಯ ಹೃದಯ'. ಇದನ್ನು 'ಆದಿತ್ಯ ಕವಚ' ಎಂದೂ ಕರೆಯುತ್ತಾರೆ. ಆದಿತ್ಯ ಎಂದರೆ ಸೂರ್ಯ. ಇದು ಸೂರ್ಯನನ್ನು ಸ್ತುತಿಸುವ ಮಂತ್ರ. ಸವಿತೃ( ಆದಿತ್ಯ) ಮಂತ್ರೋಪದೇಶದ ನಂತರ ಅಗಸ್ತ್ಯರ ಸೂಚನೆಯಂತೆ ಬ್ರಹ್ಮಾಸ್ತ್ರ ಹೂಡಿದ ರಾಮನ ಬಾಣದಲ್ಲಿ ಸವಿತೃಶಕ್ತಿ ಜಾಗೃತವಾಗುತ್ತದೆ. ರಾಮ ಪ್ರಯೋಗಿಸಿದ ಬಾಣದಿಂದ ರಾವಣನ ಕವಚ ಛೇದನವಾಗಿ ರಾವಣ ಸಾಯುತ್ತಾನೆ. ಅಗಸ್ತ್ಯರಿಂದ ಉಪದೇಶಿಸಿಸಲ್ಪಟ್ಟ ಆದಿತ್ಯ ಹೃದಯದಿಂದ ರಾವಣನ ವಧೆ ಮಾಡುವ ಶ್ರೀರಾಮನ ತಪಸ್ಸು ಸಂಪೂರ್ಣವಾಗಿಗುತ್ತದೆ.
 
🙏ಆದಿತ್ಯ ಹೃದಯ ಪಾರಾಯಣದ ಫಲ. 🙏
*************

ಆದಿತ್ಯ ಹೃದಯ ಪಾರಾಯಣದಿಂದ ಎಲ್ಲ ಕಾರ್ಯಗಳಲ್ಲಿ ಜಯ, ಆಪತ್ತುಗಳನ್ನು ನಿವಾರಿಸಿಕೊಳ್ಳಲು ಸಾಧ್ಯ.
 ಆಯುರಾರೋಗ್ಯ ಅಭಿವೃದ್ಧಿಯೂ ಸಾಧ್ಯ. ಸೂರ್ಯನೇ ವಿಶ್ವ ಶಕ್ತಿಯಾಗಿರುವಾಗ. 
ಸೂರ್ಯನೇ ರುದ್ರ, 
ಸೂರ್ಯನೇ ಬ್ರಹ್ಮ, ವಿಷ್ಣು. 
ಸೂರ್ಯವ್ರತ , 
ಸೂರ್ಯ ನಮಸ್ಕಾರಗಳು ದೇಹ ಮನಸ್ಸಿಗೆ ಶಕ್ತಿ ಕೊಡುತ್ತವೆ. ಸೂರ್ಯನೇ ಪರಬ್ರಹ್ಮ.
 ಆ ಸೂರ್ಯನೇ ನಮ್ಮಲ್ಲಿ ತುಂಬಿರುವ ಶಕ್ತಿ. 
ಆದಿತ್ಯ ಹೃದಯ ಸ್ತೋತ್ರ ವ್ಯಕ್ತಿಯೊಳಗಿರುವ ಆತ್ಮವಿಶ್ವಾಸದ ಶಕ್ತಿಯನ್ನೂ ಹೆಚ್ಚಿಸುವುದಕ್ಕೂ ಸಹಕಾರಿ.

🙏ವೈಜ್ಞಾನಿಕ  ಉಪಯೋಗ. 🙏
***********
ಇದು ವೈಜ್ಞಾನಿಕವಾಗಿಯೂ ಸತ್ಯ. ಇಂದು ಕೊರೊನಾ ಸೇರಿದಂತೆ ಎಲ್ಲ ರೋಗಗಳನ್ನೂ ಎದುರಿಸಲು ನಮಗೆ ರೋಗ ಪ್ರತಿರೋಧ ಶಕ್ತಿ ಅಥವಾ ಇಮ್ಯುನಿಟಿ ಅಗತ್ಯವಾಗಿದೆ. ಈ ಇಮ್ಯುನಿಟಿ ಬರುವುದು ವಿಟಮಿನ್ ಸಿ ಮೂಲಕ. ಸೂರ್ಯನ ಬೆಳಕಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಸೂರ್ಯನ ಬೆಳಕಿನಲ್ಲಿ ನಿಂತು ಆದಿತ್ಯ ಹೃದಯವನ್ನು ಪಠಿಸುವುದು ಎಂದರೆ ವಿಟಮಿನ್ ಸಿಯ್ನು ಪಡೆಯುವುದು, ಅರ್ಥಾತ್ ಎಲ್ಲ ರೋಗಗಳನ್ನು ಎದುರಿಸಲು ಶಕ್ತಿ ಪಡೆಯುವುದು ಎಂದೇ ಅರ್ಥ. ಇಂದಿನ ಸಂಕಟದ ಸಮಯದಲ್ಲಂತೂ ಆದಿತ್ಯ ಕವಚ ನಮಗೆ ಆಪತ್‌ಬಂಧು.    

 ‌ಆದಿತ್ಯ ಹೃದಯ ಸ್ತೋತ್ರಮ್
(ಅರ್ಥ ಸಹಿತವಾಗಿ)

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ* |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಂ ||೧||

ರಾವಣನ ಜೊತೆ ಯುದ್ಧ ಮಾಡಿ ಬಳಲಿ, ಚಿಂತೆಯಿಂದ ಯುದ್ಧ ಭೂಮಿಯಲ್ಲಿ ನಿಂತ, ಯುದ್ಧ ಮಾಡಲು ಸಿದ್ಧನಾಗಿ ಮುಂದೆ ನಿಂತ ರಾವಣನನ್ನು ನೋಡಿ ಇವನನ್ನು ಗೆಲ್ಲುವುದು ಹೇಗೆ ಎಂದು ಯೋಚಿಸುತ್ತಿದ್ದ ರಾಮನನ್ನು ನೋಡಿ ಅಗಸ್ತ್ಯರು.

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಂ* |
ಉಪಾಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ ||೨||

ದೇವತೆಗಳೊಡನೆ ಈ ಅದ್ವಿತೀಯವಾದ ಯುದ್ಧವನ್ನು ನೋಡುತ್ತಿದ್ದ ಮಹರ್ಷಿ ಅಗಸ್ತ್ಯರು ಶ್ರೀರಾಮನ ಸಮೀಪ ಬಂದು ಮುಂದೆ ಹೇಳುವಂತೆ ತಿಳಿಸಿದರು.

ರಾಮ! ರಾಮ! ಮಹಾಬಾಹೋ! ಶೃಣು ಗುಹ್ಯಂ ಸನಾತನಂ* |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ||೩||

ಮಹಾವೀರನಾದ ರಾಮಚಂದ್ರ, ನಾನು ಹೇಳುವ ಈ ಸನಾತನ ರಹಸ್ಯವನ್ನು ಶ್ರದ್ಧೆಯಿಂದ ಆಲಿಸು. ಇದರಿಂದ ನಿನ್ನ ಎಲ್ಲಾ ಶತೃಗಳನ್ನೂ ಯುದ್ಧದಲ್ಲಿ ಜಯಿಸಬಹುದು.

ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ನಾಶನಂ*
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಂ ||೪||

"ಆದಿತ್ಯ ಹೃದಯ" ಎಂಬ ಈ ಪುಣ್ಯಕರವಾದ ಸ್ತೋತ್ರ ಶತ್ರುಗಳನ್ನು ನಾಶ ಮಾಡಬಲ್ಲದು. ಸದಾ ಗೆಲುವನ್ನೇ ತಂದುಕೊಡುವುದು. ಶಾಶ್ವತ ಹಾಗೂ ಮಂಗಳಕರವಾದ ಫಲವನ್ನು ಇದು ತಂದು ಕೊಡುತ್ತದೆ.

ಸರ್ವ ಮಂಗಲ ಮಾಂಗಲ್ಯಂ ಸರ್ವ ಪಾಪಪ್ರಣಾಶನಂ* |
ಚಿಂತಾಶೋಕಪ್ರಶನಂ ಆಯುರ್ವರ್ಧನಮುತ್ತಮಂ ||೫||

ಮಂಗಳಕರವಾದ ಸ್ತೋತ್ರಗಳಲ್ಲೆಲ್ಲಾ ಇದು ಬಹಳ ಶುಭಪ್ರದವಾಗಿದೆ. ಎಲ್ಲಾ ಪಾಪಗಳನ್ನೂ ಕಳೆಯುವುದು ಈ ಸ್ತೋತ್ರ. ಚಿಂತೆ, ದುಃಖಗಳನ್ನು ಅಡಗಿಸಿ, ಆಯುಸ್ಸನ್ನು ಹೆಚ್ಚಿಸುವ ಉತ್ತಮವಾದ ಮಂತ್ರವಿದು.

("ಸೂರ್ಯಾದಾರೋಗ್ಯವರ್ಧನಂ" ಎಂಬ ಅನುಭವದ ಮಾತು ಇದೆ. ಅಂದರೆ ಸೂರ್ಯ ದೇವನು ಆರೋಗ್ಯಕ್ಕೆ ಕಾರಕ. ಆತನು  ವಿಶ್ವ ಮಾನವರ, ಜಂತುಗಳ ಹಾಗೂ ಪ್ರಾಣಿಗಳ ಆರೋಗ್ಯವನ್ನು ವರ್ಧನ , ಅರ್ಥಾತ್ ಹೆಚ್ಚು ಮಾಡುತ್ತಾನೆ. ಆಯುರ್ವೇದದಲ್ಲಿ ಕೂಡಾ ಸೂರ್ಯ ನಮಃಸ್ಕಾರಕ್ಕೆ ತುಂಬಾ ಪ್ರಾಶಸ್ತ್ಯವಿದೆ. ಸೂರ್ಯನ ಕಿರಣಗಳು ಎಂತಹ ಕಾಯಿಲೆಗಳನ್ನೂ ಗುಣ ಪಡಿಸಬಲ್ಲದು. ಬೆಳಗಿನ ಸೂರ್ಯೋದಯದಿಂದ ಹಿಡಿದು ಸುಮಾರು ಒಂದು ಗಂಟೆಯ ಕಾಲದವರೆಗೆ, ಹಾಗೂ ಸಂಜೆಯ ವೇಳೆ ಸೂರ್ಯಾಸ್ತಮದಿಂದ ೧ ಗಂಟೆ ಮುಂಚೆಯೇ ಕುಳಿತಿದ್ದರೆ, ಅಂದರೆ ಬರಿ ಮೈಗೆ ಸೂರ್ಯನ ಈ ಹೊಂಬಣ್ಣದ ಕಿರಣಗಳನ್ನು ತಾಕಿಸಿದರೆ, ಈ ಕಿರಣಗಳು ಮೈಯ ಚರ್ಮದ ಮೇಲೆ ಬಿದ್ದು, ಚರ್ಮದ ಮೇಲಿನ ಎಗ್ಗೆಸ್ಟೆರೋಲ್ ಎನ್ನುವುದು, ಡಿ- ಜೀವಾತುವಾಗಿ ಪರಿವರ್ತಿಸುವುದು ನಿಮಗೆಲ್ಲಾ ತಿಳಿದ ವಿಚಾರವೇ. ಅಂದರೆ ಈ ಕಿರಣಗಳಿಗೆ ಮೈಯನ್ನು ಒಡ್ಡಿದ್ದಲ್ಲಿ, ನಿಮಗೆ ಬೇರೆ ವಿಟಾಮಿನ್ "ಡಿ" ಮಾತ್ರೆಗಳ ಅವಶ್ಯಕತೆಯೇ ಇಲ್ಲ. ಆದ್ದರಿಂದಲೇ ಅವನ ಪ್ರಾರ್ಥನೆ ಬಹಳ ಮಂಗಳಕರವಾದದ್ದು.)

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಂ*
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಂ   ||೬||

ಹೊಮ್ಮುವ ಕಿರಣಗಳನ್ನು ಪಡೆದ, ತನ್ನ ಸಂಪೂರ್ಣ ಬಿಂಬದೊಡನೆ ಮೇಲೆದ್ದು ಬರುವ, ಸುರ-ಅಸುರ ಇಬ್ಬರಿಂದಲೂ ವಂದ್ಯನಾದ, ಪ್ರಕಾಶವನ್ನು ನೀಡುವ, ಈ ಲೋಕಕ್ಕೆ ಸ್ವಾಮಿಯಾದ ಸೂರ್ಯದೇವನನ್ನು ವಂದಿಸು.

(ಸೂರ್ಯ ದೇವ ಕರ್ಮ-ಕಾಲ ಸಾಕ್ಷಿ. ಅವನು ಎಲ್ಲವನ್ನೂ ಸುಟ್ಟು ಹಾಕುತ್ತಾನೆ. ಹೀಗಾಗಿ ಆತನಿಗೆ ದೇವ-ದಾನವ ಭೇದವಿಲ್ಲ. ಎಲ್ಲಾ ಲೋಕಗಳ ಮೇಲೂ ಆತನದು ಸಮ ದೃಷ್ಟಿ.)

ಸರ್ವ ದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿ ಭಾವನಃ  |
ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿ: ||೭||

ಎಲ್ಲಾ ದೇವತೆಗಳೂ ಸೂರ್ಯನಲ್ಲಿದ್ದಾರೆ. ಇವನದು ನಿಜವಾದ ತೇಜಸ್ಸು. ಈತನ ಕಿರಣಗಳೇ ಜನರಿಗೆ ಶ್ರೇಯಸ್ಸನ್ನು ಕೊಡುತ್ತದೆ. ತನ್ನ ಶುಭ ಕಿರಣಗಳಿಂದ ದೇವ, ಅಸುರ, ಮಾನವ ಹಾಗೂ ಎಲ್ಲಾ ಲೋಕಗಳನ್ನೂ ಸೂರ್ಯದೇವನು ಕಾಪಾಡುತ್ತಾನೆ.

(ಸೂರ್ಯಕಿರಣಗಳಲ್ಲಿನ ಸತ್ವಗುಣಗಳು ಅಪಾರ. ಇವು ನಮ್ಮಲ್ಲಿ ಚಟುವಟಿಕೆಯನ್ನು ತುಂಬುತ್ತದೆ. ಆರೋಗ್ಯದ ಕಳೆ ನಮಗೆ ಬರುತ್ತದೆ. ಸೂರ್ಯನ ದೃಷ್ಟಿಯಲ್ಲಿ ಎಲ್ಲರೂ ಸಮಾನರು.)

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ ||೮||

ಆದಿತ್ಯನಾದ ಸೂರ್ಯ ಎಲ್ಲಾ ದೇವತೆಗಳ ಪ್ರತಿನಿಧಿ. ಬ್ರಹ್ಮ, ವಿಷ್ಣು , ಶಿವ, ಸುಬ್ರಹ್ಮಣ್ಯ, ಇಂದ್ರ, ಕುಬೇರ, ಯಮ, ವರುಣ, ಸೋಮ ಎಲ್ಲವೂ ಈತನೇ.

ತ್ರಿಮೂರ್ತಿಗಳು, ಅಷ್ಟ ದಿಕ್ಪಾಲಕರು ಹಾಗೂ ಇತರ ಪ್ರಧಾನ ದೇವತೆಗಳ ಶಕ್ತಿಯೆಲ್ಲಾ ಸೂರ್ಯನಲ್ಲಿ ಕೇಂದ್ರೀಕೃತವಾಗಿದೆ. ಸೂರ್ಯನಿಲ್ಲದೆ ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಅನ್ನವಿಲ್ಲ, ಅನ್ನವಿಲ್ಲದೆ ಪ್ರಾಣವಿಲ್ಲ. ಹೀಗಿರುವಾಗ ಸಕಲ ದೇವತೆಗಳ ಶಕ್ತಿ ಸೂರ್ಯನಲ್ಲಿ ಸಾಂದ್ರಿತವಾಗಿದೆ ಎನ್ನುವುದು ಸತ್ಯ.

ಸೃಷ್ಟಿಯನ್ನು ಪ್ರಚೋದಿಸುವ ಬ್ರಹ್ಮ, ಶಕ್ತಿಯನ್ನು ಪಾಲನೆಮಾಡಿ ಕೃಪೆ ತೋರುವ ವಿಷ್ಣುಶಕ್ತಿ, ನಿರ್ದೆಯೆಯಿಂದ ನಾಶಪಡಿಸುವಂತಹ ರುದ್ರ ಶಕ್ತಿ ಕೂಡ ಸೂರ್ಯನಲ್ಲಿದೆ. ಎಲ್ಲಾ ದಿಕ್ಕುಗಳಲ್ಲೂ ಸೂರ್ಯನು ತನ್ನ ಕಿರಣವನ್ನ ಬೀರಿ, ಶಕ್ತಿಯನ್ನು ಧಾರೆಯನ್ನು ಎರೆಯುವ ಅಪಾರ ಕರುಣೆ ಆತನಿಗಿದೆ.

(ಸೂರ್ಯನ ಕರುಣೆ, ಕೃಪೆಯಿಂದಲೇ ಈ ಜಗತ್ತು ಉಳಿದಿದೆ. ಅವನ ಚಂಡ ಕಿರಣಗಳಿಂದಲೇ ಇದು ನಾಶವಾದೀತು.

ಪಿತರೊ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ   ||೯||

ದೇವತಾ ಗಣಗಳಾದ ಪಿತೃ, ವಸು, ಸಾಧ್ಯರು, ಮರುತಗಳು, ಅಶ್ವಿನಿದೇವತೆಗಳು, ಮನು, ಅಗ್ನಿ, ಪ್ರಾಣವಾಯು, ಋತುಗಳನ್ನು ತನ್ನ ನಿಯಂತ್ರಣದಲ್ಲಿರಿಸುವ ಪ್ರಭಾಕರ ಎಲ್ಲವೂ ಈತನೇ.

(ದೇವಗಣಗಳ ಹಿಂದಿನ ಚೋದಕ ಶಕ್ತಿ ಸೂರ್ಯದೇವ. ಸೂರ್ಯನಿಲ್ಲದೆ ಈ ಜೀವನ, ಜಗತ್ತು ನಿಸ್ತೇಜ ಹಾಗೂ ಜಡತ್ವವಾಗಿರುತ್ತದೆ. ಆಗ ದಿಕ್ಕುಗಳೂ ಅರ್ಥ ಹೀನವಾಗುತ್ತವೆ.)

ಇಲ್ಲಿಂದ ಆದಿತ್ಯ ಹೃದಯ ಮಂತ್ರ ಪ್ರಾರಂಭ:-

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣ ಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ  ||೧೦||

(ಇನ್ನು ಮುಂದೆ ಅಗಸ್ತ್ಯರು ಸೂರ್ಯದೇವನ ಪುಣ್ಯಕರ ನಾಮಗಳನ್ನು ಹೇಳುತ್ತಾರೆ.)

ಆದಿತ್ಯ :- ಅದಿತಿಯ ಪುತ್ರ ಎಂಬರ್ಥವಾದರೂ, ತನ್ನ ಕಡೆಗೆ ಎಲ್ಲರನ್ನೂ ಸೆಳೆಯುವಂತಹ ಚುಂಬಕ ಶಕ್ತಿ ಎಂಬ ಗಹನವಾದ ಅರ್ಥವೂ ಇದೆ. ದಿತಿ, ಸತಿ ಉದರದಿ ಕುತುಕದಿ ಸಾರುತೆ ಹಿತಾಕಾರದಿಂ ಮೆರೆವ, ಮನಕಿದೋ ಮುದವಾದುದು. ಇದರ ಅರ್ಥವೇನೆಂದರೆ,  ಅದಿತಿಯ ಮಕ್ಕಳು ದೇವತೆಗಳು. ದಿತಿಯ ಮಕ್ಕಳು ರಾಕ್ಷಸರು. ಅದೇ ಅದಿತಿಯ ಮಗನು ಸೂರ್ಯ ದೇವನು.
ಸವಿತಾ :- ಸವಿತೃ ಅಂದರೆ ಭೂಮಿಯನ್ನು ಆಳುವವನು ಎಂದರ್ಥ. ಭೂಮಿಯ ಎಲ್ಲಾ ಆಗು ಹೋಗುಗಳಿಗೆ ನಿಯಂತ್ರಕನಾದವನು.
ಸೂರ್ಯ :- ಎಲ್ಲರನ್ನೂ, ಎಲ್ಲವನ್ನೂ ಪ್ರೇರೇಪಿಸುವ, ಚಟುವಟಿಕೆಯನ್ನು ತುಂಬುವವ.
ಖಗ :- ನಭೋ ಮಂಡಲದಲ್ಲಿ ಸಂಚರಿಸುವವ.
ಪೂಷಾ :  ಲೋಕ ರಕ್ಷಕನಾದ (ಉಪನಿಷತ್ತಿನಲ್ಲಿ "ತತ್ವಂ ಪೂಷನ್ ಅಪಾವೃಣು" ಎಂದಿದೆ. ಸತ್ಯದ ಕಾಂತಿಯುತ ಮುಖವನ್ನು ತೆರೆದು ತೋರಿಸುವ  ದೇವತೆ ಪೂಷನ್)
ಗಭಸ್ತಿಮಾನ್ :- ಶುಭ್ರ ಕಿರಣಗಳನ್ನು ಹೊಂದಿದ ಸೂರ್ಯ ಕಿರಣಗಳ ಕಾಂತಿ ಅನಾದೃಶ.
ಸುವರ್ಣಸದೃಶ:- ಆದಿತ್ಯ ದೇವನ ಕಾಂತಿ ಬಂಗಾರದಂತೆ ಹೊಳೆಯುತ್ತಿದೆ. ಬಂಗಾರ ಎನ್ನುವ ಹೋಲಿಕೆ ನಮಗೆ ಸುಲಭವಾಗಿ ಅರ್ಥವಾಗಲು ಮಾತ್ರ. ಉತ್ತಮ ವಸ್ತುಗಳನ್ನು ಬಂಗಾರದ ಜೊತೆ ಹೋಲಿಸುವುದರಿಂದ ಈ ರೀತಿ ಇಲ್ಲಿ ಹೋಲಿಸಿದ್ದಾರೆ ಅಷ್ಟೇ.
ಭಾನು :- ಎಲ್ಲಾ ಕಡೆ ಹರಡಿದ ಪ್ರಕಾಶವುಳ್ಳ.
ಸ್ವರ್ಣರೇತಾ :-  ಈ ಬ್ರಹ್ಮಾಂಡವು ಬಂಗಾರದ ಮೊಟ್ಟೆಯಂತೆ ತೇಜಸ್ಸಿನ ಪುಂಜವಾಗಿದೆ. ಇದರ ಸೃಷ್ಟಿ ಆದಿತ್ಯನಿಂದ. ಆತನೇ ಇದಕ್ಕೆ ಮೂಲ ಬೀಜ.
ದಿವಾಕರ:- ಹಗಲು ಆಗುವುದು ಕೂಡ ಸೂರ್ಯನಿಂದಲೇ.

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್   |
ತಿಮಿರೋನ್ಮಥನಃ ಶಂಭುಃಸ್ತ್ವಷ್ಟಾ ಮಾರ್ತಾಂಡ ಅಂಶುಮಾನ್ ||೧೧||

(ಆದಿತ್ಯನನ್ನ ಹೀಗೂ ಕರೆಯುವುದುಂಟು.)

ಹರಿದಶ್ವ:- ಈತನ ರಥದ  ಕುದುರೆಗಳ ಬಣ್ಣ ಹಸಿರು. ಹಸಿರು ಸೃಷ್ಟಿಯ ಗೆಲುವಿನ ಸಂಕೇತ.
ಸಹಸ್ರಾರ್ಚಿ:- ಆದಿತ್ಯನ ಕಿರಣಗಳು ಸಾವಿರಾರು, ಅಸಂಖ್ಯ.
ಸಪ್ತಸಪ್ತಿ :- ಈತನ ಕುದುರೆಗಳು ಏಳು. ಇವು ಏಳು ಲೋಕಗಳನ್ನು ಪ್ರತಿನಿಧಿಸುತ್ತವೆ. ಎಲ್ಲಾ ಕಡೆ ಆದಿತ್ಯನ ಪ್ರಭಾವವಿದೆ.
ಮರೀಚಿಮಾನ್ :- ಕಿರಣಗಳನ್ನು ಮೈದುಂಬಿಕೊಂಡ.
ತಿಮಿರೋನ್ಮಥನ :- ಕತ್ತಲೆಯನ್ನು ಹೊಡೆದಟ್ಟುವ.
ಶಂಭು :- ಸುಖವನ್ನು ದಯಪಾಲಿಸುವ.
ತ್ವಷ್ಟಾ :- ದುಃಖವನ್ನು ಕಳೆಯುವ, ಲವಲವಿಕೆಯನ್ನ ತರುವ.
ಮಾರ್ತಾಂಡ :- ನಾಶ ಹೊಂದಿದ ಬ್ರಹ್ಮಾಂಡದಿಂದೆದ್ದು ಬಂದು ಮತ್ತೆ ಅದನ್ನು ಸೃಸ್ಟಿಸುವವನು.
ಅಂಶುಮಾನ್ :- ವಿಸ್ತಾರವಾದ, ಹರಡಿದ ಕಿರಣಗಳನ್ನು ಹೊಂದಿದವನು.

ಹಿರಣ್ಯಗರ್ಭಃ ಶಿಶಿರಃ      ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋsದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||೧೨||

ಹಿರಣ್ಯಗರ್ಭ :- ಬ್ರಹ್ಮನ ಶಕ್ತಿ ಪಡೆದ. ತನ್ನೊಳಗೆ ದಿವ್ಯ ಸಂಪತ್ತು, ಜ್ಞಾನ ಮತ್ತು ತೇಜಸ್ಸುಗಳನ್ನು ತುಂಬಿಕೊಂಡ.
ಶಿಶಿರ:- ತಂಪುಗೊಳಿಸುವ, ತಾನಿತ್ತ ಮಳೆಯಿಂದ ಭೂಮಿಯನ್ನು ತಂಪಾಗಿಸುವ.
ತಪನ:- ಎಲ್ಲಾ ಕಡೆ ತಾಪವನ್ನುಂಟುಮಾಡುವ.
ಭಾಸ್ಕರ :-ಪ್ರಕಾಶವನ್ನು ನೀಡುವ.
ರವಿ :- ಎಲ್ಲರಿಂದ ಸ್ತುತ್ಯನಾದ
ಅಗ್ನಿಗರ್ಭ:-ತನ್ನೊಳಗೆ ಅಗ್ನಿಯನ್ನು ಇರಿಸಿಕೊಂಡವ
ಆದಿತೇಃಪುತ್ರಃ :- ಅದಿತಿಯ ಮಗ. ಈ ಆದಿತ್ಯನಿಗೆ ಕಶ್ಯಪರು ತಂದೆ. ಅದಿತಿ ತಾಯಿ. ಇವರೇ ಆದಿ ದಂಪತಿಗಳು.
ಶಂಖ :- ಅಸ್ತಮಾನವಾಗುವಾಗ ಶಾಂತ ಭಾವವನ್ನು ತಾಳುವವ.
ಶಿಶಿರನಾಶನ :- ಮಂಜನ್ನು ಕರಗಿಸುವವನು.

ವ್ಯೋಮನಾಥಸ್ತಮೋಭೇದಿ ಋಗ್ಯಜುಃ ಸಾಮಪಾರಗಃ |
ಘನವೃಸ್ಟಿರಪಾಂಮಿತ್ರೋ ವಿಂಧ್ಯ ವೀಥೀಪ್ಲವಂಗಮಃ ||೧೩||

ವ್ಯೋಮ :- ಆಕಾಶ ಗಗನಮಂಡಲಕ್ಕೆ ಸ್ವಾಮಿ ಇವನು.
ತಮೋಭೇದೀ :- ಕತ್ತಲೆಯನ್ನು ಸೀಳಿಕೊಂಡು ಬರುವವ. ಸೂರ್ಯನಿದ್ದಡೆ, ಕತ್ತಲೆಗೆ ಜಾಗವೇ ಇಲ್ಲ. ಅಂತೆಯೇ ಜ್ಞಾನವಿದ್ದಲ್ಲಿ ಮೂಢ ನಂಬಿಕೆಗೆ ಜಾಗವಿಲ್ಲ.
ಋಗ್ಯಜುಃಸಾಮಪಾರಗಃ :- ಋಗ್, ಯಜುಸ್, ಸಾಮ ವೆನ್ನುವ ಈ ಮೂರು ವೇದಗಳ ಸಾರವನ್ನು ಅರಿತವನು.
ಘನವೃಷ್ಟಿ :- ಹೆಚ್ಚು, ಹೆಚ್ಚು ಮಳೆಯನ್ನು ತರಿಸುವವ.
ಅಪಾಂಮಿತ್ರೋ:- ನೀರಿನ ಗೆಳೆಯ. ಸೂರ್ಯನ ಪ್ರಭಾವದಿಂದ ಮೋಡಗಳು ಕರಗಿ ನೀರಾಗಿ ಮಳೆ ಸುರಿಯುತ್ತವೆ. ಮತ್ತೆ ಅದೇ ನೀರು ಸೂರ್ಯನ ಪ್ರಭೆಯಿಂದಾಗಿ ಆವಿಯಾಗಿ ಮೋಡವಾಗಿ ಪರಿಣಮಿಸುತ್ತದೆ. ಹೀಗೆ ಸೂರ್ಯ ನೀರಿನ ಮಿತ್ರ. ಅದಕ್ಕೆ ವೇದಗಳಲ್ಲಿ ಸೂರ್ಯನನ್ನು ಮಿತ್ರಾ-ವರುಣ ಎಂಬ ಜೋಡಿದೇವತೆಯನ್ನಾಗಿ ಹೇಳಿದೆ.
ವಿಂಧ್ಯ ವೀಥೀಪ್ಲವಂಗಮಃ :- ವಿಂಧ್ಯ ಪರ್ವತದ ದಾರಿಯಲ್ಲಿ ಬಲು ಬೇಗ ಸಂಚರಿಸುವ (ಸೂರ್ಯನ ಸಂಚಾರ ದಕ್ಷಿಣಾಯನದಲ್ಲಿ ಹೀಗೆ ಇರುತ್ತದೆ.)

ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್ಭವಃ ||೧೪||

ಆತಪೀ :- ಬಿಸಿಲು ಉಂಟಾಗುವುದು ಈತನಿಂದಲೇ
ಮಂಡಲೀ:- ಸೂರ್ಯನ ಬಿಂಬ ಗುಂಡಾಗಿದೆ.
ಮೃತ್ಯು :- ಶತೃ ನಾಶಕನಾದ.
ಪಿಂಗಲಃ :- ಈತನ ಬಣ್ಣ ಹಳದಿ.
ಸರ್ವತಾಪನಃ :- ಎಲ್ಲಾ ವಸ್ತುಗಳಿಗೂ ತಾಪವನ್ನು ಕೊಡುವವ.
ಕವಿ :- ಮಹಾನ್ ಜ್ಞಾನಿಯಾದ
ವಿಶ್ವ :- ಪ್ರಪಂಚದಲ್ಲೆಲ್ಲಾ ಆವರಿಸಿದ.
ಮಹಾತೇಜಾ :- ಮಹಾನ್ ಕಾಂತಿಹೊಂದಿದ.
ರಕ್ತ:- ಎಲ್ಲರಿಗೂ ಬೇಕಾದವನಾದ, ಎಲ್ಲರ ಪ್ರೀತಿ ಪಾತ್ರನಾದ.
ಸರ್ವಭವೋದ್ಭವಃ :- ಎಲ್ಲಾ ವಸ್ತುಗಳ ಸೃಷ್ಟಿಗೆ ಕಾರಣನಾದವ.

(ಜಗತ್ತಿನ ಸೃಷ್ಠಿಗೆ ಸೂರ್ಯ ದೇವನು ಒಂದಲ್ಲಾ ಒಂದು ರೀತಿ ಕಾರಣನಾಗಿದ್ದಾನೆ. ಎಲ್ಲವೂ ಸೂರ್ಯನಿಂದಲೇ ಪ್ರಚೋದಿತವಾಗಿ ಹೊರಟಿದೆ ಎಂದು ಅರ್ಥ.)

ನಕ್ಷತ್ರ ಗ್ರಹತಾರಾಣಾಂ ಅದಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮಾನ್ ನಮೋsಸ್ತುತೇ ||೧೫||

ಸೂರ್ಯದೇವನು ನಕ್ಷತ್ರ, ಗ್ರಹ ಮತ್ತು ಎಲ್ಲಾ ಆಕಾಶ ಕಾಯಗಳಿಗೆ ಒಡೆಯನಾಗಿರುತ್ತಾನೆ. ಆತನೇ ವಿಶ್ವಭಾವನ. ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣ.
ತೇಜಸಾಮಪಿ ತೇಜಸ್ವಿ :- ತೇಜೋವಂತ ವಸ್ತುಗಳಾದ ಅಗ್ನಿ ಮೊದಲಾದವಕ್ಕಿಂತ ತೇಜಸ್ಸನ್ನು ತೇಜಸ್ಸನ್ನು ಹೊಂದಿದವನು.
ದ್ವಾದಶಾತ್ಮನ್:-- ವರ್ಷದ ಹನ್ನೆರಡು ತಿಂಗಳನ್ನು ಪ್ರತಿನಿಧಿಸುವ (೧) ಇಂದ್ರ (೨) ಧಾತಾ (೩) ಭಗ (೪) ಪೂಷನ್ (೫) ಮಿತ್ರ (೬) ಆರ್ಯಮ (೭) ಆರ್ಚಿ (೮) ವಿವಸ್ವಾನ್ (೯) ತ್ವಷ್ಟೃ (೧೦) ಸವಿತಾ (೧೧) ವರುಣ (೧೨) ವಿಷ್ಣು- ಎಂಬೀ ಹನ್ನೆರಡು ರೂಪ ಉಳ್ಳವನು.

ಇಂತಹ ಸೂರ್ಯನಿಗೆ ನಮಃಸ್ಕಾರ.

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ||೧೬||

ಬೆಳಗಿನ ಹೊತ್ತು ಪೂರ್ವಾದ್ರಿಯಲ್ಲೂ, ಸಂಜೆಯ ಹೊತ್ತು ಪಶ್ಚಿಮಾದ್ರಿಯಲ್ಲಿಯೂ ಶೋಭಿಸುವ , ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ, ಹಗಲಿಗೆ ಸ್ವಾಮಿಯಾದ ಆದಿತ್ಯದೇವನಿಗೆ ನಮಸ್ಕಾರ.

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ  |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||೧೭||

ಜಯ :- ಯಶಸ್ಸನ್ನು ಕೊಡುವವನು ಆದಿತ್ಯ
ಜಯಭದ್ರ :- ಯಶಸ್ಸನ್ನು ಹಾಗೂ ಶುಭವನ್ನು ಕೊಡುವವನು.
ಹರ್ಯಶ್ಚ :- ಹಸಿರು ಬಣ್ಣದ ಕುದುರೆಗಳಿರುವ.
ಸಹಸ್ರಾರು :- ಸಾವಿರಾರು ಕಿರಣಗಳಿಂದ
ಆದಿತ್ಯ :- ಅದಿತಿಯ ಪುತ್ರ ಹಾಗೂ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಶಕ್ತಿಯುಳ್ಳವನಿಗೆ ನಮನಗಳು.

ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮ ಪ್ರಭೋದಾಯ ಮಾರ್ತಾಂಡಾಯ ನಮೋ ನಮಃ ||೧೮||

ಉಗ್ರ :- ಶತೃಗಳಿಗೆ ಭಯಂಕರನೂ
ವೀರ :- ಅತ್ಯಂತ ಶಕ್ತಿಶಾಲಿಯೂ
ಸಾರಂಗ :- ವೇಗವಾಗಿ ಚಲಿಸುವವನೂ
ಪದ್ಮಪ್ರಭೋದ :- ಕಮಲ ಪುಷ್ಪಗಳನ್ನು ಅರಳಿಸಬಲ್ಲ ಹಾಗೂ ಜ್ಞಾನ ಚಕ್ಷುವನ್ನು ಅರಳಿಸುವವ
ಮಾರ್ತಾಂಡ :- ಲಯದ ನಂತರ ಜಗತ್ತನ್ನು ಸೃಸ್ಟಿಸಲು ಮತ್ತೆ ಜನಿಸುವ ಆದಿತ್ಯನಿಗೆ ನಮಸ್ಕಾರ.

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾs ದಿತ್ಯ ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||೧೯||

ಬ್ರಹ್ಮ, ವಿಷ್ಣು, ಮಹೇಶ್ವರ ರೆಂಬ ತ್ರಿಮೂರ್ತಿಗಳಿಗೆ ಪ್ರೇರಕ ಶಕ್ತಿಯಾದ, ಎಲ್ಲವನ್ನೂ ಭಕ್ಷಿಸುವ, ಘೋರ ರೂಪವುಳ್ಳ ಆದಿತ್ಯನಿಗೆ ನಮಸ್ಕಾರ. ಆದಿತ್ಯ ದೇವನೇ ಎಲ್ಲರ ಹಿಂದಿನ ಪ್ರೇರಕ ದೈವಶಕ್ತಿ. ಲಯಕಾಲದಲ್ಲಿ ಎಲ್ಲಾ ಜೀವಿಗಳನ್ನೂ ಭಕ್ಷಿಸಿ ತನ್ನ ಉದರದೊಳಗೆ ಸೇರಿಸಿಕೊಳ್ಳುವ ಶ್ರೀಮನ್ನಾರಾಯಣನು ಆದಿತ್ಯಮಂಡಲದಲ್ಲಿದ್ದಾನೆ.

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ  ||೨೦||

ತಮೋಘ್ನ :- ಕತ್ತಲೆಯನ್ನು ನಾಶ ಪಡಿಸುವವ
ಹಿಮಘ್ನ :- ಮಂಜನ್ನು ಕರಗಿಸುವವ
ಶತ್ರುಘ್ನ :- ಶತ್ರುಗಳನ್ನು ನಾಶ ಮಾಡುವವ
ಅಮಿತಾತ್ಮನೇ :- ಎಣೆಯಿಲ್ಲದ ಆತ್ಮ ಶಕ್ತಿಯುಳ್ಳ
ಕೃತಘ್ನಘ್ನ  :- ಕೃತಘ್ನರಾದವರನ್ನು ಸದೆ ಬಡಿಯುವವ
ಜ್ಯೋತಿಷಾಂಪತಿ:- ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ.
ದೇವ :- ಪ್ರಕಾಶರೂಪನಾದ ಆದಿತ್ಯನಿಗೆ ನಮೋನಮಃ

ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋsಭಿನಿಘ್ನಾಯ ರವಯೇ ಲೋಕಸಾಕ್ಷಿಣೇ  ||೨೧||

ತಪ್ತಚಾಮೀಕರಾಭ  :- ಪುಟಕ್ಕೆ ಹಾಕಿದ ಬಂಗಾರದಂತೆ ಕಾಂತಿಯುಳ್ಳ
ವಹ್ನಯೇ  :- ಅಗ್ನಿಯಂತೆ ಎಲ್ಲಾ ವಸ್ತುಗಳನ್ನು ದಹಿಸುವ (ಮಾನವನ ಪಚನ ಶಕ್ತಿಯನ್ನು ಪ್ರಚೋದಿಸುವ)
ವಿಶ್ವಕರ್ಮ  :- ಸಕಲ ಕರ್ಮಗಳಿಗೂ ಕಾರಣನಾದ, ಸಾಕ್ಷಿಯಾದ.
ತಮೋಭಿನಿಘ್ನ  :- ಕತ್ತಲೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವವ.
ರವಿ  :- ಎಲ್ಲರ ಮೆಚ್ಚುಗೆಗೆ ಪಾತ್ರನಾದ
ಲೋಕಸಾಕ್ಷಿಣೇ   :- ಜಗತ್ತಿಗೆ ಆಗುಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾದ ಆದಿತ್ಯನಿಗೆ ನಮನ.

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||೨೨||

(ಆದಿತ್ಯ ಹೃದಯದ ನಂತರ ಆದಿತ್ಯ ಮಹಿಮೆಯನ್ನು ಅಗಸ್ತ್ಯರು ತಿಳಿಸುತ್ತಾರೆ.)

ಆದಿತ್ಯ ದೇವನು ಎಲ್ಲಾ ಜೀವಿಗಳನ್ನು ಸಂಹಾರ ಮಾಡುವ, ಸೃಷ್ಟಿ ಮಾಡುವ ಶಕ್ತಿಯುಳ್ಳವನು. ಇವನೇ ತನ್ನ ಕಿರಣಗಳಿಂದ ಸುಡುತ್ತಾನೆ. ಜಗತ್ತನ್ನು ಒಣಗಿಸಿಯೂ ಬಿಡುತ್ತಾನೆ. ತನ್ನ ಕಿರಣಗಳಿಂದ ಮಳೆ ಸುರಿಸುವವನೂ ಈತನೇ ಆಗಿದ್ದಾನೆ.

ಗಭಸ್ತಿ  :- ಜ್ಞಾನವೆಂಬ ಕಿರಣಗಳು. ಮರೀಚಿ ಎಂದರೂ ಇದೇ ಅರ್ಥ.
ವರ್ಷತಿ   :- ಎಂದರೆ ಜ್ನಾನದ ಸಂಪತ್ತನ್ನು ಕರುಣೆಯಿಂದ ಜಗತ್ತಿನ ಮೇಲೆ ಸುರಿಸುತ್ತಾನೆ. ಆದಿತ್ಯ ಮಂಡಲದಲ್ಲಿ ನೆಲಸಿದ ಶ್ರೀಮನ್ನಾರಾಯಣನಿಗೂ ಈ ವಿಶೇಷಣಗಳು ಹೆಚ್ಚು ಔಚಿತ್ಯದಿಂದ ಹೊಂದುತ್ತದೆ.

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿ ಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಂ ||೨೩||

ಸರ್ವ ಜೀವಿಗಳಲ್ಲಿಯೂ ಇರುವ ಆದಿತ್ಯ ದೇವನು ತಾನು ಸದಾ ಜಾಗೃತನಾಗಿ, ಮಲಗಿರುವ ಜೀವಿಗಳನ್ನು ಎಬ್ಬಿಸುತ್ತಾನೆ. ಯಜ್ಞ ಎಂಬ ಪದ ಆದಿತ್ಯನ ಹೆಸರೇ. ಯಜ್ಞದ ಫಲವೂ ಆ ದೇವತೆಯೇ ಆಗಿದ್ದಾನೆ.

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತಾನಿ ಲೋಕೇಷು ಸರ್ವಾಣ್ಯೇಷ ರವಿಃ ಪ್ರಭುಃ ||೨೪||

ವೇದಗಳು, ಯಜ್ಞಗಳು, ಆ ಯಜ್ಞಗಳಿಂದ ದೊರೆತ ಫಲ ಮತ್ತು ಜಗತ್ತಿನಲ್ಲಿ ನಡೆಯುವ ಎಲ್ಲಾ ಕೆಲಸಗಳ ಹಿಂದೆಯೂ ಆದಿತ್ಯನೇ ಇದ್ದಾನೆ. ಆದಿತ್ಯ ದೇವನು ಸರ್ವಾತ್ಮಕನೆನಿಸಿದ್ದಾನೆ.

"ಆದಿತ್ಯ ಹೃದಯ ಮಂತ್ರದ ಫಲಶ್ರುತಿ"

ಏನಮಾಪತ್ಶು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ  | ||೨೫||

ಮೇಲೆ ಹೇಳಿದ ಆದಿತ್ಯ ಹೃದಯವನ್ನು ಕಷ್ಟ ಕಾಲದಲ್ಲಿ, ಅಪರಿಚಿತವಾದ ಭಯಂಕರ ಕಾಡಿನಲ್ಲಿ ಹೋಗುವಾಗ, ಬಯವುಂಟಾದಾಗ ಹೇಳಿಕೊಳ್ಳುವ ಯಾವ ಪುರುಷನೂ ಕಷ್ಟಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ, ಅವನಿಗೆ ಎಂದೂ ಕೆಡಕಿಲ್ಲ. ಇದು ಸತ್ಯ.

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಂ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ  ||೨೬||

ಅಗಸ್ತ್ಯರು ಮುಂದುವರಿಸಿದರು:- ದೇವದೇವನಾದ ಆದಿತ್ಯನನ್ನು ಒಂದೇ ಮನಸ್ಸಿನಿಂದ ಪೂಜಿಸು. ಈ ಆದಿತ್ಯ ಹೃದಯವನ್ನು ಮೂರು ಸಲ ಜಪಿಸಿದಲ್ಲಿ, ಯುದ್ಧಗಳಲ್ಲಿ ಜಯಶೀಲನಾಗುವೆ.

(ಶ್ರೀರಾಮನದು ಸೂರ್ಯವಂಶ. ಆದಿತ್ಯದೇವನ ಕರುಣೆಗೋಸ್ಕರ ಅಗಸ್ತ್ಯರು ಆತನಿಗುಪದೇಶಿಸಿದ್ದು ಆದಿತ್ಯಹೃದಯ. ಇದೇ ಶ್ರೀರಾಮನಿಗೆ ಸ್ಫೂರ್ತಿ ನೀಡಿದ ಮಂತ್ರಸದ್ಯ್ರಶ ಸ್ತೋತ್ರರತ್ನ. ಜಗತ್ತಿನ ಅನಿವಾರ್ಯ ಕಾರಣನಾದ ಆದಿತ್ಯದೇವನ ಹಿರಿಮೆ ಇದರಿಂದ ನಮಗೆ ತಿಳಿಯುತ್ತದೆ.)

ಆದಿತ್ಯ ಹೃದಯದ ಎಲ್ಲಾ ಮಂತ್ರಗಳನ್ನೂ, ಎಲ್ಲಾ ಪುಣ್ಯನಾಮಗಳನ್ನೂ ಶ್ರೀಮನ್ನಾರಾಯಣನಿಗೆ ಅನ್ವಯ ಮಾಡಬಹುದು. ಸೂರ್ಯ ಮಂಡಲದಲ್ಲಿನ ನಾರಾಯಣನನ್ನು ಆದಿತ್ಯನ ಮೂಲಕ ಧ್ಯಾನಿಸಿ, ಪೂಜಿಸುವುದೇ ಗಾಯತ್ರೀ ಮಂತ್ರದ ರಹಸ್ಯಾರ್ಥ. ಈ ಗಾಯತ್ರೀ ಮಂತ್ರವೇ ನಮ್ಮನ್ನು ಎಲ್ಲಾ ಕುತ್ತುಗಳಿಂದ ಪಾರುಮಾಡಬಲ್ಲದು. ದೈವ ಮಾರ್ಗದ ಕಡೆ ದಾರಿತೋರಬಲ್ಲದು.

ಅಸ್ಮಿನ್ ಕ್ಷಣೇ ಮಹಾಬಾಹೋ | ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತತೋsಗಸ್ತ್ಯೋ ಜಗಾಮ ಚ ಯಥಾsಗತಂ ||೨೭||

ಅಗಸ್ತ್ಯರು ಶ್ರೀರಾಮನಿಗೆ ಧೈರ್ಯ ತುಂಬಿದರು. ಈ ಕ್ಷಣದಲ್ಲಿಯೇ ರಾವಣನನ್ನು ನೀನು ಕೊಲ್ಲುತ್ತೀ. ಹೀಗೆ ಹೇಳಿ ಬಂದಂತೆಯೇ ಹೊರಟುಹೋದರು. ಆದಿತ್ಯಹೃದಯದ ಉಪದೇಶಕ್ಕಾಗಿಯೇ ರಾಮನ ಬಳಿ ಅಗಸ್ತ್ಯ ಮಹಾಮುನಿಗಳು ಬಂದದ್ದು. ದುಷ್ಟ ಶಿಕ್ಷಣದ ಮಹಾನ್ ಕಾರ್ಯದಲ್ಲಿ ದೈವ ಬಲದ ಜೊತೆ ತಮ್ಮ ತಪೋಬಲದ ಪ್ರೋತ್ಸಾಹವನ್ನೂ ಅವರು ನೀಡಿದರು.

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋsಭವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ||೨೮||

ಅಗಸ್ತ್ಯರ ಉಪದೇಶವನ್ನು ಶ್ರದ್ಧೆಯಿಂದ ಆಲಿಸಿದ ರಾಮಚಂದ್ರ ಮಹಾತೇಜಶಾಲಿಯಾಗಿ ಬೆಳಗಿ, ತನ್ನ ಅಧೈರ್ಯವನ್ನು ಬಿಟ್ಟನು. ಸಂತೋಷದಿಂದ, ಹೊಸ ಹುರುಪಿನಿಂದ, ಈ ಆದಿತ್ಯ ಹೃದಯವನ್ನು, ಮನಸ್ಸಿನಲ್ಲಿ ನೆಲೆ ಮಾಡಿಕೊಂಡು ಧ್ಯಾನಿಸತೊಡಗಿದನು.

(ಯಾವುದೇ ಕಾರ್ಯಕ್ಕಾಗಲೀ ಮಂತ್ರ ಬಲದ ಜೊತೆಗೆ ಏಕಾಗ್ರತೆ ಹಾಗೂ ಮನೋಬಲ ಅಗತ್ಯ ಎಂಬ ಅರ್ಥ ಇಲ್ಲಿ ಸೂಚಿತವಾಗಿದೆ.

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||೨೯||

ಆದಿತ್ಯನನ್ನು ನೋಡುತ್ತಾ, ಆದಿತ್ಯ ಹೃದಯವನ್ನು ಜಪಿಸಿ, ಸಂತೋಷ ಚಿತ್ತದಿಂದ ಕೂಡಿದ ಶ್ರೀರಾಮಚಂದ್ರನು ಮೂರು ಸಲ ಆಚಮನವನ್ನು ಮಾಡಿ, ಶುಚಿರ್ಭೂತನಾಗಿ ಹೊಸ ಶಕ್ತಿಯಿಂದ ಕೂಡಿ, ಧನುಸ್ಸನ್ನು ಯುದ್ಧಕ್ಕೆ ಅಣಿಮಾಡಿದನು.

(ಆದಿತ್ಯ ಹೃದಯ ಮಂತ್ರೋಪದೇಶ, ಹಾಗೂ ಅದರ ಜಪ ಶ್ರೀರಾಮನಲ್ಲಿ ಹೊಸ ಉತ್ಸಾಹ ತುಂಬಿತು. ಆತ್ಮ ಸ್ಥೈರ್ಯ ಹೆಚ್ಚಿತು. ರಾವಣನನ್ನು ನಿಶ್ಚಯವಾಗಿ ಕೊಲ್ಲಬಲ್ಲೆ ಎಂಬ ಧೈರ್ಯ ಮೂಡಿತು.

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗತಂ |
ಸರ್ವ ಯತ್ನೇನ ಮಹತಾ ವಧೇ ತಸ್ಯ ಧೃತೋsಭವತ್ ||೩೦||

ಯುದ್ಧ ಮಾಡಲು ಸಿದ್ಧನಾಗಿ ಬಂದ ರಾವಣನನ್ನು ನೋಡಿ ಹರ್ಷದಿಂದ ಕೂಡಿದವನಾದ ಶ್ರೀರಾಮನು ತನ್ನ ಪ್ರಯತ್ನವನ್ನು ಒಟ್ಟುಗೂಡಿಸಿ, ಆ ರಾವಣನನ್ನು ಸಂಹಾರ ಮಾಡುವುದಾಗಿ ಸಂಕಲ್ಪವನ್ನು ಮಾಡಿದನು.

(ರಾವಣ ವಧೆ ಎಂಬುದು ಸಾಮಾನ್ಯವಲ್ಲ. ಎಲ್ಲರಿಂದಲೂ ಅವಧ್ಯ ಎಂದು ವರ ಪಡೆದ ಈ ಮಹಾನ್ ತಪಸ್ವಿಯನ್ನು ಕೊಲ್ಲಲು ಮಹಾನ್ ತಪಸ್ವಿ, ಬ್ರಹ್ಮ ಜ್ಞಾನಿಯಾದ ಅಗಸ್ತ್ಯರ ನೆರವು ಶ್ರೀಮನ್ನಾರಯಣನಾದ ಶ್ರೀ ರಾಮನಿಗೂ ಬೇಕಾಗಿ ಬಂತು. ಇದು  ಭಗವಾನ್ ಶ್ರೀರಾಮಚಂದ್ರ ಲೋಕಕ್ಕೆ ಹಾಕಿ ಕೊಟ್ಟಂತಹ ಮೇಲ್ಪಂಕ್ತಿ. ಗುರುವಿನ ಅನುಗ್ರಹ, ಉಪದೇಶಕ್ಕೆ ಇರುವಂತಹ ಮಹಾನ್ ಸ್ಥಾನ, ಇದರಿಂದ ಸ್ಪಷ್ಟವಾಗುತ್ತದೆ. ಇದೊಂದು ಲೋಕೋತ್ತರ ಉದಾಹರಣೆ ಎನಿಸಿಕೊಂಡಿದೆ.)

ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮಾನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣಮಧ್ಯ ಗತೋ ವಚಸ್ತ್ವರೇತಿ ||೩೧||

|| ಇತಿ ಶ್ರೀಮದ್ರಾಮಾಯಣೇ ಯುದ್ಧ ಕಾಂಡೇ
ನಾಮ ಸಪ್ತೋತ್ತರ ಶತತಮಃ ಸರ್ಗಃ ||

ಆದಿತ್ಯ ಹೃದಯಂ ಸಂಪೂರ್ಣಂ

(ಶ್ರೀ ರಾಮನ ಜಪಬಲದಿಂದ ಆದಿತ್ಯದೇವನು ಪ್ರತ್ಯಕ್ಷನಾಗುತ್ತಾನೆ. ರಾಮಚಂದ್ರನಿಗೆ ಪ್ರೋತ್ಸಾಹ, ಮನೋಬಲ ನೀಡಿ ಹರಸುತ್ತಾನೆ).
ಶ್ರೀರಾಮನನ್ನು ನೋಡಿ ಮನದುಂಬಿ, ಸಂತಸದಿಂದ ಕೂಡಿದ ಆದಿತ್ಯ ದೇವನು ಎಲ್ಲಾ ದೇವತೆಗಳ ಸಮೂಹದಲ್ಲಿ ತಾನೂ ನಿಂತು, ಬೇಗ ಯುದ್ಧ ಮಾಡು ಎಂಬ ಮಾತನ್ನು ಹೇಳಿದನು.
(ದೇವತಾ ಕಾರ್ಯದ ಸಿದ್ಧಿಗೋಸ್ಕರ, ಭೂಮಿಯ ಮೇಲೆ ಅವತರಿಸಿದ ಶ್ರೀರಾಮನ ಜಯಕ್ಕಾಗಿ ಎಲ್ಲಾ ದೇವತೆಗಳೂ ಒಂದಲ್ಲ ಒಂದು ರೀತಿ ಸಹಕರಿಸಿದರು. ಇದರಲ್ಲಿ ಆದಿತ್ಯನ ಪಾತ್ರ ತುಂಬಾ ಹಿರಿದು. ಶ್ರೀರಾಮಾವತಾರದ ಉದ್ದೇಶ ದುಷ್ಟ ಸಂಹಾರ, ರಾವಣ ವಧೆ. ಇದರಲ್ಲಿ ಒದಗಿದಂತಹ ಕ್ಲೇಶವನ್ನು ಪರಿಹರಿಸಿ ರಾಮನಲ್ಲಿ ಹೊಸ ಶಕ್ತಿ ಮೂಡಿಸಿದವನೇ ಸೂರ್ಯದೇವ.)
ಆದಿತ್ಯ ಹೃದಯದ ಮಂತ್ರವು ಎಂತಹ ಕಷ್ಟಗಳನ್ನಾದರೂ ಬಗೆ ಹರಿಸುವ ಶಕ್ತಿ ತನ್ನ ಹೊಂದಿದೆ.
ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ೧೦೭ನೆಯ ಸರ್ಗವಾದ ಆದಿತ್ಯ ಸ್ತೋತ್ರ ಮುಗಿಯಿತು.
(whatsapp)
****
ರಥ ಸಪ್ತಮಿ




1 comment: